ಬೆಂಗಳೂರು: ನಾನು ರಾಜಕೀಯವಾಗಿ ಬೆಳೆಯಲು ಡಿಕೆ ಶಿವಕುಮಾರ್ ಅವರು ಕಾರಣ ರಾಗಿದ್ದಾರೆ. ನಾನು ಮೊದಲಿನಿಂದಲೂ ಹೇಳ್ತಾ ಇದ್ದೀನಿ. ಡಿಕೆಶಿ ಸಾಹೇಬ್ರು ನನಗೆ ಟಿಕೆಟ್ ಕೊಟ್ಟಿದ್ದಾರೆ. ಡಿಕೆಶಿ ಅವರು ಅಗಬೇಕೆಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹೇಳಿದರು.ಈ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ರಾಜಕೀಯವಾಗಿಯೂ ನಿನ್ನೆ ಸಭೆಯಲ್ಲಿ ಚರ್ಚೆ ಆಗಿದೆ. ಸಂದರ್ಭ ಬಂದರೆ ದೆಹಲಿಗೆ ಹೋಗ್ತೀವಿ ಎಂದು ತಿಳಿಸಿದ್ದಾರೆ. ಇನ್ನೂ ಹುಟ್ಟುಹಬ್ಬ ಹಿನ್ನೆಲೆ ಎಲ್ಲಾ ಶಾಸಕರು ಸೇರಿದ್ದೇವೆ. ಸಹಜವಾಗಿ ರಾಜಕೀಯ ಬಗ್ಗೆ ಚರ್ಚೆ ಆಗಿದೆ. ಬಜೆಟ್, ರಾಜಕೀಯ
ಕಾರವಾರ: ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಂಬಂಧ ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ವಿರುದ್ಧ ಕೇಸ್ ದಾಖಲಾಗಿದೆ.ಈ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ತಾಲೂಕಿನ ಮೋಳ್ಕೋಡಿನ ಶ್ರೀರಾಮ ಮಂದಿರ ಪ್ರತಿಷ್ಟಾಪನಾ ಮಹೋತ್ಸವದ ಕಾರ್ಯಕ್ರಮದಲ್ಲಿ ಸೀತಾರಾಮ ಕಲ್ಯಾಣೋತ್ಸವ ಸಭಾ ಕಾರ್ಯಕ್ರಮದಲ್ಲಿ ಬ್ರಾಹ್ಮಣರನ್ನ ತುಚ್ಛವಾಗಿ ಅವಹೇಳನ ಮಾಡಿದ್ದರು.
ಬೆಂಗಳೂರು: ನಾವು ಜೆಡಿಎಸ್ ಎನ್ಡಿಎಗೆ ಕೊಡುವ ಶಕ್ತಿಯನ್ನು ಗುರುತಿಸಿ, ಬಳಸಿಕೊಳ್ಳುವ ಜಾಣ್ಮೆ, ಪ್ರಬುದ್ಧತೆ ಮೋದಿ, ಶಾ ಅವರಿಗಿದೆ. ಎನ್ಡಿಎ ಮತ್ತಷ್ಟು ಗಟ್ಟಿಗೊಳಿಸುವ ವಿಶ್ವಾಸವೂ ಇದೆ ಎಂದು ಜೆಡಿಎಸ್ ಹಿರಿಯ ನಾಯಕ ದೇವೇಗೌಡ ಹೇಳಿದರು. ಜೆಡಿಎಸ್ ಬೆಳ್ಳಿಹಬ್ಬದ ಅಂಗವಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜನತಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.93 ವರ್ಷ ವಯಸ್ಸಾಗಿರುವ ನನಗೆ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗುವ ಇಚ್ಛೆ ಇಲ್ಲ. ಈ ಶರೀರದಿಂದ ಆತ್ಮ ಹೊರ
ನಟ ವಿಜಯ್ ದಳಪತಿ ಅವರು ರಾಜಕೀಯ ಜೀವನದಲ್ಲಿ ಬ್ಯುಸಿಯಾಗುತ್ತಿದ್ದ ಇತ್ತ ಕೌಟುಂಬಿಕ ಬದುಕಿನಲ್ಲಿ ಮತ್ತೇ ಅಪಸ್ವರ ಕೇಳಿಬರುತ್ತಿದೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರ ಪತ್ನಿ ಸಂಗೀತಾ ಸೋರ್ನಲಿಂಗಂ ತಮ್ಮ 27 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸುವಂತೆ ಕೋರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆಗಸ್ಟ್ 1999 ರಲ್ಲಿ ವಿವಾಹವಾದ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಶಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.ಅರ್ಜಿಯ ಪ್ರಕಾರ, 48 ವರ್ಷದ ಸಂಗೀತಾ ಅವರು, 51 ವರ್ಷದ ವಿಜಯ್ ಅವರು ಮಹಿಳಾ ನಟಿಯೊಂದಿಗೆ ವಿವಾಹೇತರ
ಮಂಗಳೂರು: ತುಳುನಾಡಿನ ಬಹು ನಿರೀಕ್ಷಿತ ತುಳು ಚಲನಚಿತ್ರ ಬಿರ್ದುದಾ ಕಂಬಳ ಶುಕ್ರವಾರದಂದು ಭಾರತ್ ಚಿತ್ರಮಂದಿರದಲ್ಲಿ ರೋಮಾಂಚಕವಾಗಿ ಬಿಡುಗಡೆ ಸಮಾರಂಭವನ್ನು ಆಚರಿಸಿತು.ತುಳುನಾಡಿನಾದ್ಯಂತದ ಚಲನಚಿತ್ರ ಪ್ರೇಮಿಗಳು, ಸಾಂಸ್ಕೃತಿಕ ದಿಗ್ಗಜರು, ಕಲಾವಿದರು ಮತ್ತು ಚಿತ್ರರಂಗದ ಗಣ್ಯರನ್ನು ಈ ಸಿನಿಮಾ ಸೆಳೆಯಿತು. ಕರಾವಳಿ ಸೊಗಡಿನ ಈ ಸಿನಿಮಾ ಉತ್ತಮ ಪ್ರದರ್ಶನ ಕಾಡುವ ಎಲ್ಲ ಲಕ್ಷಣಗಳಿದೆ. ಈ ಸಿನಿಮಾವನ್ನು ಕನ್ನಡದ ಹಿರಿಯ ನಿರ್ದೇಶಕ ಡಾ.ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡಿದ್ದು, ಅರುಣ್
ಬೆಂಗಳೂರು: ಸಿಎಂ ಕುರ್ಚಿಗೆ ಸಿದ್ದರಾಮಯ್ಯನವರು ಫೆವಿಕಲ್ ಹಾಕಿ ಅಂಟಿಸಿಕೊಂಡಿದ್ದಾರೆ. ಅವರಿಗೆ ಈ ವಿದ್ಯೆ ಚೆನ್ನಾಗಿ ಗೊತ್ತಿದೆ. ಇನ್ನೂ ಸಿದ್ದರಾಮಯ್ಯನವರು 5 ವರ್ಷ ಕುರ್ಚಿ ಬಿಡುವುದಿಲ್ಲ, ಅದಂತೂ ಪಕ್ಕಾ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು. ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕುರ್ಚಿಗೆ ಫೆವಿಕಲ್ ಹಾಕಿ ಅಂಟಿಸಿಕೊಳ್ಳುವ ವಿದ್ಯೆ ಸಿದ್ದರಾಮಯ್ಯ ಗೊತ್ತಿದೆ. ಡಿ.ಕೆ. ಶಿವಕುಮಾರ್ಗೆ ಇದೆಲ್ಲವೂ ಗೊತ್ತಿಲ್ಲ. ಹೊಡೆದು ಕಿತ್ತುಕೊಳ್ಳುವ ಕಾಲ ಇದಲ್ಲ, ತಲೆ ಬಳಸಬೇಕಾದ ಕಾಲವಿದು ಎಂದು ಹೇಳಿದರು.
ಮಂಗಳೂರು: ಕಳೆದೊಂದು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಾದಾದ್ಯಂತ ಜನವಸತಿ ಪ್ರದೇಶಗಳಲ್ಲಿ ಚಿರತೆಗಳು ಓಡಾಟ ನಡೆಸುತ್ತಿರುವುದು ಸೆರೆಯಾಗಿದೆ. ಹಲವೆಡೆ ದನ ಹಾಗೂ ನಾಯಿ ಹಾಗೂ ಕೋಳಿಗಳ ಮೇಲೆ ದಾಳಿ ನಡೆಸಿರುವುದು ವರದಿಯಾಗಿದೆ. ಪದೇ ಪದೇ ಕಾಣಿಸಿಕೊಳ್ಳುತ್ತಿರುವುದು ವ್ಯಾಪಕ ಭೀತಿಯನ್ನುಂಟು ಮಾಡಿದೆ. ಮಂಗಳೂರು, ಸುಳ್ಯ, ಮೂಡುಬಿದಿರೆ, ಬೆಳ್ತಂಗಡಿ, ಬಂಟ್ವಾಳ, ಉಳ್ಳಾಲ, ಕುಂದಾಪುರ, ಕಾರ್ಕಳ, ಬೈಂದೂರುಗಳಲ್ಲಿ ಚಿರತೆಗಳ ಓಡಾಟ ವರದಿಯಾಗಿದೆ. ಕಳೆದ ವಾರವಷ್ಟೇ ಮಂಗಳೂರು ನಗರದ ಶಕ್ತಿನಗರ ಮತ್ತು ಮರೋಳಿ ಭಾಗದಲ್ಲಿ ಕಂಡುಬಂದ ದೃಶ್ಯಗಳು ನಿವಾಸಿಗಳು ಮತ್ತು
ಕೊಚ್ಚಿ: ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಮತ್ತು ಇತರ ಆರೋಪಿಗಳನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ. ಕ್ಷುಲ್ಲಕ ಆಧಾರದ ಮೇಲೆ ಪ್ರಾಸಿಕ್ಯೂಷನ್ ಸಲ್ಲಿಸಿದ ನಿರ್ಣಾಯಕ ಡಿಜಿಟಲ್ ಸಾಕ್ಷ್ಯವನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ ಎಂಬುದು ಸರ್ಕಾರದ ಪ್ರಮುಖ ವಾದವಾಗಿದೆ.ನಿರ್ದೇಶಕ ಬಾಲಚಂದ್ರ ಕುಮಾರ್ ಬಹಿರಂಗಪಡಿಸಿರುವ ದೃಶ್ಯಾವಳಿಗಳು ಹಾಗೂ ದಿಲೀಪ್ ಸಹೋದರ ಅನೂಪ್ ಅವರ ಫೋನ್ ನಿಂದ ಸಿಕ್ಕಿರುವ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿಲ್ಲ.
ವಯನಾಡ್: ಮೂರು ದಿನಗಳ ಭೇಟಿಗಾಗಿ ಕೇರಳಕ್ಕೆ ಬಂದಿರುವ ವಯನಾಡ್ ಲೋಕಸಭಾ ಸಂಸದ ವಾದ್ರಾ ಅವರು "ದಿ ಕೇರಳ ಸ್ಟೋರಿ 2-ಗೋಸ್ ಬಿಯಾಂಡ್" ಚಿತ್ರದ ಬಿಡುಗಡೆಗೆ ನ್ಯಾಯಾಲಯದ ತಡೆಯಾಜ್ಞೆ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು."ಮೊದಲನೆಯದಾಗಿ, ಜನರು ತಮ್ಮನ್ನು ತಾವು ವ್ಯಕ್ತಪಡಿಸಲು ಅವಕಾಶ ನೀಡಬೇಕು ಎಂದು ನಾನು ಭಾವಿಸುತ್ತೇನೆ, ಆದರೆ ಅದೇ ಸಮಯದಲ್ಲಿ, ಈ ರೀತಿಯ ವಾಕ್ಚಾತುರ್ಯ, ಕೋಪ ಮತ್ತು ಪರಸ್ಪರ ದ್ವೇಷದಿಂದ ತುಂಬುತ್ತಿರುವ ವಾತಾವರಣದಲ್ಲಿ, ಸಂತೋಷ ಮತ್ತು ಜನರಲ್ಲಿ ಶಾಂತಿ, ಪ್ರೀತಿ ಮತ್ತು ಕಲ್ಯಾಣವನ್ನು ಉತ್ತೇಜಿಸುವ ವಿಷಯಗಳನ್ನು ಸೃಜನಶೀಲವಾಗಿ ಮಾಡುವುದು ಉತ್ತಮ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.
ಬೆಂಗಳೂರು: ನಗರದಲ್ಲಿ ನಡೆಯುವ 11ದಿನಗಳ ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಏಪ್ರಿಲ್ 1 ರಂದು ಕರಗ ಉತ್ಸವ ನಡೆಸಲು ಮುಜರಾಯಿ ಇಲಾಖೆಯು, ಧರ್ಮರಾಯ ಸ್ವಾಮಿ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ನಿರ್ಧರ ಮಾಡಿದೆ.ಈ ಬಾರಿಯ ಬೆಂಗಳೂರು ಕರಗ ಏಪ್ರಿಲ್ 1 ರಂದು ನಡೆಯಲಿದೆ. 11 ದಿನಗಳ ಕಾಲ ನಡೆಯುವ ಕರಗ ಅದ್ಧೂರಿ ಉತ್ಸವಕ್ಕೆ ಮಾರ್ಚ್ 24 ರಂದು ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಗುತ್ತದೆ. ಮಾರ್ಚ್ 30 ರಂದು ಹಸಿ ಕರಗ ನಡೆಯಲಿದೆ
ಬೆಂಗಳೂರು: ಕುಮಾರಸ್ವಾಮಿ ಎನ್ಡಿಎ ವಿಚಾರದಲ್ಲಿ ಸಿಎಂ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷರು ಒಳಗೊಂಡ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು. ಎಚ್ಡಿ ಕುಮಾರಸ್ವಾಮಿ ಮುಂದಿನ ಸಿಎಂ ಎಂಬ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರ ಹೇಳಿಕೆಗೆ ಅಶೋಕ್ಗೆ ಪ್ರತಿಕ್ರಿಯಿಸಿದರು. ಅವರವರ ಪಕ್ಷದ ವಿಚಾರವನ್ನು ಅವರವರು ಮಾತನಾಡುತ್ತಾರೆ. ಎನ್ಡಿಎ ವಿಚಾರದಲ್ಲಿ, ಮುಖ್ಯಮಂತ್ರಿ ವಿಚಾರವನ್ನು ಪ್ರಧಾನಿ
ಬೆಂಗಳೂರು: ದಲಿತರ ಕುರಿತು ತಮಗೆ ಬದ್ಧತೆ, ಸಾಮಾಜಿಕ ಕಳಕಳಿ ಇದ್ದರೆ ದಲಿತ ಸಚಿವರು ತಕ್ಷಣ ರಾಜೀನಾಮೆ ಕೊಡಬೇಕು. ನಿಮಗೆ ಮಾನವೀಯತೆ ಇದ್ದರೆ, ಮೀಸಲು ಕ್ಷೇತ್ರದಿಂದ ಗೆದ್ದಿದ್ದರೆ 54 ಶಾಸಕರು ಮುಂದಿನ ವಿಧಾನಸಭಾ ಕಲಾಪಗಳಲ್ಲಿ ಭಾಗವಹಿಸಬಾರದು; ರಾಜೀನಾಮೆ ಕೊಡಿ ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರು ಆಗ್ರಹಿಸಿದರು.ಅವರು ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಪರಿಶಿಷ್ಟ ಜಾತಿ, ಪಂಗಡದ 54 ಜನ ಶಾಸಕರು ಇದ್ದಾರೆ. ಶಿಕ್ಷಣದಲ್ಲಿ ಕ್ರಾಂತಿ ಆಗಿದೆ. ಆದರೆ, ಈ 54 ಜನರು ಮಾತನಾಡುತ್ತಿಲ್ಲ. ಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ಮಾತನಾಡುವುದಿಲ್ಲ.
ಹೈದರಾಬಾದ್: ಮದುವೆಯಾದ ಬಳಿಕ ಮೊದಲ ಬಾರಿಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ದೇವರಕೊಂಡ ಎಂದು ಪಪ್ಪಾರಾಜಿಗಳು ಕೂಗಿದಾಗ ನಾಚಿಕೊಂಡರು. ನಿನ್ನೆಯಷ್ಟೇ ವಿಜಯ್ ಮತ್ತು ರಶ್ಮಿಕಾ ಜೋಡಿ ಉದಯಪುರದಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದರು. ನಿನ್ನೆಯ ಮದುವೆ ಕಾರ್ಯಕ್ರಮದಲ್ಲಿ ಕೇವಲ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಇದೀಗ ನವಜೋಡಿ ಉದಯಪುರದಿಂದ ಹೊರಟಿದೆ. ಇಂದು ಉದಯಪುರ ವಿಮಾನ ನಿಲ್ದಾಣದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.
ಕೋಲ್ಕತ್ತಾ: ಶುಕ್ರವಾರ ಮಧ್ಯಾಹ್ನ ಢಾಕಾದಿಂದ 188 ಕಿಲೋಮೀಟರ್ ದೂರದಲ್ಲಿ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ತಿಳಿಸಿದೆ. ಕೋಲ್ಕತ್ತಾದ ಹಲವು ಭಾಗಗಳಲ್ಲಿ ಮತ್ತು ಪಶ್ಚಿಮ ಬಂಗಾಳದ ಪಕ್ಕದ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದ್ದು, ನಿವಾಸಿಗಳು ತಮ್ಮ ಮನೆಗಳು ಮತ್ತು ಕಚೇರಿ ಕಟ್ಟಡಗಳಿಂದ ಮುಂಜಾಗ್ರತಾ ಕ್ರಮವಾಗಿ ಹೊರದಬ್ಬುವಂತೆ ಪ್ರೇರೇಪಿಸಿತು. ಬಾಂಗ್ಲಾದೇಶದ ಹವಾಮಾನ ಇಲಾಖೆ ಭೂಕಂಪದ ತೀವ್ರತೆ 5.4 ಎಂದು ವರದಿ ಮಾಡಿದೆ.
ಅಬಕಾರಿ ನೀತಿ ಹಗರಣದಲ್ಲಿ ಖುಲಾಸೆಯಾಗುತ್ತಿದ್ದ ಹಾಗೇ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದರು. ಸಂಬಂಧಿಸಿದ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಾಲಯದಿಂದ ಮಹತ್ವದ ಆದೇಶ ಬರುತ್ತಿದ್ದ ಹಾಗೇ ಮಾಧ್ಯಮಗಳ ಬಳಿ ಪ್ರತಿಕ್ರಿಯಿಸುವಾಗ ಅರವಿಂದ್ ಭಾವುಕರಾದರು. ಸಿಬಿಐ ಪ್ರಕರಣದ ಎಲ್ಲಾ 23 ಆರೋಪಿಗಳನ್ನು ದೆಹಲಿಯ ನ್ಯಾಯಾಲಯವು ಕೇಜ್ರಿವಾಲ್ ಮತ್ತು ಅವರ ಮಾಜಿ ಡೆಪ್ಯೂಟಿ ಮನೀಶ್ ಸಿಸೋಡಿಯಾ ಅವರನ್ನು ಖುಲಾಸೆ ಮಾಡಿದೆ.
ಇನ್ನೇನು ಪರೀಕ್ಷೆ ಮುಗಿದು ಮಕ್ಕಳಿಗೆ ಶಾಲೆಗೆ ರಜೆ ಸಿಗುವ ಸಮಯ. ಬೇಸಿಗೆ ರಜೆಯಲ್ಲಿ ರಾಜ್ಯ ರಾಜಧಾನಿಯಲ್ಲಿ ಮಕ್ಕಳ ಜತೆ ಭೇಟಿಕೊಡಬಹುದಾದ ಸ್ಥಳಗಳು ಇಲ್ಲಿದೆ. ಲಾಲ್ಬಾಗ್ ಸಸ್ಯತೋಟ ಇಲ್ಲಿನ ಗಾಜಿನ ಮನೆ ಮತ್ತು ವೈವಿಧ್ಯಮಯ ಗಿಡಮರಗಳು ಪ್ರಕೃತಿ ಪ್ರೇಮಿಗಳಿಗೆ ಹಬ್ಬ. ಕಬ್ಬನ್ ಪಾರ್ಕ್: ನಗರದ ಮಧ್ಯಭಾಗದಲ್ಲಿರುವ ಈ ಹಸಿರು ವಲಯವು ಬೆಳಗಿನ ನಡಿಗೆ ಅಥವಾ ಸಂಜೆಯ ವಿರಾಮಕ್ಕೆ ಸೂಕ್ತವಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ : ಇಲ್ಲಿನ ಸಫಾರಿ, ಬಟರ್ಫ್ಲೈ ಪಾರ್ಕ್ (ಚಿಟ್ಟೆ ಉದ್ಯಾನ) ಮತ್ತು ಮೃಗಾಲಯವು
ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು ಸಿಕ್ಕಿದೆ. ಇದರಿಂದ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ ಸಿಕ್ಕಿದೆ. ಎರಡು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಸದ್ಯ ಕುಲಕರ್ಣಿಗೆ ರಿಲೀಫ್ ಸಿಕ್ಕಿದೆ.ಇತ್ತೀಚಿಗೆ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಜಾ ಆಗಿತ್ತು. ಬಳಿಕ ವಿನಯ್ ಕುಲಕರ್ಣಿ ಸುಪ್ರೀಂ ಮೊರೆ ಹೋಗಿದ್ದರು. ಕುಲಕರ್ಣಿ ಪರ ವಾದ ಮಂಡಿಸಿದ್ದ ವಕೀಲ ಶರಣಗೌಡ ಪಾಟೀಲ್ ಅವರ ತಂಡ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಬಿಡದಿ (ರಾಮನಗರ): ಬ್ರೇಕಪ್ ಬಳಿಕ ದೂರವಾಗಿದ್ದ ಮಾಜಿ ಪ್ರೇಮಿಗೆ ಯುವತಿಯೊಬ್ಬಳು ಚಾಕುವಿನಿಂದ ಇರುದಯ ಕೊಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಪಟ್ಟಣದ ಸಿಲ್ಕ್ ಫಾರ್ಮ್ ಕ್ವಾಟ್ರಸ್ ಬಳಿ ಗುರುವಾರ ರಾತ್ರಿ ನಡೆದಿದೆ.ಹಲ್ಲೆಗೊಳಗಾದ ವ್ಯಕ್ತಿಯನ್ನು ವೇಣುಗೋಪಾಲ್ (27) ಎಂದು ಗುರುತಿಸಲಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯ ಎಸಗಿರುವ 30 ವರ್ಷದ ಸುಧಾ ಘಟನೆ ಬಳಿಕ ಬಿಡದಿ ಪೊಲೀಸ್ ಠಾಣೆಗೆ ಶರಣಾಗಿದ್ದಾಳೆ.ಪಟ್ಟಣದ ಜಿಮ್ನಲ್ಲಿ ಟ್ರೈನರ್ ಆಗಿರುವ ವೇಣುಗೋಪಾಲ್ ಮತ್ತು ಸುಧಾ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಕೆಲ ದಿನಗಳಿಂದ
ನವದೆಹಲಿ: ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಜೊತೆಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿನ್ನೆ ಫೆಬ್ರವರಿ 26 ರಂದು ಉದಯಪುರದಲ್ಲಿ ರಶ್ಮಿಕಾ ಮತ್ತು ವಿಜಯ್ ಶಾಸ್ತ್ರೋಸ್ತ್ರಕವಾಗಿ ವಿವಾಹವಾಗಿದ್ದರು. ತೆಲುಗು ಮತ್ತು ಕೊಡವ ಸ್ಟೈಲ್ ನಲ್ಲಿ ಇಬ್ಬರೂ ಮದುವೆಯಾಗಿದ್ದರು. ಈ ಮದುವೆಗೆ ಕೇವಲ ಆಪ್ತರು ಮಾತ್ರ ಹಾಜರಾಗಿದ್ದರು. ಯಾವುದೇ ಫೋಟೋಗಳು ಲೀಕ್ ಆಗದಂತೆ ಎಚ್ಚರಿಕೆ ವಹಿಸಲಾಗಿತ್ತು.
ನವದೆಹಲಿ: ದೆಹಲಿಯಲ್ಲಿ ಮದ್ಯ ನೀತಿ ಹಗರಣದಲ್ಲಿ ಸಿಲುಕಿಕೊಂಡಿದ್ದ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಕಳಂಕ ಮುಕ್ತ ಎಂದು ಕೋರ್ಟ್ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ಅವರು ಕಣ್ಣೀರು ಹಾಕಿದ್ದಾರೆ. ದೆಹಲಿಯ ಮದ್ಯ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ, ತೆಲಂಗಾಣ ಎಂಎಲ್ಸಿ ಕೆ. ಕವಿತಾ ಸೇರಿದಂತೆ 23 ಆರೋಪಿಗಳನ್ನು ದೆಹಲಿಯ ರೌಸ್ ಅವೆನ್ಯೂ ಕೋರ್ಟ್ ಕಳಂಕ ಮುಕ್ತ ಮಾಡಿದೆ. ಇದರ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅರವಿಂದ್ ಕೇಜ್ರಿವಾಲ್ ‘ಇದೊಂದು ಸುಳ್ಳು ಕೇಸ್ ಆಗಿತ್ತು. ನಾನು ಭ್ರಷ್ಟನಲ್ಲ’ ಎನ್ನುತ್ತಾ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಇಳಿಕೆಯಾದರೆ ಮತ್ತುಇತರೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ದಾಖಲೆಯ ಏರಿಕೆ ಕಂಡಿತ್ತು. ಈ ವಾರ ಅದೇ ರೀತಿ ಬೆಲೆ ಏರಿಳಿಕೆಯಾಗುವ ಲಕ್ಷಣವಿದೆ. ಇಂದು ಪರಿಶುದ್ಧ ಚಿನ್ನದ ದರ ಇಂದು ಇಳಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,64,105.00 ರೂ.ಗಳಿತ್ತು. ಇಂದೂ 1,62,835.00 ರೂ.ಗಳಷ್ಟಿದೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಇಳಿಕೆಯಾಗಿತ್ತು. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಇದು ಬೆಳೆಗಾರರಿಗೆ ಸಮಾಧಾನ ತಂದಿತ್ತು. ಆದರೆ ಕಳೆದ ಎರಡು ದಿನಗಳಿಂದ ಸತತವಾಗಿ ಬೆಲೆ ಇಳಿಕೆ ಕಂಡುಬರುತ್ತಿದೆ. ಇಂದು ಕೆಲವು ವರ್ಗದ ಅಡಿಕೆ ಬೆಲೆಯಲ್ಲಿ ಇಳಿಕೆಯಾಗಿದ್ದರೆ ಮತ್ತೆ ಕೆಲವು ವರ್ಗದ ಅಡಿಕೆ ಬೆಲೆ ಏರಿಕೆಯಾಗಿದೆ. ಇಂದು ಹೊಸ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದು 480 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದು 535 ರೂ. ಗಳಾಗಿದೆ.
ಬೆಂಗಳೂರು: ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ 84 ನೇ ಜನ್ಮದಿನ ಂದು. ಹುಟ್ಟುಹಬ್ಬದ ದಿನ ಯಡಿಯೂರಪ್ಪ ತಮ್ಮ ಮಕ್ಕಳ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿ ದಾನ ಧರ್ಮ ಮಾಡಿದ್ದಲ್ಲದೆ ಬಳಿಕ ಮಕ್ಕಳ ಜೊತೆ ಕೂತು ತಿಂಡಿ ಸವಿದಿದ್ದಾರೆ. ಇಂದು ಬೆಳಗ್ಗೆ ಶಿಕಾರಿಪುರದ ಆರಾಧ್ಯದೈವ, ಐತಿಹಾಸಿಕ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ನಂತರ ದಿವ್ಯಾಂಗರಿಗೆ ವಾಹನವಾಹನಗಳನ್ನು ಹಾಗೂ ತಾಯಂದಿರಿಗೆ, ಸಹೋದರಿಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಇನ್ನು ದೇವಾಲಯದ ಅರ್ಚಕರು, ಚೆಂಡೆ ವಾದಕರಿಗೂ ಬಿಎಸ್ ವೈ ದಕ್ಷಿಣೆ ನೀಡಿದರು.
ರಸ್ತೆ ಬದಿ ಕೂತಿದ್ದ ಈ ವ್ಯಕ್ತಿ ಆಕ್ಸಿಡೆಂಟ್ ಗೆ ಬಲಿಯಾಗಬೇಕಿತ್ತು. ಆದರೆ ಆಂಜನೇಯ ಸ್ವಾಮಿಯೇ ಈತನನ್ನು ಕಾಪಾಡಿದನೇನೋ ಎಂಬಂತಿದೆ ಈ ವೈರಲ್ ವಿಡಿಯೋ. ಆಂಜನೇಯ ಸ್ವಾಮಿ ಕಲಿಯುಗದ ಅಂತ್ಯದವರೆಗೂ ಇರುತ್ತಾನೆ ಎಂಬ ನಂಬಿಕೆಯಿದೆ. ಅದಕ್ಕೆ ತಕ್ಕಂತೆ ಹಲವು ಬಾರಿ ಮಂಗಗಳು ಮನುಷ್ಯರನ್ನು ಆಪತ್ತಿನಿಂದ ಕಾಪಾಡುವ ಅನೇಕ ನಿದರ್ಶನಗಳನ್ನು ನಾವು ನೋಡಿದ್ದೇವೆ. ಇಲ್ಲೂ ಅಂತಹದ್ದೇ ಘಟನೆ ನಡೆದಿದೆ. ವಿದೇಶವೊಂದರಲ್ಲಿ ನಡೆದ ಘಟನೆ ಇದಾಗಿದೆ. ರಸ್ತೆ ಬದಿ ಕಲ್ಲು ಬೆಂಚಿನ ಮೇಲೆ ವ್ಯಕ್ತಿಯೊಬ್ಬ ಕೂತುಕೊಂಡು ಮೊಬೈಲ್ ನೋಡುತ್ತಿರುತ್ತಾನೆ.
ಬಿಹಾರ: ರಸ್ತೆ ಅಪಘಾತಗಳಲ್ಲಿ ಮನುಷ್ಯರಂತೇ ಪ್ರಾಣಿಗಳೂ ಬಲಿಯಾಗುವುದು ಇದೆ. ಇದೇ ರೀತಿ ಬಿಹಾರದಲ್ಲಿ ನಡೆದ ಘಟನೆಯೊಂದರಲ್ಲಿ ಗೋವಿನ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಳ್ಳಿ ಪ್ರದೇಶಗಳಲ್ಲಿ ಮಾತ್ರವಲ್ಲ, ಬೆಂಗಳೂರಿನಂತಹ ನಗರಗಳಲ್ಲೂ ಕೆಲವೊಮ್ಮೆ ಗೋವುಗಳು ರಸ್ತೆಯಲ್ಲಿ ಅಲೆದಾಡುವುದನ್ನು ಕಾಣುತ್ತೇವೆ. ವಾಹನ ಸವಾರರು ಇಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಚಾಲನೆ ಮಾಡುವುದು ಮುಖ್ಯ. ಇದೇ ರೀತಿ ಬಿಹಾರದ ದೇವಿಪುರ್ ನಲ್ಲಿ ರಸ್ತೆ ದಾಟುತ್ತಿದ್ದ ದನಕ್ಕೆ ಬೈಕ್ ಸವಾರನೊಬ್ಬ ಢಿಕ್ಕಿ ಹೊಡೆದಿದ್ದಾನೆ. ಬೈಕ್ ಸವಾರನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಓರ್ವ ಮಹಿಳೆ ತನ್ನ ದನವನ್ನು ಹಗ್ಗ ಹಿಡಿದುಕೊಂಡು ರಸ್ತೆ ದಾಟುತ್ತಿರುತ್ತಾಳೆ.
ಬೆಂಗಳೂರು: ತುಟಿ ಕಚ್ಚಿದ ವಿಚಿತ್ರ ಪ್ರಕರಣವೊಂದರ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಲಾಯರ್ ನಡುವಿನ ಸಂಭಾಷಣೆ ಈಗ ವೈರಲ್ ಆಗಿದೆ. ಕೆಲವೊಮ್ಮೆ ಕೋರ್ಟ್ ಗೆ ಎಂಥಾ ವಿಚಿತ್ರ ಮತ್ತು ವಿಶೇಷ ಪ್ರಕರಣಗಳು ಬರುತ್ತವೆ ನೋಡಿ. ಮೊನ್ನೆಯಷ್ಟೇ ಗಂಡ-ಹೆಂಡತಿ ಲಟ್ಟಣಿಗೆಯಲ್ಲಿ ಹೊಡೆದಿದ್ದರ ಪ್ರಕರಣದ ವಿಚಾರಣೆ ನಡೆಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಾರಿ ಇಬ್ಬರು ಕಿತ್ತಾಡಿಕೊಂಡು ತುಟಿ ಕಚ್ಚಿದ ಪ್ರಕರಣದ ವಿಚಾರಣೆ ನಡೆದ ವಿಡಿಯೋ ವೈರಲ್ ಆಗಿದೆ. ವಕೀಲರು ಪ್ರಕರಣದ ವಿವರಣೆಯನ್ನು ನ್ಯಾಯಾಧೀಶರ ಮುಂದಿಡುತ್ತಿದ್ದರು.
ಇಸ್ಲಾಮಾಬಾದ್: 55 ಸೈನಿಕರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಯುದ್ಧ ಸಾರಿದೆ. ಅಫ್ಘಾನಿಸ್ತಾನದ ಹಲವೆಡೆ ವೈಮಾನಿಕ ದಾಳಿ ನಡೆಸಿರುವ ಪಾಕಿಸ್ತಾನ ಅಧಿಕೃತವಾಗಿ ಯುದ್ಧ ಘೋಷಿಸಿದೆ. ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದ ಅಫ್ಘಾನಿಸ್ತಾನ 55 ಸೈನಿಕರನ್ನು ಹತ್ಯೆ ಮಾಡಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ನೆರೆಯ ರಾಷ್ಟ್ರದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಕಾಬೂಲ್, ಕಂದಹಾರ್, ಮತ್ತು ಪಕ್ತಿಯಾದಲ್ಲಿರುವ ತಾಲಿಬಾನ್ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುತ್ತಿರುವುದಾಗಿ ಪಾಕಿಸ್ತಾನ ಹೇಳಿದೆ.
ಚೆನ್ನೈ: ಭಾರತ ಮತ್ತು ಜಿಂಬಾಬ್ವೆ ನಡುವೆ ನಿನ್ನೆ ನಡೆದಿದ್ದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್ ಗೆ ಕೋಚ್ ಗೌತಮ್ ಗಂಭೀರ್ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ. ಟಿ20 ವಿಶ್ವಕಪ್ ನಲ್ಲಿ ಸಂಜು ಸ್ಯಾಮ್ಸನ್ ಗೆ ಅವಕಾಶ ಸಿಗುವುದೇ ಕಷ್ಟವಿತ್ತು. ಫಾರ್ಮ್ ಕಳೆದುಕೊಂಡಿದ್ದ ಅವರಿಗೆ ಅವಕಾಶ ನೀಡಲು ಮ್ಯಾನೇಜ್ ಮೆಂಟ್ ಗೆ ಮನಸ್ಸಿರಲಿಲ್ಲ. ಆದರೆ ಆಗಲೇ ಅಭಿಷೇಕ್ ಶರ್ಮಾ ಕೂಡಾ ಫಾರ್ಮ್ ಕಳೆದುಕೊಂಡು ಒದ್ದಾಡುತ್ತಿದ್ದರು ಮತ್ತು ರಿಂಕು ಸಿಂಗ್ ಗೈರಾಗಿದ್ದರು.
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಮತ್ತೆ ಶುರುವಾಗಿದೆ. ಡಿಕೆ ಶಿವಕುಮಾರ್ ಬೆಂಬಲಿಗರು ಮಹತ್ವದ ಹೆಜ್ಜೆಯಿಟ್ಟಿದ್ದು ಒತ್ತಡ ತಂತ್ರಕ್ಕೆ ಮೊರೆ ಹೋಗಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ಇದುವರೆಗೆ ಹೈಕಮಾಂಡ್ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ. ಸಿದ್ದರಾಮಯ್ಯನವರನ್ನು ಕೆಳಗಿಳಿಸುವುದು ಅಷ್ಟು ಸುಲಭದ ಮಾತಲ್ಲ.ಹೀಗಾಗಿ ಡಿಕೆಶಿ ಬಣದಲ್ಲಿ ಅಸಮಾಧಾನ ಕಂಡುಬರುತ್ತಿದೆ. ನಿನ್ನೆ ರಾತ್ರಿ ಮೇಖ್ರಿ ಸರ್ಕಲ್ ಬಳಿಯ ಖಾಸಗಿ ಹೋಟೆಲ್ ನಲ್ಲಿ ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು ಡಿನ್ನರ್ ಮೀಟಿಂಗ್ ನಡೆಸಿದ್ದಾರೆ.
ನವದೆಹಲಿ: ಟಿ20 ವಿಶ್ವಕಪ್ ನಡುವೆ ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ತಂದೆಯನ್ನು ಕಳೆದುಕೊಂಡಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಂಕು ತಂದೆ ಖಚಂದ್ರ ಸಿಂಗ್ ಇಂದು ನಿಧನರಾಗಿದ್ದಾರೆ. ಗ್ರೇಟರ್ ನೋಯ್ಡಾದ ಯಥಾರ್ಥ ಹಾಸ್ಪಿಟಲ್ ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ತಂದೆಯನ್ನು ನೋಡುವ ಸಲುವಾಗಿ ರಿಂಕು ಮೊನ್ನೆಯಷ್ಟೇ ವಿಶ್ವಕಪ್ ಬಿಟ್ಟು ಆಸ್ಪತ್ರೆಗೆ ಬಂದಿದ್ದರು. ಆದರೆ ನಿನ್ನೆ ಅವರು ಮತ್ತೆ ತಂಡವನ್ನು ಕೂಡಿಕೊಂಡಿದ್ದರು. ಆದರೆ ಇದೀಗ ತಂದೆಯ ಸಾವಿನ ಸುದ್ದಿ ತಿಳಿದು ಮತ್ತೆ ತವರಿಗೆ ಮರಳಿದ್ದಾರೆ. ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಂಕು ತಂದೆ ಪರಿಸ್ಥಿತಿ ಗಂಭೀರವಾಗಿತ್ತು.
ಹೋಬರ್ಟ್: ಭಾರತ ಮತ್ತು ಆಸ್ಟ್ರೇಲಿಯಾ ವನಿತೆಯರ ನಡುವೆ ಇಂದು ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಎಲ್ಲಿ ಮತ್ತು ಎಷ್ಟು ಗಂಟೆಗೆ ಲೈವ್ ವೀಕ್ಷಿಸಬೇಕು ಇಲ್ಲಿದೆ ವಿವರ. ಕಳೆದ ಪಂದ್ಯವನ್ನು ಹರ್ಮನ್ ಪ್ರೀತ್ ಕೌರ್ ಪಡೆ ಸೋತು ಸರಣಿಯಲ್ಲಿ 0-1 ರಿಂದ ಹಿನ್ನಡೆಯಲ್ಲಿದೆ. ಈಗಾಗಲೇ ಟಿ20 ಸರಣಿ ಗೆದ್ದಿದ್ದ ಭಾರತ ತಂಡಕ್ಕೆ ಮೊದಲ ಏಕದಿನ ಪಂದ್ಯದ ಸೋಲು ಆಘಾತ ತಂದಿತ್ತು. ಇದೀಗ ಸರಣಿ ಗೆಲ್ಲಬೇಕಾದರೆ ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಕಳೆದ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಕೈ ಕೊಟ್ಟಿತ್ತು. ಅನುಭವಿಗಳಾದ ಸ್ಮೃತಿ ಮಂಧಾನ ಮತ್ತು ಹರ್ಮನ್ ಪ್ರೀತ್ ಕೌರ್ ಅರ್ಧಶತಕ ಗಳಿಸಿದ್ದರು.
ಬೆಂಗಳೂರು: ಈ ವಾರ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಿತ್ತು. ಇಂದು ಕರ್ನಾಟಕದಲ್ಲಿ ಮಳೆಯಾಗುವ ಸೂಚನೆಯಿದೆಯೇ, ಇಲ್ಲಿದೆ ಹವಾಮಾನ ವರದಿ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿತ್ತು. ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಕಳೆದ ಮೂರು-ನಾಲ್ಕು ದಿನಗಳಲ್ಲಿ ಸಣ್ಣ ಮಟ್ಟಿಗೆ ಮಳೆಯಾಗಿತ್ತು. ಆದರೆ ಈಗ ವಾಯುಭಾರ ಕುಸಿತದ ಪರಿಣಾಮ ಕ್ಷೀಣವಾಗಿದೆ. ಇಂದು ರಾಜ್ಯದ ಯಾವುದೇ ಜಿಲ್ಲೆಗಳಿಗೆ ಮಳೆಯ ಸೂಚನೆಯಿಲ್ಲ. ಆದರೆ ಬೆಂಗಳೂರು, ತುಮಕೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಭಾಗಶಃ ಮೋಡಕವಿದ ವಾತಾವರಣವಿರಲಿದೆ.
ಶುಕ್ರವಾರ ದೇವಿಯ ಆರಾಧನೆಗೆ ಸೂಕ್ತ ದಿನ. ಇಂದು ಶುಕ್ರವಾರ ದೇವಿಯ ಕುರಿತಾದ ಶ್ರೀ ಮೀನಾಕ್ಷೀ ಸ್ತೋತ್ರ ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.ಶ್ರೀವಿದ್ಯೇ ಶಿವವಾಮಭಾಗನಿಲಯೇ ಶ್ರೀರಾಜರಾಜಾರ್ಚಿತೇಶ್ರೀನಾಥಾದಿಗುರುಸ್ವರೂಪವಿಭವೇ ಚಿಂತಾಮಣೀಪೀಠಿಕೇ ।ಶ್ರೀವಾಣೀಗಿರಿಜಾನುತಾಂಘ್ರಿಕಮಲೇ ಶ್ರೀಶಾಂಭವಿ ಶ್ರೀಶಿವೇಮಧ್ಯಾಹ್ನೇ ಮಲಯಧ್ವಜಾಧಿಪಸುತೇ ಮಾಂ ಪಾಹಿ ಮೀನಾಂಬಿಕೇ ॥ 1 ॥ ಚಕ್ರಸ್ಥೇಽಚಪಲೇ ಚರಾಚರಜಗನ್ನಾಥೇ ಜಗತ್ಪೂಜಿತೇಆರ್ತಾಲೀವರದೇ ನತಾಭಯಕರೇ ವಕ್ಷೋಜಭಾರಾನ್ವಿತೇ ।ವಿದ್ಯೇ ವೇದಕಲಾಪಮೌಳಿವಿದಿತೇ ವಿದ್ಯುಲ್ಲತಾವಿಗ್ರಹೇಮಾತಃ ಪೂರ್ಣಸುಧಾರಸಾರ್ದ್ರಹೃದಯೇ ಮಾಂ ಪಾಹಿ ಮೀನಾಂಬಿಕೇ ॥ 2 ॥ ಕೋಟೀರಾಂಗದರತ್ನಕುಂಡಲಧರೇ ಕೋದಂಡಬಾಣಾಂಚಿತೇಕೋಕಾಕಾರಕುಚದ್ವಯೋಪರಿಲಸತ್ಪ್ರಾಲಂಬಹಾರಾಂಚಿತೇ ।ಶಿಂಜನ್ನೂಪುರಪಾದಸಾರಸಮಣೀಶ್ರೀಪಾದುಕಾಲಂಕೃತೇಮದ್ದಾರಿದ್ರ್ಯಭುಜಂಗಗಾರುಡಖಗೇ ಮಾಂ ಪಾಹಿ ಮೀನಾಂಬಿಕೇ ॥ 3 ॥
ಬಹುಕಾಲದ ಪ್ರಣಯ ಜೋಡಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಇಂದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಕ್ಷಣಗಳನ್ನು ವಿಜಯ್ ರಶ್ಮಿಕಾ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಉದಯಪುರದಲ್ಲಿ ತಮ್ಮ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಗಂಟು ಹಾಕಿದರು. ಇದೀಗ, ನವವಿವಾಹಿತರು ತಮ್ಮ ಮೊದಲ ಅಧಿಕೃತ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ನೂತನ ಜೋಡಿಗೆ ಶುಭಹಾರೈಸುತ್ತಿದ್ದಾರೆ.ಬೆರಗುಗೊಳಿಸುವ ಸಾಂಪ್ರದಾಯಿಕ ವಸ್ತ್ರದಲ್ಲಿ ಜೋಡಿ ಮಿಂಚಿದೆ.
ರಾಜಸ್ಥಾನದ ನಗರಾಭಿವೃದ್ಧಿ ಮತ್ತು ವಸತಿ (ಯುಡಿಹೆಚ್) ಸಚಿವ ಜಬರ್ ಸಿಂಗ್ ಖರ್ರಾ ಅವರು ವಿರೋಧ ಪಕ್ಷಗಳ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ರಾಜ್ಯ ವಿಧಾನಸಭೆಯೊಳಗೆ ಉಗುಳಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಭಾರೀ ಟೀಕೆಗೆ ಗುರಿಯಾಗಿದೆ. ಕ್ಯಾಮೆರಾದಲ್ಲಿ ಸೆರೆಯಾದ ಘಟನೆ, ಸ್ಪೀಕರ್ ಅವರನ್ನು ಉದ್ದೇಶಿಸಿ ಮಾತನಾಡುವಾಗ ಖರ್ರಾ ಅವರು ಸದನದೊಳಗೆ ಉಗುಳುವುದನ್ನು ತೋರಿಸುತ್ತದೆ.ಸಾರ್ವಜನಿಕ ಪ್ರತಿನಿಧಿಗಳ ನಡವಳಿಕೆ ಮತ್ತು ಸಜ್ಜನಿಕೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ವಿರೋಧ ಪಕ್ಷದ ಸದಸ್ಯರು ಈ
ಬೆಂಗಳೂರು: ಈಚೆಗೆ ಸಿಎಂ ಆಗಲೂ ನಾನೂ ಕೂಡಾ ಸಮರ್ಥನೂ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಗೇಹ ಸಚಿವ ಜಿ ಪರಮೇಶ್ವರ್ ಅವರು ಬೆಂಬಲಿಗರು ಮುಂದಿನ ಸಿಎಂ ತಾವೇ ಎಂದು ಘೋಷಣೆಗಳಿಂದ ದೂರ ಉಳಿದಿದ್ದಾರೆ. ತುಮಕೂರಿನಲ್ಲಿ ತಮ್ಮನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವ ತಮ್ಮ ಬೆಂಬಲಿಗರು ಎತ್ತಿದ್ದ ಘೋಷಣೆಗಳಿಂದ ದೂರ ಉಳಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ನಿರ್ಧಾರವು ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದು, ಆ ಹುದ್ದೆಗಾಗಿ
ಜಿಂಬಾವ್ ವಿರುದ್ಧ ಇಂದು ನಡೆಯುತ್ತಿರುವ ನಿರ್ಣಾಯಕ ಸೂಪರ್ 8ನ ಘರ್ಷಣೆಯಲ್ಲಿ ಭಾರತ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 20ಓವರ್ಗಳಲ್ಲಿ 256 ರನ್ಗಳಿಗೆ ಜಿಂಬಾಬ್ವೆಗೆ ಬಿಗ್ ಟಾರ್ಗೇಟ್ ನೀಡಿತು. ಭಾರತದ ವಿರುದ್ಧ ಜಿಂಬಾಬ್ವೆ ನಾಯಕ ಸಿಕಂದರ್ ರಜಾ ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಸಂಜು ಸ್ಯಾಮ್ಸನ್ 15ಎಸೆತಗಳಲ್ಲಿ( 24ರನ್), ಅಭಿಷೇಕ್ 30 ಎಸೆತಗಳಲ್ಲಿ(55ರನ್), ಈಶಾನ್ ಕಿಶಾನ್ 24ಎಸೆತಗಳಲ್ಲಿ(38ರನ್), ಸೂರ್ಯಕುಮಾರ್ ಯಾದವ್13 ಎಸೆತಗಳಲ್ಲಿ( 33) ಹಾಗೂ ತಿಲಕ್ ಕುಮಾರ್ 16 ಎಸೆತಗಳಲ್ಲಿ
ಕೇರಳ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಜತೆಗಿನ ಮುನಿಸಿನ ಬಗ್ಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಇನ್ನೂ ಪ್ರಿಯಾಂಕಾಳ ಜತೆಗಿನ ಮುನಿಸು ಸರಿಹೋಗಲು ವಯನಾಡಿನ ಮಣ್ಣಿನ ಗುಣವೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಸಹೋದರಿ ಪ್ರಿಯಾಂಕಾ ಗಾಂಧಿ ಸಂಸದೆಯಾಗಿರುವ ವಯನಾಡಿನಲ್ಲಿ ಕಾಂಗ್ರೆಸ್ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡುವ ವೇಳೆ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿಯೊಂದಿಗಿನ ಜಗಳ ಬಗ್ಗೆ ಮಾತನಾಡಿದ್ದಾರೆ. ನನಗೆ ಹಾಗೂ ಸಹೋದರಿಗೆ ಮುನಿಸಲಾಗಿತ್ತು. ಈ ವಿಚಾರ ನಮ್ಮ ತಾಯಿಗೂ ತಿಳಿದಿತ್ತು. ಅವರು ಕೇಳಿದರು. ಆದರೆ ಅವಳೊಂದಿಗಿನ ಮುನಿಸು ಸರಿಹೋಗಿರಲಿಲ್ಲ.
ಬೆಂಗಳೂರು: ಈಚೆಗೆ ಇಂಟರ್ನೆಟ್ನಲ್ಲಿ ಭಾರೀ ಸದ್ದು ಮಾಡಿದ್ದ ತಾಯಿ ಕೋತಿಯಿಂದ ತಳ್ಳಲ್ಪಟ್ಟಿದ ಮರಿ ಕೋತಿ ಮರಿಗೆ ಆಮ್ಮನಾಗಿದ್ದ ಗೊಂಬೆಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪಂಚ್ ಕೋತಿ ಮರಿ ತನ್ನ ತಾಯಿಯಿಂದ ತಳ್ಳಲ್ಪಟ್ಟ ಬಳಿಕ ಕೋತಿಗಳ ಗುಂಪಿನಿಂದ ಹಿಂಸೆಗೆ ಒಳಪಟ್ಟ ಬಳಿಕ ಕೋತಿ ಮರಿಗೆ ಸ್ಟಫ್ಡ್ ಒರಾಂಗುಟಾನ್ ಆಟಿಕೆಯನ್ನೇ ತಾಯಿಯಂತೆ ಅದು ಅಪ್ಪಿಕೊಂಡಿತು. ಅದರೊಂದಿಗಿನ ಕೋತಿ ಮರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಕೋತಿ ಮರಿಯೊಂದಿಗೆ ಆಟಿಕೆ ಗೊಂಬೆಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಈ ಆಟಿಕೆ ಎಷ್ಟು ಪ್ರಸಿದ್ಧವಾಗಿದೆ ಎಂದರೆ ಈಗ
ಆಂಧ್ರಪ್ರದೇಶ: ಕಳೆದ 8 ವರ್ಷಗಳಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಅಭಿಮಾನಿಗಳು ಕಾಯುತ್ತಿದ್ದ ದಿನ ಕೊನೆಗೂ ಬಂದಿದೆ. ನಟ ವಿಜಯ್ ಅವರು ಮದುವೆಯ ಅತ್ಯಮೂಲ್ಯ ಕ್ಷಣದ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ತಮ್ಮ ಪ್ರೀತಿ ವಿಚಾರವನ್ನು ಇದುವರೆಗೂ ಗೌಪ್ಯವಾಗಿಟ್ಟಿದ್ದ ತಾರಾ ಜೋಡಿ ಇಂದು ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಇಂದು ಫೆಬ್ರವರಿ 26 ರಂದು ಬೆಳಿಗ್ಗೆ 8 ಗಂಟೆಗೆ, ರಶ್ಮಿಕಾ ಮತ್ತು ವಿಜಯ್ ಅವರು ಉದಯಪುರದಲ್ಲಿ ವರನ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ತೆಲುಗು ಹಿಂದೂ ಆಚರಣೆಗಳ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಂತೆ ಬೆಂಗಳೂರು ಸಹ ಮತ್ತೊಂದು ಗ್ಯಾಸ್ ಛೇಂಬರ್ ಆಗದಂತೆ ಕ್ರಮ ವಹಿಸಲು ನಗರದ ಎಲ್ಲ 28 ಶಾಸಕರೊಂದಿಗೆ ಸಭೆ ನಡೆಸಲಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.ಇನ್ನೂ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರೊಂದಿಗೆ ಇಂದು ಉನ್ನತಾಧಿಕಾರಿಗಳ ಸಭೆ ನಡೆಸಿದ ಸಚಿವರು, ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕೆ ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳ ಸಹಕಾರದ ಅಗತ್ಯವಿದೆ ಎಂದು ಹೇಳಿದರು.
ಮಹಾರಾಷ್ಟ್ರ: ಶಾಲೆಯ ಆವರಣದಲ್ಲಿ ಶೂಲೇಸ್ ಕಟ್ಟಿಕೊಳ್ಳುತ್ತಿದ್ದ ಆರು ವರ್ಷದ ಬಾಲಕನಿಗೆ ಶಿಕ್ಷಕನ ಕಾರೊಂದು ಡಿಕ್ಕಿ ಹೊಡೆದಿರುವ ಘಟನೆಯೊಂದು ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ಇಗತಪುರಿ ಶಾಲೆಯಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಘಟನೆಯ ಬಗ್ಗೆ ಶಾಲೆಯು ತಪ್ಪು ಮಾಹಿತಿ ನೀಡಿದೆ, ಸಿಸಿಟಿವಿ ದೃಶ್ಯಾವಳಿಗಳನ್ನು ತಡೆಹಿಡಿಯಲು ಪ್ರಯತ್ನಿಸಿದೆ ಮತ್ತು ವಿಷಯವನ್ನು ಹತ್ತಿಕ್ಕಲು ಪ್ರಯತ್ನಿಸಿದೆ ಎಂದು ದೂರುದಾರರು ಆರೋಪಿಸಿದ್ದಾರೆ.ನಾಸಿಕ್ನ ಇಗತ್ಪುರಿಯಲ್ಲಿರುವ ಲಿಟಲ್ ಬ್ಲಾಸಮ್ ಶಾಲೆಯ ಆವರಣದೊಳಗೆ ಶಿಕ್ಷಕರ ಕಾರಿಗೆ ಡಿಕ್ಕಿ ಹೊಡೆದು ಆರು ವರ್ಷದ
ಬೆಂಗಳೂರು: ಹವಾಮಾನದಲ್ಲಿ ಬದಲಾವಣೆ, ಪ್ರಯಾಣ ಹಾಗೂ ದಿನಚರಿಯಲ್ಲಿ ಬದಲಾವಣೆಯಾದಾಗ ತಲೆನೋವು ಕಾಡುವುದುಂಟು. ಅದು ನಿಮ್ಮ ದೈನಂದಿನ ಕೆಲಸಗಳಿಗೆ ಅಡ್ಡಿಪಡಿಸಬಹುದು. ತಲೆನೋವು ಹೆಚ್ಚಾಗಲು ಮೈಗ್ರೇನ್, ಒತ್ತಡ, ಅಥವಾ ನಿರ್ಜಲೀಕರಣ ಹೀಗೆ ಹಲವು ಕಾರಣಗಳಿರಬಹುದು. ಆದರೆ ಇದನ್ನು ತಪ್ಪಿಸಲು ನಾವು ಮಾಡುವ ಕೆಲವು ಕ್ರಮಗಳು ಕಾಡುವ ತಲೆನೋವಿನಿಂದ ಪಾರಾಗಬಹುದು. ಸದ್ಯಕ್ಕೆ ನೀವು ಮಾಡಬಹುದಾದ ಕೆಲವು ಪರಿಣಾಮಕಾರಿ ಕ್ರಮಗಳು ಇಲ್ಲಿವೆ:
ಚೆನ್ನೈ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸಜ್ಜು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಪ್ರತಿಪಾದಿಸಿದ ಹಿರಿಯ ರಾಜಕಾರಣಿ ವಿ ಕೆ ಶಶಿಕಲಾ ಅವರು ಹೊಸದಾಗಿ ಪ್ರಾರಂಭಿಸಿರುವ ರಾಜಕೀಯ ಪಕ್ಷದ ಹೆಸರನ್ನು ಒಂದು ವಾರದೊಳಗೆ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಗುರುವಾರ ಹೇಳಿದ್ದಾರೆ.ದಿವಂಗತ ಜೆ ಜಯಲಲಿತಾ ಅವರ ಮಾಜಿ ಆಪ್ತರಾಗಿದ್ದ ಶಶಿಕಲಾ ಅವರು ಫೆಬ್ರವರಿ 24 ರಂದು ಜಯಲಲಿತಾ ಅವರ 78 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಾಮನಾಥಪುರಂ ಜಿಲ್ಲೆಯ ಕಮುತಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಹೊಸ ಪಕ್ಷದ ಧ್ವಜವನ್ನು ಅನಾವರಣಗೊಳಿಸುವ ಮೂಲಕ ತಮ್ಮ ಒಂಬತ್ತು ವರ್ಷಗಳ ರಾಜಕೀಯ ವಿರಾಮವನ್ನು ಔಪಚಾರಿಕವಾಗಿ ಕೊನೆಗೊಳಿಸಿದ ಕೇವಲ ಎರಡು ದಿನಗಳ ನಂತರ ಈ ಘೋಷಣೆ ಬಂದಿದೆ.
ನವದೆಹಲಿ: 'ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್' ಚಿತ್ರ ಫೆಬ್ರವರಿ 27ರಂದು ಬಿಡುಗಡೆಯಾಗುವ ಒಂದು ದಿನ ಮೊದಲು 15 ದಿನಗಳ ಕಾಲ ಬಿಡುಗಡೆಗೆ ಕೇರಳ ಹೈಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಪ್ರಾಥಮಿಕ ದೃಷ್ಟಿಯಲ್ಲಿ ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ಪ್ರಮಾಣ ಪತ್ರ ನೀಡುವಾಗ ಮನನೊಂದಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಕೇರಳ ಸ್ಟೋರಿ 2 ಪ್ರಮಾಣೀಕರಣ ಮತ್ತು ವಿಷಯದ ಕಾಳಜಿಗಳ ಮೇಲೆ ನ್ಯಾಯಾಲಯದ ಸೂಚನೆಯ ನಂತರ ಹೊಸ ವಿವಾದವನ್ನು ಹುಟ್ಟುಹಾಕಿದೆ.
ಬೆಂಗಳೂರು: ಕಾರು ಮಾರಾಟ ನೆಪದಲ್ಲಿ ಕರೆಸಿಕೊಂಡು ಕನ್ನಡ ಸಿನಿಮಾ ನಿರ್ದೇಶಕನನ್ನೇ ಕಿಡ್ನ್ಯಾಪ್ ಮಾಡಿ, ಕ್ರೂರವಾಗಿ ಹಲ್ಲೆ ಮಾಡಿ ಮತ್ತು ದರೋಡೆ ಮಾಡಿದ ಆಘಾತಕಾರಿ ಘಟನೆ ವರದಿಯಾಗಿದೆ. ಇದೀಗ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಐಶ್ವರ್ಯ ಸೇರಿದಂತೆ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಾಡೆಲಿಂಗ್ ಮತ್ತು ಕಾಸ್ಟಿಂಗ್ ಏಜೆನ್ಸಿಯನ್ನು ನಡೆಸುತ್ತಿರುವ ನಿರ್ದೇಶಕ ಅನೀಶ್ ಅವರು ಜೀವನದ ಭಾಷೆ ಚಲನಚಿತ್ರವನ್ನು ನಿರ್ದೇಶಿಸುತ್ತಿದ್ದರು ಮತ್ತು ಖರೀದಿದಾರರು ತಮ್ಮ ಹೋಂಡಾ ಸಿಆರ್ವಿಯಲ್ಲಿ ಆಸಕ್ತಿ ಹೊಂದಿದ್ದಾರೆಂದು ತಿಳಿಸಿದ ನಂತರ ಫೆಬ್ರವರಿ 9, 2026 ರಂದು ಮುಂಬೈನಿಂದ ಬೆಂಗಳೂರಿಗೆ ಪ್ರಯಾಣಿಸಿದ್ದರು. ತನಿಖೆಯಿಂದ ಆತನನ್ನು ನಗರದ
ಹುಬ್ಬಳ್ಳಿ: ರಣಜಿ ಟ್ರೋಫಿ ಕ್ರಿಕೆಟ್ ಫೈನಲ್ ನಲ್ಲಿ ಇಂದು ಮಯಾಂಕ್ ಅಗರ್ವಾಲ್ ಶತಕ ಸಿಡಿಸದೇ ಹೋಗಿದ್ದರೆ ಕರ್ನಾಟಕದ ಕತೆ ಏನಾಗಿತ್ತೋ ಹೇಳಲು ಸಾಧ್ಯವಿಲ್ಲ. ಜಮ್ಮು ಕಾಶ್ಮೀರ ಮೊದಲ ಇನಿಂಗ್ಸ್ ನಲ್ಲಿ 584 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಮೊತ್ತ ಬೆನ್ನತ್ತಿದ್ದ ಕರ್ನಾಟಕಕ್ಕೆ ಇಂದು ಕೆಎಲ್ ರಾಹುಲ್, ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ರವಿಚಂದ್ರನ್ ಅಲ್ಪ ಮೊತ್ತಕ್ಕೆ ಔಟಾಗಿ ಸಂಕಷ್ಟ ತಂದಿತ್ತರು. ಒಂದು ಹಂತದಲ್ಲಿ ಕರ್ನಾಟಕ 57 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ತಂಡವನ್ನು ಆಧರಿಸಿದ್ದು ಮಯಾಂಕ್ ಅಗರ್ವಾಲ್ ಮತ್ತು ಶ್ರೇಯಸ್ ಗೋಪಾಲ್.
ತ್ರಿಶೂರ್: ತ್ರಿಶೂರ್ನ ಅನ್ನಮನಾದ ಮಹಾದೇವ ದೇವಸ್ಥಾನದಲ್ಲಿ ಗುರುವಾರ ನಡೆದ ದೇವಸ್ಥಾನದ ಉತ್ಸವದ ವೇಳೆ ಆನೆ ಎತ್ತಿ ಎಸೆದ ಪರಿಣಾಮ 26 ವರ್ಷದ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.ವಲಿಯವಿಳಕ್ಕು ಉತ್ಸವದ ವೇಳೆ ಶೀವೇಲಿ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದ್ದಾಗ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗಾಯಗೊಂಡವರನ್ನು ಮಾಂಬ್ರದ ಎರಯಂಕುಡಿ ನಿವಾಸಿ ಮತ್ತು ತುರನೆಲ್ಲೂರು ಮನ ನಿವಾಸಿ ವಿವೇಕ್ ಎಂದು ಗುರುತಿಸಲಾಗಿದೆ.
ಮಂಗಳೂರು: ಇಲ್ಲಿನ ರೈಲ್ವೆ ಹಳಿಯಲ್ಲಿ ಕುಳಿತಿದ್ದ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ನೈತಿಕ ಪೊಲೀಸ್ ಗಿರಿ ತೋರಿರುವುದು ಬೆಳಕಿಗೆ ಬಂದಿದೆ. ಹಲ್ಲೆ ನಡೆಸಿದ ಆರೋಪದ ಮೇಲೆ ತಂದೆ ಮತ್ತು ಮಗನ ವಿರುದ್ಝ ಮಂಗಳೂರು ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಮಂಗಳೂರು ಹೊರವಲಯದ ಅತ್ತಾವರ ಬಾಬುಗುಡ್ಡೆ ಎಂಬಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕ ಮತ್ತು ಬಾಲಕಿ ರೈಲ್ವೆ ಹಳಿಯ ಬಳಿ ಕುಳಿತಿದ್ದಾಗನ ಈ ಘಟನೆ ನಡೆದಿದೆ.
ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ರಾಜ್ಯಕ್ಕೆ ಆರ್ಥಿಕ ಹೊರೆಯಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹಸಚಿವ ಡಾ ಜಿ ಪರಮೇಶ್ವರ್, ಅವರಿಗೆ ಹಾಗೆ ಅನಿಸಿರಬಹುದು ಎಂದಿದ್ದಾರೆ. ನಿನ್ನೆ ಮಾಧ್ಯಮಗಳ ಮುಂದೆ ಡಿಸಿಎಂ ಡಿಕೆ ಶಿವಕುಮಾರ್ ಗ್ಯಾರಂಟಿಯಿಂದ ಹೊರೆಯಾಗುತ್ತಿದೆ. ಆದರೆ ಜನರಿಗೆ ಇದರಿಂದ ಆರ್ಥಿಕ ಅನುಕೂಲವಾಗುತ್ತಿದೆ. ಹಾಗಾಗಿ ಗ್ಯಾರಂಟಿ ನೀಡುತ್ತಿದ್ದೇವೆ ಎಂದಿದ್ದರು. ಅವರ ಹೇಳಿಕೆ ಬಗ್ಗೆ ಇಂದು ಮಾಧ್ಯಮಗಳು ಗೃಹಸಚಿವರನ್ನು ಪ್ರಶ್ನೆ ಮಾಡಿವೆ. ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್ ‘ಡಿಕೆ ಶಿವಕುಮಾರ್ ಅವರು ನಮ್ಮ ಪಕ್ಷದ ಅಧ್ಯಕ್ಷರು. ಚುನಾವಣೆ ಸಂದರ್ಭದಲ್ಲಿ ನಾವು ಎಲ್ಲರೂ ಸೇರಿ ಗ್ಯಾರಂಟಿ ಯೋಜನೆ ಬಗ್ಗೆ ತೀರ್ಮಾನ ಮಾಡಿದ್ದೆವು.