ಟೆಹ್ರಾನ್: ಹೊರ್ಮುಜ್ ಜಲಸಂಧಿ ಮೂಲಕ ಚಲಿಸುವ ಹಡಗುಗಳಿಗೆ ಇರಾನ್ ಮತ್ತೊಂದು ಶಾಕ್ ಕೊಟ್ಟಿದೆ. ಇದು ಭಾರತಕ್ಕೂ ಅನ್ವಯವಾಗಲಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣವಿದೆ. ಇರಾನ್ ಮತ್ತು ಇಸ್ರೇಲ್-ಅಮೆರಿಕಾ ನಡುವೆ ತೀವ್ರ ಯುದ್ಧ ನಡೆಯುತ್ತಿದೆ. ಇಸ್ರೇಲ್-ಅಮೆರಿಕಾಗೆ ಸೆಡ್ಡು ಹೊಡೆಯಲು ಇರಾನ್ ಹೊರ್ಮುಜ್ ಜಲಸಂಧಿ ಮೇಲೆ ಅಮೆರಿಕಾ ಮಿತ್ರರಾಷ್ಟ್ರಗಳ ಹಡಗುಗಳು ಸಂಚರಿಸದಂತೆ ನಿರ್ಬಂಧ ವಿಧಿಸಿದೆ. ಆದರೆ ಭಾರತ ಸೇರಿದಂತೆ ಕೆಲವೇ ರಾಷ್ಟ್ರಗಳ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಆದರೆ ಈ ನಡುವೆ ಇರಾನ್ ಮತ್ತು ಇಸ್ರೇಲ್ ಪರಸ್ಪರ ತೈಲ ಘಟಕಗಳನ್ನು ಗುರಿಯಾಗಿಸಿ ದಾಳಿ ತೀವ್ರಗೊಳಿಸಿವೆ.
ಮುಂಬೈ: ಮಹಾರಾಷ್ಟ್ರದ ಸ್ವಯಂಘೋಷಿತ ಜ್ಯೋತಿಷಿ ಅಶೋಕ್ ಖರತ್ ಕಾಮಕಾಂಡದ ವಿಡಿಯೋ ವೈರಲ್ ಆಗಿದ್ದು ಈತನ ಕೃತ್ಯ ನೋಡಿ ಜನರೇ ಬೆಚ್ಚಿಬಿದ್ದಿದ್ದಾರೆ. ಜ್ಯೋತಿಷ್ಯ ಹೇಳುವುದಾಗಿ ಈ ಅಸಾಮಿ ಅನೇಕ ಮಹಿಳೆಯರ ಮೇಲೆ ರೇಪ್, ಲೈಂಗಿಕ ದೌರ್ಜನ್ಯವೆಸಗಿದ್ದ ಎಂಬುದು ಬಯಲಾಗಿದೆ. 67 ವರ್ಷದ ಅಶೋಕ್ ಖರತ್ 35 ವರ್ಷದ ಮಹಿಳೆಯನ್ನು ಜ್ಯೋತಿಷ್ಯದ ನೆಪದಲ್ಲಿ ಲೈಂಗಿಕವಾಗಿ ಬಳಸಿಕೊಂಡ ಪ್ರಕರಣ ಬಯಲಿಗೆ ಬಂದಿದ್ದು ಈತನ ಒಂದೊಂದೇ ಕೃತ್ಯಗಳು ಬಯಲಾಗುತ್ತಿದೆ. ಈ ಸಂಬಂಧ ಆತನನ್ನು ನಾಸಿಕ್ ಪೊಲೀಸರು ಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ.
ನವದೆಹಲಿ: ಮಗಳನ್ನು ಶಾಲೆಗೆ ಡ್ರಾಪ್ ಮಾಡಲು ಬಂದಿದ್ದ ಮಹಿಳೆಯನ್ನು ಬೈಕ್ ನಲ್ಲಿ ಬಂದ ದರೋಡೆಕೋರರು ಸುತ್ತುವರೆದು ದೋಚಿ ಪರಾರಿಯಾಗಿದ್ದಾರೆ. ಈ ವೇಳೆ ಸುತ್ತಮುತ್ತಲಿನ ಜನ ನೋಡಿದರೂ ಭಯದಿಂದ ಓಡಿ ಹೋಗಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ. ಈ ಘಟನೆ ನಡೆದಿರುವುದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ. ಒಬ್ಬ ಮಹಿಳೆ ಅಸಹಾಯಕಳಾಗಿ ಹಲ್ಲೆಗೊಳಗಾಗುತ್ತಿದ್ದರೆ ಸಾರ್ವಜನಿಕರು ಸಹಾಯ ಮಾಡಲೂ ಬರಲಿಲ್ಲ ಎನ್ನುವುದು ಈ ದೃಶ್ಯದಿಂದ ತಿಳಿದುಬರುತ್ತಿದೆ. ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಇದ್ದಕ್ಕಿದ್ದಂತೆ ಮೂರು ಬೈಕ್ ಗಳಲ್ಲಿ ಬಂದು ದುಷ್ಕರ್ಮಿಗಳು ಅಡ್ಡಗಟ್ಟುತ್ತಾರೆ.
ಬೆಂಗಳೂರು: ಎಲ್ ಪಿಜಿ ಸಿಲಿಂಡರ್ ಅಭಾವದಿಂದಾಗಿ ಸಂಕಷ್ಟಕ್ಕೀಡಾಗಿರುವ ಬೆಂಗಳೂರು ಹೋಟೆಲ್ ಮಾಲಿಕರ ಅಸೋಸಿಯೇಷನ್ ಈಗ ಪ್ರಧಾನಿ ಮೋದಿ ಮೊರೆ ಹೋಗಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣದಿಂದ ದೇಶದಲ್ಲಿ ವಾಣಿಜ್ಯ ಸಿಲಿಂಡರ್ ಅಭಾವ ಎದುರಾಗಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಹೋಟೆಲ್ ಮುಚ್ಚುವ ಪರಿಸ್ಥಿತಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ಹೋಟೆಲ್ ಮಾಲಿಕರು ಈಗ ನೇರವಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ವಾಣಿಜ್ಯ ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮ ತೀವ್ರ ಸಂಕಷ್ಟದಲ್ಲಿದೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಇಳಿಕೆಯಾಗಿತ್ತು. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಇದು ಬೆಳೆಗಾರರಿಗೆ ಸಮಾಧಾನ ತಂದಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಸತತವಾಗಿ ಬೆಲೆ ಇಳಿಕೆ ಕಂಡುಬರುತ್ತಿದೆ. ಕೆಲವು ವರ್ಗದ ಅಡಿಕೆ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡುಬರುತ್ತಿದೆ. ಇಂದು ಹೊಸ ಅಡಿಕೆ ಬೆಲೆ 460 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದು 530 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿಯಲ್ಲಿದ್ದು 530 ರೂ.ಗಳಷ್ಟಾಗಿದೆ.
ಯುಗಾದಿ ಹಬ್ಬದ ದಿನ ಕೆಳಗಿನ ಮಾಹಿತಿಯನ್ನು ತಪ್ಪದೆ ಓದಿ ಅಥವಾ ಶ್ರವಣ ಮಾಡಿ.ಪಂಚಾಂಗ ರೀತ್ಯಾ, 2026ರ ಮಾರ್ಚ್ 19ರಿಂದ ಪ್ರಾರಂಭವಾಗುವ 'ಪರಾಭವ' ನಾಮ ಸಂವತ್ಸರವು 60 ಸಂವತ್ಸರಗಳ ಚಕ್ರದಲ್ಲಿ 40ನೆಯದು. ಈ ವರ್ಷದ ಫಲಗಳು ಮತ್ತು ಪಂಚಾಂಗದ ಪ್ರಮುಖ ಅಂಶಗಳು (ಆದಾಯ-ವ್ಯಯ ಮತ್ತು ರಾಜಾಧಿ ದೋಷಗಳು) ಇಲ್ಲಿವೆ: ಪರಾಭವ ಸಂವತ್ಸರ ಫಲ (ಸ್ಥೂಲವಾಗಿ)'ಪರಾಭವ' ಎಂದರೆ ಸಾಮಾನ್ಯವಾಗಿ ಸೋಲು ಅಥವಾ ಬದಲಾವಣೆ ಎಂದರ್ಥವಿದ್ದರೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ದೇಶದಲ್ಲಿ ರಾಜಕೀಯ ಅಸ್ಥಿರತೆ ಅಥವಾ ಪ್ರಮುಖ ನಾಯಕರ ಬದಲಾವಣೆಯನ್ನು ಸೂಚಿಸುತ್ತದೆ.
ಮುಂಬೈ: ರಣವೀರ್ ಸಿಂಗ್ ನಾಯಕನಾಗಿರುವ ಧುರಂಧರ್ 2 ಸಿನಿಮಾ ಇಂದು ಬಿಡುಗಡೆಯಾಗಿದ್ದು ಪ್ರಧಾನಿ ಮೋದಿ ರಿಯಲ್ ಆಗಿ ಕಾಣಿಸಿಕೊಂಡಿದ್ದರೆ ಭೂಗತ ದೊರೆ ದಾವೂದ್ ಇಬ್ರಾಹಿಂ ಪಾತ್ರವೂ ಸಿನಿಮಾದಲ್ಲಿದೆ. 3 ಗಂಟೆ 49 ಸಿನಿಮಾ ಅವಧಿಯ ಸುದೀರ್ಘ ಸಿನಿಮಾ ಧುರಂಧರ್ 2. ಧುರಂಧರ್ ಮೊದಲ ಭಾಗದಲ್ಲಿ ಹಮ್ಜಾ ಅಲಿ ಮಜಾರಿ, ರೆಹ್ಮಾನ್ ಡಕಾಯಿತ್ ನ ಹತ್ಯೆ ಮಾಡಿರುತ್ತಾನೆ. ಆ ಬಳಿಕ ನಡೆಯುವ ಸೇಡಿನ ಕತೆಯೇ ಧುರಂಧರ್ 2 ಸಿನಿಮಾ. ಈ ಸಿನಿಮಾವೂ ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಸಾಕಷ್ಟು ಸಾಹಸಮಯ ದೃಶ್ಯಗಳನ್ನು ಒಳಗೊಂಡಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ಈ ವಾರದ ಆರಂಭದಲ್ಲೇ ಪರಿಶುದ್ಧ ಚಿನ್ನದ ದರ ಸತತವಾಗಿ ಇಳಿಕೆಯಾಗುತ್ತಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,60,910.00 ರೂ.ಗಳಿತ್ತು. ಆದರೆ ಇಂದು ಇಳಿಕೆಯಾಗಿದ್ದು 1,58,695.00 ರೂ.ಗಳಷ್ಟಿದೆ.
ಇಂದು ಯುಗಾದಿ ಹಬ್ಬವಾಗಿದ್ದು ಎಲ್ಲರೂ ಬೆಲ್ಲದ ಜೊತೆಗೆ ಚೂರು ಬೇವನ್ನೂ ಸೇವಿಸುತ್ತಾರೆ. ಆದರೆ ಇದು ಒಂದು ದಿನಕ್ಕೆ ಸೀಮಿತವಲ್ಲ. ಪ್ರತಿನಿತ್ಯ ಕಹಿಬೇವಿನ ಎಲೆ ಸೇವಿಸಿದರೆ ಏನು ಉಪಯೋಗ ತಿಳಿದುಕೊಳ್ಳಿ. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಬೇವಿನ ಎಲೆಗೆ ಅದರದ್ದೇ ಆದ ಮಹತ್ವವಿದೆ. ಹಲವು ಖಾಯಿಲೆಗಳಿಗೆ ಔಷಧಿಯಾಗಬಲ್ಲ ಪವರ್ ಫುಲ್ ಎಲೆಯಿದು. ಚರ್ಮ ರೋಗದಿಂದ ಹಿಡಿದು ಹೊಟ್ಟೆಯ ಸಮಸ್ಯೆಯವರೆಗೂ ಕಹಿಬೇವು ಉಪಯೋಗಿ. ಇದರಲ್ಲಿ ರೋಗ ನಿರೋಧಕ, ಸೋಂಕು ನಿರೋಧಕ, ಉರಿಯೂತ ನಿರೋಧಕ ಅಂಶವಿದ್ದು ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಕಹಿ ಬೇವಿನ ಒಂದು ಎಲೆ ಪ್ರತಿನಿತ್ಯ ಜಗಿದರೆ ಏನು ಉಪಯೋಗ ನೋಡಿ.
ಬೇಸಿಗೆಯಲ್ಲಿ ಬಾಯಾರಿಕೆ ಎಂದಾಗ ಸೋಡಾ ಮಿಶ್ರಿತ ಪಾನೀಯ ಸೇವನೆ ಮಾಡುತ್ತೇವೆ. ಆದರೆ ಈ ವಿಡಿಯೋ ನೋಡಿದರೆ ಇನ್ನು ಮುಂದೆ ಅಂತಹ ಪಾನೀಯಗಳನ್ನು ಸೇವಿಸಲು ನೀವು ಭಯಪಡೋದು ಗ್ಯಾರಂಟಿ. ಬಾಟಲಿಗಳಲ್ಲಿ ಬರುವ ಅಗ್ಗದ ಬೆಲೆಯ ತಂಪು ಸೋಡಾ ಪಾನೀಯಗಳಿಗೆ ಬೇಸಿಗೆಯಲ್ಲಿ ಭಾರೀ ಡಿಮ್ಯಾಂಡ್ ಇರುತ್ತದೆ. ಕೆಲವು ಸಭೆ ಸಮಾರಂಭಗಳಲ್ಲೂ ಇದನ್ನು ಬಳಸುತ್ತಾರೆ. ಆದರೆ ಇದನ್ನು ಹೇಗೆ ತಯಾರಿ ಮಾಡುತ್ತಾರೆ ಎನ್ನುವ ವಿಡಿಯೋ ಇಲ್ಲಿದೆ ನೋಡಿ. ಸೋಡಾ ಪಾನೀಯ ತಯಾರಿಸುವ ಫ್ಯಾಕ್ಟರಿಯೊಂದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅತ್ಯಂತ ಕೊಳಕಾದ ಜಾಗದಲ್ಲಿ ಪಾನೀಯ ತಯಾರು ಮಾಡಲಾಗುತ್ತದೆ.
ಚಲಿಸುತ್ತಿದ್ದ ಬಸ್ ನ ಕಿಟಿಕಿಯಿಂದ ಜಾರಿ ಕೆಳಕ್ಕೆ ಬೀಳಲಿದ್ದ ಮಗುವನ್ನು ಸ್ಕೂಟರ್ ಸವಾರನೊಬ್ಬ ಹೀರೋ ರೀತಿ ರಕ್ಷಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವೊಮ್ಮೆ ಎಷ್ಟೇ ದೊಡ್ಡ ಅಪಘಾತವಾದರೂ ದೇವರ ದಯೆಯಿದ್ದರೆ ಪ್ರಾಣ ಉಳಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ದೇವರು ಯಾವುದೋ ಒಂದು ರೂಪದಲ್ಲಿ ಬಂದು ರಕ್ಷಿಸುತ್ತಾನೆ ಎನ್ನುವುದು ಇದಕ್ಕೇ ಇರಬೇಕು. ಇದು ವಿದೇಶವೊಂದರಲ್ಲಿ ನಡೆದ ಘಟನೆಯಾಗಿದೆ. ನಗರದಲ್ಲಿ ಸಾರ್ವಜನಿಕ ಸಾರಿಗೆ ಬಸ್ ಚಲಿಸುತ್ತಿರುತ್ತದೆ. ಈ ಬಸ್ ನ ಹಿಂಬದಿಯ ಕಿಟಿಕಿಯಿಂದ ಮಗುವೊಂದು ಜಾರಿ ಇನ್ನೇನು ಬೀಳುವುದರಲ್ಲಿತ್ತು.
ರೇಬಿಸ್ ಬಂದ ವ್ಯಕ್ತಿಗಳಿಗೆ ನೀರು ಕಂಡರೆ ಭಯವಿರುತ್ತದೆ. ನೀರು ಹತ್ತಿರ ತಂದರೆ ಅವರು ಎಷ್ಟು ನಡುಗುತ್ತಾರೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ. ನಮ್ಮ ದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಪ್ರತಿನಿತ್ಯ ಎಷ್ಟೋ ಜನ ನಾಯಿ ಕಡಿತಕ್ಕೊಳಗಾಗುತ್ತಾರೆ. ಬೀದಿ ನಾಯಿ ಮಾತ್ರವಲ್ಲ ಸಾಕು ನಾಯಿಯೇ ಆಗಿದ್ದರೂ ಸರಿಯಾದ ಸಮಯಕ್ಕೆ ಇಂಜೆಕ್ಷನ್ ಕೊಡದೇ ಇದ್ದಲ್ಲಿ ಅಂತಹ ನಾಯಿಗಳು ಕಚ್ಚಿದರೆ ಅಪಾಯಕಾರಿಯೇ. ಯಾವುದೇ ನಾಯಿ, ಬೆಕ್ಕು ಕಚ್ಚಿದರೂ ತಕ್ಷಣವೇ ವೈದ್ಯರ ಬಳಿ ಹೋಗಿ ಇಂಜೆಕ್ಷನ್ ಪಡೆಯಬೇಕಾಗುತ್ತದೆ. ಇಲ್ಲದೇ ಹೋದರೆ ರೇಬಿಸ್ ರೋಗ ಬರುವ ಅಪಾಯವಿರುತ್ತದೆ. ರೇಬಿಸ್ ಅತ್ಯಂತ ಅಪಾಯಕಾರಿ ರೋಗವಾಗಿದ್ದು ವ್ಯಕ್ತಿಯ ಅತ್ಯಂತ ಧಾರುಣ ಹಂತಕ್ಕೆ ತಲುಪಿ ಸಾವನ್ನಪ್ಪುತ್ತಾನೆ.
ನವದೆಹಲಿ: ಒಮನ್ ಗಲ್ಫ್ ಗೆ ಭಾರತ ಇದ್ದಕ್ಕಿದ್ದಂತೆ ಯದ್ಧ ನೌಕೆಗಳನ್ನು ಕಳುಹಿಸಿದೆ. ಇದರ ಹಿಂದಿನ ಕಾರಣವೇನು ಎಂಬುದಕ್ಕೆ ಇಲ್ಲಿದೆ ಅಸಲಿ ಕಾರಣ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಈಗ ಯುದ್ಧದ ವಾತಾವರಣವಿದೆ. ಅಮೆರಿಕಾ ಬೆಂಬಲಿಸುತ್ತಿರುವ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ನಿರಂತರ ದಾಳಿ ನಡೆಸುತ್ತಿದೆ. ಅಲ್ಲಿನ ಅನಿಲ ಘಟಕಗಳನ್ನೂ ಟಾರ್ಗೆಟ್ ಮಾಡಿಕೊಂಡಿವೆ. ಇದರ ನಡುವೆ ಹೊರ್ಮುಜ್ ಜಲಸಂಧಿಯಲ್ಲಿ ಭಾರತ ಸೇರಿದಂತೆ ಕೆಲವೇ ರಾಷ್ಟ್ರಗಳ ಹಡುಗಗಳನ್ನು ಹೊರತುಪಡಿಸಿ ಉಳಿದ ದೇಶಗಳ ಹಡಗುಗಳು ಸಂಚರಿಸದಂತೆ ನಿರ್ಬಂಧಿಸಿದೆ. ಇದು ಜಾಗತಿಕವಾಗಿ ವ್ಯಾಪಾರ, ವ್ಯವಹಾರಕ್ಕೆ ತೊಂದರೆ ಉಂಟು ಮಾಡುತ್ತಿದೆ.
ಬೆಂಗಳೂರು: ಸರ್ಸೆ ಸೆರಗೆ ಸರ್ಸೆ ಹಾಡಿನ ವಿವಾದದ ಬಳಿಕ ಗಾಯಕಿ ಐಶ್ವರ್ಯಾ ರಂಗರಾಜನ್ ಇನ್ ಸ್ಟಾಗ್ರಾಂ ಖಾತೆಯಿಂದ ದೂರವಾಗಿದ್ದಾರೆ. ಕೆಡಿ ಸಿನಿಮಾದ ಸರ್ಸೆ ಸೆರಗ ಸರ್ಸೆ ಸಿನಿಮಾದ ಹಾಡು ಅಶ್ಲೀಲ ಸಾಹಿತ್ಯದ ಕಾರಣದಿಂದ ವಿವಾದಕ್ಕೀಡಾಗಿತ್ತು. ಸಾಹಿತ್ಯ ಬರೆದಿದ್ದ ನಿರ್ದೇಶಕ ಪ್ರೇಮ್ ತೀವ್ರ ಟೀಕೆಗೊಳಗಾಗಿದ್ದರು. ವಿವಾದದ ಬೆನ್ನಲ್ಲೇ ಕೇಂದ್ರ ಸರ್ಕಾರವೇ ಹಾಡಿಗೆ ನಿಷೇಧ ಹೇರಿತ್ತು. ಹಾಡು ವಿವಾದಕ್ಕೀಡಾಗುತ್ತಿದ್ದಂತೇ ಕನ್ನಡದಲ್ಲಿ ಹಾಡಿದ್ದ ಗಾಯಕಿ ಐಶ್ವರ್ಯಾ ರಂಗರಾಜನ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ತೀಕ್ಷ್ಣ ಕಾಮೆಂಟ್ ಗಳು ಬಂದಿದ್ದವು.
ನವದೆಹಲಿ: ಭಾರತಕ್ಕೆ ಅನಿಲ ಪೂರೈಸುವ ಕತಾರ್ ನ ರಾಸ್ ಲಫಾನ್ ಅನಿಲ ಘಟಕದ ಮೇಲೆ ಇರಾನ್ ದಾಳಿ ನಡೆಸಿದ್ದು ಇದರ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಕತಾರ್ ನ ಬಹುದೊಡ್ಡ ಅನಿಲ ಘಟಕ ರಾಸ್ ಲಫಾನ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ಮೇಲೆ ಸೇಡು ತೀರಿಸಿಕೊಳ್ಳಲು ಈ ದಾಳಿ ನಡೆಸಿತ್ತು. ಆದರೆ ಈ ಅನಿಲ ಘಟಕ ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಿಗೆ ಅನಿಲ ಒದಗಿಸುವ ಘಟಕವಾಗಿದೆ.
ನ್ಯೂಯಾರ್ಕ್: ಇರಾನ್ ವಿರುದ್ಧ ಇಸ್ರೇಲ್ ಯುದ್ಧದಲ್ಲಿ ಮೂಗು ತೂರಿಸಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲು ಗೆದ್ದು ಈಗ ಸೋತು ಹೋಗಿದ್ದಾರೆ. ಕಾರಣವೇನು ಇಲ್ಲಿದೆ ವಿಶ್ಲೇಷಣೆ. ಇಸ್ರೇಲ್ ಮತ್ತು ಇರಾನ್ ನಡುವೆ ಯದ್ಧ ನಡೆಯುವಾಗ ತಾನು ಜಗತ್ತಿನ ದೊಡ್ಡಣ್ಣ ಎಂದು ಬಿಂಬಿಸಿಕೊಳ್ಳಲು ಇಸ್ರೇಲ್ ಗೆ ಬೆಂಬಲವಾಗಿ ನಿಂತ ಡೊನಾಲ್ಡ್ ಟ್ರಂಪ್ ಮೊದಲ ಹಂತದಲ್ಲಿ ಗೆಲುವು ಕಂಡರು. ಇರಾನ್ ನ ಪರಮೋಚ್ಛ ನಾಯಕ ಖಮೇನಿಯನ್ನು ಹತ್ಯೆ ಮಾಡುವಲ್ಲಿ ಸಫಲರಾದರು. ಬಳಿಕ ಇರಾನ್ ನ ಪ್ರಮುಖ ನಾಯಕರನ್ನು ಕೊಂದು ಹಾಕಿದರು.
ಜ್ಯೋತಿಷ್ಯ ಪ್ರಕಾರ ಮಿಥುನ ರಾಶಿಯವರು ತಮ್ಮ ರಾಶಿಗೆ ಅನುಗುಣವಾಗಿ ಯಾವ ಆಹಾರ ಸೇವಿಸಿದರೆ ಆರೋಗ್ಯವಾಗಿರುತ್ತಾರೆ ಎಂಬುದರ ವಿವರ ಇಲ್ಲಿದೆ ನೋಡಿ. ಈ ರಾಶಿ ಶ್ವಾಸಕೋಶ, ನರಗಳಿಗೆ ಸಂಬಂಧಿಸಿದ್ದಾಗಿದೆ. ಮಿಥುನ ರಾಶಿಯವರು ವೈವಿದ್ಯಮಯ ಆಹಾರ ಸೇವನೆ ಮಾಡಲು ಬಯಸುತ್ತಾರೆ. ಅದೇ ರೀತಿ ಬಹಳ ಬೇಗ ಊಟ ಮುಗಿಸುವ ಜಾಯಮಾನ ಹೊಂದಿರುವವರಾಗಿರುತ್ತಾರೆ. ಊಟ ಮಾಡುವಾಗಲೂ ಮಾತನಾಡುವುದು, ಏನಾದರೂ ನೋಡುವುದು, ಓದುವುದು ಇತ್ಯಾದಿ ಎರಡೆರಡು ಕೆಲಸಗಳನ್ನು ಮಾಡುವ ಪ್ರವೃತ್ತಿ ಅವರಲ್ಲಿರುತ್ತದೆ. ಈ ರಾಶಿಯವರು ಸೇವಿಸಬೇಕಾದ ಆಹಾರ, ಹಣ್ಣು, ತರಕಾರಿ ವಿವರ ಇಲ್ಲಿದೆ.
ಬೆಂಗಳೂರು: ರಾಜ್ಯದಲ್ಲಿ ಈಗ ಬೇಸಿಗೆ ಮಳೆಯ ಅಬ್ಬರ ಕಂಡುಬರುತ್ತಿದೆ. ಇಂದೂ ಕೆಲವು ಜಿಲ್ಲೆಗಳಿಗೆ ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಮೊನ್ನೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿತ್ತು. ಬಿಸಿಲಿನ ಬೇಗೆಗೆ ಮಳೆ ತಂಪು ನೀಡಿದರೂ ಅಕಾಲಿಕ ಮಳೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಅದರಲ್ಲೂ ಆಲಿಕಲ್ಲು ಮಳೆಯಿಂದ ಮಾವು, ತರಕಾರಿ, ಹಣ್ಣು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಇಂದೂ ಕೂಡಾ ರಾಜ್ಯದ ಕೆಲವು ಜಿಲ್ಲೆಗಳಿಗೆ ಮಳೆಯಾಗುವ ಸೂಚನೆಯಿದೆ. ಉತ್ತರ ಕನ್ನಡ, ಕೊಡಗು, ಬೆಂಗಳೂರು, ಹಾವೇರಿ, ಗದಗ, ಬೀದರ್, ಧಾರವಾಡ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಸೂಚಿಸುತ್ತಿದೆ.
ಇಂದು ಯುಗಾದಿ ಹಬ್ಬವಾಗಿದ್ದು ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ಆರಂಭವಾಗಿದೆ. ಈ ದಿನ ಪಠಿಸಲೇಬೇಕಾದ ದೇವತಾ ಮಂತ್ರ ಯಾವುದು ಇಲ್ಲಿ ನೋಡಿ. ಯುಗಾದಿ ಹಳೆಯದನ್ನು ಕಳೆತು ಹೊಸತನ್ನು ಸ್ವಾಗತಿಸುವ ಕಾಲ. ಜೀವನದಲ್ಲಿ ಸಿಹಿ-ಕಹಿ ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂದು ಸಂದೇಶ ಸಾರುವ ದಿನ. ಈ ದಿನ ಮನೆಯವರೆಲ್ಲರೂ ಬೆಳಿಗ್ಗೆಯೇ ಎದ್ದು ಎಣ್ಣೆ ಸ್ನಾನ ಮಾಡಿ ದೇವರ ಪೂಜೆ ಮಾಡಬೇಕು. ಬಳಿಕ ಬೇವು-ಬೆಲ್ಲ ಸೇವನೆ ಮಾಡಬೇಕು. ಯುಗಾದಿ ದಿನ ಪೂಜೆ ಮಾಡುವಾಗ ಉತ್ತಮ ಆರೋಗ್ಯ, ಆಯುಷ್ಯ ವೃದ್ಧಿಗಾಗಿ ಈ ಮಂತ್ರವನ್ನು ತಪ್ಪದೇ ಪಠಿಸಿ
ನವದೆಹಲಿ: ಕಾಂಗ್ರೆಸ್ ಜೊತೆಗಿನ ಮದುವೆ ಹಿಂಸಾತ್ಮಕವಾಗಿತ್ತು. ಹೀಗಾಗಿ ವಿಚ್ಛೇದನ ಪಡೆಯಬೇಕಾಯ್ತು ಎಂದು ರಾಜ್ಯಸಭೆಯಲ್ಲಿ ಇಂದು ಮಲ್ಲಿಕಾರ್ಜುನ ಖರ್ಗೆಗೆ ದೇವೇಗೌಡರು ತಿರುಗೇಟು ನೀಡಿದ್ದಾರೆ. ರಾಜ್ಯಸಭೆಯಲ್ಲಿ ಇಂದು ನಿವೃತ್ತಿ ಹೊಂದುತ್ತಿರುವ ಸದಸ್ಯರಿಗೆ ಬೀಳ್ಕೊಡುಗೆ ಸಮಾರಂಭವಿತ್ತು. ಈ ವೇಳೆ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ ಹಾಸ್ಯ ಮತ್ತು ವ್ಯಂಗ್ಯವಾಗಿ ದೇವೇಗೌಡರು ನಮ್ಮನ್ನು ಪ್ರೀತಿಸಿದರು. ಆದರೆ ನಂತರ ಮೋದಿಯವರನ್ನು ಮದುವೆಯಾದರು ಎಂದಿದ್ದರು. ಆದರೆ ಖರ್ಗೆ ಮಾತನಾಡುವಾಗ ದೇವೇಗೌಡರು ಇರಲಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಜೊತೆಗಿನ ಮದುವೆ ಹಿಂಸಾತ್ಮಕವಾಗಿತ್ತು. ಹೀಗಾಗಿ ವಿಚ್ಛೇದನ ಪಡೆದೆ ಎಂದಿದ್ದಾರೆ.
ಬೆಂಗಳೂರು: ಕೆಡಿ ಸಿನಿಮಾದ ಸರ್ಸೆ ಸೆರಗ ಸರ್ಸೆ ಹಾಡು ಅಶ್ಲೀಲ ಸಾಹಿತ್ಯವಿದೆ ಎಂಬ ಕಾರಣಕ್ಕೆ ವಿವಾದದ ಬಳಿಕ ಕೇಂದ್ರ ಸರ್ಕಾರವೇ ನಿಷೇಧ ಹೇರಿದೆ. ಇದೀಗ ಹಾಡನ್ನು ಬರೆದಿರುವ ನಿರ್ದೇಶಕ ಪ್ರೇಮ್ ಸ್ಪಷ್ಟನೆ ನೀಡಿದ್ದಾರೆ. ಕೆಡಿ ಸಿನಿಮಾದ ಸರ್ಸೆ ಸೆರಗ ಹಾಡು ಕನ್ನಡ, ಹಿಂದಿ ಭಾಷೆಯಲ್ಲೂ ಅಶ್ಲೀಲ ಸಾಹಿತ್ಯದ ಕಾರಣಕ್ಕೆ ತೀವ್ರ ಟೀಕೆಗೆ ಗುರಿಯಾಗಿತ್ತು. ಸೆಲೆಬ್ರಿಟಿಗಳೂ ಹಾಡಿನ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದರು. ಹೆಣ್ಣಿನ ಬಗ್ಗೆ ತೀರಾ ಕೀಳುಮಟ್ಟದ ಸಾಹಿತ್ಯ ಬರೆಯಲಾಗಿದೆ ಎಂದು ಮಹಿಳಾ ಆಯೋಗ ಕೂಡಾ ಗರಂ ಆಗಿತ್ತು.
ಬೆಂಗಳೂರು: ಜಿ.ಬಿ.ಎ ಚುನಾವಣೆಯ ಕರಡು ಮತಪಟ್ಟಿಯ ಪರಿಶೀಲಿಸಿ ಆಕ್ಷೇಪಣೆ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲು ಬಿಜೆಪಿ ನಿಯೋಗವು ಇಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.ಮತದಾರರ ಪಟ್ಟಿಯ ಪರಿಶೀಲನೆಯ ವೆಬ್ ಸೈಟ್ ದಿನಾಂಕ 13.03.2026 ರಿಂದ ದಿನಾಂಕ 18.03.2026ರ ತನಕ ತಾಂತ್ರಿಕ ಕಾರಣಗಳಿಂದ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಈ ಕುರಿತು ಜಿಬಿಎ ಮಹಾ ಆಯುಕ್ತರಿಗೆ ಬಿಜೆಪಿಯ ನಿಯೋಗ ಅಧಿಕೃತವಾಗಿ ಇದರ ಬಗ್ಗೆ ದೂರು ಸಲ್ಲಿಸಿದೆ. ಇದರ ನಕಲು ಪ್ರತಿಯನ್ನು ಲಗತ್ತಿಸಲಾಗಿದೆ.
ಹೈದರಾಬಾದ್: ಐಪಿಎಲ್ 2026 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಲು ಹೊಸ ನಾಯಕನನ್ನು ಫ್ರಾಂಚೈಸಿ ಘೋಷಿಸಿದೆ. ಟೀಂ ಇಂಡಿಯಾ ಆಟಗಾರನಿಗೆ ಅದೃಷ್ಟ ಖುಲಾಯಿಸಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಸ್ಟ್ರೇಲಿಯಾ ಮೂಲದ ಪ್ಯಾಟ್ ಕುಮಿನ್ಸ್ ನಾಯಕರಾಗಿದ್ದರು. ಕಳೆದ ಆವೃತ್ತಿಯಲ್ಲಿ ಅವರೇ ತಂಡವನ್ನು ಮುನ್ನಡೆಸಿದ್ದರು. ಆದರೆ ಈ ಆವೃತ್ತಿಯಲ್ಲಿ ಅವರು ಬೆನ್ನು ನೋವಿನ ಕಾರಣದಿಂದ ಅಲಭ್ಯರಾಗಿದ್ದಾರೆ. ಈ ಕಾರಣಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಲಾಗಿದೆ. ಟೀಂ ಇಂಡಿಯಾದ ಇಶಾನ್ ಕಿಶನ್ ಹೈದರಾಬಾದ್ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಆವೃತ್ತಿಯಲ್ಲೂ ಇಶಾನ್ ಹೈದರಾಬಾದ್ ಪರ ಆಡಿದ್ದರು. ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ನಲ್ಲಿ ಇಶಾನ್ ಕಿಶನ್ ಅದ್ಭುತ ಪ್ರದರ್ಶನ ನೀಡಿದ್ದರು.
ಬೆಂಗಳೂರು: ಜೋಗಿ ಪ್ರೇಮ್ ಬರೆದ ಕೆಡಿ ಸಿನಿಮಾದ ಸೆರ್ಸೆ ಸೆರಗ ಸರ್ಸೆ ಹಾಡು ನಿಷೇಧಕ್ಕೊಳಗಾಗಿದೆ. ಹಾಡು ರಾಷ್ಟ್ರಮಟ್ಟದಲ್ಲಿ ವಿವಾದಕ್ಕೆ ಗುರಿಯಾಗಿದೆ. ಧ್ರುವ ಸರ್ಜಾ, ಬಾಲಿವುಡ್ ನಟ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಜೋಗಿ ಪ್ರೇಮ್ ನಿರ್ದೇಶನ ಸಿನಿಮಾ ಕೆಡಿ. ಈ ಸಿನಿಮಾದ ಐಟಂ ಹಾಡು ಸರ್ಸೆ ಸೆರಗ ಸರ್ಸೆ ಹಾಡು ಅಶ್ಲೀಲ ಸಾಹಿತ್ಯದ ಕಾರಣಕ್ಕೆ ವಿವಾದಕ್ಕೆ ಕಾರಣವಾಗಿತ್ತು. ಹಾಡಿನ ಬಗ್ಗೆ ಗಾಯಕ ಅರ್ಮಾನ್ ಮಲಿಕ್ ಸೇರಿದಂತೆ ಸೆಲೆಬ್ರಿಟಿಗಳೂ ಟೀಕಿಸಿದ್ದರು. ಈ ಹಿನ್ನಲೆಯಲ್ಲಿ ಹಾಡನ್ನು ಮೊದಲು ಹಿಂದಿಯಲ್ಲಿ ಡಿಲೀಟ್ ಮಾಡಲಾಗಿತ್ತು.
ಜ್ಯೋತಿಷ್ಯ ಪ್ರಕಾರ ವೃಷಭ ರಾಶಿಯವರು ತಮ್ಮ ರಾಶಿಗೆ ಅನುಗುಣವಾಗಿ ಯಾವ ಆಹಾರ ಸೇವಿಸಿದರೆ ಆರೋಗ್ಯವಾಗಿರುತ್ತಾರೆ ಎಂಬುದರ ವಿವರ ಇಲ್ಲಿದೆ ನೋಡಿ. ವೃಷಭ ರಾಶಿಯವರು ಆಹಾರವನ್ನು ಮೆಚ್ಚಿಕೊಂಡು, ಇಷ್ಟಪಟ್ಟು ತಿನ್ನುತ್ತಾರೆ. ಆಹಾರದ ಮೇಲೆ ಈ ರಾಶಿಯವರಿಗೆ ವಿಶೇಷ ಪ್ರೀತಿಯಿರುತ್ತದೆ. ವೃಷಭ ರಾಶಿಯವರು ಸೇವಿಸಬೇಕಾದ ತರಕಾರಿ, ಹಣ್ಣು, ಧಾನ್ಯ, ಮಸಾಲೆ ಪದಾರ್ಥಗಳು ಯಾವುವು ಇಲ್ಲಿದೆ ನೋಡಿ ವಿವರ. ಈ ರಾಶಿಯವರು ವಿಶೇಷವಾಗಿ ಸಕ್ಕರೆ ಅಂಶದ ಆಹಾರವನ್ನು ಸೇವಿಸುವಾಗ ನಿಯಂತ್ರಣವಿರಬೇಕು. ಅದೇ ರೀತಿ ಅಯೋಡಿನ್ ಅಂಶವಿರುವ ಆಹಾರ ತೆಗೆದುಕೊಳ್ಳಬೇಕು. ಇದರ ಜೊತೆಗೆ ದೈಹಿಕ ಚಟುವಟಿಕೆ ಮಾಡುತ್ತಿದ್ದರೆ ಈ ರಾಶಿಯವರು ಆರೋಗ್ಯವಾಗಿರುತ್ತಾರೆ.
ದಿಂಡಿಗಲ್: ಆತನ ಜೀವ ಗಟ್ಟಿಯಿತ್ತು. ಹೀಗಾಗಿಯೇ ಬೈಕ್ ಪಲ್ಟಿ ಹೊಡೆದು ಪಕ್ಕದ ಕಂಪೌಂಡ್ ಹಾರಿ ಹೋದರೂ ಆತ ಸೇಫ್ ಆಗಿದ್ದಾನೆ. ಈ ಭಯಾನಕ ವಿಡಿಯೋ ಇಲ್ಲಿದೆ ನೋಡಿ. ಈ ಘಟನೆ ನಡೆದಿರುವುದು ತಮಿಳುನಾಡಿನ ದಿಂಡಿಗಲ್ ನಲ್ಲಿ. ಕೆಲವೊಮ್ಮೆ ಆಯಸ್ಸು ಗಟ್ಟಿಯಿದ್ದರೆ ಬಂಡೆ ಕಲ್ಲು ತಲೆ ಮೇಲೆ ಬಿದ್ದರೂ ಪ್ರಾಣ ಹೋಗಲ್ಲ ಎನ್ನುತ್ತಾರಲ್ಲಾ? ಇಲ್ಲೂ ಅದೇ ರೀತಿ ಘಟನೆ ನಡೆದಿದೆ. ಓರ್ವ ವ್ಯಕ್ತಿ ಹೆದ್ದಾರಿಯಲ್ಲಿ ವೇಗವಾಗಿ ಬೈಕ್ ಓಡಿಸಿಕೊಂಡು ಬರುತ್ತಿರುತ್ತಾನೆ. ಈ ವೇಳೆ ಇನ್ನೊಂದು ಬೈಕ್ ಗೆ ಗುದ್ದಿ ಪಲ್ಟಿಯಾಗುತ್ತದೆ.
ಬೆಂಗಳೂರು: ರಾಜ್ಯದ ಆಯವ್ಯಯ ಎಂದರೆ ಬರೀ ಕೂಡಿ ಕಳೆಯುವ ಅಂಕಿ ಸಂಖ್ಯೆಗಳ ನಿರ್ಜೀವ ಆಟವಲ್ಲ. ರಾಜ್ಯದ 7 ಕೋಟಿ ಜನರ ಬದುಕಿನ ಭರವಸೆಯ ಉಸಿರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ ಈ ಬಾರಿ ಮಂಡಿಸಿದ ಅವರ ದಾಖಲೆಯ 17ನೇ ಬಜೆಟ್ ಗಮನಿಸಿದರೆ ಬರೀ ಅಂಕಿ ಅಂಶಗಳೇ ಇದ್ದು, ರಾಜ್ಯಕ್ಕೆ ದಿಸೆ ನೀಡುವಲ್ಲಿ ವಿಫಲವಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಹಾಗೂ ಹು-ಧಾ ಪಶ್ಚಿಮ ವಿಧಾನಸಭೆ ಕ್ಷೇತ್ರದ ಶಾಸಕರಾದ ಶ್ರೀ ಅರವಿಂದ ಬೆಲ್ಲದ ಟೀಕಿಸಿದರು.
ಬೆಂಗಳೂರು: ಗೋಣಿ ಚೀಲದಲ್ಲಿ ಯಾವುದೋ ವಸ್ತು ಪ್ಯಾಕ್ ಮಾಡುವಂತೆ ಹೆತ್ತ ತಂದೆಯನ್ನು ಪ್ಯಾಕ್ ಮಾಡಿದ್ದ ಬೆಂಗಳೂರಿನ ಮಹಿಳೆ ಪಾರ್ಸೆಲ್ ಮಾಡಲು ಯತ್ನಿಸಿದ್ದಾಳೆ. ಈ ವಿಡಿಯೋ ಇಲ್ಲಿದೆ ನೋಡಿ. ಇತ್ತೀಚೆಗಿನ ದಿನಗಳಲ್ಲಿ ಮಕ್ಕಳು ವಯಸ್ಸಾದ ತಂದೆ-ತಾಯಿಯನ್ನು ಕಾಲ ಕಸದಂತೆ ಕಾಣುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಮಹಿಳೆ ತನ್ನ ತಂದೆಯನ್ನೇ ಪಾರ್ಸೆಲ್ ಮಾಡಲು ಯತ್ನಿಸಿದ್ದಾಳೆ. ವಯ್ಯಾಲಿಕಾವಲ್ ಕೊರಿಯರ್ ಸೆಂಟರ್ ಒಂದರಲ್ಲಿ ಘಟನೆ ನಡೆದಿದೆ. ಮಹಿಳೆ ಇಷ್ಟೆಲ್ಲಾ ಮಾಡಿದ್ದು ರೀಲ್ಸ್ ಗಾಗಿಯಂತೆ. ಹಬ್ಬಗಳ ಸೀಸನ್ ಬಂತೆಂದರೆ ಬಹುತೇಕ ಬಸ್, ರೈಲುಗಳಲ್ಲಿ ಟಿಕೆಟ್ ಭರ್ತಿಯಾಗುತ್ತದೆ.
ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋ ಹಂಚಲು ಎಷ್ಟು ಪೆನ್ ಡ್ರೈವ್ ಬಳಕೆಯಾಯಿತು, ಎಷ್ಟು ಮಂದಿ ಇದರಲ್ಲಿ ಭಾಗಿಯಾಗಿದ್ದರು ಎಂಬ ಅಂಶ ಚಾರ್ಜ್ ಶೀಟ್ ನಲ್ಲಿ ಬಯಲಾಗಿದೆ. ಹಾಸನದಲ್ಲಿ ಎರಡು ವರ್ಷಗಳ ಹಿಂದೆ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ ಭಾರೀ ಸದ್ದು ಮಾಡಿತ್ತು. ಪ್ರಜ್ವಲ್ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಪ್ರಜ್ವಲ್ ಈ ಪೈಕಿ ಒಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದೀಗ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂದಿಸಿದಂತೆ ಹಾಸನ ಸಿವಿಲ್ ಕೋರ್ಟ್ ಗೆ 13,712 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ಈ ವಾರದ ಆರಂಭದಲ್ಲೇ ಪರಿಶುದ್ಧ ಚಿನ್ನದ ದರ ಸತತವಾಗಿ ಇಳಿಕೆಯಾಗುತ್ತಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,65,990.00 ರೂ.ಗಳಿತ್ತು. ಆದರೆ ಇಂದು ಇಳಿಕೆಯಾಗಿದ್ದು 1,60,910.00 ರೂ.ಗಳಷ್ಟಿದೆ.
ಜೈಂಟ್ ವೀಲ್ ನಲ್ಲಿ ಕುಳಿತು ಸಾಕಷ್ಟು ಜನ ನೋಡುತ್ತಿರುವಾಗಲೇ ಓರ್ವ ವ್ಯಕ್ತಿ ಮೂತ್ರ ವಿಸರ್ಜಿಸಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಕಾಮೆಂಟ್ ಮಾಡಿರುವ ನೆಟ್ಟಿಗರು ಸ್ವಲ್ಪವೂ ಮ್ಯಾನರ್ಸ್ ಇಲ್ವಾ ಎಂದಿದ್ದಾರೆ. ನಮ್ಮ ದೇಶದಲ್ಲಿ ಕೆಲವರಿಗೆ ಎಷ್ಟೇ ವಿದ್ಯಾಭ್ಯಾಸವಿದ್ದರೂ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದೇ ಗೊತ್ತಿಲ್ಲ. ಗೊತ್ತಿದ್ದೂ ಯಾರು ಏನು ಮಾಡುತ್ತಾರೆ ಎಂಬ ದರ್ಪ. ಇದೇ ರೀತಿ ಈ ವ್ಯಕ್ತಿಯೂ ಮಾಡಿದ್ದಾನೆ. ಜೈಂಟ್ ವೀಲ್ ನಲ್ಲಿ ಸಾಕಷ್ಟು ಜನ ಕುಳಿತಿದ್ದಾರೆ. ಎಲ್ಲಾ ಸೀಟ್ ಗಳೂ ಭರ್ತಿಯಾಗಿವೆ.
ಬೆಂಗಳೂರು: ಸಾರಾ ಅಲಿ ಖಾನ್ ಮತ್ತು ಕೇದಾರನಾಥ ದೇಗುಲ ಮತ್ತು ಬದರಿನಾಥ ದೇಗುಲಕ್ಕೆ ಭೇಟಿ ನೀಡಿದ ವಿವಾದದ ಬಗ್ಗೆ ಮಂಡಿ ಸಂಸದೆ ಕಂಗನಾ ರನೌತ್ ಪ್ರತಿಕ್ರಿಯಿಸಿದ್ದಾರೆ. ದೇವಾಲಯದ ಅಧಿಕಾರಿಗಳು ದರ್ಶನಕ್ಕೆ ಅವಕಾಶ ನೀಡುವ ಮೊದಲು ಸಾರಾ ಅವರಂತಹ ಸಂದರ್ಶಕರಿಂದ ನಂಬಿಕೆಯ ಲಿಖಿತ ಘೋಷಣೆಯ ಅಗತ್ಯವಿರುತ್ತದೆ ಎಂದು ವರದಿಗಳು ಸೂಚಿಸಿದ ನಂತರ ಸಮಸ್ಯೆ ಪ್ರಾರಂಭವಾಯಿತು. ಕಂಗನಾ ಈಗ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ಅವರ ಕಾಮೆಂಟ್ಗಳನ್ನು ಸಂಕ್ಷಿಪ್ತವಾಗಿ ಮತ್ತು ನೇರವಾಗಿ
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದಿಂದಾಗಿ ಗ್ಯಾಸ್ ಸಿಲಿಂಡರ್ ಅಭಾವ ಎದುರಾಗಿದ್ದು ವ್ಯಾಪಾರಿಯೊಬ್ಬ ರೈಲಿನಲ್ಲಿ ಒಣಗಿದ ಸೆಗಣಿ ಮಾರಾಟ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೇಶದಾದ್ಯಂತ ಈಗ ಎಲ್ ಪಿಜಿ ಸಿಲಿಂಡರ್ ಅಭಾವ ಎದುರಾಗಿದೆ. ಮೊದಲಿನಂತೆ ಬೇಕೆಂದಾಗ ಸಿಲಿಂಡರ್ ಸಿಗುತ್ತಿಲ್ಲ. ಹಲವು ಹೋಟೆಲ್ ಗಳು ಸಿಲಿಂಡರ್ ಇಲ್ಲದೇ ಬಂದ್ ಮಾಡಬೇಕಾದ ಪರಿಸ್ಥಿತಿಗೆ ಬಂದಿದೆ. ಮನೆಗಳಿಗೂ ಮೊದಲಿನಂತೆ ತ್ವರಿತವಾಗಿ ಗ್ಯಾಸ್ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಿಯೊಬ್ಬ ರೈಲಿನಲ್ಲಿ ಒಣಗಿದ ಸೆಗಣಿ (ಬೆರಣಿ) ಮಾರಾಟಕ್ಕಿಳಿದಿದ್ದಾನೆ.
ನವದೆಹಲಿ: ಮುಸ್ಲಿಮರು ಗಂಗಾ ನದಿಯಲ್ಲಿ ಇಫ್ತಾರ್ ಕೂಟ ಮಾಡಿದರೆ ತಪ್ಪೇನು ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಕಿಡಿ ಕಾರಿದ್ದಾರೆ. ವಾರಣಾಸಿಯಲ್ಲಿ ಗಂಗಾ ನದಿಯಲ್ಲಿ ಬೋಟ್ ನಲ್ಲಿ ತೆರಳಿ ಮುಸ್ಲಿಮ್ ಯುವಕರು ಇಫ್ತಾರ್ ಕೂಟ ಆಯೋಜಿಸಿ ನಾನ್ ವೆಜ್ ಆಹಾರ ವಸ್ತುಗಳನ್ನು ಗಂಗಾ ನದಿಗೆ ಎಸೆದಿದ್ದರು. ಇದರಿಂದ ಹಿಂದೂ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ 14 ಯುವಕರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಇದೀಗ ಕಾಂಗ್ರೆಸ್ ನಾಯಕ ಪವನ್ ಖೇರಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಕಳೆದ 10-12 ವರ್ಷಗಳಿಂದ ರಾಮನವರಿ, ಹನುಮಾನ್ ಜಯಂತಿಗೆ ಹಿಂಸಾಚಾರವಾಗುತ್ತಿದೆ.
ದೆಹಲಿಯ ಪಾಲಂ ಮೆಟ್ರೋ ನಿಲ್ದಾಣದ ಸಮೀಪವಿರುವ ಶ್ರೀ ರಾಮ್ ಚೌಕ್ ಬಳಿಯ ಬಹುಮಹಡಿ ವಸತಿ ಕಟ್ಟಡದಲ್ಲಿ ಬುಧವಾರ ಮುಂಜಾನೆ ಭಾರೀ ದೊಡ್ಡ ಬೆಂಕಿ ಅವಘಡ ಸಂಭವಿಸಿದೆ.ಈ ದುರಂತ ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬೆಳಗ್ಗೆ 7 ಗಂಟೆ ಸುಮಾರಿಗೆ ಅಧಿಕಾರಿಗಳು ಗಾಲಿ ಸಂಖ್ಯೆ-2ರಲ್ಲಿ ಬೆಂಕಿ ಹೊತ್ತಿಕೊಂಡ ಬಗ್ಗೆ ಮಾಹಿತಿ ನೀಡಿದರು.
ನವದೆಹಲಿ: 54 ವರ್ಷಗಳಿಂದ ನಾನು ದೇವೇಗೌಡ ಅವರನ್ನು ಬಲ್ಲೆ. ಅವರ ಜತೆ ಕೆಲಸ ಮಾಡಿದ್ದೇನೆ. ಆದರೆ ಆ ಬಳಿಕ ಏನಾಯಿತು ಎಂದು ತಿಳಿದಿಲ್ಲ. ನಮ್ಮನ್ನು ಪ್ರೇಮಿಸಿದರು, ಆದರೆ ಮದುವೆ ಆಗಿದ್ದು ಮೋದಿ ಜತೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಈ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿದ್ದ ಪ್ರಧಾನಿ ಮೋದಿಯೇ ಖರ್ಗೆ ಮಾತಿಗೆ ನಗೆ ಬೀರಿದ್ದಾರೆ. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ನಿವೃತ್ತರಾಗುತ್ತಿರುವ ರಾಜ್ಯಸಭಾ ಸಂಸದರಿಗೆ ಬುಧವಾರ ವಿದಾಯ ಹೇಳಿದರು, ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಇರುವವರು ದೇಶ ಸೇವೆ ಮಾಡುವ ಉತ್ಸಾಹದಿಂದ "ದಣಿಯುವುದಿಲ್ಲ
ತಮಿಳು ಚಿತ್ರರಂಗದಲ್ಲಿ ತಮ್ಮ ಅಭಿಮಾನಿಗಳಿಗೆ ಪೂರ್ಣಾ ಎಂದೇ ಚಿರಪರಿಚಿತರಾಗಿರುವ ನಟಿ ಶಮ್ನಾ ಕಾಸಿಂ ಅವರು ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಸಂತೋಷದ ಸುದ್ದಿಯನ್ನು ನಟಿ ತನ್ನ ಇನ್ಸ್ಟಾಗ್ರಾಮ್ ಪುಟದಲ್ಲಿ ಬರೆದುಕೊಂಡಿದ್ದಾರೆ, "ಇಂದು, ಅಲ್ಲಾ ನನ್ನ ಜೀವನವನ್ನು ಮತ್ತೊಂದು ಅಮೂಲ್ಯವಾದ ಉಡುಗೊರೆಯೊಂದಿಗೆ ಆಶೀರ್ವದಿಸಿದ್ದಾನೆ. ಇಂದು ಮುಂಜಾನೆ 4:25 ಕ್ಕೆ, ಫಜ್ರ್ ಸಮಯಕ್ಕೆ ಹತ್ತಿರದಲ್ಲಿ, ನಾವು ಹೆಣ್ಣು ಮಗುವನ್ನು ಆಶೀರ್ವದಿಸಿದ್ದೇವೆ. ಅವರು ಜನಿಸಿದ ತಕ್ಷಣ, ಅಧಾನ್ ಮತ್ತು ಇಕಾಮಹ್ ಅನ್ನು ಅವಳ ಕಿವಿಯಲ್ಲಿ ಪಠಿಸಲಾಯಿತು. ನಾವು ನಮ್ಮ ಪ್ರೀತಿಯ ಮಗಳಿಗೆ ಜಮೆಲಾ ಎಂದು ಹೆಸರಿಸಿದ್ದೇವೆ.
ಟೆಲ್ ಅವಿವ್: ಇರಾನ್ನ ಭಯೋತ್ಪಾದನಾ ಆಡಳಿತದ ಕಮಾಂಡ್ ಸೆಂಟರ್ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ದೃಢಪಡಿಸಿದ ಇಸ್ರೇಲಿ ವಾಯುಪಡೆಯು "ಟೆಹ್ರಾನ್ನಲ್ಲಿ ವ್ಯಾಪಕ-ಪ್ರಮಾಣದ ವೈಮಾನಿಕ ದಾಳಿಯನ್ನು" ಪೂರ್ಣಗೊಳಿಸಿದೆ ಎಂದು ಘೋಷಿಸಿದೆ. ಎಕ್ಸ್ ಪೋಸ್ಟ್ನಲ್ಲಿ, ಐಎಎಫ್ ಮಂಗಳವಾರ ಮಿಲಿಟ್ ಟೆಲಿಜೆನ್ಸ್ನಿಂದ ನಡೆದ ಕಾರ್ಯಾಚರಣೆಯನ್ನು ವಿವರಿಸಿದೆ. ಕಾರ್ಯಾಚರಣೆಯು ನಿರ್ದಿಷ್ಟವಾಗಿ "ಕಮಾಂಡ್ ಸೆಂಟರ್ಗಳು, ಬ್ಯಾಲಿಸ್ಟಿಕ್ ಕ್ಷಿಪಣಿ ರಚನೆಯ ತಾಣಗಳು ಮತ್ತು ಇರಾನಿನ ಭಯೋತ್ಪಾದಕ ಆಡಳಿತದ ಹೆಚ್ಚುವರಿ ಮೂಲಸೌಕರ್ಯಗಳನ್ನು" ಗುರಿಯಾಗಿಸಿಕೊಂಡಿದೆ.ಮಿಲಿಟರಿ ಬಿಡುಗಡೆ ಮಾಡಿದ ದೃಶ್ಯಗಳಲ್ಲಿ ಟೆಹ್ರಾನ್ನಲ್ಲಿರುವ ದೊಡ್ಡ ಸಂಕೀರ್ಣದ ವೈಮಾನಿಕ ವಿಚಕ್ಷಣ ಛಾಯಾಚಿತ್ರವಿದೆ.
ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಪೆನ್ಡ್ರೈವ್ ಹಂಚಿಕೆ ಸಂಬಂಧ ಇದೀಗ ಮಹತ್ವದ ಬೆಳವಣಿಗೆಯಾಗಿದೆ. ಪೆನ್ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಎಸ್ಐಟಿ ಚಾರ್ಜ್ಶೀಟ್ ಅನ್ನು ಸಲ್ಲಿಕೆ ಮಾಡಿದ್ದು, ಹಾಸನ ಸಿವಿಲ್ ಕೋರ್ಟ್ಗೆ 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಇದರದಲ್ಲಿ ಒಟ್ಟು 39ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.ಅಶ್ಲೀಲ ವಿಡಿಯೋ ಹಂಚಲು ಆರೋಪಿಗಳು 70 ಪೆನ್ಡ್ರೈವ್ ಖರೀದಿಸಿದ್ದರು. ಹಾಸನದಲ್ಲೇ 70 ಪೆನ್ಡ್ರೈವ್ ಖರೀದಿ ಮಾಡಿರುವುದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ಪ್ರಕರಣದಲ್ಲಿ 52 ಮಂದಿ ಹೆಸರು ಉಲ್ಲೇಖ ಮಾಡಲಾಗಿತ್ತು. 52 ಮಂದಿಯಲ್ಲಿ 39 ಮಂದಿ ಆರೋಪ ಸಾಬೀತಾಗಿದೆ. ವಕೀಲ
ಚೆನ್ನೈ: ನನಗೆ ನಯನತಾರಾ ಬೇಕು, ನೀವು ಕನಸು ಈಡೇರಿಸುವಿರಾ ಎಂದು ಎಐಎಡಿಎಂಕೆ ಸಂಸದ ಸಿ ವಿ ಷಣ್ಮುಗಂ ಅವರು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರಲ್ಲಿ ಕೇಳಿರುವುದು ಭಾರೀ ವಿವಾದವನ್ನು ಸೃಷ್ಟಿ ಮಾಡಿದೆ. ಈ ಕಾಮೆಂಟ್ಗೆ ರಾಜಕೀಯ ಮುಖಂಡರು, ಚಲನಚಿತ್ರ ಸಂಘಗಳು ಮತ್ತು ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿದೆ.ಚೆನ್ನೈನಿಂದ ಸರಿಸುಮಾರು 150 ಕಿಮೀ ದೂರದಲ್ಲಿರುವ ವಿಲ್ಲುಪುರಂನಲ್ಲಿ ಡಿಎಂಕೆ ಸರ್ಕಾರದ ವಿರುದ್ಧ ಪಕ್ಷದ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಷಣ್ಮುಗಂ, "ನನಗೆ ನಯನತಾರಾ ಬೇಕು, ನೀವು ಈಡೇರಿಸುವಿರಾ? ನಯನತಾರಾ ಅವರನ್ನು ಮದುವೆಯಾಗುವ ಯಾರೊಬ್ಬರ ಕನಸನ್ನು ಮುಖ್ಯಮಂತ್ರಿ ಈಡೇರಿಸುವಿರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇಂದೋರ್: ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಮಧ್ಯಪ್ರದೇಶದ ಇಂದೋರ್ನಲ್ಲಿ ಮೂರು ಅಂತಸ್ತಿನ ವಸತಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬ್ರಿಜೇಶ್ವರಿ ಅನೆಕ್ಸ್ ವಸತಿ ಪ್ರದೇಶದಲ್ಲಿರುವ ಮನೆಯಲ್ಲಿ ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸ್ ಆಯುಕ್ತ (ಇಂದೋರ್) ಸಂತೋಷ್ ಕುಮಾರ್ ಸಿಂಗ್ ತಿಳಿಸಿದ್ದಾರೆ.ಘಟನೆ ಕುರಿತು ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮುಂಬೈ: ಮಂಗಳವಾರ ರಾತ್ರಿ ಮುಂಬೈನಲ್ಲಿ ನಡೆದ 'ಧುರಂಧರ್: ದಿ ರಿವೆಂಜ್' ಚಿತ್ರದ ಸಂಗೀತ ಬಿಡುಗಡೆ ಸಮಾರಂಭದಲ್ಲಿ ನಟ ರಣವೀರ್ ಸಿಂಗ್ ಅವರು ಹೆಚ್ಚಿನ ಉತ್ಸಹಭರಿತವಾಗಿ ಕಾಣಿಸಿಕೊಂಡರು. ಮಾರ್ಚ್ 19 ರಂದು ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳುವ ಉತ್ಸಾಹವು ಅಭಿಮಾನಿಗಳಿಂದ ಹರ್ಷೋದ್ಗಾರಗಳನ್ನು ಸೆಳೆಯಿತು.ರಣವೀರ್ ಅವರು ವೇದಿಕೆಯ ಮೇಲೆ ಕಾಲಿಡುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು. ಜನರ ಹರ್ಷೋದ್ಘಾರದಿಂದ ಮುಳುಗಿದ ಸಿಂಗ್, ಅಭಿಮಾನಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು ಮತ್ತು ಚಿತ್ರದ ಹೆಚ್ಚುತ್ತಿರುವ ಝೇಂಕಾರದಿಂದ ಉಂಟಾದ ವಾತಾವರಣವನ್ನು ಹೀರಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡರು.
ನವದೆಹಲಿ: ಹೆಚ್ಚುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ, ಫೆಬ್ರವರಿ 28 ರಿಂದ ಸುಮಾರು 2.44 ಲಕ್ಷ ಜನರು ತಮ್ಮ ತಾಯ್ನಾಡು ಭಾರತಕ್ಕೆ ವಾಪಾಸ್ ಆಗಿದ್ದಾರೆ. ಯುನೈಟೆಡ್ ಸ್ಟೇಟ್ಸ್-ಇಸ್ರೇಲ್ ಒಗ್ಗೂಡಿ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ ಅದೇ ದಿನ ಸಂಘರ್ಷ ಪ್ರಾರಂಭವಾಯಿತು. ಪ್ರತಿಕ್ರಿಯೆಯಾಗಿ, ಇರಾನ್ ಅಮೆರಿಕದ ಸೇನಾ ನೆಲೆಗಳನ್ನು ಹೊಂದಿರುವ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡಿತು ಮತ್ತು ಯುಎಸ್ ಮತ್ತು ಇಸ್ರೇಲ್ ಮೇಲೆ ಒತ್ತಡ ಹೇರಲು ಆಯಕಟ್ಟಿನ ನಿರ್ಣಾಯಕವಾದ ಹಾರ್ಮುಜ್ ಜಲಸಂಧಿಯನ್ನು ಉಸಿರುಗಟ್ಟಿಸಲು ಪ್ರಯತ್ನಿಸಿತು.
ಬೆಂಗಳೂರು: ಬುಧವಾರ ರಾತ್ರಿ 8ಗಂಟೆ ವೇಳೆಗೆ ಬೆಂಗಳೂರಿನ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಇದರ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮಂಗಳವಾರ ಸಿಲಿಕಾನ್ ಸಿಟಿಯ ಹಲವೆಡೆ ಭಾರೀ ಮಳೆಯಾಗಿದೆ. ಇನ್ನೂ ವರ್ಷದ ಮೊದಲ ಮಳೆಯೊಂದಿಗೆ ಆಲಿಕಲ್ಲು ಆಗಿರುವುದರಿಂದ ಜನರು ಫುಲ್ ಎಂಜಾಯ್ ಮಾಡಿದ್ದಾರೆ.
ಹಾಸನ: ಮಂಗಳವಾರದಂದು ಹಾಸನದಲ್ಲಿ ಭಾರೀ ಆಲಿಕಲ್ಲು ಮಳೆಯಾಗಿತ್ತು. ಇದರಿಂದ ವರ್ಷದ ಮೊದಲ ಮಳೆಯೇ ಹಾಸನ ಜನತೆಗೆ ಕೂಲ್ ಮಾಡಿತ್ತು. ಸಾಮಾಜಿಕ ಜಾಲತಾನದಲ್ಲಿ ಆಲಿಕಲ್ಲು ಮಳೆಯನ್ನು ಎಂಜಾಯ್ ಮಾಡಿ ಹಲವರು ಪೋಸ್ಟ್ ಮಾಡಿದ್ದರು. ಆದರೆ ಮಳೆ ಬಳಿಕದ ಪರಿಣಾಮವನ್ನು ಮಾತ್ರ ರೈತರು ಅನುಭವಿಸುತ್ತಿದ್ದಾರೆ. ಸುರಿದ ಭಾರೀ ಆಲಿಕಲ್ಲು ಮಳೆಗೆ ಇದೀಗ ರೈತನೊಬ್ಬ ಕಷ್ಟ ಪಟ್ಟು ದುಡಿದ ಕಲ್ಲಂಗಡಿ ಕೃಷಿ ನೀರು ಪಾಲಾಗಿದೆ. ಇನ್ನೇನು ಬೆಳೆ ತೆಗೆದು ಮಾರಾಟ ಮಾಡುವ ಹಂತಕ್ಕೆ ಬಂದಿದ್ದ ಕಲ್ಲಂಗಡಿ ಕಾಯಿ ಹಾಳಾಗಿದೆ. ಆಲಿಕಲ್ಲು ಮಳೆಯಿಂದಾಗಿ ಗಿಡ
ನವದೆಹಲಿ: ಮೋದಿಜೀ ಖಮೇನಿಗೆ ದ್ರೋಹ ಮಾಡಿದ್ರು ಹೀಗಾಗಿ ಭಾರತಕ್ಕೆ ಇರಾನ್ ಹನಿ ನೀರೂ ಕೂಡಾ ಕೊಡಬಾರದು ಎಂದು ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದ ಮಹಿಳೆ ಹೇಳಿರುವ ವಿಡಿಯೋ ವೈರಲ್ ಆಗಿದೆ. ಇಸ್ರೇಲ್, ಅಮೆರಿಕಾ ನಡೆಸಿದ ದಾಳಿಯಲ್ಲಿ ಇರಾನ್ ಪರಮೋಚ್ಛ ನಾಯಕ ಖಮೇನಿ ಹತ್ಯೆ ಮಾಡಲಾಗಿತ್ತು. ಇದನ್ನು ಖಂಡಿಸಿ ಭಾರತದಲ್ಲಿ ಕೆಲವರು ಬೀದಿಗಳಿದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಹಿಳೆಯೊಬ್ಬಳು ಮಾತನಾಡಿದ ವಿಡಿಯೋ ವೈರಲ್ ಆಗಿದೆ. ‘ಇರಾನ್ ನವರು ಭಾರತಕ್ಕೆ ಹನಿ ನೀರೂ ಕೊಡಬಾರದು. ಖಮೇನಿ ಹತ್ಯೆಗೆ ಭಾರತ, ಮೋದಿಜೀ ಕೂಡಾ ಕಾರಣ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಹುದ್ದೆಗಾಗಿ ತೀವ್ರ ಪೈಪೋಟಿ ಹಾಗೂ ಸಚಿವ ಸ್ಥಾನಕ್ಕೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿರುವ ನಡುವೆ ಬೆಂಗಳೂರಿನಲ್ಲಿ ಕಾಂಗ್ರೆಸ್ನ ಕೆಲ ಶಾಸಕರಿಂದ ಡಿನ್ನರ್ ಮೀಟಿಂಗ್ ನಡೆದಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ. ಇದರಲ್ಲಿ ಮೊದಲ ಹಾಗೂ ಎರಡನೇ ಬಾರಿ ಆಯ್ಕೆಯಾದ ಶಾಸಕರಿಂದ ಡಿನ್ನರ್ ಮೀಟಿಂಗ್ ನಡೆದಿರುವುದು ರಾಜಕೀಯದಲ್ಲಿ ಕೂತುಹಲದ ಬೆಳವಣಿಗೆಯಾಗಿದೆ. ಶಾಂಗ್ರಿಲಾ ಹೊಟೇಲ್ನಲ್ಲಿ ಈ ಡಿನ್ನರ್ ಮೀಟಿಂಗ್ ನಡೆದಿದೆ. ಇದರಲ್ಲಿ ಸಚಿವ ಸ್ಥಾನವನ್ನು ನೀಡುವಂತೆ, ನಾಯಕತ್ವ ಬದಲಾವಣೆ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಹುದ್ದೆಗಾಗಿ ತೀವ್ರ ಪೈಪೋಟಿ ಹಾಗೂ ಸಚಿವ ಸ್ಥಾನಕ್ಕೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿರುವ ನಡುವೆ ಬೆಂಗಳೂರಿನಲ್ಲಿ ಕಾಂಗ್ರೆಸ್ನ ಕೆಲ ಶಾಸಕರಿಂದ ಡಿನ್ನರ್ ಮೀಟಿಂಗ್ ನಡೆದಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ. ಇದರಲ್ಲಿ ಮೊದಲ ಹಾಗೂ ಎರಡನೇ ಬಾರಿ ಆಯ್ಕೆಯಾದ ಶಾಸಕರಿಂದ ಡಿನ್ನರ್ ಮೀಟಿಂಗ್ ನಡೆದಿರುವುದು ರಾಜಕೀಯದಲ್ಲಿ ಕೂತುಹಲದ ಬೆಳವಣಿಗೆಯಾಗಿದೆ.
ಇರಾನ್: ಇಲ್ಲಿನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ಸಂಬಂಧ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರತಿಕ್ರಿಯಿಸಿದ್ದು, ಇದನ್ನು "ರಾಷ್ಟ್ರೀಯ ಜಾಗೃತಿಯ ಮೂಲ" ಎಂದು ಕರೆದರು. ಈ ಸಂಬಂಧ ವರದಿಯಾಗಿದೆ. ವ್ಯಕ್ತಿ, ಚಿಂತಕ [ಮತ್ತು] ಕ್ರಾಂತಿಕಾರಿ ರಾಜಕಾರಣಿ, ಇತರ ಹುತಾತ್ಮರಂತೆ ಈ ಮಹಾನ್ ಹುತಾತ್ಮರ ಶುದ್ಧ ರಕ್ತವು ಗೌರವ, ಶಕ್ತಿ ಮತ್ತು ರಾಷ್ಟ್ರೀಯ ಜಾಗೃತಿಯ ಮೂಲವಾಗಿದೆ ಎಂದು ಇರಾನ್ ಹೇಳಿದೆ. ಈ ಮಹಾನ್ ಹುತಾತ್ಮ ಮತ್ತು ಇತರ ಹುತಾತ್ಮರ ಬಲಿದಾನವನ್ನು ಐಆರ್ಜಿಸಿ ಖಂಡಿತವಾಗಿಯೂ ಮರೆಯುವುದಿಲ್ಲ ಈ ಮಧ್ಯೆ,
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇಂದು ಯಾವ ಜಿಲ್ಲೆಗಳಿಗೆ ಮಳೆಯ ಸೂಚನೆಯಿದೆ ಇಲ್ಲಿದೆ ಇಂದಿನ ಹವಾಮಾನ ವರದಿ. ಬೇಸಿಗೆಯ ಬೇಗೆಯ ನಡುವೆ ದಿಡೀರ್ ಮಳೆಯಾಗುತ್ತಿರುವುದು ವಾತಾವರಣವನ್ನು ಕೊಂಚ ತಂಪು ಮಾಡಿದೆ. ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಗುಡುಗು ಸಹಿತ ಮಳೆಯಾಗುತ್ತಿದೆ. ಕೆಲವೆಡೆ ಆಲಿಕಲ್ಲು ಮಳೆಯಾಗಿರುವ ವರದಿಯೂ ಆಗಿದೆ. ಇಂದು ಕೂಡಾ ಕೆಲವೇ ಜಿಲ್ಲೆಗಳಿಗೆ ಮಳೆಯ ಸೂಚನೆಯಿದೆ. ದಕ್ಷಿಣ ಕನ್ನಡದ ಕೆಲವು ಭಾಗಗಳು, ಚಿಕ್ಕಮಗಳೂರು, ಮಂಡ್ಯ, ಬೆಂಗಳೂರು, ರಾಮನಗರ, ಕೋಲಾರ, ತುಮಕೂರು, ಚಿತ್ರದುರ್ಗ, ಹಾವೇರಿ, ಬೀದರ್, ರಾಯಚೂರು, ಬೆಳಗಾವಿ, ಯಾದಗಿರಿ, ಹುಬ್ಬಳ್ಳಿ, ಬಳ್ಳಾರಿ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ.