ನವದೆಹಲಿ: ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತಿಗೆ ವಿಪಕ್ಷ ಸದಸ್ಯರೇ ನಕ್ಕಿದ್ದು ಇದಕ್ಕೆ ಸ್ಪೀಕರ್ ಗರಂ ಆಗಿ ನಿಮ್ಮದೇ ನಾಯಕನ ಮಾತಿಗೆ ನೀವೇ ನಗ್ತೀರಾ ಎಂದು ಕೇಳಿದ ಘಟನೆ ನಡೆದಿದೆ. ಈ ವಿಡಿಯೋ ಈಗ ವೈರಲ್ ಆಗಿದೆ. ಲೋಕಸಭೆ ಕಲಾಪದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ‘ಸ್ಪೀಕರ್ ಸಾರ್ ನಾನೀಗ ದೇಶದ ಭದ್ರತೆ ವಿಚಾರವಾಗಿ ಮಾತನಾಡಲು ಬಯಸುತ್ತೇನೆ’ ಎಂದು ಹೇಳಿದರು. ಆಗ ವಿಪಕ್ಷದ ಕೆಲವು ಸದಸ್ಯರು ಮೇಜು ತಟ್ಟಿದರೆ ಮತ್ತೆ ಕೆಲವರು ನಕ್ಕಿದ್ದು ಕೇಳಿಬಂತು.
ಶಿವಮೊಗ್ಗ: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ದ್ವೇಷ ಭಾಷಣ ಮಸೂದೆ ಸಂಬಂಧ ಚರ್ಚೆಗೆ ಅವಕಾಶ ನೀಡದೆ ಆತುಆತುರವಾಗಿ ಮಂಜೂರು ಮಾಡಿರುವ ಹಿಂದೆ ವಿಪಕ್ಷವನ್ನು ಮಟ್ಟ ಹಾಕುವ ತಂತ್ರವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ಬಿವೈ ವಿಜಯೇಂದ್ರ ಆರೋಪಿಸಿದರು. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಕಾಯ್ದೆ ವಿಪಕ್ಷವನ್ನು ಮಟ್ಟ ಹಾಕಲು ತಂದ ಕಾಯ್ದೆಎಂದು ಹೇಳಿದರು.ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕದಿರುವ ಕುರಿತು ಪ್ರಶ್ನೆಗೆ ಉತ್ತರ ಕೊಟ್ಟರು. ಈ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ
ಹುಬ್ಬಳ್ಳಿ: ಯೂನಿಯನ್ ಬಜೆಟ್ 2026ರ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಕೇಂದ್ರ ಸರ್ಕಾರ ಕರ್ನಾಟಕದ ತೆರಿಗೆ ಪಾಲನ್ನ ಶೇ.4.131 ಕ್ಕೆ ಹೆಚ್ಚಳ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆ ನೀಡಿದರು. ಕರ್ನಾಟಕದ ಶೇ.3.647 ರಷ್ಟಿದ್ದ ತೆರಿಗೆ ಪಾಲನ್ನ ಇದೀಗ ಶೇ.4.131 ಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಕರ್ನಾಟಕಕ್ಕೆ ಸಾವಿರಾರು ಕೋಟಿ ತೆರಿಗೆ ಪಾಲು ಸಿಗಲಿದೆ ಎಂದರು. ಇನ್ನೂ ರಾಜ್ಯ ಕಾಂಗ್ರೆಸ್ ನಾಯಕರು ‘ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯ’ವಾಗುತ್ತಿದೆ ಎಂಬ ಆರೋಪವನ್ನು
ಸರ್ಕಾರಿ ವಸತಿ ಯೋಜನೆಯಲ್ಲಿ ಭೂಮಿ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಬಾಂಗ್ಲಾದೇಶದ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆಯನ್ನು ಸೋಮವಾರ ವಿಧಿಸಿದೆ.ರಾಜಧಾನಿಯ ಹೊರವಲಯದಲ್ಲಿರುವ ಪುರ್ಬಚೋಲ್ನಲ್ಲಿರುವ ರಾಜುಕ್ ನ್ಯೂ ಟೌನ್ ಪ್ರಾಜೆಕ್ಟ್ ಅಡಿಯಲ್ಲಿ ತನ್ನ ಸೋದರ ಸೊಸೆ, ಯುಕೆ ಕಾರ್ಮಿಕ ಸಂಸದ ಮತ್ತು ಬ್ರಿಟನ್ನ ಮಾಜಿ ಸಚಿವ ಟುಲಿಪ್ ಸಿದ್ದಿಕ್ ಸೇರಿದಂತೆ ಇತರರಿಗೆ ವಸತಿ ಪ್ಲಾಟ್ಗಳನ್ನು ಹಂಚಿಕೆ ಮಾಡುವಲ್ಲಿ ತನ್ನ ಅಧಿಕೃತ ಪ್ರಭಾವವನ್ನು ಬಳಸಿದ್ದಕ್ಕಾಗಿ ಢಾಕಾದ ವಿಶೇಷ ನ್ಯಾಯಾಧೀಶರ ನ್ಯಾಯಾಲಯವು 79 ವರ್ಷದ ಹಸೀನಾಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.
2026 ರ ಟಿ 20 ವಿಶ್ವಕಪ್ನಲ್ಲಿ ಫೆಬ್ರವರಿ 15 ರ ಗುಂಪು ಹಂತದ ಪಂದ್ಯದಲ್ಲಿ ಭಾರತದ ವಿರುದ್ಧ ತನ್ನ ಪುರುಷರ ತಂಡವು ಮೈದಾನಕ್ಕಿಳಿಯುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಘೋಷಿಸಿದ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹೇಳಿಕೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 'ಸಂಪೂರ್ಣವಾಗಿ ಒಪ್ಪುತ್ತದೆ'.ಈ ನಿಲುವನ್ನು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸೋಮವಾರ ಖಚಿತಪಡಿಸಿದ್ದಾರೆ."ಐಸಿಸಿ ಒಂದು ದೊಡ್ಡ ಹೇಳಿಕೆಯನ್ನು ನೀಡಿದೆ; ಅವರು ಕ್ರೀಡಾ ಮನೋಭಾವದ ಬಗ್ಗೆ ಮಾತನಾಡಿದ್ದಾರೆ. ನಾವು ಐಸಿಸಿಯನ್ನು
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ನ ಅಧ್ಯಕ್ಷ ಸಿಜೆ ರಾಯ್ ಆತ್ಮಹತ್ಯೆ ಸಂಬಂಧ ಇದೀಗ ಎಸ್ಐಟಿಗೆ 9 ಪುಟಗಳ ಆತ್ಮಹತ್ಯೆ ಪತ್ರ ಕೈಸೇರಿದ್ದು, ಅದರ ಅನ್ವಯ ತನಿಖೆಯನ್ನು ಮತ್ತಷ್ಟು ಚುರುಕು ಮಾಡಿದ್ದಾರೆ. ಇನ್ನೂ ಡೆತ್ನೋಟ್ನಲ್ಲಿ ವೈಯಕ್ತಿಕ, ಹಣಕಾಸು ಮತ್ತು ವ್ಯವಹಾರ ವಿಷಯಗಳನ್ನು ವಿವರಿಸುತ್ತದೆಕಾನ್ಫಿಡೆಂಟ್ ಗ್ರೂಪ್ನಲ್ಲಿ ಉತ್ತರಾಧಿಕಾರಿಗಳನ್ನು ಹೆಸರಿಸುತ್ತದೆ, ವಿಶ್ವಾಸಾರ್ಹ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಒತ್ತಾಯಿಸುತ್ತದೆಆದಾಯ ತೆರಿಗೆ ಇಲಾಖೆ ತನಿಖೆಯ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರು ಮೂಲದ ಉದ್ಯಮಿ ಸಿಜೆ ರಾಯ್
ಬೆಂಗಳೂರು: ಇದೇ 6ರಂದು ರಾಜ್ ಬಿ ಶೆಟ್ಟಿ ನಟನೆಯ ರಕ್ಕಸಪುರದೊಳ್ ಚಿತ್ರವು ಬಿಡುಗಡೆಯಾಗಲಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಇನ್ಸ್ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ.ರಾಜ್ ಬಿ ಶೆಟ್ಟಿ ಖಡಕ್ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿರುವ 'ರಕ್ಕಸಪುರದೊಳ್' ಸಿನಿಮಾ ಕುತೂಹಲ ಮೂಡಿಸಿದೆ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆ ಆಗಿ ಗಮನ ಸೆಳೆದಿದ್ದು, ಹೊಸ ಭರವಸೆಯನ್ನು ಮೂಡಿಸಿದೆ.ಹಾಸ್ಯ ಪಾತ್ರಗಳಲ್ಲಿ ಮಾತ್ರವಲ್ಲ ಖಡಕ್ ಮಾಸ್ ಅವತಾರದಲ್ಲಿ ಕೂಡ ಅಬ್ಬರಿಸಬಲ್ಲೆ ಎಂದು ರಾಜ್ ಪದೇ ಪದೆ ಸಾಬೀತು
ತಿರುವನಂತಪುರಂ: ಐಟಿ ಇಲಾಖೆ ದಾಳಿ ವೇಳೆ ನಡೆದಿರುವ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ‘ಅಸ್ವಾಭಾವಿಕ ಸಾವು’ ದೇಶದ ತೆರಿಗೆ ಆಡಳಿತಕ್ಕೆ ಕಳಂಕ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಘಟನೆ ಸಂಬಂಧ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಅವರು ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದೆ. ಬರೆದ ಪತ್ರದಲ್ಲಿ, ಘಟನೆಯು ಗಂಭೀರ ಶ್ರದ್ಧೆಯ ಕೊರತೆಯನ್ನು ತೋರಿಸಿದೆ. ಐಟಿ ಶೋಧ ಕಾರ್ಯಾಚರಣೆ ವೇಳೆ ಮನೆಯಲ್ಲಿದ್ದ ವ್ಯಕ್ತಿಯು ಲೋಡ್ ಮಾಡಿದ ಬಂದೂಕು ತೆಗೆದುಕೊಂಡು ತನ್ನನ್ನು ತಾನೇ ಶೂಟ್ ಮಾಡಿಕೊಳ್ಳಬಹುದು ಎಂಬುದು ಆತಂಕಕಾರಿಯಾಗಿದೆ ಎಂದು ಎಂದಿದ್ದಾರೆ.ರಾಯ್ ಅವರನ್ನು ಶೋಧದ ಸ್ಥಳದಲ್ಲಿ ಇರಿಸುವ ಬದಲು ಮತ್ತೊಂದು ಕೊಠಡಿಗೆ ಸ್ಥಳಾಂತರಿಸಲಾಗಿದೆ ಎನ್ನುವ ಇತ್ತೀಚಿನ
ಲಾಹೋರ್: ಇದೇ ತಿಂಗಳು ಆರಂಭವಾಗುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಮುಂದಾದ ಪಾಕಿಸ್ಥಾನಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಎಚ್ಚರಿಕೆ ನೀಡಿದೆ. ಪಾಕಿಸ್ತಾನ ಸರ್ಕಾರದ ನಿರ್ಧಾರವನ್ನು ಪ್ರಶ್ನೆ ಮಾಡಿರುವ ಐಸಿಸಿ, ಭಾರತ ವಿರುದ್ಧದ ಪಂದ್ಯದಿಂದ ಹಿಂದೆ ಸರಿದರೆ ದಂಡನೆ ಸೇರಿದಂತೆ ಅದರ ಪರಿಣಾಮ ಎದುರಿಸಬೇಕಾದಿತು ಎಂದು ಎಚ್ಚರಿಸಿದೆ.ವಿಶ್ವಕಪ್ ಟೂರ್ನಿಯಲ್ಲಿ ತಂಡವು ಭಾಗವಹಿಸಲು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅನುಮತಿ ನೀಡಲಾಗಿದೆ. ಆದರೆ ಭಾರತದ ವಿರುದ್ಧದ ಹೈ-ಪ್ರೊಫೈಲ್ ಪಂದ್ಯವನ್ನು ಆಡಬಾರದು ಎಂದು ಷರತ್ತು ವಿಧಿಸಿದೆ.
ಬಾಗಲಕೋಟೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 28 ವರ್ಷದ ಮಹಿಳೆಯೊಬ್ಬರು ತಮ್ಮ ಮೂವರು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಸೋಮವಾರ ವರದಿಯಾಗಿದೆ. ಬಾದಾಮಿ ತಾಲ್ಲೂಕಿನ ಹಿರೇಮುಚ್ಚಲ್ಗುಡ್ಡ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.ಮೃತರನ್ನು ಸಮೃದ್ಧಿ ಗೌಡರ್ (5), ಪ್ರೀತಮ್ ಗೌಡರ್ (4) ಮತ್ತು ಸುಕ್ಷೀತ್ ಗೌಡರ್ (2) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕಿಸ್ತಾನ: ಬಲೂಚಿಸ್ತಾನದಾದ್ಯಂತ ನಡೆದ ಸಂಘಟಿತ ದಾಳಿಗಳ ನಂತರ ಪಾಕಿಸ್ತಾನದ ಭದ್ರತಾ ಪಡೆಗಳು 40 ಗಂಟೆಗಳ ಅವಧಿಯಲ್ಲಿ 145 ಉಗ್ರರನ್ನು ಕೊಂದಿವೆ ಎಂದು ಪಾಕ್ ಹೇಳಿಕೊಂಡಿದೆ.ಬಲೂಚ್ ಲಿಬರೇಶನ್ ಆರ್ಮಿ ಸೇರಿದಂತೆ ವಿವಿಧ ಗುಂಪುಗಳು ಕ್ವೆಟ್ಟಾ, ಗ್ವಾದರ್, ಮಸ್ತುಂಗ್ ಮತ್ತು ನೋಶ್ಕಿಯಲ್ಲಿ ನಡೆಸಿದ ಸಂಘಟಿತ ದಾಳಿಯ ಪ್ರತೀಕಾರದಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ಬಲೂಚಿಸ್ತಾನದಲ್ಲಿ 145 ಉಗ್ರರನ್ನು ಕೊಂದಿದೆ ಎಂದು ಹೇಳಿಕೊಂಡಿದೆ. ಸುಮಾರು 50 ಜನರು ಸಾವನ್ನಪ್ಪಿದ್ದಾರೆ ಮತ್ತು 17 ಕಾನೂನು ಜಾರಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ.ಸಂಪನ್ಮೂಲ-ಸಮೃದ್ಧ ಪ್ರಾಂತ್ಯದಲ್ಲಿ ಈ ಹಿಂಸಾಚಾರವು ವರ್ಷಗಳಲ್ಲಿ ಅತ್ಯಂತ ಮಾರಕ ಸ್ಫೋಟಗಳಲ್ಲಿ ಒಂದಾಗಿದೆ, ಅಲ್ಲಿ
ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಫ್ನ ಅಧ್ಯಕ್ಷ ಸಿಜೆ ರಾಯ್ ಸಾವು ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಇದೀಗ ಮತ್ತೇ ಹೊಸ ಬಾಂಬ್ ಸಿಡಿಸಿದ್ದಾರೆ. ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಸಿಜೆ ರಾಯ್ ಅವರನ್ನು ಎಲ್ಲರೂ ಹೇಳುತ್ತಾರೆ ಶೂಟ್ ಮಾಡಿಕೊಂಡು ಸತ್ತಿದ್ದಾರೆಂದು, ಆದರೆ ನಾವು ಯಾರಾದರೂ ಶೂಟೌಟ್ ಮಾಡಿಕೊಂಡಿದ್ದನ್ನು ನೋಡಿದ್ದೇವಾ ಎಂದು ಪ್ರಶ್ನೆ ಮಾಡಿದರು. ಒಳಗೆಡೆ ಇದ್ದಿದ್ದು ಐಟಿ ಅಧಿಕಾರಿಗಳು, ಸತ್ತು ಹೋಗಿದ್ದು ಸಿಜೆ ರಾಯ್, ನಾವು ಯಾವಾ ಆಧಾರದಲ್ಲಿ ಅವರೇ ಶೂಟೌಟ್
ಕಲಬುರಗಿ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ರ ಕೇಂದ್ರ ಬಜೆಟ್ ರಾಜ್ಯವನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದಾರೆ, ವಿಶೇಷವಾಗಿ ಹೈಸ್ಪೀಡ್ ರೈಲು, ನೀರಾವರಿ ಯೋಜನೆಗಳು ಮತ್ತು ತೆರಿಗೆ ವಿಕೇಂದ್ರೀಕರಣದ ಬಗ್ಗೆ, ರಕ್ಷಣೆ, ಕೃಷಿ, ವಿಪತ್ತು ಪರಿಹಾರ ಮತ್ತು ಭಾರತ AI ಮಿಷನ್ನಲ್ಲಿನ ಕಡಿತದ ಬಗ್ಗೆ ಮತ್ತು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಂತಹ ಇತರ ರಾಜ್ಯಗಳಿಗೆ ಹೋಲಿಸಿದರೆ ಹಂಚಿಕೆಗಳಲ್ಲಿನ ಅಸಮಾನತೆಗಳನ್ನು ಎತ್ತಿ ತೋರಿಸಿದ್ದಾರೆ.ಕಲಬುರಗಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕಕ್ಕೆ ಬಜೆಟ್ನಲ್ಲಿ ಅರ್ಥಪೂರ್ಣವಾದ ಏನೂ ಸಿಕ್ಕಿಲ್ಲ ಎಂದು ಹೇಳಿದರು ಮತ್ತು ಕೇಂದ್ರ ಸರ್ಕಾರವು ರಾಜ್ಯದ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ಚಾಮರಾಜನಗರ: ಕೊಳ್ಳೇಗಾಲದಲ್ಲಿ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದ ವರನಿಗೆ ಚಾಕು ಇರಿತ ಪ್ರಕರಣದಲ್ಲಿ ಇದೀಗ ಮೇಜರ್ ಟ್ವಿಸ್ಟ್ ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ವಧುವಿ ಪಾತ್ರವಿರುವುದು ತನಿಖೆಯಲ್ಲಿ ಬಯಲಾಗಿದೆ. ಏನಿದು ಪ್ರಕರಣ: ಡಿ.30ರಂದು ಕುಣಗಳ್ಳಿ ಗ್ರಾಮದ ರವೀಶ್ ಮತ್ತು ನಯನ ಮದುವೆ ಏರ್ಪಟ್ಟಿತ್ತು. ಹಿಂದಿನ ದಿನ ರಿಸೆಪ್ಶನ್ಗೆ ರವೀಶ್ ಸೇರಿದಂತೆ ಆತಕ ಕುಟುಂಬದವರು ಕಲ್ಯಾಣ ಮಂಟಪಕ್ಕೆ ಹೊರಟಿದ್ದಾರೆ. ಕೊಳ್ಳೇಗಾಲದ ವೆಂಕಟೇಶ್ವರ ಮಂಟಪಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಮತ್ತೊಂದು ಕಾರಿನಲ್ಲಿ ಬಂದ ಗುಂಪು ರವೀಶ್ ಕಾರನ್ನು
ತನ್ನ ಅವಳಿ ಮಕ್ಕಳು ಹಾಗೂ ಪತ್ನಿಯನ್ನು ಆಸ್ಪತ್ರೆಗೆ ತಮ್ಮ ಮಗಳು ಕ್ಲಿನ್ ಕಾರಾಳ ಜತೆ ಆಸ್ಪತ್ರೆಗೆ ಬಂದ ರಾಮ್ಚರಣೆ ಅವರನ್ನು ಅಭಿಮಾನಿಗಳು ಎಳೆದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖುಷಿಯಿಂದ ತನ್ನ ಅವಳಿ ಮಕ್ಕಳನ್ನು ನೋಡಲು ಬಂದ ನಟನಿಗೆ ಅಭಿಮಾನಿಗಳ ಗುಂಪಿನಿಂದಾದ ಎಳೆದಾಟ ಕೆಲ ಕ್ಷಣ ಭಯವನ್ನು ನೀಡಿತು. ಅದಲ್ಲದೆ ಮಗಳು ಕೂಡಾ ಇದ್ದಿದ್ದರಿಂದ ರಾಮ್ಚರಣ್ ಕೆಲ ಸಮಯ ಭಯದಿಂದಲೇ ಸಾಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಟ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕೊನಿಡೇಲಾ ಅವರು ಅವಳಿ ಮಕ್ಕಳು, ಗಂಡು ಮಗು ಮತ್ತು ಹೆಣ್ಣು
ನೋಯ್ಡಾ (ಉತ್ತರ ಪ್ರದೇಶ) : ಮುಂಬರುವ 2026 ರ T20 ವಿಶ್ವಕಪ್ನಲ್ಲಿ ಭಾರತದ ವಿರುದ್ಧದ ಲೀಗ್ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ಘೋಷಣೆಗೆ ತೀವ್ರ ಟೀಕೆ ವ್ಯಕ್ತಪಡಿಸಿದ ಭಾರತೀಯ ಕುಸ್ತಿ ಒಕ್ಕೂಟ ಅಧ್ಯಕ್ಷ ಸಂಜಯ್ ಸಿಂಗ್, ಭಾರತ ಸರ್ಕಾರ ಮತ್ತು ಆಟಗಾರರು ನೆರೆಯ ದೇಶವನ್ನು ಸಹ ಬಹಿಷ್ಕರಿಸಬೇಕು ಎಂದು ಹೇಳಿದರು. ಫೆಬ್ರವರಿ 15 ರಂದು ನಡೆಯಲಿರುವ ಐಸಿಸಿ ವಿಶ್ವ ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧದ ಗುಂಪು ಹಂತದ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ ನಿರ್ಧರಿಸಿದ ನಂತರ ಈ ಹೇಳಿಕೆ ಬಂದಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಶೀತ ವಾತಾವರಣ ಮುಂದುವರೆದಿದ್ದು, ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆಯಿಂದ ಇರುವ ಭಾರತೀಯ ಹವಾಮಾನ ಇಲಾಖೆ ಸೂಚನೆಯನ್ನು ನೀಡಿದೆ. ಬೆಂಗಳೂರಿನಲ್ಲಿ ಬೆಳಗ್ಗೆ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಿನ್ನೂ ಚಳಿಯ ತೀವ್ರತೆ ಹಾಗೆಯೇ ಮುಂದುವರೆದಿದೆ. ಮಧ್ಯಾಹ್ನ ಬಿಸಿಲು ವಿಪರೀತವಿದ್ದು, ಹವಾಮಾನ ವೈಪರೀತ್ಯ ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದೆ. ಎಲ್ಲೆಡೆ, ಶೀತ ಗಾಳಿಯಿಂದ ಜ್ವರ, ಕೆಮ್ಮು, ನೆಗಡಿ ಭಾದಿಸುವ ಸಾಧ್ಯತೆಗಳು ಇರುವುದರಿಂದ ಮುನ್ನೆಚ್ಚರಿಕೆ ವಹಿಸಲು ಸೂಚನೆ
ಬೆಂಗಳೂರು: ಕೇಂದ್ರ ಬಜೆಟ್ ಗೆ ಮುನ್ನ ಚಿನ್ನದ ದರ ಭರ್ಜರಿ ಇಳಿಕೆ ಕಂಡಿದೆ. ಇಂದು ಪರಿಶುದ್ಧ ಚಿನ್ನದ ದರ ಯಥಾಸ್ಥಿತಿಯಲ್ಲಿದೆ ಮತ್ತು ಇತರೆ ಚಿನ್ನದ ದರ ಭಾರೀ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತ ಏರಿಕೆ ಮತ್ತು ಇಳಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಏರಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಯಥಾಸ್ಥಿತಿಯಲ್ಲಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,64,290.00 ರೂ.ಗಳಿತ್ತು. ಇಂದೂ 1,64,290.00 ರೂ.ಗಳಷ್ಟಿದೆ.
ಇತ್ತೀಚೆಗೆ ಪುರುಷರೂ ಪತ್ನಿಯರಿಂದ ಗೃಹಹಿಂಸೆಗೊಳಗಾಗುವ ಸಾಕಷ್ಟು ಉದಾಹರಣೆಗಳು ಕಂಡುಬರುತ್ತಿವೆ. ಅದೇ ರೀತಿ ಇಲ್ಲೊಬ್ಬ ಹೆಂಡತಿ ಗಂಡನ ಎದೆ ಮೇಲೆ ಕೂತು ಹಿಗ್ಗಾ ಮುಗ್ಗಾ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಪತ್ನಿಯ ಮೇಲೆ ಪತಿ ಹೊಡೆಯುವುದು, ಗೃಹಹಿಂಸೆ ಮಾಡುವುದು ಕೇಳಿಬರುತ್ತಿತ್ತು. ಇದೀಗ ಪತ್ನಿಯರ ಸರದಿ. ಈಗಾಗಲೇ ಕೆಲವು ಕಡೆ ಇಂತಹ ವಿಡಿಯೋಗಳು ವೈರಲ್ ಆಗಿತ್ತು. ಇದೀಗ ಅಂತಹದ್ದೇ ಒಂದು ಘಟನೆಯಲ್ಲಿ ಪತ್ನಿಯೇ ಗಂಡನನ್ನು ಎಳೆದಾಡಿಕೊಂಡು ಬಂದು ಮಂಚದ ಮೇಲೆ ಕೆಡವುತ್ತಾಳೆ. ಬಳಿಕ ಆತನ ಎದೆ ಮೇಲೆಯೇ ಕೂತು ಮನಸ್ಸಿಗೆ ತೋಚಿದಂತೆ ಆತನ ಮುಖ, ಮೂತಿ ನೋಡದೇ ಚಚ್ಚುತ್ತಾಳೆ.
ಕನಕಪುರ: ಡಿಸಿಎಂ ಡಿಕೆ ಶಿವಕುಮಾರ್ ಪಂಚೆ ಕಟ್ಟಿಕೊಂಡು ಹುಡುಗರೂ ನಾಚುವಂತೆ ಉತ್ಸಾಹದಿಂದ ವಾಲಿಬಾಲ್ ಆಡುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡಿಕೆ ಶಿವಕುಮಾರ್ ತಮ್ಮ ಸ್ವಕ್ಷೇತ್ರ ಕನಕಪುರದಲ್ಲಿ ಅದ್ಧೂರಿಯಾಗಿ ಕನಕೋತ್ಸವ ಆಯೋಜಿಸಿದ್ದರು. ಮೂರು ದಿನಗಳ ಕಾಲ ಕ್ರೀಡೆ, ವಿದ್ಯಾರ್ಥಿಗಳಿಗೆ ಪುರಸ್ಕಾರ, ಸೆಲೆಬ್ರಿಟಿಗಳಿಂದ ಮನರಂಜನೆ ಕಾರ್ಯಕ್ರಮ ಸೇರಿದಂತೆ ಡಿಕೆ ಶಿವಕುಮಾರ್ ಕೂಡಾ ಭಾಗಿಯಾಗಿ ಜನರಿಗೆ ಫುಲ್ ಮನರಂಜನೆ ಒದಗಿಸಿದ್ದರು. ಕನಕೋತ್ಸವದಲ್ಲಿ ಕ್ರೀಡೆಯೂ ಆಯೋಜನೆಯಾಗಿತ್ತು. ಈ ವೇಳೆ ಡಿಕೆ ಶಿವಕುಮಾರ್ ಶಾಲಾ ವಿದ್ಯಾರ್ಥಿಗಳೊಂದಿಗೆ ವಾಲಿಬಾಲ್ ನಲ್ಲಿ ಸ್ವತಃ ಭಾಗಿಯಾಗಿದ್ದಾರೆ.
ಮುಂಬೈ: ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಹತ್ತಿರ ಬರಲು ಮುಜುಗರಪಟ್ಟುಕೊಂಡು ನಿಂತಿದ್ದಾಗ ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮಾಡಿದ್ದೇನು ಗೊತ್ತಾ? ಈ ವಿಡಿಯೋ ನೋಡಿ. ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅಭಿಮಾನಿಗಳನ್ನು ಯಾವತ್ತೂ ನಿರಾಸೆ ಮಾಡಲ್ಲ. ಅವರು ಕೇಳುವ ಸೆಲ್ಫೀ, ಆಟೋಗ್ರಾಫ್ ಬೇಡಿಕೆಗಳನ್ನು ಯಾವುದೇ ಬೇಸರವಿಲ್ಲದೇ ಪೂರೈಸುತ್ತಾರೆ. ಅನೇಕ ಬಾರಿ ಇದೇ ಕಾರಣಕ್ಕೆ ಹಾರ್ದಿಕ್ ಎಲ್ಲರ ಮನಗೆದ್ದಿದ್ದಾರೆ. ಈಗ ಮತ್ತೊಮ್ಮೆ ಅಂತಹದ್ದೇ ಘಟನೆ ನಡೆದಿದೆ. ತಿರುವನಂತಪುರಂನಲ್ಲಿ ಟಿ20 ಪಂದ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಹಾರ್ದಿಕ್ ಪಾಂಡ್ಯರನ್ನು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ದೂರದಿಂದಲೇ ನಿಂತು ಹತ್ತಿರ ಬರಲೋ ಬೇಡವೋ ಎಂದು ಮುಜುಗರ ಪಟ್ಟುಕೊಂಡು ನಿಂತಿದ್ದರು.
ಮುಂಬೈ: ಟಿ20 ವಿಶ್ವಕಪ್ ನಲ್ಲಿ ಆಡ್ತೀವಿ ಆದರೆ ಭಾರತದ ಜೊತೆಗೆ ಆಡಲ್ಲ ಎಂದು ಪಾಕಿಸ್ತಾನ ಕ್ಯಾತೆ ತೆಗೆದಿದೆ. ಇದಕ್ಕೆ ಭಾರತೀಯ ಫ್ಯಾನ್ಸ್ ಅಭಿಷೇಕ್ ಶರ್ಮಾ ಎಂದರೆ ಭಯಾನಾ ಎಂದು ಕಾಲೆಳೆದಿದ್ದಾರೆ. ಟೀಂ ಇಂಡಿಯಾದ ಆರಂಭಿಕ ಅಭಿಷೇಕ್ ಶರ್ಮಾ ಪ್ರತೀ ಪಂದ್ಯದಲ್ಲೂ ಬೌಲರ್ ಗಳ ಎದೆ ನಡುಗಿಸುವಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪಾಕಿಸ್ತಾನ ಈಗಾಗಲೇ ಹಲವು ಬಾರಿ ಭಾರತದ ವಿರುದ್ಧ ಸೋತು ಸುಣ್ಣವಾಗಿದೆ. ಇದರ ಜೊತೆಗೆ ಈಗ ಅಭಿಷೇಕ್ ಶರ್ಮಾ ಭಯ ಬೇರೆ. ಹೀಗಾಗಿ ಬಾಂಗ್ಲಾದೇಶ ಟೂರ್ನಿಯಲ್ಲಿ ಇಲ್ಲದೇ ಇರುವುದನ್ನು ಪ್ರತಿಭಟಿಸಿ ಪಾಕಿಸ್ತಾನ ಸರ್ಕಾರ ತನ್ನ ತಂಡ ಭಾರತದ ಜೊತೆಗೆ ಆಡಲ್ಲ ಎಂದು ನಿರ್ಧಾರ ಪ್ರಕಟಿಸಿದೆ.
ಜಲಂಧರ್ (ಪಂಜಾಬ್): ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಸತ್ತಿನಲ್ಲಿ ಮಂಡಿಸಲಾದ ಕೇಂದ್ರ ಬಜೆಟ್ ಬಡವರನ್ನು ಸಬಲೀಕರಣಗೊಳಿಸುತ್ತದೆ, ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.ಜಲಂಧರ್ನಲ್ಲಿ ಸಂತ ರವಿದಾಸ್ ಅವರ 649ನೇ ಜಯಂತಿ ಆಚರಣೆಯ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಭಿಕರನ್ನು ಸ್ವಾಗತಿಸಿದರು ಮತ್ತು ಪೂಜ್ಯ ಸಂತರ ಕೊಡುಗೆಗಳನ್ನು ಸ್ಮರಿಸಿದರು.ಸಂತ ರವಿದಾಸ್ ಜಿ ಅವರ ಆಶೀರ್ವಾದದಿಂದ, ನಾವು ಖಂಡಿತವಾಗಿಯೂ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು
ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಖಾತೆಯೊಂದು, ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈ ನಿವಾಸದ ಮೇಲೆ ಭಾನುವಾರ ಮುಂಜಾನೆ ನಡೆದ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡು ಪೋಸ್ಟ್ ಅನ್ನು ಹಂಚಿಕೊಂಡಿದೆ.ಲಾರೆನ್ಸ್ ಬಿಷ್ಣೋಯ್ ಅವರ ಪ್ರೊಫೈಲ್ ಚಿತ್ರವನ್ನು ಹೊಂದಿರುವ ಶುಭಂ ಲೋಂಕರ್ ಅರ್ಜೂ ಬಿಷ್ಣೋಯ್ ಎಂಬ ಸಾಮಾಜಿಕ ಮಾಧ್ಯಮ ಖಾತೆಯಿಂದ, ಅರ್ಜೂ ಬಿಷ್ಣೋಯ್, ಶುಭಂ ಲೋಂಕರ್, ಹರಿ ಬಾಕ್ಸರ್ ಮತ್ತು ಹರ್ಮನ್ ಶಾಂಡು ಎಂಬ ವ್ಯಕ್ತಿಗಳು ತಮ್ಮ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಪದೇ ಪದೇ ಎಚ್ಚರಿಕೆ ನೀಡಿದ ನಂತರ ಗುಂಡು ಹಾರಿಸಿದ್ದಾರೆ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
ಬೆಂಗಳೂರು: ತನ್ನ ಪಿಸ್ತೂಲ್ನಿಂದ ತಾನೇ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಕಾನ್ಫಿಡೆಂಟ್ ಗ್ರೂಪ್ನ ಮುಖ್ಯಸ್ಥ ಸಿ.ಜೆ ರಾಯ್ಗೆ ಕ್ರಿಶ್ಚಿಯನ್ ಸಮುದಾಯದಂತೆ ಅಂತ್ಯಸಂಸ್ಕಾರ ನಡೆಸಲಾಯಿತು. ಅವರ ನೆಚ್ಚಿನ ಬನ್ನೇರುಘಟ್ಟ ರೆಸಾರ್ಟ್ನಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಇದಕ್ಕೂ ಮೊದಲು ರಾಯ್ ಅವರ ಪತ್ನಿ, ಮಕ್ಕಳು ಹಣೆಗೆ ಮುತ್ತಿಡುವ ಮೂಲಕ ಕೊನೆಯ ಕಣ್ಣೀರ ವಿದಾಯವನ್ನು ಹೇಳಿದರು.ಬೌರಿಂಗ್ ಆಸ್ಪತ್ರೆಯಲ್ಲಿದ್ದ ಸಿ.ಜೆ ರಾಯ್ ಅವರ ಮೃತದೇಹವನ್ನ ಕುಟುಂಬಸ್ಥರು ಬಂದು ಬನ್ನೇರುಘಟ್ಟ ರೆಸಾರ್ಟ್ಗೆ ತೆಗೆದುಕೊಂಡು ಹೋದರು.
ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಭಾನುವಾರ ಮ್ಯಾರಥಾನ್ನಲ್ಲಿ ಭಾಗವಹಿಸುತ್ತಿದ್ದಾಗ 25 ವರ್ಷದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ ಆಘಾತಕಾರಿ ಘಟನೆ ಇಂದು ನಡೆದಿದೆ. ಹರಿಯಾಣದ ಫರಿದಾಬಾದ್ ಮೂಲದ ಆರ್ಯನ್ ಟೋಡಿ ಇಂದೋರ್ ಮ್ಯಾರಥಾನ್ನ 21 ಕಿಮೀ ಓಟದಲ್ಲಿ ಭಾಗವಹಿಸುತ್ತಿದ್ದಾಗ ಅಂತಿಮ ಗೆರೆಯ ಬಳಿ ಕುಸಿದು ಬಿದ್ದಿದ್ದಾರೆ ಎಂದು ಸನ್ಯೋಗಿತಗಂಜ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಕೆ.ಪಿ. ಯಾದವ್ ಹೇಳಿದ್ದಾರೆ. ಸ್ಥಳದಲ್ಲಿದ್ದ ಹೃದ್ರೋಗ ತಜ್ಞ ಡಾ. ಭರತ್ ರಾವತ್ ಅವರಿಗೆ ಚಿಕಿತ್ಸೆ ನೀಡಿ ಹೃದಯ ಪುನರುಜ್ಜೀವನಗೊಳಿಸಲು ಯತ್ನಿಸಿದರು
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಸ್ವಾಗತಿಸಿದ್ದು, ಇದು ಭಾರತದ ರಕ್ಷಣಾ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಿಂಗ್, ರಕ್ಷಣಾ ವಲಯಕ್ಕೆ ₹7.85 ಲಕ್ಷ ಕೋಟಿ ದಾಖಲೆಯ ಹಂಚಿಕೆಯನ್ನು ಎತ್ತಿ ತೋರಿಸಿದರು. "ಈ ಬಜೆಟ್ ಜನರ ಭಾವನೆಗಳು ಮತ್ತು ನಿರೀಕ್ಷೆಗಳನ್ನು ಪೂರೈಸುತ್ತದೆ ಎಂದು ನಾನು ನಂಬುತ್ತೇನೆ. ಇದಲ್ಲದೆ, ಈ ಬಜೆಟ್ ಪ್ರಧಾನ ಮಂತ್ರಿಯವರ 'ಆತ್ಮನಿರ್ಭರ ಭಾರತ' (ಸ್ವಾವಲಂಬಿ ಭಾರತ) ಮತ್ತು 'ವಿಕ್ಷಿತ ಭಾರತ 2047' (2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ) ಎಂಬ ದೃಷ್ಟಿಕೋನಕ್ಕೆ ಬಲವಾದ ಅಡಿಪಾಯವನ್ನು
ಮಂಗಳೂರು: ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮದ ಪರಿಣಾಮವು ಜಾಗತಿಕ ಕಳವಳಕಾರಿಯಾಗಿ ಹೊರಹೊಮ್ಮಿದೆ ಎಂದು ಹೇಳಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಾನೂನು ಪ್ರತಿಕ್ರಿಯೆ ಅಗತ್ಯವಾಗಿದೆ ಮತ್ತು ಭಾರತದಲ್ಲಿ ಮಕ್ಕಳು ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಅವರಿಗೆ ಪತ್ರ ಬರೆಯುವುದಾಗಿ ಹೇಳಿದರು.ಜನವರಿ 31 ರಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಾಮಾಜಿಕ ಮಾಧ್ಯಮಗಳಿಗೆ ಅತಿಯಾದ ಒಡ್ಡಿಕೊಳ್ಳುವಿಕೆಯಿಂದಾಗಿ ಪ್ರಸ್ತುತ ಪೀಳಿಗೆ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದರು.
ಪಂಜಾಬ್: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪಂಜಾಬ್ನ ಆದಂಪುರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ವಿಮಾನ ನಿಲ್ದಾಣದ ಹೊಸ ಹೆಸರನ್ನು 'ಶ್ರೀ ಗುರು ರವಿದಾಸ್ ಮಹಾರಾಜ್ ಜಿ ವಿಮಾನ ನಿಲ್ದಾಣ, ಆದಂಪುರ' ಎಂದು ಅನಾವರಣಗೊಳಿಸಿದರು.ಪ್ರಧಾನಿ ಮೋದಿ ಪಂಜಾಬ್ನ ಲುಧಿಯಾನದಲ್ಲಿರುವ ಹಲ್ವಾರ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು. ಪ್ರಧಾನಿ ಮೋದಿ ಸಂತ ಗುರು ರವಿದಾಸ್ ಅವರ 649ನೇ ಜನ್ಮ ದಿನಾಚರಣೆಯಂದು ಪಂಜಾಬ್ಗೆ ಭೇಟಿ ನೀಡಿದರು.
ಇಂದು ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣಾ ಫಲಿತಾಂಶದಲ್ಲಿ ಹಿರಿಯ ನಟಿ ಜಯಮಾಲಾ ಅವರು ಗೆದ್ದು, ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಈ ಹಿಂದೆ 2008 ರಿಂದ 2010 ರ ವರೆಗೆ ಜಯಮಾಲಾ ಕೆಎಫ್ಸಿಸಿ ಅಧ್ಯಕ್ಷೆ ಆಗಿದ್ದರು. ಇದೀಗ 2ನೇ ಬಾರಿಗೆ ಜಯಮಾಲಾ ಅವರು ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿದ್ದಾರೆ. ಉಪಾಧ್ಯಕ್ಷ, ಖಜಾಂಚಿ ಮುಂತಾದ ಪದಾಧಿಕಾರಿಗಳ ಸ್ಥಾನಗಳಿಗೂ ಚುನಾವಣೆ ನಡೆದಿತ್ತು. ಅದರಂತೆ ಗೌರವ ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಸುಂದರ್ ರಾಜ್ ಗೆಲುವು ಸಾಧಿಸಿ, ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.
ಬೆಂಗಳೂರು: ಉಚಿತ ಬಸ್ ಟಿಕೆಟ್ ಗಾಗಿ ಹಿಂದೂ ಮಹಿಳೆಯ ಹೆಸರಿರುವ ಆಧಾರ್ ಕಾರ್ಡ್ ತೋರಿಸಿ ಮುಸ್ಲಿಂ ಮಹಿಳೆ ವಂಚಿಸಿದ್ದಾಳೆ ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕರ್ನಾಟಕದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆಯಲ್ಲಿ ಹಲವು ವಂಚನೆಗಳೂ ಕೇಳಿಬರುತ್ತಿವೆ. ಇದಕ್ಕೆ ಲೇಟೆಸ್ಟ್ ಸೇರ್ಪಡೆ ಈ ಮಹಿಳೆಯ ಪ್ರಕರಣ. ಮುಸ್ಲಿಂ ಮಹಿಳೆಯೊಬ್ಬರು ಬಸ್ ನಲ್ಲಿ ಪ್ರಯಾಣಿಸುವಾಗ ಉಚಿತ ಟಿಕೆಟ್ ಗಾಗಿ ಆಧಾರ್ ಕಾರ್ಡ್ ಒಂದನ್ನು ಕಂಡಕ್ಟರ್ ಗೆ ತೋರಿಸುತ್ತಾರೆ.
ಬೆಂಗಳೂರು: ದೇಹದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾದಲ್ಲಿ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ದೇಹದ ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯದಲ್ಲಿ ಸಮಸ್ಯೆಗಳನ್ನು ಕಾಣಬಹುದು. ಅದರ ಕೊರತೆಯಾದಾಗ ದೇಹವು ಕೆಲವು ಸಂಕೇತಗಳನ್ನು ನೀಡುತ್ತದೆ. ಇದನ್ನು ಸರಿಪಡಿಸಲು ನೀವು ಅನುಸರಿಸಬೇಕಾದ ಆಹಾರ ಕ್ರಮಗಳು ಇಲ್ಲಿವೆ:1. ಆಹಾರದಲ್ಲಿ ಬದಲಾವಣೆ: ಕ್ಯಾಲ್ಸಿಯಂ ಹೆಚ್ಚಿಸಲು ಮಾತ್ರೆಗಳಿಗಿಂತ ನೈಸರ್ಗಿಕ ಆಹಾರ ಉತ್ತಮ: ಹಾಲು ಮತ್ತು ಹಾಲಿನ ಉತ್ಪನ್ನಗಳು: ಹಾಲು, ಮೊಸರು, ಮಜ್ಜಿಗೆ ಮತ್ತು ಪನೀರ್.
ಬೆಂಗಳೂರು: ಡಾಲರ್ ಮೌಲ್ಯ ಕುಸಿತವಾಗಿದೆ, ತಲಾದಾಯದಲ್ಲಿ 136 ರಿಂದ 146ನೇ ಸ್ಥಾನಕ್ಕೆ ಹೋಗಿದ್ದು, ಬಜೆಟ್ನಲ್ಲಿ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದ್ದು, ಇದರಿಂದ ರಾಜ್ಯದಲ್ಲಿ ಪ್ರಹ್ಲಾದ್ ಜೋಶಿ ಹಾಗೂ ಸೋಮಣ್ಣ ಹೇಗೆ ಮುಖ ತೋರಿಸುತ್ತಾರೆ ಎಂದು ಸಚಿವ ಎಂಬಿ ಪಾಟೀಲ್ ಪ್ರಶ್ನೆ ಮಾಡಿದರು. ಬಜೆಟ್ ವಿಚಾರವಾಗಿ ಬೆಂಗಳೂರಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು- ಚೆನ್ನೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಅಭಿವೃದ್ಧಿ ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದರು.
ರಾಮನಗರ: ಇಂದು ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್ನಿಂದ ರಾಜ್ಯಕ್ಕೆ ಯಾವ ಅನುಕೂಲ ಆಗಿಲ್ಲ. ಇನ್ನೂ ಬಜೆಟ್ನಿಂದ ಕರ್ನಾಟಕಕ್ಕೆ ಯಾವುದೇ ದೊಡ್ಡ ಪಾಲು ಬಂದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಕೇಂದ್ರ ಬಜೆಟ್ ಸಂಬಂಧ ಕನಕಪುರದಲ್ಲಿ ಪ್ರತಿಕ್ರಿಯಿಸಿದ ನಾನು ಇಷ್ಟೊತ್ತು ಗಮನಿಸಿದೆ, ಈಗೇನೋ ಯಾವುದೋ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಟ್ಟಿದ್ದಾರೆ. ನಾವು ಮನರೇಗಾ ಹೆಸರಲ್ಲಿ ನಮ್ಮ ಕ್ಷೇತ್ರದಲ್ಲೇ ಮ್ಯಾರಥಾನ್ ಮಾಡಿದ್ದೇವೆ. ಮನರೇಗಾ ಬದಲಾವಣೆ ವಾಪಸ್ ತೆಗೆದುಕೊಳ್ಳಲಿ ಎಂದು ಕೇಳಿಕೊಂಡರು. ಇನ್ನೂ ಕೃಷಿ ವಲಯದಲ್ಲಿ ಎಐ ಬಳಕೆಗೆ ಒತ್ತು ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮನರೇಗಾಗೂ ಕೂಡಾ ಎಐ (AI)
ತಿರುವನಂತಪುರಂ: ನ್ಯೂಜಿಲೆಂಡ್ ವಿರುದ್ಧ ಕೊನೆಯ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡುತ್ತಿದ್ದಾಗ ಅವರ ಪತ್ನಿ ಚಾರುಲತಾ ಏನು ಮಾಡ್ತಿದ್ರು ಗೊತ್ತಾ? ನೀವು ನೋಡಲೇಬೇಕಾದ ವಿಡಿಯೋ ಇಲ್ಲಿದೆ. ನ್ಯೂಜಿಲೆಂಡ್ ವಿರುದ್ಧ ಐದೂ ಟಿ20 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಆಡುವ ಅವಕಾಶ ಪಡೆದಿದ್ದರು. ಆದರೆ ಐದೂ ಪಂದ್ಯಗಳಲ್ಲಿ ಅವರು ವಿಫಲರಾಗಿದ್ದಾರೆ. ಐದನೇ ಪಂದ್ಯ ಸಂಜು ತವರು ಕೇರಳದ ತಿರುವನಂತಪುರಂನಲ್ಲಿ ನಡೆದಿತ್ತು. ಇದೇ ಮೊದಲ ಬಾರಿಗೆ ಸಂಜು ಸ್ಯಾಮ್ಸನ್ ತಮ್ಮ ತವರಿನಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಹೀಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಮೈದಾನಕ್ಕೆ ಬಂದಿದ್ದರು.
ಬಿಗ್ಬಾಸ್ ಸೀಸನ್ 12 ರಿಯಾಲಿಟಿ ಶೋ ಮುಗಿದು ವಾರ ಕಳೆದರೂ ಗಿಲ್ಲಿ ಮೇಲಿನ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಗಿಲ್ಲಿನ ಮೇಲಿನ ಕ್ರೇಜ್ ಹೇಗಿದೆ ಎಂದರೆ ಆತ ಎಲ್ಲಿ ಹೋದರು ಜನರು ಭೇಟಿಗಾಗಿ, ಆತನೊಂದಿಗೆ ಫೋಟೋಗಾಗಿ ಮುತ್ತಿಕ್ಕುತ್ತಿದ್ದಾರೆ.ಆದರೆ ಇದೀಗ ಗಿಲ್ಲಿ ಮೇಲಿನ ಪ್ರೀತಿಯಿಂದ ತನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ ಅಭಿಮಾನಿಯೊಬ್ಬರು ಅಸಮಾಧಾನವನ್ನು ಹೊರಹಾಕಿದ್ದಾರೆ. ಬಿಗ್ಬಾಸ್ ಮನೆಗೆ ಗಿಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದ ಬಂದಿದ್ದ ಅಭಿಮಾನಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಅಭಿಮಾನಿಯನ್ನು ಕಂಡು ಹೊರಗಡೆ ಹೋದ್ಮೆಲೆ ಮೊದಲು ಭೇಟಿಯಾಗಿ ಮಾತನಾಡಿಸುತ್ತೇನೆಂದು ಗೆಲ್ಲಿ ಹೇಳಿಕೊಂಡಿದ್ದರು. ಈ ವಿಚಾರ ಸಂಬಂಧ ಅಭಿಮಾನಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಕನಕಪುರ: ಡಿಕೆ ಶಿವಕುಮಾರ್ ಸಾರಥ್ಯದಲ್ಲಿ ಕನಕಪುರದಲ್ಲಿ ಈಗ ಅದ್ಧೂರಿಯಾಗಿ ಕನಕೋತ್ಸವ ನಡೆಯುತ್ತಿದೆ. ನಿನ್ನೆ ಗಾಯಕ ವಿಜಯ್ ಪ್ರಕಾಶ್ ಭಾಗಿಯಾಗಿದ್ದು ಇಷ್ಟು ಜನರ ಪ್ರೀತಿ ಗಳಿಸಿದ್ದೀಯಲ್ಲಾ ಅಣ್ಣಾ.. ಎಂದು ಹೊಗಳಿದ್ದಾರೆ. ನಿನ್ನೆಯ ದಿನದ ಕಾರ್ಯಕ್ರಮಕ್ಕೆ ವಿಜಯ್ ಪ್ರಕಾಶ್ ಬಂದು ನೆರೆದಿದ್ದ ಜನರ ಮುಂದೆ ಹಾಡಿ ರಂಜಿಸಿದರು. ಈ ವೇಳೆ ಡಿಕೆ ಶಿವಕುಮಾರ್ ಕೂಡಾ ಪ್ರೇಕ್ಷಕರಾಗಿ ಕೂತಿದ್ದರು. ಅಲ್ಲಿದ್ದ ಜನರೆಲ್ಲರೂ ಡಿಕೆ ಡಿಕೆ ಎಂದಿದ್ದಕ್ಕೆ ವಿಜಯ್ ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ. ನೆರೆದಿದ್ದ ಅಷ್ಟು ಜನರನ್ನು ನೋಡಿ ಇಷ್ಟೊಂದು ಜನರ ಪ್ರೀತಿ ಗಳಿಸಿದ್ದೀಯಲ್ಲಾ ಅಣ್ಣಾ ಇದಕ್ಕಿಂತ ಇನ್ನೇನು ಬೇಕು ಎಂದು ಡಿಕೆಯತ್ತ ನೋಡಿ ನಗು ನಗುತ್ತಲೇ ಹೊಗಳಿದ್ದಾರೆ ವಿಜಯ್ ಪ್ರಕಾಶ್.
ನವದೆಹಲಿ: ಈ ಬಾರಿ ಬಜೆಟ್ ನಲ್ಲಿ ಕರ್ನಾಟಕ ಹಲವು ಅನುದಾನಗಳ ನಿರೀಕ್ಷೆಯಲ್ಲಿತ್ತು. ಆದರೆ ನಿರೀಕ್ಷಿಸಿದಷ್ಟು ಅನುದಾನ ಸಿಕ್ಕಿದೆಯೇ? ಇಲ್ಲಿದೆ ವಿವರ. ಕರ್ನಾಟಕ ಈ ಬಾರಿ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಅನುದಾನದ ನಿರೀಕ್ಷೆಯಲ್ಲಿತ್ತು. ಆದರೆ ಅದು ಹುಸಿಯಾಗಿದೆ. ಇದರಿಂದಾಗಿ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ವಾಗ್ದಾಳಿ ನಡೆಸಲು ಮತ್ತೊಂದು ಪ್ರಬಲ ಕಾರಣ ಸಿಕ್ಕಂತಾಗಿದೆ. ಬೆಂಗಳೂರಿಗೆ ಹೈ ಸ್ಪೀಡ್ ರೈಲು ಬಿಟ್ಟು ಬೇರೆ ಯಾವುದೇ ಪ್ರಮುಖ ಘೋಷಣೆಗಳು ಇಲ್ಲ. ಪ್ರತ್ಯೇಕವಾಗಿ ಕರ್ನಾಟಕಕ್ಕೆ ಯಾವುದೇ ಯೋಜನೆಗಳಿಲ್ಲ. ಆದರೆ ಕೃಷಿ ವಲಯಕ್ಕೆ ನೀಡಿದ ಕೊಡುಗೆಗಳಿಂದಲೇ ಕರ್ನಾಟಕ ಲಾಭ ಪಡೆದುಕೊಳ್ಳಬೇಕಾಗಿದೆ.
ನಟ ರಾಮ್ ಚರಣ್ ಹಾಗೂ ಉಪಾಸನಾ ಕೊನಿಡೇಲಾ ದಂಪತಿ ಅವಳಿ ಮಕ್ಕಳನ್ನು ಸ್ವಾಗತಿಸಿದ್ದಾರೆ. ಒಂದು ಗಂಡು ಹಾಗೂ ಹೆಣ್ಣು ಮಗುವನ್ನು ಶುಕ್ರವಾರ ಮಧ್ಯರಾತ್ರಿ ಸ್ವಾಗತಿಸಿದ್ದಾರೆ. ಈ ಖುಷಿಯ ವಿಚಾರವನ್ನು ನಟ ಚಿರಂಜೀವಿ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತವಾಗಿ ದೃಢಪಡಿಸಿದರು. ಅಪಾರ ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿದ ಹೃದಯದಿಂದ, ರಾಮ್ಚರಣ್ ಮತ್ತು ಉಪಾಸನಾ ಕೊನಿಡೇಲಾ ಅವರಿಗೆ ಅವಳಿ ಮಕ್ಕಳು - ಗಂಡು ಮಗು ಮತ್ತು ಹೆಣ್ಣು ಮಗು ಜನಿಸಿರುವ ವಿಚಾರ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಶಿಶುಗಳು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಮತ್ತು ಚೆನ್ನಾಗಿದ್ದಾರೆ.
ಶಿವಮೊಗ್ಗ: ಪ್ರಧಾನಮಂತ್ರಿಗಳ ವಿಕಸಿತ ಭಾರತದ ಸಂಕಲ್ಪಕ್ಕೆ ಪೂರಕವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಮಂಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.ಕೇಂದ್ರದ ಆಯವ್ಯಯಪತ್ರ ಮಂಡನೆಯನ್ನು ಇಂದು ವೀಕ್ಷಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. 3 ಕರ್ತವ್ಯಶಕ್ತಿಗಳ ಆಧಾರದ ಮೇಲೆ ಮಂಡಿಸಲ್ಪಟ್ಟ ಬಜೆಟ್ ಇದಾಗಿದೆ. ಉತ್ಪಾದನಾ ಹೆಚ್ಚಳ, ಜನರ ಆಶೋತ್ತರಗಳ ಈಡೇರಿಕೆ ಹಾಗೂ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ತಮ್ಮ ಬಜೆಟ್ ಮಂಡಿಸಿದ್ದಾರೆ ಎಂದು ವಿವರಿಸಿದರು.
ಮುಂಬೈ: ಮಹಾರಾಷ್ಟ್ರದಲ್ಲಿ ಮೊನ್ನೆಯಷ್ಟೇ ವಿಮಾನ ಪತನವಾಗಿ ಡಿಸಿಎಂ ಅಜಿತ್ ಪವಾರ್ ನಿಧನರಾಗಿದ್ದರು. ಇದಾಗಿ ಎರಡೇ ದಿನಕ್ಕೇ ಅವರ ಪತ್ನಿ ಉಪ ಮುಖ್ಯಮಂತ್ರಿಯಾಗಿ ಅವರ ಸ್ಥಾನಕ್ಕೆ ಬಂದಿದ್ದಾರೆ. ಇದರ ಹಿಂದಿನ ಮಾಸ್ಟರ್ ಪ್ಲ್ಯಾನ್ ಯಾರದ್ದು ಎಂಬ ಬಗ್ಗೆ ಈಗ ಗುಸು ಗುಸು ಚರ್ಚೆಯಾಗುತ್ತಿದೆ. ಪತಿಯ ಚಿತೆ ಆರುವ ಮುನ್ನವೇ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೆಲ್ಲಾ ಕೆಲವೇ ಗಂಟೆಗಳಲ್ಲಿ ನಡೆದು ಹೋಗಿತ್ತು. ಹಲವರು ಕನಿಷ್ಠ ಪಕ್ಷ ಅಜಿತ್ ಪವಾರ್ 11 ನೆಯ ದಿನದ ಕಾರ್ಯಕ್ರಮ ಮುಗಿಯುವವರೆಗಾದರೂ ಕಾಯಬಹುದಿತ್ತಲ್ಲವೇ ಎಂದೂ ಕಾಮೆಂಟ್ ಮಾಡಿದವರಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ತೆರಿಗೆ ವಿಚಾರದಲ್ಲಿ ಯಾವುದಕ್ಕೆ ವಿನಾಯ್ತಿ ನೀಡಿದ್ದಾರೆ, ಯಾವುದು ದುಬಾರಿಯಾಗುತ್ತದೆ ಇಲ್ಲಿದೆ ವಿವರ. ಈ ಬಾರಿ ಬಜೆಟ್ ನಲ್ಲಿ ಆದಾಯ ತೆರಿಗೆ ಮಿತಿ ಇಳಿಕೆಯಾಗಬಹುದಾ, ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕಗಳು ಕಡಿಮೆಯಾಗಬಹುದಾ? ಎಂಬಿತ್ಯಾದಿ ನಿರೀಕ್ಷೆಗಳಿತ್ತು. ಆದರೆ ಚಿನ್ನ, ಬೆಳ್ಳಿ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. ಆದರೆ ತೆರಿಗೆಯಲ್ಲೂ ವಿದೇಶೀ ಪ್ರವಾಸ, ಪ್ರವಾಸೋದ್ಯಮ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಘೋಷಣೆ ಮಾಡಿದ್ದಾರೆ. ಏಪ್ರಿಲ್ 1 ರಿಂದ ಹೊಸ ತೆರಿಗೆ ಕಾನೂನು ಜಾರಿಗೆ ಬರಲಿದ್ದು, ರಿಟರ್ನ್ ಫಾರ್ಮ್ ಗಳನ್ನು ಜನ ಸಾಮಾನ್ಯರೂ ಫೈಲ್ ಮಾಡುವಂತೆ ಸರಳೀಕೃತಗೊಳಿಸುವುದಾಗಿ ಹೇಳಿದ್ದಾರೆ.
ಮುಂಬೈ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2026 ಮಂಡಿಸಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಅಲ್ಲೋಕಲ್ಲೋಲವಾಗಿದೆ. ಸಹಜವಾಗಿಯೇ ಬಜೆಟ್ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿ ಬಜೆಟ್ ಘೋಷಣೆಯಾದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಭಾರೀ ಇಳಿಕೆ ಕಂಡಿದೆ. ಇದು ಆರಂಭದ ಟ್ರೆಂಡ್. ಬಜೆಟ್ ನಲ್ಲಿ ಘೋಷಿಸಿದ ಕೆಲವೊಂದು ಯೋಜನೆಗಳಿಗೆ ಸಂಬಂಧಿಸಿದ ಉತ್ಪನ್ನಗಳ ಷೇರು ಮೌಲ್ಯ ಮುಂದೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಬಾರಿ ಬಜೆಟ್ ನಲ್ಲಿ ಚಿನ್ನ, ಬೆಳ್ಳಿ ಮೇಲಿನ ಸುಂಕ ಇಳಿಕೆ ಮಾಡುತ್ತಾರಾ ಎಂಬ ನಿರೀಕ್ಷೆಗಳಿತ್ತು.
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2026 ರನ್ನು ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್ ಯುವ ಶಕ್ತಿ ಕೇಂದ್ರೀಕೃತ ಬಜೆಟ್ ಎಂದು ನಿರ್ಮಲಾ ಸೀತಾರಾಮನ್ ಬಣ್ಣಿಸಿದ್ದಾರೆ. ಈ ಬಾರಿ ಬಜೆಟ್ ನಲ್ಲಿ ಯುವ ಶಕ್ತಿ, ಮಹಿಳೆಯರು, ಕೃಷಿ, ಪ್ರವಾಸೋದ್ಯಮಕ್ಕೆ ಕೆಲವು ವಿಶೇಷ ಯೋಜನೆಗಳನ್ನು ಘೋಷಿಸಲಾಗಿದೆ. 2047 ಕ್ಕೆ ಭಾರತವನ್ನು ಸೂಪರ್ ಪವರ್ ರಾಷ್ಟ್ರವಾಗಿಸುವ ಗುರಿ ಪ್ರಧಾನಿ ಮೋದಿ ಹೊಂದಿದ್ದಾರೆ. ಅದಕ್ಕಾಗಿ ಯುವಶಕ್ತಿಯನ್ನು ಕೇಂದ್ರೀಕರಿಸಿ ಯೋಜನೆಗಳನ್ನು ಘೋಷಿಸಲಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಘೋಷಿಸಿದರು. ಈ ಬಾರಿ ಘೋಷಿಸಲಾದ ಹೊಸ ಯೋಜನೆಗಳ ಪಟ್ಟಿ ಇಲ್ಲಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಕೆಲವು ವಸ್ತುಗಳ ಮೇಲಿನ ಸುಂಕ ಇಳಿಕೆ ಮಾಡಿದ್ದರೆ ಮತ್ತೆ ಕೆಲವು ದುಬಾರಿಯಾಗಿವೆ. ಯಾವೆಲ್ಲಾ ವಸ್ತುಗಳು ದುಬಾರಿಯಾಗಿವೆ, ಯಾವೆಲ್ಲಾ ವಸ್ತುಗಳು ಇಳಿಕೆಯಾಗಿವೆ ಇಲ್ಲಿದೆ ನೋಡಿ ವಿವರ. ಈ ಬಾರಿ ಮಾರಕ ರೋಗಗಳ ಔಷಧಿಗಳ ಮೇಲಿನ ಆಮದು ಸುಂಕ ಇಳಿಕೆ ಮಾಡಿರುವುದು ಮಧ್ಯಮ ವರ್ಗದವರಿಗೆ ಬಿಗ್ ರಿಲೀಫ್ ನೀಡಲಿದೆ. ಕ್ಯಾನ್ಸರ್, ಮಧುಮೇಹಕ್ಕೆ ಸಂಬಂಧಿಸಿದ ಔಷಧಿಗಳ ಮೇಲಿನ ಸುಂಕ ಇಳಿಕೆಯಾಗಿದೆ. ಒಟ್ಟು 7 ಖಾಯಿಲೆಗಳ ಔಷಧಿಗಳ ಸುಂಕ ಇಳಿಕೆಯಾಗಿದೆ. ಇದರಿಂದ ಔಷಧಿ ಖರೀದಿ ಕೊಂಚ ಅಗ್ಗವಾಗಲಿದೆ. ಜೊತೆಗೆ ದುಬಾರಿ ಬೆಲೆಯ ಔಷಧಿಗಳ ಆಮದು ಬೆಲೆಯೂ ಇಳಿಕೆಯಾಗಲಿದೆ.
ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದ ಬೆಂಗಳೂರನ್ನು ಒಳಗೊಂಡಂತೆ ಭರ್ಜರಿ ಯೋಜನೆಯೊಂದನ್ನು ಘೋಷಿಸಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಹೈಸ್ಪೀಡ್ ರೈಲು ಯೋಜನೆ ಘೋಷಿಸುವ ನಿರೀಕ್ಷೆಯಿತ್ತು. ಅದರಂತೆ ಬೆಂಗಳೂರು ಒಳಗೊಂಡಂತೆ ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಹೈಸ್ಪೀಡ್ ರೈಲು ಯೋಜನೆಯನ್ನು ಘೋಷಿಸಲಾಗಿದೆ. ಹೈಸ್ಪೀಡ್ ಕಾರಿಡಾರ್ ಯೋಜನೆಯಲ್ಲಿ ಪ್ರಮುಖ ನಗರಗಳನ್ನು ಸಂಪರ್ಕಿಸುವ 7 ಹೈಸ್ಪೀಡ್ ರೈಲು ಘೋಷಿಸಲಾಗಿದೆ. ಚೆನ್ನೈ-ಬೆಂಗಳೂರು, ಮುಂಬೈ - ಪುಣೆ, ಹೈದರಾಬಾದ್-ಬೆಂಗಳೂರು, ಮುಂಬೈ-ಪುಣೆ, ದೆಹಲಿ-ವಾರಣಾಸಿ, ಪುಣೆ-ಹೈದರಾಬಾದ್, ಹೈದರಾಬಾದ್-ಚೆನ್ನೈ ವಾರಣಾಸಿ-ಸಿಲಿಗುರಿ ಹೈಸ್ಪೀಡ್ ರೈಲುಗಳನ್ನು ಘೋಷಿಸಲಾಗಿದೆ.
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2026 ರನ್ನು ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್ ಯುವ ಶಕ್ತಿ ಕೇಂದ್ರೀಕೃತ ಬಜೆಟ್ ಎಂದು ನಿರ್ಮಲಾ ಸೀತಾರಾಮನ್ ಬಣ್ಣಿಸಿದ್ದಾರೆ. ನಾವು ಶೇ.7 ರಷ್ಟು ಅಭಿವೃದ್ಧಿ ಹೊಂದಿದ್ದೇವೆ. ಜಾಗತಿಕ ಮಾರುಕಟ್ಟೆಯೊಂದಿಗೆ ಪೈಪೋಟಿ ನೀಡುತ್ತಿದ್ದೇವೆ. ನಾವು ಜಗತ್ತಿನ ನಂ.1 ಆರ್ಥಿಕ ಶಕ್ತಿಯಾಗಿ ಬೆಳೆಯುವ ಗುರಿ ಹೊಂದಿದ್ದೇವೆ ಎಂದು ವಿತ್ತ ಸಚಿವೆ ಹೇಳಿದ್ದಾರೆ. ಹಲವು ಅನಿಶ್ಚಿತತೆಗಳ ನಡುವೆಯೂ ನಾವು ಆರ್ಥಿಕ ಸ್ಥಿರತೆ ಕಾಯ್ದುಕೊಂಡಿದ್ದೇವೆ ಎಂದಿದ್ದಾರೆ. 10 ಸಾವಿರ ಕೋಟಿ ರೂ ವೆಚ್ಚದಲ್ಲಿ ಬಯೋಫಾರ್ಮ್ ಇಂಡಸ್ಟ್ರಿ ಸ್ಥಾಪಿಸಲಿದ್ದೇವೆ.
ನವದೆಹಲಿ: ಸಂಸತ್ ನಲ್ಲಿ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದು ಅದಾದ ತಕ್ಷಣವೇ ಪ್ರಧಾನಿ ಮೋದಿ ಈ ಒಂದು ಸ್ಥಳಕ್ಕೆ ತುರ್ತಾಗಿ ಭೇಟಿ ನೀಡಲಿದ್ದಾರೆ. ಸಂಸತ್ ನಲ್ಲಿ ಇದೇ ಮೊದಲ ಬಾರಿ ಭಾನುವಾರ ಬಜೆಟ್ ಮಂಡನೆಯಾಗುತ್ತಿದೆ. ಫೆಬ್ರವರಿ 1 ರಂದು ಬಜೆಟ್ ಮಂಡಿಸುವ ಸಂಪ್ರದಾಯ ಮುರಿಯದಿರಲು ಈ ಬಾರಿ ಭಾನುವಾರವಾದರೂ ಬಜೆಟ್ ಮಂಡನೆಯಾಗುತ್ತಿದೆ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಪ್ರಧಾನಿ ಮೋದಿ ಸಂಸತ್ ನಲ್ಲಿರಲಿದ್ದಾರೆ. ಅದಾದ ಬಳಿಕ ಅವರು ತುರ್ತಾಗಿ ಪಂಜಾಬ್ ನ ಜಲಂಧರ್ ಗೆ ಭೇಟಿ ನೀಡಲಿದ್ದಾರೆ. ಅದಕ್ಕೆ ಒಂದು ಕಾರಣವೂ ಇದೆ.
ನವದೆಹಲಿ: ಕೇಂದ್ರ ಬಜೆಟ್ 2026 ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಉಟ್ಟಿರುವ ಸೀರೆಗೂ ವಿಶೇಷತೆಯಿದೆ. ಪ್ರತೀ ಬಾರಿಯೂ ಬಜೆಟ್ ನಷ್ಟೇ ನಿರ್ಮಲಾ ಸೀತಾರಾಮನ್ ಉಡುವ ಸೀರೆಗಳಿಗೂ ವಿಶೇಷತೆಯಿರುತ್ತದೆ. ಆ ಸಂದರ್ಭದಲ್ಲಿ ಯಾವ ರಾಜ್ಯಗಳಲ್ಲಿ ಚುನಾವಣೆ ಇರುತ್ತದೋ, ಇನ್ನೇನೋ ವಿಶೇಷತೆಯಿರುತ್ತದೋ ಅಲ್ಲಿಗೆ ಸಂಬಂಧಿಸಿದ ಸೀರೆಯನ್ನೇ ನಿರ್ಮಲಾ ಇದುವರೆಗೂ ಉಟ್ಟಿದ್ದಾರೆ. ಮೇಲ್ನೋಟಕ್ಕೆ ಅವರ ಉಡುಗೆ ಸರಳವಾಗಿದ್ದರೂ ಅದಕ್ಕೊಂದು ಅರ್ಥವಿರುತ್ತದೆ. ಈ ಬಾರಿ ಪಂಚ ರಾಜ್ಯ ಚುನಾವಣೆ ನಡೆಯಲಿದ್ದು ಈ ಪೈಕಿ ತಮ್ಮ ತವರು ತಮಿಳುನಾಡು ಕೂಡಾ ಆ ರಾಜ್ಯಗಳ ಪೈಕಿ ಒಂದಾಗಿದೆ.
ಬೆಂಗಳೂರು: ಕೇಂದ್ರ ಬಜೆಟ್ ಗೆ ಮುನ್ನ ಚಿನ್ನದ ದರ ಭರ್ಜರಿ ಇಳಿಕೆ ಕಂಡಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ಭಾರೀ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತ ಏರಿಕೆ ಮತ್ತು ಇಳಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಏರಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಮತ್ತೆ ಇಳಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,70,280.00 ರೂ.ಗಳಿತ್ತು. ಇಂದು 1,64,290.00 ರೂ.ಗಳಷ್ಟಾಗಿದೆ.