ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ತಲೆಸುತ್ತು ಸಮಸ್ಯೆ ಕಾಣಿಸಿಕೊಂಡಿದ್ದು ಇಂದು ಸಂಪೂರ್ಣ ವಿಶ್ರಾಂತಿಯಲ್ಲಿದ್ದಾರೆ. ನಾಳೆ ಮತ್ತೆ ಪೂರ್ವ ನಿಗದಿತ ಕಾರ್ಯಕ್ರಮ ನಿಮಿತ್ತ ದೆಹಲಿಗೆ ತೆರಳಲಿದ್ದಾರೆ. ನಿನ್ನೆ ಸಿಎಂ ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರ ಮತ್ತು ಸಚಿವ ಜಮೀರ್ ಅಹ್ಮದ್ ಜೊತೆಗೆ ನಗರದ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದ್ದರು. ತಲೆಸುತ್ತು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ನಿನ್ನೆಯೇ ಅವರಿಗೆ ಎಂಆರ್ ಐ ಸ್ಕ್ಯಾನಿಂಗ್ ಮಾಡಲಾಗಿದ್ದು ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹಾಗಿದ್ದರೂ ಇಂದು ಯಾವುದೇ ಪೂರ್ವ ನಿಗದಿತ ಕಾರ್ಯಕ್ರಮವಿಲ್ಲದೇ ಇರುವುದರಿಂದ ಒಂದು ದಿನ ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದ್ದಾರೆ.

ಕದ್ದಲೂರು: ತಮಿಳುನಾಡಿನ ಕಡಲೂರಿನಿಂದ ದಕ್ಷಿಣಕ್ಕೆ 10 ಕಿಲೋಮೀಟರ್ ದೂರದಲ್ಲಿರುವ ಸೆಮ್ಮಂಕುಪ್ಪಂನಲ್ಲಿ ಮಾನವಸಹಿತ ಲೆವೆಲ್ ಕ್ರಾಸಿಂಗ್ ದಾಟಲು ಯತ್ನಿಸುತ್ತಿದ್ದ ಶಾಲಾ ವ್ಯಾನ್‌ಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದಿದೆ.ಈ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಮತ್ತು ಒಬ್ಬರು ದಾರಿಹೋಕರು ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ 7:45 ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ಇಬ್ಬರು ಮಕ್ಕಳನ್ನು ತೊಂಡಮನಾಥಂನ ನಿವಾಸ್ (12ವ) ಮತ್ತು ಸುಬ್ರಮಣಿಯಪುರಂನ ಡಿ. ಚಾರುಮತಿ (16ವ) ಎಂದು ಗುರುತಿಸಲಾಗಿದೆ.ಸುಮಾರು 10 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಕಡಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಶಾಲಾ ವ್ಯಾನ್ ತೀವ್ರವಾಗಿ ನಜ್ಜುಗುಜ್ಜಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ

ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ಇಸ್ರೇಲ್ ನಾಮ ನಿರ್ದೇಶನ ಮಾಡಿದೆ. ಶ್ವೇತಭವನದಲ್ಲಿ ನಡೆದ ಭೋಜನಕೂಟದಲ್ಲಿ ಭಾಗಿಯಾದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಾಮನಿರ್ದೇಶನದ ಪ್ರತಿಯನ್ನು ಟ್ರಂಪ್ ಗೆ ಹಸ್ತಾಂತರಿಸಿದ್ದಾರೆ. ಟ್ರಂಪ್ ಜಾಗತಿಕ ಶಾಂತಿಗಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಶ್ರಮವಹಿಸಿದ್ದಾರೆ. ಟ್ರಂಪ್ ಕೆಲಸಕ್ಕೆ ಯಹೂದಿಗಳು ಮಾತ್ರವಲ್ಲ, ಪ್ರಪಂಚದಾದ್ಯಂತ ಜನರು ಮೆಚ್ಚುಗೆ ಹೊಂದಿದ್ದಾರೆ ಎಂದು ನೆತನ್ಯಾಹು ಹೇಳಿದ್ದಾರೆ. ಇದಕ್ಕೆ ಮೊದಲು ಪಾಕಿಸ್ತಾನ ಕೂಡಾ ಭಾರತದ ಜೊತೆಗಿನ ಯದ್ಧ ನಿಲ್ಲಿಸಿದ್ದಾಗಿ ಟ್ರಂಪ್ ಗೆ ನೊಬೆಲ್ ಪ್ರಶಸ್ತಿ ನೀಡುವಂತೆ ನಾಮನಿರ್ದೇಶನ ಮಾಡಿತ್ತು.

ಮಂಗಳವಾರದಂದು ದುರ್ಗಾ ದೇವಿಯ ಆರಾಧನೆಗೆ ಹೇಳಿ ಮಾಡಿದ ದಿನ. ಇಂದು ದುರ್ಗಾದೇವಿಯ ಚಂಡಿಕಾ ಸ್ತೋತ್ರವನ್ನು ಓದುವುದರಿಂದ ಶತ್ರುಭಯ ನಾಶವಾಗಿ ಆತ್ಮಸ್ಥೈರ್ಯ ಮೂಡುವುದು.ಯಾ ದೇವೀ ಖಡ್ಗಹಸ್ತಾ ಸಕಲಜನಪದವ್ಯಾಪಿನೀ ವಿಶ್ವದುರ್ಗಾಶ್ಯಾಮಾಂಗೀ ಶುಕ್ಲಪಾಶಾ ದ್ವಿಜಗಣಗಣಿತಾ ಬ್ರಹ್ಮದೇಹಾರ್ಧವಾಸಾ |ಜ್ಞಾನಾನಾಂ ಸಾಧಯಿತ್ರೀ ಯತಿಗಿರಿಗಮನಜ್ಞಾನ ದಿವ್ಯ ಪ್ರಬೋಧಾಸಾ ದೇವೀ ದಿವ್ಯಮೂರ್ತಿಃ ಪ್ರದಹತು ದುರಿತಂ ಚಂಡಮುಂಡಾ ಪ್ರಚಂಡಾ || ೧ ||ಹ್ರಾಂ ಹ್ರೀಂ ಹ್ರೂಂ ಚರ್ಮಮುಂಡೇ ಶವಗಮನಹತೇ ಭೀಷಣೇ ಭೀಮವಕ್ತ್ರೇಕ್ರಾಂ ಕ್ರೀಂ ಕ್ರೂಂ ಕ್ರೋಧಮೂರ್ತಿರ್ವಿಕೃತಕುಚಮುಖೇ ರೌದ್ರದಂಷ್ಟ್ರಾಕರಾಲೇ |ಕಂ ಕಂ ಕಂ ಕಾಲಧಾರಿ ಭ್ರಮಸಿ ಜಗದಿದಂ ಭಕ್ಷಯಂತೀ ಗ್ರಸಂತೀಹುಂಕಾರಂ ಚೋಚ್ಚರಂತೀ ಪ್ರದಹತು ದುರಿತಂ ಚಂಡಮುಂಡಾ ಪ್ರಚಂಡಾ || ೨ ||

ಮುಂಬೈ: ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತದ ಐತಿಹಾಸಿಕ ಗೆಲುವನ್ನು ಉಲ್ಲೇಖಿಸಿ, ಭಾರತ ತಂಡವನ್ನು ಅಭಿನಂದಿಸಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಜಯ್ ಶಾ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಪೋಸ್ಟ್ ಇದೀಗ ವಿವಾದಕ್ಕೆ ಸಿಲುಕಿದೆ.ಇದಕ್ಕೆ ಕಾರಣ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಹೆಸರನ್ನು ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಭಾರತದ ನಾಯಕ ಶುಭಮನ್ ಗಿಲ್, ವೇಗಿ ಆಕಾಶ್ ದೀಪ್, ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರ ಹೆಸರನ್ನು ಪೋಸ್ಟ್‌ನಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ಎರಡನೇ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಸೇರಿದಂತೆ ಏಳು ವಿಕೆಟ್ ಪಡೆದ ಸಿರಾಜ್ ಹೆಸರನ್ನು ಜಯ್ ಶಾ ಅವರು ಉಲ್ಲೇಖಿಸಿಲ್ಲ.