ಮೈಸೂರು: ದೀರ್ಘಾವಧಿ ಸಿಎಂ ಆಗುವ ಮೂಲಕ ದಿವಂಗತ ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದೀಗ ಹೊಸ ಆಸೆಯೊಂದನ್ನು ಹೇಳಿಕೊಂಡಿದ್ದಾರೆ. ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ, ನನಗೆ ಹೈ ಕಮಾಂಡ್ ಮೇಲೆ ಪೂರ್ಣ ವಿಶ್ವಾಸವಿದ್ದು, ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವು ಇದೆ. ಏನೇ ಆದರೂ ಹೈ ಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸಿಎಂ ಕುರ್ಚಿ ಬಗೆಗಿನ ಅಭಿಪ್ರಾಯವನ್ನು ಹೊರಹಾಕಿದರು.ನನಗೆ ದೇವರಾಜ ಅರಸು ದಾಖಲೆಯ ಬಗ್ಗೆ ಅರಿವು ಇರಲಿಲ್ಲ. ಯಾವ ದಾಖಲೆ ಮುರಿಯಬೇಕು ಎಂಬುದು ನನ್ನ ಗಮನದಲ್ಲಿ ಇರಲಿಲ್ಲ. ಜನರ ಆಶೀರ್ವಾದದಿಂದ ಎಲ್ಲವೂ ನಡೆದು ಹೋಗಿದೆ. ಇವತ್ತು ದೇವರಾಜ ಅರಸು ದಾಖಲೆ ಸರಿಗಟ್ಟಿದ್ದೇನೆ. ಆದರೆ

ಬೆಂಗಳೂರು: ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಮಂಗಳವಾರ ಅವರಿಗೆ ನೋಟಿಸ್ ಜಾರಿ ಮಾಡಿದೆ ಎಂಬ ವರದಿಯನ್ನು ತಳ್ಳಿಹಾಕಿದ್ದಾರೆ, ಇದು ಸಂಘಟನೆಯ ಬಗ್ಗೆ ಮಾನ್ಯ ಪ್ರಶ್ನೆಗಳನ್ನು ಎತ್ತುವವರ ವಿರುದ್ಧ “ಬೆದರಿಸುವ ತಂತ್ರ” ಬಳಸುವ ಪ್ರಯತ್ನ ಎಂದು ಬಣ್ಣಿಸಿದ್ದಾರೆ.ನಾವು ಆರ್‌ಎಸ್‌ಎಸ್ ಮತ್ತು ಅವರ ಧನಸಹಾಯ ಮತ್ತು ಅವುಗಳ ಅಸ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದೇವೆ. ನೀವು ವ್ಯಕ್ತಿಗಳ ದೇಹವಾಗಿರುವುದರಿಂದ, ನೀವು ನೋಂದಾಯಿಸಿಕೊಳ್ಳಬಾರದು ಎಂದು ಹೇಳುವ ಒಂದು ನಿಯಮವನ್ನು ನನಗೆ ತೋರಿಸಿ, ದೇಶದ ಎಲ್ಲಾ ಸಂಸ್ಥೆಗಳಿಗೆ ಉತ್ತರದಾಯಿತ್ವ ಅನ್ವಯಿಸುತ್ತದೆ ಎಂದು ಒತ್ತಿ ಹೇಳಿದರು.

ಚೆನ್ನೈ: ತಿರುಪ್ಪರನ್ ಕುಂದ್ರ ಬೆಟ್ಟದ ದೀಪ ಸ್ತಂಬದಲ್ಲಿ ದೀಪ ಬೆಳಗಲು ಅಡ್ಡಗಾಲು ಹಾಕಿದ್ದ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರಕ್ಕೆ ಮುಖಭಂಗವಾಗಿದೆ. ಬೆಟ್ಟದ ಮೇಲೆ ದೀಪ ಬೆಳಗಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. ಇದು ಎಡಪಂಥೀಯ ಮತ್ತು ತಮಿಳುನಾಡು ಸರ್ಕಾರಕ್ಕೆ ತೀವ್ರ ಮುಖಭಂಗವಾದಂತಾಗಿದೆ. ಬೆಟ್ಟದ ಮೇಲಿರುವ ದೀಪಸ್ತಂಬದ ಮೇಲೆ ದೀಪ ಬೆಳಗುವುದನ್ನು ಹಿಂದೂಗಳು ಅನಾದಿ ಕಾಲದಿಂದಲೂ ಆಚರಿಸುತ್ತಾ ಬಂದಿದ್ದಾರೆ. ಆದರೆ ಇತ್ತೀಚೆಗೆ ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ದೀಪ ಬೆಳಗುವುದಕ್ಕೆ ನಿಷೇಧ ಹೇರಿತ್ತು. ಇನ್ನೊಂದೆಡೆ ದೀಪಸ್ತಂಬದ ಪಕ್ಕದಲ್ಲೇ ಇರುವ ಮಸೀದಿ ಕೂಡಾ ಇದು ವಕ್ಫ್ ಆಸ್ತಿ ಎಂದು ನ್ಯಾಯಾಲಯಕ್ಕೆ ಆಕ್ಷೇಪ ಸಲ್ಲಿಸಿತ್ತು.

ಮಂಗಳವಾರ ಸುಬ್ರಹ್ಮಣ್ಯನಿಗೆ ವಿಶೇಷವಾದ ದಿನವಾಗಿದೆ. ಸರ್ಪದೋಷ, ಸಂತಾನ ಸಮಸ್ಯೆ,ವಿವಾಹಕ್ಕೆ ಅಡ್ಡಿ, ಮನಸ್ಸಿಗೆ ನೆಮ್ಮದಿ ಇಲ್ಲವೆಂದರೆ ಸುಬ್ರಹ್ಮಣ್ಯನ ಕುರಿತಾದ ಈ ಷಣ್ಮುಖ ಪಂಚರತ್ನ ಸ್ತುತಿ ಓದಿ.ಸ್ಫುರದ್ವಿದ್ಯುದ್ವಲ್ಲೀವಲಯಿತಮಗೋತ್ಸಂಗವಸತಿಂಭವಾಪ್ಪಿತ್ತಪ್ಲುಷ್ಟಾನಮಿತಕರುಣಾಜೀವನವಶಾತ್ ।ಅವಂತಂ ಭಕ್ತಾನಾಮುದಯಕರಮಂಭೋಧರ ಇತಿಪ್ರಮೋದಾದಾವಾಸಂ ವ್ಯತನುತ ಮಯೂರೋಽಸ್ಯ ಸವಿಧೇ ॥ 1 ॥ ಸುಬ್ರಹ್ಮಣ್ಯೋ ಯೋ ಭವೇಜ್ಜ್ಞಾನಶಕ್ತ್ಯಾಸಿದ್ಧಂ ತಸ್ಮಿಂದೇವಸೇನಾಪತಿತ್ವಮ್ ।ಇತ್ಥಂ ಶಕ್ತಿಂ ದೇವಸೇನಾಪತಿತ್ವಂಸುಬ್ರಹ್ಮಣ್ಯೋ ಬಿಭ್ರದೇಷ ವ್ಯನಕ್ತಿ ॥ 2 ॥ಪಕ್ಷೋಽನಿರ್ವಚನೀಯೋ ದಕ್ಷಿಣ ಇತಿ ಧಿಯಮಶೇಷಜನತಾಯಾಃ ।ಜನಯತಿ ಬರ್ಹೀ ದಕ್ಷಿಣನಿರ್ವಚನಾಯೋಗ್ಯಪಕ್ಷಯುಕ್ತೋಽಯಮ್ ॥ 3 ॥ ಯಃ ಪಕ್ಷಮನಿರ್ವಚನಂ ಯಾತಿ ಸಮವಲಂಬ್ಯ ದೃಶ್ಯತೇ ತೇನ ।ಬ್ರಹ್ಮ ಪರಾತ್ಪರಮಮಲಂ ಸುಬ್ರಹ್ಮಣ್ಯಾಭಿಧಂ ಪರಂ ಜ್ಯೋತಿಃ ॥ 4 ॥ ಷಣ್ಮುಖಂ ಹಸನ್ಮುಖಂ ಸುಖಾಂಬುರಾಶಿಖೇಲನಂಸನ್ಮುನೀಂದ್ರಸೇವ್ಯಮಾನಪಾದಪಂಕಜಂ ಸದಾ ।