ಬೆಂಗಳೂರು: ರಾಜ್ಯದಲ್ಲಿ ಇಂದು ಹವಾಮಾನದಲ್ಲಿ ಮತ್ತೆ ಬದಲಾವಣೆಯಾಗಲಿದೆ. ಇಂದು ವಿಪರೀತ ಬಿಸಲಿರಲಿದೆ. ಇಂದಿನ ಹವಾಮಾನ ವರದಿ ಇಲ್ಲಿದೆ ನೋಡಿ. ನಿನ್ನೆ ರಾಜ್ಯದ ತಾಪಮಾನ ಸರಾಸರಿ ಕನಿಷ್ಠ 13 ಡಿಗ್ರಿಯವರೆಗೆ ಬಂದಿತ್ತು. ಆದರೆ ಹಗಲು ಕೆಲವೆಡೆ ಭಾಗಶಃ ಮೋಡ ಕಂಡುಬಂದಿತ್ತು. ಆದರೆ ಇಂದಿನಿಂದ ಹವಾಮಾನದಲ್ಲಿ ಮತ್ತಷ್ಟು ಬದಲಾವಣೆಯಾಗಲಿದೆ. ಇಂದು ಬಿಸಿಲಿನ ಝಳ ಹೆಚ್ಚಲಿದೆ. ಇಂದು ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 28 ಡಿಗ್ರಿಗೆ ಏರಿಕೆಯಾಗಲಿದ್ದು ಕನಿಷ್ಠ ತಾಪಮಾನ 14 ಡಿಗ್ರಿಯಿರಲಿದೆ. ಹಗಲಿಡೀ ಭಾರೀ ಬಿಸಿಲಿರಲಿದೆ. ಆದರೆ ರಾತ್ರಿ ಚಳಿಯೂ ಕಂಡುಬರಲಿದೆ. ಹಾಗಿದ್ದರೂ ಚಳಿಯ ತೀವ್ರತೆ ಕಳೆದ ವಾರಕ್ಕೆ ಹೋಲಿಸಿದರೆ ಕಡಿಮೆಯಾಗಲಿದೆ.
ಇಂದು ಗುರುವಾರವಾಗಿದ್ದು ಗುರು ರಾಘವೇಂದ್ರ ರಾಯರಿಗೆ ವಿಶೇಷವಾದ ದಿನವಾಗಿದೆ. ಈ ದಿನ ರಾಯರನ್ನು ಕುರಿತು ರಾಘವೇಂದ್ರ ಮಂಗಳಾಷ್ಟಕಂ ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.ಶ್ರೀಮದ್ರಾಮಪಾದಾರವಿಂದಮಧುಪಃ ಶ್ರೀಮಧ್ವವಂಶಾಧಿಪಃಸಚ್ಚಿಷ್ಯೋಡುಗಣೋಡುಪಃ ಶ್ರಿತಜಗದ್ಗೀರ್ವಾಣಸತ್ಪಾದಪಃ ।ಅತ್ಯರ್ಥಂ ಮನಸಾ ಕೃತಾಚ್ಯುತಜಪಃ ಪಾಪಾಂಧಕಾರಾತಪಃಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ ॥ 1 ॥ ಕರ್ಮಂದೀಂದ್ರಸುಧೀಂದ್ರಸದ್ಗುರುಕರಾಂಭೋಜೋದ್ಭವಃ ಸಂತತಂಪ್ರಾಜ್ಯಧ್ಯಾನವಶೀಕೃತಾಖಿಲಜಗದ್ವಾಸ್ತವ್ಯಲಕ್ಷ್ಮೀಧವಃ ।ಸಚ್ಛಾಸ್ತ್ರಾದಿ ವಿದೂಷಕಾಖಿಲಮೃಷಾವಾದೀಭಕಂಠೀರವಃಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ ॥ 2 ॥ ಸಾಲಂಕಾರಕಕಾವ್ಯನಾಟಕಕಲಾಕಾಣಾದಪಾತಂಜಲ-ತ್ರಯ್ಯರ್ಥಸ್ಮೃತಿಜೈಮಿನೀಯಕವಿತಾಸಂಕೀತಪಾರಂಗತಃ ।ವಿಪ್ರಕ್ಷತ್ರವಿಡಂಘ್ರಿಜಾತಮುಖರಾನೇಕಪ್ರಜಾಸೇವಿತಃಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ ॥ 3 ॥ ರಂಗೋತ್ತುಂಗತರಂಗಮಂಗಲಕರ ಶ್ರೀತುಂಗಭದ್ರಾತಟ-ಪ್ರತ್ಯಕ್ಸ್ಥದ್ವಿಜಪುಂಗವಾಲಯ ಲಸನ್ಮಂತ್ರಾಲಯಾಖ್ಯೇ ಪುರೇ ।ನವ್ಯೇಂದ್ರೋಪಲನೀಲಭವ್ಯಕರಸದ್ವೃಂದಾವನಾಂತರ್ಗತಃಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ ॥ 4 ॥
ನವದೆಹಲಿ: ಆಪರೇಷನ್ ಸಿಂಧೂರ್ ಸಮಯದಲ್ಲಿ ರಫೇಲ್ ಯುದ್ಧವಿಮಾನಗಳು "ಹೀರೋ" ಎಂದು ವಾಯುಪಡೆಯ ಉಪಾಧ್ಯಕ್ಷ ಏರ್ ಮಾರ್ಷಲ್ ನಾಗೇಶ್ ಕಪೂರ್ ಬುಧವಾರ ಹೇಳಿದ್ದಾರೆ ಭಾರತೀಯ ವಾಯುಪಡೆಯು ಹೆಚ್ಚಿನ ಬಹು-ಪಾತ್ರ ಯುದ್ಧ ವಿಮಾನಗಳನ್ನು (ಎಂಆರ್ಎಫ್ಎ) ಸೇರಿಸುವ ಗುರಿಯನ್ನು ಹೊಂದಿದೆ ಎಂದು ಬುಧವಾರ ಹೇಳಿದ್ದಾರೆ. 2026 ಏರ್ ಮಾರ್ಷಲ್ ನಾಗೇಶ್ ಕಪೂರ್ ಅವರು ಪ್ರತಿ ಭಯೋತ್ಪಾದಕ ಕೃತ್ಯಕ್ಕೆ ಪ್ರತಿಕ್ರಿಯಿಸಲಾಗುವುದು ಎಂದು ಹೇಳಿದರು.
ಬೆಂಗಳೂರು: ಬೈಕ್ಗೆ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಕ್ಕಳ ಮೇಲೆ ಬಸ್ ಹರಿದ ಪರಿಣಾಮ ಇಬ್ಬರು ಮಕ್ಕಳ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಮೃತ ಮಕ್ಕಳನ್ನು 2 ವರ್ಷದ ವರ್ಷಾ ಹಾಗೂ 4 ವರ್ಷದ ಭಾನು ಎಂದು ಗುರುತಿಸಲಾಗಿದೆ. ಹೆಣ್ಣೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದ ಪೊಲೀಸ್ ಕ್ವಾರ್ಟರ್ಸ್ ಬಳಿ ಪೊಲೀಸ್ ಪೇದೆ ನಾಗನಗೌಡ ತನ್ನ ಮಗಳು ವರ್ಷಾ ಹಾಗೂ ಅಣ್ಣನ ಮಗಳು ಭಾನುಳನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಅಜ್ ಮೋನಿ ಶಾಲೆಗೆ
ಬೀದರ್: ಪರೀಕ್ಷೆಗೆ ಹೆದರಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ನವೋದಯ ವಸತಿ ಶಾಲೆಯಲ್ಲಿ ನಡೆದಿದೆ.ಮೃತ ವಿದ್ಯಾರ್ಥಿಯನ್ನು ಮಂಠಾಳ ಗ್ರಾಮದ ಶರತ್ (16) ಎಂದು ಗುರುತಿಸಲಾಗಿದೆ. ನವೋದಯ ವಸತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಎಂದು ತಿಳಿದುಬಂದಿದೆ. ಇನ್ನೂ ಸಾವಿಗೂ ಮುನ್ನಾ ಡೆತ್ನೋಟ್ ಬರೆದಿದ್ದು, ಇದೀಗ ಪತ್ತೆಯಾದ ಡೆತ್ನೋಟ್ನಲ್ಲಿ ಮಮ್ಮಿ Sorry… ಅಪ್ಪ I Love You ಹಾಗೂ Keep Smile Forever ಎಂದು ಬರೆದಿದ್ದಾನೆ.
ಬೆಂಗಳೂರು: ಅಧಿಕಾರ ಹಂಚಿಕೆ ವಿಚಾರದಲ್ಲಿ ನಾನು ಹಾಗೂ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ʻಸಿಎಂ ಸಿದ್ದರಾಮಯ್ಯ ಕುರ್ಚಿ ಬಿಟ್ಟು ಕೊಡ್ತಾರೆ ಎಂಬ ವಿಶ್ವಾಸ ಇದೆʼ ಅನ್ನೋ ಡಿಕೆ ಸುರೇಶ್ ಹೇಳಿಕೆ ಸಂಬಂಧ ಮಾಧ್ಯಮದವರು ಪ್ರಶ್ನೆ ಕೇಳಿದಾಗ ಸಿಟ್ಟಾದ ಸಿದ್ದರಾಮಯ್ಯನವರು, ಅದನ್ನ ಬಿಟ್ಟು ಬೇರೆ ಏನು ಕೇಳೋಕೆ ಬರಲ್ವಾ ನಿಮಗೆ? ಇನ್ನೇನು ಕೇಳೋದೆ ಇಲ್ಲವಲ್ಲ. 3 ತಿಂಗಳು ಆಯ್ತು ಇದನ್ನ ನೀವು ಶುರು ಮಾಡಿ. ಇನ್ನು ಮೇಲೆ ಇದನ್ನ ಕೇಳಬೇಡಿ ದಯಮಾಡಿ ಎಂದು ಸಿಟ್ಟಾದರು. ಎಲ್ಲವೂ ತಿಳಿದಿರುವ ಹೈಕಮಾಂಡ್ ಅವರು ಎಲ್ಲವನ್ನ ತೀರ್ಮಾನ ಮಾಡ್ತಾರೆ. ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತೋ
ಹುಬ್ಬಳ್ಳಿ: ಇಲ್ಲಿ ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಅವರು ಸುಮಾರು 30,000 ಜನರ ಗುಂಪಿನಲ್ಲಿ ತನ್ನ ಕುಟುಂಬದಿಂದ ತಪ್ಪಿಸಿಕೊಂಡ ಮಗುವಿಗೆ ಸಹಾಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೋನು ಅವರು ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದು ಆನ್ಲೈನ್ನಲ್ಲಿ ವ್ಯಾಪಕ ಮೆಚ್ಚುಗೆಯನ್ನು ಪಡೆದಿದೆ. ಶ್ರೀ ಸಾಯಿ ಎಂದು ಗುರುತಿಸಲ್ಪಟ್ಟ ಆತಂಕದಲ್ಲಿರುವ ಮಗುವನ್ನು ವೇದಿಕೆಯ ಮುಂಭಾಗದ ಕಡೆಗೆ ಸಾಂತ್ವನಗೊಳಿಸಲು
ನವದೆಹಲಿ: ನಮ್ಮ ಇಂಧನ ಭದ್ರತೆಯನ್ನು ವ್ಯಾಪಾರ ಒಪ್ಪಂದದ ಅಡಿಯಲ್ಲಿ ಯುಎಸ್ಗೆ ಹಸ್ತಾಂತರಿಸಲಾಗಿದೆ. ಇದು ಸಗಟು ಶರಣಾಗತಿಯಾಗಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮೇಲಿನ ಭಾಷಣದಲ್ಲಿ ರಾಹುಲ್ ಹೇಳಿದರು.ನೀವು ಯಾಂತ್ರೀಕೃತ ಅಮೇರಿಕನ್ ಫಾರ್ಮ್ಗಳಿಗೆ ಬಾಗಿಲು ತೆರೆದಿದ್ದೀರಿ, ನಮ್ಮ ಬಡ ರೈತರನ್ನು ಹತ್ತಿಕ್ಕಲು ನೀವು ಬಾಗಿಲು ತೆರೆದಿದ್ದೀರಿ, ಇದು ಅವಮಾನಕರವಾಗಿದೆ ಎಂದರು.ಈ ಒಪ್ಪಂದಕ್ಕೆ ಸಹಿ ಹಾಕಲು ಭಾರತದ ಯಾವುದೇ ಪ್ರಧಾನಿಯಾಗಲಿ, ನರೇಂದ್ರ ಮೋದಿಯವರಾಗಲಿ ಒಪ್ಪುತ್ತಿರಲಿಲ್ಲ ಎಂದು ರಾಹುಲ್ ಹೇಳಿದರು.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಇದೀಗ ಡಿಕೆ ಶಿವಕುಮಾರ ದೆಹಲಿಗೆ ತೆರಳಿರುವುದು ಭಾರೀ ಕುತೂಹಲವವನ್ನು ಮೂಡಿಸಿದೆ. ಇದಿಗ ದೆಹಲಿಯಲ್ಲಿ ಹೈಕಮಾಂಡ್ನ ಕೆಲವು ನಾಯಕರನ್ನು ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ ಎನ್ನಲಾಗಿದೆ. ದೆಹಲಿಗೆ ತಲುಪುತ್ತಿದ್ದಂತೆಯೇ ಅವರು ‘136’ ಎಂಬ ಸಂಖ್ಯೆಯನ್ನು ಉಲ್ಲೇಖಿಸಿ ನಂಬರ್ ಗೇಮ್ ಶುರು ಮಾಡಿದ್ದಾರೆ ಎನ್ನಲಾಗಿದೆ.ಈ ಹಿಂದೆ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ 136 ಕಾಂಗ್ರೆಸ್ ಶಾಸಕರು
ಬೆಂಗಳೂರು: ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಇದರಿಂದ ಗುರುವಾರ ದೆಹಲಿಯಲ್ಲಿ ನಮೀಬಿಯಾ ವಿರುದ್ಧದ ಪಂದ್ಯವನ್ನು ಆಡುವುದು ಅನುಮಾನ ಎಂದು ತಿಳಿದುಬಂದಿದೆ. ಅಭಿಷೇಕ್ ಕಳೆದ ಎರಡು ದಿನಗಳಿಂದ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿದರು.ಸೋಂಕಿನಿಂದ ಅಭಿಷೇಕ್ ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಸಮಸ್ಯೆಯನ್ನು ಕಂಡುಹಿಡಿಯಲು ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಅವರು ಇಂದು ಡಿಸ್ಚಾರ್ಜ್ ಆಗುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಇವರು ಆಟವಾಡುವುದು ಅನುಮಾನಾಸ್ಪದವಾಗಿದೆ.
ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನಗರದ ಮೊಬೈಲ್ ಫೋನ್ ಅಂಗಡಿಯೊಂದರಿಂದ ಇಬ್ಬರು ಪೊಲೀಸ್ ಪೇದೆಗಳು ಹೊಸ ಐಫೋನ್ ಕದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರೋಪಿ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಕ್ಲಿಪ್ ಸಾರ್ವಜನಿಕರಿಂದ ಬಲವಾದ ಪ್ರತಿಕ್ರಿಯೆಗಳನ್ನು ಉಂಟುಮಾಡಿದೆ, ಅನೇಕ ಜನರು ಪೊಲೀಸ್ ಸಿಬ್ಬಂದಿಯ ನಡವಳಿಕೆಯನ್ನು ಪ್ರಶ್ನೆ ಮಾಡಿದ್ದಾರೆ. ವೈರಲ್ ವೀಡಿಯೊದಲ್ಲಿ ಅಂಗಡಿ ಕೌಂಟರ್ನ ಗ್ರಾಹಕರ ಬದಿಯಲ್ಲಿ ಇಬ್ಬರು ಪುರುಷರು ನಿಂತಿದ್ದಾರೆ. ಇನ್ನೊಂದು ಬದಿಯಲ್ಲಿ
ಕೇರಳ: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಕಾರ್ಯದರ್ಶಿ ಎಸ್.ಜಯಶ್ರೀ ಮತ್ತು ಮಧ್ಯವರ್ತಿ ಕಲ್ಪೇಶ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ಜಾರಿ ಮಾಡಿದೆ. ಮುಂದಿನ ವಾರ ಇಡಿ ಕೊಚ್ಚಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೊಟ್ಟಿ ಅವರೊಂದಿಗಿನ ಸಂಬಂಧ ಮತ್ತು ಶಂಕಿತ ಹಣಕಾಸಿನ ವಹಿವಾಟಿನ ಕುರಿತು ಮುಂದಿನ ವಾರ ನಟ ಜಯರಾಮ್ ಅವರನ್ನು ವಿಚಾರಣೆಗೆ ತನಿಖಾ ಸಂಸ್ಥೆ ಕರೆದಿದೆ. ಉಣ್ಣಿಕೃಷ್ಣನ್ ಪೊಟ್ಟಿ ಅವರು 2019 ರಲ್ಲಿ ಚೆನ್ನೈನಲ್ಲಿ ಆಯೋಜಿಸಲಾದ ಪೂಜೆಯಲ್ಲಿ ನಟನು ದೇವಾಲಯದಿಂದ ಚಿನ್ನದ ಲೇಪನಕ್ಕಾಗಿ ತೆಗೆದ ಕಲಾಕೃತಿಗಳೊಂದಿಗೆ ಭಾಗವಹಿಸುತ್ತಿರುವುದನ್ನು ತೋರಿಸುವ ವೀಡಿಯೊಗಳ ಪ್ರಸಾರದ ನಂತರ ಈ ಬೆಳವಣಿಗೆಯಾಗಿದೆ.
ನವದೆಹಲಿ: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷದ ಸಂಸದರು ಅವಿಶ್ವಾಸ ಗೊತ್ತುವಳಿ ಮಂಡಿಸಿದ ಬೆನ್ನಲ್ಲೇ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಬುಧವಾರ ಸ್ಪೀಕರ್ ಅವರ ಕೊಠಡಿಗೆ ಕಾಂಗ್ರೆಸ್ ಸದಸ್ಯರು ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.ಅವರು ಮಾತನಾಡುವ ಅನುಮತಿಗಳಿಗೆ ಸಂಬಂಧಿಸಿದಂತೆ ಸದನದಲ್ಲಿ ವಿವಾದವನ್ನು ಉಲ್ಲೇಖಿಸಿದರು. ಸಭಾಧ್ಯಕ್ಷರು ಆದೇಶ ಹೊರಡಿಸಿದ ಬಳಿಕವೂ ಅದನ್ನು ಪಾಲಿಸಿಲ್ಲ ಎಂದು ಆರೋಪಿಸಿದರು. ಮಾತನಾಡಲು ಯಾರ ಅನುಮತಿಯೂ ಬೇಕಿಲ್ಲ ಮತ್ತು ಅವರ ಇಚ್ಛೆಯಂತೆ ಮಾತನಾಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಅವರು ಹೇಳಿದ್ದಾರೆ.
ಮುಂಬೈ: ಅಪರಿಚಿತ ವ್ಯಕ್ತಿಯೊಬ್ಬ ₹10 ಕೋಟಿ ರೂಪಾಯಿ ನೀಡುವಂತೆ ವಾಟ್ಸಾಪ್ ವಾಯ್ಸ್ ಮೆಸೇಜ್ ಕಳುಹಿಸಿದ್ದಾನೆ. ಈ ಅಪಾಯಕಾರಿ ಘಟನೆಯ ನಂತರ ನಟ ಮತ್ತು ಅವರ ಪತ್ನಿ ದೀಪಿಕಾ ಪಡುಕೋಣೆ ತಮ್ಮ ಸೆಂಟ್ರಲ್ ಮುಂಬೈ ನಿವಾಸದ ಭದ್ರತೆಯನ್ನು ಹೆಚ್ಚಿಸಿದ್ದಾರೆ.ದಂಪತಿ ತಮ್ಮ ನಿವಾಸವನ್ನು ರಕ್ಷಿಸುವ ಆರು ಶಸ್ತ್ರಸಜ್ಜಿತ ಕಾವಲುಗಾರರ ಮೂಲಕ ಕಾರ್ಯನಿರ್ವಹಿಸುವ ಭದ್ರತಾ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ.ಮುಂಬೈ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರನ್ನು ಅವರ ಆಸ್ತಿಯಲ್ಲಿ ಕೆಲಸ ಮಾಡಲು ನಿಯೋಜಿಸಲಾಗಿದೆ. ಮುಂಬೈ
ಮಂಗಳೂರು: ಒಂದಲ್ಲ ಎರಡಲ್ಲ ಬರೋಬ್ಬರಿ 9 ಯುವತಿಯರನ್ನು ಮದುವೆಯಾಗಿ ಲಕ್ಷ ಲಕ್ಷ ವಂಚಿಸಿದವನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮಂಗಳೂರಿನ ಸುಶಾಂತ್ ಪೂಜಾರಿ ಎಂಬಾತ, ಮ್ಯಾಟ್ರಿಮೋನಿ ಮೂಲಕ ಭಾಸ್ಕರ್ ಎಂಬಾತನನ್ನು ಮಾವ ಎಂದು ತೋರಿಸಿ ಸಂಬಂಧ ಕುದುರಿಸಿ, ಬರೋಬ್ಬರಿ 9 ಮದುವೆಯಾಗಿದ್ದಾನೆ. ಇನ್ನೂ ಸುಶಾಂತ್ ಮುಖವಾಡವನ್ನು ಮುಂಬೈನ ಯುವತಿ ಬಯಲಿಗೆ ಎಳೆದಿದ್ದಾಳೆ. ಸುಶಾಂತ್ ವಿರುದ್ಧ ಯುವತಿ ಕಾವೂರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಶುರು ಮಾಡಿದಾಗ ಸುಶಾಂತ್ ನಿಜವಾದ ಮುಖವಾಡ ಬಯಲಾಗಿದೆ.
ಬೆಂಗಳೂರು: ರಾಜ್ಯದ ಹೆಮ್ಮೆಯ ಬ್ರ್ಯಾಂಡ್ 'ನಂದಿನಿ' ಉತ್ಪನ್ನಗಳ ನೂತನ ಪ್ರಚಾರ ರಾಯಭಾರಿಯನ್ನಾಗಿ ಹಿರಿಯ ನಟಿ ಸುಧಾರಾಣಿ ಅವರನ್ನು ನೇಮಿಸಲಾಗಿದೆ.ಈ ಸಂಬಂಧ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ಪ್ರಮುಖ ಭಾಗವಾದ ಬೆಂಗಳೂರು ಹಾಲು ಒಕ್ಕೂಟ ನಟಿ ಸುಧಾರಾಣಿ ಅವರನ್ನು ನಂದಿನಿ ಉತ್ಪನ್ನಗಳ ನೂತನ ಪ್ರಚಾರದ ರಾಯಭಾರಿಯನ್ನಾಗಿ ನೇಮಿಸಲಾದ ಬಗ್ಗೆ ಅಧಿಕೃತವಾಗಿ ಘೋಷಿಸಿದೆ.
ಕರಾವಳಿ ಕರ್ನಾಟಕದಾದ್ಯಂತ ಒಣ ಹವಾಮಾನವನ್ನು ನಿರೀಕ್ಷಿಸಲಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ. ಕನಿಷ್ಟ ಮಳೆಯೊಂದಿಗೆ ಸ್ಪಷ್ಟವಾದ ಆಕಾಶವನ್ನು ನಿರೀಕ್ಷಿಸಬಹುದು, ಇದು ಹೊರಾಂಗಣ ಚಟುವಟಿಕೆಗಳಿಗೆ ಅನುಕೂಲಕರವಾದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ತೇವಾಂಶದ ಮಟ್ಟವು ಮಧ್ಯಮ ಮಟ್ಟದಲ್ಲಿರುವುದರಿಂದ ರೈತರಿಗೆ ನೀರಾವರಿ ಮತ್ತು ಬೆಳೆ ನಿರ್ವಹಣೆಯನ್ನು ಯೋಜಿಸಲು ಸಲಹೆ ನೀಡಲಾಗುತ್ತದೆ.
ಕೆನಡಾ: ಗ್ರಾಮೀಣ ಈಶಾನ್ಯ ಬ್ರಿಟಿಷ್ ಕೊಲಂಬಿಯಾದ ಟಂಬ್ಲರ್ ರಿಡ್ಜ್ ಸೆಕೆಂಡರಿ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಶಂಕಿತ ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದ್ದಾರೆ.ಇದು ಪ್ರದೇಶದ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಭೀಕರ ಘಟನೆಯಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಘಟನೆಗೆ ಸಂಬಂಧಿಸಿದ್ದೆಂದು ನಂಬಲಾದ ನಿವಾಸದಲ್ಲಿ ಇನ್ನಿಬ್ಬರು ಪತ್ತೆಯಾಗಿದ್ದಾರೆ. ಶೂಟರ್ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಲಾಗಿದೆ. ಇಬ್ಬರನ್ನು ಗಂಭೀರ ಅಥವಾ ಮಾರಣಾಂತಿಕ ಗಾಯಗಳೊಂದಿಗೆ
ನವದೆಹಲಿ: ಅಸ್ಸಾಂ ಚುನಾವಣೆ ತಯಾರಿ ನೆಪದಲ್ಲಿ ದೆಹಲಿಗೆ ತೆರಳಿದ್ದ ಡಿಕೆ ಶಿವಕುಮಾರ್ ಮಾಸ್ಟರ್ ಪ್ಲ್ಯಾನ್ ಏನು ಎಂಬುದು ಈಗ ಬಯಲಾಗಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಭುಗಿಲೆದ್ದಿದೆ. ಇಂತಹ ಸನ್ನಿವೇಶದಲ್ಲಿ ಕಾಕತಾಳೀಯ ಎಂಬಂತೆ ಡಿಕೆ ಶಿವಕುಮಾರ್ ಗೆ ಅಸ್ಸಾಂ ಚುನಾವಣೆ ತಯಾರಿ ಕುರಿತು ಚರ್ಚಿಸಲು ಪ್ರಿಯಾಂಕ ಗಾಂಧಿ ವಾದ್ರಾ ಬುಲಾವ್ ನೀಡಿದ್ದರು. ಇದನ್ನೇ ನೆಪ ಮಾಡಿಕೊಂಡು ಬಜೆಟ್ ಸಿದ್ಧತಾ ಸಭೆಯನ್ನೂ ಬಿಟ್ಟು ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಈ ವೇಳೆ ಅವರು ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ನಾಯಕರ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ದಾಖಲೆಯ ಏರಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಇಳಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಇಂದು ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,59,625.00 ರೂ.ಗಳಿತ್ತು. ಇಂದೂ 1,61,145.00 ರೂ.ಗಳಷ್ಟಿದೆ.
ಲಕ್ನೋ: ಗರ್ಲ್ ಫ್ರೆಂಡ್ ಜೊತೆ ಮಾಲ್ ನಲ್ಲಿ ಶಾಪಿಂಗ್ ಮಾಡುವಾಗ ಪತಿ ರೆಡ್ ಹ್ಯಾಂಡ್ ಆಗಿ ಪತ್ನಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಮುಂದೇನಾಯ್ತು? ಈ ವಿಡಿಯೋ ನೋಡಿ. ಇದಕ್ಕೇ ತಿಳಿದವರು ಹೇಳೋದು ಎರಡು ದೋಣಿಯಲ್ಲಿ ಕಾಲಿಡಬಾರದು ಎಂದು. ಆದರೆ ಈ ಭೂಪ ಮನೆಯಲ್ಲಿ ಕಟ್ಟಿಕೊಂಡ ಹೆಂಡತಿಯಿದ್ದರೂ ಮತ್ತೊಬ್ಬ ಹುಡುಗಿಯ ಸಹವಾಸ ಮಾಡಿದ್ದಾನೆ. ಇನ್ನೇನು ಎರಡು ದಿನ ಕಳೆದರೆ ವ್ಯಾಲೆಂಟೈನ್ಸ್ ಡೇ ಕೂಡಾ ಬರುತ್ತದೆ. ಹೀಗಾಗಿ ಗರ್ಲ್ ಫ್ರೆಂಡ್ ಗೆ ಗಿಫ್ಟ್ ಕೊಡಿಸಲು ಮಾಲ್ ಗೆ ಕರೆದುಕೊಂಡು ಬಂದಿದ್ದಾನೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅವರು AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.ಇದು ಜಾಗತಿಕ ದಕ್ಷಿಣ, ರಾಷ್ಟ್ರ ರಾಜಧಾನಿಯಲ್ಲಿ ಆತಿಥ್ಯ ವಹಿಸುವ ಮೊದಲ ಜಾಗತಿಕ AI ಶೃಂಗಸಭೆ, ಎರಡೂ ದೇಶಗಳು ಕೃತಕ ಬುದ್ಧಿಮತ್ತೆಯ ಮಹತ್ವವನ್ನು ಒತ್ತಿಹೇಳುತ್ತವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ, ಫ್ರೆಂಚ್ ಅಧ್ಯಕ್ಷರು ಫೆಬ್ರವರಿ 17 ರಿಂದ ಫೆಬ್ರವರಿ 19 ರವರೆಗೆ ಭೇಟಿ ನೀಡಲಿದ್ದಾರೆ. ಭೇಟಿಯ ಭಾಗವಾಗಿ, ಪಿಎಂ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್ ಅವರು ಭಾರತ-ಫ್ರಾನ್ಸ್ ಜಂಟಿ ಸಹಭಾಗಿತ್ವದ ವರ್ಷದ
ನವದೆಹಲಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ತಮ್ಮ ವಿರುದ್ಧದ ಅವಿಶ್ವಾಸ ಗೊತ್ತುವಳಿ ನೋಟಿಸ್ ಇತ್ಯರ್ಥವಾಗುವವರೆಗೆ ಸದನದ ಕಲಾಪಕ್ಕೆ ಹಾಜರಾಗುವುದಿಲ್ಲ ಎಂದು ನೈತಿಕ ಆಧಾರದ ಮೇಲೆ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದು ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯದ ನೋಟಿಸ್ ಸಲ್ಲಿಸಿದ ನಂತರ ಇದು ನಡೆದಿದೆ. ಮೂಲಗಳ ಪ್ರಕಾರ ಅವರ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಅವರು ಸದನದ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಂಗಳವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ "ಬಾಬರಿ ಮಸೀದಿ" ಕುರಿತ ಹೇಳಿಕೆಗಳ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ "ಬಿಜೆಪಿ ಕೋಮುವಾದಿಯಾಗುತ್ತದೆ" ಎಂದು ಹೇಳಿದರು.ಯೋಗಿ ಆದಿತ್ಯನಾಥ್ ವಿರುದ್ಧ ವ್ಯಂಗ್ಯವಾಡಿದ ಅಖಿಲೇಶ್ ಯಾದವ್ ಅವರು ಉರ್ದುವಿಗೆ ವಿರೋಧ ವ್ಯಕ್ತಪಡಿಸಿರುವ ಕಾರಣ 'ಖಯಾಮತ್' ಪದಗಳನ್ನು ಬಳಸದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ. ಖಯಾಮತ್ ನಂತಹ ಉರ್ದು ಪದಗಳನ್ನು ಬಳಸಬೇಡಿ ಎಂದು ಹೇಳಿ, ಉರ್ದು ವಿರುದ್ಧ ಇದ್ದ ಸಿಎಂ ಈಗ ಖಯಾಮತ್ ಎಂಬ
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಜಾಮೀನು ಅರ್ಜಿ ವಜಾಗೊಂಡಿದ್ದು, ಬಿಜೆಪಿ ಶಾಸಕರಿಗೆ ಬಂಧನದ ಭೀತಿ ಶುರುವಾಗಿದೆ.ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯಾಗಿರುವ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಇಂದು (ಫೆಬ್ರವರಿ 10) ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದ್ದು, ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದಾರೆ. ಇದೀಗ ಜಾಮೀನು ಅರ್ಜಿ ವಜಾಗೊಂಡಿರುವುದರಿಂದ ಯಾವುದೇ ಸಂದರ್ಭದಲ್ಲೂ ಬಂಧನವಾಗಬಹುದು.
ಗೋವಾ ಪೊಲೀಸರು ರಾಜ್ಯದ ಕಡಲತೀರಗಳಲ್ಲಿ ಕಟ್ಟುನಿಟ್ಟಾದ ಕಾನೂನನ್ನು ಜಾರಿ ಮಾಡಿದ್ದಾರೆ. -ಭಾರತೀಯ ಅಥವಾ ವಿದೇಶಿ ಪ್ರವಾಸಿಗರು ಅನುಮತಿ ಪಡೆಯದೆ ಫೋಟೋಗಳನ್ನು ತೆಗೆಸಿಕೊಂಡರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ವಿಶೇಷವಾಗಿ ವಿದೇಶಿ ಮಹಿಳೆಯರ ಮೇಲೆ ಸೆಲ್ಫಿಗಾಗಿ ಒತ್ತಡ ಹೇರಲಾಗುತ್ತಿದೆ ಅಥವಾ ಅವರ ಒಪ್ಪಿಗೆಯಿಲ್ಲದೆ ಚಿತ್ರೀಕರಿಸಲಾಗಿದೆ ಎಂದು ತೋರಿಸುವ ಸರಣಿ ದೂರುಗಳು ಮತ್ತು ವೈರಲ್ ಕ್ಲಿಪ್ಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಬಾಂಗ್ಲಾದೇಶ: ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಫೆಬ್ರವರಿ 9 ರ ರಾತ್ರಿ, ದೇಶದ ರಾಷ್ಟ್ರೀಯ ಸಂಸತ್ತಿನ ಚುನಾವಣೆಗೆ ಕೆಲವೇ ದಿನಗಳ ಮೊದಲು ಹಿಂದೂ ಉದ್ಯಮಿಯೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಬಲಿಯಾದ 62 ವರ್ಷದ ಸುಷೇನ್ ಚಂದ್ರ ಸರ್ಕಾರ್ ಅವರು ಅಕ್ಕಿ ವ್ಯಾಪಾರಿ ಮತ್ತು ದಕ್ಷಿಣಕಂಡ ಗ್ರಾಮದ ಬೋಗರ್ ಬಜಾರ್ ಛೇದಕದಲ್ಲಿ ಭಾಯಿ ಭಾಯಿ ಎಂಟರ್ಪ್ರೈಸ್ ಮಾಲೀಕರಾಗಿದ್ದರು.ಪೊಲೀಸರ ಪ್ರಕಾರ, ರಾತ್ರಿ 11 ಗಂಟೆ ಸುಮಾರಿಗೆ ದಾಳಿ ನಡೆದಿದ್ದು, ದಾಳಿಕೋರರು ಸರ್ಕಾರ್ ಅವರನ್ನು ಹರಿತವಾದ
ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿರುವ ಪಿಲಿಕುಳ ವನ್ಯಜೀವಿ ಅಭಯಾರಣ್ಯದ ನಿರ್ವಹಣೆಯನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರ ಶೀಘ್ರದಲ್ಲೇ ವಹಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಚರ್ಚೆಗಳು ಬಹುತೇಕ ಅಂತಿಮವಾಗಿದ್ದು, ನಿರ್ವಹಣಾ ವೆಚ್ಚಗಳ ನಿಗದಿ ಮಾತ್ರ ಉಳಿದಿದೆ.ಮೃಗಾಲಯ ಪ್ರಾಧಿಕಾರವು ಅರಣ್ಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಮೃಗಾಲಯದ ನಿರ್ವಹಣೆಯಲ್ಲಿ ವಿಶೇಷ ಪರಿಣತಿಯನ್ನು ಹೊಂದಿದೆ. ಈ ಕಾರಣದಿಂದ ನಿರ್ವಹಣೆಯನ್ನು ಮೃಗಾಲಯ ಪ್ರಾಧಿಕಾರಕ್ಕೆ ವಹಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪ್ರಸ್ತುತ,
ಬಾರಾಬಂಕಿ (ಉತ್ತರ ಪ್ರದೇಶ): ಬಾಬರಿ ಮಸೀದಿಯನ್ನು ಎಂದಿಗೂ ಮರುನಿರ್ಮಾಣ ಮಾಡುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಪ್ರತಿಪಾದಿಸಿದ್ದಾರೆ. "ಅದರ ಬಗ್ಗೆ ಕನಸು ಕಾಣುತ್ತಿರುವವರು, ಮೊದಲು ದೇಶದ ಕಾನೂನಿಗೆ ಬದ್ಧರಾಗಿರಿ ಎಂದು ಎಚ್ಚರಿಸಿದ್ದಾರೆ. ಬಾರಬಂಕಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ಬಾಬರಿ ನಿರ್ಮಾಣದ ಕನಸು ಕಾಣುತ್ತಿರುವವರಿಗೆ ನಾನು
ಬೆಳ್ತಂಗಡಿ: ಇಲ್ಲಿಯ ಜೂನಿಯರ್ ಕಾಲೇಜು ಹಿಂದುಗಡೆ ರಸ್ತೆಯಲ್ಲಿ ಮುಸುಕುಧಾರಿಗಳ ತಂಡವೊಂದು ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿ, ಚೂರಿಯಿಂದ ತಿವಿದ ಪ್ರಕರಣ ಕ್ಲೈಮ್ಯಾಕ್ಸ್ ಕಂಡಿದೆ. ಆದರೆ ಇದೀಗ ಇದೊಂದು ವಿದ್ಯಾರ್ಥಿನಿಯ ಕಟ್ಟುಕತೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಸುದೇಮುಗೇರು ಸಮೀಪದ ವಿದ್ಯಾರ್ಥಿನಿ ಕಾಲೇಜಿಗೆ ಹೋಗಲೆಂದು ನಿನ್ನೆ ಬೆಳಿಗ್ಗೆ ಸುಮಾರು 8.45ಕ್ಕೆ ತನ್ನ ದ್ವಿಚಕ್ರವಾಹನದಲ್ಲಿ ಬರುತ್ತಿದ್ದಾಗ ಬೆಳ್ತಂಗಡಿ ಜೂನಿಯರ್ ಕಾಲೇಜಿನ ಹಿಂಭಾಗದಲ್ಲಿ ಸುದೇಮುಗೇರು ಸಮೀಪ ರಸ್ತೆ ತಿರುವಿನಲ್ಲಿ ಕಾರಿನಲ್ಲಿ ಬಂದ ಮೂರು ಮಂದಿ ಮುಸುಕುಧಾರಿಗಳ ತಂಡ ದ್ವಿಚಕ್ರವಾಹವನ್ನು ತಡೆಗಟ್ಟಿ ವಿದ್ಯಾರ್ಥಿನಿಯನ್ನು ಎಳೆದೊಯ್ಯಲು ಯತ್ನಿಸಿದರು ಎಂದು ವಿದ್ಯಾರ್ಥಿನಿ ಗಂಭೀರ ಆರೋಪ ಮಾಡಿದ್ದಳು.
ಬೆಂಗಳೂರು: ಮುಖ್ಯಮಂತ್ರಿಗಳು ದೇಶದ ಪ್ರಧಾನಮಂತ್ರಿಗಳ ವಿರುದ್ಧ ಹೇಡಿ ಎಂಬ ಕೆಟ್ಟ ಪದ ಬಳಸಿದ್ದು ಸರಿಯೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಇದನ್ನು ಖಂಡತುಂಡವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಮುಖ್ಯಮಂತ್ರಿಗಳಿಗೆ ಪಶ್ಚಾತ್ತಾಪ ಆಗಿದ್ದರೆ ಅವರು ತಕ್ಷಣ ದೇಶದ ಕ್ಷಮೆ ಕೇಳಬೇಕು. ಮೋದಿಜೀ ಅವರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿಯವರು ತಾಳ್ಮೆ ಕಳಕೊಂಡು ಹೀಗೆ ಮಾತನಾಡುತ್ತಿದ್ದಾರಾ? ರಾಹುಲ್ ಗಾಂಧಿಯವರ ಓಲೈಕೆಗಾಗಿ ಹೀಗೆ ಮಾತನಾಡುತ್ತಾರಾ? ಮುಖ್ಯಮಂತ್ರಿ ಪದವಿಯಲ್ಲಿ ಇನ್ನೊಂದಷ್ಟು ದಿನ ಉಳಕೊಳ್ಳಲು ಹೀಗೆ ಮಾತಾಡಿದ್ದಾರಾ? ಅಥವಾ ತಲೆಗಿಲೆ ಕೆಟ್ಟು ಇಂಥ ಪದ ಬಳಸುತ್ತಿದ್ದಾರಾ?
ಪುತ್ತೂರು: ಚಲಿಸುತ್ತಿದ್ದ ರೈಲಿನಿಂದ ಬಿದ್ದು 25ರ ಹರೆಯದ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ಮುಂಜಾನೆ ಚನ್ನರಾಯಪಟ್ಟಣ ಬಳಿ ನಡೆದಿದೆ.ಮೃತರನ್ನು ಪುಣಚ ನಿವಾಸಿ ನಿಶಿತ್ ನಾಯ್ಕ್ ಎಂದು ಗುರುತಿಸಲಾಗಿದೆ. ಪುತ್ತೂರಿನ ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ಅವರು ಬೆಂಗಳೂರಿನ ಕಲ್ಯಾಣ್ ಜ್ಯುವೆಲರ್ಸ್ನಲ್ಲಿ ಕೆಲಸ ಮಾಡುತ್ತಿದ್ದರು.ನಿಶಿತ್ ಸೋಮವಾರ ರಾತ್ರಿ ಬೆಂಗಳೂರಿನಿಂದ ತನ್ನ ಊರಿಗೆ ತೆರಳಲು ರೈಲಿನಲ್ಲಿ ತೆರಳಿದ್ದರು. ಮೂಲಗಳ ಪ್ರಕಾರ, ಅವರು
ನವದೆಹಲಿ: ಸಂಸತ್ ಆವರಣದಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ಕಾಂಗ್ರೆಸ್ ಸಂಸದರು ಆಕ್ಷೇಪಾರ್ಹ ಪೋಸ್ಟರ್ ಹೊತ್ತೊಯ್ದಿರುವುದು ಪ್ರಚೋದನಕಾರಿ ನೀತಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ಹೊರಹಾಕಿದ್ದಾರೆ. ಪ್ರಧಾನ ಮಂತ್ರಿ ಪೀಠದವರೆಗೂ, ಗದ್ದಲದ ನಡುವೆಯೂ ವಿರೋಧ ಪಕ್ಷದ ಸಂಸದರು ಎಲ್ಲಾ ಮಿತಿಗಳನ್ನು ದಾಟಿದ್ದಾರೆ. ಇವರದ್ದು ಚರ್ಚೆ ಅಥವಾ ಪ್ರತಭಟನೆಯಾಗಿರಲಿಲ್ಲ, ಇದು ಕೇವಲ ಉದ್ದೇಶಪೂರ್ವಕವಾದಂತಹ ಪ್ರಚೋದನೆಯಾಗಿತ್ತು ಎಂದು ಜೋಶಿ ಆರೋಪಿಸಿದ್ದಾರೆ.ಒಬ್ಬ ಸಂಸದರಾಗಿರುವವರು ಸದನದ ಗೌರವನ್ನು ಕಾಪಾಡಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಆದರೆ, ಕಾಂಗ್ರೆಸ್
ನವದೆಹಲಿ: ಸ್ಪೀಕರ್ ಓಮ್ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ವಿಪಕ್ಷಗಳು ನೀಡಿದ ನೋಟಿಸ್ ನಲ್ಲಿ ಭಾರಿ ಪ್ರಮಾದವಾಗಿದೆ. ಇದೀಗ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಒಳಗಾಗಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿಪಕ್ಷಗಳಿಗೆ ಮಾತನಾಡಲು ಅವಕಾಶ ಕೊಡದೆ ಪಕ್ಷಪಾತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ವಿಪಕ್ಷಗಳ ಆರೋಪವಾಗಿದೆ. ಈ ಬಗ್ಗೆ ಅವರ ಮೇಲೆ ವಿಶ್ವಾಸ ಇಲ್ಲ ಎಂದು ವಿಪಕ್ಷಗಳು ಅವಿಶ್ವಾಸ ನಿರ್ಣಯಕ್ಕೆ ನಿರ್ಧರಿಸಿ ನೋಟಿಸ್ ನೀಡಿತ್ತು. ಆದರೆ ಈ ನೋಟಿಸ್ ನಲ್ಲಿ ದೊಡ್ಡ ಪ್ರಮಾದವೊಂದು ನಡೆದಿದ್ದು ಈಗ ಎಲ್ಲರ ಗಮನ ಸೆಳೆಯುತ್ತಿದೆ.
ನವದೆಹಲಿ: ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ನ (ಕೆಎಸ್ಡಿಎಲ್) ಬ್ರಾಂಡ್ ಅಂಬಾಸಿಡರ್ ಆಗಿ ಪ್ರಸಿದ್ಧ ಚಲನಚಿತ್ರ ನಟ ತಮನ್ನಾ ಭಾಟಿಯಾ ಅವರ ಎರಡು ವರ್ಷಗಳ ಕಾಲ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಈ ಸಂದರ್ಭದಲ್ಲಿ ಐಕಾನಿಕ್ ಹೆರಿಟೇಜ್ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪ್ ಅನ್ನು ರಿಫ್ರೆಶ್ ಮತ್ತು ಸಮಕಾಲೀನ ನೋಟದೊಂದಿಗೆ ಮರುಪ್ರಾರಂಭಿಸಲಾಗುವುದು ಎಂದು ಪಾಟೀಲ್ ಹೇಳಿದರು.
ನವದೆಹಲಿ: ಲೋಕಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಕದನಕ್ಕೆ ವೇದಿಕೆ ಸಜ್ಜಾಗಿದೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಪಕ್ಷ ಮಂಗಳವಾರ ಅವಿಶ್ವಾಸ ಗೊತ್ತುವಳಿ ಮಂಡಿಸಲು ನೋಟಿಸ್ ಸಲ್ಲಿಸಿದೆ.ಕಾಂಗ್ರೆಸ್ನ ಈ ನಡೆ ಸಂಸತ್ತಿನಲ್ಲಿ ಸರ್ಕಾರ–ಪ್ರತಿಪಕ್ಷಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಸಂಸತ್ತಿನ ಕಲಾಪಕ್ಕೆ ನಿರಂತರ ಅಡಚಣೆಗಳ ನಡುವೆ ಈ ಬೆಳವಣಿಗೆ ನಡೆದಿದೆ. ವಿರೋಧ ಪಕ್ಷದ ನಾಯಕರಾದ ಕೆ. ಸುರೇಶ್ ಮತ್ತು ಮುಹಮ್ಮದ್ ಜಾವೇದ್ ಸದನದ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಸಲ್ಲಿಸಿದ್ದಾರೆ. ಕಾಂಗ್ರೆಸ್ ನೀಡಿದ ನೋಟಿಸ್ ಗೆ 118 ಸಂಸದರು ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ತೃಣಮೂಲ ಕಾಂಗ್ರೆಸ್ ಈ ಕ್ರಮದಿಂದ ದೂರ ಉಳಿದು, ಸಹಿ ಮಾಡಿದವರ ಪಟ್ಟಿಯಲ್ಲಿ ಸೇರಿಲ್ಲ.
ಬೆಂಗಳೂರು: ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡ್ತೀರಾ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ ಸಿಎಂ ಸಿದ್ದರಾಮಯ್ಯ ಗರಂ ಆಗಿ ಕರೆಯದೆ ಇದ್ದಮೇಲೆ ನಾನ್ಯಾಕಮ್ಮ ಹೋಗ್ಲಿ ಎಂದರು.ಅಸ್ಸಾಂ ಚುನಾವಣೆ ತಯಾರಿ ನೆಪದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಇಂದು ದೆಹಲಿಗೆ ತೆರಳಿದ್ದಾರೆ. ಬಜೆಟ್ ಕುರಿತು ಇಂದು ಸಭೆ ಇದ್ದರೂ ಅದನ್ನು ಬಿಟ್ಟು ಅವರು ಪ್ರಿಯಾಂಕ ಗಾಂಧಿ ಕರೆದಿರುವ ಸಭೆಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಈಗ ಮತ್ತೊಮ್ಮೆ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಲ್ಲಿದೆ. ಹೀಗಾಗಿ ಅವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು: ವಿಧಾನಸೌಧದಲ್ಲಿರುವ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲಿ ಚಿನ್ನಾಭರಣ ಹಾಗೂ ನಗದು ಇದ್ದ ಕೈಚೀಲ ಕಳವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಗ್ರೂಪ್ ನೌಕರನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.ನವೀನ್ ಎಂಬವರು ಕೆಲಸದ ನಿಮಿತ್ತ ಸಚಿವ ಭೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದರು. ಆ ವೇಳೆ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ನಗದು ಇದ್ದ ಕೈಚೀಲವನ್ನು ತಂದಿದ್ದು, ತೆರಳುವಾಗ ಅದನ್ನು ಕಚೇರಿಯಲ್ಲೇ ಮರೆತು ಹೊರಟಿದ್ದರು. ಮಾರನೇ ದಿನ ಕಚೇರಿಗೆ ಬಂದು ಪರಿಶೀಲಿಸಿದಾಗ ಕೈಚೀಲ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.ಈ ಬಗ್ಗೆ ನವೀನ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಚೇರಿಯ ಸಿಸಿಟಿವಿ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಡಿಪಿಎಆರ್ ಇಲಾಖೆಯ ಡಿ ಗ್ರೂಪ್ ನೌಕರ ಆಂಟೋನಿ ಎಂಬಾತ ಬ್ಯಾಗ್ ಕೊಂಡೊಯ್ದಿರುವುದು ಪತ್ತೆಯಾಗಿದೆ.
ನವದೆಹಲಿ:ಭಾರತದ ವಿರುದ್ಧಕೊಲಂಬೊದಲ್ಲಿ ಫೆ. 15ರಂದು ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಕಣಕ್ಕಿಳಿಸಲು ಪಾಕಿಸ್ತಾನ ಸರ್ಕಾರ ಒಪ್ಪಿಗೆ ನೀಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಬಿಸಿಸಿಐ ಮೊದಲ ಪ್ರತಿಕ್ರಿಯೆ ನೀಡಿದೆ. ಬಿಕ್ಕಟ್ಟನ್ನು ಪರಿಹರಿಸಿ ಮಿಲಿಯನ್ ಡಾಲರ್ ಪಂದ್ಯ ನಿಗದಿಯಂತೆ ನಡೆಯುವಂತೆ ನೋಡಿಕೊಂಡದ್ದಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಕೃತಜ್ಞತೆ ಸಲ್ಲಿಸಿದೆ.ಟಿ20 ವಿಶ್ವಕಪ್ ತಪ್ಪಿಸಿಕೊಂಡರೂ ಬಾಂಗ್ಲಾದೇಶಕ್ಕೂ ಪರಿಹಾರ ನೀಡಲಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಉಲ್ಲೇಖಿಸಿದರು ಮತ್ತು ಭಾರತ ಮತ್ತು ಶ್ರೀಲಂಕಾದಲ್ಲಿ ವಿಶ್ವಕಪ್ ಯಶಸ್ವಿ ಕಾರ್ಯಕ್ರಮವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು: ಪ್ರಧಾನಿ ಮೋದಿ ಸಂಸತ್ ನಲ್ಲಿ ರಾಹುಲ್ ಗಾಂಧಿ ಪ್ರಶ್ನೆಗೆ ಉತ್ತರಿಸಲಾಗದೇ ಭಯಗೊಂಡು ಓಡಿ ಹೋದರು ಎಂಬ ಸಿಎಂ ಸಿದ್ದರಾಮಯ್ಯ ಟೀಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿ ಮಾಜಿ ಸೇನಾಧಿಕಾರಿ ನರಾವಣೆ ಅವರ ಪುಸ್ತಕವನ್ನು ಆಧರಿಸಿ ಮಾಡಿದ ಆರೋಪಗಳಿಗೆ ಉತ್ತರಿಸಲಾಗದೇ ಮೋದಿ ಭಯಗೊಂಡು ಓಡಿ ಹೋದರು. ಈ ರೀತಿ ಓಡಿ ಹೋದರೆ ಪ್ರಜಾಪ್ರಭುತ್ವವೂ ಉಳಿಯಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ವಿಜಯೇಂದ್ರ ‘ಸಿದ್ದರಾಮಯ್ಯನವರೇ, ಪ್ರಧಾನಿ ನರೇಂದ್ರ ಮೋದಿಜೀ ಅವರು ಎಲ್ಲಿಯೂ ತಪ್ಪಿಸಿಕೊಂಡು ಹೋಗಿರಲಿಲ್ಲ, ಸಂಸತ್ ಭವನದಲ್ಲೇ ಇದ್ದರು.
ಅಪ್ಪ ಅಮ್ಮ ಏನೋ ಮನಸ್ತಾಪವಾಗಿ ವಿಚ್ಛೇದನ ಪಡೆದುಕೊಂಡರು. ಆದರೆ ಮಗು ಅಪ್ಪ ಬೇಕು ಎಂದು ಹಠ ಹಿಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಉತ್ತರ ಭಾರತದಲ್ಲಿ ಎಲ್ಲೋ ನಡೆದ ಘಟನೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಗಾದೆ ನಿಜ ಮಾಡಿಸಿದಂತಿದೇ ಈ ವಿಡಿಯೋ.ಕೋರ್ಟ್ ಹಾಲ್ ನಲ್ಲಿ ಸಾಕಷ್ಟು ಜನರ ಸಮ್ಮುಖದಲ್ಲಿ ನಡೆದ ಘಟನೆ ಇದು. ಗಂಡ ಹೆಂಡತಿ ತಮ್ಮ ಮನಸ್ತಾಪದ ಕಾರಣಕ್ಕೆ ವಿಚ್ಛೇದನ ಪಡೆದಿದ್ದರು. ಕೋರ್ಟ್ ಕೂಡ ಇವರ ಕಾರಣಗಳನ್ನು ಮಾನ್ಯ ಮಾಡಿ ವಿಚ್ಛೇದನ ನೀಡಿತ್ತು.
ಮೈಸೂರು: ತಮಗೇ ಮುಜುಗರ ತಂದಿಡುವ ಮಗನನ್ನು ತೆಪ್ಪಗೆ ಮನೆಯಲ್ಲಿರು ಎಂದು ಸಿದ್ಧರಾಮಯ್ಯನವರಿಗೆ ಹೇಳಕ್ಕಾಗಲ್ವಾ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಪುತ್ರ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರು ಬಾಯಿ ಬಿಟ್ಟರೆ ಇನ್ನೊಬ್ಬರಿಗೆ ಏಕವಚನದಲ್ಲಿ ಮಾತನಾಡಿಸುತ್ತಾರೆ, ಆವಾಜ್ ಹಾಕುತ್ತಾರೆ. ಅವರಿಗೆ ಎಲ್ಲಾ ಕಡೆ ಮೂಗು ತೂರಿಸಿಕೊಂಡು ಒಂದು ರೀತಿಯಲ್ಲಿ ತಮಗೇ ಮುಜುಗರ ಉಂಟು ಮಾಡುತ್ತಿರುವ ಮಗನನ್ನು ನೀನೇನೂ ಮಾಡಬೇಡಪ್ಪ, ತೆಪ್ಪಗೆ ಮನೆಯಲ್ಲಿರು ಎಂದು ಹೇಳಲು ಆಗಲ್ವಾ?
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಏರಿಕೆಯಾಗಿದ್ದರೆ ಮತ್ತುಇತರೆ ಚಿನ್ನದ ದರ ಯಥಾಸ್ಥಿತಿಯಲ್ಲಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ದಾಖಲೆಯ ಏರಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಇಳಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಇಂದು ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,59,600.00 ರೂ.ಗಳಿತ್ತು. ಇಂದೂ 1,59,625.00 ರೂ.ಗಳಷ್ಟಿದೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ಆದರೆ ನಿನ್ನೆ ಅಡಿಕೆ ದರದಲ್ಲಿ ಏರಿಕೆಯಾಗಿರುವುದು ಖಷಿಯ ಸಂಗತಿ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಏರಿಕೆಯಾಗಬಹುದೇನೋ ಎಂಬ ನಿರೀಕ್ಷೆ ಬೆಳೆಗಾರರಲ್ಲಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಇದರಿಂದ ರೈತರ ಚಿಂತೆಗೆ ಕಾರಣವಾಗಿತ್ತು. ಇಂದು ಕೊಂಚ ಏರಿಕೆಯಾಗಿತ್ತು. ಆದರೆ ಇಂದು ಮತ್ತೆ ಯಥಾಸ್ಥಿತಿಯಲ್ಲಿದೆ. ಇಂದು ಹೊಸ ಅಡಿಕೆ ಬೆಲೆ 470 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 545 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ 545 ರೂ.ಗಳಷ್ಟಾಗಿದೆ.
ಬೆಂಗಳೂರು: ದೆಹಲಿಗೆ ಹೋಗುವ ಮುನ್ನ ನಾಯಕತ್ವ ವಿವಾದದ ಬಗ್ಗೆ ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆಯೊಂದನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ಇಂದು ಪಂಚ ರಾಜ್ಯಗಳ ಚುನಾವಣೆ ತಯಾರಿ ಬಗ್ಗೆ ಪ್ರಿಯಾಂಕ ಗಾಂಧಿ ವಾದ್ರಾ ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಬೆಳಿಗ್ಗೆ ದೆಹಲಿಗೆ ಹೋಗುವ ಮುನ್ನ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ‘ದೆಹಲಿಗೆ ಹೋದ ಮೇಲೆ ಎಲ್ಲಾ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬರೋದೇ. ಚುನಾವಣೆ ತಯಾರಿ ಬಗ್ಗೆ ಮಾತನಾಡಲು ಎಐಸಿಸಿಯಿಂದ ಕರೆದಿದ್ದಾರೆ.
ಕೊಲೊಂಬೊ: ಭಾರತದಲ್ಲಿ ಆಡಲ್ಲ ಎಂದು ಡ್ರಾಮಾ ಮಾಡಿದ್ದ ಪಾಕಿಸ್ತಾನಕ್ಕೆ ಕೊಲೊಂಬೋದಲ್ಲಿ ಕೇಳೋರೇ ಇಲ್ಲ ಎನ್ನುವ ಸ್ಥಿತಿಯಾಗಿದೆ. ಸಿಮೆಂಟ್ ಫ್ಯಾಕ್ಟರಿ ಥರಾ ಟ್ರೀಟ್ಮೆಂಟ್ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ಆಡುವ ಎಲ್ಲಾ ಪಂದ್ಯಗಳೂ ಶ್ರೀಲಂಕಾದ ಕೊಲೊಂಬೋದಲ್ಲಿ ನಡೆಯುತ್ತಿದೆ. ಇತರೆ ಎಲ್ಲಾ ತಂಡಗಳೂ ಭಾರತದಲ್ಲಿ ಪಂದ್ಯವಾಡುತ್ತಿದೆ. ಭಾರತಕ್ಕೆ ಬಂದಿಳಿದ ಎಲ್ಲಾ ತಂಡಗಳಿಗೆ ಅದ್ಧೂರಿಯಾಗಿ, ಸಾಂಪ್ರದಾಯಿಕವಾಗಿ ಸ್ವಾಗತ ಸಿಕ್ಕಿದೆ. ಆದರೆ ಭಾರತದಲ್ಲಿ ಆಡಲ್ಲ ಎಂದು ಡ್ರಾಮಾ ಮಾಡಿ ಶ್ರೀಲಂಕಾಗೆ ಬಂದಿರುವ ಪಾಕಿಸ್ತಾನ ಕ್ರಿಕೆಟಿಗರಿಗೆ ಸ್ವಾಗತ ಬಿಡಿ, ಕೇಳೋರೇ ಇಲ್ಲ.
ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ನಾಯಕತ್ವ ಬದಲಾವಣೆ ವಿಚಾರವಾಗಿ ಫೈಟ್ ನಡೆಯುತ್ತಿದ್ದರೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಪ್ರಿಯಾಂಕ ಗಾಂಧಿ ವಾದ್ರಾ ಬುಲಾವ್ ನೀಡಿದ್ದು ಇಂದು ದಿಡೀರ್ ದೆಹಲಿಗೆ ತೆರಳಲಿದ್ದಾರೆ. ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿರುವುದಕ್ಕೂ ರಾಜ್ಯ ರಾಜಕೀಯದ ಬೆಳವಣಿಗೆಗೂ ನೇರ ಸಂಬಂಧವಿಲ್ಲ. ಆದರೆ ಇಂತಹ ಸಂದರ್ಭದಲ್ಲೇ ದೆಹಲಿಗೆ ತೆರಳುತ್ತಿರುವುದರಿಂದ ನಾಯಕತ್ವದ ವಿಚಾರವೂ ಚರ್ಚೆಯಾಗಬಹುದೇ ಎಂಬ ಕುತೂಹಲ ಮೂಡಿದೆ. ಪಂಚ ರಾಜ್ಯ ಚುನಾವಣೆಗಳ ಪೈಕಿ ಅಸ್ಸಾಂ ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕ್ ವಾದ್ರಾರದ್ದು. ಈ ಕಮಿಟಿಯಲ್ಲಿ ಡಿಕೆ ಶಿವಕುಮಾರ್ ಕೂಡಾ ಇದ್ದಾರೆ.
ಲಾಹೋರ್: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಜೊತೆ ಆಡಲು ಹಲವು ಷರತ್ತು ವಿಧಿಸಿದ್ದ ಪಾಕಿಸ್ತಾನಕ್ಕೆ ಎಲ್ಲಾ ಕೇಳಲು ಆಗಲ್ಲ ಎಂದು ಐಸಿಸಿ ಖಡಕ್ ಸಂದೇಶ ರವಾನಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಆಡಲು ಒಪ್ಪಿಗೆ ಸೂಚಿಸಿದೆ. ಭಾರತದ ಜೊತೆ ಆಡಬೇಕೆಂದರೆ ಟಿ20 ವಿಶ್ವಕಪ್ ಗೆ ಸಂಬಂಧವೇ ಪಡದ ವಿಚಾರಗಳ ಬಗ್ಗೆ ಐಸಿಸಿ ಎದುರು ಷರತ್ತು ಹಾಕಿತ್ತು. ಇದಕ್ಕೆ ಐಸಿಸಿ ಖಡಕ್ ಸಂದೇಶ ರವಾನಿಸಿದೆ. ಅಷ್ಟಕ್ಕೂ ಪಾಕಿಸ್ತಾನ ವಿಧಿಸಿದ ಷರತ್ತುಗಳೇನು ಇಲ್ಲಿದೆ ವಿವರ. ಭಾರತ ಮತ್ತು ಪಾಕಿಸ್ತಾನ ನಡುವಿನ ಸರಣಿಗೆ ಐಸಿಸಿ ಅನುವು ಮಾಡಿಕೊಡಬೇಕು. ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನೊಳಗೊಂಡ ತ್ರಿಕೋನ ಕ್ರಿಕೆಟ್ ಸರಣಿ ನಡೆಸಬೇಕು.
ಬೆಂಗಳೂರು: ಬೆಂಗಳೂರು ಮೆಟ್ರೋ ದರ ಏರಿಕೆ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ನಾನಲ್ಲ.. ನಾನಲ್ಲ ಎನ್ನುತ್ತಿದ್ದರೆ ಜನ ಮಾತ್ರ ಫುಲ್ ಕನ್ ಫ್ಯೂಸ್ ಆಗಿದ್ದಾರೆ. ಮೆಟ್ರೋ ದರ ಏರಿಕೆ ಮಾಡಿದಾಗ ಬಿಜೆಪಿ ರಾಜ್ಯದ ಮೇಲೆ ಬೆರಳು ತೋರಿಸಿತ್ತು. ಇತ್ತ ಕಾಂಗ್ರೆಸ್ ನಾಯಕರು ಕೇಂದ್ರವೇ ಕಾರಣ ಎಂದಿದ್ದರು. ಕೊನೆಗೆ ಮೆಟ್ರೋ ದರ ಏರಿಕೆಗೆ ತಡೆ ನೀಡಿದಾಗ ಫುಲ್ ಉಲ್ಟಾ. ಬಿಜೆಪಿ ಕೇಂದ್ರದ ಸಾಧನೆ ಎನ್ನುತ್ತಿದ್ದರೆ ಡಿಸಿಎಂ ಡಿಕೆ ಶಿವಕುಮಾರ್ ನಮ್ಮದೇ ಸರ್ಕಾರದ ನಿರ್ಧಾರ ಎನ್ನುತ್ತಿದ್ದಾರೆ.ಇದರಿಂದ ಜನ ಮಾತ್ರ ಫುಲ್ ಕನ್ ಫ್ಯೂಸ್ ಆಗಿದ್ದಾರೆ. ಇದೇನು ಆಟ? ಜನರನ್ನು ಮಂಗ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಈಗ ಚಳಿ ಮತ್ತು ಬಿಸಿಲು ಎರಡೂ ಕಂಡುಬರುತ್ತಿದೆ. ಇಂದು ರಾಜ್ಯದಲ್ಲಿ ಮಳೆ ಸಾಧ್ಯತೆಯಿದೆಯಾ, ಹವಾಮಾನ ವರದಿ ಹೇಗಿರಲಿದೆ ಇಲ್ಲಿದೆ ವರದಿ. ಇಂದಿನ ಹವಾಮಾನ ವರದಿಗಳ ಪ್ರಕಾರ ಮಳೆ ಸಾಧ್ಯತೆಯಿಲ್ಲ. ಆದರೆ ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣವಿರುವುದು ಎಂದು ವರದಿಗಳು ಹೇಳುತ್ತಿವೆ. ಉಳಿದಂತೆ ಬಹುತೇಕ ಕಡೆ ಹಗಲು ಉರಿ ಬಿಸಿಲು ಕಂಡುಬರಲಿದೆ. ಆದರೆ ಈಗಲೂ ಚಳಿಯ ಪ್ರಭಾವ ಕಡಿಮೆಯಾಗಿಲ್ಲ. ರಾಜ್ಯ ರಾಜಧಾನಿ ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಹಾಸನ ಸೇರಿದಂತೆ ಬಹುತೇಕ ಕಡೆ ರಾತ್ರಿ ಮತ್ತು ಬೆಳಿಗ್ಗೆ ಭಾರೀ ಚಳಿ ಮತ್ತು ಮಂಜು ಕಂಡುಬರುತ್ತಿದೆ.