ಗಾಯಕ-ರಾಪರ್ ಬಾದ್ಶಾ ಅವರು ತಮ್ಮ ಹೊಸ ಹಾಡು 'ತತೀರೀ'ಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತರ ಮೇಲೆ ಆಕ್ಷೇಪಾರ್ಹ ಸಾಹಿತ್ಯವನ್ನು ಬಳಸಿದ್ದಾರೆಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆ ಬಂದಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರು, ಫೇಸ್ಬುಕ್ನಲ್ಲಿ, "ಅವನ ಹಣೆಗೆ ಗುಂಡು ಹಾರಿಸುವುದಾಗಿ" ಬಾದ್ಶಾಗೆ ಬೆದರಿಕೆ ಹಾಕಿದ್ದಾರೆ.ಗಾಯಕ ಬಾದ್ಶಾಹ್, ನೀವು ಹರಿಯಾಣದ ಸಂಸ್ಕೃತಿಯನ್ನು ಹಾಳುಮಾಡಲು ಪ್ರಯತ್ನಿಸಿದ್ದೀರಿ. ನಾವು 2024 ರಲ್ಲಿ ನಿಮ್ಮ
ಕಳೆದ 13ವರ್ಷಗಳಿಂದ ಕೋಮಾದಲ್ಲಿರುವ ಮಗನಿಗೆ ದಯಾಮರಣ ನೀಡುವಂತೆ ಕೋರ್ಟ್ ತೀರ್ಪು ನೀಡಿದ ಬಳಿಕ ಇದೀಗ ಹರೀಶ್ ರಾಣಾರ ಕೊನೆಯ ಗಳಿಗೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.2013ರಲ್ಲಿ ನಾಲ್ಕನೇ ಮಹಡಿಯ ಕಟ್ಟಡದಿಂದ ಬಿದ್ದು ಕೋಮಾಕ್ಕೆ ಜಾರಿದ ಮಗನಿಗೆ ದಯಾಮರಣ ನೀಡುವಂತೆ ಹರೀಶ್ ರಾಣಾ ತಂದೆ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿದ್ದು, ಹರೀಶ್ ರಾಣಾಗೆ ನೀಡುತ್ತಿದ್ದ ಜೀವರಕ್ಷಕ ಚಿಕಿತ್ಸೆಯನ್ನು ತಡೆದು, ದಯಾಮರಣಕ್ಕೆ ಅನುಮತಿ ನೀಡಿದೆ. ರೋಗಿಯ ಅಂತಿಮ ಹಂತವನ್ನು ಆರಾಮ ಮತ್ತು ಘನತೆಯಿಂದ ನಿರ್ವಹಿಸುವುದನ್ನು ಖಾತ್ರಿಪಡಿಸುವ ಉಪಶಾಮಕ ಅಂತ್ಯ-
ಬೆಂಗಳೂರು: "ಒಡಿಸ್ಸಾದಿಂದ ಬಂದಿರುವ ನಾಲ್ವರು ಬಿಡದಿಯಲ್ಲಿ ವಾಸ್ತವ್ಯ ಹೂಡಿರುವ ನಮ್ಮ ಪಕ್ಷದ ಶಾಸಕರನ್ನು ಭೇಟಿ ಮಾಡಿ, ಅಡ್ಡಮತದಾನಕ್ಕೆ ತಲಾ ₹5 ಕೋಟಿ ಹಣದ ಆಮಿಷ ಒಡ್ಡಿದ್ದಾರೆ. ಆದರೆ ನಮ್ಮ ಶಾಸಕರು ಕುದುರೆ ವ್ಯಾಪಾರಕ್ಕೆ ಸಿದ್ಧರಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.ಕೆಪಿಸಿಸಿ ಕಚೇರಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು."ಒಡಿಸ್ಸಾದಿಂದ ಬಂದಿರುವ ನಾಲ್ಕು ಜನರು ಸ್ಥಳೀಯ ಬ್ಯಾಟರಾಯನಪುರ ನಿವಾಸಿ ಸುರೇಶ್ ಎಂಬಾತನ ಸಹಾಯ ಪಡೆದು
ನವದೆಹಲಿ: ದೇಶದಲ್ಲಿ ಭಾರೀ ಕುತೂಹಲ ಮೂಡಿಸಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ರಾಜ್ಯಗಳು ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಪಂಚ ರಾಜ್ಯಗಳ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದರು. ಏಪ್ರಿಲ್ 9 ರಿಂದ ವಿವಿಧ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಎಲ್ಲ ರಾಜ್ಯಗಳ ಮತ ಎಣಿಕೆ ಕಾರ್ಯವು ಮೇ 4
ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ವಿರಾಮದ ಸಾಧ್ಯತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ್ದಾರೆ. ಮಾತ್ರವಲ್ಲ, ಇರಾನ್ಗೆ ಹೊಸ ಎಚ್ಚರಿಕೆ ಸಂದೇಶವನ್ನು ಟ್ರಂಪ್ ರವಾನಿಸಿದ್ದಾರೆ. ಕದನ ವಿರಾಮ ಒಪ್ಪಂದವನ್ನು ಮಾಡಿಕೊಳ್ಳಲು ಇರಾನ್ಬಯಸುತ್ತಿದೆ. ನಿಯಮಗಳು ಇನ್ನೂ ಸಾಕಷ್ಟು ಉತ್ತಮವಾಗಿಲ್ಲದ ಕಾರಣ ನಾನು ಅದನ್ನು ಮಾಡಲು ಬಯಸುವುದಿಲ್ಲ. ಯಾವುದೇ ಭವಿಷ್ಯದ ಒಪ್ಪಂದ ಉತ್ತಮವಾಗಿರಬೇಕು ಎಂದು ಟ್ರಂಪ್ ಅವರು ಹೇಳಿದರು.ಇರಾನ್ ನ ಹೊಸ ಸರ್ವೋಚ್ಚ ನಾಯಕ ಜೀವಂತವಾಗಿಲ್ಲ ಎಂದು ಕೇಳಿದ್ದೇನೆ ಎಂದು ಹೇಳುವ ಮೂಲಕ ಇರಾನ್ ಶರಣಾಗತಿಗೆ ಒತ್ತಾಯಿಸಿದ್ದಾರೆ. ಎನ್ಬಿಸಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಇರಾನ್ ವಿರುದ್ಧದ ಯುದ್ಧ ಕೊನೆಗೊಳಿಸುವ ಸ್ಪಷ್ಟ ಆಸಕ್ತಿಯ ಹೊರತಾಗಿಯೂ ಸದ್ಯ ನಡೆಯುತ್ತಿರುವ ಪರಿಸ್ಥಿತಿಗಳಿಂದ ಅತೃಪ್ತರಾಗಿರುವುದಾಗಿ ತಿಳಿಸಿದ್ದಾರೆ.
ಇಸ್ರೇಲ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿಧನವನ್ನು ಸೂಚಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಉಲ್ಬಣಗೊಂಡ ನಂತರ ಅವರು "ಕ್ಷೇಮವಾಗಿದ್ದಾರೆ" ಎಂದು ಅವರ ಕಚೇರಿ ದೃಢಪಡಿಸಿದೆ. ಡಿಜಿಟಲ್ ವೇದಿಕೆಗಳಲ್ಲಿ ವ್ಯಾಪಕವಾದ ಚರ್ಚೆ ಹುಟ್ಟು ಹಾಕಿದ ಬಳಿಕ ಈ ಸ್ಪಷ್ಟನೆ ಬಂದಿದೆ. ನೇರ ಪ್ರತಿಕ್ರಿಯೆಯಾಗಿ, ನೆತನ್ಯಾಹು ಅವರ ಕಛೇರಿಯು ವರದಿಗಳನ್ನು ತಳ್ಳಿಹಾಕಿತು, "ಇವುಗಳು ನಕಲಿ ಸುದ್ದಿಗಳು; ಪ್ರಧಾನಿ ಚೆನ್ನಾಗಿದ್ದಾರೆ. "ಇಸ್ರೇಲಿ ಪ್ರಧಾನಿ ಶುಕ್ರವಾರ ಯುಎಸ್, ಇಸ್ರೇಲ್ ಮತ್ತು ಇರಾನ್ ಒಳಗೊಂಡ ನಡೆಯುತ್ತಿರುವ ಸಂಘರ್ಷದ
ರಾಮನಗರ: ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ವೀರಪ್ಪನ್ ಪುತ್ರಿ ವಿದ್ಯಾರಾಣಿ ಅವರು ನಿನ್ನೆ ಭೆಡಿಯಾದರು. ಬಿಡದಿಯ ವಂಡರ್ಲಾ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರೋ ಒಡಿಶಾದ ಕಾಂಗ್ರೆಸ್ ಶಾಸಕರನ್ನು ಭೇಟಿ ಡಿಕೆ ಶಿವಕುಮಾರ್ ಬಂದ ವೇಳೆ ವಿದ್ಯಾರಾಣಿ ಅವರು ಭೇಟಿಯಾದರು. ಶಿವಕುಮಾರ್ ರೆಸಾರ್ಟ್ಗೆ ಭೇಟಿ ನೀಡುತ್ತಿದ್ದಾರೆಂದು ತಿಳಿದ ವಿದ್ಯಾರಾಣಿ, ತಮ್ಮ ಬೆಂಬಲಿಗರೊಂದಿಗೆ ಅಲ್ಲಿ ಕಾಯುತ್ತಿದ್ದರು. ಅವರು ಬಂದ ತಕ್ಷಣ, ಅವರು ಅವರ ಬಳಿಗೆ ಹೋಗಿ ದೇವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡುವ ಮೂಲಕ ಆಶೀರ್ವಾದ ಪಡೆದರು ಎಂದು ಮೂಲಗಳು ತಿಳಿಸಿವೆ.
ಸಬ್ಜ ಸೀಡ್ಸ್ ಅಥವಾ ಕಾಮ ಕಸ್ತೂರಿಯನ್ನು ನಾವು ದಿನನಿತ್ಯಲೂ ನೀರಿನಲ್ಲಿ ಹಾಕಿ ಸೇವನೆ ಮಾಡುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜಗಳನ್ನು ಪಡೆಯಬಹುದು. ಕೇವಲ ತಂಪು ಪಾನೀಯಗಳಿಗೆ ಸೀಮಿತವಲ್ಲ, ಇದು ಅದ್ಭುತವಾದ ಆಯುರ್ವೇದ ಗುಣಗಳನ್ನು ಹೊಂದಿರುವ ಬೀಜವಾಗಿದೆ. ಬೇಸಿಗೆ ಸಮಯದಲ್ಲಿ ಇದನ್ನು ಕುಡಿಯುವುದಿರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. 1. ದೇಹದ ಉಷ್ಣತೆ ಕಡಿಮೆ ಮಾಡುತ್ತದೆಕಾಮ ಕಸ್ತೂರಿ ಬೀಜಗಳು ನೈಸರ್ಗಿಕವಾಗಿ ದೇಹವನ್ನು ತಂಪಾಗಿಸುವ ಗುಣ ಹೊಂದಿವೆ. ಬೇಸಿಗೆಯಲ್ಲಿ ಅಥವಾ ಅತಿಯಾದ
ಆಂಬ್ಯುಲೆನ್ಸ್ ವಾಹನ ಚಾಲಕರು ಯಾವಾಗಲು ತಮ್ಮ ಜೀವದ ಹಂಗನ್ನು ತೊರೆದು ಬೇರೊಂದು ಜೀವದ ಉಳಿವಿಗಾಗಿ ಪ್ರತಿನಿತ್ಯಲೂ ಹೋರಾಟವನ್ನು ನಡೆಸುತ್ತಲೆ ಇರುತ್ತಾರೆ. ಇಲ್ಲೊಬ್ಬ ಆಂಬುಲೆನ್ಸ್ ವಾಹನ ಚಾಲಕನೊಬ್ಬ ತನಗೆ ತುರ್ತು ಕರೆ ಬಂದಾಗ ನಡೆದುಕೊಂಡ ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಯಾಗಿದೆ. ಇದು ಯಾವ ರಾಜ್ಯದಲ್ಲಿ ನಡೆದಿದೆ ಎಂದು ವರದಿಯಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಆಂಬ್ಯುಲೆನ್ಸ್ ಚಾಲಕ ಆಸ್ಪತ್ರೆಯ ಒಳಗಡೆ ಫೋನ್ ನೋಡುತ್ತಾ
ಹೈದರಾಬಾದ್: ಎಚ್ಐವಿ ಇರುವುದಕ್ಕೆ ತನ್ನದೊಂಗಿನ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದರೆಂದು ಕೋಪಗೊಂಡ ಹುಡುಗ ಎಚ್ಐವಿ ಸೋಂಕಿತ ರಕ್ತವನ್ನು ಹುಡುಗಿಗೆ ಚುಚ್ಚಿರುವ ಆಘಾತಕಾರಿ ಘಟನೆ ಹೈದರಾಬಾದ್ನಲ್ಲಿ ವರದಿಯಾಗಿದೆ. ಮಾರ್ಚ್ 11 ರಂದು ಈ ಘಟನೆ ನಡೆದಿದ್ದು, ಆಕೆಯ ಮನೆಯಲ್ಲಿ ಆರೋಪಿ ಹುಡುಗ ಸಂತ್ರಸ್ತೆಗೆ ಹೆಚ್ಐವಿ ಸೋಂಕಿತ ರಕ್ತವನ್ನು ಬಲವಂತವಾಗಿ ಚುಚ್ಚಿದ್ದಾನೆ ಎಂದು ದೂರಲಾಗಿದೆ.ಪೊಲೀಸರ ಪ್ರಕಾರ, ಆರೋಪಿ ಮತ್ತು ಸಂತ್ರಸ್ತೆ ಸಂಬಂಧಿಕರಾಗಿದ್ದು, ಆಕೆಯ ಪೋಷಕರು ಆರಂಭದಲ್ಲಿ ತಮ್ಮ ಮಗಳ
ಬೆಂಗಳೂರು: ಆಪರೇಷನ್ ಕಮಲ ಭೀತಿ ಹಿನ್ನೆಲೆ ಡಿಕೆ ಶಿವಕುಮಾರ್ ಅವರ ಸುಪರ್ಧಿಯಲ್ಲಿರುವ ಒಡಿಸ್ಸಾದ ಶಾಸಕರನ್ನು ಭೇಟಿಯಾಗಲು ಬ್ಲಾಂಕ್ ಚೆಕ್ ಸಮೇತ ಇಬ್ಬರು ವ್ಯಕ್ತಿಗಳು ವಂಡೇರ್ಲಾ ಹೋಟೆಲ್ಗೆ ಬಂದಿದ್ದಾರೆ.ಒಡಿಸ್ಸಾದ ರಾಜ್ಯಸಭೆ ಚುನಾವಣೆ ಹತ್ತಿರುವಾಗುತ್ತಿರು ಬೆನ್ನಲೇ ಆಪರೇಷನ್ ಕಮಲ ಭೀತಿ ಹಿನ್ನೆಲೆಯಲ್ಲಿ ಒಡಿಶಾದ 8 ಮಂದಿ ಶಾಸಕರನ್ನು ಡಿಕೆಶಿ ಸುಪರ್ದಿಗೆ ಹೈಕಮಾಂಡ್ ನೀಡಿದೆ. ಇದೀಗ ವಂಡೇರ್ಲಾ ಹೋಟೆಲ್ನಲ್ಲಿರುವ ಒಡಿಸ್ಸಾ ಶಾಸಕರನ್ನು ಖರೀದಿ ಮಾಡಲು ಒಡಿಸ್ಸಾದ ಇಬ್ಬರು ವ್ಯಕ್ತಿಗಳು ಬ್ಲಾಕ್ ಚೆಕ್ ಸಮೇತ ಬಂದಿದ್ದಾರೆ.
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೂವರು ರಿಸರ್ವ್ ಸಬ್ ಇನ್ಸ್ಪೆಕ್ಟರ್ಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹೆಗ್ಗೆರೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 150ಎರಲ್ಲಿ ಕಾರು ಮತ್ತು ಲಾರಿಯ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮೀಸಲು ಸಬ್ ಇನ್ಸ್ಪೆಕ್ಟರ್ಗಳು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಮೂವರು ಮೀಸಲು ಸಬ್ ಇನ್ಸ್ಪೆಕ್ಟರ್ಗಳಾದ ಮಂಜುನಾಥ್, ಅಂಬರೀಷ್ ಮತ್ತು ಸಚಿನ್ ಎಂದು ಗುರುತಿಸಲಾಗಿದೆ. ಇದೇ ವೇಳೆ ಕಾರಿನಲ್ಲಿ ಇದ್ದ ಪಿಎಸ್ಐ ಈಶ್ವರ್ ಹಾಗೂ ರಿಸರ್ವ್ ಸಬ್ ಇನ್ಸ್ಪೆಕ್ಟರ್ ಮಹಾಂತೇಶ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಗೆ ಕೇವಲೇ ತಿಂಗಳು ಬಾಕಿ ಇದೆ. ಈ ಮಧ್ಯೆ ಎಲ್ಲ ಪಕ್ಷಗಳಿಂದ ಚುನಾವಣೆಗೆ ಬಿರುಸಿನ ಸಿದ್ಧತೆ ನಡೆಯುತ್ತಿದೆ. ಈ ಮಧ್ಯೆ ಪಿಣರಾಯಿ ವಿಜಯನ್ ಸರ್ಕಾರ ಅಧಿಕಾರ ಉಳಿಸಿಕೊಳ್ಳಲು ಟೊಂಕಕಟ್ಟಿದೆ.ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಕೇರಳದಲ್ಲಿ ಸರ್ಕಾರದ ತನ್ನ ನಿಲುವುಗಳಲ್ಲಿ ಯೂಟರ್ನ್ ಹೊಡೆದಿದೆ. ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶ ವಿಷಯದಲ್ಲಿ ತನ್ನ ಹಿಂದಿನ ನಿಲುವನ್ನು ಸರ್ಕಾರ ಬದಲಾಯಿಸಿಕೊಂಡಿದೆ.ಮಹತ್ವದ ಬೆಳವಣಿಗೆಯಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇವಾಲಯಕ್ಕೆ ಪ್ರವೇಶಕ್ಕೆ ಸಂಬಂಧಿಸಿದಂತೆ ಸಾಂಪ್ರದಾಯಿಕ ನಿರ್ಬಂಧ ಮುಂದುವರಿಸುವಿಕೆಗೆ ಬೆಂಬಲಿಸುವುದಾಗಿ ಘೋಷಿಸಿದೆ. ಈ ಮೂಲಕ ತನ್ನ ಹಿಂದಿನ ನಿಲುವಿನಿಂದ ಸರ್ಕಾರ ಹಿಂದೆ ಸರಿದಿದೆ.
ಮುಂಬೈ: ಭಾರತದಲ್ಲಿ ಎಲ್ಪಿಸಿ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬೆಳವಣಿಗೆ ನಡೆದಿದೆ. ಯುದ್ಧಪೀಡಿತ ಪ್ರದೇಶದ ಈ ಜಲಸಂಧಿಯಲ್ಲಿ ಭಾರತದ ಎರಡು ಹಡಗುಗಳಿಗೆ ಗ್ರೀನ್ ಸಿಗ್ನಲ್ ದೊರಕಿದೆ. ಈ ಮೊದಲು ಒಂದು ಹಡಗಿಗೆ ಹೊರ್ಮುಜ್ ಜಲಸಂಧಿಯಲ್ಲಿ ಹಸಿರು ನಿಶಾನೆ ತೋರಲಾಗಿದೆ. ಇದೀಗ ಮತ್ತೆರಡು ಹಡಗುಗಳು ಈ ಜಲಸಂಧಿಯನ್ನು ದಾಟಿ ಬಂದಿವೆ. ಜಲಸಂಧಿ ದಾಟಿರುವ ಭಾರತದ ಹಡಗುಗಳ ಒಟ್ಟು ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.ಜಲಸಂಧಿಯ ಪಶ್ಚಿಮ ಭಾಗದಲ್ಲಿ ಇನ್ನೂ ಭಾರತದ 22 ಹಡಗುಗಳು ತಮ್ಮ ಅವಕಾಶಕ್ಕಾಗಿ ಕಾಯುತ್ತ ನಿಂತಿವೆ. ಅವುಗಳಿಗೆ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಲು ನೆರವು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆ ಪ್ರದೇಶದ ವಿವಿಧ ದೇಶಗಳ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸುತ್ತಿದೆ.
ಮುಂಬೈ: ತವರಿನಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಬರೆದ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ಸಾಧನೆಯನ್ನು ವಿಶ್ವವೇ ಕೊಂಡಾಡುತ್ತಿದೆ. ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದ ಹಿರಿಮೆಗೆ ಭಾರತ ಪಾತ್ರವಾಗಿದೆ.ಮಾರ್ಚ್ 8ರಂದು ಅಹಮದಾಬಾದ್ನಲ್ಲಿ ನಡೆದ ಫೈನಲ್ನಲ್ಲಿ ನ್ಯೂಜಿಲೆಂಡ್ ಅನ್ನು 96 ರನ್ಗಳಿಂದ ಮಣಿಸಿದ ಭಾರತ ತಂಡ 3 ಬಾರಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡವಾಯಿತು. ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಮೊದಲ ಮತ್ತು ತವರು ನೆಲದಲ್ಲಿ ಈ ಸಾಧನೆ ಮಾಡಿದ ಮೊದಲ ತಂಡವಾಗಿತ್ತು.ವಿಶ್ವವಿಜೇತ ಭಾರತ ಕ್ರಿಕೆಟ್ ತಂಡವನ್ನು ಭಾನುವಾರ ಇಲ್ಲಿ ನಡೆಯುವ ವಾರ್ಷಿಕ ನಮನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಸಿಸಿಐ ಸನ್ಮಾನಿಸಲಿದೆ.
ನವದೆಹಲಿ: ಭಾರತದಲ್ಲಿ ಇರಾನ್ನ ಸರ್ವೋಚ್ಚ ನಾಯಕನ ಪ್ರತಿನಿಧಿ ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಅವರು ಇರಾನ್ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಭಾರತವನ್ನು ಪ್ರೀತಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.ಉಭಯ ದೇಶಗಳ ನಡುವಿನ ಐತಿಹಾಸಿಕ ಬಾಂಧವ್ಯವನ್ನು ಒತ್ತಿ ಹೇಳಿದ ಅವರು, ಭಾರತದೊಂದಿಗಿನ ಬಾಂಧವ್ಯದಲ್ಲಿ ಯಾವುದೇ ಸಂಘರ್ಷ ಅಥವಾ ಸಮಸ್ಯೆಗಳನ್ನು ಹೊಂದಲು ಇರಾನ್ ಬಯಸುವುದಿಲ್ಲ ಎಂದು ಹೇಳಿದರು. ಅವರು ಎಎನ್ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿಕೆ ನೀಡಿದರು.
ಭಾರತದ ಮಾಜಿ ಕ್ರಿಕೆಟಿಗ ಮತ್ತು ಕೋಚ್ ಸಂಜಯ್ ಬಂಗಾರ್ ಅವರ ಪುತ್ರಿ ಅನಾಯಾ ಬಂಗಾರ್ ಅವರು ತಮ್ಮ ಲಿಂಗ ದೃಢೀಕರಣದ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲನ್ನು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.ಅನಾಯಾ ಅವರು ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ಯಶಸ್ವಿ ವಜಿನೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ವಿಚಾರವನ್ನು ಅನಾಯಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ನಾನು ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ ಮತ್ತು ನಿಧಾನವಾಗಿ ವಿಷಯಗಳನ್ನು ತೆಗೆದುಕೊಳ್ಳುತ್ತಿದ್ದೇನೆ, ಆದರೆ WIH ಇಂಟರ್ನ್ಯಾಷನಲ್ ಆಸ್ಪತ್ರೆಯಲ್ಲಿ ಡಾ. ಚೆಟ್ ಮತ್ತು ತಂಡದಿಂದ ಆರೈಕೆಗಾಗಿ ನಾನು
ಮಹಾರಾಷ್ಟ್ರ: ಲಿಫ್ಟ್ನಲ್ಲಿ ಹಲವು ಭಾರೀ ಮಕ್ಕಳು ಸಿಲುಕಿ ಆಘಾತಕಾರಿ ಘಟನೆಗಳು ನಡೆದಿರುವ ವಿಡಿಯೋವನ್ನು ನಾವು ನೋಡಿದ್ದೇವೆ. ಇದೀಗ ಅಂತಹದ್ದೇ ಘಟನೆಯೊಂದು ಪುಣೆಯಲ್ಲಿ ವರದಿಯಾಗಿದೆ. ಲಿಫ್ಟ್ನೊಳಗೆ ಮಗುವನ್ನು ಹಿಡಿದುಕೊಂಡು ವ್ಯಕ್ತಿಯೊಬ್ಬರು ತಮ್ಮ ಕುಟುಂಬದೊಂದಿಗೆ ಬರುತ್ತಾರೆ. ಲಿಫ್ಟ್ನ ಒಳಗೆ ಆ ವ್ಯಕ್ತಿ ಮಗುವನ್ನು ತಮ್ಮ ಮನೆಯ ಹಿರಿಯ ಮಹಿಳೆ ಕೈಗೆ ಕೊಡುತ್ತಾರೆ. ಈ ಸಂದರ್ಭದಲ್ಲಿ ಲಿಫ್ಟ್ನ ಬಾಗಿಲು ತೆರೆಯುತ್ತದೆ. ಆಗ ಬಾಗಿಲಿನ ಜತೆಗೆಯೇ ಮಗುವಿನ ಕೈ ಹಿಂದೆ ಸರಿಯುತ್ತದೆ. ಕೈಯನ್ನು ಎಳೆಯಲು ಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ.
ಬಿಹಾರ: ಸಿಎಂ ನಿತೀಶ್ ಕುಮಾರ್ ಅವರು ತಮ್ಮ ಸಮೃದ್ಧಿ ಯಾತ್ರೆಗೆ ಸಂಬಂಧಿಸಿದ ಸಾರ್ವಜನಿಕ ಕಾರ್ಯಕ್ರಮಕ್ಕೆ ಆಗಮಿಸುವ ಕೆಲವೇ ಗಂಟೆಗಳ ಮೊದಲು ಬೇಗುಸರಾಯ್ನ ಹೆಲಿಪ್ಯಾಡ್ನಲ್ಲಿ ದಾರಿ ತಪ್ಪಿದ ಗೂಳಿಯೊಂದು ಸಿಬ್ಬಂದಿಗಳನ್ನು ಅಟ್ಟಾಡಿಸಿಗೊಂಡು ಓಡಾಡುತ್ತಿರುವ ಘಟನೆಯೂ ಭಯ ಹುಟ್ಟಿಸುವಂತಿದೆ. ವೀಡಿಯೊದಲ್ಲಿ ಸೆರೆಹಿಡಿಯಲಾದ ಅನಿರೀಕ್ಷಿತ ಕ್ಷಣವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತ್ವರಿತವಾಗಿ ಪ್ರಸಾರವಾಯಿತು. ಬಿಐಎಡಿಎ ಕ್ಯಾಂಪಸ್ ಬರೌನಿಯಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ನಲ್ಲಿ ಈ ಘಟನೆ ನಡೆದಿದೆ. ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಲ್ಯಾಂಡಿಂಗ್ಗಾಗಿ ಅಧಿಕಾರಿಗಳು ಈಗಾಗಲೇ ಆ ಪ್ರದೇಶದಲ್ಲಿ ಭದ್ರತೆಯನ್ನು ಒದಗಿಸಿದ್ದರು.
ಬೆಂಗಳೂರು: ಕೆಲ ದಿನಗಳಷ್ಟೇ ಅರ್ಜುನ್ ತೆಂಡೂಲ್ಕರ್ ಅವರು ಸಾನಿಯಾ ಚಾಂಧೋಕ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸ್ನೇಹಿತೆಯಾಗಿದ್ದ ಸಾನಿಯಾಳನ್ನು ಅತ್ತಿಗೆಯಾಗಿ ಸಾರಾ ತೆಂಡೂಲ್ಕರ್ ಅವರು ಸಿಹಿಯಾದ ಮಾತಿನಿಂದ ಸ್ವಾಗತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರಾ ತೆಂಡೂಲ್ಕರ್ ಅವರು ಅತ್ತಿಗೆಯನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಿ, ಅಣ್ಣನ ಬಗ್ಗೆ ಕಾಳಜಿ ವಹಿಸಿದ ರೀತಿಗೆ ಎಲ್ಲರ ಮನ ಗೆದ್ದರು.
44 ಆದರೂ ಇನ್ನು ಬ್ಯಾಚುಲರ್ ಆಗಿರುವ ಅನುಷ್ಕಾ ಶೆಟ್ಟಿ ಅವರ ಮದುವೆ ವಿಚಾರ ಆಗಾಗ ಮುನ್ನೆಲೆಗೆ ಬರುತ್ತಿರುತ್ತದೆ. ಇದೀಗ ಮತ್ತೇ ತುಳುನಾಡ ಬೆಡಗಿಗೆ ಕಂಕಣ ಭಾಗ್ಯ ಕೂಡಿಬಂದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹಲವಾರು ವರ್ಷಗಳಿಂದ, ಆಕೆಯ ಸಂಭವನೀಯ ವಿವಾಹದ ಬಗ್ಗೆ ವರದಿಗಳು ಮಾಧ್ಯಮಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಪತ್ರಕರ್ತರು ಈ ಹಿಂದೆ ಅನುಷ್ಕಾ ಅವರನ್ನು ಮದುವೆಯ ಬಗ್ಗೆ ಕೇಳಿದಾಗಲೆಲ್ಲಾ ಅವರು ಯಾವುದೇ ಮದುವೆಯ ಯೋಜನೆಯನ್ನು ಸ್ಪಷ್ಟವಾಗಿ ದೃಢಪಡಿಸಲಿಲ್ಲ, ಇದು ಅವರ ವೈಯಕ್ತಿಕ ಜೀವನದ ಸುತ್ತಲಿನ ರಹಸ್ಯ ಮತ್ತು ಕುತೂಹಲವನ್ನು ಹೆಚ್ಚಿಸಿದೆ.
ಬೆಂಗಳೂರು: ರಾಜಕೀಯದಲ್ಲಿ ತನ್ನಂತ್ತೆ ಮಗನನ್ನು ಬೆಳೆಸಿ ಎಂದ ಸಿದ್ದರಾಮಯ್ಯಗೆ ಕೌಂಟರ್ ಕೊಟ್ಟ ವಿಪಕ್ಷ ನಾಯಕ ಆರ್ ಅಶೋಕ್ ಅವರು ಇದೇನೂ ರಾಜರ ಆಡಳಿತನಾ ಎಂದು ಪ್ರಶ್ನೆ ಮಾಡಿದ್ದಾರೆ. ಮೈಸೂರು ಭೇಟಿ ವೇಳೆ ಸಿದ್ದರಾಮಯ್ಯನವರು ಯತೀಂದ್ರನನ್ನು ಬೆಂಬಲಿಸುವಂತೆ ಸಿಎಂ ಸಿದ್ದರಾಮಯ್ಯ ಹೇಳಿಕೊಂಡಿದ್ದರು. ಈ ಹೇಳಿಕೆ ಸಂಬಂದ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅಶೋಕ್ ಅವರು, ಸಿದ್ದರಾಮಯ್ಯ ಅವರು ನಾನು ಸಮಾಜವಾದಿ ಅಲ್ಲ. ಜಾತಿವಾದಿ ಅಲ್ಲ. ಕುಟುಂಬವಾದಿ ಅಲ್ಲ ಅಂತಿದ್ರು. ನಿನ್ನೆ ಇವರ ಮಗನನ್ನ ನೋಡಿಕೊಳ್ಳಿ ಅಂತ ಹೇಳಿದ್ದಾರೆ. ಮುಂದೊಂದು ದಿನ ಮೊಮ್ಮಗನನ್ನೂ ನೋಡಿಕೊಳ್ಳಿ ಎಂದು ಹೇಳುತ್ತಾರೆ.
ಎಂಥಾ ಕಷ್ಟದಲ್ಲಿ ಈ ಮಕ್ಕಳು ಓದುತ್ತಿದ್ದಾರೆಂದರೆ ಇವರನ್ನು ನೋಡಿ ಮರುಗಿದ ನೆಟ್ಟಿಗರು ನಿಜವಾಗಿಯೂ ಮೀಸಲಾತಿ ಇಂತಹ ಮಕ್ಕಳಿಗೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ವಿಶ್ವೇಶ್ವರಯ್ಯನವರು ಬೀದಿ ದೀಪದ ಬೆಳಕಿನಲ್ಲಿ ಓದಿ ವಿದ್ಯಾವಂತರಾದರಂತೆ ಎಂದು ನಾವು ಅವರ ಸಾಹಸಗಾಥೆಯನ್ನು ಕೇಳುತ್ತೇವೆ. ಈಗಿನ ಕಾಲದಲ್ಲೂ ಈಗಲೂ ಕೆಲವು ಮಕ್ಕಳು ಓದಿಗಾಗಿ ಬಡತನದಲ್ಲೂ ಕಷ್ಟಪಡುತ್ತಾರೆ. ಅಂತಹದ್ದೇ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರು ಹೆಣ್ಣು ಮಕ್ಕಳು ತರಕಾರಿ ಗಾಡಿಯ ಕೆಳಗೆ ಇರುವ ಸಣ್ಣ ಡ್ರಾಯರ್ ನಲ್ಲಿ ಕೂತಿರುತ್ತಾರೆ.
ಬೆಂಗಳೂರು: ನಾಲ್ಕು ತಿಂಗಳ ಹಿಂದೆ ನಾಯಿಯಿಂದ ಕಚ್ಚಿಸಿಕೊಂಡಿದ್ದ ಬಾಲಕನೊಬ್ಬ ನಾಯಿಯಂತೆ ವರ್ತಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಭಯವನ್ನು ಹುಟ್ಟಿಸುತ್ತಿದೆ. ಮಿರ್ಜಾಪುರದಲ್ಲಿ ನಾಲ್ಕು ತಿಂಗಳ ಹಿಂದೆ ನಾಯಿ ಕಚ್ಚಿದೆ. ಆ ಬಳಿಕ ರೇಬಿಸ್ ಲಸಿಕೆ ಮಾತ್ರ ನೀಡಲಾಗಿತ್ತು. ಇದೀಗ ಬಾಲಕ
ಕಾಸರಗೋಡು: ದಂಪತಿಯೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಮೇಲ್ಪರಂಬ ಪೊಲೀಸ್ ಠಾಣಾ ವ್ಯಾಪ್ತಿಯ ಪೊಯಿನಾಚಿಯಲ್ಲಿ ನಡೆದಿದೆ.ಮೃತರನ್ನು ಪೊಯಿನಾಚಿ ಪರಂಬ ನಿವಾಸಿಗಳಾದ ವೇಣುಗೋಪಾಲನ್ ನಾಯರ್ (55) ಮತ್ತು ಅವರ ಪತ್ನಿ ಸ್ಮಿತಾ (45) ಎಂದು ಗುರುತಿಸಲಾಗಿದೆ.ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಅವರ ಏಕೈಕ ಪುತ್ರ ಎಂ ಶಿವಾನಂದನ್ (19) ಎರಡು ತಿಂಗಳ ಹಿಂದೆ ರೈಲಿಗೆ ಸಿಲುಕಿ o
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಎಂಬಲ್ಲಿ ಶುಕ್ರವಾರ ರಾತ್ರಿ ಎರಡು ಬೈಕ್ಗಳು ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರತಿಭಾವಂತ ಯುವ ಛಾಯಾಗ್ರಾಹಕರೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಶಂಭೂರು ನಿವಾಸಿ ರಕ್ಷಿತ್ ಶೆಟ್ಟಿ (43) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ರಕ್ಷಿತ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 14ರ ಶನಿವಾರದಂದು ಮೃತಪಟ್ಟಿದ್ದಾರೆ.ರಕ್ಷಿತ್ ಶೆಟ್ಟಿ ಛಾಯಾಗ್ರಾಹಕರ ಸಂಘದ ಬಂಟ್ವಾಳ ಘಟಕದ ಸಕ್ರಿಯ ಸದಸ್ಯರಾಗಿದ್ದರು ಮತ್ತು ಅತ್ಯುತ್ತಮ ವೀಡಿಯೊಗ್ರಾಫರ್
ನವದೆಹಲಿ: ಇನ್ನೇನು ಐಪಿಎಲ್ 2026 ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಇದರ ಬೆನ್ನಲ್ಲೇ ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣೆ ಅವರು ನೀಡಿರುವ ಹೇಳಿಕೆ ಭಾರೀ ಎಂಎಸ್ ಧೋನಿ ಅಭಿಮಾನಿಗಳಿಗೆ ಭಾರೀ ಬಿಗ್ಶಾಕ್ ನೀಡಿದೆ. ಎಂಎಸ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ನಲ್ಲ ಆಟವಾಡುವುದನ್ನು ಈ ವರ್ಷದಲ್ಲಿ ಮಾತ್ರ ನೋಡಬಹುದು ಎನ್ನುವ ಮೂಲಕ ಮುಂಬರುವ ವರ್ಷಕ್ಕೆ ಧೋನಿ ಗುಡ್ಬೈ ಹೇಳುತ್ತಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಬೆಂಗಳೂರು: ಚಿಕ್ಕ ಮಗು ಸೈಕಲ್ನಲ್ಲಿ ಬಂದು ಆಕಸ್ಮಿಕವಾಗಿ ನಿಲ್ಲಿಸಿದ್ದ ಬೈಕ್ಗೆ ಗುದ್ದಿದ್ದರಿಂದ ಬೈಕ್ನ ನಂಬರ್ ಪ್ಲೇಟ್ ಮುರಿದಿದೆ. ಭಯದಿಂದ ಓಡಿಹೋಗುವ ಬದಲು, ಮಗು ಅಲ್ಲಿಯೇ ಉಳಿದು, ಬೈಕ್ ಸವಾರನೊಂದಿಗೆ ಅದನ್ನು ಸರಿಪಡಿಸಲು ನೋಡಿದ್ದಾನೆ. ಬಾಲಕನ ನಡವಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೈಕಲ್ನಲ್ಲಿ ಬರುತ್ತಿದ್ದಾಗ ಅಲ್ಲೇ ನಿಲ್ಲಿಸಿದ್ದ ಬೈಕ್ಗೆ ಬಾಲಕನೊಬ್ಬ ಗುದ್ದಿದ್ದು, ಈ ವೇಳೆ ಬೈಕ್ನ ನಂಬರ್ ಪ್ಲೇಟ್ ಕೆಳಗೆ ಬಿದ್ದಿದೆ. ಇದರಿಂದ ಗಾಬರಿಕೊಂಡ ಬಾಲಕ ಅದನ್ನು ಮತ್ತೇ ಜೋಡಿಸಲು ಯತ್ನಿಸಿದ್ದಾನೆ. ಆದರೆ ವಿಫಲವಾಗಿದ್ದಾನೆ.
ಕೊಪ್ಪಳ: ಸಚಿವ ಸ್ಥಾನ ಕೇಳುವ ಅರ್ಹತೆ ಎಲ್ಲ ಶಾಸಕರಿಗೂ ಇದ್ದು, ಅದನ್ನೂ ತಪ್ಪು ಎಂದು ನಾನು ಹೇಳುವುದಿಲ್ಲ. ರೂಟೇಷನ್ ಪ್ರಕಾರ ಮಾಡಿಕೊಟ್ಟಲ್ಲಿ ಎಲ್ಲರಿಗೂ ನ್ಯಾಯ ಸಿಕ್ಕ ಹಾಗೇ ಆಗುತ್ತದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹೊಸಬರು ಅವಕಾಶ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ವರಿಷ್ಠರು ಈ ಕುರಿತು ನಿರ್ಧಾರವನ್ನು ಕೈಗೊಳ್ಳುತ್ತಾರೆ. ಶಾಸಕರ ಭೋಜನಕೂಟಕ್ಕೆ ನನಗೂ ಆಹ್ವಾನವಿತ್ತು. ವೈಯಕ್ತಿಕ ಕಾರಣಕ್ಕೆ ಹೋಗಲಿಲ್ಲ. ಹೈಕಮಾಂಡ್ ಸಚಿವ ಸ್ಥಾನದ ಅವಕಾಶ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಅಭಿಪ್ರಾಯ ಹೊರಹಾಕಿದರು.
ಬೆಂಗಳೂರು: ಪೋಷಕರಲ್ಲಿ ಕನ್ನಡದಲ್ಲಿ ಉತ್ತರಿಸಿ ಎಂದಿದಿದ್ದಕ್ಕೆ ಶಿಕ್ಷಕಿಯೊಬ್ಬರು ನನಗೆ ಕನ್ನಡ ಬೇಡವೆಂದು ಅಹಂನಿಂದ ಉತ್ತರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಯಾವಾ ಜಿಲ್ಲೆಯಲ್ಲಿ ನಡೆದಿದೆ ಎಂದು ಇನ್ನೂ ತಿಳಿದುಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಪೋಷಕರು ತನ್ನ ಮಗನನ್ನು ಯಾಕೆ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷಿಸಿದ್ದಾರೆಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಶಿಕ್ಷಕಿ ಆತ ಪಾಠ ಕಲಿತಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು: ಪಾಕಿಸ್ತಾನ, ಬಾಂಗ್ಲಾ ಪ್ರಜೆಗಳು ನಮ್ಮ ಮತದಾರರ ಪಟ್ಟಿಗೆ ಸೇರಿದರೆ ಅದು ದೇಶದ ಭದ್ರತೆಗೆ ಅಪಾಯಕಾರಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದ್ದಾರೆ.ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ಕಳ್ಳ ಓಟುಗಳನ್ನು ಸೇರಿಸಲು ಅವಕಾಶ ನೀಡಬಾರದು. ಪಾಕಿಸ್ತಾನ, ಬಾಂಗ್ಲಾ ದೇಶದವರು ಬಹಳಷ್ಟು ಜನರು ಕರ್ನಾಟಕಕ್ಕೆ ಬಂದಿದ್ದಾರೆ. ಅವರು ಈ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡರೆ ಖಾಯಂ ನಾಗರಿಕರಾಗುತ್ತಾರೆ. ಇದು ದೇಶದ ಭದ್ರತೆಗೆ ಅಪಾಯಕಾರಿ ಎಂದು ತಿಳಿಸಿದರು. ಇದರ ಕುರಿತು ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಕಾರ್ಯಾಗಾರದಲ್ಲಿ ಚರ್ಚೆ ಆಗಿದೆ. ನಾನು ಕೂಡ ಪಾಲ್ಗೊಂಡಿದ್ದೇನೆ ಎಂದರು.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಏರುತ್ತಲೇ ಇದ್ದು, ಆರೋಗ್ಯವನ್ನು ಸಮತೋಲದನದಲ್ಲಿಡಲು ಸಾಕಷ್ಟು ನೀರನ್ನು ಸೇವಿಸುವುದು ಉತ್ತಮ. ಇನ್ನೂ ಈ ಸಮಯದಲ್ಲಿ ದೇಹವನ್ನು ಮತ್ತಷ್ಟು ತಂಪಾಗಿರಿಸಲು ಎಳನೀರು ಸೇವನೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಎಳನೀರು ಪ್ರಕೃತಿ ನಮಗೆ ನೀಡಿರುವ ಅದ್ಭುತ ಪಾನೀಯ. ಇದನ್ನು ದಿನನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಅವುಗಳ ಪಟ್ಟಿ ಇಲ್ಲಿದೆ.ಎಳನೀರಿನ ಪ್ರಮುಖ ಪ್ರಯೋಜನಗಳು:
ನವದೆಹಲಿ: ಮಧ್ಯಪ್ರಾಚ್ಯ ರಾಷ್ಟ್ರದಲ್ಲಿನ ಯುದ್ಧದ ಸನ್ನಿವೇಶದಿಂದ ದೇಶದಲ್ಲಿ ಉಂಟಾಗಿರುವ ಎಲ್ ಪಿಜಿ ಅಭಾವದ ಬಗ್ಗೆ ಪ್ರಧಾನಿ ಮೋದಿ ಮಹತ್ವದ ಹೇಳಿಕೆ ನೀಡಿದ್ದಾರೆ. ಯುದ್ಧದಿಂದ ಉಂಟಾದ ಜಾಗತಿಕ ಬಿಕ್ಕಟ್ಟಿನ ಪ್ರಭಾವದಿಂದ ಯಾವುದೇ ದೇಶವೂ ಹೊರತಾಗಿಲ್ಲ. ಎಲ್ಲ ದೇಶಗಳೂ ತೈಲ, ಅನಿಲ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಈ ಬಿಕ್ಕಟ್ಟನ್ನು ಪರಿಹರಿಸಲು ಭಾರತವು ಲಭ್ಯವಿರುವ ಯಾವುದೇ ಅವಕಾಶವನ್ನೂ ಬಿಡುತ್ತಿಲ್ಲ ಮತ್ತು ವಿವಿಧ ಹಂತಗಳಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇತ್ತೀಚೆಗೆ, ನಾನು ಪ್ರಪಂಚದಾದ್ಯಂತದ ಹಲವಾರು ದೇಶಗಳ ಉನ್ನತ ನಾಯಕರೊಂದಿಗೆ ಇದರ ಬಗ್ಗೆ ಚರ್ಚಿಸಿದ್ದೇನೆ.
ಟೆಹ್ರಾನ್: ತನ್ನ ತೈಲ ಸಂಗ್ರಹದ ಹೃದಯ ಭಾಗಕ್ಕೇ ದಾಳಿ ಮಾಡಿದ ಅಮೆರಿಕಾ ಮೇಲಿನ ಸಿಟ್ಟಿಗೆ ಇರಾನ್ ಕೊಟ್ಟ ಮಾತನ್ನು ಮುರಿದು ದಾಳಿ ಮುಂದುವರಿಸಿದೆ. ಇರಾನ್ ನ ಅತೀ ದೊಡ್ಡ ತೈಲ ಸಂಗ್ರಹ ದ್ವೀಪ ಖರ್ಗ್ ನಲ್ಲಿರುವ ಸೇನಾ ನೆಲೆ ಮೇಲೆ ಅಮೆರಿಕಾ ಹಿಂದೆಂದೂ ಕಾಣದ ದಾಳಿ ನಡೆಸಿತ್ತು. ಇದು ಇರಾನ್ ನ ಕಿರೀಟ ಎಂದೇ ಖ್ಯಾತಿ ಪಡೆದಿದೆ. ಇದರಿಂದ ಸಿಟ್ಟಿಗೆದ್ದಿರುವ ಇರಾನ್ ಈಗ ಅಮೆರಿಕಾ ಮೇಲೆ ಪ್ರತೀಕಾರ ತೀರಿಸಲು ಮುಂದಾಗಿದೆ.
ಸಿಲ್ಚಾರ್: ಕಾಂಗ್ರೆಸ್ ಭಾರತ ವಿರೋಧಿಗಳ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ, ಜನರಲ್ಲಿ ಯುದ್ಧದ ಸಂದರ್ಭದಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಇಂದು ವಾಗ್ದಾಳಿ ನಡೆಸಿದ್ದಾರೆ. ಅಸ್ಸಾಂನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಭಾರತದ ಅಭಿವೃದ್ಧಿಯನ್ನು ಕಾಂಗ್ರೆಸ್ ಸಹಿಸುತ್ತಿಲ್ಲ. ದೇಶವಿರೋಧಿಗಳ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಸನ್ನಿವೇಶವಿರುವಾಗ ಭಾರತದಲ್ಲಿ ಕಾಂಗ್ರೆಸ್ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ.
ಇತ್ತೀಚೆಗೆ ಬಹುತೇಕರಿಗೆ ಮಲಬದ್ಧತೆ ಸಮಸ್ಯೆಯಿದೆ. ಮಲಬದ್ಧತೆ ಸಮಸ್ಯೆ ಇರುವವರು ಹಣ್ಣು ಸೇವನೆ ಮಾಡಲು ಸೂಕ್ತ ಸಮಯ ಯಾವುದು ಗೊತ್ತಾ? ತಜ್ಞರು ಹೇಳುವುದು ಏನು ನೋಡಿ. ಮಲಬದ್ಧತೆ ಇರುವವರು ತಮ್ಮ ಆಹಾರ ಮತ್ತು ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಬೇಕು. ಹೆಚ್ಚು ಹೊತ್ತು ಕೂತಲ್ಲೇ ಕೂರುವುದನ್ನು ಅವಾಯ್ಡ್ ಮಾಡಬೇಕು. ಪ್ರತಿನಿತ್ಯ ಹದ ಬಿಸಿನೀರಿನಲ್ಲಿ ಕೂತು ಗುದದ್ವಾರದ ಅಂಗಾಂಶಗಳು ಮೃದುವಾಗುವಂತೆ ನೋಡಿಕೊಳ್ಳಬೇಕು. ಇನ್ನು ಆಹಾರದಲ್ಲಿ ಸಾಕಷ್ಟು ಫೈಬರ್ ಅಂಶ ಸೇವನೆ ಮಾಡುವುದು ಮುಖ್ಯ. ಅದರಲ್ಲೂ ಪಪ್ಪಾಯ, ಪಚ್ಚೆ ಬಾಳೆಹಣ್ಣು, ಕಿತ್ತಳೆ, ಮೂಸಂಬಿ ಹಣ್ಣುಗಳನ್ನು ಹೆಚ್ಚು ಸೇವನೆ ಮಾಡಬೇಕು.
ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದ ಎದೆ ಝಲ್ಲೆನಿಸುವ ಆಕ್ಸಿಡೆಂಟ್ ವಿಡಿಯೋವೊಂದು ಈಗ ವೈರಲ್ ಆಗಿದ್ದು ರಸ್ತೆ ಸುರಕ್ಷತೆ ಬಗ್ಗೆ ಜನರು ಎಚ್ಚರಿಕೆಯಿಂದಿರುವುದು ಮುಖ್ಯ ಎಂದು ಸಾರಿ ಹೇಳುತ್ತಿದೆ. ರಸ್ತೆಯಲ್ಲಿ ಸಂಚರಿಸುವಾಗ ಮೈ ಎಲ್ಲಾ ಕಣ್ಣಾಗಿರಬೇಕು, ಹೆಲ್ಮೆಟ್ ಧರಿಸಿಯೇ ಚಾಲನೆ ಮಾಡಬೇಕು ಎಂದೆಲ್ಲಾ ನಿಯಮಗಳು ಹೇಳುತ್ತವೆ. ಆದರೆ ನಿಯಮಗಳನ್ನು ಪಾಲಿಸುವವರೇ ಕಡಿಮೆ. ಜೊತೆಗೆ ಅಜಾಗರೂಕತೆಯ ಚಾಲನೆ ಬೇರೆ. ಇಂತಹದ್ದೇ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದ ಅಪಘಾತದ ದೃಶ್ಯ ಇದಾಗಿದೆ. ಮೋಟಾರ್ ಬೈಕ್ ಸವಾರನೊಬ್ಬ 40 ಕಿ.ಮೀ ವೇಗದಲ್ಲಿ ಹೆಲ್ಮೆಟ್ ಕೂಡಾ ಧರಿಸದೇ ಸಂಚರಿಸುತ್ತಿರುತ್ತಾನೆ.
ಬೆಂಗಳೂರು: ಕಲಬುರಗಿ ತಲಾ ಆದಾಯ ಇಳಿಕೆಯಾಗಿದೆ ಎಂಬ ವರದಿಗಳ ಬೆನ್ನಲ್ಲೇ ಬಿಜೆಪಿ ನಾಯಕ ಸಿಟಿ ರವಿ ಸಚಿವ ಪ್ರಿಯಾಂಕ್ ಖರ್ಗೆಗೆ ಟಾಂಗ್ ಕೊಟ್ಟಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಗ್ಗೆ ಮಾತನಾಡಿದವರು ಎಲ್ಲೋದ್ರು ಎಂದು ಕೇಳಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಿಯಾಂಕ್ ಖರ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐಟಿ ಬಿಟಿ ಕಂಪನಿಗಳು ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿರುವುದು ಕೋಮುವಾದಿ ಸಂಘಟನೆಗಳಿಂದ ಎಂದು ಟೀಕಿಸಿದ್ದರು. ಅವರ ಹೇಳಿಕೆ ಭಾರೀ ಟ್ರೋಲ್ ಗೊಳಗಾಗಿತ್ತು. ಇದೀಗ ಪ್ರಸಕ್ತ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಕಲಬುರಗಿ ತಲಾ ಆದಾಯದಲ್ಲಿ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ಈ ವಾರದ ಆರಂಭದಲ್ಲೇ ಪರಿಶುದ್ಧ ಚಿನ್ನದ ದರ ಸತತವಾಗಿ ಇಳಿಕೆಯಾಗುತ್ತಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,65,745.00 ರೂ.ಗಳಿತ್ತು. ಆದರೆ ಇಂದು ಇಳಿಕೆಯಾಗಿದ್ದು 1,64,795.00 ರೂ.ಗಳಷ್ಟಿದೆ.
ಗರ್ಭಿಣಿ ನಾಯಿಯನ್ನು ರಸ್ತೆಯಲ್ಲಿ ಎಳೆದುಕೊಂಡು ತಾವು ಬೈಕ್ ನಲ್ಲಿ ಸವಾರಿ ಮಾಡಿದ ದಂಪತಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಆಕ್ರೋಶ ವ್ಯಕ್ತವಾಗಿದೆ. ಕೆಲವು ಸಮಯದ ಹಿಂದೆ ಕರ್ನಾಟಕದಲ್ಲೂ ಇಂತಹ ಘಟನೆಯಾಗಿತ್ತು. ಬೈಕ್ ಗೆ ನಾಯಿಯನ್ನು ಕಟ್ಟಿ ಮಾಲಿಕ ಎಳೆದೊಯ್ದ ಘಟನೆ ವೈರಲ್ ಆಗಿತ್ತು. ಮನುಷ್ಯ ತನ್ನ ಸಾಕು ಪ್ರಾಣಿಯ ಮೇಲೆ ಇಷ್ಟು ಕ್ರೌರ್ಯತೆ ತೋರುವುದು ಯಾಕೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅಂತಹದ್ದೇ ಘಟನೆ ಪಶ್ಚಿಮ ಬಂಗಾಲದ ಕಲ್ಯಾಣಿ ಎಕ್ಸ್ ಪ್ರೆಸ್ ವೇನಲ್ಲಿ ನಡೆದಿದೆ. ದಂಪತಿ ಬೈಕ್ ನಲ್ಲಿ ತೆರಳುತ್ತಾರೆ. ನಾಯಿಯನ್ನು ಸಂಕೋಲೆಯಲ್ಲಿ ಹಿಡಿದು ರಸ್ತೆಯಲ್ಲಿ ಎಳೆದೊಯ್ಯುತ್ತಾರೆ.
ಅಭಿಮಾನಿಗಳಿಂದ ಅಣ್ಣಾವ್ರು ಎಂದು ಕರೆಯಿಸಿಕೊಳ್ಳುವ ಡಾ ರಾಜ್ ಕುಮಾರ್ ಕೇವಲ ನಟನಾಗಿ ಮಾತ್ರವಲ್ಲ, ನಿಜ ಜೀವನದಲ್ಲೂ ತಮ್ಮ ಆದರ್ಶಗಳಿಂದ ಜನರಿಗೆ ಅನುಕರಣೀಯರಾಗಿದ್ದರು. ಸಮಸ್ಯೆಗಳನ್ನು ಎದುರಿಸುವಾಗ ಅಣ್ಣಾವ್ರ ಈ ಮಾತು ನಮಗೆ ಪಾಠವಾಗಬೇಕು. ಅಣ್ಣಾವ್ರು ತೆರೆ ಮೇಲೆ ಮೆರೆದು ಸಾಕಷ್ಟು ಜನರ ಪ್ರೀತಿ ಸಂಪಾದಿಸಿರಬಹುದು. ಹಾಗಂತ ಅವರಿಗೆ ಕಷ್ಟಗಳೇ ಇರಲಿಲ್ಲ ಎಂದಲ್ಲ. ಜೀವನದಲ್ಲಿ ಅವರೂ ಸಾಮಾನ್ಯರಂತೇ ಹಲವು ಏಳು-ಬೀಳುಗಳನ್ನು ಎದುರಿಸಿದ್ದಾರೆ. ಆದರೆ ಅದನ್ನೆಲ್ಲವನ್ನೂ ಅವರು ಎದುರಿಸಿ ಯಶಸ್ವೀ ಜೀವನ ನಡೆಸಿದವರು. ಅಣ್ಣಾವ್ರಿಗೆ ಕೊನೆ ಕೊನೆಯಲ್ಲಿ ಮೊಣಕಾಲಿನ ಸಮಸ್ಯೆಯಾಗಿತ್ತು.
ವಿವಾಹ ಮಂಟಪದಲ್ಲೇ ಹಾಲಿವುಡ್ ಸ್ಟೈಲ್ ನಲ್ಲಿ ವಧು, ವರ ಲಿಪ್ ಲಾಕ್ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ. ಭಾರತೀಯ ಪದ್ಧತಿ ಪ್ರಕಾರ ಅದರಲ್ಲೂ ಹಿಂದೂ ಸಂಸ್ಕೃತಿ ಪ್ರಕಾರ ಮದುವೆ ಕಾರ್ಯಕ್ರಮ ನಡೆದಿರುತ್ತದೆ. ಹಿಂದೂ ಮದುವೆಗಳಲ್ಲಿ ಅದರಲ್ಲೂ ವಿಶೇಷವಾಗಿ ಭಾರತೀಯ ಸಂಪ್ರದಾಯದ ಮದುವೆಗೆ ಅದರದ್ದೇ ಆದ ಗೌರವವಿದೆ. ವಿದೇಶೀಯರೂ ಕೆಲವೊಮ್ಮೆ ಇಲ್ಲಿನ ಸಂಸ್ಕೃತಿಗೆ ಮಾರು ಹೋಗಿ ಮದುವೆಯಾಗುವುದಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ವಧು ವರರು ಮದುವೆ ಬಳಿಕ ಮದುವೆ ಮಂಟಪದಲ್ಲೇ ಫೋಟೋ, ವಿಡಿಯೋಗಾಗಿ ಲಿಪ್ ಲಾಕ್ ಮಾಡುತ್ತಾರೆ.
ನವದೆಹಲಿ: ಅದಾನಿ ಜೀ ಕಂಪನಿಗೆ ಹೋಗಿ ನೋಡಿ. ಅಲ್ಲಿ ಯಾರೊಬ್ಬರೂ ದಲಿತರು ಮೇಲ್ದರ್ಜೆಯ ಅಧಿಕಾರದಲ್ಲಿ ಇಲ್ಲ ಎಂದು ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾಗಿದೆ. ಖಾನ್ಸಿ ರಾಮ್ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಮೀಸಲಾತಿ ಬಗ್ಗೆ ಮಾತನಾಡಿದ್ದರು. ಈ ವೇಳೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನೂ ನಡೆಸಿದ್ದಾರೆ. ಕೆಲವೇ ಮೇಲ್ವರ್ಗದ ಜನರ ಕೈಯಲ್ಲಿ ದೇಶದ ಆಡಳಿತವಿದೆ ಎಂದಿದ್ದಾರೆ. ‘ಅದಾನಿ ಕಂಪನಿಯನ್ನೇ ತೆಗೆದುಕೊಳ್ಳಿ. ಅಲ್ಲಿ ಯಾರಾದರೂ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದವರು ಸಿಇಒ ಅಥವಾ ಮೇಲ್ದರ್ಜೆಯ ಅಧಿಕಾರಿಗಳು ಸಿಗುತ್ತಾರಾ?’ ಎಂದು ಪ್ರಶ್ನೆ ಮಾಡಿದ್ದಾರೆ.
ಚೆನ್ನೈ: ಅಮ್ಮ ಬೇಡ ಎಂದು ದೂರವಾಗಿರುವ ಅಪ್ಪನ ಹೆಸರೂ ನನ್ನ ಜೊತೆಗೆ ಬೇಡ ಎಂದು ದಳಪತಿ ವಿಜಯ್ ಪುತ್ರ ಜೇಸನ್ ನಿರ್ಧರಿಸಿದ್ದಾರೆ. ತಮ್ಮ ಹೆಸರಿನ ಜೊತೆಗಿದ್ದ ತಂದೆಯ ಸರ್ ನೇಮ್ ಕೈ ಬಿಡಲು ತೀರ್ಮಾನಿಸಿದ್ದಾರೆ. ದಳಪತಿ ವಿಜಯ್ ಮತ್ತು ಪತ್ನಿ ಸಂಗೀತಾ ವಿಜಯ್ ವಿಚ್ಛೇದನತ್ತ ಮುಖ ಮಾಡಿದ್ದಾರೆ. ಪತಿ ಬೇರೊಬ್ಬ ನಟಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರ ಬೆನ್ನಲ್ಲೇ ವಿಜಯ್ ಪುತ್ರ ಜೇಸನ್ ಇನ್ ಸ್ಟಾಗ್ರಾಂನಲ್ಲಿ ತಂದೆಯ ಖಾತೆಯನ್ನು ಅನ್ ಫಾಲೋ ಮಾಡಿಕೊಂಡಿದ್ದರು.
ಟೆಹ್ರಾನ್: ಇರಾನ್ ನ ತೈಲ ವ್ಯವಹಾರದ ಹೃದಯ ಭಾಗ ಖಾರ್ಗ್ ದ್ವೀಪದ ಮೇಲೆ ಅಮೆರಿಕಾ ಭೀಕರ ಬಾಂಬ್ ದಾಳಿ ನಡೆಸಿದೆ. ಸ್ವತಃ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಇದು ಮಧ್ಯಪ್ರಾಚ್ಯ ಇತಿಹಾಸದಲ್ಲೇ ಭೀಕರ ದಾಳಿ ಎನ್ನಲಾಗಿದೆ. ಅಮೆರಿಕಾದ ಸೆಂಟ್ರಲ್ ಕಮಾಂಡ್ ಇರಾನ್ ನ ತೈಲ ಹೃದಯ ಭಾಗವಾದ ಖಾರ್ಗ್ ದ್ವೀಪದ ಮೇಲೆ ದಾಳಿ ನಡೆಸಿದ್ದು ಅಲ್ಲಿನ ಪ್ರತಿಯೊಂದು ಮಿಲಿಟರಿ ಗುರಿಯನ್ನು ಸಂಪೂರ್ಣವಾಗಿ ನಾಶ ಮಾಡಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಈ ವಾರವಿಡೀ ಬಿಸಿಲಿನ ವಾತಾವರಣವಿತ್ತು. ವಾರಂತ್ಯಕ್ಕೆ ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಈ ವಾರ ರಾಯಚೂರು, ಬೀದರ್, ಕಲಬುರಗಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ವಿಪರೀತ ಬಿಸಿಲಿನ ಝಳ ಕಂಡುಬಂದಿತ್ತು. ಈ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಲೇ ಇತ್ತು. ವಾರಂತ್ಯಕ್ಕೆ ಮತ್ತಷ್ಟು ಬಿಸಿಲು ಹೆಚ್ಚಾಗಲಿದೆ. ರಾಜ್ಯದಲ್ಲಿ ಇಂದು ಮತ್ತು ನಾಳೆ ಗರಿಷ್ಠ ತಾಪಮಾನ 33 ಡಿಗ್ರಿಯಷ್ಟಾಗಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿಯಷ್ಟು ಕಂಡುಬರಲಿದೆ. ಈ ಎರಡೂ ದಿನಗಳಲ್ಲಿ ಶುಭ್ರ ಆಕಾಶವಿರಲಿದ್ದು ಹಗಲಿಡೀ ಬಿಸಿಲಿನ ವಾತಾವರಣವಿರಲಿದೆ. ಮಳೆಯ ಸಂಭವವಿಲ್ಲ.
ಇಂದು ಶನಿವಾರವಾಗಿದ್ದು ಶನಿದೇವನಿಗೆ ವಿಶೇಷವಾದ ದಿನವಾಗಿದೆ. ಜಾತಕದಲ್ಲಿ ಶನಿ ದೋಷವಿದ್ದರೆ ಅಂತಹವರು ಇಂದು ಶನಿ ದೇವನ ಶನಿ ಗ್ರಹ ಪಂಚರತ್ನ ಸ್ತೋತ್ರವನ್ನು ಓದಿ. ಇದುಂ ತುಂಬಾ ಸರಳ ಮತ್ತು ಕನ್ನಡದಲ್ಲಿ ಇಲ್ಲಿದೆ.ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಮ್ ।ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್ ॥ 1 ॥ ಶನೈಶ್ಚರಾಯ ಶಾಂತಾಯ ಸರ್ವಾಭೀಷ್ಟ ಪ್ರದಾಯಿನೇ ।ಶರಣ್ಯಾಯ ವರೇಣ್ಯಾಯ ಸರ್ವೇಶಾಯ ನಮೋನಮಃ ॥ 2 ॥ ಸ್ತುತ್ಯಾಯ ಸ್ತೋತ್ರ ಗಮ್ಯಾಯ ಭಕ್ತಿ ವಶ್ಯಾಯ ಭಾನವೇ ।ಭಾನುಪುತ್ರಾಯ ಭವ್ಯಾಯ ಪಾವನಾಯ ನಮೋನಮಃ ॥ 3 ॥
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಬೈರತಿ ಬಸವರಾಜ್ ಇದೀಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಬಸವರಾಜ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದ ಬೆನ್ನಲ್ಲೇ ಇದೀಗ ರಿಲೀಸ್ ಆಗಿದ್ದಾರೆ. ನಗರದ ಪರಪ್ಪನ ಅಗ್ರಹಾರ ಜೈಲಿನಿಂದ ಇಂದು ಬೈರತಿ ಬಸವರಾಜ್ ರಿಲೀಸ್ ಆಗಿದ್ದಾರೆ. ನಿನ್ನೆಯಷ್ಟೇ ಜನಪ್ರತಿನಿಧಿಗಳ
ಮಡಿಕೇರಿ: ಸಿದ್ದಾಪುರ ಗ್ರಾಮದಲ್ಲಿ ಹಲವರನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. 35 ವರ್ಷದ ಕಾಡಾನೆ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಉಪಟಳ ನೀಡುತ್ತಿತ್ತು. ಸಿದ್ದಾಪುರ ಸಮೀಪ ಕಾಫಿ ಬೆಳೆಗಾರರೊಬ್ಬರನ್ನು ಇತ್ತೀಚೆಗೆ ಬಲಿ ತೆಗೆದುಕೊಂಡಿತ್ತು. ಗ್ರಾಮಸ್ಥರು ಕಾಡಾನೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಶುಕ್ರವಾರ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯಾಟದ ವೇಳೆ ನಡೆದ ರನ್ ಔಟ್ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತು. ಪಾಕಿಸ್ತಾನದ ಇನಿಂಗ್ಸ್ನ 39ನೇ ಓವರ್ನಲ್ಲಿ ಈ ಘಟನೆ ನಡೆದಿದೆ. ಪಾಕಿಸ್ತಾನ ಬ್ಯಾಟರ್ ಸಲ್ಮಾನ್ ಅಲಿ ಆಘಾ ಅವರು ಮಿರಾಜ್ ಎಸೆತಕ್ಕೆ ಚೆಂಡನ್ನು ಬಾರಿಸಲಾಗಲಿಲ್ಲ. ಅಲ್ಲೇ ಚೆಂಡು ಆಘಾ ಅವರ ಕಾಲು ಬುಡದಲ್ಲಿ ಬಿದ್ದಿದೆ. ಅವರು ತಮ್ಮ ಕ್ರೀಸ್ಗೆ ಮರಳಲು ಪ್ರಯತ್ನಿಸುತ್ತಿದ್ದಾಗ ಚೆಂಡು ಅಘಾ ಅವರ ಬ್ಯಾಟ್ಗೆ ಮುಟ್ಟಿತು. ಆಟ ಮುಗಿದಿದೆ ಎಂದು ಅಘಾ ನಂಬಿದ್ದರು.