ತಮಿಳುನಾಡು: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಸುಮಾರು ₹5,650 ಕೋಟಿಗಳ ಬಹು ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಿದರು."ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಅಭಿವೃದ್ಧಿ ಹೊಂದಿದ ತಮಿಳುನಾಡು ರಚಿಸುವುದು" ತಮ್ಮ ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.370 ಕಿ.ಮೀ ವ್ಯಾಪ್ತಿಯ ರಸ್ತೆಗಳು ಈ ಪ್ರತಿಯೊಂದು ರಸ್ತೆಗಳು ಕೇವಲ ಭೌತಿಕ ಮೂಲಸೌಕರ್ಯವಲ್ಲ, ವಿದ್ಯಾರ್ಥಿಗಳು ಆರಾಮವಾಗಿ ಶಾಲೆಗಳು ಮತ್ತು ಕಾಲೇಜುಗಳಿಗೆ ಪ್ರಯಾಣಿಸಬಹುದು ಮತ್ತು ಪ್ರತಿಯೊಂದೂ ಉತ್ತಮವಾದ
ನವದೆಹಲಿ: ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಬುಧವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಹರಿಹಾಯ್ದರು.ಕಾಂಗ್ರೆಸ್ ನಾಯಕನಿಗೆ ಮಾತನಾಡಲು ಅವಕಾಶ ಸಿಕ್ಕಾಗ ಅವರು "ಜರ್ಮನಿ, ಇಂಗ್ಲೆಂಡ್ಗೆ ಹಾರುತ್ತಾರೆ ಎಂದು ಲೇವಡಿ ಮಾಡಿದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಅಮಿತ್ ಶಾ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮದುವೆಗೆ ಒತ್ತಾಯ ಮಾಡುತ್ತಿದ್ದಾರೆಂದು ತಂದೆಯ ವಿರುದ್ಧವೇ ಠಾಣೆ ಮೆಟ್ಟಿಲೇರಿದ ಬೆನ್ನಲ್ಲೇ ಮಹಾಕುಂಭಮೇಳದ ವೇಳೆ ವೈರಲ್ ಆಗಿದ್ದ ಮೊನಲಿಸಾ ತನ್ನ ಬಾಯ್ಫ್ರೆಂಡ್ ಅನ್ನು ಮದುವೆಯಾಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊನಾಲಿಸಾ ಭೋಸ್ಲೆ ಬುಧವಾರ ಅರುಮನೂರಿನ ದೇವಸ್ಥಾನದಲ್ಲಿ ತನ್ನ ಗೆಳೆಯನನ್ನು ವಿವಾಹವಾದರು.ದೇವಸ್ಥಾನದಲ್ಲಿ ನೆರೆದಿದ್ದ ವೀಕ್ಷಕರು, ಮಾಧ್ಯಮದವರು ಮತ್ತು ರಾಜಕೀಯ ಮುಖಂಡರ ಗುಂಪಿನ ನಡುವೆ ಸಮಾರಂಭ
2025 ರ ಮಹಾಕುಂಭಮೇಳದ ಸಮಯದಲ್ಲಿ ಖ್ಯಾತಿ ಗಳಿಸಿದ ಮೊನಾಲಿಸಾ ಭೋಸ್ಲೆ ಅವರು ಇದೀಗ ದಿಢೀರನೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತನಗೆ ಮದುವೆಯಾಗುವಂತೆ ತನ್ನ ತಂದೆ ಒತ್ತಾಯ ಮಾಡುತ್ತಿದ್ದಾರೆಂದು ಆರೋಪ ಮಾಡಿ ಮೊನಲಿಸಾ ಅವರು ತಿರುವನಂತಪುರಂನ ತಂಪನೂರು ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.ಬೆಳಗ್ಗೆ ತನ್ನ ಗೆಳೆಯ ಫರ್ಮಾನ್ ಖಾನ್ನೊಂದಿಗೆ ಮೊನಲಿಸಾ ಪೊಲೀಸ್ ಠಾಣೆಗೆ ಬಂದಿದ್ದಾಳೆ. ತನ್ನ ದೂರಿನಲ್ಲಿ, ತನ್ನ ತಂದೆ
ನವದೆಹಲಿ: ನಡೆಯುತ್ತಿರುವ ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಗಲ್ಫ್ ಪ್ರದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರಿಗೆ ಕೇಂದ್ರವು ಎಲ್ಲ ರೀತಿಯ ನೆರವು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಭರವಸೆ ನೀಡಿದರು.ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಪಶ್ಚಿಮ ಏಷ್ಯಾದ ಭಾರತೀಯರನ್ನು ಬೆಂಬಲಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು. ಪಶ್ಚಿಮ ಏಷ್ಯಾದಲ್ಲಿರುವ ಭಾರತೀಯರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು
ಟೀಂ ಇಂಡಿಯಾ ಕ್ರಿಕೆಟರ್ ಇಶಾನ್ ಕಿಶನ್ ಇತ್ತೀಚಿನ ಐಸಿಸಿ T20I ಬ್ಯಾಟರ್ ರ್ಯಾಂಕಿಂಗ್ನಲ್ಲಿ ಗಮನಾರ್ಹ ಜಿಗಿತವನ್ನು ಮಾಡಿದ್ದಾರೆ. ಈ ಮೂಲಕ ವಿಶ್ವದ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಅವರು ಈಗ ತಮ್ಮ T20I ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವನ್ನು ತಲುಪುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ತಮ್ಮ ಭಾರತ ತಂಡದ ಸಹ ಆಟಗಾರ ಅಭಿಷೇಕ್ ಶರ್ಮಾ ಅವರ ಹಿಂದೆ ಕುಳಿತಿದ್ದಾರೆ.ಕಿಶನ್ ಒಂಬತ್ತು ಪಂದ್ಯಗಳಿಂದ 317 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ
ಬೆಂಗಳೂರು: ಏರ್ ಇಂಡಿಯಾ ಎಕ್ಸ್ಪ್ರೆಸ್ ಬೋಯಿಂಗ್ 737 ಮ್ಯಾಕ್ಸ್ ವಿಮಾನವು ಬುಧವಾರ ಫುಕೆಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಮುಂಭಾಗದ ಚಕ್ರಗಳು ಕಳಚಿದ ಘಟನೆ ನಡೆಯಿತು. ವಿಮಾನ, VT-BWQ, ಹೈದರಾಬಾದ್ನಿಂದ ಫುಕೆಟ್ಗೆ IX938 ವಿಮಾನವನ್ನು ನಿರ್ವಹಿಸಿತು.ಪ್ರಯಾಣಿಕರನ್ನು ಕೆಳಗಿಳಿಸಿ ಟರ್ಮಿನಲ್ ಕಟ್ಟಡಕ್ಕೆ ಕರೆದೊಯ್ಯಲಾಯಿತು. ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಹಿರಿಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿಯ ಪ್ರಕಾರ ಯಾವುದೇ ವ್ಯಕ್ತಿಗೆ ಯಾವುದೇ ಗಾಯವಾಗಿಲ್ಲ.
ನವದೆಹಲಿ: ಭಾರತ 2026 ರ ಟಿ20 ವಿಶ್ವಕಪ್ ಗೆದ್ದ ನಂತರ, ಹೆಚ್ಚಿನ ಜನರು ಆಟಗಾರರು ಚಾರ್ಟರ್ಡ್ ವಿಮಾನಗಳಲ್ಲಿ ಮನೆಗೆ ಪ್ರಯಾಣಿಸುತ್ತಿದ್ದಾರೆ. ಆದರೆ ಆಲ್ರೌಂಡರ್ ಶಿವಂ ದುಬೆ ಅವರು ಅಹಮದಾಬಾದ್ನಿಂದ ಮುಂಬೈಗೆ ತುಂಬಾ ವಿಭಿನ್ನವಾದ ಪ್ರಯಾಣವನ್ನು ಹೊಂದಿದ್ದರು. ವಿಮಾನಗಳು ಸಂಪೂರ್ಣವಾಗಿ ಬುಕ್ ಆಗುವುದರೊಂದಿಗೆ, ಅವರು ತಮ್ಮ ಪತ್ನಿ ಮತ್ತು ಸ್ನೇಹಿತನೊಂದಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದರು, ಸಾಮಾನ್ಯ ಪ್ರಯಾಣಿಕರಂತೆ 3 ನೇ AC ಟಿಕೆಟ್ ಅನ್ನು ತೆಗೆದುಕೊಂಡರು. ದುಬೆ ಅವರು ತನಗೆ ಮತ್ತು ಅವರ ಕುಟುಂಬಕ್ಕೆ ವಿಮಾನ ಟಿಕೆಟ್ಗಳನ್ನು ಪಡೆಯಲು ಮೊದಲು ಪ್ರಯತ್ನಿಸಿದರು ಆದರೆ ಯಾವುದೇ
ರಾಮನಗರ: ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಗ್ಯಾಸ್ ಸಿಲಿಂಡರ್ ಅಭಾವ ಉದ್ಭವ ಹಿನ್ನೆಲೆ ಸಿಲಿಂಡರ್ಗೆ ಕನ್ನ ಹಾಕುತ್ತಿರುವ ಘಟನೆಗಳು ವರದಿಯಾಗಿದೆ. ಇದೀಗ ಇಂತಹದ್ದೇ ಘಟನೆ ಚನ್ನಪಟ್ಟಣದ ಕನಕನಗರದ ಕೃಷ್ಣಪ್ಪ ಎಂಬುವವ ಮನೆಯಲ್ಲಿ ಸಿಲಿಂಡರ್ ಕಳ್ಳತನ ಮಾಡಲಾಗಿದೆ.ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬಂದ ಖದೀಮ ಕಾಂಪೌಂಡ್ ಒಳಗೆ ಇದ್ದ ಸಿಲಿಂಡರ್ ಕದ್ದು ಎಸ್ಕೇಪ್ ಆಗಿದ್ದಾನೆ. ಫುಲ್ ಗ್ಯಾಸ್ ಇದ್ದ ಸಿಲಿಂಡರ್ ಅನ್ನು ಕಳ್ಳ ಹೊತ್ತೊಯ್ದ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರು: ದಲಿತರಿಗೆ ಮೀಸಲಾಗಿರುವ ಹಣವನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗೆ ಬಳಸಿಕೊಳ್ಳುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಕಲಾಪದಲ್ಲಿ ಈ ಬಗ್ಗೆ ಪ್ರಶ್ನಿಸಿರುವ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನ ಪರಿಷತ್ತಿನ ಬಜೆಟ್ ಅಧಿವೇಶನದಲ್ಲಿ ಸರ್ಕಾರದ ಈ ದಲಿತ ವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸಿದೆ. SCSP/TSP ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಅನುದಾನದಲ್ಲಿ ಬರೋಬ್ಬರಿ 15,000 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವುದು ಈ ಸರ್ಕಾರದ ಮೋಸದ ಮುಖವನ್ನು ಬಯಲು ಮಾಡಿದೆ.
ಮಂಡ್ಯ: ಅರ್ಚಕ ಸಿದ್ದಲಿಂಗಪ್ಪ ಅವರ ಅನುಮಾನಸ್ಪದ ಸಾವು ಪ್ರಕರಣ ಸಂಬಂಧ ಇದೀಗ ಆತನ ಪತ್ನಿ ಹಾಗೂ ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆಯ ಜಾಡು ಹಿಡಿದ ಹೊರಟ ಪೊಲೀಸರು ಅರ್ಚಕನ ಸಾವಿನ ಹಿಂದಿನ ಅರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಮರಳಗಾಲ ಗ್ರಾಮದ ಬಳಿ ಅರ್ಚಕ ಸಿದ್ದಲಿಂಗಪ್ಪನನ್ನು ಹತ್ಯೆ ಮಾಡಲಾಗುತ್ತದೆ. ಅವರನ್ನು ಹತ್ಯೆಗೈದ ಆರೋಪದ ಮೇರೆಗೆ ಪತ್ನಿ ಶಾಲಿನಿ, ಲವರ್ ಹರೀಶ ಹಾಗೂ ಎಂಆರ್ ಸಂತೋಷ್ ಕುಮಾರ್, ಬಿ. ಗಣೇಶ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವದೆಹಲಿ: ನಡೆಯುತ್ತಿರುವ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಪೂರೈಕೆ ವ್ಯತ್ಯಯ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಬುಧವಾರ ಕರೆ ನೀಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಹಣದುಬ್ಬರ, ನಿರುದ್ಯೋಗ ಮತ್ತು ಸಿಲಿಂಡರ್ಗಳ ಮೇಲಿನ ಇತ್ತೀಚಿನ ಬೆಲೆ ಏರಿಕೆಯ ಒತ್ತಡವನ್ನು ಸಾರ್ವಜನಿಕರು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಬೆಲೆಗಳು ಏರಿಕೆಯಾಗಿದೆ, ನಿರುದ್ಯೋಗ ಹೆಚ್ಚಾಗಿದೆ, ಎಲ್ಪಿಜಿ ಪರಿಸ್ಥಿತಿಯನ್ನು ನೋಡಿ, ಅವರ ನೀತಿಗಳು ಮತ್ತು ಯೋಜನೆಗಳಿಂದಾಗಿ. ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದ್ದರೆ, ಅದು ಒಳ್ಳೆಯದು, ಕನಿಷ್ಠ ಸಾರ್ವಜನಿಕ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಬಹುದಿತ್ತು.
ನವದೆಹಲಿ: ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ ನಡೆಸುತ್ತಿರುವಾಗ ಮಾತನಾಡಿರುವ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್, ರಾಹುಲ್ ಗಾಂಧಿಯವರ ಜಿಲೇಬಿ ಫ್ಯಾಕ್ಟರಿ ಹೇಳಿಕೆ ಬಗ್ಗೆ ಉಲ್ಲೇಖಿಸಿ ವ್ಯಂಗ್ಯ ಮಾಡಿದ್ದಾರೆ. ಸ್ಪೀಕರ್ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ ಮತ್ತು ವಿಪಕ್ಷ ನಾಯಕರ ವಿರುದ್ಧ ಅವರು ಇಂದು ವಾಗ್ದಾಳಿ ನಡೆಸಿದ್ದಾರೆ. ಈ ನಡೆ ವಿಪಕ್ಷ ನಾಯಕರ ಒಣ ಪ್ರತಿಷ್ಠೆಯ ಫಲವಾಗಿದೆ ಎಂದಿದ್ದಾರೆ. ಇನ್ನು, ಪ್ರಧಾನಿ ಮೋದಿ ಕಾಂಪ್ರಮೈಸ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ರಾಹುಲ್ ಗಾಂಧಿಗೆ ತಿರುಗೇಟು ಕೊಟ್ಟ ರವಿಶಂಕರ್ ಪ್ರಸಾದ್, ಭಾರತದ ಪ್ರಧಾನಿ ಯಾವತ್ತೂ ಕಾಂಪ್ರಮೈಸ್ ಆಗಲು ಸಾಧ್ಯವಿಲ್ಲ ಎಂದಿದ್ದಾರೆ.
ನವದೆಹಲಿ: ಕಳೆದ 13ವರ್ಷಗಳಿಂದ ಕೋಮಾದಲ್ಲಿರುವ ಮಗನಿಗೆ ದಯಾಮರಣ ನೀಡಬೇಕೆಂದು ತಂದೆ ಸಲ್ಲಿಸಿದ್ದ ಅರ್ಜಿಗೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ತನ್ನ ಮಗನಿಗೆ ದಯಾಮರಣಕ್ಕೆ ಕೋರಿ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ.ಘನತೆ ಕಾಪಾಡಿಕೊಳ್ಳುವುದರ ಜತೆಗೆ ಸೂಕ್ತ ಯೋಜನೆಯೊಂದಿಗೆ ಹರೀಶ್ ರಾಣಾ ಅವರ ವೈದ್ಯಕೀಯ ಚಿಕಿತ್ಸೆಯನ್ನು
ಬೆಂಗಳೂರು: ಬುಧವಾರ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಡಿಎಕ್ಸ್ಬಿ) ಬಳಿ ಎರಡು ಡ್ರೋನ್ಗಳು ಬಿದ್ದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಘಟನೆಯ ಹೊರತಾಗಿಯೂ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳು ಎಂದಿನಂತೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ದುಬೈನ ಮಾಧ್ಯಮ ಕಚೇರಿಯು X ನಲ್ಲಿ ಹಂಚಿಕೊಂಡಿದೆ, "ಸ್ವಲ್ಪ ಸಮಯದ ಹಿಂದೆ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (DXB) ಸಮೀಪದಲ್ಲಿ ಎರಡು ಡ್ರೋನ್ಗಳು ಬಿದ್ದಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ, ಇದರ ಪರಿಣಾಮವಾಗಿ ಇಬ್ಬರು
ತಿರುಚಿರಾಪಳ್ಳಿ: ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರದ ಅಧಿಕಾರಾವಧಿಯನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸುವ ಮೂಲಕ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಗೆಲುವು ಸಾಧಿಸಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಬುಧವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆ, ಭ್ರಷ್ಟ ಸ್ಟಾಲಿನ್ ಸರ್ಕಾರವನ್ನು ತೊಡೆದುಹಾಕಲು ತಮಿಳುನಾಡಿನ ಜನರು ಎಂದಿಗೂ ತಮ್ಮ ಮುಖ್ಯಮಂತ್ರಿಯಾಗಿ ಸ್ವೀಕರಿಸುವುದಿಲ್ಲ ಮತ್ತು ಇದು ಸ್ಟಾಲಿನ್ ಕುಟುಂಬದ ಭ್ರಷ್ಟ ಆಚರಣೆಗಳಿಂದ ತಮಿಳುನಾಡಿನ ಹೆಮ್ಮೆ, ಸಂಸ್ಕೃತಿ ಮತ್ತು ಜನರನ್ನು ಉಳಿಸುವ ಸ್ಪರ್ಧೆಯಾಗಿದೆ.
ಮುಂಬೈ: ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಪ್ರಶಸ್ತಿ ಗೆದ್ದಿದೆ. ಭಾರತ ತಂಡದಲ್ಲಿದ್ದ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಜೀವನದಲ್ಲಿ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. 2026ರ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಕುಲದೀಪ್ ಯಾದವ್ ಅವರು ಹಸೆಮಣೆ ಏರಿಲಿದ್ದಾರೆ. ಅವರು ಮಾರ್ಚ್ 14ರಂದು ತಮ್ಮ ಬಾಲ್ಯದ ಗೆಳತಿಯೊಂದಿಗೆ ಮಸೂರಿಯ ರೆಸಾರ್ಟ್ನಲ್ಲಿ ಮದುವೆಯಾಗಲಿದ್ದಾರೆ.ಮದುವೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಆಹ್ವಾನ ನೀಡಿದ್ದಾರೆ. ಕುಲದೀಪ್ ವಿವಾಹ ಕಾರ್ಯಕ್ರಮಕ್ಕೆ ಸಹ ಆಟಗಾರರು ಹಾಗೂ ಕ್ರಿಕೆಟ್ ಲೋಕದ ದಿಗ್ಗಜರು ಭಾಗಿಯಾಗುವ ಸಾಧ್ಯತೆ ಇದೆ.
ಕೋಲ್ಕತ್ತ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಬಂಗಾಳಿಯ ಬಿಗ್ಬಾಸ್ ಶೋ ಅನ್ನು ನಿರೂಪಣೆ ಮಾಡಲಿದ್ದಾರೆ. ಈ ಮೂಲಕ ಸೌರವ್ ಗಂಗೂಲಿ ಅವರು ಹೊಸ ಇನ್ನಿಂಗ್ಸ್ ಅನ್ನು ಶುರು ಮಾಡಿದ್ದಾರೆ. ಕ್ರೀಡಾಲೋಕದಲ್ಲಿ ಛಾಪು ಮೂಡಿಸಿದ್ದ ಸೌರಬ್ ಗಂಗೂಲಿ ಅವರು ಇದೀಗ ಬಣ್ಣದ ಲೋಕದಲ್ಲಿ ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ. ಭಾರತದ ಮಾಜಿ ನಾಯಕ ಬಿಗ್ ಬಾಸ್ ಬಾಂಗ್ಲಾವನ್ನು ಹೋಸ್ಟ್ ಮಾಡಲಿದ್ದಾರೆ, ಇದು ಅತ್ಯಂತ ಜನಪ್ರಿಯ ರಿಯಾಲಿಟಿ ಶೋನ ಬಂಗಾಳಿ ಆವೃತ್ತಿಯಾಗಿದ್ದು, ಬಂಗಾಳದಲ್ಲಿ ಬಿಗ್ ಬಾಸ್ ಫ್ರಾಂಚೈಸಿಯ ಮರಳುವಿಕೆಯನ್ನು ಗುರುತಿಸುತ್ತದೆ.
ಬೆಂಗಳೂರು: ಬಜೆಟ್ ಬಳಿಕ ನಾವು ಚೊಂಬು ಹಿಡಿದು ಪ್ರತಿಭಟನೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತೀದ್ದೀರಿ. ನಾವು ಅಧಿಕಾರದಲ್ಲಿದ್ದಾಗ ನೀವು ಕಿವಿಗೆ ಹೂ ಇಟ್ಕೊಂದು ಕೂರಲಿಲ್ವಾ ಎಂದು ಡಿಕೆ ಶಿವಕುಮಾರ್ ಗೆ ವಿಪಕ್ಷ ನಾಯಕ ಆರ್ ಅಶೋಕ್ ಕೌಂಟರ್ ಕೊಟ್ಟಿದ್ದಾರೆ.ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಿದ ಬಳಿಕ ಬಿಜೆಪಿ ವಿಧಾನಸೌಧದ ಹೊರಗೆ ಖಾಲಿ ಚೊಂಬು ಹಿಡಿದು ಪ್ರತಿಭಟನೆ ಮಾಡಿತ್ತು. ಇದೇ ವಿಚಾರವಾಗಿ ಇದೀಗ ಸದನದಲ್ಲಿ ಪ್ರಸ್ತಾಪಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಇಳಿಕೆಯಾಗಿತ್ತು. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಇದು ಬೆಳೆಗಾರರಿಗೆ ಸಮಾಧಾನ ತಂದಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಸತತವಾಗಿ ಬೆಲೆ ಇಳಿಕೆ ಕಂಡುಬರುತ್ತಿದೆ. ಕೆಲವು ವರ್ಗದ ಅಡಿಕೆ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡುಬರುತ್ತಿದೆ. ಇಂದು ಹೊಸ ಅಡಿಕೆ ಬೆಲೆ 5 ರೂ. ಇಳಿಕೆಯಾಗಿದ್ದು 460 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದು 530 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿಯಲ್ಲಿದ್ದು 530 ರೂ.ಗಳಷ್ಟಾಗಿದೆ.
ಊಟ ರುಚಿಯಾಗಬೇಕಾದರೆ ಉಪ್ಪು ಬೇಕೇ ಬೇಕು. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾಗಿ ಉಪ್ಪು ಬಳಕೆ ಮಾಡುವುದರಿಂದ ಆರೋಗ್ಯಕ್ಕೆ ಸಮಸ್ಯೆಯಾಗುತ್ತದೆ. ದಿನಕ್ಕೆ ಎಷ್ಟು ಉಪ್ಪು ಸೇವನೆ ಮಾಡಬಹುದು ಇಲ್ಲಿದೆ ನೋಡಿ ವಿವರ. ಉಪ್ಪು ರುಚಿಗೆ ತಕ್ಕ ಇರಲೇಬೇಕು. ಆದರೆ ಉಪ್ಪು ಮಿತಿ ಮೀರಿ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾಗುವ ಅಪಾಯವಿದೆ. ಇದರಿಂದ ಕಿಡ್ನಿ ಸ್ಟೋನ್ ನಂತಹ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರಬಹುದು. ಅತಿಯಾದ ಉಪ್ಪು ಸೇವನೆ ರಕ್ತದೊತ್ತಡ ಹೆಚ್ಚಲೂ ಕಾರಣವಾಗುತ್ತದೆ. ಸಹಜವಾಗಿಯೇ ಇದು ಹೃದಯದ ಸಮಸ್ಯೆಗೆ ದಾರಿಯಾಗಬಹುದು.
ಬೆಂಗಳೂರು: ಯುದ್ಧ ಪ್ರಾರಂಭವಾಗುತ್ತದೆ ಎಂದು ಮೊದಲೇ ಯಾರು ನಿರೀಕ್ಷಿಸಿದ್ರು? ರಾಜ್ಯದಲ್ಲಿ ಎಲ್ ಪಿಜಿ ಅಭಾವವಾಗುತ್ತಿರುವ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಈ ರೀತಿ ಉತ್ತರಿಸಿದ್ದಾರೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ರಾಜ್ಯಕ್ಕೂ ತಟ್ಟಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಕಮರ್ಷಿಯಲ್ ಮತ್ತು ಗೃಹಬಳಕೆ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಇಂದು ಮಾಧ್ಯಮಗಳ ಮುಂದೆ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ಸಿಲಿಂಡರ್ ಪೂರೈಕೆ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿವೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ಈ ವಾರದ ಆರಂಭದಲ್ಲೇ ಪರಿಶುದ್ಧ ಚಿನ್ನದ ದರ ಭಾರೀ ಏರಿಕೆಯಾಗಿತ್ತು. ಪರಿಶುದ್ಧ ಚಿನ್ನದ ದರ ನಿನ್ನೆ 1,65,050.00 ರೂ.ಗಳಿತ್ತು. ಆದರೆ ಇಂದು ಏರಿಕೆಯಾಗಿದ್ದು 1,66,165.00 ರೂ.ಗಳಷ್ಟಿದೆ.
ತೆಲಂಗಾಣ: ಕಬ್ಬಿಣದ ಸ್ಟ್ಯಾಂಡ್ ತೆಗೆದುಕೊಂಡು ಹೋಗುತ್ತಿದ್ದಾಗ ವಿದ್ಯುತ್ ಪವರ್ ಲೈನ್ ಗೆ ತಗುಲಿ ಅದನ್ನು ಎಳೆದುಕೊಂಡು ಹೋಗುತ್ತಿದ್ದ ಇಬ್ಬರು ನೌಕರರು ಅಲ್ಲಿಯೇ ಸುಟ್ಟು ಕರಕಲಾದ ಭಯಾನಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ನಡೆದಿರುವುದು ತೆಲಂಗಾಣದ ಮದರಿಪೇಟೆಯಲ್ಲಿ. ಕಾರ್ಮಿಕರ ಜೀವಕ್ಕೆ ಯಾವುದೇ ಗ್ಯಾರಂಟಿಯಿಲ್ಲವೇನೋ ಎಂದು ಅನುಮಾನ ಹುಟ್ಟಿಸುವಂತಿದೆ ಈ ವಿಡಿಯೋ. ಇಂತಹ ಕೆಲಸ ಮಾಡುವಾಗ ನಮ್ಮ ಬಗ್ಗೆ ಎಷ್ಟು ಎಚ್ಚರಿಕೆ ತೆಗೆದುಕೊಂಡರೂ ಸಾಲದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಹನುಮಾನ್ ಭಜನೆ ಕೇಳಿ ಮಂಗವೊಂದು ಭಕ್ತಿಪರವಶವಾಗಿ ಕುಣಿದಾಡಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಲಿಯುಗದ ಅಂತ್ಯದವರೆಗೂ ಆಂಜನೇಯಸ್ವಾಮಿ ಭೂಮಿಯಲ್ಲೇ ಇರುತ್ತಾನೆ ಎಂದು ಹೇಳಲಾಗಿದೆ. ಅದು ನಿಜವೇನೋ ಎಂಬಂತೆ ಆಗಾಗ ಮಂಗಗಳು ಪವಾಡ ಮಾಡುವುದು ಇದೆ. ಆಸ್ತಿಕರೂ ಅಷ್ಟೇ ಮಂಗಗಳನ್ನು ಕಣ್ಣೆದುರು ಕಾಣುವ ದೇವರಂತೇ ಪೂಜಿಸುತ್ತೇವೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕುಣಿಯುತ್ತಿರುವ ಈ ಮಂಗನನ್ನು ನೋಡಿದರೆ ಆಂಜನೇಯ ಸ್ವಾಮಿಯ ಪವಾಡವೇನೋ ಎಂದು ನಿಮಗೆ ಅನಿಸುವುದು ಸಹಜ
ನನಗೂ ಹಸಿವಾಗುತ್ತಿದೆ ಎನ್ನುವುದು ಮರೆತೇ ಹೋಗಿತ್ತು ಎಂದು ಆ ಪಿಜ್ಜಾ ಡೆಲಿವರಿ ಮ್ಯಾನ್ ಕಣ್ಣೀರು ಹಾಕುತ್ತಿದ್ದರೆ ನೋಡುವ ನಿಮ್ಮ ಕಣ್ಣೂ ತೇವವಾಗುವುದು ಸಹಜ. ಇಲ್ಲಿದೆ ಅಂತಹದ್ದೊಂದು ಮನಕಲಕುವ ವಿಡಿಯೋ. ನಾವು ಪ್ರತಿನಿತ್ಯ ಎಷ್ಟೋ ಡೆಲಿವರಿ ಬಾಯ್ ನೋಡುತ್ತೇವೆ. ಟ್ರಾಫಿಕ್ ನಲ್ಲಿ ಗ್ರಾಹಕರು ಹೇಳಿದ ಸಮಯಕ್ಕೆ ಸರಿಯಾಗಿ ಆಹಾರ ತಲುಪಿಸಬೇಕು ಎನ್ನುವ ಧಾವಂತದಲ್ಲಿ ಹಗಲು-ರಾತ್ರಿ ಎನ್ನದೇ ಓಡಾಡುತ್ತಿರುತ್ತಾರೆ. ಇದೇ ರೀತಿ ಡೆಲಿವರಿ ಬಾಯ್ ಒಬ್ಬರ ಕತೆಯಿದು. ಸ್ನೇಹಿತರ ಗುಂಪು ಒಂದು ತಮಗೆ ಪಾರ್ಸೆಲ್ ತಂದುಕೊಟ್ಟ ಸ್ವಿಗ್ಗಿ ಡೆಲಿವರಿ ರೈಡರ್ ನ್ನು ತಮ್ಮ ಜೊತೆಗೆ ಕೂತು ಊಟ ಮಾಡಲು ಹೇಳುತ್ತಾರೆ.
ನವದೆಹಲಿ: ಟಿ20 ವಿಶ್ವಕಪ್ 2026 ಗೆದ್ದ ಟೀಂ ಇಂಡಿಯಾ ಪ್ರಧಾನಿ ಮೋದಿಯವರನ್ನು ಭೇಟಿಯಾಗಲ್ವಾ, ವಿಕ್ಟರಿ ಪೆರೇಡ್ ಇಲ್ವಾ ಎಂಬ ಅನುಮಾನಗಳಿಗೆ ಇಲ್ಲಿದೆ ಉತ್ತರ. ಭಾನುವಾರ ಟೀಂ ಇಂಡಿಯಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ಗೆದ್ದು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿತ್ತು. ಈ ಹಿಂದೆ ಟಿ20 ವಿಶ್ವಕಪ್ ಗೆದ್ದಾಗ, ಮಹಿಳೆಯರು ಏಕದಿನ ವಿಶ್ವಕಪ್ ಗೆದ್ದಾಗ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿಸಲಾಗಿತ್ತು. ಟಿ20 ವಿಶ್ವಕಪ್ 2024 ಗೆದ್ದ ಬಳಿಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗೆ ಮುಂಬೈನಲ್ಲಿ ವಿಕ್ಟರಿ ಪೆರೇಡ್ ಆಯೋಜಿಸಲಾಗಿತ್ತು.
ಮುಂಬೈ: ಜೀವಕ್ಕೆ ಜೀವವಾಗಿದ್ದ ಅಣ್ಣ ಕೃನಾಲ್ ಪಾಂಡ್ಯನನ್ನು ಹಾರ್ದಿಕ್ ಪಾಂಡ್ಯ ದೂರ ಮಾಡಿದ್ದಾರಾ? ಸಹೋದರರ ನಡುವೆ ಮನಸ್ತಾಪವಾಗಿದೆ ಎಂಬ ಸುದ್ದಿ ಹಬ್ಬಿದೆ. ಇದಕ್ಕೆ ಕಾರಣವೂ ಇದೆ. ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಪಾಪ್ಯುಲರ್ ಬ್ರದರ್ ಕ್ರಿಕೆಟಿಗೆಂದರೆ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ. ಮುಂಬೈ ಇಂಡಿಯನ್ಸ್ ತಂಡದ ನಾಯಕರಾದ ಬಳಿಕ ಸಾಕಷ್ಟು ಸೋಲಿನಿಂದ ಕಂಗೆಟ್ಟಿದ್ದ ಹಾರ್ದಿಕ್ ಗೆ ಕೃನಾಲ್ ಶಕ್ತಿಯಾಗಿ ನಿಂತಿದ್ದರು. ಆದರೆ ಈಗ ಹಾರ್ದಿಕ್ ಬಾಳಿನಲ್ಲಿ ಮಹಿಕಾ ಶರ್ಮಾ ಹೊಸ ಗರ್ಲ್ ಫ್ರೆಂಡ್ ಆಗಮನವಾಗಿದೆ. ಇದರ ಬೆನ್ನಲ್ಲೇ ಜೀವಕ್ಕೆ ಜೀವವಾಗಿದ್ದ ಅಣ್ಣ ಕೃನಾಲ್ ದೂರವಾಗಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದೆ.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷವಾದ ಹಿನ್ನಲೆಯಲ್ಲಿ ಡಿಕೆ ಶಿವಕುಮಾರ್ ನೀಡಿದ್ದ ಔತಣಕೂಟದಲ್ಲಿ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆ ಸಂಚಲನ ಮೂಡಿಸಿದೆ. ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರ್ತಿಯಾದ ಹಿನ್ನಲೆಯಲ್ಲಿ ಡಿಕೆ ಶಿವಕುಮಾರ್ ಕಾಂಗ್ರೆಸ್ ನ ಎಲ್ಲಾ ಶಾಸಕರಿಗೂ ಔತಣಕೂಟ ನೀಡಿದ್ದರು. ಈ ಔತಣಕೂಟಕ್ಕೆ ಸಿಎಂ ಸಿದ್ದರಾಮಯ್ಯ ಕೂಡಾ ಬಂದಿದ್ದರು. ಈ ವೇಳೆ ಡಿಕೆಶಿಗೆ ಶುಭ ಹಾರೈಸಿದ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ನನಗಿಂತ ಕಿರಿಯವರಾದ ಡಿಕೆ ಶಿವಕುಮಾರ್ ಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ. 2028 ರಲ್ಲಿ ಅವರ ನಾಯಕತ್ವದಲ್ಲೇ ಚುನಾವಣೆ ಗೆದ್ದು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲಿ. ಅವರ ಜೊತೆಗೆ ನಾನಿದ್ದೇನೆ ಎಂದಿದ್ದಾರೆ.
ಬೆಂಗಳೂರು: ಎಲ್ ಪಿಜಿ ಸಿಗದೇ ಬೆಂಗಳೂರಿನ ದೇವಸ್ಥಾನದಲ್ಲೂ ಭಕ್ತರಿಗೆ ಉಚಿತ ಊಟ ನೀಡುವುದು ಕಷ್ಟವಾಗಿದೆ. ಬಜ್ಜಿ ಸೆಂಟರ್ ಗಳಿಗೂ ತೊಂದರೆ ಎದುರಾಗಿದೆ. ಇಸ್ರೇಲ್ ಇರಾನ್ ಯುದ್ಧದ ಪರಿಣಾಮ ಈಗ ನಮ್ಮ ದೇಶಕ್ಕೆ ತಟ್ಟಿದೆ. ಜನಸಾಮಾನ್ಯರು ಮತ್ತು ಆಹಾರೋದ್ಯಮ ಸಂಸ್ಥೆಗಳು ಎಲ್ ಪಿಜಿ ಸಿಗದೇ ಪರದಾಡುತ್ತಿದ್ದಾರೆ. ಹಲವು ಹೋಟೆಲ್ ಗಳು ಮುಚ್ಚುವ ಭೀತಿಯಲ್ಲಿದೆ. ಇದರ ನಡುವೆ ಬೆಂಗಳೂರಿನ ಕೆಲವು ದೇವಸ್ಥಾನಗಳಿಗೂ ತಟ್ಟಿದೆ. ಪ್ರಸಾದ ಭೋಜನ ತಯಾರಿಗೆ ಗ್ಯಾಸ್ ವ್ಯವಸ್ಥೆಯಿಲ್ಲದೇ ಸಮಸ್ಯೆಯಿದೆ. ವಿಶೇಷವಾಗಿ ಬನಶಂಕರಿ ದೇವಸ್ಥಾನದಲ್ಲಿ ಪ್ರಸಾದ ಭೋಜನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಎಂದರೆ ಯುಗಾದಿ ಹಬ್ಬಕ್ಕೆ. ಈ ವರ್ಷ ಯುಗಾದಿ ಹಬ್ಬ ಯಾವಾಗ, ಶುಭ ಮುಹೂರ್ತದ ವಿವರ ಇಲ್ಲಿದೆ ನೋಡಿ. ಚಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ ಎಂದು ಎರಡು ದಿನ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಚಂದ್ರಮಾನ ಯುಗಾದಿ ಆಚರಣೆಯಾದರೆ, ಕೇರಳ ಮತ್ತು ತಮಿಳುನಾಡು, ಕರ್ನಾಟಕದ ಕರಾವಳಿ ಭಾಗದಲ್ಲಿ ಸೌರಮಾನ ಯುಗಾದಿ ಆಚರಿಸಲಾಗುತ್ತದೆ. ಈ ಬಾರಿ ಚಂದ್ರಮಾನ ಯುಗಾದಿ ಮಾರ್ಚ್ 19 ರಂದು ಬರಲಿದೆ. ಯುಗಾದಿ ಹಬ್ಬದಂದು ಎಣ್ಣೆ ಸ್ನಾನ ಮಾಡಿ ಬೇವು-ಬೆಲ್ಲ ಹಂಚಿ ಜೀವನದ ಕಹಿ ಮತ್ತು ಸಿಹಿಯನ್ನು ಸಮಾನವಾಗಿ ಸ್ವೀಕರಿಸೋಣ ಎಂದು ಸಂದೇಶ ಸಾರಲಾಗುತ್ತದೆ.
ಬೆಂಗಳೂರು: ರಾಜ್ಯಾದ್ಯಂತ ಬೇಸಿಗೆಯ ಬಿಸಿ ತಾಂಡವವಾಡುತ್ತಿದೆ. ಇದರ ನಡುವೆಯೂ ರಾಜ್ಯದ ಈ ಜಿಲ್ಲೆಗೆ ಇಂದು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಸೂಚಿಸುತ್ತಿವೆ. ರಾಜ್ಯದಲ್ಲಿ ಈಗ ವಿಪರೀತ ಎನ್ನುವಷ್ಟು ಬಿಸಿಲು ಕಂಡುಬರುತ್ತಿದೆ. ತಾಪಮಾನದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಒಣ ಹವೆ ಮುಂದುವರಿದಿದೆ. ಇದರ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾತಾವರಣದಲ್ಲಿ ಬದಲಾವಣೆ ಕಂಡುಬರಲಿದೆ.ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ.
ಇಂದು ಬುಧವಾರವಾಗಿದ್ದು ವಿಘ್ನ ವಿನಾಶಕ ಗಣೇಶನಿಗೆ ವಿಶೇಷವಾದ ದಿನವಾಗಿದೆ. ಇಂದು ಗಣೇಶನ ಕುರಿತಾದ ಮಹಾಗಣೇಶ ಪಂಚರತ್ನ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಮ್ ।ಕಳಾಧರಾವತಂಸಕಂ ವಿಲಾಸಿಲೋಕ ರಕ್ಷಕಮ್ ।ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಮ್ ।ನತಾಶುಭಾಶು ನಾಶಕಂ ನಮಾಮಿ ತಂ ವಿನಾಯಕಮ್ ॥ 1 ॥ ನತೇತರಾತಿ ಭೀಕರಂ ನವೋದಿತಾರ್ಕ ಭಾಸ್ವರಮ್ ।ನಮತ್ಸುರಾರಿ ನಿರ್ಜರಂ ನತಾಧಿಕಾಪದುದ್ಧರಮ್ ।ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಮ್ ।ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ ॥ 2 ॥
ಸಿಹಿ ಪದಾರ್ಥಗಳನ್ನು ಕಂಡರೆ ಮನಸ್ಸು ಸೋಲುವುದುಂಟು. ಬೇಸಿಗೆಯ ಉರಿಬಿಸಿಲಿನಲ್ಲಿ ಸಿಹಿ ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡಿದ್ರೆ ಆರೋಗ್ಯದ ಮೇಲೆ ಕೆಲವು ಅಡ್ಡಪರಿಣಾಮಗಳನ್ನು ಬೀರಬಹುದು.ಅತಿಯಾದ ಸಿಹಿ ಸೇವನೆಯಿಂದ ಆಗುವ ತೊಂದರೆಗಳು ಇಲ್ಲಿದೆ. ನಿರ್ಜಲೀಕರಣ: ಸಕ್ಕರೆಯು ದೇಹದ ಜೀವಕೋಶಗಳಿಂದ ನೀರನ್ನು ಹೀರಿಕೊಳ್ಳುತ್ತದೆ. ಇದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಬೇಗನೆ ಸುಸ್ತು ಮತ್ತು ಬಾಯಾರಿಕೆ ಉಂಟಾಗುತ್ತದೆ.
ನವದೆಹಲಿ: ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ಸಿಇಒ ಪೀಟರ್ ಎಲ್ಬರ್ಸ್ ಅವರ ಸ್ಥಾನಕ್ಕೆ ರಾಜೀನಾಮೆಗೆ ಸೂಚಿಸಿದ್ದು, ಇದೀಗ ಅವರ ಸ್ಥಾನಕ್ಕೆ ರಾಹುಲ್ ಭಾಟಿಯಾ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮಂಗಳವಾರ ಪ್ರಕಟಿಸಿದೆ.ಮೂರು ತಿಂಗಳ ನಂತರ ವಿಮಾನಯಾನವು ಭಾರಿ ವಿಮಾನಯಾನ ಅಡೆತಡೆಗಳನ್ನು ಎದುರಿಸಿತು. ಈ ನಿರ್ಧಾರವು ತಿಂಗಳ ನಂತರ ಸಾಮೂಹಿಕ ವಿಮಾನ ರದ್ದತಿಯಿಂದ ಹತ್ತಾರು ಸಾವಿರ ಪ್ರಯಾಣಿಕರು ಭಾರತದಲ್ಲಿ ಸಿಕ್ಕಿಹಾಕಿಕೊಂಡಿದೆ.
ಜಮ್ಮು: ಎಲ್ಒಸಿ ಬಳಿ ಒಳನುಸುಳುವಿಕೆಗೆ ಯತ್ನ ನಡೆಸಿದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.ಜಮ್ಮು ಮತ್ತು ಕಾಶ್ಮೀರದ ನೌಶೇರಾದ ಝಂಗಾರ್ ಪ್ರದೇಶದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಇಬ್ಬರು ಭಯೋತ್ಪಾದಕರ ಚಲನವಲನ ಪತ್ತೆಯಾದ ನಂತರ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ತ್ವರಿತವಾಗಿ ಕಾರ್ಯನಿರ್ವಹಿಸಿದ ಭದ್ರತಾ ಪಡೆಗಳು, ಒಳನುಸುಳುಕೊರರೊಂದಿಗೆ ನಡೆದ ಸಂಕ್ಷಿಪ್ತ
ಸಿಲ್ಲಿ ಲಲ್ಲಿ ಸೀರಿಯಲ್ನಲ್ಲಿ ಕಾಂಪೌಂಡರ್ ಆಗಿದ್ದ ಪಾತ್ರಕ್ಕೆ ಜೀವತುಂಬಿದ್ದ ಸಂಗಮೇಶ್ ಉಪಾಸೆ ಕಾಂಪೌಂಡರ್ ಇಡ್ಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ.ಒಂದು ಕಾಲದಲ್ಲಿ ಕಿರುತೆರೆ ಲೋಕದಲ್ಲಿ ಭಾರೀ ಹವಾ ಸೃಷ್ಟಿಸಿದ ಸಿಲ್ಲಿ ಲಲ್ಲಿ ಸೀರಿಯಲ್ ಎಂದರೆ ಮಕ್ಕಳಿಂದ ಹಿಡಿದು ಪ್ರಾಯದವರಿಗೂ ಇಷ್ಟವಾದ ಧಾರವಾಹಿ ಆಗಿತ್ತು. ಇನ್ನೂ ಈ ಸೀರಿಯಲ್ನಲ್ಲಿ ಪ್ರತಿಯೊಂದು ಪಾತ್ರವೂ ಎಲ್ಲರ ಮನಗೆದ್ದಿತ್ತು. ಅದರಲ್ಲಿ 'ಕಾಂಪೌಂಡರ್ ಗೋವಿಂದ' ಪಾತ್ರವೂ ಒಂದಾಗಿತ್ತು. ಈ ಪಾತ್ರವನ್ನು ನಿರ್ವಹಿಸಿದವರು ನಟ ಸಂಗಮೇಶ್ ಉಪಾಸೆ
ಅಹಮದಾಬಾದ್: ನ್ಯೂಜಿಲೆಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರ ಮೇಲೆ ಆಕ್ರಮಣಕಾರಿಯಾಗಿ ಚೆಂಡನ್ನು ಎಸೆದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರಿಗೆ ದಂಡವನ್ನು ವಿಧಿಸಲಾಗಿದೆ. ನ್ಯೂಜಿಲೆಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರ ಮೇಲೆ ಆಕ್ರಮಣಕಾರಿಯಾಗಿ ಚೆಂಡನ್ನು ಎಸೆದ ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 15ರಷ್ಟು ದಂಡ ವಿಧಿಸಿದೆ.ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ 20 ವಿಶ್ವಕಪ್ ಫೈನಲ್ ಪಂದ್ಯದ
ಇದೇ 17ರಂದು ರಾಜರತ್ನ ಪುನೀತ್ ರಾಜ್ಕುಮಾರ್ ಅವರ ಬರ್ತಡೇ ವಿಶೇಷ ಹಿನ್ನೆಲೆ ಅವರ ಸೂಪರ್ ಹಿಟ್ ಸಿನಿಮಾ ಆಕಾಶ್ ಅನ್ನು ಮತ್ತೇ ದೊಡ್ಡ ಪರದೆ ಮೇಲೆ ರಿಲೀಸ್ ಮಾಡಲಾಗುತ್ತಿದೆ. ದಿವಂಗತ ಪುನೀತ್ ರಾಜ್ಕುಮಾರ್ ಬರ್ತ್ ಡೇ ವಿಶೇಷ ಹಿನ್ನೆಲೆ ಆಕಾಶ್ ಇದೇ ಮಾರ್ಚ್ 13ಕ್ಕೆ ರೀ-ರಿಲೀಸ್ ಆಗ್ತಿದೆ. 2005ರಲ್ಲಿ ತೆರೆಕಂಡ ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿತ್ತು. ಅಂದು ಶತಕ ಅಲ್ಲ 200 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ದೊಡ್ಮನೆ ಪ್ರೊಡಕ್ಷನ್ನ ಬಹುದೊಡ್ಡ ಕಮರ್ಷಿಯಲ್ ಹಿಟ್ ಮೂವಿ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಈ ಸಿನಿಮಾದಲ್ಲಿ ಪುನೀತ್ಗೆ ರಮ್ಯಾ ಅವರು ಜೋಡಿಯಾಗಿ ನಟನೆ ಮಾಡಿದ್ದಾರೆ.
ಬೆಂಗಳೂರು: ಬಳ್ಳಾರಿಯಲ್ಲಿ ಏರ್ಪೋರ್ಟ್ ನಿರ್ಮಾಣದ ಬಗ್ಗೆ ಸಚಿವ ಎಂಬಿ ಪಾಟೀಲ್ ಅವರು ಪ್ರತಿಕ್ರಿಯಿಸಿ, ಸಿಎಂ ಮತ್ತು ಜನಪ್ರತಿನಿಧಿಗಳ ಜೊತೆ ಸಭೆ ಮಾಡಿ ನಿರ್ಧಾರ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಪಾಟೀಲ್ ಅವರು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸತೀಶ್ ಪ್ರಶ್ನೆ ಸಂಬಂಧ ಪ್ರತಿಕ್ರಿಯಿಸಿ, ಬಳ್ಳಾರಿಯಲ್ಲಿ 8-9 ವರ್ಷಗಳಿಂದ ಏರ್ಪೋರ್ಟ್ ಆಗಿಲ್ಲ. ಈಗಾಗಲೇ ಭೂಮಿ ಸ್ವಾಧೀನ ಆಗಿದೆ. ಈಗಾಗಲೇ DPRಗೆ ಕ್ರಮ ಮಾಡಲಾಗಿದೆ. ಉಡಾನ್ ಯೋಜನೆ ಇತ್ತು. ಈಗ ಅದು ಇಲ್ಲ ಸಮಸ್ಯೆ ಆಗಿದೆ. ಸಿಎಂ ನೇತೃತ್ವದಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ ಭಾಗದ ಜನಪ್ರತಿನಿಧಿಗಳ ಜೊತೆ ಸಭೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಬೆಂಗಳೂರು: ಇರಾನ್ ವಿರುದ್ಧದ ಇಸ್ರೇಲ್ ಸೇನಾ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದರು. ಇರಾನ್ ಮಂಗಳವಾರ ಗಲ್ಫ್ ಅರಬ್ ರಾಷ್ಟ್ರಗಳ ಮೇಲೆ ಹೊಸ ದಾಳಿಗಳನ್ನು ಪ್ರಾರಂಭಿಸಿತು, ಏಕೆಂದರೆ ಅದು ಪ್ರದೇಶದ ಮೇಲೆ ಒತ್ತಡವನ್ನು ಇರಿಸುತ್ತದೆ, ಆದರೆ ಉತ್ತರ ಇರಾಕ್ನಲ್ಲಿ ವೈಮಾನಿಕ ದಾಳಿಯಿಂದ ಐದು ಇರಾನ್ ಪರ ಉಗ್ರಗಾಮಿಗಳು ಕೊಲ್ಲಲ್ಪಟ್ಟರು.ಸೋಮವಾರ ರಾತ್ರಿ ರಾಷ್ಟ್ರೀಯ ಆರೋಗ್ಯ ಕಮಾಂಡ್ ಸೆಂಟರ್ಗೆ ಭೇಟಿ ನೀಡಿದ ನೆತನ್ಯಾಹು ಹೀಗೇ ಹೇಳಿದರು.
ಬೆಂಗಳೂರು: ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಪೂರೈಕೆ ಸ್ಥಗಿತಗೊಂಡ ಸಂಬಂಧ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಸಿಎಂ ಸಿದ್ದರಾಮಯ್ಯನವರು ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ ಬೆಂಗಳೂರು ಮಹಾನಗರದಲ್ಲಿ ಹೋಟೆಲ್, ರೆಸ್ಟೋರೆಂಟ್, ಕೆಟರಿಂಗ್ಗಳಿಗೆ ತೊಂದರೆಯಾಗುತ್ತಿದೆ ಎಂದರು. ತೈಲ ಮಾರುಕಟ್ಟೆ ಕಂಪನಿಗಳು ಪೂರೈಸುವ ಎಲ್ಪಿಜಿಯನ್ನು ಕೇವಲ ಗೃಹ ಬಳಕೆದಾರರಿಗೆ ಮಾತ್ರ ಮಾರಾಟ ಮಾಡಬೇಕೆಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಆದೇಶಿಸಿದೆ.
ದೆಹಲಿ: ಹೋಳಿ ಸಂದರ್ಭದ ವೇಳೆ ಅಚಾನಕ್ ಆಗಿ ಮುಸ್ಲಿಂ ಮಹಿಳೆ ಹೋಳಿ ಬಿದ್ದಿದ್ದಕ್ಕೆ ಕೋಪಕೊಂಡ ಗುಂಪೊಂಡು ತರುಣ್ ಕುಮಾರ್ ಎಂಬ ಯುವಕನ ಮೇಲೆ ಮಾರಣಾಂತಿಕವಾದ ಹಲ್ಲೆಯಿಂದಾಗಿ ಸಾವನ್ನಪ್ಪುತ್ತಾನೆ. ಆತನನ್ನು ಕೊಲ್ಲಲ್ಪಟ್ಟ ನಾಲ್ಕು ದಿನಗಳ ಬಳಿಕ ಪ್ರಮುಖ ಆರೋಪಿಗಳಿಗೆ ಸೇರಿದ ಮನೆಯನ್ನು ನೆಲಸಮ ಮಾಡಿದ್ದಾರೆ. ಪಶ್ಚಿಮ ದೆಹಲಿಯ ಉತ್ತಮ್ ನಗರದಲ್ಲಿ ಹೋಳಿ ದಿನದಂದು 26 ವರ್ಷದ ತರುಣ್ ಕುಮಾರ್ ಅವರನ್ನು ಹೊಡೆದು ಕೊಂದ ನಾಲ್ಕು ದಿನಗಳ ನಂತರ, ನಾಗರಿಕ ಅಧಿಕಾರಿಗಳು ಭಾನುವಾರ ಪ್ರಮುಖ ಆರೋಪಿಗೆ ಸೇರಿದ ಮನೆಯ ಭಾಗಗಳನ್ನು ಕೆಡವಿದ್ದಾರೆ.
ನವದೆಹಲಿ: ಭಾರತ ತಂಡ ಐಸಿಸಿ ವಿಶ್ವ ಟಿ20 ವಿಶ್ವಕಪ್ ಟ್ರೋಫಿಯನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋದ ಬಗ್ಗೆ ಮಾಜಿ ಕ್ರಿಕೆಟಿಗ, ತೃಣಮೂಲ ಕಾಂಗ್ರೆಸ್ ಮಾಜಿ ಸಂಸದ ಕೀರ್ತಿ ಆಜಾದ್ ಅವರು ಮಾಡಿದ ಟ್ವೀಟ್ ಬಗ್ಗೆ ಕೇಳಿದಾಗ ಇಶಾನ್ ಕಿಶನ್ 'ಉತ್ತಮ ಪ್ರಶ್ನೆ' ಕೇಳುವಂತೆ ಹೇಳಿಕೊಂಡರು.ಮಾಧ್ಯಮದವರ ಪ್ರಶ್ನೆಗೆ "ಉತ್ತಮ ಪ್ರಶ್ನೆಯನ್ನು ಕೇಳಿ" ಭಾರತ ತಂಡದ ಬಗ್ಗೆ ಕೀರ್ತಿ ಆಜಾದ್ ಅವರ ಟೀಕೆಗೆ ಇಶಾನ್ ಕಿಶನ್ ಪ್ರತಿಕ್ರಿಯಿಸಿದ್ದಾರೆ. ಭಾರತ ವಿಶ್ವಕಪ್ ಜಯಿಸಿದ ನಂತರ ಇಶಾನ್ ಕಿಶನ್ ಅವರಿಗೆ ಅವರ ತವರು ಪಾಟ್ನಾದಲ್ಲಿ ಭವ್ಯ ಸ್ವಾಗತ ದೊರೆಯಿತು.
ಅಹ್ಮದಾಬಾದ್: ಟಿ20 ವಿಶ್ವಕಪ್ 2026 ಗೆಲುವಿನ ಸಂಭ್ರಮದಲ್ಲಿರುವಾಗಲೇ ಟೀಂ ಇಂಡಿಯಾ ವೇಗಿ ಅರ್ಷ್ ದೀಪ್ ಸಿಂಗ್ ಗೆ ಐಸಿಸಿ ಶಾಕ್ ಕೊಟ್ಟಿದೆ. ಭಾನುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 96 ರನ್ ಗಳಿಂದ ಗೆಲುವು ಸಾಧಿಸಿ ಸತತ ಎರಡನೇ ಬಾರಿಗೆ ಕಪ್ ಗೆದ್ದುಕೊಂಡಿತ್ತು. ಆದರೆ ಈ ಪಂದ್ಯದಲ್ಲಿ ಅರ್ಷ್ ದೀಪ್ ಸಿಂಗ್ ವರ್ತನೆ ಹಲವರ ಟೀಕೆಗೆ ಗುರಿಯಾಗಿತ್ತು. ನ್ಯೂಜಿಲೆಂಡ್ ಬ್ಯಾಟಿಗ ಡೆರಿಲ್ ಮಿಚೆಲ್ ಬ್ಯಾಟಿಂಗ್ ಮಾಡುತ್ತಿದ್ದಾಗ ಅರ್ಷ್ ದೀಪ್ ಬೇಕೆಂದೇ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಿದ್ದರು.
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಪ್ರಧಾನ ಸೇವಕನೆಂಬ ಭಾವನೆಯೊಂದಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ. ಭಾರತವು 2047ನೇ ಇಸವಿಗೆ ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆ ಹೊಂದಲು ಪುರುಷರ ಜೊತೆಜೊತೆಯಲ್ಲಿ ಮಹಿಳೆಯರ ಪಾತ್ರವೂ ಬಹಳ ಮಹತ್ವವನ್ನು ಹೊಂದಿದೆ ಎಂಬ ನಂಬಿಕೆ ಮೋದಿಜೀ ಅವರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಬೆಂಗಳೂರು ಮಹಾನಗರ ಮಹಿಳಾ ಮೋರ್ಚಾ ವತಿಯಿಂದ ಮಲ್ಲೇಶ್ವರದ ಹವ್ಯಕ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಉಪಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಅಭಿನಂದನೆಗಳನ್ನು ಸೂಚಿಸಿದ್ದಾರೆ. ಈ ಸಂಬಂಧ ಸಿದ್ದರಾಮಯ್ಯನವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಉಪಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಗಳು.
ನವದೆಹಲಿ: ಅಲಿ ಖಮೇನಿ ಅವರ ಪುತ್ರ ಮತ್ತು ಇಸ್ಲಾಮಿಕ್ ರಾಷ್ಟ್ರದ ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಅವರು ಇಸ್ರೇಲ್ ಮತ್ತು ಯುಎಸ್ ದಾಳಿಗೆ ಕನಿಷ್ಠ ಇಬ್ಬರು ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.ಇರಾನ್ನ ಪರಮಾಣು ಕಾರ್ಯಕ್ರಮದ ಮೇಲೆ ಎರಡು ವಾರಗಳ ಹಿಂದೆ ಪ್ರಾರಂಭವಾದ ವೈಮಾನಿಕ ದಾಳಿಯಲ್ಲಿ ಅವರ ಪತ್ನಿ ಜಹ್ರಾ ಹಡ್ಡಾದ್-ಅಡೆಲ್ ಮತ್ತು ಅವರ ಇಬ್ಬರು ಪುತ್ರರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮ ವರದಿಗಳು ಹೇಳಿವೆ. ಅವರಿಗೆ ಒಬ್ಬ ಮಗಳೂ ಇದ್ದಾಳೆ - ಒಟ್ಟು ಮೂರು ಮಕ್ಕಳು.
ಬೆಂಗಳೂರು: ಜಿಯೋ ಸ್ಟುಡಿಯೋಸ್ ಮತ್ತು B62 ಸ್ಟುಡಿಯೋಸ್ ಮಾರ್ಚ್ 7 ರಂದು ಧುರಂಧರ್, ದಿ ರಿವೆಂಜ್ ನ ಟ್ರೈಲರ್ ಅನ್ನು ಬಿಡುಗಡೆ ಮಾಡಿತು ಮತ್ತು ಇದು ಶೀಘ್ರವಾಗಿ ವಿಶ್ವದಾದ್ಯಂತ ಭಾರಿ ಬಝ್ ಅನ್ನು ಸೃಷ್ಟಿಸಿತು. ಕೇವಲ 48 ಗಂಟೆಗಳಲ್ಲಿ, ಟ್ರೈಲರ್ ಎಲ್ಲಾ ಪ್ಲಾಟ್ಫಾರ್ಮ್ಗಳಲ್ಲಿ 312 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ ಮತ್ತು 45 ಕ್ಕೂ ಹೆಚ್ಚು ದೇಶಗಳಲ್ಲಿ YouTube ನಲ್ಲಿ ಟ್ರೆಂಡ್ ಆಗಿದೆ. ಟ್ರೇಲರ್ನ ಹಿನ್ನೆಲೆ ಸ್ಕೋರ್ ಮತ್ತು ಡೈಲಾಗ್ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಲೆಕ್ಕವಿಲ್ಲದಷ್ಟು ರೀಲ್ಗಳು
ಮೈಸೂರು: ಮೈಸೂರಿನ ಕುರುಬರ ಹಳ್ಳಿ ಗ್ರಾಮದ ಸರ್ವೇ ನಂಬರ್ 4ರಲ್ಲಿನ 24 ಎಕರೆ 10 ಗುಂಟೆ ಜಮೀನು ನೋಂದಣಿಯಾಗಿರುವುದು ಮತ್ತು ನೋಂದಣಿ ರದ್ದಾಗಿರುವುದರ ಹಿಂದೆ ಅಕ್ರಮ ನಡೆದಿದೆ. ಸರ್ಕಾರಿ ಜಮೀನು ನೋಂದಣಿ ಹೇಗೆ ಆಯಿತು ಮತ್ತು ಅದೇ ನೋಂದಣಿ ಹೇಗೆ ರದ್ದು ಆಯಿತು. ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್ ಶ್ರೀವತ್ಸ ಅವರು ಆಗ್ರಹಿಸಿದರು. ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲೂ ಪ್ರಸ್ತಾಪ ಮಾಡಲಾಗುವುದು. ಈಗಾಗಲೇ ವಿರೋಧಪಕ್ಷದ ನಾಯಕರ ಗಮನಕ್ಕೆ ತಂದಿದ್ದೇನೆ.