ವಡೋದರಾ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಕೊನೆಗೂ ರೋಚಕವಾಗಿ 4 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 300 ರನ್ ಗಳಿಸಿತ್ತು. 301 ರನ್ ಗಳ ಗುರಿ ಬೆನ್ನತ್ತಿದ ಭಾರತಕ್ಕೆ ವಿರಾಟ್ ಕೊಹ್ಲಿ ಭರ್ಜರಿ 93 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಆದರೆ ಕೊಹ್ಲಿ ಔಟಾದ ಬಳಿಕ ಭಾರತ ಕೊಂಚ ಕುಸಿತಕ್ಕೊಳಗಾಯಿತು. ಕೊನೆಯ ಐದು ಓವರ್ ಗಳಲ್ಲಿ ರನ್ – ಬಾಲ್ ಸಮ ಎನ್ನುವ ಸ್ಥಿತಿಯಿತ್ತು. ಕ್ರೀಸ್ ನಲ್ಲಿದ್ದ ಕೆಎಲ್ ರಾಹುಲ್ ಇದ್ದಿದ್ದು ಭಾರತಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು.
ವಡೋದರಾ: ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಇಂದು ಹೊಸ ವಿಶ್ವ ದಾಖಲೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ವಡೋದರಾದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಈ ದಾಖಲೆ ಮಾಡಿದ್ದಾರೆ. ಇಂದು ಅರ್ಧಶತಕ ಗಳಿಸಿ ಆಡುತ್ತಿರುವ ಕೊಹ್ಲಿ 28,017 ರನ್ ಗಳಿಸುವ ಮೂಲಕ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಅವರನ್ನು ಹಿಂದಿಕ್ಕಿ ವಿಶ್ವ ನಂ.2 ಆಟಗಾರೆನಿಸಿದರು. ವಿಶೇಷವೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಭಾರತೀಯರೇ ಆದ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ.
ಬೆಂಗಳೂರು: ಮನರೇಗಾ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸವಾಲೆಸಿದರುವ ಎಚ್ಡಿ ಕುಮಾರಸ್ವಾಮಿಗೆ ಇದೀಗ ಪಂಥಾಹ್ವಾನ ಮಾಡಿರುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಪಂಥಾಹ್ವಾನ ಸ್ವೀಕರಿಸಿದ್ದೇನೆ. ನಾನು ಯಾವಾಗ ಬೇಕಾದ್ರೂ ರೆಡಿ ಇದ್ದಿದ್ದು, ಅವರ ಜತೆ ಸಾರ್ವಜನಿಕ ಚರ್ಚೆಗೂ ಸಿದ್ದ, ಇಲ್ಲದಿದ್ದರೆ ಟಿವಿಯಲ್ಲಿ ಚರ್ಚೆಗೂ ಸಿದ್ದ ಸಿದ್ದ. ವಿಧಾನಸಭೆಯಲ್ಲಾದ್ರೂ ಚರ್ಚೆಗೆ ಬರಲಿ. ಅವರು ಯಾವಾಗ ಹೇಳ್ತಾರೆ ಹೇಳಿ, ನಾನು ಡಿಬೆಟ್ಗೆ ರೆಡಿ. ಅವರ ಪಂಥಾಹ್ವಾನ ಸ್ವೀಕಾರ ಮಾಡಿದ್ದೇನೆ ಎಂದು ತಿಳಿಸಿದರು.
ಮಂಗಳೂರು: ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಇದನ್ನು ವಾಪಸ್ಸು ಕಳಿಸಿಲ್ಲ, ತಿರಸ್ಕರಿಸಿಯೂ ಇಲ್ಲ ಅಥವಾ ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಮಸೂದೆಯ ಬಗ್ಗೆ ವಿವರಣೆ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ವಿಪಕ್ಷಗಳಿಂದ ಭಾರೀ ವಿರೋಧಕ್ಕೆ ಕಾರಣವಾದ ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಬಗ್ಗೆ ನಿನ್ನೆ ರಾಜ್ಯಪಾಲರ ತಿರಸ್ಕರಿಸಿದರು ಎಂಬ ಸುದ್ದಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಇಂದು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.ಇನ್ನೂ ಬಳ್ಳಾರಿ ಬ್ಯಾನರ್ ತೆರವು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆ ಬಗ್ಗೆ
ಶರಿಯತ್ಪುರ [ಬಾಂಗ್ಲಾದೇಶ: ಶರಿಯತ್ಪುರದ ಜಜಿರಾ ಉಪಜಿಲಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೆ ಏರಿದೆ ಎಂದು ವರದಿಯಾಗಿದೆ. ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (DMCH) ಚಿಕಿತ್ಸೆ ಪಡೆಯುತ್ತಿದ್ದಾಗ ಎಂಡಿ ನಬಿನ್ ಹೊಸೈನ್ (22) ಸಾವನ್ನಪ್ಪಿದ ನಂತರ, ಸ್ಫೋಟದಲ್ಲಿ ಗಾಯಗೊಂಡ ಮತ್ತೊಬ್ಬ ವ್ಯಕ್ತಿ ಅರ್ಮಾನ್ ನಯನ್ ಮೊಲ್ಲಾ (25) ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ. ಬಿಲಾಶ್ಪುರ ಒಕ್ಕೂಟದ ಬೆಪರಿಕಂಡಿ ಗ್ರಾಮದ ತಗಡಿನ ಶೆಡ್ ಮನೆಯೊಳಗೆ ಗುರುವಾರ ಮುಂಜಾನೆ ಸ್ಫೋಟ ಸಂಭವಿಸಿದೆ
ವಡೋದರಾ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಹೊಟ್ಟೆಗೆ ಮಾಡಿಕೊಂಡಿದ್ದ ಗಾಯದಿಂದ ಚೇತರಿಸಿಕೊಂಡು ಈಗಷ್ಟೇ ತಂಡಕ್ಕೆ ಬಂದಿರುವ ಶ್ರೇಯಸ್ ಅಯ್ಯರ್ ಮತ್ತೆ ಅದ್ಭುತ ರನೌಟ್ ಮೂಲಕ ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯಾ ಸರಣಿ ವೇಳೆ ಶ್ರೇಯಸ್ ಅಯ್ಯರ್ ಕ್ಯಾಚ್ ಹಿಡಿಯುವ ಯತ್ನದಲ್ಲಿ ನೆಲಕ್ಕೆ ಬಿದ್ದು ಹೊಟ್ಟೆಗೆ ಗಾಯ ಮಾಡಿಕೊಂಡಿದ್ದರು. ಅವರ ಗಾಯ ಎಷ್ಟು ಗಂಭೀರವಾಗಿತ್ತೆಂದರೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಇದರಿಂದ ಚೇತರಿಸಿಕೊಂಡು ಎರಡೇ ತಿಂಗಳಲ್ಲಿ ಅವರು ಮತ್ತೆ ಕಣಕ್ಕಿಳಿದಿದ್ದಾರೆ.
ತುಮಕೂರು: ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಂಡ ಹೊಟ್ಟೆ ನೋವು ತಾಳಲಾರದೆ ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ತುಮಕೂರು ತಾಲೂಕಿನ ಬ್ಯಾತ ಗ್ರಾಮದಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಗುಲ್ಬರ್ಗ ಮೂಲದ ಕೀರ್ತನಾ (19) ಎಂದು ಗುರುತಿಸಲಾಗಿದೆ. ಗುಲ್ಬರ್ಗದ ಕಲಗಿ ತಾಲೂಕಿನ ಸಾಲಹಳ್ಳಿಯ ಕೀರ್ತನಾ ಕೆಲಸ ಅರಸಿ ತುಮಕೂರಿನಲ್ಲಿದ್ದ ಚಿಕ್ಕಪ್ಪನ ಮನೆಯಲ್ಲಿ ಬಂದಿದ್ದಳು. ಕೆಲಸ ಸಿಗದ ಕಾರಣ ಮನೆಯಲ್ಲೆ ವಾಸವಾಗಿದ್ದಳು.
ಲಕ್ಕುಂಡಿ: ತಮ್ಮ ಜಮೀನಿನಲ್ಲಿ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಕೊಟ್ಟ ಬಳಿಕ ಈಗ ಬಡ ಕುಟುಂಬ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಇದು ಯಾಕೆ ಹೀಗಾಯ್ತು ಇಲ್ಲಿದೆ ನೋಡಿ ವಿವರ. ಲಕ್ಕುಂಡಿಯಲ್ಲಿ ಮನೆ ಕಟ್ಟಲು ಪಾಯ ತೆಗೆಯುವಾಗ ತಮ್ಮ ಜಮೀನಿನಲ್ಲಿ ನಿಧಿ ಸಿಕ್ಕಿತ್ತು ಎಂದು ಆ ಬಡ ಕುಟುಂಬ ಪ್ರಾಮಾಣಿಕವಾಗಿ ಇದನ್ನು ಸರ್ಕಾರಕ್ಕೆ ಒಪ್ಪಿಸಿತ್ತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿಧಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಈಗ ನಿಜವಾಗಿ ಆ ಬಡ ಕುಟುಂಬಕ್ಕೆ ಸಂಕಷ್ಟ ಶುರುವಾಗಿದೆ. ನಿಧಿ ಸಿಕ್ಕ ಬಳಿಕ ಆ ಜಮೀನನ್ನು ಸರ್ಕಾರ ವಶಕ್ಕೆ ಪಡೆದುಕೊಂಡಿದೆ.
ಬೀದರ್: ರಾಜ್ಯ ರಾಜಕರಾಣದಲ್ಲಿ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಗುದ್ದಾಟ ಬೆನ್ನಲ್ಲೇ ಬೀದರ್ನಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯವನ್ನು ನುಡಿದಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆಯಿಲ್ಲ. ಯುಗಾದಿವರೆಗೂ ಸರ್ಕಾರ ಏನೂ ಬದಲಾವಣೆ ಆಗೋದಿಲ್ಲ ಎಂದರು. ಇದೀಗ ಉದ್ಭವಿಸಿರುವ ಸಿಎಂ ಬದಲಾವಣೆ ವಿಚಾರದಲ್ಲಿ ಸಿದ್ದರಾಮಯ್ಯನವರೇ ಬಿಟ್ಟುಕೊಟ್ಟರೆ ಬೇರೆಯವರು ಆಗಬಹುದು. ಆದರೆ, ಸಿಎಂ ಸಿದ್ದರಾಮಯ್ಯ ಬದಲಾವಣೆ ಯಾರ ಕೈಯಲ್ಲೂ ಮಾಡೋಕೆ ಆಗಲ್ಲ ಎಂದರು.
ಕೋಲ್ಕತ್ತಾ: ನಟ-ಗಾಯಕ ಮತ್ತು 2007 ರಲ್ಲಿ ಇಂಡಿಯನ್ ಐಡಲ್ ಸೀಸನ್ 3 ವಿಜೇತ ಪ್ರಶಾಂತ್ ತಮಂಗ್ ಭಾನುವಾರ ತಮ್ಮ 43 ನೇ ವಯಸ್ಸಿನಲ್ಲಿ ನಿಧನರಾದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ, "'ಇಂಡಿಯನ್ ಐಡಲ್' ಖ್ಯಾತಿಯ ಜನಪ್ರಿಯ ಗಾಯಕ ಮತ್ತು ರಾಷ್ಟ್ರೀಯ ಖ್ಯಾತಿಯ ಕಲಾವಿದ ಪ್ರಶಾಂತ್ ತಮಂಗ್ ಅವರ ಇಂದು ಹಠಾತ್ ಮತ್ತು ಅಕಾಲಿಕ ನಿಧನದಿಂದ ದುಃಖಿತನಾಗಿದ್ದೇನೆ. ನಮ್ಮ ಡಾರ್ಜಿಲಿಂಗ್ ಬೆಟ್ಟಗಳಲ್ಲಿ ಅವರ ಬೇರುಗಳು ಮತ್ತು ಒಂದು ಕಾಲದಲ್ಲಿ ಕೋಲ್ಕತ್ತಾ ಪೊಲೀಸರೊಂದಿಗಿನ ಸಂಬಂಧವು ಅವರನ್ನು ಬಂಗಾಳದಲ್ಲಿ ನಮಗೆ ವಿಶೇಷವಾಗಿ ಪ್ರಿಯರನ್ನಾಗಿ ಮಾಡಿತು. ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅನುಯಾಯಿಗಳಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ತಿರುವನಂತಪುರಂ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಶಬರಿಮಲೆ ಚಿನ್ನ ನಷ್ಟ ಪ್ರಕರಣವನ್ನು ಕೇರಳದ ಆಡಳಿತಾರೂಢ ಎಡಪಕ್ಷಗಳನ್ನು ಗುರಿಯಾಗಿಸಿಕೊಂಡು, ನಿಜವಾದ ಅಪರಾಧಿಗಳನ್ನು "ರಕ್ಷಿಸುತ್ತಿದ್ದಾರೆ" ಎಂದು ಆರೋಪಿಸಿದರು ಮತ್ತು ಈ ಸಂವೇದನಾಶೀಲ ಪ್ರಕರಣದ ಬಗ್ಗೆ ತಟಸ್ಥ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರತಿಷ್ಠಿತ ತಿರುವನಂತಪುರಂ ನಗರ ನಿಗಮದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಮೊದಲ ಬಾರಿಗೆ ಕೇರಳ ರಾಜಧಾನಿಗೆ ಅಮಿತ್ ಶಾ ಭೇಟಿ ನೀಡಿದರು. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ಒಟ್ಟಿಗೆ ನಡೆಯಲಿವೆ ಎಂದು ಹೇಳಿದ ಅವರು, ಪೂರ್ವ ಮತ್ತು
ಬೆಂಗಳೂರು: ನಟ ಡಾಲಿ ಧನಂಜಯ್ ಅವರು 2025ರ ಫೆಬ್ರವರಿ 16ರಂದು ವೈದ್ಯೆ ಡಾ.ಧನ್ಯತಾ ಅವರನ್ನು ಮದುವೆಯಾದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ರೀಲ್ಸ್ನಲ್ಲಿ ಧನ್ಯತಾ ಹೊಟ್ಟೆಯನ್ನು ನೋಡಿ, ಶೀಘ್ರದಲ್ಲೇ ಈ ದಂಪತಿ ಮಗುವನ್ನು ಸ್ವಾಗತಿಸಲಿದ್ದಾರೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಧನ್ಯತಾ ಅವರು ಈಚೆಗೆ ತಮ್ಮ ಕುಟುಂಬ ಸಮೇತ ಟ್ರಿಪ್ಗೆ ಹೋಗಿದ್ದಾರೆ. ಅಲ್ಲಿ ತೆಗೆದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೋಟೋದಲ್ಲಿ ಧನ್ಯತಾ ಹೊಟ್ಟೆ ನೋಡಿ, ಇವರು ಗರ್ಭಿಣಿ ಎಂದು ಹೇಳುತ್ತಿದ್ದಾರೆ. ಆದರೆ ದಂಪತಿ ಎಲ್ಲೂ ಈ ವಿಚಾರದ ಬಗ್ಗೆ ಹೇಳಿಕೊಂಡಿಲ್ಲ.
ಬೆಂಗಳೂರು: 2026ರ ರಾಜ್ಯ ಬಜೆಟ್ ಮಂಡನೆಗೆ ರಾಜ್ಯ ಸರ್ಕಾರ ತೀರ್ಮಾನ ನಡೆಸಿದೆ. ಮಾರ್ಚ್ 6ರಂದು ಬಜೆಟ್ ಮಂಡಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಆಪ್ತ ವಲಯಗಳಿಂದ ತಿಳಿದುಬಂದಿದೆ.ಇನ್ನೂ ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ 5 ರಿಂದ ಬಜೆಟ್ ಅಧಿವೇಶನ ಶುರುವಾಗಲಿದೆ. ಅಂದು ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು, ಮಾರ್ಚ್ 6 ರಂದು ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.ಕುರ್ಚಿ ಗುದ್ದಾಟದ ನಡುವೆ ಸಿಎಂ ಸಿದ್ದರಾಮಯ್ಯ ಅವರು ದಾಖಲೆ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. 16 ಬಜೆಟ್ಗಳನ್ನ
ಮೆಹೆಂದಿ ಹಚ್ಚಿದ್ದು ಚೆನ್ನಾಗಿ ಕೆಂಪಾಗಲು ಅಥವಾ ಕಪ್ಪಾಗಲು ನೀವು ಈ ಕೆಳಗಿನ ಸುಲಭ ಮತ್ತು ಪರಿಣಾಮಕಾರಿ ಮನೆಮದ್ದುಗಳನ್ನು ಅನುಸರಿಸಬಹುದು. ಇದರಿಂದ ಮತ್ತಷ್ಟು ನಿಮ್ಮ ಮೆಹೆಂದಿ ಬಣ್ಣ ಚೆನ್ನಾಗಿರುತ್ತದೆ. ಕೈಗಳನ್ನು ಸ್ವಚ್ಛಗೊಳಿಸಿ: ಮೆಹೆಂದಿ ಹಚ್ಚುವ ಮೊದಲು ಕೈಗಳನ್ನು ಸೋಪಿನಿಂದ ತೊಳೆದು ಚೆನ್ನಾಗಿ ಒಣಗಿಸಿಕೊಳ್ಳಿ. ನೀಲಗಿರಿ ಎಣ್ಣೆ: ಮೆಹೆಂದಿ ಹಚ್ಚುವ ಮೊದಲು ಕೈಗಳಿಗೆ ಸ್ವಲ್ಪ ನೀಲಗಿರಿ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದು ಬಣ್ಣ ಗಾಢವಾಗಲು ಸಹಾಯ ಮಾಡುತ್ತದೆ. ಹೆಚ್ಚು ಸಮಯ ಬಿಡಿ: ಮೆಹೆಂದಿಯನ್ನು ಹಾಕಿದ ಬಳಿಕ ಕನಿಷ್ಠ 5 ರಿಂದ 8 ಗಂಟೆಗಳ ಕಾಲ ಕೈಯಲ್ಲೇ ಬಿಡಿ. ಸಾಧ್ಯವಾದರೆ
ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ. ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದಾಗ ಮುಂಬೈನಲ್ಲಿ ವಿವಾದವೊಂದು ಸೃಷ್ಟಿಯಾಯಿತು. ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಮತ್ತು ಇತರ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ತೀಕ್ಷ್ಣ ಪ್ರತಿಕ್ರಿಯೆಗಳನ್ನು ನೀಡಿವೆ.ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಮುಂಚಿತವಾಗಿ, ಅಣ್ಣಾಮಲೈ ಮುಂಬೈನಲ್ಲಿ ತಮಿಳು ಮಾತನಾಡುವ ಜನಸಂಖ್ಯೆ ಗಣನೀಯವಾಗಿ ಇರುವ ಧಾರಾವಿ ಮತ್ತು ಸಿಯಾನ್-ಕೋಲಿವಾಡ ಪ್ರದೇಶಗಳಲ್ಲಿ ಪ್ರಚಾರ ಮಾಡುತ್ತಿದ್ದರು.ಮುಂಬೈ (ಮುಂಬೈ) ಮಹಾರಾಷ್ಟ್ರ ನಗರವಲ್ಲ ಆದರೆ ಅಂತರರಾಷ್ಟ್ರೀಯ ನಗರ. ಇದು ₹75,000 ಕೋಟಿ ಬಜೆಟ್ ಹೊಂದಿದೆ.
ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ರಿಷಭ್ ಪಂತ್ ಬದಲಿಗೆ ಧ್ರುವ್ ಜುರೆಲ್ ಅವರನ್ನು ಆಯ್ಕೆ ಮಾಡಲಾಗಿದೆ. ವಡೋದರಾದಲ್ಲಿ ನಡೆದ ನೆಟ್ ಸೆಷನ್ನಲ್ಲಿ ಎಸೆತವೊಂದು ಪಕ್ಕೆಲುಬಿನ ಮೇಲೆ ಬಡಿದು ಪಕ್ಕೆಲುಬಿನ ನೋವು ಕಾಣಿಸಿಕೊಂಡ ಕಾರಣ ಪಂತ್ ಅವರನ್ನು ಏಕದಿನ ಸರಣಿಯಿಂದ ಹೊರಗಿಡಲಾಯಿತು. ಭಾನುವಾರ ನಡೆದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಪಂತ್ ತೀವ್ರ ನೋವಿನಿಂದ ಬಳಲುತ್ತಿದ್ದರು ಮತ್ತು ಅವರು ಏಕದಿನ ಸರಣಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತರ ಪ್ರದೇಶ ಪರ ಜುರೆಲ್ ಅದ್ಭುತ ಫಾರ್ಮ್ನಲ್ಲಿದ್ದಾರೆ ಮತ್ತು ಬಿಸಿಸಿಐ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಅವರು ಈಗಾಗಲೇ ತಂಡದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ತಿಳಿಸಲಾಗಿದೆ.
ಗುಜರಾತ್: ಗಿರ್ ಸೋಮನಾಥ ಜಿಲ್ಲೆಯ ಸೋಮನಾಥ ದೇವಾಲಯವನ್ನು ರಕ್ಷಿಸುವಲ್ಲಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಆಯೋಜಿಸಲಾದ 'ಶೌರ್ಯ ಯಾತ್ರೆ' ಎಂಬ ವಿಧ್ಯುಕ್ತ ಮೆರವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ನೇತೃತ್ವ ವಹಿಸಿದ್ದರು.ಸೋಮನಾಥ ಸ್ವಾಭಿಮಾನ್ ಪರ್ವ್ನ ಭಾಗವಾಗಿ ಆಯೋಜಿಸಲಾದ ಈ ಯಾತ್ರೆಯಲ್ಲಿ 108 ಕುದುರೆಗಳ ಮೆರವಣಿಗೆ ನಡೆಯಿತು, ಇದು ಶೌರ್ಯ ಮತ್ತು ತ್ಯಾಗವನ್ನು ಪ್ರತಿಬಿಂಬಿಸುತ್ತದೆ.
ಕೇರಳ: ಪಾಲಕ್ಕಾಡ್ ಶಾಸಕ ಮತ್ತು ಮಾಜಿ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ರಾಹುಲ್ ಮಮ್ಕೂಟತಿಲ್ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ ಹೊಸ ಲೈಂಗಿಕ ದೌರ್ಜನ್ಯದ ದೂರಿನ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ಮಧ್ಯರಾತ್ರಿ ಪಾಲಕ್ಕಾಡ್ನ ಹೋಟೆಲ್ನಿಂದ ವಶಕ್ಕೆ ಪಡೆಯಲಾಯಿತು.ಇತರ ಇಬ್ಬರು ಮಹಿಳೆಯರ ದೂರುಗಳ ಆಧಾರದ ಮೇಲೆ ಈಗಾಗಲೇ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಮಮ್ಕೂಟತಿಲ್, ಆ ಪ್ರಕರಣಗಳಲ್ಲಿ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ನ್ಯಾಯಾಲಯದಿಂದ ಪಡೆದಿದ್ದರು.ಶನಿವಾರ (ಜನವರಿ 10, 2026) ಮಧ್ಯರಾತ್ರಿಯ ಸುಮಾರಿಗೆ ನಾಟಕೀಯ ಮತ್ತು ವಿವೇಚನಾಯುಕ್ತ ಕಾರ್ಯಾಚರಣೆಯಲ್ಲಿ,
ಬೆಂಗಳೂರು: ನಿನ್ನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಲವೆಡೆ ಜಿಟಿ ಜಿಟಿ ಮಳೆಯಾಗಿದ್ದು, ಚಳಿಗೆ ಸುಸ್ತಾಗಿದ್ದ ಮಂದಿಗೆ ಇದೀಗ ವರುಣನ ಆಗಮನ ವಾತಾವರಣದಲ್ಲಿ ಭಾರೀ ಬದಲಾವಣೆಯನ್ನು ತಂದಿದೆ. ಶನಿವಾರ ಮಳೆಯಾಗುವ ಮೂಲಕ ರಾಜ್ಯದಲ್ಲಿ ಈ ವರ್ಷದ ಮೊದಲ ಮಳೆ ಆಗಿದೆ. ಇನ್ನೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ವಿಪರೀತ ಚಳಿಯೊಂದಿಗೆ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಹೌದು, ಇಂದಿನಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ
ಲಕ್ಕುಂಡಿ: ಮನೆ ಕಟ್ಟಲೆಂದು ಪಾಯ ಅಗೆಯುವ ವೇಳೆ ನಿಧಿ ಸಿಕ್ಕ ಘಟನೆ ಲಕ್ಕುಂಡಿಯ ನಡೆದಿದೆ. ಸ್ಥಳಕ್ಕೆ ಡಿಸಿ ಹಾಗೂ ಎಸ್ಪಿ ಸ್ಥಳಕ್ಕೆ ದೌಡಯಿಸಿದ್ದಾರೆ. ತಾಮ್ರದ ತಂಬಿಗೆಯೊಳಗೆ ಅರ್ಧ ಕೆಜಿಯಷ್ಟು ಚಿನ್ನ ಪತ್ತೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕರಿಗಳ ನಿರ್ದೇಶನದಂತೆ ತಾಮ್ರದ ತಂಬಿಗೆಯನ್ನು ಒಡೆದು, ಪರಿಶೀಲನೆ ನಡೆಸಲಾಗಿದೆ. ಕಸ್ತೂರಿ ಹಾಗೂ ಪ್ರಜ್ವಲ್ ಎಂಬ ತಾಯಿ ಮಗ ಇಬ್ಬರು ತಮ್ಮ ಮನೆಯನ್ನು ಕಟ್ಟಲು ಪಾಯ ತೆಗೆಯುವಾಗ ನಿಧಿ ಪತ್ತೆಯಾಗಿದೆ. ಪ್ರಾಚೀನ ಕಾಲದ ಕಿವಿಯೊಳೆ, ಉಂಗುರ, ಹಾರಗಳು, ನಾಗನಿಗೆ ಸಂಬಂಧ ಪಟ್ಟ ಚಿನ್ನ ಪತ್ತೆಯಾಗಿದೆ.
ಬೆಳ್ತಂಗಡಿ: ಶುಕ್ರವಾರ ರಾತ್ರಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಎರಡನೇ ಮತ್ತು ಮೂರನೇ ಹೇರ್ ಪಿನ್ ತಿರುವಿನಲ್ಲಿ ಕಾಡು ಆನೆಯೊಂದು ಕಾಣಿಸಿಕೊಂಡಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾದ ಘಟನೆ ವರದಿಯಾಗಿದೆ.ರಾತ್ರಿ 9.45 ರ ಸುಮಾರಿಗೆ ಆನೆ ಮರವನ್ನು ಮುರಿದು ರಸ್ತೆಯ ಮಧ್ಯದಲ್ಲಿ ನಿಂತು ಅದನ್ನು ತಿನ್ನುತ್ತ ನಿಂತಿದೆ. ಈ ಸಮಯದಲ್ಲಿ, ವಾಹನ ಸವಾರರು ಆನೆಯನ್ನು ಮತ್ತೆ ಕಾಡಿಗೆ ಓಡಿಸಲು ಪ್ರಯತ್ನಿಸಿದರು. ಆದರೆ, ಆನೆ ಸ್ಥಳದಿಂದ ಚಲಿಸದ ಕಾರಣ, ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲಬೇಕಾಯಿತು.
ಬೆಂಗಳೂರು: ಮುಂದಿನ 24ಗಂಟೆಗಳಲ್ಲಿ ಕರ್ನಾಟಕದ ಉತ್ತರ ಒಳನಾಡು ಭಾಗದಲ್ಲಿ ಶೀತಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನನ್ಸೂಚನೆ ನೀಡಿದೆ. ಮುನ್ಸೂಚನೆಯಂತೆ ರಾಜ್ಯದ ಒಳನಾಡು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸಾಧಾರಣಕ್ಕಿಂತಲೂ ಮೂರರಿಂದ ಆರು ಸೆಲ್ಸಿಯಸ್ನಷ್ಟು ಕುಸಿಯಲಿದ್ದು, ಮಂಜು ಮುಸುಕಿದ ವಾತಾವರಣ ಸೃಷ್ಟಿಯಾಗಲಿದೆ ಎಂದು ಹೇಳಿದೆ. ವಿಜಯಪುರದಲ್ಲಿ ಕಳೆದ 24 ಗಂಟೆಗಳಲ್ಲಿ ಚಳಿ ಗಾಳಿ ವಿಪರೀತ ಇದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು: ವಿಚ್ಛೇದಿತ ಮಹಿಳೆಯನ್ನು ಮದುವೆಯಾಗಿ ಆಕೆಯಿಂದ ₹36 ಲಕ್ಷ ಪಡೆದು ವಂಚನೆ ಮಾಡಿದ ಘಟನೆ ಬಗ್ಗೆ ಎಫ್ಐಆರ್ ದಾಖಲಾಗಿದೆ. 10 ವರ್ಷಗಳಿಂದ ಪರಿಚಯವಾಗಿದ್ದ ಮೋಗಹನ್ ಎಂಬವರನ್ನು ಸಂತ್ರಸ್ತೆ 2022ರಲ್ಲಿ ಮದುವೆಯಾಗಿದ್ದಾರೆ. ಈ ಜೋಡಿಗೆ 2023ರ ಫೆಬ್ರುವರಿಯಲ್ಲಿ ಮಗು ಜನಿಸಿತ್ತು. ಕಳೆದ ವರ್ಷ ಆತ ಮನೆ ಬಿಟ್ಟು ಹೋಗಿದ್ದಾನೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.ಇನ್ನೂ ಸಂತ್ರಸ್ತೆಗೆ ಹೊಸ ಮನೆ ಕಟ್ಟೋಣ ಎಂದು ಭರವಸೆ ನೀಡಿ, ಚಿನ್ನಾಭರಣವನ್ನು ₹36 ಲಕ್ಷ ಸಾಲ ಪಡೆದು ಆತನಿಗೆ
ಕೇರಳ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಲಯಾಳಂ ಭಾಷಾ ಮಸೂದೆ 2025 ರ ಕುರಿತು ಸ್ಪಷ್ಟೀಕರಣವನ್ನು ಹೊರಡಿಸಿದ್ದು, ಶಾಸನವು ಮಲಯಾಳಂ ಅನ್ನು ಹೇರುವುದಿಲ್ಲ ಮತ್ತು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸುತ್ತದೆ ಎಂದು ಹೇಳಿದ್ದಾರೆ. ಕಾಸರಗೋಡು ಜಿಲ್ಲೆಯ ಕನ್ನಡ ಮಾತನಾಡುವ ಭಾಷಾ ಅಲ್ಪಸಂಖ್ಯಾತರ ಮೇಲೆ ಇದರ ಪರಿಣಾಮದ ಬಗ್ಗೆ ಕರ್ನಾಟಕ ಮೂಲದ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿದ ನಂತರ ಈ ಸ್ಪಷ್ಟೀಕರಣ ಬಂದಿದೆ.ಬುಧವಾರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ಕೆಬಿಎಡಿಎ) ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ
ನೆಲಮಂಗಲ: ಯುವತಿ ತನ್ನ ಪ್ರೀತಿಯನ್ನು ನಿರಾಕರಿಸಿದಳೆಂದು ಆಕೆಯ ಹತ್ಯೆ ಸ್ಕೆಚ್ ಹಾಖಿ ಹಾಡಹಗಲೇ ಗನ್ ಹಿಡಿದುಕೊಂಡು ರೌಡಿಸಂ ಮೆರೆದ ಯುವಕನನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರ ಮೂಲದ ಶುಭಂ ಎಂದು ಗುರುತಿಸಲಾಗಿದೆ. ಪಿಜ್ಜಾ ಡಿಲೆವೆರಿ ಬಾಯ್ ಆಗಿದ್ದ ಆರೋಪಿ, ಮೂರು ವರ್ಷದಿಂದ ಪ್ರೀತಿಸುವಂತೆ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳ ಹಿಂದೆ ಬಿದ್ದಿದ್ದಾನೆ. ಆದರೆ ಯುವತಿ ಆತನ ಪ್ರೀತಿ ನಿರಾಕರಿಸಿದ್ದಾಳೆ. ಇನ್ನೂ ಆಕೆ ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದಾಳೆಂದು
ನವದೆಹಲಿ: ದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿ ಶನಿವಾರ ರಚನಾ ಯಾದವ್ ಎಂಬ ಮಹಿಳೆಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಪೊಲೀಸರ ಪ್ರಕಾರ, ಈ ಕೊಲೆಗೆ ಅವರ ಪತಿ ವಿಜೇಂದರ್ ಯಾದವ್ ಅವರನ್ನು 2023 ರ ಆರಂಭದಲ್ಲಿ ಕೊಲೆ ಮಾಡಲಾಗಿತ್ತು. ಬಾಲ್ಸುವಾ ಗ್ರಾಮದಲ್ಲಿ ನಡೆದ ಕೌಟುಂಬಿಕ ಕಲಹ ಅಥವಾ ವೈಯಕ್ತಿಕ ದ್ವೇಷವೇ ಕಾರಣ ಎಂದು ತೋರುತ್ತದೆ. ಉಪ ಪೊಲೀಸ್ ಆಯುಕ್ತ (ಡಿಸಿಪಿ) ಭೀಷಮ್ ಸಿಂಗ್ ಮಾತನಾಡಿ, ಇಂದು ಬೆಳಿಗ್ಗೆ 11:00 ಗಂಟೆಗೆ ಶಾಲಿಮಾರ್ ಬಾಗ್ನಲ್ಲಿ ವಾಸಿಸುತ್ತಿರುವ ರಚನಾ ಯಾದವ್ ಎಂಬ ಮಹಿಳೆಗೆ ಗುಂಡು ಹಾರಿಸಲಾಗಿದೆ ಎಂದು ನಮಗೆ ಪಿಸಿಆರ್ ಕರೆ ಬಂದಿತು. ಅವರು
ದಶಕಗಳ ಹಿಂದೆಯೂ ಶುರುವಾಗಿರು ಕೇರಳ ಮತ್ತು ಕರ್ನಾಟಕದ ನಡುವಿನ ಭಾಷಾ ವಿವಾದ ಇದೀಗ ಮತ್ತೇ ತೀವ್ರಗೊಂಡಿದೆ. ಈಚೆಗೆ (ಜನವರಿ 2026) "ಮಲಯಾಳಂ ಭಾಷಾ ಮಸೂದೆ-2025" ರ ಕಾರಣದಿಂದಾಗಿ ಇದು ಮತ್ತೆ ತೀವ್ರಗೊಂಡಿದ್ದು, ಏನಿದು ಭಾಷಾ ವಿವಾದ. ಕೇರಳ ಸರ್ಕಾರವು ಇತ್ತೀಚೆಗೆ ಮಂಡಿಸಿರುವ ಈ ಮಸೂದೆಯು ಹೊಸ ಸಂಘರ್ಷಕ್ಕೆ ಕಾರಣವಾಗಿದೆ.ಏನಿದು ನಿಯಮ: ಕೇರಳದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ (ಕನ್ನಡ ಮಾಧ್ಯಮ ಶಾಲೆಗಳೂ ಸೇರಿ) ೧ ರಿಂದ ೧೦ನೇ ತರಗತಿಯವರೆಗೆ ಮಲಯಾಳಂ ಅನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸಲು ಈ ಮಸೂದೆ ಪ್ರಸ್ತಾಪಿಸಿದೆ.
ಬಿಗ್ಬಾಸ್ ಸೀಸನ್ 12ರ ಕಿಚ್ಚನ ಚಪ್ಪಾಳೆ ಇದೀಗ ಭಾರೀ ಅಚ್ಚರಿ ಮೂಡಿಸಿದೆ. ಈ ವಾರ ಟಿಕೆಟ್ ಟು ಫಿನಾಲೆ ಟಾಸ್ಕ್ ನಡೆದಿದ್ದು, ಈ ಟಾಸ್ಕ್ನಲ್ಲಿ ಗಿಲ್ಲಿ, ಕಾವ್ಯ, ರಕ್ಷಿತಾ, ರಾಶಿಕಾ, ರಘು, ಧನುಷ್ ಆದರೆ ಮತ್ತೊಂದಯ ಕಡೆ ಅಶ್ವಿನಿ ಮತ್ತು ಧ್ರುವಂತ್ ಎನ್ನುವಂತೆ ಗೋಚರಿಸಿತು. ಶನಿವಾರದ ಎಪಿಸೋಡ್ನ ಪ್ರೋಮೋದಲ್ಲಿ ೀ ವಿಚಾರವಾಗಿ ಕಿಚ್ಚ ಸುದೀಪ್ ಅವರು ಮನೆಮಂದಿಗೆಲ್ಲ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನೂ ಈ ವಾರ ಅಶ್ವಿನಿ ಗೌಡ ಅವರು ಉತ್ತಮ ಎಂದು ದೂರಿದವರ ಬಾಯಲ್ಲೇ ಪ್ರಶಂಸೆಯನ್ನು ಗಳಿಸಿದ್ದಾರೆ. ಇದೆಲ್ಲವನ್ನು ಪರಿಗಣಿಸಿ ಈ ವಾರದ ಹಾಗೂ ಈ ಸೀಸನ್ನ ಕೊನೆಯ ಕಿಚ್ಚನ ಚಪ್ಪಾಳೆಯಲ್ಲಿ ಅಶ್ವಿನಿ ಗೌಡ ಹಾಗೂ ಧ್ರುವಂತ್ ನೀಡಲಾಗಿದೆ.
ಅಯೋಧ್ಯೆಯ ರಾಮ ಮಂದಿರ ಸಂಕೀರ್ಣದೊಳಗೆ ನಮಾಜ್ ಮಾಡಲು ಯತ್ನಿಸಿದ ಮತ್ತು ನಿಲ್ಲಿಸಿದಾಗ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಕಾಶ್ಮೀರದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೂಲಗಳ ಪ್ರಕಾರ, ಆ ವ್ಯಕ್ತಿಯನ್ನು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ನಿವಾಸಿ ಅಹ್ಮದ್ ಶೇಖ್ ಎಂದು ಗುರುತಿಸಲಾಗಿದೆ. 55 ವರ್ಷದ ವ್ಯಕ್ತಿ ಶುಕ್ರವಾರ ಹೆಚ್ಚಿನ ಭದ್ರತೆಯ ದೇವಾಲಯದ ಆವರಣಕ್ಕೆ ಪ್ರವೇಶಿಸಿ, ದೇವಾಲಯಕ್ಕೆ ಭೇಟಿ ನೀಡಿದ ನಂತರ, ಸೀತಾ ರಸೋಯಿ ಪ್ರದೇಶದ ಬಳಿ ಕುಳಿತು, ಅಲ್ಲಿ ಅವರು ನಮಾಜ್ ಮಾಡಲು ತಯಾರಿ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭುವನೇಶ್ವರ: ವಿಮಾನ ಹಾರಾಟದ ಮಧ್ಯದಲ್ಲಿ ತಾಂತ್ರಿಕ ದೋಷ ಕಂಡುಬಂದ ನಂತರ ಶನಿವಾರ ರೂರ್ಕೆಲಾ ವಾಯುನೆಲೆಯಿಂದ ಸುಮಾರು ಒಂಬತ್ತು ಕಿಲೋಮೀಟರ್ ದೂರದಲ್ಲಿ ಸಣ್ಣ ವಿಮಾನವೊಂದು ತುರ್ತು ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಲ್ಯಾಂಡಿಂಗ್ ಅನ್ನು ದೃಢಪಡಿಸಿದ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಪಿಐಎ), ವ್ಯವಸ್ಥೆಯಲ್ಲಿ ತಾಂತ್ರಿಕ ದೋಷವನ್ನು ಗಮನಿಸಿದ ಪೈಲಟ್, ಹುಲ್ಲುಗಾವಲಿನಲ್ಲಿ ಇಳಿಯಲು ಪ್ರಯತ್ನಿಸಿದರು, ಎಲ್ಲಾ ಪ್ರಯಾಣಿಕರನ್ನು ಉಳಿಸಿದರು, ಆದರೆ ಗಾಯಗಳೊಂದಿಗೆ ಪಾರಾಗಿದ್ದಾರೆ.
ನವದೆಹಲಿ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಸಮೀರ್ ಅಪ್ಲಿಕೇಶನ್ನ ದತ್ತಾಂಶದ ಪ್ರಕಾರ, ದೆಹಲಿಯ ಗಾಳಿಯ ಗುಣಮಟ್ಟ ಶನಿವಾರವೂ 'ತುಂಬಾ ಕಳಪೆ' ವರ್ಗದಲ್ಲಿಯೇ ಉಳಿದಿದೆ.ವಾಯು ಗುಣಮಟ್ಟ ಸೂಚ್ಯಂಕ (AQI) ಬೆಳಿಗ್ಗೆ 6:05 ಕ್ಕೆ 358 ಕ್ಕೆ ದಾಖಲಾಗಿದೆ. ರಾಷ್ಟ್ರೀಯ ರಾಜಧಾನಿಯಲ್ಲಿ ಕಠಿಣ ಶೀತ ಅಲೆಯ ಪರಿಸ್ಥಿತಿ ಮುಂದುವರೆದಿದ್ದು, ಕನಿಷ್ಠ ತಾಪಮಾನ 5.4 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ.ಶುಕ್ರವಾರ ಬೆಳಿಗ್ಗೆ, ವಾಯು ಗುಣಮಟ್ಟ ಸೂಚ್ಯಂಕ 318 ರಷ್ಟಿತ್ತು, ಇದನ್ನು 'ತುಂಬಾ ಕಳಪೆ' ಎಂದು ವರ್ಗೀಕರಿಸಲಾಗಿದೆ. ಕಳೆದ
ಬೆಂಗಳೂರು: ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಲ್ಲಿ ಮಲಯಾಳ ಹೇರಿಕೆ ಮಾಡಲು ಹೊರಟಿರುವ ಕೇರಳ ಸರ್ಕಾರದ ವಿರುದ್ಧ ಕನ್ನಡಿಗರು ಸಿಡಿದೆದ್ದ ಬೆನ್ನಲ್ಲೇ ಈಗ ಸಿಎಂ ಪಿಣರಾಯಿ ವಿಜಯನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕೇರಳದ ಪಿಣರಾಯಿ ವಿಜಯನ್ ಸರ್ಕಾರ ಕನ್ನಡ ಶಾಲೆಗಳಲ್ಲೀ ಮಲಯಾಳ ಕಡ್ಡಾಯಗೊಳಿಸುವ ಭಾಷಾ ಮಸೂದೆ ಮಂಡಿಸಲು ಮುಂದಾಗಿತ್ತು. ಇದರ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದರು. ಕರ್ನಾಟಕ ಸಿಎಂ ಸಿದ್ದರಾಮಯ್ಯ, ವಿಪಕ್ಷ ಬಿಜೆಪಿ ನಾಯಕರು, ಕನ್ನಡ ಪರ ಸಂಘಟನೆಗಳು ಕೇರಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು.
ಬೆಂಗಳೂರು: ಪಂಡಿತ್ ಜವಾಹರಲಾಲ್ ನೆಹರೂ ಅವರ ಒಪ್ಪಿಗೆಗೆ ವಿರುದ್ಧವಾಗಿ ಅಂದು ಐತಿಹಾಸಿಕ ಸೋಮನಾಥ ಮಂದಿರ ನಿರ್ಮಾಣವಾಗಿತ್ತು ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.“ಐತಿಹಾಸಿಕ ಸೋಮನಾಥ ಮಂದಿರಕ್ಕೆ 75 ವರ್ಷ” ತುಂಬಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೋಮನಾಥ ದೇವಾಲಯ ಒಂದು ಪುರಾತನ ದೇವಸ್ಥಾನ. ಸಾವಿರ ವರ್ಷಗಳ ಇತಿಹಾಸ ಉಳ್ಳದ್ದು ಎಂದು ವಿವರಿಸಿದರು. ನಿರ್ಮಾಣ ಕಾರ್ಯ ಆದ ಬಳಿಕ 1951ರಲ್ಲಿ ದೇವಾಲಯವನ್ನು ಪುನರ್ ಸ್ಥಾಪನೆ ಮಾಡಿ, ಲೋಕಾರ್ಪಣೆಯ ಕೆಲಸ ಮಾಡಿದ್ದಾರೆ ಎಂದರು.
ಅಯೋಧ್ಯೆ: ರಾಮ ಮಂದಿರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ಅಯೋಧ್ಯೆಯ ಪಂಚಕೋಸಿ ಪರಿಕ್ರಮ ಮಾರ್ಗದಲ್ಲಿ ಮಾಂಸಾಹಾರಿ ಆಹಾರ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಈ ಆದೇಶವು ಆನ್ಲೈನ್ ಆಹಾರ ವಿತರಣಾ ವೇದಿಕೆಗಳಿಗೂ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹೋಟೆಲ್ ಮಾಲೀಕರು, ಅತಿಥಿ ಗೃಹಗಳು, ಹೋಂ ಸ್ಟೇಗಳು ಮತ್ತು ಆನ್ಲೈನ್ ಆಹಾರ ವಿತರಣಾ ಕಂಪನಿಗಳಿಗೆ ಈ ನಿರ್ಧಾರದ ಬಗ್ಗೆ ಔಪಚಾರಿಕವಾಗಿ ತಿಳಿಸಲಾಗಿದೆ ಮತ್ತು ಉಲ್ಲಂಘನೆಗಳಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ. ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಕಂಡುಬಂದಲ್ಲೆಲ್ಲಾ ಮೇಲ್ವಿಚಾರಣೆಯನ್ನು ತೀವ್ರಗೊಳಿಸಲಾಗುವುದು ಮತ್ತು ಕ್ರಮ
ತಿರುವನಂತಪುರಂ (ಕೇರಳ): ಶಬರಿಮಲೆ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ದಿನ ಮೊದಲು ಬಂಧಿಸಲ್ಪಟ್ಟ ಶಬರಿಮಲೆಯ ಪ್ರಧಾನ ಅರ್ಚಕ (ತಂತ್ರಿ) ತಂತ್ರಿ ಕಂಠೀರ ರಾಜೀವರ್ ಅವರನ್ನು ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಶನಿವಾರ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರನ್ನು ತಿರುವನಂತಪುರಂ ವಿಶೇಷ ಉಪ ಜೈಲಿನಲ್ಲಿ ಇರಿಸಲಾಗಿತ್ತು. ಜೈಲು ಅಧಿಕಾರಿಗಳು ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಜೈಲಿನ ಆಂಬ್ಯುಲೆನ್ಸ್ನಲ್ಲಿ ತಿರುವನಂತಪುರಂ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಿದರು. ಶಬರಿಮಲೆ ದೇವಾಲಯದಲ್ಲಿ ಚಿನ್ನದ ಲೇಪನದಲ್ಲಿ ಅಕ್ರಮಗಳ ಆರೋಪದ ಮೇಲೆ ಶಬರಿಮಲೆ ಚಿನ್ನದ ವಿವಾದ
ಶಿಮ್ಲಾ (ಹಿಮಾಚಲ ಪ್ರದೇಶ): ಸಿರ್ಮೌರ್ ಜಿಲ್ಲೆಯ ಹರಿಪುರ್ಧರ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14 ಕ್ಕೆ ಏರಿದೆ ಮತ್ತು ಗಾಯಗೊಂಡ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಸಚಿವ ಜಗತ್ ಸಿಂಗ್ ನೇಗಿ ಶನಿವಾರ ಹೇಳಿದರು.ಸಿರ್ಮೌರ್ ಜಿಲ್ಲೆಯ ಹರಿಪುರ್ಧರ್ ಬಳಿ ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14 ಕ್ಕೆ ಏರಿದೆ. ಇಲ್ಲಿಯವರೆಗೆ, ಸಾವುನೋವುಗಳ ಸಂಖ್ಯೆ 14 ರಷ್ಟಿದೆ, ಆದರೆ ಅನೇಕ ಗಾಯಾಳುಗಳನ್ನು ಇನ್ನೂ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಜಗತ್ ಸಿಂಗ್ ನೇಗಿ ಹೇಳಿದರು. ಅಪಘಾತದ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಬಂದ ತಕ್ಷಣ, ಸ್ಥಳೀಯ ನಿವಾಸಿಗಳು ಮತ್ತು ಜಿಲ್ಲಾಡಳಿತವು ತಕ್ಷಣವೇ ರಕ್ಷಣಾ
ಬೆಂಗಳೂರು: ಯಶ್ ಅವರ ಬಹು ನಿರೀಕ್ಷಿತ ಆಕ್ಷನ್-ಥ್ರಿಲ್ಲರ್ ಚಿತ್ರ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ಗೆ ತಾವು ಅಂತಿಮವಾಗಿ ಸಹಿ ಹಾಕದಿರಲು ಕಾರಣವನ್ನು ನಟ ಗುಲ್ಶನ್ ದೇವಯ್ಯ ಬಹಿರಂಗಪಡಿಸಿದ್ದಾರೆ.ಈ ನಿರ್ಧಾರವು ವೇಳಾಪಟ್ಟಿ ಮತ್ತು ವೃತ್ತಿಪರ ಪರಿಗಣನೆಗಳಿಂದಾಗಿ ಎಂದು ಬಹಿರಂಗಪಡಿಸಿದ್ದಾರೆ.SCREEN ಜೊತೆ ಮಾತನಾಡಿದ ಗುಲ್ಶನ್, ಬಹಳ ಹಿಂದೆಯೇ ತಮಗೆ ಟಾಕ್ಸಿಕ್ ಆಫರ್ ಬಂದಿತ್ತು ಎಂದು ಹೇಳಿದರು, ಗೀತು ಮೋಹನ್ ದಾಸ್ ಮತ್ತು ನಾನು ಇದರ ಬಗ್ಗೆ ಬಹಳ ಹೊತ್ತು ಮಾತನಾಡಿದ್ದೆವು, ಮತ್ತು ಅವರು ನಿಜವಾಗಿಯೂ ಆ ಚಿತ್ರದಲ್ಲಿ
ಬೆಂಗಳೂರು: ನಿಮ್ಮ ಹುಡುಗ ನಿರ್ಮಿಸಿ ನಟಿಸಿದ್ದ ಹಾಸನ್ ಬ್ಲೂ ಫಿಲಂ ವರ್ಲ್ಡ್ ಫೇಮಸ್ ಎಂದು ಜೆಡಿಎಸ್ ಗೆ ರಾಜ್ಯ ಕಾಂಗ್ರೆಸ್ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವ್ಯಂಗ್ಯ ಮಾಡಿ ಟ್ವೀಟ್ ಮಾಡಲಾಗಿದೆ. ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ನಡುವಿನ ವಾಗ್ವಾದ ಈಗ ಜೆಡಿಎಸ್-ಕಾಂಗ್ರೆಸ್ ನಡುವಿನ ಟ್ವೀಟ್ ಸಮರವಾಗಿದೆ. ಈ ಟ್ವೀಟ್ ಸಮರ ಸಭ್ಯತೆಯ ಎಲ್ಲೆ ಮೀರಿ ಹೋಗಿದೆ. ಕುಮಾರಸ್ವಾಮಿ ಮೀಡಿಯಾ ಹುಲಿ, ಹಿಟ್ ಆಂಡ್ ರನ್, ಅವಕಾಶವಾದಿ, ಆತ್ಮರತಿ ಎಂಬ ಕೊಚ್ಚೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.
ಬೆಂಗಳೂರು: ಇಂದಿನ ಆಧುನಿಕ ಜಗತ್ತಿನಲ್ಲಿ ನಮ್ಮ ಆಹಾರವನ್ನು ಕ್ರಮವನ್ನು ಸಮತೋಲದಲ್ಲಿರಿಸದಿದ್ದರೆ ಆರೋಗ್ಯದಲ್ಲಿ ಏರಾಪೇರಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಹಾಗಾಗಿ ನಮ್ಮ ಮಧ್ಯಾಹ್ನ ಆಹಾರ ಕ್ರಮ ಕೇವಲ ಹೊಟ್ಟೆ ತುಂಬಿಸುವುದಕ್ಕೆ ಮಾತ್ರವಲ್ಲದೆ, ದಿನವಿಡೀ ನಮಗೆ ಅಗತ್ಯವಿರುವ ಶಕ್ತಿಯನ್ನು ನೀಡುವಂತಿರಬೇಕು.ಸಮತೋಲಿತ ಆಹಾರದ ತಟ್ಟೆ: ಮಧ್ಯಾಹ್ನದ ಊಟದಲ್ಲಿ ಧಾನ್ಯಗಳು, ರಾಗಿ ಮುದ್ದೆ, ಕೆಂಪು ಅಕ್ಕಿ ಅನ್ನ ಅಥವಾ ಜೋಳದ ರೊಟ್ಟಿ. ಇವು ನಿಧಾನವಾಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ.ಮಾದರಿ ಮೆನು: ನಮ್ಮ ಕರ್ನಾಟಕದ ಶೈಲಿಯಲ್ಲಿ ಒಂದು ಪರಿಪೂರ್ಣ ಮಧ್ಯಾಹ್ನದ ಊಟದ ಪಟ್ಟಿ.
ಬೆಂಗಳೂರು: ಬಾಂಗ್ಲಾದೇಶದ ರೊಹಿಂಗ್ಯಾಗಳ ಮೇಲೆ ಮಿಡಿಯುವ ಕಾಂಗ್ರೆಸ್ ಪಕ್ಷದ ನಾಯಕ ಕೆಸಿ ವೇಣುಗೋಪಾಲ್ ಮನಸ್ಸು ಕಾಸರಗೋಡಿನ ಕನ್ನಡಿಗರ ಮೇಲೆ ಯಾಕೆ ಮಿಡಿಯುತ್ತಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಕೇರಳ ಹೇಳಿತೆಂದು ಕೋಗಿಲು ಲೇಔಟ್ ನಲ್ಲಿರವ ರೊಹಿಂಗ್ಯಾಗಳಿಗೆ ಮನೆ ಕಟ್ಟಿಕೊಡಲೂ ಕಾಂಗ್ರೆಸ್ ಸರ್ಕಾರ ಹಿಂದೆ ಮುಂದೆ ನೋಡಲಿಲ್ಲ. ಅದೇ ಕಾಳಜಿ ಈಗ ಕಾಸರಗೋಡಿನ ಕನ್ನಡಿಗರ ಮೇಲೆಯೂ ತೋರುತ್ತಾ ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ. ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವ ವಿಷಯದಲ್ಲಿ ಕೇರಳದ ಪರ ತೋರಿದ ಕಾಳಜಿಯನ್ನು ಕಾಂಗ್ರೆಸ್ ನಾಯಕರು ಈಗ ಕನ್ನಡಿಗರ ಪರವಾಗಿ ತೋರುತ್ತಾರಾ?
ಇದ್ದಕ್ಕಿದ್ದಂತೆ ಹುಲಿಯೊಂದು ಬಂದು ನಿಮ್ಮ ಎದುರು ನಿಂತು ಘರ್ಜಿಸಿದರೆ ನಿಮಗೆ ಅರೆಕ್ಷಣ ಏನಾಗಬಹುದು? ಈ ಎದೆ ಝಲ್ಲೆನಿಸುವ ವಿಡಿಯೋವನ್ನು ತಪ್ಪದೇ ನೋಡಿ. ಹುಲಿ ಎಂದರೆ ಹಾಗೇನೇ. ಅದು ಸೈಲೆಂಟಾಗಿದ್ದಾಗಷ್ಟೇ ನೋಡಲು ಚಂದ. ಕೆರಳಿ ಒಂದು ಘರ್ಜನೆ ಹೊರಡಿಸಿದರೆ ಎದುರಿದ್ದವರ ಎದೆಯೂ ನಡುಗಬೇಕು. ಅದಕ್ಕೇ ಅದನ್ನು ವ್ಯಾಘ್ರ ಎಂದು ಕರೆಯಲಾಗುತ್ತದೆ. ಅಂತಹದ್ದೇ ಒಂದು ಹುಲಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾರ ಸಫಾರಿ ಹೋದವರು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಫಾರಿ ವೇಳೆ ಹುಲಿ ರೊಚ್ಚಿಗೆದ್ದ ಕ್ಷಣ ಇದಾಗಿತ್ತು.
ಬೆಂಗಳೂರು: ಕರ್ನಾಟಕದ ಗಡಿ ಭಾಗದ ಕೇರಳ ರಾಜ್ಯದ ಪ್ರದೇಶದಲ್ಲಿ ಕನ್ನಡ ಶಾಲೆಗಳಲ್ಲಿ ಒತ್ತಾಯಪೂರ್ವಕವಾಗಿ ಮಲೆಯಾಳ ಭಾಷೆ ಹೇರುವ ಕೆಲಸಕ್ಕೆ ಅಲ್ಲಿನ ಕಮ್ಯುನಿಸ್ಟ್ ಪಕ್ಷದ ಸರಕಾರ ಕೈ ಹಾಕಿದೆ. ಇದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ಕೊಟ್ಟರು. ಬಿಜೆಪಿ ಇದನ್ನು ಪ್ರಬಲವಾಗಿ ಖಂಡಿಸುತ್ತದೆ. ಅಷ್ಟೇ ಅಲ್ಲ; ಎಲ್ಲ ಕನ್ನಡಪರ ಸಂಘಟನೆಗಳು ಇದನ್ನು ಪ್ರಬಲವಾಗಿ ವಿರೋಧಿಸಿವೆ. ಕೇರಳದಲ್ಲಿರುವ ನಮ್ಮ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸದಲ್ಲಿ ಕೇವಲ ನಿಮ್ಮ ಹೇಳಿಕೆ, ಪತ್ರ ಬರೆದರೆ ಸಾಕಾಗುವುದಿಲ್ಲ. ನಿಮ್ಮ ಕೆ.ಸಿ.ವೇಣುಗೋಪಾಲ್ ಅವರ ಕಿವಿ ಹಿಂಡಿ ಕನ್ನಡಿಗರಿಗೆ ಅನ್ಯಾಯ ಆಗಬಾರದು;
ಬೆಂಗಳೂರು: ಚಿನ್ನದ ಬೆಲೆ ಮತ್ತೆ ಏರಿಕೆ ಮತ್ತು ಇಳಿಕೆಯಾಗುತ್ತಲೇ ಇದೆ. ಆದರೆ ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ಏರಿಕೆ ಕಂಡಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತ ಇಳಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಿಂದಲೂ ಚಿನ್ನದ ದರ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ ಪರಿಶುದ್ಧ ಚಿನ್ನದ ದರ ಕೊಂಚ ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ಮೊನ್ನೆ 1,39,835.00 ರೂ.ಗಳಿತ್ತು. ಇಂದು 1,41,415.00 ರೂ.ಗಳಷ್ಟಾಗಿದೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದೆ. ಆದರೆ ಇಂದು ಮತ್ತೆ ಬೆಲೆ ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಅಡಿಕೆ ಬೆಲೆ ಏರಿಕೆಯೂ ಅಲ್ಲ ಇಳಿಕೆಯೂ ಇಲ್ಲ ಎನ್ನುವ ಸ್ಥಿತಿಯಲ್ಲಿತ್ತು. ಒಂದೆಡೆ ಬೆಳೆ ಕಡಿಮೆ, ಇನ್ನೊಂದೆಡೆ ಬೆಲೆ ಏರಿಕೆಯಾಗದೇ ಇರುವುದು ರೈತರ ಚಿಂತೆಗೆ ಕಾರಣವಾಗಿತ್ತು. ಅಡಿಕೆ ಬೆಲೆ ಇಂದು ಸತತ ಐದನೇ ದಿನ ಏರಿಕೆಯಾಗಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ಆದರೆ ಇಂದು ಮತ್ತೆ ಯಥಾಸ್ಥಿತಿಯಲ್ಲಿದೆ. ಹೊಸ ಅಡಿಕೆ ಬೆಲೆ 460 ರೂ.ಗಳಷ್ಟಿದೆ.
ವಡೋದರ: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅಭ್ಯಾಸದ ನಡುವೆ ಅರ್ಷ್ ದೀಪ್ ಸಿಂಗ್ ಓಡುವ ಶೈಲಿಯನ್ನು ಅನುಕರಿಸಿದ ವಿಡಿಯೋ ಈಗ ವೈರಲ್ ಆಗಿದ್ದು ಇದನ್ನು ನೋಡಿದ್ರೆ ನಗು ಬರೋದು ಗ್ಯಾರಂಟಿ. ವಿರಾಟ್ ಕೊಹ್ಲಿ ಮೈದಾನದಲ್ಲಿದ್ದರೆ ಮನಜರಂಜನೆಗೆ ಏನೂ ಕೊರತೆಯಿರಲ್ಲ. ಇದೀಗ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೆ ವಡೋದರಾ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವ ಕೊಹ್ಲಿ ಮಾಡಿದ ಇಂತಹ ತಮಾಷೆಯೊಂದರ ವಿಡಿಯೋ ಈಗ ವೈರಲ್ ಆಗಿದೆ. ಫೀಲ್ಡಿಂಗ್ ಅಭ್ಯಾಸ ನಡೆಸುತ್ತಿದ್ದಾಗ ಅರ್ಷ್ ದೀಪ್ ಸಿಂಗ್ ಓಡುವ ಶೈಲಿಯನ್ನು ಕೊಹ್ಲಿ ಅನುಕರಣೆ ಮಾಡಿ ತೋರಿಸಿದ್ದಾರೆ.
ವಡೋದರಾ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ನಾಳೆಯಿಂದ ಆರಂಭವಾಗಲಿದ್ದು, ಯಾವಾಗ, ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ಸಂಪೂರ್ಣ ವಿವರ. ಇತ್ತೀಚೆಗಿನ ದಿನಗಳಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಆಡುವ ಕಾರಣಕ್ಕೆ ಏಕದಿನ ಸರಣಿಗೆ ಭಾರೀ ಡಿಮ್ಯಾಂಡ್ ಇದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಏಕದಿನ ಪಂದ್ಯಗಳ ಟಿಕೆಟ್ ಗಳು ನಿಮಿಷಗಳಲ್ಲೇ ಸೋಲ್ಡ್ ಔಟ್ ಆಗುತ್ತಿರುವುದು. ಇದೀಗ ನಾಳೆಯಿಂದ ಏಕದಿನ ಸರಣಿಯಲ್ಲಿ ಈ ಇಬ್ಬರು ದಿಗ್ಗಜರು ಆಡುವುದನ್ನೇ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಮೊದಲ ಪಂದ್ಯ ನಾಳೆ ವಡೋದರಾದಲ್ಲಿ ನಡೆಯಲಿದೆ.
ಮುಂಬೈ: ಡಬ್ಲ್ಯುಪಿಎಲ್ 2026 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯವನ್ನೇ ಗೆದ್ದ ಬಳಿಕ ಆರ್ ಸಿಬಿ ನಾಯಕಿ ಸ್ಮೃತಿ ಮಂಧಾನ ನೀಡಿದ ಹೇಳಿಕೆ ವೈರಲ್ ಆಗಿದೆ. ಆರ್ ಸಿಬಿ ವರ್ಸಸ್ ಮುಂಬೈ ಇಂಡಿಯನ್ಸ್ ಪಂದ್ಯವೆಂದರೆ ರೋಚಕತೆ ಇದ್ದೇ ಇರುತ್ತದೆ. ನಿನ್ನೆಯ ಪಂದ್ಯವನ್ನೂ ಆರ್ ಸಿಬಿ ಸೋಲಿನ ಸುಳಿಯಿಂದ ಮೈ ಕೊಡವಿ ಎದ್ದು ಕೊನೆಯ ಎಸೆತದಲ್ಲಿ ಗೆಲುವು ಕಂಡಿತ್ತು. ಬ್ಯಾಟಿಂಗ್, ಬೌಲಿಂಗ್ ನಲ್ಲಿ ತಂಡಕ್ಕೆ ಗೆಲುವು ಕೊಡಿಸಿದ್ದು ನಡಿನ್ ಡಿ ಕ್ಲರ್ಕ್. ಈ ಗೆಲುವಿನ ಬಳಿಕ ಅಭಿಮಾನಿಗಳು ಆರ್ ಸಿಬಿ ಎಂದರೆ ಹಾಗೇನೇ ಬಾಯಿಗೆ ಬರಿಸಿಯೇ ಗೆಲ್ಲೋದು ಎಂದು ತಮಾಷೆ ಮಾಡಿದ್ದರು.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಈ ಕೆಲವು ರಸ್ತೆ ಬದಿಗಳಲ್ಲಿ ಇನ್ನು ವಾಹನ ಪಾರ್ಕ್ ಮಾಡಿದ್ರೆ ಪಾರ್ಕಿಂಗ್ ಶುಲ್ಕ ಬೀಳೋದು ಗ್ಯಾರಂಟಿ. ಯಾವೆಲ್ಲಾ ರಸ್ತೆಗಳು ಇಲ್ಲಿದೆ ವಿವರ. ರಸ್ತೆ ಬದಿ ವಾಹನ ಪಾರ್ಕ್ ಮಾಡುವುದಕ್ಕೂ ಇನ್ನು ಪಾರ್ಕಿಂಗ್ ಶುಲ್ಕ ವಿಧಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ. ಅದರಂತೆ ಈಗ ಪ್ರಾಯೋಗಿಕವಾಗಿ ಕೆಲವು ರಸ್ತೆಗಳನ್ನು ಗುರುತು ಹಾಕಿಕೊಂಡಿದ್ದು ಆ ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಖಾಸಗಿ ನಿರ್ವಾಹಕರನ್ನು ನೇಮಿಸಲು ಟೆಂಡರ್ ಕರೆದಿದೆ.
ಬೆಂಗಳೂರು: ಟಾಕ್ಸಿಕ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಪಾತ್ರದ ಹೆಸರು RAYA. ಈ ಹೆಸರಿಗೂ ಯಶ್ ಗೂ ಇದೆ ಸ್ಪೆಷಲ್ ನಂಟು. ಎಷ್ಟು ಜನ ಗಮನಿಸಿದ್ದೀರೋ ಇಲ್ವೋ ಗೊತ್ತಿಲ್ಲ. ಆದರೆ ಯಶ್ ವೈಯಕ್ತಿಕ ಜೀವನದಲ್ಲಿ ಇಂಗ್ಲಿಷ್ ವರ್ಣಮಾಲೆಯ ಆರ್, ವೈ, ಎಗೆ ವಿಶೇಷ ಸ್ಥಾನವಿದೆ. ಪತ್ನಿ ರಾಧಿಕಾ ಹೆಸರು ಆರಂಭವಾಗುವುದು ಆರ್,ಎ ಲೆಟರ್ ನಿಂದ. ಯಶ್ ಹೆಸರು ಆರಂಭವಾಗುವುದು ವೈ,ಎ ಲೆಟರ್ ನಿಂದ. ಮಕ್ಕಳಾದ ಐರಾ ಹೆಸರು ಆರಂಭವಾಗುವುದು ಎ, ವೈ ಲೆಟ್ ನಿಂದ. ಮಗ ಯಥರ್ವ್ ಹೆಸರು ಆರಂಭವಾಗುವುದೂ ವೈ,ಎ ಲೆಟರ್ ನಿಂದ.
ಮುಂಬೈ: ಡಬ್ಲ್ಯುಪಿಎಲ್ 2026 ರ ಮೊದಲ ಪಂದ್ಯಕ್ಕೆ ಕೆಲವೇ ಕ್ಷಣಗಳ ಮೊದಲು ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವಾಗ ಅಡ್ಡ ಬಂದ ಕ್ಯಾಮರಾ ಮ್ಯಾನ್ ಮೇಲೆ ಸ್ಮೃತಿ ಮಂಧಾನ ಸಿಟ್ಟಾದ ವಿಡಿಯೋ ವೈರಲ್ ಆಗಿದೆ. ಡಬ್ಲ್ಯುಪಿಎಲ್ 2026 ನಿನ್ನೆಯ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಆರ್ ಸಿಬಿಗೆ ಮಹತ್ವದ್ದಾಗಿತ್ತು. ಈ ಪಂದ್ಯವನ್ನು ರೋಚಕವಾಗಿ ಆರ್ ಸಿಬಿ 3 ವಿಕೆಟ್ ಗಳಿಂದ ರೋಚಕವಾಗಿ ಗೆದ್ದುಕೊಂಡಿತ್ತು. ಈ ಪಂದ್ಯಕ್ಕೆ ಮೊದಲು ಸ್ಮೃತಿ ಮಂಧಾನ ಮೈದಾನದಲ್ಲಿ ಬ್ಯಾಟ್ ಹಿಡಿದು ಲಘು ಅಭ್ಯಾಸ ನಡೆಸುತ್ತಿದ್ದರು.