Shorts

ಶನಿವಾರ ಶನಿದೇವನಿಗೆ ವಿಶೇಷವಾದ ದಿನವಾಗಿದ್ದು ಇಂದು ಶನಿ ದೋಷವಿರುವವರು ಎಳ್ಳೆಣ್ಣೆ ಸಮರ್ಪಣೆ ಮಾಡುತ್ತಾರೆ. ಸಾಮಾನ್ಯವಾಗಿ ಶನಿ ದೇವನಿಗೆ ಎಳ್ಳೆಣ್ಣೆ ಸಮರ್ಪಣೆ ಮಾಡುವುದು ಪದ್ಧತಿ. ಆದರೆ ಎಳ್ಳೆಣ್ಣೆ ಯಾಕೆ ಕೊಡುತ್ತಾರೆ ಎಂಬುದರ ಪೌರಾಣಿಕ ಹಿನ್ನಲೆಯನ್ನು ತಿಳಿದುಕೊಳ್ಳಿ. ಶನಿ ದೋಷವಿರುವವರು ಶನಿ ದೇವನಿಗೆ ಎಳ್ಳೆಯನ್ನು ಸಮರ್ಪಿಸುವುದರಿಂದ ದೋಷದ ಪ್ರಭಾವ ತಕ್ಕ ಮಟ್ಟಿಗೆ ತಗ್ಗುವುದು ಎಂಬ ನಂಬಿಕೆಯಿದೆ. ಇದಕ್ಕಾಗಿ ಇಂದು ಶನಿ ದೇವಾಲಯಕ್ಕೆ ತೆರಳಿ ಎಳ್ಳೆಣ್ಣೆ ಸಮರ್ಪಿಸುವುದು ಅಥವಾ ಎಳ್ಳೆಣ್ಣೆ ದೀಪ ಹಚ್ಚುತ್ತಾರೆ. ಆದರೆ ಇದಕ್ಕೆ ಕಾರಣವೂ ಇದೆ. ಈ ಹಿಂದೆ ತ್ರೇತಾಯುಗದಲ್ಲಿ ರಾಮಸೇತು ನಿರ್ಮಾಣ ಮಾಡುವಾಗ ಆಂಜನೇಯ ಸ್ವಾಮಿಯ ಶಕ್ತಿ ಪರೀಕ್ಷೆ ಮಾಡಲು ಶನಿ ದೇವ ಯುದ್ಧ ಮಾಡಿದ್ದನಂತೆ.

ಮಳೆಯಲ್ಲಿ ನೆನೆದು ಒದ್ದೆಯಾಗಲಿದ್ದ ಬೆಕ್ಕಿನ ಮರಿಯಂತೆ ನಾಯಿಯೊಂದು ತಂದೆಯಂತೆ ರಕ್ಷಣೆ ನೀಡಿ ಕಾಪಾಡಿದ ಕ್ಯೂಟ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಬೆಕ್ಕು ಮತ್ತು ನಾಯಿ ಪರಸ್ಪರ ಶತ್ರುಗಳಂತೆ ಆಡುತ್ತಾರೆ. ಬೆಕ್ಕುಗಳು ಓಡಾಡುವುದನ್ನು ಕಂಡರೆ ನಾಯಿಗಳು ಅಟ್ಟಾಡಿಸಿಕೊಂಡು ಹೋಗುತ್ತವೆ. ಅಪರೂಪಕ್ಕೆ ಕೆಲವು ಸಾಕು ನಾಯಿಗಳು ಮಾತ್ರ ಅದೇ ಮನೆಯ ಬೆಕ್ಕುಗಳ ಜೊತೆ ಫ್ರೆಂಡ್ ಶಿಪ್ ಮಾಡುವುದು ಇದೆ. ಇಲ್ಲಿಯೂ ಅದೇ ರೀತಿ ಆಗಿದೆ. ಜೋರಾಗಿ ಮಳೆ ಸುರಿಯುತ್ತಿರುವಾಗ ಬೆಕ್ಕಿನ ಮರಿಯೊಂದು ನೆನೆಯುತ್ತಿತ್ತು. ಆ ಬೆಕ್ಕಿಗೆ ಮಳೆ ನೀರು ಬೀಳದಂತೆ ನಾಯಿಯೊಂದು ಅದನ್ನು ತನ್ನ ದೇಹದೊಳಗೆ ಬೆಚ್ಚಗೆ ಇರಿಸಿತ್ತು. ವಿಶೇಷವೆಂದರೆ ನಾಯಿ ಮಳೆಗೆ ಸಂಪೂರ್ಣ ಒದ್ದೆಯಾಗಿತ್ತು.

ಇಂದು ಶ್ರೀರಾಮನವಮಿಯಾಗಿದೆ. ಶ್ರೀರಾಮಚಂದ್ರ ಹುಟ್ಟಿದ ದಿನಕ್ಕೆ ಅವನನ್ನು ಕುರಿತು ಈ ಚುಟುಕಾದ ರಾಮ ಸ್ತೋತ್ರವನ್ನು ಓದಿ. ಶ್ರೀರಾಮ ಪಂಚರತ್ನ ಸ್ತೋತ್ರ ಇಲ್ಲಿದೆ ನೋಡಿ.ಕಂಜಾತಪತ್ರಾಯತ ಲೋಚನಾಯ ಕರ್ಣಾವತಂಸೋಜ್ಜ್ವಲ ಕುಂಡಲಾಯಕಾರುಣ್ಯಪಾತ್ರಾಯ ಸುವಂಶಜಾಯ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 1 ॥ ವಿದ್ಯುನ್ನಿಭಾಂಭೋದ ಸುವಿಗ್ರಹಾಯ ವಿದ್ಯಾಧರೈಸ್ಸಂಸ್ತುತ ಸದ್ಗುಣಾಯವೀರಾವತಾರಯ ವಿರೋಧಿಹರ್ತ್ರೇ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 2 ॥ ಸಂಸಕ್ತ ದಿವ್ಯಾಯುಧ ಕಾರ್ಮುಕಾಯ ಸಮುದ್ರ ಗರ್ವಾಪಹರಾಯುಧಾಯಸುಗ್ರೀವಮಿತ್ರಾಯ ಸುರಾರಿಹಂತ್ರೇ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 3 ॥ ಪೀತಾಂಬರಾಲಂಕೃತ ಮಧ್ಯಕಾಯ ಪಿತಾಮಹೇಂದ್ರಾಮರ ವಂದಿತಾಯಪಿತ್ರೇ ಸ್ವಭಕ್ತಸ್ಯ ಜನಸ್ಯ ಮಾತ್ರೇ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 4 ॥