ಹರಾರೆ: ಅಂಡರ್ 19 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡವನ್ನು 100 ರನ್ ಗಳಿಂದ ಸೋಲಿಸಿ ಭಾರತ ತಂಡ ಆರನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಬೀಗಿದೆ. ಇಂದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 411 ರನ್ ಗಳಿಸಿತ್ತು. ಇದು ವಿಶ್ವಕಪ್ ಫೈನಲ್ ನಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿತ್ತು. ವೈಭವ್ ಸೂರ್ಯವಂಶಿ 175 ರನ್ ಗಳ ಭರ್ಜರಿ ಇನಿಂಗ್ಸ್ ಆಡಿದ್ದರು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 40.2 ಓವರ್ ಗಳಲ್ಲಿ 311 ರನ್ ಗಳಿಸಿ ಆಲೌಟ್ ಆಗಿದೆ. ಇಂಗ್ಲೆಂಡ್ ಪರ ಫಾಲ್ಕನೂರ್ 67 ಎಸೆತಗಳಲ್ಲಿ 115 ರನ್ ಗಳಿಸಿ ದಿಟ್ಟ ಹೋರಾಟ ನೀಡಿದರು.
ಹರಾರೆ: ಅಂಡರ್ 19 ವಿಶ್ವಕಪ್ ಫೈನಲ್ ನಲ್ಲಿ ಅಂಡರ್ 19 ಭಾರತ ತಂಡ ಇತಿಹಾಸ ಸೃಷ್ಟಿಸಿದೆ. ಎಲ್ಲದಕ್ಕೂ ವೈಭವ್ ಸೂರ್ಯವಂಶಿ ಸ್ಪೋಟಕ ಶತಕ ಕಾರಣ ಎನ್ನಬಹುದು. ಇಂಗ್ಲೆಂಡ್ ವಿರುದ್ಧ ಇದೀಗ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 411 ರನ್ ಗಳಿಸಿದೆ. ಇದು ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತವಾಗಿದೆ. ಒಂದು ವೇಳೆ ಇಂಗ್ಲೆಂಡ್ ಈ ಮೊತ್ತ ಬೆನ್ನತ್ತಲು ಸಫಲವಾದರೆ ವಿಶ್ವದಾಖಲೆ ಚೇಸಿಂಗ್ ಆಗಲಿದೆ. ಇತ್ತೀಚೆಗಿನ ವರದಿ ಬಂದಾಗ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೇ 14 ರನ್ ಗಳಿಸಿತ್ತು.
ಮುಂಬೈ: ಟಿ 20 ವಿಶ್ವಕಪ್ ಆರಂಭಕ್ಕೆ ಒಂದು ದಿನ ಬಾಕಿಯಿರುವಾಗ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹರ್ಷಿತ್ ರಾಣಾ ಗಾಯದಿಂದಾಗಿ ಕೂಟದಿಂದಲೇ ಹೊರಬಿದ್ದಿದ್ದಾರೆ. ಆದರೆ ಫ್ಯಾನ್ಸ್ ಮಾತ್ರ ಗಂಭೀರ್ ಕುರಿತು ಟ್ರೋಲ್ ಮಾಡುತ್ತಿದ್ದಾರೆ. ಹರ್ಷಿತ್ ರಾಣಾ ಇಂದು ಅಭ್ಯಾಸದ ವೇಳೆ ಗಾಯಗೊಂಡಿದ್ದು ವಿಶ್ವಕಪ್ ನಿಂದಲೇ ಹೊರನಡೆಯುವ ಪರಿಸ್ಥಿತಿ ಎದುರಾಗಿದೆ. ಟಿ20 ಮಾದರಿಯಲ್ಲಿ ಬೌಲರ್ ಆಗಿ ಮಾತ್ರವಲ್ಲ, ಬ್ಯಾಟಿಗರಾಗಿಯೂ ಕೆಳ ಕ್ರಮಾಂಕದಲ್ಲಿ ಹರ್ಷಿತ್ ಉಪಯುಕ್ತ ಆಟಗಾರ. ಆದರೆ ಅವರು ಗೌತಮ್ ಗಂಭೀರ್ ನೆಚ್ಚಿನ ಆಟಗಾರ ಎಂಬ ಕಾರಣಕ್ಕೆ ಅವರನ್ನು ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ.
ಬೆಂಗಳೂರು: ನಾನು ಹೇಳಿದ್ದ ಎರಡು ಡೇಟ್ ಮಿಸ್ ಆಗಿದೆ. ಆದರೆ ಈ ಬಾರಿ ಮಿಸ್ ಆಗಲ್ಲ ಎಂದು ಡಿಕೆ ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ ಪುತ್ರ ಯತೀಂದ್ರ ನಮ್ಮ ತಂದೆಯವರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅವರೇ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ. ಹೈಕಮಾಂಡ್ ಯಾರ ಒತ್ತಡಕ್ಕೂ ಮಣಿದಿಲ್ಲ ಎಂದಿದ್ದಾರೆ. ಯತೀಂದ್ರ ಹೇಳಿಕೆ ಈಗ ಡಿಕೆಶಿ ಬಣದ ಶಾಸಕರನ್ನು ಕೆರಳಿಸಿದೆ. ಯತೀಂದ್ರ ಮಾತಿಗೆ ಕೌಂಟರ ಕೊಟ್ಟಿರುವ ಇಕ್ಬಾಲ್ ಹುಸೇನ್, ‘ನಾನು ಈ ಹಿಂದೆ ಹೇಳಿದ್ದ ಎರಡು ಡೇಟ್ ಮಿಸ್ ಆಗಿದೆ.
ಮಂಗಳೂರು: ಯತೀಂದ್ರನೇ ನಮ್ಮ ಹೈಕಮಾಂಡ್ ಅವರು ಏನು ಮಾತು ಹೇಳ್ತಾರೆ. ಅದನ್ನು ಗೌರವದಿಂದ ಸ್ವೀಕರಿಸೋಣ ಎಂದು ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ ಪುತ್ರ ಯತೀಂದ್ರ ನಮ್ಮ ತಂದೆಯವರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅವರೇ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ. ಹೈಕಮಾಂಡ್ ಯಾರ ಒತ್ತಡಕ್ಕೂ ಮಣಿದಿಲ್ಲ ಎಂದಿದ್ದಾರೆ. ಅವರ ಹೇಳಿಕೆಗೆ ಡಿಕೆಶಿ ಕೌಂಟರ್ ಕೊಟ್ಟಿದ್ದಾರೆ. ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ‘ಯತೀಂದ್ರ ಅವರೇ ನಮ್ಮ ಹೈಕಮಾಂಡ್. ಅವರು ಏನು ಹೇಳ್ತಾರೆ ಅದನ್ನು ನಾವು ಗೌರವದಿಂದ ಕೇಳೋಣ.
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ವಿಚಾರ ಸದ್ದು ಮಾಡುತ್ತಿದೆ. ಇದೀಗ ಮತ್ತೊಮ್ಮೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಈ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ರಾಜ್ಯದ ಕೆಲವು ಕಾಂಗ್ರೆಸ್ ಶಾಸಕರು ನಾಯಕತ್ವ ಬದಲಾವಣೆ ವಿಚಾರವಾಗಿ ಮೌನವಾಗಿರುವ ಹೈಕಮಾಂಡ್ ಮೇಲೆ ಮುನಿಸಿಕೊಂಡಿದ್ದಾರೆ. ಸದ್ಯದಲ್ಲೇ ದೆಹಲಿಗೆ ಹೋಗಲು ಸಿದ್ಧತೆ ನಡೆಸಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಇದರ ಬಗ್ಗೆ ಈಗ ಯತೀಂದ್ರ ಸಿದ್ದರಾಮಯ್ಯ, ‘ಯಾರೂ ಬದಲಾವಣೆ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಬರೀ ಮಾಧ್ಯಮಗಳು ಮಾತ್ರ ಚರ್ಚೆ ಮಾಡುತ್ತಿವೆ. ರಾಜ್ಯದಲ್ಲಿ ಬೇರೆ ವಿಚಾರಗಳು ನಡೆಯುತ್ತಿದೆ.
ಪಾಟ್ನಾ: ಬಿಹಾರ ವಿಧಾನಸಭೆ ಕಲಾಪದಲ್ಲಿ ಆರ್ ಜೆಡಿ ಶಾಸಕ ತೇಜಸ್ವಿ ಯಾದವ್ ತೂರಾಡಿಕೊಂಡು ಭಾಷಣ ಮಾಡಲು ಎದ್ದು ನಿಂತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅವರು ಮದ್ಯಪಾನ ಮಾಡಿ ಬಂದಿದ್ದಾರೆಂದು ಬಿಜೆಪಿ ಆರೋಪಿಸಿದೆ. ಸದನಕ್ಕೆ ಅದರದ್ದೇ ಆದ ಗೌರವಗಳಿರುತ್ತವೆ. ಅದೊಂದು ಪವಿತ್ರ ಸ್ಥಳ ಎಂದೇ ನಂಬಲಾಗುತ್ತದೆ. ಆದರೆ ತೇಜಸ್ವಿ ಯಾದವ್ ತೂರಾಡಿಕೊಂಡು ಎದ್ದು ನಿಲ್ಲಲೂ ಕಷ್ಟಪಡುವುದನ್ನು ನೋಡಿದರೆ ಅವರು ಮದ್ಯ ಸೇವಿಸಿದ್ದರೇನೋ ಎಂದು ಅನುಮಾನ ಮೂಡಿಸುವಂತಿದೆ. ಎದ್ದು ನಿಲ್ಲಲೂ ಕಷ್ಟಪಡುತ್ತಿದ್ದಾಗ ಪಕ್ಕದಲ್ಲಿದ್ದ ಆರ್ ಜೆಡಿ ಶಾಸಕ ಅವರ ಸಹಾಯಕ್ಕೆ ಬರುತ್ತಾರೆ.
ಬೆಂಗಳೂರು: ಕೇಂದ್ರ ಬಜೆಟ್ ಗೆ ಮುನ್ನ ಚಿನ್ನದ ದರ ಭರ್ಜರಿ ಇಳಿಕೆ ಕಂಡಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ದಾಖಲೆಯ ಏರಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಇಳಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಇಂದು ಮತ್ತೆ ಇಳಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,63,535.00 ರೂ.ಗಳಿತ್ತು. ಇಂದೂ 1,57,025.00 ರೂ.ಗಳಷ್ಟಿದೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ಆದರೆ ಇದೀಗ ಅಡಿಕೆ ದರ ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಏರಿಕೆ ಆರಂಭವಾಗಿತ್ತು. ಸತತವಾಗಿ ನಾಲ್ಕು ದಿನಗಳ ಕಾಲ ಏರಿಕೆಯಾಗಿದ್ದು ರೈತರ ಸಂತಸಕ್ಕೆ ಕಾರಣವಾಗಿತ್ತು. ಆದರೆ ಇಂದು ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ. ಇಂದು ಹೊಸ ಅಡಿಕೆ ಬೆಲೆ 460 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದು 535 ರೂ. ಗಳಾಗಿತ್ತು. ಇಂದೂ ಅಷ್ಟೇ ಇದೆ. ಡಬಲ್ ಚೋಲ್ ಬೆಲೆಯೂ 535 ರೂ.ಗಳಷ್ಟಾಗಿದೆ.
ನವದೆಹಲಿ: 2004 ರಲ್ಲಿ ಅಂದಿನ ಪ್ರಧಾನಿ ಡಾ ಮನಮೋಹನ್ ಸಿಂಗ್ ಅನುಭವಿಸಿದ್ದ ಅದೇ ಪರಿಸ್ಥಿತಿಯನ್ನು ಇಂದು ಪ್ರಧಾನಿ ಮೋದಿ ಎದುರಿಸುವಂತಾಯಿತು.ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವಾಗ ಪ್ರಧಾನಿಗಳು ಭಾಷಣ ಮಾಡುವುದು ಪದ್ಧತಿ. ಆದರೆ ಈ ಬಾರಿ ಲೋಕಸಭೆಯಲ್ಲಿ ಪ್ರಧಾನಿ ಮೋದಿ ವಿಪಕ್ಷಗಳ ಗದ್ದಲದಿಂದಲಾಗಿ ಮಾತನಾಡಲು ಸಾಧ್ಯವಾಗಲೇ ಇಲ್ಲ. ಅವರ ಭಾಷಣ ಕೇವಲ ರಾಜ್ಯ ಸಭೆಗೆ ಸೀಮಿತವಾಯಿತು. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ಕೊಡದೇ ಮೋದಿಗೂ ಮಾತನಾಡಲು ಅವಕಾಶ ಕೊಡಲ್ಲ ಎಂದು ವಿಪಕ್ಷಗಳು ಗದ್ದಲವೇರ್ಪಡಿಸಿದ್ದರು.
ಬೆಂಗಳೂರು: ರಾಜ್ಯದಲ್ಲಿ ಒಮ್ಮೆ ತಣ್ಣಗಾಗಿದ್ದ ಕುರ್ಚಿ ಕದನ ಮತ್ತೆ ಭುಗಿಲೇಳುವ ಲಕ್ಷಣ ಕಂಡುಬರುತ್ತಿದೆ. ಕಾಂಗ್ರೆಸ್ ಶಾಸಕರು ಈ ಬಗ್ಗೆ ಮಹತ್ವದ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ರಾಜ್ಯದಲ್ಲಿ ಕುಸ್ತಿ ಕದನ ತಾರಕಕ್ಕೇರಿತ್ತು. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣ ಮೀಟಿಂಗ್ ಮೇಲೆ ಮೀಟಿಂಗ್ ನಡೆಸಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ಯತ್ನಿಸಿದ್ದರು. ಆದರೆ ಹೈಕಮಾಂಡ್ ಕೆಲವು ದಿನ ಕಾಯಲು ಸೂಚನೆ ನೀಡಿತ್ತು. ಹೀಗಾಗಿ ಕೆಲವು ದಿನಗಳಿಂದ ಈ ವಿಚಾರ ತಣ್ಣಗಾಗಿತ್ತು.
ವಡೋದರಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡಬ್ಲ್ಯುಪಿಎಲ್ 2026 ರ ಫೈನಲ್ ಗೆಲ್ಲುತ್ತಿದ್ದಂತೇ ವಿವಾದವೂ ಬೆನ್ನು ಹತ್ತಿದೆ. ಕೆಲವರು ಆರ್ ಸಿಬಿ ಗೆದ್ದಿದ್ದು ಮೋಸದಿಂದ ಎಂದು ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಿದ್ದಾರೆ. ಅಸಲಿ ಸತ್ಯವೇನು ಇಲ್ಲಿದೆ ವಿಡಿಯೋ. 19.4 ನೇ ಓವರ್ ನಲ್ಲಿ ರಾಧಾ ಯಾದವ್ ಬೌಂಡರಿ ಗಳಿಸಿದರು. ಇದರೊಂದಿಗೆ ಆರ್ ಸಿಬಿ ಗೆಲುವಿಗೆ ಬೇಕಾಗಿದ್ದ 204 ರನ್ ಗಳಿಸಿತು. ಆದರೆ ಇನ್ನೊಂದೆಡೆ ಸ್ಟಂಪ್ ಬೇಲ್ಸ್ ಎಗರಿದ್ದು ಕಂಡುಬಂತು. ಹೀಗಾಗಿ ರಾಧಾ ಯಾದವ್ ಹಿಟ್ ವಿಕೆಟ್ ಆಗಿದ್ದಾರೆಯೇ ಎನ್ನುವ ಅನುಮಾನ ಎಲ್ಲರದ್ದಾಗಿತ್ತು.
ನವದೆಹಲಿ: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮೇಲೆ ದೈಹಿಕ ದಾಳಿಗೆ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ದಾಳಿಗೆ ಪ್ಲ್ಯಾನ್ ಮಾಡಿದ್ದರು ಎಂದು ಸ್ವತಃ ಸ್ಪೀಕರ್ ಓಂ ಬಿರ್ಲಾ ಹೇಳಿಕೆ ನೀಡಿದ್ದರು. ಇದು ನಿಜಕ್ಕೂ ಶಾಕಿಂಗ್ ಸುದ್ದಿ ಎಂದಿರುವ ಪಬ್ಲಿಕ್ ನಾವು ಎಲ್ಲಿಗೆ ತಲುಪಿದ್ದೇವೆ ಎಂದಿದ್ದಾರೆ. ಸ್ಪೀಕರ್ ಸ್ಥಾನದಲ್ಲಿರುವ ವ್ಯಕ್ತಿ ನಿಷ್ಪಕ್ಷಪಾತಿಯಾಗಿರುತ್ತಾರೆ. ಹೀಗಾಗಿ ಅವರ ಹೇಳಿಕೆಗಳಿಗೆ ಅಷ್ಟೇ ಬೆಲೆಯಿದೆ. ಈ ಕಾರಣಕ್ಕಾಗಿಯೇ ನಿನ್ನೆ ಸ್ವತಃ ಸ್ಪೀಕರ್ ಓಂ ಬಿರ್ಲಾ ವಿಪಕ್ಷಗಳ ದಾಳಿ ಯೋಜನೆ ಬಗ್ಗೆ ನೀಡಿರುವ ಹೇಳಿಕೆ ನಿಜಕ್ಕೂ ಶಾಕಿಂಗ್ ಆಗಿದೆ.
ವಡೋದರಾ: ಡಬ್ಲ್ಯುಪಿಎಲ್ 2026 ರ ಫೈನಲ್ ಗೆಲುವಿನಲ್ಲಿ ಆರ್ ಸಿಬಿ ನಾಯಕಿ ಸ್ಮೃತಿ ಮಂಧಾನ ಭರ್ಜರಿ ಬ್ಯಾಟಿಂಗ್ ಪ್ರಮುಖ ಪಾತ್ರ ವಹಿಸಿತ್ತು. ಆದರೆ ಫೈನಲ್ ಪಂದ್ಯಕ್ಕೆ ಮುನ್ನ ಸ್ಮೃತಿ ಆರೋಗ್ಯ ಸ್ಥಿತಿ ಏನಾಗಿತ್ತು ಎಂಬ ಶಾಕಿಂಗ್ ವಿಚಾರ ಈಗ ಬಯಲಾಗಿದೆ. ಡಬ್ಲ್ಯು ಪಿಎಲ್ 2026 ಫೈನಲ್ ಪಂದ್ಯದಲ್ಲಿ ಆರ್ ಸಿಬಿ ಪುರುಷರ ತಂಡವೂ ಇದುವರೆಗೆ ಮಾಡದ ಸಾಧನೆ ಮಾಡಿದೆ. ಫೈನಲ್ ನಲ್ಲಿ ಗರಿಷ್ಠ ರನ್ ಚೇಸ್ ಮಾಡಿದ ದಾಖಲೆ ಮಾಡಿದೆ. ಆರ್ ಸಿಬಿಗೆ 204 ರನ್ ಗಳ ಬೃಹತ್ ಮೊತ್ತ ಚೇಸ್ ಮಾಡಲು ಸಾಧ್ಯವಾಗಿದ್ದು ಸ್ಮೃತಿ ಮಂಧಾನ ಮತ್ತು ಜಾರ್ಜಿಯಾ ವಾಲ್ ಭರ್ಜರಿ ಬ್ಯಾಟಿಂಗ್ ಕಾರಣ.
ವಡೋದರ: ಡಬ್ಲ್ಯುಪಿಎಲ್ 2026 ರ ಫೈನಲ್ ಗೆದ್ದು ಆರ್ ಸಿಬಿ ಎರಡನೇ ಬಾರಿಗೆ ಚಾಂಪಿಯನ್ ಆದ ಬಳಿಕ ನಾಯಕಿ ಸ್ಮೃತಿ ಮಂಧಾನ ಅಭಿಮಾನಿಗಳ ಬಗ್ಗೆ ಚಿನ್ನದಂಥಾ ಮಾತನಾಡಿದ್ದಾರೆ. ಆರ್ ಸಿಬಿಗೆ ಇರುವಷ್ಟು ಫ್ಯಾನ್ಸ್ ಬೇರೆ ಯಾವುದೇ ಫ್ರಾಂಚೈಸಿಗಿಲ್ಲ. ಸೋಲಲಿ, ಗೆಲ್ಲಲಿ ತಂಡದ ಜೊತೆಗೇ ಇರುವ ಅಪ್ಪಟ ಅಭಿಮಾನಿಗಳು. ಹೀಗಾಗಿ ಆರ್ ಸಿಬಿ ಕ್ರಿಕೆಟಿಗರೂ ಪ್ರತೀ ಬಾರಿಯೂ ಗೆಲುವು, ಸೋಲಿನ ಬಳಿಕ ಅಭಿಮಾನಿಗಳನ್ನು ನೆನೆಯಲು ಮರೆಯುವುದಿಲ್ಲ. ನಿನ್ನೆ ಗೆಲುವಿನ ಬಳಿಕವೂ ಸ್ಮೃತಿ ಸೇರಿದಂತೆ ಎಲ್ಲಾ ಆಟಗಾರರೂ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ವಡೋದರಾ: ಡಬ್ಲ್ಯುಪಿಎಲ್ 2026 ಫೈನಲ್ ಪಂದ್ಯವನ್ನು ಆರ್ ಸಿಬಿ ಗೆದ್ದ ಬಳಿಕ ನಾಯಕಿ ಸ್ಮೃತಿ ಮಂಧಾನ ತಮ್ಮ ತಂದೆಯ ಜೊತೆ ಮೈದಾನದಲ್ಲಿ ಸಂಭ್ರಮಿಸಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಡೈಮಂಡ್ ಕಳ್ಕೊಂಡೆ ಎಂದು ಮಾಜಿ ಗೆಳೆಯ ಪಾಲಾಶ್ ಮುಚ್ಚಲ್ ಗೆ ಚುಚ್ಚಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿದ ಆರ್ ಸಿಬಿ ಎರಡನೇ ಬಾರಿಗೆ ಚಾಂಪಿಯನ್ ಆಗಿದೆ. ಎಲ್ಲಾ ಸರಿ ಹೋಗಿದ್ದರೆ ಸ್ಮೃತಿ ಇಂದು ಪತಿ ಜೊತೆ ಸೆಲೆಬ್ರೇಷನ್ ಮಾಡಬೇಕಿತ್ತು. ಕಳೆದ ಬಾರಿ 2024 ರಲ್ಲಿ ಆರ್ ಸಿಬಿ ಗೆದ್ದಾಗ ಸ್ಮೃತಿ ಜೊತೆ ಗೆಳೆಯ ಪಾಲಾಶ್ ಮೈದಾನಕ್ಕೆ ಬಂದಿದ್ದರು.
ವಡೋದರಾ: ಡಬ್ಲ್ಯುಪಿಎಲ್ 2026 ರಲ್ಲಿ ಆರ್ ಸಿಬಿ ಗೆಲುವಿನ ಬಳಿಕ ಸ್ಮೃತಿ ಮಂಧಾನ ಬ್ರೇಕ್ ಅಪ್ ವಿಚಾರವನ್ನು ಶ್ರೇಯಾಂಕ ಪಾಟೀಲ್ ಉಲ್ಲೇಖಿಸಿದ್ದಾರೆ. ಡಬ್ಲ್ಯುಪಿಎಲ್ 2026 ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿದ ಆರ್ ಸಿಬಿ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಗೆಲುವಿಗೆ ಸ್ವತಃ ಜವಾಬ್ಧಾರಿ ಹೊತ್ತು ಆಡಿದ ನಾಯಕಿ ಸ್ಮೃತಿ ಮಂಧಾನ 87 ರನ್ ಸಿಡಿಸಿರು. ಗೆಲುವಿನ ಬಳಿಕ ಆರ್ ಸಿಬಿ ಆಟಗಾರ್ತಿಯರ ಸಂಭ್ರಮ ಮುಗಿಲು ಮುಟ್ಟಿತ್ತು. ಈ ವೇಳೆ ಶ್ರೇಯಾಂಕ ಪಾಟೀಲ್ ಪ್ರಸಾಕರಿಗೆ ಸಂದರ್ಶನ ನೀಡಿದ್ದು ಸ್ಮೃತಿಗೆ ಈ ಗೆಲುವಿನ ಅರ್ಪಣೆ ಎಂದಿದ್ದಾರೆ.
ಬೆಂಗಳೂರು: ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಒಣ ಹವೆ ಕಂಡುಬರುತ್ತಿದೆ. ಇಂದಿನಿಂದ ಹವಾಮಾನದಲ್ಲಿ ಸಣ್ಣ ಬದಲಾವಣೆ ಕಂಡುಬರಬಹುದು. ಇಂದಿನ ಹವಾಮಾನ ವರದಿ ಇಲ್ಲಿದೆ ನೋಡಿ. ರಾಜ್ಯದಲ್ಲಿ ಈಗ ಹಗಲು ಬಿಸಿಲು ರಾತ್ರಿ ಚಳಿ ಕಂಡುಬರುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಶುಷ್ಕ ವಾತಾವರಣವಿದೆ. ಈ ವಾತಾವರಣ ಇಂದೂ ಮುಂದುವರಿಯಲಿದೆ. ಆದರೆ ಇಂದಿನಿಂದ ಚಳಿ ಮತ್ತಷ್ಟು ಕಡಿಮೆಯಾಗಲಿದೆ. ಈಗಾಗಲೇ ಹವಾಮಾನ ವರದಿಗಳು ಈ ವರ್ಷ ಫೆಬ್ರವರಿಯಿಂದಲೇ ಬಿಸಿಲಿನ ಝಳ ಹೆಚ್ಚಾಗಲಿದೆ ಎಂದು ಹೇಳಿತ್ತು. ಅದರಂತೆ ಇಂದು ಗರಿಷ್ಠ ತಾಪಮಾನದಲ್ಲಿ ಮತ್ತಷ್ಟು ಏರಿಕೆ ಕಂಡುಬರಲಿದ್ದು, ಬಿಸಿಲಿನ ಝಳ ಹೆಚ್ಚಾಗಲಿದೆ ಎಂದು ಹವಾಮಾನ ವರದಿಗಳು ಸೂಚಿಸುತ್ತಿವೆ.
ಇಂದು ಲಕ್ಷ್ಮೀ ದೇವಿಗೆ ವಿಶೇಷವಾದ ದಿನವಾಗಿದ್ದು, ಜೀವನದಲ್ಲಿ ಆರ್ಥಿಕ, ಐಶ್ವರ್ಯಾ, ನೆಮ್ಮದಿಯ ಕೊರತೆಯಾಗಿದ್ದರೆ ಲಕ್ಷ್ಮೀ ದೇವಿಯ ಕುರಿತಾದ ಮಹೇಂದ್ರ ಕೃತ ಶ್ರೀ ಮನಸಾ ದೇವಿ ಸ್ತೋತ್ರವನ್ನು ತಪ್ಪದೇ ಓದಿ.ದೇವಿ ತ್ವಾಂ ಸ್ತೋತುಮಿಚ್ಛಾಮಿ ಸಾಧ್ವೀನಾಂ ಪ್ರವರಾಂ ಪರಾಮ್ ।ಪರಾತ್ಪರಾಂ ಚ ಪರಮಾಂ ನ ಹಿ ಸ್ತೋತುಂ ಕ್ಷಮೋಽಧುನಾ ॥ 1 ॥ ಸ್ತೋತ್ರಾಣಾಂ ಲಕ್ಷಣಂ ವೇದೇ ಸ್ವಭಾವಾಖ್ಯಾನತಃ ಪರಮ್ ।ನ ಕ್ಷಮಃ ಪ್ರಕೃತಿಂ ವಕ್ತುಂ ಗುಣಾನಾಂ ತವ ಸುವ್ರತೇ ॥ 2 ॥
ವಡೋದರಾ: ಈ ಸಲ ಕಪ್ ನಮ್ದು ಎನ್ನುತ್ತಿದ್ದ ಅಭಿಮಾನಿಗಳಿಗೆ ಆರ್ ಸಿಬಿ ಮಹಿಳೆಯರು ಎರಡನೇ ಸಲ ಕಪ್ ನಮ್ದು ಎಂದಿದ್ದಾರೆ. ಡಬ್ಲ್ಯುಪಿಎಲ್ 2026 ಫೈನಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿದ ಆರ್ ಸಿಬಿ ಎರಡನೇ ಬಾರಿಗೆ ಚಾಂಪಿಯನ್ ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ 204 ರನ್ ಗಳ ಗುರಿ ನೀಡಿತ್ತು. ಈ ಮೊತ್ತ ಬೆನ್ನತ್ತಿದ ಆರ್ ಸಿಬಿ ಆರಂಭದಲ್ಲೇ ಗ್ರೇಸ್ ಹ್ಯಾರಿಸ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ವಡೋದರಾ: ಡಬ್ಲ್ಯುಪಿಎಲ್ 2026 ಫೈನಲ್ ಪಂದ್ಯವನ್ನು ಗೆಲ್ಲಲು ಆರ್ ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್ 204 ರನ್ ಗಳ ಗುರಿ ನೀಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿದೆ. ಇಂದು ಟಾಸ್ ಗೆದ್ದ ಆರ್ ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಡೆಲ್ಲಿ ಕ್ಯಾಪಿಟಲ್ಸ್ ಆರಂಭ ಉತ್ತಮವಾಗಿತ್ತು. ಆದರೆ 13 ಎಸೆತಗಳಲ್ಲಿ 20 ರನ್ ಗಳಿಸಿದ ಶಫಾಲಿ ವರ್ಮ ಔಟಾದರು. ಅವರ ಬೆನ್ನಲ್ಲೇ ಲಿಝಲ್ಲೆ ಲೀ 30 ರನ್ ಗಳಿಸಿ ಔಟಾದರು.
ಬೆಂಗಳೂರು, 5 ಫೆಬ್ರವರಿ, 2026: ಸೆಂಕೋ ಸಮೂಹದ ಸಮಕಾಲೀನ ಐಷಾರಾಮಿ ಜೀವನಶೈಲಿ ಬ್ರ್ಯಾಂಡ್ ಆದ 'ಸೆನೆಸ್', ಬೆಂಗಳೂರಿನ ಜನಪ್ರಿಯ ಫೀನಿಕ್ಸ್ ಮಾಲ್ನಲ್ಲಿ ತನ್ನ ಚೊಚ್ಚಲ ಮಳಿಗೆಯನ್ನು ಆರಂಭಿಸಿದೆ. ಈ ಉದ್ಘಾಟನೆಯೊಂದಿಗೆ, ಸೆನೆಸ್ ತನ್ನ ಅಖಿಲ ಭಾರತ ಉಪಸ್ಥಿತಿಯನ್ನು 10 ಮಳಿಗೆಗಳಿಗೆ ವಿಸ್ತರಿಸಿದೆ. ಕೋಲ್ಕತ್ತಾ, ನವದೆಹಲಿ, ಹೈದರಾಬಾದ್, ಭುವನೇಶ್ವರ, ಚಂಡೀಗಢ ಮತ್ತು ಪಾಟ್ನಾದಲ್ಲಿ ಈಗಾಗಲೇ ತನ್ನ ಹೆಜ್ಜೆಗುರುತು ಮೂಡಿಸಿರುವ ಈ ಬ್ರ್ಯಾಂಡ್, ಈಗ ಬೆಂಗಳೂರನ್ನು ತನ್ನ ಪಟ್ಟಿಗೆ ಸೇರಿಸಿಕೊಂಡಿದೆ.ಸೆಂಕೋ ಸಂಸ್ಥೆಯ ಸೆನೆಸ್ ಬ್ರ್ಯಾಂಡ್, ನೀವು ಬದುಕುವ ರೀತಿಗೆ ತಕ್ಕಂತೆ ವಿನ್ಯಾಸಗೊಳಿಸಲಾದ ಆಧುನಿಕ ಐಷಾರಾಮಿಯನ್ನು ಪ್ರತಿನಿಧಿಸುತ್ತದೆ.
ವಡೋದರಾ: ಮಹಿಳಾ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲೂ ಮಾಜಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟಾಸ್ ಗೆದ್ದಿದೆ. ಆರ್ಸಿಬಿ ನಾಯಕಿ ಸ್ಮೃತಿ ಮಂದಾನ ಅವರು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 2024ರಲ್ಲಿ ಚಾಂಪಿಯನ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಒಂದು ಬಾರಿ ಟ್ರೋಫಿ ಗೆದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸತತ ನಾಲ್ಕನೇ ಬಾರಿ ಫೈನಲ್ ತಲುಪಿದೆ. ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಒಮ್ಮೆ ಕೂಡ ಟ್ರೋಫಿ ಜಯಿಸಿಲ್ಲ. ದೆಹಲಿ ತನ್ನ ಚೋಕರ್ಸ್ ಟ್ಯಾಗ್ ಅನ್ನು ಕಳೆದುಕೊಂಡು ಮೊದಲ ಬಾರಿಗೆ ಟ್ರೋಫಿಯನ್ನು ಎತ್ತುತ್ತದೆಯೇ ಅಥವಾ ಬೆಂಗಳೂರು ತನ್ನ ಪ್ರಾಬಲ್ಯವನ್ನು ಮುಂದುವರಿಸುತ್ತದೆಯೇ ಎಂಬುದು ಕುತೂಹಲ ಕೆರಳಿಸಿದೆ.
ನವದೆಹಲಿ: ಮೆಟ್ರೋ ರೈಲು ಪ್ರಯಾಣಿಕರಿಗೆ ಸರ್ಕಾರ ಶಾಕ್ ನೀಡಿದ್ದು, ಮತ್ತೆ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಅದರ ಬೆನ್ನಲ್ಲೇ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ವಿಶೇಷ ಮನವಿ ಮಾಡಿದ್ದಾರೆ. ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯನ್ನು ವಿರೋಧಿಸಿರುವ ಸಂಸದ ತೇಜಸ್ವಿ ಸೂರ್ಯ, ಮೆಟ್ರೋ ಪ್ರಯಾಣ ದರ ಏರಿಕೆಯನ್ನು ಜಾರಿಗೆ ತಂದಿದ್ದು, ವ್ಯಾಪಕ ಸಾರ್ವಜನಿಕ ವಿರೋಧವನ್ನು ಕಡೆಗಣಿಸಿ ಪ್ರಯಾಣಿಕರ ಮೇಲೆ ಅನಗತ್ಯ ಹೊರೆಯನ್ನು ಹೇರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಿಯೊಬ್ಬ ಬೃಹತ್ ನಾಗರಹಾವನ್ನು ಬಾಯಿಯಲ್ಲಿ ಹಿಡಿದು, ಹುಚ್ಚಾಟ ಮೆರೆದ ವಿಡಿಯೋವೊಂದು ವೈರಲ್ ಆಗಿದೆ. ಇದನ್ನು ನೋಡಿದ ವೀಕ್ಷಕರು ದಿಗ್ಬ್ರಮೆಗೊಂಡಿದ್ದಾರೆ. ಈ ವೀಡಿಯೊದಲ್ಲಿ ಭಾರತದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ನಾಗರ ಹಾವನ್ನು ಕೈಯ ಸಹಾಯವಿಲ್ಲದೆ, ಬಾಯಲ್ಲಿ ಹಿಡಿದು ಆಘಾತಕಾರಿ ಸಾಹಸವನ್ನು ಮಾಡಿದ್ದಾನೆ.ಈ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯ ರೆಮುನಾ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. "ಖಾಗಾ" ಎಂದು ಗುರುತಿಸಲ್ಪಟ್ಟ ವ್ಯಕ್ತಿ, ಅಪಾಯಕಾರಿ ಸಹಾಯವನ್ನು ಮಾಡಿದ್ದಾನೆ. ಏನಾದರೂ ಹಾವು ಆತನಿಗೆ ಕಚ್ಚುತ್ತಿದ್ದರೆ ಅದು ಆತನ ಪ್ರಾಣಕ್ಕೆ ಅಪಾಯವಾಗುತ್ತಿತ್ತು.
ನವದೆಹಲಿ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ತಮ್ಮ ಮತ್ತು ಸರ್ಕಾರದ ಬಗ್ಗೆ ಮಾಡುತ್ತಿರುವ ಟೀಕೆಗಳಿಗೆ ಇಂದು ಪ್ರಧಾನಿ ಮೋದಿ ರಾಜ್ಯ ಸಭೆ ಭಾಷಣದಲ್ಲಿ ತಿರುಗೇಟು ನೀಡಿದ್ದಾರೆ. ಕೆಲವರು ತಮ್ಮನ್ನು ತಾವು ರಾಜರು ಎಂದು ಪರಿಗಣಿಸಿಕೊಳ್ಳುವವರು ಆರ್ಥಿಕ ಅಸಮಾನತೆ ಬಗ್ಗೆ ಮಾತನಾಡುತ್ತಾರೆ ಎಂದಿದ್ದಾರೆ. ರಾಜ್ಯಸಭೆಯಲ್ಲಿ ಇಂದು ಸುದೀರ್ಘ ಭಾಷಣ ಮಾಡಿದ ಪ್ರಧಾನಿ ಮೋದಿ ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದ್ದಲ್ಲದೆ ತಮ್ಮ ಸರ್ಕಾರದ ಸಾಧನೆಯನ್ನು ಒತ್ತಿ ಹೇಳಿದರು. ನುಸುಳುಕೋರರ ಪರವಾಗಿ ಇರುವ ಇವರನ್ನು ಯುವಕರು ಹೇಗೆ ಕ್ಷಮಿಸುತ್ತಾರೆ? ನುಸುಳುಕೋರರನ್ನು ಇವರು ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಮೈಸೂರು: ಕೆಲ ತಿಂಗಳ ಹಿಂದೆ ಮಚ್ಚು ಹಿಡಿದು ಶೋ ಮಾಡಿ, ಜೈಲು ಹಕ್ಕಿಯಾಗಿದ್ದ ಬಿಗ್ಬಾಸ್ ಖ್ಯಾತಿಯ ರಜತ್ ಬುಜ್ಜಿ ಇದೀಗ ಮತ್ತೇ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನ ಪಾರಂಪರಿಕ ಕಟ್ಟಡದ ಎದುರು ಸಿಗರೇಟ್ ಸೇದುತ್ತಾ ಫೋಟೋಶೂಟ್ ಮಾಡಿಸಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಕನ್ನಡಪರ ಸಂಘಟನೆಗಳು ಪೋಲಿಸ್ ಠಾಣೆಯ ಮೆಟ್ಟಿಲೇರಿವೆ.ಇನ್ನೂ ಮೈಸೂರಿನ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಒಂದು ಪಾರಂಪರಿಕ ಕಟ್ಟಡವಾಗಿದ್ದು, ಇಂತಹ ಐತಿಹಾಸಿಕ ಮಹತ್ವವುಳ್ಳ ಕಟ್ಟಡದ ಆವರಣದಲ್ಲಿ ರಜತ್ ಅವರು ಕಾರಿನಿಂದ ಇಳಿಯುತ್ತಾ, ಕೈಯಲ್ಲಿ ಸಿಗರೇಟ್ ಹಿಡಿದು ಹೊಗೆ ಬಿಡುತ್ತಾ 'ವಿಲನ್ ಲುಕ್'ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದ್ದರೂ, ನಿಯಮಗಳನ್ನು ಗಾಳಿಗೆ ತೂರಿ ರಜತ್ ಅವರು
ನವದೆಹಲಿ: ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಬಂದು ಕಾಂಗ್ರೆಸ್ನವರು ಗಲಾಟೆ ಮಾಡಲು ಯೋಜನೆ ಹಾಕಿಕೊಂಡಿರುವ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಅವರು ಸ್ಪೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಲೋಕಸಭೆ ಭಾಷಣವನ್ನು ಏಕೆ ತಪ್ಪಿಸಿಕೊಂಡರು ಎಂಬ ವಿಚಾರಕ್ಕೆ ಸ್ಪೀಕರ್ ಓಂ ಬಿರ್ಲಾ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ಉತ್ತರಿಸಲು ನಿಗದಿಪಡಿಸಿದಾಗ ಈ ಗಲಾಟೆ ನಡೆಸಲು ತೀರ್ಮಾನಿಸಿರುವುದಾಗಿ ಬಿರ್ಲಾ ಹೇಳಿದರು.
ಉಡುಪಿ: ಒಂದು ಲಾಟರಿ ಟಿಕೆಟ್ನಿಂದ ಉಡುಪಿ ಜಿಲ್ಲೆಯ ಕಾಪು ತಾಲೂಕು ಕಟಪಾಡಿ ಮಟ್ಟು ಮೂಲದ ಶಾಂತನು ಶೆಟ್ಟಿಗಾರ್ ಅವರ ಜೀವನವೇ ಬದಲಾಗಿದೆ. 33 ವರ್ಷ ಯುವಕನಿಗೆ 20 ಮಿಲಿಯನ್ ದಿರಾಮ್ ಬಹುಮಾನ ಲಭಿಸಿದೆ. ಅಂದರೆ ಸುಮಾರು ₹49 ಕೋಟಿ ಬಹುಮಾನ ಜೇಬಿಗಿಸಿಕೊಂಡಿದ್ದಾರೆ. ದುಬೈನ ಪ್ರತಿಷ್ಠಿತ ಲಾಟರಿಯಾದ ಬಿಗ್ ಟಿಕೆಟ್ ನ ಲಕ್ಕಿ ಡ್ರಾದಲ್ಲಿ ಉಡುಪಿಯ ಶಾಂತನು ಅವರಿಗೆ ಭರ್ಜರಿ 49 ಕೋಟಿ ರೂ. ಬಹುಮಾನ ಸಿಕ್ಕಿದೆ. ಓಮನ್ನಲ್ಲಿ ಚಿಲ್ಲರೆ ವ್ಯಾಪಾರದ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಉಡುಪಿಯ ಕಾಪು ತಾಲೂಕು ಕಟಪಾಡಿ ಮಟ್ಟು ಮೂಲದ ಶಾಂತನು ಶೆಟ್ಟಿಗಾರ್ ಅವರಿಗೆ ಲಾಟರಿ ಹೊಡೆದಿದೆ.33 ವರ್ಷದ ಶಾಂತನು ಅವರು ಓಮನ್ನಲ್ಲಿ ರಿಟೇಲ್ ವಲಯದ ಉದ್ಯೋಗದಲ್ಲಿದ್ದು, ಇದೇ ಜನವರಿ 20ರಂದು ಬಿಗ್ ಟಿಕೆಟ್ನಲ್ಲಿ 305810 ಸಂಖ್ಯೆ ಲಾಟರಿ ಖರೀದಿಸಿದ್ದರು.
ರಾಜ್ಯ ಸರ್ಕಾರ ಆಗಾಗ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸುತ್ತಲೇ ಇರುತ್ತದೆ. ಇದೀಗ ಹಿರಿಯ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಅವರನ್ನು ದಿಢೀರ್ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದಾರೆ.ಇನ್ನೂ ರವಿ ಡಿ ಚನ್ನಣ್ಣನವರ್ ಅವರು ರಾಜ್ಯದ ಅತ್ಯಂತ ಜನಪ್ರಿಯ ಮತ್ತು ದಕ್ಷ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. ತಮ್ಮ ಕಟ್ಟುನಿಟ್ಟಿನ ಕೆಲಸದ ವೈಖರಿ ಹಾಗೂ ಸಮಾಜಮುಖಿ ಕಾರ್ಯಗಳಿಂದಾಗಿ ಅವರು ಯುವಜನತೆಗೆ ಸ್ಪೂರ್ತಿಯಾಗಿದ್ದಾರೆ.ಗದಗ ಜಿಲ್ಲೆಯ ರೋಣ ತಾಲ್ಲೂಕಿನ ನೀಲಗುಂದ ಗ್ರಾಮದವರಾಗಿದ್ದು, ಇವರು ಅತ್ಯಂತ ಬಡತನದ
ಬೆಂಗಳೂರು: ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅಕ್ರಮ ಅದಿರು ರಪ್ತು ಕೇಸಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿದ್ದಂತ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.ಶಾಸಕ ಸತೀಶ್ ಸೈಲ್ ಅವರಿಗೆ ಹೈಕೋರ್ಟ್ ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ. ಲಿವರ್ ಕಸಿ ಮಾಡಿಸಬೇಕಿರುವುದರಿಂದ ಜಾಮಿನು ನೀಡಲಾಗುತ್ತಿದೆ ಎಂದು ಹೈಕೋರ್ಟ್ ತಿಳಿಸಿದೆ. ಅನಾರೋಗ್ಯದ ಕಾರಣ ನೀಡಿ ಶಾಸಕ ಸತೀಶ್ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ನ್ಯಾಯಪೀಠವು, ಲಿವರ್ ಸಮಸ್ಯೆಯಿರುವ ಕಾರಣ ಚಿಕಿತ್ಸೆಗೆ ಅಗತ್ಯತೆಯ ಕಾರಣ ನೀಡಿ, ವೈದ್ಯಕೀಯ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ.
ಮುಂಬೈ: ಕಳೆದ ವಾರ ಬಾರಾಮತಿಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಅಪಘಾತಕ್ಕೀಡಾದ ದಿನದಂದು ತಾವು ಅವರೊಂದಿಗೆ ಪ್ರಯಾಣಿಸಬೇಕಿತ್ತು, ಆದರೆ ಅವರು ಮುಂಬೈಗೆ ತಡವಾಗಿ ತಲುಪಿದ್ದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಸಚಿವ ಮಹಾದೇವ್ ಜಂಕರ್ ಹೇಳಿದ್ದಾರೆ.ಜನವರಿ 28 ರಂದು ಬೆಳಿಗ್ಗೆ 8.45 ರ ಸುಮಾರಿಗೆ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಟೇಬಲ್ಟಾಪ್ ರನ್ವೇಯ ಅಂಚಿನಿಂದ ಕೇವಲ 200 ಮೀಟರ್ ದೂರದಲ್ಲಿ ಮುಂಬೈನಿಂದ ಬಂದ ಚಾರ್ಟರ್ಡ್ ವಿಮಾನ ಅಪಘಾತಕ್ಕೀಡಾಗಿ ಅಜಿತ್ ಪವಾರ್ ಮತ್ತು ಅದರಲ್ಲಿದ್ದ ಇತರ ನಾಲ್ವರು ಸಾವನ್ನಪ್ಪಿದರು.
ಮುಂಬೈ: ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಗುರುವಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ತಂಡದ ತವರು ಟಿ20 ವಿಶ್ವಕಪ್ ಅಭಿಯಾನಕ್ಕೂ ಮುನ್ನ ಗಣೇಶನ ಆಶೀರ್ವಾದ ಪಡೆದರು. ಅವರೊಂದಿಗೆ ಬ್ಯಾಟಿಂಗ್ ಕೋಚ್ ಸೀತಾಂಶು ಹರ್ಗೋವಿಂದ್ಭಾಯ್ ಕೊಟಕ್ ಕೂಡ ಇದ್ದರು.ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯಾವನ್ನು ಆಡಲಿದೆ. ಇದಕ್ಕೂ ಮೊದಲು, ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಪಂದ್ಯಕ್ಕೂ
ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಗುರುವಾರ ನವದೆಹಲಿಯ 10 ರಾಜಾಜಿ ಮಾರ್ಗದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ನ ಪಶ್ಚಿಮ ಬಂಗಾಳ ನಾಯಕತ್ವದೊಂದಿಗೆ ನಿರ್ಣಾಯಕ ಸಭೆ ನಡೆಸಿದರು. ಈ ವರ್ಷದ ಕೊನೆಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿರುವ ಕಾರಣ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬಿಸಿಯಾಗಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಭಾರತೀಯ ಜನತಾ ಪಕ್ಷದಿಂದ ಪ್ರಮುಖ ಸವಾಲನ್ನು ಎದುರಿಸುತ್ತಿದೆ.ಇದರ ನಡುವೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ವಿರೋಧ ಪಕ್ಷದ ಇಂಡಿಯಾ
ಮುಂಬೈ: ಚಲನಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಅವರ ನಿವಾಸದಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಮುಂಬೈ ಅಪರಾಧ ವಿಭಾಗದ ಸುಲಿಗೆ ವಿರೋಧಿ ಘಟಕವು ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪರಾಧ ವಿಭಾಗದ ಪ್ರಕಾರ, ರೋಹಿತ್ ಶೆಟ್ಟಿ ಅವರ ಮನೆಯಲ್ಲಿ ನಡೆದ ಗುಂಡಿನ ದಾಳಿಗೆ ಬಳಸಲಾದ ಆಯುಧವನ್ನು ಈಗ ಬಂಧಿತ ಆರೋಪಿಯೇ ಪೂರೈಸಿದ್ದಾನೆ. ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ನಿವಾಸದಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ
ಮುಂಬೈ: ಒಪ್ಪಿಗೆಯಿಲ್ಲದೇ ಡ್ರೆಸ್ಸಿಂಗ್ ರೂಂನಲ್ಲಿ ತನ್ನ ವಿಡಿಯೋ ಮಾಡಿದ ಅರ್ಷ್ ದೀಪ್ ಸಿಂಗ್ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗ ತಿಲಕ್ ವರ್ಮಾ ಸಿಟ್ಟಾದ ವಿಡಿಯೋ ವೈರಲ್ ಆಗಿದೆ. ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯವಿತ್ತು. ಈ ಪಂದ್ಯದ ನಂತರ ಅರ್ಷ್ ದೀಪ್ ಸಿಂಗ್ ಡ್ರೆಸ್ಸಿಂಗ್ ರೂಂನಲ್ಲಿ ಫನ್ ಆಗಿ ಮಾತನಾಡುತ್ತಾ ವಿಡಿಯೋ ಮಾಡುತ್ತಿದ್ದರು. ಮೊದಲು ಇಶಾನ್ ಕಿಶನ್ ಜೊತೆ ಮಾತನಾಡಿದ ಅರ್ಷ್ ದೀಪ್ ಬಳಿಕ ಊಟ ಮಾಡುತ್ತಿದ್ದ ತಿಲಕ್ ವರ್ಮಾ ಕಡೆಗೆ ಕ್ಯಾಮರಾ ಹಾಯಿಸಿದರು. ಮೊದಲು ತಿಲಕ್ ವರ್ಮ ವಿಡಿಯೋ ಕಡೆಗೆ ಗಮನ ಕೊಟ್ಟಿರಲಿಲ್ಲ. ಬಳಿಕ ಇಶಾನ್ ಕಿಶನ್ ಅವರನ್ನು ಕರೆದರು.
ಬೆಂಗಳೂರು: ಬಿಗ್ಬಾಸ್ ಸೀಸನ್ 12ನ್ನು ಯಶಸ್ವಿಯಾಗಿ ಮುಗಿಸಿದ ಕಿಚ್ಚ ಸುದೀಪ್ ಬಳಿಕ ತನ್ನ ನಾಯಕತ್ವದಲ್ಲಿ ಸಿಸಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಕಪ್ ಎತ್ತಿಕೊಂಡಿತು. ಇತ್ತೀಚೆಗೆ ಸುದೀಪ್ ಚಿತ್ರರಂಗದಲ್ಲಿ 30 ವರ್ಷವನ್ನು ಪೂರೈಸಿದ್ದಾರೆ. 1997ರಿಂದ ಇಲ್ಲಿಯವರೆಗೆ ಕಿಚ್ಚ ಸುಮಾರು 76 ಚಿತ್ರಗಳಲ್ಲಿ ಸುದೀಪ್ ನಟಿಸಿದ್ದಾರೆ. ಸೋಲು – ಗೆಲುವು ಎರಡರ ಅನುಭವ ಸುದೀಪ್ ಅವರಿಗೆ ಈ 30 ವರ್ಷದಲ್ಲಾಗಿದೆ. ಇನ್ನೂ ಸುದೀಪ್ ಅವರ ಸಿನಿ ಪಯಣಕ್ಕೆ ಸಿನಿಮಾ ರಂಗದವರು ಸೇರಿದಂತೆ ಗಣ್ಯರು ಶುಭಕೋರಿದ್ದರು. ಕಿಚ್ಚ ಸುದೀಪ್ ಅವರಿಗೆ ಸಿಎಂ ಸಿದ್ದರಾಮಯ್ಯ ಕೂಡ ಶುಭ ಹಾರೈಸಿದ್ದರು. ಸುದೀಪ್ ಇದಕ್ಕಾಗಿ ಅವರಿಗೆ
ಬೆಂಗಳೂರು: ನಿನ್ನೆ ವಿಧಾನಸಭೆಯಲ್ಲಿ ಶಾಸಕ ಶರಣು ಸಲಗರ ಅವರ ಪತ್ನಿ ವಿಚಾರವಾಗಿ ವಿವಾದಾತ್ಮಕವಾಗಿ ಮಾತನಾಡಿದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಕೊನೆಗೂ ಈಗ ತಮ್ಮ ಮಾತಿಗೆ ವಿಷಾಧ ವ್ಯಕ್ತಪಡಿಸಿದ್ದಾರೆ. ನಿನ್ನೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ತಮ್ಮನ್ನು ಕೊಬ್ಬರಿ ಕಳ್ಳ ಎಂದಿದ್ದಕ್ಕೆ ಸಿಟ್ಟಿಗೆದ್ದ ಶಿವಲಿಂಗೇಗೌಡರು ವಿಪಕ್ಷ ಸದಸ್ಯರಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಈ ವೇಳೆ ಶಾಸಕ ಶರಣು ಸಲಗರಿಗೆ ನಿಮ್ಮ ಪತ್ನಿಯನ್ನು ಬಿಟ್ಟುಕೊಂಡು ದುಡ್ಡು ಮಾಡ್ತಿದ್ದೀಯಾ ಎಂದು ಹೇಳಿದ್ದರು.
ವಿಪರೀತ ಸೆಖೆಯಾಗುತ್ತಿದೆ ಎಂದರೆ ಹವಾಮಾನದಿಂದಾಗಿ ಎಂದು ನಿರ್ಲ್ಯಕ್ಷ ಮಾಡಬೇಡಿ. ಹವಾಮಾನದ ಹೊರತಾಗಿಯೂ ಬೆವರುವುದಕ್ಕೆ ಹಲವು ಕಾರಣಗಳಿವೆ. ಯಾವೆಲ್ಲಾ ಕಾರಣಗಳಿಗೆ ಮತ್ತು ಸಂದರ್ಭಗಳಲ್ಲಿ ವಿಪರೀತ ಬೆವರುತ್ತೇವೆ ನೋಡಿ. ಭಯವಾದಾಗ: ಮಾನಸಿಕವಾಗಿ ಯಾವುದೋ ಭಯ ಕಾಡುತ್ತಿರುವಾಗ, ಒತ್ತಡದಲ್ಲಿದ್ದಾಗ, ಆತಂಕದ ಖಾಯಿಲೆಯಿದ್ದಾಗ ವಿಪರೀತ ಬೆವರು ಕಂಡುಬರುವುದು ಸಹಜ. ಆಹಾರದ ಕಾರಣಗಳು: ವಿಪರೀತ ಬಿಸಿ, ಖಾರ, ಆಲ್ಕೋಹಾಲ್ ಅಂಶವಿರುವ ಆಹಾರ ಸೇವನೆ ಮಾಡಿದಾಗ ಮೈ ಬೆವರುವುದು ಕಂಡುಬರುತ್ತದೆ. ಹಾರ್ಮೋನ್ ಸಮಸ್ಯೆ: ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಸೂಚನೆಯಿದ್ದಾಗ, ಗರ್ಭಾವಸ್ಥೆಯಲ್ಲಿ, ಥೈರಾಯ್ಡ್ ಸಮಸ್ಯೆಯಿದ್ದಾಗ ಅಸಹಜವಾಗಿ ಬೆವರುವುದು.
ಬೆಂಗಳೂರು: ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಕೆ.ಆರ್. ನಗರ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಶಾಕ್ ನೀಡಿದೆ. ಪ್ರಕರಣ ರದ್ದು ಕೋರಿದ್ದ ಎಚ್.ಡಿ.ರೇವಣ್ಣ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ, ಎಚ್.ಡಿ.ರೇವಣ್ಣ ವಿರುದ್ಧ ದೋಷಾರೋಪ ಹೊರಿಸದಂತೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವು ಮಾಡಿದೆ.ರೇವಣ್ಣ ಪರ ವಕೀಲರು ವಾದಮಂಡನೆಗೆ ಕಾಲಾವಕಾಶ ಕೋರಿದ್ದರು. ಹಿರಿಯ ವಕೀಲರು ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿದ್ದಾರೆಂಬ ಕಾರಣ ನೀಡಿ ಮನವಿ ಮಾಡಿದ್ದರು. ಎಚ್.ಡಿ.ರೇವಣ್ಣ ಪರ ವಕೀಲರ ಮನವಿಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ದೋಷಾರೋಪ ಹೊರಿಸದಂತೆ ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವು ಮಾಡಿದೆ.
ಬೆಂಗಳೂರು: ದಾಖಲೆಯ 17ನೇ ಬಾರಿ ರಾಜ್ಯದ ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಯಾರಿ ಆರಂಭಿಸಿದ್ದಾರೆ. ಮುಂದಿನ ತಿಂಗಳು ಬಕೆಟ್ ಮಂಡಿಸುವ ಸಾಧ್ಯತೆಯಿದೆ.ಹಣಕಾಸು ಇಲಾಖೆಯ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವಭಾವಿ ಸಭೆ ಆರಂಭಿಸಿದ್ದಾರೆ. ವಿಧಾನ ಮಂಡಲ ಅಧಿವೇಶನ ಮುಕ್ತಾಯವಾದ ಬೆನ್ನಲ್ಲೇ ಈ ಕಾರ್ಯಕ್ಕೆ ಕೈಹಾಕಿದ್ದಾರೆ. ಮುಂದಿನ ಸಾಲಿನ ಆಯವ್ಯಯದ ಪೂರ್ವಭಾವಿ ಸಭೆಯ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಅರಣ್ಯ ಮತ್ತು ಪರಿಸರ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ವಿಧಾನಮಂಡಲ ಜಂಟಿ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ.
ಇಸ್ಲಾಮಾಬಾದ್: ಭಾರತದ ಜೊತೆ ನಾವು ಟಿ20 ವಿಶ್ವಕಪ್ ಆಡಲ್ಲ ಎಂದು ಘೋಷಿಸಿರುವ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಕ್ರೀಡೆ ಜೊತೆ ರಾಜಕೀಯ ಬೆರೆಸಬಾರದು ಎಂದು ಬಿಟ್ಟಿ ಉಪದೇಶವನ್ನೂ ನೀಡಿದ್ದಾರೆ. ಟಿ20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ಕೊಲೊಂಬೋದಲ್ಲಿ ನಿಗದಿಯಾಗಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈಗಾಗಲೇ ನಾವು ಆಡಲ್ಲ ಎಂದು ಘೋಷಿಸಿದ್ದಾರೆ. ಇದೀಗ ಪಾಕಿಸ್ತಾನ ಪ್ರಧಾನಿಯೇ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. ‘ಟಿ20 ವಿಶ್ವಕಪ್ ನಲ್ಲಿ ನಾವು ಭಾರತದ ವಿರುದ್ಧ ಪಂದ್ಯವಾಡಲ್ಲ. ಕ್ರೀಡೆಯಲ್ಲಿ ರಾಜಕೀಯ ಇರಬಾರದು.
ಬೆಂಗಳೂರು: ಕೇಂದ್ರ ಬಜೆಟ್ ಗೆ ಮುನ್ನ ಚಿನ್ನದ ದರ ಭರ್ಜರಿ ಇಳಿಕೆ ಕಂಡಿದೆ. ಇಂದು ಪರಿಶುದ್ಧ ಚಿನ್ನದ ದರ ಏರಿಕೆಯಾದರೆ ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ದಾಖಲೆಯ ಏರಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಇಳಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಇಂದು ಮತ್ತೆ ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,56,850.00 ರೂ.ಗಳಿತ್ತು. ಇಂದೂ 1,63,535.00 ರೂ.ಗಳಷ್ಟಿದೆ.
ಬೆಂಗಳೂರು: ಡಾ ರಾಜ್ ಕುಮಾರ್ ಅವರ ಎದುರು ಸಿಗರೇಟು ಸೇದುತ್ತಿದ್ದಾಗ ನಡೆದ ಹಳೆಯ ಘಟನೆಯೊಂದನ್ನು ಹಿರಿಯ ನಟ ಸಿಹಿಕಹಿ ಚಂದ್ರು ರೇಡಿಯೋ ಸಿಟಿ ಸಂದರ್ಶನದಲ್ಲಿ ಹಿಂದೊಮ್ಮೆ ಹೀಗೆ ಹೇಳಿದ್ದರು. ಅದನ್ನು ಅವರ ಮಾತಲ್ಲೇ ಓದಿ. ಅಣ್ಣಾವ್ರನ್ನು ನಾನು ಯಾವತ್ತೂ ನೋಡಿರಲಿಲ್ಲ. ಫೋಟೋದಲ್ಲಿ ಮಾತ್ರ ನೋಡಿದ್ದೆ ಅಷ್ಟೇ. ಆಗ ಶಿವ ಮೆಚ್ಚಿದ ಕಣ್ಣಪ್ಪ ಶೂಟಿಂಗ್ ನಡೆಯುತ್ತಿತ್ತು. ಅವರು ಶಿವನ ಗೆಟಪ್ ನಲ್ಲಿದ್ದರು. ನಾನು ಸಿಗರೇಟು ಸೇದುತ್ತಿದ್ದೆ. ಅವರು ಸೀದಾ ನನ್ನ ಎದುರಿಗೆ ಬಂದು ನಮಸ್ಕಾರ ಮಾಡಿದ್ರು. ನಾನು ಯಾರೋ ಆರ್ಟಿಸ್ಟ್ ಶಿವನ ಗೆಟಪ್ ನಲ್ಲಿದ್ದಾರೆ ನಮಸ್ಕಾರ ಮಾಡಿದ್ದಾರೆ ಎಂದು ತಲೆ ಅಲ್ಲಾಡಿಸಿದೆ. ನನಗೆ ಯಾರು ಅಂತ ಗೊತ್ತಾಗಲಿಲ್ಲ.
ಮುಂಬೈ: ಟಿ20 ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಆಡಲ್ಲ ಎಂದ ಪಾಕಿಸ್ತಾನಕ್ಕೆ ಐಸಿಸಿ ದೊಡ್ಡ ಶಾಕ್ ನೀಡಿದೆ. ಇನ್ನು ಬಾಯಿ ಬಡಿದುಕೊಳ್ಳುವುದೊಂದೇ ದಾರಿ ಎಂಬಂತಾಗಿದೆ. ಟಿ20 ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ಭಾರತದಲ್ಲಿ ಆಡಲ್ಲ ಎಂದಿದ್ದಕ್ಕೆ ಐಸಿಸಿ ಆ ತಂಡವನ್ನೇ ಟೂರ್ನಿಯಿಂದ ಹೊರ ಹಾಕಿತ್ತು. ಇದನ್ನು ಪ್ರತಿಭಟಿಸಿ ಪಾಕಿಸ್ತಾನ ನಾವು ಭಾರತದ ವಿರುದ್ಧ ಪಂದ್ಯವನ್ನು ಆಡಲ್ಲ ಎಂದು ಬಹಿಷ್ಕಾರದ ನಿರ್ಧಾರ ಘೋಷಿಸಿದೆ. ಪಾಕಿಸ್ತಾನಕ್ಕಾಗಿ ಈ ಪಂದ್ಯವನ್ನು ಶ್ರೀಲಂಕಾದ ಕೊಲೊಂಬೋದಲ್ಲಿ ಆಯೋಜಿಸಲಾಗಿತ್ತು. ಆದರೆ ಪಾಕ್ ಈ ಪಂದ್ಯವನ್ನು ಆಡದೇ ಇದ್ದಲ್ಲಿ ಆಯೋಜಕರು, ನೇರಪ್ರಸಾರಕರಿಗೆ ಭಾರೀ ನಷ್ಟವಾಗಲಿದೆ.
ಮುಂಬೈ: ಅಭ್ಯಾಸ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ರನ್ನು ಹೊರಗಿಟ್ಟು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ದೊಡ್ಡ ಮೆಸೇಜ್ ಕೊಟ್ಟಿದೆ. ಟಿ20 ವಿಶ್ವಕಪ್ ಗೆ ಪೂರ್ವಭಾವಿಯಾಗಿ ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮುಂಬೈನಲ್ಲಿ ಅಭ್ಯಾಸ ಪಂದ್ಯವಾಡಿದೆ. ಈ ಪಂದ್ಯವನ್ನು ಟೀಂ ಇಂಡಿಯಾ 30 ರನ್ ಗಳಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 240 ರನ್ ಗಳಿಸಿದ್ದರೆ ಆಫ್ರಿಕಾ 210 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಿಂದ ಕಳಪೆ ಫಾರ್ಮ್ ನಲ್ಲಿರುವ ಸಂಜು ಸ್ಯಾಮ್ಸನ್ ರನ್ನು ಹೊರಗಿಡುವ ಮೂಲಕ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ದೊಡ್ಡ ಸಂದೇಶ ರವಾನಿಸಿದೆ.
ನವದೆಹಲಿ: ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡಿದ ಬಳಿಕವಷ್ಟೇ ಪ್ರಧಾನಿ ಮೋದಿ ಮಾತನಾಡಿದರೆ ಸಾಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ನಿನ್ನೆ ಪ್ರಧಾನಿ ಮೋದಿ ಮಾತನಾಡಬೇಕಿತ್ತು. ಆದರೆ ಪ್ರಧಾನಿ ಮೋದಿ ಮಾತನಾಡಲು ಕೆಲವೇ ಸೆಕೆಂಡುಗಳಿದ್ದಾಗ ವಿಪಕ್ಷಗಳಿಂದ ತೀವ್ರ ಗದ್ದಲವೇರ್ಪಟ್ಟ ಹಿನ್ನಲೆಯಲ್ಲಿ ಕಲಾಪವನ್ನು ಮುಂದೂಡಲಾಯಿತು. ನಿನ್ನೆಯ ಕಲಾಪದಲ್ಲಿ ಪ್ರಧಾನಿ ಮೋದಿಗೆ ಮಾತನಾಡಲು ಸಾಧ್ಯವಾಗಲೇ ಇಲ್ಲ. ಸಂಸತ್ ನ ಬಾವಿಗಿಳಿದು ವಿಪಕ್ಷ ಸಂಸದರು ಜೋರಾಗಿ ಘೋಷಣೆಗಳನ್ನು ಕೂಗಿ, 8 ಸಂಸದರ ಅಮಾನತಿನ ವಿಚಾರವಾಗಿ ಪ್ರತಿಭಟನೆ ನಡೆಸಿದರು.