ಬೆಂಗಳೂರು: ಇನ್ನೊಂದು ಪ್ರೊಡಕ್ಷನ್ ನಮ್ಮನ್ನು ಸೇರಲು ರೆಡಿ ಆಗ್ತಿದೆ ಎಂದು ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಜೋಡಿ ಗುಡ್ ನ್ಯೂಸ್ ಕೊಟ್ಟಿದೆ. ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚನ ಈಗ ಎರಡನೇ ಮಗುವಿನ ತಾಯಿಯಾಗಲಿದ್ದಾರೆ. ತಮ್ಮ ಕುಟುಂಬದ ಖುಷಿ ಸುದ್ದಿಯನ್ನು ಭುವನ್ ಪೊನ್ನಣ್ಣ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಹರ್ಷಿಕಾ ಮತ್ತು ಭುವನ್ ಗೆ ಈಗಾಗಲೇ ಮುದ್ದಾದ ಹೆಣ್ಣು ಮಗುವಿದೆ. ಈ ಮಗುವಿಗೆ ಈಗಷ್ಟೇ ಒಂದೂವರೆ ವರ್ಷವಾಗಿದೆ. ಇದರ ಬೆನ್ನಲ್ಲೇ ಈಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಹರ್ಯಾಣ: ತರಕಾರಿ ಅಂಗಡಿಯವನ ಬಳಿಯಿಂದ ಬಿಟ್ಟಿಯಾಗಿ ಹಣ್ಣು ತಿಂದಿದ್ದಲ್ಲದೆ ದುಡ್ಡು ಕೇಳಿದ್ದಕ್ಕೆ ಪೊಲೀಸ್ ಅಧಿಕಾರಿ ಆಟಾಟೋಪ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೊಲೀಸರೆಂದರೆ ಜನರ ರಕ್ಷಕರು. ಆದರೆ ನಮ್ಮ ದೇಶದಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು ಈ ಹೆಸರಿಗೇ ಕಳಂಕ. ಅದರಲ್ಲೂ ಬೀದಿ ಬದಿ ವ್ಯಾಪಾರಿಗಳಿಂದ ಕಿತ್ತು ತಿನ್ನುವ ಕೆಲಸ ಮಾಡಿ ಕೆಲವರು ಪೊಲೀಸರೆಂದರೇ ಅಸಹ್ಯಪಡುವ ರೀತಿಯಲ್ಲಿ ವರ್ತಿಸುತ್ತಾರೆ. ಇಂತಹದ್ದೇ ಒಬ್ಬ ಪೊಲೀಸ್ ಅಧಿಕಾರಿಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಹರ್ಯಾಣದಲ್ಲಿ. ಬೀದಿ ಬದಿ ವ್ಯಾಪಾರಿಯ ಬಳಿ ಪೊಲೀಸ್ ಅಧಿಕಾರಿಯೊಬ್ಬ ಸೌತೆಕಾಯಿ, ಹಣ್ಣುಗಳನ್ನು ಸೇವಿಸುತ್ತಾನೆ.
ಚೆನ್ನೈ: ಟೀಂ ಮೀಟಿಂಗ್ ಗಳಲ್ಲಿ ಭಾಗಿಯಾಗಲ್ಲ, ಆರಂಭಿಕ ಕೆಲವು ಪಂದ್ಯಗಳನ್ನು ಆಡಲ್ಲ.. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಆಟಗಾರ ಎಂಎಸ್ ಧೋನಿ ಮುಂದಿನ ಕತೆಯೇನು ಎಂದು ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ. ಧೋನಿ ಪ್ರಸ್ತುತ ಐಪಿಎಲ್ ಆಡುತ್ತಿರುವ ಹಿರಿಯ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿ ಇಷ್ಟು ವರ್ಷ ಕಳೆದರೂ ಈಗಲೂ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಆದರೆ ಈಗ ಅವರಿಗೆ ಫಿಟ್ನೆಸ್ ಪದೇ ಪದೇ ಕೈಕೊಡುತ್ತಿದೆ. ಇದೇ ಕಾರಣಕ್ಕೆ ಅವರು ಆರಂಭದ ಸುಮಾರು 6 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.
ಕ್ಯಾಲಿಫೋರ್ನಿಯಾ: ಶಾಪಿಂಗ್ ಮಾಲ್ ನಲ್ಲಿ ಯುವಕನೊಬ್ಬ ಪ್ಯಾಂಟ್ ಜಿಪ್ ತೆಗೆದು ಖಾಸಗಿ ಅಂಗಾಂಗವನ್ನು ಕೆಳಗೆ ಕೂತಿದ್ದ ಯುವತಿಯ ಕಿವಿಗೊತ್ತಿ ಅಸಭ್ಯ ವರ್ತನೆ ತೋರಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾ ಹೋಲ್ ಫುಡ್ಸ್ ಸೆಂಟರ್ ನಲ್ಲಿ ನಡೆದ ಘಟನೆ ಇದಾಗಿದೆ. ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆ ಮೀರಿ ವರ್ತಿಸುತ್ತಾರೆ. ಇಂತಹದ್ದೇ ಒಂದು ಘಟನೆ ಇದಾಗಿದ್ದು ವಿಡಿಯೋ ನೋಡಿ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಪಿಂಗ್ ಮಾಲ್ ನಲ್ಲಿ ಮಹಿಳೆಯೊಬ್ಬರು ತನಗೆ ಬೇಕಾದ ವಸ್ತುಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದರು.
ನವದೆಹಲಿ: ದೇಶವೀಗ ಸಂಪೂರ್ಣವಾಗಿ ನಕ್ಸಲ್ ಮುಕ್ತ ಎಂದು ಘೋಷಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ನಕ್ಸಲ್ ಬೆಂಬಲಿಗರ ಜೊತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವೇದಿಕೆ ಹಂಚಿಕೊಂಡಿದ್ದರು ಎಂದು ಕಿಡಿ ಕಾರಿದ್ದಾರೆ. ಸಂಸತ್ ನಲ್ಲಿ ಈ ಬಗ್ಗೆ ಸುದೀರ್ಘ ಮಾತನಾಡಿರುವ ಅಮಿತ್ ಶಾ, ದೇಶದ ಕೆಲವು ರಾಜ್ಯಗಳು ನಕ್ಸಲ್ ಪೀಡಿತ ರಾಜ್ಯಗಳಾಗಿದ್ದವು. ಆದರೆ ಈಗ ಮಾವೋವಾದಿಗಳ ಭದ್ರಕೋಟೆಯಾಗಿದ್ದ ಛತ್ತೀಸ್ ಘಡದ ಬಸ್ತಾರ್ ಕೂಡಾ ಈಗ ಅಭಿವೃದ್ಧಿಯತ್ತ ಸಾಗಿದೆ ಎಂದಿದ್ದಾರೆ. ಬಸ್ತಾರ್ ನಲ್ಲಿ ಪ್ರತಿಯೊಂದು ಹಳ್ಳಿಯಲ್ಲೂ ಈಗ ನಕ್ಸಲರು ನಿರ್ಮೂಲನೆಗೊಂಡಿದ್ದು ಶಾಲೆಗಳನ್ನು ತೆರೆಯುವತ್ತ ಹೆಜ್ಜೆಯಿಟ್ಟಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ.
ಗುವಾಹಟಿ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಹೀನಾಯ ಸೋಲಿನ ಬಳಿಕ ರವೀಂದ್ರ ಜಡೇಜಾ ಮೈದಾನದಲ್ಲೇ ಭಾವುಕರಾಗಿ ನಿಂತಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರವೀಂದ್ರ ಜಡೇಜಾ ಹಲವು ವರ್ಷಗಳಿಂದ ಚೆನ್ನೈ ತಂಡದಲ್ಲಿದ್ದವರು. ಕಳೆದ ಸೀಸನ್ ವರೆಗೂ ಸಿಎಸ್ ಕೆಯ ಭಾಗವಾಗಿದ್ದರು. ಸಿಎಸ್ ಕೆಗೆ ಕೊನೆಯ ಬಾರಿಗೆ ಕಪ್ ಗೆದ್ದುಕೊಡುವಲ್ಲಿ ಅವರ ಪಾತ್ರ ದೊಡ್ಡದು. ಆದರೆ ಒಂದು ಕಾಲದ ಚಾಂಪಿಯನ್ ತಂಡ ಇಂದು ಮುಗ್ಗರಿಸಿದೆ. ಧೋನಿ ನಾಯಕತ್ವ ತ್ಯಜಿಸಿದ ಬಳಿಕ ಸಿಎಸ್ ಕೆ ಅಧಃಪತನ ಶುರುವಾಯಿತು ಎನ್ನಬಹುದು. ನಿನ್ನೆಯ ಪಂದ್ಯದಲ್ಲಿ ಸಿಎಸ್ ಕೆ ಮೊದಲು ಬ್ಯಾಟಿಂಗ್ ಮಾಡಿ ಕೇವಲ 127 ರನ್ ಗಳಿಗೆ ಆಲೌಟ್ ಆಗಿತ್ತು.
ಟೆಹ್ರಾನ್: ಮಾನವೀಯ ನೆರವು ಸಂಗ್ರಹಿಸಲು ಭಾರತಕ್ಕೆ ಬರುತ್ತಿದ್ದ ಇರಾನ್ ವಿಮಾನದ ಮೇಲೆ ಅಮೆರಿಕಾ ಏರ್ ಸ್ಟ್ರೈಕ್ ನಡೆಸಿದೆ. ಇದರಿಂದ ವಿಮಾನ ತೀವ್ರ ಹಾನಿಗೊಳಗಾಗಿದೆ. ಭಾರತಕ್ಕೆ ತೆರಳಬೇಕಿದ್ದ ಮಹಾನ್ ಏರ್ ವಿಮಾನ ತೀವ್ರ ಹಾನಿಗೀಡಾಗಿದೆ. ಮಾನವೀಯ ನೆಲೆಯಲ್ಲಿ ಸಂಚರಿಸುವ ವಿಮಾನಗಳ ಮೇಲೆ ಶತ್ರು ದೇಶಗಳು ದಾಳಿ ನಡೆಸುವಂತಿಲ್ಲ. ಹೀಗಾಗಿ ಇದನ್ನು ಅಮೆರಿಕಾದ ಯುದ್ಧಾಪರಾಧ ಎಂದು ಇರಾನ್ ಆಕ್ರೋಶ ವ್ಯಕ್ತಪಡಿಸಿದೆ. ಮಹಾನ್ ಏರ್ ವಿಮಾನವು ಭಾರತದಿಂದ ಯುದ್ಧಪೀಡಿತ ಸ್ಥಳಕ್ಕೆ ಔಷಧಿ, ಅಗತ್ಯ ವಸ್ತುಗಳು, ಪರಿಹಾರ ಸಾಮಗ್ರಿಗಳು ಹೊತ್ತೊಯ್ಯಲು ಬರಬೇಕಿತ್ತು. ಆದರೆ ಅಷ್ಟರಲ್ಲೇ ದಾಳಿಯಾಗಿರುವುದರಿಂದ ನೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಮಳೆಯ ಅಬ್ಬರ ಇನ್ನೂ ನಿಂತಿಲ್ಲ. ಇಂದು ಈ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ವಾರದಿಂದ ಮಳೆಯಾಗುತ್ತಿದೆ. ನಿನ್ನೆಯೂ ಕೆಲವು ಕಡೆ ಮಳೆಯಾಗಿತ್ತು. ಹವಾಮಾನ ವರದಿಗಳ ಪ್ರಕಾರ ಈ ವಾರಂತ್ಯದವರೆಗೂ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎನ್ನಲಾಗಿದೆ. ಇಂದು ಯಾವ ಜಿಲ್ಲೆಗಳಿಗೆ ಮಳೆಯಾಗಿದೆ ಎಂದು ಗಮನಿಸಿ. ಇಂದು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ.
ಇಂದು ಮಂಗಳವಾರವಾಗಿದ್ದು ಆಂಜನೇಯಸ್ವಾಮಿ ಪೂಜೆ ಮಾಡುವುದು ಶ್ರೇಯಸ್ಕರವಾಗಿದೆ. ಇಂದು ಆಂಜನೇಯ ಪೂಜೆ ಮಾಡುವಾಗ ತಪ್ಪದೇ ಏಕಾದಶಮುಖಿ ಹನುಮತ್ಕವಚಂ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.ಶ್ರೀದೇವ್ಯುವಾಚಶೈವಾನಿ ಗಾಣಪತ್ಯಾನಿ ಶಾಕ್ತಾನಿ ವೈಷ್ಣವಾನಿ ಚ ।ಕವಚಾನಿ ಚ ಸೌರಾಣಿ ಯಾನಿ ಚಾನ್ಯಾನಿ ತಾನಿ ಚ ॥ 1॥ಶ್ರುತಾನಿ ದೇವದೇವೇಶ ತ್ವದ್ವಕ್ತ್ರಾನ್ನಿಃಸೃತಾನಿ ಚ ।ಕಿಂಚಿದನ್ಯತ್ತು ದೇವಾನಾಂ ಕವಚಂ ಯದಿ ಕಥ್ಯತೇ ॥ 2॥ ಈಶ್ವರ ಉವಾಚಶಋಣು ದೇವಿ ಪ್ರವಕ್ಷ್ಯಾಮಿ ಸಾವಧಾನಾವಧಾರಯ ।ಹನುಮತ್ಕವಚಂ ಪುಣ್ಯಂ ಮಹಾಪಾತಕನಾಶನಮ್ ॥ 3॥ಏತದ್ಗುಹ್ಯತಮಂ ಲೋಕೇ ಶೀಘ್ರಂ ಸಿದ್ಧಿಕರಂ ಪರಮ್ ।ಜಯೋ ಯಸ್ಯ ಪ್ರಗಾನೇನ ಲೋಕತ್ರಯಜಿತೋ ಭವೇತ್ ॥ 4॥ ಓಂ ಅಸ್ಯ ಶ್ರೀಏಕಾದಶವಕ್ತ್ರಹನುಮತ್ಕವಚಮಾಲಾಮಂತ್ರಸ್ಯ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಕರ್ನಾಟಕದ ಎಲ್ಲಾ ಶಾಸಕರು ಮೂರು ಉಚಿತ ಟಿಕೆಟ್ಗಳನ್ನು ಸ್ವೀಕರಿಸುತ್ತಾರೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ಹೇಳಿದರು.ಅಸಮರ್ಪಕ ಟಿಕೆಟ್ ಹಂಚಿಕೆ ಮತ್ತು ಆಸನ ವ್ಯವಸ್ಥೆಗಳ ಬಗ್ಗೆ ಪಕ್ಷದ ರೇಖೆಗಳಾದ್ಯಂತ ಶಾಸಕರು ಕಳವಳ ವ್ಯಕ್ತಪಡಿಸುವುದರೊಂದಿಗೆ ತೀವ್ರ ಗದ್ದಲದ ಹಿನ್ನೆಲೆಯಲ್ಲಿ ಈ ಘೋಷಣೆ ಬಂದಿದೆ. ಕೆಲ ವಿರೋಧ ಪಕ್ಷದ ಶಾಸಕರು ಈ ಬೇಡಿಕೆ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ.
ಬೆಂಗಳೂರು: ಮಧ್ಯಾಹ್ನದ ಸುಡು ಬಿಸಿಲಿನೊಂದಿಗೆ ಸಂಜೆ ವೇಳೆ ಸುರಿಯುವ ಸಾಧಾರಣ ಮಳೆಯಿಂದಾಗುವ ಸೆಕೆಗೆ ರಾಜ್ಯದ ಜನತೆ ಸುಸ್ತಾಗಿದ್ದಾರೆ. ಇನ್ನೂ ಈ ಸೆಕೆಗೆ ದೇಹವನ್ನು ತಂಪಾಗಿರಿಸಲು ಹಾಗೂ ದಾಹವನ್ನು ಸರಿತೂಗಿಸಲು ಜನರು ಜ್ಯೂಸ್ ಹಾಗೂ ತಂಪು ಪಾನೀಯವನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಇದರ ಪರಿಣಾಮ ಲಿಂಬೆ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.₹10ಕ್ಕೆ 5 ಸಿಗುತ್ತಿದ್ದ ಲಿಂಬೆ ಹಣ್ಣು ಇದೀಗ ಕೇವಲ 2 ಸಿಗುತ್ತಿದೆ.
ಶಿವಮೊಗ್ಗ ವಿಮಾನ ನಿಲ್ದಾಣದ ಸುತ್ತಮುತ್ತ ತಿರುಗಾಡುತ್ತಿದ್ದ ಕರಡಿಯನ್ನು ಕರ್ನಾಟಕದ ಅರಣ್ಯ ಇಲಾಖೆ ಸೆರೆ ಹಿಡಿದಿದೆ.ಶಿವಮೊಗ್ಗ ಸಮೀಪದ ಸೋಗಾನೆ ಎಂಬಲ್ಲಿ ವಿಮಾನ ನಿಲ್ದಾಣದ ಅಕ್ಕಪಕ್ಕದ ಗ್ರಾಮಗಳಲ್ಲಿ ಕರಡಿ ಓಡಾಡುತ್ತಿರುವುದು ಕಂಡುಬಂದಿದೆ. ಕಾಡುಪ್ರಾಣಿಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅವರು ಪ್ರಾಣಿಗಳ ಚಲನವಲನಗಳನ್ನು ಫೋಟೋಗಳು ಮತ್ತು ವೀಡಿಯೊಗಳಲ್ಲಿ ಸೆರೆಹಿಡಿದಿದ್ದಾರೆ. ಇನ್ನೂ ಕರಣಿ ವಿಮಾನ ನಿಲ್ದಾಣದ ಕಾಂಪೌಂಡ್ ಹಾರಿದ ವಿಡಿಯೋ ಹಾಗೂ ಫೋಟೋ ಕೂಡಾ ವೈರಲ್ ಆಗಿತ್ತು. ಮಾರ್ಚ್ 30 ರಂದು ಅರಣ್ಯ ಇಲಾಖೆಯ ಅಧಿಕಾರಿಗಳು ಕರಡಿಯನ್ನು ಟ್ರಾಂಕ್ವಿಲೈಸರ್ ಡಾರ್ಟ್ ಮೂಲಕ ಶಾಂತಗೊಳಿಸಿ
ಬೆಳ್ತಂಗಡಿ: ಕಳೆದ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವವಿವಾಹಿತ ಉದ್ಯಮಿಯೊಬ್ಬರು ಪತ್ನಿಯ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಮಾ.29ರ ಭಾನುವಾರ ನಡೆದಿದೆ.ಮೃತರನ್ನು ಪುತ್ತೂರು ತಾಲೂಕಿನ ನೆಲ್ಯಾಡಿ ಮೂಲದ ಬಿ ಸುಧೀಪ್ ರೈ (36) ಎಂದು ಗುರುತಿಸಲಾಗಿದೆ. ಇವರು ಬೆಳ್ತಂಗಡಿಯ ಲಾಯಿಲ ಗ್ರಾಮದ ಕಾರ್ನೋಡಿಯಲ್ಲಿರುವ ತಾತನ ಮನೆಯಲ್ಲಿ ವಾಸವಿದ್ದರು.ಮಾರ್ಚ್ 17 ರಂದು ಸುಧೀಪ್ ರೈ ಅವರು ಆಹಾರದ ಜತೆಗೆ ವಿಷವನ್ನು ಸೇವಿಸಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ
ಬನ್ನೇರುಘಟ್ಟ ಸಮೀಪದ ಕುಲುಮೆಪಾಳ್ಯ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇದೀಗ ರಾತ್ರಿ ವೇಳೆ ಕಾರಿನಲ್ಲಿ ಹೋಗುತ್ತಿದ್ದ ಮಂದಿಗೆ ಕಾಡಾನೆಯೊಂದು ರಸ್ತೆ ಮಧ್ಯದಲ್ಲಿ ಸಿಕ್ಕಿದ್ದು, ಇದನ್ನು ಅವರು ವಿಡಿಯೋ ಮಾಡಿದ್ದಾರೆ. ಒಂಟಿ ಸಲಗ ಕೆಲಹೊತ್ತು ರಸ್ತೆಲ್ಲೇ ನಿಂತಿದ್ದ ವಾಹನವನ್ನು ನೋಡುತ್ತಲೇ ನಿಂತಿದೆ. ರಸ್ತೆಯಲ್ಲಿ ಚಲಿಸುತ್ತಿದ್ದಾಗ ಒಮ್ಮೆಲೇ ಬೃಹತ್ ಗಾತ್ರದ ಕಾಡಾನೆಯನ್ನು ನೋಡಿ, ವಾಹನದಲ್ಲಿದ್ದವರು ಶಾಕ್ ಆಗಿದ್ದಾರೆ. ರಾತ್ರಿ ವೇಳೆಯಲ್ಲಿ ಗ್ರಾಮಗಳಿಗೆ ನುಗ್ಗುತ್ತಿರುವ ಆನೆಗಳ ಗುಂಪು, ರಸ್ತೆಗಳಲ್ಲೇ ನಿಂತು ವಾಹನ ಸವಾರರಿಗೆ ಭೀತಿ ಹುಟ್ಟಿಸುತ್ತಿವೆ.
ಬೆಂಗಳೂರು: ಸದ್ಯ ರಸ್ತೆ ಸಾರಿಗೆ ನಿಗಮಗಳಿಗೆ ಡೀಸೆಲ್ ಕೊರತೆಯಿಲ್ಲ. ಇನ್ನು ಯುದ್ಧ ಹೀಗೆಯೇ ಮುಂದುವರೆದ್ರೆ ಸಮಸ್ಯೆ ಆಗಬಹುದು ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು. ಇನ್ನೂ ಈ ಸಂಬಂಧ ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಎಸ್ಆರ್ಟಿಸಿ ಡೀಸೆಲ್ ಸಮಸ್ಯೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ತಕ್ಷಣಕ್ಕೆ ಯಾವುದೇ ಸಮಸ್ಯೆಯಿಲ್ಲ. ಇನ್ನೂ ನಾಲ್ಕು ನಿಗಮಗಳಿಗೂ ತೊಂದರೆಯಿಲ್ಲ, ಅದಲ್ಲದೆ ತಕ್ಷಣಕ್ಕಂತೂ ಯಾವುದೇ ಸಮಸ್ಯೆಯಿಲ್ಲ. ಯುದ್ಧ ಹೀಗೆ ಮುಂದುವರಿದ್ರೆ ಸಮಸ್ಯೆ ಆಗುವ ಸಾಧ್ಯತೆಯಿದೆ ಎಂದರು.
ಐಪಿಎಲ್ 2026 ರ ಎರಡನೇ ಪಂದ್ಯದಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಗೆದ್ದುಬೀಗಿತ್ತು. ಬ್ಯಾಟಿಂಗ್ಗೆ ಹೋಗುವುದಕ್ಕೂ ಮುನ್ನಾ ರೋಹಿತ್ ಶರ್ಮಾ ಅವರು ಬ್ಯಾಟ್ ಅನ್ನು ಪರಿಶೀಲಿಸಲು ಬಂದ ಅಂಪೈರ್ನೊಂದಿಗಿನ ಮಾತುಕತೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂಪೈರ್ ರೋಹಿತ್ ಅವರ ಬ್ಯಾಟ್ ಅನ್ನು ಪರಿಶೀಲಿಸುತ್ತಿದ್ದರು ಮತ್ತು ಅದು ಅಳತೆ ಗೇಜ್ನಲ್ಲಿ ಸಿಲುಕಿತು. ಅದಕ್ಕೆ ರೋಹಿತ್ ಎಲ್ಲವೂ ಚೆನ್ನಾಗಿದೆ, ನೀವು ನನ್ನನ್ನು ಆಡಲು ಹೋಗಲು ಬಿಡಿ. ನಿಮಗೇನು ಗೊತ್ತಿಲ್ಲ ಎಂದು ಹೇಳುತ್ತಾ ಬ್ಯಾಟಿಂಗ್ ಮಾಡಲು ಹೋದರು.
ಬೆಂಗಳೂರು: ಉತ್ತರ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ಕಂಡುಬಂದಿರುವ ಟ್ರಫ್ ಮತ್ತು ದಕ್ಷಿಣ ಒಳನಾಡಿನಲ್ಲಿರುವ ವಾಯುಭಾರ ಕುಸಿತ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದರ. ಇನ್ನೂ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಬೆಂಗಳೂರಿನಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎನ್ನಲಾಗಿದೆ. ಇನ್ನೂ ಮುಂದಿನ 5 ದಿನಗಳವರೆಗೆ ದಕ್ಷಿಣ ಮತ್ತು ಉತ್ತರ ಒಳನಾಡಿನ
ತಮಿಳುನಾಡು: ಕೊಯಮತ್ತೂರಿನ ಕೋವೈಪುದೂರಿನಲ್ಲಿ ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ನಿಂದ ಬಿದ್ದು 66 ವರ್ಷದ ಮಹಿಳೆ ಸಾವನ್ನಪ್ಪಿರುವ ಧಾರುಣ ಘಟನೆ ವರದಿಯಾಗಿದೆ. ಕೋವೈಪುದೂರು ಬಳಿಯ ಅರಿವೋಲಿ ನಗರದ ಅಣ್ಣಾ ಸತುಕ್ಕಂ ನಿವಾಸಿ ಜಿ.ಕಾಮಚಿ ಮೃತ ದುರ್ದೈವಿ. ಕೋವೈಪುದೂರಿನಲ್ಲಿ ಬೆಳಗ್ಗೆ 9.51ಕ್ಕೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಯ್ಯಪ್ಪಲ್ ಕೋವಿಲ್ ಬಸ್ ನಿಲ್ದಾಣದಿಂದ ಹಿಂಬದಿಯ ಮೆಟ್ಟಿಲುಗಳ ಮೂಲಕ ಕಾಮಚಿ ರೂಟ್ ಸಂಖ್ಯೆ ಎಸ್ -17 ರ ಬಸ್ ಹತ್ತಿದರು.
ಬಾಗಲಕೋಟೆ: ಮುಖ್ಯಮಂತ್ರಿಯಾದಿಯಾಗಿ ಯಾರೇ ಇಲ್ಲಿ ಬಂದು ಬೀಡು ಬಿಟ್ಟರೂ ಮತದಾರರು ಬಿಜೆಪಿಗೆ ಆಶೀರ್ವಾದ ನೀಡಿ ಚರಂತಿಮಠ ಅವರನ್ನು ಗೆಲ್ಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಇಂದು ಉತ್ತರ ನೀಡಿದ ಅವರು, ಕಾಂಗ್ರೆಸ್ಸಿನ ತಂತ್ರ, ಕುತಂತ್ರ ಯಾವುದೂ ನಡೆಯುವುದಿಲ್ಲ ಎಂದು ತಿಳಿಸಿದರು. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮತದಾರರ ಒಲವು ಬಿಜೆಪಿ ಪರವಾಗಿ ಹೆಚ್ಚಾಗುತ್ತಿದೆ. ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ನಮ್ಮ ಅಭ್ಯರ್ಥಿ ಬೆಳಿಗ್ಗೆ 7ರಿಂದ ಮತಯಾಚನೆ ಮಾಡುತ್ತಿದ್ದಾರೆ. ವಾತಾವರಣ ಬಿಜೆಪಿ ಪರವಾಗಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕುಪ್ಪುಗೋಡು ಗ್ರಾಮದಲ್ಲಿ ಮುಂಜಾನೆ ಒಂಟಿ ಕಾಡಾನೆಯೊಂದು ಅಟ್ಟಹಾಸ ಮೆರೆದಿದ್ದು ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.ಸ್ಥಳೀಯರ ಪ್ರಕಾರ, ಆನೆಯು ನಿವಾಸಿ ಕೃಷ್ಣಪ್ಪ ಎಂಬುವರ ಮನೆಯ ಬಳಿ ದಾರಿ ತಪ್ಪಿ, ಪಕ್ಕದಲ್ಲಿ ನಿಂತಿದ್ದ ಆಟೋ ರಿಕ್ಷಾ ಮೇಲೆ ದಾಳಿ ಮಾಡಿದೆ. ಈ ವಿಡಿಯೋಯವನ್ನು ಅಲ್ಲೇ ಇದ್ದವರೊಬ್ಬರು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ.ಈ ವಿಡಿಯೋದಲ್ಲಿ ಆನೆಯು ನಿಲ್ಲಿಸಿದ್ದ ಆಟೋ ಮೇಲೆ ಹಾನಿಯನ್ನು ಉಂಟು ಮಾಡಿದೆ. ಆನೆಯು ವಾಹನದ ಮೇಲೆ ತನ್ನ
ಯುಗಾದಿ ಶುಭಸಂದರ್ಭದಲ್ಲಿ 'ಕಾಂತಾರ ಅಧ್ಯಾಯ 2' ನ ಬಗ್ಗೆ ಸುಳಿವು ನೀಡುತ್ತಿದ್ದ ಹಾಗೇ ನಟ ರಿಷಬ್ ಶೆಟ್ಟಿ ತನ್ನ ಇನ್ಸ್ಟಾಗ್ರಾಂ ಖಾತೆಯಿಂದ ಹಲವರನ್ನು ಅನ್ಫಾಲೋ ಮಾಡಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ.ಸಾಮಾಜಿಕ ಜಾಲತಾಣದಲ್ಲಿ ನಟನ ಹಠಾತ್ ಮತ್ತು ಗಮನಾರ್ಹ ಬದಲಾವಣೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಇನ್ನೂ ಅದರಲ್ಲೂ ನಟ ತಮ್ಮ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿದ್ದ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ, ಕಾಂತಾರ 1 ನಟಿ ರುಕ್ಮಿಣಿ ವಸಂತ್ ಅವರನ್ನು ಅನ್ಫಾಲೋ ಮಾಡಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ. ಕಾಂತಾರ ನಿರ್ದೇಶಕರು ತಮ್ಮ ಸಂಪೂರ್ಣ ನಿಕಟ ವಲಯವನ್ನು ಚಿತ್ರರಂಗದಿಂದ ಅನ್ಫಾಲೋ ಮಾಡಿದ್ದಾರೆ, ಈ ಕ್ರಮದ
ಹಿರಿಯ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ಇಂದು ವಿಧಿವಶರಾಗಿದ್ದಾರೆ. ಅವರು ಅಲ್ಪಕಾಲದ ಅನಾರೋಗ್ಯದ ನಂತರ ನಟನ ನಿವಾಸದಲ್ಲಿ ನಿಧನರಾದರು. ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಜೀವನ ಮತ್ತು ವೃತ್ತಿಜೀವನದ ಬೆಳವಣಿಗೆಯಲ್ಲಿ ಅವರ ತಾಯಿ ಸ್ವರ್ಣಲತಾ ಅವರ ಬೆಂಬಲ ಬಲವಾಗಿತ್ತು.
ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣದ ಗಜುವಾಕ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ವರದಿಯಾಗಿದೆ. ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರು ತನ್ನ ಪ್ರೇಯಸಿಯನ್ನು ಕೊಂದು, ಆಕೆಯ ದೇಹವನ್ನು ತುಂಡರಿಸಿ ಫ್ರಿಡ್ಜ್ನಲ್ಲಿಟ್ಟಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಅಲ್ಲದೇ ಕೆಲವು ಭಾಗಗಳನ್ನು ಚೀಲದಲ್ಲಿ ತುಂಬಿ ನಿರ್ಜನ ಪ್ರದೇಶದಲ್ಲಿ ಎಸೆದು ಸಾಕ್ಷ್ಯಗಳನ್ನು ನಾಶ ಪಡಲು ಯತ್ನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇರಾನ್ನ ರೆವಲ್ಯೂಷನರಿ ಗಾರ್ಡ್ ನೌಕಾಪಡೆಯ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಅವರ ಸಾವನ್ನು ಇರಾನ್ ಸೋಮವಾರ ದೃಢಪಡಿಸಿದೆ. ಇರಾನ್ ನೌಕಾಪಡೆಯ ಹಿಂದಿನ ಅಡ್ಮಿರಲ್ ತಂಗ್ಸಿರಿಯನ್ನು ಕೊಂದಿರುವುದಾಗಿ ಮಾರ್ಚ್ 26 ರಂದು ಇಸ್ರೇಲ್ ಹೇಳಿಕೊಂಡಿತ್ತು.ಸೋಮವಾರದ ಗಾರ್ಡ್ನ ಹೇಳಿಕೆಯು ರಾಜ್ಯ ದೂರದರ್ಶನದಲ್ಲಿ ಓದಿದೆ, ತಂಗ್ಸಿರಿ "ಅವರ ಗಾಯಗಳ ತೀವ್ರತೆಯಿಂದಾಗಿ ಅಲ್ಲಾನ ಶ್ರೇಣಿಯನ್ನು ಸೇರಿಕೊಂಡರು" ಎಂದು ಹೇಳಿದರು.ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೇವಿ ಕಮಾಂಡರ್ ಅಲಿರೆಜಾ ಟ್ಯಾಂಗ್ಸಿರಿ ಇಸ್ರೇಲ್ನ ಉದ್ದೇಶಿತ
ಬೆಂಗಳೂರು: ಈಚೆಗೆ ಸದನದಲ್ಲಿ ಶಾಸಕರು ಟಿಕೆಟ್ಗಾಗಿ ಬೇಡಿಕೆಯಿಟ್ಟಿರುವುದು ತಪ್ಪು. ಅವರಿಗೇನಾದ್ರು ಇಷ್ಟವಿದ್ದರೆ ವೈಕ್ತಿವಾಗಿ ಹಣ ಕೊಟ್ಟು ನೋಡಲಿ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.ಸುದ್ದಿಗಾರರ ಜತೆ ಮಾತನಾಡಿದ ಅವರು, ಇದೀಗ ಐಪಿಎಲ್ ಟಿಕೆಟ್ ಕೇಳುವವರು ಅಂದು ದುರ್ಘಟನೆ ಸಂದರ್ಭದಲ್ಲಿ ಅವರು ಯಾವ ರೀತಿ ವಾಗ್ದಾಳಿ ಮಾಡಿದ್ದರು, ಪದ ಬಳಸಿದ್ದರು ಎಂದು ತೆಗೆದು ನೋಡಲಿ ಎಂದರು.
ಬೆಂಗಳೂರು: ಮಸೀದಿ ಕೆಡವಿದ್ರೆ ದೇವಾಲಯ ಸಿಗುವಂತೆ ದೇವಾಲಯ ಕೆಡವಿದ್ರೂ ಸ್ತೂಪ ಸಿಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿ ವಿವಾದದ ಕಿಡಿ ಹತ್ತಿಸಿದ್ದಾರೆ. ನವೀನ್ ಸೂರಿಂಜೆಯವರ ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಿಯಾಂಕ್ ಖರ್ಗೆ ಈ ವಿವಾದಿತ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.ನೀವು ಇತಿಹಾಸವನ್ನು ಹುಡುಕಿದರೆ ಮಸೀದಿಯನ್ನು ಕೆಡವಿದರೆ ದೇವಾಲಯ ಸಿಗುತ್ತದೆ. ಅದೇ ರೀತಿ ದೇವಾಲಯವನ್ನು ಕೆಡವಿದರೂ ಸ್ತೂಪ ಸಿಗಬಹುದು.
ಮದುವೆ ಮನೆ ಊಟದ ವೇಳೆ ಬಿರಿಯಾನಿಯಲ್ಲಿ ಚಿಕನ್ ಲೆಗ್ ಪೀಸ್ ಇಲ್ಲವೆಂದು ಶುರುವಾದ ಮಾತು ಹೊಡೆದಾಟದಲ್ಲಿ ಅಂತ್ಯವಾದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುಪಿಯ ಅಮ್ರೋಹಾದಲ್ಲಿ ಮದುವೆಯ ಸಂಭ್ರಮಾಚರಣೆ ಆಘಾತಕಾರಿ ತಿರುವು ಪಡೆದುಕೊಂಡಿತು. ಅನ್ನಛತ್ರವು ಆಘಾತಕಾರಿ ಘಟನೆಗೆ ಸಾಕ್ಷಿಯಾಯಿತು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕೆಲ ವ್ಯಕ್ತಿಗಳು ಟೇಬಲ್ ಮೇಲೆ ಕುರ್ಚಿಗಳನ್ನು ಎತ್ತಿ ಬಿಸಾಕುವುದನ್ನು ಕಾಣಬಹುದು.
ಬಾಗಲಕೋಟೆ: ಕರ್ನಾಟಕದಲ್ಲಿ ಎರಡು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ಪ್ರಚಾರ ಶುರು ಮಾಡಿದೆ. ಇಂದು ಬಾಗಲಕೋಟೆಯಲ್ಲಿ ಬಿಜೆಪಿ ಭರ್ಜರಿ ಪ್ರಚಾರ ನಡೆಸಿದೆ. ಬಾಗಲಕೋಟೆ ಮತ್ತು ದಾವಣಗೆರೆ ಕ್ಷೇತ್ರಗಳಿಗೆ ಏಪ್ರಿಲ್ 10 ರಂದು ಉಪ ಚುನಾವಣೆ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದೊಳಗಿನ ಅಸಮಾಧಾನಕ್ಕೆ ತಾತ್ಕಾಲಿಕ ಮದ್ದು ಅರೆದು ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇಂದು ಬಾಗಲಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಪ್ರಚಾರ ನಡೆಸಲಾಗಿದೆ. ಪಾದಯಾತ್ರೆ ಮೂಲಕ ಬಿಜೆಪಿ ನಾಯಕರು ಮನೆ ಮನೆಗೆ ತೆರಳಿ ಮತ ಯಾಚನೆ ನಡೆಸಿದ್ದಾರೆ.
ಮುಂಬೈ: ಐಪಿಎಲ್ 2026 ಕೆಕೆಆರ್ ವಿರುದ್ಧದ ಆರಂಭಿಕ ಪಂದ್ಯಕ್ಕೆ ಮುನ್ನ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೈದಾನದ ಸಿಬ್ಬಂದಿಗಳಿಗೆ ದೊಡ್ಡ ಮೊತ್ತದ ಹಣ ಬಹುಮಾನವಾಗಿ ನೀಡಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಅವರು ಖರ್ಚು ಮಾಡಿದ್ದೆಷ್ಟು ಗೊತ್ತಾ? ಮುಂಬೈ ಮೈದಾನ ಸಿಬ್ಬಂದಿಗಳಿಗೆ ಹಾರ್ದಿಕ್ 2.5 ಲಕ್ಷ ರೂ.ಗಳ ಚೆಕ್ ವಿತರಿಸಿದ್ದಾರೆ. ಸುಮಾರು 10 ರಿಂದ 11 ಸಿಬ್ಬಂದಿಗಳಿಗೆ 2.5 ಲಕ್ಷ ರೂ.ಗಳ ಚೆಕ್ ನ್ನು ಹಾರ್ದಿಕ್ ಪಾಂಡ್ಯ ಹಸ್ತಾಂತರಿಸಿ ಫೋಟೋಗೆ ಪೋಸ್ ನೀಡಿದ್ದಾರೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಇಳಿಕೆಯಾಗಿತ್ತು. ಆದರೆ ಇಂದು ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಇಳಿಕೆಯಾಗಿತ್ತು. ಇದು ಬೆಳೆಗಾರರಿಗೆ ಆತಂಕ ತಂದಿತ್ತು. ಕಳೆದ ಕೆಲವು ದಿನಗಳಿಂದ ಸತತವಾಗಿ ಬೆಲೆ ಇಳಿಕೆ ಕಂಡುಬರುತ್ತಿತ್ತು. ಆದರೆ ವಾರಂತ್ಯಕ್ಕೆ ಕೆಲವು ವರ್ಗದ ಅಡಿಕೆ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿತ್ತು. ಇಂದು ಹೊಸ ಅಡಿಕೆ ಬೆಲೆ 480 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 550 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ 550 ರೂ.ಗಳಷ್ಟಾಗಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಏರಿಕೆಯಾಗಿದ್ದು ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ವಾರಂತ್ಯಕ್ಕೆ ಪರಿಶುದ್ಧ ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗಿತ್ತು. ಪರಿಶುದ್ಧ ಚಿನ್ನದ ದರ ವಾರಂತ್ಯಕ್ಕೆ 1,50,545.00 ರೂ.ಗಳಿತ್ತು. ಆದರೆ ಇಂದು ಏರಿಕೆಯಾಗಿದ್ದು 1,50,575.00 ರೂ.ಗಳಷ್ಟಿದೆ.
ಹೆರಿಗೆ ನಂತರ ಬಹುತೇಕ ಮಹಿಳೆಯರು ತೂಕ ಹೆಚ್ಚಳವಾಗುತ್ತಿದೆ ಎಂದು ಚಿಂತಿತರಾಗುತ್ತಾರೆ. ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು ಗೊತ್ತಾ? ಹೆರಿಗೆ ನಂತರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರೋನ್ ಹಾರ್ಮೋನ್ ಉತ್ಪತ್ತಿ ದಿಡೀರ್ ಕುಂಠಿತವಾಗುತ್ತದೆ. ಅದರ ಬದಲು ಹಾಲು ಉತ್ಪತ್ತಿ ಮಾಡುವ ಪ್ರೊಲ್ಯಾಕ್ಟಿನ್ ಹಾರ್ಮೋನ್ ಬಿಡುಗಡೆ ಪ್ರಮಾಣ ಹೆಚ್ಚಳವಾಗುತ್ತದೆ. ಈ ಬದಲಾವಣೆ ನಿಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆ ತರಬಹುದು. ಕೆಲವರಿಗೆ ಹೆರಿಗೆ ನಂತರ ಸಕ್ಕರೆ ಅಂಶ ಸಂಸ್ಕರಿಸುವ ವಿಚಾರದಲ್ಲಿ ಬದಲಾವಣೆಯಾಗುತ್ತದೆ. ಇದರಿಂದ ದೇಹದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ.
ರಸ್ತೆಯಲ್ಲಿ ಸಂಚರಿಸುವ ಸಿಟಿ ಬಸ್ ನಿಲ್ಲಿಸಿದಂತೆ ಇಲ್ಲೊಬ್ಬ ಮಹಿಳೆ ಅತೀ ವೇಗದ ಸಮಚಾರ ಮಾಡುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ನಿಲ್ಲಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಂದೇ ಭಾರತ್ ರೈಲುಗಳೆಂದರೆ ಒಂದೊಂದು ನಿಮಿಷವೂ ಅಮೂಲ್ಯವೆಂಬಂತೆ ಸಂಚರಿಸುವ ವೇಗದ ರೈಲುಗಳು. ಇವುಗಳು ಸಮಯದ ವಿಚಾರದಲ್ಲಿ ಪಕ್ಕಾ ಆಗಿರುತ್ತವೆ. ಇದೇ ಕಾರಣಕ್ಕೆ ಇತ್ತೇಚೆಗಿನ ದಿನಗಳಲ್ಲಿ ವಂದೇ ಭಾರತ್ ರೈಲು ಜನಪ್ರಿಯವಾಗುತ್ತಿದೆ. ಆದರೆ ಇಲ್ಲೊಬ್ಬ ಮಹಿಳೆ ರೈಲ್ವೇ ನಿಲ್ದಾಣದಲ್ಲಿ ರೈಲು ಆಗಷ್ಟೇ ಚಾಲೂ ಆದಾಗ ನಿಲ್ದಾಣಕ್ಕೆ ತಲುಪಿದ್ದಾಳೆ.
ಹೈದರಾಬಾದ್: ನಟಿ ಸಾಯಿ ಪಲ್ಲವಿ ಎಲ್ಲೇ ಹೋದರೂ ಸಿಂಪಲ್ ಆಗಿ ಸೀರೆ ಉಟ್ಟಿರುತ್ತಾರೆ. ಸಾಯಿ ಪಲ್ಲವಿ ಯಾಕೆ ಯಾವಾಗಲೂ ಸೀರೆಯೇ ಉಡ್ತಾರೆ ಎನ್ನುವುದಕ್ಕೆ ಅವರೇ ಸಂದರ್ಶನವೊಂದರಲ್ಲಿ ಸೀಕ್ರೆಟ್ ಬಿಚ್ಚಿಟ್ಟಿದ್ದರು. ಸಾಯಿ ಪಲ್ಲವಿ ಯಾವಾಗಲೂ ಸಿಂಪಲ್ ಆಗಿಯೇ ಇರುತ್ತಾರೆ. ಹೊರಗಡೆ ಯಾವುದೇ ಕಾರ್ಯಕ್ರಮಗಳಲ್ಲೂ ಅವರು ಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಸಿನಿಮಾಗಳಲ್ಲಿ ಇರಲಿ, ಹೊರಗೆ ಈವೆಂಟ್ ಗಳಲ್ಲಿ ಇರಲಿ ದೇಹ ತೋರಿಸುವ ಡ್ರೆಸ್ ಹಾಕೋದೇ ಇಲ್ಲ. ಬಿಹೈಂಡ್ ವುಡ್ ಚಾನೆಲ್ ಗೆ ನೀಡಿದ್ದ ಸಂದರ್ಶನದಲ್ಲಿ ಸಾಯಿ ಪಲ್ಲವಿ ಯಾಕೆ ಯಾವತ್ತೂ ಸೀರೆಯೇ ಉಡುತ್ತಾರೆ ಎಂಬುದಕ್ಕೆ ಉತ್ತರ ನೀಡಿದ್ದರು.
ಜ್ಯೋತಿಷ್ಯದ ಪ್ರಕಾರ ಆಯಾ ಗ್ರಹಗಳಿಗೆ ಅನುಗುಣವಾಗಿ ಆಹಾರ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಕುಂಭ ರಾಶಿಯವರು ಜ್ಯೋತಿಷ್ಯದ ಪ್ರಕಾರ ಯಾವ ಆಹಾರ ಸೇವಿಸಿದರೆ ಉತ್ತಮ ಇಲ್ಲಿದೆ ವಿವರ. ಕುಂಭ ರಾಶಿಯನ್ನು ಆಳುವ ಗ್ರಹ ಶನಿ. ಈ ರಾಶಿಯವರು ಮುಖ್ಯವಾಗಿ ನರ ಮತ್ತು ರಕ್ತ ಸಂಚಾರಕ್ಕೆ ಅನುವು ಮಾಡಿಕೊಡುವಂತಹ ಆಹಾರಗಳನ್ನು ಸೇವಿಸಬೇಕು. ಕುಂಭ ರಾಶಿಯವರು ತಮ್ಮ ಪಾದ, ಮಾಂಸಖಂಡಗಳ ಬಲವರ್ಧನೆಗೆ ಹೆಚ್ಚು ಮಹತ್ವ ಕೊಡಬೇಕು. ಈ ರಾಶಿಯವರು ಯಾವ ತರಕಾರಿ, ಹಣ್ಣು, ಧಾನ್ಯ, ಮಸಾಲೆ ಪದಾರ್ಥಗಳನ್ನು ಸೇವಿಸಬೇಕು ಇಲ್ಲಿದೆ ವಿವರ.
ಕೊಯಮತ್ತೂರು: ಖಾಸಗಿ ಬಸ್ ನಲ್ಲಿ ಬಾಗಿಲ ಬಳಿ ನಿಂತಿದ್ದಾಗ ಅಚಾನಕ್ ಆಗಿ ಆಯತಪ್ಪಿ ಬಿದ್ದ ವೃದ್ಧ ಮಹಿಳೆ ಪ್ರಾಣ ಕಳೆದುಕೊಂಡಿದ್ದಾಳೆ. ಈ ಭಯಾನಕ ವಿಡಿಯೋ ಇಲ್ಲಿದೆ ನೋಡಿ. ಈ ಘಟನೆ ನಡೆದಿರುವುದು ಕೊಯಮತ್ತೂರಿನಲ್ಲಿ. ಬಸ್ ನಲ್ಲಿ ಸಂಚರಿಸುವಾಗ ಬಾಗಿಲ ಬಳಿ ನಿಲ್ಲುವುದು ಅಪಾಯಕಾರಿ ಎಂದು ಈ ಘಟನೆ ಮತ್ತೊಮ್ಮೆ ಸಾಬೀತು ಮಾಡಿದೆ. ರಶ್ ಇಲ್ಲದೇ ಇದ್ದರೂ ಬಾಗಿಲು ತೆರೆದಿದ್ದಾಗ ಬಾಗಿಲ ಬಳಿ ನಿಲ್ಲುವುದು ಸರಿಯಲ್ಲ. ಇದೇ ರೀತಿ ಕೊಯಮತ್ತೂರಿನಲ್ಲಿ ಖಾಸಗಿ ಬಸ್ ಒಂದರಲ್ಲಿ 66 ವರ್ಷದ ವೃದ್ಧ ಮಹಿಳೆ ಸಂಚರಿಸುತ್ತಿದ್ದರು. ಕೊವೈಪದೂರಿನಲ್ಲಿ ನಡೆದ ಘಟನೆಯಿದು.
ಗುವಾಹಟಿ: ಐಪಿಎಲ್ 2026 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾಗಿರುವ ಜನಪ್ರಿಯ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಗೆ ಇಂದು ಉಭಯ ಸಂಕಟವೊಂದು ಎದುರಾಗಿದೆ. ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟಿಗ ಸಂಜು ಸ್ಯಾಮ್ಸನ್ ಇದುವರೆಗೆ ರಾಜಸ್ಥಾನ್ ರಾಯಲ್ಸ್ ಪರ ಅಡಿದ್ದರು. ಅದೂ ಕೇವಲ ಆಟಗಾರನಾಗಿ ಅಲ್ಲ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. 2018 ರಿಂದ ಸತತವಾಗಿ 8 ವರ್ಷ ಅವರು ರಾಜಸ್ಥಾನ್ ತಂಡದಲ್ಲಿದ್ದರು. ಆದರೆ ಈ ಸೀಸನ್ ಗೆ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಕರಿಯಾಗಿದ್ದರು. ಹೀಗಾಗಿ ಸಿಎಸ್ ಕೆ ಜೊತೆಗೆ ಸಂಜುಗೆ ಇದು ಮೊದಲ ಟೂರ್ನಮೆಂಟ್.
ಮದುವೆ ಮನೆಯಲ್ಲಿ ಊಟಕ್ಕೆ ಕೂತಾಗ ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಆರಂಭವಾದ ಗಲಾಟೆ ಬಳಿಕ ತಾರಕಕ್ಕೇರಿದ ಘಟನೆ ನಡೆದಿದೆ. ಈ ಸಂದರ್ಭದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಅಮ್ರೋಹಾದಲ್ಲಿ. ಭಾರತದಲ್ಲಿ ಮದುವೆ ಮನೆಯಲ್ಲಿ ಕ್ಷುಲ್ಲುಕ ಕಾರಣಕ್ಕೆ ಗಲಾಟೆಗಳು ಆಗುವ ಅನೇಕ ನಿದರ್ಶನಗಳಿವೆ. ಕೆಲವು ಬಾರಿ ಈ ಗಲಾಟೆ ತಾರಕಕ್ಕೇರಿ ಮದುವೆಯೇ ಮುರಿದು ಬೀಳುತ್ತದೆ. ಇಲ್ಲಿಯೂ ಆಗಿದ್ದು ಇದೆ. ಮುಸ್ಲಿಂ ಕುಟುಂಬವೊಂದರ ಮದುವೆ ಮನೆಯಲ್ಲಿ ಊಟಕ್ಕೆ ಎಲ್ಲಾ ಭಕ್ಷ್ಯ ಭೋಜನಗಳನ್ನು ಬಡಿಸಿ ಚೇರ್ ಗಳನ್ನು ಇಡಲಾಗಿತ್ತು.
ಬೆಂಗಳೂರು: ಕರ್ನಾಟಕ ಸರ್ಕಾರವೇನೋ ಹಿಂದಿ ಭಾಷೆಯನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಮಾಡಿದೆ. ಆದರೆ ಹಿಂದ ಶಿಕ್ಷಕರು ತಮ್ಮ ಭವಿಷ್ಯವೇನು ಎಂಬ ಚಿಂತೆಯಲ್ಲಿದ್ದಾರೆ. ಈಗ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ತೃತೀಯ ಭಾಷೆಗೆ ಅಂಕ ನೀಡುವ ಪದ್ಧತಿಯನ್ನು ಕೈ ಬಿಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೊನ್ನೆ ಘೋಷಣೆ ಮಾಡಿದ್ದರು. ಆದರೆ ಇದು ವಿವಾದಕ್ಕೆ ಕಾರಣವಾಗಿದೆ. ಕೆಲವರು ಈ ನಿರ್ಧಾರವನ್ನು ಸ್ವಾಗತಿಸಿದ್ದರೆ ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಿಂದಿ ಆಡಳಿತ ಭಾಷೆಯಾಗಿ ಉಳಿದುಕೊಂಡಿದೆ. ಹೀಗಿರುವಾಗ ಹಿಂದಿಯನ್ನು ಕಡೆಗಣಿಸಿದರೆ ಭವಿಷ್ಯದಲ್ಲಿ ಕಷ್ಟವಾಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ: ಐಪಿಎಲ್ 2026 ರಲ್ಲಿ ತನ್ನ ಆರಂಭಿಕ ಪಂದ್ಯವನ್ನು ಗೆದ್ದ ಮುಂಬೈ ಇಂಡಿಯನ್ಸ್ ತಂಡ 14 ವರ್ಷಗಳ ಶಾಪ ಕಳೆದುಕೊಂಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಿನ್ನೆ ಹೈ ಸ್ಕೋರಿಂಗ್ ಪಂದ್ಯವನ್ನು ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಇದಕ್ಕೆ ಕಾರಣ ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ ಅಬ್ಬರದ ಬ್ಯಾಟಿಂಗ್ ನಿಂದ ಮುಂಬೈ 221 ರನ್ ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತಿದೆ.19.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತು.
ಬೆಂಗಳೂರು: ಕಳೆದ ವಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಿತ್ತು. ಈ ವಾರವೂ ಬಿರು ಬೇಸಿಗೆಯ ನಡುವೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆಯಿದೆ. ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲ್ಲಿದೆ ಹವಾಮಾನ ವರದಿ. ಕಳೆದ ವಾರ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿತ್ತು. ವಾರದ ಆರಂಭದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಮತ್ತು ವಾರಂತ್ಯಕ್ಕೆ ಒಳನಾಡಿನಲ್ಲೂ ಮಳೆಯಾಗಿತ್ತು. ಈ ವಾರವೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಸೂಚನೆಯಿದೆ.
ಇಂದು ಸೋಮವಾರವಾಗಿದ್ದು ಶಿವನಿಗೆ ವಿಶೇಷವಾದ ದಿನವಾಗಿದೆ. ಆಯಸ್ಸು, ಆರೋಗ್ಯ ವೃದ್ಧಿಗಾಗಿ ಇಂದು ಶಿವನನ್ನು ಕುರಿತ ಶಿವ ಷಡಕ್ಷರೀ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.॥ಓಂ ಓಂ॥ಓಂಕಾರಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿನಃ ।ಕಾಮದಂ ಮೋಕ್ಷದಂ ತಸ್ಮಾದೋಂಕಾರಾಯ ನಮೋನಮಃ ॥ 1 ॥ ॥ಓಂ ನಂ॥ನಮಂತಿ ಮುನಯಃ ಸರ್ವೇ ನಮಂತ್ಯಪ್ಸರಸಾಂ ಗಣಾಃ ।ನರಾಣಾಮಾದಿದೇವಾಯ ನಕಾರಾಯ ನಮೋನಮಃ ॥ 2 ॥ ॥ಓಂ ಮಂ॥ಮಹಾತತ್ವಂ ಮಹಾದೇವ ಪ್ರಿಯಂ ಜ್ಞಾನಪ್ರದಂ ಪರಮ್ ।ಮಹಾಪಾಪಹರಂ ತಸ್ಮಾನ್ಮಕಾರಾಯ ನಮೋನಮಃ ॥ 3 ॥ ॥ಓಂ ಶಿಂ॥ಶಿವಂ ಶಾಂತಂ ಶಿವಾಕಾರಂ ಶಿವಾನುಗ್ರಹಕಾರಣಮ್ ।ಮಹಾಪಾಪಹರಂ ತಸ್ಮಾಚ್ಛಿಕಾರಾಯ ನಮೋನಮಃ ॥ 4 ॥
ವಾರಣಾಸಿ: ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದಾಗ ಯಾಕೆ ಎಂದು ಪ್ರಶ್ನಿಸಿದಾಗ ಪ್ರೇತ ಹಿಡಿದಿದೆ ಎಂದು ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಈ ಘಟನೆ ಬೆಂಗಳೂರಿನಿಂದ ವಾರಣಾಸಿಗೆ ಇಂಡಿಗೋ ವಿಮಾನ 6E-185 ರಲ್ಲಿ ನಡೆದಿದೆ. ರಾತ್ರಿ 8:15 ರ ಸುಮಾರಿಗೆ ಬೆಂಗಳೂರಿನಿಂದ ಟೇಕ್ ಆಫ್ ಆಗಿದ್ದು, ಪ್ರಯಾಣಿಕರಲ್ಲಿ ಉತ್ತರ ಪ್ರದೇಶದ ಮೌ ಜಿಲ್ಲೆಯ ನಿವಾಸಿ ಮೊಹಮ್ಮದ್ ಅದ್ನಾನ್ ಎಂಬ ವ್ಯಕ್ತಿ ಕೂಡ ಇದ್ದರು. ಪ್ರಯಾಣದ ಕೇವಲ 15 ನಿಮಿಷಗಳಲ್ಲಿ ಅದ್ನಾನ್ ಎಮರ್ಜೆನ್ಸಿ ಡೋರ್ ಅನ್ನು ತೆಗೆಯಲು ಪ್ರಯತ್ನಿಸಿದ್ದಾನೆ. ಕೂಡಲೇ ಗಮನಿಸಿದ ಕ್ಯಾಬಿನ್ ಸಿಬ್ಬಂದಿ, ಆತನಿಗೆ ಮನವರಿಕೆ ಮಾಡಲು ಯತ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಭಾಷಣದ ವೇಳೆಯೇ ಮಹಿಳಾ ಪ್ರಶಿಕ್ಷಣಾರ್ಥಿ ಕುಸಿದು ಬಿದ್ದ ಘಟನೆ ನಡೆದಿದೆ. ಇದನ್ನು ಗಮನಿಸಿದ ಸಿದ್ದರಾಮಯ್ಯನವರು ಮೊದಲು ಅವರಿಗೆ ನೀರು ಕುಡಿಸಿ, ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಈ ಘಟನೆ ಮೈಸೂರು ಘಟಕದ 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡ ಸಿಎಂ, ಎಲ್ಲರಿಗೂ ವೃತ್ತಿಪರ ಯಶಸ್ಸನ್ನು ಕೋರಿ ಶುಭಹಾರೈಸಿ ಮಾತನಾಡುತ್ತಿದ್ದ ವೇಳೆ ನಡೆದಿದೆ.
ರಾವಲ್ಪಿಂಡಿ: ಸ್ನಾಗಗೃಹದಲ್ಲಿ ಬಿದ್ದು, ತಲೆಗೆ ಗಂಭೀರ ಗಾಯವಾಗಿದ್ದ ಪಾಕಿಸ್ತಾನ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಕ್ವಮರ್ ಜಾವೇದ್ ಬಜ್ವಾ ಅವರು ಇಂದು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.ಹಲವು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು, ರಾವಲ್ಪಿಂಡಿಯಲ್ಲಿರುವ ಸೇನಾ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.ಬಜ್ವಾ ಅವರು ಇದೇ ವರ್ಷ (2026ರ) ಫೆಬ್ರುವರಿಯಲ್ಲಿ ಸ್ನಾನಗೃಹದಲ್ಲಿ ಬಿದ್ದು, ತಲೆಗೆ ಗಂಭೀರ ಪೆಟ್ಟು ಮಾಡಿಕೊಂಡಿದ್ದರು.
ಬೆಂಗಳೂರು: ಕಿವಿ ಕೇಳಿಸದಿದ್ದರೂ, ಕಣ್ಣು ಮಂಜಾಗಿದ್ದರೂ ತನ್ನ ವಿಭಿನ್ನವಾದ ಹಾವಭಾವದಿಂದಲೇ ಕರ್ನಾಟಕದ ಜನರ ಮನಗೆದ್ದಿದ್ದ ರೀಲ್ಸ್ ಅಜ್ಜಿಯೆಂದೇ ಹೆಸರಾಗಿದ್ದ ಲಕ್ಷ್ಮಿ ಅಜ್ಜಿ ಅವರು ಇನ್ನು ನೆನಪು ಮಾತ್ರ. ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೆರೆಹೊಸಳ್ಳಿಯ ಲಕ್ಷ್ಮಿ ನಾಯ್ಕ (93) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.ಲಕ್ಷ್ಮಿ ಅಜ್ಜಿ ಅವರು ಇಬ್ಬರು ಪುತ್ರಿಯರು ಹಾಗೂ ಪುತ್ರನನ್ನು ಅವರು ಅಗಲಿದ್ದಾರೆ. ಇಂದು ಯಲ್ಲಾಪುರದಲ್ಲಿ ಧಾರ್ಮಿಕ ವಿಧಿ ಪ್ರಕಾರ ಅವರ ಅಂತ್ಯಕ್ರಿಯೆ ನೆರವೇರಿತು.ತಮ್ಮ ಮರಿಮೊಮ್ಮಗ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಸೂರಜ್ ಆಚಾರಿ ಹೇಳಿಕೊಟ್ಟಂತೆ ನಟನೆ ಮಾಡುತ್ತಲೇ ಲಕ್ಷ್ಮಿ ಅಜ್ಜಿ ಫೇಮಸ್ ಆಗಿದ್ದರು.
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಇಡೀ ವಿಶ್ವವೇ ಸವಾಲುಗಳನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಜನರು ವದಂತಿಗಳಿಗೆ ಕಿವಿಗೊಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ಧಾರೆ. ಇಂದಿನ ಸವಾಲುಗಳನ್ನು ಎದುರಿಸಲು ದೇಶದ ಎಲ್ಲ ನಾಗರಿಕರು ಒಗ್ಗೂಡಬೇಕು. ರಾಜ್ಯ ಸರ್ಕಾರಗಳು ಜನತೆಗೆ ಏನೆಲ್ಲ ಸೂಚನೆ, ಮಾಹಿತಿಗಳನ್ನ ಕೊಟ್ಟಿವೆಯೋ ಅವುಗಳ ಮೇಲೆ ವಿಶ್ವಾಸವಿಟ್ಟು ಹೆಜ್ಜೆ ಇಡಬೇಕು ಎಂದು ಮನ್ ಕಿ ಬಾತ್ನಲ್ಲಿ ಸಲಹೆ ನೀಡಿದ್ದಾರೆ.ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗುತ್ತಿರುವ ಪರಿಣಾಮಗಳ ಕುರಿತು ವಿವರಿಸಿದರು. ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ 1 ಕೋಟಿಗೂ ಹೆಚ್ಚು ಭಾರತೀಯರಿಗೆ ಸಾಧ್ಯವಾದ ಎಲ್ಲಾ ಸಹಾಯವನ್ನ ಒದಗಿಸಿರುವುದಕ್ಕೆ ಆ ದೇಶಗಳಿಗೆ ತಮ್ಮ ಧನ್ಯವಾದ ಹೇಳಿದರು.
ಬೆಂಗಳೂರು: ರಾಜ್ಯದ ನಗರದಲ್ಲಿ 25 ದಿನಕ್ಕೆ 1 ಸಿಲಿಂಡರ್ ಮತ್ತು ಹಳ್ಳಿಗಳಲ್ಲಿ 45 ದಿನಕ್ಕೆ 1 ಸಿಲಿಂಡರ್ ಕೊಡುತ್ತಿದ್ದೇವೆ ಎಂದು ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಕೆ.ಹೆಚ್.ಮುನಿಯಪ್ಪಹೇಳಿದ್ದಾರೆ.ಅಡುಗೆ ಅನೀಲ ಅಭಾವದಿಂದ ಹೋಟೆಲ್ಗಳು ಬಂದ್ ಆಗುತ್ತಿರುವ ಬಗ್ಗೆ ಮಾತನಾಡಿದ ಅವರು, ಹೋಟೆಲ್ ಗಳಿಗೆ ಹೆಚ್ಚುವರಿ ಅಡುಗೆ ಅನಿಲ ನೀಡುವ ಬಗ್ಗೆ ಮಂಗಳವಾರ ಸಭೆ ನಡೆಯಲಿದೆ ಎಂದು ಹೇಳಿದರು. ಅಡುಗೆ ಅನಿಲ ಹೋಟೆಲ್ಗಳಿಗೆ ಶೇ 20ರಷ್ಟು ಕೊಡುತ್ತಿದ್ದೇವೆ. ಆಸ್ಪತ್ರೆಗಳಿಗೆ ಶೇ 100 ನೀಡುತ್ತೇವೆ. ನರೇಂದ್ರ ಮೋದಿ ಹಾಗೂ ಪೆಟ್ರೋಲಿಯಂ ಸಚಿವರೊಂದಿಗೆ ಈಗಾಗಲೇ ಸಭೆ ಆಗಿದೆ. ಮಂಗಳವಾದಿಂದ ಅನುಷ್ಠಾನವಾದರೆ ಹೋಟೆಲ್ಗಳಿಗೆ ಹೆಚ್ಚುವರಿ ಸಿಲಿಂಡರ್ ಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ ರೈತನ ಪತ್ನಿಯೊಬ್ಬರು ತನ್ನ ಬ್ಯಾಂಕ್ ಖಾತೆಗೆ ತಪ್ಪಿ ಬಿದ್ದಿದ್ದ ಸುಮಾರು 10 ಕೋಟಿ ಹಣವನ್ನು ವಾಪಾಸ್ ನೀಡುವ ಮೂಲಕ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬಿಚ್ವಾನ್ ಪ್ರದೇಶದ ದೇವಗಂಜ್ ಗ್ರಾಮದ ನಿವಾಸಿ ಪರಸ್ಭಾನ್ ಬಹೇಲಿಯಾ ಅವರ ಪತ್ನಿ ರೀಟಾ ಅವರು ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ ಮತ್ತು ಕೃಷಿಯ ಮೂಲಕ ಜೀವನವನ್ನು ನಡೆಸುತ್ತಿದ್ದರು.ನವರಾತ್ರಿಯ ಅಷ್ಟಮಿಯ ಸಂದರ್ಭದಲ್ಲಿ, ಅವರು ತಮ್ಮ ಸ್ಥಳೀಯ ಬ್ಯಾಂಕ್ಗೆ ತನ್ನ ಖಾತೆಯಲ್ಲಿ ಇದ್ದಿರುವ ಹಣವನ್ನು ಪಡೆಯಲು
ಚಿನ್ನ, ಕ್ಯಾಶ್ ಬ್ಯಾಕ್ ಕೇಳಿದೆ: ಗುಜರಾತ್ ಮಹಿಳೆ 15 ವರ್ಷಗಳಿಂದ ನಂಬಿದ್ದ ಮಾಜಿ ಮನೆಯ ಸಹಾಯದಿಂದ ಕ್ಲಚ್ ವೈರ್ನಿಂದ ಕತ್ತು ಹಿಸುಕಿ ಹತ್ಯೆಪಾಲನ್ಪುರ: ಕೊಟ್ಟಿದ್ದ ಚಿನ್ನ ಹಾಗೂ ಹಣವನ್ನು ವಾಪಾಸ್ ಕೇಳಿದ್ದಕ್ಕೆ ಕೋಪಗೊಂಡ ಮಾಜಿ ಮನೆಕೆಲಸದಾಕೆಯೊಬ್ಬಳು ಮಹಿಳೆಯೊಬ್ಬರು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ.ಗುಜರಾತ್ನ ಬನಸ್ಕಾಂತ ಜಿಲ್ಲೆಯ ಪಾಲನ್ಪುರ್ನಲ್ಲಿ 36 ವರ್ಷದ ಮಹಿಳೆಯೊಬ್ಬರು ಹಲವು ವರ್ಷಗಳಿಂದ ನಂಬಿಕೊಂಡು