ನವದೆಹಲಿ:ಭಾರತದ ವಿರುದ್ಧಕೊಲಂಬೊದಲ್ಲಿ ಫೆ. 15ರಂದು ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಕಣಕ್ಕಿಳಿಸಲು ಪಾಕಿಸ್ತಾನ ಸರ್ಕಾರ ಒಪ್ಪಿಗೆ ನೀಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಬಿಸಿಸಿಐ ಮೊದಲ ಪ್ರತಿಕ್ರಿಯೆ ನೀಡಿದೆ. ಬಿಕ್ಕಟ್ಟನ್ನು ಪರಿಹರಿಸಿ ಮಿಲಿಯನ್ ಡಾಲರ್ ಪಂದ್ಯ ನಿಗದಿಯಂತೆ ನಡೆಯುವಂತೆ ನೋಡಿಕೊಂಡದ್ದಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಕೃತಜ್ಞತೆ ಸಲ್ಲಿಸಿದೆ.ಟಿ20 ವಿಶ್ವಕಪ್ ತಪ್ಪಿಸಿಕೊಂಡರೂ ಬಾಂಗ್ಲಾದೇಶಕ್ಕೂ ಪರಿಹಾರ ನೀಡಲಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಉಲ್ಲೇಖಿಸಿದರು ಮತ್ತು ಭಾರತ ಮತ್ತು ಶ್ರೀಲಂಕಾದಲ್ಲಿ ವಿಶ್ವಕಪ್ ಯಶಸ್ವಿ ಕಾರ್ಯಕ್ರಮವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು: ಪ್ರಧಾನಿ ಮೋದಿ ಸಂಸತ್ ನಲ್ಲಿ ರಾಹುಲ್ ಗಾಂಧಿ ಪ್ರಶ್ನೆಗೆ ಉತ್ತರಿಸಲಾಗದೇ ಭಯಗೊಂಡು ಓಡಿ ಹೋದರು ಎಂಬ ಸಿಎಂ ಸಿದ್ದರಾಮಯ್ಯ ಟೀಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿ ಮಾಜಿ ಸೇನಾಧಿಕಾರಿ ನರಾವಣೆ ಅವರ ಪುಸ್ತಕವನ್ನು ಆಧರಿಸಿ ಮಾಡಿದ ಆರೋಪಗಳಿಗೆ ಉತ್ತರಿಸಲಾಗದೇ ಮೋದಿ ಭಯಗೊಂಡು ಓಡಿ ಹೋದರು. ಈ ರೀತಿ ಓಡಿ ಹೋದರೆ ಪ್ರಜಾಪ್ರಭುತ್ವವೂ ಉಳಿಯಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ವಿಜಯೇಂದ್ರ ‘ಸಿದ್ದರಾಮಯ್ಯನವರೇ, ಪ್ರಧಾನಿ ನರೇಂದ್ರ ಮೋದಿಜೀ ಅವರು ಎಲ್ಲಿಯೂ ತಪ್ಪಿಸಿಕೊಂಡು ಹೋಗಿರಲಿಲ್ಲ, ಸಂಸತ್ ಭವನದಲ್ಲೇ ಇದ್ದರು.
ಅಪ್ಪ ಅಮ್ಮ ಏನೋ ಮನಸ್ತಾಪವಾಗಿ ವಿಚ್ಛೇದನ ಪಡೆದುಕೊಂಡರು. ಆದರೆ ಮಗು ಅಪ್ಪ ಬೇಕು ಎಂದು ಹಠ ಹಿಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಉತ್ತರ ಭಾರತದಲ್ಲಿ ಎಲ್ಲೋ ನಡೆದ ಘಟನೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಗಾದೆ ನಿಜ ಮಾಡಿಸಿದಂತಿದೇ ಈ ವಿಡಿಯೋ.ಕೋರ್ಟ್ ಹಾಲ್ ನಲ್ಲಿ ಸಾಕಷ್ಟು ಜನರ ಸಮ್ಮುಖದಲ್ಲಿ ನಡೆದ ಘಟನೆ ಇದು. ಗಂಡ ಹೆಂಡತಿ ತಮ್ಮ ಮನಸ್ತಾಪದ ಕಾರಣಕ್ಕೆ ವಿಚ್ಛೇದನ ಪಡೆದಿದ್ದರು. ಕೋರ್ಟ್ ಕೂಡ ಇವರ ಕಾರಣಗಳನ್ನು ಮಾನ್ಯ ಮಾಡಿ ವಿಚ್ಛೇದನ ನೀಡಿತ್ತು.
ಮೈಸೂರು: ತಮಗೇ ಮುಜುಗರ ತಂದಿಡುವ ಮಗನನ್ನು ತೆಪ್ಪಗೆ ಮನೆಯಲ್ಲಿರು ಎಂದು ಸಿದ್ಧರಾಮಯ್ಯನವರಿಗೆ ಹೇಳಕ್ಕಾಗಲ್ವಾ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಪುತ್ರ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರು ಬಾಯಿ ಬಿಟ್ಟರೆ ಇನ್ನೊಬ್ಬರಿಗೆ ಏಕವಚನದಲ್ಲಿ ಮಾತನಾಡಿಸುತ್ತಾರೆ, ಆವಾಜ್ ಹಾಕುತ್ತಾರೆ. ಅವರಿಗೆ ಎಲ್ಲಾ ಕಡೆ ಮೂಗು ತೂರಿಸಿಕೊಂಡು ಒಂದು ರೀತಿಯಲ್ಲಿ ತಮಗೇ ಮುಜುಗರ ಉಂಟು ಮಾಡುತ್ತಿರುವ ಮಗನನ್ನು ನೀನೇನೂ ಮಾಡಬೇಡಪ್ಪ, ತೆಪ್ಪಗೆ ಮನೆಯಲ್ಲಿರು ಎಂದು ಹೇಳಲು ಆಗಲ್ವಾ?
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಏರಿಕೆಯಾಗಿದ್ದರೆ ಮತ್ತುಇತರೆ ಚಿನ್ನದ ದರ ಯಥಾಸ್ಥಿತಿಯಲ್ಲಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ದಾಖಲೆಯ ಏರಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಇಳಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಇಂದು ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,59,600.00 ರೂ.ಗಳಿತ್ತು. ಇಂದೂ 1,59,625.00 ರೂ.ಗಳಷ್ಟಿದೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ಆದರೆ ನಿನ್ನೆ ಅಡಿಕೆ ದರದಲ್ಲಿ ಏರಿಕೆಯಾಗಿರುವುದು ಖಷಿಯ ಸಂಗತಿ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಏರಿಕೆಯಾಗಬಹುದೇನೋ ಎಂಬ ನಿರೀಕ್ಷೆ ಬೆಳೆಗಾರರಲ್ಲಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಇದರಿಂದ ರೈತರ ಚಿಂತೆಗೆ ಕಾರಣವಾಗಿತ್ತು. ಇಂದು ಕೊಂಚ ಏರಿಕೆಯಾಗಿತ್ತು. ಆದರೆ ಇಂದು ಮತ್ತೆ ಯಥಾಸ್ಥಿತಿಯಲ್ಲಿದೆ. ಇಂದು ಹೊಸ ಅಡಿಕೆ ಬೆಲೆ 470 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 545 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ 545 ರೂ.ಗಳಷ್ಟಾಗಿದೆ.
ಬೆಂಗಳೂರು: ದೆಹಲಿಗೆ ಹೋಗುವ ಮುನ್ನ ನಾಯಕತ್ವ ವಿವಾದದ ಬಗ್ಗೆ ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆಯೊಂದನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ಇಂದು ಪಂಚ ರಾಜ್ಯಗಳ ಚುನಾವಣೆ ತಯಾರಿ ಬಗ್ಗೆ ಪ್ರಿಯಾಂಕ ಗಾಂಧಿ ವಾದ್ರಾ ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಬೆಳಿಗ್ಗೆ ದೆಹಲಿಗೆ ಹೋಗುವ ಮುನ್ನ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ‘ದೆಹಲಿಗೆ ಹೋದ ಮೇಲೆ ಎಲ್ಲಾ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬರೋದೇ. ಚುನಾವಣೆ ತಯಾರಿ ಬಗ್ಗೆ ಮಾತನಾಡಲು ಎಐಸಿಸಿಯಿಂದ ಕರೆದಿದ್ದಾರೆ.
ಕೊಲೊಂಬೊ: ಭಾರತದಲ್ಲಿ ಆಡಲ್ಲ ಎಂದು ಡ್ರಾಮಾ ಮಾಡಿದ್ದ ಪಾಕಿಸ್ತಾನಕ್ಕೆ ಕೊಲೊಂಬೋದಲ್ಲಿ ಕೇಳೋರೇ ಇಲ್ಲ ಎನ್ನುವ ಸ್ಥಿತಿಯಾಗಿದೆ. ಸಿಮೆಂಟ್ ಫ್ಯಾಕ್ಟರಿ ಥರಾ ಟ್ರೀಟ್ಮೆಂಟ್ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ಆಡುವ ಎಲ್ಲಾ ಪಂದ್ಯಗಳೂ ಶ್ರೀಲಂಕಾದ ಕೊಲೊಂಬೋದಲ್ಲಿ ನಡೆಯುತ್ತಿದೆ. ಇತರೆ ಎಲ್ಲಾ ತಂಡಗಳೂ ಭಾರತದಲ್ಲಿ ಪಂದ್ಯವಾಡುತ್ತಿದೆ. ಭಾರತಕ್ಕೆ ಬಂದಿಳಿದ ಎಲ್ಲಾ ತಂಡಗಳಿಗೆ ಅದ್ಧೂರಿಯಾಗಿ, ಸಾಂಪ್ರದಾಯಿಕವಾಗಿ ಸ್ವಾಗತ ಸಿಕ್ಕಿದೆ. ಆದರೆ ಭಾರತದಲ್ಲಿ ಆಡಲ್ಲ ಎಂದು ಡ್ರಾಮಾ ಮಾಡಿ ಶ್ರೀಲಂಕಾಗೆ ಬಂದಿರುವ ಪಾಕಿಸ್ತಾನ ಕ್ರಿಕೆಟಿಗರಿಗೆ ಸ್ವಾಗತ ಬಿಡಿ, ಕೇಳೋರೇ ಇಲ್ಲ.
ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ನಾಯಕತ್ವ ಬದಲಾವಣೆ ವಿಚಾರವಾಗಿ ಫೈಟ್ ನಡೆಯುತ್ತಿದ್ದರೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಪ್ರಿಯಾಂಕ ಗಾಂಧಿ ವಾದ್ರಾ ಬುಲಾವ್ ನೀಡಿದ್ದು ಇಂದು ದಿಡೀರ್ ದೆಹಲಿಗೆ ತೆರಳಲಿದ್ದಾರೆ. ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿರುವುದಕ್ಕೂ ರಾಜ್ಯ ರಾಜಕೀಯದ ಬೆಳವಣಿಗೆಗೂ ನೇರ ಸಂಬಂಧವಿಲ್ಲ. ಆದರೆ ಇಂತಹ ಸಂದರ್ಭದಲ್ಲೇ ದೆಹಲಿಗೆ ತೆರಳುತ್ತಿರುವುದರಿಂದ ನಾಯಕತ್ವದ ವಿಚಾರವೂ ಚರ್ಚೆಯಾಗಬಹುದೇ ಎಂಬ ಕುತೂಹಲ ಮೂಡಿದೆ. ಪಂಚ ರಾಜ್ಯ ಚುನಾವಣೆಗಳ ಪೈಕಿ ಅಸ್ಸಾಂ ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕ್ ವಾದ್ರಾರದ್ದು. ಈ ಕಮಿಟಿಯಲ್ಲಿ ಡಿಕೆ ಶಿವಕುಮಾರ್ ಕೂಡಾ ಇದ್ದಾರೆ.
ಲಾಹೋರ್: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಜೊತೆ ಆಡಲು ಹಲವು ಷರತ್ತು ವಿಧಿಸಿದ್ದ ಪಾಕಿಸ್ತಾನಕ್ಕೆ ಎಲ್ಲಾ ಕೇಳಲು ಆಗಲ್ಲ ಎಂದು ಐಸಿಸಿ ಖಡಕ್ ಸಂದೇಶ ರವಾನಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಆಡಲು ಒಪ್ಪಿಗೆ ಸೂಚಿಸಿದೆ. ಭಾರತದ ಜೊತೆ ಆಡಬೇಕೆಂದರೆ ಟಿ20 ವಿಶ್ವಕಪ್ ಗೆ ಸಂಬಂಧವೇ ಪಡದ ವಿಚಾರಗಳ ಬಗ್ಗೆ ಐಸಿಸಿ ಎದುರು ಷರತ್ತು ಹಾಕಿತ್ತು. ಇದಕ್ಕೆ ಐಸಿಸಿ ಖಡಕ್ ಸಂದೇಶ ರವಾನಿಸಿದೆ. ಅಷ್ಟಕ್ಕೂ ಪಾಕಿಸ್ತಾನ ವಿಧಿಸಿದ ಷರತ್ತುಗಳೇನು ಇಲ್ಲಿದೆ ವಿವರ. ಭಾರತ ಮತ್ತು ಪಾಕಿಸ್ತಾನ ನಡುವಿನ ಸರಣಿಗೆ ಐಸಿಸಿ ಅನುವು ಮಾಡಿಕೊಡಬೇಕು. ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನೊಳಗೊಂಡ ತ್ರಿಕೋನ ಕ್ರಿಕೆಟ್ ಸರಣಿ ನಡೆಸಬೇಕು.
ಬೆಂಗಳೂರು: ಬೆಂಗಳೂರು ಮೆಟ್ರೋ ದರ ಏರಿಕೆ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ನಾನಲ್ಲ.. ನಾನಲ್ಲ ಎನ್ನುತ್ತಿದ್ದರೆ ಜನ ಮಾತ್ರ ಫುಲ್ ಕನ್ ಫ್ಯೂಸ್ ಆಗಿದ್ದಾರೆ. ಮೆಟ್ರೋ ದರ ಏರಿಕೆ ಮಾಡಿದಾಗ ಬಿಜೆಪಿ ರಾಜ್ಯದ ಮೇಲೆ ಬೆರಳು ತೋರಿಸಿತ್ತು. ಇತ್ತ ಕಾಂಗ್ರೆಸ್ ನಾಯಕರು ಕೇಂದ್ರವೇ ಕಾರಣ ಎಂದಿದ್ದರು. ಕೊನೆಗೆ ಮೆಟ್ರೋ ದರ ಏರಿಕೆಗೆ ತಡೆ ನೀಡಿದಾಗ ಫುಲ್ ಉಲ್ಟಾ. ಬಿಜೆಪಿ ಕೇಂದ್ರದ ಸಾಧನೆ ಎನ್ನುತ್ತಿದ್ದರೆ ಡಿಸಿಎಂ ಡಿಕೆ ಶಿವಕುಮಾರ್ ನಮ್ಮದೇ ಸರ್ಕಾರದ ನಿರ್ಧಾರ ಎನ್ನುತ್ತಿದ್ದಾರೆ.ಇದರಿಂದ ಜನ ಮಾತ್ರ ಫುಲ್ ಕನ್ ಫ್ಯೂಸ್ ಆಗಿದ್ದಾರೆ. ಇದೇನು ಆಟ? ಜನರನ್ನು ಮಂಗ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಈಗ ಚಳಿ ಮತ್ತು ಬಿಸಿಲು ಎರಡೂ ಕಂಡುಬರುತ್ತಿದೆ. ಇಂದು ರಾಜ್ಯದಲ್ಲಿ ಮಳೆ ಸಾಧ್ಯತೆಯಿದೆಯಾ, ಹವಾಮಾನ ವರದಿ ಹೇಗಿರಲಿದೆ ಇಲ್ಲಿದೆ ವರದಿ. ಇಂದಿನ ಹವಾಮಾನ ವರದಿಗಳ ಪ್ರಕಾರ ಮಳೆ ಸಾಧ್ಯತೆಯಿಲ್ಲ. ಆದರೆ ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣವಿರುವುದು ಎಂದು ವರದಿಗಳು ಹೇಳುತ್ತಿವೆ. ಉಳಿದಂತೆ ಬಹುತೇಕ ಕಡೆ ಹಗಲು ಉರಿ ಬಿಸಿಲು ಕಂಡುಬರಲಿದೆ. ಆದರೆ ಈಗಲೂ ಚಳಿಯ ಪ್ರಭಾವ ಕಡಿಮೆಯಾಗಿಲ್ಲ. ರಾಜ್ಯ ರಾಜಧಾನಿ ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಹಾಸನ ಸೇರಿದಂತೆ ಬಹುತೇಕ ಕಡೆ ರಾತ್ರಿ ಮತ್ತು ಬೆಳಿಗ್ಗೆ ಭಾರೀ ಚಳಿ ಮತ್ತು ಮಂಜು ಕಂಡುಬರುತ್ತಿದೆ.
ಮಂಗಳವಾರ ದುರ್ಗಾ ದೇವಿಗೆ ವಿಶೇಷವಾದ ದಿನವಾಗಿದ್ದು ಇಂದು ಭಯ, ಶತ್ರುಭಯ, ನಾಶವಾಗಿ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ದುರ್ಗಾ ದೇವಿಯ ದುರ್ಗಾ ನಕ್ಷತ್ರ ಮಾಲಿಕಾ ಸ್ತೋತ್ರವನ್ನು ತಪ್ಪದೇ ಓದಿ.ವಿರಾಟನಗರಂ ರಮ್ಯಂ ಗಚ್ಛಮಾನೋ ಯುಧಿಷ್ಠಿರಃ ।ಅಸ್ತುವನ್ಮನಸಾ ದೇವೀಂ ದುರ್ಗಾಂ ತ್ರಿಭುವನೇಶ್ವರೀಮ್ ॥ 1 ॥ ಯಶೋದಾಗರ್ಭಸಂಭೂತಾಂ ನಾರಾಯಣವರಪ್ರಿಯಾಮ್ ।ನಂದಗೋಪಕುಲೇಜಾತಾಂ ಮಂಗಳ್ಯಾಂ ಕುಲವರ್ಧನೀಮ್ ॥ 2 ॥ ಕಂಸವಿದ್ರಾವಣಕರೀಂ ಅಸುರಾಣಾಂ ಕ್ಷಯಂಕರೀಮ್ ।ಶಿಲಾತಟವಿನಿಕ್ಷಿಪ್ತಾಂ ಆಕಾಶಂ ಪ್ರತಿಗಾಮಿನೀಮ್ ॥ 3 ॥ ವಾಸುದೇವಸ್ಯ ಭಗಿನೀಂ ದಿವ್ಯಮಾಲ್ಯ ವಿಭೂಷಿತಾಮ್ ।ದಿವ್ಯಾಂಬರಧರಾಂ ದೇವೀಂ ಖಡ್ಗಖೇಟಕಧಾರಿಣೀಮ್ ॥ 4 ॥
ಉತ್ತರ ಪ್ರದೇಶ: ಉತ್ತರ ಪ್ರದೇಶದ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಸೋಮವಾರ ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕಿಲ್ಲ ಎಂದು ಹೇಳಿದ್ದಾರೆ, ಘಟನೆ ತನಿಖೆ ಹಂತದಲ್ಲಿದೆ ಮತ್ತು ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.ಕಾನ್ಪುರ ಲಂಬೋರ್ಗಿನಿ ಅಪಘಾತ ಪ್ರಕರಣಕ್ಕೆ ಪ್ರತಿಕ್ರಿಯಿಸುತ್ತಾ, ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಕಾನ್ಪುರದಲ್ಲಿ ನಡೆದ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಉತ್ತರ ಪ್ರದೇಶದ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಸುದ್ದಿಗಾರರಿಗೆ ತಿಳಿಸಿದರು.
ಮುಂಬೈ: ಟೀಂ ಇಂಡಿಯಾ ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆಯನ್ನು ಬಿಸಿಸಿಐ ಪ್ರಕಟಿಸಿದೆ. ಈ ಪೈಕಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಹಿಂಬಡ್ತಿ ಸಿಕ್ಕಿದೆ. ಎಲ್ಲಾ ಫಾರ್ಮ್ಯಾಟ್ ಆಡುವ ಆಟಗಾರರನ್ನು ಪರಿಗಣಿಸಿ ಬಿಸಿಸಿಐ ಎ, ಬಿ, ಮತ್ತು ಸಿ ದರ್ಜೆಯ ಗುತ್ತಿಗೆಯನ್ನು ನೀಡುತ್ತದೆ. ಈ ಪೈಕಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಮೊದಲು ಎ ದರ್ಜೆಯ ಗುತ್ತಿಗೆ ಪಡೆಯುತ್ತಿದ್ದರು. ಆದರೆ ಈಗ ಇಬ್ಬರೂ ಕೇವಲ ಏಕದಿನ ಫಾರ್ಮ್ಯಾಟ್ ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಇಬ್ಬರೂ ಈಗ ಬಿ ದರ್ಜೆಯ ಗುತ್ತಿಗೆ ಪಡೆಯಲಿದ್ದಾರೆ.
ಚೆನ್ನೈ (ತಮಿಳುನಾಡು): ಬಹಳ ಸಮಯದ ನಂತರ ಎ.ಆರ್. ರೆಹಮಾನ್ ಚೆನ್ನೈಗೆ ತಮ್ಮ ವಂಡರ್ಮೆಂಟ್ ಟೂರ್ ಅನ್ನು ತರುತ್ತಿದ್ದು, ಅಲ್ಲಿ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ಈ ಸಂಗೀತ ಕಚೇರಿಯನ್ನು ನಾಯ್ಸ್ ಅಂಡ್ ಗ್ರೇನ್ಸ್, ಜೋ ಎಂಟರ್ಟೈನ್ಮೆಂಟ್ ಮತ್ತು ಫೇರ್ಗೇಮ್ ಎಂಟರ್ಟೈನ್ಮೆಂಟ್ ಜೊತೆಗೆ ಆಯೋಜಿಸಲಾಗುತ್ತಿದೆ. ಆದಾಗ್ಯೂ, ಸಂಗೀತ ಮಾಂತ್ರಿಕ ಈತ ಒಬ್ಬಂಟಿಯಾಗಿ ಪ್ರದರ್ಶನ ನೀಡುವುದಿಲ್ಲ. ಹಳೆಯ ನೆಚ್ಚಿನ ಮತ್ತು ತಾಜಾ ಧ್ವನಿಗಳ ಮಿಶ್ರಣವನ್ನು ಮಾಡಲು ಹಲವಾರು ಪ್ರಸಿದ್ಧ ಗಾಯಕರು ವೇದಿಕೆಯಲ್ಲಿ ರೆಹಮಾನ್ ಅವರೊಂದಿಗೆ ಸೇರಲಿದ್ದಾರೆ.ಅವರ ಮಗ ಎ.ಆರ್. ಅಮೀನ್ ಪ್ರೇಕ್ಷಕರನ್ನು ರಂಜಿಸಲು ತಮ್ಮ ತಂದೆಯೊಂದಿಗೆ ವೇದಿಕೆಯಲ್ಲಿ
ಬೆಂಗಳೂರು: ಕರ್ನಾಟಕದಲ್ಲಿ ಸಚಿವ ಸಂಪುಟ ದರ್ಜೆ ಹೊಂದಿದವರ ಪಟ್ಟಿಯನ್ನು ಮುಖ್ಯ ಕಾರ್ಯದರ್ಶಿಗಳು ಬಿಡುಗಡೆ ಮಾಡಬೇಕೆಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಆಗ್ರಹಿಸಿದ್ದಾರೆ.ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು ಇರಬಹುದು, ಹಣಕಾಸು ಸಲಹೆಗಾರರು, ರಾಜಕೀಯ ಕಾರ್ಯದರ್ಶಿ, ಕಾನೂನು ಸಲಹೆಗಾರರು, ಸಚಿವರು, ನಿಗಮ, ಮಂಡಳಿ ಅಧ್ಯಕ್ಷರು- ಇವರೆಲ್ಲ ಸೇರಿ ಎಷ್ಟು ಜನರು ಈ ಸ್ಥಾನಮಾನ ಪಡೆದಿದ್ದಾರೆ ಎಂಬ ಪಟ್ಟಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಅವರಿಗೆ ಎಷ್ಟು ಖರ್ಚಾಗುತ್ತದೆ ಎಂಬ ವಿವರ ನೀಡಬೇಕೆಂದು ಕೋರಿದರು.
ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆಗೆ ನೀವೇ ಕಾರಣ ಎಂದು ರಾಜ್ಯ, ಕೇಂದ್ರ ಕಿತ್ತಾಡಿಕೊಂಡಿದ್ದು ಆಯ್ತು. ಈಗ ಇಳಿಕೆಗೆ ನಾವೇ ಕಾರಣ ಎಂದು ಇಬ್ಬರೂ ಕ್ರೆಡಿಟ್ ವಾರ್ ಶುರು ಮಾಡಿದ್ದಾರೆ. ನಮ್ಮ ಮೆಟ್ರೋ ದರ ಶೇ.5 ಕ್ಕೆ ಏರಿಕೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಡುವೆ ಜಟಾಪಟಿ ಶುರುವಾಗಿತ್ತು. ಕೇಂದ್ರವೇ ಏರಿಕೆ ಮಾಡಿದ್ದು ಎಂದು ಸಿಎಂ, ಡಿಸಿಎಂ ಆದಿಯಾಗಿ ಕಾಂಗ್ರೆಸ್ ನಾಯಕರು ದೂರಿದ್ದರು. ಇತ್ತ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರವೇ ಕಾರಣ ಎಂದು ಪ್ರತಿಭಟನೆಯನ್ನೇ ಮಾಡಿದ್ದರು.
ಬೆಂಗಳೂರು: ಕರ್ನಾಟಕ ಪ್ರದೇಶ ಯುತ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ದುರುದ್ದೇಶದಿಂದ ಮಾನ್ಯ ಪ್ರಧಾನಮಂತ್ರಿಗಳ ಭಾವಚಿತ್ರವನ್ನು ಬಳಸಿಕೊಂಡು ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಒಳಸಂಚು ರೂಪಿಸಿ ಸುಳ್ಳು, ಸುದ್ದಿಯ ಪೋಸ್ಟರ್ ಹಾಕಿ ರಾಜಕೀಯ ದಂಗೆಗೆ ಪ್ರಚೋದಿಸುತ್ತಿದ್ದಾರೆಂದು ಬಿಜೆಪಿ ಆಕ್ಷೇಪಿಸಿದೆ. ಈ ಕುರಿತು ಇಂದು ಪೊಲೀಸರಿಗೆ ದೂರು ಕೊಡಲಾಯಿತು. ಇದೇ 8ರಂದು ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀಯವರ ಭಾವಚಿತ್ರವನ್ನು ಬಳಸಿ, ದೇಶದ ಸಂಸತ್ತಿಗೆ ಬರಲು ಧೈರ್ಯವಿಲ್ಲದೆ ಪುಕ್ಕಲ ಪ್ರಧಾನ ದೇಶವನ್ನು ಹೇಗೆ ರಕ್ಷಿಸುತ್ತಾರೆ? ಎಂಬ ಸುಳ್ಳು ಸುದ್ದಿ ಬರಹದ ಬ್ಯಾನರ್ ಅನ್ನು ಕಾನೂನುಬಾಹಿರವಾಗಿ ವಿಧಾನಸೌದದ ಮುಂದೆ ಹಾಕಿದ್ದಾರೆ.
ಮುಂಬೈ: ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ನಲ್ಲಿ ಕರ್ನಾಟಕ ಪರ ಸುಂದರ ಶತಕ ಗಳಿಸಿದ ಕೆಎಲ್ ರಾಹುಲ್ ತಂಡಕ್ಕೆ 4 ವಿಕೆಟ್ ಗಳ ಗೆಲುವು ಕೊಡಿಸಿದ್ದಾರೆ. ಮುಂಬೈ ನೀಡಿದ್ದ 325 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಕರ್ನಾಟಕ ದ್ವಿತೀಯ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 325 ರನ್ ಗಳಿಸುವ ಮೂಲಕ 4 ವಿಕೆಟ್ ಗಳ ಗೆಲುವು ಸಾಧಿಸಿದೆ. ಮೊದಲ ಇನಿಂಗ್ಸ್ ನಲ್ಲಿ 28 ರನ್ ಗಳಿಸಿದ್ದ ಕೆಎಲ್ ರಾಹುಲ್ ಎರಡನೇ ಇನಿಂಗ್ಸ್ ನಲ್ಲಿ 130 ರನ್ ಗಳಿಸಿದರು.
ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ತೇಜಸ್ವಿ ಸೂರ್ಯರನ್ನು ವಶಕ್ಕೆ ಪಡೆದಿದ್ದಕ್ಕೆ ರಾಜ್ಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ‘ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿಜೆಪಿ ಅವರನ್ನು ಪೊಲೀಸ್ ವಶಕ್ಕೆ ಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಪ್ರಜಾಪ್ರಭುತ್ವದ ಕರಾಳ ಅಣಕ, ವಾಕ್ ಸ್ವಾತಂತ್ರ್ಯದ ದಮನ ಮಾತ್ರವಲ್ಲ, ಸರ್ವಾಧಿಕಾರಿ ಧೋರಣೆಯ ಪರಮಾವಧಿ! ಇದನ್ನು ನಾನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ.
ಇಲ್ಲೊಂದು ಆಕ್ಸಿಡೆಂಟ್ ವಿಡಿಯೋ ನೋಡಿದ್ರೆ ಯಮರಾಜ ರಜಾದಲ್ಲಿದ್ದನೇನೋ ಎನಿಸಬಹುದು. ಬಸ್ ನಡಿಗೆ ಸಿಲುಕಬೇಕಿದ್ದ ಬೈಕ್ ಚಾಲಕ ಕೂದಲೆಳೆಯಲ್ಲಿ ಪಾರಾಗುತ್ತಾನೆ. ಇಲ್ಲಿದೆ ವೈರಲ್ ವಿಡಿಯೋ. ಕೆಲವೊಮ್ಮೆ ಆಯಸ್ಸು ಮತ್ತು ಅದೃಷ್ಟ ಎಷ್ಟು ಗಟ್ಟಿಗಿರುತ್ತದೆ ಎಂದರೆ ತಲೆ ಮೇಲೆ ಬಂಡೆ ಬಿದ್ದರೂ ಬದುಕುಳಿಯುತ್ತಾರೆ. ಅಂತಹದ್ದೇ ಘಟನೆಯಿದು. ಕೇರಳದ ಮಲಪ್ಪುರಂದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಯುವಕನೊಬ್ಬ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬರುತ್ತಿರುತ್ತಾನೆ. ಆದರೆ ತಿರುವಿನಲ್ಲಿ ಕೊಂಚ ನಿಯಂತ್ರಣ ಕಳೆದುಕೊಳ್ಳುವ ಆತ ಬೈಕ್ ಸಮೇತ ನೆಲಕ್ಕುರುಳುತ್ತಾನೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ಆದರೆ ಇದೀಗ ಅಡಿಕೆ ದರದಲ್ಲಿ ಏರಿಕೆಯಾಗಿರುವುದು ಖಷಿಯ ಸಂಗತಿ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಏರಿಕೆಯಾಗಬಹುದೇನೋ ಎಂಬ ನಿರೀಕ್ಷೆ ಬೆಳೆಗಾರರಲ್ಲಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಇದರಿಂದ ರೈತರ ಚಿಂತೆಗೆ ಕಾರಣವಾಗಿತ್ತು. ಇಂದು ಕೊಂಚ ಏರಿಕೆಯಾಗಿದೆ. ಇಂದು ಹೊಸ ಅಡಿಕೆ ಬೆಲೆ 10 ರೂ. ಏರಿಕೆಯಾಗಿ 470 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 10 ರೂ. ಏರಿಕೆಯಾಗಿದ್ದು 545 ರೂ. ಗಳಾಗಿತ್ತು. ಇಂದೂ ಅಷ್ಟೇ ಇದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಯಥಾಸ್ಥಿತಿಯಲ್ಲಿದ್ದರೆ ಮತ್ತುಇತರೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ದಾಖಲೆಯ ಏರಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಇಳಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಇಂದು ಯಥಾಸ್ಥಿತಿಯಲ್ಲಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,59,600.00 ರೂ.ಗಳಿತ್ತು. ಇಂದೂ 1,59,600.00 ರೂ.ಗಳಷ್ಟಿದೆ.
ಬೆಂಗಳೂರು: ರಾಜ್ಯದಲ್ಲಿ ನಮ್ಮ ಮೆಟ್ರೋ ದರ ಏರಿಕೆ ಜಟಾಪಟಿ ತಾರಕಕ್ಕೇರುತ್ತಿದೆ. ಇದೀಗ ಸಂಸದ ತೇಜಸ್ವಿ ಸೂರ್ಯಗೆ ತಿರುಗೇಟು ನೀಡಲು ಸಜ್ಜಾದ ಡಿಸಿಎಂ ಡಿಕೆ ಶಿವಕುಮಾರ್ ಇಂದು ತುರ್ತು ಪತ್ರಿಕಾಗೋಷ್ಠಿ ಕರೆದಿದ್ದಾರೆ. ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ಸಂಸದ ತೇಜಸ್ವಿ ಸೂರ್ಯ ನಿನ್ನೆಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ನಿನ್ನೆ ಮೆಟ್ರೋ ನಿಲ್ದಾಣಕ್ಕೆ ಬಂದು ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಇಂದು ಮೆಟ್ರೋ ನಿಲ್ದಾಣಕ್ಕೆ ಖಾಲಿ ಟ್ರಂಕ್ ಹಿಡಿದುಕೊಂಡು ಬಂದು ಸರ್ಕಾರ ದಿವಾಳಿಯಾಗಿದೆ ಎಂದು ಸಂದೇಶ ನೀಡಿದ್ದಾರೆ. ಹಲವು ದಾಖಲೆಗಳನ್ನು ಓದಿ ರಾಜ್ಯ ಸರ್ಕಾರವೇ ದರ ಏರಿಕೆಗೆ ಕಾರಣ ಎಂದು ಮನವರಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ.
ನಾಯಿ ಬುದ್ಧಿ ಎಲ್ಲಿ ಹೋಗುತ್ತೆ ಎಂದು ನಾವು ತಮಾಷೆ ಮಾಡಲ್ವೇ? ಇದು ಈ ಕೋತಿಗೂ ಗೊತ್ತು ನೋಡಿ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ನಿಮ್ಮ ಮಖದಲ್ಲಿ ನಗು ತರಿಸಬಹುದು. ನಾಯಿಗೆ ಒಂದು ಅಭ್ಯಾಸವಿರುತ್ತದೆ. ಅದು ಇನ್ನೊಂದು ನಾಯಿಯನ್ನು ಕಂಡು ಕೂಡಲೇ ಅದರ ಹಿಂಭಾಗವನ್ನು ಮೂಸಿ ಇವರು ತನ್ನವರೇ ಎಂದು ಖಚಿತಪಡಿಸಿಕೊಳ್ಳುತ್ತದೆ. ನಾಯಿಯ ಈ ಬುದ್ಧಿ ಈ ಕೋತಿಗೂ ಗೊತ್ತಿದೆ ಎನಿಸುತ್ತದೆ. ಬೀದಿಯಲ್ಲಿ ಸುತ್ತಾಡಲು ಬಂದ ಕೋತಿಗೆ ನಾಯಿಯೊಂದು ತನ್ನ ಹಿಂದೆ ಇರುವುದು ಕಣ್ಣಿಗೆ ಬಿದ್ದಿದೆ. ತಕ್ಷಣಕ್ಕೆ ಕೋತಿ ತನ್ನ ಹಿಂಬದಿಯನ್ನು ಕೈಯಿಂದ ಮುಚ್ಚಿಕೊಂಡಿದೆ.
ನವದೆಹಲಿ: ಟಿ20 ವಿಶ್ವಕಪ್ ಆಡಲು ದೆಹಲಿಗೆ ಬಂದಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಕೋಚ್ ಗೌತಮ್ ಗಂಭೀರ್ ತಮ್ಮ ಮನೆಯಲ್ಲಿಯೇ ಡಿನ್ನರ್ ಕೂಟ ಆಯೋಜಿಸಿದ್ದಾರೆ. ಈ ವೇಳೆ ಪತ್ನಿ, ಮಕ್ಕಳ ಜೊತೆ ಬಂದು ತಾವೇ ಕ್ರಿಕೆಟಿಗರನ್ನು ಬರಮಾಡಿಕೊಂಡಿದ್ದಾರೆ. ಫೆಬ್ರವರಿ 12 ರಂದು ನಮೀಬಿಯಾ ವಿರುದ್ಧ ಎರಡನೇ ಪಂದ್ಯವಾಡಲಿದೆ. ಈ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಟೀಂ ಇಂಡಿಯಾದ ಆಟಗಾರರು ಈಗಾಗಲೇ ದೆಹಲಿಗೆ ಬಂದಿಳಿದಿದ್ದಾರೆ. ಇನ್ನು ತನ್ನ ತವರಿಗೆ ಬಂದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಗೌತಮ್ ಗಂಭೀರ್ ತಮ್ಮ ಮನೆಯಲ್ಲಿಯೇ ಡಿನ್ನರ್ ಕೂಟ ಆಯೋಜಿಸಿ ಸತ್ಕರಿಸಿದ್ದಾರೆ.
ಲಾಹೋರ್: ಟೀಂ ಇಂಡಿಯಾ ವಿರುದ್ಧ ಟಿ20 ವಿಶ್ವಕಪ್ ಆಡಿ ಎಂದು ಮನವೊಲಿಸಲು ಬಂದ ಐಸಿಸಿ ಪ್ರತಿನಿಧಿಗಳ ಮುಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಲೆಹರಟೆ ಮೂರು ಷರತ್ತು ಹಾಕಿದೆ. ಫೆಬ್ರವರಿ 15 ಕ್ಕೆ ಕೊಲೊಂಬೋದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆಯಬೇಕಿದೆ. ಆದರೆ ಈಗಾಗಲೇ ಬಾಂಗ್ಲಾದೇಶವನ್ನು ಟೂರ್ನಿಯಿಂದ ಹೊರಗಿಟ್ಟಿರುವ ಸಿಟ್ಟಿಗೆ ಭಾರತದ ವಿರುದ್ಧ ಪಂದ್ಯ ಬಹಿಷ್ಕರಿಸುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ. ಆದರೆ ನಿನ್ನೆ ಐಸಿಸಿ ಪ್ರತಿನಿಧಿಗಳು ಲಾಹೋರ್ ಗೆ ತೆರಳಿ ಪಿಸಿಬಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮೂರು ಷರತ್ತುಗಳನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಮೆಟ್ರೋ ದರ ಏರಿಕೆ ಗಲಾಟೆ ವಿಚಾರ ಇನ್ನೂ ನಿಂತಿಲ್ಲ. ಕೇಂದ್ರ ಸರ್ಕಾರ ಸದ್ಯಕ್ಕೆ ದರ ಏರಿಕೆಗೆ ತಡೆ ನೀಡಿದ ಮೇಲೂ ಇಂದು ಸಂಸದ ತೇಜಸ್ವಿ ಸೂರ್ಯ ಖಾಲಿ ಟ್ರಂಕ್ ಹಿಡಿದುಕೊಂಡು ಮೆಟ್ರೋ ಸ್ಟೇಷನ್ ಗೆ ಬಂದಿದ್ದು ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇಂದು ದೆಹಲಿಗೆ ತೆರಳುವ ಮೊದಲು ತೇಜಸ್ವಿ ಸೂರ್ಯ ಮೆಟ್ರೋ ಏರಿದ್ದಾರೆ. ಮೆಟ್ರೋ ನಿಲ್ದಾಣಕ್ಕೆ ಅವರು ಸುಮ್ಮನೇ ಬಂದಿಲ್ಲ. ಜೊತೆಗೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸ ಬರಹ ಬರೆದ ಪೋಸ್ಟರ್ ಅಂಟಿಸಿರುವ ಖಾಲಿ ಟ್ರಂಕ್ ಹಿಡಿದುಕೊಂಡು ಬಂದಿದ್ದಾರೆ.
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ನಲ್ಲಿ ಈಗ ಯತೀಂದ್ರ ಸಿದ್ದರಾಮಯ್ಯ ಎಲ್ಲಾ ವಿಚಾರದಲ್ಲೂ ಹಸ್ತಕ್ಷೇಪ ಮಾಡುತ್ತಿರುವುದು ಪಕ್ಷದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಮೊನ್ನೆಯಷ್ಟೇ ಯತೀಂದ್ರ ಸಿದ್ದರಾಮಯ್ಯ ಸಿಎಂ ಬದಲಾವಣೆ ಇಲ್ಲ ಎಂದು ಹೇಳಿಕೆ ನೀಡಿದ್ದರು. ಇದು ರಾಜ್ಯದಲ್ಲಿ ಮತ್ತೆ ನಾಯಕತ್ವ ವಿಚಾರ ಚರ್ಚೆಯಾಗುವಂತೆ ಮಾಡಿತ್ತು. ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರೇ ಹೈಕಮಾಂಡ್, ಅವರು ಹೇಳಿದಂತೆ ಕೇಳೋಣ ಎಂದು ಟಾಂಗ್ ಕೊಟ್ಟಿದ್ದರು. ಇದಕ್ಕೆ ಮೊದಲು ಕೆಜೆ ಜಾರ್ಜ್ ತಮ್ಮ ಇಲಾಖೆಯಲ್ಲಿನ ಅಧಿಕಾರಿಗಳನ್ನು ಯತೀಂದ್ರ ಅಣತಿ ಮೇರೆಗೆ ವರ್ಗಾವಣೆ ಮಾಡಿದ್ದಕ್ಕೆ ಅಸಮಾಧಾನಗೊಂಡು ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಸುದ್ದಿಗಳಿತ್ತು.
ಮುಂಬೈ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕಂಡರೆ ಗೌತಮ್ ಗಂಭೀರ್ ಗೆ ಆಗಲ್ವಾ? ಇಬ್ಬರನ್ನೂ ತಂಡದಿಂದ ಹೊರಹಾಕಲು ನೋಡುತ್ತಿದ್ದಾರಾ? ಹೀಗೊಂದು ರೂಮರ್ ಗಳಿಗೆ ಈಗ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈಗ ಸ್ಪಷ್ಟನೆ ನೀಡಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗ ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಇಬ್ಬರೂ 2027 ರ ಏಕದಿನ ವಿಶ್ವಕಪ್ ಗುರಿಯಾಗಿರಿಸಿಕೊಂಡಿದ್ದಾರೆ. ಆದರೆ ಗಂಭೀರ್ ಗೆ ಈ ಇಬ್ಬರೂ ಹಿರಿಯ ಆಟಗಾರರು ತಂಡದಲ್ಲಿರುವುದು ಇಷ್ಟವಿಲ್ಲ ಎಂಬ ಸುದ್ದಿ ಹರಿದಾಡುತ್ತಿತ್ತು.
ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಹಗಲು ವಿಪರೀತ ಬಿಸಿಲು ಕಂಡುಬರುತ್ತಿತ್ತು. ಆದರೆ ಇಂದು ಬಿಸಿಲು ಕಡಿಮೆಯಾಗಲಿದ್ದು ಹವಾಮಾನದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ರಾಜ್ಯದ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತಿವೆ. ಕಳೆದ ವಾರ ನೋಡಿದರೆ ಇನ್ನೇನು ಬೇಸಿಗೆಕಾಲ ಶುರುವಾಗಿಯೇ ಬಿಟ್ಟಿತು ಎನ್ನುವಷ್ಟು ಬಿಸಿಲು ಕಂಡುಬಂದಿತ್ತು. ಆದರೆ ರಾತ್ರಿ ಮಾತ್ರ ಚಳಿ ಕಂಡುಬರುತ್ತಿತ್ತು. ವಾರಂತ್ಯಕ್ಕೆ ತಾಪಮಾನದಲ್ಲಿ ಇಳಿಕೆ ಕಂಡುಬಂದಿತ್ತು. ಇಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ವರದಿ ಹೇಳುತ್ತಿದೆ. ಈ ವಾರ ತಾಪಮಾನದಲ್ಲಿ ಭಾರೀ ಇಳಿಕೆಯಾಗಲಿದೆ.
ಸೋಮವಾರ ಶಿವನಿಗೆ ವಿಶೇಷವಾದ ದಿನವಾಗಿದ್ದು, ಶಿವನ ಪೂಜೆ ಮಾಡುವಾಗ ಇಂದು ತಪ್ಪದೇ ಶಿವ ಆರತಿ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.ಸರ್ವೇಶಂ ಪರಮೇಶಂ ಶ್ರೀಪಾರ್ವತೀಶಂ ವಂದೇಽಹಂ ವಿಶ್ವೇಶಂ ಶ್ರೀಪನ್ನಗೇಶಮ್ ।ಶ್ರೀಸಾಂಬಂ ಶಂಭುಂ ಶಿವಂ ತ್ರೈಲೋಕ್ಯಪೂಜ್ಯಂ ವಂದೇಽಹಂ ತ್ರೈನೇತ್ರಂ ಶ್ರೀಕಂಠಮೀಶಮ್ ॥ 1॥ ಭಸ್ಮಾಂಬರಧರಮೀಶಂ ಸುರಪಾರಿಜಾತಂ ಬಿಲ್ವಾರ್ಚಿತಪದಯುಗಲಂ ಸೋಮಂ ಸೋಮೇಶಮ್ ।ಜಗದಾಲಯಪರಿಶೋಭಿತದೇವಂ ಪರಮಾತ್ಮಂ ವಂದೇಽಹಂ ಶಿವಶಂಕರಮೀಶಂ ದೇವೇಶಮ್ ॥ 2॥ ಕೈಲಾಸಪ್ರಿಯವಾಸಂ ಕರುಣಾಕರಮೀಶಂ ಕಾತ್ಯಾಯನೀವಿಲಸಿತಪ್ರಿಯವಾಮಭಾಗಮ್ ।ಪ್ರಣವಾರ್ಚಿತಮಾತ್ಮಾರ್ಚಿತಂ ಸಂಸೇವಿತರೂಪಂ ವಂದೇಽಹಂ ಶಿವಶಂಕರಮೀಶಂ ದೇವೇಶಮ್ ॥ 3॥ ಮನ್ಮಥನಿಜಮದದಹನಂ ದಾಕ್ಷಾಯನೀಶಂ ನಿರ್ಗುಣಗುಣಸಂಭರಿತಂ ಕೈವಲ್ಯಪುರುಷಮ್ ।ಭಕ್ತಾನುಗ್ರಹವಿಗ್ರಹಮಾನಂದಜೈಕಂ ವಂದೇಽಹಂ ಶಿವಶಂಕರಮೀಶಂ ದೇವೇಶಮ್ ॥ 4॥
ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವೆ ಫೆಬ್ರವರಿ 15 ರಂದು ನಡೆಯಬೇಕಿರುವ ಟಿ20 ವಿಶ್ವಕಪ್ ಲೀಗ್ ಪಂದ್ಯ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಮೊದಲು ಪಾಕಿಸ್ತಾನ ನಾವು ಭಾರತದ ವಿರುದ್ಧ ಪಂದ್ಯ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಘೋಷಿಸಿತ್ತು. ಬಾಂಗ್ಲಾದೇಶ ಭಾರತಕ್ಕೆ ಬರಲು ನಿರಾಕರಿಸಿದ ಕಾರಣಕ್ಕೆ ಆ ತಂಡವನ್ನು ಟೂರ್ನಿಯಿಂದ ಹೊರಗಿಟ್ಟಿದ್ದನ್ನು ಪ್ರತಿರೋಧಿಸಿ ಪಾಕಿಸ್ತಾನ ತಂಡ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿತ್ತು. ಪಾಕಿಸ್ತಾನ ಪ್ರಧಾನಿ ಷಹಬಾಜ್ ಷರೀಫ್ ಅವರೇ ಈ ಹೇಳಿಕೆ ನೀಡಿದ್ದರು. ಕೊಲೊಂಬೋದಲ್ಲಿ ನಡೆಯಬೇಕಿರುವ ಈ ಪಂದ್ಯಕ್ಕೆ ಭಾರತವಂತೂ ಈಗಾಗಲೇ ಟಿಕೆಟ್ ಬುಕಿಂಗ್ ಮಾಡಿ ಹೋಗಲು ರೆಡಿಯಾಗಿದೆ.
ಮೈಸೂರು: ದರ ಏರಿಕೆ ವಿಚಾರವಾಗಿ ಕೇಂದ್ರ ಮತ್ತು ರಾಜ್ಯದ ನಡುವೆ ಜಟಾಪಟಿ ನಡೆಯುತ್ತಿರುವ ನಡುವೆಯೇ ಮೈಸೂರು ಸಂಸದ ಯದುವೀರ್ ಒಡೆಯರ್ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿ ಅನುಭವ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಮೆಟ್ರೋ ತಡೆರಹಿತ ಪ್ರಯಾಣ ಜನರಿಗೆ ತುಂಬಾ ಅನುಕೂಲ ಎಂದಿದ್ದಾರೆ. ‘ಬೆಂಗಳೂರು ನಗರದ ಕೇಂದ್ರ ಸ್ಥಾನದಲ್ಲಿ ತುರ್ತು ಕಾರ್ಯಕ್ರಮದ ನಿಮಿತ್ತ ಶೀಘ್ರವಾಗಿ ತಲುಪಲು ನಾನು ಮೈಸೂರು ರಸ್ತೆಯಿಂದ ನಮ್ಮ ಮೆಟ್ರೊ ನೇರಳೆ ಮಾರ್ಗದ ಮೂಲಕ ಸಂಚರಿಸಿದೆ.
ಬೆಂಗಳೂರು: ಕರ್ನಾಟಕದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಬಗ್ಗೆ ಸ್ವತಃ ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆಯವರೇ ವ್ಯಂಗ್ಯ ಮಾಡಿದ ವಿಡಿಯೋವೊಂದು ಈಗ ವೈರಲ್ ಆಗಿದೆ. ಈ ಹಿಂದೆಯೂ ಒಮ್ಮೆ ಆರ್ ವಿ ದೇಶಪಾಂಡೆ ಗ್ಯಾರಂಟಿ ಯೋಜನೆಯನ್ನು ಟೀಕಿಸಿ ಸುದ್ದಿಯಾಗಿದ್ದರು. ಇದೀಗ ಸಾರ್ವಜನಿಕ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಸಾಕಷ್ಟು ಜನರ ಮುಂದೆ ಶಕ್ತಿ ಯೋಜನೆ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ‘ಈವತ್ತು ಸಿದ್ದರಾಮಯ್ಯನವರು ಹೆಣ್ಮಕ್ಳಿಗೆ ಬಸ್ ಫ್ರೀ ಮಾಡ್ಬಿಟ್ಟ. ಒಳಗೆ ಹೋಗ್ಲಿಕೇ ಬರೋದಿಲ್ಲ.
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಕುರಿತು ಇಂದು ಸ್ವತಃ ಫೀಲ್ಡಿಗಿಳಿದು ಜನರ ಅಭಿಪ್ರಾಯ ಸಂಗ್ರಹಿಸಿದ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಮೆಟ್ರೋ ದರ ಏರಿಕೆ ಕುರಿತಂತೆ ರಾಜ್ಯ ಮತ್ತು ಕೇಂದ್ರದ ನಡುವೆ ಜಟಾಪಟಿ ನಡೆಯುತ್ತಿದೆ. ನಿನ್ನೆಯಷ್ಟೇ ಕೇಂದ್ರ ಸಚಿವರ ಜೊತೆ ಈ ಬಗ್ಗೆ ಚರ್ಚಿಸಿರುವುದಾಗಿ ಹೇಳಿದ್ದ ಸಂಸದ ತೇಜಸ್ವಿ ಸೂರ್ಯ ಇಂದು ಆರ್ ವಿ ರೋಡ್ ಮೆಟ್ರೋ ಸ್ಟೇಷನ್ ಗೆ ಬಂದು ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ಮುಂಬೈ: ಜೆಮಿಮಾ ರೊಡ್ರಿಗಸ್ ಗೆ ಜೀಸಸ್ ಕೈ ಹಿಡಿಯಲಿಲ್ಲ ಅದರೆ ತಿರುಪತಿ ತಿಮ್ಮಪ್ಪನ ನಂಬಿದ್ದ ಸ್ಮೃತಿ ಮಂಧಾನಗೆ ದೇವರು ಕೈ ಬಿಡಲಿಲ್ಲ. ಹೀಗೊಂದು ಸೋಷಿಯಲ್ ಮೀಡಿಯಾ ಪೋಸ್ಟ್ ಬಗ್ಗೆ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊನ್ನೆಯಷ್ಟೇ ಡಬ್ಲ್ಯುಪಿಎಲ್ 2026 ಫೈನಲ್ ನಲ್ಲಿ ಜೆಮಿಮಾ ನಾಯಕತ್ವದ ಡೆಲ್ಲಿ ವಿರುದ್ಧ ಸ್ಮೃತಿ ಮಂಧಾನ ನಾಯಕತ್ವದ ಆರ್ ಸಿಬಿ ಗೆದ್ದು ಚಾಂಪಿಯನ್ ಆಗಿತ್ತು. ಈ ಹಿನ್ನಲೆಯಲ್ಲಿ ಕೆಲವರು ಜೆಮಿಮಾರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದಾರೆ.
ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಕಳೆದುಹೋಗಿದ್ದ ಬ್ಯಾಗ್ ಮರಳಿ ಪಡೆದ ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿದ್ದ ಮಹಿಳೆಯೊಬ್ಬರು ತಮ್ಮ ಬ್ಯಾಗ್ ಮರೆತು ಹೋಗಿದ್ದರು. ಬಸ್ ನಲ್ಲಿ ಬಾಕಿಯಾದ ಬ್ಯಾಗ್ ಮತ್ತೆ ಪಡೆಯುವುದೆಂದರೆ ಈಗಿನ ಕಾಲದಲ್ಲಿ ಅದು ಅಪರೂಪದ ವಿದ್ಯಮಾನವೇ ಸರಿ. ಆದರೆ ಈ ಮಹಿಳೆಗೆ ಕಳೆದು ಹೋದ ಬ್ಯಾಗ್ ಸಿಕ್ಕಿದೆ. ಇದಕ್ಕೆ ಬಿಎಂಟಿಸಿ ಬಸ್ ಚಾಲಕ ಮತ್ತು ಕಂಡಕ್ಟರ್ ನ ಪ್ರಾಮಾಣಿಕತೆ ಕಾರಣ. ಬ್ಯಾಗ್ ಕಳೆದು ಹೋದ ಮಹಿಳೆಯನ್ನು ಹೇಗೋ ಪತ್ತೆ ಮಾಡಿ ಡ್ರೈವರ್, ಕಂಡಕ್ಟರ್ ಕರೆಸಿಕೊಂಡಿದ್ದಾರೆ.
ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡಕ್ಕೆ ಕೊನೆಯ ಕ್ಷಣದಲ್ಲಿ ಬದಲಿ ಆಟಗಾರನಾಗಿ ಎಂಟ್ರಿ ಕೊಟ್ಟ ವೇಗಿ ಮೊಹಮ್ಮದ್ ಸಿರಾಜ್ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಸೂರ್ಯ ಭಾಯಿ ಕೊನೆಯ ಬ್ಯಾಗ್ ಪ್ಯಾಕ್ ಮಾಡು ಎಂದ್ರು. ನನಗೆ ನಂಬಕ್ಕೇ ಆಗಲಿಲ್ಲ ಎಂದಿದ್ದಾರೆ. ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡ ಘೋಷಿಸಿದಾಗ ಮೊಹಮ್ಮದ್ ಸಿರಾಜ್ ಇರಲಿಲ್ಲ. ಆದರೆ ಮೊದಲ ಪಂದ್ಯಕ್ಕೆ ಎರಡು ದಿನ ಬಾಕಿಯಿರುವಾಗ ವೇಗಿ ಹರ್ಷಿತ್ ರಾಣಾ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದರು. ಹೀಗಾಗಿ ಮೊಹಮ್ಮದ್ ಸಿರಾಜ್ ರನ್ನು ಬದಲಿ ಆಟಗಾರನನ್ನಾಗಿ ತಂಡಕ್ಕೆ ಸೇರ್ಪಡೆಗೊಳಿಸಲಾಯಿತು.
ಕೆಲವರಿಗೆ ಕಾಲಿನ ಮಾಂಸಖಂಡಗಳಲ್ಲಿ ನೋವು, ಸೆಳೆತದಿಂದಾಗಿ ರಾತ್ರಿ ನಿದ್ರೆಯೇ ಬರಲ್ಲ. ಅಷ್ಟಕ್ಕೂ ಕಾಲಿನ ಮಾಂಸಖಂಡಗಳಲ್ಲಿ ನೋವು ಕಾಣಿಸಿಕೊಳ್ಳಲು ಕಾರಣಗಳೇನು ನೋಡಿ. ರಕ್ತಹೀನತೆಯ ಲಕ್ಷಣ: ಅನಿಮೀಯಾ ಅಥವಾ ರಕ್ತ ಹೀನತೆಯ ಸಮಸ್ಯೆಯಿದ್ದಾಗ ಕಾಲಿನ ಮಾಂಸಖಂಡಗಳು ಹಿಡಿದುಕೊಂಡಂತಾಗುವುದು ಅಥವಾ ನೋವು ಕಾಣಿಸಿಕೊಳ್ಳಬಹುದು.ಗಂಟು ನೋವು: ಗಂಟು ನೋವು ಅಥವಾ ಆರ್ಥರೈಟಿಸ್ ನ ಸಮಸ್ಯೆಯಿದ್ದಾಗ ಕಾಲಿಗೆ ಸರಿಯಾಗಿ ರಕ್ತ ಸಂಚಾರವಿಲ್ಲದೇ ನೋವು ಬರಬಹುದು. ವಿಟಮಿನ್ ಕೊರತೆ: ವಿಟಮಿನ್ ಬಿ12, ಪೊಟ್ಯಾಶಿಯಂ ಅಥವಾ ಮ್ಯಾಗ್ನೀಶಿಯಂ ಕೊರತೆಯಿದ್ದಾಗ ಕಾಲಿನ ಮಾಂಸಖಂಡಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಇಳಿಕೆಯಾದರೆ ಮತ್ತುಇತರೆ ಚಿನ್ನದ ದರ ಯಥಾಸ್ಥಿತಿಯಲ್ಲಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ದಾಖಲೆಯ ಏರಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಇಳಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಇಂದು ಮತ್ತೆ ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,56,380.00 ರೂ.ಗಳಿತ್ತು. ಇಂದೂ 1,59,600.00 ರೂ.ಗಳಷ್ಟಿದೆ.
ಮುಂಬೈ: ಟಿ20 ವಿಶ್ವಕಪ್ ನಲ್ಲಿ ನಿನ್ನೆ ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಟಾಸ್ ವೇಳೆ ಮೈದಾನದಲ್ಲಿದ್ದ ರೋಹಿತ್ ಶರ್ಮಾ ಜೊತೆ ಟೀಂ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಫೀಲ್ಡಿಂಗ್ ಮಾಡ್ಲಾ, ಬ್ಯಾಟಿಂಗ್ ಮಾಡ್ಲಾ ಎಂದು ಕೇಳಿದ ಫನ್ನಿ ವಿಡಿಯೋ ಒಂದು ಇಲ್ಲಿದೆ ನೋಡಿ. ನಿನ್ನೆ ಟಿ20 ವಿಶ್ವಕಪ್ ಗೆ ಚಾಲನೆ ಸಿಕ್ಕಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಅತಿಥೇಯ ಟೀಂ ಇಂಡಿಯಾ, ಯುಎಸ್ಎ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲಿ ಭಾರತ 29 ರನ್ ಗಳ ಗೆಲುವು ಸಾಧಿಸಿದೆ.
ಮುಂಬೈ: ಟಿ20 ವಿಶ್ವಕಪ್ ನ ಭಾರತ ಮತ್ತು ಯುಎಸ್ಎ ನಡುವಿನ ಪಂದ್ಯ ವೀಕ್ಷಣೆ ವೇಳೆ ರೋಹಿತ್ ಶರ್ಮಾಗೆ ಉದ್ಯಮಿ ಮುಕೇಶ್ ಅಂಬಾನಿ ಚಹಾ, ಪಕೋಡಾ ಕೊಟ್ಟರೆ ರೋಹಿತ್ ಶರ್ಮಾ ಏನು ಮಾಡಿದ್ರು ಗೊತ್ತಾ? ರೋಹಿತ್ ಈ ಬಾರಿಯ ಟಿ20 ವಿಶ್ವಕಪ್ ರಾಯಭಾರಿ. ಹೀಗಾಗಿ ನಿನ್ನೆಯ ಮೊದಲ ಪಂದ್ಯಕ್ಕೆ ಅವರು ಮೈದಾನಕ್ಕೆ ಬಂದಿದ್ದರು. ಗ್ಯಾಲರಿಯಲ್ಲಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿ ಹಾಗೂ ಅವರ ಪುತ್ರ ಆಕಾಶ್ ಅಂಬಾನಿ ಕೂಡಾ ಇದ್ದರು. ಅವರ ಜೊತೆಗೆ ರೋಹಿತ್ ಕೂಡಾ ಕೂತು ಪಂದ್ಯ ವೀಕ್ಷಿಸಿದ್ದಾರೆ. ಪಂದ್ಯದ ನಡುವೆ ಅಂಬಾನಿ ಪ್ರೀತಿಯಿಂದ ರೋಹಿತ್ ಗೆ ಚಹಾ ಮತ್ತು ಪಕೋಡಾ ನೀಡಿದ್ದಾರೆ.
ಮುಂಬೈ: ಟಿ20 ವಿಶ್ವಕಪ್ 2026 ರ ರಾಯಭಾರಿಯಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾಗೆ ಮುಂಬೈ ಪ್ರೇಕ್ಷಕರು ಎಂಥಾ ಪ್ರೀತಿ ತೋರಿಸಿದರು ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಮುಂಬೈ ವಾಂಖೆಡೆ ಮೈದಾನದಲ್ಲಿ ರೋಹಿತ್ ಶರ್ಮಾ ನಿನ್ನೆ ಟ್ರೋಫಿ ಹಿಡಿದುಕೊಂಡು ಬಂದು ಗೌರವ ಸಲ್ಲಿಸಿದ್ದಾರೆ. ಈ ವೇಳೆ ಟೀಂ ಇಂಡಿಯಾ ಕ್ರಿಕೆಟಿಗರು ಅವರತ್ತ ಬಂದು ಮಾತನಾಡಿಸಿದ್ದರು. ಆದರೆ ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಮುಂಬೈ ಪ್ರೇಕ್ಷಕರ ಪ್ರೀತಿ. ಮುಂಬೈ ರೋಹಿತ್ ಶರ್ಮಾ ತವರು. ಇಲ್ಲಿ ಆಡುವಾಗಲೂ ರೋಹಿತ್ ಶರ್ಮಾಗೆ ದೊಡ್ಡ ಮಟ್ಟದಲ್ಲಿ ಚಿಯರ್ ಮಾಡಲು ಪ್ರೇಕ್ಷಕರು ಬರುತ್ತಾರೆ.
ಬೆಂಗಳೂರು: ತಮ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಗೆ ಕಿಚ್ಚ ಸುದೀಪ್ ತಮ್ಮದೇ ಶೈಲಿಯಲ್ಲಿ ಗುಮ್ಮಿದ್ದಾರೆ.ಕನಕಪುರ ಶ್ರೀನಿವಾಸ್ ಕಿಚ್ಚ ಸುದೀಪ್, ಪ್ರೇಮ್ ಸೇರಿದಂತೆ ಹಲವು ಘಟಾನುಘಟಿಗಳಿಗೆ ಸಿನಿಮಾ ನಿರ್ಮಾಣ ಮಾಡಿದವರು. ಆದರೆ ಇತ್ತೀಚೆಗೆ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಜೋಗಿ ಪ್ರೇಮ್, ಕಿಚ್ಚ ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಎಲ್ಲಾ ನಟರ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿ ಮಾತನಾಡಿದ್ದರು. ಇದರ ವಿರುದ್ಧ ನಿನ್ನೆ ಜೋಗಿ ಪ್ರೇಮ್ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಗೆ ಲಿಖಿತ ದೂರು ಸಲ್ಲಿಸಿದ್ದರು.
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ವಿಚಾರ ಸದ್ದು ಮಾಡುತ್ತಿದೆ. ಒಮ್ಮೆ ತಣ್ಣಗಾಗಿದ್ದ ರಾಜಕೀಯ ವಿದ್ಯಮಾನಗಳು ಈಗ ಮತ್ತೆ ಭುಗಿಲೇಳಲು ಕಾರಣಗಳು ಹಲವು ಎನ್ನಲಾಗುತ್ತಿದೆ. ಡಿಸೆಂಬರ್ ನಲ್ಲಿ ಸುಂಟರ ಗಾಳಿ ಎಬ್ಬಿಸಿದ್ದ ಸಿಎಂ ಬದಲಾವಣೆ ವಿಚಾರ ಜನವರಿ ಹೊತ್ತಿಗೆ ತಣ್ಣಗಾಗಿತ್ತು. ಹೈಕಮಾಂಡ್ ನಿಂದ ಸ್ವಲ್ಪ ದಿನ ಕಾಯುವಂತೆ ಸಂದೇಶ ಬಂದ ಹಿನ್ನಲೆಯಲ್ಲಿ ಇಷ್ಟು ದಿನ ಎರಡೂ ಬಣದ ನಾಯಕರು ಸುಮ್ಮನಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಹೈಕಮಾಂಡ್ ಎರಡು ಅಧಿವೇಶನಗಳೇ ಮುಗಿದರೂ ಇನ್ನೂ ರಾಜ್ಯ ನಾಯಕರಿಗೆ ಬುಲಾವ್ ನೀಡದೇ ಇರುವುದು ಡಿಕೆಶಿ ಬಣದ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಈಗ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದೆ. ಇಂದು ರಾಜ್ಯದ ಹವಾಮಾನ ಹೇಗಿರಲಿದೆ ಇಲ್ಲಿದೆ ಇಂದಿನ ಹವಾಮಾನ ವರದಿ. ರಾಜ್ಯದಲ್ಲಿ ಈಗ ಹಗಲು ಬಿಸಿಲಿನ ತಾಪ ದಿನೇ ದಿನೇ ಹೆಚ್ಚಾಗುತ್ತಿದೆ. ಬೆಳಿಗ್ಗೆ 10 ರಿಂದ ಸಂಜೆ 3 ಗಂಟೆಯವರೆಗೆ ಹೊರಗೆ ಕಾಲಿಡಲಾಗದಷ್ಟು ಬಿಸಿಲಿನ ಝಳ ಕಂಡುಬರುತ್ತಿದೆ. ಆದರೆ ರಾತ್ರಿ ಚಳಿಯೂ ಇರುವುದರಿಂದ ಹೆಚ್ಚು ಸೆಖೆ ಕಂಡುಬರುತ್ತಿಲ್ಲ. ಇಂದು ಕೆಲವೆಡೆ ಭಾಗಶಃ ಮೋಡ ಕವಿದ ಮತ್ತು ಬಿಸಿಲಿನ ವಾತಾವರಣವಿರಲಿದೆ. ರಾಜ್ಯದಲ್ಲಿ ಗರಿಷ್ಠ ತಾಪಮಾನ ಇಂದು 29 ಡಿಗ್ರಿಗೆ ಏರಿಕೆಯಾಗಲಿದೆ. ಕನಿಷ್ಠ ತಾಪಮಾನ 17 ಡಿಗ್ರಿಯಷ್ಟು ಕಂಡುಬರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಇಂದು ಭಾನುವಾರವಾಗಿದ್ದು ಸೂರ್ಯ ದೇವನನ್ನು ಪ್ರಾರ್ಥಿಸುವುದರಿಂದ ಒಳಿತಾಗಲಿದೆ. ಸೂರ್ಯ ದೇವನ ಅನುಗ್ರಹಕ್ಕಾಗಿ ಇಂದು ಸೂರ್ಯ ಮಂಡಲ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.ನಮೋಽಸ್ತು ಸೂರ್ಯಾಯ ಸಹಸ್ರರಶ್ಮಯೇಸಹಸ್ರಶಾಖಾನ್ವಿತ ಸಂಭವಾತ್ಮನೇ ।ಸಹಸ್ರಯೋಗೋದ್ಭವ ಭಾವಭಾಗಿನೇಸಹಸ್ರಸಂಖ್ಯಾಯುಧಧಾರಿಣೇ ನಮಃ ॥ 1 ॥ ಯನ್ಮಂಡಲಂ ದೀಪ್ತಿಕರಂ ವಿಶಾಲಂರತ್ನಪ್ರಭಂ ತೀವ್ರಮನಾದಿರೂಪಮ್ ।ದಾರಿದ್ರ್ಯದುಃಖಕ್ಷಯಕಾರಣಂ ಚಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 2 ॥ ಯನ್ಮಂಡಲಂ ದೇವಗಣೈಃ ಸುಪೂಜಿತಂವಿಪ್ರೈಃ ಸ್ತುತಂ ಭಾವನಮುಕ್ತಿಕೋವಿದಮ್ ।ತಂ ದೇವದೇವಂ ಪ್ರಣಮಾಮಿ ಸೂರ್ಯಂಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 3 ॥ ಯನ್ಮಂಡಲಂ ಜ್ಞಾನಘನಂತ್ವಗಮ್ಯಂತ್ರೈಲೋಕ್ಯಪೂಜ್ಯಂ ತ್ರಿಗುಣಾತ್ಮರೂಪಮ್ ।ಸಮಸ್ತತೇಜೋಮಯದಿವ್ಯರೂಪಂಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 4 ॥
ವಾಂಖೆಡೆ: ಐಸಿಸಿ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ಶುಭಾರಂಭ ಮಾಡಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು 29 ರನ್ಗಳಿಂದ ಅಮೆರಿಕಾ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.ಟಾಸ್ ಗೆದ್ದ ಅಮೆರಿಕಾ ತಂಡವು ಫೀಲ್ಡಿಂಗ್ ಆಯ್ದಕೊಂಡಿತು. ನಾಯಕ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ದಾಳಿ ಸಂಘಟಿಸಿದ ಅಮೆರಿಕಾ ಬೌಲರ್ಗಳು ಆರಂಭದಲ್ಲೇ ಮೇಲುಗೈ ಸಾಧಿಸಿದರು. 77 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ನಾಯಕ ಸೂರ್ಯಕುಮಾರ್ ಆಸರೆಯಾದರು. ಅವರ ಆಟದ ನೆರವಿನಿಂದ ಭಾರತ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗೆ 161 ರನ್ ಗಳಿಸಿತು.ಅಭಿಷೇಕ್ ಶರ್ಮಾ, ಶಿವಂ ದುಬೆ ಸೊನ್ನೆ ಸುತ್ತಿದರು. ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ ಕೂಡಾ ನಿರಾಸೆ ಮೂಡಿಸಿದರು.