ತಿರುವನಂತರಪುರಂ: ವೈಯಕ್ತಿಕ ನೋವುಗಳು ಏನೇ ಇರಲಿ, ಆದರೆ ಆಟ ಎಂದು ಬಂದರೆ ತಾನು ಸಿಂಹಿಣಿಯೇ ಎಂದು ಭಾರತ ಮಹಿಳಾ ಕ್ರಿಕೆಟ್ ನ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ನಿರೂಪಿಸಿದ್ದಾರೆ. ಶ್ರೀಲಂಕಾ ವಿರುದ್ಧ ಮೊದಲ ಮೂರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಸ್ಮೃತಿ ಇಂದು ನಾಲ್ಕನೇ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿದರು. ಕೇವಲ 48 ಎಸೆತಗಳಲ್ಲಿ 80 ರನ್ ಚಚ್ಚಿದ ಸ್ಮೃತಿ ಅತೀ ವೇಗದ 10,000 ರನ್ ಪೂರೈಸಿದ ದಾಖಲೆ ಮಾಡಿದರು. ಮಹಿಳಾ ಕ್ರಿಕೆಟ್ ನಲ್ಲಿ ಅವರು 10,000 ರನ್ ಪೂರೈಸಿದ ನಾಲ್ಕನೇ ಮತ್ತು ಭಾರತೀಯರ ಪೈಕಿ ಎರಡನೇ ಆಟಗಾರ್ತಿ ಎನಿಸಿದರು.
ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಿಮ್ಮ ರಾಜಕೀಯದ ಸ್ವಾರ್ಥಕ್ಕೆ, ತೆವಲಿಗೆ ಕನ್ನಡಿಗರ ಸ್ವಾಭಿಮಾನವನ್ನ ಒತ್ತೆ ಇಟ್ಟು ಸಾಯಿಸಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದರು. ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಅವರು, ಕರ್ನಾಟಕದಲ್ಲಿ ಕೇರಳ ದರ್ಬಾರ್ ಮಾಡುತ್ತಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ನಿಮ್ಮ ಸ್ವಾರ್ಥಕ್ಕಾಗಿ ಕರ್ನಾಟಕ-ಕನ್ನಡಿಗರ ಹಿತಾಸಕ್ತಿ-ಸ್ವಾಭಿಮಾನವನ್ನ ಒತ್ತೆ ಇಡಬೇಡಿ ಎಂದು ಸರ್ಕಾರಕ್ಕೆ ಕಿವಿ ಹಿಂಡಿದ್ದಾರೆ. ಸಿಎಂ-ಡಿಸಿಎಂ ಅವರೇ ಕೊಗಿಲು ಗ್ರಾಮ ಅಕ್ರಮ ಎಂದು ನೀವೇ ಹೇಳಿದ್ರಿ. ಹಾಗಾದ್ರೆ, ಈಗೇಕೆ ಅಕ್ರಮವನ್ನ ಸಮರ್ಥಿಸುತ್ತಿದ್ದೀರಿ
ಅಯೋಧ್ಯೆ: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರೊಂದಿಗೆ ಭಾನುವಾರ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದರು.ಅಲ್ಲಿ ಶ್ರೀರಾಮನ ಮಗುವಿನ ರೂಪವಾದ ಬಲ್ ರಾಮ್ಗೆ ನಮನ ಸಲ್ಲಿಸುವ ಅವಕಾಶ ಸಿಕ್ಕಿತು. ಅವರ ಭೇಟಿಯ ಸಮಯದಲ್ಲಿ, ಉತ್ತರ ಪ್ರದೇಶದ ಅಧಿಕಾರಿಗಳು ಮತ್ತು ದೇವಾಲಯದ ಸಿಬ್ಬಂದಿ ಮುಖ್ಯಮಂತ್ರಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು, ಪೂಜ್ಯ ಅಯೋಧ್ಯೆ ರಾಮ ಮಂದಿರದ ನಿರ್ಮಾಣದ ಬಗ್ಗೆ ಒಳನೋಟಗಳನ್ನು ನೀಡಿದರು.'X' ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ನಾಯ್ಡು ಅವರು ಭಗವಾನ್ ರಾಮನ ಮೌಲ್ಯಗಳು ಮತ್ತು ಆದರ್ಶಗಳ ನಿರಂತರ
ಹುಬ್ಬಳ್ಳಿ: ಕಳೆದ ಐದು ದಿನಗಳಿಂದ ಇಲ್ಲಿನ ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆ ಓಡಾಟ ಕಂಡು ಭಯದ ವಾತಾವರಣ ಸೃಷ್ಟಿಯಾಗಿದ್ದು, ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಶ್ವಾನದಳದೊಂದಿಗೆ ಎರಡು ಪ್ರತ್ಯೇಕ ಬೋನು ಹಾಗೂ ಗಾಮನಗಟ್ಟಿ ಹೊರವಲಯ ಮತ್ತು ವಿಮಾನ ನಿಲ್ದಾಣದ ಪರಿಸರದಲ್ಲಿ ಕ್ಯಾಮೆರಾ ಟ್ರ್ಯಾಪ್ಗಳನ್ನ ಅಳವಡಿಸಿದ್ದಾರೆ. ಸೆರೆಯಾಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ವಿಮಾನ ನಿಲ್ದಾಣದ ಆವರಣ ಗೋಡೆಯಿಂದ ಶುಕ್ರವಾರ ಸಂಜೆ 6.40ರ ವೇಳೆ ಚಿರತೆ
ಗದಗ: ಮಹಾರಾಷ್ಟ್ರದ ಪೊಲೀಸರು ರಾಜ್ಯಕ್ಕೆ ಬಂದು ಡ್ರಗ್ ಟ್ರಾಫಿಕಿಂಗ್ ಮಾಡುವವರನ್ನು ಪತ್ತೆ ಹಚ್ಚುತ್ತಾರೆ ಎಂದಾಗ ಇಲ್ಲಿನ ಪೊಲೀಸರು ಡ್ರಗ್ ಟ್ರಾಫಿಕಿಂಗ್ಗನಲ್ಲಿ ಶಾಮೀಲಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆಯೆಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಗದಗದಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿದ, ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳದಿದ್ದರೆ ಉಡ್ತಾ ಕರ್ನಾಟಕ ಆಗಲಿದೆ ಎಂದು ಹೇಳಿದರು.ಕರ್ನಾಟಕದಲ್ಲಿ ಡ್ರಗ್ಸ್ ಬಳಕೆ ಹೆಚ್ಚಿದ್ದು, ಅದನ್ನು ನಿಯಂತ್ರಿಸಲು ಸರ್ಕಾರ ಸ್ಪೆಷಲ್ ಸ್ಕ್ಯಾಡ್ ಮಾಡಿದ್ದಾರೆ. ಪೊಲೀಸರ ಭಯ
ನಟ-ರಾಜಕಾರಣಿ ವಿಜಯ್ ಶನಿವಾರ (ಡಿಸೆಂಬರ್ 27) ಅವರು 'ಕೊತ್ತೈ' (ಕೋಟೆ) ಸೇರಿದಂತೆ ಎಲ್ಲವನ್ನೂ ನೀಡಿದ ತಮ್ಮ ಅಭಿಮಾನಿಗಳಿಗೋಸ್ಕರ ತಮ್ಮ ಸಿನಿಮಾ ರಂಗವನ್ನು ತ್ಯಜಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು. ಮಲೇಷ್ಯಾದಲ್ಲಿ ನಡೆದ ಅವರ ಜನ ನಾಯಕನ ಬಹು ನಿರೀಕ್ಷಿತ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸ್ಟಾರ್ ಈ ವಿಷಯವನ್ನು ಹೇಳಿದ್ದಾರೆ."ನಾನು ಚಿತ್ರರಂಗ ಪ್ರವೇಶಿಸಿದಾಗ, ನಾನು ಇಲ್ಲಿ ಸಣ್ಣ ಮರಳಿನ ಮನೆಯನ್ನು ನಿರ್ಮಿಸುತ್ತೇನೆ ಎಂದು ನಾನು ಭಾವಿಸಿದೆ. ಆದರೆ ನೀವೆಲ್ಲರೂ ನನಗೆ ಅರಮನೆಯನ್ನು ಕಟ್ಟಿದ್ದೀರಿ. ಅಭಿಮಾನಿಗಳು ನನಗೆ ಕೋಟೆಯನ್ನು ನಿರ್ಮಿಸಲು ಸಹಾಯ ಮಾಡಿದರು.
ಬೆಂಗಳೂರು: ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಈ ದೇಶದ ಇತಿಹಾಸದಿಂದ ಅಳಿಸಿಹಾಕಲು ಯಾರಿಗೂ ಸಾಧ್ಯವಿಲ್ಲ. ಬಿಜೆಪಿ ಹಾಗೂ ಅವರ ಅಧಿಕಾರ ಯಾವುದೂ ಶಾಶ್ವತವಲ್ಲ. ಆ ಪಕ್ಷ ಇನ್ನೆಷ್ಟು ದಿನ ಇರುತ್ತದೆ? ಎಲ್ಲದಕ್ಕೂ ಕೊನೇ ಎಂಬುದು ಇರಲೇ ಬೇಕಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು."ಎಂತೆಂಥಹ ಚಕ್ರವರ್ತಿಗಳೇ ಮೂಲೆಗುಂಪಾಗಿ ಹೋಗಿದ್ದಾರೆ. ಅಲೆಗ್ಸಾಂಡರ್ ದಿ ಗ್ರೇಟ್ ಇಡೀ ಪ್ರಪಂಚದ ಮುಕ್ಕಾಲು ಪಾಲು ಗೆದ್ದವರೇ ಶಾಶ್ವತವಲ್ಲ.
ನವದೆಹಲಿ: ಕಾಂಗ್ರೆಸ್ನ 140ನೇ ಸಂಸ್ಥಾಪನಾ ದಿನದಂದು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ನ ಸಿದ್ಧಾಂತ ಮತ್ತು ಸಿದ್ಧಾಂತಗಳು ಎಂದಿಗೂ ಸಾಯುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.ಇಂದಿರಾ ಭವನದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ನ ಮಹಾನ್ ನಾಯಕರಿಂದಾಗಿ ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ.ಇಂದು ಸಂಸ್ಥಾಪನಾ ದಿನದಂದು ‘ಕಾಂಗ್ರೆಸ್ ಮುಗಿಯಿತು’ ಎಂದು ಹೇಳುವವರಿಗೆ ಒಂದು ಮಾತನ್ನು ಸ್ಪಷ್ಟವಾಗಿ
ಮಂಗಳೂರು: ಅಡಿಕೆಗೆ ಬೆಳೆಯ ನಿರ್ವಹಣೆಗೆ ದೊಡ್ಡ ಸವಾಲಾಗಿರುವ ತೋಟಗಳಲ್ಲಿ ಎಲೆಚುಕ್ಕೆ ರೋಗ ಕಾಣಿಸಿಕೊಂಡಿದ್ದು, ಬೆಳೆಗಾರರನ್ನು ಚಿಂತೆಗೀಡುಮಾಡಿದೆ. ಎಲೆಚುಕ್ಕೆ ರೋಗವು ಕರಾವಳಿ ಭಾಗದಲ್ಲಿ ಅಡಿಕೆ ಬೆಳೆಗಾರರು ಮತ್ತೊಂದು ಹಿನ್ನಡೆ ಎದುರಿಸುವಂತಾಗಿದೆ. ಈ ರೋಗವು ಉತ್ಪಾದನೆಯಲ್ಲಿ ಕುಸಿತದ ಭಯವನ್ನು ಹೆಚ್ಚಿಸಿದೆ.ಅಡಿಕೆ ಬೆಳೆಯನ್ನು ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಮತ್ತು ಬೇಸಿಗೆಯಲ್ಲಿ ಕಡಿಮೆಯಾಗುವ ಎಲೆ ಚುಕ್ಕೆ ರೋಗವು ಈ ವರ್ಷ ಭಾರೀ ಮತ್ತು ದೀರ್ಘಕಾಲದ ಮಳೆಯಿಂದಾಗಿ ವ್ಯಾಪಕವಾಗಿ ಹರಡಿದೆ. ಸೋಂಕಿತ ಅಡಿಕೆ ತೆನೆಗಳು ಒಣಗಿದ ಗೊಂಚಲುಗಳನ್ನು ತೋರಿಸುತ್ತಿದ್ದು, ಸಿಂಪಡಣೆ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ರೈತರು ಹೆಣಗಾಡುತ್ತಿದ್ದಾರೆ.
ಚಳಿಗಾಲ ಶುರುವಾಗುತ್ತಿದ್ದ ಹಾಗೇ ಆರೋಗ್ಯದಲ್ಲಿ ಏರುಪೇರಾಗುವುದ ಸರ್ವೇ ಸಾಮಾನ್ಯ. ವಿಶೇಷವಾಗಿ ಶೀತ ಮತ್ತು ಜ್ವರ ಹೆಚ್ಚಾಗಿ ಈ ಸಮಯದಲ್ಲಿ ಕಾಡುವ ಸಮಸ್ಯೆ. ಔಷಧಿಗಳು ಸಹಾಯ ಮಾಡಬಹುದಾದರೂ, ಸರಳವಾದ ಮನೆಮದ್ದುಗಳು ಯಾವುದೇ ಅಡ್ಡ ಪರಿಣಾಮವಿಲ್ಲದೆ ಪರಿಹಾರವನ್ನು ಒದಗಿಸುವಲ್ಲಿ ಪರಿಣಾಮಕಾರಿಯಾಗಿರುತ್ತವೆ. ಈ ಪರಿಹಾರಗಳು ಸರಳ, ಕೈಗೆಟುಕುವವು ಮತ್ತು ಹೆಚ್ಚಿನ ಮನೆಗಳಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಪದಾರ್ಥಗಳನ್ನು ಬಳಸಿಕೊಂಡು ಮನೆಯಲ್ಲಿ ಮಾಡಬಹುದು. ಸೌಮ್ಯವಾದ ಗಂಟಲಿನ ಅಸ್ವಸ್ಥತೆ, ನಿರಂತರ ನೋವು, ನುಂಗಲು ತೊಂದರೆ ಅಥವಾ ಜ್ವರಕ್ಕೆ ಮನೆಯ ಆರೈಕೆಯು
ಬಿಹಾರದ ಜಮುಯಿ ಜಿಲ್ಲೆಯಲ್ಲಿ ಗೂಡ್ಸ್ ರೈಲಿನ 8 ವ್ಯಾಗನ್ಗಳು ಹಳಿತಪ್ಪಿದ್ದು, ಹೌರಾ-ಪಾಟ್ನಾ-ದೆಹಲಿ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.ಪೂರ್ವ ರೈಲ್ವೆಯ ಅಸನ್ಸೋಲ್ ವಿಭಾಗದ ಅಡಿಯಲ್ಲಿ ಲಹಾಬೋನ್ ಮತ್ತು ಸಿಮುಲ್ತಾಲಾ ರೈಲು ನಿಲ್ದಾಣಗಳ ನಡುವೆ ರಾತ್ರಿ 11:25 ರ ಸುಮಾರಿಗೆ ಅಪಘಾತ ಸಂಭವಿಸಿದೆ.
ಫ್ಯಾಮಿಲಿ ರೌಂಡ್ ವೀಕ್ ಹಿನ್ನೆಲೆ ಶನಿವಾರದ ಎಪಿಸೋಡ್ನಲ್ಲಿ ದೊಡ್ಮನೆಗೆ ಎಂಟ್ರಿ ಕೊಟ್ಟ ಕ್ಯಾವಳ ತಂದೆ ಹಾಗೂ ತಾಯಿಯಿಂದ ಗಿಲ್ಲಿ ನಟನಿಗೆ ಸಿಕ್ತು ಭರ್ಜರಿ ಗಿಫ್ಟ್. ಬಿಗ್ಬಾಸ್ ಮನೆಯ ಮೂಲ ನಿಯಮ ಬ್ರೇಕ್ ಮಾಡಿದ ಹಿನ್ನೆಲೆ ದೊಡ್ಮನೆಗೆ ಆಗಮಿಸಿದ್ದ ಕಾವ್ಯಳ ತಾಯಿ ಹಾಗೂ ಸಹೋದರರನ್ನು ಮನೆಯಿಂದ ಹೊರಕಳುಹಿಸಲಾಯಿತು. ಆದರೆ ಪೋಷಕರ ಮನಸ್ಸಿಗೆ ನೋವಾಗ ಬಾರದೆಂದು ಕಾವ್ಯಳ ಪೋಷಕರನ್ನು ಮತ್ತೇ ಮನೆಗೆ ವಾಪಾಸ್ಸಾ ಕರೆಸಿಕೊಂಡಿದ್ದಾರೆ. ಈ ಹಿನ್ನೆಲೆ ಬಿಗ್ಬಾಸ್ ಕಾವ್ಯಳ ಪೋಷಕರಲ್ಲಿ ನಿಮ್ಮ ಇಷ್ಟದ ಸ್ಪರ್ಧಿಗೆ ಉಡುಗೊರೆಯನ್ನು ನೀಡಲು ಹೇಳಿದೆ.
ಸೂರಜ್ ಸಿಂಗ್ ದೊಡ್ಮನೆಯಿಂದ ಔಟ್ ಆದ ಬೆನ್ನಲ್ಲೇ ಇದೀಗ ಮತ್ತೊಬ್ಬ ಸ್ಪರ್ಧಿ ಹೊರ ನಡೆದಿದ್ದಾರೆ. ಡಬಲ್ ಎಲಿಮಿನೇಶನ್ ಎಂದು ಶಾಕ್ ನೀಡಿದ್ದ ಬಿಗ್ಬಾಸ್ ಶನಿವಾರದ ಎಪಿಸೋಡ್ನಲ್ಲಿ ಸೂರಜ್ ಎಲಿಮಿನೇಟ್ ಆದರು. ಇದೀಗ ಇಂದಿನ ಎಪಿಸೋಡ್ನಲ್ಲಿ ಮಾಳು ಹಾಗೂ ಸ್ಪಂದನಾ ಪೈಕಿ ಒಬ್ಬರು ದೊಡ್ಮನೆಯಿಂದ ಹೊರನಡೆಯುವುದು ಪಕ್ಕಾ ಆಗಿದೆ. ಇಂದಿನ ಎಲಿಮಿನೇಶನ್ ಪ್ರಕ್ರಿಯೆಗೆ ಎರಡು ವಾಹನಗಳು ಬಿಗ್ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದೆ. ನಿನ್ನೆ ಸೇವ್ ಆಗಿದ್ದ ಮಾಳು ಹಾಗೂ ಸ್ಪಂದನಾ ಅವರಲ್ಲಿ ಒಬ್ಬರು ಮನೆಯಿಂದ ಕರೆದುಕೊಂಡು ಹೋಗಲು ಎರಡು ವಾಹನ ಬಿಗ್ಬಾಸ್ ಮನೆಯೊಳಗೆ
ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದ ಮಂಗಳೂರು ಕಂಬಳದ ಒಂಬತ್ತನೇ ಆವೃತ್ತಿಯಲ್ಲಿ ನಡೆದ ಕಂಬಳಕ್ಕೆ ಭಾರತದ ಮಾಜಿ ಒಲಿಂಪಿಕ್ ಬಾಕ್ಸರ್ ಮೇರಿ ಕೋಮ್ ಸಮ್ಮುಖದಲ್ಲಿ ಚಾಲನೆ ದೊರೆಯಿತು. ತುಳುನಾಡಿನ ಜನತೆಗೆ ಮಂಥರೆಗ್ಲ ನಮಸ್ಕಾರ ಎಂದು ಹೇಳುವ ಮೂಲಕ ತುಳುನಾಡಿನ ಜನತೆಗೆ ನಮಸ್ಕಾರ ಮಾಡಿದ ಮೇರಿ ಕೋಮ್, ತಾವು ಹಳ್ಳಿಯವರಾದ ಕಾರಣ ಕಂಬಳದಂತಹ ಗ್ರಾಮೀಣ ಕ್ರೀಡಾಕೂಟಗಳಿಗೆ ತಮ್ಮ ಹೃದಯದಲ್ಲಿ ಸದಾ ವಿಶೇಷ ಸ್ಥಾನವಿದೆ ಎಂದರು. ನನ್ನನ್ನು ಇಲ್ಲಿಗೆ ಸೇರಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಾನು ಕ್ಯಾಪ್ಟನ್ ಚೌಟಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ
ವೀಕೆಂಡ್ನಲ್ಲಿ ಸ್ಪರ್ಧಿಗಳಿಗೆ ಬಿಗ್ಬಾಸ್ ಡಬಲ್ ಎಲಿಮಿನೇಶನ್ ಶಾಕ್ ನೀಡಿತ್ತು. ಕಿಚ್ಚನ ಅನುಪಸ್ಥಿತಿಯಲ್ಲಿ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಶನಿವಾರ ಸೂರಜ್ ಸಿಂಗ್ ಅವರು ದೊಡ್ಮನೆಯಿಂದ ಹೊರಬಂದಿದ್ದಾರೆ. ಈ ವಾರ ಧನುಷ್, ಧ್ರುವಂತ್, ಸೂರಜ್, ರಾಷಿಕಾ, ರಕ್ಷಿತಾ, ಮಾಳು, ಸ್ಪಂದನಾ ಎಲಿಮಿನೇಷನ್ ರೌಂಡ್ನಲ್ಲಿದ್ದರು. ಮೊದಲ ಸುತ್ತಿನಲ್ಲಿ ಧ್ರುವಂತ್, ಸೂರಜ್, ರಾಷಿಕಾ, ಸ್ಪಂದನಾರನ್ನು ಎಲಿಮಿನೇಷನ್ ಅಗ್ನಿಪರೀಕ್ಷೆಗೆ ಒಳಪಡಿಸಲಾಯಿತು. ಅಂತಿಮವಾಗಿ ಸೂರಜ್ ಮನೆಯಿಂದ ಹೊರ ಬಂದಿದ್ದಾರೆ. ಅಚ್ಚರಿ ಎಂಬಂತೆ ಅವರನ್ನು ಹೊರ ಕಳುಹಿಸಲಾಗಿದೆ.ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ದೊಡ್ಮನೆಗೆ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದ ಸೂರಜ್, ತಮ್ಮದೇ ಆದ ವ್ಯಕ್ತಿತ್ವದಿಂದ ಮನೆಯವರ
ನವದೆಹಲಿ: ಅಧಿಕಾರ ಹಂಚಿಕೆ ನಿರೀಕ್ಷೆಯಲ್ಲಿದ್ದ ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಶಾಕ್ ಕೊಟ್ಟಿದ್ದಾರೆ. ಸದ್ಯಕ್ಕಂತೂ ರಾಹುಲ್ ಯಾರ ಕೈಗೂ ಸಿಗಲ್ಲ. ಕರ್ನಾಟಕ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ-ಡಿಕೆಶಿ ಬಣ ಅಧಿಕಾರ ಹಂಚಿಕೆ ವಿಚಾರವಾಗಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಕಾದು ಕುಳಿತಿದ್ದಾರೆ. ನಿನ್ನೆ ದೆಹಲಿ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್ ಜೊತೆ ಮಾತನಾಡಬಹುದು ಎಂದು ಸಿದ್ದರಾಮಯ್ಯ ಲೆಕ್ಕಾಚಾರ ಹಾಕಿದ್ದರು. ಆದರೆ ಅದು ಸುಳ್ಳಾಗಿದೆ. ಹೊಸ ವರ್ಷಕ್ಕೆ ಗುಡ್ ನ್ಯೂಸ್ ಸಿಗಬಹುದು ಎಂದು ಡಿಕೆಶಿ ನಿರೀಕ್ಷೆಯೂ ಸುಳ್ಳಾಗಲಿದೆ. ಯಾಕೆಂದರೆ ರಾಹುಲ್ ಇವರು ಯಾರ ಕೈಗೂ ಸಿಗಲ್ಲ.
ತಿರುವನಂತಪುರ: ಚೊಚ್ಚಲವಾಗಿ ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಮತ್ತೊಂದು ಐತಿಹಾಸಿಕ ಸಾಧನೆಯತ್ತ ದಾಪುಗಾಲಿಟ್ಟಿದೆ. ಭಾರತ ಮಹಿಳಾ ಕ್ರಿಕೆಟ್ ತಂಡವು ಶ್ರೀಲಂಕಾ ಎದುರಿನ ಟಿ20 ಕ್ರಿಕೆಟ್ ಸರಣಿಯನ್ನು ಈಗಾಗಲೇ ಕೈವಶ ಮಾಡಿಕೊಂಡಿದೆ. ಇದೀಗ ಐದೂ ಪಂದ್ಯಗಳನ್ನು ಗೆದ್ದು ಐತಿಹಾಸಿಕ ಗೆಲುವಿನತ್ತ ಗಮನ ಹರಿಸಿದೆ. ತಿರುವನಂತಪುರದಕ್ಕು ಇಂದು ನಾಲ್ಕನೇ ಪಂದ್ಯದಲ್ಲಿ ಮತ್ತು 30ರಂದು ನಡೆಯಲಿರುವ ಕೊನೆಯ ಪಂದ್ಯದಲ್ಲಿ ಗೆಲ್ಲುವ ಛಲದಲ್ಲಿ ಆತಿಥೇಯ ಬಳಗವಿದೆ. ಮತ್ತೊಂದೆಡೆ ವೈಟ್ವಾಷ್ ತಪ್ಪಿಸಿ ಮಾನ ಉಳಿಸಿಕೊಳ್ಳಲು ಚಾಮರಿ ಅಟ್ಟಪಟ್ಟು ನಾಯಕತ್ವದ ಲಂಕಾ ಪಡೆ ಕಾಯುತ್ತಿದೆ.
ಬೆಂಗಳೂರು: ಸೀಬರ್ಡ್ ಬಸ್ ದುರಂತದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಎಮರ್ಜೆನ್ಸಿ ಡೋರ್ ಇಲ್ಲದ ದೀರ್ಘ ಮಾರ್ಗ ಬಸ್ಗಳಿಗೆ ಫಿಟ್ನೆಸ್ ಪ್ರಮಾಣಪತ್ರ ನೀಡದಿರಲು ನಿರ್ಧರಿಸಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಬೈಂದೂರಿನಲ್ಲಿ ಸರ್ಕಾರಿ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು ತುರ್ತು ನಿರ್ಗಮನ ದ್ವಾರಗಳು ಇಲ್ಲದ ದೀರ್ಘ ಮಾರ್ಗ ಬಸ್ಗಳಿಗೆ ಫಿಟ್ನೆಸ್ ಪ್ರಮಾಣಪತ್ರ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರ ಲಗೇಜ್ಗಳ ಹೊರತಾಗಿ ಯಾವುದೇ ಇತರೆ ವಸ್ತುಗಳ ಸಾಗಿಸಲು ಅವಕಾಶವಿಲ್ಲ. ಬಸ್ ಸಂಚಾಲಕರು ತುರ್ತು ನಿರ್ಗಮನ ದ್ವಾರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ಮತ್ತೆ ಕಾಂಗ್ರೆಸ್ ರಣಕಹಳೆ ಮೊಳಗಿಸಿದೆ. ಸರ್ಕಾರದ ವಿರುದ್ಧ ಬೃಹತ್ ಆಂದೋಲನ ನಡೆಸಲು ಸಿದ್ಧತೆ ನಡೆಸಿದೆ. ಮನಮೋಹನ್ ಸಿಂಗ್ ನಾಯಕತ್ವದ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾನೂನನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ ಕಾಂಗ್ರೆಸ್, ಮನರೇಗಾ ಬಚಾವೊ ಅಭಿಯಾನವನ್ನು ಜನವರಿ 5ರಿಂದ ರಾಷ್ಟ್ರವ್ಯಾಪಿ ನಡೆಸುವುದಾಗಿ ಪ್ರಕಟಿಸಿದೆ. ನರೇಂದ್ರ ಮೋದಿ ಸರ್ಕಾರವು ತನ್ನ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡಿದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದ ಮಾದರಿಯಲ್ಲೇ ಈ ಪ್ರತಿಭಟನೆ ನಡೆಯಲಿದೆ ಎಂದು ಪಕ್ಷ ಹೇಳಿದೆ.
ಬೆಂಗಳೂರು: ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಶುಕ್ರವಾರ ನಗರದಾದ್ಯಂತ ಕಾರ್ಯಕ್ರಮ ನಡೆಯುವ ಸ್ಥಳಗಳ ಮಾಲೀಕರೊಂದಿಗೆ ಸಮನ್ವಯ ಸಭೆ ನಡೆಸಿದರು. ಸಭೆಯಲ್ಲಿ ಪಾಲ್ಗೊಳ್ಳುವವರಲ್ಲಿ ಪಬ್ಗಳು, ಬಾರ್ಗಳು, ಕ್ಲಬ್ಗಳು, ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳ ಮಾಲೀಕರು ಸೇರಿದ್ದಾರೆ.ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಡಿಸೆಂಬರ್ 31 ರಂದು ಆಚರಣೆಯ ಸಂದರ್ಭದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಗಮನಹರಿಸಲಾಯಿತು.ಎಲ್ಲ ಸಂಘಟಕರು ಸಂಬಂಧಪಟ್ಟ ಅಧಿಕಾರಿಗಳಿಂದ ಕಡ್ಡಾಯ ಅನುಮತಿಗಳನ್ನು ಪಡೆಯಬೇಕು ಮತ್ತು ನಿಗದಿಪಡಿಸಿದ
ಬೆಂಗಳೂರು: ಸ್ಥಳೀಯ ಹವಾಮಾನ ಸಂಸ್ಥೆ ಪ್ರಕಾರ ಶನಿವಾರ ತೈವಾನ್ನಲ್ಲಿ ಪ್ರಬಲ 7.0 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಯಿಲಾನ್ ಕೌಂಟಿ ಹಾಲ್ನಿಂದ ಪೂರ್ವಕ್ಕೆ 32.3 ಕಿಮೀ ದೂರದಲ್ಲಿ 72.8 ಕಿಮೀ ಆಳದಲ್ಲಿ ಸ್ಥಳೀಯ ಕಾಲಮಾನ ರಾತ್ರಿ 11:05 ಕ್ಕೆ ದಾಖಲಾಗಿದೆ. ಯಿಲಾನ್ ಕೌಂಟಿ ಅಗ್ನಿಶಾಮಕ ಬ್ಯೂರೋ ಎಎಫ್ಪಿಗೆ ಯಾವುದೇ ತಕ್ಷಣದ ಸಾವುನೋವುಗಳ ವರದಿಗಳಿಲ್ಲ ಎಂದು ತಿಳಿಸಿದೆ. ಸ್ಥಳೀಯ ಮಾಧ್ಯಮಗಳು ಭೂಕಂಪವು ರಾಜಧಾನಿ ತೈಪೆಯಲ್ಲಿ ಕಟ್ಟಡಗಳನ್ನು ತೂಗಾಡುವಂತೆ ಮಾಡಿತು ಮತ್ತು ತೈವಾನ್ನಾದ್ಯಂತ ಅನುಭವಿಸಿತು. ತೈವಾನ್ ಪೆಸಿಫಿಕ್ರಿಂಗ್ ಆಫ್ ಫೈರ್ ಬಳಿ ಎರಡು ಟೆಕ್ಟೋನಿಕ್ ಪ್ಲೇಟ್ಗಳ ಗಡಿಯಲ್ಲಿ
ಶಬರಿಮಲೆ: ಇಲ್ಲಿನ ಅಯ್ಯಪ್ಪ ದೇವಾಲಯದಲ್ಲಿ ಶನಿವಾರ ನಡೆದ ಮಂಡಲ ಪೂಜೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ಮೂಲ 41 ದಿನಗಳಿಂದ ನಡೆದ ವಾರ್ಷಿಕ ತೀರ್ಥಯಾತ್ರೆ ಸಂಪನ್ನಗೊಂಡಿತು.ಈ ಮಂಡಲ ಪೂಜಾ ಋತುವಿನಲ್ಲಿ ಭಗವಾನ್ ಅಯ್ಯಪ್ಪ ದೇಗುಲಕ್ಕೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಇದುವರೆಗೆ 30.56 ಲಕ್ಷ ಯಾತ್ರಾರ್ಥಿಗಳು ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಪ್ರಕಾರ, ಸಂಖ್ಯೆಯಲ್ಲಿನ ಈ ಉಲ್ಬಣವು ಭಕ್ತರಲ್ಲಿ ಬೆಳೆಯುತ್ತಿರುವ ನಂಬಿಕೆಯ ಪ್ರತಿಬಿಂಬವಾಗಿದೆ.ಈ ಋತುವಿನಲ್ಲಿ ದಾಖಲೆಯ ₹332.77 ಕೋಟಿ ಆದಾಯವನ್ನು ಗಳಿಸಿದೆ, ಇದು ಹಿಂದಿನ ವರ್ಷಕ್ಕಿಂತ ಗಮನಾರ್ಹ
ಬೆಂಗಳೂರು: ಕಂಬಳ ಎಂಬುದು ಒಂದು ಗ್ರಾಮೀಣ ಕ್ರೀಡೆಯಲ್ಲ; ಕಂಬಳ ಎಂಬುದು ತುಳುನಾಡಿನ ಅಸ್ಮಿತೆ. ಜಾನಪದ ಕ್ರೀಡೆ ಎನಿಸಿದ ಕಂಬಳವು ರಾಜ್ಯದ ಯಾವುದೇ ಭಾಗದಲ್ಲಿ ನಡೆದರೂ ಅದಕ್ಕೆ ಧನಸಹಾಯವನ್ನು ಸರಕಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕರಾವಳಿಯಲ್ಲಿ ಎಲ್ಲೇ ಕಂಬಳ ನಡೆದರೂ 5 ಲಕ್ಷ ಸಹಾಯಧನ ಕೊಡುವ ಪುಣ್ಯದ ಕೆಲಸ ಮಾಡಿದ್ದರು. ಕರಾವಳಿ ಬಗ್ಗೆ ಅವರಿಗೆ ವಿಶೇಷ ಮಮತೆ ಇತ್ತು ಎಂದು ತಿಳಿಸಿದರು. ಇವತ್ತಿನ ರಾಜಕೀಯ ವ್ಯವಸ್ಥೆಯಡಿ ಕಂಬಳಕ್ಕೆ ಕೂಡ ರಾಜಕೀಯವನ್ನು ಥಳಕು ಹಾಕುತ್ತಿರುವುದು ದುರ್ದೈವ ಎಂದು ಹೇಳಿದರು.
ಹೈದರಾಬಾದ್: ಪುಷ್ಪ–2 ಸಿನಿಮಾ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತ ವಿಚಾರಕ್ಕೆ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಸೇರಿದಂತೆ 23 ಮಂದಿಯ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.ಇನ್ನೂ ಪ್ರಕರಣ ಸಂಬಂಧ ನ್ಯಾಯಾಲಯವೊಂದಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಚಿತ್ರಮಂದಿರದ ಆಡಳಿತ ಮಂಡಳಿಯನ್ನು ಪ್ರಮುಖ ಆರೋಪಿಯನ್ನಾಗಿಸಲಾಗಿದೆ ಮತ್ತು ನಟ ಅಲ್ಲು ಅರ್ಜುನ್ ಅವರನ್ನು 11ನೇ ಆರೋಪಿಯನ್ನಾಗಿಸಲಾಗಿದೆ.
ಬೆಂಗಳೂರು: ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಲು ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಅಂದುಕೊಂಡಿದ್ದೇ ಒಂದು ಆಗಿದ್ದೇ ಬೇರೆ ಎಂಬಂತಾಗಿದೆ. ದೆಹಲಿಯಲ್ಲಿ ಇಂದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನ ಘಟಾನುಘಟಿ ನಾಯಕರನ್ನು ಸಿಎಂ ಭೇಟಿ ಮಾಡಿದ್ದಾರೆ. ಈ ವೇಳೆ ರಾಜ್ಯದ ಕುರ್ಚಿ ಕದನದ ಬಗ್ಗೆ ಚರ್ಚಿಸಬಹುದು ಎಂದು ಎಲ್ಲರ ನಿರೀಕ್ಷೆಯಾಗಿತ್ತು. ಸ್ವತಃ ಸಿದ್ದರಾಮಯ್ಯ ಕೂಡಾ ಇಂದು ಕುರ್ಚಿ ವಿಚಾರವಾಗಿ ಹೈಕಮಾಂಡ್ ಜೊತೆ ಚರ್ಚಿಸಲು ಬಯಸಿದ್ದರು. ಹೀಗಾಗಿ ಕಾರ್ಯಕಾರಿ ಸಮಿತಿ ಸಭೆಯ ನಡುವೆ ಕೆಸಿ ವೇಣುಗೋಪಾಲ್ ಬಳಿ ಈ ವಿಚಾರವಾಗಿ ಮಾತನಾಡಲು ಪ್ರಯತ್ನಿಸಿದ್ದಾರೆ.
ನವದೆಹಲಿ: ಹೊಸ ವರ್ಷಾಚರಣೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಜ್ಜಾಗುತ್ತಿರುವಂತೆಯೇ ರಾತ್ರೋರಾತ್ರಿ ನಡೆದ ದಂಗೆಯಲ್ಲಿ ನೂರಾರು ಆರೋಪಿಗಳನ್ನು ಬಂಧಿಸಲಾಗಿದೆ. ದಕ್ಷಿಣ ಮತ್ತು ಆಗ್ನೇಯ ದೆಹಲಿ ಜಿಲ್ಲೆಗಳಲ್ಲಿ 660ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಆಪರೇಷನ್ ಆಗಾತ್ 3.0 ಅಡಿಯಲ್ಲಿ ಪೂರ್ವಭಾವಿ ಕ್ರಮದಲ್ಲಿ ಹತ್ತಾರು ಶಸ್ತ್ರಾಸ್ತ್ರಗಳು, ಲಕ್ಷಗಟ್ಟಲೆ ನಗದು, ಅಕ್ರಮ ಮದ್ಯ, ಡ್ರಗ್ಸ್ ಮತ್ತು ಇತರ ಕದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಹಬ್ಬ ಹರಿದಿನಗಳಲ್ಲಿ ನಡೆಯುವ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಶಂಕಿತ ಗೊಂದಲಿಗರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಇಂದು ಬೆಳಗಿನ ತನಕ 24 ಗಂಟೆಗಳ ಅವಧಿಯಲ್ಲಿ ದುರ್ಬಲ
ಬಿಗ್ಬಾಸ್ ಸೀಸನ್ 12ರ ಈ ವಾರ ಫ್ಯಾಮಿಲಿ ರೌಂಡ್ ಆಗಿತ್ತು. ಮೂರು ತಿಂಗಳಿನಿಂದ ತಮ್ಮ ಮನೆಮಂದಿಯಿಂದ ದೂರವಾಗಿದ್ದ ಸ್ಪರ್ಧಿಗಳು ಇದೀಗ ತನ್ನವರನ್ನು ನೋಡಿ, ಮನೆಯೂಟ ಸವಿದು ಖುಷಿಯಾಗಿದ್ದರು. ತಮ್ಮ ಕುಟುಂಬದವರೊಂದಿಗೆ ಸಮಯ ಕಳೆದು ಎಂಜಾಯ್ ಮಾಡಿದ್ದ ಸ್ಪರ್ಧಿಗಳಿಗೆ ಈಗ ಬಿಗ್ ಬಾಸ್ ಶಾಕ್ ಕೊಟ್ಟಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ಆಗಲಿದೆ. ಖುಷಿಯಲ್ಲಿದ್ದ ಸ್ಪರ್ಧಿಗಳು ಬಿಗ್ ಬಾಸ್ ಹೇಳಿಕೆಯಿಂದ ಶಾಕ್ ಆಗಿದ್ದಾರೆ.ಕಳೆದ ಎರಡು ವಾರ ಎಲಿಮಿನೇಷನ್ ಮಾಡದೇ ಬಿಗ್ ಬಾಸ್ ಟ್ವಿಸ್ಟ್ ಕೊಟ್ಟಿದ್ದರು. ಯಾವುದೇ ವೋಟಿಂಗ್ ಲೈನ್ ಕೂಡಾ
ಬೆಂಗಳೂರು: ನೀವು ಕಪಾಳಕ್ಕೆ ಹೊಡೆದ್ರೆ ಹೊಡೆಸಿಕೊಳ್ಳುವಷ್ಟು, ಪರವಾಗಿಲ್ಲ, ಪ್ರೀತಿಯಿಂದ ತಾಯಿ ಹೊಡೆದ್ರೆ ಬೇರೆ, ಆದರೆ ಪಕ್ಕದ್ಮನೆಯವರು ಹೊಡೆಯುವ ವ್ಯಕ್ತಿಗಳು ಬೇರೆ ಆಗ್ತಾರೆ ಎಂದು ನಟ ಸುದೀಪ್ ಅವರು ದರ್ಶನ್ ಪತ್ನಿ ವಿಜಯಲಕ್ಷ್ಮಿ ದೂರು ಸಂಬಂಧ ಟಾಂಗ್ ಕೊಟ್ಟಿದ್ದಾರೆ. ವಿಜಯಲಕ್ಷ್ಮಿ ಅವರು ಈಚೆಗೆ ತಮಗೆ ಕಿಚ್ಚ ಸುದೀಪ್ ಫ್ಯಾನ್ಸ್ ಕಡೆಯಿಂದ ಬಂದಿರುವ ಅಶ್ಲೀಲ ಮೆಸೇಜ್ ಸಂಬಂಧ ದೂರನ್ನು ನೀಡಿದ್ದರು. ಅದರಲ್ಲಿ ವಿಜಯಲಕ್ಷ್ಮಿ ಅವರು ಕ್ಲಾಸ್ ಅಭಿಮಾನಿಗಳು ಎಂದು ಉಲ್ಲೇಖ ಮಾಡಿದ್ದರು. ಈ ವಿಚಾರವಾಗಿ ಮಾಧ್ಯಮದವರಯ ಮಾರ್ಕ್ ಸಕ್ಸಸ್ ಮೀಟ್ನಲ್ಲಿ ಪ್ರಶ್ನೆ ಎತ್ತಿದ್ದಾಗ, ತಾಯಿ ಪ್ರೀತಿಯಿಂದ ಹೊಡೆಯುವುದು ಬೇರೆ,
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರವು ಗೊಂದಲದ ಹಾಗೂ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಗ್ಯಾರಂಟಿ ಹೆಸರು ಹೇಳಿಕೊಂಡು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಹತ್ವದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಬುರುಡೆ ಗ್ಯಾಂಗ್ ವಿಚಾರ- ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಷಡ್ಯಂತ್ರ ಕುರಿತು ರಾಜ್ಯ, ದೇಶ, ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆದಿದೆ.
ಬಾಂಗ್ಲಾದೇಶ: ಖ್ಯಾತ ಬಾಂಗ್ಲಾದೇಶದ ಸಂಗೀತಗಾರ ಫರೂಕ್ ಮಹ್ಫೂಜ್ ಅನಮ್ “ಜೇಮ್ಸ್” ಅವರ ಬಹು ನಿರೀಕ್ಷಿತ ಸಂಗೀತ ಕಚೇರಿಯನ್ನು ಶುಕ್ರವಾರ ರಾತ್ರಿ ಹಠಾತ್ತನೆ ರದ್ದುಗೊಳಿಸಲಾಯಿತು, ಹಿಂಸಾತ್ಮಕ ಜನಸಮೂಹವು ಸ್ಥಳದ ಮೇಲೆ ದಾಳಿ ಮಾಡಿ ಕನಿಷ್ಠ 20-25 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.ಅಸ್ತವ್ಯಸ್ತವಾಗಿರುವ ಘಟನೆಯು ಸಾಂಸ್ಕೃತಿಕ ಸುರಕ್ಷತೆ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಅಹಿತಕರ ಘಟನೆಗಳ ಬಗ್ಗೆ ಹೊಸ ಕಳವಳವನ್ನು ಹುಟ್ಟುಹಾಕಿದೆ.ಸಂಸ್ಥೆಯ 185 ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಪರಾಕಾಷ್ಠೆಯಾಗಿ ಫರೀದ್ಪುರ ಜಿಲ್ಲಾ ಶಾಲೆಯಲ್ಲಿ ರಾತ್ರಿ 9:00 ರ
ಕಲಬುರಗಿ: ಮಹಿಳೆಗೆ ದೆವ್ವ ಹಿಡಿದಿಯೆಂದು ದೆವ್ವ ಬಿಡಿಸುವ ನೆಪದಲ್ಲಿ ಬೇವಿನ ಕಟ್ಟಿಗೆಯಿಂದ ಹಲ್ಲೆ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡು ಮಹಿಳೆ ಸಾವನ್ನಪ್ಪಿರುವ ಘಟನೆ ಕಲಬುರಗಿಯ ಆಳಂದದಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಅ:'ದ ಮೂಲದ ಮುಕ್ತಾಬಾಯಿ(26) ಎಂದು ಗುರುತಿಸಲಾಗಿದೆ. ಮುಕ್ತಾಬಾಯಿಗೆ ದೆವ್ವ ಹಿಡಿದೆಯೆಂದು ಆಕೆಯ ಗಂಡನ ಮೆನಯವರು ಬೇವಿನ ಕಟ್ಟಿಗೆಯಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಆಳಂದ ಪಟ್ಟಣದ ವೆಂಕಟೇಶ್ವರ ನಗರದ ನಿವಾಸಿಯಾದ ಮುಕ್ತಾಬಾಯಿ ಅವರನ್ನು ಆರು ವರ್ಷಗಳ ಹಿಂದೆ ಮಹಾರಾಷ್ಟ್ರದ ಮುರುಮ್ ಗ್ರಾಮದ ಗಿಡ್ಡೆಪ್ಪ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು.
ನಟಿ, ಗಾಯಕಿ ತಾರಾ ಸುತಾರಿಯಾ ಮತ್ತು ಅವರ ಗೆಳೆಯ ವೀರ್ ಪಹಾರಿಯಾ ಶುಕ್ರವಾರ ರಾತ್ರಿ ಗಾಯಕ ಎಪಿ ಧಿಲ್ಲೋನ್ ಅವರ ಮುಂಬೈ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದರು. ಇದೀಗ ಸಂಗೀತ ಕಚೇರಿ ಕಾರ್ಯಕ್ರಮದಲ್ಲಿ ಗೆಳೆಯ ವೀರ್ ಪಹಾರಿಯಾ ಎದುರೇ ತಾರಾ ಸುತಾರಿಯಾಗೆ ಗಾಯಕ ಎಪಿ ಧಿಲ್ಲೋನ್ ಕಿಸ್ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದು ಕ್ಲಿಪ್ನಲ್ಲಿ, ಎಪಿ ಧಿಲ್ಲೋನ್ ತಾರಾಳನ್ನು ತಬ್ಬಿಕೊಂಡು ಆಕೆಯ ಕೆನ್ನೆಗೆ ಮುತ್ತು ನೀಡುತ್ತಿರುವುದು ಕಂಡುಬಂದಿದೆ.
ಬೆಂಗಳೂರು: ನಾನೇ ಇಷ್ಟೊಂದು ಫೇಸ್ ಮಾಡಿರುವಾಗ, ನನ್ ಮಗಳು ಅದರ ಹತ್ತರಷ್ಟು ಫೇಸ್ ಮಾಡುತ್ತಾಳೆ. ಹತ್ತರಷ್ಟು ಬೆಳೆಯುತ್ತಾಳೆ, ಹತ್ತರಷ್ಟು ದೊಡ್ಡವರಾಗುತ್ತಾರೆಂದು ಕಿಚ್ಚ ಸುದೀಪ್ ಹೇಳಿದರು.ಮಗಳು ಸಾನ್ವಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಟ್ಟ ಕಮೆಂಟ್ಗಳ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ, ಆಕೆ ನನ್ ಮಗಳು, ನಾನೇ ಇಷ್ಟೊಂದು ಫೇಸ್ ಮಾಡಿದ್ದಿನಂತ್ತೆ. ಇನ್ನೂ ಅವಳು ಅದರ ಹತ್ತರಷ್ಟು ಫೇಸ್ ಮಾಡುತ್ತಾಳೆ. ಹಾಗೆಯೇ ಜೀವನದಲ್ಲಿ ಎತ್ತರಕ್ಕೆ ಬೆಳೆಯುತ್ತಾಳೆ ಎಂದರು.
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಎಂಟ್ರಿ ಕೊಡುತ್ತಿರುವ ಕಾಡಾನೆ ಭೀಮನ ಜತೆ ಫೋಟೋ ತೆಗೆಯಲು, ವೀಡಿಯೋ ತೆಗೆದು ಹುಚ್ಚಾಟ ಮೆರೆದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಅರಣ್ಯ ಇಲಾಖೆ ಹೇಳಿದೆ. ಜನರ ನಡೆಯಿಂದ ಆನೆಗೆ ತೊಂದರೆ ಆಗುತ್ತಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಿದೆ.ಈ ಬಗ್ಗೆ ಮಾಹಿತಿ ನೀಡಿರುವ ಡಿಎಫ್ಓ ಸೌರಭ್ಕುಮಾರ್, ಕಾಡಾನೆ ಭೀಮ ಗ್ರಾಮ, ತೋಟಗಳಿಗೆ ಬರುತ್ತಿದೆ. ಇಟಿಎಫ್ ತಂಡ 24 ಗಂಟೆಗಳ ಕಾಲ ಕಾಡಾನೆ ಭೀಮನನ್ನು ಗಮನಿಸುತ್ತಿದೆ. ಈಗಾಗಲೇ ಸಾರ್ವಜನಿಕರಿಗೆ ವಿನಂತಿ ಮಾಡಿ, ಎಚ್ಚರಿಕೆ
ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ತಮ್ಮ 60 ನೇ ಹುಟ್ಟುಹಬ್ಬವನ್ನು ಪನ್ವೆಲ್ನಲ್ಲಿರುವ ತಮ್ಮ ಫಾರ್ಮ್ಹೌಸ್ನಲ್ಲಿ ತಮ್ಮ ಆಪ್ತರು ಮತ್ತು ಕುಟುಂಬದೊಂದಿಗೆ ಆಚರಿಸಿದರು.ವಯಸ್ಸು 60 ಆದರೂ ಇನ್ನೂ ಮದುವೆಯಾಗದ ಸಲ್ಮಾನ್ ಖಾನ್ ಅವರು ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಕರೆಸಿಕೊಂಡಿದ್ದರು. ಇದೀಗ 60ನೇ ವಸಂತಕ್ಕೆ ಕಾಲಿಟ್ಟಿದ್ದರಿಂದ ಸೀನಿಯರ್ ಸಿಟಿಜನ್ ಆಗಿದ್ದಾರೆ. ನಟರಾದ ಸಂಜಯ್ ದತ್, ಆದಿತ್ಯ ರಾಯ್ ಕಪೂರ್ ಮತ್ತು ಕ್ರಿಕೆಟಿಗ ಎಂಎಸ್ ಧೋನಿ ಉಪಸ್ಥಿತರಿದ್ದರು.
ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಡಿಕೆ ಶಿವಕುಮಾರ್ ಕಡೆಯಿಂದ ಎಷ್ಟೇ ಒತ್ತಡವಿದ್ದರೂ ರಾಹುಲ್ ಗಾಂಧಿ ಅಲ್ಲಾಡದೇ ಕೂರಲು ಪ್ರಮುಖ ಕಾರಣವಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ ಸಿಎಂ ಬದಲಾವಣೆಯಾಗಬೇಕು, ಡಿಕೆಶಿಗೆ ಸಿಎಂ ಪಟ್ಟ ಸಿಗಬೇಕು ಎಂದು ಅವರ ಬಣದ ನಾಯಕರು ಒತ್ತಡ ಹೇರುತ್ತಿದ್ದಾರೆ. ಸ್ವತಃ ಡಿಕೆಶಿ ಹೊರಗೆ ಎಲ್ಲೂ ಗೊಂದಲಗಳಿಲ್ಲ ಎನ್ನುತ್ತಿದ್ದರೂ ಒಳಗೊಳಗೇ ರಾಷ್ಟ್ರೀಯ ನಾಯಕರ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಹಾಗಿದ್ದರೂ ಅವರಿಗೆ ಇದುವರೆಗೆ ಶುಭ ಸೂಚನೆ ಸಿಕ್ಕಿಲ್ಲ. ಹೈಕಮಾಂಡ್ ಯಾವುದೇ ಒತ್ತಡಗಳಿಗೂ ಮಣಿಯದೇ ಮೌನಕ್ಕೆ ಶರಣಾಗಿದೆ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರವನ್ನು ಇದುವರೆಗೆ ಡಿಕೆಶಿಗೆ ತಿಳಿಸಿಲ್ಲ.
ಬೆಂಗಳೂರು: ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿದೆ. ಹೊಸ ವರ್ಷಾಚರಣೆ ವೇಳೆ ಮೋಜು ಮಸ್ತಿಗೆ ಸಿದ್ಧತೆ ಮಾಡುತ್ತಿದ್ದ ಸಿಲಿಕಾನ್ ಸಿಟಿಯ ಪಬ್ ಮಾಲೀಕರಿಗೆ ಬೆಂಗಳೂರು ಪೊಲೀಸರು ಶಾಕ್ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಪಬ್ ಅಂಡ್ ಕ್ಲಬ್, ಬಾರ್ ಅಂಡ್ ರೆಸ್ಟೋರೆಂಟ್ಗೆ 30 ಮಾರ್ಗಸೂಚಿಗಳನ್ನು ಬೆಂಗಳೂರು ಪೊಲೀಸರು ಬಿಡುಗಡೆ ಹೊರಡಿಸಿದ್ದಾರೆ. ರಾತ್ರಿ ಸರಿಯಾಗಿ 1 ಗಂಟೆಗೆ ಎಲ್ಲವೂ ಬಂದ್ ಆಗಬೇಕು. ನಿಗದಿತ ಜಾಗಕ್ಕಿಂತ ಹೆಚ್ಚು ಜನರು ಪಬ್ & ಬಾರ್ನಲ್ಲಿ ಸೇರುವಂತಿಲ್ಲ. ವಯಸ್ಸಿನ ಮಿತಿ ಕಡ್ಡಾಯವಾಗಿ ಪಾಲಿಸಲು ಸೂಚನೆ, ಅಪ್ರಾಪ್ತರಿಗೆ ನೋ ಎಂಟ್ರಿ, ಐಡಿ ಕಾರ್ಡ್ ಪರಿಶೀಲನೆ ಕಡ್ಡಾಯ ಮಾಡಲಾಗಿದೆ.
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಎಂಥಾ ಹೃದಯವಂತ ಎನ್ನುವುದಕ್ಕೆ ಸಾಕ್ಷಿಯಾಗುವಂತಿದೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ. ಸೆಲೆಬ್ರಿಟಿಗಳು ಏರ್ ಪೋರ್ಟ್ ನಲ್ಲಿ ಬರುವ ಮತ್ತು ನಿರ್ಗಮಿಸುವ ಕ್ಷಣಗಳನ್ನು ಕಾದು ನಿಂತು ಸೆರೆಹಿಡಿಯುವುದನ್ನೇ ಕಾಯಕ ಮಾಡಿಕೊಂಡಿರುವ ಫೋಟೋಗ್ರಾಫರ್ ಗಳಿದ್ದಾರೆ. ಈ ಪಪ್ಪಾರಾಜಿಗಳ ಬಗ್ಗೆ ಇತ್ತೀಚೆಗೆ ಒಬ್ಬ ಸೆಲೆಬ್ರಿಟಿ ಕೀಳಾಗಿ ಮಾತನಾಡಿದ್ದಿದೆ. ಆದರೆ ಕೆಲವು ಸೆಲೆಬ್ರಿಟಿಗಳು ಇವರನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ. ಅವರಲ್ಲಿ ವಿರಾಟ್ ಕೊಹ್ಲಿಯೂ ಒಬ್ಬರು. ಇದೀಗ ವಿಜಯ್ ಹಜಾರೆ ಟ್ರೋಫಿ ಮುಗಿಸಿ ಕೊಹ್ಲಿ ಬೆಂಗಳೂರಿನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಕೆಲವರಿಗೆ ರಾತ್ರಿ ಮಲಗಿ ಬೆಳಿಗ್ಗೆ ಏಳುವ ಹೊತ್ತಿಗೆ ವಿಪರೀತ ಎನ್ನುವಷ್ಟು ಕುತ್ತಿಗೆ ನೋವು ಬಂದು ಬಿಡುತ್ತದೆ. ಇದಕ್ಕೆ ಪರಿಹಾರವೇನು ಇಲ್ಲಿದೆ ಟಿಪ್ಸ್. ಕುತ್ತಿಗೆ ನೋವು ಬಂತೆಂದರೆ ನೇರವಾಗಿ ಕುಳಿತುಕೊಂಡು ದೈನಂದಿನ ಕೆಲಸ ಮಾಡಲೂ ಆಗದ ಯಮ ಯಾತನೆ. ರಾತ್ರಿ ಮಲಗುವ ಭಂಗಿಯಿಂದಾಗಿ ಕುತ್ತಿಗೆ ನೋವು ಬರಬಹುದು. ಇದರಿಂದ ಸಹಿಸಲಾಗದ ನೋವು ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರವೇನು ಇಲ್ಲಿದೆ ನೋಟಿ ಟಿಪ್ಸ್. -ಎರಡು-ಮೂರು ತಲೆದಿಂಬು ಇಟ್ಟುಕೊಂಡಾಗ ಕುತ್ತಿಗೆ ಸಿ ಆಕಾರದಂತೆ ಬಾಗಿ ನೋವು ಬರಬಹುದು. ಹೀಗಾಗಿ ಒಂದಕ್ಕಿಂತ ಹೆಚ್ಚು ತಲೆದಿಂಬು ಇಟ್ಟುಕೊಳ್ಳಬೇಡಿ.-ಆದಷ್ಟು ನಿಮ್ಮ ತಲೆ ಭಾಗ ಕುತ್ತಿಗೆಯಿಂದ ತುಂಬಾ ಎತ್ತರದಲ್ಲಿರುವುದನ್ನು ಅವಾಯ್ಡ್ ಮಾಡಿ. ಆದಷ್ಟು ಸಮತಟ್ಟಾದ ಹಾಸಿಗೆಯಲ್ಲಿ ಮಲಗಿ.
ಬೆಂಗಳೂರು: ಅಕ್ರಮವಾಗಿ ವಾಸಿಸುತ್ತಿದ್ದರೆ ಮುಸ್ಲಿಮರು ಎಂಬುದು ಲೆಕ್ಕಕ್ಕೆ ಬರಲ್ಲ ಎಂದು ಯಲಹಂಕದ ಕೋಗಿಲು ಲೇಔಟ್ ನಲ್ಲಿ ಮನೆಗಳ ತೆರವು ಕುರಿತಂತೆ ಟೀಕೆ ಮಾಡಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಕೋಗಿಲು ಲೇಔಟ್ ನಲ್ಲಿ ಮುಸ್ಲಿಮರು ವಾಸವಿರುವ ಮನೆಗಳನ್ನು ಬುಲ್ಡೋಜರ್ ಬಳಸಿ ತೆರವುಗೊಳಿಸಿರುವ ವಿಚಾರವಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ಕರ್ನಾಟಕ ಸರ್ಕಾರವನ್ನು ಟೀಕಿಸಿದ್ದರು. ಇದ್ದಕ್ಕಿದ್ದಂತೆ ಮುಸ್ಲಿಮರ ಮನೆ ತೆರವುಗೊಳಿಸಿದರೆ ಅವರು ಎಲ್ಲಿಗೆ ಹೋಗಬೇಕು? ಉತ್ತರ ಪ್ರದೇಶದಲ್ಲಿರುವ ಸಂವಿಧಾನಬಾಹಿರ ಬುಲ್ಡೋಜರ್ ಸಂಸ್ಕೃತಿ ಕರ್ನಾಟಕಕ್ಕೂ ಕಾಲಿಟ್ಟಿದೆ. ಇದರ ವಿರುದ್ಧ ಹೋರಾಡಬೇಕು ಎಂದಿದ್ದರು.
ನವದೆಹಲಿ: ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಆರಂಭವಾಗಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ದೇಶದ ಘಟಾನುಘಟಿ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ. ಈ ಬಾರಿ ಕಾರ್ಯಕಾರಿಣಿ ಸಭೆಗೆ ಕರ್ನಾಟಕದಿಂದ ಸಿಎಂ ಸಿದ್ದರಾಮಯ್ಯಗೆ ಮಾತ್ರವೇ ಆಹ್ವಾನ ಬಂದಿದೆ. ಹೀಗಾಗಿ ಅವರು ಇಂದಿನ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಆರಂಭದಲ್ಲೇ ದಿವಂಗತ ಡಾ ಮನಮೋಹನ್ ಸಿಂಗ್ ಅವರ ಸ್ಮರಣಾರ್ಥ ಗೌರವ ಸಲ್ಲಿಸಲಾಯಿತು. ಈ ಬಾರಿ ಎಐಸಿಸಿ ಸಭೆ ನಡುವೆ ಸಿದ್ದರಾಮಯ್ಯ ಜೊತೆ ರಾಜ್ಯದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸುವ ನಿರೀಕ್ಷೆಯಿದೆ.
ಗಲ್ಲಿ ಕ್ರಿಕೆಟ್ ನಲ್ಲಿ ಎಂತೆಂಥಾ ವಿಚಿತ್ರ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ಇದೊಂದು ನಿದರ್ಶನ. ಬ್ಯಾಟಿಂಗ್ ಅವಕಾಶ ಸಿಗಲಿಲ್ಲ ಎಂದು ಯುವಕನೊಬ್ಬ ಇಡೀ ಮೈದಾನಕ್ಕೆ ಟ್ರ್ಯಾಕ್ಟರ್ ಹೊಡೆಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗಲ್ಲಿ ಕ್ರಿಕೆಟ್ ನಲ್ಲಿ ಗೆಳೆಯರು ಆಡುವಾಗ ಕಿತ್ತಾಟಗಳು ಆಗುವುದು ಸಹಜ. ಇದೇ ರೀತಿ ಇಲ್ಲಿ ಯುವಕರ ನಡುವೆ ನಡೆಯುತ್ತಿದ್ದ ಗಲ್ಲಿ ಕ್ರಿಕೆಟ್ ನಲ್ಲಿ ಗೆಳೆಯರ ನಡುವೆ ಕಿತ್ತಾಟವಾಗಿದೆ. ಅದರಲ್ಲಿ ಒಬ್ಬಾತ ಅಂತೂ ಅತಿರೇಕಕ್ಕೇ ಹೋಗಿದ್ದಾನೆ. ತನಗೆ ಬ್ಯಾಟಿಂಗ್ ಅವಕಾಶವೇ ಕೊಡಲಿಲ್ಲ ಎಂದು ಯುವಕನೊಬ್ಬ ಮೈದಾನಕ್ಕೆ ಟ್ರ್ಯಾಕ್ಟರ್ ತರಿಸಿ ಇಡೀ ಮೈದಾನವನ್ನು ಗದ್ದೆ ಹೂಳುವಂತೆ ಹೂಳಿ ಧೂಳೆಬ್ಬಿಸಿದ್ದಾನೆ.
ಬೆಂಗಳೂರು: ಚಿನ್ನದ ಬೆಲೆ ಪ್ರತಿನಿತ್ಯ ಏರಿಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ಭಾರೀ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತ ಇಳಿಕೆ ಕಂಡಿತ್ತು. ಆದರೆ ವಾರಂತ್ಯಕ್ಕೆ ಚಿನ್ನದ ದರ ಏರಿಕೆ-ಇಳಿಕೆಯಾಗುತ್ತಲೇ ಇತ್ತು. ಈ ವಾರವೂ ಇದೇ ಟ್ರೆಂಡ್ ಮುಂದುವರಿಯುವ ಲಕ್ಷಣವಿದೆ. ಇಂದು ಪರಿಶುದ್ಧ ಚಿನ್ನದ ದರ ಭಾರೀ ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ಮೊನ್ನೆ 1,41,385.00 ರೂ.ಗಳಿತ್ತು. ಇಂದು 1,42,585.00 ರೂ.ಗಳಷ್ಟಾಗಿದೆ.
ಬೆಂಗಳೂರು: ಅಡಿಕೆ ಬೆಲೆ ಒಂದು ವಾರದಿಂದ ಯಥಾಸ್ಥಿತಿಯಲ್ಲಿತ್ತು. ಇಂದು ಕೆಲವು ವರ್ಗದ ಅಡಿಕೆ ಬೆಲೆ ಕೊಂಚ ಏರಿಕೆಯಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಅಡಿಕೆ ಬೆಲೆ ಏರಿಕೆಯೂ ಅಲ್ಲ ಇಳಿಕೆಯೂ ಇಲ್ಲ ಎನ್ನುವ ಸ್ಥಿತಿಯಲ್ಲಿತ್ತು. ಒಂದೆಡೆ ಬೆಳೆ ಕಡಿಮೆ, ಇನ್ನೊಂದೆಡೆ ಬೆಲೆ ಏರಿಕೆಯಾಗದೇ ಇರುವುದು ರೈತರ ಚಿಂತೆಗೆ ಕಾರಣವಾಗಿದೆ. ಅಡಿಕೆ ಬೆಲೆ ಇಳಿಕೆಯಾಗುತ್ತಿದೆಯೇ ಹೊರತು ಏರಿಕೆಯಾಗುತ್ತಿಲ್ಲ ಎಂಬ ಚಿಂತೆ ಬೆಳೆಗಾರರದ್ದು. ಇಂದು ಹೊಸ ಅಡಿಕೆ ಬೆಲೆ 415 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 5 ರೂ. ಏರಿಕೆಯಾಗಿ 525 ರೂ. ಗಳಷ್ಟಿದೆ.
ನವದೆಹಲಿ: ನಮ್ಮ ಸ್ಥಳೀಯ ಸಮಸ್ಯೆಗಳ ಬಗ್ಗೆ ನೇರವಾಗಿ ಪ್ರಧಾನಿ ಮೋದಿಗೇ ದೂರು ಸಲ್ಲಿಸಬೇಕು ಎನಿಸಿದರೆ ಹೇಗೆ ಸಲ್ಲಿಸೋದು? ಇಲ್ಲಿದೆ ನೋಡಿ ಆನ್ ಲೈನ್ ನಲ್ಲಿ ದೂರು ಸಲ್ಲಿಸುವ ವಿಧಾನ. ಪ್ರಧಾನಿಗಳ ನಿಮ್ಮ ಸಮಸ್ಯೆಯ ದೂರು ಸಲ್ಲಿಸಲು ಸುಲಭ ವಿಧಾನವೆಂದರೆ ಆನ್ ಲೈನ್ ಪೋರ್ಟಲ್ ಬಳಕೆ ಮಾಡುವುದು. ಇದು ನೇರವಾಗಿ ಪ್ರಧಾನ ಮಂತ್ರಿಗಳ ಕಚೇರಿಗೇ ತಲುಪುತ್ತದೆ. ಇದಕ್ಕಾಗಿ ನೀವು https://pgportal.gov.in/ ಎಂಬ ವೆಬ್ ಸೈಟ್ ಗೆ ಹೋಗಬೇಕು. ಇಲ್ಲಿ ಕಂಪ್ಲೇಂಟ್ ದಾಖಲಿಸುವ ಆಯ್ಕೆ ಸಿಗುತ್ತದೆ.
ಮೈಸೂರು: ಪಕ್ಕದಲ್ಲೇ ಸಿಸಿಟಿವಿ ಕ್ಯಾಮರಾ ಇದ್ದರೂ ಸ್ಪೋಟದ ದೃಶ್ಯ ಮಾತ್ರ ಸೆರೆಯಾಗಿಲ್ಲ. ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಪೋಟದ ಬಗ್ಗೆ ಈಗ ಅನುಮಾನ ಹೆಚ್ಚಾಗಿದೆ. ಉತ್ತರ ಪ್ರದೇಶದಿಂದ ಬಂದಿದ್ದ ಸಲೀಂ ಎಂಬ ಬಲೂನ್ ಮಾರಾಟಗಾರನ ಹೀಲಿಯಂ ಸಿಲಿಂಡರ್ ಸ್ಪೋಟಗೊಂಡು ಒಟ್ಟು ಮೂವರು ಸಾವನ್ನಪ್ಪಿದ್ದಾರೆ. ಸಲೀಂ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಗಾಯಗೊಂಡಿದ್ದ ನಾಲ್ವರ ಪೈಕಿ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದೀಗ ಸ್ಪೋಟದ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಸಾಕಷ್ಟು ಅನುಮಾನಗಳು ಹುಟ್ಟು ಹಾಕಿವೆ. ಸ್ಪೋಟದ ನಡೆದ ಕೇವಲ 20 ಅಡಿಯಲ್ಲೇ ಸಿಸಿಟಿವಿ ಕ್ಯಾಮರಾ ಇದೆ.
ತಿರುವನಂತರಪುರಂ: ಮೂರು ಪಂದ್ಯಗಳಲ್ಲೂ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ರನ್ ಗಳಿಸಲು ವಿಫಲರಾಗಿದ್ದಾರೆ. ಅವರಿಗೆ ಆ ಒಂದು ವಿಚಾರವೇ ಕಾಡ್ತಿದೆಯಾ ಎಂಬ ಪ್ರಶ್ನೆ ಮೂಡಿದೆ. ಶ್ರೀಲಂಕಾ ವಿರುದ್ಧ ಮೂರನೇ ಟಿ20 ಪಂದ್ಯದಲ್ಲೂ ಸ್ಮೃತಿ ಕಳಪೆ ಮೊತ್ತಕ್ಕೆ ಔಟಾಗಿದ್ದಾರೆ. ಮೊದಲ ಪಂದ್ಯದಲ್ಲಿ 25 ರನ್ ಗಳಿಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ 14 ರನ್ ಗೆ ವಿಕೆಟ್ ಒಪ್ಪಿಸಿದ್ದರು. ನಿನ್ನೆಯ ಪಂದ್ಯದಲ್ಲಂತೂ ಕೇವಲ 1 ರನ್ ಗೆ ಔಟಾಗಿದ್ದಾರೆ. ಅವರ ಬ್ಯಾಟಿಂಗ್ ನಲ್ಲಿ ಈ ಮೂರೂ ಪಂದ್ಯಗಳಲ್ಲಿ ಝಲಕ್ ಕಾಣುತ್ತಿಲ್ಲ. ಸ್ಮೃತಿ ಈ ಸರಣಿಗೆ ಬರುವ ಮುನ್ನ ಅವರ ವೈಯಕ್ತಿಕ ಜೀವನದಲ್ಲಿ ದೊಡ್ಡ ಕೋಲಾಹಲವೇ ನಡೆದಿದೆ.
ಬೆಂಗಳೂರು: ವಿಜಯ್ ಹಜಾರೆ ಟ್ರೋಫಿಯಲ್ಲಿ ಡೆಲ್ಲಿ ಪರ ಕಣಕ್ಕಿಳಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯ ಸಲುವಾಗಿ ಪಡೆದ ಬಹುಮಾನ ಮೊತ್ತ ಈಗ ಫುಲ್ ವೈರಲ್ ಆಗಿದೆ. ಬಹಳ ಸಮಯದ ನಂತರ ಬಿಳಿ ಚೆಂಡಿನ ದೇಶೀಯ ಕ್ರಿಕೆಟ್ ನಲ್ಲಿ ಕೊಹ್ಲಿ ಆಡಿದ್ದಾರೆ. ಮೊದಲ ಪಂದ್ಯವನ್ನು ಆಂಧ್ರ ಪ್ರದೇಶದ ವಿರುದ್ಧ ಮತ್ತು ಎರಡನೇ ಪಂದ್ಯದಲ್ಲಿ ಗುಜರಾತ್ ವಿರುದ್ಧ ಆಡಿದ್ದರು. ಈ ಪೈಕಿ ಮೊದಲ ಪಂದ್ಯದಲ್ಲಿ ಕೊಹ್ಲಿ ಶತಕ ಗಳಿಸಿ ಪಂದ್ಯ ಶ್ರೇಷ್ಠರಾಗಿದ್ದರು. ಆದರೆ ಈ ಪ್ರಶಸ್ತಿಯನ್ನು ಅವರು ತಂಡದ ಮತ್ತೊಬ್ಬ ಆಟಗಾರನಿಗೆ ದಾನ ಮಾಡಿದ್ದರು.
ತಿರುವನಂತರಪುರಂ: ಮುಸ್ಲಿಂ ವಸತಿಗಳನ್ನು ಕರ್ನಾಟಕ ಸರ್ಕಾರ ನೆಲಸಮ ಮಾಡಿರುವುದಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ದುಃಖ, ಆಕ್ರೋಶ ಹೊರಹಾಕಿದ್ದಾರೆ. ಯಲಹಂಕದ ಕೋಗಿಲು ಗ್ರಾಮದ ಫಕೀರ್ ಕಾಲೊನಿ, ವಸೀಮ್ ಲೇಔಟ್ ನಲ್ಲಿರುವ ಮುಸ್ಲಿಮ್ ವಸತಿಗಳನ್ನು ಬುಲ್ಡೋಜರ್ ನಿಂದ ಕೆಡವಲಾಗಿದೆ. ಇದರ ವಿರುದ್ಧ ಕೇರಳ ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದು ಉತ್ತರ ಪ್ರದೇಶದ ಬುಲ್ಡೋಜರ್ ಸಂಸ್ಕೃತಿ ಎಂದು ಕರ್ನಾಟಕವನ್ನು ಟೀಕಿಸಿದ್ದಾರೆ. ಏಕಾಏಕಿ ಬಂದು ಮನೆಗಳನ್ನು ನೆಲಸಮ ಮಾಡಿದ್ರೆ ಮುಸ್ಲಿಮ್ ಕುಟುಂಬಗಳು ಎಲ್ಲಿಗೆ ಹೋಗಬೇಕು? ಈ ಚಳಿಗೆ ಮಕ್ಕಳು, ಮಹಿಳೆಯರು ಇದ್ದಕ್ಕಿದ್ದಂತೆ ಮನೆಯಿಂದ ಹೊರಹಾಕಿದ್ರೆ ಅವರು ಎಲ್ಲಿರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಮೊನ್ನೆಯಷ್ಟೇ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಸೀ ಬರ್ಡ್ ಬಸ್ ಅಗ್ನಿ ಅನಾಹುತವಾಗಿ 7 ಜನ ಸಜೀವ ದಹನವಾದ ಘಟನೆ ಜನರ ಮನಸ್ಸಿನಿಂದ ಮಾಸಿಲ್ಲ. ಆಗಲೇ ಇನ್ನೊಂದು ಸೀಬರ್ಡ್ ಬಸ್ ನ ಚಾಲಕನೊಬ್ಬನ ಅವಾಂತರ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಸೀಬರ್ಡ್ ಸಂಸ್ಥೆಯ ಬಸ್ ಚಾಲಕ ಕುಡಿದು ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಬಸ್ ನಲ್ಲಿ 30 ಜನ ಪ್ರಯಾಣಿಕರಿದ್ದರು. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ನಿಮಿತ್ತ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.