ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಕೊಂಚ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ಇಂದು ಪರಿಶುದ್ಧ ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,43,795.00 ರೂ.ಗಳಿತ್ತು. ಆದರೆ ಇಂದು ಏರಿಕೆಯಾಗಿದ್ದು 1,50,545.00 ರೂ.ಗಳಷ್ಟಿದೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಇಳಿಕೆಯಾಗಿತ್ತು. ಆದರೆ ನಿನ್ನೆ ಭರ್ಜರಿ ಏರಿಕೆಯಾಗಿತ್ತು. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಇಳಿಕೆಯಾಗಿತ್ತು. ಇದು ಬೆಳೆಗಾರರಿಗೆ ಆತಂಕ ತಂದಿತ್ತು. ಕಳೆದ ಕೆಲವು ದಿನಗಳಿಂದ ಸತತವಾಗಿ ಬೆಲೆ ಇಳಿಕೆ ಕಂಡುಬರುತ್ತಿತ್ತು. ಆದರೆ ಇಂದು ಕೆಲವು ವರ್ಗದ ಅಡಿಕೆ ಬೆಲೆಯಲ್ಲಿ ನಿನ್ನೆ ಮತ್ತೆ ಏರಿಕೆಯಾಗಿತ್ತು. ಆದರೆ ಇಂದು ಯಥಾಸ್ಥಿತಿಯಲ್ಲಿದೆ. ಇಂದು ಹೊಸ ಅಡಿಕೆ ಬೆಲೆ 470 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 540 ರೂ. ಗಳಾಗಿದೆ.
ಆಂಧ್ರಪ್ರದೇಶದ ಮಾರ್ಕಪುರಂನಲ್ಲಿ ಭೀಕರ ಬಸ್ ದುರಂತ ಸಂಭವಿಸಿದೆ. ಬಸ್ ಗೆ ಬೆಂಕಿ ತಗುಲಿದ್ದು ಘಟನೆಯಲ್ಲಿ 10 ಮಂದಿ ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಭೀಕರ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗೆ ಖಾಸಗಿ ಬಸ್ ಗಳು ಬೆಂಕಿಗೆ ಆಹುತಿಯಾಗುತ್ತಿರುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇದೆ. ಇದೀಗ ಮತ್ತೊಂದು ಅಂತಹದ್ದೇ ಘಟನೆ ವರದಿಯಾಗಿದೆ. ಮಾರ್ಕಪುರಂನಲ್ಲಿ ಖಾಸಗಿ ಬಸ್ ಟಿಪ್ಪರ್ ಒಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಜಗ್ತಿಯಾಲ್ ನಿಂದ ವಿಂಜಾಮುರ್ ಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಇದಾಗಿತ್ತು.
ಬೆಂಗಳೂರು: ಐಪಿಎಲ್ 2026 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಯಾರೇ ತಾರೆಯರಿದ್ದರೂ ಅಭಿಮಾನಿಗಳ ಗಮನ ಮಾತ್ರ ಈ ಇಬ್ಬರು ಆಟಗಾರರ ಮೇಲೆಯೇ ಎನ್ನಬಹುದು. ಐಪಿಎಲ್ 2026 ರ ಮೊದಲ ಪಂದ್ಯ ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಆರ್ ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಈ ಬಾರಿಯೂ ಹಲವು ಹೊಸ ತಾರೆಯರ ಉದಯವಾಗಬಹುದು. ಹಳೆಯ ತಾರೆಯರು ಮಿಂಚಬಹುದು. ಆದರೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವುದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20 ಆಟವನ್ನು. ಇಬ್ಬರೂ ಸ್ಟಾರ್ ಗಳೂ ಈಗ ಅಂತಾರಾಷ್ಟ್ರೀಯ ಟಿ20 ಮಾದರಿಯಿಂದ ನಿವೃತ್ತರಾಗಿದ್ದಾರೆ. ಐಪಿಎಲ್ ನಲ್ಲಿ ಮಾತ್ರ ಚುಟುಕು ಕ್ರಿಕೆಟ್ ಆಡುತ್ತಾರೆ.
ತುಮಕೂರು: ಬಸ್ ಹತ್ತಲು ಗಡಿಬಿಡಿಯಲ್ಲಿ ಓಡಿದಾಗ ವಿದ್ಯಾರ್ಥಿನಿ ಅಚಾನಕ್ ಆಗಿ ಬಿದ್ದಿದ್ದು ಕಾಲು ಚಕ್ರದಡಿಗೆ ಸಿಲುಕಿದ ಧಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ. ಈ ವಿಡಿಯೋ ಇಲ್ಲಿದೆ ನೋಡಿ. ತುಮಕೂರು ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಹರ್ಷಿತಾ ಎನ್ನುವ 17 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಗೆ ಗಾಯಗಳಾಗಿವೆ. ಈಕೆ ಸಿದ್ದರಾಮಯ್ಯ ಆಸ್ಪತ್ರೆಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಬಸ್ ನಿಲ್ದಾಣದಲ್ಲಿ ಸಾಕಷ್ಟು ವಿದ್ಯಾರ್ಥಿನಿಯರು ಬಸ್ ಗಾಗಿ ಕಾಯುತ್ತಿದ್ದರು. ಈ ವೇಳೆ ತನ್ನ ಬಸ್ ಬಂತೆಂದು ಸ್ನೇಹಿತೆಯರೊಂದಿಗೆ ಮಧುಗಿರಿಗೆ ಹೋಗುವ ಸಾರಿಗೆ ಬಸ್ ಹತ್ತಲು ಓಡಿದ್ದಾಳೆ.
ಇಸ್ಲಾಮಾಬಾದ್: ಪಿಎಸ್ಎಲ್ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಎಲ್ಲರ ಮುಂದೆ ಹೂಸು ಬಿಟ್ಟಿದ್ದಕ್ಕೆ ಉಳಿದ ಕ್ರಿಕೆಟಿಗರ ರಿಯಾಕ್ಷನ್ ವಿಡಿಯೋ ಈಗ ವೈರಲ್ ಆಗಿದೆ. ಐಪಿಎಲ್ ಗೆ ಸೆಡ್ಡು ಹೊಡೆಯುವುದಾಗಿ ಪಾಕಿಸ್ತಾನ ತನ್ನದೇ ಕ್ರಿಕೆಟ್ ಲೀಗ್ ಆರಂಭಿಸಿದೆ. ಆದರೆ ಐಪಿಎಲ್ ಮುಂದೆ ಪಿಎಸ್ಎಲ್ ಏನೇನೂ ಅಲ್ಲ ಎಂಬುದು ಇಡೀ ಜಗತ್ತಿಗೇ ಗೊತ್ತು. ಇದೀಗ ಪಿಎಸ್ಎಲ್ ಆರಂಭಕ್ಕೆ ಮುನ್ನ ಎಲ್ಲಾ ತಂಡಗಳ ನಾಯಕರ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ಪತ್ರಿಕಾಗೋಷ್ಠಿಯಲ್ಲಿ ಆಸ್ಟ್ರೇಲಿಯಾ ಮೂಲದ ಡೇವಿಡ್ ವಾರ್ನರ್, ಶಾಹಿನ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್ ಮೊದಲಾದವರು ತಮ್ಮ ತಂಡದ ಪ್ರತಿನಿಧಿಯಾಗಿ ಭಾಗಿಯಾಗಿದ್ದರು.
ಢಾಕಾ: ಬಾಂಗ್ಲಾದೇಶದಲ್ಲಿ ಸಾರಿಗೆ ಬೋಟ್ ಗೆ ಹತ್ತುವಾಗ 50 ಜನರಿದ್ದ ಬಸ್ ನದಿಗೆ ಉರುಳಿ ಬಿದ್ದಿದ್ದು 25 ಮೃತದೇಹ ಹೊರತೆಗೆಯಲಾಗಿದೆ. ಈ ಭಯಾನಕ ಕ್ಷಣದ ವಿಡಿಯೋ ವೈರಲ್ ಆಗಿದೆ. ನಿನ್ನೆ ಬಾಂಗ್ಲಾದೇಶದ ಪದ್ಮ ನದಿ ದಾಟಲು ಸಾರಿಗೆ ಬೋಟ್ ಹತ್ತಲು ತಯಾರಗುತ್ತಿದ್ದಾಗ ನಿಯಂತ್ರಣ ತಪ್ಪಿದ ಬಸ್ ನದಿಗೆ ಉರುಳಿದೆ. ಘಟನೆಯಲ್ಲಿ 25 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಹಲವರು ನಾಪತ್ತೆಯಾಗಿದ್ದು ಮೃತದೇಹಗಳಿಗಾಗಿ ಶೋಧ ನಡೆಯುತ್ತಿದೆ. ಬಸ್ ಉರುಳಿದ ತಕ್ಷಣ ಕೆಲವರು ಈಜು ಬರುತ್ತಿದ್ದರಿಂದ ಈಜಿ ಸ್ಥಳೀಯರ ಸಹಾಯದಿಂದ ಮೇಲೆ ಏರಿ ಜೀವ ಉಳಿಸಿಕೊಂಡಿದ್ದಾರೆ. ಆದರೆ ಹಲವರು ಬಸ್ ನೊಳಗೇ ಸಿಲುಕಿಕೊಂಡಿದ್ದಾರೆ.
ನವದೆಹಲಿ: ಜಾಗತಿಕವಾಗಿ ಸಂಕಷ್ಟವಿರುವಾಗ ಸರ್ಕಾರ ಸರ್ವಪಕ್ಷ ಸಭೆ ಕರೆದರೆ ಆಗಲೇ ರಾಹುಲ್ ಗಾಂಧಿ ಗೈರಾಗುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ. ಯುದ್ಧದಿಂದಾಗಿ ಎಲ್ ಪಿಜಿ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಜಾಗತಿಕವಾಗಿ ಎಲ್ಲಾ ದೇಶಗಳೂ ಸಂಕಷ್ಟದಲ್ಲಿದೆ. ಭಾರತದಲ್ಲೂ ಸಮಸ್ಯೆಯಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ನಿನ್ನೆ ಸರ್ವ ಪಕ್ಷ ಸಭೆ ಕರೆದಿತ್ತು. ಆದರೆ ಈ ಸಭೆಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಟಿಎಂಸಿ ನಾಯಕಿ, ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಸಭೆಗೆ ಗೈರಾಗಿದ್ದಾರೆ. ಇದೊಂದು ಕಣ್ಣೊರೆಸುವ ತಂತ್ರ ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದು ಸಭೆ ಬಹಿಷ್ಕರಿಸಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಎರಡು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆ ನಾಮಪತ್ರ ಹಿಂಪಡೆಯಲು ಇಂದು ಕೊನೇ ದಿನವಾಗಿದೆ. ಕಾಂಗ್ರೆಸ್ ಗೆ ಈ ತಪ್ಪು ದುಬಾರಿಯಾಗುತ್ತಾ? ದಾವಣಗೆರೆಯಲ್ಲಿ ಶ್ಯಾಮನೂರು ಶಿವಶಂಕರಪ್ಪ ಮತ್ತು ಬಾಗಲಕೋಟೆಯಲ್ಲಿ ಎಚ್ ವೈ ಮೇಟಿ ನಿಧನದ ಬಳಿಕ ತೆರವಾಗಿದ್ದ ಅವರ ಸ್ಥಾನಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ. ಏಪ್ರಿಲ್ 10 ರಂದು ಚುನಾವಣೆ ನಡೆಯಲಿದ್ದು, ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಕಾಂಗ್ರೆಸ್ ನಿಂದ ದಾವಣಗೆರೆ ಕ್ಷೇತ್ರದಲ್ಲಿ ಶ್ಯಾಮನೂರು ಮೊಮ್ಮಗ ಸಮರ್ಥ್ ಶ್ಯಾಮನೂರು ಟಿಕೆಟ್ ಪಡೆದಿದ್ದಾರೆ. ಆದರೆ ಅವರಿಗೆ ಟಿಕೆಟ್ ಕೊಟ್ಟಿರುವುದು ಮುಸ್ಲಿಂ ಸಮುದಾಯದವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಈ ಕ್ಷೇತ್ರದಿಂದ ಮುಸ್ಲಿಂ ಸಮುದಾಯದ ಬಂಡಾಯ ಅಭ್ಯರ್ಥಿಯಾಗಿ ಸಾದಿಕ್ ಪೈಲ್ವಾನ್ ಕಣಕ್ಕಿಳಿದಿದ್ದಾರೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಜನತೆಗೆ ಮತ್ತೊಂದು ದರ ಏರಿಕೆ ಬರೆ ಹಾಕಲಾಗಿದೆ. ಜಲಮಂಡಳಿ ಸಿಲಿಕಾನ್ ಸಿಟಿ ಜನರಿಗೆ ಶಾಕ್ ಕೊಟ್ಟಿದೆ. ಈಗಾಗಲೇ ಹಾಲು, ಬಸ್, ವಿದ್ಯುತ್ ದರ ಏರಿಕೆಯಿಂದ ಬೇಸತ್ತಿರುವ ಜನಕ್ಕೆ ಈಗ ನೀರಿನ ದರ ಏರಿಕೆ ಬರೆ ಹಾಕಲಾಗಿದೆ. ಏಪ್ರಿಲ್ 1 ರಿಂದ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಲು ಜಲಮಂಡಳಿ ತೀರ್ಮಾನಿಸಿದೆ. ಅದರಂತೆ ಶೇ.3 ರಷ್ಟು ದರ ಏರಿಕೆಯಾಗಲಿದೆ. ಸಮಿತಿ ಈಗಾಗಲೇ ನಿರ್ಧರಿಸಿದಂತೆ ದರ ಹೆಚ್ಚಿಸಲು ಜಲಮಂಡಳಿ ಮುಂದಾಗಿದೆ.
ನವದೆಹಲಿ: ತಮ್ಮ ತಾಯಿಯನ್ನು ನೋಡಿಕೊಂಡ ಕೇರಳಂ ಮೂಲದ ನರ್ಸ್ ನ್ನು ಹೊಗಳಿದ ರಾಹುಲ್ ಗಾಂಧಿಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಯಾವುದೇ ರಾಜ್ಯದವರೇ ಆಗಿದ್ದರೂ ನರ್ಸ್ ಗಳು ಹೀಗೇ ಕೆಲಸ ಮಾಡೋದು ಎಂದಿದ್ದಾರೆ. ರಾಹುಲ್ ಗಾಂಧಿ ತಮ್ಮ ವೈಯಕ್ತಿಕ ಜೀವನದಲ್ಲಿ ಸಂಕಷ್ಟದಲ್ಲಿದ್ದಾರೆ. ಅವರ ತಾಯಿ, ಕಾಂಗ್ರೆಸ್ ಪರಮೋಚ್ಛ ನಾಯಕಿ ಸೋನಿಯಾ ಗಾಂಧಿ ಅನಾರೋಗ್ಯದಿಂದ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೇರಳಂ ಚುನಾವಣೆ ಪ್ರಚಾರವನ್ನು ಬಿಟ್ಟು ಮಗನಾಗಿ ರಾಹುಲ್ ಗಾಂಧಿ ಈಗ ತಾಯಿಯ ಜೊತೆ ಆಸ್ಪತ್ರೆಯಲ್ಲಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಅಲ್ಲಲ್ಲಿ ಮಳೆಯಾಗಿತ್ತು. ಇಂದು ಮಳೆಯ ಸೂಚನೆಯಿಲ್ಲ. ಆದರೆ ತಾಪಮಾನದಲ್ಲಿ ವಿಪರೀತ ಏರಿಕೆಯಾಗಲಿದೆ. ರಾಜ್ಯದ ಹವಾಮಾನದಲ್ಲಿ ಇಂದಿನಿಂದ ಮತ್ತೆ ಭಾರೀ ಬದಲಾವಣೆಯಾಗಲಿದೆ. ಕಳೆದ ನಾಲ್ಕೈದು ದಿನಗಳಿಂದ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿತ್ತು. ಆದರೆ ನಿನ್ನೆಯಿಂದ ಮತ್ತೆ ತಾಪಮಾನದಲ್ಲಿ ಏರಿಕೆಯಾಗುತ್ತಿದೆ. ಇಂದು ಮತ್ತಷ್ಟು ಏರಿಕೆ ಕಂಡುಬರಲಿದೆ. ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಇಂದು ಉರಿಬಿಸಿಲಿನ ವಾತಾವರಣವಿರಲಿದೆ. ಅದರಲ್ಲೂ ರಾಯಚೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿಗೆ ಏರಿಕೆಯಾಗಲಿದೆ.
ಇಂದು ಗುರುವಾರವಾಗಿದ್ದು ಮಹಾವಿಷ್ಣುವಿನ ಆರಾಧನೆಗೆ ಸೂಕ್ತ ದಿನವಾಗಿದೆ. ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಅಚ್ಯುತಾಷ್ಟಕಂ ಸ್ತೋತ್ರವನ್ನು ಓದಿ.ಅಚ್ಯುತಂ ಕೇಶವಂ ರಾಮನಾರಾಯಣಂಕೃಷ್ಣದಾಮೋದರಂ ವಾಸುದೇವಂ ಹರಿಮ್ ।ಶ್ರೀಧರಂ ಮಾಧವಂ ಗೋಪಿಕಾ ವಲ್ಲಭಂಜಾನಕೀನಾಯಕಂ ರಾಮಚಂದ್ರಂ ಭಜೇ ॥ 1 ॥ ಅಚ್ಯುತಂ ಕೇಶವಂ ಸತ್ಯಭಾಮಾಧವಂಮಾಧವಂ ಶ್ರೀಧರಂ ರಾಧಿಕಾ ರಾಧಿತಮ್ ।ಇಂದಿರಾಮಂದಿರಂ ಚೇತಸಾ ಸುಂದರಂದೇವಕೀನಂದನಂ ನಂದಜಂ ಸಂದಧೇ ॥ 2 ॥[ಪಲ್ಲವಿ..] ವಿಷ್ಣವೇ ಜಿಷ್ಣವೇ ಶಂಕನೇ ಚಕ್ರಿಣೇರುಕ್ಮಿಣೀ ರಾಗಿಣೇ ಜಾನಕೀ ಜಾನಯೇ ।ವಲ್ಲವೀ ವಲ್ಲಭಾಯಾರ್ಚಿತಾ ಯಾತ್ಮನೇಕಂಸ ವಿಧ್ವಂಸಿನೇ ವಂಶಿನೇ ತೇ ನಮಃ ॥ 3 ॥
ಬೆಂಗಳೂರು: ಇನ್ನೇ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇನ್ನೆರಡು ವರ್ಷ ಪೂರೈಸಿದರೆ ಅವಧಿ ಸಂಪೂರ್ಣವಾಗಿ ಮುಗಿಯುತ್ತದೆ. ಆದರೆ ಇದೀಗ ವಿಧಾನಸೌಧದ ಎದುರು ಶಾಸಕರ ಗ್ರೂಪ್ ಫೋಟೋ ಶೂಟ್ ನಡೆದಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯಾಕೆಂದರೆ ವಿಧಾನಸಭೆ ಅವಧಿ ಮುಗಿಯುವ ಹತ್ತಿರದಲ್ಲಿ ಸ್ಪೀಕರ್ ಸಮ್ಮುಖದಲ್ಲಿ ಶಾಸಕರ ಗ್ರೂಪ್ ಫೋಟೋ ಶೂಟ್ ಮಾಡಲಾಗುತ್ತದೆ. ಆದ್ರೆ, ಅವಧಿಗೂ ಮುನ್ನವೇ ಸ್ಫೀಕರ್ ಯುಟಿ ಖಾದರ್, ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಶಾಸಕರ ಫೋಟೋ ಶೂಟ್ ಮಾಡಿಸಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ. ಇನ್ನೂ ಗ್ರೂಪ್ ಫೋಟೋಶೂಟ್ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಪಕ್ಷ ಶಾಸಕರ ಜತೆಯೂ ಸಿದ್ದರಾಮಯ್ಯರ ಫೋಟೋ ಶೂಟ್ಗೆ ಕೆಲವರು ಟೀಕೆ ಮಾಡಿದ್ದಾರೆ.
ಬೆಂಗಳೂರು: ಭಾರೀ ಕುತೂಹಲದಿಂದ ಕಾಯುತ್ತಿದ್ದ ಐಪಿಎಲ್ ಪಂದ್ಯಕ್ಕೆ ಇನ್ನೇನು ಮೂರೇ ದಿನ ಬಾಕಿಯಿರುವಾಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗಣಹೋಮ ನೆರವೇರಿಸಲಾಯಿತು. ಕಳೆದ ವರ್ಷ ಆರ್ಸಿಬಿ ವಿಜಯೋತ್ಸವದ ವೇಳೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಆರ್ಸಿಬಿ ಅಭಿಮಾನಿಗಳು ದಾರುಣವಾಗಿ ಸಾವನ್ನಪ್ಪಿದರು. ಇದೀಗ ಮುಂದಿನ ದಿನಗಳಲ್ಲಿ ಇಂತಹ ಯಾವುದೇ ದುರ್ಘಟನೆಗಳು ನಡೆಯದಂತೆ ಮೃತ್ಯುಂಜಯ ಹೋಮ, ಗಣಪತಿ ಹೋಮ ಹಾಗೂ ಲಕ್ಷ್ಮಿ ಹೋಮ ನೆರವೇರಿಸಲಾಯಿತು.
ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಮಾರ್ಚ್ 26 ರವರೆಗೆ ಗಡಿಪಾರು ಮಾಡದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.ತಿಮರೋಡಿ ಅವರು ಮೂರನೇ ಬಾರಿಗೆ ತಮ್ಮ ವಿರುದ್ಧ ಹೊರಡಿಸಿದ ಹೆಚ್ಚುವರಿ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಬಂದಿದೆ. ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠದಲ್ಲಿ ಮಂಗಳವಾರ ವಿಚಾರಣೆ ನಡೆಯಿತು.ಅರ್ಜಿದಾರರ ಪರ ವಾದ ಮಂಡಿಸಿದ ಹೈಕೋರ್ಟ್ನ ವಕೀಲ ಎಂಆರ್ ಬಾಲಕೃಷ್ಣ ಅವರ ಅಹವಾಲು ಆಲಿಸಿದ ನ್ಯಾಯಪೀಠ
ಬೆಂಗಳೂರು: ಪಶ್ಚಿಮ ಬೆಂಗಳೂರಿನ ಬಸ್ ನಿಲ್ದಾಣದ ಹಿಂಭಾಗದ ಕಸದ ರಾಶಿಯಲ್ಲಿ ಮಹಿಳೆಯ ಶವ ಪತ್ತೆಯಾದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಕೆಂಗೇರಿ ಪೊಲೀಸರಿಗೆ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದಿರುವುದು ಪತ್ತೆಯಾಗಿದೆ.ಸೋಮವಾರ ನಸುಕಿನ 12.30ರ ಸುಮಾರಿಗೆ ಮೃತ ಕೆಂಪಮ್ಮ (50) ಮಂಡ್ಯದ ತನ್ನ ಊರಿನಿಂದ ರೈಲಿನಲ್ಲಿ ಪ್ರಯಾಣಿಸಿ ಕೆಂಗೇರಿ ಉಪನಗರದ ಬಳಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ತನ್ನ ಆಟೋರಿಕ್ಷಾದಲ್ಲಿದ್ದ ಬಸವೇಗೌಡ ಆಕೆಯನ್ನು ಕೆಳಗೆ ಬೀಳಿಸಿದ್ದಾನೆ. ಗಾಬರಿಯಿಂದ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು.
ಘಾಜಿಯಾಬಾದ್: ಅವನೀಗ ಸುಖವಾಗಿದ್ದಾನೆ, ಯಾರೂ ಅಳಬೇಡಿ ಎಂದು ದೇಶದಲ್ಲಿ ಮೊದಲ ದಯಾಮರಣ ಹರೀಶ್ ರಾಣಾ ತಂದೆ ಅಶೋಕ್ ರಾಣಾ, ಮಗನ ಅಂತಿಮ ವಿಧಿವಿಧಾಬದಲ್ಲಿ ಹೇಳಿದ ಮಾತಿದು. 13ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ಪೋಷಕರ ಮನವಿಯಂತೆ ಸುಪ್ರೀಂಕೋರ್ಟ್ ದಯಾಮರಣಕ್ಕೆ ಮಾರ್ಚ್ ತಿಂಗಳಿನಲ್ಲಿ ಅನುಮತಿ ನೀಡಿತ್ತು. ಅದರಂತೆ ಏಮ್ಸ್ನಲ್ಲಿ ಹರೀಶ್ ರಾಣಾಗೆ ನೀಡುತ್ತಿದ್ದ ಚಿಕಿತ್ಸೆಯನ್ನು ಯಾವುದೇ ನೋವಿಲ್ಲದೆ ಕೊನೆಗೊಳಿಸಲಾಯಿತು. ಇನ್ನೂ ಹರೀಶ್ ರಾಣಾ ಮಂಗಳವಾರ ಏಮ್ಸ್ನಲ್ಲಿ ಕೊನೆಯುಸಿರೆಳೆದ. ಅಂತ್ಯಕ್ರಿಯೆಯು ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್ ಚಿತಾಗಾರದಲ್ಲಿ ಬುಧವಾರ ಬೆಳಿಗ್ಗೆ ನಡೆಸಲಾಯಿತು, ಇದು ಅವರ 13
ಮಂಗಳೂರು: ಮುಂದಿನ ಎರಡು ಮೂರು ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಇಲಾಖೆ) ಮುನ್ಸೂಚನೆ ನೀಡಿದೆ.IMD ಪ್ರಕಾರ, ಅರೇಬಿಯನ್ ಸಮುದ್ರದಲ್ಲಿನ ವಾತಾವರಣದ ಒತ್ತಡವು ವಿವಿಧ ಸ್ಥಳಗಳಲ್ಲಿ ಬಿರುಗಾಳಿಯ ಗಾಳಿ ಮತ್ತು ಮಿಂಚುಗಳೊಂದಿಗೆ ಮಳೆಯನ್ನು ಪ್ರಚೋದಿಸುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡು ಕರ್ನಾಟಕ ಪ್ರದೇಶದಲ್ಲಿಯೂ ಗಮನಾರ್ಹ ಮಳೆಯಾಗುವ ನಿರೀಕ್ಷೆಯಿದೆ.ಮಂಗಳೂರಿನಲ್ಲಿ ಮಂಗಳವಾರ ಗರಿಷ್ಠ ತಾಪಮಾನ 33.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಸಾಮಾನ್ಯಕ್ಕಿಂತ 0.4 ಡಿಗ್ರಿ
ಪಣಜಿ: 25 ರಿಂದ 30 ಅಪ್ರಾಪ್ತ ಬಾಲಕಿಯರನ್ನು ಒಳಗೊಂಡ ಲೈಂಗಿಕ ಹಗರಣದ ಬಗ್ಗೆ ಸಾರ್ವಜನಿಕರ ತೀವ್ರ ಆಕ್ರೋಶದ ನಂತರ ದಕ್ಷಿಣ ಗೋವಾ ಪೊಲೀಸರು 20 ವರ್ಷದ ಸೋಹಮ್ ಸುಶಾಂತ್ ನಾಯಕ್ನನ್ನು ಪೊಲೀಸರು ಕೊನೆಗೂ ಅರೆಸ್ಟ್ ಮಾಡಿದ್ದಾರೆ. ಮದೇಗಲ್-ಕಾಕೋರ ನಿವಾಸಿ ಮತ್ತು ಬಿಜೆಪಿ ಕರ್ಚೋರೆಮ್ ಪುರಸಭೆಯ ಕೌನ್ಸಿಲರ್ ಅವರ ಪುತ್ರ ನಾಯಕ್ ಅವರನ್ನು ನಾಗರಿಕರು ಮತ್ತು ಸ್ಥಳೀಯ ಮುಖಂಡರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ನಂತರ ಬಂಧಿಸಲಾಯಿತು. ಪ್ರಾಥಮಿಕ ವರದಿಗಳ ಪ್ರಕಾರ, ಬಿಜೆಪಿ ಕಾರ್ಪೊರೇಟರ್ನ ಮಗ ಹಲವಾರು ಅಪ್ರಾಪ್ತರೊಂದಿಗೆ ಲೈಂಗಿಕ ಸಂಬಂಧದಲ್ಲಿ
ಬೆಂಗಳೂರು: ಇದೇ 27ರಂದು ದೇಶದಾದ್ಯಂತ ಶ್ರದ್ಧಾ ಭಕ್ತಿಯಿಂದ ಶ್ರೀರಾಮನವಮಿಯನ್ನು ಆಚರಿಸಲಾಗುತ್ತದೆ. ಇನ್ನೂ ಈ ವಿಶೇಷ ದಿನದಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮತ್ತು ಮಾಂಶ ಮಾರಾಟ ಹಾಗೂ ಮಳಿಗೆಗಳಲ್ಲಿ ಮಾಂಸಾ ಮಾರಾಟವನ್ನು ನಿಷೇಧ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಮಾರ್ಚ್ 27ರ ಶುಕ್ರವಾರದಂದು 'ಶ್ರೀರಾಮ ನವಮಿ ಹಬ್ಬ'ದ ಪ್ರಯುಕ್ತ ನಗರದಲ್ಲಿರುವ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸಾ ಹಾರಾಟ ನಿಷೇಧಿಸಲಾಗಿದೆ.
ಕೇರಳ: ತನ್ನ ಮದುವೆಯನ್ನು ಲವ್ ಜಿಹಾದ ಎಂದು ಆರೋಪ ಮಾಡಿದ್ದ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಭೋಸ್ಲೆ ಅವರು ಗಂಭೀರ ಆರೋಪ ಮಾಡಿದ್ದಾರೆ. ಸನೋಕ್ ಮಿಶ್ರಾ ತನಗೆ ಸಿನಿಮಾ ನಿರ್ದೇಶನದ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಕೊಚ್ಚಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮ ಪತಿ ಫರ್ಮಾನ್ ಖಾನ್ ಅವರೊಂದಿಗೆ ಈ ಆರೋಪವನ್ನು ಮಾಡಿದರು. ತನಗೆ ಮತ್ತು ತನ್ನ ಪತಿಗೆ ಜೀವ ಬೆದರಿಕೆ ಇದೆ. ಈ ಹಿನ್ನೆಲೆ ಕೇರಳ ಮತ್ತು ಮಧ್ಯಪ್ರದೇಶದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾಯವನ್ನೂ ಕೋರಿದ್ದಾಳೆ.ನಾನುಅಪ್ರಾಪ್ತಳಾಗಿದ್ದಾಗ ಚಿತ್ರ ಸೆಟ್ಗಳಲ್ಲಿ ಅವನು ತನಗೆ ಅನೇಕ ಬಾರಿ ಕಿರುಕುಳ ನೀಡಿದ್ದನೆಂದು ಅವಳು
ಚೆನ್ನೈ (ತಮಿಳುನಾಡು): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೆ ಡಿಎಂಕೆ ನೇತೃತ್ವದ ಮೈತ್ರಿಕೂಟವನ್ನು ಬೆಂಬಲಿಸುವ ನಟ-ರಾಜಕಾರಣಿ ಕಮಲ್ ಹಾಸನ್ ಅವರ ನಿರ್ಧಾರವನ್ನು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ವಕ್ತಾರ ಸರವಣನ್ ಅಣ್ಣಾದೊರೈ ಅವರು ಬುಧವಾರ ಶ್ಲಾಘಿಸಿದ್ದಾರೆ. ಇದು ಐತಿಹಾಸಿಕ ಮತ್ತು ನಿಸ್ವಾರ್ಥ ತ್ಯಾಗವಾಗಿದೆ ಎಂದು ಹೇಳಿದರು. ಈ ನಿರ್ಧಾರವನ್ನು ಕಮಲ್ ಹಾಸನ್ ಅವರ ಚಾರಿತ್ರಿಕ ಮತ್ತು ನಿಸ್ವಾರ್ಥ ತ್ಯಾಗ ಎಂದು ಬಣ್ಣಿಸಿದ್ದಾರೆ, ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ನವದೆಹಲಿ: ಐಪಿಎಲ್ 2026 ಆರಂಭಕ್ಕೆ ಮುನ್ನ ತನ್ನ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಗೆ ಡೆಲ್ಲಿ ಕ್ಯಾಪಿಟಲ್ಸ್ ಕಾಂತಾರ ಸ್ಟೈಲ್ ವೆಲ್ಕಂ ನೀಡಿದೆ. ಐಪಿಎಲ್ 2026 ಕ್ಕೆ ಕ್ಷಣಗಣನೆ ಶುರುವಾಗಿದ್ದು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಸೋಷಿಯಲ್ ಮೀಡಿಯಾ ಪುಟದಲ್ಲಿ ಕೆಎಲ್ ರಾಹುಲ್ ಆಗಮನದ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಕೆಎಲ್ ರಾಹುಲ್ ಗೆ ಕಾಂತಾರ ಸ್ಟೈಲ್ ನಲ್ಲಿ ಸ್ವಾಗತ ನೀಡಲಾಗಿದೆ. ಕೆಎಲ್ ರಾಹುಲ್ ರೆಡಿ ಆಗಿ ಮೈದಾನಕ್ಕೆ ಬರುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಈ ವಿಡಿಯೋಗೆ ಕಾಂತಾರ ಸಿನಿಮಾದ ಫೇಮಸ್ ಹಿನ್ನಲೆ ಸಂಗೀತವನ್ನು ಸೇರ್ಪಡೆಗೊಳಿಸಲಾಗಿದೆ.
ಬೆಂಗಳೂರು: ತನ್ನ ಸಾಕು ಕೋಳಿಗಳನ್ನು ತಿಂದು ಹಾಕಿದೆ ಎಂದು ಕೋಪದಲ್ಲಿ ಗುಂಡು ಹಾರಿಸಿ 2ಬೀದಿ ನಾಯಿಗಳನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಅವಲಹಳ್ಳಿಯಲ್ಲಿ ವರದಿಯಾಗಿದೆ. ವೆಂಕಟೇಶ್ ಎಂಬಾತನ ಮೇಲೆ ಬೀದಿ ನಾಯಿಗಳನ್ನು ಕೊಂದಿರುವ ಆರೋಪ ಕೇಳಿಬಂದಿದೆ. ಇಲ್ಲಿನ ಗುಂಡೂರಿನ ಬಳಿಯ ಪಾಶ್ಮಿನ ಬ್ರೂಕ್ವುಡ್ಸ್ ಅಪಾರ್ಟ್ಮೆಂಟ್ ಬಳಿ ಈ ಘಟನೆ ನಡೆದಿದೆ. ಇನ್ನೂ ತನ್ನ ಸಾಕು ಕೋಳಿಗಳನ್ನು ಕೊಂದಿದೆ ಎಂದು ಕೋಪದಲ್ಲಿ ವೆಂಕಟೇಶ್ ಅವರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಮೋದಿ ಪ್ರಧಾನಿಯಾದ ಮೇಲೆ ಕೇಂದ್ರ ಸರ್ಕಾರ 165 ಲಕ್ಷ ಕೋಟಿ ಸಾಲ ಮಾಡಿದೆ ಎಂದು ಸದನದಲ್ಲಿ ಹೇಳಿದ ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್ ಅಶೋಕ್ ಸೋಷಿಯಲ್ ಮೀಡಿಯಾದಲ್ಲಿ ಅಂಕಿ ಅಂಶ ಸಮೇತ ತಿರುಗೇಟು ನೀಡಿದ್ದಾರೆ. ಸದನದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ರಾಜ್ಯ ಮತ್ತು ಕೇಂದ್ರದ ಸಾಲದ ಬಗ್ಗೆ ವಿವರಣೆ ನೀಡಿದ್ದಾರೆ. ನಾವು ಸಾಲ ತಗೊಂಡಿಲ್ಲ ಅಂತ ಹೇಳಲ್ಲ. ನಾವು 8,24,369 ಕೋಟಿ ರೂ ಸಾಲ ತಗೊಂಡಿದ್ದೇವೆ. ಆದರೆ ಕೇಂದ್ರ ಸರ್ಕಾರ ಎಷ್ಟು ಸಾಲ ತಗೊಂಡಿದೆ ಗೊತ್ತಾ? 2014 ರಲ್ಲಿ ಕೇಂದ್ರದ ಸಾಲ 53.11 ಲಕ್ಷ ಕೋಟಿ ಇತ್ತು.
ರಾಜಸ್ಥಾನಿ ನಟಿ ಮತ್ತು ರೂಪದರ್ಶಿ ಹರ್ಷಿಲ್ ಕಾಲಿಯಾ ಅವರು ಸೋಮವಾರ (ಮಾರ್ಚ್ 23) ಜೈಪುರದಲ್ಲಿ ತಮ್ಮ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಸಾವನ್ನಪ್ಪಿದ್ದಾರೆ. 30ವರ್ಷದ ನಟಿಯ ಸಾವಿನ ಸುದ್ದಿ ಚಿತ್ರರಂಗಕ್ಕೆ ದೊಡ್ಡ ಆಘಾತವನ್ನು ನೀಡಿದೆ. ಹರ್ಷಿಲ್ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಶಿಪ್ರಾ ಪಥ್ ರಸ್ತೆಯಲ್ಲಿ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಆಕೆಯ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ಎಡಭಾಗಕ್ಕೆ ಪಲ್ಟಿಯಾಗಿದೆ ಎನ್ನಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಅಪಘಾತದ ನಿಖರವಾದ ಕ್ಷಣವನ್ನು ಸೆರೆಹಿಡಿಯಲಾಗಿದ್ದು, ವಾಹನವು ಸಮತೋಲನ
ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಹಠಾತ್ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಯಿಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ರಾಹುಲ್ ಗಾಂದಿ ಅವರು ಕೈಗೊಂಡಿದ್ದ ಕೇರಳ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಮಂಗಳವಾರ (ಮಾ. 24) ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ ಹಿನ್ನೆಲೆಯಲ್ಲಿ ಬುಧವಾರ (ಮಾ. 25) ಕೇರಳ ಭೇಟಿಯನ್ನು ರದ್ದುಗೊಳಿಸಿದ್ದಾರೆ.
ಬೆಂಗಳೂರು: ನಾನು ಯುಗಾದಿ ದಿನವೂ ಮಾಂಸ ತಿಂತೀನಿ, ಶಿವರಾತ್ರಿ ದಿನವೂ ತಿಂತೀನಿ ಅದು ನನ್ನಿಷ್ಟ ಕಣಯ್ಯಾ.. ಎಂದು ಸಿಎಂ ಸಿದ್ದರಾಮಯ್ಯ ಇಂದು ಸದನದಲ್ಲಿ ಸವಾಲು ಹಾಕಿದ್ದಾರೆ. ಇಂದು ವಿಪಕ್ಷ ನಾಯಕ ಆರ್ ಅಶೋಕ್ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ಬಾರಿ ಬಜೆಟ್ ಮಾಡುವಾಗ ಸಿಎಂ ರಾಹುಕಾಲ, ಗುಳಿಗಕಾಲ ಸಮಯ ನೋಡಿಕೊಂಡು ಮಾಡಿದರು ಎಂದು ಅಶೋಕ್ ಟೀಕಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ‘ನಿಜ ನಾನು ರಾಹುಕಾಲದಲ್ಲಿ ಮಂಡಿಸಿದ್ದೇನೆ. ಈ ಸಾರಿ ನಮ್ಮ ಮನೆಯವರು, ಅಧಿಕಾರಿಗಳು ಎಲ್ಲಾ ಹೇಳಿದ್ರು ರಾಹುಕಾಲ ಬೇಡ ಸಾರ್ ಸ್ವಲ್ಪ ಮುಂಚಿತವಾಗಿ ಮಂಡಿಸಿ ಎಂದು. ನಾನು ಅವರ ನಂಬಿಕೆಗೆ ಬೆಲೆ ಕೊಟ್ಟು ಮಂಡಿಸಿದ್ದೇನೆ.
ಬೆಂಗಳೂರು: ನಾನು ರಾಹುಕಾಲ, ಗುಳಿಕಾಲ ಎಂದೂ ನೋಡೋಲ್ಲ. ನನಗೆ ಅದರ ಮೇಲೆ ನಂಬಿಕೆಯೂ ಇಲ್ಲ. ಯುಗಾದಿ ಶಿವರಾತ್ರಿಯಂದು ಮಾಂಸ ನಾನು ಸೇವಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ನನಗೆ ರಾಹುಕಾಲ, ಗುಳಿಕಾಲ ಎಂದೂ ನೋಡಲ್ಲ. ಯಾರಾದ್ರೂ ಯುಗಾದಿ- ಶಿವರಾತ್ರಿಯಂದು ಮಾಂಸ ತಿಂತಾರಾ ಎಂದು ಪ್ರಶ್ನಿಸಿದ ಅವರು ನಾನು ತಿಂತೇನೆ ಎಂದರು. ಮನೆಯಲ್ಲಿ ಹಬ್ಬ ಮಾಡುತ್ತಾರೆ, ನಾನು ಇಷ್ಟ ಪ್ರಕಾರ ತಿನ್ನುತ್ತೇನೆ ಎಂದು ಹೇಳಿದರು. ಮೊದಲೆಲ್ಲಾ ಟವೆಲ್ ಹಾಕುತ್ತಿದ್ದೆ. ಬಗ್ಗಿದಾಗ ಅದು ಬಿದ್ದು ಹೋಗುತ್ತಿತ್ತು. ಹಾಗಾಗಿ ಶಲ್ಯ ಹಾಕೋಕೆ ಶುರು ಮಾಡಿದೆ.
ಕೇರಳ: ಶಾಲೆಯಿಂದ ವಾಪಾಸ್ಸಾಗುತ್ತಿದ್ದ ಒಬ್ಬಂಟ್ಟಿ ಬಾಲಕಿ ಮೇಲೆ 10ಕ್ಕೂ ಅಧಿಕ ಬೀದಿನಾಯಿಗಳು ದಾಳಿ ಮಾಡಲು ಯತ್ನಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದಾಗ ಎಂಥವರಿಗೂ ಭಯ ಹುಟ್ಟಿಸುವಂತಿದೆ.ಈ ಘಟನೆ ಕೇರಳದಲ್ಲಿ ವರದಿಯಾಗಿದೆ. ಯಾರು ಇಲ್ಲದ ಬೀದಿಯಲ್ಲಿ ಬಾಲಕಿಯೊಬ್ಬಳು ಶಾಲೆಯಿಂದ ವಾಪಾಸ್ಸಾಗಿ ಬರುತ್ತಿದ್ದಳು. ಈ ವೇಳೆ ಆಕೆಯನ್ನು ಅಟ್ಟಾಡಿಸಿ 6 ಬೀದಿ ನಾಯಿ ಬಂದಿದೆ. ಬಾಲಕಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡುತ್ತಾ ಬರುತ್ತಿರುವಾಗ ಅಲ್ಲೇ ನಿರ್ಮಾಣವಾಗುತ್ತಿದ್ದ ಮನೆಯಿಂದ ಮೂರು ನಾಯಿಗಳು ಮತ್ತೇ ಆಕೆಯನ್ನು ಅಟ್ಟಾಟಿಸಿದೆ.
ನವದೆಹಲಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಥವಾ ಎಲ್ಪಿಜಿ ಕೊರತೆ ಇಲ್ಲ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬುಧವಾರ ತಿಳಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ವದಂತಿಗಳನ್ನು ನಂಬಬೇಡಿ ಹಾಗೂ ಆಘಾತಕ್ಕೆ ಒಳಗಾಗದಿರಿ ಎಂದು ನಾಗರಿಕರಲ್ಲಿ ಮನವಿ ಮಾಡಿದೆ. ದೇಶದ ಅತಿದೊಡ್ಡ ತೈಲ ಸಂಸ್ಥೆಯಾದ ಇಂಡಿಯ
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಇಳಿಕೆಯಾಗಿತ್ತು. ಆದರೆ ಇಂದು ಭರ್ಜರಿ ಏರಿಕೆಯಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಇಳಿಕೆಯಾಗಿತ್ತು. ಇದು ಬೆಳೆಗಾರರಿಗೆ ಆತಂಕ ತಂದಿತ್ತು. ಕಳೆದ ಕೆಲವು ದಿನಗಳಿಂದ ಸತತವಾಗಿ ಬೆಲೆ ಇಳಿಕೆ ಕಂಡುಬರುತ್ತಿತ್ತು. ಆದರೆ ಇಂದು ಕೆಲವು ವರ್ಗದ ಅಡಿಕೆ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಕಂಡುಬರುತ್ತಿದೆ. ಇಂದು ಹೊಸ ಅಡಿಕೆ ಬೆಲೆ 10 ರೂ. ಏರಿಕೆಯಾಗಿ 470 ರೂ.ಗಳಷ್ಟಿದೆ.
ನವದೆಹಲಿ: ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮದಲ್ಲಿ ಬದಲಾವಣೆಯಾಗಿದೆ ಎಂಬ ವರದಿಗಳ ಬೆನ್ನಲ್ಲೇ ಈಗ ಕೇಂದ್ರವೇ ಸ್ಪಷ್ಟನೆ ನೀಡಿದ್ದು ನಿಯಮದಲ್ಲಿ ಬದಲಾವಣೆಯಿಲ್ಲ ಎಂದಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣದಿಂದ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ದೇಶದಲ್ಲಿ ವಾಣಿಜ್ಯ ಮತ್ತು ಗೃಹ ಬಳಕೆ ಸಿಲಿಂಡರ್ ಗಳು ಮೊದಲಿನಂತೆ ಸಿಗುತ್ತಿಲ್ಲ. ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ನಿಯಮದಲ್ಲಿ ಬದಲಾವಣೆ ತಂದಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಈಗ ಇಂಡಿಯನ್ ಆಯಿಲ್ ಸ್ಪಷ್ಟನೆ ನೀಡಿದ್ದು ನಿಯಮದಲ್ಲಿ ಬದಲಾವಣೆಯಿಲ್ಲ. ತಪ್ಪಾಗಿ ವರದಿಯಾಗಿದ್ದು, ಸದ್ಯಕ್ಕೆ ಯಾವುದೇ ಬದಲಾವಣೆಯಿಲ್ಲ.
ನವದೆಹಲಿ: ಎಲ್ ಪಿಜಿ ಅಭಾವದ ನಡುವೆ ಸಿಲಿಂಡರ್ ಬುಕಿಂಗ್ ವಿಚಾರದಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಈ ಹೊಸ ನಿಯಮವೇನು ಇಲ್ಲಿದೆ ಸಂಪೂರ್ಣ ವಿವರ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣದಿಂದ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ದೇಶದಲ್ಲಿ ವಾಣಿಜ್ಯ ಮತ್ತು ಗೃಹ ಬಳಕೆ ಸಿಲಿಂಡರ್ ಗಳು ಮೊದಲಿನಂತೆ ಸಿಗುತ್ತಿಲ್ಲ. ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ನಿಯಮದಲ್ಲಿ ಬದಲಾವಣೆ ತಂದಿದೆ. ಈ ಮೊದಲು 21 ದಿನಗಳ ಅಂತರದಲ್ಲಿ ಸಿಲಿಂಡರ್ ಬುಕಿಂಗ್ ಮಾಡಬಹುದಾಗಿತ್ತು. ಆದರೆ ಈಗ 35 ದಿನಕ್ಕೆ ಏರಿಕೆ ಮಾಡಲಾಗಿದೆ. ಅಂದರೆ ಒಂದು ಸಿಲಿಂಡರ್ ಬಳಿಕ ಮತ್ತೊಂದು ಸಿಲಿಂಡರ್ ಬುಕಿಂಗ್ ಮಾಡಲು 35 ದಿನ ಕಾಯಬೇಕು.
ನವದೆಹಲಿ: ಗುಜರಾತ್ ನ ಪೆಟ್ರೋಲ್ ಬಂಕ್ ಒಂದರ ಮುಂದೆ ಜನ ಡ್ರಮ್, ಬಕೆಟ್ ಹಿಡಿದುಕೊಂಡು ಕ್ಯೂ ನಿಂತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಯುದ್ಧದಿಂದಾಗಿ ದೇಶಕ್ಕೆ ತೈಲ ಪೂರೈಕೆ ಮೇಲೆ ಹೊಡೆತಬಿದ್ದಿದೆ. ಹೀಗಾಗಿ ಈಗ ಪೆಟ್ರೋಲ್ ಬಂಕ್ ಮುಂದೆ ಡ್ರಮ್, ಬಕೆಟ್ ಹಿಡಿದುಕೊಂಡು ಜನ ಸಾಲುಗಟ್ಟಿ ನಿಂತಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ. ಗುಜರಾತ್ ನ ಹಲವು ಭಾಗಗಳಲ್ಲಿಯೂ ಈಗ ಪೆಟ್ರೋಲ್ ಸಿಗುತ್ತಿಲ್ಲ ಎಂಬ ವದಂತಿ ಹಬ್ಬಿದೆ. ಇದೀಗ ಗುಜರಾತ್ ನ ಪೆಟ್ರೋಲ್ ಬಂಕ್ ಒಂದರಲ್ಲಿ ಜನ ನೀರು ತುಂಬ ಡ್ರಮ್, ಬಕೆಟ್ ಗಳನ್ನು ಹಿಡಿದುಕೊಂಡು ಕ್ಯೂ ನಿಂತಿದ್ದಾರೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಇಳಿಕೆಯಾಗಿದ್ದರೆ ಮತ್ತುಇತರೆ ಚಿನ್ನದ ದರ ಭಾರೀ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ಇಂದು ಪರಿಶುದ್ಧ ಚಿನ್ನದ ದರದಲ್ಲಿ ಭಾರೀ ಇಳಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,46,060.00 ರೂ.ಗಳಿತ್ತು. ಆದರೆ ಇಂದು ಇಳಿಕೆಯಾಗಿದ್ದು 1,43,795.00 ರೂ.ಗಳಷ್ಟಿದೆ.
ಜ್ಯೋತಿಷ್ಯದ ಪ್ರಕಾರ ಆಯಾ ಗ್ರಹಗಳಿಗೆ ಅನುಗುಣವಾಗಿ ಆಹಾರ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ವೃಶ್ಚಿಕ ರಾಶಿಯವರು ಜ್ಯೋತಿಷ್ಯದ ಪ್ರಕಾರ ಯಾವ ಆಹಾರ ಸೇವಿಸಿದರೆ ಉತ್ತಮ ಇಲ್ಲಿದೆ ವಿವರ. ವೃಶ್ಚಿಕ ರಾಶಿಯನ್ನು ಆಳುವ ಗ್ರಹ ಮಂಗಳ. ಈ ರಾಶಿಯವರು ಡಯಟ್ ಬಗ್ಗೆ ಹೆಚ್ಚು ಗಮನಕೊಡಬೇಕು. ದೇಹದ ಉಷ್ಣತೆ ಸಮತೋಲನದಲ್ಲಿರುವಂತಹ ಆಹಾರಗಳನ್ನು ಸೇವಿಸಬೇಕು. ಈ ರಾಶಿಯವರು ದೇಹವನ್ನು ನಿರ್ಜಲೀಕರಣಕ್ಕೊಳಗಾಗದಂತೆ ಕಾಪಾಡಿಕೊಳ್ಳುವುದು ಮುಖ್ಯ. ವೃಶ್ಚಿಕ ರಾಶಿಯವರಿಗೆ ಯಾವ ತರಕಾರಿ, ಹಣ್ಣು, ಧಾನ್ಯಗಳು ಸೂಕ್ತ ಇಲ್ಲಿದೆ ವಿವರ.
ನ್ಯೂಯಾರ್ಕ್: ಇರಾನ್ ಜೊತೆ ಕದನ ವಿರಾಮ ಒಪ್ಪಂದ ಮಾತುಕತೆ ನಡೆಸುತ್ತಿರುವ ಅಮೆರಿಕಾ ಹಲವು ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದೆ. ಇದಕ್ಕೆ ಇರಾನ್ ಕೂಡಾ ಪ್ರತಿ ಷರತ್ತು ನೀಡಿದ್ದು ಇವುಗಳ ವಿವರ ಇಲ್ಲಿದೆ. ಇರಾನ್ ಮೇಲೆ ನಡೆಸುತ್ತಿರುವ ಯುದ್ಧಕ್ಕೆ ಕೆಲವು ದಿನಗಳ ವಿರಾಮ ನೀಡಲು ನಿರ್ಧರಿಸಿರುವ ಡೊನಾಲ್ಡ್ ಟ್ರಂಪ್ ಶಾಂತಿ ಮಾತುಕತೆ ಪ್ರಕ್ರಿಯೆ ಜಾರಿಯಲ್ಲಿದೆ ಎಂದಿದ್ದಾರೆ. ಈ ನಡುವೆ ಇರಾನ್ ವಿರುದ್ಧದ ದಾಳಿಯಲ್ಲಿ ನಾವೇ ಗೆದ್ದಿದ್ದೇವೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಈ ನಡುವೆ ಇರಾನ್ ಗೆ ಹಲವು ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದೆ.
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ಹೊಸ ಮಾಲಿಕರ ಆಗಮನವಾಗಿದೆ. ಇದರ ಬೆನ್ನಲ್ಲೇ ತಂಡದ ಹೆಸರೂ ಬದಲಾವಣೆಯಾಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಹಿಂದೆ ವಿಜಯ್ ಮಲ್ಯ ಒಡೆತನದಲ್ಲಿದ್ದ ಆರ್ ಸಿಬಿ ತಂಡವನ್ನು ಲಂಡನ್ ಮೂಲದ ಡಿಯಾಜಿಯೊ ಸಂಸ್ಥೆ ಖರೀದಿ ಮಾಡಿತ್ತು. ಇದೀಗ ಭಾರತದ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಗ್ರೂಪ್, ಬೋಲ್ಡ್ ವೆಂಚರ್ಸ್ ಮತ್ತು ಬ್ಲ್ಯಾಕ್ ಸ್ಟೋನ್ ಸಂಸ್ಥೆಗಳು ಹೊಸ ಮಾಲಿಕರಾಗಿದ್ದಾರೆ. ಬರೋಬ್ಬರಿ 16700 ಕೋಟಿ ರೂ. ಗೆ ಆರ್ ಸಿಬಿ ತಂಡ ಬಿಕರಿಯಾಗಿದೆ.
ಬೆಂಗಳೂರು: ಮಾರ್ಚ್ 28 ರಿಂದ ಐಪಿಎಲ್ 2026 ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಆರ್ ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಆರ್ ಸಿಬಿ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಇಲ್ಲಿದೆ ಸಂಭಾವ್ಯ ತಂಡ. ಉದ್ಘಾಟನಾ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಸುಮಾರು ಒಂದು ವರ್ಷದ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿರುವುದು ಅಭಿಮಾನಿಗಳಿಗೆ ಖುಷಿಯ ಸಂಗತಿ. ಅದೂ ಉದ್ಘಾಟನಾ ಪಂದ್ಯವೇ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷ.
ನ್ಯೂಯಾರ್ಕ್: ಇರಾನ್ ನಮಗೆ ಬಹುದೊಡ್ಡ ಗಿಫ್ಟ್ ಕೊಟ್ಟಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ಟ್ರಂಪ್ ಹೇಳಿರುವ ಗಿಫ್ಟ್ ಹೊರ್ಮುಜ್ ಜಲಸಂಧಿ ಬಗ್ಗೆಯಾ ಎಂದು ಈಗ ಚರ್ಚೆ ಶುರುವಾಗಿದೆ. ಇಸ್ರೇಲ್, ಅಮೆರಿಕಾ ತನ್ನ ಮೇಲೆ ದಾಳಿ ನಡೆಸುತ್ತಿರುವ ಸಿಟ್ಟಿಗೆ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿ ಸೇಡು ತೀರಿಸಿಕೊಂಡಿತ್ತು. ಇದರಿಂದ ಜಗತ್ತಿನ ಬಹುತೇಕ ರಾಷ್ಟ್ರಗಳು ಸರಕು ಸಾಗಣೆ ಮಾಡಲಾಗದೇ ಸಂಕಷ್ಟದಲ್ಲಿವೆ. ಇದೀಗ ಇರಾನ್ ಜೊತೆ ಮಾತುಕತೆ, ಒಪ್ಪಂದದ ಜಪ ಮಾಡುತ್ತಿರುವ ಡೊನಾಲ್ಡ್ ಟ್ರಂಪ್ ಅದರಲ್ಲಿ ಯಶಸ್ವಿಯಾಗಿದ್ದೇವೆ ಎಂದೂ ಹೇಳಿಕೊಳ್ಳುತ್ತಿದ್ದಾರೆ.
ಆಗ್ರಾ: ಆಗ ತಾನೇ ಅಮ್ಮನ ಗರ್ಭದಿಂದ ಹೊರಬಂದ ಮಗು ಉಸಿರಾಡುತ್ತಲೇ ಇರಲಿಲ್ಲ. ತಕ್ಷಣ ವೈದ್ಯರು ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ. ವೈದ್ಯರನ್ನು ಪ್ರತ್ಯಕ್ಷ ರೂಪದ ವೈದ್ಯರು ಎನ್ನುತ್ತಾರೆ. ಇಲ್ಲಿ ಆಗಿದ್ದೂ ಇದೇ. ಇದು ನಡೆದಿರುವುದು ಆಗ್ರಾದ ಆಸ್ಪತ್ರೆಯೊಂದರಲ್ಲಿ. ಹುಟ್ಟಿದ ತಕ್ಷಣ ಮಗು ಅಳಬೇಕು. ಇದು ಆರೋಗ್ಯಕರ ಮಗುವಿನ ಲಕ್ಷಣ ಕೂಡಾ. ಆದರೆ ಇಲ್ಲಿ ಆಗಿದ್ದೇ ಬೇರೆ. ಆಗ ತಾನೇ ಹುಟ್ಟಿದ ಮಗು ಅಲ್ಲಾಡುತ್ತಲೂ ಇರಲಿಲ್ಲ. ಹೀಗಾಗಿ ಮಗುವಿಗೆ ಮೊದಲು ಆಕ್ಸಿಜನ್ ಸಪೋರ್ಟ್ ನೀಡಲಾಯಿತು. ಆದರೂ ಮಗು ಯಾವುದೇ ಚಲನೆ ತೋರಿಸಲಿಲ್ಲ.
ಬೆಂಗಳೂರು: ದಾವಣಗೆರೆಯಲ್ಲಿ ಚುನಾವಣೆ ಪ್ರಚಾರ ವೇಳೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಅಬ್ದುಲ್ ಕಲಾಂರನ್ನು ರಾಷ್ಟ್ರಪತಿ ಮಾಡಿದ್ದು ನಮ್ಮ ಕಾಂಗ್ರೆಸ್ ಎಂದಿದ್ದರು. ಆದರೆ ಅಸಲಿ ವಿಚಾರವೇನು ಇಲ್ಲಿದೆ ನೋಡಿ ವಿವರ. ದೇಶ ಕಂಡ ಅಪ್ರತಿಮ ಸಾಧಕ ಡಾ ಎಪಿಜೆ ಅಬ್ದುಲ್ ಕಲಾಂ 2002 ರಿಂದ 2007 ರವರೆಗೆ ಭಾರತದ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. 2002 ರಲ್ಲಿ ಅಧಿಕಾರದಲ್ಲಿದ್ದಿದ್ದು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ.
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂದೂ ಮಳೆಯ ಸಾಧ್ಯತೆಯಿದೆ. ವಿಶೇಷವಾಗಿ ಈ ಕೆಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಸೂಚಿಸುತ್ತಿವೆ. ಕಳೆದ ಒಂದು ವಾರದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೇಸಿಗೆ ಮಳೆಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಕಳೆದ ವಾರ ಮಳೆಯಾಗಿತ್ತು. ಆದರೆ ಈ ವಾರ ಬೆಂಗಳೂರಿನಲ್ಲಿ ಮಳೆಯಾಗಿಲ್ಲ. ಒಂದೆಡೆ ಮಳೆಯಿದ್ದರೆ ಇನ್ನೊಂದೆಡೆ ತಾಪಮಾನದಲ್ಲೂ ಗಣನೀಯವಾಗಿ ಏರಿಕೆ ಕಂಡುಬರುತ್ತಿದೆ. ಇಂದು ಕೊಡಗು ಜಿಲ್ಲೆಯಲ್ಲಿ ಇಂದು ಗುಡುಗು ಸಹಿತ ಮಳೆ ನಿರೀಕ್ಷಿಸಲಾಗಿದೆ. ಅಲ್ಲದೆ ಚಿತ್ರದುರ್ಗ, ಹಾವೇರಿ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಇಂದು ಬುಧವಾರವಾಗಿದ್ದ ವಿಘ್ನ ವಿನಾಶಕ ಗಣೇಶನ ದಿನವಾಗಿದೆ. ಇಂದು ಜೀವನದಲ್ಲಿ ಬರುವ ದಾರಿದ್ರ್ಯ, ಕಷ್ಟಗಳ ನಿವಾರಣೆಗೆ ದಾರಿದ್ರ್ಯ ದಹನ ಗಣಪತಿ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.ಸುವರ್ಣ ವರ್ಣ ಸುಂದರಂ ಸಿತೈಕ ದಂತ-ಬಂಧುರಂಗೃಹೀತ ಪಾಶ-ಮಂಕುಶಂ ವರಪ್ರದಾ-ಽಭಯಪ್ರಧಮ್ ।ಚತುರ್ಭುಜಂ ತ್ರಿಲೋಚನಂ ಭುಜಂಗ-ಮೋಪವೀತಿನಂಪ್ರಫುಲ್ಲ ವಾರಿಜಾಸನಂ ಭಜಾಮಿ ಸಿಂಧುರಾನನಮ್ ॥ ಕಿರೀಟ ಹಾರ ಕುಂಡಲಂ ಪ್ರದೀಪ್ತ ಬಾಹು ಭೂಷಣಂಪ್ರಚಂಡ ರತ್ನ ಕಂಕಣಂ ಪ್ರಶೋಭಿತಾಂಘ್ರಿ-ಯಷ್ಟಿಕಮ್ ।ಪ್ರಭಾತ ಸೂರ್ಯ ಸುಂದರಾಂಬರ-ದ್ವಯ ಪ್ರಧಾರಿಣಂಸರತ್ನ ಹೇಮನೂಪುರ ಪ್ರಶೋಭಿತಾಂಘ್ರಿ-ಪಂಕಜಮ್ ॥ ಸುವರ್ಣ ದಂಡ ಮಂಡಿತ ಪ್ರಚಂಡ ಚಾರು ಚಾಮರಂಗೃಹ ಪ್ರತೀರ್ಣ ಸುಂದರಂ ಯುಗಕ್ಷಣ ಪ್ರಮೋದಿತಮ್ ।ಕವೀಂದ್ರ ಚಿತ್ತರಂಜಕಂ ಮಹಾ ವಿಪತ್ತಿ ಭಂಜಕಂಷಡಕ್ಷರ ಸ್ವರೂಪಿಣಂ ಭಜೇದ್ಗಜೇಂದ್ರ ರೂಪಿಣಮ್ ॥
ಚೆನ್ನೈ: ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಮಂಗಳವಾರ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಮಹಿಳಾ ಮುಖ್ಯಸ್ಥರಿಗೆ ಮಾಸಿಕ ₹2000ಗಳನ್ನು ನೀಡುವುದಾಗಿ ಭರವಸೆ ನೀಡಿದರು.ವಿಶೇಷ ನೆರವು ಸೇರಿದಂತೆ 297 ಭರವಸೆಗಳ ಪ್ರಣಾಳಿಕೆಯನ್ನು ಪಳನಿಸ್ವಾಮಿ ಬಿಡುಗಡೆ ಮಾಡಿದರು. ಇದರಿಂದಾಗಿ ಕುಟುಂಬಗಳ ಮೇಲೆ ದಿನನಿತ್ಯದ ಆರ್ಥಿಕ ಹೊರೆ ಹಲವು ಪಟ್ಟು ಹೆಚ್ಚಿದೆ. ಆದ್ದರಿಂದ ಜನರ ಮೇಲಿನ ಈ
ಬೆಂಗಳೂರು: ಮದ್ಯಪಾನ ಸೇವಿಸುತ್ತಾ ನಗರದ ಬೀದಿಗಳಲ್ಲಿ ಅಜಾರೂಕತೆಯಿಂದ ಬೈಕ್ ಚಾಲನೆ ಮಾಡುತ್ತಿರುವ ವೀಡಿಯೊ ವೈರಲ್ ಬೆನ್ನಲ್ಲೇ ಯುವತಿ ಸೇರಿದಂತೆ ಮೂವರು ವೈದ್ಯರನ್ನು ಅರೆಸ್ಟ್ ಮಾಡಲಾಗಿದೆ. ಮದ್ಯಪಾನ ಸೇವಿಸುತ್ತಾ ಅಜಾರೂಕತೆಯಿಂದ ಬೈಕ್ ಓಡಿಸುತ್ತಿರುವುದನ್ನು ಹಿಂದಿನಲ್ಲಿದ್ದ ಸವಾರರು ವಿಡಿಯೋ ಮಾಡಿದ್ದಾರೆ. ವೈರಲ್ ವಿಡಿಯೋವನ್ನು ಗಮನಿಸಿದ ಪೊಲೀಸರು, ಬೇಜವಾಬ್ದಾರಿ ಚಾಲನೆ ಮತ್ತು ಸಂಚಾರ ನಿಯಮಗಳ ಉಲ್ಲಂಘನೆ ಎಂದು ಆರೋಪಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, ಮೋದಿ ಅವರು ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆ ಇಬ್ಬರೂ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಹಾರ್ಮುಜ್ ಜಲಸಂಧಿಯು ಮುಕ್ತ, ಸುರಕ್ಷಿತ ಮತ್ತು ಪ್ರವೇಶಸಾಧ್ಯವಾಗಿದ್ದು, ಇಡೀ ಜಗತ್ತಿಗೆ ಅತ್ಯವಶ್ಯಕವಾಗಿದೆ ಎಂದು
ಬೆಂಗಳೂರು: ದೈವಗಳಿಗೆ ಅವಮಾನ ಮಾಡಿದ ಆರೋಪ ಸಂಬಂಧ ನಟ ರಣವೀರ್ ಸಿಂಗ್ ಅವರು ಇದೀಗ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕ್ಷಮೆಯಾಚನೆ ನೀಡಲು ಒಪ್ಪಿಕೊಂಡಿದ್ದಾರೆ. ನಟ ರಿಷಬ್ ಶೆಟ್ಟಿ ನಿರ್ದೇಶಿಸಿರುವ ‘ಕಾಂತಾರ: ಅಧ್ಯಾಯ 1’ ಸಿನಿಮಾವನ್ನು ಹೊಗಳುವ ಸಂದರ್ಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ದೈವವನ್ನು ದೆವ್ವ ಎಂದು ಹೇಳಿ ಅನುಕರಣೆ ಮಾಡಿದ್ದರು. ಘಟನೆಯ ನಂತರ, 'ಧುರಂಧರ' ನಟನ ವಿರುದ್ಧ ಪ್ರಶಾಂತ್ ಮೆಥಾಲ್ ಎಂಬ ವ್ಯಕ್ತಿಯಿಂದ ದೂರು ದಾಖಲಾಗಿದ್ದು, ಎಫ್ಐಆರ್