ಬೆಂಗಳೂರು: ಈ ಬಾರಿಯ ಪಿಯು ಪರೀಕ್ಷೆಯಲ್ಲಿ 5,46,698 ವಿದ್ಯಾರ್ಥಿಗಳು ಪಾಸ್ ಆಗಿದ್ದು, ಕರ್ನಾಟಕಕ್ಕೆ ಮೊದಲ ಬಾರಿ ಶೇ.86.48 ಫಲಿತಾಂಶ ಬಂದಿದ್ದು, ಇದು ಐತಿಹಾಸಿಕ ದಿನ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಖುಷಿ ವ್ಯಕ್ತಪಡಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 6,32,200 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5,46,698 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಪೈಕಿ 2,32,928 ( 83.65%) ಬಾಲಕರು, 3,13,770 (88.70%) ಬಾಲಕಿಯರು ಉತ್ತೀರ್ಣರಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದರು.ಕಲಾ ವಿಭಾಗದಲ್ಲಿ 98,310 (72.86%) ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 1,82,317(88.04%) ವಿದ್ಯಾರ್ಥಿಗಳು
ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲಿನ ಶಿಕ್ಷಾ ಬಂಧಿಯೊಬ್ಬ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ನಲ್ಲಿ ತೇರ್ಗಡಿಯಾಗಿದ್ದಾನೆ. ಅಶೋಕ್ ಕುಮಾರ್ ಎಂಬ ಶಿಕ್ಷಾಬಂಧಿ 600ಕ್ಕೆ 481 ಅಂಕಗಳನ್ನು ಪಡೆದು ಸಾಧನೆಯನ್ನು ಮಾಡಿದ್ದಾರೆ.ಕನ್ನಡದಲ್ಲಿ 82, ಇಂಗ್ಲಿಷ್ 69, ಇತಿಹಾಸ 94, ಅರ್ತಶಾಸ್ತ್ರ 84, ಸಮಾಜಶಾಸ್ತ್ರ 77, ರಾಜ್ಯಶಾಸ್ತ್ರ75 ಅಂಕ ಗಳಿಸಿದ್ದಾನೆ. ಇನ್ನು ಅಶೋಕ್ ಕುಮಾರ್ಗೆ ಪ್ರತ್ಯೇಕ ಸೆಲ್ನಲ್ಲಿ ಅಭ್ಯಾಸವನ್ನು ಮಾಡುತ್ತಿದ್ದ.
ಬೆಂಗಳೂರು: ಹವಾಮಾನ ಇಲಾಖೆಯು ಬೆಂಗಳೂರಿನ ವಾರಾಂತ್ಯದಲ್ಲಿ ತಾಪಮಾನವು ತೀವ್ರವಾಗಿ ಏರುತ್ತದೆ ಎಂದು ಮುನ್ಸೂಚನೆಯನ್ನು ನೀಡಿದೆ. ಭಾನುವಾರದ ಆಸುಪಾಸಿನಲ್ಲಿ ಗರಿಷ್ಠ ಮಟ್ಟವನ್ನು ಸೂಚಿಸುತ್ತವೆ ಮತ್ತು ವಾರದ ಮಧ್ಯದವರೆಗೆ ಶಾಖವನ್ನು ಮುಂದುವರಿಸುತ್ತವೆ. ನಗರವು ಪೂರ್ವ-ಮಾನ್ಸೂನ್ ಬಿಸಿಲ ಝಳಕ್ಕೆ ಆರೋಗ್ಯದಲ್ಲಿ ಏರುಪೇರುಗಳನ್ನು ಅನುಭವಿಸುವ ಸಾಧ್ಯತೆಯಿದೆ. ಏಪ್ರಿಲ್ 10 ಮತ್ತು ಏಪ್ರಿಲ್ 15 ರ ನಡುವಿನಲ್ಲಿ ತಾಪಮಾನದಲ್ಲಿ ಭಾರೀ ಏರಿಕೆಯನ್ನು ಅನುಭವಿಸುವ ಸಾಧ್ಯತೆಯಿದೆ.
ಬೀದರ್: ಸಿಎಂ ಸಿದ್ದರಾಮಯ್ಯ ಅವರು ಇದೇ 11ರಂದು ಬೀದರ್ ಹಾಗೂ ಕಲಬುರಗಿ ಜಿಲ್ಲಾ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.ಏ.11ರಂದು ಬೀದರ್ನಲ್ಲಿ ನಡೆಯಲಿರುವ 40ನೇ ಪತ್ರಕರ್ತರ ಸಮ್ಮೇಳನದಲ್ಲಿ ಭಾಗಿಯಾಗಿ ಉದ್ಘಾಟನೆ ಮಾಡಲಿದ್ದಾರೆ. ನಂತರ ಬೀದರ್ನಿಂದ ಕಲಬುರಗಿಗೆ ತಮ್ಮ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.ಈ ವೇಳೆ ಕಲಬುರಗಿಯ ಚಿತ್ತಾಪುರದಲ್ಲಿ ನೂತನವಾಗಿ ನಿರ್ಮಿಸಿರುವ ಭೋಜಲಿಂಗೇಶ್ವರರ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಮಂಗಳೂರು: ರಾಜ್ಯದ ವಿವಿಧ ಬಂಕ್ಗಳಲ್ಲಿ ಗ್ಯಾಸ್ ಸ್ಟಾಕ್ ಕೊರತೆ ಇದೆ ಎಂಬ ಸುಳ್ಳು ಮಾಹಿತಿಯನ್ನಾಧರಿಸಿ ಕಳೆದ ಕೆಲವು ದಿನಗಳಿಂದ ಆಟೊ ಗ್ಯಾಸ್ ಬಂಕ್ಗಳ ಮುಂದೆ ಆಟೊ ಮಾಲೀಕರು ಹಾಗೂ ಚಾಲಕರು ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ, ಇಂತಹ ವದಂತಿಗಳಿಗೆ ಗಮನ ಕೊಡಬೇಡಿ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಕೆಲವು ಖಾಸಗಿ ಆಟೋ ಗ್ಯಾಸ್ ಸರಬರಾಜು ಏಜೆನ್ಸಿಗಳಲ್ಲಿ ಮಾತ್ರ ಸಣ್ಣ ಕೊರತೆ ಕಂಡುಬಂದಿದೆ ಮತ್ತು ಇದನ್ನು ಪರಿಹರಿಸಲು
ಬೆಂಗಳೂರು: ತಾನು ಪ್ರೀತಿ ಮಾಡಿದ ಹುಡುಗಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ಈಚೆಗಷ್ಟೇ ಖಾಸಗಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮುಗಿಸಿದ್ದ. ಸದ್ಯ ಘಟನಾ ಸ್ಥಳಕ್ಕೆ ಯಲಹಂಕ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಚೆನ್ನೈ: ಏಪ್ರಿಲ್ 23 ರಂದು ತಮಿಳುನಾಡು ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗುರುವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, “ತಮಿಳುನಾಡನ್ನು ಪರಿವರ್ತಿಸುವ” ಗುರಿಯನ್ನು ಹೊಂದಿದೆ. ಉದ್ಯೋಗ, ಸಾರ್ವಜನಿಕ ಸುರಕ್ಷತೆ, ಆರೋಗ್ಯ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಚುನಾವಣಾ ದಾಖಲೆಯ ಮುಖ್ಯಾಂಶಗಳಲ್ಲಿ ಒಂದು ಸಾರ್ವತ್ರಿಕ ಮೂಲ ಆದಾಯದ ಭರವಸೆಯಾಗಿದೆ.
ಮುಂಬೈ: ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವಿನಿಂದ ತೆರವಾದ ಬಾರಾಮತಿ ವಿಧಾನಸಭಾ ಉಪಚುನಾವಣೆಯಿಂದ ಕಾಂಗ್ರೆಸ್ ಹಿಂದೆ ಸರಿದಿದೆ. ಇದರಿಂದಾಗಿ ಸುನೇತ್ರಾ ಪವಾರ್ ಅವರ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ.ಎನ್ಸಿಪಿ ನಾಯಕ ಅಜಿತ್ ಪವಾರ್ ಅಕಾಲಿಕ ನಿಧನದ ಬಳಿಕ ತೆರವಾದ ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣದಿಂದ ಕೊನೆಗೂ ಕಾಂಗ್ರೆಸ್ ಹಿಂದೆ ಸರಿದಿದೆ. ಹೀಗಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಕಾಂಗ್ರೆಸ್, ಬಾರಾಮತಿ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದು, ಈ ಮೂಲಕ ಸುನೇತ್ರಾ ಪವಾರ್ ಅವರ ಅವಿರೋಧ ಆಯ್ಕೆಗೆ ದಾರಿ ಮಾಡಿಕೊಟ್ಟಿದೆ.
ಬೆಂಗಳೂರು: ಆಘಾತಕಾರಿ ಹಗಲು ದರೋಡೆ: ಇಬ್ಬರು ಕಳ್ಳರು, ಒಂದು ಕ್ರೂರ ಟ್ರಿಕ್ಇಬ್ಬರು ಹೃದಯಹೀನ ಕಳ್ಳರು ಅಸಹಾಯಕ ವಯಸ್ಸಾದ ಮಹಿಳೆಯೊಂದಿಗೆ ಸಿಹಿ ಸಂಭಾಷಣೆಯಲ್ಲಿ ತೊಡಗಿ, ಹಗಲು ಹೊತ್ತಿನಲ್ಲೇ ಆಕೆಯ ಚಿನ್ನದ ಸರವನ್ನು ಗಾಳಿಯಲ್ಲಿ ಮಾಯವಾಗುವಂತೆ ಮಾಡಿದ ಎರಗಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಆಘಾತಕಾರಿ ಸಿಸಿಟಿವಿ ದೃಶ್ಯಾವಳಿಗಳು ಇಡೀ ಘಟನೆಯನ್ನು ಛತ್ತರ್ಪುರದ ಕೊತ್ವಾಲಿ ಪೊಲೀಸ್ ಠಾಣೆಯ ಪಕ್ಕದಲ್ಲಿಯೇ ವರದಿಯಾಗಿದೆ.
ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಪಂದ್ಯದ ನಂ. 14 ರ ಸಮಯದಲ್ಲಿ ಅವರ ತಂಡವು ನಿಧಾನವಾದ ಓವರ್ ರೇಟ್ ಅನ್ನು ಕಾಪಾಡಿದ ಕಾರಣ ಗುಜರಾತ್ ಟೈಟಾನ್ಸ್ (ಜಿಟಿ) ನಾಯಕ ಶುಭಮನ್ ಗಿಲ್ ಅವರಿಗೆ ₹12 ಲಕ್ಷ ದಂಡ ವಿಧಿಸಲಾಗಿದೆ. ಆಟದ ವೇಗ, ಕನಿಷ್ಠ ಓವರ್-ರೇಟ್ ನಿಯಮಗಳ ಯಾವುದೇ ಉಲ್ಲಂಘನೆಗಾಗಿ ಪೆನಾಲ್ಟಿಗಳನ್ನು ಅನ್ವಯಿಸಲಾಗುತ್ತದೆ. TATA ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರ ಪಂದ್ಯದ ನಂ. 14ರ ಸಮಯದಲ್ಲಿ ಅವರ ತಂಡವು ನಿಧಾನವಾದ ಓವರ್-ರೇಟ್ ಅನ್ನು ನಿರ್ವಹಿಸಿದ ನಂತರ ಗುಜರಾತ್ ಟೈಟಾನ್ಸ್ (ಜಿಟಿ) ನಾಯಕ ಶುಬ್ಮನ್ ಗಿಲ್ ಅವರಿಗೆ ದಂಡ ವಿಧಿಸಲಾಗಿದೆ.
ಇಸ್ಲಾಮಾಬಾದ್: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಪಾಕಿಸ್ತಾನ ಕ್ರಿಕೆಟಿಗ ಬಾಬರ್ ಅಜಮ್ ಪತ್ರಿಕಾಗೋಷ್ಠಿಯಲ್ಲೇ ಸಿಟ್ಟಿಗೆದ್ದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ. ಪಿಎಸ್ಎಲ್ ಕ್ರಿಕೆಟ್ ಪಂದ್ಯಾವಳಿ ನಡುವೆ ಪತ್ರಿಕಾಗೋಷ್ಠಿಯೊಂದರಲ್ಲಿ ಬಾಬರ್ ಅಜಮ್ ಭಾಗಿಯಾಗಿದ್ದರು. ಈ ವೇಳೆ ಪತ್ರಕರ್ತರೊಬ್ಬರು ‘ವಿರಾಟ್ ಕೊಹ್ಲಿ ಕೂಡಾ ನಿಮ್ಮ ಹಾಗೇ ಶಾಟ್ ಗಳನ್ನು ಹೊಡೆಯುತ್ತಾರೆ. ಆದರೆ ಅವರು ಪಂದ್ಯಗಳನ್ನು ಮುಗಿಸುತ್ತಾರೆ, ಆದರೆ ನಿಮಗೆ ಅದು ಸಾಧ್ಯವಾಗುತ್ತಿಲ್ಲ. ಜನ ನಿಮ್ಮನ್ನು ಅವರಿಗೆ ಹೋಲಿಸುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಕೇಳುತ್ತಾರೆ.
ಬೆಂಗಳೂರು: ಕಾದು ಕುಳಿತಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು, ರಾಜ್ಯಕ್ಕೆ ಯಾವ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ ಎಂದು ಕುತೂಹಲ ಮೂಡಿಸಿದೆ. ಇನ್ನೂ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕವನ್ನು ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ದಿಶಾ ಪಡೆದು, ರಾಜ್ಯಕ್ಕೆ ಟಾಪರ್ ಆಗಿದ್ದಾರೆ.ಮಲ್ಲೇಶ್ವರಂನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ ಇಂದು ಸಂಜೆ 6:15ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ.
ರಕ್ತ ಪರೀಕ್ಷೆ ಮಾಡಿದಾಗ ಇಎಸ್ ಆರ್ ಕೌಂಟ್ ಹೆಚ್ಚಾಗಿದೆ ಎಂದರೆ ಏನು ಸಮಸ್ಯೆ ಎದುರಿಸಬೇಕಾಗುತ್ತದೆ ಮತ್ತು ಇದಕ್ಕೆ ಪರಿಹಾರವೇನು ಇಲ್ಲಿದೆ ನೋಡಿ ವಿವರ. ಇಎಸ್ಆರ್ ಎಂದರೇನು?ರಕ್ತ ಪರೀಕ್ಷೆಯಲ್ಲಿ ಇಎಸ್ಆರ್ ಎಂದರೆ ಕೆಂಪು ರಕ್ತಕಣಗಳು ಒಂದು ನಿರ್ದಿಷ್ಟ ಸಮಯದಲ್ಲಿ ಎಷ್ಟು ವೇಗವಾಗಿ ಕೆಳಕ್ಕೆ ಬಿದ್ದು ಸ್ಥಿರವಾಗುತ್ತದೆ ಎಂಬುದನ್ನು ಅಳೆಯವುದಾಗಿದೆ. ರಕ್ತದ ಮಾದರಿಯನ್ನು ಒಂದು ತಂತಿಯಂತಹ ಸಾಧನದಲ್ಲಿ ಇಟ್ಟು ಪರೀಕ್ಷಿಸಿದಾಗ ಅದು ಎಷ್ಟು ಎಂಎಂ ಎತ್ತರಕ್ಕೆ ಬಿದ್ದಿದೆ ಎಂಬುದನ್ನು ನೋಡಲಾಗುತ್ತದೆ. ಈ ಮೌಲ್ಯ ಹೆಚ್ಚಾದರೆ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಪ.ಬಂಗಾಳ: ಹಲ್ದಿಯಾದಲ್ಲಿ ಪ್ರಧಾನಿ ಮೋದಿ ಅವರು ಟಿಎಂಸಿಯನ್ನು ಹೊರಹಾಕಲು ಮತದಾರರಲ್ಲಿ ಮನವಿ ಮಾಡಿದರು. ಮಮತಾ ಬ್ಯಾನರ್ಜಿ ಸರ್ಕಾರವನ್ನು ಕ್ರೂರ ಸರ್ಕಾರ ಎಂದು ಕರೆದ ಅವರು ಭಯವನ್ನು ಕೊನೆಗೊಳಿಸುವುದು, ಭ್ರಷ್ಟಾಚಾರವನ್ನು ನಿಭಾಯಿಸುವುದು, 7 ನೇ ವೇತನ ಆಯೋಗ ಮತ್ತು ಮೀನುಗಾರಿಕೆಯನ್ನು ಉತ್ತೇಜಿಸುವುದು ಸೇರಿದಂತೆ ಆರು ಭರವಸೆಗಳನ್ನು ಘೋಷಿಸಿದರು. ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಮುಂದಿನ ಸರ್ಕಾರವನ್ನು ರಚಿಸಿದರೆ, ಆಡಳಿತಾರೂಢ ಅಖಿಲ
ಬೈರುತ್ನಲ್ಲಿ ರಾತ್ರಿಯಲ್ಲಿ ಇಸ್ರೇಲ್ ವೈಮಾನಿಕ ದಾಳಿಗೆ ಹಿಜ್ಬುಲ್ಲಾ ನಾಯಕ ನಯಿಮ್ ಕಾಸ್ಸೆಮ್ ಅವರ ನಿಕಟ ಸಹಾಯಕ ಮತ್ತು ವೈಯಕ್ತಿಕ ಸಲಹೆಗಾರ ಅಲಿ ಯೂಸುಫ್ ಹರ್ಷಿಯನ್ನು ಕೊಂದು ಹಾಕಲಾಗಿದೆ ಎಂದು ಇಸ್ರೇಲ್ ಗುರುವಾರ ಹೇಳಿದೆ.ಇಸ್ರೇಲ್ ರಕ್ಷಣಾ ಪಡೆಗಳು ಹಿಜ್ಬುಲ್ಲಾ ನಾಯಕ ನಯಿಮ್ ಕಾಸ್ಸೆಮ್ ಅವರ ವೈಯಕ್ತಿಕ ಕಾರ್ಯದರ್ಶಿಯನ್ನು ಕೊಲ್ಲಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಗುರುವಾರ ತಿಳಿಸಿದೆ.IDF ಪ್ರಕಾರ, ಅಲಿ ಯೂಸುಫ್ ಹರ್ಷಿ ಅವರು "ಖಾಸ್ಸೆಮ್ನ ಕಚೇರಿಯನ್ನು ನಿರ್ವಹಿಸುವಲ್ಲಿ ಮತ್ತು ಭದ್ರಪಡಿಸುವಲ್ಲಿ ಪ್ರಮುಖ
ರಾಜ್ಯದಲ್ಲಿ ದಿನ ಹೋದ ಹಾಗೇ ಬಿಸಿಲ ತಾಪ ಮಾತ್ರ ಏರುತ್ತಲೇ ಇದೆ. ಇನ್ನೂ ಈ ಬಿಸಿಲ ಧಗೆ ಆರೋಗ್ಯದ ಮೇಲೆ ಭಾರೀ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ ಚರ್ಮದ ಆರೈಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇನ್ನೂ ಸೂರ್ಯನ ನೇರ ಕಿರಣಗಳು ಚರ್ಮದ ಮೇಲೆ ಸುಟ್ಟ ಗಾಯ, ಬೇಗ ವಯಸ್ಸಾದ ಹಾಗೇ ಹಾಗೂ ಕಪ್ಪಾಗುವಿಕೆಗೆ ಕಾರಣವಾಗುತ್ತದೆ. ಇನ್ನೂ ಬೇಸಿಗೆಯಲ್ಲಿ ಚರ್ಮದ ಆರೈಕೆ ಬಗ್ಗೆ ಇಲ್ಲಿದೆ ಕೆಲ ಟಿಪ್ಸ್
ಬೆಂಗಳೂರು: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 21 ಆರೋಪಿಗಳಾಗಿರುವ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಏಪ್ರಿಲ್ 15ಕ್ಕೆ ನ್ಯಾಯಾಲಯ ಮುಂದೂಡಿದೆ. ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶ ಪ್ರಕಟಿಸುವುದಾಗಿ ಹೇಳಿತ್ತು. ಇನ್ನೂ ಈ ಪ್ರಕರಣ ಸಂಬಂಧ ಮಹತ್ವದ ಆದೇಶ ಹೊರಬೀಳುವ ಹಿನ್ನೆಲೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ 21 ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಸೇನಾ ನಾಯಕ ಆಸಿಫ್ ಮುನೀರ್ ಗೆ ನೊಬೆಲ್ ಪ್ರೈಜ್ ಕೊಡಬೇಕಂತೆ.. ಹೀಗಂತ ಅಲ್ಲಿನ ಮಾಧ್ಯಮಗಳು, ಉದ್ಯಮ ಸಂಘಗಳು ಒತ್ತಾಯಿಸಿವೆ. ಇದೀಗ ಇಸ್ರೇಲ್ ಮತ್ತು ಅಮೆರಿಕಾ ನಡುವೆ ನಡೆಯುತ್ತಿರುವ ಭೀಕರ ಯುದ್ಧಕ್ಕೆ 15 ದಿನಗಳ ಕಾಲ ಕದನ ವಿರಾಮ ಘೋಷಿಸಲು ನಾವೇ ಕಾರಣ ಎಂದು ಪಾಕಿಸ್ತಾನ ಬೀಗುತ್ತಿದೆ. ಆದರೆ ಇದನ್ನು ಇಸ್ರೇಲ್ ಮಾತ್ರ ಒಪ್ಪಿಕೊಂಡಿಲ್ಲ. ಇನ್ನೊಂದೆಡೆ ಪಾಕಿಸ್ತಾನವನ್ನು ಮುಂದಿಟ್ಟುಕೊಂಡು ಚೀನಾ ಈ ಕೆಲಸ ಮಾಡಿಸಿದೆ ಎಂಬ ಸುದ್ದಿಗಳೂ ಇವೆ. ಪಾಕಿಸ್ತಾನ ಪ್ರಧಾನಿ ಏನು ಟ್ವೀಟ್ ಮಾಡಬೇಕು ಎಂದೂ ಅಮೆರಿಕಾವೇ ಬರೆದುಕೊಟ್ಟಿತ್ತು ಎಂದು ಕೆಲವು ವರದಿಗಳು ಹೇಳುತ್ತಿವೆ.
ಇಸ್ಲಾಮಾಬಾದ್: ಮುಸ್ಲಿಮರಿಗೆ ಈ ಜಗತ್ತಿನಲ್ಲಿರುವ ಇಬ್ಬರು ಶತ್ರುಗಳೆಂದರೆ ಇಲ್ಲಿ ಹಿಂದೂಸ್ಥಾನ್, ಅಲ್ಲಿ ಇಸ್ರೇಲ್ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಆಸಿಫ್ ಖ್ವಾಜಾ ಹೇಳಿದ್ದಾರೆ. ಪಾಕಿಸ್ತಾನ ಈಗ ಅಮೆರಿಕಾ ಮತ್ತು ಇರಾನ್ ನಡುವೆ ಸಂಧಾನ ನಡೆಸಿ ಇಡೀ ಜಗತ್ತಿನಲ್ಲೇ ನಾವು ಬಲಾಢ್ಯರು ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ಆದರೆ ಅಸಲಿಗೆ ಈ ಸಂಧಾನದ ಹಿಂದೆ ಚೀನಾ ಕೈವಾಡವಿದೆ ಎಂದು ಗುಸು ಗುಸು ಕೇಳಿಬರುತ್ತಿದೆ. ಅದೇನೇ ಇರಲಿ, ಇದರ ನಡುವೆ ಪಾಕಿಸ್ತಾನದ ಸಚಿವ ಆಸಿಫ್ ಹೇಳಿಕೆ ಈಗ ಗಮನ ಸೆಳೆಯುತ್ತಿದೆ. ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿರುವ ಆಸಿಫ್ ಖವಾಜ ‘ಇಡೀ ಜಗತ್ತಿನಲ್ಲಿ ಮುಸ್ಲಿಮರಿಗೆ ಇರುವ ಇಬ್ಬರೇ ಶತ್ರುಗಳಿರುವುದು.
ಬೆಂಗಳೂರು: ಮುಸ್ಲಿಂ ದೇಶಗಳು ನೀಡುವ ಪೆಟ್ರೋಲ್ ಬೇಕು, ಆದರೆ ಇಲ್ಲಿನ ಅಲ್ಪ ಸಂಖ್ಯಾತರು ಬೇಡ ಎಂದರೆ ಹೇಗೆ ಎಂದು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ. ಬಿಜೆಪಿಯವರು ಮುಸ್ಲಿಂ ವಿರೋಧಿಯಾಗಿ ಮಾತನಾಡುತ್ತಾರೆ. ಇನ್ನೊಂದು ಕಡೆ ಇರಾನ್, ಅಫ್ಘಾನಿಸ್ತಾನ ಅರಬ್ ರಾಷ್ಟ್ರಗಳಿಂದ ಪೆಟ್ರೋಲ್ ತರಿಸಿಕೊಳ್ಳುತ್ತಾರೆ. ಹಾಗಾದರೆ ಇಸ್ಲಾಮಿಕ್ ರಾಷ್ಟ್ರಗಳ ಜೊತೆ ವ್ಯಾಪಾರ ಬಿಟ್ಟು ಬಿಡಲಿ ನೋಡೋಣ. ಅವರಿಂದ ಪೆಟ್ರೋಲ್, ಕಚ್ಚಾ ತೈಲ, ವ್ಯಾಪಾರ ಬೇಕು, ಆದರೆ ಇಲ್ಲಿ ಮಾತ್ರ ಅಲ್ಪ ಸಂಖ್ಯಾತರು ಬೇಡ್ವಾ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯ ಮಾಡಿದ್ದಾರೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ಕಳೆದ ವಾರದಂತೆ ಈ ವಾರವೂ ಅದೇ ಟ್ರೆಂಡ್ ಮುಂದುವರಿದಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಳಿಕೆಯಾಗುತ್ತಲೇ ಇತ್ತು. ಕಳೆದ ವಾರ ಎರಡು ದಿನ ಸತತವಾಗಿ ಬೆಲೆ ಏರಿಕೆ ಕಂಡುಬರುತ್ತಿತ್ತು. ಅಡಿಕೆ ಬೆಲೆಯಲ್ಲಿ ನಿನ್ನೆ ಕೊಂಚ ಏರಿಕೆಯಾಗಿತ್ತು. ಆದರೆ ಇಂದು ಯಥಾಸ್ಥಿತಿಯಲ್ಲಿದೆ ಹೊಸ ಅಡಿಕೆ ಬೆಲೆ 500 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 555 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ 555 ರೂ.ಗಳಷ್ಟಾಗಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಏರಿಕೆಯಾಗಿದೆ ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ವಾರಂತ್ಯಕ್ಕೆ ಪರಿಶುದ್ಧ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿತ್ತು. ಪರಿಶುದ್ಧ ಚಿನ್ನದ ದರ ವಾರಂತ್ಯಕ್ಕೆ 1,53,075.00 ರೂ.ಗಳಿತ್ತು. ಆದರೆ ಇಂದು ಏರಿಕೆಯಾಗಿದ್ದು 1,56,135.00 ರೂ.ಗಳಷ್ಟಿದೆ.
ಬೆಂಗಳೂರು: ಆಟವಾಡುತ್ತಿದ್ದ ಮಗು ಮೂರನೆಯ ಮಹಡಿಯ ತನ್ನ ಮನೆಯ ಬಾಲ್ಕನಿಯಿಂದ ನೆಲಕ್ಕೆ ಬಿದ್ದ ಭೀಕರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಹುಮಹಡಿ ಕಟ್ಟಡಗಳಲ್ಲಿ ಮನೆ ಮಾಡಿಕೊಂಡಿದ್ದರೆ ಚಿಕ್ಕ ಮಕ್ಕಳನ್ನು ಮೈ ಎಲ್ಲಾ ಕಣ್ಣಾಗಿಸಿ ನೋಡಿಕೊಳ್ಳಬೇಕು. ಇಲ್ಲದೇ ಹೋದರೆ ಯಾವ ಕ್ಷಣದಲ್ಲಿ ಏನಾಗುತ್ತದೆ ಎಂದು ಹೇಳಲೂ ಸಾಧ್ಯವಿಲ್ಲ. ಅಂತಹದ್ದೇ ಒಂದು ಘಟನೆ ಬೆಂಗಳೂರಿನ ನಾಯಂಡಹಳ್ಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದೆ. ಬಹುಮಹಡಿ ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಲ್ಲಿ ಮಗುವಿನ ಮನೆಯಿತ್ತು. ಇಲ್ಲಿ ಬಾಲ್ಕನಿ ಬಳಿ ಮಗು ಆಟವಾಡಿಕೊಂಡಿತ್ತು. ಅಕಸ್ಮಾತ್ತಾಗಿ ಕಾಲು ಜಾರಿ ಕೆಳಕ್ಕೆ ಬಿದ್ದಿದೆ.
ಮಹಾವಿಷ್ಣು ಅತ್ಯಂತ ಶಾಂತ ಸ್ವಭಾವದ ದೇವರು ಎಂದು ನಂಬಲಾಗಿದೆ. ಹಾಗಿದ್ದರೂ ಧರ್ಮವನ್ನು ಮೀರಿದಾಗ ಮಹಾವಿಷ್ಣುವಿನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಜಾತಕದಲ್ಲಿ ಮಹಾವಿಷ್ಣುವಿನ ಶಾಪ, ಅನಾನುಕೂಲವಿದ್ದರೆ ಏನು ಪರಿಣಾಮ ಎದುರಿಸಬೇಕಾಗುತ್ತದೆ ತಿಳಿದುಕೊಳ್ಳಿ. ಕೆಲಸಕ್ಕೆ ತಕ್ಕ ಫಲ ಸಿಗದು: ನಾವು ಏನೋ ಕೆಲಸವನ್ನು ಕಷ್ಟಪಟ್ಟು ಮಾಡಿರುತ್ತೇವೆ. ಆದರೂ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎನಿಸಬಹುದು. ಉದ್ಯೋಗದಲ್ಲಿ ಸ್ಥಿರತೆಯಿಲ್ಲ ಎನಿಸಬಹುದು. ಬುದ್ಧಿಮತ್ತೆಯ ಮೇಲೆ ಪರಿಣಾಮ: ಮಹಾವಿಷ್ಣು ನಮ್ಮ ಬುದ್ಧಿಗೆ ಅಧಿದೇವರೂ ಹೌದು. ಹೀಗಾಗಿ ನಾವು ಬುದ್ಧಿವಂತಿಕೆಯ ಕೊರತೆ, ವಿವೇಚನೆಯಿಲ್ಲದೇ ನಿರ್ಧಾರ ತೆಗೆದುಕೊಳ್ಳುತ್ತೀರಿ.
ಬೆಂಗಳೂರು: ಉಪಚುನಾವಣೆ ಸಮಯದಲ್ಲೇ ಬಹಳ ಸಮಯದಿಂದ ಬಾಕಿಯಿದ್ದ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿದ ಸರ್ಕಾರಕ್ಕೆ ಚುನಾವಣಾ ಆಯೋಗ ವರದಿ ಕೇಳಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ನಮ್ಮ ಗ್ಯಾರಂಟಿ ಯೋಜನೆಗಳು ಈ ಉಪಚುನಾವಣೆ ಸಮಯದಲ್ಲಿ ಜಾರಿಯಾದವುಗಳಲ್ಲ ಎಂಬುದನ್ನು ಆರಂಭದಲ್ಲೇ ಸ್ಪಷ್ಟಪಡಿಸುತ್ತಿದ್ದೇನೆ. ಇವು 2023ರ ವಿಧಾನಸಭೆ ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಗಳ ಭಾಗವಾಗಿ ನಮ್ಮ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಕಾರ್ಯಕ್ರಮಗಳಾಗಿವೆ. ಈ ಯೋಜನೆಗಳಡಿ ರಾಜ್ಯದ ಎಲ್ಲ ಫಲಾನುಭವಿಗಳ ಖಾತೆಗಳಿಗೆ ನಿಯಮಿತವಾಗಿ, ಪಾರದರ್ಶಕವಾಗಿ ಹಣ ವರ್ಗಾವಣೆಯಾಗುತ್ತಿದೆ.
ದೆಹಲಿ: ಐಪಿಎಲ್ 2026 ರಲ್ಲಿ ದೆಹಲಿ ಮತ್ತು ಗುಜರಾತ್ ನಡುವಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಕನ್ನಡಿಗ ಕೆಎಲ್ ರಾಹುಲ್ ಮಗಳಿಗಾಗಿ ಮೈದಾನದಲ್ಲಿ ವಿಶಿಷ್ಟ ಸೆಲೆಬ್ರೇಷನ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಆರಂಭಿಕ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 210 ರನ್ ಗಳಿಸಿತ್ತು. ಈ ಗೆಲುವಿನ ಗುರಿ ಬೆನ್ನತ್ತಿದ ಡೆಲ್ಲಿ ಉತ್ತಮ ಆರಂಭ ಪಡೆದಿತ್ತು.
ನವದೆಹಲಿ: ಐಪಿಎಲ್ 2026 ರಲ್ಲಿ ನಿನ್ನೆ ಇಬ್ಬರು ಕನ್ನಡಿಗರ ನಡುವೆ ಒಬ್ಬ ಕನ್ನಡಿಗನಿಗೆ ಗೆಲುವಾಗಿದೆ. ಡೆಲ್ಲಿ ಮತ್ತು ಗುಜರಾತ್ ನಡುವಿನ ಕದನದಲ್ಲಿ ಗುಜರಾತ್ ಕೊನೆಯ ಓವರ್ ನ ಕೊನೆಯ ಎಸೆತದಲ್ಲಿ ರೋಚಕವಾಗಿ 1 ರನ್ ನಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 210 ರನ್ ಗಳಿಸಿತ್ತು. ಡೆಲ್ಲಿ ದೊಡ್ಡ ಮೊತ್ತ ಗಳಿಸಲು ನೆರವಾಗಿದ್ದು ಕನ್ನಡಿಗ ಕೆಎಲ್ ರಾಹುಲ್ ಬ್ಯಾಟಿಂಗ್. 92 ರನ್ ಗಳಿಸಿದ ಅವರು ಡೆಲ್ಲಿ 200 ರ ಗಡಿ ದಾಟಲು ಸಹಾಯ ಮಾಡಿದರು. ಇಷ್ಟು ದೊಡ್ಡ ಮೊತ್ತ ಗಳಿಸಿದ ಮೇಲೆ ಡೆಲ್ಲಿ ಗೆಲ್ಲಬಹುದು ಎಂದೇ ಎಲ್ಲರೂ ನಿರೀಕ್ಷಿಸಿದ್ದರು.
ಬೆಂಗಳೂರು: ಇಂದು ಕೇರಳ, ಪುದುಚೇರಿ ಮತ್ತು ಅಸ್ಸಾಂ ವಿಧಾನಸಭೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಬೆಳಿಗ್ಗೆ 9 ಗಂಟೆಯ ವೇಳೆಗೆ ಎಷ್ಟು ವೋಟ್ ಆಗಿದೆ ಇಲ್ಲಿದೆ ವರದಿ. ಕೇರಳದಲ್ಲಿ ಈ ಬಾರಿ ಯುಡಿಎಫ್ ಮತ್ತು ಎಲ್ ಡಿಎಫ್ ಜೊತೆಗೆ ಬಿಜೆಪಿ ಕೂಡಾ ಕೆಲವು ಕ್ಷೇತ್ರಗಳಲ್ಲಿ ಫೈಟ್ ಕೊಡುತ್ತಿದೆ. ಕಾಸರಗೋಡಿನ ಮಂಜೇಶ್ವರ, ತಿರುವನಂತಪುರಂಗಳಲ್ಲಿ ಬಿಜೆಪಿಯೂ ಗೆಲ್ಲುವ ವಿಶ್ವಾಸದಲ್ಲಿದೆ. ಇಲ್ಲಿ ಬೆಳಿಗ್ಗೆಯೇ ಜನ ಮತದಾನ ಮಾಡಲು ಬಂದಿದ್ದು 9 ಗಂಟೆಯವರೆಗಿನ ವರದಿ ಪ್ರಕಾರ ಶೇ.16.23 ವೋಟಿಂಗ್ ಆಗಿರುವುದಾಗಿ ವರದಿಯಾಗಿದೆ.
ಪಾಟ್ನಾ: ವೀಲ್ ಚೇರ್ ಸಿಗದೇ ನಡೆದಾಡಲೂ ಆಗದ ಸ್ಥಿತಿಯಲ್ಲಿದ್ದ ತನ್ನ ಅಜ್ಜಿಯನ್ನು ಮೊಮ್ಮಗ ಸ್ಕೂಟಿಯಲ್ಲಿ ತಳ್ಳಿಕೊಂಡೇ ಆಸ್ಪತ್ರೆಯೊಳಗೆ ಕರೆತಂದ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಬಿಹಾರದ ಗಯಾದಲ್ಲಿ. ನಮ್ಮ ದೇಶದಲ್ಲಿ ಸೂಕ್ತ ಸಮಯದಲ್ಲಿ ಆಂಬ್ಯುಲೆನ್ಸ್ ಸಿಗದೇ ಎಷ್ಟೋ ಸಾವುಗಳು ಸಂಭವಿಸುತ್ತವೆ. ಕೆಲವರು ಬಡವರು ಆಂಬ್ಯುಲೆನ್ಸ್ ಗೆ ಹಣ ನೀಡಲಾಗದೇ ಹೆಗಲ ಮೇಲೆ, ದ್ವಿಚಕ್ರ ವಾಹನಗಳಲ್ಲಿ ಮೃತದೇಹವನ್ನು ಕರೆದೊಯ್ದ ಘಟನೆಗಳನ್ನೂ ನೋಡಿದ್ದೇವೆ. ಆದರೆ ಇಲ್ಲಿ ಆಸ್ಪತ್ರೆಯ ಆವರಣದಿಂದ ಕೊಠಡಿಯೊಳಗೆ ನಡೆದಾಡಲೂ ಕಷ್ಟಪಡುತ್ತಿದ್ದ ಮಹಿಳೆಯನ್ನು ಕರೆದೊಯ್ಯಲು ವೀಲ್ ಚೇರ್ ಸಿಕ್ಕಿರಲಿಲ್ಲ. ಹೀಗಾಗಿ ಮೊಮ್ಮಗ ಆಕೆಯನ್ನು ಸ್ಕೂಟಿಯ ಮೇಲೆ ಕೂರಿಸಿ ವೀಲ್ ಚೇರ್ ನಂತೆ ತಳ್ಳಿಕೊಂಡೇ ಕರೆದೊಯ್ದಿದ್ದಾನೆ.
ಬೆಂಗಳೂರು: ಇಂದು ಕರ್ನಾಟಕದಲ್ಲಿ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು ಈ ಚುನಾವಣೆ ಕರ್ನಾಟಕ ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣವಾಗಿದೆ. ಈ ಚುನಾವಣೆಯಲ್ಲಿ ಗೆಲ್ಲುವುದು ರಾಜ್ಯ ಕಾಂಗ್ರೆಸ್ ನಾಯಕತ್ವಕ್ಕೆ ಮುಖ್ಯ. ಕಳೆದ ಎರಡೂವರೆ ಆಡಳಿತ ಮಾಡಿರುವ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಈ ಉಪಚುನಾವಣೆ ಪರೀಕ್ಷೆಯ ಸಮಯವಿದ್ದಂತೆ. ಈಗ ಉಪಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಕೈಯಲ್ಲೇ ಇದ್ದ ಕ್ಷೇತ್ರಗಳೇ. ಈಗ ಈ ಎರಡು ಕ್ಷೇತ್ರಗಳು ಕೈ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕಾಗಿರುವುದು ಕಾಂಗ್ರೆಸ್ ನಾಯಕರಿಗಿರುವ ಸವಾಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಬಿಸಿಲಿನ ಬೇಗೆಯಿಂದ ಜನ ತತ್ತರಿಸಿದ್ದಾರೆ. ಇದರ ನಡುವೆ ಇಂದು ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಕಳೆದ ಎರಡು ದಿನಗಳಲ್ಲಿ ತಾಪಮಾನದಲ್ಲಿ ವಿಪರೀತ ಏರಿಕೆಯಾಗಿತ್ತು. ಆದರೆ ಇಂದು ಹವಾಮಾನದಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕರಾವಳಿಯಲ್ಲಿ ಉಂಟಾಗಿರುವ ವಾಯು ಸುಳಿಗಾಳಿಯ ಪರಿಣಾಮ ಕರ್ನಾಟಕ ಮೇಲೂ ಪರಿಣಾಮ ಬೀರಲಿದೆ. ಇದರಿಂದಾಗಿ ಇಂದು ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
ಇಂದು ಗುರುವಾರವಾಗಿದ್ದು ಮಹಾವಿಷ್ಣುವಿಗೆ ವಿಶೇಷವಾದ ದಿನವಾಗಿದೆ. ಮಾನಸಿಕ ನೆಮ್ಮದಿ, ದೈಹಿಕ ಆರೋಗ್ಯ ಚೆನ್ನಾಗಿರಬೇಕೆಂದರೆ ಶ್ರೀ ರಾಮ ರಕ್ಷಾ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.ಓಂ ಅಸ್ಯ ಶ್ರೀ ರಾಮರಕ್ಷಾ ಸ್ತೋತ್ರಮಂತ್ರಸ್ಯಬುಧಕೌಶಿಕ ಋಷಿಃಶ್ರೀ ಸೀತಾರಾಮ ಚಂದ್ರೋದೇವತಾಅನುಷ್ಟುಪ್ ಛಂದಃಸೀತಾ ಶಕ್ತಿಃಶ್ರೀಮದ್ ಹನುಮಾನ್ ಕೀಲಕಂಶ್ರೀರಾಮಚಂದ್ರ ಪ್ರೀತ್ಯರ್ಥೇ ರಾಮರಕ್ಷಾ ಸ್ತೋತ್ರಜಪೇ ವಿನಿಯೋಗಃ ॥ ಧ್ಯಾನಂಧ್ಯಾಯೇದಾಜಾನುಬಾಹುಂ ಧೃತಶರ ಧನುಷಂ ಬದ್ಧ ಪದ್ಮಾಸನಸ್ಥಂಪೀತಂ ವಾಸೋವಸಾನಂ ನವಕಮಲ ದಳಸ್ಪರ್ಥಿ ನೇತ್ರಂ ಪ್ರಸನ್ನಮ್ ।ವಾಮಾಂಕಾರೂಢ ಸೀತಾಮುಖ ಕಮಲಮಿಲಲ್ಲೋಚನಂ ನೀರದಾಭಂನಾನಾಲಂಕಾರ ದೀಪ್ತಂ ದಧತಮುರು ಜಟಾಮಂಡಲಂ ರಾಮಚಂದ್ರಮ್ ॥ ಸ್ತೋತ್ರಂಚರಿತಂ ರಘುನಾಥಸ್ಯ ಶತಕೋಟಿ ಪ್ರವಿಸ್ತರಮ್ ।ಏಕೈಕಮಕ್ಷರಂ ಪುಂಸಾಂ ಮಹಾಪಾತಕ ನಾಶನಮ್ ॥ 1 ॥
ನವದೆಹಲಿ: ಕೊನೆಯ ಎಸೆತದವರೆಗೆ ಕುತೂಹಲ ಮೂಡಿಸಿದ್ದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವು 1 ರನ್ಗಳ ರೋಚಕ ಜಯ ದಾಖಲಿಸಿತು. ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್ ಸಾಹಸದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲು ಅನುಭವಿಸಿತು.ರೋಚಕ ಗೆಲುವು ಸಾಧಿಸಿದ ಗುಜರಾತ್ ಟೈಟಾನ್ಸ್ ಹಾಲಿ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು. ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸೋಲಿಗೆ ತುತ್ತಾಯಿತು.ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್, ಬಿರುಸಿನ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 210 ರನ್ ಬಾರಿಸಿತು. ಡೆಲ್ಲಿ ತಂಡ ಕೊನೆಯ ಎಸೆತದ ತನಕ ಹೋರಾಡಿ 8 ವಿಕೆಟ್ಗೆ 209 ರನ್ ಗಳಿಸಿ ವಿರೋಚಿತ ಸೋಲು ಕಂಡಿತು.
ಬೆಂಗಳೂರು: ರಣವೀರ್ ಸಿಂಗ್ ಅವರ ಧುರಂಧರ ಸಿನಿಮಾ ಬಗ್ಗೆ ಮೌನವಾಗಿದ್ದಕ್ಕೆ ಟ್ರೋಲ್ ಮಾಡಿದವರಿಗೆ ಕೊನೆಗೂ ದೀಪಿಕಾ ಪಡುಕೋಣೆ ಪ್ರತಿಕ್ರಿಯೆ ನೀಡಿದ್ದಾರೆ. ರಣವೀರ್ ಸಿಂಗ್ ನಟನೆಯ ʻಧುರಂಧರ್ 2ʼ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ದಾಖಲೆಗಳನ್ನು ಮಾಡಿದೆ. ಅನೇಕ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಈ ಸಿನಿಮಾವನ್ನು ಹೊಗಳಿದ್ದಾರೆ. ನೆಟ್ಟಿಗರೊಬ್ಬರು ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಹಾಕಿದ್ದರು. ದೀಪಿಕಾ ಪಡುಕೋಣೆ 500 ಕೋಟಿ ಬಜೆಟ್ನ ಚಿತ್ರಕ್ಕೆ ಸೈಲೆಂಟ್ ಟ್ರೀಟ್ಮೆಂಟ್ ನೀಡಿದ್ದಾರೆ. ಧುರಂಧರ್: ದಿ ರಿವೆಂಜ್ ಜಾಗತಿಕ ದಾಖಲೆಗಳನ್ನು ಮುರಿಯುತ್ತಿದ್ದರೆ, ಚಿತ್ರದ ಪ್ರೀಮಿಯರ್ ಹೋಗುವುದು ಬಿಟ್ಟು, ದೀಪಿಕಾ ತಮ್ಮ ಅತ್ತೆ-ಮಾವಂದಿರ ಜೊತೆ ಸಿತಾರ್ ಕಚೇರಿಗೆ ಹೋಗಿದ್ದರು. ಯಾವುದೇ ಪೋಸ್ಟ್ ಇಲ್ಲ, ಹೊಗಳಿಕೆಯೂ ಇಲ್ಲ, ಕೇವಲ ಮೌನ..
ಬೆಂಗಳೂರು: ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡಕೊಲೆ ಪ್ರಕರಣದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಳೆ ಪ್ರಕಟಿಸಲಿದೆ.ರಾಜಕೀಯ ವೈಷಮ್ಯದಿಂದ ಧಾರವಾಡದಲ್ಲಿ 2016ರ ಜೂ.16ರಂದು ಯೋಗೇಶ್ ಗೌಡ ಅವರನ್ನು ಹತ್ಯೆ ಮಾಡಲಾಗಿತ್ತು. ಶಾಸಕ ವಿನಯ್ ಕುಲಕರ್ಣಿ ಮೇಲೆ ಅಪರಾಧಿಕ ಒಳಸಂಚು ಮಾಡಿದ ಆರೋಪವಿದೆ. 2019ರಲ್ಲಿ ರಾಜ್ಯ ಸರ್ಕಾರವು ಈ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಸಿಬಿಐ 2020ರಲ್ಲಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿತ್ತು.2017ರಲ್ಲಿ ಶಾಸಕ ವಿನಯ್ ಕುಲಕರ್ಣಿ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದಿದ್ದರು. ನಂತರ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕಳೆದ ವರ್ಷ ಜೂನ್ನಲ್ಲಿ ಸುಪ್ರೀಂ ಕೋರ್ಟ್ ಅವರ ಜಾಮೀನು ರದ್ದು ಮಾಡಿತ್ತು.
ಟೆಹ್ರಾನ್: ಅಮೆರಿಕಾ ಮತ್ತು ಇರಾನ್ ನಡುವೆ ತಾತ್ಕಾಲಿಕ ಕದನವಿರಾಮ ಘೋಷಣೆಯಾಗಿದೆ. ಕದನ ವಿರಾಮದ ಹೊರತಾಗಿಯೂ ಇರಾನ್ನ ಲ ಸಂಸ್ಕರಣಾಗಾರದ ಮೇಲೆ ದಾಳಿ ನಡೆದಿದೆ. ಇರಾನ್ ಮತ್ತು ಅಮೆರಿಕ ನಡುವೆ ಎರಡು ವಾರಗಳ ಕದನ ವಿರಾಮ ಜಾರಿಗೆ ಬಂದಿದೆ. ಆದರೂ ಇರಾನ್ನ ಲಾವನ್ ದ್ವೀಪದಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ಶತ್ರು ದಾಳಿ ನಡೆಸಲಾಗಿದೆ ಎಂದು ಇರಾನ್ ತಿಳಿಸಿದೆ. ರಾಷ್ಟ್ರೀಯ ಇರಾನಿನ ತೈಲ ಸಂಸ್ಕರಣಾ ಮತ್ತು ವಿತರಣಾ ಕಂಪನಿ ಈ ದಾಳಿಯನ್ನು ವರದಿ ಮಾಡಿವೆ. ಇದಕ್ಕೆ ಪ್ರತಿಯಾಗಿ ಕುವೈತ್, ಯುಎಇ ಮೇಲೆ ಇರಾನ್ ದಾಳಿ ಮಾಡಿದೆ. ಸ್ಥಳೀಯ ಸಮಯ ಸುಮಾರು 10 ಗಂಟೆಗೆ ತೈಲ ಸಂಸ್ಕರಣಾಗಾರ ಹಾನಿಗೊಳಗಾಗಿದೆ ಎಂದು ಕಂಪನಿ ತಿಳಿಸಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ.
ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ಇರಾನ್ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳಿಗೆ ಭಾರತೀಯ ರಾಯಭಾರ ಕಚೇರಿಯು ಬುಧವಾರ ಮಹತ್ವದ ಸೂಚನೆ ನೀಡಲಾಗಿದೆ.ಇರಾನ್ನಲ್ಲಿರುವ ಎಲ್ಲ ಭಾರತೀಯರು ಕೂಡಲೇ ದೇಶವನ್ನು ತೊರೆಯುವಂತೆ ಈ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಮನ್ವಯ ಸಾಧಿಸಲು ರಾಯಭಾರ ಕಚೇರಿಯು ಕೆಲವು ಸಹಾಯವಾಣಿ ಸಂಖ್ಯೆಗಳನ್ನು ಸಹ ಪ್ರಕಟಿಸಿದೆ.ಏಪ್ರಿಲ್ 7ರಂದು ನೀಡಿದ್ದ ಸೂಚನೆಯ ಮುಂದುವರಿದ ಭಾಗವಾಗಿ, ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇರಾನ್ನಲ್ಲಿರುವ ಭಾರತೀಯರು ರಾಯಭಾರ ಕಚೇರಿಯ ಮಾರ್ಗದರ್ಶನದೊಂದಿಗೆ ಶೀಘ್ರವಾಗಿ ದೇಶದಿಂದ ನಿರ್ಗಮಿಸಲು ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು: 2028ಕ್ಕೆ ಕಾಂಗ್ರೆಸ್ಗೆ ಸೋಲು ಕಟ್ಟಿಟ್ಟ ಬುತ್ತಿ. ಕಾಂಗ್ರೆಸ್ ಸೋಲು ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಸಿಟಿ ರವಿ ಭವಿಷ್ಯ ನುಡಿದಿದ್ದಾರೆ.ಕೆಟ್ಟ ಆಡಳಿತದಿಂದಾಗಿ ಕಾಂಗ್ರೆಸ್ ಸೋಲಿಸಬೇಕು ಅಂತ ಜನ ತೀರ್ಮಾನ ಮಾಡಿದ್ದಾರೆ. ಉಪಚುನಾವಣೆಯಲ್ಲೇ ಪಲ್ಟಿ ಹೊಡೆಯುತ್ತಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ನವರು ಶಿರ್ಷಾಸನ ಮಾಡ್ತಾ ಇದ್ದಾರೆ. ಉಪಚುನಾವಣೆಯಲ್ಲಿ ಹೀಗೆ ಮಾಡ್ತಾ ಇರೋರು ಜನರಲ್ ಎಲೆಕ್ಷನ್ನಲ್ಲಿ ಗೆಲ್ತಾರಾ? ಬೈ ಎಲೆಕ್ಷನ್ನಲ್ಲೂ ಸೋಲ್ತಾರೆ, ಜನರಲ್ ಎಲೆಕ್ಷನ್ನಲ್ಲಿಯೂ ಸೋಲ್ತಾರೆ ಎಂದು ಹೇಳಿದ್ದಾರೆ.2028ರವರೆಗೂ ಜನ ನಿಮಗೆ ಬಹುಮತ ಕೊಟ್ಟಿದ್ದಾರೆ. ಜನ ಪ್ರಜಾಪ್ರಭುತ್ವದಲ್ಲಿ ಅಧಿಕಾರ ಕೊಟ್ಟಿದ್ದಾರೆ. 2028ರ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಸೋಲುತ್ತೆ. ಇನ್ನೂ ಯಾವ ಪಾರ್ಟಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂದು ಪ್ರಶ್ನಿಸಿದ್ದಾರೆ.
ಬಂಟ್ವಾಳ: ಮಧ್ಯಪ್ರಾಚ್ಯ ದೇಶಗಳಲ್ಲಿ ಹೆಚ್ಚಿರುವ ಉದ್ವಿಗ್ನ ಪರಿಸ್ಥಿತಿಯೂ ಕರಾವಳಿ ಭಾಗದ ಮದುವೆ ಹಾಗೂ ಇತರ ಸಮಾರಂಭಗಳಿಗೆ ಪರಿಣಾಮ ಬೀರಿರುವ ಬಗ್ಗೆ ವರದಿಯಾಗಿದೆ. ಇದೀಗ ಕರಾವಳಿ ಭಾಗದಲ್ಲಿ ಶುಭ ಕಾರ್ಯಗಳನ್ನು ನಡೆಸುವ ಸಮಯವಾಗಿದೆ. ಮದುವೆ, ಗೃಹಪ್ರವೇಶ, ಕೋಲ, ಪೂಜೆ ಹೀಗೇ ಸಾಲು ಸಾಲು ಸಮಾರಂಭಗಳನ್ನು ಈ ಸಮಯದಲ್ಲಿ ನಿಗದಿ ಮಾಡುತ್ತಾರೆ. ಮಕ್ಕಳಿಗೂ ಬೇಸಿಗೆ ರಜೆಯಿರುವ ಕಾರಣ, ಮದುವೆಗಳು ಮಾರ್ಚ್, ಏಪ್ರಿಲ್ ಹಾಗೂ ಮೇ ಸಮಯದಲ್ಲಿ ಹೆಚ್ಚಾಗಿ ನಿಗದಿ ಮಾಡಲಾಗುತ್ತದೆ.
ಚಿಕ್ಕಮಗಳೂರು: ಕೊಡಗಿನಲ್ಲಿ ಕೇರಳದ ಟ್ರೆಕ್ಕಿಂಗ್ ವೇಳೆ ಮಿಸ್ ಆಗಿದ್ದ ಚಾರಣಿಗಾರ್ತಿಯೊಬ್ಬರನ್ನು ರಕ್ಷಿಸಿದ್ದ ಬೆನ್ನಲ್ಲೇ ಜಿಲ್ಲೆಯಲ್ಲಿ ಮತ್ತೊಂದು ನಾಪತ್ತೆ ಪ್ರಕರಣ ವರದಿಯಾಗಿದೆ. ಪ್ರಸಿದ್ಧ ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಬಂದಿದ್ದ ಕೇರಳದ 14 ವರ್ಷದ ಬಾಲಕಿ ಏಪ್ರಿಲ್ 7 ರಂದು ಸಂಜೆಯಿಂದ ನಾಪತ್ತೆಯಾಗಿರುವ ಬಗ್ಗೆ ಬೆಳಕಿಗೆ ಬಂದಿದೆ.ನಾಪತ್ತೆಯಾಗಿರುವ ಬಾಲಕಿಯನ್ನು ಕೇರಳದ ಪಾಲಕ್ಕಾಡ್ ನಿವಾಸಿ ನಂದನಾ ಎಂದು ಗುರುತಿಸಲಾಗಿದೆ. ತನ್ನ ಹೆತ್ತವರೊಂದಿಗೆ 40 ಸದಸ್ಯರ ಪ್ರವಾಸ ಗುಂಪಿನ ಭಾಗವಾಗಿ ಜಿಲ್ಲೆಗೆ ಆಗಮಿಸಿದ್ದಳು.ಚಂದ್ರದ್ರೋಣ ಬೆಟ್ಟದ ಮಾಣಿಖ್ಯಧಾರಾ ಪ್ರದೇಶದ ಬಳಿ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಾಣಿಖ್ಯಧಾರಾ
ಮಂಗಳೂರು ಕರಾವಳಿ ಭಾಗದಲ್ಲಿ ಗಾಳಿಯ ತೀವ್ರತೆ ಹೆಚ್ಚಿದ್ದರೂ ಕಳೆದ ಕೆಲವು ದಿನಗಳಿಂದ ತಾಪಮಾನದಲ್ಲಿ ನಿರಂತರ ಏರಿಕೆ ಕಂಡು ಬರುತ್ತಿದೆ.ಸುಮಾರು ಒಂದು ವಾರದಿಂದ, ಬೆಳಿಗ್ಗೆ ಮತ್ತು ರಾತ್ರಿಯಲ್ಲಿ ಗಾಳಿ ಬೀಸುತ್ತಿದ್ದು, ಇದರಿಂದ ಮೋಡಗಳು ಚದುರಿಹೋಗಿ, ಮಳೆಯಾಗುತ್ತಿಲ್ಲ. ಪೂರ್ವ ಮಾನ್ಸೂನ್ ಋತುವಿನಲ್ಲಿ, ಗಾಳಿಯು ಸಾಮಾನ್ಯವಾಗಿ ಬಂಗಾಳ ಕೊಲ್ಲಿಯಿಂದ ಅರಬ್ಬಿ ಸಮುದ್ರದ ಕಡೆಗೆ ಬೀಸುತ್ತದೆ,
ವಾಷಿಂಗ್ಟನ್: ಇರಾನ್ ಗೆ ಯುದ್ಧ ಪರಿಕರಗಳನ್ನು ಒದಗಿಸುವ ರಾಷ್ಟ್ರಗಳಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಬೆದರಿಕೆ ಹಾಕಿದ್ದಾರೆ. ಕದನ ವಿರಾಮ ಘೋಷಣೆ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ. ಇಸ್ರೇಲ್ ಜೊತೆಗೆ ಸೇರಿಕೊಂಡು ಇರಾನ್ ಮೇಲೆ ಯುದ್ಧ ಸಾರಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ಹೊರ್ಮುಜ್ ಜಲಸಂಧಿ ತೆರೆಯಲು ಇರಾನ್ ಒಪ್ಪಿದ ಬೆನ್ನಲ್ಲೇ ಕದನ ವಿರಾಮ ಘೋಷಿಸಿದ್ದರು. ಇದರ ಬೆನ್ನಲ್ಲೇ ಈಗ ಇರಾನ್ ಗೆ ಸಹಾಯ ಮಾಡುತ್ತಿರುವ ರಾಷ್ಟ್ರಗಳಿಗೆ ಎಚ್ಚರಿಕೆ ಸಂದೇಶ ಕಳುಹಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದಲ್ಲಿ ಶೇಕ್ ಇಟ್ ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ನಿಮಿಕಾ ರತ್ನಾಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿಮಿಕಾ ರತ್ನಾಕರ್ಗೆ ಶೇಕ್ ಇಟ್ ಪುಷ್ಪವತಿ ಹಾಡು ಭಾರೀ ಮನ್ನಣೆಯನ್ನು ತಂದುಕೊಟ್ಟಿತ್ತು. ಇವರು ಅಬ್ಬರ, ಮಿಸ್ಟರ ಬ್ಯಾಚುಲರ್, ಕ್ರಾಂತಿ, ಫ್ಲರ್ಟ್ ಸೇರಿದಂತೆ ಇನ್ನೂ ಕೆಲವು ಚಿತ್ರಗಳಲ್ಲಿ ನಿಮಿಕಾ ರತ್ನಾಕರ್ ಅಭಿನಯಿಸಿದ್ದಾರೆ. ಮಂಗಳೂರು ಮೂಲದ ನಿಮಿಕಾ ರತ್ನಾಕರ್ ಅವರು ಆಶಿಶ್ ಎಂಬವರನ್ನು ಕೈ ಹಿಡಿದಿದ್ದಾರೆ. ಇನ್ನೂ ಕುಟುಂಬ ಹಾಗೂ ಆಪ್ತ
ಬೆಂಗಳೂರು: ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶ ಪ್ರಕಟವಾಗಲಿದ್ದು, ಮಧ್ಯಾಹ್ನ 3ಕ್ಕೆ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಈ ಮೊದಲು ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಬಗ್ಗೆ ಮಾಹಿತಿ ನೀಡಿದ ಬಳಿಕ ವೆಬ್ಸೈಟ್ನಲ್ಲಿ ಪ್ರಕಟ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮೊದಲು ವೈಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಸುದ್ದಿಗೋಷ್ಠಿ ನಡೆಯಲಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಸಚಿವ ಮಧು ಬಂಗಾರಪ್ಪ ಅವರು ಸಂಜೆ 6:15ಕ್ಕೆ ಫಲಿತಾಂಶದ ಬಗ್ಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಭಾರತದ ವಾಯುಯಾನ ವಲಯವನ್ನು ತೀವ್ರವಾಗಿ ಅಡ್ಡಿಪಡಿಸಿದೆ. ಇದು ಫೆಬ್ರವರಿ ಅಂತ್ಯದಿಂದ 10,000 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಹೆಚ್ಚುತ್ತಿರುವ ಉದ್ವಿಗ್ನತೆಗಳು ಮತ್ತು ಪ್ರದೇಶದಾದ್ಯಂತ ವ್ಯಾಪಕವಾದ ವಾಯುಪ್ರದೇಶದ ನಿರ್ಬಂಧಗಳು ಅಂತರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿವೆ.ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಸಾಂಗ್ಬಾ ಚುಬಾ ಆವೊ ಪ್ರಕಾರ, ಈ ಹಿಂದೆ ಮಧ್ಯಪ್ರಾಚ್ಯಕ್ಕೆ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಏರುತ್ತಲೇ ಇದ್ದು, ಮನೆಯಿಂದ ಹೊರಬರಲು ಜನರು ಹಿಂದೇಟು ಹಾಕುತ್ತಿದ್ದಾರೆ.ಇನ್ನೂ ಪ್ರಾಣಿಗಳು ಕೂಡಾ ಬಿಸಿಲ ತಾಪಕ್ಕೆ ಹೈರಾಣಾಗಿದ್ದಾರೆ. ಆದರೆ ಮೈಸೂರಿನ ಮೃಗಾಲಯದಲ್ಲಿ ಈ ಬಿಸಿಲ ತಾಪ ಪ್ರಾಣಿಗಳು ಪಾತ್ರ ಖುಷಿಯಾಗಿದ್ದಾರೆ. ಇದಕ್ಕೆ ಕಾರಣ ಮೃಗಾಲಯದಲ್ಲಿ ಪ್ರಾಣಿಗಳ ಬೇಸಿಗೆ ಆರೈಕೆಗೆ ತೆಗೆದುಕೊಂಡ ಕ್ರಮ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಮೃಗಾಲಯದಲ್ಲಿ ಪ್ರಾಣಿಗಳಿಗೆ ಆರಾಮದಾಯಕ ಫೀಲ್ ಕೊಡಲು ಮಾಂಸಹಾರಿ ಪ್ರಾಣಿಗಳಿಂದ ಸಸ್ಯಹಾರಿ ಪ್ರಾಣಿಗಳವರೆಗೂ
ವಾರಣಾಸಿ: ಪ್ರಿಯಕರನ ಜೊತೆ ಕುಳಿತುಕೊಂಡು ಯಾವುದೋ ವಿಚಾರವಾಗಿ ವಾಗ್ವಾದ ಮಾಡುತ್ತಿದ್ದ ಯುವತಿ ಇದ್ದಕ್ಕಿದ್ದಂತೆ ಗಂಗಾ ನದಿಗೆ ಹಾರಿದ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆ ನಡೆದಿರುವುದು ವಾರಣಾಸಿಯ ಗಂಗಾ ನದಿ ತಟದಲ್ಲಿ. ಗಂಗಾ ನದಿ ತಟದಲ್ಲಿ ಸಾಕಷ್ಟು ಬೋಟ್ ಗಳು, ಜನರೂ ಇದ್ದರು. ಓರ್ವ ಯುವಕ ಮತ್ತು ಯುವತಿ ಜೊತೆಗೆ ಇನ್ನೋರ್ವ ಯುವಕನೂ ಕೂತಿದ್ದರು. ಯಾವುದೋ ವಿಚಾರವಾಗಿ ಯುವಕ ಯುವತಿಯನ್ನು ಕೈಯಲ್ಲಿ ಬಳಸಿಟ್ಟುಕೊಂಡು ಮನವೊಲಿಸಲು ಪ್ರಯತ್ನ ಮಾಡುತ್ತಿದ್ದ. ಆರಂಭದಲ್ಲಿ ಎಲ್ಲವೂ ಕೂಲ್ ಆಗಿಯೇ ನಡೆಯುತ್ತಿತ್ತು. ಆದರೆ ವಾಗ್ವಾದ ಜೋರಾಗಿದ್ದು ಯುವಕ ಯುವತಿಗೆ ಕೈ ಮಾಡುತ್ತಾನೆ.
ಮಡಿಕೇರಿ: ಈಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಮೊನ್ನೆಯಷ್ಟೇ ಕೊಡಗಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಸಿಕೊಂಡ ವಿಜಯ್ ರಶ್ಮಿಕಾ ಜೋಡಿಗೆ ಅವರ ರಶ್ಮಿಕಾ ತಂದೆ ಮದನ್ ಮಂದಣ್ಣ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ ಎನ್ನಲಾಗಿದೆ. ವಿರಾಜಪೇಟೆ ಚೆಂಚೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಲೂರು ಗ್ರಾಮದ ನಿವಾಸಿ, ಮಾಜಿ ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಾಗಿದ್ದ ಮದನ್ ಮಂದಣ್ಣ ಮತ್ತು ಪತ್ನಿ ಸುಮನ್ ಮಂದಣ್ಣ ಅವರ ಹೆಸರಿನಲ್ಲಿದ್ದ ಸರ್ವೆ ಸಂಖ್ಯೆ 142/1 ಮತ್ತು 142/2 ಐಷಾರಾಮಿ (ಸೆರಿನಿಟಿ) ಮನೆಯನ್ನು ವಿರಾಜಪೇಟೆ ಉಪನೋಂದಣಿ ಕಚೇರಿಯಲ್ಲಿ ಮಗಳು ರಶ್ಮಿಕಾ ಮಂದಣ್ಣ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ.
ನವದೆಹಲಿ: ಗುಜರಾತ್ನ ಜನರನ್ನು ಗುರಿಯಾಗಿಸಿ ಇತ್ತೀಚೆಗೆ ಮಾಡಿದ ಹೇಳಿಕೆಗಳಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಕ್ಷಮೆಯಾಚಿಸಿದ್ದಾರೆ. ತಮ್ಮ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಅವರು ಎಂದಿಗೂ ಹೊಂದಿಲ್ಲ ಎಂದು ಹೇಳಿದ್ದಾರೆ. ನಾನು ಯಾವತ್ತೂ ಗುಜರಾತಿನ ಜನರ ಭಾವನೆಗಳಿಗೆ ಧಕ್ಕೆ ತರುವುದು ನನ್ನ ಉದ್ದೇಶವಾಗಿರಲಿಲ್ಲ ಮತ್ತು ನಾನು ಯಾವಾಗಲೂ ಗೌರವವನ್ನು ಹೊಂದಿದ್ದೇನೆ.ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಅವರು ಮಾಡಿದ ಹೇಳಿಕೆಯಿಂದ ರಾಜಕೀಯ ಗದ್ದಲ ಉಂಟಾದ