Shorts

ಕೇರಳದ ರಾಜಕೀಯ ಇತಿಹಾಸದಲ್ಲಿ ಒಂದು ಪ್ರಮುಖ ಬದಲಾವಣೆ ಸಂಭವಿಸಿದೆ. ಸುದೀರ್ಘ ಕಾಲದ ನಂತರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಅಧಿಕಾರಕ್ಕೆ ಬಂದಿದ್ದು, ಅನುಭವಿ ನಾಯಕ ವಿ.ಡಿ. ಸತೀಶನ್ ಅವರು ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ.ಯಾರು ಈ ವಿ.ಡಿ. ಸತೀಶನ್?ವಿ.ಡಿ. ಸತೀಶನ್ ಅವರು ಕೇರಳದ ಎರ್ನಾಕುಲಂ ಜಿಲ್ಲೆಯ ಪರವೂರು ವಿಧಾನಸಭಾ ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸುತ್ತಾ ಬಂದಿರುವ ಹಿರಿಯ ನಾಯಕರು. ವೃತ್ತಿಯಿಂದ ವಕೀಲರಾಗಿರುವ ಇವರು, ವಿದ್ಯಾರ್ಥಿ ದೆಸೆಯಲ್ಲೇ ಕೆ.ಎಸ್.ಯು (KSU) ಮೂಲಕ ರಾಜಕೀಯ ಪ್ರವೇಶಿಸಿದವರು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಇವರು ನೀಡಿದ ಪ್ರಖರ ಭಾಷಣಗಳು ಮತ್ತು ಸರ್ಕಾರದ ಲೋಪದೋಷಗಳನ್ನು ಎತ್ತಿ ತೋರಿಸುತ್ತಿದ್ದ ರೀತಿ ಜನಮನ್ನಣೆ ಗಳಿಸಿತ್ತು.

ಜಾತಕದಲ್ಲಿ ಗುರು ದೋಷವಿದ್ದರೆ ವಿದ್ಯಾರ್ಜನೆಗೆ, ಯಶಸ್ಸಿಗೆ ಕಡಿವಾಣ ಬೀಳುತ್ತದೆ. ಗುರು ದೋಷ ನಿವಾರಣೆಗಾಗಿ ಇಂದು ತಪ್ಪದೇ ಗುರು ಪಾದುಕಾ ಸ್ತೋತ್ರವನ್ನು ಪಠಿಸಿ.ಅನಂತಸಂಸಾರ-ಸಮುದ್ರತಾರ-ನೌಕಾಯಿತಾಭ್ಯಾಂ ಗುರುಭಕ್ತಿದಾಭ್ಯಾಮ್ ।ವೈರಾಗ್ಯಸಾಮ್ರಾಜ್ಯದ-ಪೂಜನಾಭ್ಯಾಂನಮೋ ನಮಃ ಶ್ರೀಗುರುಪಾದುಕಾಭ್ಯಾಮ್ ॥ 1 ॥ ಕವಿತ್ವವಾರಾಶಿ-ನಿಶಾಕರಾಭ್ಯಾಂದೌರ್ಭಾಗ್ಯ-ದಾವಾಂಬುದ-ಮಾಲಿಕಾಭ್ಯಾಮ್ ।ದೂರೀಕೃತಾನಮ್ರ-ವಿಪತ್ತಿತಾಭ್ಯಾಂನಮೋ ನಮಃ ಶ್ರೀಗುರುಪಾದುಕಾಭ್ಯಾಮ್ ॥ 2 ॥ ನತಾ ಯಯೋಃ ಶ್ರೀಪತಿತಾಂ ಸಮೀಯುಃಕದಾಚಿದಪ್ಯಾಶು ದರಿದ್ರವರ್ಯಾಃ ।ಮೂಕಾಶ್ಚ ವಾಚಸ್ಪತಿತಾಂ ಹಿ ತಾಭ್ಯಾಂನಮೋ ನಮಃ ಶ್ರೀಗುರುಪಾದುಕಾಭ್ಯಾಮ್ ॥ 3 ॥ ನಾಲೀಕನೀಕಾಶ-ಪದಾಹೃತಾಭ್ಯಾಂನಾನಾವಿಮೋಹಾದಿ-ನಿವಾರಿಕಾಭ್ಯಾಮ್ ।ನಮಜ್ಜನಾಭೀಷ್ಟ-ತತಿಪ್ರದಾಭ್ಯಾಂನಮೋ ನಮಃ ಶ್ರೀಗುರುಪಾದುಕಾಭ್ಯಾಮ್ ॥ 4 ॥

ರಾಯಪುರ: ಕಿಂಗ್‌ ವಿರಾಟ್‌ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ಗೆ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವು ತತ್ತರಿಸಿದೆ. ಬುಧವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿ ತಂಡವು ಆರು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು. ಮಾತ್ರವಲ್ಲ, ಪ್ಲೇ ಆಫ್‌ಗೆ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿತು.ರಾಯಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಆವೃತ್ತಿಯಲ್ಲಿ 8ನೇ ಗೆಲುವು ದಾಖಲಿಸಿತು. ಇತ್ತ ಆರ್​​ಸಿಬಿ ವಿರುದ್ಧ ಸೋತ ಕೆಕೆಆರ್ ಮೂರನೇ ತಂಡವಾಗಿ ಪ್ಲೇಆಫ್‌ನಿಂದ ಹೊರಬಿದ್ದಿದೆ. ವಿರಾಟ್ ಕೊಹ್ಲಿ ಆರ್‌ಸಿಬಿ ಜೆರ್ಸಿ ಧರಿಸಿ ತಮ್ಮ 279ನೇ ಐಪಿಎಲ್ ಪಂದ್ಯವನ್ನು ಆಡಿದ್ದು ಗಮನಾರ್ಹ ಸಾಧನೆಯಾಗಿದೆ. ಈ ಸಾಧನೆ ಮೂಲಕ, ಕೊಹ್ಲಿ ಭಾರತೀಯ ಕ್ರಿಕೆಟ್ ದಂತಕಥೆಗಳಾದ ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದರು.

ಬೆಂಗಳೂರು: ಚಂದನವನದ ನಟ, ನಿರ್ಮಾಪಕ ದಿಲೀಪ್‌ ರಾಜ್‌ ಅವರ ನಿಧನಕ್ಕೆ ಕನ್ನಡ ಕಿರುತೆರೆ, ಸಿನಿಮಾ ಲೋಕವೇ ಕಣ್ಣೀರು ಹಾಕಿದೆ. ‘ಹಿಟ್ಲರ್‌ ಕಲ್ಯಾಣ‘ದಲ್ಲಿ ದಿಲೀಪ್‌ ಅವರೊಂದಿಗೆ ನಟಿಸಿದ್ದ ಮಲೈಕಾ ವಾಸುಪಾಲ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.ದಿಲೀಪ್‌ ಅವರ ಜೊತೆಗಿನ ಫೋಟೊ ಹಂಚಿಕೊಂಡು ಸಂತಾಪ ಸೂಚಿಸಿರುವ ಅವರು, ‘ನಿಮ್ಮ ನಿರ್ದೇಶನದಲ್ಲಿ ಮೂಡಿಬಂದಿದ್ದ ಧಾರಾವಾಹಿಯಿಂದ ನನ್ನ ನಟನೆ ವೃತ್ತಿ ಆರಂಭವಾಯಿತು. ಈ ಅವಕಾಶ ನೀಡಿದಕ್ಕೆ ನಿಮಗೆ ಸದಾ ಚಿರಋಣಿಯಾಗಿರುತ್ತೇನೆ. ನಿಮ್ಮ ಸಾವಿನ ಸುದ್ದಿ ಈಗಲೂ ನಂಬಲೂ ಆಗುತ್ತಿಲ್ಲ. ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಮಲೈಕಾ ಅವರು 2021ರಲ್ಲಿ ಆರಂಭವಾದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಲೀಲಾ ಪಾತ್ರದಲ್ಲಿ ನಟಿಸಿದ್ದರು. ಈ ಸೀರಿಯಲ್

ಮಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡುಗಳಲ್ಲಿ ಮೇ 12ರಂದು ಗುಡುಗು, ಮಿಂಚು, ಬಿರುಗಾಳಿ ಸಹಿತ ಅಕಾಲಿಕ ತುಂತುರು ಮಳೆಯಾಗಿದ್ದು, ಬಿಸಿಲಿನ ಝಳಕ್ಕೆ ಕೊಂಚ ವಿರಾಮ ನೀಡಿದ್ದು, ಹಲವೆಡೆ ವಿದ್ಯುತ್ ವ್ಯತ್ಯಯವಾಗಿದ್ದು, ಆಸ್ತಿ ಹಾನಿಯಾಗಿದೆ.ಮಂಗಳೂರು ನಗರದಲ್ಲಿ ರಾತ್ರಿ ಉತ್ತಮ ಮಳೆಯಾದ ವರದಿಯಾಗಿದೆ. ಬೆಳ್ತಂಗಡಿ, ವೇಣೂರು, ಉಜಿರೆ, ಶಿರ್ಲಾಲು, ಗುರಿಪಳ್ಳ, ಸುಳ್ಯ, ನಿಂತಿಕಲ್ಲು, ಐವರ್ನಾಡು, ಬೆಳ್ಳಾರೆ, ಬಂಟ್ವಾಳ, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡದ ಹಲವು ಭಾಗಗಳಲ್ಲೂ ಮಳೆಯಾಗಿದೆ. ನಗರದಲ್ಲಿ ಮಂಗಳವಾರ ಗರಿಷ್ಠ ತಾಪಮಾನ 34.8°C ಮತ್ತು ಕನಿಷ್ಠ 25.1°C ದಾಖಲಾಗಿದೆ. ಮೋಡ ಕವಿದ ಮುಂಜಾನೆಯ ನಂತರ, ಸಂಜೆಯ ತುಂತುರು ಮಳೆಯ ಮೊದಲು ವಾತಾವರಣವು ಬಿಸಿ ಮತ್ತು ತೇವಾಂಶದಿಂದ ಕೂಡಿತ್ತು.