Shorts

ವಾಷಿಂಗ್ಟನ್‌: ಪಶ್ಚಿಮ ಏಷ್ಯಾದಲ್ಲಿ ಸಂಭವಿಸಿರುವ ಘರ್ಷಣೆ ಶಮನವಾಗುವ ಲಕ್ಷಣಗಳು ನಡೆದಿವೆ. ಅಮೆರಿಕದ ಜೊತೆ ಮಾತುಕತೆ ನಡೆಸಲು ಇರಾನಿನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಗ್ರೀನ್‌ಸಿಗ್ನಲ್‌ ನೀಡಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಿಟ್ಟಿದ್ದ ಶಾಂತಿ ಮಾತುಕತೆಗೆ ಮೊಜ್ತಬಾ ಖಮೇನಿ ಒಪ್ಪಿಕೊಂಡಿದ್ದಾರೆ ಎಂದು ಸೌದಿ ಸರ್ಕಾರದ ಅಲ್ ಅರೇಬಿಯಾ ಮಾಧ್ಯಮ ವರದಿ ಮಾಡಿದೆ. ಆದರೆ, ಈ ವರದಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಇರಾನ್‌ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಟ್ರಂಪ್‌ ಸೋಮವಾರ ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಇರಾನ್ ದೇಶದ ಜೊತೆ ಕಳೆದ ಎರಡು ದಿನಗಳಲ್ಲಿ ಉತ್ತಮ ಮಾತುಕತೆ ನಡೆದಿದೆ. ಫಲಪ್ರದವಾದ ಮಾತುಕತೆ ನಡೆದ ಹಿನ್ನೆಲೆಯಲ್ಲಿ ಇರಾನಿನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ಎಲ್ಲಾ ಮಿಲಿಟರಿ ದಾಳಿಗಳನ್ನು ಐದು ದಿನಗಳ ಅವಧಿಗೆ ಮುಂದೂಡಲು ಸೂಚನೆ ನೀಡಿದ್ದೇನೆ ಎಂದು ಪೋಸ್ಟ್‌ ಮಾಡಿದ್ದರು.

ಇಸ್ಲಾಮಾಬಾದ್: ಧುರಂಧರ್ ಸಿನಿಮಾದ ಪರಿಣಾಮ ಬೀದಿ ಬೀದಿಯಲ್ಲಿರುವ ಭಿಕ್ಷುಕರನ್ನೆಲ್ಲಾ ಹುಡುಕಾಡುತ್ತಿರುವ ಪಾಕಿಸ್ತಾನ ಈಗ ಭಾರೀ ಮಂಡೆ ಬಿಸಿ ಮಾಡಿಕೊಂಡು ಕೂತಿದೆ. ರಣವೀರ್ ಸಿಂಗ್ ನಾಯಕರಾಗಿರುವ ಧುರಂಧರ್ ಸಿನಿಮಾ ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತದ ಗುಪ್ತಚರ ಅಧಿಕಾರಿಗಳು ಪಾಕಿಸ್ತಾನದಲ್ಲಿ ಭಿಕ್ಷುಕರಂತೆ ವೇಷಮರೆಸಿಕೊಂಡು ನಮ್ಮ ದೇಶದ ಶತ್ರುಗಳನ್ನು ಹೊಡೆದುರುಳಿಸಿದ ಕತೆ ಇದರಲ್ಲಿದೆ. ಇದು ನಿಜ ಜೀವನದಲ್ಲೂ ನಡೆದ ಘಟನೆಯಾಗಿದೆ. ಈಗಿನ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಇದೇ ರೀತಿ ಪಾಕಿಸ್ತಾನದಲ್ಲಿ ಭಿಕ್ಷುಕನಂತೆ ವೇಷಮರೆಸಿಕೊಂಡು ಹಲವು ಸಮಯವಿದ್ದು ಶತ್ರುದೇಶದ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು. ಧುರಂಧರ್ ಸಿನಿಮಾದಲ್ಲಿ ಅಜಿತ್ ದೋವಲ್ ನಿಜ ಜೀವನದ ಕತೆಯನ್ನೇ ಹೇಳಲಾಗಿದೆ.

ಮಂಗಳೂರು: ದಕ್ಷಿಣ ಕನ್ನಡ (ದ.ಕ.) ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನ ಏರಿಕೆಯಾಗುತ್ತಿದ್ದು, ಇತ್ತೀಚೆಗೆ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಬಿಸಿಗಾಳಿಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಸೇರಿದಂತೆ ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ವಿಶೇಷ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಐದು ಹಾಸಿಗೆಗಳ ವಿಶೇಷ ವಾರ್ಡ್ ಸಿದ್ಧಗೊಂಡಿದೆ. ಬೆಳ್ತಂಗಡಿ, ಸುಳ್ಯ, ಪುತ್ತೂರು ಮತ್ತು ಬಂಟ್ವಾಳ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಎರಡು ಹಾಸಿಗೆಗಳ ಪ್ರತ್ಯೇಕ ಚಿಕಿತ್ಸಾ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಈ ಕೊಠಡಿಗಳಲ್ಲಿ ಅಗತ್ಯ ಔಷಧಗಳು, ಹವಾನಿಯಂತ್ರಣ ಮತ್ತು ಇತರ ತುರ್ತು ಸೌಲಭ್ಯಗಳನ್ನು ಅಳವಡಿಸಲಾಗಿದೆ.

ಬೆಂಗಳೂರು: ಬಾಲಿವುಡ್‌ ಅಂಕಣದಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್-2 ಸಿನಿಮಾ ಇಂದಿನಿಂದ ಕನ್ನಡದಲ್ಲಿ ದರ್ಶನ ನೀಡುತ್ತಿದೆ. ಹಿಂದಿಯಲ್ಲಿ ಬಿಡುಗಡೆಯಾದ ಈ ಸಿನಿಮಾ ಕಳೆದ ನಾಲ್ಕು ದಿನಗಳಿಂದ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡಿದೆ. ಈ ಮೊದಲು ಚಿತ್ರವನ್ನ ನೋಡಿದ ಕನ್ನಡಿಗರು ಈ ಚಿತ್ರವನ್ನ ಹಿಂದಿಯಲ್ಲಿಯೇ ನೋಡಿದ್ದಾರೆ. ಆದರೆ, ರಿಲೀಸ್ ಆದ ಐದನೇ ದಿನಕ್ಕೆ ಧುರಂಧರ್-2 ಕನ್ನಡ ವರ್ಶನ್ ಲಭ್ಯವಾಗುತ್ತಿದೆ. ಈ ಕುರಿತು ಚಿತ್ರ ವಿತರಣಾ ಸಂಸ್ಥೆ ಜಿಯೋ ಸ್ಟುಡಿಯೊ ಮಾಹಿತಿ ಹಂಚಿಕೊಂಡಿಕೊಂಡಿದೆ. ಆದಿತ್ಯಧರ್ ನಿರ್ದೇಶನದ ‘ಧುರಂಧರ್2’ ಚಿತ್ರವನ್ನು ಕರ್ನಾಟಕವು ಸೇರಿ ವಿದೇಶಗಳಲ್ಲೂ ಮಾರ್ಚ್19ರಂದು ಬಿಡುಗಡೆ ಮಾಡಲಾಗಿತ್ತು. ಇನ್ನೂ, ಈ ಚಿತ್ರ ಇಲ್ಲಿಯವರೆಗೂ ₹500 ಕೋಟಿಗೂ ಅಧಿಕ ಗಳಿಕೆ ಕಂಡಿದೆ.