ಹುಬ್ಬಳ್ಳಿ: ಐದು ವರ್ಷದ ಬಾಲಕಿಯನ್ನು ಆಮಿಷವೊಡ್ಡಿ ಕರೆದೊಯ್ದು ರೇಪ್ ಆಂಡ್ ಮರ್ಡರ್ ಮಾಡಿದ ಕಾಮುಕನನ್ನು ಮಹಿಳಾ ಪಿಎಸ್ಐ ಎನ್ ಕೌಂಟರ್ ಮಾಡಿ ಬಿಸಾಕಿದ್ದು ಜನ ಶಹಬ್ಬಾಶ್ ಎಂದಿದ್ದಾರೆ. ಹುಬ್ಬಳ್ಳಿಯ ಐದು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಭಾರೀ ಸುದ್ದಿ ಮಾಡಿದೆ. ಆಟವಾಡುತ್ತಿದ್ದ ಐದು ವರ್ಷದ ಕಂದಮ್ಮನನ್ನು ಬಿಹಾರ ಮೂಲದ ಕಾರ್ಮಿಕ ಆಮಿಷವೊಡ್ಡಿ ಕರೆದೊಯ್ದಿದ್ದ. ಬಳಿಕ ರೇಪ್ ಮಾಡಿ ಕೊಲೆ ಮಾಡಿದ್ದ. ಬಾಲಕಿಯ ಶವ ಶೌಚಾಲಯವೊಂದರಲ್ಲಿ ಪತ್ತೆಯಾಗಿತ್ತು.
ಜೈಪುರ: ಐಪಿಎಲ್ 2025 ರಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟಿಗ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಕೊಹ್ಲಿ ಹೃದಯ ಬಡಿತವೇ ಏರುಪೇರಾದ ಘಟನೆ ನಡೆದಿದೆ. ಕೆಲವು ಕ್ಷಣ ಮೈದಾನದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಇಂದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 173 ರನ್ ಗಳ ಗೆಲುವಿನ ಗುರಿ ನೀಡಿತು. ಇದನ್ನು ಬೆನ್ನತ್ತಲು ಆರ್ ಸಿಬಿ ಪರ ಎಂದಿನಂತೆ ಕೊಹ್ಲಿ-ಸಾಲ್ಟ್ ಕಣಕ್ಕಿಳಿದಿದ್ದರು. ಕೊಹ್ಲಿ ಇಂದು ಉತ್ತಮವಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಜೈಪುರದಲ್ಲಿ ವಿಪರೀತ ಬಿಸಿಲಿನ ವಾತಾವರಣವಿತ್ತು. ಇದರಿಂದ ಆಟಗಾರರು ಬಳಲಿ ಬೆಂಡಾಗಿದ್ದರು.
ಕೋಲ್ಕತ್ತಾ: ಪಶ್ಚಿಮ ಬಂಗಾದಲ್ಲಿ ಹಿಂದೂಗಳ ಮಾರಣ ಹೋಮವಾಗ್ತಿದ್ದರೆ ಇತ್ತ ಟಿಎಂಸಿ ಸಂಸದ, ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಕೂಲ್ ಆಗಿ ಟೀ ಕುಡಿಯುತ್ತಾ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಕೇಶವನ್ ಆರೋಪಿಸಿದ್ದಾರೆ. ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ಪಶ್ಚಿಮ ಬಂಗಾಲದಲ್ಲಿ ಮುಸ್ಲಿಮರಿಂದ ಭಾರೀ ಪ್ರತಿಭಟನೆ ನಡೆಯುತ್ತಿದ್ದು ಹಿಂಸಾರೂಪಕ್ಕೆ ತಿರುಗಿದೆ. ಮುರ್ಷಿದಾಬಾದ್ ನಲ್ಲಂತೂ ಹಿಂದೂಗಳ ಮೇಲೆ ದಾಳಿಯಾಗುತ್ತಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಕೇಶವನ್ ‘ಮಮತಾ ಬ್ಯಾನರ್ಜಿಯವರ ಓಲೈಕೆ ರಾಜಕಾರಣದ ಪರಿಣಾಮ ಇಂದು ಪಶ್ಚಿಮ ಬಂಗಾಲ ಮತ್ತೊಂದು ಜಲಿಯನ್ ವಾಲಾಭಾಗ್ ಆಗಿದೆ.
ಜೈಪುರ: ಐಪಿಎಲ್ 2025 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಇಂದು ನಡೆದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಟಾಸ್ ಗೆದ್ದ ಆರ್ ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. 174 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಆರ್ ಸಿಬಿಗೆ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಿದರು. ಫಿಲ್ ಸಾಲ್ಟ್ ಎಂದಿನಂತೆ ಅಬ್ಬರದ ಆಟವಾಡಿದರು.
ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ನಡೆಯುತ್ತಿರುವ ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಮುಸ್ಲಿಮರ ಪ್ರತಿಭಟನೆಗೆ ಬೆಚ್ಚಿ ಹಿಂದೂಗಳು ಗ್ರಾಮ ಬಿಟ್ಟು ಗುಂಪು ಗುಂಪಾಗಿ ಓಡುವಂತಾಗಿದೆ. ಈ ವಿಡಿಯೋಗಳು ಈಗ ವೈರಲ್ ಆಗಿದೆ. ಪಶ್ಚಿಮ ಬಂಗಾಲದ ಮುರ್ಷಿದಾಬಾದ್ ನಲ್ಲಿ ಹಿಂದೂಗಳು ಗುಂಪು ಗುಂಪಾಗಿ ತೆರಳುತ್ತಿರುವ ಮತ್ತು ನಿರಾಶ್ರಿತರಾಗಿ ಒಂದು ಕಡೆ ಗುಂಪು ಸೇರಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ಇದೇನು ಭಾರತವೋ, ಬಾಂಗ್ಲಾದೇಶವೋ ಎಂದು ಜನ ಅನುಮಾನ ಪಡುವಂತಾಗಿದೆ.
ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ತಾಳಿದೆ. ಈ ನಡುವೆ ಹಿಂದೂಗಳನ್ನು ಮನೆಯಿಂಧ ಹೊರಗೆಳೆದು ಹತ್ಯೆ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ವಕ್ಫ್ ಕಾಯಿದೆ ವಿಚಾರದಲ್ಲಿ ವಿರೋಧ ಪಕ್ಷಗಳು ಮುಸ್ಲಿಮರ ದಾರಿ ತಪ್ಪಿಸುತ್ತಿದೆ. ವಕ್ಫ್ ಕಾನೂನು ಪ್ರತಿಭಟನೆ ಹೆಸರಿನಲ್ಲಿ ಹಿಂಸಾಚಾರ ನಡೆಸಲಾಗುತ್ತಿದೆ ಎಂದು ಅವರು ಮುರ್ಷಿದಾಬಾದ್ ನಲ್ಲಿ ನಡೆದ ಹಿಂಸಾಚಾರವನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ವಕ್ಫ್ ಹೆಸರಿನಲ್ಲಿ ಪಶ್ಚಿಮ ಬಂಗಾಲದಲ್ಲಿ ಸಾವಿರಾರು ಎಕರೆ ದಲಿತರ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಮುರ್ಷಿದಾಬಾದ್ ನಲ್ಲಿ ಹಿಂದೂಗಳನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ.
ಜೈಪುರ: ಐಪಿಎಲ್ 2025 ರ ಇಂದಿನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಜಸ್ಥಾನ್ ರಾಯಲ್ಸ್ 174 ರನ್ ಗಳ ಗೆಲುವಿನ ಗುರಿ ನೀಡಿದೆ. ಇಂದು ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ರಾಜಸ್ಥಾನ್ ರಾಯಲ್ಸ್ ಗೆ ಯಶಸ್ವಿ ಜೈಸ್ವಾಲ್ ಸ್ಪೋಟಕ ಆರಂಭ ನೀಡಿದರು. ಒಟ್ಟು 47 ಎಸೆತ ಎದುರಿಸಿದ ಅವರು 75 ರನ್ ಗಳಿಸಿದರು. ಉಳಿದಂತೆ ರಿಯಾನ್ ಪರಾಗ್ 30, ಧ್ರುವ್ ಜ್ಯುರೆಲ್ ಅಜೇಯ 35 ರನ್ ಗಳಿಸಿದರು. ಇದರಿಂದಾಗಿ ರಾಜಸ್ಥಾನ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು.
ಕೂದಲು ಸಮಸ್ಯೆಯಿಂದ ಬಳಲುತ್ತಿರುವವರು ಈ ಒಂದು ಜ್ಯೂಸ್ ಮಾಡಿ ತಲೆ ಸ್ನಾನದ ಕೊನೆಯಲ್ಲಿ ಹಚ್ಚಿಕೊಂಡರೆ ಉದುರುವಿಕೆ, ತಲೆಹೊಟ್ಟು ಸೇರಿದಂತೆ ಅನೇಕ ಸಮಸ್ಯೆಗಳು ದೂರವಾಗುತ್ತದೆ. ಕೂದಲ ಸಮಸ್ಯೆಗೆ ಕೊತ್ತಂಬರಿ ಸೊಪ್ಪುಕೂದಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಗುಣ ಕೊತ್ತಂಬರಿ ಸೊಪ್ಪಿನಲ್ಲಿದೆ. ಇದರ ಜ್ಯೂಸ್ ನ್ನು ಸ್ನಾನದ ಕೊನೆಯಲ್ಲಿ ಕಂಡೀಷನರ್ ಥರಾ ಹಚ್ಚಿಕೊಂಡರೆ ಕೂದಲು ಉದುರುವಿಕೆ, ತಲೆಹೊಟ್ಟು, ಸೀಳು ಕೂದಲು ಸಮಸ್ಯೆ ನಿವಾರಿಸುವುದಲ್ಲದೆ ಕೂದಲಿನ ಬುಡ ಗಟ್ಟಿಗೊಳಿಸುತ್ತದೆ. ಕೊತ್ತಂಬರಿ ಸೊಪ್ಪು ಜ್ಯೂಸ್ ಮಾಡುವುದು ಹೇಗೆ?ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಒಂದು ಬೌಲ್ ನಲ್ಲಿ ಹಾಕಿ ನೀರಿನಲ್ಲಿ ನೆನೆಸಿಡಿ.
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಇದೇ ವರ್ಷ ಮದುವೆಯಾಗಲಿದ್ದಾರಂತೆ. ಹೀಗಂತ ನಟ ರವಿಚಂದ್ರನ್ ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ಅಪ್ ಡೇಟ್ ಕೊಟ್ಟಿದ್ದಾರೆ. ಸ್ಯಾಂಡಲ್ ವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಹೀರೋಯಿನ್ ರಚಿತಾ ರಾಮ್. ಕನ್ನಡ ಚಿತ್ರರಂಗದಲ್ಲಿ ಬಹಳ ದಿನಗಳಿಂದ ಈಗಿನವರೆಗೂ ಬೇಡಿಕೆಯ ನಟಿಯಾಗಿರುವ ರಚಿತಾ ಇದುವರೆಗೆ ತಮ್ಮ ಲವ್ ಲೈಫ್ ಬಗ್ಗೆ ಎಲ್ಲೂ ಗುಟ್ಟು ಬಿಟ್ಟುಕೊಟ್ಟಿಲ್ಲ. ತಮ್ಮ ಮದುವೆ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗಲೆಲ್ಲಾ ಹಾರಿಕೆಯ ಉತ್ತರ ನೀಡುತ್ತಲೇ ಇದ್ದರು. ಇದೀಗ ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ರಚಿತಾ ಮದುವೆ ಸುದ್ದಿ ಬಂದಿದೆ.
ಬೆಂಗಳೂರು: ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಇಂದಂತೂ ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ತಲುಪಿದ್ದು ಲಕ್ಷ ತಲುಪಲು ಇನ್ನೇನು ಕೆಲವೇ ಹೆಜ್ಜೆ ಬಾಕಿ ಎನ್ನುವಂತಿದೆ. ಇಂದು ಪರಿಶುದ್ಧ ಚಿನ್ನದ ದರ ಎಷ್ಟು ಏರಿಕೆಯಾಗಿದೆ ಎಂಬ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆ99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು.ಇಂದು ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಕಳೆದ ಎರಡುದಿನಗಳಿಂದಲೂ ಚಿನ್ನದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇತ್ತು. ಆದರೆ ಇಂದಂತೂ ಗಗನ ಕುಸುಮವಾಗಿದೆ. ಎಲ್ಲಾ ದಾಖಲೆಗಳನ್ನೂ ಮೀರಿ ಏರಿಕೆಯಾಗಿದೆ. ನಿನ್ನೆ ಪರಿಶುದ್ಧ ಚಿನ್ನದ ಬೆಲೆ 96, 610 ರೂ.ಗಳಾಗಿತ್ತು.
ಹೈದರಾಬಾದ್: ಕೆಲವೊಮ್ಮೆ ಕಣ್ಣೆದುರೇ ಇರುವ ವಸ್ತು ಕಾಣಿಸದಾಗುತ್ತದೆ. ಸನ್ ರೈಸರ್ಸ್ ಹೈದರಾಬಾದ್ ಆಟಗಾರ ಇಶಾನ್ ಕಿಶನ್ ಗೂ ಹೀಗೇ ಆಗಿದೆ. ಮೈದಾನದಲ್ಲಿ ಚೆಂಡಿಗಾಗಿ ಹುಡುಕಾಡಿದ ಫನ್ನಿ ವಿಡಿಯೋವೊಂದು ವೈರಲ್ ಆಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 8 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 245 ಬೃಹತ್ ಗುರಿ ನೀಡಿತ್ತು. ಹಾಗಿದ್ದರೂ ಹೈದರಾಬಾದ್ 18.3 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 247 ರನ್ ಗಳಿಸುವ ಮೂಲಕ ಗುರಿ ಮುಟ್ಟಿತು.
ನವದೆಹಲಿ: ಮುಂಬೈ ಉಗ್ರ ದಾಳಿಯ ರೂವಾರಿ ತಹವ್ವೂರ್ ರಾಣಾ ಎನ್ ಐಎ ಕಸ್ಟಡಿಯಲ್ಲಿದ್ದು ವಿಚಾರಣೆಗೊಳಪಡಿಸಲಾಗುತ್ತಿದೆ. ಈ ವೇಳೆ ಆತ ಅಧಿಕಾರಿಗಳ ಬಳಿ ಮೂರು ವಸ್ತುಗಳಿಗೆ ಬೇಡಿಕೆಯಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಎನ್ಐಎ ಕಚೇರಿಯಲ್ಲಿ ಬಿಗಿ ಬಂದೋಬಸ್ತ್ ನಲ್ಲಿ ರಾಣಾನನ್ನು ಇರಿಸಲಾಗಿದೆ. ಆತನಿಗೆ 14*14 ಕೊಠಡಿಯಲ್ಲಿ ಹಾಸಿಗೆ, ಸ್ನಾನ, ಊಟ ಎಲ್ಲದಕ್ಕೂ ವ್ಯವಸ್ಥೆ ಮಾಡಿಕೊಡಲಾಗಿದೆ. ಈತನ ಭೇಟಿಗೆ ಕೇವಲ 12 ಅಧಿಕಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಭದ್ರತಾ ಕೊಠಡಿಯಲ್ಲಿ ಆತನಿಗೆ ಯಾವುದೇ ವಿಶೇಷ ಸೌಲಭ್ಯ ನೀಡಲಾಗಿಲ್ಲ. ಸಾಮಾನ್ಯ ಖೈದಿಯಂತೆ ಟ್ರೀಟ್ ಮಾಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ನವದೆಹಲಿ: ಮಗು ಬಿದ್ದೋಯ್ತು ಎಂದು ಹೆತ್ತಮ್ಮ ಹಾಗೂ ಪರಿವಾರದವರು ದೆಹಲಿ ಮೆಟ್ರೋದಲ್ಲಿ ಗಲಾಟೆ ಎಬ್ಬಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಸಲಿಗೆ ಮಗು ಎಲ್ಲಿತ್ತು ಇಲ್ಲಿದೆ ನೋಡಿ ಅಸಲಿ ಕಹಾನಿ. ದೆಹಲಿ ಮೆಟ್ರೋದಲ್ಲಿ ನಡೆದ ಘಟನೆ ಇದಾಗಿದೆ. ಅಮ್ಮ, ಮಗು ಸೇರಿದಂತೆ ಇಡೀ ಪರಿವಾರವೇ ಮೆಟ್ರೋ ಏರುತ್ತದೆ. ಆದರೆ ರೈಲು ಚಲಿಸಲು ಆರಂಭಿಸಿದಾಗ ಮಗು ತಮ್ಮ ಜೊತೆಗಿಲ್ಲ ಎನ್ನುವುದು ಪರಿವಾರದವರಿಗೆ ಅರಿವಾಗಿದೆ. ತಕ್ಷಣವೇ ಮೆಟ್ರೋದಲ್ಲಿ ದೊಡ್ಡ ಗಲಾಟೆಯನ್ನೇ ಎಬ್ಬಿಸುತ್ತಾರೆ. ನಮ್ಮ ಮಗು ಹಳಿಗೆ ಬಿದ್ದು ಹೋಗಿದೆ ಎಂದು ಅಮ್ಮ ಸೇರಿದಂತೆ ಇಡೀ ಕುಟುಂಬದವರು ಮೆಟ್ರೋ ಪೂರ್ತಿ ಓಡಾಡಿ ದಾಂಧಲೆ ಎಬ್ಬಿಸುತ್ತಾರೆ.
ಬೆಂಗಳೂರು: ಕೆಜಿಎಫ್ ಎಂಬ ಹೆಸರು ಕನ್ನಡ ಚಿತ್ರರಂಗಕ್ಕೆ ಒಂದು ಕಳಶವಿದ್ದಂತೆ. ಕನ್ನಡ ಸಿನಿಮಾ ರಂಗವನ್ನು ಪ್ಯಾನ್ ಇಂಡಿಯಾ ಲೆವೆಲ್ ಗೆ ಕೊಂಡೊಯ್ದ ಈ ಸಿನಿಮಾದ ಮೂರನೇ ಭಾಗದ ಬಗ್ಗೆ ಈಗ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಕೆಜಿಎಫ್ 1,2 ಬಾಕ್ಸ್ ಆಫೀಸ್ ನಲ್ಲಿ ಹಣ ಕೊಳ್ಳೆ ಹೊಡೆದಿತ್ತು. ಜೊತೆಗೆ ಪ್ರಶಾಂತ್ ನೀಲ್, ಯಶ್ ನ್ಯಾಷನಲ್ ಸ್ಟಾರ್ ಗಳಾದರು. ಕೆಜಿಎಫ್ 3 ಕೂಡಾ ಬರಲಿದೆ ಎಂದು ಪ್ರಶಾಂತ್ ನೀಲ್ ಈಗಾಗಲೇ ಹೇಳಿದ್ದರು.
ಬೆಂಗಳೂರು: ಕರ್ನಾಟಕದಲ್ಲಿ ಈಗ ಜಾತಿಗಣತಿ ವಿಚಾರ ಭಾರೀ ಸದ್ದು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ಸಮೀಕ್ಷಾ ವರದಿ ಹೊರಹಾಕಲು ಸಿದ್ಧತೆ ನಡೆಸಿದ್ದಾರೆ. ಆದರೆ ಜಾತಿಗಣತಿಗೆ ಯಾರೂ ಮನೆಗೆ ಬಂದೇ ಇಲ್ಲ, ಹಾಗಿದ್ದರೆ ಗಣತಿ ಹೇಗಾಯ್ತು ಎಂದು ವಿಪಕ್ಷಗಳು ಮತ್ತು ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ನಿನ್ನೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ ನಮ್ಮ ಮನೆಗಾಗಲೀ ತಾತನ ಮನೆಗಾಗಲೀ ಯಾರೂ ಸಮೀಕ್ಷೆ ನಡೆಸಲು ಬಂದೇ ಇಲ್ಲ. ಹಾಗಿದ್ದರೆ ಈ ಜಾತಿಗಣತಿ ಯಾವ ಆಧಾರದಲ್ಲಿ ನಡೆಯಿತು ಎಂದು ಪ್ರಶ್ನೆ ಮಾಡಿದ್ದಾರೆ. ಸಾರ್ವಜನಿಕರೂ ಸೋಷಿಯಲ್ ಮೀಡಿಯಾಗಳಲ್ಲಿ ಇದೇ ಪ್ರಶ್ನೆ ಮಾಡುತ್ತಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯವರು ಇಂದಿನ ಹವಾಮಾನವನ್ನು ವೀಕ್ಷಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ನಿನ್ನೆ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದ್ದರೂ ತಕ್ಕಮಟ್ಟಿಗೆ ಮಳೆಯಾಗಿತ್ತು. ಈ ಜಿಲ್ಲೆಗೆ ಇಂದೂ ಮಳೆಯ ಸೂಚನೆಯಿದೆ. ಇಂದೂ ಕೂಡಾ ಸಣ್ಣ ಮಟ್ಟಿಗೆ ಮಳೆಯಾಗಲಿದೆ ಎಂದು ವರದಿಯಾಗಿದೆ. ಆದರೆ ಪಕ್ಕದ ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಗೆ ಇಂದು ಮಳೆಯ ಸೂಚನೆಯಿಲ್ಲ. ಕೊಡಗಿನಲ್ಲೂ ನಿನ್ನೆಯವರೆಗೆ ಮಳೆಯಾಗಿತ್ತು. ಆದರೆ ಇಂದು ವರುಣ ತಕ್ಕಮಟ್ಟಿಗೆ ಬಿಡುವು ನೀಡಲಿದ್ದಾನೆ.
ಜೈಪುರ: ಐಪಿಎಲ್ 2025 ರಲ್ಲಿಇಂದು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯವಾಡಲಿದೆ. ಇಂದಿನ ಪಂದ್ಯದಲ್ಲಿ ಆರ್ ಸಿಬಿಗೆ ಗೆಲುವು ಎಷ್ಟು ಮುಖ್ಯ ಗೊತ್ತಾ? ಯಾಕೋ ಈ ಬಾರಿ ತವರಿನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಸೋತಿರುವ ಆರ್ ಸಿಬಿ ಉಳಿದ ಮೂರು ಪಂದ್ಯಗಳನ್ನೂ ಗೆದ್ದುಕೊಂಡಿದೆ. ತವರಿನಲ್ಲಿ ಸಿಕ್ಕ ಎರಡು ಸೋಲುಗಳು ಆರ್ ಸಿಬಿ ಮುಂದಿನ ಹಾದಿಯನ್ನು ಕಠಿಣವಾಗಿಸಿದೆ. ಇದೀಗ ಪ್ಲೇ ಆಫ್ ಹಂತಕ್ಕೇರಲು ಆರ್ ಸಿಬಿ ಮುಂದಿನ ಕೆಲವು ಪಂದ್ಯಗಳನ್ನು ಗೆಲ್ಲುತ್ತಾ ಸಾಗಬೇಕು.
ಮಾನಸಿಕ ಸ್ಥೈರ್ಯ, ಮನೋಬಲ ವೃದ್ಧಿ, ಜೀವನದಲ್ಲಿ ಯಶಸ್ಸಿಗಾಗಿ ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಮಂತ್ರವನ್ನು ತಪ್ಪದೇ ಓದಿ.ಓಂ ತರುಣಾದಿತ್ಯಸಂಕಾಶಾಯೈ ನಮಃ |ಓಂ ಸಹಸ್ರನಯನೋಜ್ಜ್ವಲಾಯೈ ನಮಃ |ಓಂ ವಿಚಿತ್ರಮಾಲ್ಯಾಭರಣಾಯೈ ನಮಃ |ಓಂ ತುಹಿನಾಚಲವಾಸಿನ್ಯೈ ನಮಃ |ಓಂ ವರದಾಭಯಹಸ್ತಾಬ್ಜಾಯೈ ನಮಃ |ಓಂ ರೇವಾತೀರನಿವಾಸಿನ್ಯೈ ನಮಃ |ಓಂ ಪ್ರಣಿತ್ಯಯ ವಿಶೇಷಜ್ಞಾಯೈ ನಮಃ |ಓಂ ಯಂತ್ರಾಕೃತವಿರಾಜಿತಾಯೈ ನಮಃ |ಓಂ ಭದ್ರಪಾದಪ್ರಿಯಾಯೈ ನಮಃ | ೯ |ಓಂ ಗೋವಿಂದಪದಗಾಮಿನ್ಯೈ ನಮಃ |ಓಂ ದೇವರ್ಷಿಗಣಸಂತುಷ್ಟಾಯೈ ನಮಃ |ಓಂ ವನಮಾಲಾವಿಭೂಷಿತಾಯೈ ನಮಃ |ಓಂ ಸ್ಯಂದನೋತ್ತಮಸಂಸ್ಥಾನಾಯೈ ನಮಃ |
ಬೆಂಗಳೂರು: ಮಾಸ್ ಮಹಾರಾಜ ರವಿತೇಜ ಅವರ ಮಕ್ಕಳು ಸಹ ಚಿತ್ರರಂಗದಲ್ಲಿ ವಿವಿಧ ಪಾತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಯೋಜಿಸುತ್ತಿದ್ದಾರೆ. ಈಗಾಗಲೇ, ಅವರ ಮಗ ಮಹಾಧನ್ ರಾಜಾ ದಿ ಗ್ರೇಟ್ ಚಿತ್ರದಲ್ಲಿ ಬಾಲ ಕಲಾವಿದನಾಗಿ ಪಾದಾರ್ಪಣೆ ಮಾಡಿದ್ದಾರೆ. ಅವರು ಶೀಘ್ರದಲ್ಲೇ ಚಲನಚಿತ್ರ ನಿರ್ದೇಶಕರಾಗಲು ಯೋಜಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈಗ, ರವಿತೇಜ ಅವರ ಮಗಳ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ.ವರದಿಗಳು ನಿಜವೆಂದು ನಂಬಿದ್ದರೆ, ರವಿತೇಜ ಅವರ ಮಗಳು ಮೋಕ್ಷಧಾ ನಿರ್ಮಾಪಕಿಯಾಗಲು ಆಶಿಸಿದ್ದಾರೆ. ಇತ್ತೀಚಿನ ಸುದ್ದಿಗಳ ಪ್ರಕಾರ, ಆನಂದ್ ದೇವರಕೊಂಡ ಅವರ ಮುಂದಿನ ಚಿತ್ರವನ್ನು ವಿನೋದ್ ಅನಂತೋಜು ನಿರ್ದೇಶನದಲ್ಲಿ ನಿರ್ಮಿಸಲು ಅವರು ಯೋಜಿಸಿದ್ದಾರೆ. ಈ ಜೋಡಿ ಈ ಹಿಂದೆ ಮಿಡಲ್ ಕ್ಲಾಸ್ ಮೆಲೋಡೀಸ್ ಚಿತ್ರವನ್ನು ನಿರ್ಮಿಸಿದ್ದರು.
ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಮಾಜವಾದಿ ಪಕ್ಷದ ನಾಯಕ ಹರೀಶ್ ಮಿಶ್ರಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಇನ್ನೂ ಹಲ್ಲೆ ನಡೆಸಿದ ಇಬ್ಬರ ಮೇಲೆ ಗುಂಪು ಥಳಿಸಿದ ರೀತಿಗೆ ರಕ್ತ ಸುರಿಯುತ್ತಿದೆ.ಸಿಕ್ಕಿರುವ ಮಾಹಿತಿ ಪ್ರಕಾರ ದಾಳಿಕೋರರು ಕರ್ಣಿ ಸೇನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮಿಶ್ರಾ ಅವರು ಕರ್ಣಿ ಸೇನೆಯ ಬಗ್ಗೆ ಕೆಲವು ಹೇಳಿಕೆಗಳನ್ನು ನೀಡಿದ್ದರು.ಘಟನೆಯ ಸ್ಥಳದಿಂದ ವೀಡಿಯೊ ಹೊರಬಿದ್ದಿದೆ. ವೀಡಿಯೊದಲ್ಲಿ, ಇಬ್ಬರೂ ಆರೋಪಿಗಳು ಪೊಲೀಸ್ ವ್ಯಾನ್ನಲ್ಲಿ ಕುಳಿತಿರುವುದನ್ನು ಕಾಣಬಹುದು. ಒಬ್ಬ ಆರೋಪಿ ಶರ್ಟ್ ಧರಿಸದೆ ಕುಳಿತಿದ್ದರೆ, ಇನ್ನೊಬ್ಬನ ಶರ್ಟ್ ರಕ್ತದ ಕಲೆಗಳಿಂದ ತುಂಬಿದೆ.
ಭಾರತದ ಪ್ರಸಿದ್ಧ ನಟ ಮತ್ತು ನಿರ್ಮಾಪಕ ಮನೋಜ್ ಕುಮಾರ್ ಅವರ ಚಿತಾಭಸ್ಮವನ್ನು ಶನಿವಾರ (ಏಪ್ರಿಲ್ 12) ಬೆಳಿಗ್ಗೆ ಗಂಗಾ ನದಿಯ ಪವಿತ್ರ ನೀರಿನಲ್ಲಿ ವಿಸರ್ಜಿಸಲಾಯಿತು. ಹರಿದ್ವಾರದ ಹರ್ ಕಿ ಪೌರಿಯ ಬ್ರಹ್ಮ ಕುಂಡ್ನಲ್ಲಿ, ನಿಕಟ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಈ ಆಚರಣೆ ನಡೆಯಿತು.ನದಿ ದಂಡೆಯುದ್ದಕ್ಕೂ ಮಂತ್ರಗಳ ಪಠಣಗಳು ಪ್ರತಿಧ್ವನಿಸುತ್ತಿದ್ದಂತೆ, ಅಂತಿಮ ವಿಧಿವಿಧಾನಗಳನ್ನು ಪೂರ್ಣ ವೈದಿಕ ವಿಧಿಗಳೊಂದಿಗೆ ನಡೆಸಲಾಯಿತು. ಮನೋಜ್ ಕುಮಾರ್ ಅವರ ಪುತ್ರರಾದ ಕುನಾಲ್ ಗೋಸ್ವಾಮಿ ಮತ್ತು ವಿಶಾಲ್ ಗೋಸ್ವಾಮಿ, ಕುಟುಂಬದ ಪುರೋಹಿತರ ಮಾರ್ಗದರ್ಶನದಲ್ಲಿ ಚಿತಾಭಸ್ಮವನ್ನು ವಿಸರ್ಜಿಸಿದರು.
ಪ.ಬಂಗಾಳ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆ ವಕ್ಫ್ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳ ನಂತರ ಭುಗಿಲೆದ್ದ ಹಿಂಸಾತ್ಮಕ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.ಪೊಲೀಸರ ಪ್ರಕಾರ, ಶುಕ್ರವಾರ ಜಿಲ್ಲೆಯಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 118 ಜನರನ್ನು ಬಂಧಿಸಲಾಗಿದೆ.ಶನಿವಾರ ಮುರ್ಷಿದಾಬಾದ್ನ ಧುಲಿಯನ್ನಿಂದ ಹೊಸ ಹಿಂಸಾಚಾರದ ನಡುವೆ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಎಕ್ಸ್ಗೆ ಕರೆದೊಯ್ದ ಮಮತಾ ಬ್ಯಾನರ್ಜಿ, “ನೆನಪಿಡಿ, ಅನೇಕರು ಆಕ್ರೋಶಗೊಂಡಿರುವ ಕಾನೂನನ್ನು ನಾವು ಮಾಡಲಿಲ್ಲ. ಕಾನೂನನ್ನು ಕೇಂದ್ರ ಸರ್ಕಾರ ಮಾಡಿದೆ. ಆದ್ದರಿಂದ ನಿಮಗೆ ಬೇಕಾದ ಉತ್ತರವನ್ನು ಕೇಂದ್ರ ಸರ್ಕಾರದಿಂದ ಪಡೆಯಬೇಕು.”
ಮೀರತ್: ಪ್ರಿಯಕರ ಜತೆ ಸೇರಿ ಕೈಹಿಡಿದ ಪತಿಯನ್ನು ಕೊಂದ ಆರೋಪಿ ಮುಸ್ಕಾನ್ ರಸ್ತೋಗಿ ಗರ್ಭಿಣಿ ಎಂದು ದೃಢಪಟ್ಟ ಮೇಲೆ ಜೈಲಿನಲ್ಲಿ ವಿಶೇಷ ಸವಲತ್ತುಗಳನ್ನು ನೀಡಿ ಆರೈಕೆ ಮಾಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಿರಿಯ ಜೈಲು ಸೂಪರಿಂಟೆಂಡೆಂಟ್ ಡಾ. ವಿರೇಶ್ ರಾಜ್ ಶರ್ಮಾ ಅವರ ಪ್ರಕಾರ, ಮುಸ್ಕಾನ್ ಅವರನ್ನು ಇಂದು ಮುಂಜಾನೆ ವೈದ್ಯಕೀಯ ಕಾಲೇಜಿನ ಸ್ತ್ರೀರೋಗ ವಿಭಾಗಕ್ಕೆ ಅಲ್ಟ್ರಾಸೌಂಡ್ಗಾಗಿ ಕರೆದೊಯ್ಯಲಾಯಿತು, ಇದು ನಾಲ್ಕರಿಂದ ಆರು ವಾರಗಳ ಗರ್ಭಧಾರಣೆ ಎಂದು ದೃಢಪಟ್ಟಿದೆ.
ಲಕ್ನೋ: ಐಪಿಎಲ್ 2025ರ ಆವೃತ್ತಿಯಲ್ಲಿ ತಮ್ಮ ವಿಶಿಷ್ಟ ಸಂಭ್ರಮಾಚರಣೆಗೆ ಸುದ್ದಿಯಾಗಿರುವ ಲಕ್ನೋ ಸೂಪರ್ ಜೈಂಟ್ಸ್ ಸ್ಪಿನ್ನರ್ ದಿಗ್ವೇಶ್ ರಾಠಿ ಇದೀಗ ಅದೇ ಸಿಗ್ನೇಚರ್ ಸೆಲೆಬ್ರೇಶನ್ ಅನ್ನು ಮುಂದುವರೆಸಿದ್ದಾರೆ.ಈ ಹಿಂದೆ ಸೈನ್ ಆಫ್ ಆಚರಣೆಯನ್ನು ಮಾಡಿ, ಭಾರೀ ಮೊತ್ತದ ದಂಡವನ್ನು ಮಂಡಳಿ ವಿಧಿಸಿತ್ತು. ಆದರೆ ಈ ಬಾರೀ ಸೆಲೆಬ್ರೇಶನ್ ಮಾಡಿದ ರೀತಿ ಬದಲಾಗಿದೆ. ಇಂದು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯಾಟದಲ್ಲಿ ಪ್ರಮುಖ ಬ್ಯಾರ್ ಆಗಿರುವ ಬಟ್ಲರ್ ವಿಕೆಟ್ ಅನ್ನು ದಿಗ್ವೇಶ್ ರಾಠಿ ಪಡೆದುಕೊಂಡರು. ಇದೇ ಖುಷಿಯಲ್ಲಿ ರಾಠಿ ತಮ್ಮ ಸೆಲೆಬ್ರೇಶನ್ ಮಾಡುವುದನ್ನು ಮಾತ್ರ ಮಿಸ್ ಮಾಡಲಿಲ್ಲ.
ಕಿಶ್ತ್ವಾರ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳ ಮಧ್ಯೆ ಬೆನ್ನಲ್ಲೇ ಭಾರತೀಯ ಸೇನೆಯು "ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವವರೆಗೆ ಕಾರ್ಯಾಚರಣೆ ಮುಂದುವರೆಯುತ್ತದೆ ಎಂದು ಕಿಶ್ತ್ವಾರ್-ದೋಡಾ ರಾಂಬನ್ ಶ್ರೇಣಿಯ ಮಹಾನಿರ್ದೇಶಕ ಶ್ರೀಧರ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ, "ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವವರೆಗೆ, ಕಾರ್ಯಾಚರಣೆಗಳು ಮುಂದುವರಿಯುತ್ತವೆ. ಪ್ರದೇಶದ ಜನರು ಭದ್ರತಾ ಪಡೆಗಳಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಈ ಕಾರ್ಯಾಚರಣೆಗಳು ಭದ್ರತಾ ಪಡೆಗಳ ಉತ್ತಮ ಸಮನ್ವಯವನ್ನು ತೋರಿಸುತ್ತವೆ" ಎಂದು ಹೇಳಿದರು.ಶನಿವಾರ, ಕಿಶ್ತ್ವಾರ್ನಲ್ಲಿ ಭದ್ರತಾ ಪಡೆಗಳು ಒಟ್ಟು 3 ಪಾಕಿಸ್ತಾನಿ ಭಯೋತ್ಪಾದಕರನ್ನು ತಟಸ್ಥಗೊಳಿಸಿದರು.
ಬೆಂಗಳೂರು: ಕರ್ನಾಟಕ ಸಿಇಟಿ ಪರೀಕ್ಷೆ ರಿಸಲ್ಟ್ ಮೊದಲು ಬರುತ್ತಾ, ದ್ವಿತೀಯ ಪಿಯು ಪರೀಕ್ಷೆ 2 ಫಲಿತಾಂಶ ಮೊದಲು ಬರುತ್ತಾ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ದ್ವಿತೀಯ ಪಿಯುಸಿ ಪರೀಕ್ಷೆ 1 ರ ಫಲಿತಾಂಶ ಮೊನ್ನೆಯಷ್ಟೇ ಬಂದಿತ್ತು. ಇದೀಗ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಏಪ್ರಿಲ್ 16 ಮತ್ತು 17 ಸಿಇಟಿ ಪರೀಕ್ಷೆ ನಡೆಯಲಿದೆ. ಇದೀಗ ಸಿಇಟಿ ಫಲಿತಾಂಶ ಯಾವಾಗ ಎನ್ನುವ ಕುತೂಹಲವೂ ವಿದ್ಯಾರ್ಥಿಗಳಲ್ಲಿದೆ. ವಿಶೇಷವಾಗಿ ದ್ವಿತೀಯ ಪಿಯು ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ಎರಡನೇ ಪರೀಕ್ಷೆಗೆ ಸಿದ್ಧತೆ ಮಾಡುವವರಿಗೆ ಮೊದಲು ಯಾವ ಫಲಿತಾಂಶ ಬರುತ್ತದೆ ಎಂಬ ಆತಂಕವಿದೆ.
ಚೆನ್ನೈ: ಸಾಮಾನ್ಯವಾಗಿ ಯಾವುದೇ ಕಾಯಿದೆಗಳು ಜಾರಿಯಾಗಬೇಕಾದರೆ ರಾಜ್ಯಪಾಲರ ಅಥವಾ ರಾಷ್ಟ್ರಪತಿಗಳ ಅಂಕಿತ ಬೇಕು. ಆದರೆ ತಮಿಳುನಾಡು ಈಗ ಹೊಸ ಇತಿಹಾಸ ಬರೆದಿದೆ. ರಾಜ್ಯಪಾಲರು, ರಾಷ್ಟ್ರಪತಿಗಳ ಅಂಕಿತವಿಲ್ಲದೇ 10 ಕಾಯಿದೆಗಳನ್ನು ಜಾರಿಗೆ ತಂದಿದೆ. ತಮಿಳುನಾಡಿನಲ್ಲಿ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ತಿಕ್ಕಾಟ ಹೊಸದೇನಲ್ಲ. ಇದೀಗ ಇದು ಇನ್ನೊಂದು ಹಂತಕ್ಕೆ ಹೋಗಿದೆ. ಮೊನ್ನೆಯಷ್ಟೇ ರಾಜ್ಯಪಾಲರು ಸಹಿ ಹಾಕದೇ ಕಡತವಿಟ್ಟುಕೊಂಡಿದ್ದ ವಿಚಾರವಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಸರ್ಕಾರಕ್ಕೆ ಗೆಲುವಾಗಿತ್ತು.ಪ್ರಜಾಪ್ರಭುತ್ವದಲ್ಲಿ ರಾಜ್ಯಪಾಲರು ಸರ್ಕಾರ ಕಳುಹಿಸಿದ ಕಡತಗಳನ್ನು ಸಹಿ ಹಾಕದೇ ಇಟ್ಟುಕೊಳ್ಳುವಂತಿಲ್ಲ.
ನಾಗ್ಪುರ: ನಾಗ್ಪುರ ಜಿಲ್ಲೆಯ ಅಲ್ಯೂಮಿನಿಯಂ ಉತ್ಪನ್ನಗಳ ಕಾರ್ಖಾನೆಯಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಇತರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ನಾಗ್ಪುರ ಜಿಲ್ಲೆಯ ಉಮ್ರೆಡ್ MIDC ಯಲ್ಲಿರುವ MMP ಅಲ್ಯೂಮಿನಿಯಂ ಇಂಡಸ್ಟ್ರೀಸ್ನಲ್ಲಿ ಶುಕ್ರವಾರ ಸಂಜೆ 7 ಗಂಟೆಗೆ ಸ್ಫೋಟ ಸಂಭವಿಸಿದೆ.ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ
ಅಹಮದಾಬಾದ್: ಬೆಂಕಿಯಿಂದ ಮಕ್ಕಳನ್ನು ಕಾಪಾಡಲು ಮಹಿಳೆಯೊಬ್ಬರು ಸಾಹಸಮಯವಾಗಿ ಅವರನ್ನು ಕಾಪಾಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆ ಏಪ್ರಿಲ್ 11ರಂದು ಅಹಮದಾಬಾದ್ನ ವಸತಿ ಸಂಕೀರ್ಣವೊಂದರಲ್ಲಿ ನಡೆದಿದೆ.ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಹುಮಹಡಿಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದಿಂದ ದಟ್ಟವಾದ ಹೊಗೆ ಹೊರಬರುತ್ತಿರುವುದನ್ನು ಕಾಣಬಹುದು. ಅದೇ ಮಹಡಿಯ ಬಾಲ್ಕನಿಯಲ್ಲಿ ಮಹಿಳೆಯೊಬ್ಬರು ಮೂವರು ಮಕ್ಕಳೊಂದಿಗೆ ಸಹಾಯಕ್ಕೆ ಬೇಡುತ್ತಿರುವುದನ್ನು ಕಾಣಬಹುದು.ಮಹಿಳೆ ತನ್ನ ಮಕ್ಕಳ ಕೈಯನ್ನು ಹಿಡಿದು ಕೆಲಗಿಳಿಸಿದ್ದಾರೆ. ಕೆಳಗಿನ ಮಹಡಿಯಲ್ಲಿದ್ದ ವ್ಯಕ್ತಿಗಳು ಮಕ್ಕಳ
ಬೆಂಗಳೂರು: ರಾಜಸ್ಥಾನ ರಾಯಲ್ಸ್ ತಂಡವು ಭಾನುವಾರ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.ಏಪ್ರಿಲ್ 13 ರ ಭಾನುವಾರದಂದು ನಡೆಯಲಿರುವ ಆರ್ಆರ್ vs ಆರ್ಸಿಬಿ ಐಪಿಎಲ್ 2025 ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗಲಿದೆ.ಐಪಿಎಲ್ 2025 ರಲ್ಲಿ ನಡೆದ ಐದು ಪಂದ್ಯಾಟಗಳಲ್ಲಿ ಎರಡರಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್ನಲ್ಲಿ 7ನೇ ಸ್ಥಾನದಲ್ಲಿದೆ. ಇನ್ನೂ ಆರ್ಸಿವಿ ನಡೆದ ಐದು ಪಂದ್ಯಾಟಗಲ್ಲಿ ಮೂರರಲ್ಲಿ ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆರ್ಸಿಬಿ ತವರಿನಲ್ಲಿ ನಡೆದ ಎರಡೂ
ನಟರಾದ ರಜನಿಕಾಂತ್ ಮತ್ತು ರಮ್ಯಾ ಕೃಷ್ಣನ್ ಅವರು ನೆಲ್ಸನ್ ದಿಲೀಪ್ಕುಮಾರ್ ಅವರ ಜೈಲರ್ 2 ಚಿತ್ರದ ಚಿತ್ರೀಕರಣದಲ್ಲಿ ಕೇರಳದಲ್ಲಿ ನಿರತರಾಗಿದ್ದಾರೆ. ಇನ್ನೂ ಸಿನಿಮಾದ ಶೂಟಿಂಗ್ನಲ್ಲಿ ನಟ ರಜನಿಕಾಂತ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ಘಟನೆ ನಡೆದಿದೆ.ರಜನಿಕಾಂತ್ಗೆ ಕೈ ಕುಲುಕಿ ಅಭಿಮಾನಿಗಳು ಖುಷಿಯಾದರು. ರಜನಿಕಾಂತ್ ಅವರು ಕೇರಳದಲ್ಲಿ ತಮ್ಮ ಮುಂಬರುವ ಚಿತ್ರ ಜೈಲರ್ 2 ಚಿತ್ರೀಕರಣದ ಸಮಯದಲ್ಲಿ ಅಭಿಮಾನಿಗಳನ್ನು ಸ್ವಾಗತಿಸಿದರು.ಜೈಲರ್ 2 ಶೂಟಿಂಗ್ ಸ್ಥಳದಿಂದ ರಜನಿಕಾಂತ್ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ
ನವದೆಹಲಿ: ನಗರದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂದು ಖಚಿತಪಡಿಸಿಕೊಳ್ಳುವುದು ತಮ್ಮ ಸರ್ಕಾರದ ಕರ್ತವ್ಯ ಎಂದು ಹೇಳಿರುವ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಇದೀಗ ಕೊಳಚೆ ಪ್ರದೇಶಗಳಲ್ಲಿ 100 ಅಟಲ್ ಕ್ಯಾಂಟೀನ್ಗಳನ್ನು ತೆರೆಯಲು ಚಿಂತಿಸಿದ್ದಾರೆ.ಹನುಮಾನ್ ಜಯಂತಿಯ ಸಂದರ್ಭದಲ್ಲಿ ತಮ್ಮ ಶಾಲಿಮಾರ್ಬಾಗ್ ಕ್ಷೇತ್ರದ ದೇವಾಲಯದಲ್ಲಿ ಹನುಮನಿಗೆ ನಮನ ಸಲ್ಲಿಸಿದ ಅವರು, ಒಂದು ಗಂಟೆಯಲ್ಲಿ 1200 "ರೊಟ್ಟಿಗಳು" (ಬ್ರೆಡ್) ತಯಾರಿಸಬಹುದಾದ ಸ್ವಯಂಚಾಲಿತ ಚಪಾತಿ ತಯಾರಕವನ್ನು ಉದ್ಘಾಟಿಸಿದರು."ದೆಹಲಿಯಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಚಿಂತನೆಯೊಂದಿಗೆ ನಾವು ಕೊಳಚೆ ಪ್ರದೇಶಗಳಲ್ಲಿ 100 ಅಟಲ್ ಕ್ಯಾಂಟೀನ್ಗಳನ್ನು ತೆರೆಯಲು ನಿರ್ಧರಿಸಿದ್ದೇವೆ. ಕೊಳಚೆ ಪ್ರದೇಶಗಳು
ಬೆಂಗಳೂರು: ಇಂದಿನ ಐಪಿಎಲ್ ಪಂದ್ಯಾಟದಲ್ಲಿ ಲಕ್ನೋವನ್ನು ಎದುರಿಸಲಿರುವ ಗುಜರಾತ್ ಟೈಟನ್ಸ್ಗೆ ದೊಡ್ಡ ಆಘಾತದೊಂದಿಗೆ ಕ್ರೀಡಾಂಗಣಕ್ಕಿಳಿದಿದೆ.ಗುಜರಾತ್ ಟೈಟಾನ್ಸ್ ಆಲ್ರೌಂಡರ್ ಗ್ಲೆನ್ ಫಿಲಿಪ್ಸ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ನ ಉಳಿದ ಪಂದ್ಯಗಳಿಂದ ಹೊರಗಿಟ್ಟಿರುವುದಾಗಿ ಶನಿವಾರ ಫ್ರಾಂಚೈಸಿ ತಿಳಿಸಿದೆ. ತವರಿಗೆ ಮರಳಿರುವ ಕಿವೀಸ್ ಆಲ್ರೌಂಡರ್ ಫಿಲಿಪ್ಸ್ ಏಪ್ರಿಲ್ 6 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪಂದ್ಯಾಟದ ವೇಳೆ ಗಾಯಗೊಂಡಿದ್ದರುಎಂದು ಟೈಟಾನ್ಸ್ ಹೇಳಿಕೆಯಲ್ಲಿ ತಿಳಿಸಿದೆ.ಫಿಲಿಪ್ಸ್ ಎಲ್ಲಾ ಋತುವಿನಲ್ಲಿ ಜಿಟಿಯ ಪ್ಲೇಯಿಂಗ್ XI ನ ಭಾಗವಾಗಿಲ್ಲದಿದ್ದರೂ, SRH ವಿರುದ್ಧದ ಪಂದ್ಯದಲ್ಲಿ ಅವರು ಬದಲಿ ಫೀಲ್ಡರ್ ಆಗಿ ಆಡಿದ್ದರು.
ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಹಿನ್ನಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಏನೇ ಆದರೂ ನಮ್ಮ ರಾಜ್ಯದಲ್ಲಿ ಅದನ್ನು ಜಾರಿಗೆ ತರಲ್ಲ, ಭಯ ಬೇಡ ಎಂದು ಮುಸ್ಲಿಮರಿಗೆ ಅಭಯ ನೀಡಿದ್ದಾರೆ. ಕೇಂದ್ರ ಸರ್ಕಾರ ಇತ್ತೀಚೆಗೆ ವಕ್ಫ್ ತಿದ್ದುಪಡಿ ಬಿಲ್ ಪಾಸ್ ಮಾಡಿತ್ತು. ಇದಕ್ಕೆ ರಾಷ್ಟ್ರಪತಿಗಳ ಅಂಕಿತವೂ ಸಿಕ್ಕಿದ್ದು ಕಾನೂನಾಗಿದೆ. ಆದರೆ ಈ ತಿದ್ದುಪಡಿ ಬಿಲ್ ಗೆ ಇಂಡಿಯಾ ಒಕ್ಕೂಟದ ನಾಯಕರಿಂದ ವಿರೋಧವಿದೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೂಡಾ ವಿರೋಧಿಸಿದ್ದಾರೆ.
ಬಿಜಾಪುರ (ಛತ್ತೀಸ್ಗಢ): ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ಕೊಲ್ನಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲ್ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆ ಶನಿವಾರ ತಿಳಿಸಿದೆ.ಸಿಆರ್ಪಿಎಫ್ ಪ್ರಕಾರ, ಶನಿವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಪ್ರಸ್ತುತ ಸ್ಥಳದಲ್ಲಿ ಸಿಆರ್ಪಿಎಫ್ನ 202 ಕೋಬ್ರಾ, 210 ಕೋಬ್ರಾ, ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆ ಮತ್ತು ಜಿಲ್ಲಾ ಮೀಸಲು ಪಡೆಗಳು ಕಾರ್ಯನಿರ್ವಹಿಸುತ್ತಿವೆ.ಅಪಘಾತದ ಸಮಯದಲ್ಲಿ ಅಧಿಕಾರಿಗಳಿಗೆ ಯಾವುದೇ ಗಾಯಗಳಾಗಿಲ್ಲ ಆದರೆ ಮಧ್ಯಂತರ ಗುಂಡಿನ ದಾಳಿ ಮುಂದುವರೆದಿದೆ.
ದಾವಣಗೆರೆ: ಜೇನುನೊಣದ ಹಿಂಡಿನಿಂದ ಕಡಿತಕ್ಕೊಳಗಾದ 43ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಮೃತರನ್ನು ಜಗಳೂರು ತಾಲ್ಲೂಕಿನ ನಿಬಗೂರು ಗ್ರಾಮದ ನಿವಾಸಿ ಜ್ಯೋತಿ ಎಂ.ಕೆ ಎಂದು ಗುರುತಿಸಲಾಗಿದೆ. ಅವರು ಚಿತ್ರದುರ್ಗ ತಾಲ್ಲೂಕಿನ ಡಿ. ಮೆದಿಕೆರೆಪುರ ಗ್ರಾಮದ ಜಾನ್ ಮೈನ್ಸ್ನಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು.ಮೂಲಗಳ ಪ್ರಕಾರ, ಜ್ಯೋತಿ ಗುರುವಾರ ನಿಬಗೂರಿನಿಂದ ಬ್ರಹ್ಮಸಾಗರ ಸರೋವರದ ಬಳಿಯ ಪಂಪ್
ಬೆಂಗಳೂರು: 1 ನೇ ತರಗತಿಗೆ ಸೇರಲು ಜೂನ್ 1 ಕ್ಕೆ 6 ವರ್ಷ ಕಡ್ಡಾಯ ಎಂಬ ನಿಯಮ ಸಡಿಲಿಕೆಗೆ ರಾಜ್ಯ ಸರ್ಕಾರ ಬಿಲ್ ಕುಲ್ ಒಪ್ಪುತ್ತಿಲ್ಲ. ಆದರೆ ಇದರ ಪರಿಣಾಮ ಎದುರಿಸುತ್ತಿರುವವರು ಮಾತ್ರ ಮುಗ್ದ ಮಕ್ಕಳು. ಈ ಕಾರಣಕ್ಕೆ ಈಗ ಪೋಷಕರು ಒಂದು ವಿಡಿಯೋ ಅಭಿಯಾನದ ಮೂಲಕ ಸರ್ಕಾರದ ಮತ್ತು ಶಿಕ್ಷಣ ಇಲಾಖೆಯ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಕಡ್ಡಾಯ ನಿಯಮ ಸಡಿಲಿಕೆ ಮಾಡದೇ ಇರುವುದರಿಂದ ಏನೆಲ್ಲಾ ಸಮಸ್ಯೆಯಾಗುತ್ತದೆ ಎಂಬುದನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ. 1 ನೇ ತರಗತಿಗೆ 6 ವರ್ಷ ಕಡ್ಡಾಯವಾಗಿರಬೇಕು ಎನ್ನುವುದು ಕೇಂದ್ರದ ನಿರ್ಧಾರ.
ಹೈದರಾಬಾದ್: ಒಂದು ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟಿದ್ದ ಪದ್ಮಶ್ರೀ ಪುರಸ್ಕೃತ ಹಾಗೂ ಟ್ರೀ ಮ್ಯಾನ್ ಎಂದೇ ಖ್ಯಾತರಾಗಿದ್ದ ತೆಲಂಗಾಣದ ಕಮ್ಮಂ ಜಿಲ್ಲೆಯ ದಾರಿಪಳ್ಳಿ ರಾಮಯ್ಯ (ವನಜೀವಿ ರಾಮಯ್ಯ) ಅವರು ನಿಧನರಾದರು.87 ವರ್ಷ ವಯಸ್ಸಿನ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಶುಕ್ರವಾರ ರಾತ್ರಿ ಕಮ್ಮಂನ ದಾರಿಪಳ್ಳಿಯ ತಮ್ಮ ಮನೆಯಲ್ಲಿ ಇಹಲೋಕ ತ್ಯಜಿಸಿದರು. ಕೋಟ್ಯಂತರ ಸಸಿಗಳನ್ನು ನೆಟ್ಟಿದ್ದ ಅವರ ಸಾಮಾಜಿಕ ಸೇವೆಯನ್ನು ಮೆಚ್ಚಿ 2017 ರಲ್ಲಿ ಪದ್ಮಶ್ರೀ ಪುರಸ್ಕಾರವನ್ನು ಅವರಿಗೆ ನೀಡಲಾಗಿತ್ತು.ವನಜೀವಿ ರಾಮಯ್ಯ ಕಳೆದ 37 ವರ್ಷಗಳಿಂದ ತೆಲಂಗಾಣ ಸೇರಿದಂತೆ ಪ್ರತಿದಿನ ಹಲವೆಡೆ ಸಸಿಗಳನ್ನು ನೆಡುತ್ತಿದ್ದರು. ಆ ಮೂಲಕ ಪರಿಸರ ಉಳಿಸಿ ಎಂದು ಸಂದೇಶ ಸಾರುತ್ತಿದ್ದರು.
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಲವು ಉತ್ಪನ್ನಗಳಿಗೆ ರಾಯಭಾರಿಯಾಗುವ ಮೂಲಕ ಕೋಟ್ಯಾಂತರ ರೂಪಾಯಿ ಸಂಪಾದಿಸುತ್ತಾರೆ. ಆದರೆ ಇದೀಗ ಪ್ಯೂಮಾ ಸಂಸ್ಥೆ 300 ಕೋಟಿ ರೂ. ಕೊಡುತ್ತೇವೆ ಎಂದರೂ ಕೊಹ್ಲಿ ರಿಜೆಕ್ಟ್ ಮಾಡಿದ್ದಾರಂತೆ. ಅದಕ್ಕೆ ಕಾರಣವೂ ಇದೆ. ವಿರಾಟ್ ಕೊಹ್ಲಿ ಈಗಗಲೇ ಪ್ಯೂಮಾ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. 2017 ರಲ್ಲಿ ಬರೋಬ್ಬರಿ 110 ಕೋಟಿ ರೂ.ಗಳಿಗೆ ಕೊಹ್ಲಿ ಪ್ಯೂಮಾ ಉತ್ಪನ್ನದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು. ಇದೀಗ ಆ ಒಪ್ಪಂದ ಕೊನೆಯಾಗುತ್ತದೆ.
ನವದೆಹಲಿ: ದೇಶದಾದ್ಯಂತ ಯುಪಿಐ ಪಾವತಿ ಸರ್ವರ್ ಡೌನ್ ಆಗಿದ್ದು, ಮಧ್ಯಾಹ್ನ ಊಟಕ್ಕೆ ಹೋದವರು ಪಾವತಿ ಮಾಡಲಾಗದೇ ಪರದಾಡುತ್ತಿದ್ದಾರೆ. ಫೋನ್ ಪೇ, ಗೂಗಲ್ ಪೇ ಸೇರಿದಂತೆ ಎಲ್ಲಾ ಆನ್ ಲೈನ್ ಪಾವತಿ ಆಪ್ ಗಳೂ ಡೌನ್ ಆಗಿವೆ. ಇತ್ತೀಚೆಗಿನ ದಿನಗಳಲ್ಲಿ ಇದು ಎರಡನೇ ಬಾರಿ ಈ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ದೇಶದಾದ್ಯಂತ ಆನ್ ಲೈನ್ ವ್ಯವಹಾರಗಳು ಸ್ಥಗಿತಗೊಂಡಿವೆ. ಪಾವತಿ ಮಾಡಲಾಗದೇ ಬಳಕೆದಾರರು ಪರದಾಡುವಂತಾಗಿದೆ. ಕೆಲವೇ ಗಂಟೆಗಳ ಹಿಂದಿನಿಂದ ಈ ಸಮಸ್ಯೆ ಕಂಡುಬರುತ್ತಿದೆ. ಈಗೀಗ ಎಲ್ಲರೂ ಯುಪಿಐ ಪಾವತಿಗೆ ಅವಲಂಬಿತರಾಗಿದ್ದಾರೆ. ಹೊರಗೆ ಹೋಗುವಾಗ ಪರ್ಸ್ ತೆಗೆದುಕೊಂಡು ಹೋಗುವ ಅಭ್ಯಾಸವನ್ನೇ ಬಿಟ್ಟಿದ್ದಾರೆ.
ಚೆನ್ನೈ: ಕೆಲವು ಸಮಯದ ಹಿಂದೆ ಡಿಎಂಕೆ ನಾಯಕ ಉದಯನಿಧಿ ಮಾರನ್ ಸನಾತನ ಧರ್ಮವನ್ನು ಡೆಂಗ್ಯೂಗೆ ಹೋಲಿಸಿ ಟೀಕೆಗೊಳಗಾಗಿದ್ದರು. ಇದೀಗ ಅವರದೇ ಪಕ್ಷದ ಸಚಿವ ಕೆ ಪೊನ್ಮುಡಿ ಹಿಂದೂಗಳ ಪವಿತ್ರ ತಿಲಕವನ್ನು ಲೈಂಗಿಕ ಭಂಗಿಗೆ ಹೋಲಿಸಿ ಭಾರೀ ಆಕ್ರೋಶಕ್ಕೊಳಗಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಕೆ ಪೊನ್ಮುಡಿ ಈ ವಿವಾದ ಮಾಡಿಕೊಂಡಿದ್ದಾರೆ. ಶೈವ ಮತ್ತು ವೈಷ್ಣವ ಪಂತಗಳು ಹಾಗೂ ಅವುಗಳ ಧಾರ್ಮಿಕ ಗುರುತನ್ನು ಲೈಂಗಿಕ ಭಂಗಿಗಳಿಗೆ ಹೋಲಿಸಿ ಪೊನ್ನುಡಿ ವಿವಾದಕ್ಕೀಡಾಗಿದ್ದಾರೆ. ಅವರ ಹೇಳಿಕೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ.
ಕೋಲ್ಕತ್ತಾ: ಇದು ಬಾಂಗ್ಲಾದೇಶವಲ್ಲ, ನಮ್ಮ ದೇಶದ ಪಶ್ಚಿಮ ಬಂಗಾಲದಲ್ಲೇ ನಡೆದ ಘಟನೆ. ವಕ್ಫ್ ವಿರುದ್ಧ ಪಶ್ಚಿಮ ಬಂಗಾಲದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇದೀಗ ಶಿವತಿಲಕವಿರುವ ವಾಹನವೊಂದನ್ನು ಪ್ರತಿಭಟನಾಕಾರರು ಜಖಂಗೊಳಿಸುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಶ್ಚಿಮ ಬಂಗಾಲದಲ್ಲಿ ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ಪ್ರತಿಭಟನೆ ಜೋರಾಗಿದ್ದು, ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿ ಪ್ರತಿಭಟನಾಕಾರರು ಹಿಂಸಾಚಾರ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನೂರಾರು ಮಂದಿಯನ್ನು ಬಂಧಿಸಲಾಗಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.
ಬೆಂಗಳೂರು: ಹಿಂದಿನ ಕಾಲದಲ್ಲಿ ವೀಳ್ಯದೆಲೆ ಸೇವಿಸುವುದು ಒಂದು ಪದ್ಧತಿಯಾಗಿತ್ತು. ಆದರೆ ಈಗ ಅದು ಕಡಿಮೆಯಾಗುತ್ತಿದೆ. ಆದರೆ ಆಯುರ್ವೇದದ ಪ್ರಕಾರ ಈ ಒಂದು ಆರೋಗ್ಯ ಸಮಸ್ಯೆಯಿದ್ದಲ್ಲಿ ಪ್ರತಿನಿತ್ಯ ವೀಳ್ಯದೆಲೆ ಸೇವನೆ ಮಾಡುವುದು ಉತ್ತಮ. ವೀಳ್ಯದೆಲೆಯನ್ನು ಸೇವಿಸುವಾಗ ಹೊಗೆ ಸೊಪ್ಪು ಸಹಿತ ಸೇವಿಸಬೇಡಿ. ಯಾಕೆಂದರೆ ಹೊಗೆ ಸೊಪ್ಪು ಖಂಡಿತಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಅಡಿಕೆ, ಸುಣ್ಣದ ಜೊತೆ ಸೇವನೆ ಮಾಡುವುದು ಸಮಸ್ಯೆಯಲ್ಲ. ಇದಲ್ಲದೆ ಕೇವಲ ವೀಳ್ಯದೆಲೆ ಮಾತ್ರ ಜಗಿದರೆ ಇನ್ನೂ ಉತ್ತಮ. ಯಾಕೆಂದರೆ ವೀಳ್ಯದೆಲೆಯಲ್ಲಿ ಸಾಕಷ್ಟು ಆರೋಗ್ಯಕರ ಅಂಶವಿದೆ. ವೀಳ್ಯದೆಲೆಯಲ್ಲಿ ವಾತ ಮತ್ತು ಪಿತ್ತ, ಕಫವನ್ನು ಸಮಸ್ಥಿತಿಯಲ್ಲಿಡುವ ಗುಣವಿದೆ.
ಬೆಂಗಳೂರು: ಜಯಪ್ರಕಾಶ್ ಹೆಗ್ಡೆ ಆಯೋಗದ ಜಾತಿಗಣತಿ ವರದಿ ವಿಚಾರಗಳು ಬಹಿರಂಗವಾಗಿದ್ದು ಈ ವರದಿಯಲ್ಲಿ ಒಬಿಸಿಗೆ ಶೇ.51 ರಷ್ಟು ಮೀಸಲಾತಿ ನೀಡಬೇಕು ಎಂಬ ಸಲಹೆಯಿದೆ ಎಂದು ತಿಳಿದುಬಂದಿದೆ. ಆದರೆ ಇದಕ್ಕೆ ಈಗ ತೀವ್ರ ವಿರೋಧ ವ್ಯಕ್ತವಾಗಿದೆ. ಒಬಿಸಿ ವರ್ಗಕ್ಕೆ ಈಗ ಶೇ.32 ರಷ್ಟು ಮೀಸಲಾತಿಯಿದೆ. ಇನ್ನೀಗ ಶೇ.51 ಕ್ಕೆ ಹೆಚ್ಚಳ ಮಾಡಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಅದೇ ರೀತಿ ಹಾಲಿ ಇರುವ ಪ್ರವರ್ಗ 1 ರ ಬದಲಿಗೆ ಪ್ರವರ್ಗ ಎ ರಚನೆ ಮಾಡಲು ಶಿಫಾರಸ್ಸು ಮಾಡಲಾಗಿದೆ.
ಬೆಂಗಳೂರು: ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಆದರೆ ಇಂದಂತೂ ಚಿನ್ನದ ಬೆಲೆ ಮಿತಿ ಮೀರುವಷ್ಟು ಏರಿಕೆಯಾಗಿದೆ. ಸದ್ಯಕ್ಕಂತೂ ಚಿನ್ನ ಕೊಳ್ಳುವ ಕನಸು ನನಸು ಮಾಡುವುದು ಅಸಾಧ್ಯ ಎನ್ನುವಂತಿದೆ. ಇಂದು ಪರಿಶುದ್ಧ ಚಿನ್ನದ ದರ ಎಷ್ಟು ಏರಿಕೆಯಾಗಿದೆ ಎಂಬ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆ99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು.ಇಂದು ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಕಳೆದ ಎರಡುದಿನಗಳಿಂದಲೂ ಚಿನ್ನದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇತ್ತು. ಆದರೆ ಇಂದಂತೂ ಗಗನ ಕುಸುಮವಾಗಿದೆ. ಎಲ್ಲಾ ದಾಖಲೆಗಳನ್ನೂ ಮೀರಿ ಏರಿಕೆಯಾಗಿದೆ. ನಿನ್ನೆ ಪರಿಶುದ್ಧ ಚಿನ್ನದ ಬೆಲೆ 92,795 ರೂ.ಗಳಾಗಿತ್ತು.
ನವದೆಹಲಿ: ರೈಲಿನ ಇಲೆಕ್ಟ್ರಿಕ್ ಟ್ರ್ಯಾಕ್ ಬಳಿ ಓಡಾಡದಂತೆ ಸಾಮಾನ್ಯವಾಗಿ ಸಿಬ್ಬಂದಿಗಳು ಸೂಚನೆ ನೀಡುತ್ತಾರೆ. ಆದರೆ ಈಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಇಲೆಕ್ಟ್ರಿಕ್ ಟ್ರ್ಯಾಕ್ ಬಳಿ ನಿಂತು ಕ್ಲೀನಿಂಗ್ ಮಾಡುವಾಗಲೇ ಸುಟ್ಟು ಭಸ್ಮವಾದ ಭೀಕರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿದೇಶವೊಂದರ ದೃಶ್ಯ ಇದಾಗಿದೆ. ಸ್ವಚ್ಛತಾ ಸಿಬ್ಬಂದಿ ಆಗಷ್ಟೇ ಬಂದು ನಿಂತ ರೈಲಿನ ಮುಂಭಾಗವನ್ನು ಉದ್ದ ಕೋಲು ಹಿಡಿದು ಸ್ವಚ್ಛತೆ ಮಾಡುತ್ತಿರುತ್ತಾನೆ. ಇದು ಇಲೆಕ್ಟ್ರಿಕ್ ಪವರ್ ಇರುವ ಹಳಿಯಾಗಿರುತ್ತದೆ. ಸ್ವಚ್ಛತೆ ಮಾಡುತ್ತಾ ತನಗೇ ಅರಿವಿಲ್ಲದಂತೆ ಆತ ಅಚಾನಕ್ ಆಗಿ ಹಳಿಗಳ ಸಂಪರ್ಕಕ್ಕೆ ಬರುತ್ತಾನೆ.
ನವದೆಹಲಿ: 2008 ರ ಮುಂಬೈ ದಾಳಿಯ ಪ್ರಮುಖ ರೂವಾರಿ ಉಗ್ರ ತಹವ್ವೂರ್ ರಾಣಾನನ್ನು ಈಗ ಎನ್ಐಎ ತೀವ್ರ ವಿಚಾರಣೆ ನಡೆಸುತ್ತಿದೆ. ಈತನನ್ನು ಇರಿಸಿರುವ ಬಂಧನದ ಕೊಠಡಿಗೆ ಕೇವಲ 12 ಜನರಿಗೆ ಮಾತ್ರ ಭೇಟಿಗೆ ಅವಕಾಶವಿದೆ. ಹೇಗಿದೆ ಆತನ ಕೊಠಡಿ ಇಲ್ಲಿದೆ ವಿವರ. ಅಮೆರಿಕಾದಿಂದ ಗಡೀಪಾರಾದ ಉಗ್ರ ರಾಣಾನನ್ನು ಎನ್ಐಎ ಅಧಿಕಾರಿಗಳು ಮೊನ್ನೆಯಷ್ಟೇ ಭಾರತಕ್ಕೆ ಕರೆತಂದು ಕೋರ್ಟ್ ಗೆ ಹಾಜರುಪಡಿಸಿದ್ದರು. ಇದೀಗ ಎನ್ ಐಎ ಕಸ್ಟಡಿಯಲ್ಲಿರುವ ಆತನನ್ನು ಮುಂಬೈ ದಾಳಿ ಕುರಿತಾಗಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಮುಂಬೈ: ಚಲಿಸುತ್ತಿದ್ದ ರೈಲಿನಲ್ಲಿ ಯುವತಿ ಜೊತೆ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ ಪೊಲೀಸ್ ಅಧಿಕಾರಿಯ ವಿಡಿಯೋ ವೈರಲ್ ಆಗಿದ್ದು, ಈತನ ಪರಿಸ್ಥಿತಿ ಈಗ ಏನಾಗಿದೆ ನೋಡಿ. ಮುಂಬೈ ಸಿಟಿ ಲೋಕಲ್ ಟ್ರೈನ್ ನಲ್ಲಿ ಯುವತಿಯೊಬ್ಬಳು ಬಿಂದಾಸ್ ಆಗಿ ಪೊಲೀಸ್ ಅಧಿಕಾರಿಯ ಎದುರೇ ಡ್ಯಾನ್ಸ್ ಮಾಡುತ್ತಿದ್ದಳು. ಅವಳನ್ನೇ ಪೊಲೀಸ್ ಅಧಿಕಾರಿ ಗಂಭಿರವಾಗಿ ನಿಂತು ನೋಡುತ್ತಿದ್ದರು. ಪೊಲೀಸ್ ಅಧಿಕಾರಿ ತನ್ನನ್ನು ನೋಡುತ್ತಿದ್ದುದನ್ನು ನೋಡಿ ತನ್ನ ಜೊತೆ ಸೇರಿಕೊಳ್ಳುವಂತೆ ಯುವತಿ ಕೇಳಿಕೊಳ್ಳುತ್ತಾಳೆ. ಮೊದಲು ಗಂಭಿರವಾಗಿರುವ ಪೊಲೀಸ್ ಅಧಿಕಾರಿ ಬಳಿಕ ಮೈ ಚಳಿ ಬಿಟ್ಟು ಸ್ಟೆಪ್ಸ್ ಹಾಕುತ್ತಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಸ್ಥಳೀಯ ಪಕ್ಷ ಎಐಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ. ಇದರ ಹಿಂದೆ ಬಿಜೆಪಿ ಹೈಕಮಾಂಡ್ ಭಾರೀ ಲೆಕ್ಕಾಚಾರ ಹೊಂದಿದೆ. ಅಣ್ಣಾಮಲೈ ನಾಯಕತ್ವದಲ್ಲಿ ಸಿಗದ ಗೆಲುವುತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಧಿಕಾರ ಸ್ವೀಕರಿಸಿದಾಗ ಬಿಜೆಪಿಗೆ ಭಾರೀ ನಿರೀಕ್ಷೆಯಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಸ್ವತಃ ಅಣ್ಣಾಮಲೈ ಸೋತರು. ಇದರಿಂದಾಗಿ ಏಕಾಂಗಿಯಾಗಿ ಸ್ಪರ್ಧಿಸಿ ಗೆಲ್ಲುವುದು ಕಷ್ಟ ಎಂದು ಬಿಜೆಪಿ ಅರ್ಥ ಮಾಡಿಕೊಂಡಿದೆ. ತಮಿಳುನಾಡಿನಲ್ಲಿ ಸ್ಥಳೀಯ ಪಕ್ಷದ ನೆರವು ಬೇಕೇ ಬೇಕುತಮಿಳುನಾಡು ರಾಜಕೀಯವೇ ಹಾಗೆ. ಹಿಂದಿನಿಂದಲೂ ಇಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಸ್ಥಳೀಯ ಪಕ್ಷಗಳೇ ಮೇಲುಗೈ ಸಾಧಿಸುತ್ತಿವೆ.
ಚೆನ್ನೈ: ಐಪಿಎಲ್ 2025 ರಲ್ಲಿ ಅಜಿಂಕ್ಯಾ ರೆಹಾನೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಆಯ್ಕೆಯಾದಾಗ ಅನೇಕರು ಹುಬ್ಬೇರಿಸಿದ್ದರು. ಬೇರೆ ಯಾರೂ ಸಿಗಲಿಲ್ವಾ ಎಂದು ಲೇವಡಿ ಮಾಡಿದ್ದರು. ಆದರೆ ಈಗ ಕೆಕೆಆರ್ ತಂಡವನ್ನು ಯಶಸ್ವಿಯಾಗಿ ರೆಹಾನೆ ಮುನ್ನಡೆಸುತ್ತಿರುವ ರೀತಿಗೆ ಅಭಿಮಾನಿಗಳು ಮನಸೋತಿದ್ದಾರೆ. ಮೈದಾನದಲ್ಲಿ ಹೈಪ್, ಓವರ್ ಆಕ್ಟಿಂಗ್, ಡ್ರಾಮಾ ಇದ್ದರೇ ನಾಯಕ ಎನ್ನುವ ಮನಸ್ಥಿತಿಯನ್ನು ತೊಡೆದು ಅಜಿಂಕ್ಯಾ ರೆಹಾನೆ ಕೂಲ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೆಕೆಆರ್ ತಂಡ ಆಡಿದ ಆರು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿ ಅಂಕ ಪಟ್ಟಿಯಲ್ಲಿ ಈಗ ಮೂರನೇ ಸ್ಥಾನದಲ್ಲಿದೆ.