ಬೆಂಗಳೂರು: ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾಗಿ ತಿಂಗಳುಗಳೇ ಕಳೆದಿವೆ. ಆದರೆ ಇದುವರೆಗೆ ಪ್ರಶಸ್ತಿ ಪ್ರಧಾನವಾಗಿಲ್ಲ. ಈ ಬಗ್ಗೆ ಸಿಎಂ ಸಿದ್ದರಾಮಯ್ಯರಿಂದ ಅಳಿಯ, ನಟ ಅನಿರುದ್ಧ ಜತ್ಕರ್ ಗೆ ಸಿಕ್ಕ ಭರವಸೆಯೇನು ಇಲ್ಲಿದೆ ವಿವರ. ಕಳೆದ ವರ್ಷ ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ 75 ನೇ ಜನ್ಮ ಜಯಂತಿ ಸಂದರ್ಭದಲ್ಲಿ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಅವರ ಜೊತೆಗೆ ದಿವಂಗತ ನಟಿ ಬಿ ಸರೋಜ ದೇವಿ ಅವರಿಗೂ ಕರ್ನಾಟಕ ರತ್ನ ಘೋಷಣೆಯಾಗಿತ್ತು.
ದೆಹಲಿ: ಐಪಿಎಲ್ 2026 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬಿರುಗಾಳಿಯಂತಹ ಬೌಲಿಂಗ್ ಮಾಡಿದ ಆರ್ ಸಿಬಿ ಎದುರಾಳಿಗಳನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದ್ದಾರೆ. ಇಂದು ಟಾಸ್ ಗೆದ್ದ ಆರ್ ಸಿಬಿ ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದಕ್ಕೆ ತಕ್ಕಂತೆ ಬೌಲಿಂಗ್ ಮಾಡಿದ ಜೋಶ್ ಹೇಝಲ್ ವುಡ್, ಭುವನೇಶ್ವರ್ ಕುಮಾರ್ ಜೋಡಿ ಕನಸಿನಂತೆ ಬೌಲಿಂಗ್ ಮಾಡಿದರು. ಡೆಲ್ಲಿ ಒಂದು ಹಂತದಲ್ಲಿ ರನ್ ಗಳಿಸಿದ್ದಕ್ಕಿಂತ ಹೆಚ್ಚು ವಿಕೆಟ್ ಕಳೆದುಕೊಂಡಿತ್ತು. ಆರ್ ಸಿಬಿ ಬೌಲಿಂಗ್ ಯಾವ ಮಟ್ಟಿಗಿತ್ತು ಎಂದರೆ ಕೇವಲ 8 ರನ್ ಗೆ ಡೆಲ್ಲಿ 6 ವಿಕೆಟ್ ಕಳೆದುಕೊಂಡಿತ್ತು.
ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ದಾಖಲೆಯ ಫಲಿತಾಂಶ ಪಡೆಯಲು ಪರೀಕ್ಷಾ ಕೇಂದ್ರದಲ್ಲಿ ವೆಬ್ಕ್ಯಾಸ್ಟಿಂಗ್ ಸ್ಥಗಿತಗೊಳಿಸಿ ಕಾಪಿ ಹೊಡೆಯಲಾಗಿದೆ ಎಂಬ ಎಚ್ ವಿಶ್ವನಾಥ್ ಆರೋಪಕ್ಕೆ ಮಧುಬಂಗಾರಪ್ಪ ಪ್ರತಿಕ್ರಿಯಿಸಿ, ಅವರಿಗೆ ವಯಸ್ಸಾಗಿದೆ. ಅದನ್ನು ಅರಳುಮರಳು ಎಂದು ಹೇಳಲಾಗುವುದಿಲ್ಲ ಎಂದು ಹೇಳಿದರು. ಅವರ ಈ ಹೇಳಿಕೆ ನಾಡಿನ ಮಕ್ಕಳು ಶೈಕ್ಷಣಿಕ ಸಾಧನೆ ಒಪ್ಪಲಾಗದೇ ಮಾಡಿರುವ ಉದ್ದೇಶಪೂರ್ವಕ ಅಪಮಾನ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.
ಭುವನೇಶ್ವರ: ಒಡಿಶಾದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಜನಗಣತಿ ಕಾರ್ಯದಲ್ಲಿ ನಿರತರಾಗಿದ್ದ ಇಬ್ಬರು ಶಾಲಾ ಶಿಕ್ಷಕರು ಎರಡು ದಿನಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.ಮಯೂರ್ಭಂಜ್ ಮತ್ತು ಸುಂದರ್ಗಢ ಜಿಲ್ಲೆಗಳಲ್ಲಿ ಈ ಘಟನೆಗಳು ಸಂಭವಿಸಿದ್ದು, ತಾಪಮಾನವು 37 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ.ರಾಜ್ಯದಲ್ಲಿ ಇದು ಮೂರನೇ ಘಟನೆ.ಬೆಟ್ನೋಟಿ ಬ್ಲಾಕ್ನ ಬೈದ್ಯನಾಥ ಪ್ರೌಢಶಾಲೆಯ ಶಿಕ್ಷಕ ರಾಜಕಪೂರ್ ಹೆಂಬ್ರಾಮ್ ಭಾನುವಾರ ಸಂಜೆ ಬರಿಪಾದದ ಆಸ್ಪತ್ರೆಯಲ್ಲಿ
ಬೇಸಿಗೆ ಸಮಯದಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸುವುದು ಆರೋಗ್ಯದ ಮೇಲೆ ಉತ್ತಮವಾಗುತ್ತದೆ. ನೀರು, ನಾರಿನಂಶ ಮತ್ತು ಪೋಷಕಾಂಶಗಳಿಂದ ತುಂಬಿರುವ ಅವರು ಒಳಗಿನಿಂದ ನಿಮ್ಮನ್ನು ರಿಫ್ರೆಶ್ ಮಾಡಬಹುದು. ಈ ಋತುವಿನಲ್ಲಿ ಸೇವಿಸಲೇಬೇಕಾದ ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ. ಕಲ್ಲಂಗಡಿಕಲ್ಲಂಗಡಿ ಇಲ್ಲದೆ ಯಾವುದೇ ಬೇಸಿಗೆಯ ಹಣ್ಣಿನ ಪಟ್ಟಿ ಪೂರ್ಣಗೊಂಡಿಲ್ಲ. ಇದರ ಹೆಚ್ಚಿನ ನೀರಿನ ಅಂಶದಿಂದಾಗಿ, ಇದು ಬಿಸಿ ದಿನಗಳಲ್ಲಿ ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ.ಮಾವು
ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಾರೆಯಾಗಿರುವ ಸಾಯಿ ಪಲ್ಲವಿ, ಥಾಯ್ ಚಿತ್ರ ಒನ್ ಡೇ ನ ರೂಪಾಂತರವಾದ ಅಮೀರ್ ಖಾನ್ ನಿರ್ಮಾಣದ ಜುನೈದ್ ಖಾನ್ ಜೊತೆಗಿನ ಏಕ್ ದಿನ್ನಲ್ಲಿ ಹಿಂದಿ ಚಿತ್ರರಂಗಜ್ಜೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕ್ಯಾಮೆರಾ ಮುಂದೆ ವರ್ಷಗಳನ್ನು ಕಳೆದಿರುವವರಿಗೂ ಹೊಸ ಉದ್ಯಮಕ್ಕೆ ಕಾಲಿಡುವುದು ಸುಲಭವಲ್ಲ. ಮತ್ತು ಸಾಯಿ ಪಲ್ಲವಿಗೆ, ಈ ಕ್ಷಣವು ಮತ್ತೊಂದು ಚಿತ್ರ ಬಿಡುಗಡೆಗಿಂತ ಹೊಸ ಆರಂಭದಂತೆ ಭಾಸವಾಗುತ್ತದೆ.ಕಳೆದ ಒಂದು ದಶಕದಲ್ಲಿ ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದಾದ್ಯಂತ ಸದೃಢವಾದ ವೃತ್ತಿಜೀವನವನ್ನು
ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟರ್ ಅಂಗ್ಕ್ರಿಶ್ ರಘುವಂಶಿ ಅವರು ಐಪಿಎಲ್ 2026ರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ಜತೆ ಅಶಿಸ್ತು ತೋರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಅಂಗ್ ಕ್ರಿಶ್ ರಘುವಂಶಿಗೆ ದಂಡವನ್ನು ವಿಧಿಸಲಾಗಿದೆ. ಭಾನುವಾರ ಲಕ್ನೋದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸೂಪರ್ ಜೈಂಟ್ಸ್ ನಡುವಿನ ಪಂದ್ಯಾಟದ ವೇಳೆ IPL ನ ನೀತಿ ಸಂಹಿತೆಯ ಹಂತ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಂಗ್ರಹಿಸಿದರು.ಭಾನುವಾರ ಕೋಲ್ಕತ್ತಾ ಮೊದಲು ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಐದನೇ ಓವರ್ನ ಕೊನೆಯ ಎಸೆತದಲ್ಲಿ
ರಾಜ್ಯದಲ್ಲಿ ದಿನದಿಂದ ದಿನ ಬಿಸಿಲ ಧಗೆ ಏರುತ್ತಲೇ ಇದೆ. ಇನ್ನೂ ಈ ಸಂದರ್ಭದಲ್ಲಿ ನಾವು ಸೇವಿಸುವ ಆಹಾರ ತುಂಬಾನೇ ಮುಖ್ಯ. ಇದು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದ. ಇನ್ನೂ ಈ ಬಿಸಿಲ ತಾಪಕ್ಕೆ ಫ್ರಿಜ್ನಿಂದ ತೆಗೆದ ತಣ್ಣನೆಯ ನೀರು ಕುಡಿಯುವುದು ಸ್ವರ್ಗದಂತೆ ಅನ್ನಿಸಬಹುದು. ಆದರೆ, ಆ ಕ್ಷಣದ ಆರಾಮದ ಜೊತೆಗೆ ಇದು ನಮ್ಮ ದೇಹದ ಮೇಲೆ ಕೆಲವು ಪರಿಣಾಮಗಳನ್ನು ಬೀರುತ್ತದೆ.ಇನ್ನೂ ಈ ಲೇಖನದಲ್ಲಿ ಪ್ರಿಡ್ಜ್ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ:
ದೆಹಲಿ: ಐಪಿಎಲ್ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಈ ಮಧ್ಯೆ ಆರ್ಸಿಬಿ ಆಟಗಾರರು ಡೆಲ್ಲಿನಲ್ಲಿ ಗಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಲೀಗ್ ಪಂದ್ಯಕ್ಕಾಗಿ ಆರ್ಸಿಬಿ ತಂಡ ದೆಹಲಿಯಲ್ಲಿ ಬೀಡುಬಿಟ್ಟಿದೆ. ವಿರಾಮದ ಸಮಯದಲ್ಲಿ ಆರ್ಸಿಬಿ ಆಟಗಾರರು ದೆಹಲಿಯ ಬೀದಿಗಳನ್ನು ಸುತ್ತಾಡಿ ಬಂದಿದ್ದಾರೆ.ವಸಂತ್ ಕುಂಜ್ ಪ್ರದೇಶದಲ್ಲಿ ಸುತ್ತಾಡುವಾಗ ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್, ಕೆಲ ಮಕ್ಕಳು ಗಲ್ಲಿ ಕ್ರಿಕೆಟ್ ಆಡುವುದನ್ನು ನೋಡಿ, ಅವರೊಂದಿಗೆ ತಾವು ಕೂಡ ಆಡಿದ್ದಾರೆ.
ರಾಮನಗರ: ಸಿದ್ದರಾಮಯಯ್ಯ ಬಳಿಕ ಸಿಎಂ ರೇಸ್ನಲ್ಲಿರುವುದು ಡಿಕೆ ಶಿವಕುಮಾರ್ ಮಾತ್ರ. ಇನ್ನೂ ಬೇರೆಯವರೂ ರೇಸ್ನಲ್ಲಿದ್ದಾರೆ, ಆದರೆ ಅದು ಕಾಲಕ್ಕೆ ತಕ್ಕ ಹಾಗೇ ತೀರ್ಮಾನವಾಗುತ್ತದೆ ಎಂದು ರಾಮನಗರದಲ್ಲಿ ಶಾಸಕ ಎಚ್ ಸಿ ಬಾಲಕೃಷ್ಣ ಹೇಳಿದರು. ಸದ್ಯಕ್ಕೆ ಸಿದ್ದರಾಮಯ್ಯನವರು ಬೇಡ ಅಂದಾಗ ಆ ಸ್ಥಾನದ ರೇಸ್ನಲ್ಲಿರೋದು ಡಿಕೆಶಿ. ಈ ಅವಧಿಯಲ್ಲೇ ಡಿಕೆಶಿಗೆ ಅವಕಾಶ ಸಿಗುತ್ತೆ. ನಮ್ಮ ಹೈಕಮಾಂಡ್ ಈ ಬಗ್ಗೆ ಸೂಕ್ತ ತೀರ್ಮಾನ ಮಾಡುತ್ತದೆ ಎಂದರು.
ಬೆಂಗಳೂರು: ದೇಶವನ್ನೇ ಬೆಚ್ಚಿಬೀಳಿಸಿದ ಮಂಗಳೂರಿನ ಕುಕ್ಕರ್ ಸ್ಪೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಂತೆ ಉಗ್ರ ಶಾರಿಕ್ಗೆ 10ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಎನ್ಐಎ ಸ್ಪೆಷಲ್ ಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ.ಸೆಕ್ಷನ್ 121 ಎ, ಸೆಕ್ಷನ್ 122, ಸೆಕ್ಷನ್ 326 ಹಾಗೂ ಯುಎಪಿಎ ಸೇರಿದಂತೆ ಹಲವು ಸೆಕ್ಷನ್ಗಳ ಅಡಿಯಲ್ಲಿ ಕೋರ್ಟ್ 10 ವರ್ಷ ಕಠಿಣ ಶಿಕ್ಷೆ, 10 ಸಾವಿರ ದಂಡ ವಿಧಿಸಿದೆ.‘ಓರ್ವ ಮಗಳಿದ್ದಾಳೆ, ಮನೆಯಲ್ಲಿ ದುಡಿಯುವವನು ನಾನೊಬ್ಬನೇ.. ಹೀಗಾಗಿ ಶಿಕ್ಷೆ ಕಡಿಮೆ ಮಾಡುವಂತೆ’ ಶಾರಿಕ್ ಮನವಿ
ರಾತ್ರಿ ಬಿರಿಯಾನಿ ಸೇವಿಸಿ, ಕಲ್ಲಂಗಡಿ ತಿಂದ ಬಳಿಕ ಒಂದೇ ಕುಟುಂಬದ ನಾಲ್ವರು ಅನುಮಾನಸ್ಪದವಾಗಿ ಸಾವನ್ನಿಪ್ಪಿರುವ ಘಟನೆ ಮುಂಬೈನಲ್ಲಿ ವರದಿಯಾಗಿದೆ. ಫುಡ್ ಪಾಯಿಸನ್ ಪ್ರಕರಣವು ಇದೀಗ ಮಹಾರಾಷ್ಟವನ್ನೇ ಬೆಚ್ಚಿಬೀಳಿಸಿದೆ. ಪೇಧುನಿ ಪ್ರದೇಶದಿಂದ ಈ ಘಟನೆ ವರದಿಯಾಗಿದ್ದು, ಅಬ್ದುಲ್ಲಾ ದೊಕಾಡಿಯಾ (40), ಅವರ ಪತ್ನಿ ನಸ್ರೀನ್ ದೋಕಾಡಿಯಾ (35), ಮತ್ತು ಅವರ ಇಬ್ಬರು ಪುತ್ರಿಯರಾದ ಆಯೇಷಾ (16) ಮತ್ತು ಜೈನಾಬ್ (13) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಬೆಂಗಳೂರು: ದೆಹಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಬಂಧಿತನಾಗಿರುವ ಉಮರ್ ಖಾಲಿದ್ ಹಾಗೂ ಶಾರ್ಜಿಲ್ ಇಮಾಮ್ ಕುರಿತ ಪುಸ್ತಕ ಬಿಡುಗಡೆಗೆ ಭಾರತೀಯ ಜನತಾ ಪಾರ್ಟಿ ವಿರೋಧವಿದೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಇದಕ್ಕೆ ಅವಕಾಶ ಕೊಡಬಾರದು. ಒಂದು ವೇಳೆ ಅವಕಾಶ ನೀಡಿದರೆ ಬಿಜೆಪಿ ಖಂಡಿಸಲಿದೆ ಎಂದು ವಿಧಾನ ಪರಿಷತ್ತಿನಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ಹೇಳಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕರ ಕುರಿತು ಪುಸ್ತಕ ಬಿಡುಗಡೆಗೆ ಸಿದ್ಧತೆ ನಡೆದಿದೆ.
ಮಂಗಳೂರು: 2022 ರಲ್ಲಿ ನಡೆದಿದ್ದ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಉಗ್ರ ಶಾರಿಕ್ ಗೆ ಎನ್ಐಎ ವಿಶೇಷ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2022 ರ ನವಂಬರ್ 19 ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ಆರೋಪಿ ಶಾರಿಕ್ ಬಾಂಬ್ ಸಾಗಿಸುತ್ತಿರುವಾಗಲೇ ಸ್ಪೋಟಗೊಂಡಿತ್ತು. ಈ ಘಟನೆಯಲ್ಲಿ ಶಾರಿಕ್ ಮತ್ತು ಆಟೋ ಚಾಲಕನಿಗೆ ಗಾಯಗಳಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಭದ್ರತೆಗೆ ಧಕ್ಕೆ ತರಲು ಸಂಚು ರೂಪಿಸಿದ ಅಪರಾಧದ ಮೇರೆಗೆ ಉಗ್ರ ಶಾರಿಕ್ ಗೆ ಎನ್ಐಎ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣವನ್ನು ಎನ್ಐಎ ತಂಡ ತನಿಖೆ ನಡೆಸಿತ್ತು.
ಗುಜರಾತ್: ಪತ್ನಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ ಪೊಲೀಸರಿಗೆ ಪತಿಯ ಖತರ್ನಾಕ್ ಕೃತ್ಯ ಬಯಲಾಗಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿ ಮರದ ಬಾಕ್ಸ್ಗೆ ಶವ ತುಂಬಿ ಸಿಮೆಂಟ್ನಲ್ಲಿ ಸೀಲ್ ಮಾಡಿ, ನಂತರ ಠಾಣೆಗೆ ತೆರಳಿ ನಾಪತ್ತೆ ನಾಟಕವಾಡಿದ ಪೊಲೀಸರಿಗೆ ಪತಿಯ ಹೈಡ್ರಾಮಾ ಬಯಲಾಗಿದೆ. ಈ ಘಟನೆ ಸೂರತ್ ಅನ್ನು ಬೆಚ್ಚಿಬೀಳಿಸಿದೆ. ಒಬ್ಬ ವ್ಯಕ್ತಿ ತನ್ನ ಹೆಂಡತಿಯನ್ನು ಕೊಂದ ಬಳಿಕ ಮೃತದೇಹವನ್ನು ಮರದ ವಾಕ್ಸ್ನಲ್ಲಿ ತುಂಬಿಸಿ, ಸಿಮೆಂಟ್ನಲ್ಲಿ ಸೀಲ್ ಮಾಡಿದ್ದಾನೆ. ಇನ್ನೂ ಪ್ರಕರಣವನ್ನು ತಪ್ಪು ದಾರಿಗೆಳೆಯಲು ನಾಪತ್ತೆ ದೂರನ್ನು ದಾಖಲಿಸಿದ್ದಾನೆ. ಆರೋಪಿಯನ್ನು 40 ವರ್ಷದ ವಿಶಾಲ್ ಸಾಲ್ವಿ ಎಂದು ಗುರುತಿಸಲಾಗಿದ್ದು, ಆತನ ಪತ್ನಿ ಶಿಲ್ಪಾ ಸಾಲ್ವಿ (39) ಕೊಲೆಯಾದ
ನವದೆಹಲಿ: 98% LPG ರೀಫಿಲ್ ಬುಕಿಂಗ್ಗಳು ಡಿಜಿಟಲ್ನಲ್ಲಿ ನಡೆಯುತ್ತಿವೆ, ಆದರೆ 94% ವಿತರಣೆಗಳು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಮತ್ತು ಅಡುಗೆ ಅನಿಲದ ದಿಕ್ಕು ತಪ್ಪಿಸುವುದನ್ನು ತಡೆಯಲು ಡೆಲಿವರಿ ದೃಢೀಕರಣ ಕೋಡ್ (DAC) ಆಧರಿಸಿವೆ ಎಂದು ಸರ್ಕಾರ ಭಾನುವಾರ ತಿಳಿಸಿದೆ. ಇಂಧನ ಕೊರತೆ ಇಲ್ಲ: ಮಾರ್ಚ್ನಲ್ಲಿ ಭಾರತದ ಎಲ್ಪಿಜಿ ಬೇಡಿಕೆ 13% ಕುಸಿದಿರುವುದರಿಂದ 100% ದೇಶೀಯ ಅನಿಲ ಪೂರೈಕೆಗೆ ಸರ್ಕಾರ ಭರವಸೆ ನೀಡುತ್ತದೆ.ಮೊಬೈಲ್ ಅಪ್ಲಿಕೇಶನ್ಗಳು, IVRS ಕರೆಗಳು ಮತ್ತು SMS ಮೂಲಕ 71% ರಷ್ಟು ಮರುಪೂರಣಗಳನ್ನು ಈ ಹಿಂದೆ
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಮಹಿಳೆಯರ ಹಿಂಬದಿ ವಿಡಿಯೋವನ್ನು ಚಿತ್ರೀಕರಣ ಮಾಡುತ್ತಿದ್ದ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಣೆ ಮಾಡಿದೆ. ಮೆಟ್ರೋದಲ್ಲಿ ರಹಸ್ಯವಾಗಿ ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಆರೋಪಿ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಮೆಟ್ರೋದಲ್ಲಿ ಮಹಿಳೆಯರ ಹಿಂಬದಿ ಫೋಟೊ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತೀರಾ, ಏನಿದು ಅಸಹ್ಯ ನಡವಳಿಕೆ. ಮೆಟ್ರೋದಲ್ಲೂ ಮಹಿಳೆಯರಿಗೆ ಸುರಕ್ಷತೆ ಇಲ್ವಾ ಎಂದು ಕೋರ್ಟ್ ಬೇಸರವನ್ನು ವ್ಯಕ್ತಪಡಿಸಿದೆ.
ಕೋಲ್ಕತ್ತಾ (ಪಶ್ಚಿಮ ಬಂಗಾಳ): ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ತಮ್ಮ ಬೆಂಬಲವನ್ನು ನೀಡಿದರು, ವಿಶೇಷ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ 90 ಲಕ್ಷ ಮತಗಳನ್ನು ಕಡಿತಗೊಳಿಸಿದ ಭಾರತೀಯ ಜನತಾ ಪಕ್ಷಕ್ಕೆ ಬಂಗಾಳದ ಜನರು ಸೇಡು ತೀರಿಸಿಕೊಳ್ಳುತ್ತಾರೆ ಎಂದು ಅಭಿಪ್ರಾಯ ಹೊರಹಾಕಿದರು. ರಾಜ್ಯದಲ್ಲಿ ದೊಡ್ಡ ಪ್ರಮಾಣದ ಮತದಾರರ ಪಟ್ಟಿ ದುರ್ಬಳಕೆಯಾಗಿದೆ. ಕೋಲ್ಕತ್ತಾದಲ್ಲಿ ಸಾರ್ವಜನಿಕ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, "ಈ ಚುನಾವಣೆಗಳಿಗಾಗಿ ನಾನು ಮಮತಾ ಬ್ಯಾನರ್ಜಿಯವರಿಗೆ ನನ್ನ ಶುಭಾಶಯಗಳನ್ನು ಹೇಳಲು ಬಯಸುತ್ತೇನೆ. ಪಶ್ಚಿಮ ಬಂಗಾಳದ ಜನರು ಈ ಸರ್ವಾಧಿಕಾರದ ವಿರುದ್ಧ ಹೋರಾಡುತ್ತಿರುವ ರೀತಿಗೆ ನಾನು ಅಭಿನಂದಿಸುತ್ತೇನೆ
ಮುಂಬೈ: ಸೈಫ್ ಅಲಿಖಾನ್ ತಮ್ಮ ಮಕ್ಕಳಿಗಾಗಿ ಖರೀದಿಸಿದ್ದ ಡೋನಟ್ ನೋಡಿ ಬಡ ಮಕ್ಕಳು ಆಸೆಯಿಂದ ಕೈ ಚಾಚಿದ್ದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ಇದೀಗ ಮಕ್ಕಳಿಗೆ ರಜಾ ಸಮಯ. ಸೆಲೆಬ್ರಿಟಿಯಾಗಿದ್ದರೂ ಸೈಫ್ ಅಲಿಖಾನ್ ಕೂಡಾ ತಮ್ಮ ಮಕ್ಕಳನ್ನು ಕರೆದುಕೊಂಡು ಹಾಗೇ ಒಂದು ರೌಂಡ್ ಹೋಗಿರಬೇಕು. ಮುಂಬೈನ ಡೋನಟ್ ಔಟ್ ಲೆಟ್ ನಲ್ಲಿ ಕೆಲವು ಹೊತ್ತು ಇದ್ದು ತಮ್ಮ ಮಕ್ಕಳಿಗೆ ಮೆಚ್ಚಿನ ಡೋನಟ್ ಖರೀದಿಸಿದ್ದಾರೆ. ಸೈಫ್ ಅಲಿ ಖಾನ್ ಬಂದಿದ್ದಾರೆ ಎಂದು ತಿಳಿದು ಸಾಕಷ್ಟು ಜನ ಅಂಗಡಿ ಹೊರಗೆ ಅವರನ್ನು ನೋಡಲು ನಿಂತಿದ್ದರು. ಈ ಪೈಕಿ ಸಾಕಷ್ಟು ಮಕ್ಕಳೂ ಅಲ್ಲಿ ನಿಂತಿದ್ದರು.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಪುತ್ರಿ ನಿತಾರಾ ಕುಮಾರ್ಗೆ ತನ್ನ ನಗ್ನ ಚಿತ್ರಗಳನ್ನು ಕಳಿಸಿದ್ದು ಕೇಳಿದ ಪ್ಕರಣದಲ್ಲಿ ಓರ್ವನನ್ನು ಬಂಧಿಸಲಾಗಿದೆ. ಸೈಬರ್ ಕಿರುಕುಳ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಸೈಬರ್ ಇಲಾಖೆ ಶುಕ್ರವಾರ ಬಹಿರಂಗಪಡಿಸಿದೆ. 13 ವರ್ಷದ ನಿತಾರಾ ಆನ್ಲೈನ್ ಗೇಮ್ ಆಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ತನ್ನ ನಗ್ನಚಿತ್ರಗಳನ್ನು ಕೇಳಿದ್ದಾನೆ. ಅಕ್ಷಯ್ ಅವರ 13 ವರ್ಷದ ಮಗಳು ಆನ್ಲೈನ್ ಗೇಮ್ ಆಡುವಾಗ ಸಂದೇಶವನ್ನು ಸ್ವೀಕರಿಸಿದ ನಂತರ ನಗ್ನ ಫೋಟೋಗಳನ್ನು ಕೇಳಲಾಯಿತು
ಬೆಂಗಳೂರು: ತಾಯಿ ಜತೆ ಮಾತನಾಡುತ್ತಿರುವಾಗಲೇ ಬ್ರೈನ್ ಸ್ಟೋಕ್ ಒಳಗಾದ ಟೆಕ್ಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಮೃತ ಟೆಕ್ಕಿಯನ್ನು ಹಾಸನ ಜಿಲ್ಲೆಯ ಶ್ವೇತಾ (25) ಎಂದು ಗುರುತಿಸಲಾಗಿದೆ. ಏ.25ರ ಶನಿವಾರ ಕೆಲಸ ಮುಗಿಸಿ ಮನೆಗೆ ಬಂದ ಶ್ವೇತಾ ತಾಯಿಯ ಜೊತೆ ನಗುನಗುತ್ತಾ ಮಾತನಾಡುತ್ತಿರುವಾಗಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಶ್ವೇತಾ ಕೋಮಾಗೆ ಜಾರಿದ್ದಾಳೆ. ದುಃಖದ ಮಧ್ಯೆಯೇ ಬ್ರೈನ್ ನಿಷ್ಕ್ರಿಯಗೊಂಡಿದ್ದರಿಂದ ಪೋಷಕರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು.
ನನ್ನ ಜೊತೆ ಸೆಲ್ಫೀ ಬೇಕು ಎಂದರೆ 100 ರೂ ಕೊಡಬೇಕು ಎಂದು ಕ್ರಿಕೆಟಿಗ ವೈಭವ್ ಸೂರ್ಯವಂಶಿ ಮಕ್ಕಳನ್ನು ಪ್ರಾಂಕ್ ಮಾಡಿದ್ದು ಮಕ್ಕಳು ಏನು ಮಾಡಿದ್ರು ಎಂದು ತಿಳಿಯಲು ಈ ವಿಡಿಯೋ ನೋಡಿ. ಐಪಿಎಲ್ ನಲ್ಲಿ ಭರ್ಜರಿ ಹೊಡೆತಗಳ ಮೂಲಕ ಎದುರಾಳಿಗಳ ಎದೆಯಲ್ಲಿ ಭಯ ಹುಟ್ಟಿಸಿರುವ ಯಂಗ್ ಸೆನ್ಸೇಷನಲ್ ಕ್ರಿಕೆಟಿಗ ವೈಭವ್ ಸೂರ್ಯವಂಶಿಗೆ ಈಗ ಅಭಿಮಾನಿಗಳು ಎಲ್ಲೇ ಹೋದರೂ ಸೆಲ್ಫೀಗಾಗಿ ಮುಗಿಬೀಳುತ್ತಾರೆ. ಅದೇ ರೀತಿ ರಾಜಸ್ತಾನ್ ರಾಯಲ್ಸ್ ತಂಡದ ತಮ್ಮ ಸಹ ಆಟಗಾರರೊಂದಿಗೆ ಇನ್ನೊಂದು ತಾಣಕ್ಕೆ ಹೋಗಲು ವೈಭವ್ ವಿಮಾನ ನಿಲ್ದಾಣದಲ್ಲಿ ಕುಳಿತಿದ್ದರು.
ಬೆಂಗಳೂರು: ಮೇ 15 ರೊಳಗೆ ಹೈಕಮಾಂಡ್ ಡಿಕೆ ಶಿವಕುಮಾರ್ ಗೆ ಬಂಪರ್ ಗಿಫ್ಟ್ ಕೊಡಲಿದೆ ಎಂದು ಡಿಕೆಶಿ ಪರ ಶಾಸಕರು ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯ ಸುಳಿವು ನೀಡಿದ್ದಾರೆ. ಇತ್ತೀಚೆಗಷ್ಟೇ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ಅಧಿಕಾರ ಹಸ್ತಾಂತರದ ಬಗ್ಗೆ ಸ್ಪಷ್ಟ ಸಂದೇಶ ನೀಡಬೇಕು ಎಂದು ಡಿಕೆ ಶಿವಕುಮಾರ್ ಈ ವೇಳೆ ಬೇಡಿಕೆ ಮುಂದಿಟ್ಟಿದ್ದರು ಎನ್ನಲಾಗಿದೆ. ಇದರ ನಡುವೆಯೇ ಈಗ ಕುಣಿಗಲ್ ಶಾಸಕ ಡಾ ರಂಗನಾಥ್ ಶೀಘ್ರದಲ್ಲೇ ಡಿಕೆ ಶಿವಕುಮಾರ್ ಗೆ ಸೂಕ್ತ ಸ್ಥಾನ ಮಾನ ಸಿಗಲಿದೆ ಎಂದಿದ್ದಾರೆ.
ಅಳಬೇಡ ಸುಮ್ಮನಿರು, ನಿನಗೆ ನಾನಿದ್ದೇನೆ ಎಂದು ಹೇಳುವಂತಿದೆ ಈ ಕೋತಿಯ ವರ್ತನೆ. ಅಳುತ್ತಿದ್ದ ಮಗುವನ್ನು ಸಂತೈಸಿದ ಕೋತಿಯ ಈ ವಿಡಿಯೋ ಇಲ್ಲಿದೆ ನೋಡಿ. ಮಂಗಗಳ ವರ್ತನೆ ಹೆಚ್ಚು ಕಡಿಮೆ ಮನುಷ್ಯರನ್ನೇ ಹೋಲುತ್ತದೆ. ಅವುಗಳಿಗೆ ಮನುಷ್ಯರ ಸಂವೇದನೆಗಳೂ ಅರ್ಥವಾಗುತ್ತದೆ. ಮಂಗನಿಂದ ಮಾನವ ಎಂಬ ಸಿದ್ಧಾಂತವೇ ಇದೆಯಲ್ಲಾ? ಈ ವಿಡಿಯೋ ನೋಡಿದರೆ ಕೋತಿ ಎಂದು ಹೀಯಾಳಿಸುವ ಮೊದಲು ಅದಕ್ಕಿರುವ ಮಾನವೀಯತೆ ನೋಡಿ ಕೊಂಡಾಡಲೇಬೇಕಾಗುತ್ತದೆ. ಮಗುವೊಂದು ರಸ್ತೆಯಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿರುತ್ತದೆ. ಅದು ಯಾವ ಕಾರಣಕ್ಕೆ ಅಳುತ್ತಿದೆ ಎನ್ನುವುದು ಗೊತ್ತಾಗಿಲ್ಲ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಇಳಿಕೆಯಾಗಿದ್ದು ಮತ್ತುಇತರೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ವಾರಂತ್ಯಕ್ಕೆ ಪರಿಶುದ್ಧ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿತ್ತು. ಪರಿಶುದ್ಧ ಚಿನ್ನದ ದರ ವಾರಂತ್ಯಕ್ಕೆ 1,56,260.00 ರೂ.ಗಳಿತ್ತು. ಆದರೆ ಇಂದು ಇಳಿಕೆಯಾಗಿದ್ದು 1,56,170.00 ರೂ.ಗಳಷ್ಟಿದೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ಕಳೆದ ವಾರದಂತೆ ಈ ವಾರವೂ ಅದೇ ಟ್ರೆಂಡ್ ಮುಂದುವರಿದಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಳಿಕೆಯಾಗುತ್ತಲೇ ಇತ್ತು. ಕಳೆದ ವಾರ ಎರಡು ದಿನ ಸತತವಾಗಿ ಬೆಲೆ ಏರಿಕೆ ಕಂಡುಬರುತ್ತಿತ್ತು. ಅಡಿಕೆ ಬೆಲೆಯಲ್ಲಿ ಇಂದು ಯಥಾಸ್ಥಿತಿಯಲ್ಲಿದೆ. ಹೊಸ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದು 475 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದು 550 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ 550 ರೂ.ಗಳಷ್ಟಾಗಿದೆ.
ಹೆಸರಿಗಷ್ಟೇ ರಾಷ್ಟ್ರೀಯ ಕ್ರಿಕೆಟಿಗ, ಆದರೆ ನಾಗರಿಕ ಪ್ರಜ್ಞೆ ಎನ್ನೋದು ಸ್ವಲ್ಪವೂ ಇಲ್ಲ ಎಂದು ಕ್ರಿಕೆಟಿಗ ಯಜುವೇಂದ್ರ ಚಹಲ್ ಗೆ ಮತ್ತೆ ನೆಟ್ಟಿಗರು ಝಾಡಿಸಿದ್ದಾರೆ. ಐಪಿಎಲ್ 2026 ರಲ್ಲಿ ಚಹಲ್ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಾರೆ. ಇದೀಗ ಅವರು ತಮ್ಮ ತಂಡದ ಜೊತೆಗೆ ವಿಮಾನ ನಿಲ್ದಾಣದಲ್ಲಿ ತೆರಳುತ್ತಿದ್ದಾಗ ನಡೆದುಕೊಂಡ ರೀತಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ಅಷ್ಟಕ್ಕೂ ಅವರು ಮಾಡಿದ್ದೇನು ಇಲ್ಲಿದೆ ನೋಡಿ ವಿವರ. ವಿಮಾನ ನಿಲ್ದಾಣದಲ್ಲಿ ನಿಂತಿದ್ದಾಗ ಚಹಲ್ ಕಾಲಿಗೆ ಏನೋ ಕೊಳೆ ಅಂಟಿಕೊಂಡಿರುತ್ತದೆ. ಇದನ್ನು ಗಮನಿಸುವ ಸಹ ಆಟಗಾರ ಚಹಲ್ ಗೆ ಅದರ ಬಗ್ಗೆ ಸೂಚನೆ ಕೊಡುತ್ತಾರೆ.
ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ದೇವಾಲಯಕ್ಕೆ ತೆರಳುವಾಗ ಪ್ರಧಾನಿ ಮೋದಿ ತಾವೇ ಖುದ್ದಾಗಿ ಹೋಗಿ ತಾವರೆ ಹೂ ಖರೀದಿ ಮಾಡಿದ್ದರು. ಈ ವ್ಯಾಪಾರಿ ಈಗ ಪ್ರಧಾನಿ ಮೋದಿ ಕೊಟ್ಟ ನೋಟನ್ನು ಖರ್ಚೇ ಮಾಡಲ್ಲ ಎನ್ನುತ್ತಿದ್ದಾನೆ. ಪಶ್ಚಿಮ ಬಂಗಾಲ ಎರಡನೇ ಹಂತದ ಚುನಾವಣೆಗೆ ಪ್ರಧಾನಿ ಮೋದಿ ಖುದ್ದಾಗಿ ತಾವೇ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ನಿನ್ನೆ ಇಲ್ಲಿನ ಕಾಳಿಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಿಶೇಷವೆಂದರೆ ಪೂಜೆಗೆ ಬೇಕಾದ ಹೂವನ್ನು ತಾವೇ ಖುದ್ದಾಗಿ ಅಂಗಡಿಗೆ ಹೋಗಿ ಖರೀದಿ ಮಾಡಿದ್ದಾರೆ.
ಓರ್ವ ಗರ್ಭಿಣಿ ಮಹಿಳೆಗೆ ರಸ್ತೆಯಲ್ಲಿ ನಡೆದಾಡುತ್ತಿರುವಾಗಲೇ ಹೆರಿಗೆ ನೋವು ಬಂದಿದ್ದು ಅಲ್ಲಿ ಸುತ್ತಮುತ್ತಲಿದ್ದ ಮಹಿಳೆಯರು ಮಾಡಿದ್ದೇನು ಈ ವೈರಲ್ ವಿಡಿಯೋ ನೋಡಿ. ನಮ್ಮ ದೇಶದ ಜನ ರಸ್ತೆಯಲ್ಲಿ ನಡೆದಾಡುವಾಗ ಯಾರಿಗೆ ಏನೇ ಆದರೂ ಸಹಾಯಕ್ಕೆ ಬರುವ ಸಹೃದಯತೆ ಇಟ್ಟುಕೊಂಡಿದ್ದಾರೆ. ಪುಣೆಯ ಜನ ನಿಬಿಡ ರಸ್ತೆಯಲ್ಲಿ ನಡೆದ ಈ ಘಟನೆ ಇದಕ್ಕೆ ನೈಜ ಸಾಕ್ಷಿಯಾಗಿದೆ. ಅಷ್ಟಕ್ಕೂ ಆಗಿದ್ದೇನು ಇಲ್ಲಿದೆ ನೋಡಿ ವಿವರ. ಪುಣೆಯ ಜನ ದಟ್ಟಣೆಯಿರುವ ರಸ್ತೆಯಲ್ಲಿ ಹೋಗುತ್ತಿದ್ದಾಗ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯರು ವೈದ್ಯರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರ. ಅವರಿಗೆ ಅಲ್ಲಿಯೇ ಸುತ್ತಮುತ್ತಲಿದ್ದ ಮಹಿಳೆಯರು ಸಾಥ್ ನೀಡಿದ್ದಾರೆ.
ಕೋಲ್ಕತ್ತಾ: ಚಲಿಸುತ್ತಿರುವ ರೈಲಿನಿಂದ ಮಗು ಬಿದ್ದಿದ್ದು ರೈಲು ನಿಲ್ಲಿಸುವಂತೆ ಚೈನ್ ಎಳೆದರೂ ಪ್ರಯೋಜನವಾಗಲಿಲ್ಲ. ಮಗುವನ್ನು ಕಳೆದುಕೊಂಡ ತಾಯಿ ಕರುಳು ಕಿತ್ತುಬರುವಂತೆ ನೋವಿನಿಂದ ಅಳುವ ದೃಶ್ಯ ನೋಡುಗರ ಕಣ್ಣಂಚು ಒದ್ದೆ ಮಾಡುವಂತಿದೆ. ಈ ಘಟನೆ ಜಲ್ಪೈಗುರಿ ಮತ್ತು ರಾಮನಗರ ನಡುವಿನ ರೈಲ್ವೇ ಪ್ರಯಾಣದ ವೇಳೆ ನಡೆದಿದೆ. ರೈಲುಗಳಲ್ಲಿ ತುರ್ತು ಸಂದರ್ಭದಲ್ಲಿ ರೈಲು ನಿಲ್ಲಿಸಲು ಚೈನ್ ಇರುತ್ತದೆ. ಆದರೆ ಇದು ಅಗತ್ಯ ಸಂದರ್ಭದಲ್ಲೇ ಪ್ರಯೋಜನಕ್ಕೆ ಬಾರದೇ ಇದ್ದರೆ ಇದ್ದೂ ಏನು ಪ್ರಯೋಜನ? ಇಲ್ಲಿ ಆಗಿದ್ದೂ ಇದೆ. ಚಲಿಸುತ್ತಿದ್ದ ರೈಲಿನಿಂದ ಕೈ ಜಾರಿ ಮಗು ಕೆಳಕ್ಕೆ ಬೀಳುತ್ತದೆ. ತಾಯಿ ತಕ್ಷಣವೇ ಚೈನ್ ಎಳೆದು ರೈಲು ನಿಲ್ಲಿಸುವ ಪ್ರಯತ್ನ ಮಾಡುತ್ತಾರೆ.
ದೆಹಲಿ: ಐಪಿಎಲ್ 2026 ರಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೇಡಿನ ಪಂದ್ಯವಾಡಲಿರುವ ಆರ್ ಸಿಬಿಗೆ ಕನ್ನಡಿಗ ಕೆಎಲ್ ರಾಹುಲ್ ನದ್ದೇ ಚಿಂತೆಯಾಗಿದೆ. ಇದು ಎರಡನೇ ಬಾರಿಗೆ ಈ ಕೂಟದಲ್ಲಿ ಡೆಲ್ಲಿ ಮತ್ತು ಆರ್ ಸಿಬಿ ಮುಖಾಮುಖಿಯಾಗುತ್ತಿದೆ. ಕಳೆದ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಪರಾಕ್ರಮದಿಂದ ತವರು ಚಿನ್ನಸ್ವಾಮಿ ಅಂಗಳದಲ್ಲೇ ಆರ್ ಸಿಬಿ ಸೋಲುವಂತಾಗಿತ್ತು. ಇದೀಗ ಕೊಹ್ಲಿ ತವರು ದೆಹಲಿಯಲ್ಲಿ ಪಂದ್ಯ ನಡೆಯಲಿದ್ದು ಮೊನ್ನೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಆರ್ ಸಿಬಿ ಇದೆ. ಆದರೆ ಆರ್ ಸಿಬಿಗೆ ಈಗ ಕನ್ನಡಿಗ ಕೆಎಲ್ ರಾಹುಲ್ ನದ್ದೇ ಚಿಂತೆ. ಡೆಲ್ಲಿ ಪರ ಆಡುವ ರಾಹುಲ್ ಅದ್ಭುತ ಫಾರ್ಮ್ ನಲ್ಲಿದ್ದಾರೆ.
ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆದು ಪರೀಕ್ಷೆ ಬರೆಯಲು ಅಡ್ಡಿಪಡಿಸಿದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಬೇಕು ಎಂದು ಬ್ರಾಹ್ಮಣ ಮಹಾಸಭಾ ಒತ್ತಾಯಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸ್ಪಷ್ಟ ನಿರ್ದೇಶನವಿದ್ದರೂ ಸಿಇಟಿ ಪರೀಕ್ಷೆ ವೇಳೆ ಬೆಂಗಳೂರಿನ ಕೃಪಾನಿಧಿ ಕಾಲೇಜಿನಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಲಾಗಿದೆ. ಇದರಿಂದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಕಿರುಕುಳವಾಗಿದೆ. ಇದರಿಂದ ಅವರಿಗೆ ಸರಿಯಾಗಿ ಪರೀಕ್ಷೆ ಬರೆಯಲೂ ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಈ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಬೇಕು ಎಂದು ಬ್ರಾಹ್ಮಣ ಮಹಾಸಭಾ ಒತ್ತಾಯಿಸಿದೆ.
ಟೆಹ್ರಾನ್: ಅಮೆರಿಕಾ ಶಾಂತಿಮಾತುಕತೆ ರದ್ದುಗೊಳಿಸಿದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್ ಬಿಗ್ ಆಫರ್ ನೀಡಿದೆ. ಸಂಧಾನಕಾರ ಪಾಕಿಸ್ತಾನದ ಮೂಲಕ ಅಮೆರಿಕಾಗೆ ಇರಾನ್ ಹೊಸ ಸಂದೇಶ ರವಾನೆ ಮಾಡಿದೆ. ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳಿಗೆ ಆದ್ಯತೆ ನೀಡುವಂತೆ ಕೋರಿ ಹಾರ್ಮುಜ್ ಜಲಸಂಧಿ ತೆರೆಯುವ ಆಫರ್ ನೀಡಿದೆ. ಯುದ್ಧದಿಂದಾಗಿ ಜಾಗತಿಕವಾಗಿ ಉಂಟಾಗಿರುವ ಸಂಕಷ್ಟ ಕೊನೆಗಾಣಿಸಲು ಹಾರ್ಮುಜ್ ಜಲಸಂಧಿ ಪೂರ್ಣಪ್ರಮಾಣದಲ್ಲಿ ತೆರೆಯಲು ನಾವು ಸಿದ್ಧ ಎಂದು ಇರಾನ್ ಸಂದೇಶ ರವಾನಿಸಿದೆ. ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಿದಲ್ಲಿ ಇರಾನ್-ಅಮೆರಿಕಾ ನಡುವಿನ ಸಂಘರ್ಷ ಒಂದು ಹಂತಕ್ಕೆ ಬರುವ ಸಾಧ್ಯತೆಯಿದೆ.
ಕೋಝಿಕ್ಕೋಡ್: ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ಫೋನ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯ ಕತೆ ಏನಾಯ್ತು ಎಂದು ಈ ವೈರಲ್ ವಿಡಿಯೋವನ್ನು ತಪ್ಪದೇ ನೋಡಿದರೆ ತಿಳಿಯುತ್ತದೆ. ಇದು ಅನೇಕರಿಗೆ ಪಾಠವಾಗಲಿದೆ. ಇದು ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿಯಲ್ಲಿ ನಡೆದ ಘಟನೆ. ಹಲವರು ಅನೇಕ ಬಾರಿ ವಾಹನ ಚಲಾಯಿಸುತ್ತಿರುವಾಗಲೇ ಫೋನ್ ನಲ್ಲಿ ಮಾತನಾಡುತ್ತಾರೆ. ಇದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಕೊಯಿಲಾಂಡಿಯಲ್ಲಿ ಹೆದ್ದಾರಿ ಬಳಿ ವಾಹನ ದಟ್ಟಣೆಯಿರುವಲ್ಲಿ ವ್ಯಕ್ತಿಯೊಬ್ಬರು ಸ್ಕೂಟರ್ ನಿಲ್ಲಿಸಿ ಫೋನ್ ನಲ್ಲಿ ಮಾತನಾಡುತ್ತಿರುತ್ತಾರೆ. ರಸ್ತೆಯಿಂದ ಕೆಳಗೆ ನಿಂತಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ.
ಬೆಂಗಳೂರು: ರಾಜ್ಯದಲ್ಲಿ ಕಳೆದ ವಾರ ಬಿಸಿಲ ಬೇಗೆಯ ಜೊತೆ ಕೆಲವೇ ಜಿಲ್ಲೆಗಳಲ್ಲಿ ಮಳೆಯೂ ಬಂದಿತ್ತು. ಈ ವಾರವೂ ಬಿಸಿಲಿನ ತಾಪಮಾನ ವಿಪರೀತ ಏರಿಕೆಯಾಗಲಿದ್ದು, ಇದರ ಜೊತೆಗೆ ವಾರದ ಮಧ್ಯದಲ್ಲಿ ಮಳೆಯ ಸೂಚನೆಯೂ ಇದೆ. ರಾಜ್ಯದಲ್ಲಿ ಈಗ ಕಡು ಬೇಸಿಗೆಯ ಹವಾಮಾನವಿದೆ. ರಾಯಚೂರು, ಕಲಬುರಗಿ, ಬಳ್ಳಾರಿ ಜಿಲ್ಲೆಗಳಲ್ಲಂತೂ ತಾಪಮಾನ 40 ಡಿಗ್ರಿ ಆಸುಪಾಸಿಗೆ ಬಂದಿತ್ತು. ಈ ವಾರವೂ ಆರಂಭದಲ್ಲಿ ತಾಪಮಾನ ವಿಪರೀತವಾಗಲಿದ್ದು, ವಾರದ ಮಧ್ಯ ಭಾಗದಲ್ಲಿ ಕೊಂಚ ಮಟ್ಟಿಗೆ ತಾಪಮಾನ ಕಡಿಮೆಯಾಗಲಿದೆ. ವಾರಂತ್ಯಕ್ಕೆ ಮತ್ತೆ ತಾಪಮಾನ ಏರಿಕೆಯಾಗಲಿದೆ. ಹಲವು ಜಿಲ್ಲೆಗಳಲ್ಲಿ ಮಂಗಳವಾರದಿಂದ ಗುರುವಾರದವರೆಗೆ ಮಳೆಯ ಸೂಚನೆಯಿದೆ.
ಇಂದು ಸೋಮವಾರವಾಗಿದ್ದು ಶಿವನಿಗೆ ವಿಶೇಷವಾದ ದಿನವಾಗಿದೆ. ಇಂದು ಶಿವನ ಅನುಗ್ರಹಕ್ಕಾಗಿ ಶಿವ ತಾಂಡವ ಸ್ತೋತ್ರವನ್ನು ತಪ್ಪದೇ ಭಜಿಸಿ. ಕನ್ನಡದಲ್ಲಿ ಇಲ್ಲಿದೆ.ಜಟಾಟವೀಗಲಜ್ಜಲಪ್ರವಾಹಪಾವಿತಸ್ಥಲೇಗಲೇವಲಂಬ್ಯ ಲಂಬಿತಾಂ ಭುಜಂಗತುಂಗಮಾಲಿಕಾಮ್ ।ಡಮಡ್ಡಮಡ್ಡಮಡ್ಡಮನ್ನಿನಾದವಡ್ಡಮರ್ವಯಂಚಕಾರ ಚಂಡತಾಂಡವಂ ತನೋತು ನಃ ಶಿವಃ ಶಿವಮ್ ॥ 1 ॥ ಜಟಾಕಟಾಹಸಂಭ್ರಮಭ್ರಮನ್ನಿಲಿಂಪನಿರ್ಝರೀ--ವಿಲೋಲವೀಚಿವಲ್ಲರೀವಿರಾಜಮಾನಮೂರ್ಧನಿ ।ಧಗದ್ಧಗದ್ಧಗಜ್ಜ್ವಲಲ್ಲಲಾಟಪಟ್ಟಪಾವಕೇಕಿಶೋರಚಂದ್ರಶೇಖರೇ ರತಿಃ ಪ್ರತಿಕ್ಷಣಂ ಮಮ ॥ 2 ॥ ಧರಾಧರೇಂದ್ರನಂದಿನೀವಿಲಾಸಬಂಧುಬಂಧುರಸ್ಫುರದ್ದಿಗಂತಸಂತತಿಪ್ರಮೋದಮಾನಮಾನಸೇ ।ಕೃಪಾಕಟಾಕ್ಷಧೋರಣೀನಿರುದ್ಧದುರ್ಧರಾಪದಿಕ್ವಚಿದ್ದಿಗಂಬರೇ ಮನೋ ವಿನೋದಮೇತು ವಸ್ತುನಿ ॥ 3 ॥ ಜಟಾಭುಜಂಗಪಿಂಗಳಸ್ಫುರತ್ಫಣಾಮಣಿಪ್ರಭಾಕದಂಬಕುಂಕುಮದ್ರವಪ್ರಲಿಪ್ತದಿಗ್ವಧೂಮುಖೇ ।ಮದಾಂಧಸಿಂಧುರಸ್ಫುರತ್ತ್ವಗುತ್ತರೀಯಮೇದುರೇಮನೋ ವಿನೋದಮದ್ಭುತಂ ಬಿಭರ್ತು ಭೂತಭರ್ತರಿ ॥ 4 ॥
ನವದೆಹಲಿ: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗಾಯದ ಆಘಾತ ಎದುರಾಗಿದೆ. ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರು ಮುಂದಿನ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.ಇಂಗ್ಲೆಂಡ್ನ ಈ ಬ್ಯಾಟರ್ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಸೋಮವಾರ ದೆಹಲಿಯಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡವು ಆರ್ಸಿಬಿಯನ್ನು ಸೋಲಿಸಿತ್ತು. ಇದೀಗ ಆರ್ಸಿಬಿ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದೆ.ಮುಂದಿನ ಪಂದ್ಯಕ್ಕೆ ಅವರು ಆಯ್ಕೆಗೆ ಲಭ್ಯವಿಲ್ಲ ಎಂದು ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರು ದೃಢಪಡಿಸಿದ್ದಾರೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮುಂದಿನ ಐಪಿಎಲ್ ಪಂದ್ಯಕ್ಕೆ ಫಿಲ್ ಸಾಲ್ಟ್ ಇಲ್ಲದೆ ಆಡಲಿದೆ.
ಚೆನ್ನೈ: ಗೆಲುವಿನ ಹಳಿಗೆ ಮರಳಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತವರಿನಲ್ಲಿ ಮತ್ತೊಂದು ಸೋಲು ಅನುಭವಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ನೀರಸ ಪ್ರದರ್ಶನ ತೋರಿದ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವುವು ಗುಜರಾತ್ ಟೈಟನ್ಸ್ಗೆ ಸುಲಭ ತುತ್ತಾಯಿತು.ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕಿಂಗ್ಸ್ ನೀಡಿದ್ದ 159 ರನ್ಗಳ ಗುರಿ ಎದುರು ಆಡಿದ ಟೈಟನ್ಸ್ ಬ್ಯಾಟರ್ಗಳು, ಇನ್ನೂ 20 ಎಸೆತಗಳು ಬಾಕಿ ಇರುವಂತೆಯೇ 162 ರನ್ ಗಳಿಸಿದರು. ಇದರೊಂದಿಗೆ, ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 4ನೇ ಜಯ ಸಾಧಿಸಿದ ಗಿಲ್ ಪಡೆ, ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು. ಚೆನ್ನೈ ಕೂಡ ಇಷ್ಟೇ ಪಂದ್ಯಗಳನ್ನಾಡಿದ್ದು, ಮೂರರಲ್ಲಷ್ಟೇ ಗೆದ್ದಿದೆ.
ಡಾ ರಾಜ್ಕುಮಾರ್ ಸ್ಮಾರಕಕ್ಕೆ ಎರಡೂವರೆ ಎಕರೆ ಜಾಗ ನೀಡಿದ ವಿಚಾರವಾಗಿ ಟೀಕಿಸಿ, ರಾಜಣ್ಣ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಚೇತನ್ ಇದೀಗ ತಮ್ಮ ಹೇಳಿಕೆ ಬದ್ಧರಾಗಿರುವುದಾಗಿ ಹೇಳಿಕೊಂಡಿದ್ದಾರೆ. ಅಣ್ಣಾವ್ರ ಸ್ಮಾರಕಕ್ಕೆ ಅಷ್ಟೊಂದು ಭೂಮಿ ನೀಡಿರುವುದು ಸರಿಯಲ್ಲ ಎಂದ ಚೇತನ್ ವಿರುದ್ಧ ರಾಜ್ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ಬಳಿಕ ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ನಿನ್ನೆ ಹೇಳಿದ್ದರು.
ಮಡಿಕೇರಿ: ಶಿಕ್ಷಕಿಯೊಬ್ಬರು ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿ ತಾಲ್ಲೂಕಿನ ಚೇರಂಬಾಣೆ ಗ್ರಾಮದಲ್ಲಿ ವರದಿಯಾಗಿದೆ. ಪ್ರೀತಿಯ ವಿದ್ಯಾರ್ಥಿಗಳಿಗೆ ಅಂತಿಮ ವಿದಾಯ ಹೇಳಿ ಶಿಕ್ಷಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೆ ಶರಣಾದ ಟೀಚರ್ ಅನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರೋಹಿಣಿ (51) ಎಂದು ಗುರುತಿಸಲಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿದ್ದ ಕೋವಿಯಿಂದ ಗುಂಡು ಹೊಡೆದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಂಗಾವ್ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳವನ್ನು ಜಂಗಲ್ ರಾಜ್ನಿಂದ ಮುಕ್ತಗೊಳಿಸಲು ಸಾರ್ವಜನಿಕ ಬೆಂಬಲವನ್ನು ಕೋರುತ್ತಿರುವ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) "ಮಾ, ಮಾತು, ಮನುಷ್" ಎಂಬ ಪರಿಕಲ್ಪನೆಯನ್ನು ಅನುಸರಿಸುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆರೋಪ ಮಾಡಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮುನ್ನ ಇಲ್ಲಿ ವಿಜಯ್ ಸಂಕಲ್ಪ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮೊದಲ ಹಂತದಲ್ಲಿ ಬಂಗಾಳದ 'ನೀ ಕಮಾಲ್ ಕರ್ ದಿಯಾ' (ಅದ್ಭುತವಾಗಿದೆ)," ಏಪ್ರಿಲ್ 29 ರಂದು ನಡೆಯಲಿರುವ ಟಿಎಂಸಿ
ಬೆಂಗಳೂರು: ಯಾವಾ ಸಂದರ್ಭದಲ್ಲಿ ಏನ್ ಆಗಬೇಕು ಅದು ಆಗುತ್ತದೆ. ಸಮಯ ಬಂದಾಗ ತಾನಾಗಿಯೇ ಗೊತ್ತಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಇನ್ಮೇಲೆ ರಾಜಕೀಯ ವಿಚಾರವಾಗಿ ಮಾಧ್ಯಮಗಳ ಬಗ್ಗೆ ಮಾತನಾಡುವುದಿಲ್ಲ ಎಂದರು. ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಾವ ರಾಜಕೀಯವೂ ಇಲ್ಲ. ಏನೇನೂ ತೀರ್ಮಾನ ಆಗಿವೆಯೋ ಅವು ಚಾಲ್ತಿಗೆ ಬರಲಿವೆ ಎಂದು ಸ್ಪಷ್ಟನೆ ನೀಡಿದರು.
ಅಭಿಮಾನಿಯೊಬ್ಬಳು ಭಾರತೀಯ ಕ್ರಿಕೆಟಿಗ, ಎಸ್ಆರ್ಎಚ್ ಆಟಗಾರ ಅಭಿಷೇಕ್ ಶರ್ಮಾ ಕೈ ಎಳೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ತಮ್ಮ ಕ್ರಿಕೆಟ್ ಹೀರೋಗಳ ಮೇಲಿನ ಅಭಿಮಾನಿವನ್ನು ಎತ್ತಿ ತೋರಿಸುತ್ತದೆ. ಅಭಿಷೇಕ್, ಮೈದಾನದಲ್ಲಿನ ತನ್ನ ಕೌಶಲ್ಯಕ್ಕಾಗಿ ಮಾತ್ರವಲ್ಲದೆ ತನ್ನ ವರ್ಚಸ್ವಿ ವ್ಯಕ್ತಿತ್ವಕ್ಕೂ ಹೆಸರುವಾಸಿಯಾಗಿದ್ದು, ಗಮನಾರ್ಹವಾದ ಅನುಯಾಯಿಗಳನ್ನು ಅದರಲ್ಲೂ ಅಪಾರ ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ 15 ವರ್ಷದ ವೈಭವ್ ಸೂರ್ಯವಂಶಿ ಗಾಯದಿಂದ ಹೊರನಡೆದರು. ಮೈದಾನದಿಂದ ಹೊರನಡೆದ ನಂತರ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರು ವೈಭವ್ ಸೂರ್ಯವಂಶಿ ಬಗ್ಗೆ ಸಕಾರಾತ್ಮಕ ವಿಚಾರವನ್ನು ಹಂಚಿಕೊಂಡಿದ್ದಾರೆ. ಜೋಫ್ರಾ ಆರ್ಚರ್ ಬೌಲ್ ಮಾಡಿದ ಮೂರನೇ ಓವರ್ನ ಅಂತಿಮ ಎಸೆತದಲ್ಲಿ ಈ ಘಟನೆ ಸಂಭವಿಸಿದೆ.
ಜ್ಯೂರಿಚ್ಗೆ ಹೊರಟಿದ್ದ ಸ್ವಿಸ್ ಇಂಟರ್ನ್ಯಾಶನಲ್ ಏರ್ಲೈನ್ಸ್ ವಿಮಾನವು ಶಂಕಿತ ಇಂಜಿನ್ ಕಾಣಿಸಿಕೊಂಡ ವೈಫಲ್ಯದಲ್ಲಿ 6ಮಂದಿ ಗಾಐಗೊಂಡಿರುವ ಬಗ್ಗೆ ವರದಿಯಾಗಿದೆ. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕ್-ಆಫ್ ಅನ್ನು ಸ್ಥಗಿತಗೊಳಿಸಿದ ನಂತರ ಆರು ಪ್ರಯಾಣಿಕರಿಗೆ ವೈದ್ಯಕೀಯ ಆರೈಕೆಯ ಅಗತ್ಯವಿತ್ತು, ಇದು ತುರ್ತು ಸ್ಥಳಾಂತರಿಸುವಿಕೆಯನ್ನು ಪ್ರಚೋದಿಸಿತು."ಏರ್ಬಸ್ A330-300 ವಿಮಾನವು SWR146 ಫ್ಲೈಟ್ನಂತೆ ದೆಹಲಿಯಿಂದ ಜ್ಯೂರಿಚ್ಗೆ ಕಾರ್ಯನಿರ್ವಹಿಸುತ್ತಿದೆ, ಭಾನುವಾರ ಮುಂಜಾನೆ 1.27 ಕ್ಕೆ ರನ್ವೇ 28 ರಿಂದ ಟೇಕ್-ಆಫ್ ಅನ್ನು ತಿರಸ್ಕರಿಸಿತು.
ಮಂಗಳೂರು: ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿ ಕರ್ನಾಟಕದಾದ್ಯಂತ ಹವಾಮಾನ ವೈಪರೀತ್ಯ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಾಖ ಮತ್ತು ತೇವಾಂಶವು ಮುಂದುವರಿಯುವ ನಿರೀಕ್ಷೆಯಿದ್ದು, ಏಪ್ರಿಲ್ 26 ರಿಂದ 29 ರವರೆಗೆ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಮಳೆಯ ಮುನ್ಸೂಚನೆಯ ಹೊರತಾಗಿಯೂ, ಮಧ್ಯಾಹ್ನದ ಸಮಯದಲ್ಲಿ ತಾಪಮಾನವು ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.ಕೆಲವು ಪ್ರದೇಶಗಳಲ್ಲಿ ಸಂಭಾವ್ಯ ಶಾಖದ ಅಲೆಗಳ ಎಚ್ಚರಿಕೆಯನ್ನು ನೀಡಲಾಗಿದೆ. ವಿಶೇಷವಾಗಿ ಗುಡುಗು ಮತ್ತು ಸಿಡಿಲಿನ
ಚೆಂಡು ಎಸೆತದಿಂದ ಗಾಯಗೊಂಡ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಅವರ ಈಚೆಗಿನ ನೋಟವು ಅವರ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದೆ. 34 ವರ್ಷದ ಬೆನ್ ಸ್ಟೋಕ್ಸ್ಗೆ ಮುಖಕ್ಕೆ ತೀವ್ರವಾದ ಪೆಟ್ಟಾಗಿತ್ತು. ಇದಕ್ಕೆ ಅವರು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದರು. ಇದಾದ ತಿಂಗಳ ಬಳಿಕ ಬೆನ್ ಕ್ಯಾಮರಾ ಕಣ್ಣಿಗೆ ಸಿಕ್ಕಿದ್ದಾರೆ.ಅವರ ಮುಂಚಿನ ನೋಟಕ್ಕೂ, ಈಗಿನ ನೋಟಕ್ಕೂ ಭಾರೀ ವ್ಯತ್ಯಾಸವನ್ನು ಕಾಣಬಹುದು. ತೂಕದಲ್ಲೂ ಇಳಿಕೆಯಾಗಿರುವುದನ್ನು ನಾವು ಫೋಟೋದಲ್ಲಿ ಗಮನಿಸಬಹುದು.
ಮಂಗಳೂರು: ನೀರಿನಲ್ಲಿ ಮುಳುಗುತ್ತಿದ್ದ 10 ವರ್ಷದ ಸಂಬಂಧಿಯನ್ನು 16 ವರ್ಷದ ಬಾಲಕನೊಬ್ಬ ವೀರಾವೇಶದಿಂದ ರಕ್ಷಿಸಿದ ಘಟನೆ ಶುಕ್ರವಾರ ಸಂಜೆ ಸೋಮೇಶ್ವರ ಬೀಚ್ನಲ್ಲಿ ನಡೆದಿದೆ.ವಿಟ್ಲದ ಮೇಗಿನಪೇಟೆ ನಿವಾಸಿ ಮುಹಮ್ಮದ್ ಅರ್ಶ್ಮಾನ್ ಎಂದು ಗುರುತಿಸಲಾದ ಬಲಿಪಶು ತನ್ನ ಪೋಷಕರೊಂದಿಗೆ ಬೀಚ್ಗೆ ಭೇಟಿ ನೀಡಿದ್ದರು. ದಡದ ಬಳಿ ಆಟವಾಡುತ್ತಿದ್ದಾಗ ಏಕಾಏಕಿ ಪ್ರಬಲವಾದ ಅಲೆಗೆ ಸಿಲುಕಿ ಕೊಚ್ಚಿ ಹೋಗಿದ್ದಾನೆ.ಮಗು ನೀರಿನಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿದ ಮುಡಿಪುವಿನ ಅಶ್ರಫ್ ಎಂಬವರ ಪುತ್ರ ಮುಹಮ್ಮದ್ ಇಸ್ಮಾಯಿಲ್ ಫೈಜ್
ಚಿಕ್ಕಮಗಳೂರು: ಸಾಂಬಾರ್ ಮಾಡಿಲ್ಲವೆಂದು ತಂದೆ ಬೈದಿದ್ದಕ್ಕೆ ಮಗಳೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಸೌಜನ್ಯ ಪೂಜಾರಿ (22) ಎಂದು ಗುರುತಿಸಲಾಗಿಎ. ಶನಿವಾರ ಬೆಳಗ್ಗೆ ತರಕಾರಿ ತಂದುಕೊಟ್ಟು ಸಾಂಬಾರ್ ಮಾಡುವಂತೆ ಸೌಜನ್ಯಗೆ ಯುವತಿ ಹೇಳಿದ್ದರು. ಮಧ್ಯಾಹ್ನ ಊಟಕ್ಕೆ ಬಂದಾಗ ಮಗಳು ಸೌಜನ್ಯ ಸಾಂಬಾರ್ ಮಾಡಿರಲಿಲ್ಲ. ಸಾಂಬಾರ್ ಏಕೆ ಮಾಡಿಲ್ಲವೆಂದು ತಂದೆ ಬೈದಿದ್ದಕ್ಕೆ ಸೌಜನ್ಯ ನೇಣು
ಮಂಗಳೂರು: ಕರಾವಳಿ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಏರುತ್ತಿದ್ದು, ಇದು ಜನತೆಗೆ ತಮ್ಮ ದೈನಂದಿನ ಜೀವನ ಶೈಲಿಗೆ ಭಾರೀ ಪೆಟ್ಟು ನೀಡಿದೆ. ಈ ಸಮಯದಲ್ಲಿ ಯಾವಾಗಲೂ ಕರಾವಳಿ ಭಾಗದ ಹವಾಮಾನ ತುಂಬಾನೇ ಕಠಿಣವಾಗಿರುತ್ತದೆ. ಆದರೆ ಈ ಬಾರಿ ಇದರ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ. ಶಾಖದ ಪ್ರಭಾವವು ದೈನಂದಿನ ಜೀವನದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಬೀದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು ಮತ್ತು