ಶಿರಸಿ: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ 2ವರ್ಷದ ಬಾಲಕಿಯನ್ನು ವ್ಯಕ್ತಿಯೊಬ್ಬರು ಧಾವಿಸಿ ರಕ್ಷಿಸಿದ ಘಟನೆ ನಗರದ ಕಸ್ತೂರಬಾ ಘಟನೆಯಲ್ಲಿ ನಡೆದಿದೆ. ಬಾವಿಗೆ ಬಿದ್ದ ಅದೃಷ್ಟವಶಾತ್ ಬದುಕುಳಿದ ಬಾಲಕಿಯನ್ನು ಭುವಿ(2) ಎಂದು ಗುರುತಿಸಲಾಗಿದೆ. ಆಟವಾಡುತ್ತಿದ್ದ ಮಗು ಕಾಣದಿದ್ದಾಗ ಆತಂಕಗೊಂಡ ಅಜ್ಜಿ ಸುತ್ತಮುತ್ತ ಹುಡುಕಾಡಿದ್ದಾರೆ. ಬಾವಿನ ಬಳಿ ಹೋದಾಗ ಮಗು ಅಳುವಿನ ಶಬ್ದ ಕೇಳಿಬಂದಿದೆ. ಆತಂಕದೊಂದಿಗೆ ಬಾವಿಯೊಳಗೆ ಇಣುಕಿ ನೋಡಿದಾಗ, ಮಗು
ಬೆಂಗಳೂರು: ಸ್ವತಃ ಕರ್ನಾಟಕ ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರು ಈ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನಕ್ಕೆ ಬೇಸತ್ತು ಸದನದಿಂದ ಹೊರನಡೆದಿರುವುದು ವಿಧಾನಸಭೆ ಇತಿಹಾಸದಲ್ಲೇ ಕರಾಳ ಅಧ್ಯಾಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರು ಈ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನಕ್ಕೆ ಬೇಸತ್ತು ಸದನದಿಂದ ಹೊರನಡೆದಿರುವುದು ರಾಜ್ಯದಲ್ಲಿ ಆಡಳಿತ ಯಂತ್ರ ಎಷ್ಟು ನಿಷ್ಕ್ರಿಯಗೊಂಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಾಗದಷ್ಟು ಅಸಮರ್ಥವಾಗಿರುವ ಕಾಂಗ್ರೆಸ್ ಪಕ್ಷದ ಕರ್ನಾಟಕ ಸರಕಾರವು ಶಾಸನಸಭೆಗೆ ಕನಿಷ್ಠ ಗೌರವವನ್ನೂ ನೀಡದೆ ತನ್ನದೇ ರಾಜಕೀಯದಲ್ಲಿ ಮುಳುಗಿದೆ ಎಂದು ಆಕ್ಷೇಪಿಸಿದ್ದಾರೆ.
ಬೆಂಗಳೂರು: ಯುಗಾದಿ ಮತ್ತು ರಂಜಾನ್ ಸಮಯದಲ್ಲಿ ಪ್ರಯಾಣಿಕರ ಸಂಚಾರ ಹೆಚ್ಚಾಗುವ ನಿರೀಕ್ಷೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) 2,000 ವಿಶೇಷ ಬಸ್ಗಳ ಕಾರ್ಯಾಚರಣೆಯನ್ನು ಘೋಷಿಸಿದೆ.ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಹಬ್ಬದ ಪ್ರಯಾಣದ ಉಲ್ಬಣವನ್ನು ನಿರ್ವಹಿಸಲು ವಿಶೇಷ ಸೇವೆಗಳನ್ನು ಪ್ರಾರಂಭಿಸಲಾಗಿದೆ, ಪ್ರಯಾಣಿಕರು ಮತ್ತು ಯಾತ್ರಾರ್ಥಿಗಳಿಗೆ ಸುಗಮ ಪ್ರಯಾಣವನ್ನು ಖಚಿತಪಡಿಸುತ್ತದೆ.ಮಾರ್ಚ್ 18 ರಿಂದ 20 ರವರೆಗೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಸೇವೆಗಳು ನಡೆಯಲಿದ್ದು, ಮಾರ್ಚ್ 22 ರಂದು ನಗರಕ್ಕೆ ಹಿಂದಿರುಗುವ ಪ್ರಯಾಣವನ್ನು ನಿಗದಿಪಡಿಸಲಾಗಿದೆ.
ದುಬೈ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪುದಾರಿಗೆಳೆಯುವ ಮತ್ತು ಕಪೋಲಕಲ್ಪಿತ ವಿಷಯವನ್ನು ಹರಡಿದ ಆರೋಪದ ಮೇಲೆ ಯುನೈಟೆಡ್ ಅರಬ್ ಎಮಿರೇಟ್ಸ್ನ ಅಧಿಕಾರಿಗಳು 17 ಭಾರತೀಯರು ಸೇರಿದಂತೆ ಹಲವು ವ್ಯಕ್ತಿಗಳನ್ನು ಬಂಧಿಸಿದ್ದಾರೆ.ಯುಎಇ ಅಧಿಕಾರಿಗಳ ಪ್ರಕಾರ, ಇರಾನ್ ಮೇಲೆ ಇತ್ತೀಚಿನ ಯುಎಸ್-ಇಸ್ರೇಲಿ ವೈಮಾನಿಕ ದಾಳಿಯ ನಂತರ ಉಲ್ಬಣಗೊಂಡ ಪ್ರಾದೇಶಿಕ ಉದ್ವಿಗ್ನತೆಗೆ ಸಂಬಂಧಿಸಿದ ತಪ್ಪು ಮಾಹಿತಿ ಮತ್ತು ಕಟ್ಟುಕಥೆಗಳನ್ನು ನಿಗ್ರಹಿಸಲು ಡಿಜಿಟಲ್ ಪ್ಲಾಟ್ಫಾರ್ಮ್ಗಳ ತೀವ್ರ ಮೇಲ್ವಿಚಾರಣೆಯ ನಂತರ ಈ ಬಂಧನಗಳನ್ನು ಮಾಡಲಾಗಿದೆ.
ರಾಯಚೂರು: ಕಳೆದ ಕೆಲ ದಿನಗಳಿಂದ ಬಿಸಿಲ ಬೇಗೆಗೆ ಸುಸ್ತಾಗಿದ್ದ ಜನತೆಗೆ ಜಿಲ್ಲೆಯ ಹಲವೆಡೆ ಇಂದು ಆಲಿಕಲ್ಲು ಮಳೆಯಾಗಿದೆ. ಸುರಿದ ಭಾರೀ ಮಳೆ ಬಿಸಿಲಿನಿಂದ ತತ್ತರಿಸಿದ್ದ ಬಿಸಿಲನಾಡಿನ ಜನರಿತೆಗೆ ಸ್ವಲ್ಪ ತಂಪಾಗಿದೆ.ಜಿಲ್ಲೆಯ ಕವಿತಾಳ, ಪಾಮನಕಲ್ಲೂರು, ವಟಗಲ್, ಅಮಿನಗಡ ಗ್ರಾಮಗಳಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಗುಡುಗು, ಮಿಂಚು ಸಹಿತ ಜೋರಾಗಿ ಮಳೆ ಸುರಿದಿದ್ದು, ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ತಂಪು ನೀಡಿದೆ. ಆಲಿಕಲ್ಲು ಮಳೆಯಾಗಿದ್ದರಿಂದ ಗ್ರಾಮೀಣ ಭಾಗದಲ್ಲಿ ಅಚ್ಚರಿ ಮೂಡಿಸಿದೆ.
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2026 ಕ್ಕೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ 144 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದು ರಾಜ್ಯದಲ್ಲಿ ನಿರ್ಣಾಯಕ ರಾಜಕೀಯ ಯುದ್ಧಕ್ಕೆ ಪಕ್ಷದ ಆರಂಭಿಕ ಸಿದ್ಧತೆಗಳನ್ನು ಸೂಚಿಸುತ್ತದೆ. ಭಾರತದ ಚುನಾವಣಾ ಆಯೋಗವು ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ.ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ನಡೆಯಲಿದೆ, ಇದು
ಬೆಂಗಳೂರು: ಮಾತೃತ್ವದ ರಜೆ ನಂತರ ಕರ್ತವ್ಯಕ್ಕೆ ಮರಳುವ ಶಿಕ್ಷಕಿಯರಿಗೆ ಅವರು ಮುಂದಿನ ಐದು ವರ್ಷವನ್ನು ಅವರು ಇಚ್ಛಿಸುವ ಶಾಲೆಗಳಿಗೆ ಸ್ಥಳ ನಿಯುಕ್ತಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ವಿಧಾನಪರಿಷತ್ನಲ್ಲಿ ಬಿಜೆಪಿಯ ವೈ.ಎಂ.ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಗುವಿನ ವಯಸ್ಸು 5 ವರ್ಷ ಪೂರ್ಣಗೊಳ್ಳುವವರೆಗೂ ಅವರ ಲಾಲನೆಪಾಲನೆಗೆ ಹೆಚ್ಚಿನ ಸಮಯ ನೀಡಬೇಕಾಗುತ್ತದೆ. ಈ ದೃಷ್ಟಿಯಲ್ಲಿ ಇಲಾಖೆಯು ಮಕ್ಕಳ ಆರೈಕೆ ಹಾಗೂ ಮಹಿಳಾ ನೌರರರ ವಿಶ್ರಾಂತಿ ಅಹತ್ಯಗಳನ್ನು ಗಮನದಟ್ಟುಕೊಂಡು ಈ
ಬೆಂಗಳೂರು: ನಡೆಯುತ್ತಿರುವ ಮಧ್ಯಪ್ರಾಚ್ಯ ಸಂಘರ್ಷವು ಮತ್ತೊಂದು ನಿರ್ಣಾಯಕ ಹಂತಕ್ಕೆ ಪ್ರವೇಶಿಸುತ್ತಿದ್ದಂತೆ ಮೊಜ್ತಾಬಾ ಖಮೇನಿ ಅವರ ಆರೋಗ್ಯ ಮತ್ತು ಸ್ಥಳದ ಬಗ್ಗೆ ಊಹಾಪೋಹಗಳು ತೀವ್ರಗೊಂಡಿವೆ. ತನ್ನ ತಂದೆ ಅಲಿ ಖಮೇನಿ ಅವರ ಮರಣದ ನಂತರ ನಾಯಕತ್ವವನ್ನು ವಹಿಸಿಕೊಂಡ 56 ವರ್ಷ ವಯಸ್ಸಿನ ಒಜ್ತಬಾ ಯುದ್ಧ ಪ್ರಾರಂಭವಾದಾಗಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.ಸಂಘರ್ಷದ ಆರಂಭಿಕ ಮುಷ್ಕರಗಳಲ್ಲಿ ಗಾಯಗೊಂಡ ನಂತರ ಮೊಜ್ತಾಬಾ ಖಮೇನಿ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ರಹಸ್ಯವಾಗಿ ರಷ್ಯಾಕ್ಕೆ ಸಾಗಿಸಲಾಗಿದೆ ಎಂದು ಹಲವಾರು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವ್ಲಾಡಿಮಿರ್ ಪುಟಿನ್ ಅವರ ನಿವಾಸಗಳಲ್ಲಿ ಒಂದಕ್ಕೆ ಸಂಪರ್ಕ ಹೊಂದಿದ ಖಾಸಗಿ ವೈದ್ಯಕೀಯ ಸೌಲಭ್ಯದಲ್ಲಿ ಅವರು ಆರೋಗ್ಯವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂನಲ್ಲಿ ಇದೀಗ ನೀರಿನ ಮಟ್ಟ 110.44 ಅಡಿಗೆ ಕುಸಿದಿದೆ ಎಂದು ತಿಳಿದಿದೆ. ಇದರಿಂದ ಜೂನ್, ಜುಲೈನಲ್ಲಿ ನೀರಿನ ಅಭಾವ ಎದುರಾಗುತ್ತಾ ಎಂಬ ಭಯ ಶುರುವಾಗಿದೆ. ಆದರೆ ಅಧಿಕಾರಿಗಳ ಪ್ರಕಾರ ನೀರಿಗೆ ಯಾವುದೇ ಅಭಾವ ಎದುರಾಗುವುದಿಲ್ಲ ಎನ್ನಲಾಗಿದೆ. 124.80 ಗರಿಷ್ಠ ಅಡಿ ಮಟ್ಟದ ಕೆಆರ್ಎಸ್ ಡ್ಯಾಂನಲ್ಲಿ 110.44 ಅಡಿಯಷ್ಟು ನೀರಿದೆ.32.167 ಟಿಎಂಸಿಯಷ್ಟು ಸದ್ಯ ನೀರಿದ್ದು, ಇದು ಜೂನ್, ಜುಲೈ ತಿಂಗಳಿನವರೆಗೆ ಬರುತ್ತದೆ, ಆದ್ದರಿಂದ ಯಾವುದೇ
ಇದೀಗ ಮಾವಿನಕಾಯಿ ಸಿಗುವ ಸೀಸನ್. ಮಾವಿನ ಕಾಯಿಯಿಂದ ಉಪ್ಪಿನಕಾಯಿ ಅಲ್ಲದೆ ರುಚಿಕರವಾದ ಚಟ್ನಿಯನ್ನು ತಯಾರಿಸಬಹುದು.ಅದರಲ್ಲೂ ಕುಚಲಕ್ಕಿ ಗಂಜಿ ಜತೆ ಮಾವಿನ ಕಾಯಿ ಚಟ್ನಿ ಬಿಸಿಲ ತಾಪಕ್ಕೆ ಸವಿಯಲು ರುಚಿಕರವಾಗಿರುತ್ತದೆ. ಬೇಕಾಗುವ ಸಾಮಾಗ್ರಿಗಳುಮಾವಿನಕಾಯಿಕಾಯಿ ಮೆಣಸುತೆಂಗಿನ ಕಾಯಿಬೆಳ್ಳುಳ್ಳಿ 2 ಎಸಳು
ಬಾಲಿವುಡ್ ಸೂಪರ್ಸ್ಟಾರ್ ಅಮೀರ್ ಖಾನ್ ತಮ್ಮ 61 ನೇ ಹುಟ್ಟುಹಬ್ಬವನ್ನು ಮಾರ್ಚ್ 14 ರಂದು ತಮ್ಮ ಮನೆಯಲ್ಲಿ ಆಚರಿಸಿದರು. ಇದೀಗ ಬರ್ತಡೇ ಪಾರ್ಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿದೆ. ಈ ವಿಡಿಯೋದಲ್ಲಿ ಅಮೀರ್ನ ಗೆಳತಿ ಗೌರಿ, ಮೊದಲ ಪತ್ನಿ ರೀನಾ ದತ್ತಾ ಮತ್ತು ಅವರ ಮಕ್ಕಳು ಜುನೈದ್ ಖಾನ್ ಮತ್ತು ಇರಾ ಖಾನ್; ಮತ್ತು ಅವರ ಎರಡನೇ ಪತ್ನಿ ಕಿರಣ್ ರಾವ್, ಅವರ ಮಗ ಆಜಾದ್ ರಾವ್ ಖಾನ್ ಇದ್ದರು.ಸಂಭ್ರಮಾಚರಣೆಯ ವೀಡಿಯೊವನ್ನು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ತಮ್ಮ ಪತ್ನಿ ಸಫಾ ಬೇಗ್ ಅವರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.
ಜಾರ್ಖಂಡ್: ಮದುವೆ ಊಟದ ವೇಳೆ ರಸಗುಲ್ಲಾ ಸೇವಿಸುವಾಗ ಅದು ಗಂಟಲಿನಲ್ಲಿ ಸಿಲುಕಿದ ಪರಿಣಾಮ 41 ವರ್ಷದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಮೃತಪಟ್ಟ ಜಾರ್ಖಂಡ್ನ ಜಂಶೆಡ್ಪುರದಲ್ಲಿ ಸೋಮವಾರ ನಡೆದಿದೆ. ಮಲಿಯಾಂತ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಲಲಿತ್ ಸಿಂಗ್ ಎಂಬುವವರು ಪಾಲ್ಗೊಂಡಿದ್ದರು. ಭೋಜನದ ಸಮಯದಲ್ಲಿ ರಸಗುಲ್ಲಾ ಸವಿಯುತ್ತಿದ್ದಾಗ, ಅದು ಅಚಾನಕ್ಕಾಗಿ ಅವರ ಶ್ವಾಸನಾಳದಲ್ಲಿ ಸಿಲುಕಿಕೊಂಡಿದೆ. ಈ ವೇಳೆ ಲಲಿತ್ ಸಿಂಗ್ ಅವರು ತೀವ್ರ ಉಸಿರಾಟದ ಸಮಸ್ಯೆಯನ್ನು ಎದುರಿಸಿದರು. ಸುತ್ತಲಿದ್ದವರು ತಕ್ಷಣವೇ ಸಿಹಿಯನ್ನು ಹೊರತೆಗೆಯಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಕೂಡಲೇ ಅವರನ್ನು ಎಂಜಿಎಂ ಆಸ್ಪತ್ರೆಗೆ
ಬೆಂಗಳೂರು: ಲಿಖಿತ ಪ್ರಶ್ನೆಗಳಿಗೆ ಸಚಿವರುಗಳು ಸಮರ್ಪಕ ಉತ್ತರ ನೀಡಲು ವಿಫಲರಾದ ಹಿನ್ನಲೆಯಲ್ಲಿ ಸಿಟ್ಟಿಗೆದ್ದ ಸ್ಪೀಕರ್ ಯುಟಿ ಖಾದರ್ ಇಂದು ಸದನ ಕಲಾಪವನ್ನು ಅರ್ಧಕ್ಕೇ ನಿಲ್ಲಿಸಿ ಎದ್ದು ಹೋದ ಘಟನೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್ ಅಶೋಕ್ ಇದು ಕರ್ನಾಟಕ ಇತಿಹಾಸದಲ್ಲೇ ಕಪ್ಪು ಚುಕ್ಕೆ ಎಂದಿದ್ದಾರೆ. ಸಚಿವರುಗಳು ಕಲಾಪಕ್ಕೆ ಪದೇ ಪದೇ ಗೈರಾಗುತ್ತಿರುವುದು, ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲರಾಗುತ್ತಿರುವುದು ಸ್ಪೀಕರ್ ಸಿಟ್ಟಿಗೆ ಕಾರಣವಾಗಿತ್ತು. ಇಂದು ಗೃಹಸಚಿವ ಡಾ ಜಿ ಪರಮೇಶ್ವರ್ ಉತ್ತರದ ಸಂದರ್ಭದಲ್ಲಿಯೇ ಸಿಟ್ಟಿಗೆದ್ದು ಸ್ಪೀಕರ್ ಹೊರನಡೆದಿದ್ದರು.
ಬೆಂಗಳೂರು: ಅಭೂತಪೂರ್ವ ಬೆಳವಣಿಗೆಯಲ್ಲಿ, ಶಾಸಕರು ಎತ್ತಿರುವ ಪ್ರಶ್ನೆಗಳಿಗೆ ಸರ್ಕಾರ ಸಮರ್ಪಕವಾಗಿ ಉತ್ತರಿಸದ ಕಾರಣ ಕೋಪಗೊಂಡ ಸ್ಪೀಕರ್ ಯು ಟಿ ಖಾದರ್ ಅವರು ವಿಧಾನಸಭೆಯನ್ನು ಮುಂದೂಡಿದರು ಮತ್ತು ಹೊರನಡೆದರು.ಸೋಮವಾರ, ಗೃಹ ಸಚಿವ ಜಿ ಪರಮೇಶ್ವರ ಅವರು ಶಾಸಕರು ಎತ್ತಿರುವ 230 ಪ್ರಶ್ನೆಗಳಿಗೆ ವಿರುದ್ಧ 84 ಉತ್ತರಗಳನ್ನು ಮಂಡಿಸಿದರು. ಕಳೆದ ವಾರ ಸುಮಾರು 50 ಪ್ರಶ್ನೆಗಳಿಗೆ ಮಾತ್ರ ಸರ್ಕಾರದಿಂದ ಉತ್ತರ ಸಿಕ್ಕಿದೆ ಎಂದು ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದರು.ಖಾದರ್ ಅವರು ನಾಲ್ಕು ಬಾರಿ ತಮ್ಮ ಕುರ್ಚಿಯಿಂದ "ಸ್ಪಷ್ಟ ಆದೇಶ" ನೀಡಿದ್ದಾರೆ ಎಂದು ಹೇಳಿದರು. "ಈ ಸದನವು ಸಚಿವರಿಗಾಗಿ
ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆರೋಗ್ಯ ಹಾಗೂ ಸಾವಿನ ವದಂತಿ ಬಗ್ಗೆ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಅವರು ಪ್ರತಿಕ್ರಿಯಿಸಿ, ನೆತನ್ಯಾಹು ಅವರು ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವದಂತಿಗಳನ್ನು ಉದ್ದೇಶಿಸಿ ರಾಯಭಾರಿ ರುವೆನ್ ಪ್ರತಿಕ್ರಿಯಿಸಿ, ಈಚೆಗೆ ಕೆಫೆಯಲ್ಲಿ ಪ್ರಧಾನಿಯವರ ವಿಡಿಯೋ ಅಸಲಿ ಮತ್ತು ಕೃತಕ ಬುದ್ಧಿಮತ್ತೆ ಬಳಸಿ ರಚಿಸಲಾಗಿಲ್ಲ ಎಂದು ಪ್ರತಿಪಾದಿಸಿದರು. ಪ್ರಧಾನಿ ನೆತನ್ಯಾಹು ಜೀವಂತವಾಗಿದ್ದಾರೆ. ನಾನು ಇಸ್ರೇಲ್ನಲ್ಲಿದ್ದಾಗ ಒಂದಕ್ಕಿಂತ ಹೆಚ್ಚು ಬಾರಿ ಅವರನ್ನು ಖುದ್ದಾಗಿ
ಲಕ್ನೋ: ಹೆದ್ದಾರಿಯಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ನ್ನು ರೇಸ್ ನಂತೆ ಓಡಿಸಿದ 12 ನೇ ತರಗತಿ ವಿದ್ಯಾರ್ಥಿ ತನ್ನ ಜೀವಕ್ಕೇ ಕುತ್ತು ತಂದಿದ್ದಾನೆ. ಈ ಭಯಾನಕ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ ನೋಡಿ. ಈ ಘಟನೆ ನಡೆದಿರುವುದು ಲಕ್ನೋದಲ್ಲಿ. ಇತ್ತೀಚೆಗೆ ಯುವಕರಿಗೆ ಬೈಕ್ ಸಿಕ್ಕರೆ ಸಾಕು. ರಸ್ತೆಗೆ ಇಳಿದುಬಿಟ್ಟರೆ ರೇಸ್ ಗಿಳಿದುಬಿಟ್ಟಿದ್ದೇವೋ ಎಂಬಂತೆ ಅಪರಿಮಿತ ವೇಗದಲ್ಲಿ ಬೈಕ್ ಚಲಾಯಿಸುತ್ತಾರೆ. ಇದೇ ರೀತಿ ಮಾಡಲು ಹೋಗಿ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. 12 ನೇ ತರಗತಿ ಓದುತ್ತಿದ್ದ ಯುವಕ ತನ್ನ ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಹೆದ್ದಾರಿಯಲ್ಲಿ ಅತೀ ವೇಗವಾಗಿ ಬೈಕ್ ಓಡಿಸುತ್ತಾನೆ.
ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ವಿರುದ್ಧ ಜೈಪುರದಲ್ಲಿ ಎಫ್ಐಆರ್ ದಾಖಲಾಗಿದೆ.ಅಯ್ಯರ್ ಮಾರ್ಚ್ 14 ರಂದು ಜೈಪುರಕ್ಕೆ ಭೇಟಿ ನೀಡಿದ್ದರು "ಭಾರತದ ಭವಿಷ್ಯ: ಹುಸಿ-ಹಿಂದೂಯಿಸಂ ಅಥವಾ ಸೆಕ್ಯುಲರ್ ಭಾರತ?" ಎಂಬ ಶೀರ್ಷಿಕೆಯ ಸಾರ್ವಜನಿಕ ಉಪನ್ಯಾಸವನ್ನು ನೀಡಲು. ಸ್ಥಳೀಯ ಕಾಲೇಜಿನಲ್ಲಿ. ಕಾರ್ಯಕ್ರಮದ ಸಂದರ್ಭದಲ್ಲಿ, ಅವರು 2017 ರಲ್ಲಿ ಪ್ರಧಾನಿಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದರು. ಅಯ್ಯರ್ ಅವರು ತಮ್ಮ ಹೇಳಿಕೆಗಳು ಮೋದಿಯವರ ಪಾತ್ರವನ್ನು ಗುರಿಯಾಗಿರಿಸಿಕೊಂಡಿವೆಯೇ ಹೊರತು ಅವರ ಜಾತಿಯನ್ನು ಅಲ್ಲ, ಹೇಳಿಕೆಯನ್ನು ನಂತರ ತಿರುಚಲಾಗಿದೆ ಎಂದು ಹೇಳಿದ್ದಾರೆ.
ನವದೆಹಲಿ: ರೆಡ್ ಬುಲ್ ಕುಡಿಯುತ್ತಾ ರಸ್ತೆಯಲ್ಲಿ ಗೆಳೆಯನ ಜೊತೆ ರೀಲ್ಸ್ ಮಾಡುತ್ತಿದ್ದ ಯುವಕನಿಗೆ ಹಿಂದಿನಿಂದ ಬಂದ ಬೃಹತ್ ಟ್ರಕ್ ಗುದ್ದಿದ ಎದೆ ಝಲ್ಲೆನಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹರ್ಯಾಣದ ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇನಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಯುವ ಜನಾಂಗ ರೀಲ್ಸ್ ಹುಚ್ಚಿನಲ್ಲಿ ಏನೇನೋ ಸರ್ಕಸ್ ಮಾಡಲು ಹೋಗಿ ಪ್ರಾಣಕ್ಕೇ ಕುತ್ತು ತರುತ್ತಿದ್ದಾರೆ. ಅಂತಹದ್ದೇ ಒಂದು ಧಾರುಣ ಘಟನೆ ಇದಾಗಿದೆ. ಹರ್ಯಾಣದ ನುಹ್ ಎಂಬಲ್ಲಿ ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇನಲ್ಲಿ ಅತೀ ವೇಗದಲ್ಲಿ ವಾಹನಗಳು ಓಡಾಡುತ್ತಿರುತ್ತವೆ. ಇದೇ ರಸ್ತೆಯಲ್ಲಿ 18 ವರ್ಷದ ಮೊಹಮ್ಮದ್ ಮೊಯಿನ್ ಮತ್ತು ಆತನ ಸ್ನೇಹಿತರು ರೀಲ್ಸ್ ಚಿತ್ರೀಕರಣ ಮಾಡುತ್ತಿರುತ್ತಾರೆ.
ಒಡಿಶಾ: ಪೂರ್ವ ಭಾರತದ ಒಡಿಶಾದ ಸರ್ಕಾರಿ ಆಸ್ಪತ್ರೆಯ ಟ್ರಾಮಾ ಸೆಂಟರ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಹತ್ತು ಜನರು ಸಾವನ್ನಪ್ಪಿದ್ದಾರೆ.ಬಲಿಯಾದವರೆಲ್ಲರೂ ರೋಗಿಗಳಾಗಿದ್ದು, 11 ಆಸ್ಪತ್ರೆ ಸಿಬ್ಬಂದಿ ರೋಗಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ಸುಟ್ಟಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ.ಸೋಮವಾರ (21:00 GMT ಭಾನುವಾರ) ಸ್ಥಳೀಯ ಕಾಲಮಾನ 02:30 ರ ಸುಮಾರಿಗೆ ಕಟಕ್ ನಗರದ SCB ವೈದ್ಯಕೀಯ
ಕೇರಳ: ರಾಜ್ಯವನ್ನೇ ಬೆಚ್ಚಿಬೀಳಿಸಿದ ಕುಖ್ಯಾತ ರೌಡಿಶೀಟರ್ ಅತುಲ್ ಅಲುವಾ ಹತ್ಯೆ ಪ್ರಕರಣ ಸಂಬಂಧ ಇದೀಗ 8ಮಂದಿಗಳನ್ನು ಅರೆಸ್ಟ್ ಮಾಡಲಾಗಿದೆ. ಹಾಡಹಗಲೇ ಅತುಲ್ ಅಲುವಾನನ್ನು ರೋಡ್ನಲ್ಲಿ ಅಡ್ಡಗಟ್ಟಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ವಿಡಿಯೋ ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಘಟನೇ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಶನಿವಾರ ಈ ಘಟನೆ ನಡೆದಿದ್ದು., ಆರೋಪಿಗಳು ಕಾರಿನಲ್ಲಿ ಬಂದು ಅತುಲ್ ಅಲುವಾ ಇದ್ದ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.
ಬೆಂಗಳೂರು: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಶ್ರೀಮತಿ ಬಾನು ಮುಷ್ತಾಕ್ ಅವರ ವಿರುದ್ಧ ಸರಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಮಂಡ್ಯ ಜಿಲ್ಲೆಯಲ್ಲಿ ಶ್ರೀಮತಿ ಬಾನು ಮುಷ್ತಾಕ್ ಅವರು ಚಪ್ಪಲಿ ಧರಿಸಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಫೋಟೊಗೆ ಪುಷ್ಪಾರ್ಚನೆ ಮಾಡಿದ್ದನ್ನು ನಾನು ಖಂಡತುಂಡವಾಗಿ ಖಂಡಿಸುತ್ತೇನೆ ಎಂದರು. ಸರಕಾರ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನನ್ನ ಪ್ರಕಾರ ಬಾನು ಮುಷ್ತಾಕ್ ಅವರು ಅಲ್ಲಾಹರನ್ನು ಚಪ್ಪಲಿಗೆ ಹೋಲಿಸಿದ್ದಾರೆ.
ನ್ಯೂಯಾರ್ಕ್: ಇಸ್ರೇಲ್, ಇರಾನ್ ಯುದ್ಧದಲ್ಲಿ ಮೂಗು ತೂರಿಸಿರುವ ಅಮೆರಿಕಾ ಈಗ ಇದೊಂದು ವಿಚಾರಕ್ಕೆ ಭಾರತ ಮತ್ತು ಚೀನಾ ಬೆನ್ನು ಬಿದ್ದಿದೆ. ಇಸ್ರೇಲ್ ಮತ್ತು ಅಮೆರಿಕಾ ಮೇಲೆ ಸೇಡು ತೀರಿಸಿಕೊಳ್ಳಲು ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದೆ. ಇದರಿಂದ ಈ ಮಾರ್ಗದಲ್ಲಿ ಸರಕು, ಅನಿಲ, ತೈಲ ಹಡಗುಗಳನ್ನು ಸಾಗಿಸಲು ಅಡ್ಡಿಯಾಗಿದೆ. ಇದರಿಂದ ಜಾಗತಿಕವಾಗಿ ಅನಿಲ, ತೈಲ ಸಂಕಷ್ಟ ಎದುರಾಗಿದೆ. ಅಮೆರಿಕಾಗೂ ಇದರಿಂದ ತೊಂದರೆಯಾಗುತ್ತಿದೆ. ಆದರೆ ಭಾರತಕ್ಕೆ ಇರಾನ್ ವಿನಾಯ್ತಿ ನೀಡಿದ್ದು, ನಮ್ಮ ದೇಶದ ಧ್ವಜವಿರುವ ಹಡಗುಗಳನ್ನು ಈ ಜಲಸಂಧಿ ಮೂಲಕ ರವಾನಿಸಲು ಇರಾನ್ ಅನುವು ಮಾಡಿಕೊಡುತ್ತಿದೆ. ಇದು ಜಾಗತಿಕವಾಗಿ ಭಾರತದ ಗೆಲುವು ಎಂದೇ ಹೇಳಬಹುದು.
ತನ್ನ ಐಷಾರಾಮಿ ಕಾರಿಗೆ ಹೆಚ್ಚುವರಿಯಾಗಿ ಎರಡು ಪ್ರಬಲ ಬೆಳಕು ಬೀರುವ ಹೆಡ್ ಲೈಟ್ ಫಿಕ್ಸ್ ಮಾಡಿದ್ದ ಚಾಲಕನನ್ನು ತಡೆದು ಈ ಪೊಲೀಸ್ ಅಧಿಕಾರಿ ಹೇಳಿದ ಕಿವಿ ಮಾತು ಕೇಳಿದರೆ ನೀವು ಫಿದಾ ಆಗೋದು ಗ್ಯಾರಂಟಿ. ನಮ್ಮ ದೇಶದಲ್ಲಿ ಇತ್ತೀಚೆಗೆ ರಾತ್ರಿ ವೇಳೆ ಅಪಘಾತಗಳು ಸಂಭವಿಸುವುದಕ್ಕೆ ಪ್ರಮುಖ ಕಾರಣವೇ ಎದುರಿನಿಂದ ಬರುವ ಐಷಾರಾಮಿ ಗಾಡಿಗಳ ಪ್ರಖರ ಎಲ್ ಇಡಿ ಬಲ್ಬ್ ಗಳು. ಇದು ಎದುರಿನಿಂದ ಬರುವ ವಾಹನ ಸವಾರರ ಕಣ್ಣು ಕುಕ್ಕಿಸುವಂತಿರುತ್ತದೆ. ಇದರಿಂದ ಕಣ್ಣು ಕತ್ತಲಾದಂತಾಗಿ ಅನೇಕ ಬಾರಿ ಅಪಘಾತಗಳಾಗುತ್ತವೆ.
ತನ್ನ ಹೊಲದಲ್ಲಿರುವ ಬೆಳೆಗಳನ್ನು ಮಂಗಗಳು ಬಂದು ಹಾಳು ಮಾಡಬಾರದು ಎಂದು ರೈತನೊಬ್ಬ ತಾನೇ ಕರಡಿ ವೇಷ ಹಾಕಿಕೊಂಡು ನಿಂತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೈತ ವರ್ಷವಿಡೀ ತನ್ನ ಹೊಲದಲ್ಲಿ ಕಷ್ಟಪಟ್ಟು ಬೆಳೆ ಮಾಡುತ್ತಾನೆ. ಆದರೆ ಆತನ ಬೆಳೆಗಳಿಗೆ ದೊಡ್ಡ ಶತ್ರುಗಳು ಎಂದರೆ ಮಂಗಗಳು, ಕಾಡಾನೆಗಳು ಮತ್ತು ಹಕ್ಕಿಗಳು. ತಾನು ಬೆಳೆದ ಬೆಳೆಗಳನ್ನು ರಕ್ಷಿಸಲು ಆತ ವಿನೂತನ ಐಡಿಯಾ ಮಾಡಬೇಕಾಗುತ್ತದೆ. ಅದೇ ರೀತಿ ಉತ್ತರ ಪ್ರದೇಶದ ಫಿರೋಜ್ ಪುರದ ರೈತ ಧರಂಬೀರ್ ಎಂಬವರು ಮಂಗಗಳಿಂದ ತನ್ನ ಬೆಳೆ ರಕ್ಷಿಸಲು ತಾನೇ ಕರಡಿ ವೇಷ ಹಾಕಿಕೊಂಡು ಹೊಲದಲ್ಲಿ ಓಡಾಡುತ್ತಾನೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ಈ ವಾರದ ಆರಂಭದಲ್ಲೇ ಪರಿಶುದ್ಧ ಚಿನ್ನದ ದರ ಸತತವಾಗಿ ಇಳಿಕೆಯಾಗುತ್ತಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,62,745.00 ರೂ.ಗಳಿತ್ತು. ಆದರೆ ಇಂದು ಇಳಿಕೆಯಾಗಿದ್ದು 1,65,875.00 ರೂ.ಗಳಷ್ಟಿದೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಇಳಿಕೆಯಾಗಿತ್ತು. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಇದು ಬೆಳೆಗಾರರಿಗೆ ಸಮಾಧಾನ ತಂದಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಸತತವಾಗಿ ಬೆಲೆ ಇಳಿಕೆ ಕಂಡುಬರುತ್ತಿದೆ. ಕೆಲವು ವರ್ಗದ ಅಡಿಕೆ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡುಬರುತ್ತಿದೆ. ಇಂದು ಹೊಸ ಅಡಿಕೆ ಬೆಲೆ 460 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದು 530 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿಯಲ್ಲಿದ್ದು 530 ರೂ.ಗಳಷ್ಟಾಗಿದೆ.
ಬೆಂಗಳೂರು: ಅಪ್ಪನ ಆಸ್ತಿಯಲ್ಲಿ ಪಾಲು ಕೇಳೋ ಹೆಣ್ಣು ಮಕ್ಕಳು ಅಪ್ಪ ಮಾಡಿದ ಸಾಲ ತೀರಿಸಬೇಕು ಎಂದರೆ ಗಂಡು ಮಕ್ಕಳ ಕಡೆ ಕೈ ತೋರಿಸುತ್ತಾರೆ ಎಂದು ನ್ಯಾಯಾಧೀಶರು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಸ್ತಿ ಪಾಲು ವಿಚಾರವಾಗಿ ಇತ್ತೀಚೆಗೆ ಅಣ್ಣ-ತಂಗಿಯರ ನಡುವೆಯೇ ವಾಗ್ವಾದವಾಗಿ ಕೋರ್ಟ್ ವಿವಾದ ಕೋರ್ಟ್ ಮೆಟ್ಟಿಲೇರುವುದು ಸಾಮಾನ್ಯವಾಗಿದೆ. ಇಂತಹದ್ದೇ ಒಂದು ಪ್ರಕರಣದ ವಿಚಾರಣೆಯನ್ನು ನಡೆಸುವ ನ್ಯಾಯಾಧೀಶರು ಹೆಣ್ಣು ಮಕ್ಕಳಿಗೆ ಚಾಟಿ ಬೀಸಿದ್ದಾರೆ. ಮೂರ್ತಿ ರಾವ್ ಎನ್ನುವವರ ಮಕ್ಕಳು ಆಸ್ತಿ ಪಾಲಿಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದ ವಿಚಾರ ನಡೆಸುವ ನ್ಯಾಯಾಧೀಶರು ‘ಅವರು ಬಿಟ್ಟು ಹೋದ ಪ್ರಾಪರ್ಟಿಗೆ ಮಾತ್ರ ಗಲಾಟೆ.
ಮುಂಬೈ: ರಾತ್ರಿ ವೇಳೆ ರಸ್ತೆಯಲ್ಲಿ ಕೆಲವು ಯುವಕರು ಗಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಸಡನ್ ಆಗಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಎಂಟ್ರಿ ಕೊಟ್ಟಿದ್ದಾರೆ. ಮುಂದೇನಾಯ್ತು ಇಲ್ಲಿದೆ ವಿಡಿಯೋ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ನಿವೃತ್ತಿಯಾಗಿ ಇಷ್ಟು ದಿನ ಕಳೆದರೂ ಅವರ ಮೇಲಿನ ಕ್ರೇಜ್ ಅಭಿಮಾನಿಗಳಲ್ಲಿ ಇನ್ನೂ ಕಡಿಮೆಯಾಗಿಲ್ಲ. ಇಂದಿನ ತಲೆಮಾರಿನ ಕ್ರಿಕೆಟ್ ಅಭಿಮಾನಿಗಳೂ ಅವರು ಮೆಚ್ಚಿನ ಆಟಗಾರರಾಗಿಯೇ ಉಳಿದಿದ್ದಾರೆ. ಮುಂಬೈನ ರಸ್ತೆಯೊಂದರಲ್ಲಿ ರಾತ್ರಿ ವೇಳೆ ಯುವಕರ ಗುಂಪು ರಸ್ತೆ ಬದಿಯಲ್ಲಿ ಗಲ್ಲಿ ಕ್ರಿಕೆಟ್ ಆಡುತ್ತಿರುತ್ತಾರೆ. ಈ ವೇಳೆ ಅದೇ ರಸ್ತೆಯಲ್ಲಿ ಬರುವ ಸಚಿನ್ ತೆಂಡುಲ್ಕರ್ ಗಲ್ಲಿ ಕ್ರಿಕೆಟ್ ಆಡುತ್ತಿರುವವರನ್ನು ನೋಡಿ ತಮ್ಮ ಕಾರು ನಿಲ್ಲಿಸುತ್ತಾರೆ.
ಟೆಲ್ ಅವಿವಾ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್ ದಾಳಿಗೆ ಬಲಿಯಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಸುದ್ದಿ ಹಬ್ಬಿಸಿರುವಾಗಲೇ ಕಾಫಿ ಹೀರುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಇದು ಕೂಡಾ ನಕಲಿಯಾ ಎಂದು ಸಂಶಯ ಮೂಡಿದೆ. ಇಸ್ರೇಲ್-ಅಮೆರಿಕಾ ಮತ್ತು ಇರಾನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಇಸ್ರೇಲ್-ಅಮೆರಿಕಾ ನಡೆಸಿದ್ದ ದಾಳಿಗೆ ಇರಾನ್ ಪರಮೋಚ್ಛ ನಾಯಕ ಖಮೇನಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಈಗ ಇಸ್ರೇಲ್ ಪ್ರಧಾನಿ ನೆತನ್ಯಾಹು ಕೂಡಾ ಇರಾನ್ ದಾಳಿಗೆ ಸಾವನ್ನಪ್ಪಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿದೆ.
ಲಾಸ್ ಏಂಜಲೀಸ್: ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ಸ್ಪ್ಯಾನಿಶ್ ಮೂಲದ ನಟ ಪ್ಯಾಲೆಸ್ತೀನ್ ಪರ ಮಾತನಾಡಿದಾಗ ಭಾರತದ ತಾರೆ ಪ್ರಿಯಾಂಕ ಚೋಪ್ರಾ ಹೌದು ಎಂದು ಒಪ್ಪಿಗೆ ಸೂಚಿಸಿದ್ದು ಈಗ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. 98 ನೇ ಆಸ್ಕರ್ ಅವಾರ್ಡ್ಸ್ 2026 ಕಾರ್ಯಕ್ರಮ ನಡೆದಿದೆ. ಪ್ರತಿಷ್ಠಿತ ಜಾಗತಿಕ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಜಗತ್ತಿನ ವಿವಿಧ ಸಿನಿಮಾ ಸಾಧಕರಿಗೆ ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿ ಸಮಾರಂಭದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಕೂಡಾ ಭಾಗಿಯಾಗಿದ್ದಾರೆ. ಸ್ಪ್ಯಾನಿಶ್ ನಟ ಜೇವಿಯರ್ ಬಾರ್ಡಮ್ ಜೊತೆ ಪ್ರಿಯಾಂಕ ವೇದಿಕೆಗೆ ಬಂದಿದ್ದಾರೆ. ಈ ವೇಳೆ ಜೇವಿಯರ್ ಇರಾನ ಮೇಲೆ ಅಮೆರಿಕಾ-ಇಸ್ರೇಲ್ ನಡೆಸುತ್ತಿರುವ ದಾಳಿ ಖಂಡಿಸಿದ್ದಾರೆ.
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮುದ್ದಿನ ಮಡದಿ ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರ್ತ್ ಡೇ ಪಾರ್ಟಿ ವಿಡಿಯೋ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಕೆಲವರು ಯಶ್ ಅಪ್ಪ, ಅಮ್ಮ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ತಮ್ಮ ನಂದಗೋಕುಲ ಸೀರಿಯಲ್ ಗೆಳೆಯರಿಂದ ಹಿಡಿದು ಈಗಿನ ಟಾಕ್ಸಿಕ್ ಸಿನಿಮಾ ನಿರ್ಮಾಪಕ ಕೆವಿಎನ್ ವರೆಗೆ ಸಿನಿ ಸ್ನೇಹಿತರನ್ನೆಲ್ಲಾ ಪಾರ್ಟಿಗೆ ಕರೆದಿದ್ದಾರೆ. ಯಶ್ ತಂಗಿ ನಂದಿನಿ ಕೂಡಾ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಾಧಿಕಾ ತಂದೆ, ತಾಯಿ ಮಕ್ಕಳು ಎಲ್ಲರೂ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಭಿಷೇಕ್ ಅಂಬರೀಶ್ ನಂತಹ ಕನ್ನಡ ಚಿತ್ರರಂಗದ ಗೆಳೆಯರೂ ಇದ್ದಾರೆ.
ಕಟಕ್: ಒಡಿಶಾದ ಕಟಕ್ ನಲ್ಲಿರುವ ಎಸ್ ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆವರಣದಲ್ಲಿ ಅಗ್ನು ಅವಘಡ ಸಂಭವಿಸಿದ್ದು ಕನಿಷ್ಠ 10 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಮಧ್ಯರಾತ್ರಿ 2.30 ರಿಂದ 3 ಗಂಟೆ ಸುಮಾರಿಗೆ ಅಗ್ನಿ ಅನಾಹುತ ಸಂಭವಿಸಿದೆ. 10 ರೋಗಿಗಳು ಸಾವನ್ನಪ್ಪಿದ್ದು ರಕ್ಷಿಸಲು ಹೋದ ಸಿಬ್ಬಂದಿಗಳಿಗೂ ಗಾಯಗಳಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಅನಾಹುತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ತುರ್ತು ನಿಗಾ ಘಟಕದಲ್ಲೇ ದುರಂತ ಸಂಭವಿಸಿದೆ. ಬೆಂಕಿ ಕಂಡ ತಕ್ಷಣವೇ ಸಿಬ್ಬಂದಿಗಳು ತಾವಾಗಿಯೇ ನಂದಿಸಲು ಹೋಗಿದ್ದಾರೆ.
ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಹಿಟ್ ಮ್ಯಾನ್ ರೋಹಿತ್ ಶರ್ಮಾರನ್ನು ಅವರ ಎದುರಿನಲ್ಲೇ ಕಲಾವಿದ ಮಿಮಿಕ್ರಿ ಮಾಡಿದ್ದಾರೆ. ಇದಕ್ಕೆ ರೋಹಿತ್ ರಿಯಾಕ್ಷನ್ ಹೇಗಿತ್ತು ಈ ವಿಡಿಯೋ ನೋಡಿ. ರೋಹಿತ್ ಶರ್ಮಾಗೆ ಅವರದ್ದೇ ಆದ ವಿಶಿಷ್ಟ ಸ್ಟೈಲ್ ಇದೆ. ಅವರ ಮಾತು ಕೂಡಾ ಬೈಗುಳವಾಗಿದ್ದರೂ ಕೇಳೋದಕ್ಕೆ ಮಜಾ ಇರುತ್ತದೆ. ಒಂಥರಾ ಕ್ರಿಕೆಟ್ ನ ರೆಬಲ್ ಸ್ಟಾರ್ ಅಂಬರೀಶ್ ರೀತಿ ಅವರು. ಆದರೆ ಅವರನ್ನು ಮಿಮಿಕ್ರಿ ಮಾಡಿದ ವಿಡಿಯೋ ಒಂದು ಈಗ ವೈರಲ್ ಆಗಿದೆ. ಸಿಯೆಟ್ ಅವಾರ್ಡ್ ಕಾರ್ಯಕ್ರಮದಲ್ಲಿ ರೋಹಿತ್ ಶರ್ಮಾ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವಾರ್ಡ್ ನೀಡುವುದರ ಜೊತೆಗೆ ಮನರಂಜನೆ ದೃಷ್ಟಿಯಿಂದ ಮಿಮಿಕ್ರಿ ಕೂಡಾ ಮಾಡಲಾಗಿದೆ.
ಬೆಂಗಳೂರು: ಕಳೆದ ಎರಡು ವಾರಗಳಿಂದ ಬಿರುಬಿಸಲಿನಿಂದ ಬೇಸತ್ತಿದ್ದ ಜನಕ್ಕೆ ಈಗ ಗುಡ್ ನ್ಯೂಸ್. ಈ ವಾರ ರಾಜ್ಯದ ಕೆಲವು ಜಿಲ್ಲೆಗಳಿಗೆ ಮಳೆಯಾಗುವ ಸೂಚನೆಯಿದೆ. ವಾರಂತ್ಯಕ್ಕೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿತ್ತು. ವಿಪರೀತ ಬಿಸಿಲಿನಿಂದ ಕಂಗೆಟ್ಟಿದ್ದ ಜನಕ್ಕೆ ಮಳೆ ಕೊಂಚ ತಂಪು ನೀಡಿತ್ತು. ಈ ವಾರವೂ ಕರಾವಳಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆಯಿದೆ. ವಾರದ ಮೊದಲ ಎರಡು ದಿನ ಮತ್ತು ವಾರಂತ್ಯದ ಒಂದೆರಡು ದಿನ ಮಳೆಯ ಸೂಚನೆಯಿದೆ.
ಮದುವೆ ಸಮಸ್ಯೆ ಬಗೆಹರಿಸಲು, ಕಂಕಣ ಭಾಗ್ಯ ಕೂಡಿಬರಲು ಪಾರ್ವತಿ ಸಹಿತ ಶಿವನ ಪೂಜೆ ಮಾಡಬೇಕು. ಇದಕ್ಕಾಗಿ ಸೋಮವಾರ ಶಿವನ ದಿನ ಉಮಾ ಮಹೇಶ್ವರ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.ನಮಃ ಶಿವಾಭ್ಯಾಂ ನವಯೌವನಾಭ್ಯಾಂಪರಸ್ಪರಾಶ್ಲಿಷ್ಟವಪುರ್ಧರಾಭ್ಯಾಮ್ ।ನಗೇಂದ್ರಕನ್ಯಾವೃಷಕೇತನಾಭ್ಯಾಂನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 1 ॥ ನಮಃ ಶಿವಾಭ್ಯಾಂ ಸರಸೋತ್ಸವಾಭ್ಯಾಂನಮಸ್ಕೃತಾಭೀಷ್ಟವರಪ್ರದಾಭ್ಯಾಮ್ ।ನಾರಾಯಣೇನಾರ್ಚಿತಪಾದುಕಾಭ್ಯಾಂನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 2 ॥ ನಮಃ ಶಿವಾಭ್ಯಾಂ ವೃಷವಾಹನಾಭ್ಯಾಂವಿರಿಂಚಿವಿಷ್ಣ್ವಿಂದ್ರಸುಪೂಜಿತಾಭ್ಯಾಮ್ ।ವಿಭೂತಿಪಾಟೀರವಿಲೇಪನಾಭ್ಯಾಂನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 3 ॥ ನಮಃ ಶಿವಾಭ್ಯಾಂ ಜಗದೀಶ್ವರಾಭ್ಯಾಂಜಗತ್ಪತಿಭ್ಯಾಂ ಜಯವಿಗ್ರಹಾಭ್ಯಾಮ್ ।ಜಂಭಾರಿಮುಖ್ಯೈರಭಿವಂದಿತಾಭ್ಯಾಂನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 4 ॥
ಬೆಂಗಳೂರು: ವಂಡರ್ಲಾ ಹೊಟೇಲ್ನಲ್ಲಿರುವ ಒಡಿಶಾ ಕಾಂಗ್ರೆಸ್ ಶಾಸಕರಿಗೆ ಬ್ಲಾಂಕ್ ಚೆಕ್ ನೀಡಿ ಲಂಚ ನೀಡಲು ಯತ್ನಸಿದ ಆರೋಪದಡಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಈ ಸಂಬಂಧ ಡಿಕೆ ಶಿವಕುಮಾರ್ ಅವರು ಹೇಳಿಕೊಂಡಿದ್ದಾರೆ. ಬಿಜೆಪಿಯ 'ಆಪರೇಷನ್ ಕಮಲ' ಆತಂಕದ ಭಾಗವಾಗಿ ಬಿಡದಿ ರೆಸಾರ್ಟ್ನಲ್ಲಿರುವ ಒಡಿಶಾ ಕಾಂಗ್ರೆಸ್ ಶಾಸಕರಿಗೆ ಲಂಚ ನೀಡಲು ಯತ್ನಿಸಿದೆ. ಎಂಟು ಶಾಸಕರು ಮತ್ತು ಒಡಿಶಾ ಕಾಂಗ್ರೆಸ್ ಘಟಕದ ಕೆಲವು ಪದಾಧಿಕಾರಿಗಳು ರೆಸಾರ್ಟ್ನಲ್ಲಿ ಮೊಕ್ಕಾಂ ಹೂಡಿದ್ದಾರೆ.
ಗಾಯಕ-ರಾಪರ್ ಬಾದ್ಶಾ ಅವರು ತಮ್ಮ ಹೊಸ ಹಾಡು 'ತತೀರೀ'ಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತರ ಮೇಲೆ ಆಕ್ಷೇಪಾರ್ಹ ಸಾಹಿತ್ಯವನ್ನು ಬಳಸಿದ್ದಾರೆಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆ ಬಂದಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರು, ಫೇಸ್ಬುಕ್ನಲ್ಲಿ, "ಅವನ ಹಣೆಗೆ ಗುಂಡು ಹಾರಿಸುವುದಾಗಿ" ಬಾದ್ಶಾಗೆ ಬೆದರಿಕೆ ಹಾಕಿದ್ದಾರೆ.ಗಾಯಕ ಬಾದ್ಶಾಹ್, ನೀವು ಹರಿಯಾಣದ ಸಂಸ್ಕೃತಿಯನ್ನು ಹಾಳುಮಾಡಲು ಪ್ರಯತ್ನಿಸಿದ್ದೀರಿ. ನಾವು 2024 ರಲ್ಲಿ ನಿಮ್ಮ
ಕಳೆದ 13ವರ್ಷಗಳಿಂದ ಕೋಮಾದಲ್ಲಿರುವ ಮಗನಿಗೆ ದಯಾಮರಣ ನೀಡುವಂತೆ ಕೋರ್ಟ್ ತೀರ್ಪು ನೀಡಿದ ಬಳಿಕ ಇದೀಗ ಹರೀಶ್ ರಾಣಾರ ಕೊನೆಯ ಗಳಿಗೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.2013ರಲ್ಲಿ ನಾಲ್ಕನೇ ಮಹಡಿಯ ಕಟ್ಟಡದಿಂದ ಬಿದ್ದು ಕೋಮಾಕ್ಕೆ ಜಾರಿದ ಮಗನಿಗೆ ದಯಾಮರಣ ನೀಡುವಂತೆ ಹರೀಶ್ ರಾಣಾ ತಂದೆ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿದ್ದು, ಹರೀಶ್ ರಾಣಾಗೆ ನೀಡುತ್ತಿದ್ದ ಜೀವರಕ್ಷಕ ಚಿಕಿತ್ಸೆಯನ್ನು ತಡೆದು, ದಯಾಮರಣಕ್ಕೆ ಅನುಮತಿ ನೀಡಿದೆ. ರೋಗಿಯ ಅಂತಿಮ ಹಂತವನ್ನು ಆರಾಮ ಮತ್ತು ಘನತೆಯಿಂದ ನಿರ್ವಹಿಸುವುದನ್ನು ಖಾತ್ರಿಪಡಿಸುವ ಉಪಶಾಮಕ ಅಂತ್ಯ-
ಬೆಂಗಳೂರು: "ಒಡಿಸ್ಸಾದಿಂದ ಬಂದಿರುವ ನಾಲ್ವರು ಬಿಡದಿಯಲ್ಲಿ ವಾಸ್ತವ್ಯ ಹೂಡಿರುವ ನಮ್ಮ ಪಕ್ಷದ ಶಾಸಕರನ್ನು ಭೇಟಿ ಮಾಡಿ, ಅಡ್ಡಮತದಾನಕ್ಕೆ ತಲಾ ₹5 ಕೋಟಿ ಹಣದ ಆಮಿಷ ಒಡ್ಡಿದ್ದಾರೆ. ಆದರೆ ನಮ್ಮ ಶಾಸಕರು ಕುದುರೆ ವ್ಯಾಪಾರಕ್ಕೆ ಸಿದ್ಧರಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.ಕೆಪಿಸಿಸಿ ಕಚೇರಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು."ಒಡಿಸ್ಸಾದಿಂದ ಬಂದಿರುವ ನಾಲ್ಕು ಜನರು ಸ್ಥಳೀಯ ಬ್ಯಾಟರಾಯನಪುರ ನಿವಾಸಿ ಸುರೇಶ್ ಎಂಬಾತನ ಸಹಾಯ ಪಡೆದು
ನವದೆಹಲಿ: ದೇಶದಲ್ಲಿ ಭಾರೀ ಕುತೂಹಲ ಮೂಡಿಸಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ರಾಜ್ಯಗಳು ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಪಂಚ ರಾಜ್ಯಗಳ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದರು. ಏಪ್ರಿಲ್ 9 ರಿಂದ ವಿವಿಧ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಎಲ್ಲ ರಾಜ್ಯಗಳ ಮತ ಎಣಿಕೆ ಕಾರ್ಯವು ಮೇ 4
ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ವಿರಾಮದ ಸಾಧ್ಯತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ್ದಾರೆ. ಮಾತ್ರವಲ್ಲ, ಇರಾನ್ಗೆ ಹೊಸ ಎಚ್ಚರಿಕೆ ಸಂದೇಶವನ್ನು ಟ್ರಂಪ್ ರವಾನಿಸಿದ್ದಾರೆ. ಕದನ ವಿರಾಮ ಒಪ್ಪಂದವನ್ನು ಮಾಡಿಕೊಳ್ಳಲು ಇರಾನ್ಬಯಸುತ್ತಿದೆ. ನಿಯಮಗಳು ಇನ್ನೂ ಸಾಕಷ್ಟು ಉತ್ತಮವಾಗಿಲ್ಲದ ಕಾರಣ ನಾನು ಅದನ್ನು ಮಾಡಲು ಬಯಸುವುದಿಲ್ಲ. ಯಾವುದೇ ಭವಿಷ್ಯದ ಒಪ್ಪಂದ ಉತ್ತಮವಾಗಿರಬೇಕು ಎಂದು ಟ್ರಂಪ್ ಅವರು ಹೇಳಿದರು.ಇರಾನ್ ನ ಹೊಸ ಸರ್ವೋಚ್ಚ ನಾಯಕ ಜೀವಂತವಾಗಿಲ್ಲ ಎಂದು ಕೇಳಿದ್ದೇನೆ ಎಂದು ಹೇಳುವ ಮೂಲಕ ಇರಾನ್ ಶರಣಾಗತಿಗೆ ಒತ್ತಾಯಿಸಿದ್ದಾರೆ. ಎನ್ಬಿಸಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಇರಾನ್ ವಿರುದ್ಧದ ಯುದ್ಧ ಕೊನೆಗೊಳಿಸುವ ಸ್ಪಷ್ಟ ಆಸಕ್ತಿಯ ಹೊರತಾಗಿಯೂ ಸದ್ಯ ನಡೆಯುತ್ತಿರುವ ಪರಿಸ್ಥಿತಿಗಳಿಂದ ಅತೃಪ್ತರಾಗಿರುವುದಾಗಿ ತಿಳಿಸಿದ್ದಾರೆ.
ಇಸ್ರೇಲ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿಧನವನ್ನು ಸೂಚಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಉಲ್ಬಣಗೊಂಡ ನಂತರ ಅವರು "ಕ್ಷೇಮವಾಗಿದ್ದಾರೆ" ಎಂದು ಅವರ ಕಚೇರಿ ದೃಢಪಡಿಸಿದೆ. ಡಿಜಿಟಲ್ ವೇದಿಕೆಗಳಲ್ಲಿ ವ್ಯಾಪಕವಾದ ಚರ್ಚೆ ಹುಟ್ಟು ಹಾಕಿದ ಬಳಿಕ ಈ ಸ್ಪಷ್ಟನೆ ಬಂದಿದೆ. ನೇರ ಪ್ರತಿಕ್ರಿಯೆಯಾಗಿ, ನೆತನ್ಯಾಹು ಅವರ ಕಛೇರಿಯು ವರದಿಗಳನ್ನು ತಳ್ಳಿಹಾಕಿತು, "ಇವುಗಳು ನಕಲಿ ಸುದ್ದಿಗಳು; ಪ್ರಧಾನಿ ಚೆನ್ನಾಗಿದ್ದಾರೆ. "ಇಸ್ರೇಲಿ ಪ್ರಧಾನಿ ಶುಕ್ರವಾರ ಯುಎಸ್, ಇಸ್ರೇಲ್ ಮತ್ತು ಇರಾನ್ ಒಳಗೊಂಡ ನಡೆಯುತ್ತಿರುವ ಸಂಘರ್ಷದ
ರಾಮನಗರ: ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ವೀರಪ್ಪನ್ ಪುತ್ರಿ ವಿದ್ಯಾರಾಣಿ ಅವರು ನಿನ್ನೆ ಭೆಡಿಯಾದರು. ಬಿಡದಿಯ ವಂಡರ್ಲಾ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರೋ ಒಡಿಶಾದ ಕಾಂಗ್ರೆಸ್ ಶಾಸಕರನ್ನು ಭೇಟಿ ಡಿಕೆ ಶಿವಕುಮಾರ್ ಬಂದ ವೇಳೆ ವಿದ್ಯಾರಾಣಿ ಅವರು ಭೇಟಿಯಾದರು. ಶಿವಕುಮಾರ್ ರೆಸಾರ್ಟ್ಗೆ ಭೇಟಿ ನೀಡುತ್ತಿದ್ದಾರೆಂದು ತಿಳಿದ ವಿದ್ಯಾರಾಣಿ, ತಮ್ಮ ಬೆಂಬಲಿಗರೊಂದಿಗೆ ಅಲ್ಲಿ ಕಾಯುತ್ತಿದ್ದರು. ಅವರು ಬಂದ ತಕ್ಷಣ, ಅವರು ಅವರ ಬಳಿಗೆ ಹೋಗಿ ದೇವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡುವ ಮೂಲಕ ಆಶೀರ್ವಾದ ಪಡೆದರು ಎಂದು ಮೂಲಗಳು ತಿಳಿಸಿವೆ.
ಸಬ್ಜ ಸೀಡ್ಸ್ ಅಥವಾ ಕಾಮ ಕಸ್ತೂರಿಯನ್ನು ನಾವು ದಿನನಿತ್ಯಲೂ ನೀರಿನಲ್ಲಿ ಹಾಕಿ ಸೇವನೆ ಮಾಡುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜಗಳನ್ನು ಪಡೆಯಬಹುದು. ಕೇವಲ ತಂಪು ಪಾನೀಯಗಳಿಗೆ ಸೀಮಿತವಲ್ಲ, ಇದು ಅದ್ಭುತವಾದ ಆಯುರ್ವೇದ ಗುಣಗಳನ್ನು ಹೊಂದಿರುವ ಬೀಜವಾಗಿದೆ. ಬೇಸಿಗೆ ಸಮಯದಲ್ಲಿ ಇದನ್ನು ಕುಡಿಯುವುದಿರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. 1. ದೇಹದ ಉಷ್ಣತೆ ಕಡಿಮೆ ಮಾಡುತ್ತದೆಕಾಮ ಕಸ್ತೂರಿ ಬೀಜಗಳು ನೈಸರ್ಗಿಕವಾಗಿ ದೇಹವನ್ನು ತಂಪಾಗಿಸುವ ಗುಣ ಹೊಂದಿವೆ. ಬೇಸಿಗೆಯಲ್ಲಿ ಅಥವಾ ಅತಿಯಾದ
ಆಂಬ್ಯುಲೆನ್ಸ್ ವಾಹನ ಚಾಲಕರು ಯಾವಾಗಲು ತಮ್ಮ ಜೀವದ ಹಂಗನ್ನು ತೊರೆದು ಬೇರೊಂದು ಜೀವದ ಉಳಿವಿಗಾಗಿ ಪ್ರತಿನಿತ್ಯಲೂ ಹೋರಾಟವನ್ನು ನಡೆಸುತ್ತಲೆ ಇರುತ್ತಾರೆ. ಇಲ್ಲೊಬ್ಬ ಆಂಬುಲೆನ್ಸ್ ವಾಹನ ಚಾಲಕನೊಬ್ಬ ತನಗೆ ತುರ್ತು ಕರೆ ಬಂದಾಗ ನಡೆದುಕೊಂಡ ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಯಾಗಿದೆ. ಇದು ಯಾವ ರಾಜ್ಯದಲ್ಲಿ ನಡೆದಿದೆ ಎಂದು ವರದಿಯಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಆಂಬ್ಯುಲೆನ್ಸ್ ಚಾಲಕ ಆಸ್ಪತ್ರೆಯ ಒಳಗಡೆ ಫೋನ್ ನೋಡುತ್ತಾ
ಹೈದರಾಬಾದ್: ಎಚ್ಐವಿ ಇರುವುದಕ್ಕೆ ತನ್ನದೊಂಗಿನ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದರೆಂದು ಕೋಪಗೊಂಡ ಹುಡುಗ ಎಚ್ಐವಿ ಸೋಂಕಿತ ರಕ್ತವನ್ನು ಹುಡುಗಿಗೆ ಚುಚ್ಚಿರುವ ಆಘಾತಕಾರಿ ಘಟನೆ ಹೈದರಾಬಾದ್ನಲ್ಲಿ ವರದಿಯಾಗಿದೆ. ಮಾರ್ಚ್ 11 ರಂದು ಈ ಘಟನೆ ನಡೆದಿದ್ದು, ಆಕೆಯ ಮನೆಯಲ್ಲಿ ಆರೋಪಿ ಹುಡುಗ ಸಂತ್ರಸ್ತೆಗೆ ಹೆಚ್ಐವಿ ಸೋಂಕಿತ ರಕ್ತವನ್ನು ಬಲವಂತವಾಗಿ ಚುಚ್ಚಿದ್ದಾನೆ ಎಂದು ದೂರಲಾಗಿದೆ.ಪೊಲೀಸರ ಪ್ರಕಾರ, ಆರೋಪಿ ಮತ್ತು ಸಂತ್ರಸ್ತೆ ಸಂಬಂಧಿಕರಾಗಿದ್ದು, ಆಕೆಯ ಪೋಷಕರು ಆರಂಭದಲ್ಲಿ ತಮ್ಮ ಮಗಳ
ಬೆಂಗಳೂರು: ಆಪರೇಷನ್ ಕಮಲ ಭೀತಿ ಹಿನ್ನೆಲೆ ಡಿಕೆ ಶಿವಕುಮಾರ್ ಅವರ ಸುಪರ್ಧಿಯಲ್ಲಿರುವ ಒಡಿಸ್ಸಾದ ಶಾಸಕರನ್ನು ಭೇಟಿಯಾಗಲು ಬ್ಲಾಂಕ್ ಚೆಕ್ ಸಮೇತ ಇಬ್ಬರು ವ್ಯಕ್ತಿಗಳು ವಂಡೇರ್ಲಾ ಹೋಟೆಲ್ಗೆ ಬಂದಿದ್ದಾರೆ.ಒಡಿಸ್ಸಾದ ರಾಜ್ಯಸಭೆ ಚುನಾವಣೆ ಹತ್ತಿರುವಾಗುತ್ತಿರು ಬೆನ್ನಲೇ ಆಪರೇಷನ್ ಕಮಲ ಭೀತಿ ಹಿನ್ನೆಲೆಯಲ್ಲಿ ಒಡಿಶಾದ 8 ಮಂದಿ ಶಾಸಕರನ್ನು ಡಿಕೆಶಿ ಸುಪರ್ದಿಗೆ ಹೈಕಮಾಂಡ್ ನೀಡಿದೆ. ಇದೀಗ ವಂಡೇರ್ಲಾ ಹೋಟೆಲ್ನಲ್ಲಿರುವ ಒಡಿಸ್ಸಾ ಶಾಸಕರನ್ನು ಖರೀದಿ ಮಾಡಲು ಒಡಿಸ್ಸಾದ ಇಬ್ಬರು ವ್ಯಕ್ತಿಗಳು ಬ್ಲಾಕ್ ಚೆಕ್ ಸಮೇತ ಬಂದಿದ್ದಾರೆ.
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೂವರು ರಿಸರ್ವ್ ಸಬ್ ಇನ್ಸ್ಪೆಕ್ಟರ್ಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹೆಗ್ಗೆರೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 150ಎರಲ್ಲಿ ಕಾರು ಮತ್ತು ಲಾರಿಯ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮೀಸಲು ಸಬ್ ಇನ್ಸ್ಪೆಕ್ಟರ್ಗಳು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಮೂವರು ಮೀಸಲು ಸಬ್ ಇನ್ಸ್ಪೆಕ್ಟರ್ಗಳಾದ ಮಂಜುನಾಥ್, ಅಂಬರೀಷ್ ಮತ್ತು ಸಚಿನ್ ಎಂದು ಗುರುತಿಸಲಾಗಿದೆ. ಇದೇ ವೇಳೆ ಕಾರಿನಲ್ಲಿ ಇದ್ದ ಪಿಎಸ್ಐ ಈಶ್ವರ್ ಹಾಗೂ ರಿಸರ್ವ್ ಸಬ್ ಇನ್ಸ್ಪೆಕ್ಟರ್ ಮಹಾಂತೇಶ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಗೆ ಕೇವಲೇ ತಿಂಗಳು ಬಾಕಿ ಇದೆ. ಈ ಮಧ್ಯೆ ಎಲ್ಲ ಪಕ್ಷಗಳಿಂದ ಚುನಾವಣೆಗೆ ಬಿರುಸಿನ ಸಿದ್ಧತೆ ನಡೆಯುತ್ತಿದೆ. ಈ ಮಧ್ಯೆ ಪಿಣರಾಯಿ ವಿಜಯನ್ ಸರ್ಕಾರ ಅಧಿಕಾರ ಉಳಿಸಿಕೊಳ್ಳಲು ಟೊಂಕಕಟ್ಟಿದೆ.ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಕೇರಳದಲ್ಲಿ ಸರ್ಕಾರದ ತನ್ನ ನಿಲುವುಗಳಲ್ಲಿ ಯೂಟರ್ನ್ ಹೊಡೆದಿದೆ. ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶ ವಿಷಯದಲ್ಲಿ ತನ್ನ ಹಿಂದಿನ ನಿಲುವನ್ನು ಸರ್ಕಾರ ಬದಲಾಯಿಸಿಕೊಂಡಿದೆ.ಮಹತ್ವದ ಬೆಳವಣಿಗೆಯಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇವಾಲಯಕ್ಕೆ ಪ್ರವೇಶಕ್ಕೆ ಸಂಬಂಧಿಸಿದಂತೆ ಸಾಂಪ್ರದಾಯಿಕ ನಿರ್ಬಂಧ ಮುಂದುವರಿಸುವಿಕೆಗೆ ಬೆಂಬಲಿಸುವುದಾಗಿ ಘೋಷಿಸಿದೆ. ಈ ಮೂಲಕ ತನ್ನ ಹಿಂದಿನ ನಿಲುವಿನಿಂದ ಸರ್ಕಾರ ಹಿಂದೆ ಸರಿದಿದೆ.
ಮುಂಬೈ: ಭಾರತದಲ್ಲಿ ಎಲ್ಪಿಸಿ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬೆಳವಣಿಗೆ ನಡೆದಿದೆ. ಯುದ್ಧಪೀಡಿತ ಪ್ರದೇಶದ ಈ ಜಲಸಂಧಿಯಲ್ಲಿ ಭಾರತದ ಎರಡು ಹಡಗುಗಳಿಗೆ ಗ್ರೀನ್ ಸಿಗ್ನಲ್ ದೊರಕಿದೆ. ಈ ಮೊದಲು ಒಂದು ಹಡಗಿಗೆ ಹೊರ್ಮುಜ್ ಜಲಸಂಧಿಯಲ್ಲಿ ಹಸಿರು ನಿಶಾನೆ ತೋರಲಾಗಿದೆ. ಇದೀಗ ಮತ್ತೆರಡು ಹಡಗುಗಳು ಈ ಜಲಸಂಧಿಯನ್ನು ದಾಟಿ ಬಂದಿವೆ. ಜಲಸಂಧಿ ದಾಟಿರುವ ಭಾರತದ ಹಡಗುಗಳ ಒಟ್ಟು ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.ಜಲಸಂಧಿಯ ಪಶ್ಚಿಮ ಭಾಗದಲ್ಲಿ ಇನ್ನೂ ಭಾರತದ 22 ಹಡಗುಗಳು ತಮ್ಮ ಅವಕಾಶಕ್ಕಾಗಿ ಕಾಯುತ್ತ ನಿಂತಿವೆ. ಅವುಗಳಿಗೆ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಲು ನೆರವು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆ ಪ್ರದೇಶದ ವಿವಿಧ ದೇಶಗಳ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸುತ್ತಿದೆ.