ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ದೃಷ್ಟಿಯಿಂದ, ರಾಜ್ಯಾದ್ಯಂತ 'ಪನೀರ್' ಹೆಸರಿನಲ್ಲಿ ಮಾರಾಟವಾಗುತ್ತಿರುವ 'ಅನಲಾಗ್ ಪನೀರ್' (ಹಾಲಿನಿಂದ ತಯಾರಾಗದ ಪನೀರ್) ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ಕರ್ನಾಟಕ ಸರ್ಕಾರವು ಒಂದು ವರ್ಷದ ಅವಧಿಗೆ ನಿಷೇಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ."ಕರ್ನಾಟಕದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗವು ಆಗಸ್ಟ್ 17 ರಂದು ಸರ್ಕಾರಿ ಅಧಿಸೂಚನೆಯನ್ನು ಹೊರಡಿಸಿದೆ. ಇದರನ್ವಯ, ರಾಜ್ಯದಲ್ಲಿ 'ಪನೀರ್' ಹೆಸರಿನಲ್ಲಿ ಮಾರಾಟವಾಗುತ್ತಿರುವ ಅನಲಾಗ್/ನಾನ್-ಡೈರಿ ಪನೀರ್ನ (ಹಾಲಿನಿಂದ ತಯಾರಾಗದ ಪನೀರ್) ಉತ್ಪಾದನೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ವಿತರಣೆ, ಸಾಗಣೆ, ಸಗಟು ಮತ್ತು ಚಿಲ್ಲರೆ ಮಾರಾಟ, ಮಾರಾಟಕ್ಕಾಗಿ ಪ್ರದರ್ಶನ ಮತ್ತು ಪೂರೈಕೆಯನ್ನು
ಬೆಂಗಳೂರು: ಯಶ್ ಮನೆಯಲ್ಲಿ ಇಲ್ಲದಿದ್ದರೂ ವರಮಹಾಲಕ್ಷ್ಮಿ ಹಬ್ಬ ಮನೆಯಲ್ಲಿ ನಡೆಯುತ್ತಿದ್ದಾಗ ಮಿಸ್ ಆಗದ ಹಾಗೆ ಪತ್ನಿ ರಾಧಿಕಾ ಪಂಡಿತ್ ನೋಡಿಕೊಂಡಿದ್ದಾರೆ. ಯಶ್ ಮತ್ತು ರಾಧಿಕಾ ಎಲ್ಲಾ ಹಬ್ಬಗಳನ್ನೂ ಭಕ್ತಿಯಿಂದ ಆಚರಿಸುತ್ತಾರೆ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬವನ್ನು ಯಶ್ ದಂಪತಿ ಜೊತೆಗೇ ಕೂತು ಪೂಜೆ ಮಾಡಿ ಭಕ್ತಿಯಿಂದ ನೆರವೇರಿಸುತ್ತಾರೆ. ಆದರೆ ಈ ಬಾರಿ ಯಶ್ ಗೆ ಮನೆಯಲ್ಲಿ ಹಬ್ಬ ಮಿಸ್ ಆಗಿದೆ. ಟಾಕ್ಸಿಕ್ ಸಿನಿಮಾ ಬಿಡುಗಡೆ ನಿಮಿತ್ತ ಯಶ್ ಸತತ ಓಡಾಟದಲ್ಲಿದ್ದಾರೆ. ಹೀಗಾಗಿ ಈ ಬಾರಿ ಹಬ್ಬಕ್ಕೆ ಅವರು ಮನೆಯಲ್ಲಿರಲಿಲ್ಲ.
ಮದುವೆಯಲ್ಲಿ ಕೇಟರ್ಸ್ ಸಿಬ್ಬಂದಿಯೊಬ್ಬರು ಕುಸಿದು ಬಿದ್ದಾಗ ವೈದ್ಯೆ ಮದುಮಗಳೇ ಎದ್ದಯ ಬಂದು ಆರೋಗ್ಯ ವಿಚಾರಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಮದುಮಗಳ ಗುಣಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕಣ್ಣೂರಿನಲ್ಲಿ ನಡೆಯುತ್ತಿದ್ದ ತಮ್ಮ ವಿವಾಹ ಸಮಾರಂಭದಲ್ಲಿ ಅಡುಗೆ ಸೇವೆಯ (ಕ್ಯಾಟರಿಂಗ್) ಇಬ್ಬರು ಸಿಬ್ಬಂದಿ ಅಸ್ವಸ್ಥರಾದ ವಿಷಯ ತಿಳಿದು ಅವರು ಸಂಭ್ರಮಾಚರಣೆಯಿಂದ ಸ್ವಲ್ಪ ದೂರ ಬಂದು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು. ಆ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಅಗತ್ಯವಿದ್ದರೆ ಅದಕ್ಕೂ ಮುನ್ನವೇ ಸೂಕ್ತ ನೆರವು ಒದಗಿಸಿದರು.
ರೈಲಿನಲ್ಲಿ ಸ್ಲೀಪರ್ ಸಿಟ್ ಬುಕ್ ಮಾಡಬೇಕೆಂದರೆ ಸೀಟ್ ಸಿಗಲು ಪರದಾಡಬೇಕಾಗುತ್ತದೆ. ಆದರೆ ಇಲ್ಲೊಂದು ಕಪಿಮಹಾಶಯ ಮಾಡಿದ ಕೆಲಸ ಎಲ್ಲರ ಮುಖದಲ್ಲಿ ನಗು ತರಿಸಿದೆ. ಭಾರತೀಯ ರೈಲ್ವೆಯಲ್ಲಿ ಒಂದು ಕನ್ಫರ್ಮ್ ಸೀಟ್ ಪಡೆಯಲು ಸಾಮಾನ್ಯ ನಾರಿಕರು ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿಯಿದೆ. ವೇಟಿಂಗ್ ಲಿಸ್ಟ್, ತತ್ಕಾಲ್ ಬುಕಿಂಗ್ ಎಂದು ಹೆಣಗಾಡಿದರೂ ಸೀಟು ಸಿಗದೆ ಸಾರ್ವಜನಿಕರು ಪರದಾಡುತ್ತಾರೆ. ಆದರೆ, ನಿನ್ನೆ 'ಲಕ್ಷ್ಮಿ ಎಕ್ಸ್ಪ್ರೆಸ್' ರೈಲಿನಲ್ಲಿ ನಡೆದ ಘಟನೆಯೊಂದು ಭಾರತೀಯ ರೈಲ್ವೆಯ ನಿಜವಾದ 'ರಾಜ' ಯಾರು ಎಂಬುದನ್ನು ಸಾಬೀತುಪಡಿಸಿದೆ! ರೈಲು ಚಿಪಿಯಾನಾ ಬಳಿ ತಲುಪುತ್ತಿದ್ದಂತೆ, ದಿಢೀರನೆ ಮರ್ಕಟ ಮಹಾರಾಯನೊಬ್ಬ ಮಾಸ್ ಎಂಟ್ರಿ ಕೊಟ್ಟಿತು.
ಬಾಲಿವುಡ್ ಖ್ಯಾತ, 45ವರ್ಷದ ನಟಿ ಕರೀನಾ ಕಪೂರ್ ಅವರು ಇದೀಗ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.ಇದಕ್ಕೆಲ್ಲ ಕಾರಣ ಕರೀನಾ ಕಪೂರ್ ಅವರ ಜಿಮ್ನ ಹೊರಗಿನ ಇತ್ತೀಚಿನ ವಿಡಿಯೋ. ಬಾಲಿವುಡ್ ತಾರೆ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಊಹಾಪೋಹಗಳಿಗೆ ಇದು ಕಾರಣವಾಗಿದೆ.ಕರೀನಾ ಮತ್ತು ಅವರ ಪತಿ ಸೈಫ್ ಅಲಿ ಖಾನ್ ಇತ್ತೀಚೆಗಷ್ಟೇ ತಮ್ಮ ಮಕ್ಕಳೊಂದಿಗೆ ಕಡಲತೀರದ ಪ್ರವಾಸವನ್ನು ಮುಗಿಸಿ ಮುಂಬೈಗೆ ವಾಪಾಸ್ಸಾಗಿದ್ದರು.
ಕೆಲವೊಂದು ಸಾವುಗಳನ್ನು ನೋಡುವಾಗ ಎಂಥಾ ಅನ್ಯಾಯದ ಸಾವು ಎಂಬ ಭಾವನೆ ಬರುತ್ತದೆ. ಅಂತಹದ್ದೇ ಒಂದು ಘಟನೆ ಇದಾಗಿದೆ. ತ್ರಿಶ್ಶೂರ್ ನಲ್ಲಿ ಬೈಕ್ ಸವಾರನೊಬ್ಬ ಅನ್ಯಾಯವಾಗಿ ಜೀವ ಕಳೆದುಕೊಳ್ಳುವಂತಾಗಿದೆ.ಕೇರಳದ ತ್ರಿಶ್ಶೂರ್ನಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಚಲಿಸುತ್ತಿದ್ದ ಪಿಕ್-ಅಪ್ ವ್ಯಾನ್ನಿಂದ ಅಚಾನಕ್ಕಾಗಿ ಕೆಳಗೆ ಬಿದ್ದ ಕಬ್ಬಿಣದ ಪೈಪ್ಗಳು ತಗುಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.ರಸ್ತೆಯಲ್ಲಿ ವೇಗವಾಗಿ ಸಾಗುತ್ತಿದ್ದ ಪಿಕ್-ಅಪ್ ವಾಹನದಲ್ಲಿ ಕಬ್ಬಿಣದ ಪೈಪ್ಗಳನ್ನು ಸರಿಯಾಗಿ ಕಟ್ಟದೆ ಕೊಂಡೊಯ್ಯಲಾಗುತ್ತಿತ್ತು. ಚಾಲಕ ನಿಯಂತ್ರಣ ತಪ್ಪಿದಾಗ ಅಥವಾ ದಿಢೀರ್ ಬ್ರೇಕ್ ಹಾಕಿದಾಗ ಪೈಪ್ಗಳು ವಾಹನದಿಂದ ಜಾರಿ ರಸ್ತೆಗೆ ಬಿದ್ದಿವೆ.
ಉತ್ತರ ಪ್ರದೇಶದ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಬಂದಿರುವ ದೃಶ್ಯವೊಂದು ಆಡಳಿತ ಯಂತ್ರದ ನಿರಾಸಕ್ತಿ ಮತ್ತು ಬಡವರ ಮೇಲಿನ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತಾಯಿಯ ಚಿಕಿತ್ಸೆಗೆ ನೆರವು ಮತ್ತು ಕೋತಿಗಳ ಕಾಟದಿಂದ ಮುಕ್ತಿ ಕೋರಿ ಬಂದ ಬಡ ವ್ಯಕ್ತಿಯೊಬ್ಬನಿಗೆ ಕಚೇರಿಯಲ್ಲಿ ಎದುರಾಗಿದ್ದು ತೀವ್ರ ನಿರಾಶೆ.ಯುವಕನ ವೃದ್ಧ ತಾಯಿಯ ಮೇಲೆ ಕೋತಿಗಳು ಭೀಕರವಾಗಿ ದಾಳಿ ಮಾಡಿದ್ದು, ತಲೆಗೆ ತೀವ್ರ ಗಾಯವಾಗಿ ಹಲವು ಹೊಲಿಗೆಗಳು ಬಿದ್ದಿದ್ದವು. ಈ ಹಿಂದೆ ಹಲವು ಬಾರಿ ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಬೆಂಗಳೂರು: ರೇಪ್ ಕೇಸ್ ನಲ್ಲಿ ಜೈಲು ಪಾಲಾಗಿದ್ದರೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನೊಳಗೂ ನಡೆಸುತ್ತಿದ್ದ ವ್ಯವಹಾರಗಳು ಈಗ ಬಯಲಾಗಿದೆ. ಇತ್ತೀಚೆಗಷ್ಟೇ ಪ್ರಜ್ವಲ್ ರೇವಣ್ಣ ತಮ್ಮ ಬ್ಯಾರಕ್ ನಲ್ಲೇ ಮೊಬೈಲ್ ಬಳಸುತ್ತಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿದ ವೇಳೆ ಪ್ರಜ್ವಲ್ ಕೊಠಡಿಯಲ್ಲಿ ಮೊಬೈಲ್, ಪೆನ್ ಡ್ರೈವ್ ಮತ್ತು ಒಂದು ಡೈರಿ ಕೂಡಾ ಪತ್ತೆಯಾಗಿತ್ತು. ಇದೀಗ ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು ಈ ವೇಳೆ ಕೇವಲ ಒಂದುಲ್ಲ ಎರಡು ಫೋನ್ ಗಳನ್ನು ಪ್ರಜ್ವಲ್ ಬಳಸುತ್ತಿದ್ದರು ಎಂದು ತಿಳಿದುಬಂದಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ಕೆಲವು ದಿನಗಳಿಂದ ಚಿನ್ನದ ದರ ಇಳಿಕೆಯಾಗುತ್ತಲೇ ಇತ್ತು. ಆದರೆ ಇಂದು ಮತ್ತೆ ಚಿನ್ನದ ದರದಲ್ಲಿ ವ್ಯತ್ಯಾಸ ಕಂಡುಬಂದಿದೆ. ಪರಿಶುದ್ಧ ಚಿನ್ನದ ದರಲ್ಲಿ ಮೊನ್ನೆ ಕೊಂಚ ಏರಿಕೆಯಾಗಿತ್ತು. ಇಂದು ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಭಾರತದಲ್ಲೂ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ. ಇಂದು ಪರಿಶುದ್ಧ ಚಿನ್ನದ ದರ ಏರಿಕೆಯಾಗಿದ್ದು 1,65,140 ರೂ.ಗಳಾಗಿವೆ.
ಉತ್ತರ ಪ್ರದೇಶದ ಬರೇಲಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆದ ವಿಚಿತ್ರ ಹಾಗೂ ಆಕ್ರೋಶಭರಿತ ಘಟನೆಯೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹೌಸ್ಕೀಪಿಂಗ್ ಏಜೆನ್ಸಿ ಮೂಲಕ ಕೆಲಸಕ್ಕೆ ಸೇರಿದ್ದ ಯುವ ಪೌರಕಾರ್ಮಿಕನೊಬ್ಬ, ತನಗೆ ಬರಬೇಕಿದ್ದ ಪೂರ್ಣ ವೇತನ ಸಿಗದೇ ಶೋಷಣೆಗೊಳಗಾದ ಕಾರಣಕ್ಕೆ ನಗರ ಆರೋಗ್ಯ ಅಧಿಕಾರಿ ಎದುರೇ ಬಳೆಗಳನ್ನು ಎಸೆದು ಆಕ್ರೋಶ ಹೊರಹಾಕಿದ್ದಾನೆ.ಯುವಕನಿಗೆ ಪ್ರತಿ ತಿಂಗಳು ₹13,000 ಸಂಬಳ ನೀಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ತಿಂಗಳಿಡೀ ರಕ್ತ-ಬೆವರು ಹರಿಸಿ ದುಡಿದರೂ, ಅಂತಿಮವಾಗಿ ಆತನ ಖಾತೆಗೆ ಜಮೆಯಾಗಿದ್ದು ಕೇವಲ ₹7,500 ಮಾತ್ರ. ಉಳಿದ ಮೊತ್ತವನ್ನು ಹಿಡಿತ (Deduction) ಹೆಸರಿನಲ್ಲಿ ಕಡಿತಗೊಳಿಸಲಾಗಿತ್ತು.
ರೈಲ್ವೆ ಪ್ಲಾಟ್ಫಾರ್ಮ್ನ ತೀರಾ ಅಂಚಿನಲ್ಲಿ ತಾಯಿಯೊಂದಿಗೆ ನಡೆಯುತ್ತಿದ್ದ ಮಗುವಿನ ಕಾಲು ಇದ್ದಕ್ಕಿದ್ದಂತೆ ಜಾರಿ, ಮಗು ನೇರವಾಗಿ ರೈಲ್ವೆ ಹಳಿಗಳ ಮೇಲೆ ಬಿದ್ದಿತ್ತು. ಎದುರಿನಿಂದ ವೇಗವಾಗಿ ಬರುವ ರೈಲನ್ನು ನೋಡಿ ತಾಯಿ ದಿಕ್ಕು ತೋಚದೆ ಚೀರುತ್ತಿದ್ದರೆ, ಅಲ್ಲಿದ್ದವರ ಎದೆಬಡಿತ ನಿಂತುಹೋಗಿತ್ತು. ಇಂತಹ ಭೀಕರ ಕ್ಷಣದಲ್ಲಿ ವಿಧಿಯ ಆಟಕ್ಕೆ ಪ್ರತಿಯಾಗಿ ಮಾನವೀಯತೆ ಎದ್ದುನಿಂತಿತು. ಪ್ಲಾಟ್ಫಾರ್ಮ್ ಅಂಚಿನಲ್ಲಿ ಸಾಗುತ್ತಿದ್ದ ಮಗು ನಿಯಂತ್ರಣ ತಪ್ಪಿ ರೈಲು ಮಾರ್ಗಕ್ಕೆ ಬಿತ್ತು. ಕ್ಷಣಾರ್ಧವೂ ಯೋಚಿಸದ ವ್ಯಕ್ತಿಯೊಬ್ಬರು ತಮ್ಮ ಸ್ವಂತ ಜೀವದ ಹಂಗು ತೊರೆದು ಹಳಿಗಳ ಕಡೆಗೆ ಓಡಿದರು. ಕಣ್ಣಿಮಿನುಟುವುದರೊಳಗೆ ಮಗುವನ್ನು ಎತ್ತಿ ಪ್ಲಾಟ್ಫಾರ್ಮ್ ಮೇಲಕ್ಕೆ ತಳ್ಳಿದ ಮರುಕ್ಷಣವೇ ಭಾರಿ ವೇಗದ ರೈಲು ಆ ಜಾಗವನ್ನು ಹಾದುಹೋಯಿತು.
ತಂದೆ ಬಚ್ಚಿಟ್ಟಿದ್ದ ಬಂಡಿಯನ್ನು ಮಗನೇ ತೋರಿಸಿ ಪೊಲೀಸರಿಗೆ ನೆರವಾಗಿದ್ದಲ್ಲದೆ, ತಂದೆಯ ಅಕ್ರಮವನ್ನು ಮಗನೇ ಬಯಲು ಮಾಡಿದ ಘಟನೆಯೊಂದು ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಲ್ಲೂರು ಜಿಲ್ಲೆಯ ಅನಂತಸಾಗರದಲ್ಲಿ ಪೊಲೀಸರು ವಾಹನಗಳ ದಾಖಲೆಗಳ ಪರಿಶೀಲನೆಗಾಗಿ ಮನೆ ಮನೆಗೆ ತೆರಳಿ ತನಿಖೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಸರಿಯಾದ ದಾಖಲೆಗಳಿಲ್ಲದ ಕಾರಣ ಸುರೇಶ್ ಎಂಬ ವ್ಯಕ್ತಿ ತನ್ನ ಬಂಡಿಯನ್ನು ಪಕ್ಕದ ಗಲ್ಲಿಯ ಮನೆಯೊಂದರಲ್ಲಿ ಬಚ್ಚಿಟ್ಟಿದ್ದನು. ಮಕ್ಕಳು ದೇವರ ಸಮಾನ ಎನ್ನುತ್ತಾರೆ.
ಉತ್ತರಾಖಂಡದ ದಟ್ಟ ಅರಣ್ಯದ ಗುಹೆಯೊಂದರಿಂದ ಪ್ರಾಗೈತಿಹಾಸಿಕ ಕಾಲದ ಮಾನವನೊಬ್ಬ ಹೊರಬರುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂಬ ಸುದ್ದಿ ಇಡೀ ಜಗತ್ತಿನ ಗಮನ ಸೆಳೆದಿದೆ. ಆಧುನಿಕ ನಾಗರಿಕತೆಯಿಂದ ಬಹುದೂರದಲ್ಲಿರುವ ದಟ್ಟ ಕಾಡುಗಳು ಮತ್ತು ಹಿಮಾಲಯದ ಪರ್ವತ ಶ್ರೇಣಿಗಳ ಮರೆಯಲ್ಲಿ, ಮಾನವ ಕುಲಕ್ಕೆ ತಿಳಿಯದ ಅಪರಿಚಿತ ಜೀವಿಗಳು ಅಥವಾ ನಶಿಸಿಹೋಗಿವೆ ಎನ್ನಲಾದ ಪ್ರಾಚೀನ ಮಾನವ ತಳಿಗಳು ಇಂದಿಗೂ ಜೀವಿಸುತ್ತಿವೆಯೇ ಎಂಬ ಕುತೂಹಲಕಾರಿ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಉತ್ತರಾಖಂಡದ ಹಿಮಾಲಯನ್ ವಲಯವು ಕಡಿದಾದ ಪರ್ವತಗಳು, ಕತ್ತಲ ಗುಹೆಗಳು ಮತ್ತು ಮನುಷ್ಯರು ಕಾಲಿಡಲು ಸಾಧ್ಯವಾಗದ ದಟ್ಟ ಕಾಡುಗಳಿಂದ ಕೂಡಿದೆ.
ಮದುವೆಯ ಸಂಭ್ರಮ, ಮೇಕಪ್, ರೇಷ್ಮೆ ಸೀರೆ, ನೆರೆದಿರುವ ಸಂಬಂಧಿಕರ ನಡುವೆ ಪ್ರತಿಯೊಬ್ಬ ವಧುವಿಗೂ ಆ ದಿನ ಅತ್ಯಂತ ವಿಶೇಷ. ಆದರೆ, ತಾನು ತೊಟ್ಟಿದ್ದ ವಧುವಿನ ಅಲಂಕಾರಕ್ಕಿಂತಲೂ ಕಾಯಕವೇ ಕೈಲಾಸ ಎಂಬ ವೈದ್ಯಕೀಯ ಧರ್ಮವೇ ದೊಡ್ಡದು ಎಂಬುದನ್ನು ಸಾಬೀತುಪಡಿಸಿದ್ದಾರೆ ಕೇರಳದ ಕಣ್ಣೂರಿನ ಡಾ. ಶಿರಿನ್ ಸುಬೈರ್.ತಮ್ಮ ಮದುವೆಯ ಶುಭ ಸಮಾರಂಭದ ನಡುವೆಯೇ ತುರ್ತು ಚಿಕಿತ್ಸೆಯ ಅಗತ್ಯವಿದ್ದ ಇಬ್ಬರು ಮಹಿಳೆಯರಿಗೆ ನೆರವಾಗುವ ಮೂಲಕ ಡಾ. ಶಿರಿನ್ ಮಾನವೀಯತೆಯ ಮಹಾನ್ ಉದಾಹರಣೆಯಾಗಿ ಹೊರಹೊಮ್ಮಿದ್ದಾರೆ.ಮದುವೆಯ ಅಡುಗೆ ಹಾಗೂ ಕೇಟರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳಾ ಸಿಬ್ಬಂದಿ ಸಮಾರಂಭದ ನಡುವೆ ದಿಢೀರನೆ ಅಸ್ವಸ್ಥಗೊಂಡು ಕುಸಿದುಬಿದ್ದರು.
ಸಹಾಯಕ್ಕಾಗಿ ಕಾಯುತ್ತಿದ್ದ ಆ ನಾಯಿಯ ಆರ್ತನಾದ ಯಾರೊಬ್ಬರ ಮನಸ್ಸನ್ನೂ ಕರಗಿಸಲಿಲ್ಲ. ಆಳವಾದ ಕೊಳವೆ ಬಾವಿಯೊಳಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆ ಮೂಕಪ್ರಾಣಿಯನ್ನು ಕಂಡು ಎಲ್ಲರೂ ನೋಡಿಯೂ ನೋಡದಂತೆ ಹೊರಟುಹೋದರು. ಆದರೆ, ಒಬ್ಬ ವ್ಯಕ್ತಿಯ ಮಾನವೀಯತೆ ಮತ್ತು ಸಾಹಸ ಒಂದು ಅಮೂಲ್ಯ ಜೀವಕ್ಕೆ ಮರುಜೀವ ನೀಡಿದೆ.ಘಟನೆಯ ವಿವರಗಳ ಪ್ರಕಾರ, ನಾಯಿಯೊಂದು ಆಕಸ್ಮಿಕವಾಗಿ ತೆರೆದಿದ್ದ ಆಳವಾದ ಕೊಳವೆ ಬಾವಿಯೊಳಗೆ ಬಿದ್ದಿತ್ತು. ಬಾವಿಯ ಕತ್ತಲೆ ಮತ್ತು ಕಿರಿದಾದ ಜಾಗದಲ್ಲಿ ಚೀರುತ್ತಿದ್ದ ಆ ಪ್ರಾಣಿಯನ್ನು ರಕ್ಷಿಸಲು ಯಾರೂ ಮುಮಬರಲಿಲ್ಲ. ಪ್ರತಿಯೊಬ್ಬರೂ ತಮ್ಮದೇ ಕೆಲಸಗಳಲ್ಲಿ ನಿರತರಾಗಿದ್ದರೆ, ಆ ಜೀವ ಮಾತ್ರ ಬಾವಿಯೊಳಗೆ ನರಳುತ್ತಿತ್ತು.
ಸಶಸ್ತ್ರ ಸೀಮಾ ಬಲ್ (SSB), ಗಡಿ ಭದ್ರತಾ ಪಡೆ (BSF) ಹಾಗೂ ದೇಶದ ಇತರೆ ಭದ್ರತಾ ಪಡೆಗಳು ಯಾವುದೇ ರಾಜಕೀಯ ಪಕ್ಷ ಅಥವಾ ಅಧಿಕಾರದಲ್ಲಿರುವ ಸರ್ಕಾರದ ಸ್ವತ್ತಲ್ಲ; ಬದಲಾಗಿ ಅವು ದೇಶ ಮತ್ತು ದೇಶದ ಜನಸೇವೆಗೆ ಮುಡಿಪಾದ ಸಂಸ್ಥೆಗಳಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ "ವಿ ಆರ್ ಜೆನ್ ಝಿ" ಎಂಬ ವೀಡಿಯೊದಲ್ಲಿ ಯುವತಿಯೊಬ್ಬಳು ಭಾರತೀಯ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹವಾಗಿ ಮಾತನಾಡಿದ್ದಳು. ಈ ವೀಡಿಯೊ ವ್ಯಾಪಕ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಗೃಹ ಸಚಿವರ ಈ ಹೇಳಿಕೆ ಹೊರಬಿದ್ದಿದೆ.
ಬೆಂಗಳೂರು: ಕರ್ನಾಟಕದಾದ್ಯಂತ ಇಂದು ಮೋಡಕವಿದ ವಾತಾವರಣದೊಂದಿಗೆ ಹಲವಾರು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಭಾಗಗಳಲ್ಲಿ ಚದುರಿದಂತೆ ಮಳೆಯಾಗುವ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳುಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಮೀನುಗಾರರು ಮತ್ತು ಕರಾವಳಿ ನಿವಾಸಿಗಳು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಮಲೆನಾಡಿನ ಭಾಗಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ದಿನವಿಡೀ ತಂಪಾದ ಹವಾಮಾನವಿದ್ದು, ಸಂಜೆ ಅಥವಾ ರಾತ್ರಿಯ ವೇಳೆ ವ್ಯಾಪಕ ಮಳೆಯಾಗುವ ಮುನ್ಸೂಚನೆಯಿದೆ.
ಇಂದು ಶನಿವಾರವಾಗಿದ್ದು ಶನಿ ದೋಷವಿದ್ದರೆ ಇಂದು ತಪ್ಪದೇ ಶನೈಶ್ಚರ ನಾಮ ಸ್ತುತಿ ಸ್ತೋತ್ರವನ್ನು ಭಕ್ತಿಯಿಂದ ಪಠಿಸಿ. ಕನ್ನಡದಲ್ಲಿ ಇಲ್ಲಿದೆ.ಶ್ರೀ ಶನೈಶ್ಚರ ನಾಮ ಸ್ತುತಿಃ (ಭವಿಷ್ಯಪುರಾಣೋಕ್ತಂ) ಶ್ರೀಶನಿರುವಾಚ | ಕ್ರೋಡಂ ನೀಲಾಂಜನಪ್ರಖ್ಯಂ ನೀಲವರ್ಣಸಮಸ್ರಜಮ್ | ಛಾಯಾಮಾರ್ತಂಡಸಂಭೂತಂ ನಮಸ್ಯಾಮಿ ಶನೈಶ್ಚರಮ್ || ೧ || ನಮೋಽರ್ಕಪುತ್ರಾಯ ಶನೈಶ್ಚರಾಯ ನೀಹಾರವರ್ಣಾಂಚಿತ ಮೇಚಕಾಯ | ಶ್ರುತ್ವಾ ರಹಸ್ಯಂ ಭವಕಾಮದಶ್ಚ ಫಲಪ್ರದೋ ಮೇ ಭವ ಸೂರ್ಯಪುತ್ರ || ೨ || ನಮೋಽಸ್ತು ಪ್ರೇತರಾಜಾಯ ಕೃಷ್ಣದೇಹಾಯ ವೈ ನಮಃ | ಶನೈಶ್ಚರಾಯ ಕ್ರೂರಾಯ ಶುದ್ಧಬುದ್ಧಿಪ್ರದಾಯಿನೇ || ೩ || ಯ ಏಭಿರ್ನಾಮಭಿಃ ಸ್ತೌತಿ ತಸ್ಯ ತುಷ್ಟೋ ಭವಾಮ್ಯಹಮ್ |
ಬೆಂಗಳೂರು: ಕರ್ನಾಟಕದ ಅಪಾರ್ಟ್ಮೆಂಟ್ ನಿವಾಸಿಗಳು ಮತ್ತು ಮಾಲೀಕರಿಗೆ ಬಹುಕಾಲದಿಂದ ಅಗತ್ಯವಿದ್ದ ಸ್ಪಷ್ಟ ಕಾನೂನು ಚೌಕಟ್ಟು ಒದಗಿಸಲು ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ-2026 ಸೇರಿದಂತೆ ಪ್ರಮುಖ ಮಸೂದೆಗಳನ್ನು ಕರ್ನಾಟಕ ವಿಧಾನಸಭೆಯು ಅಂಗೀಕರಿಸಿದೆ.ಈ ಹೊಸ ಮಸೂದೆಯು ಅಪಾರ್ಟ್ಮೆಂಟ್ ಮಾಲೀಕತ್ವ, ಸಾಮಾನ್ಯ ಪ್ರದೇಶಗಳ ನಿರ್ವಹಣೆ, ಅಪಾರ್ಟ್ಮೆಂಟ್ ನಿವಾಸಿಗಳ ಸಂಘ ರಚನೆ ಮತ್ತು ಅವರ ಹಕ್ಕುಗಳ ನಿರ್ವಹಣೆಗೆ ಸಂಬಂಧಿಸಿದ ಗೊಂದಲಗಳನ್ನು ನಿವಾರಿಸಿ, ಪಾರದರ್ಶಕತೆಯನ್ನು ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ಟಾಕ್ಸಿಕ್ ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾ ಬಿಡುಗಡೆಗೂ ಮುನ್ನವೇ ಹಲವಾರು ದೊಡ್ಡ ದಾಖಲೆಗಳನ್ನು ಬರೆಯುವ ಮೂಲಕ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸಿದೆ.ಚಿತ್ರದ ಇಂಡಿಯನ್-ಲ್ಯಾಂಗ್ವೇಜ್ (ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ) ವಲಯದ ಸಾಗರೋತ್ತರ ವಿತರಣಾ ಹಕ್ಕುಗಳು ಬರೋಬ್ಬರಿ ₹105 ಕೋಟಿಗೆ (ಫಾರ್ಸ್ ಫಿಲ್ಮ್ ಸಂಸ್ಥೆಯ ಮೂಲಕ) ಮಾರಾಟವಾಗುವ ಮೂಲಕ ಭಾರಿ ದೊಡ್ಡ ಅಂತರರಾಷ್ಟ್ರೀಯ ದಾಖಲೆ ಬರೆದಿದೆ.ಬಿಡುಗಡೆಗೆ ದಿನಗಳು ಬಾಕಿ ಇರುವಂತೆ ಚಿತ್ರದ ಮುಂಗಡ ಬುಕಿಂಗ್ ಅತ್ಯಂತ ಜೋರಾಗಿ ಸಾಗಿದ್ದು, ಭಾರತದಲ್ಲೇ ಲಕ್ಷಾಂತರ ಟಿಕೆಟ್ಗಳು ಮಾರಾಟವಾಗಿ ಕೋಟ್ಯಂತರ ರೂಪಾಯಿಗಳ ಕಲೆಕ್ಷನ್ ಮೂಲಕ ಮುನ್ನುಗ್ಗುತ್ತಿದೆ.
ಬೆಂಗಳೂರು: ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಡೇಟ್ ಫಿಕ್ಸ್ ಆಗಿದ್ದು, ಶೋಗೆ ಸಂಬಂಧಿಸಿದಂತೆ ವಿಭಿನ್ನ ಪ್ರೋಮೊ ಬಿಡುಗಡೆಯಾಗಿದೆ.ಈ ಬಾರಿ ಬಿಗ್ಬಾಸ್ ಕೊಂಚ ಮುಂಚಿತವಾಗಿ ಅಂದರೆ ಸೆಪ್ಟೆಂಬರ್ 6 ರಂದು ಅದ್ದೂರಿಯಾಗಿ ಪ್ರಸಾರ ಆರಂಭಿಸಲಿದೆ. ಎಂದಿನಂತೆ ಈ ಬಾರಿಯೂ ಹ್ಯಾಟ್ರಿಕ್ ಹೀರೋ ಕಿಚ್ಚ ಸುದೀಪ್ ಅವರೇ ಶೋ ಅನ್ನು ನಿರೂಪಿಸಲಿದ್ದಾರೆ. ಈ ಸೀಸನ್ನಲ್ಲಿ ಸ್ಪರ್ಧಿಗಳು ಬಿಗ್ಬಾಸ್ ಮನೆ ಪ್ರವೇಶಿಸುವುದಕ್ಕೂ ಮುನ್ನ 'ಅಗ್ನಿಪರೀಕ್ಷೆ' ಎಂಬ ಕಠಿಣ ಹಂತವನ್ನು ಎದುರಿಸುತ್ತಿದ್ದಾರೆ. ಸಾಮಾನ್ಯ ಹಾಗೂ ಸೆಲೆಬ್ರಿಟಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಭರ್ಜರಿಯಾಗಿ ನಡೆಯುತ್ತಿದೆ.
ಒಂದು ಸಣ್ಣ ಹಠ, ಹದಿಹರೆಯದ ಮಗನ ಕ್ಷಣಿಕ ಕೋಪ ಇಡೀ ಕುಟುಂಬವನ್ನೇ ಸಂಪೂರ್ಣವಾಗಿ ಬಲಿ ಪಡೆದ ಅತ್ಯಂತ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ಛತ್ರಪತಿ ಶಂಭಾಜಿನಗರದಲ್ಲಿ ನಡೆದಿದೆ. ಮೊಬೈಲ್ ಫೋನ್ಗಾಗಿ ಶುರುವಾದ ಸಣ್ಣದೊಂದು ವಾಗ್ವಾದ ಕೊನೆಗೆ ಮೂವರ ಸವಿನೆನಪುಗಳನ್ನು ಮಾತ್ರ ಉಳಿಸಿ, ಇಡೀ ಕುಟುಂಬವನ್ನೇ ಇತಿಹಾಸದ ಪುಟಕ್ಕೆ ತಳ್ಳಿದೆ.ಘಟನೆಯ ಹಿನ್ನೆಲೆ: ಒಂದು ಸಣ್ಣ ಹಠ ಮತ್ತು ದುರಂತಛತ್ರಪತಿ ಶಂಭಾಜಿನಗರದ 19 ವರ್ಷದ ಯುವಕನೊಬ್ಬ ತನಗೆ ಹೊಸ ಮೊಬೈಲ್ ಫೋನ್ ಕೊಡಿಸುವಂತೆ ಹೆತ್ತವರ ಬಳಿ ಹಠ ಹಿಡಿದಿದ್ದನು. ಆದರೆ, ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಅರಿತ ತಾಯಿ, "ಮಗನೇ, ಸದ್ಯಕ್ಕೆ ನಮ್ಮ ಬಳಿ ಹಣವಿಲ್ಲ. ಆಮೇಲೆ ಕೊಡಿಸುತ್ತೇವೆ" ಎಂದು ಸಮಾಧಾನ ಪಡಿಸಲು ಯತ್ನಿಸಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರದ ಬಲಾವಣೆಗೆ ರಾಜ್ಯ ಸರ್ಕಾರ ಹೊಸ ಹೆಜ್ಜೆಯಿಟ್ಟಿದೆ. ರಾಜ್ಯದ 500 ಸರ್ಕಾರಿ ಶಾಲೆಗಳನ್ನು ಅತ್ಯುತ್ತಮ ಸೌಲಭ್ಯಗಳೊಂದಿಗೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಒಪ್ಪಂದಕ್ಕೆ ಸಹಿ ಮಾಡಿವೆ. 500 ಸರಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗಳಾಗಿ ಅಭಿವೃದ್ಧಿಪಡಿಸಲು ₹ 1,750 ಕೋಟಿ ನೆರವು ಘೋಷಿಸಿರುವ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಜೊತೆ ಕೈಜೋಡಿಸಿದೆ.ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ ಹಿರಿಯ ಮಾಧ್ಯಮಿಕ ಹಂತದವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ, ಆಧುನಿಕ ತರಗತಿ ಕೊಠಡಿಗಳು, ಪ್ರಯೋಗಾಲಯಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ.
ಬೆಂಗಳೂರು : ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನ ಮಂಡಲ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಬಿ.ನಾಗೇಂದ್ರಗೆ ಹೆಚ್ಚುವರಿ ಆಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಇಲಾಖೆ ಜವಾಬ್ದಾರಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಂಚಿ ಹೊಸ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಐದನೇ ದಿನವೂ ವಿಪಕ್ಷಗಳಿಂದ ಪ್ರತಿಭಟನೆ ಮುಂದುವರೆದಿದೆ. ಇದರ ನಡುವೆ, ಸರಕಾರ ನಾಗೇಂದ್ರಗೆ ಹಾಲಿ ಯೋಜನೆ ಮತ್ತು ಸಾಂಖ್ಯಿಕ ಖಾತೆಯ ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಇಲಾಖೆ ಜವಾಬ್ದಾರಿ ನೀಡಲಾಗಿದ್ದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಬೆಂಗಳೂರು: ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ವಾಲ್ಮೀಕಿ ನಿಗಮದ ಅಕ್ರಮ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಅಥವಾ ವಜಾಗೆ ಪಟ್ಟು ಹಿಡಿದು ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯು ತೀವ್ರಗೊಂಡಿದೆ. ಸತತ 5 ನೇ ದಿನವೂ ವಿಧಾನಸಭೆ ಕಲಾಪಕ್ಕೆ ಅಡ್ಡಿ ಉಂಟಾಗಿದೆ.ವಾಲ್ಮೀಕಿ ನಿಗಮದ ಹಣಕಾಸು ದುರ್ಬಳಕೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ತಕ್ಷಣವೇ ವಜಾಗೊಳಿಸಬೇಕೆಂದು ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಕಲಾಪದ ಆರಂಭದಿಂದಲೂ ವಿರೋಧ ಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದರಿಂದ ವಿಧಾನಸಭೆ ಮತ್ತು ಪರಿಷತ್ನಲ್ಲಿ ಸತತ ಐದನೇ ದಿನವೂ ಕಲಾಪದ ಕಾರ್ಯಕಲಾಪಗಳಿಗೆ ಅಡ್ಡಿಯಾಗಿ ಗದ್ದಲದ ವಾತಾವರಣ ನಿರ್ಮಾಣವಾಗಿದೆ.
ಸಿಲಿಗುರಿ, ಪಶ್ಚಿಮ ಬಂಗಾಳ: ಮೂರು ನೂತನ ಅಪರಾಧಿಕ ಕಾಯ್ದೆಗಳ ಕುರಿತಾದ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಇಲ್ಲಿ ಕೇಡರ್ ಆಡಳಿತವಿತ್ತು. ಕಮ್ಯುನಿಸ್ಟರು ಅಧಿಕಾರದಲ್ಲಿದ್ದಾಗಲೂ ಕೇಡರ್ ಆಡಳಿತವಿತ್ತು, ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಗೂಂಡಾಗಳ ಕೇಡರ್ ಆಡಳಿತವಿತ್ತು. ಆದರೆ ಈಗ ಸುವೇಂದು ಅಧಿಕಾರಿ ನಾಯಕತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಕಾನೂನಿನ ಆಡಳಿತ ಸ್ಥಾಪನೆಯಾಗಿದೆ. ಇದೊಂದು ದೊಡ್ಡ ಪರಿವರ್ತನೆ.ಪಶ್ಚಿಮ ಬಂಗಾಲ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ ಈ ಹಿಂದಿನ ಟಿಎಂಸಿ ಸರ್ಕಾರ ಮತ್ತು ಮಾಜಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ, ಜವಾಹರ ಲಾಲ್ ನೆಹರು ಅವರು ಪ್ರಧಾನಿಯಾದಾಗಿನಿಂದ ಕಾಂಗ್ರೆಸ್ ಭ್ರಷ್ಟಾಚಾರ ಮಾಡುತ್ತಲೇ ಬಂದಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಆರೋಪಿಸಿದ್ದಾರೆ.ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆಹರು ಅವರು ಪ್ರಧಾನಿಯಾದಾಗ 1948 ರಲ್ಲಿ ಜೀಪ್ ಹಗರಣ ಆಗಿತ್ತು. ಅದೇ ಕಾಂಗ್ರೆಸ್ನ ಭ್ರಷ್ಟಾಚಾರದ ಉಗಮ. ನೆಹರು ಅವರೇ ಭ್ರಷ್ಟಾಚಾರದ ಪಿತಾಮಹ. ಅಂದಿನಿಂದ ಇಂದಿನ ವಾಲ್ಮೀಕಿ ನಿಗಮದ ಹಗರಣದವರೆಗೆ ಕಾಂಗ್ರೆಸ್ ಭ್ರಷ್ಟಾಚಾರದಲ್ಲೇ ತೊಡಗಿದೆ ಎಂದು ದೂರಿದರು.
ದಕ್ಷಿಣ ಭಾರತೀಯ ಚಿತ್ರರಂಗದ ದ್ರುವತಾರೆ, ಪದ್ಮಶ್ರೀ ಪುರಸ್ಕೃತರಾದ 'ಸಾಹುಕಾರ್' ಜಾನಕಿ (Sowcar Janaki) ಅವರು ಕನ್ನಡ ಚಿತ್ರರಂಗಕ್ಕೂ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಹುಬೇಡಿಕೆಯ ನಟಿಯಾಗಿದ್ದರೂ, ಕನ್ನಡದಲ್ಲಿ ಅವರು ಅಭಿನಯಿಸಿದ ಸಿನಿಮಾಗಳು ಮತ್ತು ವಿಶಿಷ್ಟ ಪಾತ್ರಗಳು ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿವೆ.ವರನಟ ಡಾ. ರಾಜ್ಕುಮಾರ್ ಜೊತೆಗಿನ ಯಶಸ್ವಿ ಜೋಡಿ1950ರ ದಶಕದಿಂದಲೇ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸಾಹುಕಾರ್ ಜಾನಕಿ ಅವರು ವರನಟ ಡಾ. ರಾಜ್ಕುಮಾರ್ ಅವರೊಂದಿಗೆ ಪ್ರಮುಖ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು: ದೇವಕನ್ನಿಕಾ (1954): ಬಿ.ಆರ್. ಪಂತುಲು ನಿರ್ಮಾಣದ ಈ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಕನ್ನಡ ಸೇರಿದಂತೆ ದಕ್ಷಿಣ ಭಾರತದ ಬಹುಭಾಷಾ ಹಿರಿಯ ನಟಿ ಸಾಹುಕಾರ್ ಜಾನಕಿ (94) ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಏಳು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ಅಭಿನಯಿಸಿದ ನೂರಾರು ವಿಶಿಷ್ಟ ಪಾತ್ರಗಳ ಮೂಲಕ ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದರು.ಚಿತ್ರರಂಗದ ಪ್ರಯಾಣ ಮತ್ತು ಸಾಧನೆ:1950ರಲ್ಲಿ ಬಿಡುಗಡೆಯಾದ ತೆಲುಗಿನ ಸಾಹುಕಾರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ತಮ್ಮ ಮೊದಲ ಸಿನಿಮಾದ ಹೆಸರನ್ನೇ ಸಾಹುಕಾರ್ ಜಾನಕಿ' ಎಂದು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡರು. ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರದ್ದಾಗಿದೆ.
ಚೆನ್ನೈ: ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ಮತ್ತು ಪ್ರತಿಭಾವಂತ ಬಹುಭಾಷಾ ನಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಹುಕಾರ್ ಜಾನಕಿ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.ಜಾನಕಿ ಅವರು ಎಲ್.ವಿ. ಪ್ರಸಾದ್ ನಿರ್ದೇಶನದ 1950ರ ತೆಲುಗು ಚಲನಚಿತ್ರ ಸಾಹುಕಾರ್ ಸಿನಿಮಾದ ಮೂಲಕ ನಟನಾ ಲೋಕಕ್ಕೆ ಪದಾರ್ಪಣೆ ಮಾಡಿದರು. ಈ ಚಿತ್ರದ ಯಶಸ್ಸಿನಿಂದಾಗಿ ಅವರ ಹೆಸರಿನೊಂದಿಗೆ ಸಾಹುಕಾರ್ ಎಂಬ ಬಿರುದು ಶಾಶ್ವತವಾಗಿ ಉಳಿಯಿತು.ಸುಮಾರು ಏಳು ದಶಕಗಳ ಕಾಲ ಸಕ್ರಿಯರಾಗಿದ್ದ ಅವರು, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಒಟ್ಟು 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿರುವ ಕುರಿತು ವರದಿಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಗಾಯಗೊಂಡಿದ್ದ ಯುವಕನೊಬ್ಬನಿಗೆ ನ್ಯಾಯ ದೊರಕಿಸಿಕೊಡುವ ಹಾಗೂ ಈ ಸಂಬಂಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾ ಮೆರವಣಿಗೆಯಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಸಾಹಿಲ್ ಲೋಚಬ್ ಕೂಡ ರಾಹುಲ್ ಗಾಂಧಿ ಅವರೊಂದಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.
ನವದೆಹಲಿ: ಭಾರತದ ಪ್ರತಿಭಾವಂತ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ಜೋಡಿಯಾದ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು ತಮ್ಮ ಶ್ರೇಷ್ಠ ಆಟದ ಮೂಲಕ ವಿಶ್ವ ಬ್ಯಾಡ್ಮಿಂಟನ್ನಲ್ಲಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿರುವುದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಬಿಡಬ್ಲ್ಯೂಎಫ್ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ನ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಮಹಿಳಾ ಡಬಲ್ಸ್ ಜೋಡಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಗೆಲುವು ಸಾಧಿಸಿ ಸೆಮಿಫೈನಲ್ಗೆ ಲಗ್ಗೆಯಿಟ್ಟರು. ಗೆಲುವು ಸಾಧಿಸುತ್ತಿದ್ದಂತೆ ಭಾರತದ ಆಟಗಾರ್ತಿಯರು ಸಂತಸದಿಂದ ಕಣ್ಣೀರಿಟ್ಟರು.ಈ ಮೂಲಕ ಭಾರತದ 15 ವರ್ಷಗಳ ಮಹಿಳಾ ಡಬಲ್ಸ್ ಪದಕದ ಕಾಯುವಿಕೆಯನ್ನು ಕೊನೆಗೊಳಿಸಿದರು. ನಾಲ್ಕನೇ ಶ್ರೇಯಾಂಕದ ಜಿಯಾ ಯಿ ಫ್ಯಾನ್ ಮತ್ತು ಜಾಂಗ್ ಶು ಕ್ಸಿಯಾನ್ ಅವರನ್ನು ಮೂರು ಪಂದ್ಯಗಳಲ್ಲಿ ಸೋಲಿಸಿ ಸೆಮಿಫೈನಲ್ ತಲುಪಿದರು.
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂ ಗೀತೆಯ ಪೂರ್ಣ ಆವೃತ್ತಿಗೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವಮಾನ ಮಾಡಿದ್ದಾರೆ ಎಂಬ ಆರೋಪವು ದೇಶಾದ್ಯಂತ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.ಧ್ವಜಾರೋಹಣದ ಬಳಿಕ 'ವಂದೇ ಮಾತರಂ' ಗೀತೆಯ ಪೂರ್ಣ ಆವೃತ್ತಿಯನ್ನು ನುಡಿಸುತ್ತಿದ್ದಾಗ, ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಕದಲ್ಲಿದ್ದವರ ಬಳಿ ಮಾತನಾಡುತ್ತಾ ಕೈಸನ್ನೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ಕೆಲವು ದಿನಗಳಿಂದ ಚಿನ್ನದ ದರ ಇಳಿಕೆಯಾಗುತ್ತಲೇ ಇತ್ತು. ಆದರೆ ಇಂದು ಮತ್ತೆ ಚಿನ್ನದ ದರದಲ್ಲಿ ವ್ಯತ್ಯಾಸ ಕಂಡುಬಂದಿದೆ. ಪರಿಶುದ್ಧ ಚಿನ್ನದ ದರಲ್ಲಿ ಮೊನ್ನೆ ಕೊಂಚ ಇಳಿಕೆಯಾಗಿತ್ತು. ಇಂದು ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಭಾರತದಲ್ಲೂ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ. ಇಂದು ಪರಿಶುದ್ಧ ಚಿನ್ನದ ದರ ಏರಿಕೆಯಾಗಿದ್ದು 1,64,520 ರೂ.ಗಳಾಗಿವೆ.
ಕೇರಳದಲ್ಲಿ ಚಾಲಕನೊಬ್ಬನ ಅತಿಯಾದ ನಿರ್ಲಕ್ಷ್ಯದಿಂದಾಗಿ ರಸ್ತೆಯಲ್ಲಿ ಪ್ರಯಾಣಿಕರು ಹಾಗೂ ವಾಹನ ಸವಾರರು ತೀವ್ರ ಸಂಕಟ ಎದುರಿಸಿದ ಘಟನೆಯೊಂದು ನಡೆದಿದೆ. ಚಾಲನೆ ಮಾಡುತ್ತಿರುವಾಗಲೇ ಚಾಲಕ ನಿದ್ರೆಗೆ ಜಾರಿದ್ದರಿಂದ ಕಾರು ರಸ್ತೆಯ ಮಧ್ಯದಲ್ಲೇ ದಿಢೀರ್ ಆಗಿ ನಿಂತುಹೋಗಿದೆ. ಇದರಿಂದಾಗಿ ಆ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಕಾರು ಏಕಾಏಕಿ ನಿಂತಿದ್ದನ್ನು ಕಂಡು ಆತಂಕಗೊಂಡ ಹಿಂಬದಿಯ ವಾಹನ ಸವಾರರು ಹಾಗೂ ಸಾರ್ವಜನಿಕರು ಹತ್ತಿರ ಬಂದು ನೋಡಿದಾಗ, ಚಾಲಕ ಗಾಢ ನಿದ್ರೆಯಲ್ಲಿದ್ದುದು ತಿಳಿದುಬಂದಿದೆ. ಎಷ್ಟೇ ಕೂಗಿದರೂ ಆತ ಏಳದಿದ್ದಾಗ, ಕೊನೆಗೆ ಸಾರ್ವಜನಿಕರೆಲ್ಲ ಸೇರಿ ಕಾರನ್ನು ಜೋರಾಗಿ ಅಲ್ಲಾಡಿಸಿ (ಆಡಿಸಿ) ಆತನನ್ನು ಎಚ್ಚರಿಸಿದ್ದಾರೆ.
ಲ್ಯಾಪ್ ಟಾಪ್ ತೊಡೆ ಮೇಲೆ ಇಟ್ಟುಕೊಂಡು ಕೆಲಸ ಮಾಡಿದ್ರೆ ಪುರುಷರಲ್ಲಿ ಬಂಜೆತನ ಬರುತ್ತಾ ಎಂದು ಕೆಲವರಿಗೆ ಅನುಮಾನಗಳಿವೆ. ಲ್ಯಾಪ್ ಟಾಪ್ ನ್ನು ತೊಡೆ ಮೇಲೆ ಇಟ್ಟುಕೊಂಡು ಕೆಲಸ ಮಾಡುವುದು ಪುರಷರಿಗೆ ಎಷ್ಟು ಅಪಾಯಕಾರಿ ಇಲ್ಲಿದೆ ನೋಡಿ ವಿವರ.ಹಲವು ಸಂಶೋಧನೆಗಳ ಪ್ರಕಾರ ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಂಡು ಕೆಲಸ ಮಾಡುವುದರಿಂದ ಶಾಶ್ವತ ಬಂಜೆತನ ಬರುವ ಸಮಸ್ಯೆ ಕಡಿಮೆ. ಆದರೆ ಈ ರೀತಿ ಕೆಲಸ ಮಾಡುವುದರಿಂದ ಪುರುಷರಲ್ಲಿ ವೀರ್ಯಾಣುವಿನ ಗುಣಮಟ್ಟ ಮತ್ತು ಸಂಖ್ಯೆ ಕಡಿಮೆಯಾಗುವ ಅಪಾಯವಿದೆ. ಆರೋಗ್ಯಕರ ವೀರ್ಯ ಉತ್ಪಾದನೆಗೆ (ಸ್ಪರ್ಮಟೋಜೆನೆಸಿಸ್), ವೃಷಣಗಳು ನಿಮ್ಮ ದೇಹದ ಉಳಿದ ಭಾಗಗಳಿಗಿಂತ ಸುಮಾರು 2°C ನಿಂದ 4°C ವರೆಗೆ ತಂಪಾಗಿರಬೇಕು.
ಇತ್ತೀಚಿನ ದಿನಗಳಲ್ಲಿ ಮದುವೆ ಪ್ರಸ್ತಾಪಗಳಲ್ಲಿ ಕೇವಲ ಜಾತಿ, ಜಾತಕ, ಮತ್ತು ವಾರ್ಷಿಕ ಆದಾಯ (ಪ್ಯಾಕೇಜ್) ಮಾತ್ರವಲ್ಲದೆ, ವ್ಯಕ್ತಿಗಳ ರಾಜಕೀಯ ಸಿದ್ಧಾಂತಗಳು ಮತ್ತು ಆಲೋಚನಾ ವಿಧಾನಗಳು ಕೂಡ ಎಷ್ಟು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದಕ್ಕೆ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ವಾರ್ಷಿಕ ₹40 ಲಕ್ಷ ದುಡಿಯುವ ಹಾಗೂ ನೋಡಲು ಆಕರ್ಷಕವಾಗಿದ್ದ ಯುವಕನ ಮದುವೆ ಪ್ರಸ್ತಾಪವನ್ನು ಯುವತಿಯೊಬ್ಬಳು 'ರಾಹುಲ್ ಗಾಂಧಿ' ಅವರ ಹೆಸರಿನ ಕಾರಣಕ್ಕೆ ನೇರವಾಗಿ ತಿರಸ್ಕರಿಸಿದ್ದಾಳೆ.ಸಾಮಾಜಿಕ ಜಾಲತಾಣವಾದ 'ಎಕ್ಸ್'ನಲ್ಲಿ (X) ಆರೂಹಿ ರೆಡ್ಡಿ ಎಂಬ ಯುವತಿ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಆಕೆಗೆ ಇತ್ತೀಚೆಗೆ ಮದುವೆಯ ಪ್ರಪೋಸಲ್ ಬಂದಿತ್ತು.
ಬೆಂಗಳೂರು: ಗೀತು ಮೋಹನ್ದಾಸ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ಅಪ್ಸ್ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ಗೆ ವಿಶ್ವದಾದ್ಯಂತ ಅದ್ಭುತವಾದ ಮತ್ತು ಅತಿ ದೊಡ್ಡ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭಾರತದಲ್ಲಿ ಅಧಿಕೃತ ಮುಂಗಡ ಬುಕಿಂಗ್ ಆರಂಭವಾಗುವುದಕ್ಕೂ ಮುನ್ನವೇ, ಅಮೆರಿಕ ಸೇರಿದಂತೆ ಕೆಲವೊಂದು ವಿದೇಶಿ ಮಾರುಕಟ್ಟೆಗಳಲ್ಲಿ ಪ್ರಿ-ಸೇಲ್ಸ್ ಮೂಲಕವೇ ಚಿತ್ರವು ಲಕ್ಷಾಂತರ ಡಾಲರ್ಗಳ ಟಿಕೆಟ್ಗಳನ್ನು ಮಾರಾಟ ಮಾಡಿ ಹೊಸ ದಾಖಲೆ ಸೃಷ್ಟಿಸುತ್ತಿದೆ. ದೇಶಾದ್ಯಂತ ಚಿತ್ರದ ಮುಂಗಡ ಬುಕಿಂಗ್ ಪ್ರಕ್ರಿಯೆಯು ಅಧಿಕೃತವಾಗಿ ತೆರೆದುಕೊಂಡಿದ್ದು, ಫ್ಯಾನ್ಸ್ಗಳಿಂದ ಮುಗಿಬಿದ್ದು ಟಿಕೆಟ್ ಕಾಯ್ದುಕೊಳ್ಳುವ ಪ್ರಯತ್ನ ನಡೆಯುತ್ತಿದೆ.
ರಾಜಸ್ಥಾನದ ಜೈಪುರ ಸಮೀಪದ ರಾಂಪುರ-ಕನ್ವರ್ಪುರ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಮೂಲಸೌಕರ್ಯ ಹಾಗೂ ಸ್ಥಿತಿಗತಿಯನ್ನು ಪರಿಶೀಲಿಸಲು ತೆರಳಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಮುಖಂಡರು ಮತ್ತು ವಕ್ತಾರ ಆಶುತೋಷ್ ರಾಂಕಾ ಅವರ ಮೇಲೆ ದಾಳಿ ನಡೆದಿದೆ. ಶಾಲೆಯನ್ನು ಪರಿಶೀಲಿಸಲು ಆಗಮಿಸಿದಾಗ ಸ್ಥಳದಲ್ಲಿದ್ದವರು ಮತ್ತು ಗ್ರಾಮಸ್ಥರು ಎಂದು ಹೇಳಲಾದ ಗುಂಪು ಅವರನ್ನು ತಡೆದು, ವಾಹನಗಳನ್ನು ಜಖಂಗೊಳಿಸಿ ಓಡಿಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ವರದಿಯ ಪ್ರಕಾರ, ಜೈಪುರದ ಸರ್ಕಾರಿ ಶಾಲೆಯೊಂದು ದನದ ಕೊಟ್ಟಿಗೆಯಂತಹ ಜಾಗದಲ್ಲಿ ನಡೆಯುತ್ತಿರುವುದನ್ನು ಪರಿಶೀಲಿಸಲು CJP ತಂಡ ತೆರಳಿತ್ತು.
ಮುಂಬೈ: ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಾವತ್ ಮತ್ತು ಯೋಗ ಗುರು ಬಾಬಾ ರಾಮ್ದೇವ್ ನಡುವೆ ತೀವ್ರ ಮಾತಿನ ಸಮರ ಏರ್ಪಟ್ಟಿದೆ. ಕಂಗನಾ ರಾವತ್ ಅವರ 'ಜೆನ್-ಝಡ್' ಮತ್ತು ಯುವಕರ ಕುರಿತಾದ ವಿವಾದಾತ್ಮಕ ಹೇಳಿಕೆಗೆ ಬಾಬಾ ರಾಮ್ದೇವ್ ನೀಡಿದ್ದ ಪ್ರತಿಕ್ರಿಯೆಗೆ ಕಂಗನಾ ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ ಕಂಗನಾ ಅವರು ಯುವಕರು ಮತ್ತು ಕೆಲ ಮಹಿಳೆಯರ ಪ್ರತಿಭಟನೆ ಹಾಗೂ ಜೀವನಶೈಲಿಯನ್ನು ಟೀಕಿಸಿ, ಅವರನ್ನು 'ಜನರೇಷನ್ ಗಟರ್' ಎಂದು ಕರೆದಿದ್ದರು. ಈ ಹೇಳಿಕೆ ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಬೆಂಗಳೂರು: ಭ್ರಷ್ಟ ಸಚಿವ ನಾಗೇಂದ್ರರ ರಾಜೀನಾಮೆ ವಿಚಾರದಲ್ಲಿ ಸರಕಾರದ ಮೊಂಡುತನವನ್ನು ಗಮನಿಸಿದರೆ ಈ ಸರಕಾರ ಮತ್ತು ಕಾಂಗ್ರೆಸ್ ಪಕ್ಷ ಇರುವುದೇ ಭ್ರಷ್ಟರಿಂದ, ಭ್ರಷ್ಟರಿಗಾಗಿ ಎಂಬುದು ಸಾಬೀತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಶಾಸಕರ ಭವನದ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರು: ಬಿ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಇಂದೂ ವಿಪಕ್ಷ ಬಿಜೆಪಿ ಪ್ರತಿಭಟನೆ ಬಿರುಸುಗೊಳಿಸಿದೆ. ಇಂದು ಬಿಜೆಪಿ ನಾಯಕರು ಕಪ್ಪು ಟಿ ಶರ್ಟ್ ಧರಿಸಿ ವಿಧಾನಸೌಧಕ್ಕೆ ನುಗ್ಗಲು ಪ್ರಯತ್ನಿಸಿದ್ದಾರೆ. ವಿಧಾನಸೌಧಕ್ಕೆ ಘೋಷಣೆಗಳನ್ನು ಕೂಗುತ್ತಾ ಕಾಲ್ನಡಿಗೆಯಲ್ಲಿ ಬಂದ ಬಿಜೆಪಿ ನಾಯಕರು ಬಳಿಕ ಸದನಕ್ಕೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಮಾರ್ಷಲ್ ಗಳು ಅವರನ್ನು ತಡೆಯುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ತೀವ್ರ ವಾಗ್ವಾದ ನಡೆದಿದೆ. ಆರ್ ಅಶೋಕ್, ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಘೋಷಣೆ ವಾಕ್ಯಗಳಿರುವ ಕಪ್ಪು ಬಣ್ಣದ ಟಿ ಶರ್ಟ್ ಧರಿಸಿ ಬಂದಿದ್ದಾರೆ.
ಬೆಂಗಳೂರು: ಮಗಳು ರಿಷಿಕಾ ಸಿಂಗ್ ಟಾಕ್ಸಿಕ್ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಸಿನಿಮಾ ಬಗ್ಗೆ, ಯಶ್ ಬಗ್ಗೆ ಹೀನಾಮಾನವಾಗಿ ಕಾಮೆಂಟ್ ಮಾಡಿದ್ದರ ಬಗ್ಗೆ ತಂದೆ, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನನಗೂ ಅದಕ್ಕೂ ಸಂಬಂಧವೇ ಇಲ್ಲ ಎಂದಿದ್ದಾರೆ. ಟಾಕ್ಸಿಕ್ ಸಿನಿಮಾ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ರಿಷಿಕಾ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮನೆಯಲ್ಲಿ ಹೆಂಡ್ತಿ ಇಟ್ಟುಕೊಂಡು ಪ್ಯಾಂಟ್ ಬಿಚ್ಚೋ ಸೀನ್ ಮಾಡ್ತೀಯಾ ಕಂದ ಎಂದು ವ್ಯಂಗ್ಯ ಮಾಡಿದ್ದರು. ಅವರ ವಿಡಿಯೋಗಳಿಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಆಡಳಿತ ಮತ್ತು ನೀತಿ ನಿರೂಪಣೆಯಲ್ಲಿ ಯುವಜನತೆಯ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರದ ಉನ್ನತಾಧಿಕಾರಿಗಳು, ಸಚಿವಾಲಯಗಳು ಮತ್ತು ವಿಶ್ವವಿದ್ಯಾಲಯಗಳು ಯುವಜನರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಅವರು ಈ ಮಹತ್ವದ ನಿರ್ದೇಶನ ನೀಡಿದ್ದಾರೆ.ಹೊಸ ಆಲೋಚನೆಗಳಿಗೆ ಸಾರ್ವಜನಿಕ ವೇದಿಕೆ:ಸರ್ಕಾರದ ವಿವಿಧ ಇಲಾಖೆಗಳು ಹಾಗೂ ವಿಶ್ವವಿದ್ಯಾಲಯಗಳು ಯುವಜನರೊಂದಿಗೆ ನೇರ ಸಂವಾದ ಬೆಳೆಸುವುದರಿಂದ ಸಂಪ್ರದಾಯಬದ್ಧವಲ್ಲದ, ಹೊಸ ಮತ್ತು ನವೀನ ಆಲೋಚನೆಗಳು ಆಡಳಿತಕ್ಕೆ ಸಿಗಲಿವೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ವಿಧಾನಸಭೆಯಲ್ಲಿ ಪೌರಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಖಾಸಗಿ ರಸ್ತೆಗಳು ಹಾಗೂ ಚರಂಡಿಗಳನ್ನು ಸರ್ಕಾರವೇ ವಶಕ್ಕೆ ಪಡೆಯಲು ಅವಕಾಶ ನೀಡುವ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಲಾಗಿದೆ. 'ಕರ್ನಾಟಕ ಪುರಸಭೆಗಳ (ತಿದ್ದುಪಡಿ) ವಿಧೇಯಕ-2026' ಹಾಗೂ 'ಕರ್ನಾಟಕ ಮಹಾನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ-2026' ಮಸೂದೆಗಳನ್ನು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯ ಮುಂದಿಟ್ಟಿದ್ದಾರೆ. ವಿಧೇಯಕದಲ್ಲಿ ಏನಿದೆ?ಖಾಸಗಿ ಬಡಾವಣೆಗಳು ಅಥವಾ ಜಾಗಗಳಲ್ಲಿರುವ ರಸ್ತೆಗಳು ಹಾಗೂ ಚರಂಡಿಗಳು ಸೂಕ್ತ ನಿರ್ವಹಣೆಯಿಲ್ಲದೆ ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಗೆ ಧಕ್ಕೆಯುಂಟುಮಾಡುತ್ತಿದ್ದರೆ, ಅವುಗಳನ್ನು ಪಾಲಿಕೆ ಅಥವಾ ಪುರಸಭೆ ಆಯುಕ್ತರು ನೇರವಾಗಿ ತಮ್ಮ ವಶಕ್ಕೆ ಪಡೆಯಲು ಈ ತಿದ್ದುಪಡಿಗಳು ಅವಕಾಶ ಕಲ್ಪಿಸುತ್ತವೆ.
ದೇಶದ ಗಡಿ ಕಾಯುವ ಯೋಧನೊಬ್ಬನ ಆಕ್ರೋಶ ಮತ್ತು ವೇದನೆಯ ಈ ಮಾತುಗಳು ಪ್ರತಿಯೊಬ್ಬ ಭಾರತೀಯನ ಮನಸ್ಸನ್ನು ತಲುಪಬೇಕಾದ ಅಗತ್ಯವಿದೆ. "ನೀವು ಪಡೆಯುವುದು ನಮ್ಮ ತೆರಿಗೆ ಹಣದ ವೇತನ" ಎಂದು ಸುಲಭವಾಗಿ ಹೇಳಿಬಿಡುವ ನಾಲಿಗೆಗೆ, ಆ ವೇತನದ ಹಿಂದೆ ಇರುವ ತ್ಯಾಗ, ರಕ್ತ ಮತ್ತು ಬೆವರಿನ ಬೆಲೆ ಏನೆಂಬುದು ಬಹುಶಃ ಕಲ್ಪನೆಗೂ ನಿಲುಕದ್ದು.ಇತ್ತೀಚೆಗೆ ಲಡಾಖ್ ನಲ್ಲಿ ಪ್ರವಾಸೀ ಮಹಿಳೆಯೊಬ್ಬಳು ಸುರಕ್ಷತೆಯ ಕಾರಣಕ್ಕೆ ಸೈನಿಕರು ರಸ್ತೆ ಕೆಲವು ಕಾಲ ಬಂದ್ ಮಾಡಿದ್ದಕ್ಕೆ ಬಾಯಿಗೆ ಬಂದಂತೆ ದೇಶ ಕಾಯುವ ಯೋಧರ ಬಗ್ಗೆ ಮಾತನಾಡಿದ್ದಳು. ನಾನು ಜೆನ್ ಜಿ ಇದನ್ನೆಲ್ಲಾ ಸಹಿಸಲ್ಲ.
ಬೆಂಗಳೂರು: ಕರ್ನಾಟಕದಾದ್ಯಂತ ಮುಂಗಾರು ಮಳೆಯ ಚಟುವಟಿಕೆಗಳು ಮುಂದುವರಿದಿದ್ದು, ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ ಎಂದು IMD Bengaluru ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ, ಮಲೆನಾಡು ಹಾಗೂ ಒಳನಾಡು ಭಾಗಗಳಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಕೆಲವು ಪ್ರದೇಶಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳುಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ಗಾಳಿಯ ವೇಗ ಹೆಚ್ಚಿರಲಿದ್ದು, ಮೀನುಗಾರರು ಜಾಗರೂಕರಾಗಿರಲು ಸೂಚಿಸಲಾಗಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಶ್ರಾವಣ ಮಾಸದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ವ್ರತವು ಅತ್ಯಂತ ಪವಿತ್ರವಾದ ಹಬ್ಬವಾಗಿದೆ. ಮನೆಗೆ ಐಶ್ವರ್ಯ, ನೆಮ್ಮದಿ ಮತ್ತು ಸಮೃದ್ಧಿಯನ್ನು ತರುವ ಮಹಾಲಕ್ಷ್ಮಿಯನ್ನು ಪೂಜಿಸುವಾಗ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಈ ಶುಭ ದಿನದಂದು ಯಾವ ವಸ್ತುಗಳನ್ನು ಮನೆಗೆ ತರಬಾರದು ಮತ್ತು ಯಾವ ಕೆಲಸಗಳನ್ನು ಮಾಡಬಾರದು ಎಂಬುದರ ವಿವರ ಇಲ್ಲಿದೆ: ಮನೆಗೆ ತರಬಾರಾದ ವಸ್ತುಗಳು:ಹಳಸಿದ ಅಥವಾ ಒಣಗಿದ ಹೂವುಗಳು: ಪೂಜೆಗೆ ಯಾವಾಗಲೂ ತಾಜಾ ಹೂವುಗಳನ್ನೇ ಬಳಸಬೇಕು. ಬಾಡಿದ ಅಥವಾ ಹಳೆಯ ಹೂವುಗಳನ್ನು ತರುವುದು ದರಿದ್ರದ ಸಂಕೇತವೆನ್ನಲಾಗುತ್ತದೆ.ಪ್ಲಾಸ್ಟಿಕ್ ಅಥವಾ ಒಡೆದ ವಸ್ತುಗಳು: ಕಲಶ ಸ್ಥಾಪನೆಗೆ ಪ್ಲಾಸ್ಟಿಕ್ ಪಾತ್ರೆಗಳನ್ನು ಅಥವಾ ಒಡೆದ ಪೂಜಾ ಸಾಮಗ್ರಿಗಳನ್ನು ಮನೆಗೆ ತರಬಾರದು.
ಶ್ರೀ ದೀಪಲಕ್ಷ್ಮಿ ಸ್ತೋತ್ರವು ಸಂಧ್ಯಾಸಮಯದಲ್ಲಿ ಅಥವಾ ನಿತ್ಯವೂ ಮನೆ ಹಾಗೂ ಪೂಜಾಗೃಹದಲ್ಲಿ ದೀಪವನ್ನು ಹಚ್ಚುವಾಗ ಪಠಿಸುವ ಅತ್ಯಂತ ಮಂಗಳಕರವಾದ ಸ್ತೋತ್ರವಾಗಿದೆ.ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ದನಃ ।ದೀಪೋ ಹರತು ಮೇ ಪಾಪಂ ದೀಪಜ್ಯೋತಿರ್ನಮೋಽಸ್ತು ತೇ ॥ ೧ ॥ಶುಭಂ ಕರೋತಿ ಕಲ್ಯಾಣಮಾರೋಗ್ಯಂ ಧನಸಂಪದಃ ।ಶತ್ರುಬುದ್ಧಿವಿನಾಶಾಯ ದೀಪಜ್ಯೋತಿರ್ನಮೋಽಸ್ತು ತೇ ॥ ೨ ॥ದೀಪೋ ಜ್ಯೋತಿಃ ಪರಂ ಬ್ರಹ್ಮ ದೀಪೇ ಸರ್ವಂ ಪ್ರತಿಷ್ಠಿತಮ್ ।ದೀಪೇನ ಸಾಧ್ಯತೇ ಸರ್ವಂ ಸಂಧ್ಯಾ ದೀಪ ನಮೋಽಸ್ತು ತೇ ॥ ೩ ॥ಸಾಜ್ಯಂ ಚ ವರ್ತಿ ಸಂಯುಕ್ತಂ ವಹ್ನಿನಾ ಯೋಜಿತಂ ಮಯಾ ।ದೀಪಂ ಗೃಹಾಣ ದೇವೇಶ ತ್ರೈಲೋಕ್ಯ ತಿಮಿರಾಪಹಮ್ ॥ ೪ ॥
ಆಗಸ್ಟ್ 14 ರಂದು ಇಸ್ಲಾಮಾಬಾದ್ ಸಮೀಪದ ಟ್ಯಾಕ್ಸಿಲಾದಲ್ಲಿ, 1.3 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ 28 ವರ್ಷದ ಪಾಕಿಸ್ತಾನಿ ಟಿಕ್ಟಾಕ್ ಸ್ಟಾರ್ ಅನ್ನು ಮೋಟಾರ್ಸೈಕಲ್ನಲ್ಲಿದ್ದ ಇಬ್ಬರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಈ ಹಿಂದೆ ಅವರಿಗೆ ಆರ್ಥಿಕ ವಿವಾದವೊಂದಕ್ಕೆ ಸಂಬಂಧಿಸಿದಂತೆ ಅವರಿಗೆ ಜೀವ ಬೆದರಿಕೆಗಳು ಬಂದಿದ್ದವು ಎಂದು ಆರೋಪಿಸಲಾಗಿದೆ.ಆನ್ಲೈನ್ನಲ್ಲಿ 'ಆಯೇಷಾ ಗಿಲಾಮಾನಾ' ಎಂದು ಗುರುತಿಸಲ್ಪಟ್ಟಿದ್ದ ಶಮ್ಸೋ ಬಿಬಿ ಅವರು ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಹತ್ಯೆಗೀಡಾದರು.