ಇಸ್ರೇಲ್, ಯುಎಸ್ ದಾಳಿಗೆ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಅವರ ಪತ್ನಿ ಮನ್ಸೌರೆ ಖೋಜಸ್ತೇ ಇಂದು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. 79ವರ್ಷದ ಮನ್ಸೌರೆ ಅವರು ಪತಿ ಖಮೇನಿ ಸಾವಿನ ಬಳಿಕ ಕೋಮಾಕ್ಕೆ ಜಾರಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆಂದು ಇರಾನ್ ಮಾಧ್ಯಮಗಳು ವರದಿ ಮಾಡಿದೆ. 1964ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿಗೆ 6 ಮಂದಿ ಮಕ್ಕಳಿದ್ದಾರೆ. ಶನಿವಾರ ಮುಂಜಾನೆ ಟೆಹ್ರಾನ್ನಲ್ಲಿ ಯುಎಸ್-ಇಸ್ರೇಲಿಗಳ ಸಂಘಟಿತ ವೈಮಾನಿಕ ದಾಳಿಯಲ್ಲಿ ಅವರ ಕಾಂಪೌಂಡ್ ಬಾಂಬ್
ಬೆಂಗಳೂರು: ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಕನ್ನಡಿಗರು ಮತ್ತು ಇತರ ಭಾರತೀಯರನ್ನು ರಕ್ಷಿಸಲು ತೆರವು ಸಿದ್ಧತೆಯನ್ನು ಪ್ರಾರಂಭಿಸಬೇಕು, ರಾಜತಾಂತ್ರಿಕ ಪ್ರಭಾವವನ್ನು ಹೆಚ್ಚಿಸಬೇಕು ಮತ್ತು ಅಂತರ ಸಚಿವಾಲಯದ ಕಾರ್ಯವಿಧಾನವನ್ನು ಸ್ಥಾಪಿಸಬೇಕು ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಈ ಪ್ರದೇಶದಲ್ಲಿ ವೇಗವಾಗಿ ವಿಕಸನಗೊಳ್ಳುತ್ತಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ, ಇದು ವಿಮಾನ ರದ್ದತಿಗೆ ಕಾರಣವಾಗಿದೆ ಮತ್ತು ಕರ್ನಾಟಕ ಮತ್ತು ಭಾರತದಾದ್ಯಂತದ ನಿವಾಸಿಗಳು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ವ್ಯಾಪಕ ಅನಿಶ್ಚಿತತೆಗೆ ಕಾರಣವಾಗಿದೆ ಎಂದರು.
ಬೆಂಗಳೂರು: ಇಲ್ಲಿನ ಬಾಡಿಗೆ ಮನೆಯಲ್ಲಿ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕೊಲೆಗೆ ಸಂಬಂಧಿಸಿದಂತೆ ಆತನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾರ್ಚ್ 1, ಸೋಮವಾರ ತಿಳಿಸಿದ್ದಾರೆ.ಮೃತರನ್ನು 40ವರ್ಷದ ಮೋಹನ್ ರಾವ್ ಎಂದು ಗುರುತಿಸಲಾಗಿದೆ. . ಅವರು ಪಿಗ್ಮಿ ಸಂಗ್ರಹಣೆ, ದ್ವಿಚಕ್ರ ವಾಹನಗಳಿಗೆ ಹಣಕಾಸು ಮತ್ತು ಕೆಲವು ಸಣ್ಣ-ಪ್ರಮಾಣದ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಅವರು ಹೇಳಿದರು.
ಸೋಮವಾರ ಗಲ್ಫ್ ಆಫ್ ಓಮನ್ನಲ್ಲಿ ಮಾರ್ಷಲ್ ಐಲ್ಯಾಂಡ್ಸ್-ಫ್ಲಾಗ್ಡ್ ತೈಲ ಟ್ಯಾಂಕರ್ಗೆ ಬಾಂಬ್ ಹೊತ್ತ ಡ್ರೋನ್ ಬೋಟ್ ಅಪ್ಪಳಿಸಿದ್ದು, ಅದರಲ್ಲಿದ್ದ ಒಬ್ಬ ನಾವಿಕರು ಸಾವನ್ನಪ್ಪಿದ್ದಾರೆ ಎಂದು ಒಮಾನ್ ವರದಿ ಮಾಡಿದೆ.ಸುಲ್ತಾನರ ರಾಜಧಾನಿಯಾದ ಮಸ್ಕತ್ ಕರಾವಳಿಯ ಒಮಾನ್ ಕೊಲ್ಲಿಯಲ್ಲಿ ನಡೆದ ದಾಳಿಯನ್ನು ಸರ್ಕಾರಿ ಒಮಾನ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದು ನೌಕೆಯನ್ನು MKD VYOM ಎಂದು ಗುರುತಿಸಿದೆ. ಮೃತ ಸಿಬ್ಬಂದಿ ಭಾರತದವರು ಎಂದು ಅದು ಹೇಳಿದೆ.ಇರಾನ್ ಪರ್ಷಿಯನ್ ಕೊಲ್ಲಿಯ ಕಿರಿದಾದ ಬಾಯಿಯಾದ ಹಾರ್ಮುಜ್ ಜಲಸಂಧಿಯನ್ನು ಸಮೀಪಿಸುತ್ತಿರುವ ಹಡಗುಗಳಿಗೆ ಬೆದರಿಕೆ ಹಾಕುತ್ತಿದೆ ಮತ್ತು ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಇಸ್ಲಾಮಿಕ್ ಗಣರಾಜ್ಯವನ್ನು ಗುರಿಯಾಗಿಟ್ಟುಕೊಂಡು ಪ್ರಮುಖ
ಮೈಸೂರು: ಜಿಲ್ಲೆಯ ಟಿ ನರಸೀಪುರದಲ್ಲಿರುವ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಸಚಿವ ಎಚ್ಸಿ ಮಹಾದೇವಪ್ಪ ಅವರು ಬಿಜೆಪಿ ಅನಗತ್ಯ ಗೊಂದಲವನ್ನು ಸೃಷ್ಟಿ ಮಾಡುತ್ತಿದೆ ಎಂದು ಆರೋಪ ಮಾಡಿದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಮಹದೇವಪ್ಪ, ರೇಷ್ಮೆ ಮಾರುಕಟ್ಟೆಗೆ ಬಳಸಲಾಗುತ್ತಿದ್ದ ಒಂದೂವರೆ ಎಕರೆ ಭೂಮಿಯನ್ನು ಉದ್ಯಾನವನದ ಅಭಿವೃದ್ಧಿಗಾಗಿ ಹಂಚಿಕೆ ಮಾಡಲು ಸರ್ಕಾರ ಈ ಹಿಂದೆ ನಿರ್ಧರಿಸಿತ್ತು. ಆದರೆ ಈಗ ಆ ಆದೇಶವನ್ನು ಪರಿಶೀಲಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.ಇನ್ನೂ ಆ ಭೂಮಿಯಲ್ಲಿ ಕ್ರೀಡಾಂಗಣವನ್ನೂ ನಿರ್ಮಾಣ ಮಾಡುವ ವಿಚಾರವಿಲ್ಲ. ನಮಗೆ ರೇಷ್ಮೆ ಕಾರ್ಖಾನೆ ಪ್ರಮುಖ
ಮಂಗಳೂರು: ಗಲ್ಫ್ ವಲಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 3 ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈ, ದೋಹಾ, ದಮಾಮ್, ಕತಾರ್ ಮತ್ತು ಅಬುಧಾಬಿಗೆ ತೆರಳಬೇಕಿದ್ದ ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ನ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಗಲ್ಫ್ ರಾಷ್ಟ್ರಗಳಾದ್ಯಂತ ಅಮೇರಿಕನ್ ಮಿಲಿಟರಿ ನೆಲೆಗಳು ಸೇರಿದಂತೆ ಪ್ರಮುಖ ಸ್ಥಾಪನೆಗಳ ಮೇಲೆ ಇರಾನ್ ನಡೆಸಿದ ಪ್ರತೀಕಾರದ ದಾಳಿಗಳನ್ನು ಅನುಸರಿಸಿ ಈ ಅಡ್ಡಿಯುಂಟಾಗಿದೆ. ಕ್ಷಿಪ್ರವಾಗಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯು ಮುಂಜಾಗ್ರತಾ ಕ್ರಮವಾಗಿ ಗಲ್ಫ್ ಸ್ಥಳಗಳಿಗೆ ವಿಮಾನಗಳನ್ನು ಸ್ಥಗಿತಗೊಳಿಸಲು ಅಧಿಕಾರಿಗಳನ್ನು ಪ್ರೇರೇಪಿಸಿದೆ.
ಪಶ್ಚಿಮ ಬಂಗಾಳ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ 'ಏಕ್ ದೇಶ್, ಏಕ ವಿಧಾನ, ಏಕ ನಿಶಾನ್' ಘೋಷಣೆಯನ್ನು ಎತ್ತಿದರು ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ಹಾಕುವಂತೆ ಪಶ್ಚಿಮ ಬಂಗಾಳದ ಜನರನ್ನು ಉತ್ತೇಜಿಸಿದರು.ಇಲ್ಲಿ ನಡೆದ 'ಪರಿವರ್ತನ್ ಯಾತ್ರೆ'ಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವರು, ಪಶ್ಚಿಮ ಬಂಗಾಳವು 'ಪರಿವರ್ತನೆ'ಗೆ ಸಿದ್ಧವಾಗಿದೆ, ಅದನ್ನು ತಮ್ಮ ಪಕ್ಷವು ತರಲಿದೆ ಎಂದು ಅವರು ಒತ್ತಿ ಹೇಳಿದರು. ಬದಲಾವಣೆಗಾಗಿ ಪಶ್ಚಿಮ ಬಂಗಾಳದ "ಯುದ್ಧದ ಕೂಗು" ರ್ಯಾಲಿಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.
ಕಟೋಲ್ ತಾಲ್ಲೂಕಿನ ಗಣಿಗಾರಿಕೆ ಮತ್ತು ಕೈಗಾರಿಕಾ ಸ್ಫೋಟಕ ತಯಾರಿಕಾ ಕಾರ್ಖಾನೆ ಎಸ್ಬಿಎಲ್ ಎನರ್ಜಿ ಲಿಮಿಟೆಡ್ನಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ 18ಕಾರ್ಮಿಕರು ಸಾವನ್ನಪ್ಪಿದ ಪ್ರಕರಣ ಸಂಬಂಧ ಇದುವರೆಗೆ ಬಂಧಿತರ ಸಂಖ್ಯೆ ಒಂಭತ್ತಕ್ಕೆ ಏರಿಕೆಯಾಗಿದೆ. ‘ಎಸ್ಬಿಎಲ್ ಎನರ್ಜಿ ಲಿಮಿಟೆಡ್’ನ 21 ಮಂದಿ ನಿರ್ದೇಶಕರು ಮತ್ತು ಷೇರುದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.ಪ್ರಬಲ ಸ್ಫೋಟದಲ್ಲಿ ಕನಿಷ್ಠ 18 ಕಾರ್ಮಿಕರು ಸುಟ್ಟು ಕರಕಲಾಗಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರ ಸ್ಥಿತಿ
ಮಗು ಹುಟ್ಟಿದ ಆರು ತಿಂಗಳವರೆಗೆ ಸರಿಯಾದ ಸಮಯಕ್ಕೆ ನಿದ್ರಿಸಲ್ಲ, ಅಮ್ಮಂದಿರಿಗೂ ವಿಶ್ರಾಂತಿ ಇಲ್ಲದ ಪರಿಸ್ಥಿತಿಯಾಗಿರುತ್ತದೆ. ಹೀಗಾಗಿ ನವಜಾತ ಶಿಶುಗಳು ಹೆಚ್ಚು ಹೊತ್ತು ನಿದ್ರಿಸಲು ಏನು ಮಾಡಬೇಕು ಇಲ್ಲಿದೆ ಟಿಪ್ಸ್. ನವಜಾತ ಮಕ್ಕಳಿಗೆ ಹಗಲು ಮತ್ತು ರಾತ್ರಿಯ ವ್ಯತ್ಯಾಸವಿರುವುದಿಲ್ಲ. ಅವರು ಹೆಚ್ಚು ಹೊತ್ತು ನಿದ್ರಿಸಿದಷ್ಟೂ ಅವರ ಬೆಳವಣಿಗೆಯಾಗುತ್ತದೆ. ಹಾಗಿದ್ದರೂ ರಾತ್ರಿ ಹೊತ್ತು ನಿದ್ರಿಸಿದರೆ ನಮಗೂ ವಿಶ್ರಾಂತಿ ಸಿಗುತ್ತದೆ. ಇದಕ್ಕಾಗಿ ಇದೊಂದು ಸಿಂಪಲ್ ಕೆಲಸ ಮಾಡಿ. ಹಗಲು ಹೊತ್ತು ಮನೆಯಲ್ಲಿ ಶುಭ್ರ ಬೆಳಕು ಇರುವಂತೆ ಕಿಟಿಕಿ, ಬಾಗಿಲುಗಳನ್ನು ತೆರೆದಿಡಿ. ಅವರನ್ನು ಮಾತನಾಡಿಸುತ್ತಾ, ಅವರ ಜೊತೆ ಆಟವಾಡುತ್ತಾ ಅವರನ್ನು ಎಂಗೇಜ್ ಆಗಿರುವಂತೆ ನೋಡಿಕೊಳ್ಳಿ
ಬೆಂಗಳೂರು: ಗ್ಯಾರಂಟಿ ಬಗ್ಗೆ ಈಗ ಕಾಂಗ್ರೆಸ್ ನ ಒಬ್ಬೊಬ್ಬರೇ ಶಾಸಕರೇ ಬಹಿರಂಗವಾಗಿ ಅಪಸ್ವರವೆತ್ತಲು ಶುರು ಮಾಡಿದ್ದಾರೆ. ಇದೀಗ ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ ಎಲ್ಲರಿಗೂ ಉಚಿತ ಗ್ಯಾರಂಟಿ ಕೊಡೋದು ಕಷ್ಟ ಎಂದಿದ್ದಾರೆ. ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದರಿಂದಲೇ ಈ ಬಾರಿ ಕಾಂಗ್ರೆಸ್ ಸರ್ಕಾರಕ್ಕೆ ನಿರೀಕ್ಷೆಗೂ ಮೀರಿದ ಬಹುಮತ ಬಂದಿತ್ತು. ಈಗಾಗಲೇ ಸರ್ಕಾರ 2 ವರ್ಷ ಪೂರೈಸಿದೆ. ಆದರೆ ಗ್ಯಾರಂಟಿಯಿಂದಾಗಿ ಆರ್ಥಿಕವಾಗಿ ಕಷ್ಟವಾಗುತ್ತಿದೆ ಎಂಬುದನ್ನು ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು.
ಕೋಲ್ಕತ್ತಾ: ವೆಸ್ಟ್ ಇಂಡೀಸ್ ವಿರುದ್ಧ ಟಿ20 ವಿಶ್ವಕಪ್ ಸೂಪರ್ 8 ಹಂತದ ಕೊನೆಯ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲಲು ಆ ಎರಡು ಶಾಟ್ ಗಳೇ ಕಾರಣ, ಆದರೆ ಯಾರೂ ಆ ಬಗ್ಗೆ ಮಾತನಾಡುತ್ತಿಲ್ಲ ಎಂದು ವೇಗಿ ಜಸ್ಪ್ರೀತ್ ಬುಮ್ರಾ ಬೇಸರ ವ್ಯಕ್ತಪಡಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಜಸ್ಪ್ರೀತ್ ಬುಮ್ರಾ ಗೆಲುವಿನ ಬಳಿಕ ತಮ್ಮ ಪತ್ನಿ, ನಿರೂಪಕಿ ಸಂಜನಾ ಗಣೇಶನ್ ಗೆ ಸಂದರ್ಶನ ನೀಡಿದ್ದರು. ಈ ವೇಳೆ ಸಂಜು ಸ್ಯಾಮ್ಸನ್ ಇನಿಂಗ್ಸ್ ಹೊಗಳಿದ ಬುಮ್ರಾ, ಗೆಲುವಿಗೆ ಶಿವಂ ದುಬೆ ಆ ಎರಡು ಬೌಂಡರಿಗಳೇ ಕಾರಣ ಎಂದಿದ್ದಾರೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಏರಿಕೆಯಾಗಿದೆ ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ಇಂದು ವಾರದ ಆರಂಭದಲ್ಲೇ ಪರಿಶುದ್ಧ ಚಿನ್ನದ ದರ ಭಾರೀ ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,64,395.00 ರೂ.ಗಳಿತ್ತು. ಇಂದೂ 1,73,055.00 ರೂ.ಗಳಷ್ಟಿದೆ.
ನವದೆಹಲಿ: ಇರಾನ್ ನ ಪರಮೋಚ್ಛ ನಾಯಕ ಖಮೇನಿ ಸಾವಿಗೆ ಭಾರತದಲ್ಲೂ ಕೆಲವರು ವಿಷಾಧ ವ್ಯಕ್ತಪಡಿಸಿದ್ದಾರೆ. ಆದರೆ ಇಲ್ಲೊಬ್ಬ ಬಾಲಕ ನಮಗೆ ಖಮೇನಿಯೇ ಬಾಸ್, ಅವರನ್ನು ಕೊಲ್ಲಲು ಹೇಳಿದ್ದು ಮೋದಿಯೇ ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇಸ್ರೇಲ್-ಅಮೆರಿಕಾ ನಡೆಸಿದ ದಾಳಿಯಲ್ಲಿ ಇರಾನ್ ನ ಪರಮೋಚ್ಛ ನಾಯಕ ಖಮೇನಿ ಮತ್ತು ಆತನ ಕುಟುಂಬಸ್ಥರು ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಪ್ರಪಂಚದಾದ್ಯಂತ ಖಮೇನಿ ಅನುಯಾಯಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಪೈಕಿ ಭಾರತದಲ್ಲೂ ಕೆಲವರು ಖಮೇನಿ ಪರ ಮಾತನಾಡಿದವರು ಇದ್ದಾರೆ.
ಇಸ್ಲಾಮಾಬಾದ್: ಭಾರತ ಆಪರೇಷನ್ ಸಿಂಧೂರ್ ವೇಳೆ ನಡೆಸಿದ ದಾಳಿಯಿಂದಲೇ ಇನ್ನೂ ಚೇತರಿಸಿಕೊಂಡಿಲ್ಲ. ಆಗಲೇ ಪಾಕಿಸ್ತಾನದ ಪ್ರಮುಖ ವಾಯುನೆಲೆ ಮೇಲೆ ಅಫ್ಘಾನಿಸ್ತಾನದಿಂದ ದಾಳಿಯಾಗಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ಯುದ್ಧ ಏರ್ಪಟ್ಟಿದೆ. ಇದೀಗ ಪಾಕ್ ದಾಳಿಗೆ ಪ್ರತಿಯಾಗಿ ಅಫ್ಘಾನಿಸ್ತಾನದಿಂದ ನೂರ್ ಖಾನ್ ವಾಯುನೆಲೆ ಮೇಲೆ ದಾಳಿ ಮಾಡಲಾಗಿದೆ. ಇದು ಪಾಕಿಸ್ತಾನದ ಪ್ರಮುಖ ವಾಯುನೆಲೆಯಾಗಿದ್ದು ಈಗಷ್ಟೇ ಭಾರತದ ದಾಳಿಯಿಂದ ಚೇತರಿಸಿಕೊಂಡಿತ್ತು. ಕಳೆದ ಮೇ ತಿಂಗಳಿನಲ್ಲಿ ಆಪರೇಷನ್ ಸಿಂಧೂರ್ ನಡೆಸಿದ್ದ ಭಾರತ ಇದೇ ನೂರ್ ಖಾನ್ ವಾಯುನೆಲೆಯ ದಾಳಿ ಮಾಡಿ ಮರ್ಮಾಘಾತ ನೀಡಿತ್ತು.
ಬೇಕರಿಗಳಿಂದ ಸ್ವೀಟ್ ಖರೀದಿ ಮಾಡಿ ಚಪ್ಪರಿಸಿಕೊಂಡು ತಿನ್ನುವವರು ಈ ವಿಡಿಯೋವನ್ನು ತಪ್ಪದೇ ನೋಡಿ. ಇದೆಂಥಾ ಅಸಹ್ಯ ಎಂದು ನಿಮಗೇ ಅನಿಸಬಹುದು. ಹೊರಗಡೆ ಸಿಹಿ ತಿನಿಸು ಖರೀದಿ ಮಾಡುವಾಗ ಅದು ಎಷ್ಟು ಸುರಕ್ಷಿತ, ಆರೋಗ್ಯಕರ ಎಂದು ಅನೇಕ ಬಾರಿ ಪ್ರಶ್ನೆ ಬರುತ್ತದೆ. ಹೊರಗಿನ ಆಹಾರ ಸೇವನೆಯಿಂದ ಅನೇಕ ಬಾರಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇದಕ್ಕೆ ಅದನ್ನು ಹೇಗೆ ತಯಾರು ಮಾಡುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಇದೇ ರೀತಿ ರಾಜಸ್ಥಾನದಲ್ಲಿ ಗಲೀಜಾದ ಜಾಗದಲ್ಲಿ ಸಿಹಿ ತಿನಿಸು ತಯಾರಿ ಮಾಡುವ ಜಾಗದ ವಿಡಿಯೋವೊಂದು ವೈರಲ್ ಆಗಿದೆ.
ಮುಂಬೈ: ಟಿ20 ವಿಶ್ವಕಪ್ ಸೆಮಿಫೈನಲ್ ಗೇರಿರುವ ಟೀಂ ಇಂಡಿಯಾಗೆ ಯಾರು ಎದುರಾಳಿ, ಯಾವಾಗ ಪಂದ್ಯ ಇಲ್ಲಿದೆ ಸಂಪೂರ್ಣ ವಿವರ. ಸೆಮಿಫೈನಲ್ ನಲ್ಲಿ ಗ್ರೂಪ್ 1 ರ ಅಗ್ರ ಸ್ಥಾನಿ ಮತ್ತು ಗ್ರೂಪ್ 2 ರ ಎರಡನೇ ತಂಡ ಮತ್ತು ಇನ್ನೊಂದು ಸೆಮಿಫೈನಲ್ ನಲ್ಲಿ ಗುಂಪು 1 ರ ಎರಡನೇ ತಂಡ ಮತ್ತು ಗುಂಪು 2 ರ ಮೊದಲ ತಂಡ ಸೆಣಸಾಡಲಿವೆ. ಎರಡು ಸೆಮಿಫೈನಲ್ ಪೈಕಿ ಮೊದಲ ಸೆಮಿಫೈನಲ್ ಮಾರ್ಚ್ 4 ರಂದು ಮತ್ತು ಎರಡನೇ ಸೆಮಿಫೈನಲ್ ಮಾರ್ಚ್ 5 ರಂದು ನಡೆಯಲಿದೆ.
ಕೋಲ್ಕತ್ತಾ: ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡಲು ಅಭಿಷೇಕ್ ಶರ್ಮಾನನ್ನು ತೆಗೆದು ಹಾಕಲಾ ಎಂದು ಪತ್ರಕರ್ತರನ್ನೇ ವ್ಯಂಗ್ಯ ಮಾಡಿದ್ದ ಸೂರ್ಯಕುಮಾರ್ ಯಾದವ್. ಆದರೆ ಇಂದು ಅದೇ ಸಂಜು ಸ್ಯಾಮ್ಸನ್ ನಿಂದಾಗಿ ಟೀಂ ಇಂಡಿಯಾ ವಿಶ್ವಕಪ್ ಸೆಮಿಫೈನಲ್ ಗೇರಿದೆ. ಇದಕ್ಕಾಗಿ ಫ್ಯಾನ್ಸ್ ಈಗ ಸೂರ್ಯಕುಮಾರ್ ಯಾದವ್ ರನ್ನು ಫುಲ್ ಟ್ರೋಲ್ ಮಾಡುತ್ತಿದ್ದಾರೆ. ಅಭಿಷೇಕ್ ಶರ್ಮಾ ಸತತ ಎರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದಾಗ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್ ಗೆ ಮುಂದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಗೆ ಅವಕಾಶ ಕೊಡ್ತೀರಾ ಎಂದು ಕೇಳಿದ್ದರು. ಅದಕ್ಕೆ ವ್ಯಂಗ್ಯ ನಗೆ ನಕ್ಕಿದ್ದ ಸೂರ್ಯ, ‘ಯಾರನ್ನು ಹೊರಗಿಟ್ಟು ಸಂಜುಗೆ ಅವಕಾಶ ಕೊಡಲಿ? ಅಭಿಷೇಕ್ ಶರ್ಮಾರನ್ನು ಹೊರಗಿಡಬೇಕಾ?’ ಎಂದಿದ್ದರು.
ಬೆಂಗಳೂರು: ಇತ್ತೀಚೆಗಷ್ಟೇ ಡಿಕೆ ಶಿವಕುಮಾರ್ ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊರೆಯಾಗ್ತಿದೆ ಎಂದಿದ್ದರು. ಇದೀಗ ಸಚಿವ ಎಂಬಿ ಪಾಟೀಲ್ ಸರದಿ. ನೀವೇ ಗ್ಯಾರಂಟಿ ಬೇಡ ಎಂದು ತ್ಯಜಿಸಿ ಎಂದು ಮನವಿ ಮಾಡಿದ್ದಾರೆ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ನೀಡುವುದಾಗಿ ಘೋಷಿಸಿ ಕಾಂಗ್ರೆಸ್ ಸರ್ಕಾರ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆದರೆ ಈಗ ಎರಡು ವರ್ಷಕ್ಕೇ ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಆಡಳಿತ ಪಕ್ಷದವರಿಂದಲೇ ಅಸಮಾಧಾನ ಕೇಳಿಬರುತ್ತಿದೆ. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಂಬಿ ಪಾಟೀಲ್, ಶ್ರೀಮಂತರು ಸ್ವಯಂ ಪ್ರೇರಿತರಾಗಿ ಗ್ಯಾರಂಟಿ ಯೋಜನೆ ಕೈ ಬಿಡುವುದು ಒಳ್ಳೆಯದು.
ನವದೆಹಲಿ: ಇಸ್ರೇಲ್-ಇರಾನ್ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಂಟಾಗಿರುವ ಹಿನ್ನಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಜಮಿನ್ ನೆತನ್ಯಾಹುಗೆ ಕರೆ ಮಾಡಿದ ಪ್ರಧಾನಿ ಮೋದಿ ಯುದ್ಧ ನಿಲ್ಲಿಸಲು ಮನವಿ ಮಾಡಿದ್ದಾರೆ. ಇಸ್ರೇಲ್, ಇರಾನ್, ಅಮೆರಿಕಾ ನಡುವೆ ನಡೆಯುತ್ತಿರುವ ಯುದ್ಧದ ತೀವ್ರತೆ ಹೆಚ್ಚುತ್ತಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಈಗ ಜನರು ಭಯಭೀತರಾಗಿದ್ದಾರೆ. ಭಾರತೀಯರೂ ವಿದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೆ, ಅನೇಕ ಜನ ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಈ ಯುದ್ಧ ಇನ್ನಷ್ಟು ದಿನ ಮುಂದುವರಿದರೆ ಜಗತ್ತಿನಾದ್ಯಂತ ಎಲ್ಲಾ ರಾಷ್ಟ್ರಗಳ ಮೇಲೆ ಆರ್ಥಿಕವಾಗಿಯೂ ಪರಿಣಾಮ ಬೀರಲಿದೆ.
ಬೆಂಗಳೂರು: ರಾಜ್ಯದಲ್ಲಿ ಕಳೆದ ವಾರ ಮಳೆ ಮತ್ತು ಬಿಸಿಲಿನ ಕಣ್ಣಾಮುಚ್ಚಾಲೆ ಕಂಡುಬಂದಿತ್ತು. ಆದರೆ ಈ ವಾರದ ಹವಾಮಾನ ವರದಿ ನೋಡಿದರೆ ನಿಜಕ್ಕೂ ಮೈ ಬೆವರಿಳಿಯಬಹುದು. ದೇಶದ ಬಹುತೇಕ ಭಾಗಗಳಲ್ಲಿ ಬೇಸಿಗೆ ಕಾಲಿಟ್ಟಿದೆ. ಕಳೆದ ವಾರವಿಡೀ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಆಗಾಗ ಸಣ್ಣ ಮಳೆಯಾಗಿತ್ತು. ಉಳಿದಂತೆ ಭಾಗಶಃ ಮೋಡಕವಿದ ವಾತಾವರಣವಿತ್ತು. ಆದರೆ ಈ ವಾರದಿಂದ ವಾತಾವರಣದಲ್ಲಿ ಬದಲಾವಣೆ ಕಂಡುಬರಲಿದೆ. ಬೇಸಿಗೆಯ ತಾಪ ಈ ವಾರ ಇನ್ನಷ್ಟು ಹೆಚ್ಚಾಗಲಿದೆ. ತಾಪಮಾನದಲ್ಲಿ 2-4 ಡಿಗ್ರಿಯಷ್ಟು ಏರಿಕೆ ಕಂಡುಬರುವುದು. ವಾರವಿಡೀ ಮಳೆ ಬಿಡಿ, ಮೋಡ ಕವಿದ ವಾತಾವರಣವೂ ಇರಲ್ಲ.
ಇಂದು ಸೋಮವಾರವಾಗಿದ್ದು ಶಿವನಿಗೆ ವಿಶೇಷವಾದ ದಿನವಾಗಿದೆ. ಶಿವನನ್ನು ಪೂಜೆ ಮಾಡುವುದರಿಂದ ಆಯಸ್ಸು, ಆರೋಗ್ಯ ವೃದ್ಧಿಯಾಗುತ್ತದೆ. ಇಂದು ತಪ್ಪದೇ ರುದ್ರಾಷ್ಟಕಂ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.ನಮಾಮೀಶಮೀಶಾನ ನಿರ್ವಾಣರೂಪಂವಿಭುಂ ವ್ಯಾಪಕಂ ಬ್ರಹ್ಮವೇದ-ಸ್ವರೂಪಮ್ ।ನಿಜಂ ನಿರ್ಗುಣಂ ನಿರ್ವಿಕಲ್ಪಂ ನಿರೀಹಂಚಿದಾಕಾಶ-ಮಾಕಾಶವಾಸಂ ಭಜೇಽಹಮ್ ॥ 1 ॥ ನಿರಾಕಾರಮೋಂಕಾರಮೂಲಂ ತುರೀಯಂಗಿರಾಜ್ಞಾನಗೋತೀತಮೀಶಂ ಗಿರೀಶಮ್ ।ಕರಾಲಂ ಮಹಾಕಾಲಕಾಲಂ ಕೃಪಾಲುಂಗುಣಾಗಾರ-ಸಂಸಾರಪಾರಂ ನತೋಽಹಮ್ ॥ 2 ॥ ತುಷಾರಾದ್ರಿ-ಸಂಕಾಶಗೌರಂ ಗಭೀರಂಮನೋಭೂತಕೋಟಿ-ಪ್ರಭಾಸೀ ಶರೀರಮ್ ।ಸ್ಫುರನ್ಮೌಲಿಕಲ್ಲೋಲಿನೀ ಚಾರುಗಂಗಾಲಸದ್ಭಾಲ-ಬಾಲೇಂದು ಕಂಠೇ ಭುಜಂಗಮ್ ॥ 3 ॥ಚಲತ್ಕುಂಡಲಂ ಶುಭ್ರನೇತ್ರಂ ವಿಶಾಲಂ [ಭೄಸುನೇತ್ರಂ ವಿಶಾಲಂ]ಪ್ರಸನ್ನಾನನಂ ನೀಲಕಂಠಂ ದಯಾಲುಮ್ ।ಮೃಗಾಧೀಶ-ಚರ್ಮಾಂಬರಂ ಮುಂಡಮಾಲಂಪ್ರಿಯಂ ಶಂಕರಂ ಸರ್ವನಾಥಂ ಭಜಾಮಿ ॥ 4 ॥ಚಲತ್ಕುಂಡಲಂ ಶುಭ್ರನೇತ್ರಂ ವಿಶಾಲಂ [ಭೄಸುನೇತ್ರಂ ವಿಶಾಲಂ]ಪ್ರಸನ್ನಾನನಂ ನೀಲಕಂಠಂ ದಯಾಲುಮ್ ।
ವೆಸ್ಟ್ ಇಂಡಿಸ್ ವಿರುದ್ಧ ಇಂದು ನಡೆದ ನಿರ್ಣಾಯಕ ಪಂದ್ಯಾದಲ್ಲಿ ಸಂಜು ಸ್ಯಾಮ್ಸನ್ ಪವರ್ಫುಲ್ ಬ್ಯಾಟಿಂಗ್ನಿಂದಾಗಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ಟಿ20 ವಿಶ್ವಕಪ್ನಲ್ಲಿ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಸ್ಥಾನಕ್ಕೆ ಬಂದ ಸಂಜು ಸ್ಯಾಮ್ಸನ್ ಆರಂಭದಿಂದಲೂ ಗುರುತಿಸುವಂತ ಪ್ರದರ್ಶನವನ್ನು ನೀಡಿರಲಿಲ್ಲ. ಇದು ಕೆಲವು ಚರ್ಚೆಗೂ ಕಾರಣವಾಗಿತ್ತು. ಆದರೆ ಸಂಜು ಇಂದಿನ ಆಟದ ವೈಖರಿ ಭಾರತ ತಂಡವನ್ನು ಸೆಮಿಫೈನಲ್ಗೆ ಪ್ರವೇಶಿಸುವಂತೆ ಮಾಡಿದೆ. ಈ ಮೂಲಕ ಎಲ್ಲ ಟೀಕೆಗಳಿಗೆ ತನ್ನ ಬ್ಯಾಟಿಂಗ್ನಿಂದಲೇ ಸಂಜು ಉತ್ತರವನ್ನು ನೀಡಿದ್ದಾರೆ.ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರು
ಹಾವೇರಿ: ಇಂದು ಬೆಳಗ್ಗೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಈಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತರನ್ನು ಹಾವೇರಿ ನಗರದ ನಿವಾಸಿಗಳಾದ ಕಾರ್ತಿಕ್ (34) ಮತ್ತು ಅವರ ಪತ್ನಿ ಐಶ್ವರ್ಯಾ (30) ಎಂದು ಗುರುತಿಸಲಾಗಿದೆ. ದಂಪತಿ ಮದುವೆಯಾಗಿ ಕೇವಲ 15 ದಿನಗಳು ಕಳೆದಿದ್ದವು.
ಬೆಂಗಳೂರು: ನವವಿವಾಹಿತ ರಶ್ಮಿಕಾ ಮಂದಣ್ಣ ಅವರು ಭಾನುವಾರ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಮಾರ್ಚ್ 4 ರಂದು ಹೈದರಾಬಾದ್ನಲ್ಲಿ ನಡೆಯಲಿರುವ ವಿವಾಹದ ಆರತಕ್ಷತೆಗೆ ಔಪಚಾರಿಕವಾಗಿ ಆಹ್ವಾನಿಸಿದ್ದಾರೆ.ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾತ್ರವಲ್ಲದೆ ಅವರ ಪತ್ನಿ ಗೀತಾ ಮತ್ತು ಅವರ ಮಗಳನ್ನೂ ಭೇಟಿಯಾದರು. ಸಭೆಯ ದೃಶ್ಯಗಳಲ್ಲಿ, ಗೀತಾ ರಶ್ಮಿಕಾಗೆ ಆಶೀರ್ವಾದವನ್ನು ನೀಡುತ್ತಿರುವುದನ್ನು ಕಾಣಬಹುದು.ಭಾನುವಾರ ಬೆಳಿಗ್ಗೆ, ರಶ್ಮಿಕಾ ಮತ್ತು ವಿಜಯ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹೈದರಾಬಾದ್ಗೆ ತೆರಳಿದರು.
ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ಅವರು, ಇರಾನ್ ನ ಪರಮೋಚ್ಛ ನಾಯಕ ಆಯತೊಲ್ಲಾ ಖಮೇನಿ ಹತ್ಯೆಯನ್ನು ಖಂಡಿಸಿದ್ದಾರೆ. ಅದಲ್ಲದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದ್ವಂದ ನೀತಿಯ ವಿರುದ್ಧ ಕಿಡಿಕಾರಿದ್ದಾರೆ.ಊರಗಡೂರಿನಲ್ಲಿ ಕೊಲೆಯಾದ ಬಾಲಕನ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಖಮೇನಿ ಸಾವಿನ ಹಿನ್ನೆಲೆಯಲ್ಲಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದ್ದಾರೆ. ಖಮೇನಿ ಸಾವು ಖಂಡನೀಯವಾದದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದೆಡೆ ಶಾಂತಿ ಮಂತ್ರ ಹೇಳುತ್ತಾ ಮತ್ತೊಂದೆಡೆ
ರಷ್ಯಾ: ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು "ಸಿನಿಕತನದ ಕೊಲೆ" ಎಂದು ವಿವರಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇರಾನ್ನ ಮೇಲೆ ಯುಎಸ್-ಇಸ್ರೇಲ್ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ ಎಂದು ರಷ್ಯಾದ ಸರ್ಕಾರಿ ಮಾಧ್ಯಮ ಸಂಸ್ಥೆ TASS ತಿಳಿಸಿದೆ. ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯು TASS ಪ್ರಕಾರ "ಮಾನವ ನೈತಿಕತೆ ಮತ್ತು ಅಂತರರಾಷ್ಟ್ರೀಯ ಕಾನೂನಿನ ಎಲ್ಲಾ ಮಾನದಂಡಗಳನ್ನು" ಉಲ್ಲಂಘಿಸಿದೆ. ಮಾಸ್ಕೋ ಮತ್ತು ಟೆಹ್ರಾನ್ ನಡುವಿನ ಸಂಬಂಧಗಳನ್ನು ಪ್ರತಿಬಿಂಬಿಸುತ್ತಾ, ಖಮೇನಿಯನ್ನು ರಷ್ಯಾದ ಒಕ್ಕೂಟದೊಳಗೆ "ಅತ್ಯುತ್ತಮ ರಾಜನೀತಿಜ್ಞ" ಎಂದು ಸ್ಮರಿಸಲಾಗುವುದು ಎಂದು ಅವರು ಹೇಳಿದರು.
ಟೆಹರಾನ್: ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಖಂಡಿಸಿದ್ದು, ಹತ್ಯೆಗೆ ಸೇಡು ತೀರಿಸಿಕೊಳ್ಳುವುದು ನಮ್ಮ ಕಾನೂನುಬದ್ಧ ಕರ್ತವ್ಯ ಮತ್ತು ಹಕ್ಕು ಎಂದು ಮಸೂದ್ ಪೆಜೆಶ್ಕಿಯಾನ್ ಆಕ್ರೋಶ ಹೊರಹಾಕಿದರು. ಇಸ್ರೇಲ್ ಹಾಗೂ ಅಮೆರಿಕದ ಜಂಟಿ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ. ಇದು ‘ಮುಸ್ಲಿಮರ ವಿರುದ್ಧದ ಯುದ್ಧ ಘೋಷಣೆ’ ಮಸೂದ್ ಪ್ರತಿಪಾದಿಸಿದರು. ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಖಮೇನಿ ಹತ್ಯೆಯಾಗಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ
ಹುಬ್ಬಳ್ಳಿ: ರಾಜ್ಯದಲ್ಲಿ ವಿರೋಧ ಪಕ್ಷ ಸತ್ತು ಹೋಗಿದ್ದು, ತಾನು ಅಧಿಕಾರಕ್ಕೆ ಬರಲು ಆಡಳಿತ ಪಕ್ಷ ಹಾಳಾಗುವುದನ್ನು ಕಾಯುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಎಂದಿಗೂ ಬಹುಮತ ಬಂದಿಲ್ಲ. ಈ ಹಿಂದೆ ದಾರಿ ತಪ್ಪಿ ಅಧಿಕಾರಿಕ್ಕೆ ಬಂದಿದ್ದು, ಶುದ್ಧೀಕರಣವಾಗಬೇಕಿದೆ ಎಂದರು. ಲಕ್ಷಾಂತರ ಮಂದಿ ಕಾರ್ಯಕರ್ತರು ನೋವಿನಲ್ಲೇ ದಿನ ಕಳೆಯುತ್ತಿದ್ದಾರೆ. ಇನ್ನೂ ಮುಂದಿನ ದಿನಗಳಲ್ಲಿ ನಿರೀಕ್ಷೆಯಂತೆ ಎಲ್ಲವೂ ನಡೆಯುವ ಭರವಸೆಯಿದೆ.
ಮುಂಬೈ: ಆಂಧ್ರಪ್ರದೇಶದಲ್ಲಿ ಕಾರ್ಖಾನೆ ಸ್ಫೋಟಗೊಂಡ ಬೆನ್ನಲ್ಲೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಟೋಲ್ನ ರೌಲ್ಗಾಂವ್ನಲ್ಲಿರುವ ಕಾರ್ಖಾನೆಯೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಇದರ ಪರಿಣಾಮ 17 ಮಂದಿ ಸಾವನ್ನಪ್ಪಿದ್ದು, 18ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಗಣಿಗಾರಿಕೆ ಮತ್ತು ಕೈಗಾರಿಕಾ ಸ್ಫೋಟಕ ತಯಾರಿಕಾ ಕಂಪನಿಯಾದ ಎಸ್ಬಿಎಲ್ ಎನರ್ಜಿ ಲಿಮಿಟೆಡ್ನಲ್ಲಿ ಇಂದು ಬೆಳಗಿನ ಜಾವ ಈ ಭೀಕರ ಸ್ಫೋಟ ಸಂಭವಿಸಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆ ಹಾಗೂ ನಾಗ್ಪುರದ ಆರೆಂಜ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ತನಿಖೆ ಆರಂಭಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಭಾನುವಾರ ಮುಂಜಾನೆ 6-7 ಗಂಟೆಯ ನಡುವೆ ದುರಂತ ಸಂಭವಿಸಿದೆ.
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನತಾಪ ಹೆಚ್ಚುತ್ತಲೇ ಇದೆ. ಇದರಿಂದ ಆರೋಗ್ಯದಲ್ಲೂ ಏರುಪೇರಾಗುವ ಸಾಧ್ಯತೆಯೂ ಇದೆ. ಈ ಸಮಯದಲ್ಲಿ ವಾತಾವರಣದ ಉಷ್ಣಾಂಶ ಹೆಚ್ಚಿರುವುದರಿಂದ ನಮ್ಮ ದೇಹದಲ್ಲಿನ ನೀರಿನಂಶ ಬೆವರಿನ ರೂಪದಲ್ಲಿ ಬೇಗನೆ ಕಡಿಮೆಯಾಗುತ್ತದೆ. ಇದನ್ನು ನಿರ್ಜಲೀಕರಣ ಎನ್ನಲಾಗುತ್ತದೆ. ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಲು ದಿನಕ್ಕೆ ಕನಿಷ್ಠ 3 ರಿಂದ 4 ಲೀಟರ್ ನೀರನ್ನು ನಿಯಮಿತವಾಗಿ ಕುಡಿಯಬೇಕು.
ಜೆರುಸಲೇಂ (ಇಸ್ರೇಲ್): ಇರಾನ್ನ ಸೇನಾ ಗುರಿಗಳ ಮೇಲೆ ತನ್ನ ಜೆಟ್ಗಳು ದಾಳಿ ನಡೆಸಿದ್ದು, ಅಲಿ ಶಮ್ಖಾನಿ ಮತ್ತು ಮೊಹಮ್ಮದ್ ಪಾಕ್ಪೂರ್ ಸೇರಿದಂತೆ ಏಳು ಉನ್ನತ ಇರಾನಿನ ರಕ್ಷಣಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಇಸ್ರೇಲಿ ವಾಯುಪಡೆಯು ಟೆಹ್ರಾನ್ನ ನಾಯಕತ್ವಕ್ಕೆ ಹೊಡೆತ ನೀಡಿದೆ ಎಂದು ಹೇಳಿದೆ.ಆದರೆ, ಇರಾನ್ ಇನ್ನೂ ದೃಢಪಡಿಸಿಲ್ಲ. ಇರಾನ್ನಿಂದ ಇಸ್ರೇಲ್ ಕಡೆಗೆ ಕ್ಷಿಪಣಿಗಳನ್ನು ಇತ್ತೀಚೆಗೆ ಉಡಾಯಿಸಲಾಗಿದೆ ಎಂದು ಇಸ್ರೇಲಿ ವಾಯುಪಡೆ ಹೇಳಿದೆ.
ದುಬೈ: ಒಲಿಂಪಿಕ್ಸ್ನಲ್ಲಿ ಅವಳಿ ಪದಕ ವಿಜೇತ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಕ್ಷಿಪಣಿ ದಾಳಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ, ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ, ಸಿಂಧು ಅವರು ದುಬೈನಲ್ಲೇ ಬಾಕಿಯಾಗಿದ್ದರೆ.ಮಂಗಳವಾರ ಶುರುವಾಗುವ ಆಲ್ ಇಂಗ್ಲೆಂಡ್ ಓಪನ್ಗಾಗಿ ಸಿಂಧು ಬರ್ಮಿಂಗ್ಹ್ಯಾಮ್ಗೆ ತೆರಳುತ್ತಿದ್ದರು. ದುಬೈ ಅವರ ಸಂಪರ್ಕ
ದುಬೈನಲ್ಲಿನ ಐಷಾರಾಮಿ ಹೋಟೆಲ್ಗೆ ಹಾನಿಯುಂಟಾಗಿದ್ದು, ಇರಾನ್ ತನ್ನ ವಿರುದ್ಧ ಯುಎಸ್ ಮತ್ತು ಇಸ್ರೇಲ್ ನಡೆಸಿದ "ಬೃಹತ್" ಮತ್ತು ನಡೆಯುತ್ತಿರುವ ದಾಳಿಗೆ ಪ್ರತೀಕಾರವಾಗಿ ಮಧ್ಯಪ್ರಾಚ್ಯದಾದ್ಯಂತ ಪ್ರತೀದಾಳಿಗಳನ್ನು ಪ್ರಾರಂಭಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ನ ಅತಿದೊಡ್ಡ ನಗರದಲ್ಲಿರುವ ಫೇರ್ಮಾಂಟ್ ದ ಪಾಮ್ ಹೋಟೆಲ್ನಲ್ಲಿ ಶನಿವಾರ ಬೆಂಕಿ ಉರಿಯುತ್ತಿರುವುದನ್ನು ಬಿಬಿಸಿ ಪರಿಶೀಲಿಸಿದ ವೀಡಿಯೊ ತೋರಿಸುತ್ತದೆ. ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಏರುತ್ತದೆ.ಪಾಮ್ ಜುಮೇರಾ ಪ್ರದೇಶದ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ
ಟೆಹ್ರಾನ್ [ಇರಾನ್]: ಯುಎಸ್-ಇಸ್ರೇಲ್ ದಾಳಿಗೆ ಇರಾನ್ನ ಸುಪ್ರೀಂ ನಾಯಕ ಅಲಿ ಖಮೇನಿ ಸಾವಿನ ವರದಿಗಳನ್ನು ಇರಾನ್ನ ಅಧಿಕೃತ ಮಾಧ್ಯಮ ಜಾಲಗಳು ಇನ್ನೂ ಖಚಿತಪಡಿಸಿಲ್ಲ. ಆದರೆ ಇದೀಗ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಈ ದಾಳಿಯಲ್ಲಿ ಖಮೇನಿ ಮಗಳು, ಮೊಮ್ಮಕ್ಕಳು, ಸೊಸೆ ಹಾಗೂ ಅಳಿಯ ಸಾವನ್ನಪ್ಪಿದ್ದಾರೆಂದು ಇರಾನ್ನ ರಾಜ್ಯ ಮಾಧ್ಯಮ ವರದಿಯನ್ನು ಟೈಮ್ಸ್ ಆಫ್ ಇಸ್ರೇಲ್ ಉಲ್ಲೇಖ ಮಾಡಿ ಪ್ರಕಟಿಸಿದೆ.. ಖಮೇನಿ ಅವರ ಭವಿಷ್ಯದ ಬಗ್ಗೆ ಯಾವುದೇ ಅಧಿಕೃತ ಪದವಿಲ್ಲ ಎಂದು ಇಸ್ರೇಲಿ ಪತ್ರಿಕೆ ಹೇಳಿದೆ.ಇನ್ನೂ ಖಮೇನಿ ಹತ್ಯೆಯನ್ನು ಜನರು ಬೀದಿಗಳಲ್ಲಿ ಸೆಲೆಬ್ರೇಶನ್ ಮಾಡಿದ್ದಾರೆ. ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಏರುತ್ತಲೇ ಇದೆ. ಇನ್ನೂ ಪ್ರತಿ ವರ್ಷವೂ ಮಾರ್ಚ್ ತಿಂಗಳ ಆರಂಭದಲ್ಲಿ ಕರುನಾಡಿನಲ್ಲಿ ಬೇಸಿಗೆಯ ಝಳಕ್ಕೆ ಸುಸ್ತಾಗುತ್ತಾರೆ.ಇನ್ನೂ ಪ್ರತಿ ವರ್ಷದಂತೆ ಈ ಬಾರಿಯೂ ಮಾರ್ಚ್ ತಿಂಗಳ ಆರಂಭದಲ್ಲಿ ಬಿಸಿಲಿನ ತಾಪಕ್ಕೆ ಜನ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಭಾರೀ ಬಿಸಿಗಾಳಿಯ ಎಚ್ಚರಿಕೆಯನ್ನು ನೀಡಿದೆ. ಇನ್ನೂ ಇಂದು ರಾಜ್ಯದಲ್ಲಿ ಬಿಸಿಲ ತಾಪ ಜೋರಾಗಿದೆ. ಯಾವುದೇ ಮಳೆಯ ಮುನ್ಸೂಚನೆಯಿಲ್ಲ. ಬಿಸಿಲ ತಾಪಕ್ಕೆ ಸೆಕೆಯೂ ವಿಪರೀತವಿರಲಿದೆ.
ಕೋಲ್ಕತ್ತಾ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಸೂಪರ್ ಎಂಟರ ಹಂತದ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಇದರಲ್ಲಿ ಗೆದ್ದ ತಂಡ ಸೆಮಿಫೈನಲ್ಗೇರಲಿದೆ. ಸೋತ ತಂಡ ಅಭಿಯಾನ ಮುಗಿಸಲಿದೆ.ದಕ್ಷಿಣ ಆಫ್ರಿಕಾ ವಿರುದ್ಧ ಸೋತು, ಜಿಂಬಾಬ್ವೆ ವಿರುದ್ಧ ಗೆದ್ದಿರುವ ಹಾಲಿ ಚಾಂಪಿಯನ್ ಭಾರತ ತಂಡಕ್ಕೆ ಇಂದು ಎಂಟರ ಹಣಾಹಣಿ ಮಾಡು ಇಲ್ಲವೇ ಮಡಿ ಸ್ಪರ್ಧೆಯಾಗಿ ಮಾರ್ಪಪಟ್ಟಿದೆ. ದಕ್ಷಿಣಾ ಆಫ್ರಿಕಾ ತಂಡ ಈಗಾಗಲೇ ಸೆಮಿಫೈನಲ್ ತಲುಪಿದ್ದರೆ. ಜಿಂಬಾಬ್ವೆ ಟೂರ್ನಿಯಿಂದಲೇ ಹೊರಬಿದ್ದಿದೆ. ಉಳಿದಿರುವ ಒಂದು ಸ್ಥಾನಕ್ಕೆ ಭಾರತ ಮತ್ತು ವಿಂಡೀಸ್ ನಡುವೆ ಪೈಪೋಟಿಯಿದೆ.ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿರುವ ಪಂದ್ಯಕ್ಕೆ ಭಾರತ ಸಜ್ಜಾಗಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಈ ಮುಖಾಮುಖಿ ಕ್ರಿಕೆಟ್ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಟೆಹ್ರಾನ್ನಲ್ಲಿ ಯುಎಸ್-ಇಸ್ರೇಲಿ ದಾಳಿಯಲ್ಲಿ 86 ವರ್ಷ ವಯಸ್ಸಿನ ಇರಾನ್ನ ಸುಪ್ರೀಂ ಲೀಡರ್ ಅಲ್ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ವಿಚಾರವಾಗಿ ಟ್ರಂಪ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಟ್ರಂಪ್ ಖಮೇನಿಯನ್ನು 'ಇತಿಹಾಸದ ಅತ್ಯಂತ ದುಷ್ಟ ವ್ಯಕ್ತಿಗಳಲ್ಲಿ ಒಬ್ಬರು ಎಂದು ಕರೆದರು, ಅವರು ಸತ್ತಿದ್ದಾರೆ ಎಂದು ಮತ್ತಷ್ಟು ಸೇರಿಸಿದರು."ಇದು ಇರಾನ್ನ ಜನರಿಗೆ ಮಾತ್ರವಲ್ಲ, ಎಲ್ಲಾ ಶ್ರೇಷ್ಠ ಅಮೆರಿಕನ್ನರಿಗೆ ಮತ್ತು ಪ್ರಪಂಚದಾದ್ಯಂತದ ಅನೇಕ ದೇಶಗಳ ಜನರಿಗೆ,
ಬೆಂಗಳೂರು: ಟಿ20 ವಿಶ್ವಕಪ್ ಸೂಪರ್ 8ರ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದರು ಪಾಕಿಸ್ತಾನ ಮಾತ್ರ ಸೆಮಿಫೈನಲ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಪಂದ್ಯದಲ್ಲಿ ಪಾಕಿಸ್ತಾನ ತಂಡವು ಶ್ರೀಲಂಕಾವನ್ನು 5 ರನ್ಗಳಿಂದ ಸೋಲಿಸಿದೆ. ಉತ್ತಮ ರನ್ ರೇಟ್ ನಿಂದಾಗಿ ನ್ಯೂಜಿಲೆಂಡ್ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆದುಕೊಂಡಿತು. ಸಾಹಿಬ್ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಅವರ ಶತಕದ ಜೊತೆಯಾಟದಿಂದಾಗಿ ಪಾಕಿಸ್ತಾನ 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 212 ರನ್ ಗುರಿ ನೀಡಿತ್ತು.
ಬೆಂಗಳೂರು: ಪಲ್ಲೆಕೆಲೆಯಲ್ಲಿ 2026 ರ ಟಿ 20 ವಿಶ್ವಕಪ್ನ ನಿರ್ಣಾಯಕ ಸೂಪರ್ 8 ಘರ್ಷಣೆಯಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಅನ್ನು ಆಯ್ದುಕೊಂಡಿದೆ. ಇನ್ನೂ ಮೊದಲು ಬ್ಯಾಟಿಂಗ್ ಮಾಡಲಿರುವ ಪಾಕಿಸ್ತಾನವು ಬಾಬರ್ ಅಜಮ್, ಸೈಮ್ ಅಯೂಬ್ ಮತ್ತು ಸಲ್ಮಾನ್ ಮಿರ್ಜಾ ಅವರನ್ನು ಆಡುವ XI ನಿಂದ ಕೈಬಿಟ್ಟಿದೆ.ಶ್ರೀಲಂಕಾ ಈಗಾಗಲೇ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದ್ದರೆ, ಪಾಕಿಸ್ತಾನ ಸೆಮಿಫೈನಲ್ಗೆ ಅರ್ಹತೆ ಪಡೆಯಲು 65 ರನ್ಗಳಿಂದ ಗೆಲ್ಲಬೇಕು ಅಥವಾ 12.4 ಓವರ್ಗಳಲ್ಲಿ ಗುರಿಯನ್ನು ಬೆನ್ನಟ್ಟಬೇಕಿದೆ.ಎರಡೂ ತಂಡಗಳು ಬದಲಾವಣೆ ಮಾಡಿಕೊಂಡಿವೆ. ಗಾಯಾಳುಗಳಾದ ಕುಸಾಲ್ ಮೆಂಡಿಸ್ ಮತ್ತು ದುಶನ್ ಹೇಮಂತ ಬದಲಿಗೆ
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ವಿರುದ್ಧ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆಯೆಂದು ಆರೋಪಿಸಿ ಕೆಲ ಸಂಘನೆಗಳು ಪ್ರತಿಭಟನೆಗೆ ಮುಂದಾಗಿದೆ.ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಎಸಿಪಿ ಚಂದನ್ ಹಾಗೂ ಇನ್ಸ್ಪೆಕ್ಟರ್ ಗಿರೀಶ್ ನಾಯಕ್ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಸಂಘಟನೆಗಳು ದೊಡ್ಡ ಪ್ರತಿಭಟನೆಗೆ ಮುಂದಾಗಿವೆ. ಅದಲ್ಲದೆ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಒತ್ತಡ ಹೇರಿದ್ದಾರೆ.
ಪಶ್ಚಿಮ ಏಷ್ಯಾ ರಾಷ್ಟ್ರದ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಬಾಲಕಿಯರ ಶಾಲೆಯ ಮೇಲೆ ಇಸ್ರೇಲ್ ಮತ್ತು ಯುಎಸ್ ನಡೆಸಿದ ಸಂಘಟಿತ ಮುಷ್ಕರದ ನಂತರ ಇರಾನ್ನಲ್ಲಿ ಕನಿಷ್ಠ 40 ವಿದ್ಯಾರ್ಥಿಗಳು ಸಾವನ್ನಪ್ಪಿದರು ಮತ್ತು 45 ಇತರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಈ ಶಾಲೆಯು ಹಾರ್ಮೋಜ್ಗಾನ್ ಪ್ರಾಂತ್ಯದ ಮಿನಾಬ್ ನಗರದಲ್ಲಿದೆ. ಇರಾನ್ನ ಅರೆಸೈನಿಕ ರೆವಲ್ಯೂಷನರಿ ಗಾರ್ಡ್ ನಗರದಲ್ಲಿ ನೆಲೆಯನ್ನು ಹೊಂದಿದೆ.ಸ್ಟ್ರೈಕ್ ಸೈಟ್ನ ದೃಶ್ಯಗಳು ಬೃಹತ್ ಪ್ರಮಾಣದ ಶಿಲಾಖಂಡರಾಶಿಗಳು ಮತ್ತು ಸಂಪೂರ್ಣ ಅವ್ಯವಸ್ಥೆಯನ್ನು ತೋರಿಸಿದವು.
ನಟ ಯಶ್ ಅಭಿಮಾನಿಗಳ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ಟಾಕ್ಸಿಕ್ ತಯಾರಕರು ಅಧಿಕೃತವಾಗಿ ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಸಿನಿಮಾ ತಂಡ ಬೆಂಗಳೂರಿನಲ್ಲಿ ಮಾರ್ಚ್ 8 ರಂದು ಅನಾವರಣಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ. ಇದು ವರ್ಷದ ಅತ್ಯಂತ ಕುತೂಹಲದಿಂದ ನಿರೀಕ್ಷಿತ ಸಿನಿಮಾ ಇದಾಗಿದೆ ಎಂದರು. ಯಶ್ರಿಂದ ಹೆಡ್ಲೈನ್, ಟಾಕ್ಸಿಕ್ ಕೆಜಿಎಫ್ ಫ್ರ್ಯಾಂಚೈಸ್ನ ಬ್ಲಾಕ್ಬಸ್ಟರ್ ಯಶಸ್ಸಿನ ನಂತರ ನಟನ ಬಹಿನಿರೀಕ್ಷಿತ ಸಿನಿಮಾವಾಗಿದೆ.
ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ವೆಟ್ಲಪಾಲೆಂ ಗ್ರಾಮದಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಶನಿವಾರ ಸ್ಫೋಟ ಸಂಭವಿಸಿ, 20ಮಂದಿ ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಫೋಟವು ಎಷ್ಟು ಶಕ್ತಿಯುತವಾಗಿತ್ತು ಎಂದರೆ ಅದು 5 ಕಿಲೋಮೀಟರ್ ದೂರದವರೆಗೆ ಸದ್ದು ಕೇಳಿದೆ. ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಕಳುಹಿಸಲು ಆರಂಭಿಸಿದರು.
ಬೆಂಗಳೂರು: ಹಣದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕರು ಮತ್ತು ಪ್ರಯಾಣಿಕಳೊಬ್ಬಳ ನಡುವಿನ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಂದು ಬೆಳಗ್ಗೆ ಮೆಜೆಸ್ಟಿಕ್ ನಲ್ಲಿ ಈ ಘಟನೆ ನಡೆದಿದ್ದು, ಬೆಳಗಿನ ಜಾವ 5.15ರ ಸುಮಾರಿಗೆ ಮಹಿಳೆಯೊಬ್ಬರು ಕತ್ರಿಗುಪ್ಪೆಗೆ ತೆರಳಲು ಆಟೋ ಚಾಲಕನ ಬಳಿ ಹಣದ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಆಟೋ ಚಾಲಕರು ದುಬಾರಿ ಹಣ ಕೇಳಿದ್ದು ಮಾತ್ರವಲ್ಲದೇ ಇದನ್ನು ಪ್ರಶ್ನಿಸಿದ ಆಕೆಗೆ ನಿರ್ಲಕ್ಷ್ಯದ ಉತ್ತರ ನೀಡಿದ್ದಾರೆ. ಇದನ್ನು ಮಹಿಳೆ ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾಳೆ.
ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇರಾನ್ನಲ್ಲಿರುವ ಭಾರತೀಯ ಪ್ರಜೆಗಳಿಗೆ ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ನ ಪ್ರಮುಖ ಜಂಟಿ ಮಿಲಿಟರಿ ಮುಷ್ಕರದ ನಂತರ ಅತ್ಯಂತ ಎಚ್ಚರಿಕೆಯಿಂದ ಮತ್ತು ಅನಗತ್ಯ ಚಲನೆಯನ್ನು ತಪ್ಪಿಸಲು ಸಲಹೆ ನೀಡಿದೆ.X ನಲ್ಲಿ ಪೋಸ್ಟ್ ಮಾಡಿದ ಸಲಹೆಯಲ್ಲಿ, ರಾಯಭಾರ ಕಚೇರಿಯು ಭಾರತೀಯ ನಾಗರಿಕರನ್ನು ಸಾಧ್ಯವಾದಷ್ಟು ಮನೆಯೊಳಗೆ ಇರಲು, ಬೆಳವಣಿಗೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಮುಂದಿನ ಮಾರ್ಗದರ್ಶನಕ್ಕಾಗಿ ಕಾಯುವಂತೆ ಒತ್ತಾಯಿಸಿದೆ. ಸಹಾಯಕ್ಕಾಗಿ ತುರ್ತು ಸಂಪರ್ಕ ಸಂಖ್ಯೆಗಳನ್ನು ಸಹ ನೀಡಲಾಗಿದೆ.ಇರಾನ್ನಲ್ಲಿ ಮಿಲಿಟರಿ ಸ್ಥಾಪನೆಗಳು, ಕ್ಷಿಪಣಿ ಉತ್ಪಾದನಾ ಸೌಲಭ್ಯಗಳು ಮತ್ತು ಕಾರ್ಯತಂತ್ರದ ಸ್ಥಳಗಳನ್ನು
ಬಿಹಾರ: ರಸ್ತೆಯಲ್ಲಿ ಬಾಟಲಿ ಒಡೆದು ಹೋಗಿ ಚೆಲ್ಲಿದ್ದ ಮದ್ಯವನ್ನು ಕುಡುಕನೊಬ್ಬ ಟವೆಲ್ ಅನ್ನು ಬಳಸಿ ಕೊಡಿಯಲು ಯತ್ನಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಲಕ್ಕೆ ಚೆಲ್ಲಿದ ಮದ್ಯವನ್ನು ಬಿಡಲಾಗದೆ ಕುಡುಕನೊಬ್ಬ ಅದನ್ನು ತನ್ನ ಟವೆಲ್ ಮೂಲಕ ಕುಡಿಯಲು ಯತ್ನಿಸಿದ್ದಾನೆ. ಅಲ್ಲೇ ಇದ್ದ ಪೊಲೀಸ್ ಒಬ್ಬರು ಇದನ್ನು ನೋಡಿ, ಕೆನ್ನೆಗೊಂದು ಕೊಟ್ಟು, ಅಲ್ಲಿಂದ್ದ ಕುಡುಕನನ್ನು ಕಳುಹಿಸಿದ್ದಾನೆ. ಬಿಹಾರದಲ್ಲಿ ನಡೆದಿರುವ ಈ ಘಟನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏನಿದು ಘಟನೆ: ಬಿಹಾರದಲ್ಲಿ ಮದ್ಯದ ಬಾಟಲಿಗಳು ರಸ್ತೆಯಲ್ಲಿ ಒಡೆದು ಮದ್ಯ ಚೆಲ್ಲಿವೆ. ಒಬ್ಬ ವ್ಯಕ್ತಿಯು ಟವೆಲ್ ಬಳಸಿ ನೆಲದಿಂದ
ಬೆಂಗಳೂರು: ಕಾಂಗ್ರೆಸ್ ಸರಕಾರವು ಒಳ ಮೀಸಲಾತಿ ಜಾರಿ ಮಾಡಿಲ್ಲ. ಇಷ್ಟು ದಿನಗಳ ಕಾಲ ನೀವು ದಲಿತರಿಗೂ ವಂಚನೆ ಮಾಡಿದ್ದೀರಿ; ಯುವಜನರಿಗೂ ಅನ್ಯಾಯ ಮಾಡಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಈ ಪರಿಸ್ಥಿತಿಗೆ ಸರಕಾರದ ಲೋಪ ಕಾರಣವೇ ಹೊರತು ಜನರ ಲೋಪ ಅಲ್ಲ. ಈಗ ಯಾವ ರೀತಿ ಮೀಸಲಾತಿ ಕೊಡುತ್ತೀರೆಂದು ಹೇಳಿ ಎಂದು ಸವಾಲು ಹಾಕಿದರು. ಈಗ ಮೀಸಲಾತಿ ಹಳೆ ರೀತಿಯಲ್ಲೇ ಕೊಡುವುದಾದರೆ ಅದು ಒಳ ಮೀಸಲಾತಿ ಆಗುವುದಿಲ್ಲ ಎಂದು ನುಡಿದರು.
ಟೆಲ್ ಅವೀವ್: ಇಸ್ರೇಲ್ ನಡೆಸಿದ ದಾಳಿಗೆ ಇದೀಗ ಇರಾನ್ ಪ್ರತಿದಾಳಿ ಮಾಡುತ್ತಿದ್ದು, ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.ಇರಾನ್ ದಾಳಿಯನ್ನು ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಖಚಿತಪಡಿಸಿದೆ.ಈ ಸಂಬಂಧ ಐಡಿಎಫ್ ಎಕ್ಸ್ನಲ್ಲಿ ಮಾಹಿತಿ ತಿಳಿಸಿ, ಸ್ವಲ್ಪ ಸಮಯದ ಹಿಂದೆ ಇಸ್ರೇಲ್ ಕಡೆಗೆ ಇರಾನ್ ಕ್ಷಿಪಣಿಗಳು ಬರುತ್ತಿರುವುದನ್ನು ನಾವು ಗುರುತಿಸಿದ್ದೇವೆ. ಇರಾನ್ ಬೆದರಿಕೆಯನ್ನು ತಡೆಯಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದಾಳಿ
ಡಾಗ್ ಸತೀಶ್ ಎಂದೇ ಖ್ಯಾತರಾಗಿರುವ ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಭಾಗವಹಿಸಿದ್ದ ಸತೀಶ್ ಕ್ಯಾಡಬಮ್ಸ್ ವಿರುದ್ಧ ರಜತ್ ಕಿಶನ್ ದಿಢೀರನೇ ಪೊಲೀಸ್ ಮೆಟ್ಟಿಲೇರಿದ್ದಾರೆ. ಕಿಚ್ಚ ಸುದೀಪ್ ಸೇರಿದಂತೆ ಗಣ್ಯ ವ್ಯಕ್ತಿಗಳ ವಿರುದ್ಧ ಡಾಗ್ ಸತೀಶ್ ಕೇವಲವಗಿ ಮಾತನಾಡಿದ್ದಾರೆ. ಸತೀಶ್ ಅವರು ಅಸಭ್ಯ ವಿಡಿಯೋ ಮಾಡಿದ್ದು, ಕಿಚ್ಚ ಸುದೀಪ್ ಹಾಡನ್ನು ಕೂಡ ಬಳಸಿಕೊಂಡಿದ್ದಾರೆ.ಮನಸ್ಸಿಗೆ ಬಂದಹಾಗೆ ಮಾತನಾಡುತ್ತ, ಮಾತೆತ್ತಿದರೆ ನಾನು ಲಕ್ಷ ರೂಪಾಯಿ ಶರ್ಟ್ ಹಾಕ್ತೀನಿ, ಗ್ಲಾಸ್ ಹಾಕ್ತೀನಿ ಎನ್ನುವ ಡಾಗ್ ಸತೀಶ್ ಅವರು ಎಣ್ಣೆ ಏಟಿನಲ್ಲಿ ಏನೇನೋ ಮಾತನಾಡಿದೆ ಎಂದು ಹೇಳಿದ್ದುಂಟು. ಇದೀಗ ಸತೀಶ್ ವಿಡಿಯೋ ವಿರುದ್ಧ ರಜತ್
ಶೃಂಗೇರಿ: ಮದುವೆ ಮಂಟಪದಲ್ಲೇ ವಧು, ಮದುವೆಗೆ ನಿರಾಕರಿಸಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಶೃಂಗೇರಿಯಲ್ಲಿ ನಡೆದಿದೆ. ಇದರ ವಿಡಿಯೋ ಕೂಡಾ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ. ತಾಲ್ಲೂಕಿನ ಯುವಕ ಹಾಗೂ ಬಾಳೆಹೊನ್ನೂರು ಸಮೀಪದ ಗ್ರಾಮದ ಯುವತಿ ನಡುವೆ ಮದುವೆ ನಿಗದಿಯಾಗಿತ್ತು. ಮೂರು ತಿಂಗಳ ಹಿಂದೆಯೇ ಇವರಿಬ್ಬರಿಗೆ ನಿಶ್ಚಿತಾರ್ಥ ಕೂಡಾ ನಡೆದಿತ್ತು. ನಿಶ್ಚಿತಾರ್ಥದ ನಂತರ ವಧು ಕೇಳಿದ ಪ್ರಶ್ನೆಗಳಿಗೆ ವರ ಸರಿಯಾದ ಉತ್ತರ ನೀಡಿಲ್ಲ. ತಾಯಿಯ ಅನಾರೋಗ್ಯ ಸೇರಿ ಎಲ್ಲಾ ವಿಷಯಗಳನ್ನು ಮುಚ್ಚಿಟ್ಟಿದ್ದರು ಎನ್ನಲಾಗಿದೆ.