ನವದೆಹಲಿ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರವು ಲಿಂಗ ತಾರತಮ್ಯದ ವಿಷಯವಲ್ಲ; ಅದು ಧಾರ್ಮಿಕ ಸಂಪ್ರದಾಯ ಮತ್ತು ನಂಬಿಕೆಗೆ ಸಂಬಂಧಿಸಿದ್ದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶವನ್ನು ಅನುಮತಿಸಿದ್ದ 2018ರ ತೀರ್ಪಿನ ವಿರುದ್ಧ ಸಲ್ಲಿಸಿದ ದೀರ್ಘಕಾಲದಿಂದ ಬಾಕಿ ಇರುವ ಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿರುವ ಹಿನ್ನೆಲೆಯಲ್ಲಿ ಕೇಂದ್ರವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.ಶಬರಿಮಲೆಯಲ್ಲಿ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವು ಅಯ್ಯಪ್ಪ ಸ್ವಾಮಿಯ ನೈಷ್ಠಿಕ ಬ್ರಹ್ಮಚಾರಿ (ಜೀವನಪೂರ್ತಿ ಬ್ರಹ್ಮಚರ್ಯಕ್ಕೆ ಕಟ್ಟಿಬದ್ಧನಾದವನು) ಸ್ವಭಾವದಿಂದ ಉಗಮಿಸಿದ್ದು, ಅದು ಅಶುದ್ಧತೆ ಅಥವಾ ಕೀಳರಿಮೆ ಆಧಾರಿತವಲ್ಲ ಎಂದು ಕೇಂದ್ರವು ವಿಚಾರಣೆಗೆ ಮುನ್ನ ಸಲ್ಲಿಸಿದ ಲಿಖಿತ ಅರ್ಜಿಯಲ್ಲಿ ತಿಳಿಸಿದೆ.
ನ್ಯೂಯಾರ್ಕ್: ಪನಾಮ ಕಾಲುವೆಯ ಸೇತುವೆಯಲ್ಲಿ ಮೂರು ಇಂಧನ ಟ್ಯಾಂಕರ್ ಗಳು ಸ್ಪೋಟಗೊಂಡಿದ್ದು ಈ ಭೀಕರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪನಾಮ ಕಾಲುವೆಯ ಪೆಸಿಫಿಕ್ ಪ್ರವೇಶದ್ವಾರದಲ್ಲಿರುವ ಬ್ರಿಡ್ಜ್ ಆಫ್ ದಿ ಅಮೆರಿಕಾಸ್ ಬಳಿ ಇಂಧನ ಟ್ಯಾಂಕರ್ ಗಳು ಸ್ಪೋಟಗೊಂಡಿವೆ. ಈ ವೇಳೆ ಸೇತುವೆ ಮೇಲೆ ಸಾಕಷ್ಟು ವಾಹನಗಳು ಓಡಾಡುತ್ತಿದ್ದವು. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ಮುಗಿಲೆತ್ತರಕ್ಕೆ ಬೆಂಕಿಯ ಜ್ವಾಲೆ ಹರಡಿತ್ತು. ಸ್ಪೋಟದ ತೀವ್ರತೆ ಸೇತುವೆ ಮೇಲೆ ಓಡಾಡುತ್ತಿದ್ದ ಕೆಲವು ಕಾರುಗಳೂ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲಗೆ ಕಂಡು ವಾಹನಗಳು ದಿಕ್ಕಾಪಾಲಾಗಿವೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು ಓರ್ವ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಅಮರಾವತಿ: ಆಂಧ್ರ ಪ್ರದೇಶ ಮತ್ತು ತೆಲಂಗಾಣ ವಿಭಜನೆಯಾದ ದಶಕಗಳ ಬಳಿಕ ಕೊನೆಗೂ ಆಂಧ್ರಕ್ಕೆ ರಾಜಧಾನಿ ಘೋಷಣೆಯಾಗಿದೆ. ಆಂಧ್ರಪ್ರದೇಶದಕ್ಕೆ ಅಮರಾವತಿಯನ್ನು ನೂತನ ರಾಜಧಾನಿಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ.ಆಂಧ್ರ ಪ್ರದೇಶದ ರಾಜಧಾನಿಯಾಗಿ ಅಮರಾವತಿ ಎನ್ನುವ ಅಧಿಕೃತ ಘೋಷಣೆ ಹೊರಬಿದ್ದಿದ್ದು, ಆ ಮೂಲಕ, ಹನ್ನೆರಡು ವರ್ಷಗಳ ಕಾಲ ಇದ್ದ ಅನಿಶ್ಚಿತತೆಗೆ ಕೊನೆಗೂ ತೆರೆಬಿದ್ದಿದೆ. ಆಂಧ್ರ ಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ಅಲ್ಲದೆ ರಾಜಧಾನಿಗೆ ಅಂಕಿತ ಹಾಕಿದ್ದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಬಾಗಲಕೋಟೆ: ಜಾತಿ ಜಾತಿಗಳು, ಧರ್ಮಗಳ ನಡುವೆ ವಿಷಬೀಜ ಬಿತ್ತಿ ಮತಬ್ಯಾಂಕ್ ಮಾಡಿಕೊಳ್ಳುವುದೇ 79 ವರ್ಷಗಳ ಕಾಂಗ್ರೆಸ್ಸಿನ ಸಾಧನೆ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಆರೋಪಿಸಿದ್ದಾರೆ. ಇಂದು ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಥ ಮಹಾನ್ ಮೋಸಗಾರರನ್ನು ನಂಬದಿರಿ ಎಂದು ಮತದಾರರನ್ನು ವಿನಂತಿಸಿದರು. 17 ಬಜೆಟ್ ಮಂಡಿಸುವಾಗ ರಾಜಕೀಯ ಪುನರ್ಜನ್ಮ ನೀಡಿದ ಬಾಗಲಕೋಟೆ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದರು. ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಬೇರುಸಮೇತ ಕಿತ್ತು ಹಾಕಲು ಜನ ತೀರ್ಮಾನಿಸಿದ್ದಾರೆ. 2028 ರಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ. ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದ್ದಾರೆ.ಇಂದು ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡೂ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಜನರೇ ತೀರ್ಮಾನ ಮಾಡಿದ್ದಾರೆ. ಇಂತಹ ಅವಕಾಶವನ್ನು ಜನರು ತಪ್ಪಿಸಿಕೊಳ್ಳಬಾರದು. ಒಂದು ವೇಳೆ ಕಾಂಗ್ರೆಸ್ ಗೆದ್ದರೆ ಮತ್ತೆ ಇವರ ನಾಟಕ ಎರಡು ವರ್ಷ ಮುಂದುವರಿಯುತ್ತದೆ. ಡಿನ್ನರ್ ಮತ್ತು ಲಂಚ್ ನಲ್ಲೇ ಸರ್ಕಾರ ಕಳೆಯುತ್ತಾರೆ ಎಂದರು.
ಟೆಹ್ರಾನ್: ಇಸ್ರೇಲ್ ಮತ್ತು ಅಮೆರಿಕಾ ನಡೆಸುತ್ತಿರುವ ದಾಳಿ ನಡುವೆ ಇರಾನ್ ಪರಮೋಚ್ಛ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಶಾಕಿಂಗ್ ಸುದ್ದಿಯೊಂದು ಕೇಳಿಬಂದಿದೆ. ಇರಾನ್ ಪರಮೋಚ್ಛ ನಾಯಕ ಮೊಜ್ತಬಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಆರೋಗ್ಯ ಗಂಭೀರವಾಗಿದೆ ಎಂದು ಅಮೆರಿಕಾ ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ. ಸದ್ಯಕ್ಕೆ ಅವರಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಕೋಮ್ ನಗರದ ರಹಸ್ಯ ಸ್ಥಳವೊಂದರಲ್ಲಿ ಮೊಜ್ತಬಾರನ್ನು ರಹಸ್ಯವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಅವರ ಸ್ಥಿತಿ ಗಂಭೀರವಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ಕಳೆದ ವಾರದಂತೆ ಈ ವಾರವೂ ಅದೇ ಟ್ರೆಂಡ್ ಮುಂದುವರಿದಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಳಿಕೆಯಾಗುತ್ತಲೇ ಇತ್ತು. ಕಳೆದ ವಾರ ಎರಡು ದಿನ ಸತತವಾಗಿ ಬೆಲೆ ಏರಿಕೆ ಕಂಡುಬರುತ್ತಿತ್ತು. ಅಡಿಕೆ ಬೆಲೆಯಲ್ಲಿ ನಿನ್ನೆ ಕೊಂಚ ಏರಿಕೆಯಾಗಿತ್ತು. ಆದರೆ ಇಂದು ಯಥಾಸ್ಥಿತಿಯಲ್ಲಿದೆ ಹೊಸ ಅಡಿಕೆ ಬೆಲೆ 500 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 555 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ 555 ರೂ.ಗಳಷ್ಟಾಗಿದೆ.
ಬೆಂಗಳೂರು: ರಣವೀರ್ ಸಿಂಗ್ ನಾಯಕರಾಗಿರುವ ಧುರಂಧರ್ 2 ಸಿನಿಮಾ ವೀಕ್ಷಿಸಿ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಧುರಂಧರ್ 2 ಸಿನಿಮಾ ಈಗಾಗಲೇ 1000 ಕೋಟಿ ಕ್ಲಬ್ ಸೇರಿದೆ. ಈ ಸಿನಿಮಾ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡಾ ಇತ್ತೀಚೆಗೆ ಚುನಾವಣಾ ಭಾಷಣವೊಂದರಲ್ಲಿ ಪ್ರಸ್ತಾಪಿಸಿ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದರು. ಕಾಂಗ್ರೆಸ್ ಮತ್ತು ಎಡಪಂಥೀಯರು ಇದೊಂದು ಪ್ರೊಪಗಾಂಡ ಸಿನಿಮಾ ಎಂದು ಟೀಕಿಸಿದ್ದರು.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಏರಿಕೆಯಾಗಿದೆ ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ವಾರಂತ್ಯಕ್ಕೆ ಪರಿಶುದ್ಧ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿತ್ತು. ಪರಿಶುದ್ಧ ಚಿನ್ನದ ದರ ವಾರಂತ್ಯಕ್ಕೆ 1,53,675.00 ರೂ.ಗಳಿತ್ತು. ಆದರೆ ಇಂದು ಏರಿಕೆಯಾಗಿದ್ದು 1,53,955.00 ರೂ.ಗಳಷ್ಟಿದೆ.
ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಕೇವಲ ಬಿಜೆಪಿ ಅಲೆಯಲ್ಲ; ಒಂದು ರೀತಿಯ ಸುನಾಮಿಯಂಥ ಅಲೆಯ ವಾತಾವರಣ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.ಉಪಚುನಾವಣೆಯ ಪ್ರಯುಕ್ತ ಇಂದು ಏರ್ಪಡಿಸಿದ್ದ ಬೃಹತ್ ಶೋಭಾ ಯಾತ್ರೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ಶ್ರೀನಿವಾಸದಾಸ ಕರಿಯಪ್ಪ ಅವರನ್ನು ಗೆಲ್ಲಿಸಲೇಬೇಕೆಂದು ಈ ಕ್ಷೇತ್ರದ ಪ್ರಜ್ಞಾವಂತ ಮತದಾರರು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.ಆಗರ್ಭ ಶ್ರೀಮಂತರಿಂದ ಈ ಕ್ಷೇತ್ರದ ಅಭಿವೃದ್ಧಿ ಆಗಲಾರದು; ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿ ಆಗಬೇಕೆಂದರೆ ಒಬ್ಬ ಸಾಮಾನ್ಯರಾದ ಶ್ರೀನಿವಾಸದಾಸ ಕರಿಯಪ್ಪ ಅವರು ಶಾಸಕ ಆಗಬೇಕಿದೆ ಎಂದು ತಿಳಿಸಿದರು.
ಜಾತಕದಲ್ಲಿ ಕುಜ ದೋಷವಿದ್ದರೆ ವಿವಾಹಾದಿ ಸಂಬಂಧಗಳಿಗೆ ತೊಂದರೆ, ಮಾನಸಿಕ ನೆಮ್ಮದಿಗೆ ಕೊರತೆಯಾಗುತ್ತದೆ. ಕುಜ ದೋಷವಿದ್ದರೆ ಯಾವ ಬಣ್ಣದ ಬಟ್ಟೆ ಧರಿಸಬೇಕು ತಿಳಿದುಕೊಳ್ಳಿ. ಅಂಗಾರಕ ದೋಷ ಅಥವಾ ಕುಜ ದೋಷದ ಪರಿಣಾಮವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಲು ಕೆಂಪು ವಸ್ತ್ರವನ್ನು ಧರಿಸಬೇಕು. ಜ್ಯೋತಿಷ್ಯದ ಪ್ರಕಾರ ಅಂಗಾರಕ ಧೈರ್ಯ, ಸಾಹಸ, ಶಕ್ತಿಯ ಸಂಕೇತ. ಕುಜ ದೋಷವಿದ್ದಾಗ ಕೋಪ, ಕಿರಿ ಕಿರಿಗಳು ಸಾಮಾನ್ಯ. ವಿಶೇಷವಾಗಿ ಮಂಗಳವಾರಗಳಂದು ಕೆಂಪು ಬಣ್ಣದ ಬಟ್ಟೆ ಧರಿಸಬೇಕು. ಒಂದು ವೇಳೆ ನಿಮಗೆ ಕೆಂಪು ಬಟ್ಟೆ ಧರಿಸಲು ಸಾಧ್ಯವಾಗದೇ ಇದ್ದರೆ ಜೇಬಿನಲ್ಲಿ ಒಂದು ಕೆಂಪು ಕರ್ಚೀಫ್ ಆದರೂ ಇಟ್ಟುಕೊಳ್ಳಿ.
ಅಸ್ಸಾಂ : ಖುರಾನ್ ನಲ್ಲಿ ನಮಾಜ್ ಮಾಡುವಾಗ ಹಾವು ಕಂಡರೂ ಕೊಲ್ಲಬೇಕು ಅಂದಿದ್ದಾರೆ. ಅದೇ ರೀತಿ ಬಿಜೆಪಿ, ಆರ್ ಎಸ್ಎಸ್ ನವರನ್ನೂ ನೀವು ನಮಾಜ್ ಬಿಟ್ಟು ನಿರ್ನಾಮ ಮಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅಸ್ಸಾಂ ಚುನಾವಣೆ ಪ್ರಚಾರದ ವೇಳೆ ಹೇಳಿಕೆ ನೀಡಿದ್ದಾರೆ. ಮೊನ್ನೆಯಷ್ಟೇ ಗುಜರಾತಿಗಳು ಅನಕ್ಷರಸ್ಥರು ಎಂದು ವಿವಾದ ಮೈಮೇಲೆಳದುಕೊಂಡಿದ್ದ ಖರ್ಗೆ ಇದೀಗ ಬಿಜೆಪಿ, ಆರ್ ಎಸ್ಎಸ್ ನವರನ್ನು ಕೊಲ್ಲಬೇಕು ಎಂದು ಕರೆ ನೀಡುವ ಮೂಲಕ ಮತ್ತೆ ವಿವಾದ ಮೈ ಮೇಲೆಳೆದುಕೊಂಡಿದ್ದಾರೆ. ಇದು ಯಾವುದೂ ಚುನಾವಣಾ ಆಯೋಗದ ಕಣ್ಣಿಗೆ ಕಾಣ್ತಿಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ 3000 ರೂ., ಭಾರತದಲ್ಲಿ ಕೇವಲ 100 ರೂ. ಅಂದರೆ ಅವರಿಗಿಂತ ನಾವೇ ಶ್ರೀಮಂತರು ಎಂದು ಪತ್ರಕರ್ತರೊಬ್ಬರ ಜೊತೆ ವಾದ ಮಂಡಿಸುತ್ತಿರುವ ಈ ಪಾಕಿಸ್ತಾನಿಯನ ತಲೆಗೆ ಅದೇನು ಪ್ರೈಸ್ ಕೊಡಬೇಕು ನೀವೇ ಹೇಳಿ. ಇಸ್ರೇಲ್, ಅಮೆರಿಕಾ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಭಾರತ, ಪಾಕಿಸ್ತಾನ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಇಂಧನ ಬಿಕ್ಕಟ್ಟು ಎದುರಾಗಿದೆ. ಹಾಗಿದ್ದರೂ ಭಾರತ ಸರ್ಕಾರ ತನ್ನ ರಾಜತಾಂತ್ರಿಕ ಬಲದಿಂದ ದೇಶದ ಜನರಿಗೆ ತೊಂದರೆಯಾಗದಂತೆ ನೋಡಿಕೊಂಡಿದೆ.
ಚೆನ್ನೈ: 2026 ಟಿ20 ವಿಶ್ವಕಪ್ ನಲ್ಲಿ ಅದ್ಭುತ ಫಾರ್ಮ್ ಮೂಲಕ ಹೀರೋ ಆಗಿದ್ದ ಸಂಜು ಸ್ಯಾಮ್ಸನ್ ಈ ಬಾರಿ ಐಪಿಎಲ್ ನಲ್ಲಿ ಯಾಕೋ ಡಲ್ ಹೊಡೆಯುತ್ತಿದ್ದಾರೆ. ಕಳೆದ ಆರೇಳು ವರ್ಷಗಳಿಂದ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ್ದ ಸಂಜು ಸ್ಯಾಮ್ಸನ್ ಈ ಬಾರಿ ಚೆನ್ನೈಗೆ ಬಂದಾಗ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿತ್ತು. ಅವರಿಗೆ ಇರುವ ಜನ ಬೆಂಬಲ ನೋಡಿದರೆ ಅವರು ಧೋನಿ ಸ್ಥಾನ ತುಂಬಬಲ್ಲರು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಚೆನ್ನೈಗೆ ಬಂದ ಮೇಲೆ ಯಾಕೋ ಸಂಜು ಮಂಕಾಗಿದ್ದಾರೆ. ತಮ್ಮ ಮೆಚ್ಚಿನ ಆರಂಭಿಕ ಸ್ಥಾನ ಸಿಕ್ಕರೂ ರನ್ ಗಳಿಸಲು ವಿಫಲರಾಗುತ್ತಿದ್ದಾರೆ.
ಬೆಂಗಳೂರು: ಮೋದಿ ಸರ್ಕಾರದ ಎಲ್ಪಿಜಿ ಮತ್ತು ಇಂಧನ ವ್ಯವಸ್ಥೆಯ ಅಸಮರ್ಥ ನಿರ್ವಹಣೆಯಿಂದಾಗಿ ಕರ್ನಾಟಕದಾದ್ಯಂತ ಜನರ ಜೀವನೋಪಾಯವನ್ನು ನಾಶಪಡಿಸಿದೆ ಎಂದು ರಣದೀಪ್ ಸುರ್ಜೇವಾಲ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜಂಟಿ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಈಗ ಆಟೋ ಚಾಲಕರು ಗ್ಯಾಸ್ ಸಿಗದೇ ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೂವರೂ ನಾಯಕರೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಕೇವಲ ನೀತಿಯ ವೈಫಲ್ಯವಲ್ಲ. ಬದಲಿಗೆ ಕೇಂದ್ರ ಬಿಜೆಪಿ ಸರ್ಕಾರದ ಉದಾಸೀನತೆ, ಅಹಂಕಾರ ಮತ್ತು ಸಂಪೂರ್ಣ ಆಡಳಿತಾತ್ಮಕ ದುರಂತಕ್ಕೆ ಸಾಕ್ಷಿಯಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಈ ವಾರ ಮಳೆಯ ಸೂಚನೆಯಿಲ್ಲ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ವಾರ ಸೆಖೆ ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತಿದೆ ಹವಾಮಾನ ವರದಿಗಳು. ಬೆಂಗಳೂರಿನಲ್ಲಿ ಕಳೆದ ವಾರ ಕೊಂಚ ಮಳೆಯಾಗಿತ್ತು. ಇದಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲೂ ಮಳೆಯಾಗಿತ್ತು. ಆದರೆ ಈ ವಾರ ಮಳೆಯ ಸೂಚನೆಯಿಲ್ಲ. ಬದಲಾಗಿ ತಾಪಮಾನದಲ್ಲಿ ಗಣನೀಯ ಏರಿಕೆಯಾಗಲಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಸೆಖೆ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಈ ವಾರ ಗರಿಷ್ಠ ತಾಪಮಾನ 34-35 ಡಿಗ್ರಿಯವರೆಗೆ ತಲುಪಲಿದೆ. ಇಂದು ಬೆಂಗಳೂರಿನ ಗರಿಷ್ಠ ತಾಪಮಾನ 34 ಡಿಗ್ರಿಯಷ್ಟಿದ್ದರೆ ಕನಿಷ್ಠ ತಾಪಮಾನ 21 ಡಿಗ್ರಿಯಷ್ಟು ಕಂಡುಬರಲಿದೆ.
ಶತ್ರು ಭಯ, ಮನಸ್ಸಿನ ಭಯವಿದ್ದರೆ ಕಾಳಿ ದೇವಿಯ ಮಂತ್ರ ಪಠಿಸುವುದು ಸೂಕ್ತ. ಕಾಳಿ ದೇವಿಯು ನಮ್ಮ ಭಯ ಹೋಗಲಾಡಿಸಿ ನೆಮ್ಮದಿ ಕರುಣಿಸುತ್ತಾಳೆ. ಅದಕ್ಕಾಗಿ ಶ್ರೀ ಕಾಳೀ ಚಾಲೀಸಾ ಸ್ತೋತ್ರ ಓದಿ.ದೋಹಾಜಯಕಾಲೀ ಕಲಿಮಲಹರಣ, ಮಹಿಮಾ ಅಗಮ ಅಪಾರ ।ಮಹಿಷ ಮರ್ದಿನೀ ಕಾಲಿಕಾ , ದೇಹು ಅಭಯ ಅಪಾರ ॥ ಅರಿ ಮದ ಮಾನ ಮಿಟಾವನ ಹಾರೀ ।ಮುಂಡಮಾಲ ಗಲ ಸೋಹತ ಪ್ಯಾರೀ ॥ ಅಷ್ಟಭುಜೀ ಸುಖದಾಯಕ ಮಾತಾ ।ದುಷ್ಟದಲನ ಜಗ ಮೇಂ ವಿಖ್ಯಾತಾ ॥ ಭಾಲ ವಿಶಾಲ ಮುಕುಟ ಛವಿಛಾಜೈ ।ಕರ ಮೇಂ ಶೀಶ ಶತ್ರು ಕಾ ಸಾಜೈ ॥
ಕಣ್ಣೂರು (ಕೇರಳಂ): ಮುಂಬರುವ 2026 ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪೆರವೂರಿನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಬಿಜೆಪಿಯೊಂದಿಗೆ ಆಡಳಿತಾರೂಢ ಎಲ್ಡಿಎಫ್ ರಹಸ್ಯ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಆರೋಪ ಮಾಡಿದರು. ಚುನಾವಣೆ ಸಮೀಪಿಸುತ್ತಿರುವಂತೆಯೇ ಎಲ್ಡಿಎಫ್ ಮತ್ತು ಬಿಜೆಪಿ ನಡುವೆ ರಹಸ್ಯ ಒಪ್ಪಂದ ನಡೆದಿದೆ. ಶಬರಿಮಲೆಯಲ್ಲಿ ಭಾರೀ ಕಳ್ಳತನವನ್ನು ನೋಡಿದ್ದೇವೆ, ಆದರೆ ಪ್ರಧಾನಿಯಿಂದ ಒಂದೇ ಒಂದು ಮಾತಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.ನಾನು ಈಗ ಕಳೆದ ಒಂದು ವರ್ಷದಿಂದ ಸ್ವಲ್ಪ ಹೆಚ್ಚು ವರ್ಷ ವಯನಾಡ್ ಸಂಸದನಾಗಿದ್ದೇನೆ, ಮತ್ತು ನೀವು ಎದುರಿಸುತ್ತಿರುವ
ಆರು ವರ್ಷಗಳ ಹಿಂದೆ ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾದ ತೂತುಕುಡಿ ಜಿಲ್ಲೆಯಲ್ಲಿ ವ್ಯಾಪಾರಿ ಪಿ ಜಯರಾಜ್ ಮತ್ತು ಅವರ ಪುತ್ರ ಜೆ ಬೆನಿಕ್ಸ್ ಕಸ್ಟಡಿ ಸಾವಿನ ಪ್ರಕರಣದಲ್ಲಿ ತಮಿಳುನಾಡಿನ ಮಧುರೈ ಜಿಲ್ಲೆಯ ನ್ಯಾಯಾಲಯವು ಒಂಬತ್ತು ಪೊಲೀಸರಿಗೆ ಸೋಮವಾರ ಮರಣದಂಡನೆ ವಿಧಿಸಿದೆ.ಒಂಬತ್ತು ಪೊಲೀಸರು ಇನ್ಸ್ಪೆಕ್ಸರ್ನಲ್ಲಿ ಶ್ರೀಧರ್, ಸಬ್ ಇನ್ಸ್ಪೆಕ್ಟರ್ಗಳಾದ ಬಾಲಕೃಷ್ಣನ್ ಮತ್ತು ರಘು ಗಣೇಶ್ ಮತ್ತು ಪೊಲೀಸ್ ಸಿಬ್ಬಂದಿಗಳಾದ ಮುರುಗನ್, ಸಮದುರೈ, ಮುತ್ತುರಾಜ, ಚೆಲ್ಲದುರೈ, ಥಾಮಸ್ ಫ್ರಾನ್ಸಿಸ್ ಮತ್ತು ವೇಲುಮುತ್ತು.ಇದು "ಅಧಿಕಾರದ ದುರುಪಯೋಗದ ಪ್ರಕರಣ" ಎಂದು ಒತ್ತಿಹೇಳಿರುವ ನ್ಯಾಯಾಲಯ, ತಮಿಳುನಾಡಿನಲ್ಲಿ ಅನೇಕ ಪ್ರಾಮಾಣಿಕ
ದಿಬ್ರುಗಢ್: ಚುನಾವಣೆ ನಡೆಯಲಿರುವ ಅಸ್ಸಾಂನಲ್ಲಿ ನೆಹರೂ-ಗಾಂಧಿ ಕುಟುಂಬದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸೋಮವಾರ ತೀವ್ರ ವಾಗ್ದಾಳಿ ನಡೆಸಿರು.ಕಾಂಗ್ರೆಸ್ನ ಮೊದಲ ಕುಟುಂಬವು ದೇಶದ ಅತ್ಯಂತ ಭ್ರಷ್ಟ ಕುಟುಂಬವಾಗಿದ್ದು, ಅಂತವರು ಅಸ್ಸಾಂಗೆ ಬಂದು ಇತರರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆಂದು ಆಕ್ರೋಶ ಹೊರಹಾಕಿದರು. ಕಾಂಗ್ರೆಸ್ ಭ್ರಷ್ಟ ಮಾತ್ರವಲ್ಲ, ಕೆಲಸ ಮಾಡಲು ಸಿದ್ಧರಿಲ್ಲ. ಪರಿಣಾಮವಾಗಿ, ಅಸ್ಸಾಂನಲ್ಲಿ ತಲೆಮಾರುಗಳು ನಿರುದ್ಯೋಗದಿಂದ ಹೋರಾಡುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ-ಎನ್ಡಿಎ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಮಗ್ರತೆಯಿಂದ ಕೆಲಸ ಮಾಡುತ್ತಿದೆ. ಅಸ್ಸಾಂ ಅನ್ನು ಪ್ರಮುಖ ರಾಜಧಾನಿಯನ್ನಾಗಿ ಪರಿವರ್ತಿಸಲು ನಾವು ಬದ್ಧರಾಗಿದ್ದೇವೆ. "ಕಾಂಗ್ರೆಸ್ ಆಡಳಿತದಲ್ಲಿ
ದಾವಣಗೆರೆ: ಪೆಟ್ರೋಲ್ ಸದಾಕಾಲ ಲಭ್ಯವಿರುವ ಇಂಧನ. ಈಗೀನ ಸ್ಥಿತಿಗೆ ಎಲ್ಪಿಜಿ ಬದಲು ಪೆಟ್ರೋಲ್ ಬಳಸುವುದು ಸೂಕ್ತ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಲಹೆಯನ್ನು ನೀಡಿದರು. ಈ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು 70 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲದ ಸಂಗ್ರಹವಿದೆ. ಇದೀಗ ನಿರಂತರ ತೈಲ ಪೂರೈಕೆ ಆಗುತ್ತಿದೆ. ಸದ್ಯದ ಮಟ್ಟಿಗೆ ಜನರು ಆತಂಕಪಡುವ ಅವಶ್ಯಕ್ತೆಯಿಲ್ಲ. ವಾಣಿಜ್ಯ ಸಿಲಿಂಡರ್ಗಳ ವಿತರಣೆಯನ್ನು ಶೇ 70ಕ್ಕೆ ಹೆಚ್ಚಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು. ಶೇ 60ರಷ್ಟು ಎಲ್ಪಿಜಿಯನ್ನು ದೇಶದಲ್ಲೇ ಉತ್ಪಾದಿಸಲಾಗುತ್ತಿದೆ. ಶೇ 40ರಷ್ಟು ಆಮದು ಮಾಡಿಕೊಳ್ಳುತ್ತಿದ್ದೇವೆ. ಜಾಗತಿಕ
ಪಾಲಕ್ಕಾಡ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಪಾಲಕ್ಕಾಡ್ನಲ್ಲಿ ನಡೆದ ರ್ಯಾಲಿಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿರುದ್ಧ ಮುಖಾಮುಖಿ ವಾಗ್ದಾಳಿ ನಡೆಸಿದ್ದು, ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್ಡಿಎಫ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವೆ ರಾಜಕೀಯ ಪಾಲುದಾರಿಕೆ ಇದೆ ಎಂದು ಆರೋಪಿಸಿದರು. ಸಚಿವ ನರೇಂದ್ರ ಮೋದಿ ಅವರಿಗಿಂತ ಭಾರತವನ್ನು ಮುನ್ನಡೆಸುವವರು ಯಾರೂ ಇಲ್ಲ ಎಂದು ಭಾವಿಸುತ್ತಾರೆ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳವನ್ನು ಅವರಿಗಿಂತ ಉತ್ತಮವಾಗಿ ಮುನ್ನಡೆಸಲು ಸಾಧ್ಯವಿಲ್ಲ ಎಂದು ಭಾವಿಸಿದ್ದಾರೆ.
ಬೆಂಗಳೂರು: ಶಾಸಕರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ಟಿಕೆಟ್ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆಂಬ ಆರೋಪವನ್ನು ಗೃಹಸಚಿವ ಜಿ ಪರಮೇಶ್ವರ್ ಅವರು ತಳ್ಳಿ ಹಾಕಿದರು. ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಬುಕ್ ಮಾಡಲಾಗುತ್ತದೆ. ಟಿಕೆಟ್ ಖರೀದಿ ಮಾಡಿದವರು ಪಂದ್ಯಾಟ ನೋಡಲಬಹುದು ಎಂದು ಹೇಳಿದರು. ಇನ್ನೂ ಶಾಸಕರಿಗೆ ನೀಡಿದ ಟಿಕೆಟ್ನಲ್ಲಿ ಅವರ ಕುಟುಂಬ ಸದಸ್ಯರು ಬಿಟ್ಟರೆ ಬೇರಾರಿಗೂ ವರ್ಗಾಯಿಸುವಂತಿಲ್ಲ ಎಂದು
ನಟ ದರ್ಶನ್ ಅವರ ಜೀವನದ ಘಟನೆಗಳಿಗೆ ಸಾಮ್ಯತೆ ಹೊಂದಿದೆ ಎನ್ನುವ ಆರೋಪವಿರುವ ಬಾಸ್ ಚಿತ್ರಕ್ಕೆ ಏಪ್ರಿಲ್ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುವ ನಿರೀಕ್ಷೆಯಿದ್ದ ಸಿನಿಮಾಗೆ ಇದೀಗ ಕೋರ್ಟ್ಗೆ ತಡೆಯಾಜ್ಞೆ ನೀಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆಧರಿತ ಚಲನಚಿತ್ರ ಬಾಸ್ ಸಿನಿಮಾ ಬಿಡುಗಡೆಗೆ ಮಾಡದಂತೆ ಕೋರ್ಟ್ ತಡೆಯಾಜ್ಞೆಯನ್ನು ನೀಡಿದೆ.ಬಾಸ್ ಎಂಬ ಚಿತ್ರ ನಿರ್ಮಾಣ ಮಾಡಿದ್ದು, ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಟೀಸರ್ ಅನ್ನು ಚಲನಚಿತ್ರ ತಂಡ ಬಿಡುಗಡೆ
ಐಪಿಎಲ್ 2026 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಡುವಿನ ಪಂದ್ಯದ ವೇಳೆ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಔಟಾದ ಕುರಿತು ವಿರಾಟ್ ಕೊಹ್ಲಿ ಬೇಸರವನ್ನು ತೋರ್ಪಡಿಸಿದರು. ಇದು ಕ್ಯಾಮಾರದಲ್ಲಿ ಸೆರೆಯಾಗಿದೆ. ಸ್ಯಾಮ್ಸನ್ ಔಟಾದ ಕುರಿತು ಕೊಹ್ಲಿಯ ಪ್ರತಿಕ್ರಿಯೆಯು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತ್ವರಿತವಾಗಿ ವೈರಲ್ ಆಗಿದೆ.ಭಾನುವಾರ, ಏಪ್ರಿಲ್ 5 ರಂದು M ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ಸಿಬಿ 43ರನ್ಗಳ ಆಮೋಘ ಜಯ ಸಾಧಿಸಿತು. ಇನ್ನೂ ಸ್ಯಾಮ್ಸನ್ ಮತ್ತೊಂದು ಏಕ-ಅಂಕಿಯ ಸ್ಕೋರ್ ಅನ್ನು ದಾಖಲಿಸುವ ಮೂಲಕ, 2026 ರ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಯ ಆವರಣದಲ್ಲಿ ಸೋಮವಾರ ಭಾರಿ ಭದ್ರತಾ ಲೋಪ ಕಂಡುಬಂದಿದೆ. ಅಪಚರಿತ ಚಾಲಕನೊಬ್ಬ ಗೇಟ್ ಮೂಲಕ ಕಾರನ್ನು ಸ್ಪೀಕರ್ ಕಚೇರಿಯತ್ತ ಚಲಾಯಿಸಿ ಆತಂಕ ಸೃಷ್ಟಿಸಿದೆ. ಸೋಮವಾರ ಮಧ್ಯಾಹ್ನ ದೆಹಲಿ ವಿಧಾನಸಭೆಯಲ್ಲಿ ಅಪರಿಚಿತ ವಾಹನವೊಂದು ಭದ್ರತಾ ತಡೆಗೋಡೆಯಿಂದ ಢಿಕ್ಕಿ ಹೊಡೆದು ಹೆಚ್ಚಿನ ಭದ್ರತೆಯ ಆವರಣವನ್ನು ಪ್ರವೇಶಿಸಿದ ನಂತರ ಭಾರೀ ಭದ್ರತಾ ಉಲ್ಲಂಘನೆ ವರದಿಯಾಗಿದೆ.ಘಟನೆಯ ಸಂದರ್ಭದಲ್ಲಿ ದೆಹಲಿ ಅಸೆಂಬ್ಲಿ ಸ್ಪೀಕರ್ ಅವರ ವಾಹನಕ್ಕೆ ಮಸಿ ಎರಚಲಾಗಿದೆ ಎಂದು ಆರೋಪಿಸಲಾಗಿದೆ.
ಮೈಸೂರು: ಇನ್ನೆರಡು ವರ್ಷ ಸಿಎಂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರುತ್ತಾರೆಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘2013ರಲ್ಲಿ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಎಂದು ಹೈಕಮಾಂಡ್ ಘೋಷಿಸಿರಲಿಲ್ಲ. ಆದರೂ ಅವರೇ ಆ ಅವಧಿಯನ್ನು ಸಿಎಂ ಆಗಿ ಪೂರ್ಣಗೊಳಿಸಿದರು. 2023ರಲ್ಲೂ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೈಕಮಾಂಡ್ ಹೇಳಿತ್ತು. ಅಧಿಕಾರದ ಅವಧಿ 2028ರವರೆಗೆ ಇದೆ. ಅದನ್ನು ಪೂರ್ಣಗೊಳಿಸಬೇಕು ತಾನೆ? ನೀವೇ 5 ವರ್ಷವೂ ಸಿಎಂ ಎಂದು ಹೈಕಮಾಂಡ್ ಪ್ರತ್ಯೇಕವಾಗಿ ಸ್ಪಷ್ಟೀಕರಣ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ಹುಬ್ಬಳ್ಳಿ: ಜಿಮ್ ಟ್ರೈನರ್ ಸಮೀರ್ ಅತ್ಯಾಚಾರ ಆರೋಪ ಪ್ರಕರಣದ ಸಂಬಂಧ ಇದೀಗ ಆರೋಪಿ ಬೆದರಿಕೆಯೊಡ್ಡಿ ₹70ಸಾವಿರ ಅಧಿಕ ಹಣ ಪಡೆದಿರುವುದಾಗಿ ಬೆಳಕಿಗೆ ಬಂದಿದೆ.ಈ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದ್ದು, ಇದೀಗ ಪ್ರಕರಣದಲ್ಲಿ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಸಂತ್ರಸ್ತೆಗೆ ಬೆದರಿಕೆಯೊಡ್ಡಿ ಅತ್ಯಾಚಾರ ಮಾಡಿದ ಬಳಿಕ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದ ಎನ್ನುವುದು ಗೊತ್ತಾಗಿದೆ. ಹಲವು ಬಾರಿ ಅತ್ಯಾಚಾರದ ಬಳಿಕ ಹಣವನ್ನು ಪಡೆದಿದ್ದಾನೆ. ₹5,000 ₹20,000 ₹25,000 ₹70,000 ಸಾವಿರಕ್ಕೂ ಅಧಿಕ ಹಣವನ್ನು ಸಂತ್ರಸ್ತೆ ಸಮೀರ್ಗೆ ಕಳುಹಿಸಿರುವ ಬಗ್ಗೆ ಸ್ಟ್ರೀನ್ಶಾಟ್ನಲ್ಲಿ ಪತ್ತೆಯಾಗಿದೆ.
ಬೆಂಗಳೂರು: ಅಮೆರಿಕ ಇಸ್ರೇಲ್ ದಾಳಿಯಲ್ಲಿ ಇರಾನ್ನ ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿಯನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. IRGC ಈ ಘಟನೆಯನ್ನು "ಅಮೆರಿಕ-ಜಿಯೋನಿಸ್ಟ್ ಶತ್ರುಗಳ ಕ್ರಿಮಿನಲ್ ಭಯೋತ್ಪಾದಕ ದಾಳಿ" ಎಂದು ವಿವರಿಸಿದೆ ಮತ್ತು ಇರಾನ್ ರಾಜ್ಯ ಮಾಧ್ಯಮವು ನಡೆಸಿದ ಹೇಳಿಕೆಯಲ್ಲಿ ಖಾದೇಮಿಯ ಸಾವನ್ನು ದೃಢಪಡಿಸಿದೆ.ದಾಳಿ ನಡೆಸಿದ ಸ್ಥಳದ ಬಗ್ಗೆ ವಿವರಗಳನ್ನು ಒದಗಿಸಲಾಗಿಲ್ಲ. ಮತ್ತೊಬ್ಬ ಹಿರಿಯ ಐಆರ್ಜಿಸಿ ಅಧಿಕಾರಿಯೊಂದಿಗೆ ಖದೇಮಿಯನ್ನು ಗುರಿಯಾಗಿಸುವ ಮತ್ತು ನಿರ್ಮೂಲನೆ ಮಾಡುವ ಜವಾಬ್ದಾರಿಯನ್ನು ಇಸ್ರೇಲ್ ವಹಿಸಿಕೊಂಡಿದೆ.
ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣವೇ ಮುಖ್ಯವಾಗಿದೆ. ಇದರಿಂದ ಪ್ರಜಾಪ್ರಭುತ್ವ ನಿರ್ನಾಮವಾಗಲಿದೆ. ಒಂದೇ ಕುಟುಂಬಕ್ಕೆ ಯಾಕೆ ಮನ್ನಣೆ ಕೊಡಬೇಕು ಎಂದು ಈ ಬಾರಿ ಚಿಂತಿಸಿರುವ ಮತದಾರರು ಬಿಜೆಪಿಗೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹೇಳಿದ್ದಾರೆ.ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಯಲ್ಲಿ ತಾತ ಇದ್ದಾಗ ಅವರು ಶಾಸಕರು ಹಾಗೂ ಮಂತ್ರಿಯಾಗಿದ್ದರು. ಈಗ ಮಗ ಶಾಸಕರು ಹಾಗೂ ಮಂತ್ರಿಯಾಗಿದ್ದಾರೆ. ಅವರ ಪತ್ನಿ ಸಂಸದರು. ಇದರ ಜೊತೆಗೆ ಅವರ ಮಗನೂ ಶಾಸಕನಾಗಬೇಕು ಎಂದು ಟಿಕೆಟ್ ನೀಡಿದ್ದಾರೆ. ಹೀಗೆ ಅವರ ಕುಟುಂಬಕ್ಕೇ ಟಿಕೆಟ್ ನೀಡಿ ದಾವಣಗೆರೆ ಕಬ್ಜಾ ಮಾಡಲು ಮುಂದಾಗಿದ್ದಾರೆ.
ದಾವಣಗೆರೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಬಯಸಿ ರಾಜಕಾರಣದಲ್ಲಿರುವುದು ತಪ್ಪಲ್ಲ. ಆದರೆ ಜನ ತಿರಸ್ಕರಿಸಿದರೂ ಕುಟುಂಬ ರಾಜಕಾರಣ ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಈ ಸಂಬಂಧ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಇಬ್ಬರು ಮಕ್ಕಳು, ಸೊಸೆಯಂದಿರು, ನಾಲ್ವರು ಮೊಮ್ಮಕ್ಕಳು ರಾಜಕಾರಣದಲ್ಲಿದ್ದಾರೆ. ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯನ್ನು ಯಾರೂ ಬಯಸಿರಲಿಲ್ಲ. ಮತದಾರರು ತಿರಸ್ಕಾರಿಸಿದ ಬಳಿಕವೂ ಪಾಠ ಕಲಿತಿಲ್ಲ ಎಂದು ತಮ್ಮ ಅಭಿಪ್ರಾಯ ಹೊರಹಾಕಿದರು.
ಬೆಂಗಳೂರು: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಬಿಜೆಪಿಗೆ ದೊಡ್ಡ ಅಂತರದ ಗೆಲುವು ಸಿಗಲಿದೆ. ಕಾಂಗ್ರೆಸ್ಗೆ ಎರಡೂ ಕಡೆ ಸಮಸ್ಯೆಗಳಿವೆ. ದಾವಣಗೆರೆಯಲ್ಲಿ ಮುಸ್ಲಿಮರು ಓಟ್ ಹಾಕಲ್ಲ ಅಂತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಸೋಲುವ ಸುಳಿವು ಸಿಕ್ಕ ಕೂಡಲೇ ಕೇರಳಕ್ಕೆ ಹೋದ ಮುಖ್ಯಮಂತ್ರಿ ಬಾಗಲಕೋಟೆಗೆ ದೌಡಾಯಿಸಿದ್ದಾರೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಭವೃದ್ಧಿ ಮಾಡಿದ್ದರೆ, ಗ್ಯಾರಂಟಿಗಳನ್ನು ಸರಿಯಾಗಿ ಕೊಟ್ಟಿದ್ದರೆ ಇಷ್ಟು ಕಷ್ಟ ಯಾಕೆ ಪಡಬೇಕಿತ್ತು.
ನವದೆಹಲಿ: ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು ಅವರಿಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ ನೀಡಿದೆ. ವಿವಿಧ ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆಗಳನ್ನು ಕುಟುಂಬಸ್ಥರ ಕಂಪನಿಗಳಿಗೆ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿದೆ. ಸರ್ಕಾರಿ ಗುತ್ತಿಗೆಗಳನ್ನು ಸಿಎಂ ಮತ್ತು ಅವರ ಆಪ್ತ ಕುಟುಂಬ ಸದಸ್ಯರಿಗೆ ಕಾನೂನುಬಾಹಿರವಾಗಿ ನೀಡಲಾಗಿದೆ ಎಂದು ಆರೋಪಿಸಿ ಎನ್ಜಿಒಗಳು, ಸೇವ್ ಮಾನ್ ರೀಜನ್ ಫೆಡರೇಶನ್ ಹಾಗೂ ವಾಲಂಟರಿ ಅರುಣಾಚಲ ಸೇನಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ನ್ಯಾ. ವಿಕ್ರಮ್ ನಾಥ್ ನೇತೃತ್ವದ ಪೀಠ ಈ ಆದೇಶವನ್ನು ನೀಡಿದೆ.ಈ ಆರೋಪದ ಕುರಿತು ನಾವು ಸಿಬಿಐಗೆ ಪ್ರಾಥಮಿಕ ತನಿಖೆ ನಡೆಸುವಂತೆ ಆದೇಶಿಸುತ್ತೇವೆ.
ಬೆಂಗಳೂರು: ಬಾರ್ನಲ್ಲಿ ನಡೆದ ಗಲಾಟೆಯಲ್ಲಿ ಬಿಯರ್ ಬಾಟಲಿಯಿಂದ ಚಿತ್ರನಟರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಡೆಯ ಚಿತ್ರದಲ್ಲಿ ನಟ ದರ್ಶನ್ ಅವರ ತಮ್ಮನ ಪಾತ್ರದಲ್ಲಿ ನಟಿಸಿದ್ದ ನಿರಂಜನ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಬಾರ್ನಲ್ಲಿ ನಡೆದ ಗಲಾಟೆಯಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ.ಮಾರ್ಚ್ 28ರಂದು ಸ್ನೇಹಿತ ಯಶಸ್ ಸೂರ್ಯ ಅವರ ಮನೆಯಿಂದ ಉತ್ತರಹಳ್ಳಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದೆ. ಮಂತ್ರಿ ಆಲೈನ್ ಬಳಿ ಬಂದಾಗ ನೀರು ಕುಡಿಯಬೇಕು ಅನಿಸಿದ್ದರಿಂದ ಪಕ್ಕದಲ್ಲಿ ಇದ್ದ ಬಾರ್ ಆ್ಯಂಡ್ ಕಿಚನ್ ಬಳಿ ಹೋಗಿ ನೀರನ್ನು ತೆಗೆದುಕೊಳ್ಳುತ್ತಿರಬೇಕಾದರೆ, ಯಾರೋ ಒಬ್ಬ ವ್ಯಕ್ತಿ ಬಂದು ತನ್ನನ್ನು ತಳ್ಳಿದ. ಆಗ ನಾನು ಆತನಿಗೆ ಯಾಕೆ ನನ್ನನ್ನು ತಳ್ಳುತ್ತೀಯಾ ಎಂದು ಕೇಳಿದ್ದೆ.
ಬೆಂಗಳೂರು: ಸಿದ್ದರಾಮಯ್ಯ ಅವರು 2028ರ ವಿಧಾನಸಭೆ ಚುನಾವಣೆವರೆಗೆ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.2023ರಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಎಂದು ಪಕ್ಷದ ಹೈಕಮಾಂಡ್ ಘೋಷಣೆ ಮಾಡಿತ್ತು. ಅದರ ಅವಧಿ 2028ರ ವರೆಗೆ ಇದೆ. ಹೈಕಮಾಂಡ್ ನೀವೇ 5 ವರ್ಷ ಸಿಎಂ ಎಂದು ಪ್ರತ್ಯೇಕವಾಗಿ ಸ್ಪಷ್ಟೀಕರಣ ಕೊಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.2013ರಲ್ಲಿ ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿರಲಿಲ್ಲ. ಆದರೂ ಅವರು ಐದು ವರ್ಷ ಸಿಎಂ ಆಗಿದ್ದರು. ಈ ಬಾರಿಯೂ ಪೂರ್ಣಾವಧಿ ಮುಗಿಸಬೇಕು ತಾನೇ ಎಂದು ಮೈಸೂರಿನಲ್ಲಿ ಹೇಳಿದರು.
ಬಾಗಲಕೋಟೆ: ಬೂತ್ ಮಟ್ಟದಲ್ಲಿ ನಾವು ಜನರ ಕಣ್ಣೀರನ್ನು ಒರೆಸುವ ಕೆಲಸ ಮಾಡಬೇಕು. ಜನರಿಗೆ ಸರಕಾರದ ಯೋಜನೆಗಳನ್ನು ತಲುಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.ಇಂದು ಇಲ್ಲಿನ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ ಬಿಜೆಪಿ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿರಿಯರ ಅನುಭವದ ಜೊತೆ ಯುವಕರ ಉತ್ಸಾಹ ಸೇರಿದರೆ ಸಂಘಟನೆ ಬಲಿಷ್ಠವಾಗಲು ಸಾಧ್ಯ ಎಂದು ಅವರು ವಿಶ್ಲೇಷಿಸಿದರು. ನಮ್ಮದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂದು ಅವರು ನುಡಿದರು.
ಬೆಂಗಳೂರು: ಅನ್ಯ ರಾಜ್ಯದಿಂದ ಬೆಂಗಳೂರಿಗೆ ನಸುಕಿನ ಜಾವ ಬಂದಿಳಿದಿದ್ದ ಈ ಯುವತಿಗೆ ಆದ ಅನುಭವ ಕೇಳಿದರೆ ರಾಪಿಡೊ ಚಾಲಕರು ಮತ್ತು ಬಿಎಂಟಿಸಿ ಬಸ್ ನೌಕರರ ಬಗ್ಗೆ ಹೆಮ್ಮೆಯಾಗುತ್ತದೆ. ಯುವತಿಯೊಬ್ಬಳು ಬೆಂಗಳೂರು ಏರ್ ಪೋರ್ಟ್ ನಲ್ಲಿ ಬೆಳ್ಳಂ ಬೆಳಿಗ್ಗೆ ಬಂದು ಇಳಿದ ಬಳಿಕ ಕಾಡುಗೋಡಿ ಬಸ್ ಹತ್ತಿದ್ದಳು. ಕಾಡುಗೋಡಿ ಬಸ್ ಇಳಿದಾಗ ಬೆಳಿಗ್ಗಿನ ಜಾವ 3 ಗಂಟೆಯಷ್ಟೇ. ಆ ಸಂದರ್ಭದಲ್ಲಿ ಆಕೆ ಹೋಗಬೇಕಾದ ಸ್ಥಳಕ್ಕೆ ಯಾವುದೇ ಕ್ಯಾಬ್ ಸಿಗುತ್ತಿರಲಿಲ್ಲ. ಹೀಗಾಗಿ ಬಿಎಂಟಿಸಿ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಆಕೆಗೆ ಕ್ಯಾಬ್ ಸಿಗುವವರೆಗೂ ಅಲ್ಲಿಯೇ ನಿಂತಿದ್ದರು. ಕೊನೆಗೂ ಯುವತಿಗೆ ರಾಪಿಡೋ ಬೈಕ್ ಒಂದು ಸಿಕ್ಕಿದೆ.
ದಾವಣಗೆರೆ: ಈ ಉಪ ಚುನಾವಣೆಗಳು ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳಿಗೆ ಕಬ್ಬಿಣದ ಕಡಲೆ ಆಗಿ ಪರಿವರ್ತನೆ ಆಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.ಇಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಗ್ಯಾರಂಟಿಯ ಮುಖವಾಡ ಧರಿಸಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದರು. ಈ ಉಪ ಚುನಾವಣೆಗಳು ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳಿಗೆ ಕಬ್ಬಿಣದ ಕಡಲೆ ಆಗಿ ಪರಿವರ್ತನೆ ಆಗಿವೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ- ಇವೆರಡರ ಪೈಕಿ ಯಾವ ಕ್ಷೇತ್ರ ಉಳಿಸಿಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಅವರ ಸಚಿವಸಂಪುಟದ ಸದಸ್ಯರು ಗಲಿಬಿಲಿಗೊಂಡಿದ್ದಾರೆ ಎಂದು ವಿಶ್ಲೇಷಿಸಿದರು.
ಇಸ್ಲಾಮಾಬಾದ್: ಶೀಘ್ರದಲ್ಲೇ ಪಾಕಿಸ್ತಾನ ಕ್ರಿಕೆಟ್ ಲೀಗ್ ವಿಶ್ವದ ನಂ1 ಶ್ರೀಮಂತ ಕ್ರಿಕೆಟ್ ಲೀಗ್ ಆಗಲಿದೆ ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳಿದ್ದು ಇದು ವರ್ಷದ ಜೋಕ್ ಎಂದು ಭಾರತೀಯರು ಕಾಲೆಳೆದಿದ್ದಾರೆ. ಪಾಕಿಸ್ತಾನಕ್ಕೆ ತಿನ್ನಲು ಗತಿಯಿಲ್ಲದಿದ್ದರೂ ಭಾರತವನ್ನು ಮೀರಿಸುವ ಧಾವಂತ. ಕ್ರಿಕೆಟ್ ನಲ್ಲೂ ಅಷ್ಟೇ. ಭಾರತದ ಐಪಿಎಲ್ ಗೆ ಪರ್ಯಾಯವಾಗಿ ಪಿಎಸ್ಎಲ್ ಎಂಬ ಕ್ರಿಕೆಟ್ ಲೀಗ್ ಕಟ್ಟಿಕೊಂಡು ಸಾಕಷ್ಟು ಬಾರಿ ಟ್ರೋಲ್ ಗೊಳಗಾಗಿದೆ. ಇದೀಗ ಮೊಹ್ಸಿನ್ ನಖ್ವಿ ಶೀಘ್ರದಲ್ಲೇ ನಮ್ಮ ಪಿಎಸ್ಎಲ್ ವಿಶ್ವದ ನಂ.1 ಕ್ರಿಕೆಟ್ ಲೀಗ್ ಆಗುತ್ತದೆ ಎಂದಿದ್ದಾರೆ. ಅವರ ಹೇಳಿಕೆಗೆ ನೆಟ್ಟಿಗರು ಇದಪ್ಪಾ ಜೋಕ್ ಎಂದರೆ ಎಂದು ತಮಾಷೆ ಮಾಡಿದ್ದಾರೆ.
ನ್ಯೂಯಾರ್ಕ್: ತನ್ನ ಬೆದರಿಕೆಗೆಲ್ಲಾ ಜಗ್ಗದೇ ಹೊರ್ಮುಜ್ ಜಲಸಂಧಿ ತೆರೆಯದೇ ಕೂತಿರುವ ಇರಾನ್ ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೈನಲ್ ವಾರ್ನಿಂಗ್ ಕೊಟ್ಟಿದ್ದಾರೆ.ಇರಾನ್ ನ್ನು ಇತರೆ ರಾಷ್ಟ್ರಗಳಂತೆ ಸುಲಭವಾಗಿ ಬಗ್ಗಿಸಬಹುದು ಎಂದುಕೊಂಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಈಗ ಅದು ಅಷ್ಟು ಸುಲಭವಲ್ಲ ಎಂದು ಗೊತ್ತಾಗಿದೆ. ಹೊರ್ಮುಜ್ ಜಲಸಂಧಿ ತೆರೆಯಲು ಟ್ರಂಪ್ ಏನೇನೋ ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ. ಹೊರ್ಮುಜ್ ಜಲಸಂಧಿಯನ್ನು ಇರಾನ್ ತೆರೆಯದೇ ಇರುವುದು ಅಮೆರಿಕಾಗೆ ಪ್ರತಿಷ್ಠೆಯ ವಿಚಾರವಾಗಿದೆ. ತನ್ನ ಬೆದರಿಕೆಗೆ ಮಣಿಯದ ಇರಾನ್ ಮುಂದೆ ಸೋತರೆ ವಿಶ್ವದ ಮುಂದೆ ತನ್ನ ಪ್ರತಿಷ್ಠೆ ಮಣ್ಣುಪಾಲಾಗುತ್ತದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಏರಿಕೆಯಾಗಿದೆ ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ವಾರಂತ್ಯಕ್ಕೆ ಪರಿಶುದ್ಧ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿತ್ತು. ಪರಿಶುದ್ಧ ಚಿನ್ನದ ದರ ವಾರಂತ್ಯಕ್ಕೆ 1,51,650.00 ರೂ.ಗಳಿತ್ತು. ಆದರೆ ಇಂದು ಏರಿಕೆಯಾಗಿದ್ದು 1,53,675.00 ರೂ.ಗಳಷ್ಟಿದೆ.
ಸದಾ ಶಿಸ್ತಿನಲ್ಲೇ ಇರುವ ಸೇನಾ ನಾಯಿಯೊಂದಕ್ಕೆ 30 ಸೆಕೆಂಡ್ ಫ್ರೀ ಟೈಂ ಕೊಟ್ಟಾಗ ಅದು ಹೇಗೆ ಕುಣಿದು ಕುಪ್ಪಳಿಸಿತು ಗೊತ್ತಾ? ಇಂತಹದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಮ್ಮ ಸೇನೆಯಲ್ಲಿ ಕೇವಲ ಮನುಷ್ಯರು ಮಾತ್ರವಲ್ಲ, ನಾಯಿಗಳೂ ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡುತ್ತವೆ. ಸೇನೆ, ಪೊಲೀಸ್ ಇಲಾಖೆಯಲ್ಲಿ ಶ್ವಾನ ದಳಗಳೂ ಪ್ರಮುಖ ಅಂಗಗಳು. ಅವುಗಳು ಮನುಷ್ಯರಂತೇ ಶಿಸ್ತಿನಲ್ಲಿರುತ್ತವೆ. ಅಧಿಕಾರಿಗಳು ಕೊಡುವ ನಿರ್ದೇಶನಗಳನ್ನು ಪಾಲಿಸಲು ಅವರಿಗೆ ತರಬೇತಿ ನೀಡಲಾಗಿರುತ್ತದೆ. ಆದರೆ ಎಷ್ಟೇ ಆದರೂ ಅವುಗಳೂ ಪ್ರಾಣಿಗಳು. ಅತಿಯಾದ ಕಟ್ಟು ನಿಟ್ಟು ಬಹುಶಃ ಅವರಿಗೂ ಕೆಲವೊಮ್ಮೆ ಉಸಿರುಗಟ್ಟಿಸಬಹುದು.
ಸೀಬೆಕಾಯಿ ಕದ್ದು ತಿಂದ ತಪ್ಪಿಗೆ ಚಿಕ್ಕ ಹುಡುಗಿಯನ್ನು ಕಂಬಕ್ಕೆ ಅಮಾನವೀಯವಾಗಿ ಕಟ್ಟಿ ಹಾಕಿ ಕ್ರೌರ್ಯವೆಸಗಿದ ವಿಡಿಯೋವೊಂದು ಈಗ ವೈರಲ್ ಆಗಿದೆ. ಹಿಮಾಚಲ ಪ್ರದೇಶದಲ್ಲಿ ಉನಾದಲ್ಲಿ ಈ ಘಟನೆ ನಡೆದಿದೆ. ಚಿಕ್ಕವರಿದ್ದಾಗ ನಾವು ಅಕ್ಕಪಕ್ಕದ ಮನೆಯ ಮರದಿಂದ ಹಣ್ಣು, ಕಾಯಿ ಕಿತ್ತು ತಿನ್ನುವುದು ಸಾಮಾನ್ಯ. ಇದು ಮಕ್ಕಳ ತುಂಟಾಟವೂ ಹೌದು. ಆದರೆ ಅದಕ್ಕೆ ಮನೆಯಲ್ಲಿ ಏಟು ತಿಂದಿದ್ದೂ ಇದೆ. ಆದರೆ ಇಲ್ಲಿ ಇದು ಇನ್ನೊಂದು ಹಂತಕ್ಕೆ ಹೋಗಿದೆ. ಓರ್ವ ಪುಟಾಣಿ ಬಾಲಕಿ ಪಕ್ಕದ ಮನೆಯ ನಿವೃತ್ತ ಸೇನಾಧಿಕಾರಿಯೊಬ್ಬರ ಮನೆಯ ಮರದಿಂದ ಸೀಬೆಕಾಯಿ ಕಿತ್ತು ತಿಂದಿದ್ದಕ್ಕೆ ಆಕೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.
ನಾಗ್ಪುರ: ಹೆಲ್ಮೆಟ್ ಹಾಕದೇ ಬೈಕ್ ಚಲಾಯಿಸಿದ್ದಲ್ಲದೇ ನಾಗರಿಕರೊಬ್ಬರು ಪ್ರಶ್ನೆ ಮಾಡಿದ್ದಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ದರ್ಪ ಮೆರೆದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ನಾಗ್ಪುರದಲ್ಲಿ. ಸಂಚಾರ ನಿಯಮದ ಬಗ್ಗೆ ಅಧಿಕಾರಿಗಳು ಜನರಲ್ಲಿ ಅರಿವು ಮೂಡಿಸಬೇಕು. ಆದರೆ ಕೆಲವೊಮ್ಮೆ ನಾಗರಿಕರಿಗೆ ಬುದ್ಧಿ ಹೇಳಬೇಕಾದ ಪೊಲೀಸರೇ ನಿಯಮಗಳನ್ನು ಪಾಲಿಸುವುದಿಲ್ಲ. ಅದಕ್ಕೆ ಸರಿಯಾದ ಉದಾಹರಣೆ ಈ ಘಟನೆ. ಓರ್ವ ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲಿರುವಾಗಲೇ ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸುತ್ತಾ ಸಾಗುತ್ತಿರುತ್ತಾರೆ.
ನವದೆಹಲಿ: ಕೇರಳ ಚುನಾವಣೆ ಪ್ರಚಾರದ ವೇಳೆ ಗುಜರಾತಿಗಳು ಅನಕ್ಷರಸ್ಥರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವಮಾನ ಮಾಡಿದ್ದಾರೆ. ಕೇರಳವನ್ನು ಹೊಗಳುವ ಭರದಲ್ಲಿ ಮಲ್ಲಿಕಾರ್ಜುನ ಖರ್ಗೆ ಗುಜರಾತಿಗಳನ್ನು ಅವಮಾನ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಕೇರಳ ಚುನಾವಣೆ ಪ್ರಚಾರದ ವೇಳೆ ಮಲ್ಲಿಕಾರ್ಜುನ ಖರ್ಗೆ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಈ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ‘ಮೋದಿ ನೀವು ಅನಕ್ಷರಸ್ಥ ಗುಜರಾತಿಗಳನ್ನು ಮೂರ್ಖರನ್ನಾಗಿಸಬಹುದು, ಆದರೆ ಸುಶಿಕ್ಷಿತ ಕೇರಳೀಯರನ್ನು ಯಾವತ್ತೂ ಮೂರ್ಖರಾಗಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರು: ಐಪಿಎಲ್ 2026 ರಲ್ಲಿ ನಿನ್ನೆ ಸಿಎಸ್ ಕೆ ವಿರುದ್ಧ ಟಿಮ್ ಡೇವಿಡ್ ಮೈದಾನದಾಚೆ ಹೊಡೆದ ಬಾಲ್ ಹುಡುಕಿ ಪಡೆದ ಫ್ಯಾನ್ಸ್ ಯಾರು ವಿಡಿಯೋ ನೋಡಿ. ಸಿಎಸ್ ಕೆ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ 250 ರನ್ ಗಳಿಸಿತ್ತು. ಅದರಲ್ಲೂ ಡೆತ್ ಓವರ್ ಗಳಲ್ಲಿ ಟಿಮ್ ಡೇವಿಡ್ ಅಬ್ಬರಕ್ಕೆ ಮೈದಾನದಲ್ಲಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದರು. ಎದುರಾಳಿ ಬೌಲರ್ ಗಳು ಸುಸ್ತಾಗಿ ಹೋಗಿದ್ದರು. ಅದರಲ್ಲೂ ಒಂದು ಎಸೆತವನ್ನಂತೂ ಟಿಮ್ ಡೇವಿಡ್ ಬೀಸಿ ಹೊಡೆದ ರಭಸಕ್ಕೆ ಬಾಲ್ ಮೈದಾನದ ಛಾವಣಿಯನ್ನೂ ದಾಟಿ ಹೊರಗೆ ಹಾರಿತ್ತು.
ಚಂದ್ರ ದೋಷವಿದ್ದಾಗ ಪರಿಣಾಮ ಕಡಿಮೆ ಮಾಡಲು ನಾವು ಯಾವ ಬಣ್ಣದ ಬಟ್ಟೆ ಧರಿಸಬೇಕು ಮತ್ತು ಯಾವ ಬಟ್ಟೆಯನ್ನು ಅವಾಯ್ಡ್ ಮಾಡಬೇಕು ಎಂಬ ವಿವರ ಇಲ್ಲಿದೆ ನೋಡಿ. ಜಾತಕದಲ್ಲಿ ಚಂದ್ರ ಗ್ರಹ ದೋಷವಿದ್ದಾಗ ಬಿಳಿ ಬಣ್ಣದ ಬಟ್ಟೆ ಧರಿಸುವುದು ಸೂಕ್ತ. ಯಾಕೆಂದರೆ ಚಂದ್ರ ಬಿಳಿ ಬಣ್ಣವನ್ನು ಪ್ರತಿನಿಧಿಸುತ್ತಾನೆ. ಈ ಬಣ್ಣದ ಬಟ್ಟೆಗಳನ್ನು ವಿಶೇಷವಾಗಿ ಸೋಮವಾರಗಳಂದು ತೊಟ್ಟುಕೊಳ್ಳುವುದರಿಂದ ಪ್ರಭಾವ ಕಡಿಮೆಯಾಗುತ್ತದೆ. ಬಿಳಿ ಮತ್ತು ರಜತ ಬಣ್ಣದ ಶೇಡ್ ಇರುವ ಬಟ್ಟೆ ಧರಿಸಬೇಕು. ಬಿಳಿ ಬಣ್ಣದ ಜೊತೆಗೆ ತೆಳು ನೀಲಿ ಅಥವಾ ತೆಳು ಬೂದು ಬಣ್ಣವಿದ್ದರೂ ಸಮಸ್ಯೆಯಿಲ್ಲ. ಈ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಮಾನಸಿಕವಾಗಿ ಶಾಂತಿ, ಸುಖ, ನೆಮ್ಮದಿ ಸಿಗುತ್ತದೆ.
ಬೆಂಗಳೂರು: ಐಪಿಎಲ್ 2026 ರ ನಿನ್ನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 43 ರನ್ ಗಳಿಂದ ಸೋಲಿಸಿದ ಆರ್ ಸಿಬಿ ಹಲವು ದಾಖಲೆಗಳನ್ನೇ ಮಾಡಿದೆ.ಆ ದಾಖಲೆಗಳ ಪಟ್ಟಿ ಇಲ್ಲಿದೆ ನೋಡಿ. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ಟಿಮ್ ಡೇವಿಡ್, ರಜತ್ ಪಾಟೀದಾರ್ ಅಬ್ಬರದ ಬ್ಯಾಟಿಂಗ್ ನಿಂದಾಗಿ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್ ಕಲೆ ಹಾಕಿತ್ತು. ಇದಕ್ಕೆ ಉತ್ತರವಾಗಿ ಸಿಎಸ್ ಕೆ 19.4 ಓವರ್ ಗಳಲ್ಲಿ 207 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತ್ತು.
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ವಾರ ಅಲ್ಲಲ್ಲಿ ಮಳೆಯಾಗಿತ್ತು. ಈ ವಾರವೂ ಮಳೆಯ ಸಾಧ್ಯತೆಯಿದೆಯಾ, ಇಲ್ಲಿದೆ ವಾರದ ಹವಾಮಾನ ವರದಿ. ಬಿರು ಬೇಸಿಗೆಯ ನಡುವೆ ಕರಾವಳಿ, ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಕಳೆದ ವಾರ ಗುಡುಗು ಸಹಿತ ಮಳೆಯಾಗಿತ್ತು. ಇದರಿಂದ ವಾತಾವರಣ ಕೊಂಚ ತಂಪಾಗಿತ್ತು. ವಾರಂತ್ಯದಲ್ಲೂ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಆದರೆ ಈ ವಾರ ಮಳೆಯ ಸೂಚನೆಯಿಲ್ಲ. ಈ ವಾರಂತ್ಯಕ್ಕೆ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಬಿಟ್ಟರೆ ಉಳಿದ ದಿನಗಳಲ್ಲಿ ಮಳೆಯ ಸೂಚನೆಯಿಲ್ಲ. ಕರ್ನಾಟಕದಲ್ಲಿ ಈ ವಾರ ಗರಿಷ್ಠ ತಾಪಮಾನ 34 ಡಿಗ್ರಿಯಷ್ಟು ಕಂಡುಬರಲಿದೆ.