ಬೆಂಗಳೂರು: ಐಪಿಎಲ್ 2026 ರ ಉದ್ಘಾಟನಾ ಪಂದ್ಯದಲ್ಲೇ ಟಾಸ್ ಗೆದ್ದ ಆರ್ ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಆದರೆ ಟಾಸ್ ವೇಳೆ ಆರ್ ಸಿಬಿ ನಾಯಕನಿಗೆ ಫ್ಯಾನ್ಸ್ ಮಾತನಾಡಲೂ ಬಿಡದಂತೆ ಹರ್ಷೋದ್ಘಾರ ಮಾಡಿದ್ದಾರೆ. ಆರ್ ಸಿಬಿ ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಪಂದ್ಯವಾಡುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಜತ್ ಪಾಟೀದಾರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ರಜತ್ ಟಾಸ್ ಗೆಲ್ಲುತ್ತಿದ್ದಂತೇ ಆರ್ ಸಿಬಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ಬೆಂಗಳೂರು: ದಾವಣಗೆರೆ ದಕ್ಷಿಣದ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅಭ್ಯರ್ಥಿತನ ವಾಪಸ್ ಪಡೆದಿರಬಹುದು; ಹರಿದ ಬಟ್ಟೆಯನ್ನು ತೇಪೆ ಹಾಕಬಹುದೇ ಹೊರತು ಅದು ಹೊಸ ಬಟ್ಟೆ ಆಗುವುದಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಶ್ಲೇಷಿಸಿದ್ದಾರೆ.ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿ ಪ್ರಶ್ನೆಗೆ ಉತ್ತರಿಸಿದರು. ತುಂಡಾದ ಹಗ್ಗಕ್ಕೆ ಗಂಟು ಹಾಕಬಹುದೇ ಹೊರತು ಅದು ಹೊಸ ಹಗ್ಗ ಆಗುವುದಿಲ್ಲ ಎಂದರು.ಮುಸಲ್ಮಾನ ಬಂಧುಗಳೆಲ್ಲ ನಮಗೆ ಮತ ಹಾಕುತ್ತಾರೆಂದು ನಾನು ಹೇಳಲಾರೆ. ಯಾಕೆಂದರೆ ಕಾಂಗ್ರೆಸ್ಸಿನವರು ಅವರ ತಲೆಗೆ ಬಿಟ್ಟ ಹುಳಗಳು ಸತ್ತಿಲ್ಲ; ಅವು ಬದುಕಿವೆ ಎಂದು ನುಡಿದರು.
ಬೆಂಗಳೂರು: ಇರಾನ್ ನವರು ಗ್ಯಾಸ್ ಕೊಡದೇ ಇದ್ರೆ ನಾವು ಚರಂಡಿಯಿಂದ ಗ್ಯಾಸ್ ಮಾಡಬೇಕಿತ್ತು, ನಾವು ಎಡವಿರಬಹುದು ಆದರೆ ಇರಾನ್ ನವರು ಎಡವಲಿಲ್ಲ ಎಂದು ಸಚಿವ ಎಂಬಿ ಪಾಟೀಲ್ ಹೊಗಳಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣದಿಂದ ದೇಶದಲ್ಲಿ ಇಂಧನ ಬಿಕ್ಕಟ್ಟು ಎದುರಾಗಿರುವ ಬಗ್ಗೆ ಅವರು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಈ ವೇಳೆ ಇರಾನ್ ನನ್ನು ಹೊಗಳಿದ್ದು ಭಾರತದ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಮೋದಿ ಇಸ್ರೇಲ್ ಗೆ ಹೋಗಿ ಫಾದರ್ ಲ್ಯಾಂಡ್ ಎಂದು ಹೊಗಳಿದರು. ಅವರು ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು ಎಂದು ವ್ಯಂಗ್ಯ ಮಾಡಿದ್ದಾರೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಇಳಿಕೆಯಾಗಿದ್ದು ಮತ್ತುಇತರೆ ಚಿನ್ನದ ದರ ಭಾರೀ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ನಿನ್ನೆ ಪರಿಶುದ್ಧ ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗಿತ್ತು. ಪರಿಶುದ್ಧ ಚಿನ್ನದ ದರ ನಿನ್ನೆ 1,50,545.00 ರೂ.ಗಳಿತ್ತು. ಆದರೆ ಇಂದು ಇಳಿಕೆಯಾಗಿದ್ದು 1,48,550.00 ರೂ.ಗಳಷ್ಟಿದೆ.
ಚೆನ್ನೈ: ಐಪಿಎಲ್ 2026 ಕ್ಕೆ ಆರಂಭವಾಗುವ ಕೆಲವೇ ಕ್ಷಣಗಳು ಬಾಕಿಯಿರುವಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶಾಕ್ ಸಿಕ್ಕಿದೆ. ಧೋನಿ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಐಪಿಎಲ್ 2026 ಕ್ಕೆ ಇಂದಿನಿಂದ ಚಾಲನೆ ಸಿಗುತ್ತಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿದೆ. ಸಿಎಸ್ ಕೆ ತನ್ನ ಮೊದಲ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಸೋಮವಾರ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಮುನ್ನ ಧೋನಿ ಅಭಿಮಾನಿಗಳಿಗೆ ಶಾಕ್ ಸಿಕ್ಕಿದೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಇಳಿಕೆಯಾಗಿತ್ತು. ಆದರೆ ಇಂದು ಮತ್ತೆ ಭರ್ಜರಿ ಏರಿಕೆಯಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಇಳಿಕೆಯಾಗಿತ್ತು. ಇದು ಬೆಳೆಗಾರರಿಗೆ ಆತಂಕ ತಂದಿತ್ತು. ಕಳೆದ ಕೆಲವು ದಿನಗಳಿಂದ ಸತತವಾಗಿ ಬೆಲೆ ಇಳಿಕೆ ಕಂಡುಬರುತ್ತಿತ್ತು. ಆದರೆ ಇಂದು ಕೆಲವು ವರ್ಗದ ಅಡಿಕೆ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದೆ. ಇಂದು ಹೊಸ ಅಡಿಕೆ ಬೆಲೆ 5 ರೂ. ಏರಿಕೆಯಾಗಿದ್ದು 480 ರೂ.ಗಳಷ್ಟಿದೆ.
ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿಯೊಂದರ ಮುಂದೆ ಕೆಲವು ಹೊತ್ತು ನಿಂತಿದ್ದ ಇಬ್ಬರು ಯುವಕರು ಕೊನೆಗೆ ಮಹಿಳೆಯ ಸರ ಎಗರಿಸಿದ ಹೋದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಘಟನೆ ನಡೆದಿದೆ. ಇತ್ತೀಚೆಗಿನ ದಿನಗಳಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಲ್ಲಿ ಗಲ್ಲಿಗಳಲ್ಲಿ ಸರಗಳ್ಳರು ಬೈಕ್ ನಲ್ಲಿ ಬಂದು ಮಹಿಳೆಯರ ಸರ ಎಗರಿಸಿದ ಘಟನೆಗಳು ಹೆಚ್ಚಾಗುತ್ತಿವೆ. ಇದೇ ರೀತಿ ಅಂಗಡಿಯೊಂದಕ್ಕೆ ಜ್ಯೂಸ್ ಕುಡಿಯುವ ನೆಪದಲ್ಲಿ ಬಂದ ಇಬ್ಬರು ಯುವಕರು ಅಲ್ಲೇ ಪಕ್ಕದಲ್ಲಿ ನಿಂತಿದ್ದ ಯುವತಿಯ ಚೈನ್ ಎಗರಿಸಿದ್ದಾರೆ.
ಜ್ಯೋತಿಷ್ಯದ ಪ್ರಕಾರ ಆಯಾ ಗ್ರಹಗಳಿಗೆ ಅನುಗುಣವಾಗಿ ಆಹಾರ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಮಕರ ರಾಶಿಯವರು ಜ್ಯೋತಿಷ್ಯದ ಪ್ರಕಾರ ಯಾವ ಆಹಾರ ಸೇವಿಸಿದರೆ ಉತ್ತಮ ಇಲ್ಲಿದೆ ವಿವರ. ಮಕರ ರಾಶಿಯನ್ನು ಆಳುವ ಗ್ರಹ ಶನಿ. ಈ ರಾಶಿವಯರು ಜೀವನದಲ್ಲಿ ಶಿಸ್ತು ಹೊಂದಿರುತ್ತಾರೆ. ಈ ರಾಶಿಯವರು ಎಲುಬು ಸದೃಢವಾಗಿ ಬೆಳೆಯಲು, ಜೀರ್ಣಕ್ರಿಯೆ ಸುಗಮವಾಗಲು ಬೇಕಾಗುವಂತಹ ಆಹಾರ ಸೇವನೆ ಮಾಡಬೇಕು. ಈ ರಾಶಿಯವರು ಆಹಾರದಲ್ಲಿ ಆದಷ್ಟು ಕ್ಯಾಲ್ಶಿಯಂ ಅಂಶ ಇರುವಂತೆ ನೋಡಿಕೊಂಡರೆ ಉತ್ತಮ. ಮಕರ ರಾಶಿಯವರು ಯಾವ ತರಕಾರಿ, ಯಾವ ಹಣ್ಣು ಸೇವನೆ ಮಾಡಬೇಕು ಇಲ್ಲಿದೆ ವಿವರ.
ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಸುಂಕ ಇಳಿಕೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ. ಇಂಧನ ಬಿಕ್ಕಟ್ಟಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿ ಗುಡ್ ನ್ಯೂಸ್ ನೀಡಿತ್ತು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರ ನಮ್ಮ ಕೊಲೆ ಮಾಡುತ್ತಿದೆ. ಚುನಾವಣೆ ದೃಷ್ಟಿಯಿಂದ ಈಗ ಇಳಿಕೆ ಮಾಡಿದೆ. ಚುನಾವಣೆ ಮುಗಿದ ಬೆನ್ನಲ್ಲೇ ದರ ಏರಿಕೆ ಮಾಡುತ್ತದೆ ಎಂದಿದ್ದರು.
ಬೆಂಗಳೂರು: ಐಪಿಎಲ್ ನ ಮತ್ತೊಂದು ಸೀಸನ್ ಆರಂಭವಾಗುತ್ತಿದೆ. ಇದಕ್ಕೆ ಮೊದಲು ಐಪಿಎಲ್ ನಲ್ಲಿ ಮೊದಲ ಬಾಲ್ ಎದುರಿಸಿದವರು ಮತ್ತು ಮೊದಲ ಬಾಲ್ ಎಸೆದವರು ಯಾರು ಎಂಬ ಇಂಟ್ರೆಸ್ಟಿಂಗ್ ಸಂಗತಿ ತಿಳಿದುಕೊಳ್ಳಿ. ಐಪಿಎಲ್ 2026 ಕ್ಕೆ ಇಂದಿನಿಂದ ಚಾಲನೆ ಸಿಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ. ಐಪಿಎಲ್ ಮೊದಲ ಆವೃತ್ತಿ ಆರಂಭವಾಗಿದ್ದು 2008 ರಲ್ಲಿ. ಈ ಕೂಟದಲ್ಲಿ ಶೇನ್ ವಾರ್ನೆ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಕಪ್ ಗೆದ್ದುಕೊಂಡಿತ್ತು. 2008 ರ ಮೊದಲ ಆವೃತ್ತಿಯ ಮೊದಲ ಪಂದ್ಯ ನಡೆದಿದ್ದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ.
ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟಿಗ ಬಾಬರ್ ಅಜಮ್ ಮೈದಾನದಲ್ಲಿ ಮಾತ್ರವಲ್ಲ, ಜಾಹೀರಾತು ಶೂಟಿಂಗ್ ನಲ್ಲೂ ಫೇಲ್ ಆಗಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು ಬಾಬರ್ ಟ್ರೋಲ್ ಗೊಳಗಾಗಿದ್ದಾರೆ. ಪಾಕಿಸ್ತಾನ ಕ್ರಿಕೆಟಿಗ ಬಾಬರ್ ಅಜಮ್ ಇತ್ತೀಚೆಗೆ ಕಳಪೆ ಫಾರ್ಮ್ ನಲ್ಲಿದ್ದಾರೆ. ಕಿಂಗ್ ಎಂದು ಅವರ ಕೆಲವು ಅಭಿಮಾನಿಗಳು ಹೇಳಿಕೊಳ್ಳುತ್ತಾರೆ. ಇನ್ನು ಕೆಲವರಂತೂ ವಿರಾಟ್ ಕೊಹ್ಲಿಗೆ ಹೋಲಿಸುವುದೂ ಇದೆ. ಆದರೆ ಪ್ರದರ್ಶನ ಮಾತ್ರ ಬಿಗ್ ಝೀರೋ. ಇದೀಗ ಪಿಎಸ್ಎಲ್ ಕ್ರಿಕೆಟ್ ಲೀಗ್ ಗೆ ಮುನ್ನ ಬಾಬರ್ ಅಜಮ್ ಜಾಹೀರಾತು ಶೂಟಿಂಗ್ ಒಂದರಲ್ಲಿ ಭಾಗಿಯಾಗಿದ್ದಾರೆ. ಮೈದಾನದಲ್ಲಿ ಬೆಡ್ ಹಾಕಿ ಹಾರಿ ಕ್ಯಾಚ್ ಪಡೆಯುವ ಸನ್ನಿವೇಶವೊಂದರ ಚಿತ್ರೀಕರಣವನ್ನು ಮಾಡಲಾಗುತ್ತಿತ್ತು.
ದೈತ್ಯ ಗಾತ್ರದ ದನವನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗುತ್ತಾರೆ ಎಂದರೆ ನೀವು ನಂಬಲು ಆಗುತ್ತಾ? ಆದರೆ ಇಲ್ಲೊಬ್ಬ ವ್ಯಕ್ತಿ ಬೈಕ್ ನಲ್ಲಿ ಎದುರುಗಡೆ ದನವನ್ನು ಕೂರಿಸಿಕೊಂಡು ರೈಡ್ ಮಾಡಿದ್ದಾನೆ. ಈ ವಿಡಿಯೋ ಇಲ್ಲಿದೆ ನೋಡಿ. ನಮ್ಮ ಜನರಿಗೆ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಎನ್ನುವುದಕ್ಕೆ ಸಾಕ್ಷಿಯೇ ಈ ವಿಡಿಯೋ. ರೈತರು ತಮ್ಮ ಸಾಕು ಪ್ರಾಣಿಗಳನ್ನು ಸ್ವಂತ ಮಕ್ಕಳಂತೇ ನೋಡಿಕೊಳ್ಳುತ್ತಾರೆ. ಆದರೆ ಈತನಂತೂ ತನ್ನ ಮಕ್ಕಳನ್ನು ಕರೆದುಕೊಂಡು ಹೋಗುವ ರೀತಿ ದನವನ್ನೇ ಬೈಕ್ ಹತ್ತಿಸಿದ್ದಾನೆ.
ವಿಶಾಖಪಟ್ಟಣಂ: ರಸ್ತೆ ಬದಿ ನಿಲ್ಲಿಸಿದ್ದ ಟ್ರಕ್ ಗೆ ವೇಗವಾಗಿ ಬಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮತ್ತು ಆತನ ವೃದ್ಧ ತಾಯಿ ಸಾವನ್ನಪ್ಪಿದ್ದಾರೆ. ಈ ಭೀಕರ ಆಕ್ಸಿಡೆಂಟ್ ವಿಡಿಯೋ ವೈರಲ್ ಆಗಿದೆ. ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ಘಟನೆ ನಡೆದಿದೆ. ಹೆದ್ದಾರಿಗಳಲ್ಲಿ ಅತಿಯಾದ ವೇಗದ ಚಾಲನೆ ಅಪಘಾತಕ್ಕೆ ಕಾರಣವಾಗುತ್ತದೆ. ಅದರಲ್ಲೂ ರಸ್ತೆ ಬದಿ ವಾಹನಗಳನ್ನು ಪಾರ್ಕ್ ಮಾಡಿದಾಗ ಅನಾಹುತಗಳಾದ ಅನೇಕ ಘಟನೆಗಳು ನಮ್ಮ ಮುಂದಿವೆ. ಇಂತಹದ್ದೇ ಒಂದು ಘಟನೆ ಇದಾಗಿದೆ. ಚತುಷ್ಪಥ ರಸ್ತೆಯಲ್ಲಿ ಬೈಕ್ ವೇಗವಾಗಿ ಬರುತ್ತಿತ್ತು. ಇದೇ ವೇಳೆ ರಸ್ತೆ ಬದಿಯಲ್ಲಿ ಬೃಹತ್ ಟ್ರಕ್ ಒಂದು ನಿಲ್ಲಿಸಲಾಗಿತ್ತು.
ದುಡ್ಡಿಲ್ಲ ಸರ್ ಬಿಟ್ಬಿಡಿ, ಸ್ವಲ್ಪ ಹಣ ಆದ್ರೂ ನನಗೆ ಉಳಿಸಿ ಎಂದು ಬೇಡಿಕೊಂಡರೂ ಕರಗದ ರೈಲ್ವೇ ಟಿಸಿ ಫೈನ್ ಎಂದು ವೃದ್ಧನ ಬಳಿ ಪೂರ್ತಿ ಕಿತ್ತುಕೊಂಡ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜನರು ಛೀಮಾರಿ ಹಾಕಿದ್ದಾರೆ. ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಮಾಡುವಾಗ ಟಿಸಿ ಕೈಗೆ ಸಿಕ್ಕಿಬಿದ್ದರೆ ದಂಡ ಬೀಳುವುದು ಗ್ಯಾರಂಟಿ. ಇದು ನಿಯಮದ ಪ್ರಕಾರ ಸರಿಯಾದ ಕ್ರಮವೂ ಹೌದು. ಆದರೆ ಕೆಲವೊಮ್ಮೆ ನಾವು ಮಾನವೀಯತೆಯನ್ನೂ ನೋಡಬೇಕಾಗುತ್ತದೆ. ಆದರೆ ಈ ಟಿಸಿ ಅದನ್ನೂ ಮರೆತು ನಡೆದುಕೊಂಡಿದ್ದಾರೆ. ರೈಲು ಪ್ರಯಾಣ ಮಾಡುತ್ತಿದ್ದ ವೃದ್ಧ ವ್ಯಕ್ತಿಯೊಬ್ಬರ ಬಳಿ ಟಿಕೆಟ್ ಇರಲಿಲ್ಲ. ಅವರ ದುರಾದೃಷ್ಟಕ್ಕೆ ಟಿಸಿ ಬಳಿ ತಗ್ಲಾಕಿಕೊಂಡಿದ್ದಾರೆ.
ಬೆಂಗಳೂರು: ಐಪಿಎಲ್ 2026 ಕ್ಕೆ ಇಂದು ಚಾಲನೆ ಸಿಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಆರ್ ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಲೈವ್ ಎಲ್ಲಿ, ಎಷ್ಟು ಗಂಟೆಗೆ ವೀಕ್ಷಿಸಬೇಕು ಇಲ್ಲಿದೆ ವಿವರ. ಕಳೆದ ಬಾರಿ ಚಾಂಪಿಯನ್ ಆಗಿ ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದ್ದ ಆರ್ ಸಿಬಿ ಈ ಬಾರಿ ಹಾಲಿ ಚಾಂಪಿಯನ್ ಎಂಬ ಭಾರೀ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುತ್ತಿದೆ. ಆರ್ ಸಿಬಿಗೆ ಈ ಬಾರಿ ಇಬ್ಬರು ಪ್ರಮುಖ ವೇಗಿಗಳ ಅನುಪಸ್ಥಿತಿ ಕಾಡುವ ಸಾಧ್ಯತೆಯಿದೆ.
ಬೆಂಗಳೂರು: ಕರ್ನಾಟಕದಲ್ಲಿ ಈ ವಾರದ ಆರಂಭದಲ್ಲಿ ಕೆಲವು ಕಡೆ ಮಳೆಯಾಗಿತ್ತು. ಇಂದು ವಾರಂತ್ಯದಲ್ಲಿ ಈ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಬೇಸಿಗೆಯ ಬೇಗೆಯ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿತ್ತು. ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿತ್ತು. ಮಳೆಯ ಜೊತೆಗೆ ತಾಪಮಾನದಲ್ಲೂ ಗಣನೀಯ ಏರಿಕೆಯಾಗಿತ್ತು. ವಾರಂತ್ಯದಲ್ಲೂ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಕೊಡಗು, ಚಿಕ್ಕಮಗಳೂರು, ಮೈಸೂರು, ಬೆಂಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ವಾರಂತ್ಯದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಶನಿವಾರ ಶನಿದೇವನಿಗೆ ವಿಶೇಷವಾದ ದಿನವಾಗಿದ್ದು ಇಂದು ಶನಿ ದೋಷವಿರುವವರು ಎಳ್ಳೆಣ್ಣೆ ಸಮರ್ಪಣೆ ಮಾಡುತ್ತಾರೆ. ಸಾಮಾನ್ಯವಾಗಿ ಶನಿ ದೇವನಿಗೆ ಎಳ್ಳೆಣ್ಣೆ ಸಮರ್ಪಣೆ ಮಾಡುವುದು ಪದ್ಧತಿ. ಆದರೆ ಎಳ್ಳೆಣ್ಣೆ ಯಾಕೆ ಕೊಡುತ್ತಾರೆ ಎಂಬುದರ ಪೌರಾಣಿಕ ಹಿನ್ನಲೆಯನ್ನು ತಿಳಿದುಕೊಳ್ಳಿ. ಶನಿ ದೋಷವಿರುವವರು ಶನಿ ದೇವನಿಗೆ ಎಳ್ಳೆಯನ್ನು ಸಮರ್ಪಿಸುವುದರಿಂದ ದೋಷದ ಪ್ರಭಾವ ತಕ್ಕ ಮಟ್ಟಿಗೆ ತಗ್ಗುವುದು ಎಂಬ ನಂಬಿಕೆಯಿದೆ. ಇದಕ್ಕಾಗಿ ಇಂದು ಶನಿ ದೇವಾಲಯಕ್ಕೆ ತೆರಳಿ ಎಳ್ಳೆಣ್ಣೆ ಸಮರ್ಪಿಸುವುದು ಅಥವಾ ಎಳ್ಳೆಣ್ಣೆ ದೀಪ ಹಚ್ಚುತ್ತಾರೆ. ಆದರೆ ಇದಕ್ಕೆ ಕಾರಣವೂ ಇದೆ. ಈ ಹಿಂದೆ ತ್ರೇತಾಯುಗದಲ್ಲಿ ರಾಮಸೇತು ನಿರ್ಮಾಣ ಮಾಡುವಾಗ ಆಂಜನೇಯ ಸ್ವಾಮಿಯ ಶಕ್ತಿ ಪರೀಕ್ಷೆ ಮಾಡಲು ಶನಿ ದೇವ ಯುದ್ಧ ಮಾಡಿದ್ದನಂತೆ.
ಬೆಂಗಳೂರು: ಮಾರ್ಚ್ 28 ಮತ್ತು ಏಪ್ರಿಲ್ 5 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ರಾಜ್ಯದ ಶಾಸಕರು, ಎಂಎಲ್ಸಿಗಳು ಮತ್ತು ಸಂಸದರಿಗೆ ಟಿಕೆಟ್ ನೀಡಬೇಕೆಂಬ ಮನವಿಗೆ ಕರ್ನಾಟಕ ರಾಜ್ಯ ಕ್ರಿಕೆಟಿಗರ ಸಂಘ (ಕೆಎಸ್ಸಿಎ) ಒಪ್ಪಿಗೆ ನೀಡಿದೆ.ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (ಬಿಜೆಪಿ) ಶಾಸಕರ ಬೇಡಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಕರ್ನಾಟಕ ಶಾಸಕರು ವಿಧಾನಸೌಧದಲ್ಲಿ ಐಪಿಎಲ್ ಅಭಿಮಾನಿಗಳ ಸುರಕ್ಷತೆ ಮತ್ತು ಭದ್ರತಾ ಸಿದ್ಧತೆ ಕುರಿತು ಚರ್ಚೆ ನಡೆಸಿದ್ದರೆ ಸದನದ ಘನತೆಯನ್ನು ಎತ್ತಿ ಹಿಡಿಯುತ್ತಿತ್ತು. ಶಾಸಕರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಉಚಿತ ಟಿಕೆಟ್ಗಾಗಿ ಮನವಿ
ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ನಡುವಿನ ಸೀಟು ಹಂಚಿಕೆಯ ಬಗ್ಗೆ ತಮಿಳುನಾಡು ಬಿಜೆಪಿ ಮಾಜಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ಚುನಾವಣೆಗೆ ಮುನ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮೂಲಗಳ ಪ್ರಕಾರ, ಮೈತ್ರಿ ಒಪ್ಪಂದದ ಭಾಗವಾಗಿ ಬಿಜೆಪಿಗೆ ಹಂಚಿಕೆಯಾದ ಕ್ಷೇತ್ರಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಣ್ಣಾಮಲೈ ಅವರು ದೆಹಲಿಯಲ್ಲಿರುವ ಪಕ್ಷದ ಕೇಂದ್ರ ನಾಯಕತ್ವಕ್ಕೆ ಪತ್ರ ಬರೆದಿದ್ದಾರೆ.
ಬೆಂಗಳೂರು: 2026 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ಗೆ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಗೆ ಹೊಡೆತ ಬಿದ್ದಿದೆ. ಶ್ರೀಲಂಕಾದ ವೇಗಿ ನುವಾನ್ ತುಷಾರ ಅವರು ಕಡ್ಡಾಯ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಮತ್ತು ಕನಿಷ್ಠ ಪಂದ್ಯಾವಳಿಯ ಆರಂಭಿಕ ಹಂತದಿಂದ ಅವರನ್ನು ಹೊರಗಿಟ್ಟಿದ್ದಾರೆ.ಶ್ರೀಲಂಕಾ ಕ್ರಿಕೆಟ್ (ಎಸ್ಎಲ್ಸಿ) ಕಡ್ಡಾಯಗೊಳಿಸಿದ ಫಿಟ್ನೆಸ್ ಪರೀಕ್ಷೆಯಲ್ಲಿ ತುಷಾರ ವಿಫಲರಾಗಿದ್ದಾರೆ ಮತ್ತು ಆದ್ದರಿಂದ ಅವರ
ನವದೆಹಲಿ: ಪಶ್ಚಿಮ ಏಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಭಾರತದಲ್ಲಿ ಲಾಕ್ಡೌನ್ ಹೇರುವ ಯಾವುದೇ ಪ್ರಸ್ತಾಪವಿಲ್ಲ ಎಂದು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇನ್ನೂ ಈ ಸಂಬಂಧ ರಾಜಕಾರಣಿಗಳು ವದಂತಿಗಳನ್ನು ಹರಡುವುದರಿಂದ ಮತ್ತು ಜನರಲ್ಲಿ ಭಯದ ಮನೋವಿಕಾರದಿಂದ ದೂರವಿರಲು ಕೇಳಿಕೊಂಡರು.ರಾಜ್ಯಸಭೆಯಲ್ಲಿ ಹಣಕಾಸು ಮಸೂದೆ 2026 ರ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವರು, ಹಲವಾರು ದೇಶಗಳು ಮೋಟಾರು
ಐಪಿಎಲ್ ಟಿಕೆಟ್ಗಾಗಿ ಶಾಸಕರು ಪಟ್ಟು ಹಿಡಿದ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಇದೀಗ ಒಬ್ಬ ಎಂಎಲ್ಎಗಳಿಗೆ ಎರಡು ಟಿಕೆಟ್ಗಳನ್ನು ನೀಡುವುದಾಗಿ ಖಚಿತಪಡಿಸಿದ್ದಾರೆ. ಶನಿವಾರ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ 2026 ರ ಉದ್ಘಾಟನಾ ಪಂದ್ಯಕ್ಕಾಗಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚುನಾಯಿತ ರಾಜಕಾರಣಿಗಳಿಗೆ ಎರಡು ಟಿಕೆಟ್ಗಳನ್ನು ಖಚಿತಪಡಿಸಿದ್ದಾರೆ. ನಾಳೆ RCB vs SRH ಪಂದ್ಯಾಟವನ್ನು ವೀಕ್ಷಿಸುವ ಸಲುವಾಗಿ ಸದನದಲ್ಲಿ ಶಾಸಕರು ಶಾಸಕರು ಮತ್ತು ಸಂಸದರು ವಿಐಪಿ ಟಿಕೆಟ್ಗಳ ಕೊರತೆಯ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
ಪುಣೆ: ಮಹಿಳೆಯೊಬ್ಬರ ವಿಶ್ವಾಸ ಗಳಿಸಲು ಶಿವನ ಅವತಾರವೆಂಬಂತೆ ಬಿಂಬಿಸಿ ಮಾದಕ ವಸ್ತು ನೀಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಪುಣೆ ಮತ್ತು ವಸಾಯಿಯಲ್ಲಿ ವರದಿಯಾದ ಪ್ರಕರಣವು ಆನ್ಲೈನ್ ಶೋಷಣೆ ಮತ್ತು ದುರುಪಯೋಗದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.ಆರೋಪಿಯನ್ನು ವಸಾಯಿ ನಿವಾಸಿ ಋಷಿಕೇಶ್ ವೈದ್ಯ ಎಂದು ಗುರುತಿಸಲಾಗಿದೆ. 2023 ರಲ್ಲಿ ಸಾಮಾಜಿಕ ಮಾಧ್ಯಮ
ಬೆಂಗಳೂರು: ಕರ್ನಾಟಕದಾದ್ಯಂತ ಮಾರ್ಚ್ 27 ರಿಂದ ಏಪ್ರಿಲ್ 2 ರವರೆಗೆ ಮುಂಗಾರು ಪೂರ್ವ ಚಟುವಟಿಕೆ ಚುರುಕುಗೊಳ್ಳಲಿದ್ದು, ಮುಂದಿನ ಏಳು ದಿನಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆ ದಕ್ಷಿಣ ಕನ್ನಡ (ದ.ಕ) ಮತ್ತು ಉಡುಪಿ ಸೇರಿದಂತೆ ಸುಮಾರು 14-15 ಜಿಲ್ಲೆಗಳಿಗೆ ಯೆಲ್ಲೂ ಅಲರ್ಟ್ ಘೋಷಣೆ ಮಾಡಲಾಗಿದೆ. ಮುನ್ಸೂಚನೆಯ ಪ್ರಕಾರ, ರಾಜ್ಯದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು: ಐಪಿಎಲ್ 2026ರ ಮುನ್ನ ವಿರಾಟ್ ಕೊಹ್ಲಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಸನ್ರೈಸರ್ಸ್ ಎದುರಿಸಲಿರುವ ಆರ್ಸಿಬಿ ಐಪಿಎಲ್ 2026ರ ಆವೃತ್ತಿ ನಾಳೆ ಅದ್ಧೂರಿಯಾಗಿ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನಾ ವಿರಾಟ್ ಕೊಹ್ಲಿ ಅವರು ಹಾಕಿಸಿಕೊಂಡಿರುವ ಹೊಸ ಟ್ಯಾಟೂ ಅವರ ಅಭಿಮಾನಿಗಳಿಗೆ ಭಾರೀ ಕುತೂಹಲವನ್ನು ಮೂಡಿಸಿದೆ.
ಬೆಂಗಳೂರು: ಐಪಿಎಲ್ ಕ್ರಿಕೆಟ್ ನೋಡಲು ಶಾಸಕರಿಗೆ ತಲಾ ಐದು ಟಿಕೆಟ್ ನೀಡಬೇಕೆನ್ನುವುದಕ್ಕೆ ನನ್ನ ಬೆಂಬಲವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಕಾಂಗ್ರೆಸ್ನ ಕೆಲವು ಸದಸ್ಯರು ಶಾಸಕರಿಗೆ ತಲಾ 5 ಟಿಕೆಟ್ ನೀಡಬೇಕು, ಪಂದ್ಯ ವೀಕ್ಷಣೆಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಬೇಕೆಂದು ಡಿಸಿಎಂ ಡಿಕೆ ಶಿವಕುಮಾರ್ಗೆ ಒತ್ತಾಯಿಸಿದ್ದರು. ಇದಕ್ಕೆ ಸಭಾಧ್ಯಕ್ಷ ಯುಟಿ ಖಾದರ್ ಕೂಡಾ ಬಲವಾಗಿ ಪ್ರತಿಪಾದಿಸಿದ್ದರು.
ದಾವಣಗೆರೆ: ದಕ್ಷಿಣ ಉಪಚುನಾವಣೆಯಿಂದ ಯಾವುದೇ ಕಾರಣಕ್ಖೂ ನಾಮಪತ್ರವನ್ನು ವಾಪಸ್ ಪಡೆಯಲ್ಲ ಎಂದು ಕಾಂಗ್ರೆಸ್ಗೆ ತಲೆನೋವಾಗಿದ್ದ ಬಂಡಾಯ ಅಭ್ಯರ್ಥಿ ಸಾಧಿಕ್ ಪೈಲ್ವಾನ್ರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಧಿಕ್ ಪೈಲ್ವಾನ್ ಅವರು ದಾವಣೆಗೆರೆ ದ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪಕ್ಷದ ಮುಖಂಡರಾದ ಶಾಸಕ ರಿಜ್ವಾನ್ ಅರ್ಷದ್ ಹಾಗೂ ಮೇಲ್ಮನೆ ಮುಖ್ಯ ಸಚೇತಕ ಸಲೀಮ್ ಅಹ್ಮದ್ ಅವರ ಮೂಲಕ
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ನಿರ್ಧಾರದಿಂದ ನಮ್ಮ ದೇಶದಲ್ಲಿ ಪೆಟ್ರೋಲ್- ಡೀಸೆಲ್ ಮೇಲೆ ಅಬಕಾರಿ ಸುಂಕ 10 ರೂ. ಕಡಿಮೆ ಮಾಡಿದ್ದಾರೆ. ಜನರ ಮೇಲೆ ಬೀಳುವ ಹೊರೆಯನ್ನು ಕೇಂದ್ರ ಸರಕಾರವೇ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ನರೇಂದ್ರ ಮೋದಿಜೀ ಅವರು ದೇಶದ ಸಾಮಾನ್ಯ ಜನರ ಪರವಾಗಿ ದೃಢನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಯುದ್ಧದ ಈ ಸಂದರ್ಭದಲ್ಲಿ ರಾಜ್ಯ- ದೇಶದ ಜನತೆ ಪರವಾಗಿ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರಿಗೆ ಹಾಗೂ ಪೆಟ್ರೋಲಿಯಂ ಸಚಿವರಿಗೆ ಅಭಿನಂದನೆಗಳನ್ನು ತಿಳಿಸಲು ಬಯಸುವುದಾಗಿ ಹೇಳಿದರು.
ಹುತಾತ್ಮ ಯೋಧನಿಗೆ ಅಂತಿಮ ಗೌರವ ಸಲ್ಲಿಸುವ ಸಲುವಾಗಿ ಮಹಿಳೆಯೊಬ್ಬರು ಸಾಗುತ್ತಿದ್ದ ವಾಹನ ಹಿಂದೆಯೇ ಹೂಗುಚ್ಚ ಹಿಡಿದು ಓಡೋಡಿ ಬಂದ ವಿಡಿಯೊವೊಂದು ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದೆ.ಇದನ್ನು ನೋಡಿದವರು ಮಹಿಳೆಗೆ ಯೋಧನ ಮೇಲೆ ಅದೆಷ್ಟೋ ಗೌರವ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಹೂವನ್ನು ಹಿಡಿದುಕೊಂಡು, ಸಾಗುತ್ತಿದ್ದ ಯೋಧನ ಪಾರ್ಥಿವ ಶರೀರದ ಮೆರವಣಿಗೆ ಹಿಂದೆ ಓಡೋಡಿ ಬಂದಿದ್ದಾಳೆ.
ಯಕ್ಷಗಾನ ನಡೆಯುತ್ತಿದ್ದ ವೇಳೆ ಪ್ರೇಕ್ಷಕನೊಬ್ಬ ನಿರಂತರ ಹಾಕುತ್ತಿದ್ದ ಶಿಳ್ಳೆಗೆ ಕೋಪಗೊಂಡ ಕಲಾವಿದನೊಬ್ಬ ವೇದಿಕೆಯಲ್ಲೇ ಆತನಿಗೆ ಕ್ಲಾಸ್ ತೆಗೆದುಕೊಂಡ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉಡುಪಿ ಜಿಲ್ಲೆ ಕುಂದಾಪುರದ ಹೆನ್ನಾಬೈಲಿನಲ್ಲಿ ಯಕ್ಷಗಾನ ಕಲಾವಿದರೊಬ್ಬರು ಪ್ರೇಕ್ಷಕರ ಮೇಲೆ ಗರಂ ಆಗಿದ್ದಾರೆ. ಧರ್ಮಸ್ಥಳ ಮೇಳ ಪ್ರಸಂಗ ನಡೆಯುತ್ತಿದ್ದ ವೇಳೆ ಪ್ರೇಕ್ಷಕನೊಬ್ಬ ನಿರಂತರ ಶಿಳ್ಳೆ ಹೊಡೆದಿದ್ದಾನೆ. ಇದನ್ನು ಚೌಕಿಯಿಂದಲೇ ಗಮನಿಸುತ್ತಾ ಇದ್ದ ಕಲಾವಿದ ಅಶೋಕ್ ಭಟ್ ಅವರಿಗೆ ರಂಗಸ್ಥಳದ ಮೇಲಿರುವಾಗ ಮತ್ತೇ ಶಿಳ್ಳೆ ಕೆರಳಿಸಿತು.
ನವದೆಹಲಿ: ನೇಪಾಳದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಬಾಲೇಂದ್ರ 'ಬಾಲೆನ್' ಶಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತ-ನೇಪಾಳ ಸ್ನೇಹವನ್ನು ಮುಂದುವರಿಸುವಲ್ಲಿ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ. ಬಾಲೆನ್ ಶಾ ಅವರ ನೇಮಕವು ನೇಪಾಳದ ಜನರು ಅವರ ನಾಯಕತ್ವದ ಮೇಲಿನ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಒಟ್ಟಾಗಿ ಕೆಲಸ ಮಾಡುವುದು ಜನರ ಹೆಚ್ಚಿನ ಪ್ರಯೋಜನಕ್ಕಾಗಿ ನವದೆಹಲಿ ಮತ್ತು ಕಠ್ಮಂಡು ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಹೇಳಿದರು.
ಮುಂಬೈ ಇಂಡಿಯನ್ಸ್ ಮಾಲೀಕರಾದ ನೀತಾ ಅಂಬಾನಿ ಫ್ರಾಂಚೈಸ್ನ ಐಪಿಎಲ್ ಓಪನರ್ಗೆ ಮುಂಚಿತವಾಗಿ ರೋಹಿತ್ ಶರ್ಮಾ ಅವರೊಂದಿಗೆ ಬೆಚ್ಚಗಿನ ಮತ್ತು ಸ್ಮರಣೀಯ ಕ್ಷಣವನ್ನು ಹಂಚಿಕೊಂಡರು. ಅನುಭವಿ ಬ್ಯಾಟರ್ ರೋಹಿತ್ ಶರ್ಮಾ ಅವರು ಸಣ್ಣ ಆಗಿರುವುದನ್ನು ನೋಡಿ ನೀತಾ ಅಂಬಾನಿ ಶಾಕ್ ಆಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಹೋರಾಟದ ಮೊದಲು ಫ್ರಾಂಚೈಸಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ರೋಹಿತ್ ಅವರ ತೆಳ್ಳಗಿನ ನೋಟದಿಂದ ನೀತಾ ಅಂಬಾನಿ ಆಶ್ಚರ್ಯಚಕಿತರಾದರು."ನನ್ನ ದೇವರೇ, ರೋಹಿತ್, ನಾನು ನಿನ್ನನ್ನು ಗುರುತಿಸಲಿಲ್ಲ! ನೀವು ಚಿಕ್ಕ ಹುಡುಗನಂತೆ ಕಾಣುತ್ತೀರಿ ಎಂದು ನಗುತ್ತಲೇ ರೋಹಿತ್
ಚಲಿಸುತ್ತಿರುವ ರೈಲಿನಲ್ಲಿ ಖಾಲಿಯಾದ ಬಿಸ್ಲೆರಿ ಬಾಟಲಿಯಲ್ಲಿ ಬಾಲಕನೊಬ್ಬ ಮೂತ್ರ ಮಾಡಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕಿಡಿ ಕಾರಿದ್ದಾರೆ. ಎಷ್ಟೇ ವ್ಯವಸ್ಥೆಯಿರಲಿ, ರೈಲುಗಳನ್ನು ಮೇಲ್ದರ್ಜೆಗೇರಿಸಲಿ, ನಮ್ಮ ದೇಶದ ಕೆಲವರ ಮನಸ್ಥಿತಿ ಮಾತ್ರ ಬದಲಾಗುವುದೇ ಇಲ್ಲ ಎನ್ನುವುದಕ್ಕೆ ಈ ವಿಡಿಯೋವೇ ಸಾಕ್ಷಿ. ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು, ಸಾರ್ವಜನಿಕ ವಸ್ತುಗಳನ್ನು ಹೇಗೆ ಶುಚಿಯಾಗಿಟ್ಟುಕೊಳ್ಳಬೇಕು ಎಂಬ ಕನಿಷ್ಠ ಪ್ರಜ್ಞೆಯೂ ಕೆಲವರಿಗಿರಲ್ಲ. ಇತ್ತೀಚೆಗೆ ಕಾರಿನಲ್ಲಿ ಮಹಿಳೆಯೊಬ್ಬಳು ತಮ್ಮ ಮಗುವಿಗೆ ಖಾಲಿಯಾದ ಎಳೆನೀರಿನ ಗೆರಟೆಯಲ್ಲಿ ಮೂತ್ರ ಮಾಡಿಸಿದ ವಿಡಿಯೋ ವೈರಲ್ ಆಗಿತ್ತು.
ಬೆಂಗಳೂರು: ಕುಡಿದ ಮತ್ತಿನಲ್ಲಿ ಮಗುವನ್ನು ಹಿಡಿದು ಅಬ್ಬರದ ಸೆಳೆತಗಳಿದ್ದರು ಸಮುದ್ರಕ್ಕಿಳಿದ ಪತಿಗೆ ಪತ್ನಿಯೊಬ್ಬಳು ಕೂದಲು ಹಿಡಿದು ಬಿಸಿಯೇಟು ನೀಡಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ತನ್ನ ಮಗುವನ್ನು ಹಿಡಿದು ಅಬ್ಬರದ ಅಲೆಗಳಿದ್ದರು ಎತ್ತಿಕೊಂಡು ಹೋಗಿದ್ದಾನೆ. ಮನೆಯವರು ಹೋಗಬೇಡ ಎಂದರು, ಮಗುವನ್ನು ಹಿಡಿದು ಅಲೆಗಳನ್ನು ಎಂಜಾಯ್ ಮಾಡಿದ್ದಾನೆ.ಇದನ್ನು ನೋಡಿದ ಪತ್ನಿ ಹಿಂದೆ ಬರುವಂತೆ ಹೇಳಿದ್ದಾಳೆ. ವಾಪಾಸ್ಸು ಬರುತ್ತಿದ್ದ ಹಾಗೇ ಸಿಟ್ಟಿಗೆದ್ದ ಪತ್ನಿ, ಮಗುವನ್ನು ಪಡೆದ ಬಳಿಕ
ಬೆಂಗಳೂರು: ಮುತ್ತಪ್ಪ ರೈ ಮಗ ರಿಕ್ಕಿ ರೈ ವಿರುದ್ಧ ಡ್ರಿಫ್ಟಿಂಗ್ ಪ್ರಕರಣದ ಬಳಿಕ ಇದೀಗ ಮತ್ತೊಂದು ಎಫ್ಐಆರ್ ದಾಖಲಾಗಿದೆ. ರಿಕ್ಕಿ ರೈ ವಿರುದ್ಧ ಕಾರನ್ನು ರಿಜಿಸ್ಟರ್ ಮಾಡದೇ ಕಲರ್ ಬದಲಿಸಿ ಟ್ಯಾಕ್ಟ್ ಕಟ್ಟದೇ ಸರ್ಕಾರಕ್ಕೆ ವಂಚಿಸಿರೋ ಆರೋಪ ವ್ಯಕ್ತವಾಗಿದೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಡ್ರಿಫ್ಟಿಂಗ್ ಕೇಸ್ ಸಂಬಂಧ ಪರಿಶೀಲನೆ ನಡೆಸಿದಾಗ ಈ ವಿಚಾರ ಬಯಲಾಗಿದೆ. ದೆಹಲಿಯಲ್ಲಿ ಆರ್ಟಿಓ ಹರಾಜಿನಲ್ಲಿ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದ. ಬಳಿಕ ಕಲರ್ ಬದಲಿಸಿ, ಅದಕ್ಕೆ ಞಚಿ 05 ಓಖ 0009
ಬೆಂಗಳೂರು: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಿ ಕೇಂದ್ರ ಸರ್ಕಾರ ಜನರಿಗೆ ಗುಡ್ ನ್ಯೂಸ್ ನೀಡಿದೆ. ಆದರೆ ಕೇಂದ್ರ ಸುಂಕ ಇಳಿಸಿರುವುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದಿಂದಾಗಿ ದೇಶದಲ್ಲಿ ಇಂಧನ ಬಿಕ್ಕಟ್ಟು ತಲೆದೋರಲಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಬಹುದು ಎಂದು ಜನರು ಆತಂಕದಲ್ಲಿದ್ದರು. ಇದರ ನಡುವೆ ಈಗ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 3 ರೂ. ಡೀಸೆಲ್ ಮೇಲೆ ಶೂನ್ಯದಷ್ಟು ಅಬಕಾರಿ ಸುಂಕ ಇಳಿಕೆ ಮಾಡಿದೆ. ಇದು ಜನರಿಗೆ ಖುಷಿಕೊಟ್ಟಿದೆ. ಆದರೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಸಿರುವುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮದ ಮುಂದೆ ಕಿಡಿ ಕಾರಿದ್ದಾರೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಇಳಿಕೆಯಾಗಿತ್ತು. ಆದರೆ ಇಂದು ಮತ್ತೆ ಭರ್ಜರಿ ಏರಿಕೆಯಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಇಳಿಕೆಯಾಗಿತ್ತು. ಇದು ಬೆಳೆಗಾರರಿಗೆ ಆತಂಕ ತಂದಿತ್ತು. ಕಳೆದ ಕೆಲವು ದಿನಗಳಿಂದ ಸತತವಾಗಿ ಬೆಲೆ ಇಳಿಕೆ ಕಂಡುಬರುತ್ತಿತ್ತು. ಆದರೆ ಇಂದು ಕೆಲವು ವರ್ಗದ ಅಡಿಕೆ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದೆ. ಇಂದು ಹೊಸ ಅಡಿಕೆ ಬೆಲೆ 5 ರೂ. ಏರಿಕೆಯಾಗಿದ್ದು 475 ರೂ.ಗಳಷ್ಟಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಯಥಾಸ್ಥಿತಿಯಲ್ಲಿದೆ ಮತ್ತುಇತರೆ ಚಿನ್ನದ ದರ ಕೊಂಚ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ನಿನ್ನೆ ಪರಿಶುದ್ಧ ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗಿತ್ತು. ಪರಿಶುದ್ಧ ಚಿನ್ನದ ದರ ನಿನ್ನೆ 1,50,545.00 ರೂ.ಗಳಿತ್ತು. ಆದರೆ ಇಂದೂ ಯಥಾಸ್ಥಿತಿಯಲ್ಲಿದ್ದು 1,50,545.00 ರೂ.ಗಳಷ್ಟಿದೆ.
ಜ್ಯೋತಿಷ್ಯದ ಪ್ರಕಾರ ಆಯಾ ಗ್ರಹಗಳಿಗೆ ಅನುಗುಣವಾಗಿ ಆಹಾರ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಧನು ರಾಶಿಯವರು ಜ್ಯೋತಿಷ್ಯದ ಪ್ರಕಾರ ಯಾವ ಆಹಾರ ಸೇವಿಸಿದರೆ ಉತ್ತಮ ಇಲ್ಲಿದೆ ವಿವರ. ಧನು ರಾಶಿಯನ್ನು ಆಳುವ ಗ್ರಹ ಗುರುವಾಗಿರುತ್ತಾನೆ. ಈ ಗ್ರಹವು ಲಿವರ್, ತೊಡೆ ಮತ್ತು ಸೊಂಟದ ಭಾಗಕ್ಕೆ ಸಂಬಂಧಪಟ್ಟಿರುತ್ತದೆ. ಧನು ರಾಶಿಯವರು ಅತ್ಯುತ್ಸಾಹಿಗಳಾಗಿರುತ್ತಾರೆ. ಆದರೆ ಅವರಿಗೆ ಈ ಭಾಗದ ಆರೋಗ್ಯ ಸಮಸ್ಯೆಗಳು ಬರುವುದು ಹೆಚ್ಚು. ಧನು ರಾಶಿಯವರು ಯಾವ ತರಕಾರಿ, ಹಣ್ಣು, ಧಾನ್ಯಗಳನ್ನು ಸೇವಿಸಬೇಕು ಇಲ್ಲಿದೆ ವಿವರ.
ಬೆಂಗಳೂರು: ಸದನ ಇರೋದು ಜನರ ಸಮಸ್ಯೆ ಚರ್ಚೆ ಮಾಡಲಾ, ಐಪಿಎಲ್ ಟಿಕೆಟ್ ಚರ್ಚೆಗಾ? ಕರ್ನಾಟಕದ ಶಾಸಕರಿಗೆ ಈಗ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ನಾಳೆಯಿಂದ ಬೆಂಗಳೂರಿನಲ್ಲಿ ಐಪಿಎಲ್ ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲೇ ಆರ್ ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ಆಡಲಿದೆ. ಬೆಂಗಳೂರಿನಲ್ಲಿ ಐಪಿಎಲ್ ಟಿಕೆಟ್ ಸಿಗುವುದು ಅಷ್ಟು ಸುಲಭವಲ್ಲ. ಬೆಲೆಯೂ ದುಬಾರಿ. ಇದೀಗ ಶಾಸಕರಿಗೂ ಐಪಿಎಲ್ ಟಿಕೆಟ್ ಪಡೆಯುವ ಚಿಂತೆ. ಹೀಗಾಗಿ ಸದನದಲ್ಲೇ ಈ ಬಗ್ಗೆ ಯಾವುದೋ ರಾಷ್ಟ್ರೀಯ ಸಮಸ್ಯೆ ಎನ್ನುವಂತೆ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರ ಕಾಶಪ್ಪನವರ್ ವಿಜಯಾನಂದ ಎಂಎಲ್ಎಗಳಿಗೆ ತಲಾ 5 ಟಿಕೆಟ್ ಕೊಡಬೇಕು.
ಬೆಂಗಳೂರು: ಪುಟ್ಟಕ್ಕನ ಮಕ್ಕಳು ಖ್ಯಾತಿಯ ನಟಿ ಸಂಜನಾ ಬುರ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮದುವೆಯ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪುಟ್ಟಕ್ಕನ ಮಕ್ಕಳು, ಶ್ರೀಗಂಧದ ಗುಡಿ ಧಾರವಾಹಿ ಮೂಲಕ ಜನರ ಮನಗೆದ್ದ ಕನ್ನಡ ಕಿರುತೆರೆಯ ಖ್ಯಾತ ನಟಿ ಸಂಜನಾ ವೈದ್ಯ ಸಮರ್ಥ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್ ಒಂದರಲ್ಲಿ ಮದುವೆಯಾಗಿದೆ. ಮೊನ್ನೆಯಿಂದ ಸಂಜನಾ ಮದುವೆ ಪೂರ್ವ ಶಾಸ್ತ್ರಗಳು ಕಳೆಗಟ್ಟಿತ್ತು. ಮೊನ್ನೆಯಷ್ಟೇ ರಿಸೆಪ್ಷನ್ ಕಾರ್ಯಕ್ರಮ ನಡೆದಿತ್ತು. ಆರತಕ್ಷತೆಗೆ ಕಿರುತೆರೆ ಕಲಾವಿದರು ಬಂದು ಸಂಜನಾಗೆ ಶುಭ ಹಾರೈಸಿದ್ದರು.
ನವದೆಹಲಿ: ಇಸ್ರೇಲ್, ಅಮೆರಿಕಾ ಜೊತೆಗಿನ ಯುದ್ಧದ ನಡುವೆ ಇರಾನ್ ಬಹುತೇಕ ರಾಷ್ಟ್ರಗಳಿಗೆ ಹೊರ್ಮುಜ್ ಜಲಸಂಧಿಯನ್ನು ಭಾರತಕ್ಕೆ ಮಾತ್ರ ಓಪನ್ ಮಾಡುವುದಾಗಿ ಇರಾನ್ ಘೋಷಿಸಿದೆ.ಇದು ಕೇಂದ್ರ ಸರ್ಕಾರದ ರಾಜತಾಂತ್ರಿಕ ಗೆಲುವು ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ. ಹೊರ್ಮುಜ್ ಜಲಸಂಧಿ ತೆರೆದಿರುವುದರಿಂದ ಭಾರತದ ತೈಲ, ಸರಕು ಹಡಗುಗಳ ಸಂಚಾರಕ್ಕೆ ಯಾವುದೇ ತೊಂದರೆ ಎದುರಾಗದು. ಭಾರತ ಸೇರಿ ಒಟ್ಟು 5 ರಾಷ್ಟ್ರಗಳನ್ನು ಮಿತ್ರರಾಷ್ಟ್ರ ಎಂದು ಕರೆದಿರುವ ಇರಾನ್ ಈ ರಾಷ್ಟ್ರಗಳ ಹಡಗು ಸಂಚಾರಕ್ಕೆ ಯಾವುದೇ ತೊಂದರೆ ಮಾಡುವುದಿಲ್ಲ ಎಂದಿದೆ.
ನವದೆಹಲಿ: ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಯುದ್ಧದಿಂದಾಗಿ ದೇಶದಲ್ಲಿ ತೈಲ ಅಭಾವವಿದ್ದರೂ ಕೇಂದ್ರ ಜನರಿಗೆ ಹೊರೆ ಹೊರಿಸದೇ ಗುಡ್ ನ್ಯೂಸ್ ನೀಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡ್ಡಿಯಾಗಿರುವುದರಿಂದ ದೇಶದಲ್ಲಿ ಇಂಧನ ಬಿಕ್ಕಟ್ಟು ತಲೆದೋರಿದ್ದು ಬೆಲೆ ಏರಿಕೆಯಾಗಬಹುದು ಎಂದು ಜನ ಆತಂಕದಲ್ಲಿದ್ದರು. ಇದರ ನಡುವೆ ಈಗ ಕೇಂದ್ರ ಗುಡ್ ನ್ಯೂಸ್ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಲಾಗಿದೆ. ಪೆಟ್ರೋಲ್ ಮೇಲಿನ ಸುಂಕವನ್ನು ಪ್ರತೀ ಲೀಟರ್ ಗೆ 3 ಲೀಟರ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು 10 ರೂ.ಗಳಿಂದ ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ.
ಬೆಂಗಳೂರು: 2016 ರ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಗಳಿಸಿದ ದಾಖಲೆಯ ರನ್ ಈ ಬಾರಿ ಮುರಿಯುತ್ತಾರಾ? ಆ ಸಾಧ್ಯತೆಯಿದೆ ಎನ್ನುತ್ತಿದ್ದಾರೆ ಕ್ರಿಕೆಟ್ ಪಂಡಿತರು. ಐಪಿಎಲ್ 2026 ಕ್ಕೆ ನಾಳೆಯಿಂದ ಚಾಲನೆ ಸಿಗಲಿದೆ. ಬೆಂಗಳೂರಿನಲ್ಲಿ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಹಾಲಿ ಚಾಂಪಿಯನ್ ಆರ್ ಸಿಬಿ ಕಣಕ್ಕಿಳಿಯಲಿದೆ. ಈ ಪಂದ್ಯಕ್ಕೆ ಈಗಾಗಲೇ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಈ ಬಾರಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ. ಯಾಕೆಂದರೆ ಕಳೆದ ಬಾರಿಗೆ ಹೋಲಿಸಿದರೆ ಅವರು ಅದ್ಭುತ ಫಾರ್ಮ್ ನಲ್ಲಿದ್ದಾರೆ.
ನವದೆಹಲಿ: ಎಲ್ಲಾ ರಾಜ್ಯಗಳ ಸಿಎಂ ಜೊತೆ ಇಂದು ಪ್ರಧಾನಿ ಮೋದಿ ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಭೆ ಬಳಿಕ ಮಹತ್ವದ ಘೋಷಣೆ ಹೊರಬೀಳಬಹುದೇ ಎಂಬ ಕುತೂಹಲ ಜನರಲ್ಲಿದೆ. ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆಯುತ್ತಿದೆ. ಇದರಿಂದ ಭಾರತ ಸೇರಿದಂತೆ ಜಗತ್ತಿನಾದ್ಯಂತ ತೈಲ, ಅನಿಲ ಮತ್ತು ಕಚ್ಚಾ ವಸ್ತುಗಳ ಕೊರತೆ ಎದುರಾಗಿದೆ. ಭಾರತದಲ್ಲೂ ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಆಹಾರ ಉದ್ಯಮಗಳು ಸಂಕಷ್ಟದಲ್ಲಿವೆ. ಇಂದು ಸಂಜೆ 6.30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ ನಡೆಸಲಿದ್ದಾರೆ.
ನ್ಯೂಯಾರ್ಕ್: ಇರಾನ್ ಜೊತೆಗಿನದ ಯುದ್ಧಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ 10 ದಿನ ವಿರಾಮ ಘೋಷಿಸಿದ್ದಾರೆ. ಯುದ್ಧ ನಿಲ್ಲಿಸಲು ಮಾತುಕತೆ ಫಲಪ್ರದವಾಗುತ್ತಿದೆ ಎಂದಿದ್ದಾರೆ. ಇರಾನ್ ನ ಇಂಧನ ಸೌಲಭ್ಯಗಳ ಮೇಲಿನ ದಾಳಿಗೆ 10 ದಿನ ವಿರಾಮ ಘೋಷಿಸಿದ್ದಾರೆ. ಏಪ್ರಿಲ್ 6 ರ ರಾತ್ರಿ 8 ಗಂಟೆಯವರೆಗೆ ಈ ವಿರಾಮ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ. ಇರಾನ್ ಮನವಿ ಮೇರೆಗೇ ನಾವು ಈ ನಿರ್ಧಾರ ಕೈಗೊಂಡಿರುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ ಇರಾನ್ ಮಾತ್ರ ಕದನ ವಿರಾಮಕ್ಕೆ ನಾವು ಮನವಿ ಮಾಡಿಲ್ಲ ಎಂದಿದೆ. ಇತ್ತ ಟ್ರಂಪ್ ಇರಾನ್ ಮಾತುಕತೆಗೆ ಮನವಿ ಮಾಡಿಲ್ಲ ಎಂಬ ವಾದವನ್ನು ಒಪ್ಪಿಲ್ಲ.
ಮಳೆಯಲ್ಲಿ ನೆನೆದು ಒದ್ದೆಯಾಗಲಿದ್ದ ಬೆಕ್ಕಿನ ಮರಿಯಂತೆ ನಾಯಿಯೊಂದು ತಂದೆಯಂತೆ ರಕ್ಷಣೆ ನೀಡಿ ಕಾಪಾಡಿದ ಕ್ಯೂಟ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಬೆಕ್ಕು ಮತ್ತು ನಾಯಿ ಪರಸ್ಪರ ಶತ್ರುಗಳಂತೆ ಆಡುತ್ತಾರೆ. ಬೆಕ್ಕುಗಳು ಓಡಾಡುವುದನ್ನು ಕಂಡರೆ ನಾಯಿಗಳು ಅಟ್ಟಾಡಿಸಿಕೊಂಡು ಹೋಗುತ್ತವೆ. ಅಪರೂಪಕ್ಕೆ ಕೆಲವು ಸಾಕು ನಾಯಿಗಳು ಮಾತ್ರ ಅದೇ ಮನೆಯ ಬೆಕ್ಕುಗಳ ಜೊತೆ ಫ್ರೆಂಡ್ ಶಿಪ್ ಮಾಡುವುದು ಇದೆ. ಇಲ್ಲಿಯೂ ಅದೇ ರೀತಿ ಆಗಿದೆ. ಜೋರಾಗಿ ಮಳೆ ಸುರಿಯುತ್ತಿರುವಾಗ ಬೆಕ್ಕಿನ ಮರಿಯೊಂದು ನೆನೆಯುತ್ತಿತ್ತು. ಆ ಬೆಕ್ಕಿಗೆ ಮಳೆ ನೀರು ಬೀಳದಂತೆ ನಾಯಿಯೊಂದು ಅದನ್ನು ತನ್ನ ದೇಹದೊಳಗೆ ಬೆಚ್ಚಗೆ ಇರಿಸಿತ್ತು. ವಿಶೇಷವೆಂದರೆ ನಾಯಿ ಮಳೆಗೆ ಸಂಪೂರ್ಣ ಒದ್ದೆಯಾಗಿತ್ತು.
ಬೆಂಗಳೂರು: ಅಲ್ಲಲ್ಲಿ ಮಳೆಯ ನಡುವೆಯೂ ರಾಜ್ಯದಲ್ಲಿ ಬಿಸಿಲಿನ ತಾಪ ದಿನೇ ದಿನೇ ಹೆಚ್ಚಾಗುತ್ತಿದೆ. ಇಂದು ತಾಪಮಾನ ಮತ್ತಷ್ಟು ಏರಿಕೆಯಾಗಲಿದ್ದು ಇಂದಿನ ಹವಾಮಾನ ವರದಿ ಇಲ್ಲಿದೆ ನೋಡಿ. ರಾಜ್ಯದಲ್ಲಿ ಈಗ ಕೆಲವೆಡೆ ಅಲ್ಲಲ್ಲಿ ಗಾಳಿ, ಗುಡುಗು ಸಹಿತ ಮಳೆಯಾಗುತ್ತಿದೆ. ಇದರ ಜೊತೆಗೆ ತಾಪಮಾನದಲ್ಲೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಮಳೆ ಬಂದರೂ ಬಿಸಿಲು, ಸೆಖೆ ಕಡಿಮೆಯಾಗಿಲ್ಲ. ಇಂದು ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಇಂದು ರಾಜ್ಯದ ಗರಿಷ್ಠ ತಾಪಮಾನ ಸರಾಸರಿ 35 ಡಿಗ್ರಿ ತಲುಪಲಿದ್ದು ಇದು ನಿನ್ನೆಗೆ ಹೋಲಿಸಿದ ಹೆಚ್ಚಾಗಲಿದೆ. ಇಂದು ಕನಿಷ್ಠ ತಾಪಮಾನ 22 ಡಿಗ್ರಿಯಷ್ಟಾಗಲಿದೆ.
ಇಂದು ಶ್ರೀರಾಮನವಮಿಯಾಗಿದೆ. ಶ್ರೀರಾಮಚಂದ್ರ ಹುಟ್ಟಿದ ದಿನಕ್ಕೆ ಅವನನ್ನು ಕುರಿತು ಈ ಚುಟುಕಾದ ರಾಮ ಸ್ತೋತ್ರವನ್ನು ಓದಿ. ಶ್ರೀರಾಮ ಪಂಚರತ್ನ ಸ್ತೋತ್ರ ಇಲ್ಲಿದೆ ನೋಡಿ.ಕಂಜಾತಪತ್ರಾಯತ ಲೋಚನಾಯ ಕರ್ಣಾವತಂಸೋಜ್ಜ್ವಲ ಕುಂಡಲಾಯಕಾರುಣ್ಯಪಾತ್ರಾಯ ಸುವಂಶಜಾಯ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 1 ॥ ವಿದ್ಯುನ್ನಿಭಾಂಭೋದ ಸುವಿಗ್ರಹಾಯ ವಿದ್ಯಾಧರೈಸ್ಸಂಸ್ತುತ ಸದ್ಗುಣಾಯವೀರಾವತಾರಯ ವಿರೋಧಿಹರ್ತ್ರೇ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 2 ॥ ಸಂಸಕ್ತ ದಿವ್ಯಾಯುಧ ಕಾರ್ಮುಕಾಯ ಸಮುದ್ರ ಗರ್ವಾಪಹರಾಯುಧಾಯಸುಗ್ರೀವಮಿತ್ರಾಯ ಸುರಾರಿಹಂತ್ರೇ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 3 ॥ ಪೀತಾಂಬರಾಲಂಕೃತ ಮಧ್ಯಕಾಯ ಪಿತಾಮಹೇಂದ್ರಾಮರ ವಂದಿತಾಯಪಿತ್ರೇ ಸ್ವಭಕ್ತಸ್ಯ ಜನಸ್ಯ ಮಾತ್ರೇ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 4 ॥
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರ ಎರಡನೇ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿದೆ.50 ಪಂದ್ಯಗಳನ್ನು ಒಳಗೊಂಡಿರುವ ಲೀಗ್ ಹಂತದ ಉಳಿದ ಪಂದ್ಯಗಳನ್ನು ಏಪ್ರಿಲ್ 13 ರಿಂದ ಮೇ 24, 2026 ರವರೆಗೆ ಭಾರತದ 12 ಸ್ಥಳಗಳಲ್ಲಿ ಆಡಲಾಗುತ್ತದೆ.ಎರಡನೇ ಹಂತದ ಪಂದ್ಯಗಳು ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ದೆಹಲಿ, ಅಹಮದಾಬಾದ್, ಹೈದರಾಬಾದ್, ಲಕ್ನೋ, ಜೈಪುರ, ಧರ್ಮಶಾಲಾ, ರಾಯಪುರ ಮತ್ತು ನ್ಯೂ ಚಂಡೀಗಢದಲ್ಲಿ ನಡೆಯಲಿದೆ.