Shorts

ಬೆಂಗಳೂರು: ಕರ್ನಾಟಕದಲ್ಲಿ ಎರಡು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆ ನಾಮಪತ್ರ ಹಿಂಪಡೆಯಲು ಇಂದು ಕೊನೇ ದಿನವಾಗಿದೆ. ಕಾಂಗ್ರೆಸ್ ಗೆ ಈ ತಪ್ಪು ದುಬಾರಿಯಾಗುತ್ತಾ? ದಾವಣಗೆರೆಯಲ್ಲಿ ಶ್ಯಾಮನೂರು ಶಿವಶಂಕರಪ್ಪ ಮತ್ತು ಬಾಗಲಕೋಟೆಯಲ್ಲಿ ಎಚ್ ವೈ ಮೇಟಿ ನಿಧನದ ಬಳಿಕ ತೆರವಾಗಿದ್ದ ಅವರ ಸ್ಥಾನಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ. ಏಪ್ರಿಲ್ 10 ರಂದು ಚುನಾವಣೆ ನಡೆಯಲಿದ್ದು, ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಕಾಂಗ್ರೆಸ್ ನಿಂದ ದಾವಣಗೆರೆ ಕ್ಷೇತ್ರದಲ್ಲಿ ಶ್ಯಾಮನೂರು ಮೊಮ್ಮಗ ಸಮರ್ಥ್ ಶ್ಯಾಮನೂರು ಟಿಕೆಟ್ ಪಡೆದಿದ್ದಾರೆ. ಆದರೆ ಅವರಿಗೆ ಟಿಕೆಟ್ ಕೊಟ್ಟಿರುವುದು ಮುಸ್ಲಿಂ ಸಮುದಾಯದವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಈ ಕ್ಷೇತ್ರದಿಂದ ಮುಸ್ಲಿಂ ಸಮುದಾಯದ ಬಂಡಾಯ ಅಭ್ಯರ್ಥಿಯಾಗಿ ಸಾದಿಕ್ ಪೈಲ್ವಾನ್ ಕಣಕ್ಕಿಳಿದಿದ್ದಾರೆ.

ಬೆಂಗಳೂರು: ಇನ್ನೇ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇನ್ನೆರಡು ವರ್ಷ ಪೂರೈಸಿದರೆ ಅವಧಿ ಸಂಪೂರ್ಣವಾಗಿ ಮುಗಿಯುತ್ತದೆ. ಆದರೆ ಇದೀಗ ವಿಧಾನಸೌಧದ ಎದುರು ಶಾಸಕರ ಗ್ರೂಪ್ ಫೋಟೋ ಶೂಟ್ ನಡೆದಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯಾಕೆಂದರೆ ವಿಧಾನಸಭೆ ಅವಧಿ ಮುಗಿಯುವ ಹತ್ತಿರದಲ್ಲಿ ಸ್ಪೀಕರ್ ಸಮ್ಮುಖದಲ್ಲಿ ಶಾಸಕರ ಗ್ರೂಪ್ ಫೋಟೋ ಶೂಟ್ ಮಾಡಲಾಗುತ್ತದೆ. ಆದ್ರೆ, ಅವಧಿಗೂ ಮುನ್ನವೇ ಸ್ಫೀಕರ್ ಯುಟಿ ಖಾದರ್, ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಶಾಸಕರ ಫೋಟೋ ಶೂಟ್ ಮಾಡಿಸಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ. ಇನ್ನೂ ಗ್ರೂಪ್‌ ಫೋಟೋಶೂಟ್ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಪಕ್ಷ ಶಾಸಕರ ಜತೆಯೂ ಸಿದ್ದರಾಮಯ್ಯರ ಫೋಟೋ ಶೂಟ್‌ಗೆ ಕೆಲವರು ಟೀಕೆ ಮಾಡಿದ್ದಾರೆ.

ಇಂದು ಬುಧವಾರವಾಗಿದ್ದ ವಿಘ್ನ ವಿನಾಶಕ ಗಣೇಶನ ದಿನವಾಗಿದೆ. ಇಂದು ಜೀವನದಲ್ಲಿ ಬರುವ ದಾರಿದ್ರ್ಯ, ಕಷ್ಟಗಳ ನಿವಾರಣೆಗೆ ದಾರಿದ್ರ್ಯ ದಹನ ಗಣಪತಿ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.ಸುವರ್ಣ ವರ್ಣ ಸುಂದರಂ ಸಿತೈಕ ದಂತ-ಬಂಧುರಂಗೃಹೀತ ಪಾಶ-ಮಂಕುಶಂ ವರಪ್ರದಾ-ಽಭಯಪ್ರಧಮ್ ।ಚತುರ್ಭುಜಂ ತ್ರಿಲೋಚನಂ ಭುಜಂಗ-ಮೋಪವೀತಿನಂಪ್ರಫುಲ್ಲ ವಾರಿಜಾಸನಂ ಭಜಾಮಿ ಸಿಂಧುರಾನನಮ್ ॥ ಕಿರೀಟ ಹಾರ ಕುಂಡಲಂ ಪ್ರದೀಪ್ತ ಬಾಹು ಭೂಷಣಂಪ್ರಚಂಡ ರತ್ನ ಕಂಕಣಂ ಪ್ರಶೋಭಿತಾಂಘ್ರಿ-ಯಷ್ಟಿಕಮ್ ।ಪ್ರಭಾತ ಸೂರ್ಯ ಸುಂದರಾಂಬರ-ದ್ವಯ ಪ್ರಧಾರಿಣಂಸರತ್ನ ಹೇಮನೂಪುರ ಪ್ರಶೋಭಿತಾಂಘ್ರಿ-ಪಂಕಜಮ್ ॥ ಸುವರ್ಣ ದಂಡ ಮಂಡಿತ ಪ್ರಚಂಡ ಚಾರು ಚಾಮರಂಗೃಹ ಪ್ರತೀರ್ಣ ಸುಂದರಂ ಯುಗಕ್ಷಣ ಪ್ರಮೋದಿತಮ್ ।ಕವೀಂದ್ರ ಚಿತ್ತರಂಜಕಂ ಮಹಾ ವಿಪತ್ತಿ ಭಂಜಕಂಷಡಕ್ಷರ ಸ್ವರೂಪಿಣಂ ಭಜೇದ್ಗಜೇಂದ್ರ ರೂಪಿಣಮ್ ॥