Shorts

ಬೆಂಗಳೂರು: ಕರ್ನಾಟಕದಲ್ಲಿ ಎರಡು ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗೆ ಇಂದು ಬಿಜೆಪಿ ಪರ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಬಾಗಲಕೋಟೆ ಮತ್ತು ದಾವಣಗೆರೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಇದಕ್ಕಾಗಿ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಇದುವರೆಗೆ ಬಿಜೆಪಿ ಅಭ್ಯರ್ಥಿಗಳ ಪರ ಮಿತ್ರ ಪಕ್ಷ ಜೆಡಿಎಸ್ ನಾಯಕರು ಬಂದಿರಲಿಲ್ಲ. ಕುಮಾರಸ್ವಾಮಿ ಪ್ರಚಾರಕ್ಕೆ ಬರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆ ನೀಡಿದ್ದರು. ಅದರಂತೆ ಇಂದು ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಎಚ್ ಡಿ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಕುಮಾರಸ್ವಾಮಿ ಜೊತೆಗೆ ರಾಜ್ಯದ ಪ್ರಮುಖ ಬಿಜೆಪಿ ನಾಯಕರೂ ಇಂದು ಪ್ರಚಾರಕ್ಕೆ ಸಾಥ್ ನೀಡಲಿದ್ದಾರೆ.

ಮದುವೆ, ಸಂತಾನ ಸಮಸ್ಯೆಯಾಗುತ್ತಿದ್ದರೆ ಸುಬ್ರಹ್ಮಣ್ಯನ ಕುರಿತು ಪ್ರಾರ್ಥನೆ ಮಾಡಬೇಕು. ಅದಕ್ಕಾಗಿ ಸುಬ್ರಹ್ಮಣ್ಯ ಭುಜಂಗ ಪ್ರಯಾತ ಸ್ತೋತ್ರವನ್ನು ತಪ್ಪದೇ ಓದಿ. ಇದರಿಂದ ಮಾನಸಿಕವಾಗಿಯೂ ನೆಮ್ಮದಿ ಸಿಗುವುದು.ಭಜೇಽಹಂ ಕುಮಾರಂ ಭವಾನೀಕುಮಾರಂಗಲೋಲ್ಲಾಸಿಹಾರಂ ನಮತ್ಸದ್ವಿಹಾರಮ್ ।ರಿಪುಸ್ತೋಮಪಾರಂ ನೃಸಿಂಹಾವತಾರಂಸದಾನಿರ್ವಿಕಾರಂ ಗುಹಂ ನಿರ್ವಿಚಾರಮ್ ॥ 1 ॥ ನಮಾಮೀಶಪುತ್ರಂ ಜಪಾಶೋಣಗಾತ್ರಂಸುರಾರಾತಿಶತ್ರುಂ ರವೀಂದ್ವಗ್ನಿನೇತ್ರಮ್ ।ಮಹಾಬರ್ಹಿಪತ್ರಂ ಶಿವಾಸ್ಯಾಬ್ಜಮಿತ್ರಂಪ್ರಭಾಸ್ವತ್ಕಳತ್ರಂ ಪುರಾಣಂ ಪವಿತ್ರಮ್ ॥ 2 ॥ ಅನೇಕಾರ್ಕಕೋಟಿ-ಪ್ರಭಾವಜ್ಜ್ವಲಂ ತಂಮನೋಹಾರಿ ಮಾಣಿಕ್ಯ ಭೂಷೋಜ್ಜ್ವಲಂ ತಮ್ ।ಶ್ರಿತಾನಾಮಭೀಷ್ಟಂ ನಿಶಾಂತಂ ನಿತಾಂತಂಭಜೇ ಷಣ್ಮುಖಂ ತಂ ಶರಚ್ಚಂದ್ರಕಾಂತಮ್ ॥ 3 ॥ ಕೃಪಾವಾರಿ ಕಲ್ಲೋಲಭಾಸ್ವತ್ಕಟಾಕ್ಷಂವಿರಾಜನ್ಮನೋಹಾರಿ ಶೋಣಾಂಬುಜಾಕ್ಷಮ್ ।ಪ್ರಯೋಗಪ್ರದಾನಪ್ರವಾಹೈಕದಕ್ಷಂಭಜೇ ಕಾಂತಿಕಾಂತಂ ಪರಸ್ತೋಮರಕ್ಷಮ್ ॥ 4 ॥

ಕೋಲ್ಕತ್ತ: ಪಂದ್ಯ ನಡೆಯುವ ವೇಳೆ ಅಂಪೈರ್‌ ಜೊತೆ ವಾಗ್ವಾಗ ನಡೆಸಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆರಂಭಿಕ ಬ್ಯಾಟರ್‌ ಅಭಿಷೇಕ್‌ ಶರ್ಮಾ ಅವರಿಗೆ ಬಿಸಿಸಿಐ ಬಿಗ್‌ಶಾಕ್‌ ನೀಡಿದೆ.ಈಡನ್‌ ಗಾರ್ಡನ್‌ನಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಅಭಿಷೇಕ್‌ ಅಬ್ಬರಿಸಿದ್ದರು. ಈ ಪಂದ್ಯದಲ್ಲಿ 228.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಸ್‌ ಬೀಸಿ 48 ರನ್‌ ಗಳಿಸಿದ್ದರು. ಅವರಿಗೆ ಈಗ ದಂಡದ ಬಿಸಿ ತಟ್ಟಿದೆ.ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಎಸ್‌ಆರ್‌ಹೆಚ್‌ ತಂಡದ ಆಲ್‌ರೌಂಡರ್‌ ಅಭಿಷೇಕ್‌ ಬಿಸಿಸಿಐ ನಿಂದ ಶಿಕ್ಷೆಗೆ ಗುರಿಯಾಗಿದ್ದಾರೆ. ಪಂದ್ಯದ ವೇಳೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಕ್ಕಾಗಿ ಅಭಿಗೆ ಬಿಸಿಸಿಐ, ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ಹಾಗೂ 1 ಡಿಮೆರಿಟ್‌ ಪಾಯಿಂಟ್‌ ಅನ್ನು ಕೂಡ ಸಂಗ್ರಹಿಸಿದೆ.

ಬಾಗಲಕೋಟೆ: ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ತಮ್ಮ ಅಧಿಕಾರವನ್ನು ಸ್ವಂತಕ್ಕೋಸ್ಕರ, ಸ್ವಾರ್ಥಕ್ಕೋಸ್ಕರ ಮತ್ತು ರಾಜ್ಯದ ಜನರಿಗೆ ವಂಚನೆ ಮಾಡುವ ಕೆಲಸ ಮಾಡಿ, ಈ ರಾಜ್ಯವನ್ನು ಕತ್ತಲೆ ಕೋಣೆಯಲ್ಲಿಡುವ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಆರೋಪಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಬೆಂಗಳೂರು ನಗರದ ಅಭಿವೃದ್ಧಿಯಲ್ಲಿ ನಮ್ಮದೇ ಆದ ಪಾಲುದಾರಿಕೆಯನ್ನು ಕೊಟ್ಟಿದ್ದೇವೆ ಎಂದು ತಿಳಿಸಿದರು. ಯಾವುದೇ ಶಾಸಕರೂ ತನ್ನ ಕಾರ್ಯಕ್ಷೇತ್ರಕ್ಕೆ ಹೋಗಿ ನಾನು ಒಳ್ಳೆಯ ಕೆಲಸ ಮಾಡಿದ್ದೇನೆ; ನನ್ನಿಂದ ಇಷ್ಟು ಕೆಲಸ ಆಗಿದೆ ಎಂದು ಹೇಳುವ ನೈತಿಕತೆಯನ್ನು ಕೇವಲ ವಿಪಕ್ಷದವರಷ್ಟೇ ಅಲ್ಲ; ಆಡಳಿತ ಪಕ್ಷದವರೂ ಕಳಕೊಂಡಿದ್ದಾರೆ ಎಂದು ನುಡಿದರು.

ಗುವಾಹಟಿ: ಪಶ್ಚಿಮ ಏಷ್ಯಾ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ ದೇಶದಲ್ಲಿ "ಅನಿಲ ಅಥವಾ ಇಂಧನದ ಕೊರತೆಯಿಲ್ಲ" ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಭರವಸೆ ನೀಡಿದ್ದಾರೆ, ಏಕೆಂದರೆ ಜನರು ಯಾವುದೇ ಸಮಸ್ಯೆಗಳನ್ನು ಎದುರಿಸದಂತೆ ಸರ್ಕಾರವು ವಿವಿಧ ಕ್ರಮಗಳನ್ನು ಅಳವಡಿಸಿಕೊಂಡಿದೆ. ಎಎನ್‌ಎಯೊಂದಿಗೆ ಮಾತನಾಡಿದ ಗಡ್ಕರಿ ಅವರು, ಭಾರತವು ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ಆಮದುಗಳ ಮೇಲೆ ಅವಲಂಬಿತವಾಗಿದೆ ಎಂದು ಒಪ್ಪಿಕೊಂಡರು ಆದರೆ ಹೆಚ್ಚು ರಫ್ತು-ಕೇಂದ್ರಿತ ವ್ಯಾಪಾರಕ್ಕೆ ತಳ್ಳಲು ಪರ್ಯಾಯ ಆಯ್ಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸರ್ಕಾರದ ಸ್ವಾವಲಂಬನೆಯ ವಿಧಾನವನ್ನು ಎತ್ತಿ ತೋರಿಸಿದರು. ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಇಂದು ದೇಶದಲ್ಲಿ ಗ್ಯಾಸ್, ಇಂಧನದ ಕೊರತೆ ಇಲ್ಲ.ಹೌದು ಕಷ್ಟಗಳಿವೆ.ಆದರೆ

ಕೊಲ್ಲಂ: ಇತ್ತೀಚಿನ ಎಲ್‌ಪಿಜಿ ಮತ್ತು ಇತರ ಇಂಧನಗಳ ಬೆಲೆ ಏರಿಕೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪರವಾಗಿ ನಿಲ್ಲುವ ಬದಲು ಇಸ್ರೇಲ್, ಅಮೆರಿಕಕ್ಕೆ ತಲೆ ಬಾಗಿದ್ದಾರೆ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು. ಎಲ್‌ಪಿಜಿ ಮತ್ತು ಇಂಧನ ಬೆಲೆಗಳು ಏರುತ್ತಿವೆ, ಈ ಪರಿಸ್ಥಿತಿಯಲ್ಲಿ ವ್ಯಾಪಾರವು ಕಷ್ಟಕರವಾಗಲಿದೆ. ಇದೆಲ್ಲದರ ಮಧ್ಯೆ, ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರದ ನೀತಿ ಏನು? ಅವರು ತಮ್ಮ ಜನರಿಗಾಗಿ ಹೋರಾಡುತ್ತಿಲ್ಲ. ಅವರು ಭಾರತಕ್ಕಾಗಿ ಹೋರಾಡುತ್ತಿಲ್ಲ. ಅವರು ಭಾರತಕ್ಕಾಗಿ ಹೋರಾಡುತ್ತಿಲ್ಲ. ಅವರು ಭಾರತದ ಪರವಾಗಿ ನಿಲ್ಲುತ್ತಿಲ್ಲ. ಅವರು ಮಾಡುತ್ತಿರುವುದು ಅಮೆರಿಕ ಹಾಗೂ ಇಸ್ರೇಲ್‌ಗೆ ತಲೆ ಬಾಗಿರುವುದುಎ ಎಂದು ಅಸಮಾಧಾನ ಹೊರಹಾಕಿದರು.