ಬೆಂಗಳೂರು: ಕೇಂದ್ರ ಸರಕಾರ ನೀಡಿದ ವಿಶೇಷ ಅನುದಾನವನ್ನು ರಾಜ್ಯ ಸರಕಾರವು ಆಯಾ ಯೋಜನೆಗಳಿಗೆ ಬಳಸದೇ ತನ್ನ ಇಚ್ಛಾನುಸಾರವಾಗಿ ಬೇರೆ ಯೋಜನೆಗಳಿಗೆ, ಇತರ ಇಲಾಖೆಗಳಿಗೆ ಬಳಸಿಕೊಂಡಿದೆ. ರಾಜ್ಯ ಸರಕಾರಕ್ಕೆ ಆ ಅಧಿಕಾರ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನನಗಿರುವ ಮಾಹಿತಿ ಪ್ರಕಾರ ರಾಜ್ಯ ಸರಕಾರ ಮತ್ತು ಸಂಬಂಧಿತ ಇಲಾಖೆಯು ಆ ಹಣವನ್ನು ಸದ್ಬಳಕೆ ಮಾಡದೇ ಹಣಕಾಸು ಇಲಾಖೆ ಒತ್ತಾಯದ ಮೇರೆಗೆ ಹಣಬಳಕೆ ಸಂಬಂಧ ನಕಲಿ (ಫ್ಯಾಬ್ರಿಕೇಟೆಡ್) ದೃಢಪತ್ರವನ್ನು ಕೇಂದ್ರಕ್ಕೆ ಕಳುಹಿಸಿದ್ದಾರೆ ಎಂದು ಅವರು ದೂರಿದರು.
ಮುಂಬೈ: ಮಹಾರಾಷ್ಟ್ರದ ಮುಲುಂಡ್ನ ಎಲ್ಬಿಎಸ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮುಂಬೈ ಮೆಟ್ರೋ ಪಿಲ್ಲರ್ನ ಒಂದು ಭಾಗವು ಶನಿವಾರ ಕುಸಿದು ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಮೃತರು ಮತ್ತು ಗಾಯಾಳುಗಳು ಜಾನ್ಸನ್ ಮತ್ತು ಜಾನ್ಸನ್ ಕಂಪನಿ ಬಳಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಪಿಲ್ಲರ್ನ ಭಾಗವು ಅವರ ಮೇಲೆ ಕುಸಿದಿದೆ.ಮುಂಬೈ ಪೊಲೀಸರು, ಮೆಟ್ರೋ ಸಿಬ್ಬಂದಿ, ಎಂಎಫ್ಬಿ, ವಾರ್ಡ್ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್ ಸೇವೆಗಳು ಸೇರಿದಂತೆ ತುರ್ತು ಪ್ರತಿಕ್ರಿಯೆ ತಂಡಗಳು ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಅವಶೇಷಗಳನ್ನು ತೆರವುಗೊಳಿಸಲು ಸ್ಥಳಕ್ಕೆ ಧಾವಿಸಿದವು.ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮೃತರನ್ನು ರಾಮಧನ್ ಯಾದವ್ ಎಂದು ಗುರುತಿಸಿದ್ದು, ಮೂವರು
ಬರ್ಕ್ಲಿಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದ ಕರ್ನಾಟಕ ಮೂಲದ ಸಾಕೇತ್ ಶ್ರೀನಿವಾಸಯ್ಯ (22) ಎಂಬಾತ ನಾಪತ್ತೆಯಾಗಿರುವ ವರದಿಯಾಗಿದೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಪಾರ್ಕ್ ಹಿಲ್ಸ್ ಪ್ರದೇಶದ ಮನೆ ಬಾಗಿಲಿನಲ್ಲಿ ಅವರ ಪಾಸ್ಪೋರ್ಟ್, ಲ್ಯಾಪ್ಟಾಪ್ ಮತ್ತು ಬ್ಯಾಗ್ ಪತ್ತೆಯಾಗಿದೆ. ಸಾಕೇತ್ ಶ್ರೀನಿವಾಸಯ್ಯ ಅವರು ನಾಪತ್ತೆಯಾದ ಬಗ್ಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸ ಕಚೇರಿ ತೀವ್ರ ಕಳವಳ ವ್ಯಕ್ತಪಡಿಸಿದೆ.
ಬೆಂಗಳೂರು: ಭಾನುವಾರ ನಾಡಿನಾದ್ಯಂತ ಮಹಾಶಿವರಾತ್ರಿಯ ಆಚರಣೆಯನ್ನು ಸಂಭ್ರಮದೊಂದಿಗೆ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಭಾನುವಾರದಂದು ಸಂಪೂರ್ಣವಾಗಿ ಮಾಂಸ ಮಾರಾಟವನ್ನು ನಿಷೇಧ ಮಾಡಲಾಗಿದೆ.ಈ ಕುರಿತು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪಶುಪಾಲನೆ ವಿಭಾಗದ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಆದೇಶದ ಪ್ರತಿಯನ್ನು ಹಂಚಿಕೊಳ್ಳಲಾಗಿದೆ. ಮಹಾ ಶಿವರಾತ್ರಿ ಆಚರಿಸಲ್ಪಡುವುದರಿಂದ ಆ ದಿನವಿಡಿ ಜಿಬಿಎ ವ್ಯಾಪ್ತಿಯ ಎಲ್ಲಿಯೂ ಪ್ರಾಣಿ ವಧೆ, ಮಾಂಸ ಮಾರಾಟ ಮಾಡಲು ಯಾವುದೇ ಅವಕಾಶ ಇರುವುದಿಲ್ಲ. ಅಲ್ಲದೇ ಸೂಪರ್ ಮಾರ್ಕೆಟ್, ಇನ್ನಿತರ ಮಳಿಗೆಗಳಲ್ಲಿಯೂ ಮಾಂಸ ಮಾರಾಟಕ್ಕೆ ಅವಕಾಶ ಇಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರದ ಮತ್ತೊಂದು ಬಡ್ತಿ ಎಡವಟ್ಟು ಈಗ ಬಯಲಾಗಿದೆ. ನಿನ್ನೆಯಷ್ಟೇ ಆರೋಗ್ಯ ಇಲಾಖೆ ಅಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡಿ ವಿವಾದವಾಗಿತ್ತು. ಇದೀಗ ಸರ್ಕಾರೀ ಅಧಿಕಾರಿಗಳ ಬಡ್ತಿ ಪಟ್ಟಿಯಲ್ಲಿ ನಿಶ್ಚಲಾನಂದ ಸ್ವಾಮೀಜಿ ಹೆಸರೂ ನಮೂದಾಗಿರುವುದು ವಿಪಕ್ಷಗಳ ಟೀಕೆಗೆ ಗುರಿಯಾಗಿದೆ. ರಾಜ್ಯ ಸರ್ಕಾರ 20 ಕೆಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡುವ ಆದೇಶ ನೀಡಿದೆ. ವಿಚಿತ್ರವೆಂದರೆ ಈ ಪಟ್ಟಿಯಲ್ಲಿ ಶ್ರೀ ಎಚ್ಎಲ್ ನಾಗರಾಜ ಹೆಸರೂ ಇದೆ. ಈ ಎಚ್ ಎಲ್ ನಾಗರಾಜ ಅವರು ಬೇರೆ ಯಾರೂ ಅಲ್ಲ. ನಿಶ್ಚಲಾನಂದ ಸ್ವಾಮೀಜಿಗಳು. ಅವರು ಈಗಾಗಲೇ ಸರ್ಕಾರೀ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ಸನ್ಯಾಸತ್ವದಲ್ಲಿದ್ದಾರೆ.
ಬೆಂಗಳೂರು: ಈ ದೇಶದ ಬಡವರು, ರೈತರು, ಮಹಿಳೆಯರು ಮತ್ತು ಯುವಕರ ಬದುಕು ಕಟ್ಟಿಕೊಡುವ ಕೆಲಸವನ್ನು ಮೋದಿಜೀ ಅವರು ಮಾಡುತ್ತಿದ್ದರೆ ನಮ್ಮ ರಾಜ್ಯದಲ್ಲಿ ಒಬ್ಬ ಅನುಭವಿ ಮುಖ್ಯಮಂತ್ರಿಗಳು, 16 ದಾಖಲೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರ ಯೋಜನೆಗಳು ಹೇಗಿವೆ ಎಂದರೆ, ರಾಜ್ಯದ ಜನರಿಗೆ ಕಾಯುವುದೇ ಕೈಲಾಸ ಎಂಬಂತೆ ಸತಾಯಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.ಬಿಜೆಪಿ ರಾಜ್ಯ ಕಾರ್ಯಾಲಯ "ಜಗನ್ನಾಥ ಭವನ" ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು 1000 ದಿನ ಪೂರೈಸಿ ಹಾವೇರಿಯಲ್ಲಿ ಬೃಹತ್ ಸಮಾವೇಶ, ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದೆ.
ನವದೆಹಲಿ: ರಾಜ್ಯಸಭೆಯಲ್ಲಿ ಪದೇ ಪದೇ ತನ್ನ ಮಾತಿನ ನಡುವೆ ಕೂಗಾಡುತ್ತಿದ್ದ ಜಯಾ ಬಚ್ಚನ್ ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಖಡಕ್ ಉತ್ತರ ನೀಡಿ ಬಾಯಿ ಮುಚ್ಚಿಸಿದ್ದಾರೆ. ನಿರ್ಮಲಾ ರೋಷಾವೇಷದ ವಿಡಿಯೋ ಇಲ್ಲಿದೆ ನೋಡಿ. ರಾಜ್ಯಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಮಾತನಾಡುತ್ತಿದ್ದರು. ಈ ವೇಳೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಪತ್ನಿಯೂ ಆಗಿರುವ ಸಂಸದೆ ಜಯಾ ಬಚ್ಚನ್ ಪದೇ ಪದೇ ಮಧ್ಯೆ ಜೋರಾಗಿ ಕೂಗಾಡುತ್ತಿದ್ದರು. ಇದು ನಿರ್ಮಲಾ ಪಿತ್ತ ಕೆರಳಿಸಿದೆ. ‘ನಿಮಗೆ ಮಾತ್ರ ಧ್ವನಿ ಪೆಟ್ಟಿಗೆ ಇರೋದಲ್ಲ. ಮಾತನಾಡಲು ನಮಗೆಲ್ಲರಿಗೂ ಬರುತ್ತದೆ. ನೀವು ಇಲ್ಲಿ ಪದೇ ಪದೇ ಕೂಗಾಡುವ ಅಗತ್ಯವಿಲ್ಲ’ ಎಂದು ನಿರ್ಮಲಾ ಹೇಳಿದ್ದಾರೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ಆದರೆ ಮೊನ್ನೆ ಅಡಿಕೆ ದರದಲ್ಲಿ ಏರಿಕೆಯಾಗಿರುವುದು ಖಷಿಯ ಸಂಗತಿ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಏರಿಕೆಯಾಗಬಹುದೇನೋ ಎಂಬ ನಿರೀಕ್ಷೆ ಬೆಳೆಗಾರರಲ್ಲಿತ್ತು. ಮೊನ್ನೆಯಷ್ಟೇ ಅಡಿಕೆಗೆ ಕೊಂಚ ಬೆಲೆ ಏರಿಕೆಯಾಗಿತ್ತು. ಆದರೆ ಈಗ ಮತ್ತೆ ಯಥಾಸ್ಥಿತಿಯಲ್ಲಿದೆ. ಇಂದು ಹೊಸ ಅಡಿಕೆ ಬೆಲೆ 480 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 550 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ 550 ರೂ.ಗಳಷ್ಟಾಗಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಇಳಿಕೆಯಾಗಿದೆ ಮತ್ತುಇತರೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ದಾಖಲೆಯ ಏರಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಇಳಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಇಂದು ಇಳಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,61,110.00 ರೂ.ಗಳಿತ್ತು. ಇಂದೂ 1,58,200.00 ರೂ.ಗಳಷ್ಟಿದೆ.
ನವದೆಹಲಿ: ಗೆಳೆಯನ ಜೊತೆ ಹೋಟೆಲ್ ಗೆ ತಂಗಲು ಬಂದಿದ್ದ ಯುವತಿ ಇದ್ದಕ್ಕಿದ್ದಂತೆ ನಾಲ್ಕನೇ ಮಹಡಿಯಿಂದ ಹಾರಿದ ಭಯಾನಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗಿನ ದಿನಗಳಲ್ಲಿ ಕ್ಷುಲ್ಲುಕ ಕಾರಣಕ್ಕೆ ಪ್ರೇಮಿಗಳು ಕಿತ್ತಾಡುವುದು ಜೀವವನ್ನೇ ಕಳೆದುಕೊಳ್ಳುವ ಹಂತಕ್ಕೆ ಹೋಗುವುದು ಸಾಮಾನ್ಯವಾಗಿದೆ. ಇನ್ನೇನು ವ್ಯಾಲೆಂಟೈನ್ಸ್ ಡೇ ಹತ್ತಿರ ಬರುತ್ತಿದ್ದು ಇಂತಹ ಸಂದರ್ಭದಲ್ಲೇ ಇಂತಹ ಘಟನೆಗಳು ಕೇಳಿಬರುತ್ತಿದೆ. ದೆಹಲಿಯ ಹೋಟೆಲ್ ಒಂದಕ್ಕೆ ಯುವತಿ ತನ್ನ ಗೆಳೆಯನ ಜೊತೆ ಬಂದಿದ್ದಳು. ಅಲ್ಲಿ ವಾಸ್ತವ್ಯವಿದ್ದ ವೇಳೆ ಇಬ್ಬರ ನಡುವೆ ಅದೇನು ಮನಸ್ತಾಪವಾಯ್ತೋ ಗೊತ್ತಿಲ್ಲ.
ಮುಂಬೈ: ಟೀಂ ಇಂಡಿಯಾದ ಯಾವ ಕ್ರಿಕೆಟಿಗರು ಮತ್ತು ಪತ್ನಿಯರಿಗೂ ಇಲ್ಲದ ಭಾಗ್ಯ ವೇಗಿ ಜಸ್ಪ್ರೀತ್ ಬುಮ್ರಾಗಿದೆ. ಅದೆನಪ್ಪಾ ಅಂಥಾ ಭಾಗ್ಯ ಈ ಸ್ಟೋರಿ ಓದಿ. ಟಿ20 ವಿಶ್ವಕಪ್ ವೇಳೆ ಟೀಂ ಇಂಡಿಯಾಗೆ ಭಾರತದಲ್ಲೇ ಇದ್ದರೂ ಪತ್ನಿಯನ್ನು ಜೊತೆಗೆ ಕರೆದೊಯ್ಯುವ ಅವಕಾಶವಿಲ್ಲ. ಆಟದ ಮೇಲೆ ಗಮನವಿರಲ್ಲ ಎಂಬ ಕಾರಣಕ್ಕೆ ಟೀಂ ಇಂಡಿಯಾ ಆಟಗಾರರಿಗೆ ಪತ್ನಿಯರನ್ನು ಜೊತೆಗೆ ಕರೆದೊಯ್ಯಲು ಬಿಸಿಸಿಐ ಅವಕಾಶ ಕೊಡುತ್ತಿಲ್ಲ. ಸುದೀರ್ಘ ಪ್ರವಾಸವಿದ್ದಾಗ ಮಾತ್ರ ಎರಡು ವಾರ ಕಾಲ ಪತ್ನಿಯರನ್ನು ಜೊತೆಗೆ ಕರೆದೊಯ್ಯಲು ಅವಕಾಶವಿದೆ. ಆದರೆ ಜಸ್ಪ್ರೀತ್ ಬುಮ್ರಾಗೆ ಮಾತ್ರ ಸ್ಪೆಷಲ್ ಅವಕಾಶವಿದೆ.
ಕೊಲೊಂಬೋ: ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯವಾಡಲು ಟೀಂ ಇಂಡಿಯಾ ಕೊಲೊಂಬೋಗೆ ಬಂದಿಳಿದಿದೆ. ಕೊಲೊಂಬೋದಲ್ಲಿ ಟೀಂ ಇಂಡಿಯಾಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಇದರ ಬೆನ್ನಲ್ಲೇ ಈಗ ಮೊನ್ನೆಯಷ್ಟೇ ಪಾಕಿಸ್ತಾನ ಕ್ರಿಕೆಟಿಗರಿಗೆ ಸಿಕ್ಕ ಸ್ವಾಗತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ನಿನ್ನೆ ಕೊಲೊಂಬೋ ವಿಮಾನ ನಿಲ್ದಾಣಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ಬಂದಿಳಿದಿದ್ದಾರೆ. ಭಾರತ ಕ್ರಿಕೆಟಿಗರನ್ನು ನೋಡಲು ಕೊಲೊಂಬೋ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಭದ್ರತೆಯೂ ಉನ್ನತ ಮಟ್ಟದಲ್ಲಿತ್ತು.
ಬೆಂಗಳೂರು: ಹಿಂದೂ ಸಂಘಟನೆಗಳಿಗೆ ಕೇರ್ ಮಾಡಬೇಡಿ, ಬಿಂದಾಸ್ ಆಗಿ ಪ್ರೇಮಿಗಳ ದಿನಾಚರಣೆ ಸಂಭ್ರಮಾಚರಣೆ ಮಾಡಿ ಎಂದು ಯೂತ್ ಕಾಂಗ್ರೆಸ್ ಯುವ ಪ್ರೇಮಿಗಳಿಗೆ ಅಭಯ ನೀಡಿದೆ. ‘ಪ್ರತಿ ವರ್ಷ ಫೆ.14ರ ಪ್ರೇಮಿಗಳ ದಿನದಂದು ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಶ್ರೀರಾಮಸೇನೆಯಂತಹ ಆರ್ಎಸ್ಎಸ್ನ ಸಂತತಿಗಳು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಯತ್ನಿಸುತ್ತಾರೆ. ಈ ಬಾರಿಯೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ, ಪೊಲೀಸರ ಮೂಗಿನ ಕೆಳಗೇ ಬಜರಂಗದಳದಂತಹ ಸಂಘಟನೆಗಳ ದಾಂಧಲೆ ಶುರುವಾಗಿದೆ.
ನವದೆಹಲಿ: ಜಗತ್ತಿಡೀ ಪ್ರೇಮಿಗಳ ದಿನ ಆಚರಣೆ ಮಾಡುತ್ತಿದ್ದರೆ ಭಾರತಕ್ಕೆ ಮಾತ್ರ ಇಂದು ಕರಾಳ ದಿನ. ಯಾಕೆಂದರೆ ಇದೇ ದಿನ 6 ವರ್ಷಗಳ ಹಿಂದೆ ಪುಲ್ವಾಮದಲ್ಲಿ ನಮ್ಮ ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ್ದರು. 2019 ರ ಫೆಬ್ರವರಿ 14 ರಂದು ಪುಲ್ವಾಮದಲ್ಲಿ ನಮ್ಮ ವೀರ ಯೋಧರು ಪ್ರಯಾಣಿಸುತ್ತಿದ್ದ ಎರಡು ಬಸ್ ಗಳನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆಸಲಾಗಿತ್ತು. ಈ ದಾಳಿಯ ಹೊಣೆಯನ್ನು ಜೈಶ್ ಇ ಮೊಹಮ್ಮದ್ ಸಂಘಟನೆ ಹೊತ್ತುಕೊಂಡಿತ್ತು. ಘಟನೆಯಲ್ಲಿ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಪಾಕಿಸ್ತಾನ ಪ್ರೇರಿತ ಉಗ್ರರ ದಾಳಿಯಿಂದ ಭಾರತ ಆಕ್ರೋಶದಲ್ಲಿ ಕುದ್ದು ಹೋಗಿತ್ತು.
ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಕೇಸ್ ನಲ್ಲಿ ಅರೆಸ್ಟ್ ಆಗಿರುವ ಕೆಆರ್ ಪುರಂ ಶಾಸಕ ಬೈರತಿ ಬಸವರಾಜುಗೆ ಎದೆನೋವು ಕಾಣಿಸಿಕೊಂಡಿದ್ದು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಕ್ಲು ಶಿವು ಮರ್ಡರ್ ಕೇಸ್ ನಲ್ಲಿ ಆರೋಪಿಯಾಗಿರುವ ಬೈರತಿ ಬಸವರಾಜು ಅವರನ್ನು ಮೊನ್ನೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಸುಪ್ರೀಂಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ರದ್ದಾದ ಬೆನ್ನಲ್ಲೇ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದರು. ಮೊನ್ನೆ ರಾತ್ರಿ ಅವರನ್ನು ಪೊಲೀಸ್ ಠಾಣೆಯಲ್ಲೇ ಇರಿಸಿಕೊಂಡು ವಿಚಾರಣೆ ನಡೆಸಲಾಗಿತ್ತು. ನಿನ್ನೆ ಕೋರ್ಟ್ ಗೆ ಹಾಜರುಪಡಿಸುವ ಮುನ್ನ ಶಾಸಕರನ್ನು ಆರೋಗ್ಯ ತಪಾಸಣೆ ಮಾಡಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಈಗ ತಾಪಮಾನದಲ್ಲಿ ದಿನೇ ದಿನೇ ಏರಿಕೆ ಕಂಡುಬರುತ್ತಿದೆ. ಈಗ ರಾಜ್ಯದ ಹವಾಮಾನ ಹೇಗಿದೆ ಎಂದರೆ ಬಿಸಿಲೂ ಹೆಚ್ಚು, ಚಳಿಯೂ ಹೆಚ್ಚು ಎಂಬಂತಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಕನಿಷ್ಠ ತಾಪಮಾನದಲ್ಲಿ ಕೊಂಡ ಏರಿಕೆ ಕಂಡುಬರುತ್ತಿದೆ. ಚಳಿಯೂ ತಕ್ಕಮಟ್ಟಿಗೆ ಕಡಿಮೆಯಾಗಿದ್ದರೂ ಪೂರ್ತಿ ಕಡಿಮೆಯಾಗಿಲ್ಲ. ರಾತ್ರಿ ಹೊತ್ತು ಚಳಿ ಕಂಡುಬರುತ್ತಿದೆ. ಶುಷ್ಕ ಹವೆ ಮುಂದುವರಿದಿದೆ. ಈ ವಾರಂತ್ಯಕ್ಕೆ ರಾಜ್ಯದಲ್ಲಿ ಗರಿಷ್ಠ ತಾಪಮಾನ 30-31 ಡಿಗ್ರಿಯಷ್ಟು ಕಂಡುಬರುವ ಸಾಧ್ಯತೆಯಿದೆ. ಕನಿಷ್ಠ ತಾಪಮಾನ 17 ಡಿಗ್ರಿಯಷ್ಟು ಕಂಡುಬರುವುದು. ರಾತ್ರಿ ಚಳಿಯಿರಲಿದ್ದು, ಹಗಲು ವಿಪರೀತ ಬಿಸಿಲಿನ ವಾತಾವರಣವಿರಲಿದೆ.
ಬೆಂಗಳೂರು: ಇಂದು ಪ್ರೇಮಿಗಳ ದಿನಾಚರಣೆಯನ್ನು ಜಾಗತಿಕವಾಗಿ ಆಚರಿಸಲಾಗುತ್ತಿದೆ. ಇಂದು ಅನೇಕ ಪ್ರೇಮಿಗಳು ತಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಕಾಯುತ್ತಿರುತ್ತಾರೆ. ಇಂದು ಯಾವ ರಾಶಿಯವರು ಯಾವ ಸಮಯಕ್ಕೆ ಪ್ರಪೋಸ್ ಮಾಡಿದರೆ ಸಕ್ಸಸ್ ಆಗುತ್ತದೆ ನೋಡಿ. ಪ್ರೇಮ ನಿವೇದನ ಮಾಡುವಾಗಲೂ ಸರಿಯಾದ ಗಳಿಗೆ ನೋಡಿಕೊಂಡು ಮಾಡಿದಲ್ಲಿ ಸಕ್ಸಸ್ ಆಗುವ ಸಂಭವ ಹೆಚ್ಚು. ಅದರಲ್ಲೂ ನಿಮ್ಮ ರಾಶಿಗೆ ಅನುಗುಣವಾಗಿ ಯಾವ ಸಮಯ ಸೂಕ್ತ ಎಂದು ನೋಡಿಕೊಂಡು ಪ್ರಪೋಸ್ ಮಾಡಿದರೆ ಇಂದು ನಿಮ್ಮ ಲವ್ ಫೇಲ್ ಆಗುವ ಚಾನ್ಸೇ ಇಲ್ಲ. ಎಲ್ಲಾ ದ್ವಾದಶ ರಾಶಿಯವರಿಗೆ ಸೂಕ್ತ ಸಮಯ ಯಾವುದು ಎಂಬ ವಿವರ ಇಲ್ಲಿದೆ.
ನಾಳೆ ಶಿವರಾತ್ರಿಯಾಗಿದ್ದು ಶಿವನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಶಿವರಾತ್ರಿಯಂದು ಶಿವನಿಗೆ ಪೂಜೆ ಮಾಡುವಾಗ ಹೇಳಬೇಕಾದ ಮಂತ್ರ ಯಾವುದು ಇಲ್ಲಿದೆ ನೋಡಿ. ಶಿವನಿಗೆ ಶಿವರಾತ್ರಿ ದಿನ ರುದ್ರಾಭಿಷೇಕ, ಜಲಾಭಿಷೇಕ, ಕ್ಷೀರಾಭಿಷೇಕ, ಎಳೆನೀರಿನ ಅಭಿಷೇಕ ಮತ್ತು ಜೇನು ತುಪ್ಪದಿಂದ ಅಭಿಷೇಕ ಮಾಡುವುದು ವಿಶೇಷವಾಗಿದೆ. ಜೊತೆಗೆ ಬಿಲ್ವ ಪತ್ರೆಯಿಂದ ಅರ್ಚನೆ ಮಾಡಿದರೆ ಶಿವನು ಸಂತುಷ್ಟನಾಗುತ್ತಾನೆ. ನಾಳೆ ದೇವಾಲಯಗಳಿಗೆ ತೆರಳಿ ಈ ಮೇಲೆ ಹೇಳಿದ ಪೂಜೆ ಮಾಡುವಾಗ ತಪ್ಪದೇ ಈ ಮಂತ್ರವನ್ನು ಹೇಳಿ. ಇನ್ನು ಮನೆಯಲ್ಲಿ ಭಕ್ತಿಯಿಂದ ರಾತ್ರಿ ಶಿವ ಸ್ಮರಣೆ ಮಾಡುವಾಗ ಶಿವ ಗಾಯತ್ರಿ ಮಂತ್ರವನ್ನು 108 ಬಾರಿ ಜಪಿಸಿ. ಅದು ಇಲ್ಲಿದೆ.
ಬೆಂಗಳೂರು: ಈ ಬಾರಿ ಶಿವರಾತ್ರಿ ಯಾವಾಗ, ಯಾವ ಸಮಯದಲ್ಲಿ ಪೂಜೆ ಮಾಡಿದರೆ ಶುಭವಾಗುತ್ತದೆ? ಇಲ್ಲಿದೆ ಶಿವರಾತ್ರಿ ಪೂಜೆಯ ಸಂಪೂರ್ಣ ವಿವರ. ಈ ಬಾರಿ ಶಿವರಾತ್ರಿ ನಾಳೆ ಅಂದರೆ ಫೆಬ್ರವರಿ 15 ರಂದು ಬರುತ್ತಿದೆ. ಶಿವರಾತ್ರಿ ದಿನ ಶಿವನ ಪೂಜೆ ಮಾಡುವುದರಿಂದ ಆಯಸ್ಸು, ಆರೋಗ್ಯ, ವಿವಾಹಾದಿ ಸಮಸ್ಯೆಗಳು ದೂರವಾಗುತ್ತದೆ. ಅದರಲ್ಲೂ ಈ ದಿನ ಉಪವಾಸವಿದ್ದು ಶಿವ ನಾಮ ಸ್ಮರಣೆ ಮಾಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಶಿವನಿಗೆ ಹಾಲಿನ ಅಭಿಷೇಕ, ಬಿಲ್ವಪತ್ರೆಯಿಂದ ಅರ್ಚನೆ ಮಾಡುವುದು ಅತ್ಯಂತ ಶ್ರೇಯಸ್ಕರ. ಚತುರ್ದಶಿ ತಿಥಿ ನಾಳೆ ಸಂಜೆ 5.04 ರಿಂದ ಸೋಮವಾರ ಸಂಜೆ 5.34 ರವರೆಗಿದೆ.
ಶನಿ ದೋಷವಿದ್ದರೆ ಆಂಜನೇಯನ ಪ್ರಾರ್ಥನೆ ಮಾಡುವುದರಿಂದ ಪರಿಹಾರ ಸಿಗುತ್ತದೆ. ಶನಿ ದೋಷವಿರುವವರು ಇಂದು ತಪ್ಪದೇ ಆಂಜನೇಯನ ಕುರಿತಾದ ಶ್ರೀ ಹನುಮದಷ್ಟಕಂ ಸ್ತೋತ್ರ ಓದಿ.ಶ್ರೀರಘುರಾಜಪದಾಬ್ಜನಿಕೇತನ ಪಂಕಜಲೋಚನ ಮಂಗಳರಾಶೇಚಂಡಮಹಾಭುಜದಂಡ ಸುರಾರಿವಿಖಂಡನಪಂಡಿತ ಪಾಹಿ ದಯಾಳೋ ।ಪಾತಕಿನಂ ಚ ಸಮುದ್ಧರ ಮಾಂ ಮಹತಾಂ ಹಿ ಸತಾಮಪಿ ಮಾನಮುದಾರಂತ್ವಾಂ ಭಜತೋ ಮಮ ದೇಹಿ ದಯಾಘನ ಹೇ ಹನುಮನ್ ಸ್ವಪದಾಂಬುಜದಾಸ್ಯಮ್ ॥ 1 ॥ ಸಂಸೃತಿತಾಪಮಹಾನಲದಗ್ಧತನೂರುಹಮರ್ಮತನೋರತಿವೇಲಂಪುತ್ರಧನಸ್ವಜನಾತ್ಮಗೃಹಾದಿಷು ಸಕ್ತಮತೇರತಿಕಿಲ್ಬಿಷಮೂರ್ತೇಃ ।ಕೇನಚಿದಪ್ಯಮಲೇನ ಪುರಾಕೃತಪುಣ್ಯಸುಪುಂಜಲವೇನ ವಿಭೋ ವೈತ್ವಾಂ ಭಜತೋ ಮಮ ದೇಹಿ ದಯಾಘನ ಹೇ ಹನುಮನ್ ಸ್ವಪದಾಂಬುಜದಾಸ್ಯಮ್ ॥ 2 ॥ ಸಂಸೃತಿಕೂಪಮನಲ್ಪಮಘೋರನಿದಾಘನಿದಾನಮಜಸ್ರಮಶೇಷಂಪ್ರಾಪ್ಯ
ಬೆಂಗಳೂರು: ಫಿಲ್ಮ್ ಚೇಂಬರ್ನಲ್ಲಿ ನಡೆಯುತ್ತಿದ್ದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಹಿರಿಯ ನಿರ್ದೇಶಕ ಜೊ ಸೈಮನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಫಿಲ್ಮ್ ಚೇಂಬರ್ನಲ್ಲಿ ನಡೆಯುತ್ತಿದ್ದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಜೊ ಸೈಮನ್ ಭಾಗಿಯಾಗಿದ್ದರು. ಸಭೆಯಲ್ಲಿ ಮಾತನಾಡಿದ ಬಳಿಕ ವಾಶ್ ರೂಂಗೆ ತರಳಿದ್ದು, ಈ ವೇಳೆ ವಾಂತಿ ಮಾಡಿದ್ದಾರೆ. ಕೂಡಲೇ ಅವರನ್ನು ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜೊ ಸೈಮನ್ ಮೃತಪಟ್ಟಿದ್ದಾರೆ.
ಮುಂಬೈ: ಈಚೆಗೆ ಬೆದರಿಕೆ ಕರೆ ಬೆನ್ನಲ್ಲೇ ಬಾಲಿವುಡ್ ನಟ ರಣವೀರ್ ಸಿಂಗ್ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಮತ್ತೆ ಜೀವ ಬೆದರಿಕೆ ಬಂದಿದೆ.ಈ ಬಾರಿ ಕೇವಲ ರಣವೀರ್ ಸಿಂಗ್ ಮಾತ್ರವಲ್ಲ. ಅವರ ಇಡೀ ಸಿಬ್ಬಂದಿ ಮತ್ತು ಮ್ಯಾನೇಜರ್ಗಳನ್ನು ಗುರಿಯಾಗಿಸುವುದಾಗಿ ಗ್ಯಾಂಗ್ ಎಚ್ಚರಿಕೆಯನ್ನು ನೀಡಿದೆ.ಫೆಬ್ರವರಿ 10ರಂದು ರಣವೀರ್ಗೆ ಮೊದಲ ಬಾರಿಗೆ ₹1ಕೋಟಿ ಬೇಡಿಕೆಯಿರುವ ವಾಟ್ಸಾಪ್ ವಾಯ್ಸ್ ನೋಟ್ ಬಂದಿತ್ತು. ಈಗ 2ನೇ ವಾಯ್ಸ್ ನೋಟ್ ಬಂದಿದ್ದು, ಮಾತು ತಪ್ಪಿದರೆ ಶಿಕ್ಷೆ ಏನು ಎಂಬುದು ತೋರಿಸುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ.
ಇಂದೋರ್ನ ನರ್ಸೀ ಮೊಂಜಿ ಕಾಲೇಜಿನಲ್ಲಿ ನಡೆದ ಪ್ರೇಮಿಗಳ ದಿನಾಚರಣೆ ವೇಳೆ ಭಜರಂಗದಳದ ಸದಸ್ಯರು ಬಂದು ಅಡ್ಡಿಪಡಿಸಿ, ಸ್ಥಳವನ್ನು ಧ್ವಂಸಗೊಳಿಸಿದ ಘಟನೆ ವರದಿಯಾಗಿದೆ. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾಗ ಕ್ಯಾಂಪಸ್ನೊಳಗೆ ಈ ಘಟನೆ ನಡೆದಿದ್ದು, ಗಾಬರಿ ಮತ್ತು ಗದ್ದಲಕ್ಕೆ ಕಾರಣವಾಯಿತು. ಸ್ಥಳದಿಂದ ವೀಡಿಯೊಗಳು, ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡುತ್ತಿವೆ. ಈವೆಂಟ್ ಅನ್ನು ಹಠಾತ್ ಸ್ಥಗಿತಗೊಳಿಸಿದಾಗ ಹಾನಿಗೊಳಗಾದ ಆಸ್ತಿ ಮತ್ತು ಉದ್ವಿಗ್ನ ದೃಶ್ಯಗಳನ್ನು ತೋರಿಸುತ್ತವೆ.
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಬೈರತಿ ಬಸವರಾಜ್ಗೆ ಇದೀಗ ಒಂದು ದಿನದ ರಿಲೀಫ್ ಸಿಕ್ಕಿದೆ. ಇಂದು ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯ ತಪಾಸಣೆ ನಡೆಸಲು ತನಿಖಾಧಿಕಾರಿ ಡಿವೈಎಸ್ಪಿ ಗೌತಮ್ಗೆ ನ್ಯಾಯಾಧೀಶರು ಸೂಚನೆ ನೀಡಿದರು. ಶುಕ್ರವಾರ ವೈದ್ಯಕೀಯ ಪರೀಕ್ಷೆ ನಡೆಸಿ ನಾಳೆ ನ್ಯಾಯಾಧೀಶರ ಮನೆಗೆ ಹಾಜರುಪಡಿಸುವಂತೆ ಸೂಚಿಸಿದರು. ಶನಿವಾರ ಪೊಲೀಸ್ ಕಸ್ಟಡಿಯೋ ಅಥವಾ ಜೈಲೋ ಎನ್ನುವುದು ನಿರ್ಧಾರವಾಗಲಿದೆ. ಸಿಐಡಿ ಮೇಲ್ವಿಚಾರಣೆಯಲ್ಲಿ ವೈದ್ಯಕೀಯ
ನಟ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ಅವರು ಜನವರಿ 31 ರಂದು ತಮ್ಮ ಅವಳಿ ಮಕ್ಕಳಾದ ಗಂಡು ಮತ್ತು ಹೆಣ್ಣು ಮಗುವನ್ನು ಸ್ವಾಗತಿಸಿದ ದಂಪತಿ ಮಕ್ಕಳಿಗೆ ಸ್ವಾಗತಿಸಿದ್ದಾರೆ. ಎನ್ಡಿವಿ ಮೂಲಗಳ ಪ್ರಕಾರ, ದಂಪತಿಗಳು ತಮ್ಮ ನವಜಾತ ಅವಳಿ ಮಕ್ಕಳಿಗೆ ಶಿವರಾಮ್ ಮತ್ತು ಅನ್ವೀರಾ ದೇವಿ ಎಂದು ಹೆಸರಿಸಿದ್ದಾರೆ.ತಮ್ಮ ಅವಳಿ ಮಕ್ಕಳ ಜನನದ ನಂತರ, ರಾಮ್ ಚರಣ್ ಮತ್ತು ಉಪಾಸನಾ ತಮ್ಮ ಮೊದಲ ಅಧಿಕೃತ ಪ್ರಕಟಣೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಕೃತಜ್ಞತೆ ಮತ್ತು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕನ್ನಡದ ಸಾಹಸ ಸಿಂಹ ಸೇರಿದಂತೆ ಹಲವು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದ ಹಿರಿಯ ನಟ, ನಿರ್ದೇಶಕ ಜೋ ಸೈಮನ್ ಅವರು ಶುಕ್ರವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಜೋ ಸೈಮನ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ಸಾಹಸ ಸಿಂಹ, ಹಾಂಕಾಂಗ್ನಲ್ಲಿ ಏಜೆಂಟ್ ಅಮರ್, ಸಿಂಹ ಜೋಡಿ, ಸ್ನೇಹದ ಕಡಲಲ್ಲಿ, ರವಿವರ್ಮ, ಊರಿಗೆ ಉಪಕಾರಿ ಸೇರಿದಂತೆ ಹಿಟ್ ಸಿನಿಮಾ ಕೊಟ್ಟಿದ್ದಾರೆ. ವಿಷ್ಣುವರ್ಧನ್, ಅಂಬರೀಶ್ಗೆ ನೆಚ್ಚಿನ ನಿರ್ದೇಶಕ ಆಗಿದ್ದರು.ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದಿದ್ದ ಅವರು, ಅಲ್ಲಿಯೇ ಕುಸಿದುಬಿದ್ದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ನಾಲ್ಕೈದು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕರಾಗಿ ಜೋ ಸೈಮನ್ ಅವರು ಜನಪ್ರಿಯರಾಗಿದ್ದರು.
ಸೇಲಂ (ತಮಿಳುನಾಡು): ತಮಿಳುನಾಡಿನ ಸೇಲಂನಲ್ಲಿ ಶುಕ್ರವಾರ ನಡೆದ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಅವರ ರ್ಯಾಲಿಯಲ್ಲಿ ಮಹಾರಾಷ್ಟ್ರದ 37 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಸೂರಜ್ ಎಂದು ಗುರುತಿಸಲಾಗಿದ್ದು, ಅವರು ಸೇಲಂನ ಸೆವ್ವೈಪೆಟ್ಟೈ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಸಿಲ್ವರ್ಗೇಜ್ನಲ್ಲಿ ವಾಸಿಸುತ್ತಿದ್ದರು.ಅವರು ವಿವಾಹಿತರಾಗಿದ್ದು, ಅವರ ಪತ್ನಿ ಮತ್ತು ಮಗುವನ್ನು ಅಗಲಿದ್ದಾರೆ. ಕರೂರಿನಲ್ಲಿ ನಡೆಸಿದ ರ್ಯಾಲಿಯಲ್ಲಿ ಸುಮಾರು 40 ಜನರು ಸಾವನ್ನಪ್ಪಿದ ಘಟನೆಯ ತಿಂಗಳ ನಂತರ ಈ ಸಾವು ಸಂಭವಿಸಿದೆ.
ಉಡುಪಿ: ಅಬಕಾರಿ ಹಗರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಎನೂ ಮಾತನಾಡಿಲ್ಲ. ವಿರೋಧ ಪಕ್ಷದ ವೈಫಲ್ಯದ ಲಾಭ ಆಡಳಿತ ಪಕ್ಷಕ್ಕೆ ಸಿಕ್ಕಿದ್ದಿರಿಂದ ಹೋರಾಟ ತಾರ್ಕಿಕ ಅಂತ್ಯ ಕಂಡಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದರು. ಈ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಅವರು, ಈ ಬಾರಿಯ ಅಧಿವೇಶನದಲ್ಲಿಜನರ ತೆರಿಗೆ ಹಾಳು ಮಾಡುವ ಕೆಲಸವಾಯಿತು. ಅದಲ್ಲದೆ ಇದೊಂದು ಕೇಂದ್ರ ಸರ್ಕಾರ ಮತ್ತು ಮೋದಿ ಅವರನ್ನು ಟೀಕೆ ಮಾಡಲು ಕರೆದ ಅಧಿವೇಶನವಾಗಿತ್ತು ಎಂದರು. ಜಿ ರಾಮ್ ಜಿ ಬಗ್ಗೆ ಸರಿಯಾದ ಚರ್ಚೆ ಆಗಲಿಲ್ಲ. ಅಬಕಾರಿ ಇಲಾಖೆ ಭ್ರಷ್ಟಾಚಾರ ತಾರ್ಕಿಕ ಅಂತ್ಯವಾಗಿಲ್ಲ. ಇದೊಂದು ಅರ್ಥಹೀನ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 22 ರಂದು ಮೀರತ್ಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಪ್ರಾದೇಶಿಕ ಚಲನಶೀಲತೆಯನ್ನು ಬಲಪಡಿಸಲು ಮತ್ತು ಪಶ್ಚಿಮ ಉತ್ತರ ಪ್ರದೇಶದ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು ಮೆಟ್ರೋ ಸೇವೆ ಮತ್ತು ನಮೋ ಭಾರತ್ ರೈಲು ಸೇರಿದಂತೆ ಪ್ರಮುಖ ನಗರ ಸಾರಿಗೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.ವಾಣಿಜ್ಯ, ರಿಯಲ್ ಎಸ್ಟೇಟ್ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳು ಈ ಪ್ರದೇಶದಲ್ಲಿ ಸಾವಿರಾರು ಪ್ರಯಾಣಿಕರಿಗೆ ಪ್ರಯಾಣವನ್ನು ಸರಾಗಗೊಳಿಸುತ್ತವೆ.
ಹಾಸನ: ಕರ್ನಾಟಕದ ಕಾಂಗ್ರೆಸ್ ಸರಕಾರವು ನಾಳೆ ಸಾವಿರ ದಿನಗಳ ಸಂಭ್ರಮಾಚರಣೆಗೆ ಸಿದ್ಧವಾಗಿದೆ. ಸಾವಿರ ದಿನಗಳ ಕಾಂಗ್ರೆಸ್ ಸಂಭ್ರಮಾಚರಣೆ ಸಾವಿರಾರು ಸಮಸ್ಯೆಗಳ ಉಲ್ಬಣಕ್ಕೆ ಕಾರಣವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ದರೋಡೆ ಹೆಚ್ಚಾಗಿದೆ. ಅತ್ಯಾಚಾರಗಳು, ಹತ್ಯೆಗಳು ಹೆಚ್ಚಾಗಿವೆ. ಈ ರೀತಿ ಪಟ್ಟಿ ಮಾಡುತ್ತ ಹೋದರೆ ಸಾವಿರಾರು ಹೇಳಬಹುದು. ಕೇವಲ 5 ಗ್ಯಾರಂಟಿ ಕೊಡುವುದಾಗಿ ಹೇಳುತ್ತಿರುವ ಸರಕಾರ ಲೂಟಿಗಿಳಿದಿದೆ ಎಂದು ಆರೋಪಿÀಸಿದರು.
ಕೋಝಿಕ್ಕೋಡ್: ಫುಟ್ಪಾತ್ ನಲ್ಲಿ ಚಲಾಯಿಸಿದ್ದ ದ್ವಿಚಕ್ರವಾಹನ ಚಾಲಕನನ್ನು ತಡೆದಿದ್ದ ಅಜ್ಜಿಗೆ ಈಗ ಕೇರಳ ಪೊಲೀಸರು ಸನ್ಮಾನಿಸಿದ್ದಾರೆ. ಈ ವಿಡಿಯೋ ಇಲ್ಲಿದೆ. ಕೇರಳದ ಕೋಝಿಕ್ಕೋಡ್ ನಲ್ಲಿ ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದಿದ್ದಕ್ಕೆ ಅಜ್ಜಿಯೊಬ್ಬರು ಅಡ್ಡ ಗಟ್ಟಿ ಮುಂದೆ ಸಾಗದಂತೆ ತಡೆದಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಕೇರಳ ಪೊಲೀಸರು ಆ ಅಜ್ಜಿಯನ್ನು ಗುರುತಿಸಿ ಆಕೆ ಇರುವಲ್ಲಿಗೇ ಬಂದು ಶಾಲು ಹೊದೆಸಿ ಸನ್ಮಾನಿಸಿದ್ದಲ್ಲದೆ ಆಕೆಯ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಕೇರಳದ ಕೋಝಿಕ್ಕೋಡ್ನಲ್ಲಿ ಫುಟ್ ಪಾತ್ ಮೇಲೆ ಸ್ಕೂಟರ್ ಚಲಾಯಿಸಲು ಬಂದ ಸವಾರನನ್ನು ವಯಸ್ಸಾದ ಮಹಿಳೆಯೊಬ್ಬರು ತಡೆದು ನಿಲ್ಲಿಸಿ, ವಾಪಾಸ್ ಕಳುಹಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎರಂಜಿಪಾಲಂನ ಟ್ರಾಫಿಕ್ ಸಿಗ್ನಲ್ ಬಳಿ ವೀಡಿಯೊದಲ್ಲಿ ರೆಕಾರ್ಡ್ ಮಾಡಲಾದ ಈ ಘಟನೆಯನ್ನು ಇನ್ಸ್ಟಾಗ್ರಾಮ್ ಬ್ಲಾಗರ್ ಅಫ್ಲಾ ಇ ಅವರು ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ, ರಸ್ತೆಯಲ್ಲಿ ಟ್ರಾಫಿಕ್ ಜಾಮ್ನಿಂದ ತಪ್ಪಿಸಿಕೊಳ್ಳಲು ವ್ಯಕ್ತಿ ಪಾದಚಾರಿ ಜಾಗದಲ್ಲಿ ಸವಾರಿ ಮಾಡಲು ಪ್ರಯತ್ನಿಸಿದಾಗ ಮಹಿಳೆ ಫುಟ್ಪಾತ್ನಲ್ಲಿ ನಡೆದುಕೊಂಡು ಬರುತ್ತಿರುವುದನ್ನು ಕಾಣಬಹುದು. ಈ ವೇಳೆ ಫುಟ್ಪಾತ್ನಲ್ಲಿ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಸುನಿಲ್ ಕುಮಾರ್ ಸಿವಿರುದ್ಧ ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೊಸ ಬಾಂಬ್ ಅನ್ನು ಸಿಡಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧದ ಬಗೆಗಿನ ಗಂಭೀರ ಆರೋಪದ ಬಗ್ಗೆ ಸುನಿಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಶೇರ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಎಂ ಶಿಫಾರಸು ಪತ್ರ ಸಹಿತ ಸುನಿಲ್ ಕುಮಾರ್ ಆರೋಪ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಅವರ ಹಳಿ ತಪ್ಪಿದ ಆಡಳಿತದ ಕ್ಲಾಸಿಕ್ ಉದಾಹರಣೆಯಾಗಿದೆ. ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಖುದ್ದು ಮುಖ್ಯಮಂತ್ರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ನಿರ್ದೇಶನ ನೀಡಿದ್ದಾರೆ ಅಂತಾ ಗಂಭೀರ
ಶಿವ ಮತ್ತು ಶಕ್ತಿಯ ಸಂಗಮದ ಸಂಕೇತವಾದ ಮಹಾಶಿವರಾತ್ರಿಯು ಹಿಂದೂ ಧರ್ಮದ ಅತ್ಯಂತ ಪವಿತ್ರವಾದ ಹಬ್ಬಗಳಲ್ಲಿ ಒಂದಾಗಿದೆ. 2026ರಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಫೆಬ್ರವರಿ 15ರಂದು ಭಾನುವಾರ ಆಚರಿಸಲಾಗುತ್ತದೆ. ಈ ದಿನದ ಪೂಜೆ ಮತ್ತು ಮಹೂರ್ತದ ಬಗ್ಗೆ ಇಲ್ಲಿ ಸಂಪೂರ್ಣವಾದ ಮಾಹಿತಿಯಿದೆ. ಚತುರ್ದಶಿ ತಿಥಿ ಆರಂಭ: ಫೆಬ್ರವರಿ 15ರಂದು ಸಂಜೆ 5:04 ಕ್ಕೆ ಚತುರ್ದಶಿ ತಿಥಿ ಅಂತ್ಯ: ಫೆಬ್ರವರಿ 16ರಂದು ಸಂಜೆ 5:34 ಕ್ಕೆ ನಿಶಿತ ಕಾಲ ಪೂಜೆ (ಅತ್ಯಂತ ಶುಭ ಸಮಯ): ಫೆಬ್ರವರಿ 16ರ ಮಧ್ಯರಾತ್ರಿ 12:09 ರಿಂದ 1:01 ರವರೆಗೆ (ಸುಮಾರು 52
ಬೆಳಗಾವಿ: ಸುಮಾರು 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷವು ಈ ದೇಶದಲ್ಲಿ ಬಡತನ ನಿರ್ಮೂಲನೆ ಮಾಡುವುದಾಗಿ ಹೇಳಿತ್ತು. ಇಂಥ ಲಜ್ಜೆಗೆಟ್ಟ ಕಾಂಗ್ರೆಸ್ ಪಕ್ಷವು ಈ ದೇಶದಲ್ಲಿ ಬಡವರನ್ನು ನಿರ್ಮೂಲನೆ ಮಾಡಿದರೇ ಹೊರತು ಬಡವರ ಬಡತನ ನಿರ್ಮೂಲನೆ ಮಾಡಲು ಇವರಿಂದ ಆಗಿಲ್ಲ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.ಇಂದು ವಿಬಿ ಜಿ ರಾಮ್ ಜಿ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪುಡಾರಿಗಳು ಶ್ರೀಮಂತರಾದರು ಎಂದು ಟೀಕಿಸಿದರು. ಕಳೆದ ಎರಡೂವರೆ ವರ್ಷದಲ್ಲಿ ಒಂದಾದರೂ ಹೊಸ ಅಭಿವೃದ್ಧಿ ಯೋಜನೆ ನೀಡಲು ಇವರಿಂದ ಸಾಧ್ಯವಾಗಿದೆಯೇ ಎಂದು ಪ್ರಶ್ನಿಸಿದರು. ಗೃಹಲಕ್ಷ್ಮಿಯಡಿ 2 ಸಾವಿರ ಕೊಡುವುದಾಗಿ ಬೆನ್ನು ತಟ್ಟಿಕೊಳ್ಳುತ್ತಾರೆ.
ನವದೆಹಲಿ: ಬಹುನಿರೀಕ್ಷಿತ ಬಾಂಗ್ಲಾದೇಶದ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದೆ. ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಅಭೂತಪೂರ್ವ ಜಯ ಸಾಧಿಸಿದೆ. ಬಾಂಗ್ಲಾದೇಶದ ವಿವಿಧ ಮಾಧ್ಯಮಗಳ ಲೆಕ್ಕಾಚಾರಗಳ ಪ್ರಕಾರ, 300 ಸದಸ್ಯ ಬಲದ ಸಂಸತ್ತಿನಲ್ಲಿ ಬಿಎನ್ಪಿ 175ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಆದರೆ ಚುನಾವಣಾ ಆಯೋಗ ಇನ್ನೂ ಅಧಿಕೃತ ಘೋಷಣೆಯನ್ನು ಮಾಡಿಲ್ಲ.ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಐತಿಹಾಸಿಕ ಗೆಲುವಿನತ್ತ ಸಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು.
ಕೊಲಂಬೊ: ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಇಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಮಾಜಿ ಚಾಂಪಿಯನ್, ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಕ್ರಿಕೆಟ್ ಶಿಶು ಜಿಂಬಾಬ್ವೆ ಆಘಾತ ನೀಡಿದೆ. ಜಿಂಬಾಬ್ವೆ ತಂಡವು 23 ರನ್ಗಳ ಚಾರಿತ್ರಿಕ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ (64) ಅವರ ಅರ್ಧಶತಕದ ಬಲದಿಂದ ಜಿಂಬಾಬ್ವೆ ತಂಡವು 20 ಓವರ್ಗಳಲ್ಲಿ 2 ವಿಕೆಟ್ಗೆ 169 ರನ್ ಗಳಿಸಿತ್ತು.ಸವಾಲಿನ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ಮುಜರಬಾನಿ ಬ್ಲೆಸಿಂಗ್ ಮತ್ತು ಬ್ರಾಡ್ ಇವಾನ್ಸ್ ಅವರ ದಾಳಿಗೆ ಆಸ್ಟ್ರೇಲಿಯಾ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿತು. 19.3 ಓವರ್ಗಳಲ್ಲಿ 146 ರನ್ಗಳಿಗೆ ಹೋರಾಟ ಮುಗಿಸಿತು.
ಬೆಂಗಳೂರು: ಸಿಎಂ ಸಿದ್ದರಾಮಯ್ಯರಿಂದ ವರ್ಗಾವಣೆ ಎಡವಟ್ಟಾಗಿರುವ ಬಗ್ಗೆ ಬಿಜೆಪಿ ಶಾಸಕ ವಿ ಸುನಿಲ್ ಕುಮಾರ್ ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಡಾ ಕೆ ಮೋಹನ್ ಅವರನ್ನು ಈಗ ಅಬಕಾರಿ ಇಲಾಖೆ ಡಿಸಿಯಾಗಿ ನಿಯೋಜಿಸುವಂತೆ ಖುದ್ದು ಸಿಎಂ ಸಿದ್ದರಾಮಯ್ಯನವರೇ ಸಹಿ ಹಾಕಿದ ಆದೇಶ ಪತ್ರವೊಂದನ್ನು ವಿ ಸುನಿಲ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಆಡಳಿತ ಹಳಿ ತಪ್ಪುತ್ತಿದೆ ಎನ್ನುವುದಕ್ಕೆ ಇದು ಕ್ಲಾಸಿಕ್ ಉದಾಹರಣೆ ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಗುಡ್ನ್ಯೂಸ್ ನೀಡಿದೆ.ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರಗಳವರೆಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿದ್ಯಾರ್ಥಿ ಸಮುದಾಯದ ಹಿತವನ್ನು ಗಮನದಲ್ಲಿಟ್ಟುಕೊಂಡು ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಪಾಸುಗಳನ್ನು ವಾಸಸ್ಥಳದಿಂದ ಶಾಲಾ/ಕಾಲೇಜಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿ ವಿತರಣೆ ಮಾಡುತ್ತಿದೆ ಎಂದು ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮಕ್ಕಳಿಗೆ ಚಾಕಲೇಟ್ ಎಂದರೆ ಇಷ್ಟವೇ. ಆದರೆ ಚಾಕಲೇಟ್ ಸಿಹಿ ತಿಂದ ತಕ್ಷಣ ನೀರು ಕುಡಿಯಬೇಕೆನಿಸುತ್ತದೆ. ಚಾಕಲೇಟ್ ತಿಂದ ಬಳಿಕ ನೀರು ಕುಡಿಯಬಹುದೇ ಇಲ್ಲಿದೆ ವಿವರ. ಮಕ್ಕಳು ಚಾಕಲೇಟ್ ತಿಂದ ಕೂಡಲೇ ನೀರು ಕುಡಿಯುವುದು ಉತ್ತಮ ಅಭ್ಯಾಸ. ಕೆಲವರಿಗೆ ಚಾಕಲೇಟ್ ತಿಂದ ಬಳಿಕ ಹೊಟ್ಟೆ ನೋವು ಬರುವ ಸಾಧ್ಯತೆಯಿರುತ್ತದೆ. ಚಾಕಲೇಟ್ ತಿಂದ ಬಳಿಕ ನೀರು ಕುಡಿದರೆ ಹೊಟ್ಟೆ ನೋವಿನ ಸಮಸ್ಯೆ ಬರಲ್ಲ. ಚಾಕಲೇಟ್ ಅಂಟು ಅಂಟಾಗಿರುತ್ತದೆ ಮತ್ತು ಸಕ್ಕರೆ ಅಂಶ ಅಧಿಕವಾಗಿರುತ್ತದೆ. ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಉತ್ತಮ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಚಾಕಲೇಟ್ ನಲ್ಲಿರುವ ಸಿಹಿ ಅಂಶ ಹೀರಿಕೊಂಡು ಆಸಿಡ್ ಬಿಡುಗಡೆಗೊಳಿಸುತ್ತದೆ. ಇದನ್ನು ತಪ್ಪಿಸಲು ತಕ್ಷಣವೇ ನೀರು ಸೇವನೆ ಮಾಡಬೇಕು.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ಆದರೆ ನಿನ್ನೆ ಅಡಿಕೆ ದರದಲ್ಲಿ ಏರಿಕೆಯಾಗಿರುವುದು ಖಷಿಯ ಸಂಗತಿ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಏರಿಕೆಯಾಗಬಹುದೇನೋ ಎಂಬ ನಿರೀಕ್ಷೆ ಬೆಳೆಗಾರರಲ್ಲಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಇದರಿಂದ ರೈತರ ಚಿಂತೆಗೆ ಕಾರಣವಾಗಿತ್ತು. ಇಂದು ಕೊಂಚ ಏರಿಕೆಯಾಗಿತ್ತು. ಆದರೆ ಇಂದು ಮತ್ತೆ ಯಥಾಸ್ಥಿತಿಯಲ್ಲಿದೆ. ಇಂದು ಹೊಸ ಅಡಿಕೆ ಬೆಲೆ 470 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 545 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ 545 ರೂ.ಗಳಷ್ಟಾಗಿದೆ.
ಕೋಝಿಕ್ಕೋಡ್: ಅದೇನು ಮಾಡ್ತೀಯಾ ಮಾಡು, ನಾನಂತೂ ಫುಟ್ಪಾತ್ ಮೇಲೆ ಹೋಗಲು ಬಿಡಲ್ಲ ಎಂದು ಅಡ್ಡ ನಿಂತ ಕೇರಳದ ಅಜ್ಜಿಯೊಬ್ಬರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಫುಟ್ಪಾತ್ ಮೇಲೆ ವಾಹನ ಚಲಾಯಿಸುವುದು ಸಂಚಾರೀ ನಿಯಮದ ಉಲ್ಲಂಘನೆಯಾಗಿದೆ. ಹಾಗಿದ್ದರೂ ಟ್ರಾಫಿಕ್ ದಟ್ಟಣೆಯಿದ್ದಾಗ ಹಲವು ದ್ವಿಚಕ್ರ ವಾಹನ ಸವಾರರು ಈ ನಿಯಮವನ್ನು ಉಲ್ಲಂಘಿಸಿ ಫುಟ್ಪಾತ್ ಮೇಲೇ ವಾಹನ ಚಲಾಯಿಸುತ್ತಾರೆ. ಅದೇ ರೀತಿ ಕೋಝಿಕ್ಕೋಡ್ ನಲ್ಲಿ ಫುಟ್ಪಾತ್ ಮೇಲೇ ಓರ್ವ ಸವಾರ ತನ್ನ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬರುತ್ತಿದ್ದ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ದಾಖಲೆಯ ಏರಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಇಳಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಇಂದು ಇಳಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,61,535.00 ರೂ.ಗಳಿತ್ತು. ಇಂದೂ 1,61,110.00 ರೂ.ಗಳಷ್ಟಿದೆ.
ನವದೆಹಲಿ: ನಮೀಬಿಯಾ ವಿರುದ್ಧ ಟಿ20 ವಿಶ್ವಕಪ್ ಪಂದ್ಯದ ನಡುವೆ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯರನ್ನು ನೋಡಲು ಅಭಿಮಾನಿಯೊಬ್ಬ ನೇರವಾಗಿ ಮೈದಾನಕ್ಕೆ ನುಗ್ಗಿದ್ದ. ಆತನನ್ನು ಹಾರ್ದಿಕ್ ಪಾಂಡ್ಯ ರಕ್ಷಿಸಿದ್ದಾರೆ. ಸಾಮಾನ್ಯವಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮೈದಾನದಲ್ಲಿದ್ದಾಗ ಅಭಿಮಾನಿಗಳು ನುಗ್ಗುವುದು ತಬ್ಬಿಕೊಳ್ಳಲು ಪ್ರಯತ್ನಿಸುವುದು ಸಹಜ. ಆದರೆ ಈ ಇಬ್ಬರೂ ಕ್ರಿಕೆಟಿಗರ ಹೊರತಾಗಿಯೂ ಬೇರೆ ಕ್ರಿಕೆಟಿಗರಿಗೂ ಅದೇ ರೀತಿಯ ಹುಚ್ಚು ಅಭಿಮಾನಿಗಳಿದ್ದಾರೆ ಎಂದು ನಿನ್ನೆ ಸಾಬೀತಾಗಿದೆ. ನಿನ್ನೆ ಭಾರತ ಫೀಲ್ಡಿಂಗ್ ಮಾಡುತ್ತಿದ್ದಾಗ ಹಾರ್ದಿಕ್ ಪಾಂಡ್ಯರನ್ನು ತಬ್ಬಿಕೊಳ್ಳಲು ಓರ್ವ ಅಭಿಮಾನಿ ಹುಡುಗ ನೇರವಾಗಿ ಮೈದಾನಕ್ಕೆ ನುಗ್ಗಿದ್ದ.
ಪ್ರಿಯಕರನ ಮೇಲಿನ ಸಿಟ್ಟಿಗೆ ಈ ಯುವತಿ ಸರಯೂ ನದಿಗೆ ಹಾರಿದ್ದಳು. ಆದರೆ ಹೆಪ್ಪುಗಟ್ಟಿಸುವ ಚಳಿಯಲ್ಲಿ ನದಿಗೆ ಧುಮುಕಿದವಳು ನಂತರ ಮಾಡಿದ್ದೇ ಬೇರೆ. ಈ ವಿಡಿಯೋ ನೋಡಿ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವ್ಯಾಲೆಂಟೈನ್ಸ್ ಡೇ ಹತ್ತಿರ ಬರುತ್ತಿದ್ದು ಪ್ರೇಮಿಗಳು ಗಿಫ್ಟ್, ಪ್ರಪೋಸ್ ಎಂದು ಬ್ಯುಸಿಯಾಗಿರುತ್ತಾರೆ. ಈ ವೇಳೆ ಪ್ರಿಯಕರ ಅಥವಾ ಪ್ರಿಯತಮೆ ಮೇಲೆ ಹುಸಿ ಮುನಿಸುಗಳು ಬರುವುದು ಸಹಜ. ಆದರೆ ಈ ಯುವತಿ ತನ್ನ ಪ್ರಿಯಕರನ ಮೇಲಿನ ಸಿಟ್ಟಿಗೆ ಸರಯೂ ನದಿಗೇ ಹಾರಿದ್ದಾಳೆ. ಹಾರುವಾಗ ಏನೋ ಸಿಟ್ಟಿನ ಭರದಲ್ಲಿ ಹಾರಿ ಬಿಟ್ಟಿದ್ದಳು.
ನವದೆಹಲಿ: ನಮೀಬಿಯಾ ವಿರುದ್ಧ ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಗ ಹಾರ್ದಿಕ್ ಪಾಂಡ್ಯ ಎದುರಾಳಿ ಬೌಲರ್ ಮೇಲೇ ಅಕ್ಷರಶಃ ಮಲಗಿದ ಫನ್ನಿ ವಿಡಿಯೋ ವೈರಲ್ ಆಗಿದೆ. ನಿನ್ನೆಯ ಪಂದ್ಯವನ್ನು 93 ರನ್ ಗಳಿಂದ ಗೆದ್ದ ಟೀಂ ಇಂಡಿಯಾ ಈ ಟಿ20 ವಿಶ್ವಕಪ್ ನಲ್ಲಿ ಸತತ ಎರಡನೇ ಗೆಲುವು ಪಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. 210 ರನ್ ಗಳ ಗೆಲುವಿನ ಗುರಿಯೊಂದಿಗೆ ಕಣಕ್ಕಿಳದ ನಮೀಬಿಯಾ 18.2 ಓವರ್ ಗಳಲ್ಲಿ 116 ರನ್ ಗಳಿಗೆ ಆಲೌಟ್ ಆಯಿತು.
ಬೆಂಗಳೂರು: ಕರ್ನಾಟಕ ಸರ್ಕಾರದ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ನೀಡುವ ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಶಕ್ತಿ ಯೋಜನೆಯಡಿಯಲ್ಲಿ ಕರ್ನಾಟಕದ ವಿಳಾಸವಿರುವ ಆಧಾರ್ ಕಾರ್ಡ್ ಇರುವ ಮಹಿಳೆಯರು ಉಚಿತವಾಗಿ ಕರ್ನಾಟಕ ಸಾರಿಗೆ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣ ಮಾಡಬಹುದಾಗಿದೆ. ಈಗಾಗಲೇ ಸಾಕಷ್ಟು ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇದುವರೆಗೆ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿದ್ದರೆ ಸಾಕಿತ್ತು. ಆದರೆ ಇನ್ನು ಮುಂದೆ ಆಧಾರ್ ಕಾರ್ಡ್ ಬದಲು ಸ್ಮಾರ್ಟ್ ಕಾರ್ಡ್ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ನಿನ್ನೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ.
ಬೆಂಗಳೂರು: ಬಿಕ್ಲು ಶಿವು ಮುರ್ಟರ್ ಕೇಸ್ ನಲ್ಲಿ ಅರೆಸ್ಟ್ ಆಗಿರುವ ಶಾಸಕ ಬೈರತಿ ಬಸವರಾಜುಗೆ ನಿನ್ನೆ ರಾತ್ರಿ ಪೊಲೀಸ್ ಠಾಣೆಯಲ್ಲೇ ಆತಿಥ್ಯ ನೀಡಲಾಗಿದೆ. ಕಳೆದ 8 ತಿಂಗಳಿಂದ ಬಿಕ್ಲು ಶಿವು ಮರ್ಡರ್ ಕೇಸ್ ನಲ್ಲಿ ಬೈರತಿ ಬಸವರಾಜು ಕಾನೂನಿನ ಲಾಭಗಳನ್ನು ಬಳಸಿ ಅರೆಸ್ಟ್ ಆಗದೇ ಬಚಾವ್ ಆಗಿದ್ದರು. ಆದರೆ ಇದೀಗ ನಿರೀಕ್ಷಣಾ ಜಾಮೀನು ರದ್ದಾದ ಬೆನ್ನಲ್ಲೇ ಇಂಡಿಗೋ ವಿಮಾನದಲ್ಲಿ ಬಂದಿಳಿದ ಬೈರತಿ ಬಸವರಾಜು ಅವರನ್ನು ವಿಮಾನ ನಿಲ್ದಾಣದಲ್ಲೇ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದರು.
ನವದೆಹಲಿ: ಲೋಕಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗ ಟಿಎಂಸಿ ಸಂಸದ ಸೌಗತ ರಾಯ್ ತಮ್ಮ ಪಕ್ಷದ ಮಹಿಳಾ ಸಂಸದೆ ಜೂನ್ ಮಲಿಯಾ ಜೊತೆ ಮಾತನಾಡುತ್ತಿದ್ದ ವಿಡಿಯೋವೊಂದು ಈಗ ಫುಲ್ ವೈರಲ್ ಆಗಿದೆ. ನಿನ್ನೆಯ ಕಲಾಪದಲ್ಲಿ ಆಜಾದ್ ಸಮಾಜ್ ಪಕ್ಷದ ಸಂಸದ ಆಝಾದ್ ಚಂದ್ರಶೇಖರ್ ಭಾರೀ ಗಂಭೀರವಾಗಿ ಮಾತನಾಡುತ್ತಿದ್ದರು. ಈ ವೇಳೆ ಅವರ ಹಿಂದೆ ಕೂತಿದ್ದ ಸಂಸದರಾದ ಸೌಗತ ರಾಯ್ ಮತ್ತು ಜೂನ್ ಮಲಿಯಾ ತಮ್ಮದೇ ಲೋಕದಲ್ಲಿದ್ದರು. ಜೂನ್ ಮಲಿಯಾ ಪಕ್ಕದಲ್ಲಿ ಕೂತು ಸೌಗತ ರಾಯ್ ಏನೋ ಮನವಿ ಮಾಡಿಕೊಳ್ಳುವಂತಿತ್ತು. ಆದರೆ ಜೂನ್ ಮಲಿಯಾ ಅದನ್ನು ಒಪ್ಪಿಕೊಳ್ಳುತ್ತಿಲ್ಲ ಎನ್ನುವಂತಿತ್ತು ಇಬ್ಬರ ಸಂಭಾಷಣೆ.
ಬೆಂಗಳೂರು: ಈ ಬಾರಿ ಮಳೆಗಾಲ, ಚಳಿಗಾಲ ತೀವ್ರವಾಗಿತ್ತು. ಅದೇ ರೀತಿ ಬೇಸಿಗೆಯೂ ತೀವ್ರವಾಗಿರಲಿದೆ. ಇಂದಿನಿಂದ ಹವಾಮಾನದಲ್ಲಿ ಮಹತ್ವದ ಬದಲಾವಣೆಯಾಗಲಿದೆ ತಪ್ಪದೇ ಗಮನಿಸಿ. ಈ ಬಾರಿ ಬೇಸಿಗೆ ಅವಧಿಗಿಂತ ಮುನ್ನವೇ ಕಾಲಿಡಲಿದೆ ಎಂದು ಈಗಾಗಲೇ ಹವಾಮಾನ ವರದಿಗಳು ಹೇಳಿವೆ. ನಿನ್ನೆಯವರೆಗೂ ಬಿಸಿಲಿನ ತಾಪ ಹೆಚ್ಚಾಗಿದ್ದರೂ ಗರಿಷ್ಠ ತಾಪಮಾನ 28-29 ಡಿಗ್ರಿಯಷ್ಟೇ ಇತ್ತು. ಆದರೆ ಇಂದಿನಿಂದ ತಾಪಮಾನದಲ್ಲಿ ದಿಡೀರ್ ಏರಿಕೆಯಾಗಲಿದೆ. ಫೆಬ್ರವರಿ ಮೂರನೇ ವಾರದಿಂದ ಬೇಸಿಗೆ ಆರಂಭವಾಗಲಿದೆ ಎಂದು ವರದಿಗಳು ಸೂಚನೆ ನೀಡಿವೆ.