ಕೊಲ್ಲಂ: ಇತ್ತೀಚಿನ ಎಲ್ಪಿಜಿ ಮತ್ತು ಇತರ ಇಂಧನಗಳ ಬೆಲೆ ಏರಿಕೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪರವಾಗಿ ನಿಲ್ಲುವ ಬದಲು ಇಸ್ರೇಲ್, ಅಮೆರಿಕಕ್ಕೆ ತಲೆ ಬಾಗಿದ್ದಾರೆ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು. ಎಲ್ಪಿಜಿ ಮತ್ತು ಇಂಧನ ಬೆಲೆಗಳು ಏರುತ್ತಿವೆ, ಈ ಪರಿಸ್ಥಿತಿಯಲ್ಲಿ ವ್ಯಾಪಾರವು ಕಷ್ಟಕರವಾಗಲಿದೆ. ಇದೆಲ್ಲದರ ಮಧ್ಯೆ, ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರದ ನೀತಿ ಏನು? ಅವರು ತಮ್ಮ ಜನರಿಗಾಗಿ ಹೋರಾಡುತ್ತಿಲ್ಲ. ಅವರು ಭಾರತಕ್ಕಾಗಿ ಹೋರಾಡುತ್ತಿಲ್ಲ. ಅವರು ಭಾರತಕ್ಕಾಗಿ ಹೋರಾಡುತ್ತಿಲ್ಲ. ಅವರು ಭಾರತದ ಪರವಾಗಿ ನಿಲ್ಲುತ್ತಿಲ್ಲ. ಅವರು ಮಾಡುತ್ತಿರುವುದು ಅಮೆರಿಕ ಹಾಗೂ ಇಸ್ರೇಲ್ಗೆ ತಲೆ ಬಾಗಿರುವುದುಎ ಎಂದು ಅಸಮಾಧಾನ ಹೊರಹಾಕಿದರು.
ಚಾಮರಾಜನಗರ: ಪ್ರೇಮಿಗಳಿಬ್ಬರು ಆತ್ಮಹತ್ಯೆಮಾಡಿಕೊಂಡ ಘಟನೆ ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇರಟ್ಟಿ ಗ್ರಾಮದಲ್ಲಿವರದಿಯಾಗಿದೆ. ಆತ್ಮಹತ್ಯೆಗೆ ಶರಣಾದ ಜೋಡಿಗಳನ್ನು ಹನೂರು ತಾಲೂಕಿನ ಮಿಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಕ್ಕುಂದಿ ಗ್ರಾಮದ ನಾಗೇಂದ್ರ (21) ಪಾಲಾರ್ ಗ್ರಾಮದ ನದಿಯಾ (19) ಎಂದು ಗುರುತಿಸಲಾಗಿದೆ. ಏನಿದು ಪ್ರಕರಣ: ಪಾಲಾರ್ ಗ್ರಾಮದ ಮಾದೇವರ ಪುತ್ರಿ ನದಿಯಾ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಐಪಿಹೆಚ್ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಇದ್ದಕ್ಕಿದ್ದ ಹಾಗೇ ನಾಪತ್ತೆಯಾಗಿದ್ದರು. ಈ ವಿಚಾರವಾಗಿ ಐಪಿಹೆಚ್
ಐಪಿಎಲ್ ಪಂದ್ಯಾಟದ ವೇಳೆ ಎಂಆರ್ಪಿ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ನೀರು ಹಾಗೂ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಯುವಕರು ಆಕ್ರೋಶ ಹೊರಹಾಕಿದ್ದಾರೆ. ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನೀರು ಮತ್ತು ಇತರ ಅಗತ್ಯ ವಸ್ತುಗಳ ಅತಿಯಾದ ಬೆಲೆಯ ವಿರುದ್ಧ ಯುವಕರು ವಾದ ನಡೆದಸಿದರು.
ಬೆಂಗಳೂರು: ಏಪ್ರಿಲ್ 5ರಂದು 2ಗಂಟೆಗಳ ಕಾಲ ನಮ್ಮ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಇನ್ನೂ ಮೆಟ್ರೋ ಸ್ಥಗಿತಕೊಳ್ಳಲು ಕಾರಣ ನೇರಳೆ ಮಾರ್ಗದ ವಿಜಯನಗರ ಮತ್ತು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಅಗತ್ಯ ನಿರ್ವಹಣಾ ಕಾಮಗಾರಿ ನಡೆಯಲಿದೆ. ಹೀಗಾಗಿ ಭಾನುವಾರ (ಏ.5ರಂದು) ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಮೆಜೆಸ್ಟಿಕ್ನಿಂದ ಮೈಸೂರು ರಸ್ತೆವರೆಗೆ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ ಎಂದರು.
ಚಿತ್ರಕಲೆಯಿಂದಲೇ ಪ್ರಸಿದ್ಧಿ ಪಡೆದಿರುವ ರಾಜಾ ರವಿವರ್ಮ ಅವರು ರಚಿಸಿದ್ದ ಚಿತ್ರವು ₹167ಕೋಟಿಗೆ ಮಾರಾಟವಾಗಿದೆ. ಈ ಚಿತ್ರವನ್ನು 1890ರಲ್ಲಿ ಈ ಚಿತ್ರವನ್ನು ರಚಿಸಿದ್ದರು. ಈ ಚಿತ್ರವು ಯಶೋಧಾ ಮತ್ತು ಕೃಷ್ಣನ ತೈಲವರ್ಣ ಕಲಾಕೃತಿಯಾಗಿದೆ. ಈ ಮೂಲಕ ಇದು ಹರಾಜಿನಲ್ಲಿ ಮಾರಾಟವಾದ ದುಬಾರಿ ಕಲಾಕೃತಿಯಾಗಿದೆ. ಪ್ರಕಾಶಮಾನವಾದ ಪ್ರದರ್ಶಿಸಲಾದ ಶಿಶು ಕೃಷ್ಣ, ತನ್ನ ತಾಯಿ ಯಶೋದೆಯೊಂದಿಗಿನ ಕ್ಷಣದ ಚಿತ್ರಣವಾಗಿದೆ. ರಕ್ಷಣೆ ಮತ್ತು ದೈವತ್ವ ಎರಡನ್ನೂ ಒಳಗೊಂಡಿರುವ ಕೋಮಲ ದೃಶ್ಯ. ರವಿವರ್ಮನು ತನ್ನ ವೃತ್ತಿಜೀವನದ ಉತ್ತುಂಗದಲ್ಲಿ 1890 ರ ದಶಕದಲ್ಲಿ
ಬೆಂಗಳೂರು: ಮಗನ ಸಾವಿನಿಂದ ಆಘಾತಕ್ಕೊಳಗಾದ ತಾಯೊಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಚಂದ್ರಾಲೇಜೌಟ್ನ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ. ಮಗು ತಾಯಿ, ಸಾಫ್ಟ್ವೇರ್ ಉದ್ಯೋಗಿ ಪ್ರತಿಭಾ ವಾಲಿ (29) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಹಾಂತೇಶ್ ವಾಲಿ ಅವರು ಪೀಣ್ಯ ಎರಡನೇ ಹಂತದಲ್ಲಿರುವ ಏಸ್ ಡಿಸೈನರ್ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ಪ್ರತಿಭಾ ವಾಲಿ ಅವರು ಸಿಲ್ಕ್ ಬೋರ್ಡ್ ಬಳಿಯ ಟೈಮ್ ಟೆಕ್ ಎಂಬ ಕಂಪನಿಯಲ್ಲಿ ವರ್ಕ್ಫ್ರಮ್ ಹೋಂ ಕೆಲಸ ಮಾಡಿಕೊಂಡಿದ್ದರು.
ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ ಪಂದ್ಯಾಟದ ವೇಳೆ ಫ್ಯಾನ್ಸ್ಗಳು ಕೈ ಕೈ ಮಿಲಾಯಿಸಿಕೊಂಡ ಘಟನೆ ನಡೆದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗಿದೆ. ವಾಗ್ವಾದದ ವೀಡಿಯೊಗಳು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಬಿಸಿಯಾದ ಜಗಳದಲ್ಲಿ ಭಾಗಿಯಾಗಿದ್ದು, ಕ್ರೀಡಾಂಗಣದೊಳಗೆ ಪೂರ್ಣ ಪ್ರಮಾಣದ ಹೋರಾಟಕ್ಕೆ ಕಾರಣವಾಯಿತು. ದೈಹಿಕ ಘರ್ಷಣೆಗೆ ಕಾರಣ ತಕ್ಷಣವೇ ಸ್ಪಷ್ಟವಾಗಿಲ್ಲ, ಆದರೆ ಜಗಳವನ್ನು ಬಿಡಿಸಲು ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ.
ಮೂಕ ಪ್ರಾಣಿಗಳ ಪ್ರೀತಿಯು ನಿಸ್ವಾರ್ಥದಿಂದಿರುತ್ತದೆ. ನಾವು ಸಾಸಿವೆಕಾಳಷ್ಟು ಪ್ರೀತಿಯನ್ನು ನೀಡಿದ್ರೆ, ಅದು ಬೆಟ್ಟದಷ್ಟು ಪ್ರೀತಿಯನ್ನು ನೀಡುತ್ತದೆ. ಮನೆ ಮಗಳು ಮದುವೆಯಾಗಿ ಹೋಗುವಾಗ ಬಿಟ್ಟೋಗ್ಬೇಡ ಎಂದು ಶ್ವಾನವೊಂದು ಭಾವುಕರಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮನೆ ಮಗಳಿಗೆ ಮದುವೆಯಾಗಿ ಸಂಜೆ ವೇಳೆ ಗಮಡನ ಮನೆಗೆ ಹೊರಡುವ ವೇಳೆ ಆಕೆ ಸಾಕಿದ್ದ ನಾಯಿಗಳು ಹೊರಡುವಾಗ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಂಪಿ ಬಳಿಯಿರುವ ಅಂಜನಾದ್ರಿ ಬೆಟ್ಟವು ಹನುಮಂತನ ಜನ್ಮಸ್ಥಳ ಎಂದು ಹೇಳಲಾಗುತ್ತದೆ. ಹನುಮಂತನ ದೇವಸ್ಥಾನವನ್ನು ತಲುಪಲು ಸುಮಾರು 570ರಿಂದ 575ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಏಪ್ರಿಲ್ 2ರಂದು ಹನುಮ ಜಯಂತಿಯನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಅಂಜನಾದ್ರಿ ಬೆಟ್ಟಗೆ ಹಲವು ಮಂದಿ ಹರಕೆ ತೀರಿಸಲು ಬೆಟ್ಟವನ್ನು ಏರುತ್ತಾರೆ.
ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್ ಕೊಡುಗೆ ದೊಡ್ಡ ಸೊನ್ನೆ. ಈ ಕ್ಷೇತ್ರದಲ್ಲಿ ಒಂದೇ ಕುಟುಂಬದ ಸದಸ್ಯರೇ ಹಲವು ವರ್ಷಗಳಿಂದ ಆಡಳಿತದಲ್ಲಿ ಇದ್ದರೂ ಅಭಿವೃದ್ಧಿಗೆ ಏನೂ ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಆರೋಪಿಸಿದರು.ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರಕ್ಕೆ ಕಾಂಗ್ರೆಸ್ ಶಾಸಕರು, ಸಂಸದರು ಏನು ಮಾಡಲಿಲ್ಲ. ಅಭಿವೃದ್ಧಿ ಏನಿದ್ದರೂ ಬಿಜೆಪಿ ಅವಧಿಯಲ್ಲೇ ಆಗಿರುವುದು. ಜಿ ಎಂ ಸಿದೇಶ್ವರ ಅವರು ಸಂಸದರಾಗಿದ್ದಾಗ ನಾನು ಕೇಂದ್ರ ರೈಲ್ವೆ ಸಚಿವನಾಗಿದ್ದ ವೇಳೆ ತುಮಕೂರು -ಚಿತ್ರದುರ್ಗ- ದಾವಣಗೆರೆ ನೇರ ರೈಲ್ವೆ ಮಾರ್ಗಕ್ಕೆ ಮನವಿ ಸಲ್ಲಿಸಲು ನಿಯೋಗದಲ್ಲಿ ಬಂದಿದ್ದರು.
ಅಮ್ರೋಹಾದಲ್ಲಿ ನಿರ್ಮಾಣ ಕಾರ್ಯದ ವೇಳೆ ಇದ್ದಕ್ಕಿದ್ದಂತೆ ಗೋಡೆ ಕುಸಿದು ಹಲವು ಕಾರ್ಮಿಕರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಈ ಘಟನೆಯೂ ಅಲ್ಲೇ ಸಮೀಪದಲ್ಲೇ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಮ್ರೋಹ ನಗರ ಕೊತ್ವಾಲಿ ಪ್ರದೇಶದ ಬೈಪಾಸ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಅವಘಡ ಸಂಭವಿಸಿದಾಗ ಕಾರ್ಮಿಕರು ಗೋಡೆ ನಿರ್ಮಿಸುತ್ತಿದ್ದರು.
ನವದೆಹಲಿ: ಜನರ ಪರವಾಗಿ ಸಂಸತ್ ನಲ್ಲಿ ಕೆಲವೊಂದು ಪ್ರಮುಖ ಪ್ರಶ್ನೆಗಳನ್ನು ಕೇಳಿ ಜನಪ್ರಿಯರಾಗಿದ್ದ ಸಂಸದ ರಾಘವ್ ಚಡ್ಡಾರನ್ನು ಆಮ್ ಆದ್ಮಿ ಪಕ್ಷ ತನ್ನ ರಾಜ್ಯ ಸಭೆ ಉಪ ನಾಯಕ ಸ್ಥಾನದಿಂದ ಬಿಡುಗಡೆಗೊಳಿಸಿದೆ. ಇದರ ಹಿಂದಿರುವ ಕಾರಣ ಏನು ಎಂದು ಈಗ ಭಾರೀ ಚರ್ಚೆಯಾಗುತ್ತಿದೆ. ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರ ಪತಿಯೂ ಆಗಿರುವ ಯುವ ಸಂಸದ ರಾಘವ್ ಚಡ್ಡಾ, ಸಂಸತ್ ನಲ್ಲಿ ಟೆಲಿಕಾಂ ಸಂಸ್ಥೆಗಳು ಉಳಿದಿರುವ ಡಾಟಾ ಮರುದಿನಕ್ಕೆ ನೀಡಬೇಕು, ರಿಚಾರ್ಜ್ ಮಾಡದೇ ಇದ್ದರೆ ಇನ್ ಕಮಿಂಗ್ ಕರೆಗಳನ್ನೂ ಸ್ಥಗಿತಗೊಳಿಸಬಾರದು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿ ಜನರ ಮನಗೆದ್ದಿದ್ದರು.
ಜಕಾರ್ತ: ಇಂಡೊನೇಷ್ಯಾದಲ್ಲಿ ಮತ್ತೆ ಪ್ರಬಲ ಭೂಕಂಪನ ಸಂಭವಿಸಿದೆ. ಇಲ್ಲಿನ ಉತ್ತರ ಭಾಗದಲ್ಲಿ ಗುರುವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.ಭೂಕಂಪದ ಬೆನ್ನಲ್ಲೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿತ್ತು. ಕೆಲವು ತಾಸಿನ ಬಳಿಕ ಸುನಾಮಿ ಆತಂಕ ದೂರವಾಗಿದೆ ಎಂದು ಇಂಡೋನೇಷ್ಯಾದ ಹವಾಮಾನ ಇಲಾಖೆ ತಿಳಿಸಿದೆ.ಸಾಗರದಾಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ. ಹಲವು ಕಡೆಗಳಲ್ಲಿ ಕಟ್ಟಡಗಳಿಗೆ ಹಾನಿಯಾಗಿದೆ. ಉತ್ತರ ಸುಲವೇಸಿ ಪ್ರಾಂತ್ಯದ ಬಿಟುಂಗ್ ಹಾಗೂ ಉತ್ತರ ಮಾನಡೊ ಪ್ರಾಂತ್ಯದಲ್ಲಿ 10ರಿಂದ 20 ಸೆಕೆಂಡುಗಳ ಕಾಲ ಬಲವಾದ ಕಂಪನ ಉಂಟಾಗಿದೆ.
ಮುಂಬೈ: ಬಹುನಿರೀಕ್ಷಿತ ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದ ಟೀಸರ್ ಕೊನೆಗೂ ರಿಲೀಸ್ ಆಗಿದೆ. ಮರ್ಯಾದಾ ಪುರುಷೋತ್ತಮನ ಪಾತ್ರಕ್ಕೆ ಬಾಲಿವುಡ್ ನಟ ರಣಬೀರ್ ಕಪೂರ್ ಜೀವತುಂಬಿದ್ದಾರೆ.ನಿತೇಶ್ ತಿವಾರಿ ನಿರ್ದೇಶಿಸಿರುವ `ರಾಮಾಯಣ ಚಿತ್ರವನ್ನ ಯಶ್ ಒಡೆತನದ ಮಾನ್ಸ್ಟರ್ ಮೈಂಡ್ ಹಾಗೂ ನಮಿತ್ ಮಲ್ಲೋತ್ರಾ ಜಂಟಿಯಾಗಿ ನಿರ್ಮಿಸಿದ್ದಾರೆ. ಹನುಮಂತನ ಲುಕ್ನ್ನ ಸೀಕ್ರೆಟಾಗಿ ಇಡಲಾಗಿದೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸಿದ್ದಾರೆ. ಬಹುತಾರಾಗಣದ ರಾಮಾಯಣದ ಫಸ್ಟ್ ಪಾರ್ಟ್ ನವೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ.ಹನುಮ ಜಯಂತಿ ಹಿನ್ನೆಲೆ ಸಿನಿಮಾದ ಟೀಸರ್ನ್ನು ಇಂದು ರಿಲೀಸ್ ಮಾಡಲಾಗಿದೆ. 2:38 ನಿಮಿಷದ ಝಲಕ್ ಹಂಚಿಕೊಂಡಿದ್ದು, ಮರ್ಯಾದಾ ಪುರುಷೋತ್ತಮ ರಾಮನ ರಾಜ್ಯಭಾರದಿಂದ ಹಿಡಿದು ವನವಾಸಕ್ಕೆ ತೆರಳುವವರೆಗಿನ ಸಣ್ಣ ತುಣುಕನ್ನ ವಿವರಿಸಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯ ಪೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಪ್ರಸ್ತಾವ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.ಬೆಂಗಳೂರಿನ ಎಚ್ ಎನ್ ಚಂದನಾ ಮತ್ತು ಎಸ್ ವೆಂಕಟೇಶ್ ಅವರು ಅರ್ಜಿ ಸಲ್ಲಿಸಿದ್ದು, ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಆಯುಕ್ತರು, ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ಹಿಂದಿ ಭಾಷೆ ಸೇರಿದಂತೆ ತೃತೀಯ ಭಾಷೆಗಳು ಕಡ್ಡಾಯವಲ್ಲ. ಈ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ಗಳನ್ನಾಗಿ ಪರಿಗಣಿಸಲಾಗುತ್ತದೆ.
ಚಿಕ್ಕಮಗಳೂರು: ನೀವು ಖರ್ಚಿಗೆ ಸ್ವಲ್ಪ ಕೊಟ್ಟರೆ ಜಾಸ್ತಿ ದುಡ್ಡು ಬರೀತೀನಿ, ಇಲ್ಲಾಂದ್ರೆ ಎಷ್ಟಿದೆಯೋ ಅಷ್ಟೇ ಬರೀತೀನಿ ಎಂದು ಫಾರೆಸ್ಟ್ ಆಫೀಸರ್ ಓಪನ್ ಆಗಿ ಲಂಚ ಕೇಳಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಮ್ಮ ದೇಶದಲ್ಲಿ ಸರ್ಕಾರೀ ಅಧಿಕಾರಿಗಳು ಲಂಚ ಕೇಳುವುದು ಮಾಮೂಲಾಗಿಬಿಟ್ಟಿದೆ. ಎಲ್ಲಾ ಇಲಾಖೆಯಲ್ಲೂ ಜನ ಸಾಮಾನ್ಯರು ತಮ್ಮ ಕೆಲಸವಾಗಬೇಕೆಂದರೆ ಲಂಚ ಕೊಡುವ ಪರಿಸ್ಥಿತಿ ಬಂದಿದೆ. ಇದೀಗ ಅಂತಹದ್ದೇ ಲಂಚಕೋರ ಅಧಿಕಾರಿಯ ವಿಡಿಯೋ ವೈರಲ್ ಆಗಿದೆ. ಚಿಕ್ಕಮಗಳೂರಿನ ಫಾರೆಸ್ಟ್ ಅಧಿಕಾರಿಯೊಬ್ಬರು ಓಪನ್ ಆಗಿಯೇ ರೈತರಿಂದ ಲಂಚ ಕೇಳಿದ್ದಾರೆ.
ಜಾತಕದಲ್ಲಿ ಗುರು ಗ್ರಹದ ದೋಷವಿದ್ದರೆ ಯಾವ ಬಣ್ಣದ ಬಟ್ಟೆ ಧರಿಸಬೇಕು, ಇದರಿಂದ ಏನು ಬದಲಾವಣೆಯಾಗುತ್ತದೆ ಇಲ್ಲಿದೆ ನೋಡಿ ಸಂಪೂರ್ಣ ವಿವರ. ಹಳದಿ ಬಣ್ಣವು ಗುರುವಿನ ಬಣ್ಣವಾಗಿದ್ದು, ಬುದ್ಧಿವಂತಿಕೆ, ವಿಸ್ತರಣೆ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಹಳದಿ ಬಣ್ಣದ ಉಡುಪುಗಳನ್ನು ಧರಿಸುವುದರಿಂದ ಗುರು ಗ್ರಹ ದೋಷದ ಪರಿಣಾಮ ಕಡಿಮೆಯಾಗುವುದು. ಹಳದಿ ಬಣ್ಣ ಎಂಬುದು ಸಾತ್ವಿಕ ಬಣ್ಣವಾಗಿದ್ದು ಇದರಿಂದ ಬೃಹಸ್ಪತಿ ದೇವರು ಪ್ರಸನನ್ನಾಗುತ್ತಾನೆ. ವಿಶೇಷವಾಗಿ ಗುರುವಾರಗಳಂದು ಹಳದಿ ಬಟ್ಟೆ ಧರಿಸಬೇಕು. ಒಂದು ವೇಳೆ ಹಳದಿ ಬಣ್ಣದ ಬಟ್ಟೆ ಧರಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಪಾಕೆಟ್ ನಲ್ಲಿ ಹಳದಿ ಕರ್ಚಿಫ್ ಆದರೂ ಇಟ್ಟುಕೊಂಡಲ್ಲಿ ಉತ್ತಮ.
ಬಾಗಲಕೋಟೆ: ಸುರ್ಜೇವಾಲಾ ಅವರೇ, ಸರಕಾರ ನಿಮ್ಮದೇ ಇದೆ. ನಿಮಗೆ ತಾಕತ್ತಿದ್ದರೆ ವಿದ್ಯಾರ್ಥಿ ಮತದಾರರನ್ನು ಇವತ್ತೇ ಬಂಧಿಸಿ ತೋರಿಸಿ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಸವಾಲು ಹಾಕಿದ್ದಾರೆ.ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಯುವಕರು, ಕಾಲೇಜು ವಿದ್ಯಾರ್ಥಿಗಳು ಮತ ಹಾಕಿದರೆ ಬಂಧಿಸುವುದಾಗಿ ಹೇಳುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಭಯ ಸೃಷ್ಟಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಖಂಡಿಸಿದರು. ರಾಜ್ಯದಲ್ಲಿ ಇನ್ನೂ ಎಸ್.ಐ.ಆರ್.ಆಗಿಲ್ಲ ಎಂದು ತಿಳಿಸಿದರು.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ಕಳೆದ ವಾರದಂತೆ ಈ ವಾರವೂ ಅದೇ ಟ್ರೆಂಡ್ ಮುಂದುವರಿದಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಳಿಕೆಯಾಗುತ್ತಲೇ ಇತ್ತು. ಕಳೆದ ವಾರ ಎರಡು ದಿನ ಸತತವಾಗಿ ಬೆಲೆ ಏರಿಕೆ ಕಂಡುಬರುತ್ತಿತ್ತು. ಇದೀಗ ಈ ವಾರ ಮತ್ತೆ ಕೆಲವು ವರ್ಗದ ಅಡಿಕೆ ಬೆಲೆಯಲ್ಲಿ ನಿನ್ನೆ ಏರಿಕೆಯಾಗಿತ್ತು. ಆದರೆ ಇಂದು ಯಥಾಸ್ಥಿತಿಯಲ್ಲಿದೆ. ಹೊಸ ಅಡಿಕೆ ಬೆಲೆ 490 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 555 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ 555 ರೂ.ಗಳಷ್ಟಾಗಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಏರಿಕೆಯಾಗಿದ್ದರೆ ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ವಾರಂತ್ಯಕ್ಕೆ ಪರಿಶುದ್ಧ ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗಿತ್ತು. ಪರಿಶುದ್ಧ ಚಿನ್ನದ ದರ ನಿನ್ನೆ 1,54,910.00 ರೂ.ಗಳಿತ್ತು. ಆದರೆ ಇಂದು ಏರಿಕೆಯಾಗಿದ್ದು 1,55,290.00 ರೂ.ಗಳಷ್ಟಿದೆ.
ಮುಂಬೈ: ರಣಬೀರ್ ಕಪೂರ್ ನಾಯಕರಾಗಿರುವ ರಾಮಾಯಣ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ರಾಮಾಯಣ ಟೀಸರ್ ನಲ್ಲಿ ಯಶ್ ಇದ್ದಾರಾ ಎಂದು ತಿಳಿಯಬೇಕಿದ್ದರೆ ಈ ವಿಡಿಯೋ ನೋಡಿ. ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ಅಭಿನಯಿಸಿದ್ದಾರೆ. ಇನ್ನು ಲಂಕಾಧೀಶ ರಾವಣನಾಗಿ ನಮ್ಮ ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸಿದ್ದಾರೆ. ಇದುವರೆಗೆ ಹಲವು ರಾಮಾಯಣ ಆಧರಿತ ಸಿನಿಮಾಗಳು ಮೂಡಿಬಂದಿವೆ. ಆದರೆ ಈ ಸಿನಿಮಾದಲ್ಲಿ ವಿಶೇಷವಾಗಿ ಅರಣ್ಯ ಕಾಂಡ, ಬಾಲಕಾಂಡಗಳನ್ನು ಹೈಲೈಟ್ ಮಾಡಲಾಗಿದ್ದು ಸಾಹಸ ದೃಶ್ಯಗಳನ್ನು ವಿಭಿನ್ನವಾಗಿ ತೋರಿಸಲಾಗಿದೆ.
ಬಿಸಿಲಿಗೆ ಪ್ರಜ್ಞೆ ತಪ್ಪಿ ಬಿದ್ದಿದ್ದ ತಾಯಿಗೆ ಈ ಬಾಲಕ ಮಾಡಿದ ಕೆಲಸ ನೋಡಿದ್ರೆ ನಿಜಕ್ಕೂ ನಮಗೆ ಪಾಠವಾಗಬೇಕು. ಪುಟ್ಟ ಬಾಲಕನಾದರೂ ಈತನಲ್ಲಿ ಅಮ್ಮನ ಬಗ್ಗೆ ಎಷ್ಟು ಕಾಳಜಿಯಿದೆ ಎನಿಸುತ್ತದೆ. ಅಮ್ಮ ಎಂದರೆ ನಮ್ಮ ಸರ್ವಸ್ವವಾಗಿರುತ್ತಾಳೆ. ಮಕ್ಕಳಿಗಾಗಿ ನಮ್ಮ ಮನಸ್ಸು ಎಷ್ಟು ಮಿಡಿಯುತ್ತದೋ ಬಹುಶಃ ಎಲ್ಲರಿಗೂ ಅಮ್ಮನ ಬಗ್ಗೆಯೂ ಅದೇ ವಿಶೇಷ ಕಾಳಜಿಯಿರುತ್ತದೆ. ಅದಕ್ಕೆ ಬಡತನ, ಸಿರಿತನ ಯಾವುದೂ ಅಡ್ಡಿ ಬರಲ್ಲ. ಇದೇ ರೀತಿ ಪುಟ್ಟ ಬಾಲಕನೊಬ್ಬ ತನ್ನ ತಾಯಿಯನ್ನು ಟ್ರೀಟ್ ಮಾಡಿದ ರೀತಿ ನಮ್ಮ ಹೃದಯ ಕರಗಿಸುತ್ತದೆ. ಇನ್ನೂ 9-10 ವರ್ಷದ ಪುಟ್ಟ ಬಾಲಕ ಕೈಯಲ್ಲಿ ನೀರು ಹಿಡಿದುಕೊಂಡು ಸುಡು ಬಿಸಿಲಿನಲ್ಲಿ ಬರಿಗಾಲಿನಲ್ಲಿ ಓಡುತ್ತಿರುತ್ತಾನೆ.
ಬೆಂಗಳೂರು: ಆರ್ ಸಿಬಿ ತಂಡದ ರೊಮಾರಿಯೋ ಶೆಫರ್ಡ್ ಹೇಗೆ ಬ್ಯಾಟಿಂಗ್ ಮಾಡ್ತಾರೆ ಎಂದು ವಿರಾಟ್ ಕೊಹ್ಲಿ ಅನುಕರಿಸಿದ ಫನ್ನಿ ವಿಡಿಯೋವೊಂದು ಇಲ್ಲಿದೆ ನೋಡಿ. ವಿರಾಟ್ ಕೊಹ್ಲಿ ಅಭ್ಯಾಸದ ವೇಳೆಯೂ ನೋಡುಗರಿಗೆ ಮನರಂಜನೆ ನೀಡುತ್ತಲೇ ಇರುತ್ತಾರೆ. ಹಲವು ಕ್ರಿಕೆಟಿಗರ ವಿಶಿಷ್ಟ ಶೈಲಿಯನ್ನು ಅನುಕರಿಸುವುದರಲ್ಲಿ ಕೊಹ್ಲಿ ಎತ್ತಿದ ಕೈ. ಭಾರತದವರೇ ಆದ ಅನೇಕ ಕ್ರಿಕೆಟಿಗರನ್ನು ಕೊಹ್ಲಿ ಅನುಕರಿಸಿದ್ದು ಇದೆ. ಕೆಲವೊಮ್ಮೆ ಪಂದ್ಯದ ನಡುವೆ ಎದುರಾಳಿ ಆಟಗಾರನನ್ನು ಅನುಕರಿಸಿ ಎಲ್ಲರ ಮುಖದಲ್ಲಿ ನಗು ತರಿಸಿಬಿಡುತ್ತಾರೆ.
ಬೆಂಗಳೂರು: ರಾಜ್ಯ ಮತ್ತು ಕೇಂದ್ರದ ಆರ್ಥಿಕತೆ ಬಗ್ಗೆ ಒಂದೇ ಸುಳ್ಳನ್ನು ನೂರು ಬಾರಿ ಹೇಳಿ ಸಣ್ಣವರಾಗಬೇಡಿ ಎಂದು ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್ ಅಶೋಕ್ ಟಾಂಗ್ ಕೊಟ್ಟಿದ್ದಾರೆ.ರಾಜ್ಯಕ್ಕೆ ಕೇಂದ್ರದಿಂದ ಯಾವುದೇ ಅನುದಾನ ಸಿಗುತ್ತಿಲ್ಲ, ರಾಜ್ಯದ ಬಜೆಟ್ ಕೇಂದ್ರದ ಬಜೆಟ್ ಗಿಂತಲೂ ಉತ್ತಮ ಎಂದು ಸಿಎಂ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದೀಗ ಯುಪಿಎ ಅವಧಿಗಿಂತಲೂ ಎನ್ ಡಿಎ ಅವಧಿಯಲ್ಲಿ ರಾಜ್ಯಕ್ಕೆ ಹೆಚ್ಚು ಅನುದಾನ ಸಿಕ್ಕಿದೆ ಎಂಬ ವರದಿಗಳನ್ನು ಉಲ್ಲೇಖಿಸಿ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಹೆಗಲ ಮೇಲಿನ ಭಾರ, ಮನಸ್ಸಿನಲ್ಲಿರುವ ನೋವಿನಿಂದ ವ್ಯಕ್ತಿಯೊಬ್ಬ ಕಣ್ಣೀರು ಹಾಕುತ್ತಾ ಭಾರದ ವಸ್ತು ಹೊರುವ ಕೆಲಸ ಮಾಡುತ್ತಾನೆ. ಈತನ ವಿಡಿಯೋ ಈಗ ನೆಟ್ಟಿಗರ ಮನಗೆದ್ದಿದೆ.ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ದೃಶ್ಯಗಳು ನಿಜಕ್ಕೂ ನಮ್ಮ ಕಣ್ಣು ತೇವವಾಗಿಸುತ್ತದೆ. ಅಂತಹದ್ದೇ ಘಟನೆಯಿದು. ನಮ್ಮ ಕುಟುಂಬ ಚೆನ್ನಾಗಿರಬೇಕು, ಸಲಹಬೇಕು ಎಂದು ಹಲವರು ಎಷ್ಟೇ ಕಷ್ಟವಾದರೂ ಕೆಲಸ ಮಾಡುತ್ತಾರೆ.ಅದೇ ರೀತಿ ಈ ವ್ಯಕ್ತಿಯೂ ತನ್ನ ಕುಟುಂಬದ ನಿರ್ವಹಣೆಗಾಗಿ ಮನಸ್ಸಿನಲ್ಲಿ ನೋವಿದ್ದರೂ ಭಾರವಾದ ಫ್ರಿಡ್ಜ್ ಹೊರುವ ಕೆಲಸ ಮಾಡುತ್ತಾನೆ.
ಲಕ್ನೋ: ಮತ್ತೆ ಮೈದಾನದಲ್ಲಿ ಲಕ್ನೋ ಮಾಲಿಕ ಸಂಜೀವ್ ಗೊಯೆಂಕಾ ಮತ್ತೆ ಮಾಲಿಕನ ದರ್ಪ ತೋರಿಸಿದ್ದಾರೆ. ನಾಯಕ ರಿಷಭ್ ಪಂತ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿನ್ನೆಯ ಪಂದ್ಯವನ್ನು ಲಕ್ನೋ ತಂಡ 6 ವಿಕೆಟ್ ಗಳಿಂದ ಸೋತಿದೆ. ಇದು ಈ ಸೀಸನ್ ನಲ್ಲಿ ಲಕ್ನೋಗೆ ಮೊದಲ ಪಂದ್ಯ. ಮೊದಲ ಪಂದ್ಯದಲ್ಲೇ ಸೋತಿದ್ದು ಲಕ್ನೋ ಮಾಲಿಕ ಸಂಜೀವ್ ಗೊಯೆಂಕಾ ಅಸಮಾಧಾನಕ್ಕೆ ಕಾರಣವಾಗಿತ್ತು.ಅದೂ ಸಾಲದೆಂಬಂತೆ ನಿನ್ನೆಯ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ 7 ರನ್ ಗಳಿಸಿ ದುರದೃಷ್ಟವಶಾತ್ ರನೌಟ್ ಆಗಿದ್ದರು. ಲಕ್ನೋ ಕೇವಲ 141 ರನ್ ಗಳಿಗೆ ಆಲೌಟ್ ಆಗಿತ್ತು.
ನ್ಯೂಯಾರ್ಕ್: ಇರಾನ್ ಜೊತೆ ತಾನೇ ಯುದ್ಧಕ್ಕೆ ನುಗ್ಗಿ ಈಗ ತನ್ನ ದೇಶದಲ್ಲೇ ವಿರೋಧ ವ್ಯಕ್ತವಾಗುತ್ತಿರುವಾಗ ಇದಕ್ಕೆಲ್ಲಾ ಮಾಜಿ ಅಧ್ಯಕ್ಷ ಒಬಾಮನೇ ಕಾರಣ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.ಇರಾನ್ ಜೊತೆ ಯುದ್ಧ ಆರಂಭವಾಗಿ ಒಂದು ತಿಂಗಳೇ ಕಳೆದಿದೆ. ಈ ಯುದ್ಧದಿಂದಾಗಿ ಜಗತ್ತಿನ ಎಲ್ಲಾ ರಾಷ್ಟ್ರಗಳೂ ಸಂಕಷ್ಟದಲ್ಲಿವೆ. ಇಂಧನ, ತೈಲ ಬಿಕ್ಕಟ್ಟು ತಲೆದೋರಿದೆ. ಇದರ ನಡುವೆ ಅಮೆರಿಕಾದಲ್ಲೇ ಟ್ರಂಪ್ ನೀತಿ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ.ಇದರ ನಡುವೆಯೇ ಟ್ರಂಪ್, ಮಧ್ಯಪ್ರಾಚ್ಯ ರಾಷ್ಟ್ರಗಳ ಹಿತದೃಷ್ಟಿಯಿಂದ ಇರಾನ್ ಜೊತೆ ಯದ್ಧ ಅನಿವಾರ್ಯವಾಗಿತ್ತು.
ಮಂಗಳೂರು: ರಸ್ತೆ ದಾಟುವಾಗ ಕಾರು ಢಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ಮಾರು ದೂರ ಹಾರಿ ಬಿದ್ದ ಭೀಕರ ದೃಶ್ಯವೊಂದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪಮುನ್ನೂರಿನಲ್ಲಿ ಘಟನೆ ನಡೆದಿದೆ. ಉಳ್ಳಾಲದ ಬೋಳಿಯಾರ್ ನಿವಾಸಿ 48 ವರ್ಷದ ಭಾರತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪುತ್ರಿ ದೀಪಶ್ರೀಯೊಂದಿಗೆ ಗುಳಿಗಜ್ಜನ ಕಟ್ಟೆಗೆ ಕಾಣಿಕೆ ಹಾಕಲು ಹೋಗುತ್ತಿದ್ದಾಗ ಆಟೋಗಾಗಿ ಕಾಯುತ್ತಿದ್ದ ಮಹಿಳೆ ಬಳಿಕ ಆಟೋ ಸಿಗದೇ ಪುತ್ರಿಯೊಂದಿಗೆ ರಸ್ತೆ ದಾಟಲು ಮುಂದಾಗಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಮಳೆಯ ಅಬ್ಬರ ಇನ್ನೂ ಕಡಿಮೆಯಾಗಿಲ್ಲ.ಇಂದು ಕರಾವಳಿ ಸೇರಿದಂತೆ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಕಳೆದ ಒಂದು ವಾರದಿಂದ ರಾಜ್ಯದ ಅಲ್ಲಲ್ಲಿ ಮಳೆಯಾಗುತ್ತಲೇ ಇದೆ. ಬೇಸಿಗೆ ಮಳೆಯಿಂದ ರೈತರಿಗೆ ಕೊಂಚ ನಷ್ಟವಾದರೂ ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನಕ್ಕೆ ಇದು ಕೊಂಚ ತಂಪು ನೀಡಿದೆ. ಇಂದೂ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗಲಿದೆ.
ಇಂದು ಗುರುವಾರವಾಗಿದ್ದು ಮಹಾವಿಷ್ಣುವಿಗೆ ವಿಶೇಷವಾದ ದಿನವಾಗಿದೆ. ಇಂದು ಮಹಾವಿಷ್ಣುವಿನ ಪ್ರಮುಖ ಅವತಾರಗಳಲ್ಲಿ ಒಂದಾಗಿರುವ ಶ್ರೀಕೃಷ್ಣನ ಕುರಿತ ಕೃಷ್ಣಾಷ್ಟಕಂ ಸ್ತೋತ್ರವನ್ನು ಓದಿ.ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಮ್ ।ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ ॥ ಅತಸೀ ಪುಷ್ಪ ಸಂಕಾಶಂ ಹಾರ ನೂಪುರ ಶೋಭಿತಮ್ ।ರತ್ನ ಕಂಕಣ ಕೇಯೂರಂ ಕೃಷ್ಣಂ ವಂದೇ ಜಗದ್ಗುರುಮ್ ॥ ಕುಟಿಲಾಲಕ ಸಂಯುಕ್ತಂ ಪೂರ್ಣಚಂದ್ರ ನಿಭಾನನಮ್ ।ವಿಲಸತ್ ಕುಂಡಲಧರಂ ಕೃಷ್ಣಂ ವಂದೇ ಜಗದ್ಗುರಮ್ ॥ ಮಂದಾರ ಗಂಧ ಸಂಯುಕ್ತಂ ಚಾರುಹಾಸಂ ಚತುರ್ಭುಜಮ್ ।ಬರ್ಹಿ ಪಿಂಛಾವ ಚೂಡಾಂಗಂ ಕೃಷ್ಣಂ ವಂದೇ ಜಗದ್ಗುರುಮ್ ॥
ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಐಪಿಎಲ್ನಲ್ಲಿ ತನ್ನ ಎರಡನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಏಪ್ರಿಲ್ 5ರಂದು ಎದುರಿಸಲಿದೆ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬದ್ಧ ಎದುರಾಳಿಗಳ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಆರ್ಸಿಬಿ ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಹಾಲಿ ಆವೃತ್ತಿಯಲ್ಲಿ ಶುಭಾರಂಭ ಮಾಡಿದ್ದರೆ, ಚೆನ್ನೈ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ಹೀನಾಯವಾಗಿ ಸೋತಿದೆ.ಹಾಲಿ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ತಂಡವು ಸನ್ರೈಸರ್ಸ್ ತಂಡವನ್ನು ಆರು ವಿಕೆಟ್ಗಳಿಂದ ಮಣಿಸಿತ್ತು. ಜೇಕಬ್ ಡಫಿ ಬೌಲಿಂಗ್ನಲ್ಲಿ ಮಿಂಚಿದ್ದರೆ, ವಿರಾಟ್ ಕೊಹ್ಲಿ, ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದರು. ಹೈದರಾಬಾದ್ ತಂಡವು ನೀಡಿದ್ದ 201 ರನ್ಗಳ ಗುರಿಯನ್ನು 26 ಎಸೆತ ಬಾರಿ ಇರುವಂತೆ ಜಯಿಸಿತ್ತು.
ಬೆಂಗಳೂರು: ಆಕ್ಷೇಪಾರ್ಹ ಹೇಳಿಕೆ ಹಾಗೂ ಪ್ರಚಾರಕ್ಕೆ ಸರ್ಕಾರಿ ನೌಕರರ ಬಳಕೆ ಸಂಬಂಧ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ರಾಜ್ಯ ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ದೂರನ್ನು ಣಿಡಿದೆ. ಶಾಸಕ ಸಿಕೆ ರಾಮಮೂರ್ತಿ ಅವರು ದೂರನ್ನು ನೀಡಿಮ ಶಾಸಕ ಪ್ರದೀಪ್ ಈಶ್ವರ್ ಬಿಜೆಪಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಪ್ರದೀಪ್ ಈಶ್ವರ್ ಒಬ್ಬ ಹುಚ್ಚ. ನಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಸಂವಿಧಾನ ವಿರೋಧಿ. ಹೀಗಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. .ಇನ್ನು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚಂದ್ರಶೇಖರ್ ನುಗ್ಲಿ ಹಾಗೂ ಇತರೆ ಶಿಕ್ಷಕರು ಪ್ರಚಾರ ನಡೆಸಿದ್ದರು. ಸರ್ಕಾರಿ
ತಿರುಪತ್ತೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಗೃಹೋಪಯೋಗಿ ವಸ್ತುಗಳ ಖರೀದಿಗೆ ₹8000ದ ಕೂಪನ್ಗಳನ್ನು ನಿಡಲಾಗುವುದು ಎಂದು ಘೋಷಿಸಿದರು. ಇದರಿಂದ ಜನರು ಟಿವಿ, ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್ಗಳಂತಹ ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಈ ಹಿಂದೆ ಶಾಲಾ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳನ್ನು ವಿತರಿಸಿದ್ದರೆ, ದ್ರಾವಿಡ ಮಾದರಿ ಸರ್ಕಾರದ ಅಡಿಯಲ್ಲಿ 10 ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳನ್ನು ಒದಗಿಸಲಾಗಿದೆ ಎಂದು ಉದಯನಿಧಿ ಹೇಳಿದರು.
ಹಾವೇರಿ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ಗೆ ಬಸ್ ನುಗ್ಗಿದ ಪರಿಣಾಮ ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಇಂದು ಬೆಂಗ್ಗೆ ನಡೆದಿದೆ. ಮೃತ ಮಗುವನ್ನು ಹಜರತ್ ಅಲಿ ಇಸ್ಮಾಯಿಲ್ ರಾಯಚೂರು ಎಂದು ಗುರುತಿಸಲಾಗಿದೆ.ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ನೋಡುವಾಗ ಎದೆ ಝಲ್ಲೆನಿಸುತ್ತದೆ. ಮೂವರು ಗಾಯಗೊಂಡಿದ್ದು, ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಾವೇರಿ ಸಂಚಾರ ಠಾಣೆ ಪೊಲೀಸರು ತಿಳಿಸಿದರು.ಸವಣೂರಿನ ಹಜರತ್ ಅಲಿ ಹಾಗೂ ಪೋಷಕರು, ಹಾವೇರಿಗೆ ಬಂದಿದ್ದರು. ವಾಪಸು ತಮ್ಮೂರಿಗೆ ಹೋಗಲು ಬಸ್ಗಾಗಿ ಕಾಯುತ್
ಬೆಂಗಳೂರು: ಅಹಿಂದ ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಅವರು ಅಹಿಂದ ವರ್ಗಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ಕಾಂಗ್ರೆಸ್ ಸರ್ಕಾರವನ್ನು ತಿರಸ್ಕರಿಸಿ ಎಂದು ಶಾಸಕ ವಿ ಸುನಿಲ್ ಕುಮಾರ್ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಎರಡು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆ ಹಿನ್ನೆಲೆ ಉದ್ದೇಶಿಸಿ ಮಾತನಾಡಿದ ಅವರು, ಬೇರೆ ಬೇರೆ ಸಮಾರಂಭದಲ್ಲಿ ನಾನು ಅಹಿಂದದ ಹಿತವನ್ನು ಕಾಪಾಡುತ್ತೇನೆ, ಅಹಿಂದ ವರ್ಗವನ್ನು ಉಳಿಸುತ್ತೇನೆ ಎಂದು ಹೇಳುತ್ತಾ ಬಂದ ಸಿದ್ದರಾಮಯ್ಯನವರು ನಿರಂತರವಾಗಿ ಅಹಿಂದ ವರ್ಗಕ್ಕೆ ಮೋಸ ಮಾಡುತ್ತಾ ಬಂದಿದ್ದಾರೆ ಎಂದು ದೂರಿದರು.
ಸಮಸ್ಯೆಗಳನ್ನು ಒಪ್ಪಿಕೊಂಡ ಕಿವಿ ಹಿಡಿದು ಕ್ಷಮೆಯಾಚಿಸಿದ್ದ ಐಎಎಸ್ ಅಧಿಕಾರಿ ರಿಂಕು ಸಿಂಗ್ ರಾಹಿ ಅವರು ಇದೀಗ ಅವರು ತಮ್ಮ ವೃತ್ತಿಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.ಇನ್ನೂ ರಾಜೀನಾಮೆಗೂ ಮುನ್ನಾ ಅವರು ವ್ಯವಸ್ಥೆಯಲ್ಲಿ ಪ್ರಾಮಾಣಿಕರಿಗೆ ವಿಭಿನ್ನ ರೀತಿಯ ಶಿಕ್ಷೆ ನೀಡಲಾಗುತ್ತದೆ. ಅಲ್ಲಿ ಅವರಿಗೆ ಸಂಬಳ ನೀಡಲಾಗುತ್ತದೆ. ಆದರೆ, ದೀರ್ಘಕಾಲದವರೆಗೆ ಯಾವುದೆ ಹುದ್ದೆ ಅಥವಾ ಜವಾಬ್ದಾರಿ ನೀಡಲಾಗುವುದಿಲ್ಲ ಎಂದರು.ಆಳುವ ವರ್ಗವು ತಮಗೆ ಕೆಲಸವಿಲ್ಲದೆ ಸುಮ್ಮನೆ ಕೂರುವಂತೆ ಮಾಡಿತ್ತು. ಸಂಬಳ ಬರುತ್ತಿತ್ತು, ಆದರೆ, ಸಾರ್ವಜನಿಕರ ಕೆಲಸ
ನವದೆಹಲಿ: ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದಲ್ಲಿ ಉಂಟಾಗಿರುವ ಉದ್ವಿಗ್ನತೆ ನಡುವೆ ಸುಮಾರು 5,98,000 ಪ್ರಯಾಣಿಕರು ಭಾರತಕ್ಕೆ ಮರಳಿದ್ದಾರೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ನಿನ್ನೆ ದುಬೈನಲ್ಲಿ ಪ್ರತಿಬಂಧಕದಿಂದ ಅವಶೇಷಗಳಿಂದ ಉಂಟಾದ ಘಟನೆಯಲ್ಲಿ ಮೂವರು ಭಾರತೀಯ ಪ್ರಜೆಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಮತ್ತು ದೂತಾವಾಸವು ಅವರೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ಅವರು ಹಂಚಿಕೊಂಡಿದ್ದಾರೆ. ದಕ್ಷಿಣ ದುಬೈನಲ್ಲಿ ಮನೆಗಳ ಮೇಲೆ ಬಿದ್ದ ಪ್ರತಿಬಂಧಕದಿಂದ ಉಂಟಾದ ಅವಶೇಷಗಳಿಂದ ಉಂಟಾದ ಘಟನೆಯಲ್ಲಿ ಇಬ್ಬರು
ಡಿಸಿಎಂ ಡಿಕೆ ಶಿವಕುಮಾರ್ ಅವರು ಉಪಚುನಾವಣೆ ಪ್ರಚಾರದ ಬಿರುಸಿನ ನಡುವೆಯೂ ದಾವಣಗೆರೆ ಬೆಣ್ಣೆ ದೋಸೆ ಸವಿದು ಫುಲ್ ಖುಷ್ ಆಗಿದ್ದಾರೆ. ದಾವಣಗೆರೆಯ ಐಕಾನಿಕ್ ಬೆಣ್ಣೆ ದೋಸೆಗೆ ಫಿದಾ ಆಗದವರು ಯಾರಿಲ್ಲ. ಇಲ್ಲಿಯ ಬೆಣ್ಣೆ ದೋಸೆಯ ಬಗ್ಗೆ ಸ್ಟಾರ್ ನಟ ನಟಿಯರು, ರಾಜಕಾರಣಿಗಳು ಹೇಳುವುದುಂಟು. ಇನ್ನೂ ಕೆಲವರು ಕರ್ನಾಟಕಕ್ಕೆ ಬಂದಾಗಲೆಲ್ಲ ದಾವಣಗೆರೆ ಭೇಟಿ ವೇಳೆ ಬೆಣ್ಣೆ ದೋಸೆ ಸವಿಯುತ್ತಾರೆ. ದಾವಣಗೆರೆ ಎಂದಾಕ್ಷಣ ನೆನಪಾಗುವುದೇ ಬೆಣ್ಣೆ ದೋಸೆ. ಇದೀಗ ಡಿಕೆ ಶಿವಕುಮಾರ್ ಅವರು ಉಪಚುನಾವಣೆ ಸಂದರ್ಭದಲ್ಲಿ
ನವದೆಹಲಿ: ಭಾರತದ ಕಚ್ಚಾ ತೈಲ ದಾಸ್ತಾನುಗಳು ಸಮರ್ಪಕವಾಗಿ ಉಳಿದಿವೆ, ಸರ್ಕಾರವು ಮುಂದಿನ ಎರಡು ತಿಂಗಳಿಗೆ ಸಾಕಷ್ಟು ಸರಬರಾಜುಗಳನ್ನು ಭದ್ರಪಡಿಸುತ್ತದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಬುಧವಾರ ನಡೆದ ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ನಡುವೆ ಅಂತರ ಸಚಿವಾಲಯದ ಬ್ರೀಫಿಂಗ್ನಲ್ಲಿ ಹೇಳಿದರು.ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಯಾವುದೇ ಡ್ರೈ-ಔಟ್ನ ವರದಿಗಳಿಲ್ಲ.
ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯಕೀಯ ನಿಗಾದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಚಿತ್ರದಲ್ಲಿ ಸೋನಿಯಾ ಗಾಂಧಿ ಜೊತೆಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇದ್ದಾರೆ.ಇದೀಗ ಈ ಪೋಟೋ ಹಿಂದಿನ ಅಸಲಿಯತ್ತು ಬಗ್ಗೆ ತನಿಖೆ ನಡೆದಿದೆ. ಆದರೆ ಅದು ಎಐ ಫೋಟೋ ಎಂದು ತಿಳಿದುಬಂದಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು (ಆರ್ಚಿ ಲಿಂಕ್) ‘ಸಂಪತ್ ದೇವಿ ಪಾಲ್’ ಅವರು ಮಾರ್ಚ್ 30, 2026 ರಂದು ವೈರಲ್
ದಾವಣಗೆರೆ: ಅಹಿಂದ ವರ್ಗದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಅಹಿಂದ ವರ್ಗಕ್ಕೆ ನಿರಂತರವಾಗಿ ಅನ್ಯಾಯ ಮಾಡ್ತಾ ಬಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಪೂರೈಸಿದರೂ ಜನಸಾಮಾನ್ಯರ ಯಾವುದೇ ವರ್ಗಕ್ಕೆ ನ್ಯಾಯ ಕೊಡುವಲ್ಲಿ ವಿಫಲವಾಗಿದೆ ಎಂದು ಶಾಸಕ ವಿ ಸುನಿಲ್ ಕುಮಾರ್ ಅವರು ಆರೋಪಿಸಿದರು. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಸಮಾರಂಭದಲ್ಲಿ ನಾನು ಅಹಿಂದದ ಹಿತವನ್ನು ಕಾಪಾಡುತ್ತೇನೆ, ಅಹಿಂದ ವರ್ಗವನ್ನು ಉಳಿಸುತ್ತೇನೆ ಎಂದು ಹೇಳುತ್ತಾ ಬಂದ ಮುಖ್ಯಮಂತ್ರಿಗಳು ನಿರಂತರವಾಗಿ ಅಹಿಂದ ವರ್ಗಕ್ಕೆ ಮೋಸ ಮಾಡಿದರು ಎಂದರು.
ಶಿವಸಾಗರ್: ಅಸ್ಸಾಂನ ಹಿಮಂತ ಬಿಸ್ವ ಶರ್ಮಾ ಸರ್ಕಾರವು ಭ್ರಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬುಧವಾರ ಆರೋಪಿಸಿದರು. ರಾಜ್ಯದಲ್ಲಿ "ಮಾಫಿಯಾ ಆಡಳಿತ" ಎಂದು ಹೇಳಿಕೊಂಡಿದ್ದಾರೆ. ಗಾಯಕ ಜುಬೀನ್ ಗಾರ್ಗ್ ಅವರ ಸಾವನ್ನು ರಾಜಕೀಯಗೊಳಿಸುತ್ತಿರುವ ಆರೋಪವನ್ನು ಅವರು ತಳ್ಳಿಹಾಕಿದರು ಮತ್ತು ಗೌರವಾನ್ವಿತ ವ್ಯಕ್ತಿಗೆ ನ್ಯಾಯವನ್ನು ಹುಡುಕುವುದು ಅವಕಾಶವಾದಕ್ಕಿಂತ ರಾಜಕೀಯ ಕರ್ತವ್ಯವಾಗಿದೆ ಎಂದು ಪ್ರತಿಪಾದಿಸಿದರು.
ರಾಮನಗರ: ತನಗೆ ನಿತ್ಯ ಹಣ್ಣು ನೀಡಿ, ತನ್ನ ಹಸಿವನ್ನು ನೀಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಾಗ ಕೋತಿಯೊಂದು ಕಂಬನಿ ಮಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದಾಗ ಕರುಳು ಚುರ್ ಅನಿಸುತ್ತದೆ. ತನಗೆ ಅನ್ನ ನೀಡುತ್ತಿದ್ದ ಒಡತಿಯ ಅಗಲಿಕೆಯನ್ನು ಸಹಿಸಲಾಗದ ಮಂಗವೊಂದು ಮೃತದೇಹದ ಮೇಲೆ ಮಲಗಿ ಕಣ್ಣೀರಿಟ್ಟ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.
ಬೆಂಗಳೂರು: ಶಾಸಕ ಪ್ರದೀಪ್ ಈಶ್ವರ್ ಅವರು ಅವಹೇಳನಕಾರಿ ಮಾತನಾಡುತ್ತಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಇಂದು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಅವರು ತಿಳಿಸಿದ್ದಾರೆ.ಸಿ.ಕೆ. ರಾಮಮೂರ್ತಿ, ಪಕ್ಷದ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಅವರು ಇಂದು ಮಹಾರಾಣಿ ಕಾಲೇಜು ಸರ್ಕಲ್ ಬಳಿ ಇರುವ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದರು.
ಮಂಗಳವಾರ ಮುಲ್ಲನ್ಪುರದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧದ ಐಪಿಎಲ್ 2026 ರ ಆರಂಭಿಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಾಯಕ ಶ್ರೇಯಸ್ ಅಯ್ಯರ್ ಅವರು ನಿಧಾನಗತಿಯ ಓವರ್ ರೇಟ್ ಅನ್ನು ನಿರ್ವಹಿಸಿದ ಕಾರಣ ₹ 12 ಲಕ್ಷದ ಭಾರಿ ದಂಡವನ್ನು ವಿಧಿಸಿದ್ದಾರೆ."ಪಂಜಾಬ್ ಕಿಂಗ್ಸ್ (PBKS) ನಾಯಕ ಶ್ರೇಯಸ್ ಅಯ್ಯರ್ ಅವರು ಗುಜರಾತ್ ಟೈಟಾನ್ಸ್ (GT) ವಿರುದ್ಧ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರ ಪಂದ್ಯದ ನಂ. 4 ರ ಪಂದ್ಯದ ವೇಳೆ ನ್ಯೂ ಚಂಡೀಗಢದ ನ್ಯೂ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ತಮ್ಮ ತಂಡವು ನಿಧಾನವಾದ ಓವರ್-ರೇಟ್ ಅನ್ನು ನಿರ್ವಹಿಸಿದ ನಂತರ ಅವರಿಗೆ ದಂಡ ವಿಧಿಸಲಾಗಿದೆ" ಎಂದು ಐಪಿಎಲ್ ಅಧಿಕೃತ ಹೇಳಿಕೆ ತಿಳಿಸಿದೆ.
ನವದೆಹಲಿ: ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿ ಮತ್ತು ಅವರ ನಿರ್ಮಾಣ ಸಂಸ್ಥೆ ಪರಂವಾ ಸ್ಟುಡಿಯೋಸ್ಗೆ ದೆಹಲಿ ಹೈಕೋರ್ಟ್ ಭಾರೀ ದಂಡ ವಿಧಿಸಿದೆ. ಬ್ಯಾಚುಲರ್ ಪಾರ್ಟ್ ಸಿನಿಮಾದಲ್ಲಿ ಒಮ್ಮೆ ನಿನ್ನನ್ನು ಹಾಡಿನ 31 ಸೆಕೆಂಡ್ಗಳು ಹಾಗೂ ನ್ಯಾಯ ಎಲ್ಲಿದೆ ಹಾಡಿನ 7 ಸೆಕೆಂಡ್ಗಳಷ್ಟು ಬಳಸಲಾಗಿದೆ. ಇದರ ವಿರುದ್ಧ ಬೆಂಗಳೂರಿನ ಎಂಆರ್ಟಿ ಸ್ಟುಡಿಯೋಸ್ ಕೋರ್ಟ್ ಮೆಟ್ಟಿಲೇರಿತ್ತು.ರಕ್ಷಿತ್ ಶೆಟ್ಟಿ ನಿರ್ಮಾಣದ ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ಅನುಮತಿಯಿಲ್ಲದೆ ಎರಡು ಹಾಡುಗಳನ್ನು ಬಳಸಿಕೊಂಡಿದ್ದಕ್ಕಾಗಿ ನ್ಯಾಯಾಲಯವು ಒಟ್ಟು ₹25 ಲಕ್ಷ ಪಾವತಿಸುವಂತೆ ಆದೇಶಿಸಿದೆ. ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ. 2024ರ ಆಗಸ್ಟ್ನಲ್ಲಿ ನಾಲ್ಕು ವಾರದಲ್ಲಿ ₹20 ಲಕ್ಷ ಪಾವತಿಸುವಂತೆ ಮಧ್ಯಂತರ ಆದೇಶ ಹೊರಡಿಸಿತ್ತು.
ಗುವಾಹಟಿ: ಅಸ್ಸಾಂನ ದಿಬ್ರುಗಢ ಜಿಲ್ಲೆಯ ಚಹಾ ತೋಟದಲ್ಲಿ ಮಹಿಳಾ ಕಾರ್ಮಿಕರೊಂದಿಗೆ ಎಲೆ ಕಿತ್ತ ಪ್ರಧಾನಿ ಮೋದಿ ಸೆಲ್ಫೀಗೆ ಪೋಸ್ ನೀಡಿದ್ದಾರೆ. ಅಸ್ಸಾಂ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ಮೋದಿ ತೆರಳಿದ್ದರು. ಈ ವೇಳೆ ಪ್ರಚಾರ ರಾಲಿಯಲ್ಲಿ ಭಾಗಿಯಾದ ಮೋದಿ ಬಳಿಕ ಅಲ್ಲಿ ಟೀ ಎಸ್ಟೇಟ್ ಗೆ ಭೇಟಿ ನೀಡಿ ಕೆಲವು ಸಮಯ ಕಳೆದಿದ್ದಾರೆ. ಜೊತೆಗೆ ಮಹಿಳಾ ಕಾರ್ಮಿಕರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡ ಅವರು ಚಹಾ ತೋಟ ಹೊಂದಿರುವ ಕುಟುಂಬಗಳ ಪ್ರಯತ್ನದ ಬಗ್ಗೆ ನನಗೆ ಹೆಮ್ಮೆಯಿದೆ. ಅವರ ಕಠಿಣ ಪರಿಶ್ರಮವು ಅಸ್ಸಾಂ ಘನತೆಯನ್ನು ಹೆಚ್ಚಿಸಿದೆ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು: ಕೇರಳದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಯುವ ನಟಿಯೊಬ್ಬರು ನೀಡಿದ ದೂರಿನನ್ವಯ ಕೊಚ್ಚಿ ಪೊಲೀಸರು ಇಡುಕ್ಕಿಯಲ್ಲಿ ರಂಜಿತ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತೋಡುಪುಳದ ಸ್ಥಳೀಯ ಅಧಿಕಾರಿಗಳ ನೆರವಿನೊಂದಿಗೆ ಎರ್ನಾಕುಲಂ ಸೆಂಟ್ರಲ್ ಪೊಲೀಸರು ರಂಜಿತ್ ಅವರನ್ನು ಬಂಧಿಸಿದ್ದಾರೆ. ಚಿತ್ರೀಕರಣ ಹಂತದಲ್ಲಿರುವ ಸಿನಿಮಾವೊಂದರ ಸೆಟ್ನಲ್ಲಿ ಈ ಲೈಂಗಿಕ ದೌರ್ಜನ್ಯ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಶೂಟಿಂಗ್ ವೇಳೆ ರಂಜಿತ್ ಅವರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಣಾಮದಿಂದಾಗಿ ಭಾರತದಲ್ಲಿ ಕಚ್ಚಾ ತೈಲದ ಅಭಾವ ಹೆಚ್ಚಾಗಿದೆ. ಇದರ ಬೆನ್ನಲ್ಲೇ ವಾಣಿಜ್ಯ ಸಿಲಿಂಡರ್, ವಿಮಾನದಲ್ಲಿ ಬಳಸುವ ಇಂಧನದ ದರ ಏರಿಕೆಯಾಗಿದೆ. ವಾಣಿಜ್ಯ ಉದ್ದೇಶಕ್ಕೆ ಬಳಸುವ ಎಲ್ಪಿಜಿ ಸಿಲಿಂಡರ್ ದರ ₹195.50 ಹೆಚ್ಚಳವಾಗಿದ್ದರೆ, ವಿಮಾನಗಳಲ್ಲಿ ಬಳಸುವ ಇಂಧನ ಬೆಲೆ ದ್ವಿಗುಣಗೊಂಡಿದೆ. ವಿಮಾನ ಇಂಧನ ದರವು ಇದೇ ಮೊದಲ ಬಾರಿಗೆ ದಾಖಲೆಯ ಪ್ರತಿ ಕಿಲೋ ಲೀಟರ್ಗೆ ₹2 ಲಕ್ಷ ದಾಟಿದೆ.ದೆಹಲಿಯಲ್ಲಿ ವಿಮಾನ ಇಂಧನ ದರವು ಪ್ರತಿ ಕಿಲೋ ಲೀಟರ್ಗೆ (ಒಂದು ಸಾವಿರ ಲೀಟರ್) ₹110,703 ಹೆಚ್ಚಳವಾಗಿ ₹207,341ಕ್ಕೆ ತಲುಪಿದೆ. ಅಂದರೆ ಬರೋಬ್ಬರಿ ಶೇ 114.5 ರಷ್ಟು ಬೆಲೆ ಏರಿಕೆ ಕಂಡಿದೆ.
ಬಾಗಲಕೋಟೆ: ಈ ಸರಕಾರ ಅಭಿವೃದ್ಧಿಶೂನ್ಯವಾಗಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಅಹಿಂದ ನಾಯಕ ಎಂದು ಪದೇ ಪದೇ ಹೇಳಿಕೊಳ್ಳುತ್ತಾರೆ. ಅಹಿಂದ ಸಮುದಾಯಕ್ಕೆ, ದಲಿತ ಸಮುದಾಯಗಳಿಗೆ ಅನ್ಯಾಯ ಆಗಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ತಿಳಿಸಿದ್ದಾರೆ.ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಅಧಿಕಾರದ ಅವಧಿಯಲ್ಲಿ ನಾವು ಎಸ್ಸಿ, ಎಸ್ಟಿ ಸಮುದಾಯಗಳ ಮೀಸಲಾತಿಯನ್ನು ಹೆಚ್ಚಿಸಿದ್ದೆವು. ಅದನ್ನು ಈ ಸರಕಾರ ಕಡಿಮೆ ಮಾಡಿದೆ. ಈ ದೊಡ್ಡ ಕೊಡುಗೆಯನ್ನು ಸಿದ್ದರಾಮಯ್ಯನವರ ಸರಕಾರ ನೀಡಿದೆ ಎಂದು ವ್ಯಂಗ್ಯವಾಡಿದರು. ಈ ಸಮಾಜವನ್ನು ತ್ರಿಶಂಕು ಸ್ಥಿತಿಗೆ ತಳ್ಳಿದ್ದಾರೆ ಎಂದು ಟೀಕಿಸಿದರು.