ಬೆಂಗಳೂರು: ಕರ್ನಾಟಕದಲ್ಲಿ ಎರಡು ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗೆ ಇಂದು ಬಿಜೆಪಿ ಪರ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಬಾಗಲಕೋಟೆ ಮತ್ತು ದಾವಣಗೆರೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಇದಕ್ಕಾಗಿ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಇದುವರೆಗೆ ಬಿಜೆಪಿ ಅಭ್ಯರ್ಥಿಗಳ ಪರ ಮಿತ್ರ ಪಕ್ಷ ಜೆಡಿಎಸ್ ನಾಯಕರು ಬಂದಿರಲಿಲ್ಲ. ಕುಮಾರಸ್ವಾಮಿ ಪ್ರಚಾರಕ್ಕೆ ಬರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆ ನೀಡಿದ್ದರು. ಅದರಂತೆ ಇಂದು ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಎಚ್ ಡಿ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಕುಮಾರಸ್ವಾಮಿ ಜೊತೆಗೆ ರಾಜ್ಯದ ಪ್ರಮುಖ ಬಿಜೆಪಿ ನಾಯಕರೂ ಇಂದು ಪ್ರಚಾರಕ್ಕೆ ಸಾಥ್ ನೀಡಲಿದ್ದಾರೆ.
ಅರೆ ಕ್ಷಣವಾಗಿದ್ದರೂ ಆತ ರೈಲಿನಡಿಗೆ ಸಿಲುಕಿ ಪ್ರಾಣವೇ ಹೋಗುತ್ತಿತ್ತು. ಆದರೆ ಆತನ ಜೀವ ಗಟ್ಟಿಯಿತ್ತು. ಆತನನನ್ನು ಕಾಪಾಡಿದ್ದು ಯಾರು, ಹೇಗೆ ಎಂದು ಈ ವಿಡಿಯೋ ನೋಡಿ. ರೈಲ್ವೇ ನಿಲ್ದಾಣದಲ್ಲಿ ರೈಲು ಬರುವಾಗ ಮೈ ಎಲ್ಲಾ ಎಚ್ಚರವಾಗಿದ್ದರೂ ಸಾಲದು. ಕೆಲವರು ರೈಲು ಹತ್ತುವ ಗಡಿಬಿಡಿಯಲ್ಲಿ ಕಾಲು ಜಾರಿ ಬಿದ್ದು ಪ್ರಾಣವನ್ನೇ ಕಳೆದುಕೊಳ್ಳುವುದೂ ಇದೆ. ಇಂತಹದ್ದೇ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಮುಂಬೈನ ಬೊರಿವಲಿ ರೈಲ್ವೇ ನಿಲ್ದಾಣದಲ್ಲಿ ನಡೆದ ಘಟನೆ. ಓರ್ವ ವ್ಯಕ್ತಿ ಚಾಲನೆಯಲ್ಲಿರುವ ರೈಲಿನಿಂದ ಸ್ಲಿಪ್ ಆಗಿ ಕೆಳಗೆ ಇಳಿಯುತ್ತಾನೆ.
ಬೆಂಗಳೂರು: ಆರ್ ಸಿಬಿ ಸ್ಟಾರ್ ಕ್ರಿಕೆಟಿಗ, ಕಿಂಗ್ ಕೊಹ್ಲಿ ಎಲ್ಲೂ ಕೆಲಸ ಸಿಗದಿದ್ದರೆ ಸ್ಯಾಂಡಲ್ ವುಡ್ ನಲ್ಲಿ ಕೆಲಸ ಮಾಡ್ತೀನಿ ಎಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಿಸ್ಟರ್ ನಾಗ್ಸ್ ಶೋನಲ್ಲಿ ಕೊಹ್ಲಿ ತಮಾಷೆ ಪ್ರಶ್ನೆಗಳಿಗೆ ತಮಾಷೆ ಉತ್ತರಗಳನ್ನು ನೀಡಿದ್ದಾರೆ. ಈ ವೇಳೆ ನಾಗ್ಸ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನನಗೆ ಅಸುರಕ್ಷತೆ ಭಾವ ಎನ್ನುವುದಿಲ್ಲ. ನನಗೆ ಎಲ್ಲೂ ಕೆಲಸ ಇಲ್ಲ ಅಂದ್ರೆ ಸ್ಯಾಂಡಲ್ ವುಡ್ ನಲ್ಲಿ ಕೆಲಸ ಮಾಡ್ತೀನಿ. ನನಗೆ ಗೊತ್ತು ಮಿಸ್ಟರ್ ನಾಗ್ಸ್ ನೀವು ಇಲ್ಲಿ ದೊಡ್ಡ ಸ್ಟಾರ್. ನೀವು ರಾಜಾ ಸಾಬ್ ಪಾತ್ರ ಮಾಡಿದ್ರೆ ನಾನು ನಿಮ್ಮ ಅಸಿಸ್ಟೆಂಟ್ ಆಗಿ ಮಾಡ್ತೀನಿ.
ಚೆನ್ನೈ: ಐಪಿಎಲ್ 2026 ರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ನಸಿಬೇ ಸರಿ ಇಲ್ಲ. ಆಡಿದ ಎರಡೂ ಪಂದ್ಯಗಳನ್ನೂ ಸೋತಿದೆ. ಸಿಎಸ್ ಕೆ ಫ್ಯಾನ್ಸ್ ಬೈಗುಳಕ್ಕೆ ಹೆದರಿ ಕ್ಯಾಪ್ಟನ್ ಋತುರಾಜ್ ಗಾಯಕ್ ವಾಡ್ ಮಾಡಿದ್ದೇನು ಗೊತ್ತಾ? ಧೋನಿ ನಾಯಕತ್ವವನ್ನು ಋತುರಾಜ್ ಗಾಯಕ್ ವಾಡ್ ಗೆ ಹಸ್ತಾಂತರಿಸಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲಿನಂತೆ ಗೆಲುವು ಕಾಣುತ್ತಿಲ್ಲ. ಈ ಬಾರಿಯೂ ಮೊದಲ ಪಂದ್ಯದಲ್ಲಿ ಸೋತಿದ್ದ ಚೆನ್ನೈ ಈಗ ಎರಡನೇ ಪಂದ್ಯದಲ್ಲೂ ಋತುರಾಜ್ ಗಾಯಕ್ ವಾಡ್ ನೇತೃತ್ವದ ಸಿಎಸ್ ಕೆ ಸೋತಿದೆ. ನಿನ್ನೆಯ ಪಂದ್ಯದಲ್ಲಿ 209 ರನ್ ಗಳಿಸಿಯೂ ಪಂಜಾಬ್ ವಿರುದ್ಧ 5 ವಿಕೆಟ್ ಗಳಿಂದ ಸೋತಿದೆ.
ತಾನು ಕಷ್ಟಪಟ್ಟು ಗಳಿಸಿದ ಜಮೀನು ಮಾರಿ ಪತ್ನಿಗೆ ಜೀವನಾಂಶದ ಮೊತ್ತವನ್ನು ಪತಿ ನೀಡಿದ್ದಾನೆ. ಆ ಹಣ ಆಕೆಯ ಕೈಗಿಡುವಾಗ ಆತನ ಕಣ್ಣಲ್ಲಿದ್ದ ನೋವು ನೆಟ್ಟಿಗರ ಮನಕಲಕಿದೆ. ನಮ್ಮ ದೇಶದಲ್ಲಿ ಕಾನೂನು ಯಾವತ್ತೂ ಹೆಣ್ಣು ಮಕ್ಕಳ ಪರ. ಕೆಲವೊಮ್ಮೆ ಇದು ಪುರುಷರಿಗೆ ಶಾಪವಾಗುವುದೂ ಇದೆ. ವಿಶೇಷವಾಗಿ ವಿಚ್ಛೇದನದ ಸಂದರ್ಭದಲ್ಲಿ ಪುರುಷರು ಹಣಕಾಸಿನ ವಿಚಾರವಾಗಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಇಲ್ಲೂ ಅದೇ ರೀತಿ ಆಗಿದೆ. ಪತಿ-ಪತ್ನಿ ಸಂಸಾರ ಶುರು ಮಾಡಿ ನಾಲ್ಕು ತಿಂಗಳಾಗಿತ್ತಷ್ಟೇ. ಆಗಲೇ ಇಬ್ಬರ ನಡುವೆ ವೈಮನಸ್ಯ ಶುರುವಾಗಿದೆ. ಪರಿಣಾಮ, ವಿಚ್ಛೇದನದ ಹಂತಕ್ಕೆ ಹೋಗಿದೆ.
ಚೆನ್ನೈ: ಆರ್ ಸಿಬಿ ಇನ್ನೊಮ್ಮೆ ಕಪ್ ಗೆಲ್ಲಲು 72 ವರ್ಷ ಬೇಕಾಗಬಹುದು ಎನ್ನುವ ಮೂಲಕ ಅಂಬಟಿ ರಾಯುಡು ಹೊಟ್ಟೆ ಕಿಚ್ಚು ಇನ್ನೂ ನಿಂತಿಲ್ಲ ಎಂದು ಸಾಬೀತಪಡಿಸಿದ್ದಾರೆ. ಕಳೆದ ಎರಡು ಸೀಸನ್ ಗಳಿಂದ ಸಿಎಸ್ ಕೆ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಆರ್ ಸಿಬಿ ವಿರುದ್ಧ ವ್ಯಂಗ್ಯದ ಮಾತುಗಳಿಂದ ಚುಚ್ಚುತ್ತಲೇ ಬಂದಿದ್ದಾರೆ. ಅವರ ಹೇಳಿಕೆಗಳು ಸಾಕಷ್ಟು ಟ್ರೋಲ್ ಗೊಳಗಾಗಿದೆ. ಕಳೆದ ಬಾರಿಯೂ ಆರ್ ಸಿಬಿ ಖಂಡಿತಾ ಕಪ್ ಗೆಲ್ಲಲ್ಲ ಎಂದಿದ್ದರು.
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ನಾಲಿಗೆ ಹರಿಬಿಟ್ಟಿದ್ದಾರೆ. ಸಿದ್ರಾಮಣ್ಣ ಬೇಕಾದ್ದು ತಿನ್ನು, ತುದಿ ಬೇಕಾದ್ರೂ ಕಟ್ ಮಾಡಿಸು ಎಂದು ಅಸಭ್ಯ ಪದ ಬಳಕೆ ಮಾಡಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಬಾಗಲಕೋಟೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಪ್ರತಾಪ್ ಸಿಂಹ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ಹಲವು ಬಾರಿ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗಿದ್ದು ಇದೆ. ಆದರೆ ಈ ಬಾರಿ ಅವರು ಬಳಸಿದ ಶಬ್ಧ ಆಕ್ರೋಶಕ್ಕೆ ಕಾರಣವಾಗಿದೆ.
ಶನಿ ದೋಷವಿದ್ದಾಗ ನಾವು ಧರಿಸುವ ಬಟ್ಟೆ ಕೂಡಾ ನಮ್ಮ ದಿನ ನಿರ್ಧರಿಸುತ್ತದೆ. ಜಾತಕದಲ್ಲಿ ಶನಿ ದೋಷವಿದ್ದರೆ ಯಾವ ಬಣ್ಣದ ಬಟ್ಟೆ ಧರಿಸಬೇಕು, ಯಾವುದನ್ನು ಧರಿಸಬಾರದು ನೋಡಿ. ಶನಿ ದೋಷ ಪ್ರಭಾವ ತಗ್ಗಿಸಲು ಕಡು ನೀಲಿ ಬಣ್ಣ ಅಥವಾ ಕಪ್ಪು ಬಣ್ಣದ ಬಟ್ಟೆ ಧರಿಸಬೇಕು. ಶನಿ ನಾವು ಮಾಡುವ ಕರ್ಮಗಳಿಗೆ ಅನುಸಾರವಾಗಿ ನಮಗೆ ಶಿಕ್ಷೆಯನ್ನು ಕೊಡುವಾತ. ಈ ಬಣ್ಣಗಳನ್ನು ಧರಿಸುವ ಮೂಲಕ, ನೀವು ಅವನ ರಕ್ಷಣೆ ಮತ್ತು ಅನುಗ್ರಹವನ್ನು ಪಡೆಯಲು ಅನುಕೂಲವಾಗುತ್ತದೆ. ಕಪ್ಪು ಬಣ್ಣ: ಇದು ಶನಿಯ ಪ್ರಾಥಮಿಕ ಬಣ್ಣ. ಇದು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಧರಿಸುವವರನ್ನು ಶನಿಯ "ಕಠಿಣ ನೋಟ" ದಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಈ ವಾರದಾದ್ಯಂತ ಹಲವು ಕಡೆ ಮಳೆಯಾಗಿತ್ತು. ವಾರಂತ್ಯದಲ್ಲಿ ರಾಜ್ಯದಲ್ಲಿ ಮಳೆಯ ಸೂಚನೆಯಿದೆಯಾ ಇಲ್ಲಿದೆ ಹವಾಮಾನ ವರದಿ. ನಿನ್ನೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಸಣ್ಣ ಮಳೆಯಾಗಿತ್ತು. ಇಂದೂ ಅದೇ ರೀತಿಯ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ. ಇಂದೂ ಕೆಲವೇ ಕೆಲವು ಜಿಲ್ಲೆಗಳಿಗೆ ಮಳೆಯ ಸೂಚನೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ವಿಶೇಷವಾಗಿ ಇಂದು ದಕ್ಷಿಣ ಕನ್ನಡ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆಯಾಗಬಹುದು. ಅಲ್ಲದೆ ಕೊಡಗು, ಹಾಸನ ಜಿಲ್ಲೆಗಳಲ್ಲಿ ನಾಳೆ ತುಂತುರು ಮಳೆಯಾಗಲಿದೆ.
ಮದುವೆ, ಸಂತಾನ ಸಮಸ್ಯೆಯಾಗುತ್ತಿದ್ದರೆ ಸುಬ್ರಹ್ಮಣ್ಯನ ಕುರಿತು ಪ್ರಾರ್ಥನೆ ಮಾಡಬೇಕು. ಅದಕ್ಕಾಗಿ ಸುಬ್ರಹ್ಮಣ್ಯ ಭುಜಂಗ ಪ್ರಯಾತ ಸ್ತೋತ್ರವನ್ನು ತಪ್ಪದೇ ಓದಿ. ಇದರಿಂದ ಮಾನಸಿಕವಾಗಿಯೂ ನೆಮ್ಮದಿ ಸಿಗುವುದು.ಭಜೇಽಹಂ ಕುಮಾರಂ ಭವಾನೀಕುಮಾರಂಗಲೋಲ್ಲಾಸಿಹಾರಂ ನಮತ್ಸದ್ವಿಹಾರಮ್ ।ರಿಪುಸ್ತೋಮಪಾರಂ ನೃಸಿಂಹಾವತಾರಂಸದಾನಿರ್ವಿಕಾರಂ ಗುಹಂ ನಿರ್ವಿಚಾರಮ್ ॥ 1 ॥ ನಮಾಮೀಶಪುತ್ರಂ ಜಪಾಶೋಣಗಾತ್ರಂಸುರಾರಾತಿಶತ್ರುಂ ರವೀಂದ್ವಗ್ನಿನೇತ್ರಮ್ ।ಮಹಾಬರ್ಹಿಪತ್ರಂ ಶಿವಾಸ್ಯಾಬ್ಜಮಿತ್ರಂಪ್ರಭಾಸ್ವತ್ಕಳತ್ರಂ ಪುರಾಣಂ ಪವಿತ್ರಮ್ ॥ 2 ॥ ಅನೇಕಾರ್ಕಕೋಟಿ-ಪ್ರಭಾವಜ್ಜ್ವಲಂ ತಂಮನೋಹಾರಿ ಮಾಣಿಕ್ಯ ಭೂಷೋಜ್ಜ್ವಲಂ ತಮ್ ।ಶ್ರಿತಾನಾಮಭೀಷ್ಟಂ ನಿಶಾಂತಂ ನಿತಾಂತಂಭಜೇ ಷಣ್ಮುಖಂ ತಂ ಶರಚ್ಚಂದ್ರಕಾಂತಮ್ ॥ 3 ॥ ಕೃಪಾವಾರಿ ಕಲ್ಲೋಲಭಾಸ್ವತ್ಕಟಾಕ್ಷಂವಿರಾಜನ್ಮನೋಹಾರಿ ಶೋಣಾಂಬುಜಾಕ್ಷಮ್ ।ಪ್ರಯೋಗಪ್ರದಾನಪ್ರವಾಹೈಕದಕ್ಷಂಭಜೇ ಕಾಂತಿಕಾಂತಂ ಪರಸ್ತೋಮರಕ್ಷಮ್ ॥ 4 ॥
ದಾವಣಗೆರೆ: ಹದಿನಾರು ಬಜೆಟ್ ಮಂಡಿಸಿದ್ಮೇಲೆ ಸಿಎಂ ಸಿದ್ದರಾಮಯ್ಯ ಅವರು ಕಣ್ಕಟ್ಟು ವಿದ್ಯೆ ಕಲಿತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು. ಅಭಿವೃದ್ಧಿಗೆ ಹಣ ನೀಡದೆ, ಗ್ಯಾರಂಟಿಗಳನ್ನೂ ಸರಿಯಾಗಿ ಅನುಷ್ಠಾನ ಮಾಡದೆ ಆರ್ಥಿಕ ಶಿಸ್ತು ಪಾಲಿಸುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪ ಮಾಡಿದರು.ಶಿಸ್ತೇ ಇಲ್ಲದ ಸಿದ್ದರಾಮಯ್ಯರನವರ ಸರ್ಕಾರಕ್ಕೆ ಒಂದೇ ಒಂದು ಅಭಿವೃದ್ಧಿ ಕಾರ್ಯವನ್ನೂ ಮಾಡಿಲ್ಲ. ಅವರು ಸುಳ್ಳು
ದಾವಣಗರೆ: ಹುಬ್ಬಳ್ಳಿಯಲ್ಲಿ ಜಿಮ್ ಟ್ರೈನರ್ ವಿರುದ್ಧ ಕೇಳಿವಂದಿರುವ ಆರೋಫ ಸಂಬಂಧ ಸಮೀರ್ ವಿರುದ್ಧ ಸೂಕ್ತ ಕ್ರಮಕ್ಕೆ ಗೃಹಸಚಿವ ಜಿ ಪರಮೇಶ್ವರ್ ಸೂಚಿಸಿದ್ದಾರೆ. ಈ ವಿಚಾರವಾಗಿ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರಕರಣ ಸಂಬಂಧ ಎಲ್ಲ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಯಾರೇ ಆಗಿದ್ದರೂ ಕೂಡ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಯುವತಿಯನ್ನು ರಕ್ಷಣೆ ಮಾಡಲಾಗಿದೆ. ಜಿಮ್ ಟ್ರೈನರ್ ಮೇಲೆ ಕ್ರಮ ತೆಗೆದುಕೊಳ್ಳಲು ಹೇಳಿದ್ದೇನೆ ಎಂದರು.
ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಗೆ ಶುಕ್ರವಾರ ಬಿಡುಗಡೆ ಮಾಡಿರುವ ಪಕ್ಷದ 27 ಅಭ್ಯರ್ಥಿಗಳ ಪಟ್ಟಿಯಲ್ಲಿ ತಮಿಳುನಾಡು ಬಿಜೆಪಿ ಮಾಜಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರನ್ನು ಸೇರಿಸಲಾಗಿಲ್ಲ. ಈ ಕ್ರಮದ ಬಗ್ಗೆ ಕೇಳಿದಾಗ, ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರ ಅವರು "ಪಕ್ಷದ ಹೈಕಮಾಂಡ್ ಈ ನಿರ್ಧಾರವನ್ನು ತೆಗೆದುಕೊಂಡಿದೆ" ಎಂದು ಹೇಳಿದರು.ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ವೇಳೆ ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಗೈರುಹಾಜರಾದ ಹಿನ್ನೆಲೆಯಲ್ಲಿ ಅಣ್ಣಾಮಲೈ ಮತ್ತು ಪಕ್ಷದ ನಡುವೆ ಭಿನ್ನಾಭಿಪ್ರಾಯ ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಕೈಗಾರಿಕೋದ್ಯಮಿ ಗೌತಮ್ ಅದಾನಿ ಗುರುವಾರ ಲಕ್ನೋದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದರು. ರಾಜ್ಯದ ದೀರ್ಘಾವಧಿಯ ಆರ್ಥಿಕ ಮಹತ್ವಾಕಾಂಕ್ಷೆಗಳಿಗೆ ಬಲವಾದ ಉದ್ಯಮದ ಬೆಂಬಲವನ್ನು ಸೂಚಿಸಿದರು.ಸಂವಾದದ ನಂತರ, ಅದಾನಿ ಗ್ರೂಪ್ ಅಧ್ಯಕ್ಷರು ಉತ್ತರ ಪ್ರದೇಶದ ಬೆಳವಣಿಗೆಯ ಮಾರ್ಗಸೂಚಿಯ ಪ್ರಮಾಣವನ್ನು ಹೈಲೈಟ್ ಮಾಡಲು ಸಾಮಾಜಿಕ ಮಾಧ್ಯಮಕ್ಕೆ ಕರೆದೊಯ್ದರು, ಇದು ರಾಜ್ಯದ ಆರ್ಥಿಕ ಪಥವನ್ನು ಮರುರೂಪಿಸುವ ಗುರಿಯನ್ನು ಪರಿವರ್ತಕ ದೃಷ್ಟಿ ಎಂದು ವಿವರಿಸಿದರು.
ತಾಯಿ ಸುವರ್ಣಲತಾ ಅವರನ್ನು ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದ ಸಂಬಂಧ ಪ್ರಕಾಶ್ ರಾಜ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಈ ಸಂಬಂಧ ಪ್ರಕಾಶ್ ರಾಜ್ ಅವರು ಇದೀಗ ಪ್ರತಿಕ್ರಿಯಿಸಿದ್ದಾರೆ. ಪ್ರಕಾಶ್ ರಾಜ್ ಅವರ 86ವರ್ಷದ ತಾಯಿ ಅವರು ವಯೋಸಹಜ ಕಾಯಿಲೆಯಿಂದ ಮಾರ್ಚ್ 29 ರಂದು ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ಮಾರ್ಚ್ 31 ರಂದು ಬೆಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ನಡೆಸಲಾಯಿತು.ಅಂತ್ಯಕ್ರಿಯೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು.
ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಬೆನ್ನಲ್ಲೇ ಇದೀಗ ನಟ ನಟಿಯ ಸಂಭಾವನೆ ಬಗ್ಗೆ ಸುದ್ದಿ ಹರಿದಾಡುತ್ತಿದೆ. ₹4,000 ಕೋಟಿ ರೂಪಾಯಿಗಳ ಬೃಹತ್ ಬಜೆಟ್ನಲ್ಲಿ ನಿರ್ಮಿಸಲಾದ ರಾಮಾಯಣವು ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿರುವ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ರಾಮನಾಗಿ ರಣಬೀರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ಅವರು ಪಾತ್ರಕ್ಕೆ ಜೀವ
ಬೆಂಗಳೂರು: ಆರೋಗ್ಯದಲ್ಲಿ ಏರುಪೇರಾಗಿ ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರು ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ನಗರದ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಆಯೋಜಿಸಿದ್ದ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅವರ ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿ ಪಿಜಿಆರ್ ಸಿಂಧ್ಯಾ ಅವರೊಂದಿಗೆ ಕುಳಿತು ಮಾತನಾಡುತ್ತಿದ್ದ ಹೆಗ್ಡೆ ಅವರಿಗೆ ತಲೆ ಸುತ್ತು ಬಂದ ಹಾಗೆ ಆಯಿತು. ಕುಳಿತವರೇ ಅಲ್ಲಿಯೇ ಕುಸಿದು ಬಿದ್ದರು. ಪ್ರಾಥಮಿಕವಾಗಿ ಅವರಿಗೆ ನೀರು ನೀಡಿದರು, ಚೇತರಿಕೆ ಕಾಣಲಿಲ್ಲ.
ಬೆಳಗಾವಿ: ಮುಸ್ಲಿಂ ಮತಗಳು ಬೇಡ ಎನ್ನುವ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಳ ಅವರು ಹುಚ್ಚ ಎಂದು ಕಾಂಗ್ರೆಸ್ ಶಾಸಕ ರಾಜು ಸೇಠ ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು, ಯತ್ನಾಳಗೆ ಒಳ್ಳೆಯ ಬುದ್ಧಿ ಇದೆ. ನೆನಪಿನ ಶಕ್ತಿ ಚೆನ್ನಾಗಿದೆ. ಅವರು ಸದನದಲ್ಲಿ ಉತ್ತಮವಾಗಿ ಮಾತನಾಡುವುದನ್ನು ನಾವು ನೋಡಿದ್ದೇವೆ. ಆದರೆ ಅವರ ಕೆಲ ಮಾತುಗಳಿಂದಲೇ ನಾವು ದೇಶ ಮತ್ತು ರಾಜ್ಯವನ್ನು ಹಾಳು ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಶಾಸಕ ರಾಜು ಸೇಠ ಹೇಳಿದರು.ನಮಗೆ ಮುಸ್ಲಿಂ ಮತಗಳು ಬೇಡ ಎನ್ನುವವರು ಹುಚ್ಚರು. ನಮಗೆ ಇದು ಬೇಡ, ಅವರು ಬೇಡ ಎಂದು ಹೇಳುತ್ತಲೇ ನಾವು ದೇಶ
ಉಡುಪಿ: ಸುದೀಪ್ ಶೆಟ್ಟಿ ಹಾಗೂ ನಾನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಅವರು ಇದುವರೆಗೂ ನಮ್ಮ ಮನೆಯಲ್ಲಿ ವಾಸವಾಗಿದ್ದರು. ಅವರ ಸಾವಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪತ್ನಿ ಸೌಮ್ಯ ಶೆಟ್ಟಿ ಹೇಳಿದ್ದಾರೆ.ಸುದೀಪ್ ಶೆಟ್ಟಿ ಪೋಷಕರಿಂದ ಗಂಭೀರ ಆರೋಪ ವ್ಯಕ್ತವಾದ ಬೆನ್ನಲ್ಲೇ ಸೌಮ್ಯ ಶೆಟ್ಟಿ ಅವರು ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ. ನೆಲ್ಯಾಡಿ ಮೂಲದ ಉದ್ಯಮಿ ಸುದೀಪ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಪತಿ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರ ಪತ್ನಿ ಸೌಮ್ಯ ಶೆಟ್ಟಿ ಹೇಳಿದ್ದಾರೆ.
ದಾವಣಗೆರೆ: ಹದಿನಾರು ಬಜೆಟ್ ಮಂಡಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಣ್ಕಟ್ಟು ವಿದ್ಯೆ ಕಲಿತಿದ್ದಾರೆ. ಅಭಿವೃದ್ಧಿಗೆ ಹಣ ನೀಡದೆ, ಗ್ಯಾರಂಟಿಗಳನ್ನೂ ಸರಿಯಾಗಿ ಅನುಷ್ಠಾನ ಮಾಡದೆ ಆರ್ಥಿಕ ಶಿಸ್ತು ಪಾಲಿಸುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ವಿರೋಧಪಕ್ಷದ ನಾಯಕ ಆರ್ ಅಶೋಕ್ ಅವರು ದೂರಿದ್ದಾರೆ.ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಶಿಸ್ತೇ ಇಲ್ಲ. ಒಂದೇ ಒಂದು ಅಭಿವೃದ್ಧಿ ಕಾರ್ಯವನ್ನು ಈ ಸರ್ಕಾರ ಮಾಡಿಲ್ಲ. ಸುಳ್ಳು ಹೇಳಿಕೊಂಡೇ ಮೂರು ವರ್ಷ ಕಳೆದಿದೆ ಎಂದರು. ಸಿದ್ದರಾಮಯ್ಯ ಅವರಿಗೆ ಸುಳ್ಳು ರಾಮಯ್ಯ ಎಂಬ ಬಿರುದು ಕೊಡಬೇಕು. ಗ್ಯಾರಂಟಿಗಳ ವಿಚಾರವಾಗಿಯಂತೂ ಅವರು ಸುಳ್ಳಿನ ಪುಂಗಿ ಊದುತ್ತಿದ್ದಾರೆ.
ಮಂಗಳೂರು: ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನವನವನ್ನು ಏಪ್ರಿಲ್ 1 ರಿಂದ ಏಪ್ರಿಲ್ 8 ರವರೆಗೆ ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ.ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ಅಗತ್ಯ ಮೂಲಸೌಕರ್ಯ ದುರಸ್ತಿಗೆ ಅನುಕೂಲವಾಗುವಂತೆ ಮತ್ತು ಸೌಲಭ್ಯದ ಸುರಕ್ಷತೆ ಮತ್ತು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ತಾತ್ಕಾಲಿಕವಾಗಿ ಮುಚ್ಚುವುದು ಅವಶ್ಯಕ.ಈ ಅವಧಿಯಲ್ಲಿ ಮೃಗಾಲಯವು ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರುವುದಿಲ್ಲ. ಪ್ರವಾಸಿಗರು ಮತ್ತು ಪ್ರವಾಸಿಗರು ದಿನಾಂಕಗಳನ್ನು
ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಕೇಂದ್ರ ಸಚಿವ ಅಮಿತ್ ಶಾ ಅವರು ಅಸ್ಸಾಂನ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ.ಅಸ್ಸಾಂನ ಧುಬ್ರಿ ಜಿಲ್ಲೆಯ ಗೋಲಕ್ಗುಂಜ್ನಲ್ಲಿ ತಮ್ಮ ನಿಗದಿತ ರ್ಯಾಲಿಯನ್ನು ರದ್ದುಗೊಂಡಿದ್ದರಿಂದ 2026 ರ ಅಸ್ಸಾಂ ವಿಧಾನಸಭಾ ಚುನಾವಣೆಯ ಪ್ರಚಾರವು ಶುಕ್ರವಾರ ಅನಿರೀಕ್ಷಿತ ಅಡಚಣೆಯನ್ನು ಎದುರಿಸಿತು.ಪಕ್ಷದ ಮೂಲಗಳ ಪ್ರಕಾರ, ಷಾ ಅವರು ಗುವಾಹಟಿಯಿಂದ ಗೋಲಕ್ಗುಂಜ್ಗೆ ತೆರಳಿದ್ದರು ಆದರೆ ಅವರ ವಿಮಾನವನ್ನು
ಸ್ಕೂಟರ್ನಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಗೂಳಿಯೊಂದು ದಾಳಿ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್ನ ರಾಜ್ಕೋರ್ಟ್ನ ವೆರಾವಲ್ನಲ್ಲಿ ನಡೆದಿದೆ. ಈ ಭಯಾನಕ ಘಟನೆಯ ದೃಶ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವಕನೊಬ್ಬ ಸ್ಕೂಟರ್ನಲ್ಲಿ ಬರುತ್ತಿದ್ದಾಗ ಗೂಳಿ ಎದುರಾಗಿದೆ. ಗೂಳಿ ಹತ್ತಿರ ಬಂದು ಯುವಕನಿದ್ದ ಸ್ಕೂಟರ್ ಮೇಲೆ ದಾಳಿ ನಡೆಸಿದೆ. ಬಳಿಕ ಯುವಕನ ಮೇಲೂ ದಾಳಿ ನಡೆಸಲು ಆರಂಭಿಸಿದೆ.
ಆ ವ್ಯಕ್ತಿ ಮೇಲೆ ಆ ಬೀಡಾಡಿ ದನಕ್ಕೆ ಅದೇನು ಕಾರಣಕ್ಕೆ ಕೋಪವಿತ್ತೋ.. ಒಟ್ಟಿನಲ್ಲಿ ದಾರಿಯಲ್ಲಿ ಹೋಗುತ್ತಿದ್ದವನನ್ನು ದನವೊಂದು ತುಳಿದು ಚಚ್ಚಿ ಹಾಕಿದೆ. ಈ ಭಯಾನಕ ವಿಡಿಯೋ ಇಲ್ಲಿದೆ ನೋಡಿ. ಗೋವುಗಳು ತುಂಬಾ ಸಾತ್ವಿಕ ಪ್ರಾಣಿಗಳು ಎನ್ನಲಾಗುತ್ತದೆ. ಅವುಗಳ ದೇಹ ಮಾತ್ರ ದೈತ್ಯ. ಆದರೆ ಬೀದಿಯಲ್ಲಿ ಸುತ್ತಾಡುವ ಗೋವುಗಳು ಕೆಲವೊಮ್ಮೆ ಆಹಾರ ಸಿಗದ ಕೋಪಕ್ಕೋ, ತನ್ನ ಮೇಲೆ ಹೊಡೆದ, ಓಡಿಸಿದ ಸಿಟ್ಟಿಗೋ ಧ್ವೇಷ ತೀರಿಸಿಕೊಳ್ಳುತ್ತವೆ. ಇಲ್ಲಿಯೂ ಆಗಿದ್ದು ಇದೇ.ಇದು ರಾಜ್ ಕೋಟ್ ನ ಕೋಡ್ತಾ ಸಾಂಘನಿ ಎಂಬಲ್ಲಿ. ಓರ್ವ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ಬರುವಾಗ ಎದುರಿನಿಂದ ಬರುವ ದನ ಆತನಿಗೆ ಗುದ್ದಿ ಕೆಳಕ್ಕೆ ಬೀಳಿಸುತ್ತದೆ. ಬಳಿಕ ಆತನನ್ನು ತನ್ನ ಕಾಲ ಕೆಳೆಗೆ ಹಾಕಿ ತುಳಿದುಬಿಡುತ್ತದೆ.
ಕೇರಳದ ಕೊಯಿಲಾಂಡಿಯ ಸ್ಥಳೀಯ ಉತ್ಸವದ ವೇಳೆ ಆನೆಯೊಂದು ಹಠಾತ್ ನಿಯಂತ್ರಣ ತಪ್ಪಿ, ಜನರ ಮೇಲೆ ಮುಗಿಬಿದ್ದ ಘಟನೆಯ ವೀಡಿಯೊ ವೈರಲ್ ಆಗಿದೆ. ಸಂಭ್ರಮಾಚರಣೆ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದ್ದು, ಕಾರ್ಯಕ್ರಮದಲ್ಲಿ ನೆರೆದಿದ್ದ ಜನರಲ್ಲಿ ಮುಗಿ ಬಿದ್ದಿದ್ದು, ಇದರಿಂದ ನೆರೆದಿದ್ದವರಿಗೆ ಆತಂಕ ಸೃಷ್ಟಿಸಿದೆ. ಈ ವೀಡಿಯೊ ಪ್ರಾಣಿ ಹಿಂಸೆಯ ಬಗ್ಗೆ ಚರ್ಚೆಗೆ ಕಾರಣವಾಯಿತು ಮತ್ತು ಆಚರಣೆಗಳಲ್ಲಿ ಆನೆಗಳ ಪಾಲ್ಗೊಳ್ಳುವಿಕೆ ಬಗ್ಗೆ ಪ್ರಶ್ನೆ
ನವದೆಹಲಿ: ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಮುನ್ನ ರಾಜಕೀಯ ಉದ್ವಿಗ್ನತೆ ಹೆಚ್ಚಿದ್ದು, ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ "ಸೂಟ್ಕೇಸ್ ರಾಜಕೀಯ" ಆರೋಪವನ್ನು ಸಾಬೀತುಪಡಿಸುವಂತೆ ಸವಾಲು ಎಸೆದರು. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಬಹಿರಂಗವಾಗಿ ಆರೋಪ ಮಾಡಿದರೂ ಕಾನೂನು ಕ್ರಮಕ್ಕೆ ಮುಂದಾಗಿಲ್ಲ ಏಕೆ ಎಂದು ಪ್ರಶ್ನಿಸಿದರು. ಹಕ್ಕುಗಳ ಹಿಂದೆ ನಂಬಲರ್ಹವಾದ ಪುರಾವೆಗಳಿದ್ದರೆ, ಚುನಾವಣಾ ಪ್ರಚಾರದ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಬದಲು ಈಗಾಗಲೇ ದೂರು ದಾಖಲಿಸಬೇಕಿತ್ತು ಎಂದು ಅವರು ಟೀಕಿಸಿದರು.
ಕೋಲ್ಕತ್ತ: ಪಂದ್ಯ ನಡೆಯುವ ವೇಳೆ ಅಂಪೈರ್ ಜೊತೆ ವಾಗ್ವಾಗ ನಡೆಸಿದ ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರಿಗೆ ಬಿಸಿಸಿಐ ಬಿಗ್ಶಾಕ್ ನೀಡಿದೆ.ಈಡನ್ ಗಾರ್ಡನ್ನಲ್ಲಿ ಕೋಲ್ಕತ್ತಾ ನೈಟ್ರೈಡರ್ಸ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಅಭಿಷೇಕ್ ಅಬ್ಬರಿಸಿದ್ದರು. ಈ ಪಂದ್ಯದಲ್ಲಿ 228.57 ಸ್ಟ್ರೈಕ್ರೇಟ್ನಲ್ಲಿ ಬ್ಯಾಸ್ ಬೀಸಿ 48 ರನ್ ಗಳಿಸಿದ್ದರು. ಅವರಿಗೆ ಈಗ ದಂಡದ ಬಿಸಿ ತಟ್ಟಿದೆ.ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಎಸ್ಆರ್ಹೆಚ್ ತಂಡದ ಆಲ್ರೌಂಡರ್ ಅಭಿಷೇಕ್ ಬಿಸಿಸಿಐ ನಿಂದ ಶಿಕ್ಷೆಗೆ ಗುರಿಯಾಗಿದ್ದಾರೆ. ಪಂದ್ಯದ ವೇಳೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಕ್ಕಾಗಿ ಅಭಿಗೆ ಬಿಸಿಸಿಐ, ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ಹಾಗೂ 1 ಡಿಮೆರಿಟ್ ಪಾಯಿಂಟ್ ಅನ್ನು ಕೂಡ ಸಂಗ್ರಹಿಸಿದೆ.
ಬಾಗಲಕೋಟೆ: ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ತಮ್ಮ ಅಧಿಕಾರವನ್ನು ಸ್ವಂತಕ್ಕೋಸ್ಕರ, ಸ್ವಾರ್ಥಕ್ಕೋಸ್ಕರ ಮತ್ತು ರಾಜ್ಯದ ಜನರಿಗೆ ವಂಚನೆ ಮಾಡುವ ಕೆಲಸ ಮಾಡಿ, ಈ ರಾಜ್ಯವನ್ನು ಕತ್ತಲೆ ಕೋಣೆಯಲ್ಲಿಡುವ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಆರೋಪಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಬೆಂಗಳೂರು ನಗರದ ಅಭಿವೃದ್ಧಿಯಲ್ಲಿ ನಮ್ಮದೇ ಆದ ಪಾಲುದಾರಿಕೆಯನ್ನು ಕೊಟ್ಟಿದ್ದೇವೆ ಎಂದು ತಿಳಿಸಿದರು. ಯಾವುದೇ ಶಾಸಕರೂ ತನ್ನ ಕಾರ್ಯಕ್ಷೇತ್ರಕ್ಕೆ ಹೋಗಿ ನಾನು ಒಳ್ಳೆಯ ಕೆಲಸ ಮಾಡಿದ್ದೇನೆ; ನನ್ನಿಂದ ಇಷ್ಟು ಕೆಲಸ ಆಗಿದೆ ಎಂದು ಹೇಳುವ ನೈತಿಕತೆಯನ್ನು ಕೇವಲ ವಿಪಕ್ಷದವರಷ್ಟೇ ಅಲ್ಲ; ಆಡಳಿತ ಪಕ್ಷದವರೂ ಕಳಕೊಂಡಿದ್ದಾರೆ ಎಂದು ನುಡಿದರು.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಇಳಿಕೆಯಾಗಿದ್ದರೆ ಮತ್ತುಇತರೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ವಾರಂತ್ಯಕ್ಕೆ ಪರಿಶುದ್ಧ ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗಿತ್ತು. ಪರಿಶುದ್ಧ ಚಿನ್ನದ ದರ ನಿನ್ನೆ 1,55,290.00 ರೂ.ಗಳಿತ್ತು. ಆದರೆ ಇಂದು ಇಳಿಕೆಯಾಗಿದ್ದು 1,51,650.00 ರೂ.ಗಳಷ್ಟಿದೆ.
ಕಾಸರಗೋಡು: ಕೇರಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಪರ ಮತಯಾಚನೆ ಮಾಡಲು ನಟ, ಕೇಂದ್ರ ಸಚಿವ ಸುರೇಶ್ ಗೋಪಿ ಕಾಸರಗೋಡಿಗೆ ಬಂದಿದ್ದಾರೆ. ಇಂದು ಇಲ್ಲಿನ ಇತಿಹಾಸ ಪ್ರಸಿದ್ಧ ಮಧೂರು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ. ಕೇರಳ ಸ್ಥಳೀಯ ಸಂಸ್ಥೆಗಳಲ್ಲಿ ಜಯಭೇರಿ ಭಾರಿಸಿದ ಹುಮ್ಮಸ್ಸಿನಲ್ಲಿರುವ ಬಿಜೆಪಿ ವಿಧಾನಸಭೆಯಲ್ಲೂ ಅದೇ ರೀತಿಯ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಇದೇ ಕಾರಣಕ್ಕೆ ಸ್ಟಾರ್ ಪ್ರಚಾರಕರನ್ನು ಕರೆಸಿ ಬಿಜೆಪಿ ಗೆಲ್ಲುವ ಸಾಧ್ಯತೆಯಿರುವ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ಕಳೆದ ವಾರದಂತೆ ಈ ವಾರವೂ ಅದೇ ಟ್ರೆಂಡ್ ಮುಂದುವರಿದಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಳಿಕೆಯಾಗುತ್ತಲೇ ಇತ್ತು. ಕಳೆದ ವಾರ ಎರಡು ದಿನ ಸತತವಾಗಿ ಬೆಲೆ ಏರಿಕೆ ಕಂಡುಬರುತ್ತಿತ್ತು. ಅಡಿಕೆ ಬೆಲೆಯಲ್ಲಿ ನಿನ್ನೆ ಯಾವುದೇ ವ್ಯತ್ಯಾಸ ಕಂಡುಬಂದಿರಲಿಲ್ಲ. ಆದರೆ ಇಂದು ಕೊಂಚ ಏರಿಕೆಯಾಗಿದೆ.. ಹೊಸ ಅಡಿಕೆ ಬೆಲೆ 10 ರೂ. ಏರಿಕೆಯಾಗಿದ್ದು 500 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 555 ರೂ. ಗಳಾಗಿದೆ.
ಬಾಗಲಕೋಟೆ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಷ್ಟು ಲಜ್ಜೆಗೇಡಿ ಸರ್ಕಾರವನ್ನು ನಾವು ಎಂದೂ ನೋಡಿರಲಿಲ್ಲ. ಸರ್ಕಾರದ ನೀತಿಗಳಿಂದ ಬೇಸತ್ತ ಮತದಾರ ಈ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ಸಂಸದ ರಮೇಶ್ ಜಿಗಜಿಣಗಿ ಅವರು ಹೇಳಿದ್ದಾರೆ.ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಶಾಸಕರಾಗಿದ್ದ ವೀರಣ್ಣ ಚರಂತಿಮಠ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವರು ಕ್ಷೇತ್ರಕ್ಕಾಗಿ ದುಡಿದಿದ್ದಾರೆ. ಈ ಬಾರಿಯೂ ಅವರನ್ನು ಮತದಾರರು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ಇದೆ ಎಂದರು.
ಬಾಯಾರಿದ್ದ ತನ್ನ ಮಗುವಿಗೆ ನೀರು ಕೊಟ್ಟ ಯುವಕನಿಗೆ ಅಮ್ಮ ಆನೆ ತನ್ನದೇ ಶೈಲಿಯಲ್ಲಿ ಧನ್ಯವಾದ ಸಲ್ಲಿಸಿದ ಹೃದಯಸ್ಪರ್ಶಿ ವಿಡಿಯೋವೊಂದು ಇಲ್ಲಿದೆ. ಆನೆಗಳು ಆಕಾರದಲ್ಲಿ ಮಾತ್ರ ದೈತ್ಯವಲ್ಲ. ಅವುಗಳ ಮನಸ್ಸೂ ಅಷ್ಟೇ ವಿಶಾಲ ಎಂದು ಈ ಆನೆ ತೋರಿಸುತ್ತದೆ. ತನಗೆ ಉಪಕಾರ ಮಾಡಿದವರನ್ನು ಮನುಷ್ಯರು ಮರೆಯಬಹುದು. ಆದರೆ ಪ್ರಾಣಿಗಳು ತಮಗೆ ಅನ್ನ, ನೀರು ಕೊಟ್ಟವರನ್ನು ಎಂದಿಗೂ ಮರೆಯಲ್ಲ. ಅದಕ್ಕೆ ಈ ಆನೆಯೇ ಸಾಕ್ಷಿ. ಆನೆ ಮತ್ತು ಅದರ ಮರಿ ಆನೆ ಮಾವುತನ ಜೊತೆಗೆ ರಸ್ತೆಯಲ್ಲಿ ಬರುತ್ತಿರುತ್ತದೆ. ನಡೆದಾಡಿ ಮರಿ ಆನೆಗೆ ವಿಪರೀತ ಬಾಯಾರಿಕೆಯಾಗಿರುತ್ತದೆ.
ನವದೆಹಲಿ: ರಾಜ್ಯಸಭೆಯಲ್ಲಿ ಉಪ ನಾಯಕನ ಸ್ಥಾನದಿಂದ ಎಎಪಿ ತನ್ನ ಸಂಸದ ರಾಘವ್ ಚಡ್ಡಾರನ್ನು ಎಎಪಿ ತೆಗೆದು ಹಾಕಲು ಆಪ್ ಪತ್ರ ಬರೆದಿದೆ. ಇದರ ಬೆನ್ನಲ್ಲೇ ಈಗ ಸೋಷಿಯಲ್ ಮೀಡಿಯಾದಲ್ಲಿ ಇದರ ಹಿಂದಿನ ಕಾರಣ ಭಾರೀ ಚರ್ಚೆಯಾಗುತ್ತಿದೆ. ದೊಡ್ಡ ಉದ್ಯಮ ಸಂಸ್ಥೆಗಳ ಕಾರ್ಯನಿರ್ವಹಣೆ ಬಗ್ಗೆ ರಾಘವ್ ಚಡ್ಡಾ ಸಂಸತ್ ನಲ್ಲಿ ಮಾತನಾಡುತ್ತಿದ್ದರು. ಡೆಲಿವರಿ ಬಾಯ್ ಗಳ ಕಷ್ಟದ ಬಗ್ಗೆ, ಟೆಲಿಕಾಂ ಸಂಸ್ಥೆಗಳ ವಂಚನೆ ಬಗ್ಗೆ, ವಿಮಾನ ಯಾನದ ವೇಳೆ ಲಗೇಜ್ ಶುಲ್ಕ ವಿಧಿಸುವ ಬಗ್ಗೆ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿ ರಾಘವ್ ಚಡ್ಡಾ ಜನರ ಮನಗೆದ್ದಿದ್ದರು.
ಇಸ್ಲಾಮಾಬಾದ್: ಪಹಲ್ಗಾಮ್ ದಾಳಿ ಆನಿವರ್ಸರಿ ನೆಪದಲ್ಲಿ ದಾಳಿ ಮಾಡಿದ್ರೆ ನಾವು ಸುಮ್ಮನಿರಲ್ಲ ಎಂದು ಭಾರತಕ್ಕೆ ಪಾಕಿಸ್ತಾನ ಸಚಿವ ಖ್ವಾಜಾ ಆಸಿಫ್ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಯಾವುದೇ ದುಸ್ಸಾಹಸ ಮಾಡಿದರೆ ತಕ್ಕ ಪಾಠ ಕಲಿಸಲಾಗುವುದು ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ಈಗ ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ತಿರುಗೇಟು ನೀಡಿದ್ದಾರೆ. ಇದಕ್ಕೆ ಈಗ ಖ್ವಾಜಾ ಆಸಿಫ್ ತಿರುಗೇಟು ನೀಡಿದ್ದಾರೆ. ‘ಇಂತಹ ಬೆದರಿಕೆಗಳು ನಮಗೆ ಹೊಸದೇನಲ್ಲ. ರಾಜಕೀಯ ಹಿತಾಸಕ್ತಿಗಾಗಿ ಆ ಕಡೆಯಿಂದ ಇಂತಹ ಪ್ರಚೋದನಕಾರಿ ಹೇಳಿಕೆಗಳು ಬರುತ್ತಲೇ ಇರುತ್ತವೆ.
ಬೆಂಗಳೂರು: ನಿಮ್ಮ ತಾಯಿಯ ನಂಬಿಕೆಗೆ ಬೆಲೆ ಕೊಟ್ಟು ನಾಸ್ತಿಕ ಎನ್ನುವ ನೀವು ಕ್ರಿಶ್ಚಿಯನ್ ಧರ್ಮದ ಸಂಪ್ರದಾಯದಂತೆ ಅವರ ಅಂತ್ಯ ಸಂಸ್ಕಾರ ಮಾಡಿದ್ರಿ. ಎಲ್ಲರ ನಂಬಿಕೆಯೂ ಅಷ್ಟೇ ಮುಖ್ಯ ಅಲ್ವಾ ಎಂದು ನಟ ಪ್ರಕಾಶ್ ರಾಜ್ ಗೆ ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ನಟ ಪ್ರಕಾಶ್ ರಾಜ್ ತಾಯಿ ಮೊನ್ನೆಯಷ್ಟೇ ತೀರಿಕೊಂಡಿದ್ದರು. ಅವರ ತಾಯಿಯ ಅಂತ್ಯ ಸಂಸ್ಕಾರವನ್ನು ಕ್ರಿಶ್ಚಿಯನ್ ಸಂಪ್ರದಾಯದಂತೆ ಮಾಡಲಾಯಿತು. ಚರ್ಚ್ ನಲ್ಲಿ ತಾಯಿಯ ಮೃತದೇಹವಿಟ್ಟು ಪ್ರಾರ್ಥನೆ ಮಾಡುತ್ತಿರುವ ವಿಡಿಯೋಗಳು ಮಾಧ್ಯಮಗಳಲ್ಲಿ ಬಂದಿತ್ತು.
ಕೋಲ್ಕತ್ತಾ: ಕೆಕೆಆರ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ವೇಳೆ ಮೈದಾನದಲ್ಲಿ ಅಭಿಷೇಕ್ ಶರ್ಮಾ, ರಿಂಕು ಸಿಂಗ್ ನಡುವೆ ತಮಾಷೆಯ ಪ್ರಸಂಗವೊಂದು ನಡೆದಿದೆ. ನಿನ್ನೆಯ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 65 ರನ್ ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 226 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಅಭಿಷೇಕ್ ಶರ್ಮಾ ಎಂದಿನಂತೆ ಸ್ಪೋಟಕ ಆರಂಭ ನೀಡಿದ್ದರು. ಈ ವೇಳೆ ರಿಂಕು ಸಿಂಗ್ ಅವರ ಬಳಿ ಬಂದು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. 21 ಎಸೆತಗಳಿಂದ ಅವರು 4 ಸಿಕ್ಸರ್ ಸಹಿತ 48 ರನ್ ಗಳಿಸಿದರು.
ಬೆಚ್ಚಗೆ ಸುಖವಾಗಿ ಮಲಗಿ ನಿದ್ರೆ ಮಾಡುತ್ತಿದ್ದ ಮರಿ ಆನೆಯನ್ನು ಅಮ್ಮ ಆನೆ ಎದ್ದೇಳೋ ಎಂದು ಏಳಿಸಿದ ಕ್ಯೂಟ್ ವಿಡಿಯೋವೊಂದು ಇಲ್ಲಿದೆ ನೋಡಿ. ಶಾಲೆಗೆ ಹೋಗುವ ಮಕ್ಕಳಿಗೆ ಬೆಳಿಗ್ಗೆ ಎದ್ದೇಳುವುದೇ ಕಷ್ಟ. ಏನೇ ಮಾಡಿದ್ರೂ ಇನ್ನೂ ಐದು ನಿಮಿಷ ಎಂದು ಹೇಳಿ ಮತ್ತೆ ಮುಸುಕಿ ಹಾಕಿ ಮಲಗಿಕೊಳ್ಳುತ್ತಾರೆ. ಈ ಮರಿ ಆನೆಯ ಕತೆಯೂ ಇದೇ ಆಗಿತ್ತು. ಆದರೆ ಪ್ರಾಣಿಗಳು ಈ ರೀತಿ ಮಾಡುವುದನ್ನು ನೋಡಲು ಕ್ಯೂಟ್ ಆಗಿರುತ್ತದೆ. ಮೃಗಾಲಯವೊಂದರಲ್ಲಿ ಅಮ್ಮ ಆನೆ ಮಲಗಿದ್ದ ತನ್ನ ಮರಿ ಆನೆಯನ್ನು ಎಬ್ಬಿಸಲು ಸಾಕಷ್ಟು ಪ್ರಯತ್ನ ಮಾಡುತ್ತದೆ. ಮೊದಲು ಬಾಲ ಹಿಡಿದು ಎಬ್ಬಿಸುವ ಪ್ರಯತ್ನ ಮಾಡುತ್ತದೆ.
ಬೆಂಗಳೂರು: ರಾಜ್ಯದಲ್ಲಿ ಈಗ ಕೆಲವು ಕಡೆ ಬಿಸಿಲಿದ್ದರೆ ಮತ್ತೆ ಕೆಲವು ಕಡೆ ಮಳೆಯಾಗುತ್ತಿದೆ. ಇಂದು ರಾಜ್ಯದ ಹವಾಮಾನದಲ್ಲಿ ಆಗಲಿರುವ ಈ ಮಹತ್ವದ ಬದಲಾವಣೆಯನ್ನು ತಪ್ಪದೇ ಗಮನಿಸಿ. ಇಷ್ಟು ದಿನ ಕೆಲವು ಕಡೆ ಮಳೆಯಿದ್ದರೆ ಮತ್ತೆ ಕೆಲವು ಕಡೆ ಬಿಸಿಲಿನ ವಾತಾವರಣವಿತ್ತು. ಆದರೆ ಇಂದು ಕೆಲವು ಕಡೆ ಗುಡುಗು ಸಹಿತ ಮಳೆಯಿದ್ದರೆ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ ಎಂದು ಹವಾಮಾನ ವರದಿಗಳು ಸೂಚಿಸುತ್ತಿವೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಅಥವಾ ಸಾಧಾರಣ ಮಳೆಯಾಗಲಿದೆ.
ಶುಕ್ರವಾರವೆಂದರೆ ಲಕ್ಷ್ಮೀ ದೇವಿಗೆ ವಿಶೇಷವಾದ ದಿನವಾಗಿದೆ. ಲಕ್ಷ್ಮೀ ದೇವಿಯ ಪೂಜೆ ಮಾಡುವಾಗ ಹಾಲಿನ ನೈವೇದ್ಯ ಮಾಡಲಾಗುತ್ತದೆ. ಲಕ್ಷ್ಮೀ ದೇವಿಗೆ ಹಾಲಿನ ನೈವೇದ್ಯ ವಿಶೇಷ ಯಾಕೆ? ಹಾಲು ಸಾತ್ವಿಕ ಆಹಾರ ವಸ್ತು. ಇದು ಪರಿಶುದ್ಧತೆಯ ಸಂಕೇತ. ದೇವಿಗೆ ನೈವೇದ್ಯ ನೀಡುವಾಗ ಪರಿಶುದ್ಧ ಮನಸ್ಸಿನಿಂದ ಹಾಲಿನಷ್ಟೇ ಶುದ್ಧ ಮನಸ್ಸಿನಿಂದ ನೀಡಬೇಕು. ಲಕ್ಷ್ಮೀ ದೇವಿಗೆ ಹಾಲು ವಿಶೇಷವಾಗಿರುವುದಕ್ಕೆ ಕಾರಣವೂ ಇದೆ. ಪೌರಾಣಿಕ ಹಿನ್ನಲೆ ಪ್ರಕಾರ ಸಮುದ್ರ ಮಥನ ಸಂದರ್ಭದಲ್ಲಿ ಲಕ್ಷ್ಮೀ ದೇವಿಯು ಕ್ಷೀರ ಸಾಗರದಿಂದ ಉದ್ಭವವಾಗುತ್ತಾಳೆ. ಸಂಸ್ಕೃತದಲ್ಲಿ ಕ್ಷೀರ ಎಂದರೆ ಹಾಲು ಎಂದರ್ಥ.
ಜಾತಕದಲ್ಲಿ ಶುಕ್ರ ಗ್ರಹದ ದೋಷವಿದ್ದರೆ ಯಾವ ಬಣ್ಣದ ಬಟ್ಟೆ ಧರಿಸಬೇಕು, ಯಾವ ಬಟ್ಟೆ ಧರಿಸಬಾರದು ಇದರಿಂದ ಏನು ಬದಲಾವಣೆಯಾಗುತ್ತದೆ ಇಲ್ಲಿದೆ ನೋಡಿ ಸಂಪೂರ್ಣ ವಿವರ. ಶುಕ್ರ ದೋಷದ (ಶುಕ್ರನ ಬಾಧೆ) ಪರಿಣಾಮಗಳನ್ನು ಸಮತೋಲನಗೊಳಿಸಲು ಅಥವಾ ತಗ್ಗಿಸಲು, ಧರಿಸಬೇಕಾದ ಪ್ರಾಥಮಿಕ ಬಣ್ಣ ಬಿಳಿ. ಶುಕ್ರನು ಸೌಂದರ್ಯ, ಐಷಾರಾಮಿ, ಪ್ರೀತಿ ಮತ್ತು ಪರಿಷ್ಕರಣೆಯನ್ನು ಪ್ರತಿನಿಧಿಸುತ್ತಾನೆ. ಈ ಗ್ರಹವು ದುರ್ಬಲವಾಗಿದ್ದಾಗ, ಅದು ನಿಮ್ಮ ಸಂಬಂಧಗಳು, ಆರ್ಥಿಕ ಸೌಕರ್ಯ ಅಥವಾ ಸೃಜನಶೀಲ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ಶುಕ್ರನ "ಸಾತ್ತ್ವಿಕ" (ಶುದ್ಧ) ಮತ್ತು ಪ್ರಕಾಶಮಾನವಾದ ಸ್ವಭಾವವನ್ನು ಪ್ರತಿಧ್ವನಿಸುವ ಬಣ್ಣಗಳನ್ನು ಧರಿಸುವುದರಿಂದ ಅದರ ಸಕಾರಾತ್ಮಕ ಪ್ರಭಾವವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಗುರುವಾರ ಅಸ್ಸಾಂನ ಬೊಕಜಾನ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ಮಹಿಳೆಯರು ತನಗೆ ತೋರಿದ ಅಪಾರ ಪ್ರೀತಿಗೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಗ್ಯಾರಂಟಿ ಮಹಿಳೆಯರಿಗಾಗಿ ಐ ಲವ್ ಯೂ ಟೂ ಎಂದು ಹೇಳಿದರು. ಇದಕ್ಕೆ ನೆರೆದಿದ್ದ ಮಹಿಳೆಯರೆಲ್ಲರೂ ಹರ್ಷದಿಂದ ಕೂಗಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಭ್ಯರ್ಥಿ ರಾಟನ್ ಎಂಗ್ಟಿ ಪರ ಅಬ್ಬರದ ಪ್ರಚಾರದಲ್ಲಿ ಭಾಗಿಯಾದರು. ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಅವರನ್ನು ಗುರಿಯಾಗಿಸಿಕೊಂಡು ಪ್ರಚಾರವನ್ನು ತೀವ್ರಗೊಳಿಸಿದ್ದಾರೆ.
ಗುವಾಹಟಿ: ಪಶ್ಚಿಮ ಏಷ್ಯಾ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ ದೇಶದಲ್ಲಿ "ಅನಿಲ ಅಥವಾ ಇಂಧನದ ಕೊರತೆಯಿಲ್ಲ" ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಭರವಸೆ ನೀಡಿದ್ದಾರೆ, ಏಕೆಂದರೆ ಜನರು ಯಾವುದೇ ಸಮಸ್ಯೆಗಳನ್ನು ಎದುರಿಸದಂತೆ ಸರ್ಕಾರವು ವಿವಿಧ ಕ್ರಮಗಳನ್ನು ಅಳವಡಿಸಿಕೊಂಡಿದೆ. ಎಎನ್ಎಯೊಂದಿಗೆ ಮಾತನಾಡಿದ ಗಡ್ಕರಿ ಅವರು, ಭಾರತವು ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ಆಮದುಗಳ ಮೇಲೆ ಅವಲಂಬಿತವಾಗಿದೆ ಎಂದು ಒಪ್ಪಿಕೊಂಡರು ಆದರೆ ಹೆಚ್ಚು ರಫ್ತು-ಕೇಂದ್ರಿತ ವ್ಯಾಪಾರಕ್ಕೆ ತಳ್ಳಲು ಪರ್ಯಾಯ ಆಯ್ಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸರ್ಕಾರದ ಸ್ವಾವಲಂಬನೆಯ ವಿಧಾನವನ್ನು ಎತ್ತಿ ತೋರಿಸಿದರು. ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಇಂದು ದೇಶದಲ್ಲಿ ಗ್ಯಾಸ್, ಇಂಧನದ ಕೊರತೆ ಇಲ್ಲ.ಹೌದು ಕಷ್ಟಗಳಿವೆ.ಆದರೆ
IPL 2026 ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ದೊಡ್ಡ ಪಂದ್ಯದ ಮೊದಲು ಒಂದು ಮೋಜಿನ ಕ್ಷಣದಲ್ಲಿ, ಸೂರ್ಯಕುಮಾರ್ ಯಾದವ್ ಎಲ್ಲರ ಗಮನ ಸೆಳೆದರು.ಅವರು ಧುರಂಧರ ಚಿತ್ರದ ಜನಪ್ರಿಯ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಅಭಿಮಾನಿಗಳಲ್ಲಿ ಶೀಘ್ರವಾಗಿ ಜನಪ್ರಿಯವಾಯಿತು. ಇದು ಅವರ ವಿನೋದ ಮತ್ತು ಉತ್ಸಾಹಭರಿತ ವ್ಯಕ್ತಿತ್ವವನ್ನು ತೋರಿಸಿತು.ಮುಂಬೈ ಇಂಡಿಯನ್ಸ್ ಆಟಗಾರ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ನಡೆಸಿಕೊಂಡ ತೀತಿ ಇದೀಗ ಭಾರೀ ವೈರಲ್ ಆಗಿದೆ.
ಕೊಲ್ಲಂ: ಇತ್ತೀಚಿನ ಎಲ್ಪಿಜಿ ಮತ್ತು ಇತರ ಇಂಧನಗಳ ಬೆಲೆ ಏರಿಕೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪರವಾಗಿ ನಿಲ್ಲುವ ಬದಲು ಇಸ್ರೇಲ್, ಅಮೆರಿಕಕ್ಕೆ ತಲೆ ಬಾಗಿದ್ದಾರೆ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು. ಎಲ್ಪಿಜಿ ಮತ್ತು ಇಂಧನ ಬೆಲೆಗಳು ಏರುತ್ತಿವೆ, ಈ ಪರಿಸ್ಥಿತಿಯಲ್ಲಿ ವ್ಯಾಪಾರವು ಕಷ್ಟಕರವಾಗಲಿದೆ. ಇದೆಲ್ಲದರ ಮಧ್ಯೆ, ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರದ ನೀತಿ ಏನು? ಅವರು ತಮ್ಮ ಜನರಿಗಾಗಿ ಹೋರಾಡುತ್ತಿಲ್ಲ. ಅವರು ಭಾರತಕ್ಕಾಗಿ ಹೋರಾಡುತ್ತಿಲ್ಲ. ಅವರು ಭಾರತಕ್ಕಾಗಿ ಹೋರಾಡುತ್ತಿಲ್ಲ. ಅವರು ಭಾರತದ ಪರವಾಗಿ ನಿಲ್ಲುತ್ತಿಲ್ಲ. ಅವರು ಮಾಡುತ್ತಿರುವುದು ಅಮೆರಿಕ ಹಾಗೂ ಇಸ್ರೇಲ್ಗೆ ತಲೆ ಬಾಗಿರುವುದುಎ ಎಂದು ಅಸಮಾಧಾನ ಹೊರಹಾಕಿದರು.
ಚಾಮರಾಜನಗರ: ಪ್ರೇಮಿಗಳಿಬ್ಬರು ಆತ್ಮಹತ್ಯೆಮಾಡಿಕೊಂಡ ಘಟನೆ ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇರಟ್ಟಿ ಗ್ರಾಮದಲ್ಲಿವರದಿಯಾಗಿದೆ. ಆತ್ಮಹತ್ಯೆಗೆ ಶರಣಾದ ಜೋಡಿಗಳನ್ನು ಹನೂರು ತಾಲೂಕಿನ ಮಿಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಕ್ಕುಂದಿ ಗ್ರಾಮದ ನಾಗೇಂದ್ರ (21) ಪಾಲಾರ್ ಗ್ರಾಮದ ನದಿಯಾ (19) ಎಂದು ಗುರುತಿಸಲಾಗಿದೆ. ಏನಿದು ಪ್ರಕರಣ: ಪಾಲಾರ್ ಗ್ರಾಮದ ಮಾದೇವರ ಪುತ್ರಿ ನದಿಯಾ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಐಪಿಹೆಚ್ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಇದ್ದಕ್ಕಿದ್ದ ಹಾಗೇ ನಾಪತ್ತೆಯಾಗಿದ್ದರು. ಈ ವಿಚಾರವಾಗಿ ಐಪಿಹೆಚ್
ಐಪಿಎಲ್ ಪಂದ್ಯಾಟದ ವೇಳೆ ಎಂಆರ್ಪಿ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ನೀರು ಹಾಗೂ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಯುವಕರು ಆಕ್ರೋಶ ಹೊರಹಾಕಿದ್ದಾರೆ. ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನೀರು ಮತ್ತು ಇತರ ಅಗತ್ಯ ವಸ್ತುಗಳ ಅತಿಯಾದ ಬೆಲೆಯ ವಿರುದ್ಧ ಯುವಕರು ವಾದ ನಡೆದಸಿದರು.
ಬೆಂಗಳೂರು: ಏಪ್ರಿಲ್ 5ರಂದು 2ಗಂಟೆಗಳ ಕಾಲ ನಮ್ಮ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಇನ್ನೂ ಮೆಟ್ರೋ ಸ್ಥಗಿತಕೊಳ್ಳಲು ಕಾರಣ ನೇರಳೆ ಮಾರ್ಗದ ವಿಜಯನಗರ ಮತ್ತು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಅಗತ್ಯ ನಿರ್ವಹಣಾ ಕಾಮಗಾರಿ ನಡೆಯಲಿದೆ. ಹೀಗಾಗಿ ಭಾನುವಾರ (ಏ.5ರಂದು) ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಮೆಜೆಸ್ಟಿಕ್ನಿಂದ ಮೈಸೂರು ರಸ್ತೆವರೆಗೆ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ ಎಂದರು.
ಚಿತ್ರಕಲೆಯಿಂದಲೇ ಪ್ರಸಿದ್ಧಿ ಪಡೆದಿರುವ ರಾಜಾ ರವಿವರ್ಮ ಅವರು ರಚಿಸಿದ್ದ ಚಿತ್ರವು ₹167ಕೋಟಿಗೆ ಮಾರಾಟವಾಗಿದೆ. ಈ ಚಿತ್ರವನ್ನು 1890ರಲ್ಲಿ ಈ ಚಿತ್ರವನ್ನು ರಚಿಸಿದ್ದರು. ಈ ಚಿತ್ರವು ಯಶೋಧಾ ಮತ್ತು ಕೃಷ್ಣನ ತೈಲವರ್ಣ ಕಲಾಕೃತಿಯಾಗಿದೆ. ಈ ಮೂಲಕ ಇದು ಹರಾಜಿನಲ್ಲಿ ಮಾರಾಟವಾದ ದುಬಾರಿ ಕಲಾಕೃತಿಯಾಗಿದೆ. ಪ್ರಕಾಶಮಾನವಾದ ಪ್ರದರ್ಶಿಸಲಾದ ಶಿಶು ಕೃಷ್ಣ, ತನ್ನ ತಾಯಿ ಯಶೋದೆಯೊಂದಿಗಿನ ಕ್ಷಣದ ಚಿತ್ರಣವಾಗಿದೆ. ರಕ್ಷಣೆ ಮತ್ತು ದೈವತ್ವ ಎರಡನ್ನೂ ಒಳಗೊಂಡಿರುವ ಕೋಮಲ ದೃಶ್ಯ. ರವಿವರ್ಮನು ತನ್ನ ವೃತ್ತಿಜೀವನದ ಉತ್ತುಂಗದಲ್ಲಿ 1890 ರ ದಶಕದಲ್ಲಿ
ಬೆಂಗಳೂರು: ಮಗನ ಸಾವಿನಿಂದ ಆಘಾತಕ್ಕೊಳಗಾದ ತಾಯೊಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಚಂದ್ರಾಲೇಜೌಟ್ನ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ. ಮಗು ತಾಯಿ, ಸಾಫ್ಟ್ವೇರ್ ಉದ್ಯೋಗಿ ಪ್ರತಿಭಾ ವಾಲಿ (29) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಹಾಂತೇಶ್ ವಾಲಿ ಅವರು ಪೀಣ್ಯ ಎರಡನೇ ಹಂತದಲ್ಲಿರುವ ಏಸ್ ಡಿಸೈನರ್ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ಪ್ರತಿಭಾ ವಾಲಿ ಅವರು ಸಿಲ್ಕ್ ಬೋರ್ಡ್ ಬಳಿಯ ಟೈಮ್ ಟೆಕ್ ಎಂಬ ಕಂಪನಿಯಲ್ಲಿ ವರ್ಕ್ಫ್ರಮ್ ಹೋಂ ಕೆಲಸ ಮಾಡಿಕೊಂಡಿದ್ದರು.