Shorts

ಇಂದು ಮಂಗಳವಾರವಾಗಿದ್ದು ಆಂಜನೇಯಸ್ವಾಮಿ ಪೂಜೆ ಮಾಡುವುದು ಶ್ರೇಯಸ್ಕರವಾಗಿದೆ. ಇಂದು ಆಂಜನೇಯ ಪೂಜೆ ಮಾಡುವಾಗ ತಪ್ಪದೇ ಏಕಾದಶಮುಖಿ ಹನುಮತ್ಕವಚಂ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.ಶ್ರೀದೇವ್ಯುವಾಚಶೈವಾನಿ ಗಾಣಪತ್ಯಾನಿ ಶಾಕ್ತಾನಿ ವೈಷ್ಣವಾನಿ ಚ ।ಕವಚಾನಿ ಚ ಸೌರಾಣಿ ಯಾನಿ ಚಾನ್ಯಾನಿ ತಾನಿ ಚ ॥ 1॥ಶ್ರುತಾನಿ ದೇವದೇವೇಶ ತ್ವದ್ವಕ್ತ್ರಾನ್ನಿಃಸೃತಾನಿ ಚ ।ಕಿಂಚಿದನ್ಯತ್ತು ದೇವಾನಾಂ ಕವಚಂ ಯದಿ ಕಥ್ಯತೇ ॥ 2॥ ಈಶ್ವರ ಉವಾಚಶ‍ಋಣು ದೇವಿ ಪ್ರವಕ್ಷ್ಯಾಮಿ ಸಾವಧಾನಾವಧಾರಯ ।ಹನುಮತ್ಕವಚಂ ಪುಣ್ಯಂ ಮಹಾಪಾತಕನಾಶನಮ್ ॥ 3॥ಏತದ್ಗುಹ್ಯತಮಂ ಲೋಕೇ ಶೀಘ್ರಂ ಸಿದ್ಧಿಕರಂ ಪರಮ್ ।ಜಯೋ ಯಸ್ಯ ಪ್ರಗಾನೇನ ಲೋಕತ್ರಯಜಿತೋ ಭವೇತ್ ॥ 4॥ ಓಂ ಅಸ್ಯ ಶ್ರೀಏಕಾದಶವಕ್ತ್ರಹನುಮತ್ಕವಚಮಾಲಾಮಂತ್ರಸ್ಯ

ಬೆಂಗಳೂರು: ಕಿವಿ ಕೇಳಿಸದಿದ್ದರೂ, ಕಣ್ಣು ಮಂಜಾಗಿದ್ದರೂ ತನ್ನ ವಿಭಿನ್ನವಾದ ಹಾವಭಾವದಿಂದಲೇ ಕರ್ನಾಟಕದ ಜನರ ಮನಗೆದ್ದಿದ್ದ ರೀಲ್ಸ್‌ ಅಜ್ಜಿಯೆಂದೇ ಹೆಸರಾಗಿದ್ದ ಲಕ್ಷ್ಮಿ ಅಜ್ಜಿ ಅವರು ಇನ್ನು ನೆನಪು ಮಾತ್ರ. ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೆರೆಹೊಸಳ್ಳಿಯ ಲಕ್ಷ್ಮಿ ನಾಯ್ಕ (93) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.ಲಕ್ಷ್ಮಿ ಅಜ್ಜಿ ಅವರು ಇಬ್ಬರು ಪುತ್ರಿಯರು ಹಾಗೂ ಪುತ್ರನನ್ನು ಅವರು ಅಗಲಿದ್ದಾರೆ. ಇಂದು ಯಲ್ಲಾಪುರದಲ್ಲಿ ಧಾರ್ಮಿಕ ವಿಧಿ ಪ್ರಕಾರ ಅವರ ಅಂತ್ಯಕ್ರಿಯೆ ನೆರವೇರಿತು.ತಮ್ಮ ಮರಿಮೊಮ್ಮಗ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಸೂರಜ್ ಆಚಾರಿ ಹೇಳಿಕೊಟ್ಟಂತೆ ನಟನೆ ಮಾಡುತ್ತಲೇ ಲಕ್ಷ್ಮಿ ಅಜ್ಜಿ ಫೇಮಸ್‌ ಆಗಿದ್ದರು.

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಇಡೀ ವಿಶ್ವವೇ ಸವಾಲುಗಳನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಜನರು ವದಂತಿಗಳಿಗೆ ಕಿವಿಗೊಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ಧಾರೆ. ಇಂದಿನ ಸವಾಲುಗಳನ್ನು ಎದುರಿಸಲು ದೇಶದ ಎಲ್ಲ ನಾಗರಿಕರು ಒಗ್ಗೂಡಬೇಕು. ರಾಜ್ಯ ಸರ್ಕಾರಗಳು ಜನತೆಗೆ ಏನೆಲ್ಲ ಸೂಚನೆ, ಮಾಹಿತಿಗಳನ್ನ ಕೊಟ್ಟಿವೆಯೋ ಅವುಗಳ ಮೇಲೆ ವಿಶ್ವಾಸವಿಟ್ಟು ಹೆಜ್ಜೆ ಇಡಬೇಕು ಎಂದು ಮನ್‌ ಕಿ ಬಾತ್‌ನಲ್ಲಿ ಸಲಹೆ ನೀಡಿದ್ದಾರೆ.ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಹಾರ್ಮುಜ್‌ ಜಲಸಂಧಿಯಲ್ಲಿ ಉಂಟಾಗುತ್ತಿರುವ ಪರಿಣಾಮಗಳ ಕುರಿತು ವಿವರಿಸಿದರು. ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ 1 ಕೋಟಿಗೂ ಹೆಚ್ಚು ಭಾರತೀಯರಿಗೆ ಸಾಧ್ಯವಾದ ಎಲ್ಲಾ ಸಹಾಯವನ್ನ ಒದಗಿಸಿರುವುದಕ್ಕೆ ಆ ದೇಶಗಳಿಗೆ ತಮ್ಮ ಧನ್ಯವಾದ ಹೇಳಿದರು.