ಆಕ್ಸಿಡೆಂಟ್ ಆದ ವೇಳೆ ವಾಹನದಲ್ಲಿದ್ದ ವ್ಯಕ್ತಿಗಳಿಗೆ ಏನಾಯ್ತು ಅನ್ನೋದನ್ನು ಬಿಟ್ಟು ರೋಡ್ನಲ್ಲಿ ಬಿದ್ದಿದ್ದ ಜ್ಯೂಸ್ ಅನ್ನೇ ಆರಿಸಿಕೊಂಡ ಘಟನೆ ಆಂಧ್ರದಲ್ಲಿ ವರದಿಯಾಗಿದೆ. ಇದರ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಆಂಧ್ರಪ್ರದೇಶದಲ್ಲಿ ರಸ್ತೆ ಅಪಘಾತದ ನಂತರದ ಗೊಂದಲದ ಘಟನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಗಾಯಗೊಂಡ ಚಾಲಕ ಮತ್ತು ಕ್ಲೀನರ್ ಗಮನಿಸದೆ ಟ್ರಕ್ನಿಂದ ಬಿದ್ದಿದ್ದ ತಂಪು ಪಾನೀಯದ ಪೆಟ್ಟಿಗೆಗಳನ್ನು ಲೂಟಿ ಮಾಡಿದ್ದಾರೆ.ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಘಟನೆಯು ತುರ್ತು ಸಂದರ್ಭಗಳಲ್ಲಿ ನಾಗರಿಕ ಪ್ರಜ್ಞೆ ಮತ್ತು ಸಾರ್ವಜನಿಕ
ಬರುತ್ತಿದ್ದ ವಾಹನವನ್ನು ನಿಲ್ಲಿಸಿ ತಮಗೆ ರಸ್ತೆ ದಾಟಲು ಅನುವು ಮಾಡಿಕೊಟ್ಟ ವ್ಯಕ್ತಿಯೊಬ್ಬನಿಗೆ ಹಿಂಡಿನಲ್ಲಿದ್ದ ತಾಯಿ ಆನೆಗಳು ನಮಸ್ಕರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ವಿಡಿಯೋದಲ್ಲಿ ರಸ್ತೆಯ ಒಂದು ಬದಿಯಲ್ಲಿ ಆನೆಗಳ ಹಿಂಡು ಕಾದು ಕುಳಿತಿತ್ತು. ಇದನ್ನು ನೋಡಿದ ವ್ಯಕ್ತಿ ಬರುತ್ತಿದ್ದ ವಾಹನವನ್ನು ನಿಲ್ಲಿಸಿದ್ದಾನೆ. ಅದಲ್ಲದೆ ಆನೆಗಳು ರಸ್ತೆ ದಾಟುವವರೆಗೆ ಕಾದು ನಿಂತಿದ್ದಾನೆ. ಹಿಂಡಿನಲ್ಲಿದ್ದ ತಾಯಿ ಆನೆಗಳು ವ್ಯಕ್ತಿಯ ಸಹಕಾರಕ್ಕೆ ನಮಸ್ಕರಿಸಿ ಮುಂದೆ ಸಾಗಿದೆ. ವ್ಯಕ್ತಿಯ ಸಹಕಾರ ಮನೋಭಾವ, ಆನೆಗಳ
ಕೊಲಂಬೋ: ಅಮೆರಿಕವು ತನ್ನ ಎರಡು ಯುದ್ಧ ವಿಮಾನಗಳನ್ನು ನಾಗರಿಕ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲು ಶ್ರೀಲಂಕಾದ ಬಳಿ ಅಮೆರಿಕ ಅನುಮತಿ ಕೇಳಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.ಸಂಸತ್ತಿನಲ್ಲಿ ಈ ವಿಚಾರ ತಿಳಿದು ಬಂದಿದ್ದು, ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರು, ಎರಡು ಯುದ್ಧ ವಿಮಾನಗಳನ್ನು ನಿಲ್ಲಿಸಲು ಅನುಮತಿ ನೀಡುವಂತೆ ಅಮೆರಿಕ ಮನವಿ ಮಾಡಿದೆ. ಆದರೆ ನಮ್ಮ ತಟಸ್ಥ ನೀತಿಯನ್ನು ಕಾಪಾಡಿಕೊಳ್ಳಲು ನಾವು ಅನುಮತಿ ನೀಡಲಿಲ್ಲ ಎಂದು ಹೇಳಿದರು.ಜಿಬೌಟಿಯ ನೆಲೆಯಿಂದ ಹೊರಟ ಎಂಟು ಹಡಗು ವಿರೋಧಿ ಕ್ಷಿಪಣಿಗಳಿದ್ದ ಎರಡು ಯುದ್ಧ ವಿಮಾನಗಳನ್ನು ಮಾರ್ಚ್ 4 ರಿಂದ 8
ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ವಿರುದ್ಧ ದಾಖಲಿರುವ ₹2,929 ಕೋಟಿ ವಂಚನೆ ಪ್ರಕರಣ ಸಂಬಂಧ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದೆ.ಸಿಬಿಐನ ಪ್ರಕರಣದ ವಿವರಗಳ ಪ್ರಕಾರ, ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯುಕೋ ಬ್ಯಾಂಕ್ ಆಫ್ ಇಂಡಿಯಾ, ಯುಕೋ ಬ್ಯಾಂಕ್, ಯುಕೋ ಬ್ಯಾಂಕ್, ಯೂನಿಯನ್-ಸಿ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನಿಂದ ಸ್ವೀಕರಿಸಿದ ದೂರಿನ ಮೇರೆಗೆ
ಸೇಲಂ-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಹು-ವಾಹನ ಡಿಕ್ಕಿಯಾಗಿ ಗರ್ಭಿಣಿ ಸೇರಿದಂತೆ, 11ತಿಂಗಳ ಮಗು ಸೇರಿ 8ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಇಂದು ವರದಿಯಾಗಿದೆ. ದುರ್ಘಟನೆಯಲ್ಲಿ ಇತರ ನಾಲ್ವರು ಗಮಭೀರವಾಗಿ ಗಾಯಗೊಂಡಿದ್ದಾರೆ. 30ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಸೇಲಂಗೆ ತೆರಳುತ್ತಿದ್ದ ಸರಕಾರಿ ಬಸ್ ಉತಮಸೋಲಪುರಂ ಬಳಿ ನಿಯಂತ್ರಣ ತಪ್ಪಿದೆ. ಸೇಲಂ ಜಿಲ್ಲೆಯ ಪೆರಿಯಾ ವನವಾಸಿಯ ಅಯ್ಯಂದೂರೈ (49) ಅವರು ಚಲಾಯಿಸುತ್ತಿದ್ದ ಬಸ್ ಬ್ರೇಕ್ ವೈಫಲ್ಯದಿಂದ ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದೆ.ಹೆದ್ದಾರಿಯ ಎದುರು ಬದಿಗೆ ಪಲ್ಟಿಯಾದ ಬಸ್ ದ್ವಿಚಕ್ರ ವಾಹನ ಮತ್ತು ಪಿಕಪ್ ವ್ಯಾನ್ಗೆ ಡಿಕ್ಕಿ ಹೊಡೆದಿದೆ. ದೇವಸ್ಥಾನದ
ತೆಲಂಗಾಣ ರಾಜ್ಯ ಗದ್ದರ್ ಪ್ರಶಸ್ತಿ ಸಮಾರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ದಿ ಗರ್ಲ್ಫ್ರೆಂಡ್ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಈ ಸಂದರ್ಭದಲ್ಲಿ ರಶ್ಮಿಕಾ ಅವರ ಅತ್ತೆ ಮಾಧವಿ ಕೂಡಾ ಸಮಾರಂಭದಲ್ಲಿ ಹಾಜರಿದ್ದರು. ವೇದಿಕೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ರಾಮ್ ಚರಣ್ ಅವರಿಗೆ ಪ್ರಶಸ್ತಿ ಮತ್ತು ₹ 10 ಲಕ್ಷ ನಗದು ಬಹುಮಾನವನ್ನು ನೀಡಿದಾಗ ರಶ್ಮಿಕಾ ಉತ್ಸುಕಳಾಗಿ ಕಾಣಿಸಿಕೊಂಡರು. ನಂತರ ಅವರು ನಿರ್ದೇಶಕ ರಾಹುಲ್ ರವೀಂದ್ರನ್ ಮತ್ತು ಅವರ ಸಹನಟ ದೀಕ್ಷಿತ್ ಶೆಟ್ಟಿಗೆ ಧನ್ಯವಾದ ಹೇಳಿದರು. "ನನ್ನ ಅಭಿನಯಕ್ಕಾಗಿ ನಾನು ಟ್ರೋಲ್ ಆಗುವ ಸಮಯವಿತ್ತು. ಆದರೆ ಈಗ, ನನ್ನ ಅಭಿನಯಕ್ಕಾಗಿ ನನಗೆ ರಾಜ್ಯದಿಂದ ಪ್ರಶಸ್ತಿ
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಇರಾನ್, ಇರಾಕ್, ಇಸ್ರೇಲ್ ಮತ್ತು ನೆರೆಯ ಪ್ರದೇಶಗಳು ಸೇರಿದಂತೆ ಹೆಚ್ಚಿನ ಅಪಾಯದ ವಾಯುಪ್ರದೇಶಗಳಲ್ಲಿ ಕಾರ್ಯನಿರ್ವಹಿಸದಂತೆ ಭಾರತದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಎಲ್ಲಾ ಭಾರತೀಯ ವಿಮಾನಯಾನ ಕಂಪನಿಗಳಿಗೆ ಸಲಹೆ ನೀಡಿದೆ. ಭೌಗೋಳಿಕ ರಾಜಕೀಯ ಅಪಾಯಗಳು ತೀವ್ರಗೊಳ್ಳುತ್ತಿದ್ದಂತೆ ಈ ಕ್ರಮವು ಬಂದಿದೆ. ವಿಮಾನಯಾನ ಸಂಸ್ಥೆಗಳು ಮಾರ್ಗಗಳನ್ನು ಮರು ಮೌಲ್ಯಮಾಪನ ಮಾಡಲು ಮತ್ತು ಪ್ರಯಾಣಿಕರ ಮತ್ತು ಸಿಬ್ಬಂದಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಕಸ್ಮಿಕ ಕ್ರಮಗಳನ್ನು ಬಲಪಡಿಸಲು ಪ್ರೇರೇಪಿಸುತ್ತದೆ.
ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಗಲ್ಫ್ ಪ್ರದೇಶದಾದ್ಯಂತ ನಡೆದ ಪ್ರತ್ಯೇಕ ಘಟನೆಗಳಲ್ಲಿ ಆರು ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಹೇಳಿದ್ದಾರೆ. ಸಹಾಯ ಮತ್ತು ವಾಪಸಾತಿಗಾಗಿ ಭಾರತೀಯ ಮಿಷನ್ಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿವೆ. ಅಂತರ ಸಚಿವಾಲಯದ ಬ್ರೀಫಿಂಗ್ ಅನ್ನು ಉದ್ದೇಶಿಸಿ ಮಾತನಾಡಿದ ಎಂಇಎ ಹೆಚ್ಚುವರಿ ಕಾರ್ಯದರ್ಶಿ (ಗಲ್ಫ್) ಅಸೀಮ್ ಆರ್ ಮಹಾಜನ್, ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ಮೃತರನ್ನು ಭಾರತಕ್ಕೆ ಹಿಂದಿರುಗಿಸಲು ಹಲವಾರು ದೇಶಗಳಲ್ಲಿನ ಭಾರತೀಯ ಮಿಷನ್ಗಳು ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ವೃಂದಾವನ: ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ ವೃಂದಾವನದಲ್ಲಿರುವ ಬಾಬಾ ನೀಮ್ ಕರೋಲಿ ಜಿ ಅವರ ಪವಿತ್ರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಉತ್ತರ ಪ್ರದೇಶ ರಾಜ್ಯಪಾಲ ಆನಂದಿ ಬೆನ್ ಪಟೇಲ್ ಅವರು ರಾಷ್ಟ್ರಪತಿಗಳೊಂದಿಗೆ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಪೂಜ್ಯ ಸಂತ ಪ್ರೇಮಾನಂದ ಮಹಾರಾಜ್ ಅವರನ್ನು ಅವರ ಶ್ರೀ ಹಿಟ್ ರಾಧಾ ಕೇಲಿ ಕುಂಜ್ ಆಶ್ರಮದಲ್ಲಿ ಭೇಟಿಯಾದರು ಮತ್ತು ಗುರುವಾರ ವೃಂದಾವನದ ಶ್ರೀ ರಾಮಂಯೋಧ್ಯಾ ಮನ್ಯೋ ಆಶ್ರಮಕ್ಕೆ ಭೇಟಿ ನೀಡಿದ್ದರು.
ಕಲಬುರಗಿ: ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರು ಮನಸ್ಸು ಮಾಡಿದರೆ ಕಲಬುರಗಿಯಲ್ಲಿ ಏರ್ಪೋರ್ಟ್ ಆರಂಭವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲೇವಡಿ ಮಾಡಿದರು. ಕಲಬುರಗಿಯಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಬಜೆಟ್ಗೆ ಆಡಳಿತ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿದೆ. ಇನ್ನೂ ರಾಜ್ಯದ ಜನರ ಭರವಸೆ ನುಚ್ಚು ನೂರಾಗಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಇಲ್ಲವಾಗಿದೆ. ಇನ್ನೂ ಸಿದ್ದರಾಮಯ್ಯನವರ ಬಜೆಟ್ ದೂರದೃಷ್ಟಿ ಇಲ್ಲದ ಬಜೆಟ್ ಆಗಿದೆ ಎಂದು ಟೀಕೆ ಮಾಡಿದರು.ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಿಲ್ಲ. ಇನ್ನೂ ಮೋದಿ ಬಗ್ಗೆ ಸಚಿವ ಖರ್ಗೆ ಅವರು ಟೀಕೆ ಮಾಡುತ್ತಾರೆ. ಆದರೆ ಅವರ
ವಾರಣಾಸಿ: ಇಲ್ಲಿನ ಗಂಗಾ ನದಿಯಲ್ಲಿ ದೋಣಿಯಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದ ವೇಳೆ ಚಿಕನ್ ಬಿರಿಯಾನಿ ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ 14 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಮುಖ್ಯಸ್ಥ ರಜತ್ ಜೈಸ್ವಾಲ್ ಸೋಮವಾರ ಸಲ್ಲಿಸಿದ ಲಿಖಿತ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗಂಗಾನದಿಯಲ್ಲಿ ದೋಣಿಯಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗಿದ್ದು, ಈ ವೇಳೆ ಚಿಕನ್ ಬಿರಿಯಾನಿ ಸೇವಿಸಲಾಗಿದೆ ಎಂದು ಜೈಸ್ವಾಲ್ ಆರೋಪಿಸಿದ್ದಾರೆ.
ಬೆಂಗಳೂರು: ಧುರಂದರ್1ನಲ್ಲಿ ಎನರ್ಜಿ ಇತ್ತು, ಜನ ಎಂಜಾಯ್ ಮಾಡುತ್ತಿದ್ದರು. ಆದರೆ ಧುರಂದರ್2 ಯಾಕಮಾಡಬೇಕಿತ್ತು ಎಂಬ ಪ್ರಶ್ನೆ ಹುಟ್ಟುತ್ತದೆ ಎಂದು ಸಿನಿಮಾ ವೀಕ್ಷಿಸಿದ ಖ್ಯಾತ ನಟ ರಮ್ಯಾ ಅಸಮಾಧಾನ ಹೊರಹಾಕಿದ್ದಾರೆ. ಈ ಸಂಬಂಧ ಅವರು ಸಾಮಾಜಿಕ ಜಾಲತಾನ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಇದು ಅಂತ್ಯವಿಲ್ಲದ ಅಧ್ಯಾಯಗಳನ್ನು ಹೊಂದಿರುವ ತುಂಬಾ ನೀರಸ ವಿಷಯದ ಪಠ್ಯಪುಸ್ತಕವನ್ನು ಓದಿದ ಅನುಭವ ನೀಡುತ್ತದೆ. ಒಂದು ಹಂತಕ್ಕೆ ನಿಮ್ಮ ಮೆದುಳು ಕೈಕೊಟ್ಟು, ಮುಂದೆ ನಡೆಯುತ್ತಿರುವ ಈ ದುರಂತ ನೋಡಿ ನಗೋಕೆ ಶುರುಮಾಡುತ್ತದೆ" ಎಂದಿದ್ದಾರೆ.ನೀವು ನಿಜವಾಗಿಯೂ ಈ ಸಿನಿಮಾ ನೋಡಲು ಬಯಸಿದರೆ, ದಯವಿಟ್ಟು ಥಿಯೇಟರ್ನಲ್ಲಿ ನಿಮ್ಮ ಸಮಯ ಮತ್ತು ಹಣವನ್ನು
ವಾಣಿಜ್ಯ ಸಿಲಿಂಡರ್ಗಳ ಕೊರತೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯನವರು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಎಲ್ ಪಿಜಿ ಬಿಕ್ಕಟ್ಟು ಕರ್ನಾಟಕದಾದ್ಯಂತ ಪೂರೈಕೆ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಗಳ ಕೊರತೆಯನ್ನು ನೀಗಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಹರ್ದೀಪ್ ಎಸ್ಪುರಿಗೆ ಪತ್ರವನ್ನು ಬರೆದು ಹೇಳಿದ್ದಾರೆ. ರಾಜ್ಯ ಸರ್ಕಾರವು ಈಗಾಗಲೇ ಅಗತ್ಯ ವಲಯಗಳಿಗೆ ಪೂರೈಕೆಯನ್ನು ನಿಯಂತ್ರಿಸಲು ಮತ್ತು ಆದ್ಯತೆ ನೀಡಲು ಕ್ರಮಗಳನ್ನು
ಕಲಬುರ್ಗಿ: ಉಪ ಚುನಾವಣೆ ನಡೆಯುವ ರಾಜ್ಯದ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದೆ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗಳಿಗೆ ಸಂಬಂಧಿಸಿ ನಮ್ಮ ಪಕ್ಷದ ವರಿಷ್ಠರು ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಬಾಗಲಕೋಟೆಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ್, ದಾವಣಗೆರೆ ದಕ್ಷಿಣಕ್ಕೆ ಶ್ರೀನಿವಾಸ ದಾಸ್ ಕರಿಯಪ್ಪ ಅವರ ಹೆಸರನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಜೋರಾಗಿ ಹಾಡು ಹೇಳಿ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದ್ದ ಆರೋಪದ ಮೇರೆಗೆ ಹನ್ನೊಂದು ಯುವತಿಯರ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.ಈ ಘಟನೆಯು ಮಾರ್ಚ್ 15 ರ ರಾತ್ರಿ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಿಂದ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ ನಡೆದಿದೆ. ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳುತ್ತಿದ್ದ ಯುವತಿಯರ ಗುಂಪೊಂದು ಮೆಟ್ರೋದಲ್ಲಿ ಜೋರಾಗಿ ಹಾಡು ಹಾಡಿ ನೃತ್ಯ ಮಾಡಿ ಸಂಭ್ರಮಿಸಿದೆ. ಇದು ಅಲ್ಲೇ ಇದ್ದ ಸಹಪ್ರಯಾಣಿಕರಿಗೆ ತೊಂದರೆಯಾಗಿದೆ.
ಶಿವಮೊಗ್ಗ:ನೀರಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ವನ್ಯಜೀವಿ ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಅವರು ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಿಂಗಳ ಹಿಂದೆಯಷ್ಟೇ ಇಲ್ಲಿನ ತಾವರೆಕೊಪ್ಪ ಹುಲಿ ಸಿಂಹ ಧಾಮಕ್ಕೆ ತರಭೇತಿಗೆಂದು ನೇಮಗೊಂಡಿದ್ದರು. ಗುರುವಾರ ತಡರಾತ್ರಿ ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ನೀರಾನೆ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಸಮೀಕ್ಷಾ ಅವರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ನಿವಾಸಿಯಾಗಿರುವ ಸಮೀಕ್ಷಾ ಅವರಿಗೆ 26 ವರ್ಷವಾಗಿತ್ತು. ಹೆಬ್ಬಾಳದ ಪಶುವೈದ್ಯಕೀಯ
ಬೆಂಗಳೂರು: ತುಮಕೂರಿನಲ್ಲಿ ವಿಚಾರಣೆ ಸಂದರ್ಭದಲ್ಲಿ ನಡೆದ ಲಾಕಪ್ ಡೆತ್ ಬಗ್ಗೆ ಕುಟುಂಬದವರ ಆರೋಪ ಬೆನ್ನಲ್ಲೇ ತನಿಖೆಯನ್ನು ಇದೀಗ ಸಿಐಡಿ ವಹಿಸಿ, ಗೃಹ ಸಚಿವ ಪರಮೇಶ್ವರ್ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ನಿನ್ನೆ ವಿಚಾರಣೆ ಮಾಡುವಾಗಲೇ ಸಾವಾಗಿದೆ. ಇನ್ನೂ ಯಾವ ಕಾರಣದಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ತಿಳಿದುಬಂದಿಲ್ಲ. ಈ ಹಿನ್ನೆಲೆ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದರು.
ಸ್ವರ್ಗ ಸಿಗುತ್ತದೆ ಎಂದು ಮದೀನಾದಲ್ಲಿ ಪ್ರಾರ್ಥನೆ ಮಾಡುವ ಆವರಣದಲ್ಲೇ ತಂದೆಯನ್ನು ಮಗ ಕುತ್ತಿಗೆ ಹಿಸುಕಿ ಕೊಲ್ಲಲು ಹೊರಟ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮುಸ್ಲಿಮ್ ಬಾಂಧವರಿಗೆ ಮೆಕ್ಕಾ ಮದೀನಾ ಪವಿತ್ರ ಸ್ಥಳವಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾ ಮದೀನಾ ಹೋಗಿ ಪ್ರಾರ್ಥನೆ ಮಾಡಿಕೊಂಡು ಬರಬೇಕು ಎಂದು ಆಶಿಸುತ್ತಾರೆ. ಅದೇ ರೀತಿ ಮದೀನಾಗೆ ಹೋಗಿದ್ದ ತಂದೆ-ಮಗನ ಘಟನೆಯಿದು. ಮದೀನಾದಲ್ಲಿ ಪ್ರವಾದಿ ಮೊಹಮ್ಮದರ ಮಸೀದಿಯಲ್ಲಿ ತಂದೆ ಮತ್ತು ಮಗ ಪ್ರಾರ್ಥನೆ ಮಾಡುತ್ತಿದ್ದರು. ಬಳಿಕ ಅಲ್ಲಿಯೇ ಇದ್ದಕ್ಕಿದ್ದಂತೆ ತಂದೆಯ ಕುತ್ತಿಗೆಗೇ ಕೈ ಹಾಕಿದ ಮಗ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಇಳಿಕೆಯಾಗಿದೆ ಮತ್ತುಇತರೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ಈ ವಾರದ ಆರಂಭದಲ್ಲೇ ಪರಿಶುದ್ಧ ಚಿನ್ನದ ದರ ಸತತವಾಗಿ ಇಳಿಕೆಯಾಗುತ್ತಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,58,695.00 ರೂ.ಗಳಿತ್ತು. ಆದರೆ ಇಂದು ಇಳಿಕೆಯಾಗಿದ್ದು 1,49,675.00 ರೂ.ಗಳಷ್ಟಿದೆ.
ನವದೆಹಲಿ: ಕತಾರ್ ನ ಬೃಹತ್ ಅನಿಲ ಘಟಕಕ್ಕೆ ಇರಾನ್ ದಾಳಿ ಮಾಡಿರುವುದರಿಂದ ಭಾರತ ಸೇರಿದಂತೆ ವಿಶ್ವದ ಕೆಲವು ಬಲಿಷ್ಠ ರಾಷ್ಟ್ರಗಳಿಗೆ ಇನ್ನು ಎಷ್ಟು ವರ್ಷ ಅನಿಲ ಪೂರೈಕೆಗೆ ಸಮಸ್ಯೆಯಾಗಲಿದೆ ಎಂದು ಕೇಳಿದರೆ ನಿಜಕ್ಕೂ ಶಾಕ್ ಆಗುತ್ತದೆ. ಇಸ್ರೇಲ್ ತನ್ನ ತೈಲ ಘಟಕಗಳಿಗೆ ದಾಳಿ ಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಇರಾನ್ ಕತಾರ್ ನ ಬೃಹತ್ ಅನಿಲ ಘಟಕಕ್ಕೆ ಕ್ಷಿಪಣಿ ದಾಳಿ ನಡೆಸಿತ್ತು. ಇದರಿಂದ ವಿಶ್ವದ ಹಲವು ರಾಷ್ಟ್ರಗಳಿಗೆ ಅನಿಲ ಒದಗಿಸುವ ಬೃಹತ್ ಘಟಕ ಹಾನಿಗೀಡಾಗಿತ್ತು. ಈ ಹಾನಿ ಕೇವಲ ಕತಾರ್ ಗೆ ಮಾತ್ರವಲ್ಲ. ಇದರ ಪರಿಣಾಮ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೆ ಆಗಲಿದೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಇಳಿಕೆಯಾಗಿತ್ತು. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಇದು ಬೆಳೆಗಾರರಿಗೆ ಸಮಾಧಾನ ತಂದಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಸತತವಾಗಿ ಬೆಲೆ ಇಳಿಕೆ ಕಂಡುಬರುತ್ತಿದೆ. ಕೆಲವು ವರ್ಗದ ಅಡಿಕೆ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡುಬರುತ್ತಿದೆ. ಇಂದು ಹೊಸ ಅಡಿಕೆ ಬೆಲೆ 460 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದು 530 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿಯಲ್ಲಿದ್ದು 530 ರೂ.ಗಳಷ್ಟಾಗಿದೆ.
ಬೆಂಗಳೂರು: ಅಧ್ಯಾಯ 2 ಇಲ್ಲಿಂದ ಶುರು ಎಂದು ಕಾಂತಾರ ಚಾಪ್ಟರ್ 2 ಘೋಷಣೆ ಮಾಡಿದ ಬೆನ್ನಲ್ಲೇ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹೊಂಬಾಳೆ ಫಿಲಂಸ್ ಪೇಜ್ ನ್ನು ಅನ್ ಫಾಲೋ ಮಾಡಿಕೊಂಡಿದ್ದಾರೆ. ನಿನ್ನೆ ಯುಗಾದಿ ಹಬ್ಬದ ದಿನ ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ರಿಷಬ್ ಶೆಟ್ಟಿ ಫಿಲಂಸ್ ನಿರ್ಮಾಣದ ಲೋಗೋ ಜೊತೆಗೆ ಅಧ್ಯಾಯ 2 ಇಲ್ಲಿಂದ ಶುರು ಎಂದು ಪೋಸ್ಟ್ ಹಾಕಿದ್ದರು. ಆದರೆ ಇಲ್ಲಿ ಹೊಂಬಾಳೆ ಫಿಲಂಸ್ ಲೋಗೋ ಇಲ್ಲದೇ ಇರುವುದು ಅನೇಕರು ಹುಬ್ಬೇರುವಂತೆ ಮಾಡಿತ್ತು.
ನವದೆಹಲಿ: ಅಮೆರಿಕಾ ಅಧ್ಯಕ್ಷರ ಹೇಳಿಕೆ ಬಳಿಕ ಇರಾನ್ ಜೊತೆಗಿನ ಯುದ್ಧದಲ್ಲಿ ಇಸ್ರೇಲ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಭಾರತ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಲಾಭವಾಗುವ ನಿರೀಕ್ಷೆಯಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕಾ ನಡೆಸುತ್ತಿರುವ ಯುದ್ಧದಿಂದ ಜಗತ್ತಿನ ಬಹುತೇಕ ರಾಷ್ಟ್ರಗಳು ತೊಂದರೆ ಅನುಭವಿಸುತ್ತಿವೆ. ಕಚ್ಚಾ ತೈಲ, ಸರಕು ಸಾಗಣೆ, ಅನಿಲ ಪೂರೈಕೆಯಾಗದೇ ಬಹುತೇಕ ರಾಷ್ಟ್ರಗಳು ಸಂಕಷ್ಟಕ್ಕೀಡಾಗಿವೆ. ಇದಕ್ಕೆ ಭಾರತ ಕೂಡಾ ಹೊರತಲ್ಲ. ಇದುವರೆಗೆ ಇರಾನ್-ಇಸ್ರೇಲ್ ಪರಸ್ಪರ ತೈಲ ಸಂಗ್ರಹಣೆಗಾರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದವು. ಆದರೆ ಇದರಿಂದ ತೈಲ ಸಂಕಷ್ಟ ಎದುರಾಗಿತ್ತು.
ಬೆಂಗಳೂರು: ಬುರ್ಖಾ ಹಾಕಿಕೊಂಡು ಬೆಂಗಳೂರಿನ ಎಚ್ ಬಿಆರ್ ಲೇಔಟ್ ನಲ್ಲಿ ಅಪ್ಪ-ಮಗ ಮಾಡಿದ ಕೆಲಸಕ್ಕೆ ಇಬ್ಬರನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಇಲ್ಲಿದೆ ವಿಡಿಯೋ. ಇತ್ತೀಚೆಗಿನ ದಿನಗಳಲ್ಲಿ ಜನ ಹಣ ಮಾಡಲು ಸುಲಭ ದಾರಿ ಯಾವುದು ಎಂದು ನೋಡುತ್ತಾರೆ. ಅದಕ್ಕೆ ಅನ್ಯಾಯದ ದಾರಿಯಾದರೂ ಸರಿ ಎಂಬ ಮನಸ್ಥಿತಿಗೆ ಬಂದು ಬಿಟ್ಟಿದ್ದಾರೆ. ಅಂತದ್ದೇ ಕೆಲಸವನ್ನು ಈ ಅಪ್ಪ-ಮಗನ ಜೋಡಿ ಮಾಡಿದೆ. ಮಧ್ಯ ವಯಸ್ಸು ದಾಟಿದ ತಂದೆ ಮಂಜುನಾಥ್ ಮತ್ತು ವಯಸ್ಸಿಗೆ ಬಂದ ಮಗ ಮಂಜುನಾಥ್ ಬುರ್ಖಾ ಹಾಕಿಕೊಂಡು ಸ್ಥಳೀಯ ಕಂಪ್ಯೂಟರ್ ಬಿಡಿ ಭಾಗಗಳ ಅಂಗಡಿಯೊಂದರಲ್ಲಿ ದರೋಡೆ ಮಾಡಿದ್ದಾರೆ.
ಚೆನ್ನೈ: ಆರ್ ಸಿಬಿ ಜೆರ್ಸಿ ಹಾಕಿಕೊಂಡು ಆಟೋಗ್ರಾಫ್ ಕೇಳಿದ ಅಭಿಮಾನಿಗೆ ಸಿಎಸ್ ಕೆ ಸ್ಟಾರ್ ಧೋನಿ ತಮಾಷೆ ರಿಯಾಕ್ಷನ್ ನೀಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಐಪಿಎಲ್ 2026 ಆರಂಭಕ್ಕೆ ಇನ್ನು ಕೆಲವೇ ದಿನ ಬಾಕಿಯಿದೆ. ಎಲ್ಲಾ ತಂಡಗಳೂ ಈಗಾಗಲೇ ಅಭ್ಯಾಸ ಆರಂಭಿಸಿವೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡವೂ ಅಭ್ಯಾಸ ಆರಂಭಿಸಿದೆ. ಧೋನಿ ಈಗಾಗಲೇ ತಂಡವನ್ನು ಕೂಡಿಕೊಂಡಿದ್ದಾರೆ. ಅಭ್ಯಾಸದ ನಡುವೆ ಧೋನಿಯನ್ನು ನೋಡಲು ಸಾಕಷ್ಟು ಜನ ಮೈದಾನಕ್ಕೆ ಬರುತ್ತಾರೆ. ಅದೇ ರೀತಿ ಧೋನಿಯನ್ನು ನೋಡಲು ಕೆಲವು ಅಭಿಮಾನಿಗಳು ಬಂದಿದ್ದರು.
ಮುಂಬೈ: ಕಾಂತಾರ 2 ಸಿನಿಮಾಗೆ ಎದುರಾಗಿದ್ದ ಅದೇ ಸಮಸ್ಯೆ ಇದೀಗ ಧುರಂಧರ್ 2 ಸಿನಿಮಾಗೂ ಎದುರಾಗಿದೆ. ಕೆಲವೊಮ್ಮೆ ಪ್ರೇಕ್ಷಕರು ಯಾಕಿಂಗಾಡ್ತಾರೋ ಗೊತ್ತಾಗಲ್ಲ. ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಗೆ ಮುನ್ನ ಭಾರೀ ಕುತೂಹಲವಿತ್ತು. ಸಿನಿಮಾದ ಕ್ಲೈಮ್ಯಾಕ್ಸ್ ಹೇಗಿರಬಹುದು, ಕತೆಯೇನಿರಬಹುದು ಎಂಬಿತ್ಯಾದಿ ಕುತೂಹಲ ಪ್ರೇಕ್ಷಕರಲ್ಲಿತ್ತು. ಆದರೆ ಬಿಡುಗಡೆಯಾದ ಒಂದೇ ದಿನಕ್ಕೆ ಚಿತ್ರದ ಕ್ಲೈಮ್ಯಾಕ್ಸ್ ಮಾತ್ರವಲ್ಲ ಪ್ರಮುಖ ದೃಶ್ಯಗಳೆಲ್ಲಾ ಒಂದೊಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಅದೂ ಎರಡು-ಮೂರು ನಿಮಿಷದ ಕ್ಲಿಪ್ಪಿಂಗ್ ಗಳು ಹರಿದಾಡಿದ್ದವು. ಇದರಿಂದಾಗಿ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುವ ಕುತೂಹಲವೇ ಹಲವರಿಗೆ ಕಡಿಮೆಯಾಗಿತ್ತು.
ಬೆಂಗಳೂರು: ಯುಗಾದಿ ಹಬ್ಬದ ದಿನ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಅಧ್ಯಾಯ 2 ಇಲ್ಲಿಂದ ಶುರು ಎಂದು ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ ಅಭಿಮಾನಿಗಳಿಗೆ ಎರಡು ಅನುಮಾನ ಶುರುವಾಗಿದೆ. ನಿನ್ನೆ ಇದ್ದಕ್ಕಿದ್ದಂತೆ ರಿಷಬ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಅಧ್ಯಾಯ 2 ಇಲ್ಲಿಂದ ಶುರು ಎಂದು ಬರೆದುಕೊಂಡಿದ್ದರು. ಆದರೆ ಇದರ ಹೊರತಾಗಿ ಬೇರೇನೂ ಸುಳಿವು ಕೊಟ್ಟಿಲ್ಲ. ವಿಶೇಷವೆಂದರೆ ಹೀಗೆ ಬರೆದ ಪೋಸ್ಟರ್ ನಲ್ಲಿ ಹೊಂಬಾಳೆ ಫಿಲಂಸ್ ಬದಲು ರಿಷಬ್ ಶೆಟ್ಟಿ ಫಿಲಂಸ್ ಲೋಗೋ ಇದೆ.
ಬೆಂಗಳೂರು: ಸರ್ಕಾರೀ ಅಧಿಕಾರಿಗಳ ವರ್ಗಾವಣೆ ಮಾಡೋದು ಅಲ್ಲ ನಿಮ್ಮ ಕೆಲಸ ಬೇರೆಯೇ ಇದೆ ಎಂದು ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ಕ್ಲಾಸ್ ತೆಗೆದುಕೊಂಡಿದೆ. ಸಿಎಂ ಕಚೇರಿಯಿಂದ ವರ್ಗಾವಣೆ ಆದೇಶ ಬಂದಿರುವುದನ್ನು ಪ್ರಶ್ನಿಸಿ ಬೆಸ್ಕಾಂ ಎಇ ಚೇತನ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಸಿಎಂ ಸಿದ್ದರಾಮಯ್ಯಗೆ ಕ್ಲಾಸ್ ತೆಗೆದುಕೊಂಡಿದೆ. ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹಂತದ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಹೈಕೋರ್ಟ್ ಚಾಟಿ ಬೀಸಿದೆ. ಮುಖ್ಯಮಂತ್ರಿಗಳಿಗೆ ನೌಕರರ ವರ್ಗಾವಣೆಗಿಂತ ಮಾಡಬೇಕಾದ ಬೇರೆ ಬೇಕಾದಷ್ಟು ಉತ್ತಮ ಕೆಲಸಗಳಿವೆ. ಸರ್ಕಾರಿ ನೌಕರರ ವರ್ಗಾವಣೆ ವಿಚಾರ ಆಯಾ ಇಲಾಖೆಗೇ ಬಿಟ್ಟುಬಿಡಬೇಕು.
ಜ್ಯೋತಿಷ್ಯದ ಪ್ರಕಾರ ಕರ್ಕಟಕ ರಾಶಿಯವರ ಆಹಾರ ಕ್ರಮ ಹೇಗಿರಬೇಕು, ಯಾವ ತರಕಾರಿ, ಹಣ್ಣು ಸೇವಿಸಬೇಕು ಎಂಬ ವಿವರ ಇಲ್ಲಿದೆ ನೋಡಿ. ಆಯಾ ರಾಶಿಗೆ ಅನುಗುಣವಾಗಿ ಆಯಾ ಆಹಾರಗಳು ಸರಿಹೊಂದುತ್ತವೆ. ಕರ್ಕಟಕ ರಾಶಿಯದ್ದು ಜಲ ಚಿಹ್ನೆಯಾಗಿದ್ದು, ಚಂದ್ರನಿಂದ ಆಳಲ್ಪಡುತ್ತದೆ. ಈ ರಾಶಿಯವರಿಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಬರಬಹುದಾಗಿದೆ. ಈ ರಾಶಿಯವರು ಮನೆ ಊಟಕ್ಕೆ ಹೆಚ್ಚು ಕನೆಕ್ಟ್ ಆಗಿರುತ್ತಾರೆ. ಈ ರಾಶಿಯವರು ಸೇವಿಸಬೇಕಾದ ತರಕಾರಿ, ಹಣ್ಣು, ಧಾನ್ಯ ಹಾಗೂ ಮಸಾಲೆ ಪದಾರ್ಥಗಳು ಯಾವುವು ನೋಡಿ.
ಬೆಂಗಳೂರು: ರಾಜ್ಯದ ಹವಾಮಾನದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರೀ ವ್ಯತ್ಯಾಸಗಳು ಕಂಡುಬರುತ್ತಿವೆ. ಇಂದಿನ ಹವಾಮಾನ ಹೇಗಿರಲಿದೆ ಇಲ್ಲಿದೆ ವರದಿ. ಕಳೆದ ನಾಲ್ಕು ದಿನಗಳಿಂದ ಕರಾವಳಿ, ಮಲೆನಾಡು, ಒಳನಾಡು ಸೇರಿ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗಿತ್ತು. ಬಹುತೇಕ ಕಡೆ ಆಲಿಕಲ್ಲು ಮಳೆಯಾಗಿತ್ತು. ಬೇಸಿಗೆಯಲ್ಲಿ ಬಂದ ಈ ಮಳೆ ಅನಿರೀಕ್ಷಿತವಾಗಿತ್ತು. ಇದರಿಂದ ರೈತರಿಗೆ ಬೆಳೆ ನಷ್ಟವಾಗಿತ್ತು. ಇಂದು ರಾಜ್ಯದ ಹವಾಮಾನ ವರದಿಗಳ ಪ್ರಕಾರ ಮಳೆಯ ಸಾಧ್ಯತೆಯಿಲ್ಲ. ಆದರೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುವ ಸಾಧ್ಯತೆಯಿದೆ.
ಇಂದು ಶುಕ್ರವಾರವಾಗಿದ್ದು ಇಂದು ಲಕ್ಷ್ಮೀ ದೇವಿಯ ಆರಾಧನೆಗೆ ಸೂಕ್ತವಾದ ದಿನವಾಗಿದೆ. ಇಂದು ಲಕ್ಷ್ಮೀ ದೇವಿಯ ಕುರಿತಾದ ಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರವನ್ನು ತಪ್ಪದೇ ಓದಿ.ದೇವ್ಯುವಾಚದೇವದೇವ! ಮಹಾದೇವ! ತ್ರಿಕಾಲಜ್ಞ! ಮಹೇಶ್ವರ!ಕರುಣಾಕರ ದೇವೇಶ! ಭಕ್ತಾನುಗ್ರಹಕಾರಕ! ॥ಅಷ್ಟೋತ್ತರ ಶತಂ ಲಕ್ಷ್ಮ್ಯಾಃ ಶ್ರೋತುಮಿಚ್ಛಾಮಿ ತತ್ತ್ವತಃ ॥ ಈಶ್ವರ ಉವಾಚದೇವಿ! ಸಾಧು ಮಹಾಭಾಗೇ ಮಹಾಭಾಗ್ಯ ಪ್ರದಾಯಕಮ್ ।ಸರ್ವೈಶ್ವರ್ಯಕರಂ ಪುಣ್ಯಂ ಸರ್ವಪಾಪ ಪ್ರಣಾಶನಮ್ ॥ಸರ್ವದಾರಿದ್ರ್ಯ ಶಮನಂ ಶ್ರವಣಾದ್ಭುಕ್ತಿ ಮುಕ್ತಿದಮ್ ।ರಾಜವಶ್ಯಕರಂ ದಿವ್ಯಂ ಗುಹ್ಯಾದ್-ಗುಹ್ಯತರಂ ಪರಮ್ ॥ದುರ್ಲಭಂ ಸರ್ವದೇವಾನಾಂ ಚತುಷ್ಷಷ್ಟಿ ಕಳಾಸ್ಪದಮ್ ।ಪದ್ಮಾದೀನಾಂ ವರಾಂತಾನಾಂ ನಿಧೀನಾಂ ನಿತ್ಯದಾಯಕಮ್ ॥ಸಮಸ್ತ ದೇವ ಸಂಸೇವ್ಯಂ ಅಣಿಮಾದ್ಯಷ್ಟ ಸಿದ್ಧಿದಮ್ ।ಕಿಮತ್ರ ಬಹುನೋಕ್ತೇನ ದೇವೀ ಪ್ರತ್ಯಕ್ಷದಾಯಕಮ್ ॥
ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊನೆಗೂ ವಿಡಿಯೋ ಅಸಲಿಯತ್ತು ಏನೆಂದು ತನಿಖೆಯಿಂದ ಬಯಲಾಗಿದೆ. ಕೆಲವು ದಿನಗಳ ಹಿಂದೆ ಡಿಜಿಪಿ ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲಿ ಇಬ್ಬರು ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ತಕ್ಷಣವೇ ಗೃಹ ಇಲಾಖೆ ರಾಮಚಂದ್ರ ರಾವ್ ಅವರನ್ನು ಅಮಾನತುಗೊಳಿಸಿ ಇಲಾಖೆ ಮಟ್ಟದಲ್ಲಿ ತನಿಖೆಗೆ ಆದೇಶಿಸಿತ್ತು. ಇದೀಗ ತನಿಖೆ ಪೂರ್ಣಗೊಂಡಿದ್ದು ವಿಡಿಯೋಗಳು ಅಸಲಿ ಎಂದು ಬಯಲಾಗಿದೆ. ಈ ವಿಡಿಯೋಗಳು ಎಐ ನಿರ್ಮಿತ ಅಥವಾ ಡೀಪ್ ಫೇಕ್ ವಿಡಿಯೋ ಅಥವಾ ಎಡಿಟ್ ಮಾಡಲಾದ ವಿಡಿಯೋಗಳು ಅಲ್ಲ ಎಂದು ತನಿಖೆಯಿಂದ ಖಚಿತವಾಗಿದೆ.
ಟೆಹ್ರಾನ್: ಹೊರ್ಮುಜ್ ಜಲಸಂಧಿ ಮೂಲಕ ಚಲಿಸುವ ಹಡಗುಗಳಿಗೆ ಇರಾನ್ ಮತ್ತೊಂದು ಶಾಕ್ ಕೊಟ್ಟಿದೆ. ಇದು ಭಾರತಕ್ಕೂ ಅನ್ವಯವಾಗಲಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣವಿದೆ. ಇರಾನ್ ಮತ್ತು ಇಸ್ರೇಲ್-ಅಮೆರಿಕಾ ನಡುವೆ ತೀವ್ರ ಯುದ್ಧ ನಡೆಯುತ್ತಿದೆ. ಇಸ್ರೇಲ್-ಅಮೆರಿಕಾಗೆ ಸೆಡ್ಡು ಹೊಡೆಯಲು ಇರಾನ್ ಹೊರ್ಮುಜ್ ಜಲಸಂಧಿ ಮೇಲೆ ಅಮೆರಿಕಾ ಮಿತ್ರರಾಷ್ಟ್ರಗಳ ಹಡಗುಗಳು ಸಂಚರಿಸದಂತೆ ನಿರ್ಬಂಧ ವಿಧಿಸಿದೆ. ಆದರೆ ಭಾರತ ಸೇರಿದಂತೆ ಕೆಲವೇ ರಾಷ್ಟ್ರಗಳ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಆದರೆ ಈ ನಡುವೆ ಇರಾನ್ ಮತ್ತು ಇಸ್ರೇಲ್ ಪರಸ್ಪರ ತೈಲ ಘಟಕಗಳನ್ನು ಗುರಿಯಾಗಿಸಿ ದಾಳಿ ತೀವ್ರಗೊಳಿಸಿವೆ.
ಮುಂಬೈ: ಮಹಾರಾಷ್ಟ್ರದ ಸ್ವಯಂಘೋಷಿತ ಜ್ಯೋತಿಷಿ ಅಶೋಕ್ ಖರತ್ ಕಾಮಕಾಂಡದ ವಿಡಿಯೋ ವೈರಲ್ ಆಗಿದ್ದು ಈತನ ಕೃತ್ಯ ನೋಡಿ ಜನರೇ ಬೆಚ್ಚಿಬಿದ್ದಿದ್ದಾರೆ. ಜ್ಯೋತಿಷ್ಯ ಹೇಳುವುದಾಗಿ ಈ ಅಸಾಮಿ ಅನೇಕ ಮಹಿಳೆಯರ ಮೇಲೆ ರೇಪ್, ಲೈಂಗಿಕ ದೌರ್ಜನ್ಯವೆಸಗಿದ್ದ ಎಂಬುದು ಬಯಲಾಗಿದೆ. 67 ವರ್ಷದ ಅಶೋಕ್ ಖರತ್ 35 ವರ್ಷದ ಮಹಿಳೆಯನ್ನು ಜ್ಯೋತಿಷ್ಯದ ನೆಪದಲ್ಲಿ ಲೈಂಗಿಕವಾಗಿ ಬಳಸಿಕೊಂಡ ಪ್ರಕರಣ ಬಯಲಿಗೆ ಬಂದಿದ್ದು ಈತನ ಒಂದೊಂದೇ ಕೃತ್ಯಗಳು ಬಯಲಾಗುತ್ತಿದೆ. ಈ ಸಂಬಂಧ ಆತನನ್ನು ನಾಸಿಕ್ ಪೊಲೀಸರು ಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ.
ನವದೆಹಲಿ: ಮಗಳನ್ನು ಶಾಲೆಗೆ ಡ್ರಾಪ್ ಮಾಡಲು ಬಂದಿದ್ದ ಮಹಿಳೆಯನ್ನು ಬೈಕ್ ನಲ್ಲಿ ಬಂದ ದರೋಡೆಕೋರರು ಸುತ್ತುವರೆದು ದೋಚಿ ಪರಾರಿಯಾಗಿದ್ದಾರೆ. ಈ ವೇಳೆ ಸುತ್ತಮುತ್ತಲಿನ ಜನ ನೋಡಿದರೂ ಭಯದಿಂದ ಓಡಿ ಹೋಗಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ. ಈ ಘಟನೆ ನಡೆದಿರುವುದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ. ಒಬ್ಬ ಮಹಿಳೆ ಅಸಹಾಯಕಳಾಗಿ ಹಲ್ಲೆಗೊಳಗಾಗುತ್ತಿದ್ದರೆ ಸಾರ್ವಜನಿಕರು ಸಹಾಯ ಮಾಡಲೂ ಬರಲಿಲ್ಲ ಎನ್ನುವುದು ಈ ದೃಶ್ಯದಿಂದ ತಿಳಿದುಬರುತ್ತಿದೆ. ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಇದ್ದಕ್ಕಿದ್ದಂತೆ ಮೂರು ಬೈಕ್ ಗಳಲ್ಲಿ ಬಂದು ದುಷ್ಕರ್ಮಿಗಳು ಅಡ್ಡಗಟ್ಟುತ್ತಾರೆ.
ಬೆಂಗಳೂರು: ಎಲ್ ಪಿಜಿ ಸಿಲಿಂಡರ್ ಅಭಾವದಿಂದಾಗಿ ಸಂಕಷ್ಟಕ್ಕೀಡಾಗಿರುವ ಬೆಂಗಳೂರು ಹೋಟೆಲ್ ಮಾಲಿಕರ ಅಸೋಸಿಯೇಷನ್ ಈಗ ಪ್ರಧಾನಿ ಮೋದಿ ಮೊರೆ ಹೋಗಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣದಿಂದ ದೇಶದಲ್ಲಿ ವಾಣಿಜ್ಯ ಸಿಲಿಂಡರ್ ಅಭಾವ ಎದುರಾಗಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಹೋಟೆಲ್ ಮುಚ್ಚುವ ಪರಿಸ್ಥಿತಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ಹೋಟೆಲ್ ಮಾಲಿಕರು ಈಗ ನೇರವಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ವಾಣಿಜ್ಯ ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮ ತೀವ್ರ ಸಂಕಷ್ಟದಲ್ಲಿದೆ.
ಯುಗಾದಿ ಹಬ್ಬದ ದಿನ ಕೆಳಗಿನ ಮಾಹಿತಿಯನ್ನು ತಪ್ಪದೆ ಓದಿ ಅಥವಾ ಶ್ರವಣ ಮಾಡಿ.ಪಂಚಾಂಗ ರೀತ್ಯಾ, 2026ರ ಮಾರ್ಚ್ 19ರಿಂದ ಪ್ರಾರಂಭವಾಗುವ 'ಪರಾಭವ' ನಾಮ ಸಂವತ್ಸರವು 60 ಸಂವತ್ಸರಗಳ ಚಕ್ರದಲ್ಲಿ 40ನೆಯದು. ಈ ವರ್ಷದ ಫಲಗಳು ಮತ್ತು ಪಂಚಾಂಗದ ಪ್ರಮುಖ ಅಂಶಗಳು (ಆದಾಯ-ವ್ಯಯ ಮತ್ತು ರಾಜಾಧಿ ದೋಷಗಳು) ಇಲ್ಲಿವೆ: ಪರಾಭವ ಸಂವತ್ಸರ ಫಲ (ಸ್ಥೂಲವಾಗಿ)'ಪರಾಭವ' ಎಂದರೆ ಸಾಮಾನ್ಯವಾಗಿ ಸೋಲು ಅಥವಾ ಬದಲಾವಣೆ ಎಂದರ್ಥವಿದ್ದರೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ದೇಶದಲ್ಲಿ ರಾಜಕೀಯ ಅಸ್ಥಿರತೆ ಅಥವಾ ಪ್ರಮುಖ ನಾಯಕರ ಬದಲಾವಣೆಯನ್ನು ಸೂಚಿಸುತ್ತದೆ.
ಮುಂಬೈ: ರಣವೀರ್ ಸಿಂಗ್ ನಾಯಕನಾಗಿರುವ ಧುರಂಧರ್ 2 ಸಿನಿಮಾ ಇಂದು ಬಿಡುಗಡೆಯಾಗಿದ್ದು ಪ್ರಧಾನಿ ಮೋದಿ ರಿಯಲ್ ಆಗಿ ಕಾಣಿಸಿಕೊಂಡಿದ್ದರೆ ಭೂಗತ ದೊರೆ ದಾವೂದ್ ಇಬ್ರಾಹಿಂ ಪಾತ್ರವೂ ಸಿನಿಮಾದಲ್ಲಿದೆ. 3 ಗಂಟೆ 49 ಸಿನಿಮಾ ಅವಧಿಯ ಸುದೀರ್ಘ ಸಿನಿಮಾ ಧುರಂಧರ್ 2. ಧುರಂಧರ್ ಮೊದಲ ಭಾಗದಲ್ಲಿ ಹಮ್ಜಾ ಅಲಿ ಮಜಾರಿ, ರೆಹ್ಮಾನ್ ಡಕಾಯಿತ್ ನ ಹತ್ಯೆ ಮಾಡಿರುತ್ತಾನೆ. ಆ ಬಳಿಕ ನಡೆಯುವ ಸೇಡಿನ ಕತೆಯೇ ಧುರಂಧರ್ 2 ಸಿನಿಮಾ. ಈ ಸಿನಿಮಾವೂ ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಸಾಕಷ್ಟು ಸಾಹಸಮಯ ದೃಶ್ಯಗಳನ್ನು ಒಳಗೊಂಡಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ಈ ವಾರದ ಆರಂಭದಲ್ಲೇ ಪರಿಶುದ್ಧ ಚಿನ್ನದ ದರ ಸತತವಾಗಿ ಇಳಿಕೆಯಾಗುತ್ತಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,60,910.00 ರೂ.ಗಳಿತ್ತು. ಆದರೆ ಇಂದು ಇಳಿಕೆಯಾಗಿದ್ದು 1,58,695.00 ರೂ.ಗಳಷ್ಟಿದೆ.
ಇಂದು ಯುಗಾದಿ ಹಬ್ಬವಾಗಿದ್ದು ಎಲ್ಲರೂ ಬೆಲ್ಲದ ಜೊತೆಗೆ ಚೂರು ಬೇವನ್ನೂ ಸೇವಿಸುತ್ತಾರೆ. ಆದರೆ ಇದು ಒಂದು ದಿನಕ್ಕೆ ಸೀಮಿತವಲ್ಲ. ಪ್ರತಿನಿತ್ಯ ಕಹಿಬೇವಿನ ಎಲೆ ಸೇವಿಸಿದರೆ ಏನು ಉಪಯೋಗ ತಿಳಿದುಕೊಳ್ಳಿ. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಬೇವಿನ ಎಲೆಗೆ ಅದರದ್ದೇ ಆದ ಮಹತ್ವವಿದೆ. ಹಲವು ಖಾಯಿಲೆಗಳಿಗೆ ಔಷಧಿಯಾಗಬಲ್ಲ ಪವರ್ ಫುಲ್ ಎಲೆಯಿದು. ಚರ್ಮ ರೋಗದಿಂದ ಹಿಡಿದು ಹೊಟ್ಟೆಯ ಸಮಸ್ಯೆಯವರೆಗೂ ಕಹಿಬೇವು ಉಪಯೋಗಿ. ಇದರಲ್ಲಿ ರೋಗ ನಿರೋಧಕ, ಸೋಂಕು ನಿರೋಧಕ, ಉರಿಯೂತ ನಿರೋಧಕ ಅಂಶವಿದ್ದು ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಕಹಿ ಬೇವಿನ ಒಂದು ಎಲೆ ಪ್ರತಿನಿತ್ಯ ಜಗಿದರೆ ಏನು ಉಪಯೋಗ ನೋಡಿ.
ಬೇಸಿಗೆಯಲ್ಲಿ ಬಾಯಾರಿಕೆ ಎಂದಾಗ ಸೋಡಾ ಮಿಶ್ರಿತ ಪಾನೀಯ ಸೇವನೆ ಮಾಡುತ್ತೇವೆ. ಆದರೆ ಈ ವಿಡಿಯೋ ನೋಡಿದರೆ ಇನ್ನು ಮುಂದೆ ಅಂತಹ ಪಾನೀಯಗಳನ್ನು ಸೇವಿಸಲು ನೀವು ಭಯಪಡೋದು ಗ್ಯಾರಂಟಿ. ಬಾಟಲಿಗಳಲ್ಲಿ ಬರುವ ಅಗ್ಗದ ಬೆಲೆಯ ತಂಪು ಸೋಡಾ ಪಾನೀಯಗಳಿಗೆ ಬೇಸಿಗೆಯಲ್ಲಿ ಭಾರೀ ಡಿಮ್ಯಾಂಡ್ ಇರುತ್ತದೆ. ಕೆಲವು ಸಭೆ ಸಮಾರಂಭಗಳಲ್ಲೂ ಇದನ್ನು ಬಳಸುತ್ತಾರೆ. ಆದರೆ ಇದನ್ನು ಹೇಗೆ ತಯಾರಿ ಮಾಡುತ್ತಾರೆ ಎನ್ನುವ ವಿಡಿಯೋ ಇಲ್ಲಿದೆ ನೋಡಿ. ಸೋಡಾ ಪಾನೀಯ ತಯಾರಿಸುವ ಫ್ಯಾಕ್ಟರಿಯೊಂದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅತ್ಯಂತ ಕೊಳಕಾದ ಜಾಗದಲ್ಲಿ ಪಾನೀಯ ತಯಾರು ಮಾಡಲಾಗುತ್ತದೆ.
ಚಲಿಸುತ್ತಿದ್ದ ಬಸ್ ನ ಕಿಟಿಕಿಯಿಂದ ಜಾರಿ ಕೆಳಕ್ಕೆ ಬೀಳಲಿದ್ದ ಮಗುವನ್ನು ಸ್ಕೂಟರ್ ಸವಾರನೊಬ್ಬ ಹೀರೋ ರೀತಿ ರಕ್ಷಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವೊಮ್ಮೆ ಎಷ್ಟೇ ದೊಡ್ಡ ಅಪಘಾತವಾದರೂ ದೇವರ ದಯೆಯಿದ್ದರೆ ಪ್ರಾಣ ಉಳಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ದೇವರು ಯಾವುದೋ ಒಂದು ರೂಪದಲ್ಲಿ ಬಂದು ರಕ್ಷಿಸುತ್ತಾನೆ ಎನ್ನುವುದು ಇದಕ್ಕೇ ಇರಬೇಕು. ಇದು ವಿದೇಶವೊಂದರಲ್ಲಿ ನಡೆದ ಘಟನೆಯಾಗಿದೆ. ನಗರದಲ್ಲಿ ಸಾರ್ವಜನಿಕ ಸಾರಿಗೆ ಬಸ್ ಚಲಿಸುತ್ತಿರುತ್ತದೆ. ಈ ಬಸ್ ನ ಹಿಂಬದಿಯ ಕಿಟಿಕಿಯಿಂದ ಮಗುವೊಂದು ಜಾರಿ ಇನ್ನೇನು ಬೀಳುವುದರಲ್ಲಿತ್ತು.
ರೇಬಿಸ್ ಬಂದ ವ್ಯಕ್ತಿಗಳಿಗೆ ನೀರು ಕಂಡರೆ ಭಯವಿರುತ್ತದೆ. ನೀರು ಹತ್ತಿರ ತಂದರೆ ಅವರು ಎಷ್ಟು ನಡುಗುತ್ತಾರೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ. ನಮ್ಮ ದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಪ್ರತಿನಿತ್ಯ ಎಷ್ಟೋ ಜನ ನಾಯಿ ಕಡಿತಕ್ಕೊಳಗಾಗುತ್ತಾರೆ. ಬೀದಿ ನಾಯಿ ಮಾತ್ರವಲ್ಲ ಸಾಕು ನಾಯಿಯೇ ಆಗಿದ್ದರೂ ಸರಿಯಾದ ಸಮಯಕ್ಕೆ ಇಂಜೆಕ್ಷನ್ ಕೊಡದೇ ಇದ್ದಲ್ಲಿ ಅಂತಹ ನಾಯಿಗಳು ಕಚ್ಚಿದರೆ ಅಪಾಯಕಾರಿಯೇ. ಯಾವುದೇ ನಾಯಿ, ಬೆಕ್ಕು ಕಚ್ಚಿದರೂ ತಕ್ಷಣವೇ ವೈದ್ಯರ ಬಳಿ ಹೋಗಿ ಇಂಜೆಕ್ಷನ್ ಪಡೆಯಬೇಕಾಗುತ್ತದೆ. ಇಲ್ಲದೇ ಹೋದರೆ ರೇಬಿಸ್ ರೋಗ ಬರುವ ಅಪಾಯವಿರುತ್ತದೆ. ರೇಬಿಸ್ ಅತ್ಯಂತ ಅಪಾಯಕಾರಿ ರೋಗವಾಗಿದ್ದು ವ್ಯಕ್ತಿಯ ಅತ್ಯಂತ ಧಾರುಣ ಹಂತಕ್ಕೆ ತಲುಪಿ ಸಾವನ್ನಪ್ಪುತ್ತಾನೆ.
ನವದೆಹಲಿ: ಒಮನ್ ಗಲ್ಫ್ ಗೆ ಭಾರತ ಇದ್ದಕ್ಕಿದ್ದಂತೆ ಯದ್ಧ ನೌಕೆಗಳನ್ನು ಕಳುಹಿಸಿದೆ. ಇದರ ಹಿಂದಿನ ಕಾರಣವೇನು ಎಂಬುದಕ್ಕೆ ಇಲ್ಲಿದೆ ಅಸಲಿ ಕಾರಣ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಈಗ ಯುದ್ಧದ ವಾತಾವರಣವಿದೆ. ಅಮೆರಿಕಾ ಬೆಂಬಲಿಸುತ್ತಿರುವ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ನಿರಂತರ ದಾಳಿ ನಡೆಸುತ್ತಿದೆ. ಅಲ್ಲಿನ ಅನಿಲ ಘಟಕಗಳನ್ನೂ ಟಾರ್ಗೆಟ್ ಮಾಡಿಕೊಂಡಿವೆ. ಇದರ ನಡುವೆ ಹೊರ್ಮುಜ್ ಜಲಸಂಧಿಯಲ್ಲಿ ಭಾರತ ಸೇರಿದಂತೆ ಕೆಲವೇ ರಾಷ್ಟ್ರಗಳ ಹಡುಗಗಳನ್ನು ಹೊರತುಪಡಿಸಿ ಉಳಿದ ದೇಶಗಳ ಹಡಗುಗಳು ಸಂಚರಿಸದಂತೆ ನಿರ್ಬಂಧಿಸಿದೆ. ಇದು ಜಾಗತಿಕವಾಗಿ ವ್ಯಾಪಾರ, ವ್ಯವಹಾರಕ್ಕೆ ತೊಂದರೆ ಉಂಟು ಮಾಡುತ್ತಿದೆ.
ಬೆಂಗಳೂರು: ಸರ್ಸೆ ಸೆರಗೆ ಸರ್ಸೆ ಹಾಡಿನ ವಿವಾದದ ಬಳಿಕ ಗಾಯಕಿ ಐಶ್ವರ್ಯಾ ರಂಗರಾಜನ್ ಇನ್ ಸ್ಟಾಗ್ರಾಂ ಖಾತೆಯಿಂದ ದೂರವಾಗಿದ್ದಾರೆ. ಕೆಡಿ ಸಿನಿಮಾದ ಸರ್ಸೆ ಸೆರಗ ಸರ್ಸೆ ಸಿನಿಮಾದ ಹಾಡು ಅಶ್ಲೀಲ ಸಾಹಿತ್ಯದ ಕಾರಣದಿಂದ ವಿವಾದಕ್ಕೀಡಾಗಿತ್ತು. ಸಾಹಿತ್ಯ ಬರೆದಿದ್ದ ನಿರ್ದೇಶಕ ಪ್ರೇಮ್ ತೀವ್ರ ಟೀಕೆಗೊಳಗಾಗಿದ್ದರು. ವಿವಾದದ ಬೆನ್ನಲ್ಲೇ ಕೇಂದ್ರ ಸರ್ಕಾರವೇ ಹಾಡಿಗೆ ನಿಷೇಧ ಹೇರಿತ್ತು. ಹಾಡು ವಿವಾದಕ್ಕೀಡಾಗುತ್ತಿದ್ದಂತೇ ಕನ್ನಡದಲ್ಲಿ ಹಾಡಿದ್ದ ಗಾಯಕಿ ಐಶ್ವರ್ಯಾ ರಂಗರಾಜನ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ತೀಕ್ಷ್ಣ ಕಾಮೆಂಟ್ ಗಳು ಬಂದಿದ್ದವು.
ನವದೆಹಲಿ: ಭಾರತಕ್ಕೆ ಅನಿಲ ಪೂರೈಸುವ ಕತಾರ್ ನ ರಾಸ್ ಲಫಾನ್ ಅನಿಲ ಘಟಕದ ಮೇಲೆ ಇರಾನ್ ದಾಳಿ ನಡೆಸಿದ್ದು ಇದರ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಕತಾರ್ ನ ಬಹುದೊಡ್ಡ ಅನಿಲ ಘಟಕ ರಾಸ್ ಲಫಾನ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ಮೇಲೆ ಸೇಡು ತೀರಿಸಿಕೊಳ್ಳಲು ಈ ದಾಳಿ ನಡೆಸಿತ್ತು. ಆದರೆ ಈ ಅನಿಲ ಘಟಕ ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಿಗೆ ಅನಿಲ ಒದಗಿಸುವ ಘಟಕವಾಗಿದೆ.
ನ್ಯೂಯಾರ್ಕ್: ಇರಾನ್ ವಿರುದ್ಧ ಇಸ್ರೇಲ್ ಯುದ್ಧದಲ್ಲಿ ಮೂಗು ತೂರಿಸಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲು ಗೆದ್ದು ಈಗ ಸೋತು ಹೋಗಿದ್ದಾರೆ. ಕಾರಣವೇನು ಇಲ್ಲಿದೆ ವಿಶ್ಲೇಷಣೆ. ಇಸ್ರೇಲ್ ಮತ್ತು ಇರಾನ್ ನಡುವೆ ಯದ್ಧ ನಡೆಯುವಾಗ ತಾನು ಜಗತ್ತಿನ ದೊಡ್ಡಣ್ಣ ಎಂದು ಬಿಂಬಿಸಿಕೊಳ್ಳಲು ಇಸ್ರೇಲ್ ಗೆ ಬೆಂಬಲವಾಗಿ ನಿಂತ ಡೊನಾಲ್ಡ್ ಟ್ರಂಪ್ ಮೊದಲ ಹಂತದಲ್ಲಿ ಗೆಲುವು ಕಂಡರು. ಇರಾನ್ ನ ಪರಮೋಚ್ಛ ನಾಯಕ ಖಮೇನಿಯನ್ನು ಹತ್ಯೆ ಮಾಡುವಲ್ಲಿ ಸಫಲರಾದರು. ಬಳಿಕ ಇರಾನ್ ನ ಪ್ರಮುಖ ನಾಯಕರನ್ನು ಕೊಂದು ಹಾಕಿದರು.
ಜ್ಯೋತಿಷ್ಯ ಪ್ರಕಾರ ಮಿಥುನ ರಾಶಿಯವರು ತಮ್ಮ ರಾಶಿಗೆ ಅನುಗುಣವಾಗಿ ಯಾವ ಆಹಾರ ಸೇವಿಸಿದರೆ ಆರೋಗ್ಯವಾಗಿರುತ್ತಾರೆ ಎಂಬುದರ ವಿವರ ಇಲ್ಲಿದೆ ನೋಡಿ. ಈ ರಾಶಿ ಶ್ವಾಸಕೋಶ, ನರಗಳಿಗೆ ಸಂಬಂಧಿಸಿದ್ದಾಗಿದೆ. ಮಿಥುನ ರಾಶಿಯವರು ವೈವಿದ್ಯಮಯ ಆಹಾರ ಸೇವನೆ ಮಾಡಲು ಬಯಸುತ್ತಾರೆ. ಅದೇ ರೀತಿ ಬಹಳ ಬೇಗ ಊಟ ಮುಗಿಸುವ ಜಾಯಮಾನ ಹೊಂದಿರುವವರಾಗಿರುತ್ತಾರೆ. ಊಟ ಮಾಡುವಾಗಲೂ ಮಾತನಾಡುವುದು, ಏನಾದರೂ ನೋಡುವುದು, ಓದುವುದು ಇತ್ಯಾದಿ ಎರಡೆರಡು ಕೆಲಸಗಳನ್ನು ಮಾಡುವ ಪ್ರವೃತ್ತಿ ಅವರಲ್ಲಿರುತ್ತದೆ. ಈ ರಾಶಿಯವರು ಸೇವಿಸಬೇಕಾದ ಆಹಾರ, ಹಣ್ಣು, ತರಕಾರಿ ವಿವರ ಇಲ್ಲಿದೆ.
ಬೆಂಗಳೂರು: ರಾಜ್ಯದಲ್ಲಿ ಈಗ ಬೇಸಿಗೆ ಮಳೆಯ ಅಬ್ಬರ ಕಂಡುಬರುತ್ತಿದೆ. ಇಂದೂ ಕೆಲವು ಜಿಲ್ಲೆಗಳಿಗೆ ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಮೊನ್ನೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿತ್ತು. ಬಿಸಿಲಿನ ಬೇಗೆಗೆ ಮಳೆ ತಂಪು ನೀಡಿದರೂ ಅಕಾಲಿಕ ಮಳೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಅದರಲ್ಲೂ ಆಲಿಕಲ್ಲು ಮಳೆಯಿಂದ ಮಾವು, ತರಕಾರಿ, ಹಣ್ಣು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಇಂದೂ ಕೂಡಾ ರಾಜ್ಯದ ಕೆಲವು ಜಿಲ್ಲೆಗಳಿಗೆ ಮಳೆಯಾಗುವ ಸೂಚನೆಯಿದೆ. ಉತ್ತರ ಕನ್ನಡ, ಕೊಡಗು, ಬೆಂಗಳೂರು, ಹಾವೇರಿ, ಗದಗ, ಬೀದರ್, ಧಾರವಾಡ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಸೂಚಿಸುತ್ತಿದೆ.