Shorts

ಕೋಲ್ಕತ್ತಾ: ಮುಂಬರುವ ಪಶ್ವಿಮ ಬಂಗಾಳದ ಚುನಾವಣೆ ಹೊಸ ಇತಿಹಾಸ ಸೃಷ್ಟಿಸಲಿದೆ. ಟಿಎಂಸಿ ನಾಯಕರು ಬಳಸುತ್ತಿರುವ ಭಾಷೆಗಳನ್ನ ನೋಡಿದ್ರೆ ಫಲಿತಾಂಶದ ಬಗ್ಗೆ ಅವರಿಗೆ ಇರುವ ಭಯವನ್ನು ತೋರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟಿಎಂಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಬಂಕುರಾದಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ತೃಣಮೂಲ ಕಾಂಗ್ರೆಸ್‌ ಪಕ್ಷ, ಕಾಂಗ್ರೆಸ್‌ ಜೊತೆಗೆ ಸೇರಿ ಪಿತೂರಿ ಮಾಡಿದೆ. ಈ ಮೂಲಕ ಬಂಗಾಳದ ಮಹಿಳೆಯರಿಗೆ ದ್ರೋಹ ಬಗೆದಿದೆ ಎಂದು ಕಿಡಿಕಾಡಿದರು. ನಾನು ಎಲ್ಲಾ ಟಿಎಂಸಿ ಗೂಂಡಾಗಳು, ಸಿಂಡಿಕೇಟ್‌ಗಳು ಮತ್ತು ಭ್ರಷ್ಟರಿಗೆ ಕೊನೇ ಅವಕಾಶ ನೀಡುತ್ತಿದ್ದೇನೆ. ಏಪ್ರಿಲ್‌ 29 ಕ್ಕೂ ಮೊದಲು ನಿಮ್ಮ ಹತ್ತಿರದ ಪೊಲೀಸ್‌ ಠಾಣೆಗಳಲ್ಲಿ ಶರಣಾಗಿ, ಮೇ 4 ರ ನಂತರ ಯಾರಿಗೂ ಉಳಿಗಾಲ ಇರೋದಿಲ್ಲ ಎಂದು ಮೋದಿ ಎಚ್ಚರಿಕೆ ನೀಡಿದರು.

ಬೆಂಗಳೂರು: ಧುರಂಧರ್‌ ದಿ ರಿವೇಂಜ್ ಚಿತ್ರದ ಸಕ್ಸಸ್‌ನಲ್ಲಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ದಂಪತಿ ಭಾನುವಾರ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ.ತಾರಾ ದಂಪತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿಯಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರ ಮಗಳು ದುವಾ ಗರ್ಭಧಾರಣೆಯ ಪಾಸಿಟಿವ್ ಪರೀಕ್ಷಾ ಕಿಟ್ ಅನ್ನು ಹಿಡಿದುಕೊಂಡಿದ್ದಾರೆ. ಈ ಚಿತ್ರಕ್ಕೆ ರಣವೀರ್ ಹಾಗೂ ದೀಪಿಕಾ ಪಡುಕೋಣೆ ಎರಡು ಕಣ್ಣಿನ ಎಮೋಜಿಯ ಶೀರ್ಷಿಕೆ ನೀಡಿದ್ದಾರೆ.ದೀಪಿಕಾ ಮತ್ತು ರಣವೀರ್ ಸಿಂಗ್ 2018ರ ನವೆಂಬರ್ 14ರಂದು ಇಟಲಿಯ ಲೇಕ್ ಕೊಮೊದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿವಾಹವಾಗಿದ್ದರು.

ಹೈದರಾಬಾದ್‌: ಅಭಿಷೇಕ್‌ ಶರ್ಮಾ ಮತ್ತು ಹೆನ್ರಿಚ್‌ ಕ್ಲಾಸೆನ್‌ ಅವರು ಮಿಂಚಿನ ಅರ್ಧಶತಕದ ಬಳಿಕ ಶ್ರೀಲಂಕಾದ ವೇಗಿ ಇಶಾನ್‌ ಮಾಲಿಂಗ ಮಿಂಚಿನ ದಾಳಿ ನಡೆಸಿದರು. ಇದರಿಂದಾಗಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಹಾಲಿ ಐಪಿಎಲ್‌ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ಸನ್ ರೈಸರ್ಸ್ ಹೈದರಾಬಾದ್ ತಂಡ ಗೆಲುವು ಸಾಧಿಸುತ್ತಿದ್ದಂತೆ ತಂಡದ ಒಡತಿ ಕಾವ್ಯ ಮಾರನ್ ಸಾಕಷ್ಟು ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹರ್ಷೋದ್ಘಾರದೊಂದಿಗೆ ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಆಟಗಾರರನ್ನು ಪ್ರೋತ್ಸಾಹಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಇಶಾನ್ ಕಿಶನ್ ಯುವ ವೇಗಿಗಳ ಬೆನ್ನುತಟ್ಟಿ ಅವರನ್ನು ಅಭಿನಂದಿಸಿದ್ದಾರೆ.ಹೈದರಾಬಾದ್‌ನಲ್ಲಿ ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡ ಚೆನ್ನೈ ವಿರುದ್ಧ ರೋಚಕ ಗೆಲುವು ಸಾಧಿಸಿತು.

ಟೆಹ್ರಾನ್: ಅಮೆರಿಕಾ ನಡುವೆ ವಾಸ್ತವದಲ್ಲಿ ಶಾಂತಿ ಒಪ್ಪಂದದ ದಾರಿ ಇನ್ನೂ ದೂರದಲ್ಲಿದ್ದು, ಅಂತಿಮ ಹಂತ ತಲುಪಿಲ್ಲ ಎಂದು ಇರಾನ್‌ ಸ್ಪಷ್ಟಪಡಿಸಿದೆ. ಇದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಜಾಗತಿಕ ತೈಲ ಸಾಗಾಟದ ಪ್ರಮುಖ ಮಾರ್ಗವಾದ ಈ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವುದು ವಿಶ್ವ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿದೆ.ಅಮೆರಿಕದೊಂದಿಗೆ ನಡೆದ ಮಾತುಕತೆಗಳಲ್ಲಿ ಕೆಲವು ಪ್ರಗತಿ ಕಂಡುಬಂದಿದೆಯಾದರೂ, ಇನ್ನೂ ಹಲವು ಮೂಲಭೂತ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಮುಂದುವರಿದಿವೆ. ನಾವು ಇನ್ನೂ ಅಂತಿಮ ಹಂತದಿಂದ ದೂರದಲ್ಲಿದ್ದೇವೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ತಿಳಿಸಿದ್ದಾರೆ.ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಿರುವುದಾಗಿ ಇರಾನ್ ಘೋಷಿಸಿದ್ದು, ಅಮೆರಿಕ ತನ್ನ ನೌಕಾ ದಿಗ್ಬಂಧನವನ್ನು ತೆಗೆದುಹಾಕುವವರೆಗೂ ಸಂಚಾರವನ್ನು ಸಂಪೂರ್ಣವಾಗಿ ಪುನರಾರಂಭಿಸುವುದಿಲ್ಲ ಎಂದು ವಾರ್ನಿಂಗ್‌ ನೀಡಿದೆ.

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 6 ವಿಕೆಟ್‌ಗಳ ಸೋಲು ಅನುಭವಿಸಿದೆ. ಇದರೊಂದಿಗೆ ತವರಿನಲ್ಲಿ ಮೊದಲ ಸೋಲು ಅನುಭವಿಸಿದೆ.ಪಂದ್ಯದ ಬಳಿಕ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್, ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸಲು ಸಾಧ್ಯವಾಗದೇ ಇರುವುದು ನಮ್ಮ ಸೋಲಿಗೆ ಪ್ರಮುಖ ಕಾರಣವಾಯಿತು. ನಮ್ಮ ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದರು.ಗೆಲುವು ನಿಜಕ್ಕೂ ಹತ್ತಿರದಲ್ಲಿ ಇತ್ತು. ಆದರೆ ನಾವು 15 ರಿಂದ 20 ರನ್ ಕಡಿಮೆ ಮಾಡಿದೆವು ಎಂದು ನಾನು ಭಾವಿಸುತ್ತೇನೆ. ನಾವು ಬ್ಯಾಟಿಂಗ್ ಪ್ರಾರಂಭಿಸಿದ ರೀತಿ, ವಿಶೇಷವಾಗಿ ವಿರಾಟ್ ಕೊಹ್ಲಿ ಮತ್ತು ಸಾಲ್ಟ್ ಅವರು ಉತ್ತಮ ಆರಂಭ ನೀಡಿದರು. ಬಳಿಕ ನಾವು ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳಲು ಪ್ರಾರಂಭಿಸಿದೆವು ಎಂದು ಹೇಳಿದರು.

ಬೆಂಗಳೂರು: ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಯಲ್ಲವಾಗಿದೆ. ಬಿಜೆಪಿ ತನ್ನ ರಾಜಕೀಯಕ್ಕಾಗಿ ಮಹಿಳಾ ಮೀಸಲಾತಿ ಮತ್ತು ಡಿಲಿಮಿಟೇಷನ್ ಒಟ್ಟಾಗಿ ಸಂವಿಧಾನದ ತಿದ್ದುಪಡಿ ಮಾಡಲು ಮುಂದಾಗಿದ್ದಕ್ಕೆ ಬಿಲ್ ಫೇಲ್ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮಹಿಳಾ ಮೀಸಲಾತಿ ಪರ‌ ಇದೆ. ನಾವು ಮಹಿಳಾ ಮೀಸಲಾತಿಗೆ ವಿರೋಧ ಇಲ್ಲ. 2023 ರಲ್ಲಿ ಸಂಸತ್‌ನಲ್ಲಿ ಬಿಲ್ ಪಾಸ್ ಆಗಿದೆ. ಅದನ್ನ ಅವರು ಜಾರಿ ಮಾಡಬೇಕು. ಇನ್ನೂ ಮುಂದಿನ ಚುನಾವಣೆಗೆ ಮೀಸಲಾತಿ ಜಾರಿ ಮಾಡಲಿ ಎಂದು ಹೇಳಿದರು. ಇನ್ನೂ ನಿನ್ನೆ ಸಂವಿಧಾನಕ್ಕೆ ತಿದ್ದುಪಡಿ ತರುವುದಕ್ಕೆ ಹೋಗಿ ನಿನ್ನೆ ಫೇಲ್ ಆಯಿತು. ಮಹಿಳಾ ಮೀಸಲಾತಿಗೆ ಮಾತ್ರ ಸಂವಿಧಾನದ

ಬೆಂಗಳೂರು: ಮಹಿಳಾ ಮೀಸಲಿಗೆ ತಡೆವೊಡ್ಡಿದ ಕಾಂಗ್ರೆಸ್ ಕೋಟ್ಯಂತರ ಮಹಿಳೆಯರಿಗೆ ದ್ರೋಹ ಬಗೆದಿದೆ. ಮಹಿಳೆಯರ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ ಅನ್ನು ದೇಶದ ಜನ ಕ್ಷಮಿಸುವುದಿಲ್ಲ. ಮುಂಬರುವ ರಾಜ್ಯಗಳ ಚುನಾವಣೆಯಲ್ಲಿ ಜನರು ಬುದ್ಧಿ ಕಲಿಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಹೇಳಿದ್ದಾರೆ.ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಹಿಳಾ ಮೀಸಲು ಮಸೂದೆಗೆ ಸೋಲಾಗಿದ್ದು ಸಾಮಾನ್ಯ ವಿಚಾರ ಅಲ್ಲ. ಇದು ರಾಜಕೀಯ ಪಕ್ಷಗಳ ಪಿತೂರಿ, ನಿರ್ಲಕ್ಷ್ಯ, ಮಹಿಳಾ ವಿರೋಧಿ ಭಾವನೆಯ ಸ್ಪಷ್ಟ ಸಂಕೇತ ಎಂದರು. ದೇಶದ ಇತಿಹಾಸದಲ್ಲೇ ಮಹಿಳೆಯರಿಗೆ ಅವರ ಹಕ್ಕನ್ನು ಸಂವಿಧಾನದತ್ತವಾಗಿ ಕೊಡುವ ತೀರ್ಮಾನವನ್ನು ನರೇಂದ್ರ ಮೋದಿ ಅವರು ಮಾಡಿದ್ದರು.

ವಿವಾಹ, ಮಕ್ಕಳ ಸಮಸ್ಯೆಯಾಗಿದ್ದರೆ ಸುಬ್ರಹ್ಮಣ್ಯನ ಕುರಿತಾದ ಪ್ರಾರ್ಥನೆ ಮಾಡಬೇಕು. ಇಂದು ತಪ್ಪದೇ ಸುಬ್ರಹ್ಮಣ್ಯ ದೇವರ ಕುರಿತಾದ ಷಣ್ಮುಖ ಪಂಚರತ್ನ ಸ್ತುತಿ ತಪ್ಪದೇ ಓದಿ.ಸ್ಫುರದ್ವಿದ್ಯುದ್ವಲ್ಲೀವಲಯಿತಮಗೋತ್ಸಂಗವಸತಿಂಭವಾಪ್ಪಿತ್ತಪ್ಲುಷ್ಟಾನಮಿತಕರುಣಾಜೀವನವಶಾತ್ ।ಅವಂತಂ ಭಕ್ತಾನಾಮುದಯಕರಮಂಭೋಧರ ಇತಿಪ್ರಮೋದಾದಾವಾಸಂ ವ್ಯತನುತ ಮಯೂರೋಽಸ್ಯ ಸವಿಧೇ ॥ 1 ॥ ಸುಬ್ರಹ್ಮಣ್ಯೋ ಯೋ ಭವೇಜ್ಜ್ಞಾನಶಕ್ತ್ಯಾಸಿದ್ಧಂ ತಸ್ಮಿಂದೇವಸೇನಾಪತಿತ್ವಮ್ ।ಇತ್ಥಂ ಶಕ್ತಿಂ ದೇವಸೇನಾಪತಿತ್ವಂಸುಬ್ರಹ್ಮಣ್ಯೋ ಬಿಭ್ರದೇಷ ವ್ಯನಕ್ತಿ ॥ 2 ॥ ಪಕ್ಷೋಽನಿರ್ವಚನೀಯೋ ದಕ್ಷಿಣ ಇತಿ ಧಿಯಮಶೇಷಜನತಾಯಾಃ ।ಜನಯತಿ ಬರ್ಹೀ ದಕ್ಷಿಣನಿರ್ವಚನಾಯೋಗ್ಯಪಕ್ಷಯುಕ್ತೋಽಯಮ್ ॥ 3 ॥ ಯಃ ಪಕ್ಷಮನಿರ್ವಚನಂ ಯಾತಿ ಸಮವಲಂಬ್ಯ ದೃಶ್ಯತೇ ತೇನ ।ಬ್ರಹ್ಮ ಪರಾತ್ಪರಮಮಲಂ ಸುಬ್ರಹ್ಮಣ್ಯಾಭಿಧಂ ಪರಂ ಜ್ಯೋತಿಃ ॥ 4 ॥