ಬೆಂಗಳೂರು: ರಾಜ್ಯದಲ್ಲಿ ಮಾರ್ಚ್ ಮೊದಲ ವಾರದಿಂದಲೇ ಬಿಸಿಲಿನ ತಾಪ ಮೇರೆ ಮೀರಿದೆ. ಇಂದು ಮತ್ತಷ್ಟು ಜಿಲ್ಲೆಗಳಲ್ಲಿ ಉರಿಬಿಸಿಲಿನ ತಾಪ ಹೆಚ್ಚಾಗಲಿದೆ ಎಂದು ಹವಾಮಾನ ವರದಿಗಳು ಹೇಳಿವೆ. ಈ ವಾರ ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗಿದ್ದು ಹಗಲು ಹೊರಗೆ ಕಾಲಿಡಲಾಗದಷ್ಟು ಬಿಸಿಲಿನ ತಾಪ ಕಂಡುಬರುತ್ತಿದೆ. ಇಂದು ಕೂಡಾ ಹಲವು ಜಿಲ್ಲೆಗಳಲ್ಲಿ ಭಾರೀ ಬಿಸಿಲು ಕಂಡುಬರಲಿದ್ದು ಗರಿಷ್ಠ ತಾಪಮಾನ ಮತ್ತಷ್ಟು ಹೆಚ್ಚಾಗಲಿದೆ. ರಾಜ್ಯಾದ್ಯಂತ ಇಂದೂ ಶುಷ್ಕ ವಾತಾವರಣವಿರಲಿದ್ದು, ಇಂದಿನ ಗರಿಷ್ಠ ತಾಪಮಾನ ಸರಾಸರಿ 33 ಡಿಗ್ರಿಯಷ್ಟು ಇರಲಿದೆ.
ದೇವಿಯ ಅನುಗ್ರಹವಿದ್ದರೆ ಜೀವನದಲ್ಲಿ ಶತ್ರುಭಯ ನಾಶ, ಜೀವನದಲ್ಲಿ ಆತ್ಮವಿಶ್ವಾಸ, ಯಶಸ್ಸು ಸಮೃದ್ಧಿಯಾಗುತ್ತದೆ. ದೇವಿಯ ಅನುಗ್ರಹಕ್ಕಾಗಿ ಅಂಬಾ ಪಂಚರತ್ನ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.ಅಂಬಾಶಂಬರವೈರಿತಾತಭಗಿನೀ ಶ್ರೀಚಂದ್ರಬಿಂಬಾನನಾಬಿಂಬೋಷ್ಠೀ ಸ್ಮಿತಭಾಷಿಣೀ ಶುಭಕರೀ ಕಾದಂಬವಾಟ್ಯಾಶ್ರಿತಾ ।ಹ್ರೀಂಕಾರಾಕ್ಷರಮಂತ್ರಮಧ್ಯಸುಭಗಾ ಶ್ರೋಣೀನಿತಂಬಾಂಕಿತಾಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು ॥ 1 ॥ ಕಲ್ಯಾಣೀ ಕಮನೀಯಸುಂದರವಪುಃ ಕಾತ್ಯಾಯನೀ ಕಾಲಿಕಾಕಾಲಾ ಶ್ಯಾಮಲಮೇಚಕದ್ಯುತಿಮತೀ ಕಾದಿತ್ರಿಪಂಚಾಕ್ಷರೀ ।ಕಾಮಾಕ್ಷೀ ಕರುಣಾನಿಧಿಃ ಕಲಿಮಲಾರಣ್ಯಾತಿದಾವಾನಲಾಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು ॥ 2 ॥ ಕಾಂಚೀಕಂಕಣಹಾರಕುಂಡಲವತೀ ಕೋಟೀಕಿರೀಟಾನ್ವಿತಾಕಂದರ್ಪದ್ಯುತಿಕೋಟಿಕೋಟಿಸದನಾ ಪೀಯೂಷಕುಂಭಸ್ತನಾ ।ಕೌಸುಂಭಾರುಣಕಾಂಚನಾಂಬರವೃತಾ ಕೈಲಾಸವಾಸಪ್ರಿಯಾಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು ॥ 3 ॥
2026ರ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ವಿಕೆಟ್ಗಳಿಂದ ಸೋಲಿಸುವ ಮೂಲಕ ಫೈನಲ್ಗೆ ಪ್ರವೇಶಿಸಿತು. ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ದು ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಟೀಂ ಇಂಡಿಯಾ ಸಂಜು ಸಮ್ಸನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ ಹಾಗೂ ಈಶಾನ್ ಕಿಶಾನ್ ಅದ್ಭುತ ಪ್ರದರ್ಶನದಿಂದ ಭಾರತ 20 ಓವರ್ಗಳಲ್ಲಿ 7ವಿಕೆಟ್ ಕಳೆದುಕೊಂಡು 253ರನ್ ಗಳಿಸಿತು. ಅಭಿಷೇಕ್ ಶರ್ಮಾ 7ಎಸೆತಕ್ಕೆ 9ರನ್, ಸಂಜು ಸಮ್ಸನ್ 42 ಎಸೆತಕ್ಕೆ 89ರನ್, ಈಶಾನ್ ಕಿಶಾನ್ 18 ಎಸೆತಕ್ಕೆ 39ರನ್,
ಪತ್ನಿ ಸಂಗೀತಾ ಜತೆಗಿನ ವಿಚ್ಛೇಧನ ಸುದ್ದಿ ಬಳಿಕ ನಟ ಹಾಗೂ ಟಿವಿಕೆ ನಾಯಕ ನಟ ವಿಜಯ್ ತಳಪತಿ ಅವರು ನಟಿ ತ್ರಿಷಾ ಜತೆ ಮದುವೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಗುರುವಾರ ಚೆನ್ನೈನಲ್ಲಿ ನಡೆದ ಕಲ್ಪಾತಿ ಎಸ್ ಸುರೇಶ್ ಮತ್ತು ಮೀನಾಕ್ಷಿ ಸುರೇಶ್ ಅವರ ಪುತ್ರನ ವಿವಾಹದ ಆರತಕ್ಷತೆ ಸಮಾರಂಭದಲ್ಲಿ ನಟ ವಿಜಯ್ ಮತ್ತು ತ್ರಿಶಾ ಭಾಗವಹಿಸಿದ್ದರು.ವಿಜಯ್ ಮತ್ತು ತ್ರಿಷಾ ಒಟ್ಟಿಗೆ ಸ್ಥಳಕ್ಕೆ ಆಗಮಿಸಿದ್ದು, ನಂತರ ನವವಿವಾಹಿತರೊಂದಿಗೆ ಪೋಸ್ ನೀಡಿದ್ದರು. ಇವರಿಬ್ಬರೂ ಆರತಕ್ಷತೆಯಲ್ಲಿ ಜೊತೆಯಾಗಿ ಹೊರಟು ಹೋಗಿರುವುದು ಕಂಡುಬಂದಿದೆ.
ನಟ ನಾಗ ಚೈತನ್ಯ ಅವರು ವೃಷಕರ್ಮ ಕಾರ್ಯಕ್ರಮದ ಸಂದರ್ಭದಲ್ಲಿ ವೇದಿಕೆ ಮೇಲೆ ಕೂತುಕೊಳ್ಳುವ ವೇಳೆ ಕುರ್ಚಿಯಿಂದ ಬಿದ್ದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಗ ಚೈತನ್ಯ ಅವರು ತಮ್ಮ ಮುಂಬರುವ ಚಿತ್ರ ವೃಷಕರ್ಮ ಪ್ರಚಾರದ ಸಂದರ್ಭದಲ್ಲಿ ಅಹಿತಕರ ಕ್ಷಣವನ್ನು ಹೊಂದಿದ್ದರು. ಕಾರ್ತಿಕ್ ದಂಡು ನಿರ್ದೇಶನದ ಪೌರಾಣಿಕ ಥ್ರಿಲ್ಲರ್ನ ಶೀರ್ಷಿಕೆಯ ನಟ, ಪತ್ರಿಕಾ ಸಂವಾದದ ಮೊದಲು ಸಣ್ಣ ಅಪಘಾತವನ್ನು ಅನುಭವಿಸಿದರು.ಸಮಾರಂಭದಲ್ಲಿ, ನಾಗ ಚೈತನ್ಯ ಅವರು ಪತ್ರಿಕಾಗೋಷ್ಠಿ ಪ್ರಾರಂಭವಾಗುವ ಮೊದಲು ತಮ್ಮ ಕುರ್ಚಿಯ ಬಳಿಗೆ ಬಂದರು.
ಸಾಮಾಜಿಕ ಜಾಲತಾಣದಲ್ಲಿ ನಟಿ-ನಿರ್ಮಾಪಕಿ ಸಮಂತಾ ರುತ್ ಪ್ರಭು ಹೋಳಿ ಆಚರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತಮ್ಮ ಮುಂಬರುವ ಚಿತ್ರ ಮಾ ಇಂತಿ ಬಂಗಾರದ ಸೆಟ್ನಲ್ಲಿ ಪತಿ ರಾಜ್ ನಿಡಿಮೋರುಗ್ ಹೋಳಿ ಬಣ್ಣವನ್ನು ಎರಚುವುದನ್ನು ಕಾಣಬಹುದು. ನಿರ್ದೇಶಕಿ ಬಿವಿ ನಂದಿನಿ ರೆಡ್ಡಿ ಅವರೊಂದಿಗೆ ತಮಾಷೆಯ ಆಚರಣೆಯಲ್ಲಿ ತೊಡಗಿದ್ದರು. ಚಿತ್ರೀಕರಣದ ವಿರಾಮದ ಸಮಯದಲ್ಲಿ ಸಂಭ್ರಮಾಚರಣೆಯು ತೆರೆದುಕೊಂಡಿತು, ಸಮಂತಾ ತನ್ನ ಸಾಮಾಜಿಕ ಮಾಧ್ಯಮದಲ್ಲಿ ರೋಮಾಂಚಕ ಕ್ಷಣದ ವೀಡಿಯೊವನ್ನು ಹಂಚಿಕೊಂಡಿದ್ದಾರೆ,
ಧಾರವಾಡ: ಇಲ್ಲಿನ ಸವದತ್ತಿ ರಸ್ತೆಯಲ್ಲಿ ನಡೆದ ಹಿಟ್ ಆಂಡ್ ರನ್ ಕೇಸ್ ಭೇದಿಸಿದ ಪೊಲೀಸರಿಗೆ ಇದೊಂದು ಪ್ರೀ ಪ್ಲ್ಯಾನ್ಡ್ ಮರ್ಡರ್ ಎಂದು ತಿಳಿದುಬಂದಿದೆ. ವಿಡಿಯೋ ನೋಡಿದಾಗ ಥಾರ್ ಮಹಿಳೆಗೆ ಡಿಕ್ಕಿ ಹೊಡೆಯುತಿದ್ದ ದೃಶ್ಯ ಬಸ್ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಡಿಕ್ಕಿಯ ರಭಸಕ್ಕೆ ಲಲಿತಾ ಹತ್ತರಗಿ ಎಂಬವರು ಸಾವನ್ನಪ್ಪಿದರು. ಪ್ರಕರಣ ಭೇದಿಸಿದ ಪೊಲೀಸರಿಗೆ ಇದು ಕೊಲೆ ಎಂದು ತಿಳಿದುಬಂದಿದ್ದು, ಆಕೆಯ ಪತಿಯೇ ಆರೋಪಿ ಎಂಬುದು ಬಯಲಾಗಿದೆ. ಉದಯ ಹತ್ತರಗಿ ಮತ್ತು ಲಲಿತಾ ಹತ್ತರಗಿ 10 ವರ್ಷದ ಹಿಂದೆ ಮದುವೆಯಾಗಿದ್ದರು. ಕಾರಣಾಂತರಗಳಿಂದ ಇಬ್ಬರೂ ಬೇರೆ
ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಮುಂಬೈನಲ್ಲಿ ಸಾನಿಯಾ ಚಂದೋಕ್ ಅವರ ಅದ್ಧೂರಿಯಾಗ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸಮಾರಂಭದಲ್ಲಿ ಅರ್ಜುನ್ ಅವರ ನಡವಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಕ್ರಿಕೆಟ್, ಬಾಲಿವುಡ್ ಮತ್ತು ಉದ್ಯಮ ರಂಗದಿಂದ ಸಾಕಷ್ಟು ಸೆಲೆಬ್ರಿಟಿಗಳು ಅದ್ಧೂರಿ ಮದುವೆಯಲ್ಲಿ ಭಾಗವಹಿಸಿದ್ದರು. ಸಾಮಾಜಿಕ ಮಾಧ್ಯಮದಾದ್ಯಂತ ಸಂಭ್ರಮಾಚರಣೆಯ ವೀಡಿಯೊಗಳು ಮತ್ತು ಫೋಟೋಗಳು ಶೀಘ್ರವಾಗಿ ವೈರಲ್ ಆಗುತ್ತಿದ್ದಂತೆ ಬಝ್ ಅನ್ನು ಸೃಷ್ಟಿಸಿತು.
ಅಹಮದಾಬಾದ್: ಸ್ಫೋಟಕ ಬ್ಯಾಟಿಂಗ್ ವೈಖರಿಗೆ ಹೆಸರುವಾಸಿಯಾಗಿರುವ ಟೀಂ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ T20 ವಿಶ್ವಕಪ್ 2026 ಇಲ್ಲಿಯವರೆಗೆ ಬ್ಯಾಟಿಂಗ್ ಪ್ರದರ್ಶನ್ ತೃಪ್ತಿಕರವಾಗಿಲ್ಲ. ಆದರೆ ಸೆಮಿಫೈನಲ್ನಲ್ಲಿ ಅಭಿಷೇಕ್ನಿಂದ ಭಾರೀ ನಿರೀಕ್ಷೆಯನ್ನು ಇಡಲಾಗಿತ್ತು. ಆದರೆ ಇದೀಗ ಅದೆಲ್ಲ ಹುಸಿಯಾಗಿದೆ. ಇಂದು ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯಾಟದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ವಿಲ್ ಜಾಕ್ಸ್ ತನ್ನ ಮೊದಲ ಓವರ್ನಲ್ಲಿ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರನ್ನು 9 ರನ್ಗಳಿಗೆ ಕಟ್ಟಿಹಾಕಿದರು. ಈ ಮೂಲಕ ಅಭಿಷೇಕ್ ಬೇಗನೇ ಫೆವಿಲಿಯನ್ ಕಡೆ ತೆರಳಿದರು.
ಆರೋಗ್ಯವನ್ನು ಸಮತೋಲನದಲ್ಲಿಡಲು ಎಬಿಸಿ ಜ್ಯೂಸ್ ತುಂಬಾನೇ ಸಹಕಾರಿಯಾಗಿದೆ. ಇನ್ನೂ ಎಬಿಸಿ ಜ್ಯೂಸ್ ತಿಳಿದುಕೊಳ್ಳುವುದಾದರೆ ಆಪಲ್, ಬೀಟ್ರೂಟ್ಮತ್ತು ಕ್ಯಾರೆಟ್ ಮಿಶ್ರಣದಿಂದ ತಯಾರಿಸಿದ ಪಾನೀಯ ಇದಾಗಿದೆ. ಇದನ್ನು "ಪವಾಡದ ಪಾನೀಯ" ಎಂದೂ ಕರೆಯಲಾಗುತ್ತದೆ. ಈ ಜ್ಯೂಸ್ ಅನ್ನು ಕುಡಿಯುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಪ್ರಯೋಜನವನ್ನು ಕಾಣಬಹುದು. 1. ರೋಗನಿರೋಧಕ ಶಕ್ತಿ ಹೆಚ್ಚಳಇದರಲ್ಲಿ ವಿಟಮಿನ್ ಸಿ, ಎ ಮತ್ತು ಇ ಹೇರಳವಾಗಿದ್ದು, ಇದು ಬಿಳಿ ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸಿ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಗುರುವಾರ ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಅವರು ಭಾರತ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.ಟಾಸ್ನಲ್ಲಿ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ತಮ್ಮ ತಂಡವು ಮೊದಲು ಬ್ಯಾಟಿಂಗ್ ಮಾಡಲು ಆದ್ಯತೆ ನೀಡುತ್ತಿತ್ತು ಆದರೆ ಪರಿಸ್ಥಿತಿಗಳಿಂದ ಸಂತೋಷವಾಗಿದೆ ಎಂದು ಹೇಳಿದರು."ನಾವು ಮೊದಲು ಬ್ಯಾಟ್ ಮಾಡಲು ನೋಡುತ್ತಿದ್ದೆವು. ಸೆಮಿಫೈನಲ್, ದೊಡ್ಡ ಆಟ, ಮತ್ತು ಸುತ್ತಲೂ ಗಾಳಿ ಕೂಡ ಇದೆ. ಹೆಚ್ಚು
ಕಳೆದ ರಾತ್ರಿಯಿಂದ ನಟಿ ರಶ್ಮಿಕಾ ಮಂದಣ್ಣ ಅವರ ಹೈದರಾಬಾದ್ ಮದುವೆಯ ಆರತಕ್ಷತೆಯ ಫೋಟೋಗಳು ಮತ್ತು ವೀಡಿಯೊಗಳು ಇಂಟರ್ನೆಟ್ನಲ್ಲಿ ಭಾರೀ ಹರಿದಾಡುತ್ತಿದೆ. ಇದರಲ್ಲಿ ನವವಿವಾಹಿತ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರ ಸಾಂಪ್ರದಾಯಿಕ ಉಡುಗೆ ಶೈಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನೂ ವಿಷೇದ ಏನೆಂದರೆ ರಶ್ಮಿಕಾ ಧರಿಸಿರುವ ಸೀರೆ ಎಲ್ಲರ ಗಮನ ಸೆಳೆಯಿತು. ಕರ್ನಾಟಕದ ಹೆಮ್ಮೆಯ ಮೈಸೂರು ಸಿಲ್ಕ್ ಸೀರೆಗೆ, ಹೊಸ ವಿನ್ಯಾಸವನ್ನು ನೀಡಿದ ಸೀರಿಯನ್ನು ರಶ್ಮಿಕಾ ಧರಿಸಿದ್ದು, ನ್ಯಾಶನಲ್ ಕ್ರಶ್ ಆರತಕ್ಷತೆಯ ಲುಕ್ ವಿಭಿನ್ನವಾಗಿತ್ತು.
ಕಲಬುರಗಿ: ದೇಶದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಹೋಳಿ ಹಬ್ಬದ ವೇಳೆ ಕೆಲ ಯುವಕರು ಬುರ್ಖಾ ಧರಿಸಿ ಹೋಳಿ ಹಬ್ಬ ಆಚರಿಸಿ, ಕೋಮು ಸೌಹಾರ್ದಕ್ಕೆ ಧಕ್ಕೆ ತಂದ ಆರೋಪದಡಿಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಆಳಂದ ತಾಲ್ಲೂಕಿನ ನಿಂಬರ್ಗಾದಲ್ಲಿ ಹೋಳಿ ಹಬ್ಬದ ಅಂಗವಾಗಿ ಬುಧವಾರ ಕೆಲವು ಯುವಕರು ಬುರ್ಖಾ ಧರಿಸಿ ಬಣ್ಣವಾಡಿದ್ದಾರೆ. ಕೋಮು ಭಾವನೆ ಹಾಗೂ ಕೋಮು ಸೌಹಾರ್ದಕ್ಕೆ ಧಕ್ಕೆ ತಂದ ಆರೋಪದಡಿ ಐವರು ಆರೋಪಿಗಳ ವಿರುದ್ಧ ಆಳಂದ ತಾಲ್ಲೂಕಿನ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತ ಸರ್ಕಾರದ ಪರವಾಗಿ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಗುರುವಾರ ಇರಾನ್ನ ಹಿಂದಿನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 86 ವರ್ಷ ವಯಸ್ಸಿನ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ನ ಮಾಜಿ ಸುಪ್ರೀಂ ನಾಯಕ ಖಮೇನಿ ಅವರು 1989 ರಿಂದ ದೇಶವನ್ನು ಆಳುತ್ತಿದ್ದರು ಮತ್ತು ಶನಿವಾರ ಮುಂಜಾನೆ ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ನಡೆಸಿದ ಸಂಯೋಜಿತ ಮಿಲಿಟರಿ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟರು. ಮಿಸ್ರಿ ಅವರ ಈ ಕ್ರಮವು ಸರ್ವೋಚ್ಚ ನಾಯಕನ ಸಾವಿನ ಬಗ್ಗೆ ಭಾರತ ಮೊದಲ ಪ್ರತಿಕ್ರಿಯೆಯನ್ನು ನೀಡಿದೆ.
ನೆಲಮಂಗಲ: ನವವಿವಾಹಿತ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಾದನಾಯಕನಹಳ್ಳಿಯ ಅರೆಕೆತ್ತನಹಳ್ಳಿಯಲ್ಲಿ ವರದಿಯಾಗಿದೆ. ಹೃದಯಾಘಾತಕ್ಕೆ ಬಲಿಯಾದ ವ್ಯಕ್ತಿಯನ್ನು ಚರಣ್(30) ಎಂದು ಗುರುತಿಸಲಾಗಿದೆ. ಇವರಿಗೆ ಮೂರು ತಿಂಗಳ ಮದುವೆಯಾಗಿತ್ತು. ಇಂದು ಬೆಳಗ್ಗೆ ಮನೆಯಲ್ಲಿದ್ದ ವೇಳೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ವೇಳೆ ಮನೆಯಲ್ಲೇ ಅವರು ಕುಸಿದು ಬಿದ್ದಿದ್ದಾರೆ.ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿದ್ದನ್ನು
ಭಾರತವು ಕಾನೂನು, ಸಂವಾದ ಮತ್ತು ರಾಜತಾಂತ್ರಿಕತೆಯ ಆಳ್ವಿಕೆಯಲ್ಲಿ ನಂಬಿಕೆ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದರು. ಮಿಲಿಟರಿ ಸಂಘರ್ಷವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಪಶ್ಚಿಮ ಏಷ್ಯಾದ ಬಹುಪಾಲು ಮೇಲೆ ಪರಿಣಾಮ ಬೀರಿರುವ ಮಾರಣಾಂತಿಕ ಯುಎಸ್-ಇರಾನ್ ಸಂಘರ್ಷದ ಮಧ್ಯೆ ಪ್ರಧಾನಿ ಮೋದಿಯವರ ಈ ಹೇಳಿಕೆ ಬಂದಿದೆ. ಫಿನ್ಲ್ಯಾಂಡ್ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಬಾಲಕಿ ಜೊತೆ ಅನುಚಿತ ವರ್ತನೆ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಾಲಕಿಯೊಬ್ಬಳನ್ನು ತೊಡೆ ಮೇಲೆ ಕೂರಿಸಿಕೊಂಡು ಮನಬಂದಂತೆ ವರ್ತಿಸಿದ ಮಲ್ಲಿಕಾರ್ಜುನ ಮುತ್ಯಾ ವಿಡಿಯೋ ವೈರಲ್ ಅಗಿತ್ತು. ಇದರ ಬೆನ್ನಲ್ಲೇ ಮಹಿಳಾ ಆಯೋಗ ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು. ಈ ಸಂಬಂಧ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಸ್ಕೋ ಖಾಯಿದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೇ ಅವರ ಪರವಾಗಿ ಅವರ ಭಕ್ತರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದರು. ನಮ್ಮ ಮುತ್ಯಾ ಯಾವ ತಪ್ಪೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಗೆಲ್ಲಲೇ ಬೇಕೆಂಬ ಪಣ ತೊಟ್ಟು ನಾವೆಲ್ಲ ಹೊರಟಿದ್ದೇವೆ. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಪ್ರಯತ್ನವನ್ನು ನಾವು ನಿಶ್ಚಿತವಾಗಿ ಮಾಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ನೀಡಿದರು. ಏನೇ ವ್ಯತ್ಯಾಸಗಳಿದ್ದರೂ ಅದನ್ನು ಸರಿಪಡಿಸುವ ಶಕ್ತಿ ನಮ್ಮೆಲ್ಲರಲ್ಲೂ ಇದೆ. ಹಾಗಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿಗಳಾದ ರಾಧಾಮೋಹನ್ ದಾಸ್ ಅಗ್ರವಾಲ್ ಅವರೂ ಬಂದಿದ್ದಾರೆ. ಎಲ್ಲರೂ ಕುಳಿತು ಸಮಸ್ಯೆ ಬಗೆಹರಿಸುತ್ತೇವೆ. ಇದನ್ನು ಮುಂದುವರೆಯಲು ಬಿಡುವುದಿಲ್ಲ ಎಂದು ತಿಳಿಸಿದರು.
ಬೆಂಗಳೂರು: ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದ ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ಬಂದಿಳಿದಿದ್ದಾರೆ.ಪ್ರವಾಸಕ್ಕೆ, ಉದ್ಯೋಗಕ್ಕೆ, ಬೇರೆ ಬೇರೆ ಕಾರಣಗಳಿಂದ ದುಬೈಗೆ ತೆರಳಿರುವ ಸಾವಿರಾರು ಭಾರತೀಯರು ಅಲ್ಲಿ ಸಿಲುಕಿದ್ದರು. ದುಬೈನಲ್ಲಿ ಸಿಲುಕಿದ್ದ ಬಳ್ಳಾರಿ, ಚಿತ್ರದುರ್ಗದ ಪ್ರವಾಸಿಗರು ನಾಲ್ಕು ದಿನದ ಬಳಿಕ ಇಂದು ಬೆಳಗ್ಗೆ ಬೆಂಗಳೂರಿಗೆ ಸುರಕ್ಷಿತವಾಗಿ ವಾಪಸಾಗಿದ್ದಾರೆ.ಬಳ್ಳಾರಿಯ 35 ಮಂದಿ ಹಾಗೂ ಚಿತ್ರದುರ್ಗ 15 ಮಂದಿ ಸೇರಿ 246 ಕನ್ನಡಿಗರು ಮಾ.4 ರಂದು ಶಾರ್ಜಾ ದಿಂದ ಕೊಚ್ಚಿನ್ಗೆ ಬಂದಿಳಿದಿದ್ದರು. 50 ಮಂದಿಗೆ ಅಲ್ಲಿಂದ ಬೆಂಗಳೂರಿಗೆ ಶಾಸಕ ಬಿ ನಾಗೇಂದ್ರ ಅವರು ವಿಮಾನದ ವ್ಯವಸ್ಥೆ ಮಾಡಿದ್ದರು. ಇಂದು ಬೆಳಗ್ಗೆ ಅವರೆಲ್ಲ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಪಟ್ನಾ: ಬಿಹಾರ ರಾಜಕಾರಣದಲ್ಲಿ ಮಿಂಚಿನ ಸಂಚಲನ ಉಂಟಾಗಿದೆ. ಕಳೆದ ಎರಡು ದಶಕಗಳಿಂದ ರಾಜ್ಯವನ್ನು ಮುನ್ನಡೆಸಿದ್ದ ನಿತೀಶ್ ಕುಮಾರ್ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ರಾಷ್ಟ್ರ ರಾಜಕಾರಣದತ್ತ ಮುಖಮಾಡಿದ್ದಾರೆ.ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 20 ವರ್ಷಕ್ಕಿಂತ ಹೆಚ್ಚು ಕಾಲ ವಹಿಸಿಕೊಂಡಿದ್ದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯಸಭೆಗೆ ಸೇರುವುದಾಗಿ ಗುರುವಾರ ದೃಢಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಅವರೇ ಖಚಿತಪಡಿಸಿದ್ದಾರೆ.ನನ್ನ ರಾಜಕೀಯ ಜೀವನದ ಆರಂಭದಿಂದಲೇ ಬಿಹಾರ ವಿಧಾನಮಂಡಲದ ಎರಡೂ ಸದನಗಳಲ್ಲೂ ಹಾಗೂ ಭಾರತದ ಸಂಸತ್ತಿನ ಎರಡೂ ಸದನಗಳಲ್ಲೂ ಸದಸ್ಯನಾಗಬೇಕೆಂಬ ಆಸೆ ನನ್ನ ಮನಸ್ಸಿನಲ್ಲಿ ಇತ್ತು. ನನ್ನ ಆಸೆಯಂತೆ ಈ ಬಾರಿ ನಡೆಯುತ್ತಿರುವ ಚುನಾವಣೆಯಲ್ಲಿ ರಾಜ್ಯಸಭೆ ಸದಸ್ಯನಾಗಲು ಬಯಸುತ್ತಿದ್ದೇನೆ ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು: ಕರ್ನಾಟಕ ತಂಡದ ವೇಗಿ ವೈಶಾಕ್ ವಿಜಯ್ಕುಮಾರ್ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ವೈಶಾಕ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ವೈಶಾಖ್ ಅವರು ಗುರುವಾರದಂದು ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ತಮ್ಮ ಬಹುಕಾಲದ ಗೆಳತಿ ಸಾಗರಿಕ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ನಟ ಕಿಚ್ಚ ಸುದೀಪ್ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.ನಗರದ ಮೈನ್ ಪ್ಯಾಲೇಸ್ನಲ್ಲಿ ನಡೆದ ಈ ಅದ್ಧೂರಿ ವಿವಾಹದಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಕ್ರಿಕೆಟ್ ಲೋಕದ ಗಣ್ಯರು ಸಾಕ್ಷಿಯಾಗಿದ್ದರು. ಸ್ಯಾಂಡಲ್ವುಡ್ ಬಾದ್ಶಾ ಕಿಚ್ಚ ಸುದೀಪ್ ಅವರು ನವಜೋಡಿಗೆ ಶುಭ ಹಾರೈಸಿದರು.29 ವರ್ಷದ ವೈಶಾಕ್ ಆರಂಭದಲ್ಲಿ ಬ್ಯಾಟರ್ ಆಗಿ ಕರ್ನಾಟಕದ ಅಂಡರ್-16 ತಂಡವನ್ನು ಮುನ್ನಡೆಸಿದ್ದ ಇವರು, ನಂತರ ವೇಗದ ಬೌಲರ್ ಆಗಿ ರೂಪಾಂತರಗೊಂಡರು.
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಇಂದು ಗೆಳತಿ ಸಾನಿಯಾ ಚಂದೋಕ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪುತ್ರ ಅರ್ಜುನ್ ಸೊಸೆ ಸಾನಿಯಾಗೆ ಹಾರ ಹಾಕುವಾಗ ಸಚಿನ್ ಭಾವುಕರಾಗಿ ನಿಂತು ನೋಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ. ಮಗನ ಮದುವೆ ಎನ್ನುವುದು ಎಷ್ಟೇ ದೊಡ್ಡ ಸೆಲೆಬ್ರಿಟಿಗಳಿಗಾದರೂ ಭಾವುಕ ಕ್ಷಣವೇ. ಸಚಿನ್ ಕೂಡಾ ಇದಕ್ಕೆ ಹೊರತಲ್ಲ. ಇಂದು ಮುಂಬೈನಲ್ಲಿ ಅದ್ಧೂರಿಯಾಗಿ ನಡೆದ ಸಮಾರಂಭದಲ್ಲಿ ಸಚಿನ್ ಪುತ್ರ , ಕ್ರಿಕೆಟಿಗ ಅರ್ಜುನ್ ತೆಂಡುಲ್ಕರ್ ಮತ್ತು ಸಾನಿಯಾ ಚಂದೋಕ್ ವಿವಾಹವಾಗಿದ್ದಾರೆ. ಪುತ್ರ ಅರ್ಜುನ್ ಸೊಸೆಗೆ ಹಾರ ಹಾಕುವಾಗ ಪಕ್ಕದಲ್ಲೇ ನಿಂತಿದ್ದ ಸಚಿನ್ ಅಕ್ಷತೆ ಹಾಕುತ್ತಾ ಭಾವುಕರಾಗಿ ನಿಂತಿದ್ದರು.
ನವದೆಹಲಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದಿಂದಾಗಿ ತೈಲಾಂತಕಕ್ಕೊಳಗಾಗಿದ್ದ ಭಾರತಕ್ಕೆ ಮತ್ತೆ ರಷ್ಯಾವೇ ಆಪತ್ಬಾಂಧವನಾಗಿದೆ. ಮತ್ತೊಮ್ಮೆ ಸ್ನೇಹಿತ ರಾಷ್ಟ್ರ ಎಂದು ನಿರೂಪಿಸಿದೆ. ಕೆಲವರು ಭಾರತ ಇತ್ತೀಚೆಗಿನ ದಿನಗಳಲ್ಲಿ ರಷ್ಯಾಕ್ಕೆ ಹೆಚ್ಚು ನಿಕಟವಾಗಿರುವುದಕ್ಕೆ ಟೀಕಿಸುವುದು ಇದೆ. ಆದರೆ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ನೆರವಾಗಲು ಮೊದಲು ಧಾವಿಸಿ ಬರುವ ರಾಷ್ಟ್ರಗಳಲ್ಲಿ ರಷ್ಯಾ ಮುಂಚೂಣಿಯಲ್ಲಿರುತ್ತದೆ. ಇದೀಗ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿ ಮುಚ್ಚಿ ಹೋಗಿದೆ. ಇದರಿಂದ ತೈಲ ಸಾಗಣೆ ಬಂದ್ ಆಗಿರುವುದು ಭಾರತಕ್ಕೆ ಸಂಕಷ್ಟವುಂಟು ಮಾಡಿದೆ. ಸುಮಾರು 27 ಭಾರತೀಯ ಹಡುಗಗಳು ಅಲ್ಲಿ ಸಿಲುಕಿಕೊಂಡಿರುವುದಾಗಿ ವರದಿಯಾಗಿದೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಇಳಿಕೆಯಾಗಿತ್ತು. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಇದು ಬೆಳೆಗಾರರಿಗೆ ಸಮಾಧಾನ ತಂದಿತ್ತು. ಆದರೆ ಕಳೆದ ಎರಡು ದಿನಗಳಿಂದ ಸತತವಾಗಿ ಬೆಲೆ ಇಳಿಕೆ ಕಂಡುಬರುತ್ತಿದೆ. ಇಂದು ಕೆಲವು ವರ್ಗದ ಅಡಿಕೆ ಬೆಲೆಯಲ್ಲಿ ಇಳಿಕೆಯಾಗಿದ್ದರೆ ಮತ್ತೆ ಕೆಲವು ವರ್ಗದ ಅಡಿಕೆ ಬೆಲೆ ಏರಿಕೆಯಾಗಿದೆ. ಇಂದು ಹೊಸ ಅಡಿಕೆ ಬೆಲೆ 5 ರೂ. ಇಳಿಕೆಯಾಗಿದ್ದು 470 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದು 530 ರೂ. ಗಳಾಗಿದೆ.
ಇತ್ತೀಚೆಗಿನ ದಿನಗಳಲ್ಲಿ ಆಫೀಸ್, ಕಾಲೇಜು, ಶಾಲೆ ಎಂದಿದ್ದರೆ ಮಾತ್ರ ಬೇಗ ಏಳೋದು. ರಜಾ ದಿನ ಬಂತು ಎಂದರೆ ಬೆಳಿಗ್ಗೆ 11 ಗಂಟೆಯವರೆಗೂ ನಿದ್ರೆ ಮಾಡೋದು ಎಲ್ಲರ ಅಭ್ಯಾಸವಾಗಿಬಿಟ್ಟಿದೆ. ಹಲವರು ರಾತ್ರಿ ಲೇಟ್ ಆಗಿ ಮಲಗಿ ನಿಯಮಿತವಾಗಿ ಬೆಳಿಗ್ಗೆ ನಿಧಾನವಾಗಿ ಏಳುತ್ತಾರೆ. ಈ ರೀತಿ ತಡವಾಗಿ ಏಳುವುದು ಆರೋಗ್ಯಕರ ಲಕ್ಷಣವಲ್ಲ ಎಂದು ಹಿರಿಯರು ಹೇಳುತ್ತಾರೆ. ಇದು ಸಂಪ್ರದಾಯ ಮಾತ್ರವಲ್ಲ, ವೈಜ್ಞಾನಿಕ ದೃಷ್ಟಿಯಿಂದಲೂ ಸರಿಯಾಗಿದೆ. ಯಾಕೆಂದರೆ ಬೆಳಿಗ್ಗೆ ತಡವಾಗಿ ಏಳುವುದರಿಂದ ಕೆಲವು ಆರೋಗ್ಯ ಸಮಸ್ಯೆಯಾಗಬಹುದು. ಯಾವೆಲ್ಲಾ ಆರೋಗ್ಯ ಸಮಸ್ಯೆಯಾಗಬಹುದು ನೋಡಿ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ಈ ವಾರದ ಆರಂಭದಲ್ಲೇ ಪರಿಶುದ್ಧ ಚಿನ್ನದ ದರ ಭಾರೀ ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,73,310.00 ರೂ.ಗಳಿತ್ತು. ಆದರೆ ಇಂದು ಇಳಿಕೆಯಾಗಿದ್ದು 1,66,980.00 ರೂ.ಗಳಷ್ಟಿದೆ.
ನಾಗ್ಪುರ: ಹೋಳಿ ಆಡೋಣ ಬಾ ಎಂದು ಪುಟಾಣಿ ಬಾಲಕ ಕರೆದಿದ್ದಕ್ಕೆ ಸಿಟ್ಟಿಗೆದ್ದ ಅಜ್ಜಿ ಆತನ ಮೇಲೆ ಬಿಸಿ ಬಿಸಿ ನೀರು ಎರಚಿದ ಹೃದಯ ವಿದ್ರಾವಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದೆ. ಹೋಳಿ ಹಬ್ಬದ ದಿನ ಮಕ್ಕಳೆಲ್ಲರೂ ಬೀದಿಗೆ ಬಂದು ಪರಸ್ಪರ ಬಣ್ಣ ಎರಚುತ್ತಾ ಹೋಳಿ ಆಡುವುದು ಮಾಮೂಲು. ಅವರಿಗೆ ದೊಡ್ಡವರೂ ಸಾಥ್ ನೀಡುತ್ತಾರೆ. ಇದೇ ರೀತಿ ಈ ಬಾಲಕನೂ ಸಂಭ್ರಮಾಚರಿಸಲು ಬಯಸಿದ್ದ. ತನ್ನ ವಯಸ್ಸಿನವರ ಜೊತೆ ಬಣ್ಣದೋಕುಳಿ ಆಡುತ್ತಿದ್ದ ಬಾಲಕ ಅಜ್ಜಿಯನ್ನೂ ಬರುವಂತೆ ಹಠ ಹಿಡಿದಿದ್ದಾನೆ.
ಪೈಲ್ಸ್ ಸರ್ಜರಿ ಆಗಿತ್ತು ಅದಕ್ಕೇ ರಜಾ ಹಾಕಿದ್ದೆ ಎಂದರೂ ಮೇಲಧಿಕಾರಿ ನಂಬಲಿಲ್ಲ. ಇದರಿಂದ ಆಕ್ರೋಶಗೊಂಡ ಲೋಕೋ ಪೈಲೆಟ್ ಮಾಡಿದ್ದೇನು ಗೊತ್ತಾ? ಈ ವಿಡಿಯೋ ನೋಡಿ. ಸರ್ಕಾರಿ ಕೆಲಸವಿರಲಿ, ಖಾಸಗಿ ಕೆಲಸವಿರಲಿ ಮೇಲಧಿಕಾರಿಗಳ ಬಳಿ ರಜೆ ಕೇಳುವುದು ಕಷ್ಟವೇ. ಕೆಲವರಂತೂ ಮಾನವೀಯತೆಯನ್ನೂ ಮರೆದು ಕಿರಿಯ ಸಹೋದ್ಯೋಗಿಗಳನ್ನು ನಡೆಸಿಕೊಳ್ಳುತ್ತಾರೆ. ಇದೇ ರೀತಿ ಘಟನೆಯೊಂದು ರೈಲ್ವೇ ಇಲಾಖೆಯಲ್ಲಿ ನಡೆದಿದೆ. ರೈಲ್ವೇ ಚಾಲಕನೊಬ್ಬ ಕಚೇರಿಗೆ ಬಂದಿರಲಿಲ್ಲ. ನಂತರ ಕರ್ತವ್ಯಕ್ಕೆ ಬಂದಾಗ ಮೇಲಧಿಕಾರಿ ಯಾಕೆ ಬಂದಿರಲಿಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಆತ ಪೈಲ್ಸ್ ಸರ್ಜರಿಯಾಗಿತ್ತು ಎಂದಿದ್ದಾನೆ.
ನವದೆಹಲಿ: ಹೋಳಿ ಹಬ್ಬದ ನಿಮಿತ್ತ ನಿನ್ನೆ ದೆಹಲಿಯಲ್ಲಿ ರಾಹುಲ್ ಗಾಂಧಿ ತಮ್ಮ ಪಕ್ಷದ ನಾಯಕರು, ಕಾರ್ಯಕರ್ತರೊಂದಿಗೆ ಹೋಳಿ ಹಬ್ಬ ಆಚರಿಸಿದ್ದರು. ಈ ವೇಳೆ ಕ್ಯಾಮರಾ ಮ್ಯಾನ್ ಕತೆ ಏನಾಯ್ತು ನೋಡಿ. ನಿನ್ನೆ ದೇಶದಾದ್ಯಂತ ಜನ ಹೋಳಿ ಹಬ್ಬದ ನಿಮಿತ್ತ ಬಣ್ಣದೋಕುಳಿ ಆಡಿದ್ದರು. ಅದೇ ರೀತಿ ಎಐಸಿಸಿ ಕಚೇರಿಯಲ್ಲೂ ಹೋಳಿ ಹಬ್ಬವನ್ನು ಆಯೋಜಿಸಲಾಗಿತ್ತು. ರಾಹುಲ್ ಗಾಂಧಿ ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಸಾಕಷ್ಟು ಸುದ್ದಿ ಮಾಧ್ಯಮಗಳೂ ಕ್ಯಾಮರಾ ಹಿಡಿದು ನಿಂತಿದ್ದರು. ಮುಖಕ್ಕೆ ಬಣ್ಣ ಹಚ್ಚಿಕೊಂಡು ರಾಹುಲ್ ಗಾಂಧಿ ಪತ್ರಕರ್ತರಿಗೂ ವಿಶ್ ಮಾಡುತ್ತಿದ್ದರು. ಈ ವೇಳೆ ಕ್ಯಾಮರಾ ಮ್ಯಾನ್ ಒಬ್ಬರು ಹ್ಯಾಪೀ ಹೋಳಿ ರಾಹುಲ್ ಜೀ ಎಂದು ಶುಭಾಶಯ ಮಾಡಿದ್ದಾರೆ.
ಹೈದರಾಬಾದ್: ಮದುವೆಯಾಗಿ ಈಗ ತೆಲುಗು ಸೊಸೆಯಾದರೂ ಕನ್ನಡ ನಾಡಿನ ಮೂಲವನ್ನು ರಶ್ಮಿಕಾ ಮಂದಣ್ಣ ಮರೆತಿಲ್ಲ. ಇದಕ್ಕೆ ರಿಸೆಪ್ಷನ್ ನ ಈ ವಿಚಾರವೇ ಸಾಕ್ಷಿ. ಫೆಬ್ರವರಿ 26 ರಂದು ಉದಯಪುರದಲ್ಲಿ ಖಾಸಗಿಯಾಗಿ ಮದುವೆಯಾಗಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ದಂಪತಿ ನಿನ್ನೆ ಹೈದರಾಬಾದ್ ನಲ್ಲಿ ಗಣ್ಯರಿಗಾಗಿ ಅದ್ಧೂರಿಯಾಗಿ ಆರತಕ್ಷತೆ ಏರ್ಪಡಿಸಿದ್ದರು. ಈ ಆರತಕ್ಷತೆಗೆ ಟಾಲಿವುಡ್, ಬಾಲಿವುಡ್, ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಜೊತೆ ರಾಜಕೀಯ ಗಣ್ಯರೂ ಆಗಮಿಸಿದ್ದರು. ವಿಶೇಷವಾಗಿ ರಶ್ಮಿಕಾ ಈ ಆರತಕ್ಷತೆಯಲ್ಲಿ ಉಟ್ಟಿದ್ದ ಸೀರೆ ಎಲ್ಲರ ಗಮನ ಸೆಳೆದಿದೆ. ಕೆಂಪು ಬಣ್ಣದ ಪಕ್ಕಾ ಮೈಸೂರು ಸಿಲ್ಕ್ ಸೀರೆಯನ್ನೇ ರಶ್ಮಿಕಾ ಉಟ್ಟುಕೊಂಡಿದ್ದಾರೆ.
ನ್ಯೂಯಾರ್ಕ್: ಯುದ್ಧೋನ್ಮಾದದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಗೆ ಯಾರೇ ನಾಯಕನಾಗಲಿ ಅವರನ್ನು ಕೊಲ್ಲೋದು ಖಚಿತ ಎಂದು ವಾರ್ನ್ ಮಾಡಿದ್ದಾರೆ. ಇರಾನ್ ಪರಮೋಚ್ಛ ನಾಯಕ ಖಮೇನಿ ಇಸ್ರೇಲ್-ಅಮೆರಿಕಾ ದಾಳಿಗೆ ಹತ್ಯೆಯಾಗಿದ್ದರು. ಎರಡೂ ದೇಶಗಳ ನಡುವೆ ಈಗ ಭೀಕರ ಯುದ್ಧವೇ ನಡೆಯುತ್ತಿದೆ. ಇರಾನ್ ಕೂಡಾ ತನ್ನ ಪರಮೋಚ್ಛ ನಾಯಕನ ಸಾವಿಗೆ ಸೇಡು ತೀರಿಸಲು ಹೊರಟಿದೆ. ಇದರ ನಡುವೆ ಹೊಸ ನಾಯಕನ ಆಯ್ಕೆ ಮಾಡಿದೆ. ಮೂಲಗಳ ಪ್ರಕಾರ ಖಮೇನಿ ಎರಡನೇ ಪುತ್ರ ಮುಜ್ತಾಬ ಖಮೇನಿ ಇರಾನ್ ನ ಮುಂದಿನ ಪರಮೋಚ್ಛ ನಾಯಕ ಎನ್ನಲಾಗಿದೆ.
ಮುಂಬೈ: ಟಿ20 ವಿಶ್ವಕಪ್ ನಲ್ಲಿ ಇಂದು ಟೀಂ ಇಂಡಿಯಾ ವಿರುದ್ಧ ಸೆಮಿಫೈನಲ್ ಆಡಲಿರುವ ಇಂಗ್ಲೆಂಡ್ ತಂಡ ವಾಂಖೆಡೆಯಲ್ಲಿರುವ ಭಾರತೀಯ ಅಭಿಮಾನಿಗಳ ಸದ್ದು ಅಡಗಿಸುವುದಾಗಿ ಸವಾಲು ಹಾಕಿದೆ. ಇಂಗ್ಲೆಂಡ್ ಬೌಲರ್ ಸ್ಯಾಮ್ ಕ್ಯುರೇನ್ ಈ ಸವಾಲು ಹಾಕಿದ್ದಾರೆ. ನಿನ್ನೆ ನಡೆದ ಮೊದಲ ಸೆಮಿಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ನ್ಯೂಜಿಲೆಂಡ್ ಫೈನಲ್ ಗೇರಿದೆ. ಇಂದು ಎರಡನೇ ಸೆಮಫೈನಲ್ ಮುಂಬೈನಲ್ಲಿ ನಡೆದಿದ್ದು ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ಮುಖಾಮುಖಿಯಾಗುತ್ತಿದೆ. ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸ್ಯಾಮ್ ಕ್ಯುರೇನ್, ವಾಂಖೆಡೆ ಮೈದಾನದಲ್ಲಿ ಭಾರತೀಯ ಪ್ರೇಕ್ಷಕರನ್ನು ಸೈಲೆಂಟ್ ಮಾಡುವುದಾಗಿ ಹೇಳಿದ್ದಾರೆ.
ಮುಂಬೈ: ಟಿ20 ವಿಶ್ವಕಪ್ ನ ಎರಡನೇ ಸೆಮಿಫೈನಲ್ ನಲ್ಲಿ ಇಂದು ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೆಣಸಾಡಲಿದೆ. ಇದು ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾಕ್ಕೆ ಸತತ ಮೂರನೇ ಟಿ20 ವಿಶ್ವಕಪ್ ಸೆಮಿಫೈನಲ್. ಕಳೆದ ಟಿ20 ವಿಶ್ವಕಪ್ ಗೆ ಹೋಲಿಸಿದರೆ ಈ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಇದುವರೆಗಿನ ಹಾದಿ ಸುಗಮವಾಗಿರಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್ 8 ಪಂದ್ಯವನ್ನು ಸೋತಿತ್ತು. ಬ್ಯಾಟಿಂಗ್ ಹುಳುಕುಗಳೂ ಹೊರಗೆ ಬಂದಿವೆ. ಪ್ರತೀ ಪಂದ್ಯದಲ್ಲಿ ಒಂದು ಅಥವಾ ಇಬ್ಬರು ಆಟಗಾರರನ್ನೇ ಅವಲಂಬಿಸಿರುತ್ತದೆ.
ಹೈದರಾಬಾದ್: ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸಿನಿಮಾ ಆಪ್ತರಿಗಾಗಿ ಮದುವೆ ಆರತಕ್ಷತೆಯನ್ನು ನಿನ್ನೆ ಆಯೋಜಿಸಿದ್ದರು. ಈ ವೇಳೆ ಇಬ್ಬರೂ ಹೇಗೆ ಕಾಣಿಸಿದ್ರು, ಯಾರೆಲ್ಲಾ ಬಂದಿದ್ದರು ಎಂಬ ವಿಡಿಯೋ ಇಲ್ಲಿದೆ ನೋಡಿ. ನಿನ್ನೆ ಹೈದರಾಬಾದ್ ನ ತಾಜ್ ಕೃಷ್ಣಾದಲ್ಲಿ ಸೆಲೆಬ್ರಿಟಿಗಳಿಗಾಗಿ ವಿವಾಹ ಆರತಕ್ಷತೆ ಏರ್ಪಡಿಸಲಾಗಿತ್ತು. ಈ ಜೋಡಿ ಫೆಬ್ರವರಿ 26 ಕ್ಕೆ ಉದಯಪುರದಲ್ಲಿ ಖಾಸಗಿಯಾಗಿವ ವಿವಾಹವಾಗಿದ್ದರು. ಇದಾದ ಬಳಿಕ ತಮ್ಮ ಊರಿಗೆ ಬಂದು ಪೂಜೆಯಲ್ಲಿ ಭಾಗಿಯಾಗಿದ್ದು ಅಭಿಮಾನಿಗಳಿಗೆ ಊಟ ಹಾಕಿದ್ದರು.
ಬೆಂಗಳೂರು: ರಾಜ್ಯದಲ್ಲಿ ಈಗ ಬೇಸಿಗೆಯ ಬೇಗೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂದು ಬಿಸಿಲಿನ ಝಳ ಮತ್ತಷ್ಟು ಹೆಚ್ಚಳವಾಗಲಿದ್ದು, ಹೊರಗೆ ಕಾಲಿಡುವ ಮುನ್ನ ಎಚ್ಚರಿಕೆ ಗಮನಿಸಿ. ಮಾರ್ಚ್ ನಲ್ಲಿ ಬಿಸಿಲಿನ ತಾಪ ಹೆಚ್ಚಾಗಲಿದೆ ಎಂದು ಈಗಾಗಲೇ ಹವಾಮಾನ ತಜ್ಞರು ಹೇಳಿದ್ದರು. ಅದೀಗ ಮೊದಲ ವಾರದಲ್ಲೇ ಅನುಭವಕ್ಕೆ ಬರುತ್ತಿದೆ. ಈ ವಾರ ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗಿದ್ದು ಹಗಲಿಡೀ ವಿಪರೀತ ಬಿಸಿಲು ಕಂಡುಬರುತ್ತಿದೆ. ನಿನ್ನೆಗೆ ಹೋಲಿಸಿದರೆ ಇಂದು ಗರಿಷ್ಠ ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗಲಿದೆ. ಇಂದು ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 33 ಡಿಗ್ರಿ ಮತ್ತು ಕನಿಷ್ಠ ತಾಪಮಾನ 19 ಡಿಗ್ರಿಯಷ್ಟು ಕಂಡುಬರಲಿದೆ.
ಗುರುವಾರ ಮಹಾವಿಷ್ಣುವಿಗೆ ವಿಶೇಷವಾದ ದಿನವಾಗಿದೆ. ಆಯಸ್ಸು, ಆರೋಗ್ಯ ವೃದ್ಧಿಗಾಗಿ ಇಂದು ಮಹಾವಿಷ್ಣುವಿನ ಕುರಿತಾದ ವಿಷ್ಣು ಷಟ್ಪದಿ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.ಅವಿನಯಮಪನಯ ವಿಷ್ಣೋ ದಮಯ ಮನಃ ಶಮಯ ವಿಷಯಮೃಗತೃಷ್ಣಾಮ್ ।ಭೂತದಯಾಂ ವಿಸ್ತಾರಯ ತಾರಯ ಸಂಸಾರಸಾಗರತಃ ॥ 1 ॥ ದಿವ್ಯಧುನೀಮಕರಂದೇ ಪರಿಮಳಪರಿಭೋಗಸಚ್ಚಿದಾನಂದೇ ।ಶ್ರೀಪತಿಪದಾರವಿಂದೇ ಭವಭಯಖೇದಚ್ಛಿದೇ ವಂದೇ ॥ 2 ॥ ಸತ್ಯಪಿ ಭೇದಾಪಗಮೇ ನಾಥ ತವಾಽಹಂ ನ ಮಾಮಕೀನಸ್ತ್ವಮ್ ।ಸಾಮುದ್ರೋ ಹಿ ತರಂಗಃ ಕ್ವಚನ ಸಮುದ್ರೋ ನ ತಾರಂಗಃ ॥ 3 ॥ ಉದ್ಧೃತನಗ ನಗಭಿದನುಜ ದನುಜಕುಲಾಮಿತ್ರ ಮಿತ್ರಶಶಿದೃಷ್ಟೇ ।ದೃಷ್ಟೇ ಭವತಿ ಪ್ರಭವತಿ ನ ಭವತಿ ಕಿಂ ಭವತಿರಸ್ಕಾರಃ ॥ 4 ॥
ವೇಣೂರು: ಇಲ್ಲಿನ ಮೂಡುಕೋಡಿ ಗ್ರಾಮದ ಬೊಮ್ಮನಟ್ಟ ಮನೆಯ ಪರಿಸರದಲ್ಲಿ ಪತ್ತೆಯಾದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವ ವೇಳೆ, ಅದು ಉರಗ ತಜ್ಞನ ಮೇಲೆ ಆಕ್ರಮಣಕಾರಿಯಾಗಿ ಮುಗಿಬಿದ್ದಿದೆ. ಇದನ್ನು ಅಲ್ಲೇ ಇದ್ದವರು ವಿಡಿಯೋ ಮಾಡಿದ್ದು, ನೋಡುವಾಗ ಮೈ ನವಿರೇಳಿಸುತ್ತದೆ. ಅತ್ಯಂತ ವಿಷಪೂರಿತ ಹಾವು ಆಗಿರುವ ಕಾಳಿಂಗ ಸರ್ಪವು ಮಲೆನಾಡು ಭಾಗದಲ್ಲಿ ಹೆಚ್ಚು ಕಾಣಸಿಗುತ್ತದೆ. ಇದೀಗ ಬಿಸಿಲಿನ ತಾಪಕ್ಕೆ ಹಾವುಗಳು ಜಾಸ್ತಿ ಜನಬಿಡದಿ ಪ್ರದೇಶದಲ್ಲಿ ಕಾಣಸಿಗುತ್ತದೆ. ಇಂದು ಬೆಳ್ತಂಗಡಿ ತಾಲ್ಲೂಕಿನ ಮೂಡುಕೋಡಿ ಗ್ರಾಮದ ಬೊಮ್ಮನಟ್ಟದ ವಿಶ್ವನಾಥ್ ಎಂಬವರ ಮನೆಯ ಪರಿಸರದಲ್ಲಿ ಹಾವು
ಬೆಂಗಳೂರು: ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮಾರ್ಚ್ 4 ರಂದು ಬುಧವಾರ ಕಾಂಗ್ರೆಸ್ ಸರ್ಕಾರ ಎಸ್ಸಿಗಳಿಗೆ ಒಳ ಮೀಸಲಾತಿಯನ್ನು ಪರಿಗಣಿಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಎಂದು ಒತ್ತಾಯಿಸಿದರು.ನ್ಯಾಯಾಲಯಕ್ಕೆ ಸಂಬಂಧಿಸಿದ ತಾಂತ್ರಿಕ ಅಂಶಗಳನ್ನು ಸರಕಾರ ನೆಪ ಹೇಳಬಾರದು ಎಂದ ಅವರು, ಇಲ್ಲವಾದಲ್ಲಿ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.ವರ್ಧಿತ ಕೋಟಾ ಮತ್ತು ಒಳಮೀಸಲಾತಿಯ ಮೇಲಿನ ತಡೆ ಮತ್ತು ಒಳಮೀಸಲಾತಿಗೆ ಇರುವ ತಡೆಯಿಂದಾಗಿ ಡಿಸೆಂಬರ್ 28,
ಜೈಪುರ: ಯುನೈಟೆಡ್ ಸ್ಟೇಟ್ಸ್, ಇಸ್ರೇಲ್ ಮತ್ತು ಇರಾನ್ ಒಳಗೊಂಡಿರುವ ಸಂಘರ್ಷದ ನಡುವೆ ಓಮನ್ ಬಳಿ ತೈಲ ಟ್ಯಾಂಕರ್ಗೆ ಕ್ಷಿಪಣಿ ಬಡಿದು ರಾಜಸ್ಥಾನದ ನಾಗೌರ್ ಜಿಲ್ಲೆಯ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.ಮಾರ್ಚ್1ರಂದು ಬೆಳಿಗ್ಗೆ ಖಾಸಾಬ್ ಬಂದರಿನಲ್ಲಿ ನಿಂತಿದ್ದಾಗ ಇರಾನ್ ಕ್ಷಿಪಣಿಯು ಹಡಗಿಗೆ ಅಪ್ಪಳಿಸಿತು ಮತ್ತು ಹಡಗಿಗೆ ಗಮನಾರ್ಹ ಹಾನಿಯಾಗಿದೆ ಎಂದು ಕುಟುಂಬವು ಮಾಹಿತಿ ಪಡೆದಿದೆ ಎಂದು ಹೇಳಿದರು.ನಾಪತ್ತೆಯಾಗಿರುವ ಸಿಬ್ಬಂದಿ ದಲೀಪ್ ಸಿಂಗ್, ನಾಗೌರ್ನ ಖಿನ್ವಾಟಾನಾ ಗ್ರಾಮದ ನಿವಾಸಿಯಾಗಿದ್ದು, ಜನವರಿ 22 ರಂದು ತನ್ನ
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ವಿಮಾನಯಾನ ಕಾರ್ಯಾಚರಣೆಗೆ ಅಡ್ಡಿಯಾಗಿರುವ ಕಾರಣ ಬುಧವಾರ 34 ಅಂತರಾಷ್ಟ್ರೀಯ ವಿಮಾನಗಳ ರದ್ಧಾಗಿದೆ ಎಂದು ತಿಳಿದುಬಂದಿದೆ.ಈ ರದ್ದತಿಗಳು ಮಾರ್ಚ್ 4 ರಂದು ಬೆಳಿಗ್ಗೆ 11:59 ರವರೆಗೆ ವಾಯುಪ್ರದೇಶದ ನಿರ್ಬಂಧಗಳಿಂದಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 18 ಆಗಮನ ಮತ್ತು 16 ನಿರ್ಗಮನಗಳನ್ನು ಒಳಗೊಂಡಿವೆ.ರದ್ದತಿಗಳು ಅಬುಧಾಬಿ, ರಿಯಾದ್, ಜೆಡ್ಡಾ, ದಮ್ಮಾಮ್, ದುಬೈ ಮತ್ತು ದೋಹಾ ಸೇರಿದಂತೆ ಪಶ್ಚಿಮ ಏಷ್ಯಾದ ನಗರಗಳೊಂದಿಗೆ
ಬೆಂಗಳೂರು: ಅಲಿ ಖಮೇನಿ ಹತ್ಯೆಯನ್ನು ಖಂಡಿಸಿ ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸುವವರ ವಿರುದ್ಧ ಪ್ರಕರಣಗಳನ್ನು ದಾಖಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ಚರ ಹೇಳಿದರು.ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ರಾಜ್ಯದಲ್ಲಿ ಪ್ರತಿಭಟನೆಗಳು ಹಿಡಿದಿದೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಪ್ರತಿಭಟನೆಗಳ ಬಗ್ಗೆ ದೃಢವಾದ ನಿಲುವನ್ನು ತೆಗೆದುಕೊಂಡಿದೆ ಮತ್ತು ನಗರದಲ್ಲಿ ಯಾವುದೇ ಸಭೆ ಸೇರಲು ಅನುಮತಿ ಅಗತ್ಯವಿದೆ ಎಂದರು.
ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿರುವ ಪವಿತ್ರಾ ಗೌಡ, ಇತರರಿಗೆ ಕರ್ನಾಟಕ ಹೈಕೋರ್ಟ್ ಶಾಕ್ ನೀಡಿದೆ. ಮನೆ ಊಟಕ್ಕೆ ಬೇಡಿಕೆಯಿಟ್ಟಿದ್ದ ಆರೋಪಿಗಳಿಗೆ ವೈದ್ಯಕೀಯ ಕಾರಣಗಳಿಗಾಗಿ ಮಾತ್ರ ಮನೆ ಊಟ, ಕೋರಿಕೆ ಮೇರೆಗೆ ಅಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದೆ. ಈ ಮೂಲಕ ಬೇಡಿಕೆಯಿಟ್ಟಿದ್ದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್ ಹಾಗೂ ಲಕ್ಷ್ಮಣ್ ಮೂವರು ಆರೋಪಿಗಳಿಗೆ ಮನೆ ಊಟದ ಬೇಡಿಕೆಗೆ ಹೈಕೋರ್ಟ್ ಬ್ರೇಕ್ ನೀಡಿದೆ.
ದಾವಣಗೆರೆ: ಇಂದು ಇಲ್ಲಿನ ಜಿಲ್ಲಾಧಿಕಾರಿಯ ಸರ್ಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ ಹಾಕಿದ್ದು, ಪರಿಶೀಲನೆಯಲ್ಲಿ ಇದೊಂದು ಹುಸಿ ಬಾಂಬ್ ಕರೆ ಬೆದರಿಕೆ ಎಂದು ತಿಳಿದುಬಂದಿದೆ. ಇಲ್ಲಿನ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರ ನಿವಾಸದಲ್ಲಿ ಬಾಂಬ್ ಇಡಲಾಗಿದೆ ಎಂಬುದಾಗಿ ತುರ್ತು ಸಹಾಯವಾಣಿ 112ಗೆ ಮಧ್ಯಾಹ್ನ 2.40ಕ್ಕೆ ಕರೆ ಬಂದಿದೆ. ಕರೆ ಬೆನ್ನಲ್ಲೇ ಅವರ ನಿವಾಸಕ್ಕೆ ಧಾವಿಸಿದ ಬಾಂಬ್ ಪತ್ತೆದಳ ಹಾಗೂ ಶ್ವಾನದಳದ ಸಿಬ್ಬಂದಿ ಒಂದು ಗಂಟೆಗೂ ಅಧಿಕ ಹೊತ್ತು
ತಿರುವನಂತಪುರಂ ಜಿಲ್ಲೆಯ ಕಟ್ಟಕ್ಕಡ ತಾಲೂಕಿನ ಕಲ್ಲಿಕ್ಕಾಡ್ ಗ್ರಾಮದಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ತಿರುವನಂತಪುರಂ ಲಿಮಿಟೆಡ್ಗೆ 180 ಎಕರೆ ಭೂಮಿಯನ್ನು ಕೇರಳ ಸರ್ಕಾರ ಉಚಿತವಾಗಿ ನೀಡಿದೆ. ನೆಟ್ಟುಕಲ್ತೇರಿ ತೆರೆದ ಜೈಲು ಆವರಣದಿಂದ 257 ಎಕರೆಯನ್ನು ವರ್ಗಾಯಿಸಲು ಕೇರಳ ಸರ್ಕಾರಕ್ಕೆ ಅನುಮತಿ ನೀಡಿದ ಕಳೆದ ವರ್ಷ ಡಿಸೆಂಬರ್ನಲ್ಲಿ ಸುಪ್ರೀಂ ಕೋರ್ಟ್ನ ಅನುಮೋದನೆಯನ್ನು ಅನುಸರಿಸಿ ಭೂ ಹಂಚಿಕೆ ಮಾಡಲಾಗಿದೆ.ಬ್ರಹ್ಮೋಸ್ ಏರೋಸ್ಪೇಸ್ ಟ್ರಿವೆಂಡ್ರಮ್ ಲಿಮಿಟೆಡ್ ತನ್ನ ವಿಸ್ತರಣೆಗಾಗಿ 180 ಎಕರೆಗಳನ್ನು ಪಡೆಯುತ್ತದೆ. ಉಳಿದ ಭೂಮಿಯಲ್ಲಿ
ಮುಂಬೈ: ಸೋಫಿ ಶೈನ್ರನ್ನು ಭಾರತೀಯ ಕ್ರಿಕೆಟಿಗ ಶಿಖರ್ ಧವನ್ ಅವರು ಕೈಹಿಡಿದ ಬೆನ್ನಲ್ಲೇ ಮಾಜಿ ಪತ್ನಿ ಆಯೇಶಾ ಮುಖರ್ಜಿ ಅವರಿಂದ ₹5.7 ಕೋಟಿ ಕ್ರಿಕೆಟಿಗನಿಗೆ ನೀಡಲಾಗಿದೆ ಎನ್ನಲಾಗಿದೆ. ಮೊದಲ ಪತ್ನಿಯಿಂದ 2021 ರಲ್ಲಿ ಬೇರ್ಪಟ್ಟ ಬಳಿಕ 2023 ರಲ್ಲಿ ಆಯೇಶಾ ಅವರ ಮಾನಸಿಕ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನವನ್ನು ಪಡೆದರು. ಸರಿ, ಅವರ ಎರಡನೇ ಮದುವೆಯ ನಂತರ, ಶಿಖರ್ ಮತ್ತು ಆಯೇಶಾ ನಡುವಿನ ಕಾನೂನು ಹೋರಾಟದಲ್ಲಿ ಈಗ ಪರಿಹಾರ ಸಿಕ್ಕಿದೆ.
ಮುಂಬೈ: ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ "ಮರುಕಳಿಸುವ ಸಮಸ್ಯೆ"ಯ ಬಗ್ಗೆ 'ಕಾಂತಾರ' ನಟಿ ಸಪ್ತಮಿ ಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಲವಾದ ಪದಗಳಿರುವ Instagram ಪೋಸ್ಟ್ನಲ್ಲಿ, ಸಪ್ತಮಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸೆರೆಹಿಡಿಯಲಾದ ಮಹಿಳಾ ನಟರ ಅಗೌರವದ ವೀಡಿಯೊಗಳು ಮತ್ತು ಫೋಟೋಸ್ ಸಂಬಂಧ ಪಾಪರಾಜಿಗಳ ವಿರುದ್ಧ ಕಿಡಿಕಾರಿದ್ದಾರೆ. ಇಂತಹ ವಿಷಯವು ಅವರ ಘನತೆಗೆ ಹಿಂಸಾತ್ಮಕವಾಗಿದೆ ಮತ್ತು ಅದನ್ನು ಸಹಿಸಬಾರದು ಎಂದು ಹೇಳಿದ್ದಾರೆ.ಚಿತ್ರರಂಗದ ಮಹಿಳೆಯರಾದ ನಾವು ಮರುಕಳಿಸುವ ಸಮಸ್ಯೆಯನ್ನು ಪರಿಹರಿಸಲು ಒಟ್ಟಾಗಿ ನಿಲ್ಲುತ್ತೇವೆ. ಸಾರ್ವಜನಿಕ
ಮುಂಬೈ: ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ 2026 ಸೆಮಿಫೈನಲ್ ಹಣಾಹಣಿಗೆ ಮುನ್ನ ಭಾರತ ಕ್ರಿಕೆಟ್ ತಂಡದ ಸದಸ್ಯರು ಬುಧವಾರ ಮುಂಬೈನ ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನಡೆಯುತ್ತಿರುವ T20 WC 2026ಗೆ ಬಂದಿರುವ ಭಾರತ, ಸೂಪರ್ 8 ರ ತಮ್ಮ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ಗಳ ಸೋಲನ್ನು ಹೊರತುಪಡಿಸಿ, ಇದುವರೆಗಿನ ಏಳು T20 WC ಮುಖಾಮುಖಿಗಳಲ್ಲಿ ಆರರಲ್ಲಿ ಜಯಗಳಿಸಿದೆ.
ಬೆಂಗಳೂರು: ರಾಜ್ಯ ಸರ್ಕಾರವು ಮೀಸಲಾತಿಯನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡದೆ ಗೊಂದಲ ಸೃಷ್ಟಿಸಿಕೊಂಡು ಎಸ್ಸಿ. ಎಸ್ಟಿ ಹಾಗೂ ಹಿಂದುಳಿದ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಇದನ್ನು ಖಂಡಿಸಿ ಭಾರತೀಯ ಜನತಾ ಪಕ್ಷ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಿದೆ ಎಂದು ಮಾಜಿ ಸಚಿವರಾದ ಶ್ರೀ ಬಿ ಶ್ರೀರಾಮುಲು ಅವರು ಎಚ್ಚರಿಕೆ ನೀಡಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ನೀಡಿದ ಭರವಸೆಗಳನ್ನು, ಆಶ್ವಾಸನೆಗಳನ್ನು ಜಾರಿ ಮಾಡಲಿಲ್ಲ. ಒಂದು ವರ್ಷದಲ್ಲಿ ಒಂದು ಲಕ್ಷ ಹುದ್ದೆ ಭರ್ತಿ ಮಾಡುತ್ತೇವೆ ಅಂತ ಹೇಳಿದ್ದರು.
ಟೆಹ್ರಾನ್: ಇರಾನ್ ಪರಮೋಚ್ಛ ನಾಯಕ ಆಯತೊಲ್ಲ ಅಲಿ ಖಮೇನಿ ಸ್ಥಾನಕ್ಕೆ ಯಾರು ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಇಸ್ರೇಲ್-ಅಮೆರಿಕಾ ನಡೆಸಿದ ದಾಳಿಯಲ್ಲಿ ಇರಾನ್ ನಾಯಕ ಖಮೇನಿ ಹತ್ಯೆಯಾಗಿದ್ದರು. ಇದೀಗ ನಾಲ್ಕು ದಿನಗಳ ಬಳಿಕ ಇರಾನ್ ಗೆ ನೂತನ ನಾಯಕ ಯಾರು ಎಂಬುದು ಬಹಿರಂಗವಾಗಿದೆ. ಖಮೇನಿ ಎರಡನೇ ಪುತ್ರನೇ ಇರಾನ್ ಹೊಸ ನಾಯಕ ಎನ್ನಲಾಗಿದೆ. ಖಮೇನಿ ಎರಡನೇ ಪುತ್ರ ಮುಜ್ತಬಾ ಖಮೇನಿ ಮುಂದಿನ ಸರ್ವೋಚ್ಛ ನಾಯಕ ಎಂದು ಆಯ್ಕೆ ಮಾಡಲಾಗಿದೆ. ಇದೀಗ ಅಧಿಕೃತ ಘೋಷಣೆಯೊಂದೇ ಬಾಕಿ. ಇರಾನ್ ನ ತಜ್ಞರು ಸಭೆ ನಡೆಸಿದ ಬಳಿಕ ಮುಜ್ತಬಾ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಬೆಂಗಳೂರು: ಅಮೆರಿಕ ಹಾಗೂ ಇಸ್ರೇಲ್ ಜಂಟಿ ಕಾರ್ಯಚರಣೆಯಲ್ಲಿ ಇರಾನ್ನ ಪರಮೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರು ಮೃತಪಟ್ಟ ಬಳಿಕ ಅವರ ಸ್ಥಾನಕ್ಕೆ ಮಗ ಮೊಜ್ತಾಬಾನನ್ನು ಆಯ್ಕೆ ಮಾಡಿದ್ದಾರೆ. ಇರಾನ್ನ ತಜ್ಞರ ಅಸೆಂಬ್ಲಿಯ ಹಿರಿಯ ಪಾದ್ರಿಗಳು ಅಯತೊಲ್ಲಾ ಖಮೇನಿ ಅವರ ಮಗ 56 ವರ್ಷದ ಮೊಜ್ತಾಬಾ ಅವರನ್ನು ಹೊಸ ಸರ್ವೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಿದರು.ಹೊಸ ಸುಪ್ರೀಂ ಲೀಡರ್ ಅನ್ನು ಆಯ್ಕೆ ಮಾಡಲು ಅಧಿಕಾರಿಗಳು ಒಟ್ಟುಗೂಡುತ್ತಿದ್ದಂತೆ ಇರಾನ್ನ ಉನ್ನತ ನಾಯಕತ್ವ ಸಂಸ್ಥೆಯ