ಶಿವಮೊಗ್ಗ: ಪ್ರಧಾನಮಂತ್ರಿಗಳ ವಿಕಸಿತ ಭಾರತದ ಸಂಕಲ್ಪಕ್ಕೆ ಪೂರಕವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಮಂಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.ಕೇಂದ್ರದ ಆಯವ್ಯಯಪತ್ರ ಮಂಡನೆಯನ್ನು ಇಂದು ವೀಕ್ಷಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. 3 ಕರ್ತವ್ಯಶಕ್ತಿಗಳ ಆಧಾರದ ಮೇಲೆ ಮಂಡಿಸಲ್ಪಟ್ಟ ಬಜೆಟ್ ಇದಾಗಿದೆ. ಉತ್ಪಾದನಾ ಹೆಚ್ಚಳ, ಜನರ ಆಶೋತ್ತರಗಳ ಈಡೇರಿಕೆ ಹಾಗೂ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ತಮ್ಮ ಬಜೆಟ್ ಮಂಡಿಸಿದ್ದಾರೆ ಎಂದು ವಿವರಿಸಿದರು.
ಮುಂಬೈ: ಮಹಾರಾಷ್ಟ್ರದಲ್ಲಿ ಮೊನ್ನೆಯಷ್ಟೇ ವಿಮಾನ ಪತನವಾಗಿ ಡಿಸಿಎಂ ಅಜಿತ್ ಪವಾರ್ ನಿಧನರಾಗಿದ್ದರು. ಇದಾಗಿ ಎರಡೇ ದಿನಕ್ಕೇ ಅವರ ಪತ್ನಿ ಉಪ ಮುಖ್ಯಮಂತ್ರಿಯಾಗಿ ಅವರ ಸ್ಥಾನಕ್ಕೆ ಬಂದಿದ್ದಾರೆ. ಇದರ ಹಿಂದಿನ ಮಾಸ್ಟರ್ ಪ್ಲ್ಯಾನ್ ಯಾರದ್ದು ಎಂಬ ಬಗ್ಗೆ ಈಗ ಗುಸು ಗುಸು ಚರ್ಚೆಯಾಗುತ್ತಿದೆ. ಪತಿಯ ಚಿತೆ ಆರುವ ಮುನ್ನವೇ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೆಲ್ಲಾ ಕೆಲವೇ ಗಂಟೆಗಳಲ್ಲಿ ನಡೆದು ಹೋಗಿತ್ತು. ಹಲವರು ಕನಿಷ್ಠ ಪಕ್ಷ ಅಜಿತ್ ಪವಾರ್ 11 ನೆಯ ದಿನದ ಕಾರ್ಯಕ್ರಮ ಮುಗಿಯುವವರೆಗಾದರೂ ಕಾಯಬಹುದಿತ್ತಲ್ಲವೇ ಎಂದೂ ಕಾಮೆಂಟ್ ಮಾಡಿದವರಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ತೆರಿಗೆ ವಿಚಾರದಲ್ಲಿ ಯಾವುದಕ್ಕೆ ವಿನಾಯ್ತಿ ನೀಡಿದ್ದಾರೆ, ಯಾವುದು ದುಬಾರಿಯಾಗುತ್ತದೆ ಇಲ್ಲಿದೆ ವಿವರ. ಈ ಬಾರಿ ಬಜೆಟ್ ನಲ್ಲಿ ಆದಾಯ ತೆರಿಗೆ ಮಿತಿ ಇಳಿಕೆಯಾಗಬಹುದಾ, ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕಗಳು ಕಡಿಮೆಯಾಗಬಹುದಾ? ಎಂಬಿತ್ಯಾದಿ ನಿರೀಕ್ಷೆಗಳಿತ್ತು. ಆದರೆ ಚಿನ್ನ, ಬೆಳ್ಳಿ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. ಆದರೆ ತೆರಿಗೆಯಲ್ಲೂ ವಿದೇಶೀ ಪ್ರವಾಸ, ಪ್ರವಾಸೋದ್ಯಮ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಘೋಷಣೆ ಮಾಡಿದ್ದಾರೆ. ಏಪ್ರಿಲ್ 1 ರಿಂದ ಹೊಸ ತೆರಿಗೆ ಕಾನೂನು ಜಾರಿಗೆ ಬರಲಿದ್ದು, ರಿಟರ್ನ್ ಫಾರ್ಮ್ ಗಳನ್ನು ಜನ ಸಾಮಾನ್ಯರೂ ಫೈಲ್ ಮಾಡುವಂತೆ ಸರಳೀಕೃತಗೊಳಿಸುವುದಾಗಿ ಹೇಳಿದ್ದಾರೆ.
ಮುಂಬೈ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2026 ಮಂಡಿಸಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಅಲ್ಲೋಕಲ್ಲೋಲವಾಗಿದೆ. ಸಹಜವಾಗಿಯೇ ಬಜೆಟ್ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿ ಬಜೆಟ್ ಘೋಷಣೆಯಾದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಭಾರೀ ಇಳಿಕೆ ಕಂಡಿದೆ. ಇದು ಆರಂಭದ ಟ್ರೆಂಡ್. ಬಜೆಟ್ ನಲ್ಲಿ ಘೋಷಿಸಿದ ಕೆಲವೊಂದು ಯೋಜನೆಗಳಿಗೆ ಸಂಬಂಧಿಸಿದ ಉತ್ಪನ್ನಗಳ ಷೇರು ಮೌಲ್ಯ ಮುಂದೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಬಾರಿ ಬಜೆಟ್ ನಲ್ಲಿ ಚಿನ್ನ, ಬೆಳ್ಳಿ ಮೇಲಿನ ಸುಂಕ ಇಳಿಕೆ ಮಾಡುತ್ತಾರಾ ಎಂಬ ನಿರೀಕ್ಷೆಗಳಿತ್ತು.
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2026 ರನ್ನು ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್ ಯುವ ಶಕ್ತಿ ಕೇಂದ್ರೀಕೃತ ಬಜೆಟ್ ಎಂದು ನಿರ್ಮಲಾ ಸೀತಾರಾಮನ್ ಬಣ್ಣಿಸಿದ್ದಾರೆ. ಈ ಬಾರಿ ಬಜೆಟ್ ನಲ್ಲಿ ಯುವ ಶಕ್ತಿ, ಮಹಿಳೆಯರು, ಕೃಷಿ, ಪ್ರವಾಸೋದ್ಯಮಕ್ಕೆ ಕೆಲವು ವಿಶೇಷ ಯೋಜನೆಗಳನ್ನು ಘೋಷಿಸಲಾಗಿದೆ. 2047 ಕ್ಕೆ ಭಾರತವನ್ನು ಸೂಪರ್ ಪವರ್ ರಾಷ್ಟ್ರವಾಗಿಸುವ ಗುರಿ ಪ್ರಧಾನಿ ಮೋದಿ ಹೊಂದಿದ್ದಾರೆ. ಅದಕ್ಕಾಗಿ ಯುವಶಕ್ತಿಯನ್ನು ಕೇಂದ್ರೀಕರಿಸಿ ಯೋಜನೆಗಳನ್ನು ಘೋಷಿಸಲಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಘೋಷಿಸಿದರು. ಈ ಬಾರಿ ಘೋಷಿಸಲಾದ ಹೊಸ ಯೋಜನೆಗಳ ಪಟ್ಟಿ ಇಲ್ಲಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಕೆಲವು ವಸ್ತುಗಳ ಮೇಲಿನ ಸುಂಕ ಇಳಿಕೆ ಮಾಡಿದ್ದರೆ ಮತ್ತೆ ಕೆಲವು ದುಬಾರಿಯಾಗಿವೆ. ಯಾವೆಲ್ಲಾ ವಸ್ತುಗಳು ದುಬಾರಿಯಾಗಿವೆ, ಯಾವೆಲ್ಲಾ ವಸ್ತುಗಳು ಇಳಿಕೆಯಾಗಿವೆ ಇಲ್ಲಿದೆ ನೋಡಿ ವಿವರ. ಈ ಬಾರಿ ಮಾರಕ ರೋಗಗಳ ಔಷಧಿಗಳ ಮೇಲಿನ ಆಮದು ಸುಂಕ ಇಳಿಕೆ ಮಾಡಿರುವುದು ಮಧ್ಯಮ ವರ್ಗದವರಿಗೆ ಬಿಗ್ ರಿಲೀಫ್ ನೀಡಲಿದೆ. ಕ್ಯಾನ್ಸರ್, ಮಧುಮೇಹಕ್ಕೆ ಸಂಬಂಧಿಸಿದ ಔಷಧಿಗಳ ಮೇಲಿನ ಸುಂಕ ಇಳಿಕೆಯಾಗಿದೆ. ಒಟ್ಟು 7 ಖಾಯಿಲೆಗಳ ಔಷಧಿಗಳ ಸುಂಕ ಇಳಿಕೆಯಾಗಿದೆ. ಇದರಿಂದ ಔಷಧಿ ಖರೀದಿ ಕೊಂಚ ಅಗ್ಗವಾಗಲಿದೆ. ಜೊತೆಗೆ ದುಬಾರಿ ಬೆಲೆಯ ಔಷಧಿಗಳ ಆಮದು ಬೆಲೆಯೂ ಇಳಿಕೆಯಾಗಲಿದೆ.
ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದ ಬೆಂಗಳೂರನ್ನು ಒಳಗೊಂಡಂತೆ ಭರ್ಜರಿ ಯೋಜನೆಯೊಂದನ್ನು ಘೋಷಿಸಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಹೈಸ್ಪೀಡ್ ರೈಲು ಯೋಜನೆ ಘೋಷಿಸುವ ನಿರೀಕ್ಷೆಯಿತ್ತು. ಅದರಂತೆ ಬೆಂಗಳೂರು ಒಳಗೊಂಡಂತೆ ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಹೈಸ್ಪೀಡ್ ರೈಲು ಯೋಜನೆಯನ್ನು ಘೋಷಿಸಲಾಗಿದೆ. ಹೈಸ್ಪೀಡ್ ಕಾರಿಡಾರ್ ಯೋಜನೆಯಲ್ಲಿ ಪ್ರಮುಖ ನಗರಗಳನ್ನು ಸಂಪರ್ಕಿಸುವ 7 ಹೈಸ್ಪೀಡ್ ರೈಲು ಘೋಷಿಸಲಾಗಿದೆ. ಚೆನ್ನೈ-ಬೆಂಗಳೂರು, ಮುಂಬೈ - ಪುಣೆ, ಹೈದರಾಬಾದ್-ಬೆಂಗಳೂರು, ಮುಂಬೈ-ಪುಣೆ, ದೆಹಲಿ-ವಾರಣಾಸಿ, ಪುಣೆ-ಹೈದರಾಬಾದ್, ಹೈದರಾಬಾದ್-ಚೆನ್ನೈ ವಾರಣಾಸಿ-ಸಿಲಿಗುರಿ ಹೈಸ್ಪೀಡ್ ರೈಲುಗಳನ್ನು ಘೋಷಿಸಲಾಗಿದೆ.
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2026 ರನ್ನು ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್ ಯುವ ಶಕ್ತಿ ಕೇಂದ್ರೀಕೃತ ಬಜೆಟ್ ಎಂದು ನಿರ್ಮಲಾ ಸೀತಾರಾಮನ್ ಬಣ್ಣಿಸಿದ್ದಾರೆ. ನಾವು ಶೇ.7 ರಷ್ಟು ಅಭಿವೃದ್ಧಿ ಹೊಂದಿದ್ದೇವೆ. ಜಾಗತಿಕ ಮಾರುಕಟ್ಟೆಯೊಂದಿಗೆ ಪೈಪೋಟಿ ನೀಡುತ್ತಿದ್ದೇವೆ. ನಾವು ಜಗತ್ತಿನ ನಂ.1 ಆರ್ಥಿಕ ಶಕ್ತಿಯಾಗಿ ಬೆಳೆಯುವ ಗುರಿ ಹೊಂದಿದ್ದೇವೆ ಎಂದು ವಿತ್ತ ಸಚಿವೆ ಹೇಳಿದ್ದಾರೆ. ಹಲವು ಅನಿಶ್ಚಿತತೆಗಳ ನಡುವೆಯೂ ನಾವು ಆರ್ಥಿಕ ಸ್ಥಿರತೆ ಕಾಯ್ದುಕೊಂಡಿದ್ದೇವೆ ಎಂದಿದ್ದಾರೆ. 10 ಸಾವಿರ ಕೋಟಿ ರೂ ವೆಚ್ಚದಲ್ಲಿ ಬಯೋಫಾರ್ಮ್ ಇಂಡಸ್ಟ್ರಿ ಸ್ಥಾಪಿಸಲಿದ್ದೇವೆ.
ನವದೆಹಲಿ: ಸಂಸತ್ ನಲ್ಲಿ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದು ಅದಾದ ತಕ್ಷಣವೇ ಪ್ರಧಾನಿ ಮೋದಿ ಈ ಒಂದು ಸ್ಥಳಕ್ಕೆ ತುರ್ತಾಗಿ ಭೇಟಿ ನೀಡಲಿದ್ದಾರೆ. ಸಂಸತ್ ನಲ್ಲಿ ಇದೇ ಮೊದಲ ಬಾರಿ ಭಾನುವಾರ ಬಜೆಟ್ ಮಂಡನೆಯಾಗುತ್ತಿದೆ. ಫೆಬ್ರವರಿ 1 ರಂದು ಬಜೆಟ್ ಮಂಡಿಸುವ ಸಂಪ್ರದಾಯ ಮುರಿಯದಿರಲು ಈ ಬಾರಿ ಭಾನುವಾರವಾದರೂ ಬಜೆಟ್ ಮಂಡನೆಯಾಗುತ್ತಿದೆ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಪ್ರಧಾನಿ ಮೋದಿ ಸಂಸತ್ ನಲ್ಲಿರಲಿದ್ದಾರೆ. ಅದಾದ ಬಳಿಕ ಅವರು ತುರ್ತಾಗಿ ಪಂಜಾಬ್ ನ ಜಲಂಧರ್ ಗೆ ಭೇಟಿ ನೀಡಲಿದ್ದಾರೆ. ಅದಕ್ಕೆ ಒಂದು ಕಾರಣವೂ ಇದೆ.
ನವದೆಹಲಿ: ಕೇಂದ್ರ ಬಜೆಟ್ 2026 ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಉಟ್ಟಿರುವ ಸೀರೆಗೂ ವಿಶೇಷತೆಯಿದೆ. ಪ್ರತೀ ಬಾರಿಯೂ ಬಜೆಟ್ ನಷ್ಟೇ ನಿರ್ಮಲಾ ಸೀತಾರಾಮನ್ ಉಡುವ ಸೀರೆಗಳಿಗೂ ವಿಶೇಷತೆಯಿರುತ್ತದೆ. ಆ ಸಂದರ್ಭದಲ್ಲಿ ಯಾವ ರಾಜ್ಯಗಳಲ್ಲಿ ಚುನಾವಣೆ ಇರುತ್ತದೋ, ಇನ್ನೇನೋ ವಿಶೇಷತೆಯಿರುತ್ತದೋ ಅಲ್ಲಿಗೆ ಸಂಬಂಧಿಸಿದ ಸೀರೆಯನ್ನೇ ನಿರ್ಮಲಾ ಇದುವರೆಗೂ ಉಟ್ಟಿದ್ದಾರೆ. ಮೇಲ್ನೋಟಕ್ಕೆ ಅವರ ಉಡುಗೆ ಸರಳವಾಗಿದ್ದರೂ ಅದಕ್ಕೊಂದು ಅರ್ಥವಿರುತ್ತದೆ. ಈ ಬಾರಿ ಪಂಚ ರಾಜ್ಯ ಚುನಾವಣೆ ನಡೆಯಲಿದ್ದು ಈ ಪೈಕಿ ತಮ್ಮ ತವರು ತಮಿಳುನಾಡು ಕೂಡಾ ಆ ರಾಜ್ಯಗಳ ಪೈಕಿ ಒಂದಾಗಿದೆ.
ಬೆಂಗಳೂರು: ಕೇಂದ್ರ ಬಜೆಟ್ ಗೆ ಮುನ್ನ ಚಿನ್ನದ ದರ ಭರ್ಜರಿ ಇಳಿಕೆ ಕಂಡಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ಭಾರೀ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತ ಏರಿಕೆ ಮತ್ತು ಇಳಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಏರಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಮತ್ತೆ ಇಳಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,70,280.00 ರೂ.ಗಳಿತ್ತು. ಇಂದು 1,64,290.00 ರೂ.ಗಳಷ್ಟಾಗಿದೆ.
ಬೆಂಗಳೂರು: ಧರ್ಮಸ್ಥಳ ಸೌಜನ್ಯ ಪ್ರಕರಣದಲ್ಲಿ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪುತ್ತೂರು ಉಪವಿಭಾಗಾಧಿಕಾರಿ ಒಂಬತ್ತು ತಿಂಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಡಿಪಾರು ಮಾಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.ಅರ್ಜಿದಾರರು ಎತ್ತಿರುವ ಆಕ್ಷೇಪಣೆಗಳನ್ನು ಸರಿಯಾಗಿ ಪರಿಗಣಿಸಿ ಮೂರು ವಾರಗಳಲ್ಲಿ ಹೊಸ ಆದೇಶ ಹೊರಡಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿದೆ. ತಿಮರೋಡಿ ಅವರನ್ನು ಹಿಂದಿನ ಆದೇಶದಡಿಯಲ್ಲಿ ಡಿಸೆಂಬರ್ 16, 2025 ರಿಂದ ಸೆಪ್ಟೆಂಬರ್ 16, 2026 ರವರೆಗೆ ಗಡಿಪಾರು ಮಾಡಲಾಗಿತ್ತು, ಅದನ್ನು ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ನವದೆಹಲಿ: ಇನ್ನೇನು ಕೆಲವೇ ಕ್ಷಣಗಳಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ 2026 ರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಮನೆಯಲ್ಲಿಯೇ ಇದ್ದು ರಿಲ್ಯಾಕ್ಸ್ ಆಗಿ ಬಜೆಟ್ ವೀಕ್ಷಿಸಬಹುದಾಗಿದೆ. ಈ ಬಾರಿ ಇದೇ ಮೊದಲ ಬಾರಿಗೆ ಭಾನುವಾರ ಬಜೆಟ್ ಮಂಡನೆಯಾಗುತ್ತಿರುವುದು ವಿಶೇಷ. ಇಷ್ಟು ದಿನವೂ ಬಜೆಟ್ ವೀಕ್ಷಣೆ ಮಾಡುವಾಗ ಉದ್ಯೋಗಿಗಳಿಗೆ ಕಚೇರಿ ಕೆಲಸದ ಒತ್ತಡವಿರುತ್ತಿತ್ತು. ಆದರೆ ಈ ಬಾರಿ ಭಾನುವಾರವಾಗಿರುವುದರಿಂದ ಕೆಲಸದ ಒತ್ತಡವಿರುವುದಿಲ್ಲ. ಮನೆಯಲ್ಲಿಯೇ ಕುಳಿತು ಆರಾಮವಾಗಿ ಬಜೆಟ್ ವೀಕ್ಷಿಸಬಹುದಾಗಿದೆ. ವಿಶೇಷವಾಗಿ ತೆರಿಗೆ ವಿನಾಯ್ತಿ ಹೆಚ್ಚಳವಾಗುತ್ತಾ ಎಂದು ನೌಕರ ವರ್ಗದವರು ಕುತೂಹಲದಿಂದ ಕಾಯುತ್ತಿದ್ದಾರೆ.
ನವದೆಹಲಿ: ಈ ಬಾರಿ ಕೇಂದ್ರ ಬಜೆಟ್ 2026 ಭಾನುವಾರ ಮಂಡನೆಯಾಗುತ್ತಿರುವುದು ವಿಶೇಷವಾಗಿದೆ. ಇದೇ ಮೊದಲ ಬಾರಿಗೆ ಕೇಂದ್ರ ಬಜೆಟ್ ಭಾನುವಾರ ಮಂಡನೆಯಾಗುತ್ತಿದೆ. ಅದಕ್ಕೆ ಕಾರಣವೂ ಇದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 9 ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಅವರು ಭಾನುವಾರ ಬಜೆಟ್ ಮಂಡಿಸುತ್ತಿರುವುದು ವಿಶೇಷವಾಗಿದೆ. 2017 ರಿಂದ ಕೇಂದ್ರ ಬಜೆಟ್ ಪ್ರತೀ ವರ್ಷವೂ ಫೆಬ್ರವರಿ 1 ಕ್ಕೆ ಮಂಡನೆಯಾಗುತ್ತಿದೆ. 2016 ರವರೆಗೆ ಬ್ರಿಟಿಷ್ ಪದ್ಧತಿಯಂತೆ ಫೆಬ್ರವರಿ ಕೊನೆಯ ದಿನ ಬಜೆಟ್ ಮಂಡನೆಯಾಗುತ್ತಿತ್ತು. ಆದರೆ ಬ್ರಿಟಿಷ್ ಪದ್ಧತಿಯನ್ನು ಮುರಿದು ಭಾರತದಲ್ಲಿ 2017 ರಿಂದ ಫೆಬ್ರವರಿ 1 ರಿಂದ ಬಜೆಟ್ ಮಂಡನೆ ಆರಂಭವಾಗಿತ್ತು.
ತಿರುವನಂತಪುರ: ಎಡಗೈ ಬ್ಯಾಟರ್ ಇಶಾನ್ ಕಿಶನ್ ಅಬ್ಬರಕ್ಕೆ ನ್ಯೂಜಿಲ್ಯಾಂಡ್ ಅಕ್ಷರಶಃ ಬೆಚ್ಚಿ ಬಿದ್ದಿತು. ರನ್ ಹೊಳೆ ಹರಿದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ ಗೆದ್ದು ಬೀಗಿತು. ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 46 ರನ್ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿದೆ.ತಿರುವನಂತಪುರದಲ್ಲಿ ನಡೆದ ಐದನೇ ಪಂದ್ಯದಲ್ಲಿ, ಇಶಾನ್ ಕಿಶನ್ 43 ಎಸೆತಗಳಲ್ಲಿ 103 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಇದೇ ತಿಂಗಳು ನಡೆಯುವ ಟಿ20 ವಿಶ್ವಕಪ್ಗೆ ಭರ್ಜರಿ ಸಿದ್ಧತೆ
ತಿರುವನಂತಪುರಂ: ನ್ಯೂಜಿಲೆಂಡ್ ವಿರುದ್ಧ ಕೊನೆಯ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಅಬ್ಬರದ ಶತಕ ಸಿಡಿಸಿದ್ದು ತವರಿನಲ್ಲೂ ವಿಫಲರಾದ ಸಂಜು ಸ್ಯಾಮ್ಸನ್ ಭವಿಷ್ಯವೇ ಫಿನಿಶ್ ಆಯಿತು ಎನ್ನಬಹುದು. ಇಂದು ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಇದುವರೆಗೆ ನಾಲ್ಕೂ ಪಂದ್ಯಗಳಲ್ಲಿ ವಿಫಲರಾಗಿದ್ದ ಸಂಜು ಇಂದು ತವರಿನಲ್ಲಾದರೂ ಸಿಡಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಕೇವಲ 6 ರನ್ ಗಳಿಸಿ ಔಟಾದರು. ಇನ್ನೊಂದೆಡೆ ಅಭಿಷೇಕ್ ಶರ್ಮಾ ಅಬ್ಬರದ 30 ರನ್ ಗಳಿದರು.
ನವದೆಹಲಿ: ಮುಂಬೈನಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸುನೇತ್ರಾ ಪವಾರ್ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಶುಭಕೋರಿದರು. ಕಾಂಗ್ರೆಸ್ ಪಕ್ಷದ ನಾಯಕ, ದಿವಂಗತ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಅಭಿನಂದಿಸಿದ್ದಾರೆ. X ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಜನರ ಕಲ್ಯಾಣಕ್ಕಾಗಿ ಅವರು ಅವಿಶ್ರಾಂತವಾಗಿ ಕೆಲಸ ಮಾಡುತ್ತಾರೆ ಮತ್ತು ಅಜಿತ್ ಪವಾರ್ ಅವರ ಕನಸನ್ನು ಈಡೇರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. "ಈ ಜವಾಬ್ದಾರಿಯನ್ನು ಹೊತ್ತ ಮೊದಲ ಮಹಿಳೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಜಿ ಅವರು ತಮ್ಮ ಅಧಿಕಾರಾವಧಿಯನ್ನು ಪ್ರಾರಂಭಿಸುತ್ತಿರುವಾಗ ಅವರಿಗೆ ಶುಭಾಶಯಗಳು. ಅವರು ರಾಜ್ಯದ ಜನರ ಕಲ್ಯಾಣಕ್ಕಾಗಿ
ಭಾರತ vs ನ್ಯೂಜಿಲೆಂಡ್ 5ನೇ ಟಿ20 ಪಂದ್ಯಾಟದಲ್ಲಿ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಮೂರು ಪಂದ್ಯಗಳಲ್ಲಿಯೇ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯನ್ನು ಈಗಾಗಲೇ ವಶಪಡಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ, ಮುಂದಿನ ವಾರ ಟಿ20 ವಿಶ್ವಕಪ್ ಆರಂಭವಾಗುವ ಮೊದಲು ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ತಮ್ಮ ಕೊನೆಯ ಅಧಿಕೃತ ಸರಣಿಯಿಂದ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದೆ.
ಪಶ್ಚಿಮ ಬಂಗಾಳ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ತೃಣಮೂಲ ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದರು ಮತ್ತು ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ವಿರೋಧಕ್ಕಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ಜನರು ಕ್ಷಮಿಸುವುದಿಲ್ಲ ಎಂದು ಹೇಳಿದರು. ಬಾಗ್ಡೋಗ್ರಾದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, "ವಂದೇ ಮಾತರಂ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾದಾಗ, ಈ ತೃಣಮೂಲ ಕಾಂಗ್ರೆಸ್ ಜನರು ಅದನ್ನು ವಿರೋಧಿಸುತ್ತಿರುವುದು
ಬೆಂಗಳೂರು: ದೇಶವನ್ನೇ ಬೆಚ್ಚಿಬೀಳಿಸಿದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಇದೀಗ ಪ್ರಕರಣವನ್ನು ಎಸ್ಐಟಿ ಹೆಗಳಿಗೆ ವಹಿಸಿದೆ. ರಾಜ್ಯ ಸರ್ಕಾರ, ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಎಸ್ಐಟಿ ರಚಿಸಿ ಆದೇಶ ಹೊರಡಿಸಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಈ ಸಂಬಂಧ ಪ್ರತಿಕ್ರಿಯಿಸಿ, ಎಸ್ಐಟಿಯಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕೂಡ ಇರುತ್ತಾರೆ ಎಂದು ತಿಳಿಸಿದರು.
ಮಹಾರಾಷ್ಟ್ರ: ಜನವರಿ 31, 2026 ರಂದು ಮಹಾರಾಷ್ಟ್ರ ರಾಜ್ಯಪಾಲ ಆಚಾರ್ಯ ದೇವವ್ರತ್, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಮತ್ತು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಎನ್ಸಿಪಿ ನಾಯಕಿ ಸುನೇತ್ರಾ ಪವಾರ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ಮೃತ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಲಿದ್ದಾರೆ. ಅಜಿತ್ ಬದಲಿಗೆ ಹೊಸ ನಾಯಕಿಯನ್ನು ಆಯ್ಕೆ ಮಾಡಲು ಎನ್ಸಿಪಿ ಶನಿವಾರ (ಜನವರಿ 31, 2026) ತನ್ನ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಿತು, ಅಲ್ಲಿ ಸುನೇತ್ರಾ ಪವಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಬರಾಸತ್ನಲ್ಲಿರುವ ಖಾಸಗಿ ಆಸ್ಪತ್ರೆಯ ಇಬ್ಬರು ನರ್ಸ್ಗಳಲ್ಲಿ ಒಬ್ಬರಿಗೆ ನಿಪಾ ವೈರಸ್ ಸೋಂಕು ತಗುಲಿದ್ದು, ಅವರನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಬ್ಬ ನರ್ಸ್ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು ವೆಂಟಿಲೇಟರ್ ಬೆಂಬಲದೊಂದಿಗೆ ಇದ್ದಾರೆ.ಜನವರಿ 11 ರಂದು ಮಹಿಳಾ ಮತ್ತು ಪುರುಷ ನರ್ಸ್ ಇಬ್ಬರಿಗೂ ನಿಪಾ ಸೋಂಕು ತಗುಲಿದ್ದು, ಅವರನ್ನು ಅವರು ಕೆಲಸ ಮಾಡುತ್ತಿರುವ ಬರಾಸತ್ನ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ.“ನಮ್ಮ ಆಸ್ಪತ್ರೆಗೆ ದಾಖಲಾಗಿರುವ ಇಬ್ಬರು ನಿಪಾ ರೋಗಿಗಳಲ್ಲಿ, ಪುರುಷ ನರ್ಸ್ ಕಳೆದ ಒಂದು ವಾರದಿಂದ ಜ್ವರ ಮತ್ತು
ಬೆಂಗಳೂರು: ಸಿಎಂ ಹುದ್ದೆಯ ನಿರೀಕ್ಷೆಯಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಇದೀಗ ಅಜ್ಜನಾಗುತ್ತಿದ್ದಾರೆ ಎನ್ನಲಾಗಿದೆ. ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರು ಶೀಘ್ರದಲ್ಲೇ ತಾಯಿಯಾಗುತ್ತಿದ್ದಾರೆ ಎಂಬ ಮಾತಿದೆ. ನಿನ್ನೆ ಕನಕಪುರ ಕನಕೋತ್ಸವದಲ್ಲಿ ಡಿಕೆಶಿ ಪುತ್ರಿ ಐಶ್ವರ್ಯ ಅವರು ಭಾಗಿಯಾಗಿ, ತಮ್ಮ ತಂದೆಯ ನಾಯಕತ್ವ ಹಾಗೂ ಕನಕಪುರದ ಬಗ್ಗೆ ಕೊಂಡಾಡಿದ್ದರು. ಇದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಐಶ್ವರ್ಯ ಉಬ್ಬು ಹೊಟ್ಟೆ ನೋಡಿ, ಶೀಘ್ರದಲ್ಲೇ ಮಗುವಿನ ನಿರೀಕ್ಷೆಯಲ್ಲಿದ್ದಾರೆಂದು ನೆಟ್ಟಿಗರು ಕಮೆಂಟ್ಸ್ ಮಾಡುತ್ತಿದ್ದಾರೆ
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಕೇಂದ್ರ ಬಜೆಟ್ 2026 ರನ್ನು ಮಂಡಿಸಲಿದ್ದಾರೆ. ಈ ಬಜೆಟ್ ಹಲವು ವಿಶೇಷತೆಗಳನ್ನು ಹೊಂದಿದ್ದು ಎಷ್ಟು ಹೊತ್ತಿಗೆ ಬಜೆಟ್ ಮಂಡನೆಯಾಗಲಿದೆ ಇಲ್ಲಿದೆ ಸಂಪೂರ್ಣ ವಿವರ. ಕೇಂದ್ರ ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ 2019 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದುವರೆಗೆ ಅವರು 8 ಪೂರ್ಣ ಪ್ರಮಾಣದ ಮತ್ತು ಒಂದು ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಇದರೊಂದಿಗೆ ಅತೀ ಹೆಚ್ಚು ಬಜೆಟ್ ಮಂಡಿಸಿದ ಭಾರತ ವಿತ್ತ ಸಚಿವರ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮೊರಾರ್ಜಿ ದೇಸಾಯಿ ಅತೀ ಹೆಚ್ಚು 10 ಬಾರಿ ಬಜೆಟ್ ಮಂಡಿಸಿದ್ದಾರೆ.
ತಾನೇ ಪಿಸ್ತೂಲ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಸಾವಿಗೂ ಮುನ್ನಾ ತನ್ನ ತಾಯಿಯ ಜತೆ ಮಾತನಾಡಲು ಬಯಸಿದ್ದರು ಎಂದು ತಿಳಿದುಬಂದಿದೆ. ಆದಾಯ ತೆರಿಗೆ (ಐಟಿ) ಅಧಿಕಾರಿಗಳು ತಮ್ಮ ಕಂಪನಿಗಳ ಮೇಲೆ ತನಿಖೆ ನಡೆಸುತ್ತಿರುವಾಗಲೇ ರಾಯ್ ಅವರು ಅದೇ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೂ ಸಾವಿಗೂ ಮುನ್ನಾ ರಾಯ್ ತಮ್ಮ ತಾಯಿಯೊಂದಿಗೆ ಮಾತನಾಡಲು ಬಯಸಿರುವುದಾಗಿ ಸಹೋದ್ಯೋಗಿಗಳಿಗೆ ತಿಳಿಸಿದ್ದರು
ಹಾಸನ: ಈಚೆಗೆ ಸುದ್ದಿಗೆ ಕಾರಣವಾಗಿದ್ದ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಮನೆ ಸಮೀಪದ ನಿವೇಶನ ಮಾಲೀಕತ್ವ ಜಟಾಪಟಿ ಇದೀಗ ಮತ್ತೇ ಸುದ್ದಿಯಾಗುತ್ತಿದೆ. ಯಶ್ ಅವರ ತಾಯಿ ಪುಷ್ಪಾ ಅವರು ತನ್ನ ಮನೆ ಬಳಿ ಕಾಂಪೌಂಡ್ ಕೆಡವಿಸಿದ್ದ ಮಾಲೀಕನ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ನೀನು ದಾಖಲೆ ಸಮೇತ ಚರ್ಚೆಗೆ ಬಾ, ನಾನು ಬರ್ತಿನಿ ಅಲ್ಲಿ ನೋಡೋನಾ ಯಾರಿದ್ದು ಸರಿ, ಯಾರಿದ್ದು ತಪ್ಪು ಎಂದು ಪುಷ್ಪ ಅವರು ಸವಾಲೆಸೆದಿದ್ದಾರೆ. ಘಟನೆ ವಿವರ ಇಲ್ಲಿದೆ: ಸೈಟ್ ಬಳಿ ಆಗಮಿಸಿರುವ ಯಶ್ ತಾಯಿ ಪುಷ್ಪಾ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದರು. ಇದೇ ವೇಳೆ
ಬೀದರ್: ಇಲ್ಲಿ ಸಂಭವಿಸಿದ ನಿಗೂಢ ಸ್ಫೋಟದಲ್ಲಿ 4 ಮಕ್ಕಳು ಸೇರಿ ಕನಿಷ್ಟ 6 ಮಂದಿ ಮಕ್ಕಳು ಗಾಯಗೊಂಡಿರುವ ಘಟನೆ ವರದಿಯಾಗಿದೆ.ಬೀದರ್ನ ಹುಮ್ನಾಬಾದ್ ತಾಲೂಕಿನ ಮೋಳಕೇರಾ ಗ್ರಾಮದಲ್ಲಿ ಸಂಭವಿಸಿದ ಅನುಮಾನಾಸ್ಪದ ವಸ್ತು ಸ್ಫೋಟದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಆರು ಜನರು ಗಾಯಗೊಂಡಿದ್ದಾರೆ. ಇನ್ನೂ ಶಾಲೆಗೆ ತೆರಳುತ್ತಿದ್ದ ನಾಲ್ಕು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ವಯಸ್ಕರು ತೀವ್ರ ಗಾಯಗೊಂಡಿದ್ದು,
ಕನಕಪುರ: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರು ಆತ್ಮಹತ್ಯೆ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಹೊಸ ಬಾಂಬ್ ಸಿಡಿಸಿದ್ದು, ಇದು ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದಲ್ಲಿ ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಸಿಜೆ ರಾಯ್ ಅವರೇ ಶೂಟ್ ಮಾಡಿಕೊಂಡ್ರಾ ಅಥವಾ ಬೇರೆ ಯಾರಾದರೂ ಶೂಟ್ ಮಾಡಿಕೊಂಡರಾ ಎಂಬ ಅನುಮಾನವಿದೆ ಎಂಬ ಪ್ರದೀಪ್ ಈಶ್ವರ್ ಹೇಳಿಕೆ ಭಾರೀ ಕುತೂಹಲವನ್ನು ಮೂಡಿಸಿದೆ. ಶೂಟೌಟ್ ಸಂಬಂಧ ಐಟಿ ಅಧಿಕಾರಿಗಳ ಮೇಲೆ ಬೊಟ್ಟು ಮಾಡಿದರು. ಶೂಟೌಟ್ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ
ಮುಂಬೈ (ಮಹಾರಾಷ್ಟ್ರ): ಈಚೆಗೆ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಮತ್ತು ಅವರು ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಬಾರಾಮತಿಯಲ್ಲಿ ಬುಧವಾರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾದ ನಂತರ ಈ ಸ್ಥಾನ ತೆರವಾಗಿದೆ. ಅವರು ಇಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪಕ್ಷದ ಕಾರ್ಯಕಾರಿ ಅಧ್ಯಕ್ಷ
ಬೆಂಗಳೂರು: 2026 ರ ಕೇಂದ್ರ ಬಜೆಟ್ಗೆ ಮುಂಚಿತವಾಗಿ, ಕರ್ನಾಟಕದ ಕಾನೂನು ಸಚಿವ ಎಚ್ಕೆ ಪಾಟೀಲ್ ಅವರು ಭಾರತದ ಫೆಡರಲ್ ರಚನೆಯನ್ನು ಬಲಪಡಿಸುವ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಉತ್ತೇಜಿಸುವ ಬಜೆಟ್ನ ಅಗತ್ಯವನ್ನು ಒತ್ತಿ ಹೇಳಿದರು.ಫೆಡರಲ್ ಸಂಸ್ಥೆಗಳಲ್ಲಿ ವಿಶ್ವಾಸ ತುಂಬಲು ಮತ್ತು ಕೇಂದ್ರವು ಎಲ್ಲಾ ಅಂಶಗಳನ್ನು ಪರಿಹರಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಪಾಟೀಲ್ ಒತ್ತಾಯಿಸಿದರು.
ಬೆಂಗಳೂರು: ವಿಬಿ ಜಿ ರಾಮ್ ಜಿಯಲ್ಲಿ ರಾಮನ ಉದ್ಭವವನ್ನು ಕಾಂಗ್ರೆಸ್ಸಿಗೆ ಸಹಿಸಲು ಸಾಧ್ಯವಾಗಿಲ್ಲ. ಹಿಂದುತ್ವ, ರಾಮನ ವಿರೋಧ ಕಾಂಗ್ರೆಸ್ಸಿಗೆ ಸಹಜವಾದುದು. ಇದನ್ನು ವಿರೋಧಿಸಲೇಬೇಕೆಂದೇ ವಿಶೇಷ ಅಧಿವೇಶನ ಕರೆದಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಜೋಡಿಸಿದ್ದಲ್ಲ; ವಿಕಸಿತ ಭಾರತ ಗ್ಯಾರಂಟಿ ರೋಜ್ಗಾರ್ ಅಜೀವಿಕಾ ಮಿಷನ್ ಎಂಬುದು ರಾಮ್ ಎಂದು ಬಂದಿದೆ. ಯೋಜನೆಯಲ್ಲಿ ಇದೊಂದು ರೀತಿಯ ರಾಮೋದ್ಭವ ಆಗಿದೆ ಎಂದು ತಿಳಿಸಿದರು.
ಬೆಂಗಳೂರು, ಜನವರಿ 2026: ಪ್ರೀತಿಯಿಂದ ಮತ್ತು ಸೂಕ್ಷ್ಮವಾಗಿ ರೂಪಿಸಲಾದ ‘ಆಫ್ಬೀಟ್’ ಸಸ್ಯಾಹಾರಿರೆಸ್ಟೋರೆಂಟ್ರಾರಸ್ (RARUS) ತನ್ನಬಹುನಿರೀಕ್ಷಿತ ಔಟ್ಲೆಟ್ ಅನ್ನು ಬೆಂಗಳೂರಿನ ಜಯನಗರದಲ್ಲಿ ಅಧಿಕೃತವಾಗಿ ಆರಂಭಿಸಿದೆ.ಆಹಾರವು ಒಂದು ವಿಶ್ವವ್ಯಾಪಿ ಭಾಷೆ ಎಂಬ ನಂಬಿಕೆಯಿಂದ ಪ್ರೇರಿತವಾಗಿರುವ ರಾರಸ್, ಪ್ರೀತಿ, ನವೀನತೆ ಮತ್ತು ಅಚಲಗುಣಮಟ್ಟವನ್ನುಒಂದಾಗಿ ಬೆರೆಸಿದ ನಿಜಕ್ಕೂ ಅಪರೂಪದ ಪಾಕ ಅನುಭವವನ್ನು ಊಟ ಪ್ರಿಯರಿಗೆ ನೀಡಲು ಮುಂದಾಗಿದೆ. ಲ್ಯಾಟಿನ್ಭಾಷೆಯಲ್ಲಿ “ಅಪರೂಪ” ಎಂಬ ಅರ್ಥಹೊಂದಿರುವ RARUS ಎಂಬಹೆಸರು, ಇತರರಿಂದ ವಿಭಿನ್ನವಾಗಿರುವ, ನೆನಪಿನಲ್ಲಿ ಉಳಿಯುವ ವಿಶಿಷ್ಟ ಊಟದ ಅನುಭವಗಳನ್ನು ನೀಡುವುದು ಎಂಬ ಸಂಸ್ಥೆಯ ಮೂಲತತ್ವವನ್ನು ಪ್ರತಿಬಿಂಬಿಸುತ್ತದೆ.
ಪಶ್ಚಿಮ ಬಂಗಾಳ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, ಅವರು ಅಧಿಕಾರಕ್ಕೆ ಬಂದ "ಮಾ, ಮಾತಿ, ಮಾನುಷ್" ಎಂಬ ಘೋಷಣೆಯು ಈಗ ರಾಜ್ಯದಲ್ಲಿ ಅಸುರಕ್ಷಿತವಾಗಿದೆ ಎಂದು ಆರೋಪಿಸಿದ್ದಾರೆ. ಉತ್ತರ 24 ಪರಗಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಶಾ, ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಹದಗೆಡುತ್ತಿದೆ, ಸುಲಿಗೆ ಮತ್ತು ಬಲವಂತದ ನಿಯಂತ್ರಣ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಚುನಾವಣಾ ಸಮಗ್ರತೆಯ ಮೇಲೆ ಅವುಗಳ ಪರಿಣಾಮದ ಬಗ್ಗೆ ಮಮತಾ ಸರ್ಕಾರವನ್ನು ಟೀಕಿಸಿದರು.
ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಸಿಜೆ ರಾಯ್ ಬಗ್ಗೆ ಬರಹಗಾರ ಚಕ್ರವರ್ತಿ ಚಂದ್ರಚೂಡ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಿಜೆ ರಾಯ್ ಗೆ ನಟಿಯರ ಸಹಸವಾಸವಿತ್ತು ಎಂದೂ ಹೇಳಿದ್ದಾರೆ. ಸಿಜೆ ರಾಯ್ ಗೆ 17 ರಾಷ್ಟ್ರಗಳಲ್ಲಿ ವ್ಯವಹಾರವಿತ್ತು. ಇಷ್ಟೊಂದು ರಾಷ್ಟ್ರಗಳಲ್ಲಿ ವ್ಯವಹಾರವಿದ್ದ ಮನುಷ್ಯ ಕೇವಲ ಐಟಿ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ? ಸಿಜೆ ರಾಯ್ ಸಾವು ಐಟಿ ರೈಡ್ ಗಿಂದ ದೊಡ್ಡದು. ಕಾಂಗ್ರೆಸ್ ನ ಹಲವು ನಾಯಕರೊಂದಿಗೆ ಒಳ್ಳೆ ಒಡನಾಟವಿದ್ದ ವ್ಯಕ್ತಿ.
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ ಹಲವರಲ್ಲಿ ದಿಗ್ಭಮೆ ಮೂಡಿಸಿದೆ. ರಿಯಲ್ ಎಸ್ಟೇಟ್ ಕಂಪನಿಯಾದ ಕಾನ್ಫಿಡೆಂಟ್ ಗ್ರೂಪ್ ಕಳೆದ ಹಲವು ವರ್ಷಗಳಿಂದ ಕನ್ನಡದ ರಿಯಾಲಿಟಿ ಶೋಗಳಿಗೆ ಪ್ರಮುಖ ಪ್ರಾಯೋಜಕತ್ವ ನೀಡಿತ್ತು.ಝಿ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಸೀಸನ್ 15ರಲ್ಲಿ ಹನುಮಂತು ರನ್ನರ್ ಅಪ್ ಆಗಿದ್ದಾಗ ಸಿ.ಜೆ. ರಾಯ್ ಅವರು ಬಹುಮಾನದ ರೂಪದಲ್ಲಿ ಹಣ ನೀಡಿದ್ದರು. ಬಳಿಕ ಬಿಗ್ಬಾಸ್ ಸೀಸನ್ 11ರಲ್ಲಿಯೂ ಹನುಮಂತ ಗೆದ್ದಾಗ ಅವರೇ ಖುದ್ದು ಹಣವನ್ನು ನೀಡಿದ್ದರು. ಈ ಬಗ್ಗೆ ಹನುಮಂತು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಲರ್ಸ್ ಕನ್ನಡದ ಪ್ರಮುಖ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ವಿಜೇತ ಹನುಮಂತ ಅವರ ಅವರು ಸಿ.ಜೆ. ರಾಯ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಬೆಂಗಳೂರು: ಕಾನ್ಫಿಡೆನ್ಸ್ ಗ್ರೂಪ್ ಸಂಸ್ಥೆಯ ಮಾಲಿಕ ಸಿಜೆ ರಾಯ್ ಮರಣೋತ್ತರ ಪರೀಕ್ಷೆ ವರದಿಗಳು ಹೊರಬಂದಿದ್ದು ಶಾಕಿಂಗ್ ವಿಚಾರಗಳು ಬಯಲಾಗಿವೆ. ಐಟಿ ದಾಳಿ ಬೆನ್ನಲ್ಲೇ ಒತ್ತಡಕ್ಕೊಳಗಾಗಿದ್ದ ಸಿಜೆ ರಾಯ್ ನಿನ್ನೆ ತಮ್ಮ ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇದೀಗ ಪ್ರಾಥಮಿಕ ವರದಿಗಳು ಹೊರಬಂದಿವೆ. ಅದರ ಪ್ರಕಾರ ಸಿಜೆ ರಾಯ್ ತಮ್ಮ ಎದೆಯ ಎಡಭಾಗಕ್ಕೆ ಸಮೀಪದಿಂದಲೇ ಗನ್ ಹಿಡಿದುಕೊಂಡು ಫೈರ್ ಮಾಡಿದ್ದಾರೆ. ಇದರಿಂದಾಗಿ ಮಾಂಸಖಂಡಗಳು ಚದುರಿಲ್ಲ. ಎದೆಯ ಎಡಭಾಗದ ಮೂಲಕ ಪ್ರವೇಶಿಸಿದ ಗುಂಡು ಬೆನ್ನಿನ ಭಾಗದಲ್ಲಿ ಸಿಲುಕಿಕೊಂಡಿದೆ.
ಮುಂಬೈ: ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ನಾಯಕರಾಗಿದ್ದಾಗ ಹುಲಿಯಂತಿದ್ದ ಜಸ್ಪ್ರೀತ್ ಬುಮ್ರಾ ಈಗ ಹೊಸ ನಾಯಕ ಬಂದ ಮೇಲೆ ಫಾರ್ಮ್ ಕಳೆದುಕೊಂಡ್ರಾ ಎಂದು ಸಂಶಯ ಮೂಡುತ್ತಿದೆ. ಬುಮ್ರಾ ವಿಶ್ವದ ಅತ್ಯಂತ ಮಾರಕ ಬೌಲರ್ ಗಳಲ್ಲಿ ಒಬ್ಬರು. ಎಂಥದ್ದೇ ಪಿಚ್ ಇರಲಿ, ಅವರ ಬೌಲಿಂಗ್ ಎದುರಿಸಲು ಬ್ಯಾಟಿಗರು ನಡುಗುತ್ತಾರೆ. ಟೀಂ ಇಂಡಿಯಾಕ್ಕೆ ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಡುವಲ್ಲೂ ಅವರ ಪಾತ್ರ ಪ್ರಮುಖವಾಗಿತ್ತು. ಆದರೆ ಯಾಕೋ ಬುಮ್ರಾ ಕಳೆದ ಎರಡು-ಮೂರು ಸರಣಿಗಳಿಂದ ಕಳೆಗುಂದಿದ್ದಾರೆ. ಇತ್ತೀಚೆಗೆ ಅವರನ್ನು ಕೇವಲ ಟಿ20 ಮತ್ತು ಟೆಸ್ಟ್ ಫಾರ್ಮ್ಯಾಟ್ ನಲ್ಲಿ ಮಾತ್ರ ಆಯ್ಕೆ ಮಾಡಲಾಗುತ್ತಿದೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ಇಂದು ಪಟೋರ ದರ ಮಾತ್ರ ಏರಿಕೆಯಾಗಿದೆ. ಉಳಿದವು ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಏರಿಕೆ ಆರಂಭವಾಗಿತ್ತು. ಸತತವಾಗಿ ನಾಲ್ಕು ದಿನಗಳ ಕಾಲ ಏರಿಕೆಯಾಗಿದ್ದು ರೈತರ ಸಂತಸಕ್ಕೆ ಕಾರಣವಾಗಿತ್ತು. ಆದರೆ ಇಂದು ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ. ಇಂದು ಹೊಸ ಅಡಿಕೆ ಬೆಲೆ 460 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದು 535 ರೂ. ಗಳಾಗಿತ್ತು. ಇಂದೂ ಅಷ್ಟೇ ಇದೆ. ಡಬಲ್ ಚೋಲ್ ಬೆಲೆಯೂ 535 ರೂ.ಗಳಷ್ಟಾಗಿದೆ.
ಬೆಂಗಳೂರು: ಚಿನ್ನದ ಬೆಲೆ ಮತ್ತೆ ಏರಿಕೆ ಮತ್ತು ಇಳಿಕೆಯಾಗುತ್ತಲೇ ಇದೆ. ಆದರೆ ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ಭಾರೀ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತ ಏರಿಕೆ ಮತ್ತು ಇಳಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಏರಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಮತ್ತೆ ಇಳಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,84,050.00 ರೂ.ಗಳಿತ್ತು. ಇಂದು 1,70,280.00 ರೂ.ಗಳಷ್ಟಾಗಿದೆ.
ಬೆಂಗಳೂರು: ಐಟಿ ದಾಳಿ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದ ಕಾನ್ಫಿಡೆನ್ಸ್ ಗ್ರೂಪ್ ಮಾಲಿಕ ಸಿಜೆ ರಾಯ್ ಈ ಹಿಂದೆ ಸಂದರ್ಶನವೊಂದರಲ್ಲಿ ನಾಳೆ ಸಾಯ್ತೀನಿ ಎಂದ್ರೂ ನನಗೆ ಬೇಜಾರಿಲ್ಲ ಎಂದಿದ್ದರು. ಉದ್ಯಮಿ ಮಾತ್ರವಲ್ಲದೆ, ಸಾಮಾಜಿಕ ಕೆಲಸಗಳು, ಹಲವು ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡುತ್ತಿದ್ದ ಸಿಜೆ ರಾಯ್ ಸೆಲೆಬ್ರಿಟಿಯೇ ಆಗಿದ್ದರು. ಅವರು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಜೀವನದ ಸಾರ್ಥಕತೆ ಬಗ್ಗೆ ಹೇಳಿಕೊಂಡಿದ್ದರು. ‘ನಾಳೆ ಸಾಯ್ತೀನಿ ಅಂದ್ರೂ ನನಗೆ ಬೇಜಾರಿಲ್ಲ. ಒಂದು ವೇಳೆ ನಾನು ವಿಮಾನದಲ್ಲಿ ಹಾರಾಡುವಾಗ ಪೈಲೆಟ್ ವಿಮಾನ ಪತನವಾಗುತ್ತದೆ ಕೆಲವೇ ಕ್ಷಣದಲ್ಲಿ ನಾವು ಸಾಯುತ್ತೇವೆ ಎಂದರೂ ನಾನು ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡುತ್ತೇನೆ.
ಬೆಂಗಳೂರು: ಕರ್ನಾಟಕದಲ್ಲಿ ಇನ್ನು ಮುಂದೆ ಇನ್ ಸ್ಟಾಗ್ರಾಂ, ಫೇಸ್ ಬುಕ್ ನಂತಹ ಸೋಷಿಯಲ್ ಮೀಡಿಯಾ ಆಪ್ ಗಳ ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಯಾರಿಗೆ ಈ ನಿಷೇಧ ಇಲ್ಲಿದೆ ಶಾಕಿಂಗ್ ವರದಿ. ವಿದೇಶಗಳಲ್ಲಿರುವಂತೆ ರಾಜ್ಯದಲ್ಲೂ 16 ವರ್ಷದೊಳಗಿನ ಮಕ್ಕಳಿಗೆ ಇನ್ ಸ್ಟಾಗ್ರಾಂ, ಫೇಸ್ ಬುಕ್ ಸೇರಿದಂತೆ ಪ್ರಮುಖ ಸೋಷಿಯಲ್ ಮೀಡಿಯಾ ಆಪ್ ನಿಷೇಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ನಿನ್ನೆ ಸದನದಲ್ಲಿ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ಈ ಬಗ್ಗೆ ಮಾತನಾಡಿದ್ದಾರೆ.
ಮದುವೆ ಮಂಟಪದಲ್ಲೇ ಜೋಡಿಯೊಂದು ಕಿಸ್, ಮುದ್ದಾಟದಲ್ಲಿ ತೊಡಗಿದ್ದಾಗ ಮಧ್ಯಪ್ರವೇಶಿಸಿದ ಪುರೋಹಿತರು ಮಾಡಿದ್ದೇನು ಗೊತ್ತಾ? ಈ ಫನ್ನಿ ವಿಡಿಯೋ ನೋಡಿ. ಇತ್ತೀಚೆಗಿನ ದಿನಗಳಲ್ಲಿ ಮದುವೆ ಎಂದರೆ ಸಿನಿಮಾ ಶೂಟಿಂಗ್ ರೀತಿ ಆಗಿಬಿಟ್ಟಿದೆ. ಸಂಪ್ರದಾಯವನ್ನೂ ಮರೆತು ಕ್ಯಾಮರಾಗೆ ಒಳ್ಳೊಳ್ಳೆ ಕ್ಷಣಗಳು ಸಿಗಬೇಕು ಎಂಬ ಕಾರಣಕ್ಕೆ ಏನೇನೋ ವಿಚಿತ್ರಗಳನ್ನು ಮಾಡಲು ಹೋಗುತ್ತಾರೆ. ಕೆಲವು ಸಂಪ್ರದಾಯವಾದಿಗಳಿಗೆ, ಹಿರಿಯರಿಗೆ ಇದೆಲ್ಲಾ ಇಷ್ಟವಾಗುವುದಿಲ್ಲ. ಅದೇ ರೀತಿ ಇಲ್ಲೊಂದು ಜೋಡಿ ಮದುವೆ ಮಂಟಪದಲ್ಲೇ ಮುದ್ದಾಟವಾಡಿದೆ. ವಧು ಸ್ಟೈಲ್ ಆಗಿ ನಡೆದುಕೊಂಡು ಬಂದರೆ ವರ ಶಾರುಖ್ ಖಾನ್ ಥರಾ ಕೈ ಚಾಚಿಕೊಂಡು ಆಕೆಯನ್ನು ತಬ್ಬಿ ಬರಮಾಡಿಕೊಂಡಿದ್ದಾನೆ.
ಬೆಂಗಳೂರು: ನಾಳೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದು ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ತೆರಿಗೆ ಹಂಚಿಕೆ ವಿಚಾರದಲ್ಲಿ ಅಸಮಾನತೆಯ ಆರೋಪ ಹೊರಿಸಿದ್ದಾರೆ. ರಾಜ್ಯ ಸರ್ಕಾರ 16 ನೇ ಹಣಕಾಸು ಆಯೋಗದ ಮುಂದೆ ಮಂಡಿಸಿದ ಬೇಡಿಕೆಗಳಿಗೆ ಅನುಸಾರವಾಗಿ ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯಯುತ ತೆರಿಗೆ ಪಾಲು ಕೇಂದ್ರ ನೀಡಬೇಕು. ತೆರಿಗೆ ಪಾಲು, ಪ್ರಾಕೃತಿಕ ನಿಧಿ, ವಿಶೇಷ ಅನುದಾನಗಳನ್ನು ಸಮಾನವಾಗಿ ಹಂಚಿಕೆ ಮಾಡಿ ಒಕ್ಕೂಟಕ್ಕೆ ಮನ್ನಣೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಸಿಎಂ ಎಕ್ಸ್ ಖಾತೆಯಲ್ಲಿ ನ್ಯಾಯಕ್ಕಾಗಿ ಕನ್ನಡಿಗರ ಹೋರಾಟ ಎಂಬ ಘೋಷವಾಕ್ಯದಡಿಯಲ್ಲಿ ಕೇಂದ್ರದ ಮೇಲೆ ಸಿಎಂ ಹಲವು ಆರೋಪ ಮತ್ತು ಬೇಡಿಕೆಗಳನ್ನಿಟ್ಟಿದ್ದಾರೆ.
ಬೆಂಗಳೂರು: ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಡಿಸಿಎಂ ಡಿಕೆ ಶಿವಕುಮಾರ್ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ. ಕಾನ್ಫಿಡೆನ್ಸ್ ಗ್ರೂಪ್ ಮುಖ್ಯಸ್ಥ, ಉದ್ಯಮಿ ಸಿಜೆ ರಾಯ್ ನಿನ್ನೆ ಐಟಿ ದಾಳಿ ಬೆನ್ನಲ್ಲೇ ಕಚೇರಿಯಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಅವರ ಆತ್ಮಹತ್ಯೆ ಬೆನ್ನಲ್ಲೇ ಐಟಿ ದಾಳಿ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಇದರ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು. ‘ರಾಜ್ಯದಲ್ಲಿ ಇಂದು ಐಟಿ ದಾಳಿ ಕಿರುಕುಳದಿಂದ ಈ ರೀತಿ ಆಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರ ಬಗ್ಗೆ ನಮ್ಮ ಸರ್ಕಾರ ಉನ್ನತ ಮಟ್ಟದ ತನಿಖೆ ಮಾಡಲಿದೆ.
ವಡೋದರಾ: ಡಬ್ಲ್ಯುಪಿಎಲ್ 2026 ರಲ್ಲಿ ಮುಂಬೈ ಇಂಡಿಯನ್ಸ್ ನಿನ್ನೆಯ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 11 ರನ್ ಗಳಿಂದ ಸೋತಿದೆ. ಇದರೊಂದಿಗೆ ಮುಂಬೈಗೆ ಪ್ಲೇ ಆಫ್ ಗೇರಲು ಈ ಎರಡು ತಂಡಗಳೇ ಆಸರೆಯಾಗಬೇಕು. ಕಳೆದ ಬಾರಿಯ ಚಾಂಪಿಯನ್ ಆಗಿದ್ದ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಈ ಬಾರಿ ಯಾಕೋ ಕಳೆಗುಂದಿದೆ. ಮೊದಲ ಪಂದ್ಯವನ್ನೇ ಸೋತಿದ್ದ ಮುಂಬೈ ತಂಡ ಈ ಬಾರಿ ಎಲ್ಲಾ ಪಂದ್ಯದಲ್ಲೂ ಪೇಲವ ಪ್ರದರ್ಶನ ನೀಡಿದೆ.
ಬೆಂಗಳೂರು: ಕಾನ್ಫಿಡೆನ್ಸ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಈಗ ರೋಚಕ ತಿರುವು ಸಿಕ್ಕಿದೆ. ಅವರ ಡೈರಿ ಸೀಕ್ರೆಟ್ ಈಗ ಬಯಲಾಗಿದ್ದು, ಪ್ರಮುಖ ರಾಜಕೀಯ ನಾಯಕರ ಹೆಸರೇ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಐಟಿ ದಾಳಿ ಬೆನ್ನಲ್ಲೇ ನಿನ್ನೆ ಬೆಂಗಳೂರಿನ ಕಾನ್ಫಿಡೆನ್ಸ್ ಗ್ರೂಪ್ ಸಂಸ್ಥೆಯ ಕಚೇರಿಯಲ್ಲೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಜೆ ರಾಯ್ ಆತ್ಮಹತ್ಯೆ ಎಲ್ಲರಿಗೂ ಶಾಕಿಂಗ್ ಆಗಿತ್ತು. ಅಷ್ಟೊಂದು ದೊಡ್ಡ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ವ್ಯಕ್ತಿ ಐಟಿ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದರೆ ನಂಬಲೂ ಕಷ್ಟ ಎನ್ನುವಂತಿದೆ.
ತಿರುವನಂತಪುರಂ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ತಿರುವನಂತಪುರಂನಲ್ಲಿ ಕೊನೆಯ ಟಿ20 ಪಂದ್ಯ ನಡೆಯಲಿದೆ. ಇದಾದ ಬಳಿಕ ಟಿ20 ವಿಶ್ವಕಪ್ ಆರಂಭವಾಗುವುದು. ಈಗಾಗಲೇ ಟೀಂ ಇಂಡಿಯಾ ಸರಣಿ ಗೆದ್ದಿದ್ದು ಕೊನೆಯ ಎರಡು ಪಂದ್ಯಗಳನ್ನು ಟಿ20 ವಿಶ್ವಕಪ್ ಗೆ ಪ್ರಯೋಗಶಾಲೆಯಾಗಿಸಿದೆ. ಕಳೆದ ಪಂದ್ಯದಲ್ಲಿ ಆರು ಬ್ಯಾಟರ್ ಗಳು, ಐವರು ಸ್ಪೆಷಲಿಸ್ಟ್ ಬೌಲರ್ ಗಳೊಂದಿಗೆ ಕಣಕ್ಕಿಳಿದು ಟೀಂ ಇಂಡಿಯಾ ಪ್ರಯೋಗ ನಡೆಸಿತ್ತು. ಈ ಪಂದ್ಯದಲ್ಲೂ ಟೀಂ ಇಂಡಿಯಾ ಕೆಲವೊಂದು ಬದಲಾವಣೆ ಮಾಡುವುದು ಖಚಿತವಾಗಿದೆ. ಕಳೆದ ಪಂದ್ಯದಲ್ಲಿ ಇಶಾನ್ ಕಿಶನ್ ಆಡುವ ಬಳಗದಿಂದ ಹೊರಗುಳಿದಿದ್ದರು. ಈ ಪಂದ್ಯಕ್ಕೆ ಅವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ಬೆಂಗಳೂರು: ಈ ವಾರದ ಆರಂಭದಲ್ಲಿ ಹಲವೆಡೆ ಮಳೆಯಾಗಿತ್ತು. ವಾರಂತ್ಯಕ್ಕೆ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆಯಾ? ಇಲ್ಲಿದೆ ಹವಾಮಾನ ವರದಿ. ಈ ವಾರ ರಾಜ್ಯದ ಹವಾಮಾನದಲ್ಲಿ ಸಾಕಷ್ಟು ಏರಿಳಿತ ಕಂಡುಬಂದಿದೆ. ಆರಂಭದಲ್ಲಿ ಮಳೆ, ನಂತರ ಚಳಿ, ಈಗ ಹಗಲಿಡೀ ಬಿಸಿಲಿನ ವಾತಾವರಣ ಕಂಡುಬರುತ್ತಿದೆ. ಅದರಲ್ಲೂ ಸಂಜೆ ಮತ್ತು ಬೆಳಿಗ್ಗೆ ಮಂಜು ಕೂಡಾ ಬೀಳುತ್ತಿದೆ. ಹವಾಮಾನ ವರದಿಗಳ ಪ್ರಕಾರ ವಾರಂತ್ಯಕ್ಕೆ ರಾಜ್ಯದಲ್ಲಿ ಮಳೆಯ ಸಾಧ್ಯತೆಯಿಲ್ಲ. ಆದರೆ ಬಹುತೇಕ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುವುದು. ಮಂಜಿನ ದಟ್ಟಣೆಯೂ ಹೆಚ್ಚಾಗುವ ಸೂಚನೆಯಿದೆ.
ಜಾತಕದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಗ್ರಹಗಳ ದೋಷ, ಅವಕೃಪೆಗಳು ಇರುತ್ತವೆ. ಇದರ ನಿವಾರಣೆಗೆ ಈ ನವಗ್ರಹ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.ನವಗ್ರಹ ಧ್ಯಾನ ಶ್ಲೋಕಂಆದಿತ್ಯಾಯ ಚ ಸೋಮಾಯ ಮಂಗಳಾಯ ಬುಧಾಯ ಚ ।ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ॥ ರವಿಃಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ ।ತಮೋಽರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಮ್ ॥ ಚಂದ್ರಃದಧಿಶಂಖ ತುಷಾರಾಭಂ ಕ್ಷೀರಾರ್ಣವ ಸಮುದ್ಭವಂ (ಕ್ಷೀರೋದಾರ್ಣವ ಸಂಭವಂ) ।ನಮಾಮಿ ಶಶಿನಂ ಸೋಮಂ ಶಂಭೋ-ರ್ಮಕುಟ ಭೂಷಣಮ್ ॥ ಕುಜಃಧರಣೀ ಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ ।ಕುಮಾರಂ ಶಕ್ತಿಹಸ್ತಂ ತಂ ಕುಜಂ [ಮಂಗಳಂ] ಪ್ರಣಮಾಮ್ಯಹಮ್ ॥
ಬೆಂಗಳೂರು: ಪ್ಯಾಲೆಸ್ಟೀನಿಯನ್ ಚಲನಚಿತ್ರಗಳನ್ನು ನಿಷೇಧಿಸಲಾಗುತ್ತಿದೆ ಎಂದು ಆರೋಪಿಸಿ ನಟ ಪ್ರಕಾಶ್ ರಾಜ್ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆಗುರುವಾರ ವಿಧಾನಸೌಧದಲ್ಲಿ ಹೆಚ್ಚಿನ ನಿರೀಕ್ಷೆಯ ನಡುವೆ 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (BIFFes) ಉದ್ಘಾಟನೆಗೊಂಡಾಗ, ನಟ ಪ್ರಕಾಶ್ ರಾಜ್ ಅವರ ನೇತೃತ್ವದಲ್ಲಿ ಕಲಾ ಸ್ವಾತಂತ್ರ್ಯದ ಕುರಿತಾದ ಚರ್ಚೆಯ ತಾಣವೂ ಆಯಿತು. ಉತ್ಸವದಲ್ಲಿ ಪ್ಯಾಲೆಸ್ಟೀನಿಯನ್ ಚಲನಚಿತ್ರಗಳ ಪ್ರದರ್ಶನವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಪ್ರಶ್ನಿಸಿದ ಪ್ರಕಾಶ್,