ಬೆಂಗಳೂರು: ಸೀಬರ್ಡ್‌ ಬಸ್‌ ದುರಂತದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಎಮರ್ಜೆನ್ಸಿ ಡೋರ್ ಇಲ್ಲದ ದೀರ್ಘ ಮಾರ್ಗ ಬಸ್‌ಗಳಿಗೆ ಫಿಟ್ನೆಸ್ ಪ್ರಮಾಣಪತ್ರ ನೀಡದಿರಲು ನಿರ್ಧರಿಸಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಬೈಂದೂರಿನಲ್ಲಿ ಸರ್ಕಾರಿ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು ತುರ್ತು ನಿರ್ಗಮನ ದ್ವಾರಗಳು ಇಲ್ಲದ ದೀರ್ಘ ಮಾರ್ಗ ಬಸ್‌ಗಳಿಗೆ ಫಿಟ್ನೆಸ್ ಪ್ರಮಾಣಪತ್ರ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಲಗೇಜ್‌ಗಳ ಹೊರತಾಗಿ ಯಾವುದೇ ಇತರೆ ವಸ್ತುಗಳ ಸಾಗಿಸಲು ಅವಕಾಶವಿಲ್ಲ. ಬಸ್ ಸಂಚಾಲಕರು ತುರ್ತು ನಿರ್ಗಮನ ದ್ವಾರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

ಕೆಲವರಿಗೆ ರಾತ್ರಿ ಮಲಗಿ ಬೆಳಿಗ್ಗೆ ಏಳುವ ಹೊತ್ತಿಗೆ ವಿಪರೀತ ಎನ್ನುವಷ್ಟು ಕುತ್ತಿಗೆ ನೋವು ಬಂದು ಬಿಡುತ್ತದೆ. ಇದಕ್ಕೆ ಪರಿಹಾರವೇನು ಇಲ್ಲಿದೆ ಟಿಪ್ಸ್. ಕುತ್ತಿಗೆ ನೋವು ಬಂತೆಂದರೆ ನೇರವಾಗಿ ಕುಳಿತುಕೊಂಡು ದೈನಂದಿನ ಕೆಲಸ ಮಾಡಲೂ ಆಗದ ಯಮ ಯಾತನೆ. ರಾತ್ರಿ ಮಲಗುವ ಭಂಗಿಯಿಂದಾಗಿ ಕುತ್ತಿಗೆ ನೋವು ಬರಬಹುದು. ಇದರಿಂದ ಸಹಿಸಲಾಗದ ನೋವು ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರವೇನು ಇಲ್ಲಿದೆ ನೋಟಿ ಟಿಪ್ಸ್. -ಎರಡು-ಮೂರು ತಲೆದಿಂಬು ಇಟ್ಟುಕೊಂಡಾಗ ಕುತ್ತಿಗೆ ಸಿ ಆಕಾರದಂತೆ ಬಾಗಿ ನೋವು ಬರಬಹುದು. ಹೀಗಾಗಿ ಒಂದಕ್ಕಿಂತ ಹೆಚ್ಚು ತಲೆದಿಂಬು ಇಟ್ಟುಕೊಳ್ಳಬೇಡಿ.-ಆದಷ್ಟು ನಿಮ್ಮ ತಲೆ ಭಾಗ ಕುತ್ತಿಗೆಯಿಂದ ತುಂಬಾ ಎತ್ತರದಲ್ಲಿರುವುದನ್ನು ಅವಾಯ್ಡ್ ಮಾಡಿ. ಆದಷ್ಟು ಸಮತಟ್ಟಾದ ಹಾಸಿಗೆಯಲ್ಲಿ ಮಲಗಿ.