ಮುಂಬೈ: ಭಾರತ-ಫ್ರಾನ್ಸ್ ಇನ್ನೋವೇಶನ್ ಫೋರಂಗೆ ಹೋಗುವ ಮಾರ್ಗದಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಒಟ್ಟಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದರು. ತಮ್ಮ ದ್ವಿಪಕ್ಷೀಯ ಮತ್ತು ನಿಯೋಗ ಮಟ್ಟದ ಮಾತುಕತೆಯ ನಂತರ ಭಾರತ-ಫ್ರಾನ್ಸ್ ಇನ್ನೋವೇಶನ್ ಫೋರಂಗೆ ನಾಯಕರು ತೆರಳುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಬೆಚ್ಚಗಿನ ಮತ್ತು ವೈಯಕ್ತಿಕ ಬಾಂಧವ್ಯವನ್ನು ಪ್ರದರ್ಶಿಸಿದರು. ಮ್ಯಾಕ್ರನ್ ಮತ್ತು ನಾನು ಭಾರತ-ಫ್ರಾನ್ಸ್ ಇನ್ನೋವೇಶನ್ ಫೋರಮ್ ಸೇರಿದಂತೆ ಇತರ ಕಾರ್ಯಕ್ರಮಗಳ ಹಾದಿಯಲ್ಲಿದ್ದೇವೆ.
ಹಾಸನ: ಇಲ್ಲಿನ ಸೈಟ್ ವಿಚಾರವಾಗಿ ಯಾವುದೇ ಕಾರಣಕ್ಕೂ ಸುಮ್ಮನಿರಲ್ಲ ಎಂದು ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ಕುಮಾರ್ ಇದೀಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿ ದೂರನ್ನು ನೀಡಿದ್ದಾರೆ. ಸೈಟ್ ಮಾಲೀಕತ್ವ ಜಟಾಪಟಿಗೆ ಸಂಬಂಧಿಸಿದಂತೆ ಕೋರ್ಟ್ನಿಂದ ಸ್ಟೇ ಸಿಕ್ಕ ಬಳಿಕ, ಆಮೇಲೆ ಕಾಂಪೌಂಡ್ ಕೆಡವಿದ ಮಾಲೀಕ ಹಾಗೂ ಪುಷ್ಪಾ ನಡುವೆ ಗಲಾಟೆ ನಡೆದಿತ್ತು. ಇದಗ ಗಲಾಟೆ ವೀಡಿಯೋ ಇರುವ ಪೆನ್ಡ್ರೈವ್, ಆದೇಶ ಪ್ರತಿ, ತಾವು ಸೈಟ್ ಖರೀದಿ ಮಾಡಿರುವ ಕ್ರಯ ಪತ್ರಗಳ ದಾಖಲೆ
ಬೆಂಗಳೂರು: ಬಿಜೆಪಿ ಕೇಂದ್ರ ಸಚಿವ ವಿ ಸೋಮಣ್ಣ ಅವರನ್ನು ರಾಜ್ಯ ಸಚಿವ ಜಮೀರ್ ಅಹ್ಮದ್ ಖಾನ್ ಕೊಂಡಾಡಿದ್ದಾರೆ. ಬೆಂಗಳೂರಿನ ವಿಜಯನಗರ-ಮೈಸೂರು ರಸ್ತೆಯ ನಾಯಂಡಹಳ್ಳಿ ಬಳಿ ನೂತನ ರಸ್ತೆ ಮೇಲ್ಸೇತುವೆಯನ್ನು ಸೋಮಣ್ಣ ಅವರು ಇಂದು ಲೋಕಾರ್ಪಣೆ ಮಾಡಿದರು. ಈ ರಸ್ತೆ ಮೇಲ್ಸೇತುವೆ ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿತ್ತು. ನೂತನ ಮೇಲ್ಸೇತುವೆಯು ವಿಜಯನಗರ ಹಾಗೂ ಪಾದರಾಯನಪುರದ ಜನತೆಗೆ ಸಹಕಾರಿಯಾಗಲಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು.
ಮಂಗಳೂರಿನ ಉಳ್ಳಾಲದ ಕಿನ್ಯಾ ಸಂಕೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಅತಿವೇಗವಾಗಿ ಬಂದ ಬೈಕ್ ಸಾವರ, ನಿಯಂತ್ರಣಗೆ ಸಿಗದೆ ಇದ್ದಾಗ ರಸ್ತೆ ಬಳಿಯಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇನ್ನೂ ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬಕ್ಕೆ ತುಂಡಾಗಿ ನೆಲಕ್ಕೆ ಬಿದ್ದಿದೆ. ಪವಾಡ ಸದೃಶ್ಯ ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯಗಳಾಗಿದ್ದರು. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಸೋಮವಾರ ಸಂಜೆ 5:00 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಅತಿ ವೇಗದಲ್ಲಿ ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ
ಕೋಝಿಕ್ಕೋಡ್: ಕೋಝಿಕ್ಕೋಡ್ನ ಪಾಳಯಂನಲ್ಲಿರುವ ಜಯಲಕ್ಷ್ಮಿ ಸಿಲ್ಕ್ಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಇತರ ಭಾಗಗಳಿಗೆ ಬೆಂಕಿಯ ಬೆಂಕಿಯು ಎರಡನೇ ಮಹಡಿಗೆ ವ್ಯಾಪಿಸಿದೆ. ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಸ್ಥಳದಲ್ಲಿದ್ದು, ಬೆಂಕಿಯನ್ನು ಹತೋಟಿಗೆ ತರಲು ಶ್ರಮಿಸಿದರು. ಕೋಝಿಕ್ಕೋಡ್ ರೈಲು ನಿಲ್ದಾಣದ ಸಮೀಪವಿರುವ ಮೂರು ಅಂತಸ್ತಿನ ಜಯಲಕ್ಷ್ಮಿ ಸಿಲ್ಕ್ಸ್ ಕಟ್ಟಡದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಆವರಣವು ಗ್ರಾಹಕರಿಂದ ಕಿಕ್ಕಿರಿದು ತುಂಬಿತ್ತು.ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಹತ್ತಿರದ ಎರಡು ನಿಲ್ದಾಣಗಳಿಂದ ಕನಿಷ್ಠ ಮೂರು
ಕೇರಳ: ಸೋಶಿಯಲ್ ಮೀಡಿಯಾ ಇನ್ಪುಲೆಯೆನ್ಸರ್ ಚಿನ್ನು ಪಾಪು ಎಂದೇ ಖ್ಯಾತರಾಗಿದ್ದ ಕೆ ರೇಷ್ಮಾ ಅವರ ಸಾವು ಪ್ರಕರಣದ ವಾರದ ಬಳಿಕ ಆಕೆಯ ಸ್ನೇಹಿತ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾಳೆ. ಮೃತರನ್ನು ಸಂದೇಶ್ ಎಂದು ಗುರುತಿಸಲಾಗಿದ್ದು, 29 ವರ್ಷದ ಕಾಸರಗೋಡಿನ ಉಳಿಯತ್ತಡುಕ ಮೂಲದವರಾಗಿದ್ದಾರೆ. ಈ ಹಿಂದೆ ರೇಷ್ಮಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದು, ಅದೇ ದಿನ ಬಿಡುಗಡೆಗೊಂಡಿದ್ದರು.ಕಾಸರಗೋಡು ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾರ, ರೇಷ್ಮಾಳ ಸಾವಿನಿಂದ ಉಂಟಾದ ಮನನೊಂದ ಸಂದೇಶ್
ಹೌರಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗದ ಮೇಲೆ ಮಂಗಳವಾರ ವಾಗ್ದಾಳಿ ನಡೆಸಿದ್ದು, ಅದು ರಾಜ್ಯದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಮತ್ತು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದೆ.ಯಾರೇ ಮಾಡಿದರೂ "ಪ್ರಜಾಪ್ರಭುತ್ವವನ್ನು ಕೊಲ್ಲುವ" ಯಾವುದೇ ಪ್ರಯತ್ನಕ್ಕೆ "ತಕ್ಕ ಉತ್ತರ ನೀಡಲಾಗುವುದು" ಎಂದು ಹೇಳಿದರು. ಇಲ್ಲಿ, ಬ್ಯಾನರ್ಜಿ ಚುನಾವಣಾ ಸಂಸ್ಥೆಯು ಅತಿಕ್ರಮಣ ಮತ್ತು ಕಿರುಕುಳವನ್ನು ಆರೋಪಿಸಿದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ಯಾವಾಗ ಜೈಲಿನಿಂದ ಬಿಡುಗಡೆಯಾಗುತ್ತಾರೆಂಬ ಕಾಯುವಿಕೆಯಲ್ಲಿ ಅಭಿಮಾನಿಗಳಿದ್ದಾರೆ. ಈ ನಡುವೆ ಕನ್ನಡ ಸಿನಿಮಾ ರಂಗದ ಹಿರಿಯ ನಟ ರವಿಚಂದ್ರನ್ ಅವರು ದರ್ಶನ್ ಬಿಡುಗಡೆ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಫೆ.16ರಂದು 49ನೇ ಹುಟ್ಟುಹಬ್ಬವನ್ನು ದರ್ಶನ್ ಜೈಲಿನಲ್ಲೇ ಆಚರಿಸಿಕೊಂಡರು. ಅದೇ ದಿನ ರವಿಚಂದ್ರನ್ ಅವರು ವೇದಿಕೆಯಲ್ಲಿ ಕಾನಿಸಿಕೊಂಡರು. ಈ ವೇಳೆ ದರ್ಶನ್ ಅಭಿಮಾನಿಗಳು ಡಿಬಾಸ್ ಡಿಬಾಸ್ ಎಂದು ಕೂಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರವಿಚಂದ್ರನ್ ನೋಡ್ತಿರಿ ದರ್ಶನ್ ಇನ್ನೆರಡು ತಿಂಗಳಲ್ಲಿ ಆಚೆ ಬರ್ತಾರೆ. ನನ್ನ ನಾಲಿಗೆಯಿಂದ ಹೇಳಿದೆ ಅಂದ್ಮೇಲೆ ಆಚೆ ಬಂದೇ ಬರುತ್ತಾರೆ. ನಿಮಗೆಲ್ಲ ಅವನು ಡಿ ಬಾಸ್, ನನಗೆ ಮಗ, ನೆನಪಿಟ್ಟುಕೊಳ್ಳಿ. ಇದೆಲ್ಲ ಕೆಟ್ಟ ಘಳಿಗೆ ಅಷ್ಟೇ. ಕೆಟ್ಟ
ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಭಾರತೀಯ ಜನತಾ ಪಕ್ಷ (ಬಿಜೆಪಿ) ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಮುಖ್ಯವಾಹಿನಿಯ ಇಂಗ್ಲಿಷ್ ಮತ್ತು ಕನ್ನಡ ದೈನಿಕಗಳ ಮುಖಪುಟದಲ್ಲಿ ಹಾಗೂ ಎಕ್ಸ್ನಲ್ಲಿ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಅವರು ಆಧಾರರಹಿತ ಆರೋಪಗಳನ್ನು ಹಂಚಿಕೊಂಡಿದ್ದಾರೆ ಎಂದು ಪಕ್ಷದ ರಾಜ್ಯ ಘಟಕ ಆರೋಪಿಸಿದೆ. ಬೆಂಗಳೂರು, "ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ
ಇಂದೋರ್ನ 24 ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯನ್ನು ಆಕೆಯ ಗೆಳೆಯ ಕೊಲೆ ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಆವರಣದಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಎಚ್ಚರಿಸಿದ ಪೊಲೀಸರು ಜನವರಿ 13 ರಂದು ಬಲಿಪಶುವಿನ ಶವವನ್ನು ಪತ್ತೆ ಮಾಡಿದರು.ಫ್ಲಾಟ್ಗೆ ಪ್ರವೇಶಿಸಿದಾಗ, ಅಧಿಕಾರಿಗಳು ಹಾಸಿಗೆಯ ಮೇಲೆ ಬಟ್ಟೆಯಿಲ್ಲದೆ ಮಲಗಿರುವುದು ಕಂಡುಬಂತು. ಪ್ರಾಥಮಿಕ ಪರೀಕ್ಷೆಗಳಲ್ಲಿ ಮಹಿಳೆಯ ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ಸೂಚಿಸಲಾಗಿದೆ, ಏಕೆಂದರೆ ಆಕೆಯ ಕುತ್ತಿಗೆಯ ಸುತ್ತಲೂ ಹಗ್ಗವನ್ನು ಬಳಸುವುದನ್ನು ಸೂಚಿಸುವ ಗುರುತುಗಳು ಗೋಚರಿಸುತ್ತವೆ. ಅನಾರೋಗ್ಯ ಹಿನ್ನೆಲೆ ಆಕೆ ಲೈಂಗಿಕ ಕ್ರಿಯೆಗೆ ಸಮ್ಮತಿ ಸೂಚಿಸಲಿಲ್ಲ. ಇದರಿಂದ ಕೋಪಗೊಂಡ ಆತ ಆಕೆಯ ಮೇಲೆ
ಭಾರತಕ್ಕೆ ಈಚೆಗೆ ವಾಪಾಸ್ಸಾದ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟರ್ ವಿರಾಟ್ ಕೊಹ್ಲಿ ಭಕ್ತಿಯಲ್ಲಿ ಮುಳುಗಿದ್ದಾರೆ.ಆಗಾಗ ಪ್ರೇಮಾನಂದ ಜಿ ಮಹಾರಾಜ್ ಅವರನ್ನು ಭೇಟಿಯಾಗುವ ಈ ದಂಪತಿ, ಇದೀಗ ಮತ್ತೇ ಪ್ರೇಮಾನಂದ ಅವರನ್ನು ಭೇಟಿಯಾಗಿದ್ದಾರೆ. ಅವರ ಭೇಟಿಯ ವೀಡಿಯೊಗಳು ಮತ್ತು ಚಿತ್ರಗಳು ಮತ್ತೆ ಅಂತರ್ಜಾಲದಲ್ಲಿ ವೈರಲ್ ಆಗಿವೆ. ಅನುಷ್ಕಾ ಕುರ್ತಾ ಸೆಟ್ನಲ್ಲಿ ಕಾಣಿಸಿಕೊಂಡರೆ, ವಿರಾಟ್ ತಿಳಿ ನೀಲಿ ಬಣ್ಣದ ಶರ್ಟ್ ಮತ್ತು ಬಿಳಿ ಪ್ಯಾಂಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್ಪಿ) ಅಧ್ಯಕ್ಷ ತಾರಿಕ್ ರೆಹಮಾನ್ ಅವರು ಬಾಂಗ್ಲಾದೇಶದ ಹೊಸ ಪ್ರಧಾನ ಮಂತ್ರಿಯಾಗಿ ಐದು ದಿನಗಳ ನಂತರ ಅಧಿಕೃತವಾಗಿ ಸಾರ್ವತ್ರಿಕ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಮೊಹಮ್ಮದ್ ಶಹಬುದ್ದೀನ್ ಅವರು ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುವ ಅವರ ಪಕ್ಷದ ಸದಸ್ಯರೊಂದಿಗೆ ರೆಹಮಾನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.ಬಿಎನ್ಪಿಯ ಸದಸ್ಯರು ಅವರನ್ನು ಸಂಸದೀಯ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದರಿಂದ ಇದು ಸಂಭವಿಸಿತು.
ಬೆಂಗಳೂರು: ಕಾಂಗ್ರೆಸ್ ಸರಕಾರವು ಬಡವರಿಗೆ ಮನೆ ಕೊಡಬೇಕು; ಭೂರಹಿತರಿಗೆ ಭೂಮಿ ಕೊಡಬೇಕಿತ್ತು. ಆದರೆ, ಈ ಕೆಲಸವನ್ನು ಮಾಡುತ್ತಿಲ್ಲ. ತಾನೇ ಭೂಮಿ ಕಬಳಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಭೂಕಬಳಿಕೆಯಲ್ಲಿ ಸರಕಾರವೇ ನಿರತವಾಗಿದೆ. ಸರಕಾರವು ತಾಲ್ಲೂಕು, ಜಿಲ್ಲೆ, ಮಂಡಲ, ಪಂಚಾಯಿತಿ- ಹೀಗೆ ಎಲ್ಲ ಕಡೆ ನಿವೇಶನ ಪಡೆಯಲು ಅದಕ್ಕೆ ಅಧಿಕಾರ ಇಲ್ಲ. ಕಾನೂನು ಉಲ್ಲಂಘಿಸಿ ಅದು ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ ಲೀಸ್ಗೆ ಮುಧೋಳದಲ್ಲಿ ನಿವೇಶನ ಪಡೆಯಲು ಮುಂದಾಗಿತ್ತು. ಆದರೆ, ಇಲಾಖೆಯು ಅದನ್ನು ತಿರಸ್ಕರಿಸಿತ್ತು ಎಂದು ಗಮನ ಸೆಳೆದರು.
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಈ ವ್ಯಾಲೆಂಟೈನ್ಸ್ ಸಮಯದಲ್ಲಿ 26 ಅಂತರಾಷ್ಟ್ರೀಯ ಮತ್ತು 47 ದೇಶೀಯ ಸ್ಥಳಗಳಿಗೆ ಸುಮಾರು 60 ಮಿಲಿಯನ್ ಗುಲಾಬಿ ಹೂವುಗಳನ್ನು ರಫ್ತು ಮಾಡುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಬೆಂಗಳೂರು ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ ಪ್ರಕಾರ, ಈ ಋತುವಿನಲ್ಲಿ ವರ್ಷದಿಂದ ವರ್ಷಕ್ಕೆ 38% ಹೆಚ್ಚಳ ಮತ್ತು ಒಟ್ಟು ಟನ್ಗಳಲ್ಲಿ 64% ಏರಿಕೆ ಕಂಡುಬಂದಿದೆ. ಇದು KIA ಯ ಸ್ಥಾನಮಾನವನ್ನು ಸತತ ಐದನೇ ವರ್ಷಕ್ಕೆ ನಾಶವಾಗುವ ರಫ್ತಿಗೆ ಭಾರತದ ಪ್ರಮುಖ ಗೇಟ್ವೇ ಎಂದು ಪುನರುಚ್ಚರಿಸಿದೆ.
ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟ ಸಲ್ಮಾನ್ ಖಾನ್ ಅವರ ತಂದೆ, ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ತಂದೆಯ ಆರೋಗ್ಯವನ್ನು ವಿಚಾರಿಸಲು ಸಲ್ಮಾನ್ ಖಾನ್ ಆಸ್ಪತ್ರೆಗೆ ಬಂದಿದ್ದಾರೆ. ಬಳಿಕ ಬೇಸರದಿಂದಲೇ ಆಸ್ಪತ್ರೆಯಿಂದ ಸಲ್ಮಾನ್ ಹೊರನಡೆದಿದ್ದಾರೆ.
ನವದೆಹಲಿ: ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವಿಗೆ ಕಾರಣವಾದ ವಿಮಾನ ದುರಂತದ ತನಿಖೆಯ ವೇಗವನ್ನು ಅಜಿತ್ ಪವಾರ್ ಅವರ ಪುತ್ರ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಎಸ್ಪಿ ಶಾಸಕ ರೋಹಿತ್ ಪವಾರ್ ಮಂಗಳವಾರ ಪ್ರಶ್ನಿಸಿದ್ದು, 20 ದಿನಗಳ ವಿಳಂಬವು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂದು ಪ್ರಶ್ನೆ ಮಾಡಿದ್ದಾರೆ. ಸಂಜಯ್ ರಾವತ್ ಅಜಿತ್ ಪವಾರ್ ವಿಮಾನ ಅಪಘಾತದ ಬಗ್ಗೆ ಅನುಮಾನಗಳನ್ನು ಎತ್ತಿದ್ದಾರೆ, ಸಂಪೂರ್ಣ ತನಿಖೆಗೆ ಕೋರಿದ್ದಾರೆಎಕ್ಸ್ನಲ್ಲಿನ ಪೋಸ್ಟ್ನಲ್ಲಿ, ರೋಹಿತ್ ಪವಾರ್ ಬರೆದಿದ್ದಾರೆ, "ಅಜಿತ್ ದಾದಾ ಅವರ ಮೌಲ್ಯವು ಸಾಮಾನ್ಯ ನಾಗರಿಕರಿಗೆ
ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಸಂಚಲನ ಮೂಡಿಸಿದ್ದ ದೂರುದಾರ ಸ್ನೇಹಮಹಿ ಕೃಷ್ಣ ಅವರು ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ಮುಡಾ ಹಗರವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪ ಮಾಡಿರುವ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧವೂ ಹೊಸ ಬಾಂಬ್ ಸಿಡಿಸಿದ್ದಾರೆ.ಮಾಜಿ ಮುಡಾ ಆಯುಕ್ತ ಡಿ.ಬಿ. ನಟೇಶ್ ಅವರು ನನ್ನನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದು, ನನಗೆ ಹಣದ ಆಮಿಷವೊಡ್ಡಿ ಮುಡಾ ಹಗರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಸಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು: ಈ ಸಾಲಿನ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳ ದಿನಾಂಕವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ. ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ. ಫೆಬ್ರವರಿ 28 ರಿಂದ ದ್ವಿತೀಯ ಪಿಯುಸಿ ಮತ್ತು ಮಾರ್ಚ್ 18 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆಗಳು ನಡೆಯಲಿವೆ. ಪ್ರತಿದಿನ ಬೆಳಿಗ್ಗೆ ದ್ವಿತೀಯ ಪಿಯುಸಿ ಪರೀಕ್ಷೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಎಸ್ಎಸ್ಎಲ್ ಸಿ ಪರೀಕ್ಷೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.45 ರವರೆಗೆ ನಡೆಯಲಿದೆ. ಉಳಿದಂತೆ ವೇಳಾಪಟ್ಟಿ ಇಲ್ಲಿದೆ.
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಗೆ ಬರುವವರಿಗೆ ಕೆಲವು ಷರತ್ತುಗಳು ಅನ್ವಯವಾಗಲಿದೆ. ವಿಜಯ್, ರಶ್ಮಿಕಾ ಮದುವೆ ಫೋಟೋಗಳು ಎಲ್ಲೂ ಲೀಕ್ ಆಗದಂತೆ ನೋಡಿಕೊಳ್ಳಲಾಗುತ್ತದೆ. ಇತ್ತೀಚೆಗೆ ಸೆಲೆಬ್ರಿಟಿಗಳು ತಮ್ಮ ಮದುವೆಯ ಫೋಟೋಗಳನ್ನು ಲೀಕ್ ಆಗದಂತೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅದೇ ರೀತಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಕೂಡಾ ತಮ್ಮ ಮದುವೆ ಫೋಟೋಗಳು ಸಿಕ್ಕ ಸಿಕ್ಕಲ್ಲಿ ಲೀಕ್ ಆಗಿ ಟ್ರೋಲಿಗರಿಗೆ ಆಹಾರವಾಗದಂತೆ ಖಾಸಗಿಯಾಗಿಡಲು ಕಠಿಣ ಕ್ರಮ ಕೈಗೊಂಡಿದ್ದಾರೆ.
ಪಶ್ಚಿಮ ಬಂಗಾಲ: ರಣಜಿ ಟ್ರೋಫಿ ಕ್ರಿಕೆಟ್ ಸೆಮಿಫೈನಲ್ ನಲ್ಲಿ ಬಂಗಾಳ ಪರ ಆಡುತ್ತಿರುವ ವೇಗಿ ಮೊಹಮ್ಮದ್ ಶಮಿ ಒಂದೇ ಇನಿಂಗ್ಸ್ ನಲ್ಲಿ 8 ವಿಕೆಟ್ ಕಿತ್ತು ಎದುರಾಳಿ ಜಮ್ಮು ಕಾಶ್ಮೀರದ ಬ್ಯಾಟಿಂಗ್ ಹಳಿ ತಪ್ಪಿಸಿದ್ದಾರೆ. ಪಶ್ಚಿಮ ಬಂಗಾಲ ಮೊದಲ ಇನಿಂಗ್ಸ್ ನಲ್ಲಿ 328 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಜಮ್ಮು ತಂಡ 302 ರನ್ ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಬಂಗಾಳಕ್ಕೆ 26 ರನ್ ಗಳ ಅಲ್ಪ ಮುನ್ನಡೆ ಸಿಕ್ಕಿದೆ. ಎಲ್ಲಕ್ಕಿಂತ ವಿಶೇಷವಾಗಿ ಹೈಲೈಟ್ ಆಗಿದ್ದು ಟೀಂ ಇಂಡಿಯಾದಿಂದ ಅವಗಣನೆಗೆ ಒಳಗಾಗಿರುವ ಹಿರಿಯ ವೇಗಿ ಮೊಹಮ್ಮದ್ ಶಮಿ ಬೌಲಿಂಗ್.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ನಿನ್ನೆ ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಏರಿಕೆಯಾಗಿತ್ತು. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಇದು ಬೆಳೆಗಾರರಿಗೆ ಸಮಾಧಾನ ತಂದಿತ್ತು. ಮತ್ತೆ ಅಡಿಕೆ ಬೆಲೆಯಲ್ಲಿ ಚೇತರಿಕೆ ಕಂಡುಬರುತ್ತಿದೆ. ಆದರೆ ಇಂದು ಯಥಾ ಸ್ಥಿತಿಯಲ್ಲಿದೆ. ಇಂದು ಹೊಸ ಅಡಿಕೆ ಬೆಲೆ 485 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 550 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ 550 ರೂ.ಗಳಷ್ಟಾಗಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ದಾಖಲೆಯ ಏರಿಕೆ ಕಂಡಿತ್ತು. ಈ ವಾರ ಅದೇ ರೀತಿ ಬೆಲೆ ಏರಿಳಿಕೆಯಾಗುವ ಲಕ್ಷಣವಿದೆ. ಇಂದು ಪರಿಶುದ್ಧ ಚಿನ್ನದ ದರ ಇಂದು ಇಳಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,60,405.00 ರೂ.ಗಳಿತ್ತು. ಇಂದೂ 1,59,310.00 ರೂ.ಗಳಷ್ಟಿದೆ.
ಬೆಂಗಳೂರು: ಕಟಿಂಗ್ ಮಾಡಿಸಲು ಹೇರ್ ಸಲೂನ್ ಹೋಗಿದ್ದಾಗ ಕನ್ನಡ ಮಾತನಾಡುವ ವಿಚಾರಕ್ಕೆ ವಾಗ್ವಾದವಾಗಿದ್ದು ಹಿಂದಿ ಮಾತನಾಡುವಂತೆ ಮಹಿಳೆ ದರ್ಪ ತೋರಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ರಾಜ್ಯ ರಾಜಧಾನಿ ಬೆಂಗಳೂರಿನ ವರ್ತೂರು ಮಧುರಾ ನಗರದ ಹೇರ್ ಸಲೂನ್ ಒಂದರಲ್ಲಿ ನಡೆದ ಘಟನೆ. ಯುವಕನೊಬ್ಬ ಟ್ರಿಮ್ ಮಾಡಿಸಲು ಹೇರ್ ಸಲೂನ್ ಗೆ ಹೋಗಿದ್ದ. ಅಲ್ಲಿ ಎಲ್ಲರೂ ಹಿಂದಿಯವರೇ ಇದ್ದರು. ಯುವಕ ಕನ್ನಡದಲ್ಲಿ ಹೇಳಿದಾಗ ಅವರಿಗೆ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಕನ್ನಡ ಬರುವವರನ್ನು ಯಾರನ್ನಾದರೂ ಕರಿಯಿರಿ ಎಂದು ಯುವಕ ಕೇಳಿದ್ದಾನೆ.
ಮಂಗಳೂರು: ಇಲ್ಲಿನ ಉಳ್ಳಾಲದಲ್ಲಿ ನಡೆದ ಭಯಾನಕ ಆಕ್ಸಿಡೆಂಟ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಧಾನವಾಗಿ ಚಲಿಸಿ ಎನ್ನುವ ಎಚ್ಚರಿಕೆ ಯಾಕೆ ಮುಖ್ಯ ಎಂದು ಇದನ್ನು ನೋಡಿದರೆ ತಿಳಿಯುತ್ತದೆ. ಇತ್ತೀಚೆಗೆ ಬೈಕ್ ಸವಾರರು ಖಾಲಿ ರೋಡ್ ಎಂದರೆ ಯರ್ರಾ ಬಿರ್ರಿ ಸ್ಪೀಡ್ ಆಗಿ ಬೈಕ್ ಚಲಾಯಿಸುವುದು ಫ್ಯಾಶನ್ ಆಗಿಬಿಟ್ಟಿದೆ. ಅದರಲ್ಲಿ ಏನೋ ಮಜಾ. ಆದರೆ ಈ ರೀತಿ ಚಾಲನೆ ಮಾಡುವಾಗ ತಮ್ಮ ಸುರಕ್ಷತೆ ಬಗ್ಗೆ ಯೋಚನೆಯನ್ನೇ ಮಾಡುವುದಿಲ್ಲ. ಮಂಗಳೂರಿನ ಉಳ್ಳಾಲದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಖಾಲಿ ರೋಡ್ ನಲ್ಲಿ ಬೈಕ್ ಸವಾರನೊಬ್ಬ ಭಾರೀ ಸ್ಪೀಡ್ ಆಗಿ ಡಬಲ್ ರೈಡಿಂಗ್ ಮಾಡಿದ್ದಾನೆ.
ಬೆಂಗಳೂರು: ಆಡಳಿತದಲ್ಲಿ ಸ್ವಚ್ಛತೆ ಮತ್ತು ಪಾರದರ್ಶಕತೆ ತರುವ ಉದ್ದೇಶದಿಂದ 2005 ರಲ್ಲಿ ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ) ನ್ನು ಜಾರಿಗೆ ತರಲಾಯಿತು. ಇದರಡಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರ ಇಲ್ಲಿದೆ ನೋಡಿ. ಮಾಹಿತಿ ಹಕ್ಕು ಕಾಯಿದೆಯ ಅನ್ವಯ ಯಾವ ನಾಗರಿಕರೂ ಸಾರ್ವಜನಿಕ ಪ್ರಾಧಿಕಾರದಿಂದ ಬೇಕಾದ ಮಾಹಿತಿಯನ್ನು ಕೋರಬಹುದು. ಕೇಳಿದ ಮಾಹಿತಿಗೆ ಆಯಾ ಪ್ರಾಧಿಕಾರವು ತ್ವರಿತವಾಗಿ ಉತ್ತರ ನೀಡಬೇಕು. ಮೂವತ್ತು ದಿನಗಳೊಳಗಾಗಿ ಉತ್ತರ ನೀಡುವುದು ಕಡ್ಡಾಯವಾಗಿರುತ್ತದೆ. ಆದರೆ ಕೆಲವೊಂದು ದೇಶದ ಭದ್ರತೆ ಮತ್ತು ರಕ್ಷಣಾ ವಿಭಾಗಕ್ಕೆ ಸಂಬಂಧಿಸಿದ ಕೆಲವೊಂದು ಗೌಪ್ಯ ಮಾಹಿತಿಯನ್ನು ಹೊರತುಪಡಿಸಿ ಉಳಿದೆಲ್ಲಾ ಇಲಾಖೆಗಳ ಮಾಹಿತಿಯನ್ನು ನಾಗಕರಿಕರು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಬೆಂಗಳೂರು: ಕಾಂಗ್ರೆಸ್ ನಲ್ಲಿ ನಾಯಿ ಯಾರು, ಬಾಲ ಯಾರು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಸಚಿವ ಮಹದೇವಪ್ಪನವರ ಕಾಲೆಳೆದಿದ್ದಾರೆ. ನಿನ್ನೆ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಸಚಿವ ಮಹದೇವಪ್ಪ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಹೈಕೋರ್ಟ್ ಪದೇ ಪದೇ ಬೀದಿ ನಾಯಿಗಳನ್ನು ಹಿಡಿದು ಒಳಗೆ ಹಾಕಿ ಎಂದು ಹೇಳುತ್ತಿರುತ್ತದೆ. ಇಲ್ಲಿ ರಾಜಕೀಯ ನಾಯಕತ್ವ ಗಟ್ಟಿಯಾಗಿದೆ. ವರಿಷ್ಠರು ಯಾವುದೇ ಗೊಂದಲ ಹುಟ್ಟುಹಾಕಿಲ್ಲ. ರಾಜ್ಯದ ಕೆಲವು ನಾಯಕರಿಂದಲೇ ಗೊಂದಲ ಸೃಷ್ಟಿಯಾಗುತ್ತಿರುವುದು. ನಾಯಿಯನ್ನು ಬಾಲ ಅಲ್ಲಾಡಿಸಲು ಸಾಧ್ಯವಿಲ್ಲ. ವರಿಷ್ಠರಿಗೆ ನಾವು ಸೂಚನೆ ನೀಡಲು ಸಾಧ್ಯವೇ ಎಂದು ಮಹದೇವಪ್ಪನವರು ಹೇಳದಿ್ದಾರೆ.
ಕೊಲೊಂಬೊ: ಟಿ20 ವಿಶ್ವಕಪ್ ನಲ್ಲಿ ಕ್ರಿಕೆಟಿಗರ ಸುದ್ದಿಗೋಷ್ಠಿಗೆ ಹಾಜರಾಗಲು ಬಂದ ಪಾಕಿಸ್ತಾನ ಮೂಲದ ಪತ್ರಕರ್ತರು ಅಲ್ಲಿಯೇ ನಮಾಜ್ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೊನ್ನೆಯಷ್ಟೇ ಭಾರತ ಮತ್ತು ಪಾಕಿಸ್ತಾನ ನಡುವೆ ಕೊಲೊಂಬೋದಲ್ಲಿ ಪಂದ್ಯ ನಡೆದಿದೆ. ಇದರ ಬೆನ್ನಲ್ಲೇ ಈಗ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕೆಲವು ಬಾರಿ ಕ್ರಿಕೆಟಿಗರು ಮೈದಾನದಲ್ಲೇ ನಮಾಜ್ ಮಾಡಿದ್ದ ಕ್ಷಣಗಳೂ ವೈರಲ್ ಆಗಿದ್ದು ಇತ್ತು. ಇದೀಗ ಪತರಕರ್ತರ ಸರದಿ. ವಿಡಿಯೋದಲ್ಲಿ ಇಬ್ಬರು ಪತ್ರಕರ್ತರು ನಮಾಜ್ ಮಾಡುತ್ತಿರುವುದು ಕಾಣಬಹುದಾಗಿದೆ.
ನವದೆಹಲಿ: ಈಗಿನ ಕಾಲದಲ್ಲಿ ಯಾರನ್ನೂ ನಂಬಲು ಸಾಧ್ಯವಿಲ್ಲ. ಮದುವೆಗೆ ಮುನ್ನ ಲೈಂಗಿಕ ಸಂಬಂಧ ಇಟ್ಟುಕೊಳ್ಳಬೇಡಿ ಎಂದು ಸುಪ್ರೀಂಕೋರ್ಟ್ ಪ್ರಕರಣವೊಂದರ ವಿಚಾರಣೆ ವೇಳೆ ಸಲಹೆ ನೀಡಿದೆ. ಮದುವೆಗೂ ಮುನ್ನ ಲೈಂಗಿಕ ಸಂಪರ್ಕ ಹೊಂದಿ ಮೋಸ ಹೋದ ಪ್ರಕರಣವೊಂದರ ವಿಚಾರಣೆ ನಡೆಸಿದ ಕೋರ್ಟ್ ಈ ಸಲಹೆ ನೀಡಿದೆ. ಈಗಿನ ಕಾಲದಲ್ಲಿ ಯಾರನ್ನೂ ನಂಬುವಂತಿಲ್ಲ. ಈಗಾಗಲೇ ಮದುವೆಯಾಗಿದ್ದ ವ್ಯಕ್ತಿಯೊಬ್ಬ ಮತ್ತೊಬ್ಬ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ವಂಚಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾ. ಬಿ ವಿ ನಾಗರತ್ನ ಮತ್ತು ನ್ಯಾ. ಉಜ್ವಲ್ ಭಯಾನ್ ನ್ಯಾಯಪೀಠವು ವಿವಾಹ ಪೂರ್ವ ಲೈಂಗಿಕ ಕ್ರಿಯೆ ನಡೆಸದಂತೆ ಎಚ್ಚರಿಕೆ ನೀಡಿದೆ.
ಬೆಂಗಳೂರು: ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸಕ್ಕೆ ಸಜ್ಜಾಗಿದ್ದು ಇವರಲ್ಲಿ ಕೆಲವರು ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಅವರಿಗೆ ಅದೊಂದೇ ಭಯ ಕಾಡುತ್ತಿದೆ. ಬಹುತೇಕ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರೇ ಈಗ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಶಾಸಕರಾದ ಪುಟ್ಟರಂಗಶೆಟ್ಟಿ, ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಹಲವು ಶಾಸಕರು ವಿದೇಶ ಪ್ರವಾಸ ಲಿಸ್ಟ್ ನಲ್ಲಿದ್ದಾರೆ. ಮೊದಲು 27 ಶಾಸಕರು ವಿದೇಶ ಪ್ರವಾಸ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ 20 ಶಾಸಕರ ಹೆಸರು ಕೇಳಿಬರುತ್ತಿದೆ. ಶಾಸಕರ ವಿದೇಶ ಪ್ರವಾಸದ ಬಗ್ಗೆ ಹೈಕಮಾಂಡ್ ಎಚ್ಚರಿಕೆ ನೀಡಿದೆ.
ಪಲ್ಲಿಕೆಲೆ: ಟಿ20 ವಿಶ್ವಕಪ್ ಈ ಬಾರಿ ಹಲವು ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತಿದೆ. ದೈತ್ಯ ಆಸ್ಟ್ರೇಲಿಯಾವನ್ನೇ ಹೊರದಬ್ಬಿದ ಶ್ರೀಲಂಕಾ ಟಿ20 ವಿಶ್ವಕಪ್ ಸೂಪರ್ 8 ಹಂತಕ್ಕೇರಿದೆ. ಭಾರತದ ಬಳಿಕ ಈಗ ಮತ್ತೊಂದು ಅತಿಥೇಯ ರಾಷ್ಟ್ರವಾಗಿರುವ ಲಂಕಾ ಸೂಪರ್ 8ಕ್ಕೇರಿದಂತಾಗಿದೆ. ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 181 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ 18 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಗೆಲುವು ಸಾಧಿಸಿತು.
ಕೊಲೊಂಬೊ: ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಕ್ಯಾಚ್ ಬಿಟ್ಟಿದ್ದಕ್ಕೆ ಮೈದಾನದಲ್ಲೇ ಕುಲದೀಪ್ ಯಾದವ್ ಗೆ ಬೈದಿದ್ದ ಸೂರ್ಯಕುಮಾರ್ ಯಾದವ್ ಈಗ ಪ್ಯಾಚಪ್ ಮಾಡಲು ಬಂದಿದ್ದಾರೆ. ಇಂತಹದ್ದೊಂದು ಫನ್ನಿ ವಿಡಿಯೋವನ್ನು ಸೂರ್ಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೊನ್ನೆ ಕೊಲೊಂಬೋದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನದ ಹಾರ್ದಿಕ್ ಪಾಂಡ್ಯ ಓವರ್ ನಲ್ಲಿ ಕುಲದೀಪ್ ಯಾದವ್ ಕ್ಯಾಚ್ ಒಂದನ್ನು ಬಿಟ್ಟಿದ್ದರು. ಆ ಕ್ಯಾಚ್ ಹಿಡಿದಿದ್ದರೆ ಪಾಕಿಸ್ತಾನ 100 ರನ್ ಒಳಗೇ ಆಲೌಟ್ ಆಗುತ್ತಿತ್ತು.
ಬೆಂಗಳೂರು: ರಾಜ್ಯಾದ್ಯಂತ ಈಗ ಬಿಸಿಲಿನ ಬೇಗೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ನಡುವೆಯೂ ಹವಾಮಾನದಲ್ಲಿ ಇಂದು ಒಂದು ಬದಲಾವಣೆ ಕಂಡುಬರಲಿದೆ. ಇಂದಿನ ಹವಾಮಾನ ವರದಿ ಇಲ್ಲಿದೆ. ರಾಜ್ಯದಲ್ಲಿ ಈಗ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಹಗಲು ವಿಪರೀತ ಬಿಸಿಲಿನ ಝಳ ಕಂಡುಬರುತ್ತಿದೆ. ಮಧ್ಯಾಹ್ನದ ವೇಳೆಗೆ ಹೊರಗೆ ಕಾಲಿಡಲೂ ಆಗದಷ್ಟು ಬಿಸಿಲಿರುತ್ತದೆ. ಹಾಗಿದ್ದರೂ ಇನ್ನೂ ಚಳಿ ಕಡಿಮೆಯಾಗಿಲ್ಲ ಎನ್ನುವುದೇ ವಿಶೇಷ. ಇಂದು ರಾಜ್ಯದ ಗರಿಷ್ಠ ತಾಪಮಾನ ಸರಾಸರಿ 30 ಡಿಗ್ರಿಯಿರಲಿದೆ. ಹಗಲು ವಿಪರೀತ ಬಿಸಿಲು ಕಂಡುಬರುವುದು. ನಿನ್ನೆಗೆ ಹೋಲಿಸಿದರೆ ಇಂದು ಮತ್ತಷ್ಟು ಶುಭ್ರ ಆಕಾಶವಿರಲಿದೆ.
ಜಾತಕದಲ್ಲಿ ಕುಜ ದೋಷವಿದ್ದಾಗ ವಿವಾಹಕ್ಕೆ ಅಡ್ಡಿ, ದಾಂಪತ್ಯದಲ್ಲಿ ಸಮಸ್ಯೆಗಳು ಉಂಟಾಗಬಹುದು. ಕುಜ ದೋಷವಿದ್ದರೆ ಇಂದು ಅಂಗಾರಕ ಕವಚ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.ಅಸ್ಯ ಶ್ರೀ ಅಂಗಾರಕ ಕವಚಸ್ಯ, ಕಶ್ಯಪ ಋಷೀಃ, ಅನುಷ್ಟುಪ್ ಚಂದಃ, ಅಂಗಾರಕೋ ದೇವತಾ, ಭೌಮ ಪ್ರೀತ್ಯರ್ಥೇ ಜಪೇ ವಿನಿಯೋಗಃ ॥ ಧ್ಯಾನಂರಕ್ತಾಂಬರೋ ರಕ್ತವಪುಃ ಕಿರೀಟೀ ಚತುರ್ಭುಜೋ ಮೇಷಗಮೋ ಗದಾಭೃತ್ ।ಧರಾಸುತಃ ಶಕ್ತಿಧರಶ್ಚ ಶೂಲೀ ಸದಾ ಮಮ ಸ್ಯಾದ್ವರದಃ ಪ್ರಶಾಂತಃ ॥ ಅಥ ಅಂಗಾರಕ ಕವಚಂಅಂಗಾರಕಃ ಶಿರೋ ರಕ್ಷೇತ್ ಮುಖಂ ವೈ ಧರಣೀಸುತಃ ।ಶ್ರವೌ ರಕ್ತಂಬರಃ ಪಾತು ನೇತ್ರೇ ಮೇ ರಕ್ತಲೋಚನಃ ॥ 1 ॥
ಕುಲ್ದೀಪ್ ಯಾದವ್ ಅವರೊಂದಿಗೆ ಪಾಕ್ ವಿರುದ್ಧದ ಪಂದ್ಯದ ನಂತರದ ವೈರಲ್ ವಿಡಿಯೋವನ್ನು ಸೂರ್ಯಕುಮಾರ್ ಯಾದವ್ ಹಾಸ್ಯಮಯವಾಗಿ ಮರುಸೃಷ್ಟಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.ನಿನ್ನೆ ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ ಪಂದ್ಯಾಟದಲ್ಲಿ ಗೆಲುವು ಸಾಧಿಸಿದ ಬಳಿಕ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹಾಗೂ ಹಾರದಿಕ್ ಪಾಂಡ್ಯ, ಬೌಲರ್ ಕುಲ್ದೀಪ್ ಯಾದವ್ ನಡುವೆ ಫೈಟ್ ನಡೆಯಿತು. ಗೆಲುವಿನ ಬಳಿಕ ಒಬ್ಬರನೊಬ್ಬರು ಪ್ರಶಂಸಿಸುವ ವೇಳೆ ಕುಲ್ದೀಪ್ ವಿರುದ್ಧ ಸೂರ್ಯ ಹಾಗೂ ಹಾರ್ದಿಕ್ ಸಿಡಿಮಿಡಿಕೊಂಡರು.
ಬೆಂಗಳೂರು: ಬಾಯಿತಪ್ಪಿ ಸಿಎಂ ಸಿದ್ದರಾಮಯ್ಯ ಅವರು, ಸಚಿವ ಈಶ್ವರ್ ಖಂಡ್ರೆಗೆ ಚಿರಶಾಂತಿ ಕೋರಿ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಕಾರ್ಯಕ್ರಮವೊಂದರಲ್ಲಿ ಭೀಮಣ್ಣ ಖಂಡ್ರೆ ಅವರಿಗೆ ಚಿರಶಾಂತಿ ಕೋರುವ ಬದಲು ಬಾಯಿತಪ್ಪಿ ಸಚಿವ ಈಶ್ವರ್ ಖಂಡ್ರೆಗೆ ಚಿರಶಾಂತಿಯನ್ನು ಕೋರಿದ್ದಾರೆ. ಈಚೆಗೆ ಈಶ್ವರ್ ಖಂಡ್ರೆ ಅವರ ತಂದೆ ಭೀಮಣ್ಣ ಖಂಡ್ರೆ ಅವರು ನಿಧನರಾದರು. ಸಮಾರಂಭದಲ್ಲಿ ಈಶ್ವರ್ ಖಂಡ್ರೆ ಅವರ
ನವದೆಹಲಿ: ಭಾನುವಾರ ಕೊಲಂಬೊದಲ್ಲಿ ಭಾರತದ ವಿರುದ್ಧ 61 ರನ್ಗಳ ಹೀನಾಯ ಸೋಲಿನ ನಂತರ ಇದೀಗ ಪಾಕಿಸ್ತಾನ ತಂಡದಿಂದ ಇಬ್ಬರು ಆಟಗಾರರನ್ನು ಹೊರಗಿಡಲು ದೊಡ್ಡ ನಿರ್ಧಾರ ಕೈಗೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಫೆಬ್ರವರಿ 18ರ ಬುಧವಾರದಂದು ನಮೀಬಿಯಾ ವಿರುದ್ಧದ ನಿರ್ಣಾಯಕ ಗುಂಪು-ಹಂತದ ಘರ್ಷಣೆಗು ಮುನ್ನಾ ಈ ದೊಡ್ಡ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತು ಹರಿದಾಡುತ್ತಿದೆ. ಕ್ರಿಕೆಟರ್ಗಳಾದ ಬಾಬರ್ ಆಜಮ್ ಮತ್ತು ಶಾಹೀನ್ ಶಾ ಆಫ್ರಿದಿ ಅವರನ್ನು ಕೈಬಿಡಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವರದಿಯಾಗಿದೆ.ಪಿಟಿಐನ ವರದಿಯ ಪ್ರಕಾರ, ತಮ್ಮ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧದ ಹೆಚ್ಚಿನ-ಪಕ್ಕದ ಮುಖಾಮುಖಿಯಲ್ಲಿ ನೀಡಲು
ಚೆನ್ನೈ: ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ಆಕರ್ಷಕ ಆನ್-ಸ್ಕ್ರೀನ್ ಜೋಡಿಗಳಲ್ಲಿ ಒಂದಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈ ತಿಂಗಳಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.ಈ ವರ್ಷ ಇವರಿಬ್ಬರ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂದು ಕೆಲ ದಿನಗಳ ಹಿಂದೆ ಹೇಳಲಾಗಿತ್ತು. ಆದರೆ, ವಿಜಯ್ ಅಥವಾ ರಶ್ಮಿಕಾ ತಮ್ಮ ಸಂಬಂಧವನ್ನು ಖಚಿತಪಡಿಸಿಲ್ಲ. ಈಗ, ಮದುವೆಯ ಆಮಂತ್ರಣವನ್ನು ಆನ್ಲೈನ್ನಲ್ಲಿ ಪ್ರಸಾರ ಮಾಡಲಾಗುತ್ತಿದೆ, ಇದು ದಂಪತಿಗಳ ಆರತಕ್ಷತೆಯ ಆಹ್ವಾನ
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು 49ನೇ ಹುಟ್ಟುಹಬ್ಬವನ್ನು ಜೈಲಿನಲ್ಲೇ ಆಚರಿಸುವಂತಾಗಿದೆ. ಇನ್ನೂ ಪತಿಯ ಬರ್ತಡೇ ಹಿನ್ನೆಲೆ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಮಗ ವಿನೀಶ್ ಹಾಗೂ ನಟ ಧನ್ವೀರ್ ಜತೆ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದಾರೆ. ಇನ್ನೂ ಪ್ರತಿ ಭಾರೀ ದರ್ಶನ್ ಅಭಿಮಾನಿಗಳ ಜತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವಾಗ ಮಗ ವಿನೀಶ್ ಅಲ್ಲಿಗೆ ಬಂದು ಅಪ್ಪನಿಗೆ ಸಾಥ್ ನೀಡುತ್ತಲೇ ಇರುತ್ತಾನೆ. ಇದೀಗ ಅಪ್ಪ ಜೈಲಲ್ಲಿ ಇದ್ರೂ ವಿನೀಶ್ ಅಪ್ಪನನ್ನು ನೋಡಲು ಮಿಸ್ ಮಾಡಲಿಲ್ಲ. ತಾಯಿ ಹಾಗೂ ಧನ್ವೀರ್ ಜತೆ ವಿನೀಶ್ ಅಪ್ಪನನ್ನು ಭೇಟಿಯಾಗಿದ್ದೇನೆ. ದರ್ಶನ್ಗೆ ಶುಭಕೋರಲು ಪತ್ನಿ ವಿಜಯಲಕ್ಷ್ಮಿ ಅವರು ಮಗನೊಂದಿಗೆ ದರ್ಶನ್ ಅವರ ಅಪರೂಪದ ವಿಡಿಯೋವನ್ನು
ಕೊಪ್ಪಳ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕುರಿತು ಸಚಿವ ಪ್ರಿಯಾಂಕ್ ಖರ್ಗೆ ದೆವ್ವ ಎಂದು ಸರಿಯಾಗಿಯೇ ಹೇಳಿಕೆ ನೀಡಿದ್ದಾರೆಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಸಮರ್ಥಿಸಿಕೊಂಡಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮತ್ತೊಬ್ಬರ ಮೇಲೆ ಇಡಿ, ಐಟಿ, ಸಿಬಿಐ ದಾಳಿ ಮಾಡುವ ಬದಲು ಆರ್ಎಸ್ಎಸ್ ಕಚೇರಿ ಮೇಲೆ ಮೊದಲು ದಾಳಿ ನಡೆಸಲಿ ಎಂದು ಹೇಳಿದರು.ಯಾವತ್ತಿದ್ದರೂ ಲೆಕ್ಕ ಕೊಡಬೇಕಿರುವ ಆರ್ಎಸ್ಎಸ್, 100 ವರ್ಷಗಳನ್ನು ಪೂರೈಸಿರುವ ಸಂಸ್ಥೆಗೆ ಎಲ್ಲಿಂದ್ದ ಹಣ ಬರುತ್ತಿದೆ ಎಂದು ಹೇಳಬೇಕು. ಯಾರೆಲ್ಲ ಹಣ ಕೊಡುತ್ತಾರೆ ಎನ್ನುವುದು ಬಹಿರಂಗವಾಗಬೇಕಿದೆ ಎಂದರು.
ನವದೆಹಲಿ: ಮುಸ್ಲಿಂ ಸಮುದಾಯದ ಸದಸ್ಯರನ್ನು ಗುರಿಯಾಗಿಸಿ ರೈಫಲ್ನಿಂದ ಗುಂಡು ಹಾರಿಸುತ್ತಿರುವ ಘಟನೆ ಸಂಬಂಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.ಇನ್ನೂ ಈ ಘಟನೆ ಸಂಬಂಧ ಹಿಮಂತ ಶರ್ಮಾ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಾಜಿ ಪ್ರಾಧ್ಯಾಪಕಾರದ ಹಿರೇನ್ ಗೊಹೈನ್, ಅಸ್ಸಾಂನ ಮಾಜಿ ಡಿಜಿಪಿ ಹರೇಕೃಷ್ಣ ದೇಕಾ, ಹಿರಿಯ ಪತ್ರಕರ್ತರಾದ ಪರೇಶ್ ಚಂದ್ರ ಹಾಗೂ ಹಿರಿಯ ವಕೀಲರಾದ ಶಾಂತನು ಬೋರ್ಠಾಕೂರ್ ಈ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ.
ದುಬೈ: ಭಾರತ-ಪಾಕಿಸ್ತಾನ ಘರ್ಷಣೆಯಲ್ಲಿ ಈ ಎರಡು ದೇಶಗಳ ನಡುವಿನ ಪಂದ್ಯಾಟ ವೇಳೆ ಹ್ಯಾಂಡ್ಶೇಕ್ ಆಗಾಗ ಭುಗಿಲೆತ್ತಲೇ ಇರುತ್ತದೆ. ನಿನ್ನೆ ಟಿ20 ವಿಶ್ವಕಪ್ ಪಂದ್ಯಾಟದ ವೇಳೆಯೂ ಭಾರತ ಪಾಕ್ ಹ್ಯಾಂಡ್ಶೇಕ್ ಮಾಡಲಿಲ್ಲ. ಈ ನಡುವೆ ಇದೀಘ ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಶರ್ಮಾ ಹಾಗೂ ಪಾಕ್ ಆಟಗಾರ ವಾಸಿಂ ಅಕ್ರಮ್ ಜತೆಗಿನ ವಿಡಿಯೋವೊಂದು ವೈರಲ್ ಆಗುತ್ತಿದೆ. ಭಾರತವು ಪಾಕಿಸ್ತಾನವನ್ನು 61 ರನ್ಗಳಿಂದ ಸೋಲಿಸಿತು, ಆದರೆ ಸಾಂಪ್ರದಾಯಿಕ ನಾಯಕರ ಹಸ್ತಲಾಘವವಿಲ್ಲದೆ ಪಂದ್ಯವು ಮತ್ತೊಮ್ಮೆ ಪ್ರಾರಂಭವಾಯಿತು. ಕಳೆದ ವರ್ಷ ದುಬೈನಲ್ಲಿ ನಡೆದ ಏಷ್ಯಾ ಕಪ್ನಲ್ಲಿ ಈ ಅಭ್ಯಾಸವನ್ನು ಕೈಬಿಡಲಾಯಿತು.ಕೊಲಂಬೊದಲ್ಲಿ ಆಟದ ನಂತರ, ರೋಹಿತ್ ಟ್ರೋಫಿ ಪ್ರಸ್ತುತಿಗಾಗಿ ಅಕ್ರಮ್ ಜೊತೆಗೆ ಮೈದಾನಕ್ಕೆ ನಡೆದರು. ಇಬ್ಬರು
ದರ್ಶನ್ ಅವರು ಇಲ್ಲದಿರುವಿಕೆ ತುಂಬಾನೇ ಕಾಡುತ್ತೆ. ಅವರು ಜತೆ ಬರ್ತಡೇ ಆಚರಿಸಬೇಕೆಂಬುದು ಎಲ್ಲ ಅಭಿಮಾನಿಗಳ ಕನಸು ಎಂದು ದರ್ಶನ್ ಬರ್ತಡೇ ದಿನ ಅನ್ನದಾನ ಮಾಡಿ ನಟಿ ತನಿಷಾ ಕುಪ್ಪಂಡ ಹೇಳಿದರು. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ದರ್ಶನ್ ಜತೆಗೆ ನನ್ನ ಜತೆಗಿರುವ ಒಂದು ಪೋಟೋನೇ ಇಲ್ಲ. ಇದರಿಂದ ನೋವಾಯಿತು. ವರ ಬರ್ತಡೇ ದಿನ ಅನ್ನದಾನ ಮಾಡಬೇಕೆಂದು ನನ್ನ ಆಸೆಯಾಗಿತ್ತು. ನನ್ನ ಹಾಗೇ ಹಲವು ಅಭಿಮಾನಿಗಳು ಅವರ ಬರ್ತಡೇ ದಿನ ಅನ್ನದಾನ ಮಾಡುತ್ತಾ ಬಂದಿದ್ದಾರೆ.
ಚೆನ್ನೈ: ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಅವರು ನಟ ಕಮ್ ರಾಜಕಾರಣಿ ವಿಜಯ್ ಅವರ ಬಗ್ಗೆ ಮಾತನಾಡಿದ್ದಕ್ಕೆ ನಟಿ ತ್ರಿಶಾ ಕೃಷ್ಣನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ವಕೀಲ ನಿತ್ಯೇಶ್ ನಟರಾಜ್ ನೀಡಿದ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ನಟಿ ತ್ರಿಷಾ ಅವರ ಪರ ವಕೀಲರು ಈ ಸಂಬಂಧ ಹೇಳಿಕೆ ನೀಡಿ ಇದು ಅಸಹ್ಯಕರ ಎಂದು ವಿವರಿಸಿದ್ದಾರೆ. ಯಾರ ಹೆಸರನ್ನೂ ಉಲ್ಲೇಖಿಸದೆ ತ್ರಿಷಾ ಪರ ವಕೀಲರು ಹೇಳಿಕೆ ನೀಡಿದ್ದು, ಇದು ನನ್ನ ಕಕ್ಷಿದಾರರ ಬಗ್ಗೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಅಸಹ್ಯಕರ ಹೇಳಿಕೆ. . ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯಿಂದ ಇಂತಹ
ಕೊಪ್ಪಳ: ವರ್ಷದ ಹಿಂದೆ ಗಂಗಾವತಿ ತಾಲ್ಲೂಕಿನ ಸಾಣಾಪುರದಲ್ಲಿ ವಿದೇಶಿ ಮಹಿಳೆ ಹಾಗೂ ಸ್ಥಳೀಯ ಹೋಂ ಸ್ಟೆ ಒಡತಿ ಮೇಲೆ ಅತ್ಯಾಚಾರ ನಡೆಸಿದ ಮತ್ತು ಒಡಿಶಾದ ಪ್ರವಾಸಿಗನ ಹತ್ಯೆ ಮಾಡಿದ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಡಿಸಿದ್ದಾರೆ. ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸಷೆನ್ಸ್ ನ್ಯಾಯಾಲಯವು ಮೂವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಗಂಗಾವತಿಯ ಸಾಯಿನಗರದ ಮಲ್ಲೇಶ್ (ಹಂದಿಮಲ್ಲ), ಸಾಯಿ (ಚೈತನ್ಯಸಾಯಿ) ಹಾಗೂ ಶರಣಪ್ಪ (ಶರಣು ಬಸವರಾಜ್) ಈ ಶಿಕ್ಷೆಗೆ ಒಳಗಾದ ಅಪರಾಧಿಗಳು
ನವದೆಹಲಿ: ಭಿವಾಡಿ ಅಗ್ನಿ ಅವಘಡದಲ್ಲಿ ಸಂಭವಿಸಿದ ಜೀವಹಾನಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.ರಾಜಸ್ಥಾನದ ಭಿವಾಡಿಯಲ್ಲಿ ಸಂಭವಿಸಿದ ಅಗ್ನಿ ದುರಂತವು ದುರಂತ ಮತ್ತು ತೀವ್ರ ದುಃಖಕರವಾಗಿದೆ. ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಕಚೇರಿಯ 'ಎಕ್ಸ್' ಪೋಸ್ಟ್ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಘಟನೆಯನ್ನು "ಹೃದಯ ವಿದ್ರಾವಕ" ಎಂದು ಕರೆದರು ಮತ್ತು ಜಿಲ್ಲಾ ರಕ್ಷಣಾ
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡಗೆ ಇಂದು ದರ್ಶನ್ ಹುಟ್ಟುಹಬ್ಬದ ದಿನವೇ ನಿರಾಸೆಯಾಗಿದೆ. ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ, ದರ್ಶನ್ ಎ2 ಆರೋಪಿ. ಸದ್ಯಕ್ಕೆ ಇಬ್ಬರೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇಂದು ದರ್ಶನ್ ಹುಟ್ಟುಹಬ್ಬ. ತಮ್ಮ ಹುಟ್ಟುಹಬ್ಬವನ್ನು ಅವರು ಜೈಲಿನಲ್ಲಿಯೇ ಆಚರಿಸುವಂತಾಗಿದೆ. ಇದರ ನಡುವೆ ಪವಿತ್ರಾ ಗೌಡಗೂ ಇಂದು ಕೋರ್ಟ ಬಿಗ್ ಶಾಕ್ ಕೊಟ್ಟಿದೆ. ಮಧ್ಯಂತರ ಜಾಮೀನಿಗಾಗಿ ಪವಿತ್ರಾ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇದನ್ನು ಕೋರ್ಟ್ ತಳ್ಳಿ ಹಾಕಿದೆ.
ಇಲ್ಲಿನ ಜುಹುದಲ್ಲಿರುವ ಚಿತ್ರನಿರ್ಮಾಪಕ ರೋಹಿತ್ ಶೆಟ್ಟಿ ಅವರ ಮನೆಯ ಮೇಲೆ ಐದು ಸುತ್ತು ಗುಂಡು ಹಾರಿಸಿದ ಶೂಟರ್ ಸೇರಿದಂತೆ ಆರು ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.ನಗರ ಪೊಲೀಸ್ನ ಸುಲಿಗೆ ನಿಗ್ರಹ ದಳವು ಭಾನುವಾರ (ಫೆಬ್ರವರಿ 15, 2026) ರಾತ್ರಿ ಹರಿಯಾಣ ಮತ್ತು ರಾಜಸ್ಥಾನದಿಂದ ಆಪಾದಿತ ಶೂಟರ್ ದೀಪಕ್ ಶರ್ಮಾ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಐವರನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳನ್ನು ನಗರಕ್ಕೆ ಕರೆತರಲಾಗಿದೆ ಎಂದರು.ಫೆಬ್ರವರಿ1 ರಂದು ಮಧ್ಯಾಹ್ನ 12:45 ಕ್ಕೆ ಜುಹು ಪ್ರದೇಶದಲ್ಲಿ ಶ್ರೀ ಶೆಟ್ಟಿ ಅವರ ಒಂಬತ್ತು ಅಂತಸ್ತಿನ ಕಟ್ಟಡದ ಮೊದಲ
ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಮದುವೆ ಕಾರ್ಡ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರೂ ಇದೇ ತಿಂಗಳು ಮದುವೆಯಾಗುವುದು ಪಕ್ಕಾ ಆಗಿದೆ. ಇದುವರೆಗೆ ವಿಜಯ್ ಆಗಲೀ, ರಶ್ಮಿಕಾ ಆಗಲೀ ಅಧಿಕೃತವಾಗಿ ತಮ್ಮ ಮದುವೆ ದಿನಾಂಕ ಘೋಷಿಸಿಲ್ಲ. ಆದರೆ ಇಬ್ಬರ ಮದುವೆ ಮತ್ತು ಆರತಕ್ಷತೆಯ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ಫೆಬ್ರವರಿ 26 ಕ್ಕೆ ರಶ್ಮಿಕಾ ಜೊತೆ ವಿಜಯ್ ಮದುವೆ ನಡೆಯಲಿದೆ. ಆದರೆ ಈ ಕಾರ್ಯಕ್ರಮಕ್ಕೆ ಕೇವಲ ಕುಟುಂಬದ ಆಪ್ತೇಷ್ಟರಿಗೆ ಮಾತ್ರ ಆಹ್ವಾನವಿದೆ. ಆದರೆ ಮಾರ್ಚ್ 4 ರಂದು ಚಿತ್ರರಂಗದ ಗಣ್ಯರಿಗಾಗಿ ಆರತಕ್ಷತೆ ಆಯೋಜಿಸಲಾಗಿದೆ.
ಚಿತ್ರದುರ್ಗಾ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಶಾಲಾ ಕಟ್ಟಡದ ಮೇಲಿಂದ ಬಿದ್ದು ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಗ್ರಾಮದ DVS ವಸತಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ 16 ವರ್ಷದ ವಿದ್ಯಾರ್ಥಿ ಕೊಟ್ರೇಶ್ ಶಾಲಾ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರು ಮತ್ತು ಶಾಲಾ ಶಿಕ್ಷಕರು ಆಘಾತಕ್ಕೆ ಒಳಗಾಗಿದ್ದಾರೆ. ಆತ ಕಟ್ಟಡದ ಮೇಲಿಂದ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭಿವಾಡಿ: ರಾಜಸ್ಥಾನದ ಭಿವಾಡಿಯ ರಾಸಾಯನಿಕ ಕಾರ್ಖಾನೆಯಲ್ಲಿ ಸೋಮವಾರ ಸಂಭವಿಸಿದ ಭಾರೀ ಬೆಂಕಿಯಲ್ಲಿ ಏಳು ಕಾರ್ಮಿಕರು ಸಾವನ್ನಪ್ಪಿದ್ದಾರೆ, ಇನ್ನೂ 10 ಕಾರ್ಮಿಕರು ಸಿಲುಕಿರುವ ಶಂಕೆ ಇದೆ.ಬೆಳಗ್ಗೆ 9.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಾಗ ಕಾರ್ಖಾನೆಯಲ್ಲಿ 20-25 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕೆಲವೇ ನಿಮಿಷಗಳಲ್ಲಿ, ಖಾಸಗಿ ಕೈಗಾರಿಕಾ ಘಟಕದಿಂದ ಜ್ವಾಲೆ ಹರಡಿತು ಮತ್ತು ಕಾರ್ಖಾನೆಯ ದೊಡ್ಡ ಭಾಗವನ್ನು ಆವರಿಸಿತು ಎಂದು ವರದಿಯಾಗಿದೆ. ಕೆಲವು ಕಾರ್ಮಿಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.