ಚೆನ್ನೈ: ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಮಂಗಳವಾರ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಮಹಿಳಾ ಮುಖ್ಯಸ್ಥರಿಗೆ ಮಾಸಿಕ ₹2000ಗಳನ್ನು ನೀಡುವುದಾಗಿ ಭರವಸೆ ನೀಡಿದರು.ವಿಶೇಷ ನೆರವು ಸೇರಿದಂತೆ 297 ಭರವಸೆಗಳ ಪ್ರಣಾಳಿಕೆಯನ್ನು ಪಳನಿಸ್ವಾಮಿ ಬಿಡುಗಡೆ ಮಾಡಿದರು. ಇದರಿಂದಾಗಿ ಕುಟುಂಬಗಳ ಮೇಲೆ ದಿನನಿತ್ಯದ ಆರ್ಥಿಕ ಹೊರೆ ಹಲವು ಪಟ್ಟು ಹೆಚ್ಚಿದೆ. ಆದ್ದರಿಂದ ಜನರ ಮೇಲಿನ ಈ
ಬೆಂಗಳೂರು: ಮದ್ಯಪಾನ ಸೇವಿಸುತ್ತಾ ನಗರದ ಬೀದಿಗಳಲ್ಲಿ ಅಜಾರೂಕತೆಯಿಂದ ಬೈಕ್ ಚಾಲನೆ ಮಾಡುತ್ತಿರುವ ವೀಡಿಯೊ ವೈರಲ್ ಬೆನ್ನಲ್ಲೇ ಯುವತಿ ಸೇರಿದಂತೆ ಮೂವರು ವೈದ್ಯರನ್ನು ಅರೆಸ್ಟ್ ಮಾಡಲಾಗಿದೆ. ಮದ್ಯಪಾನ ಸೇವಿಸುತ್ತಾ ಅಜಾರೂಕತೆಯಿಂದ ಬೈಕ್ ಓಡಿಸುತ್ತಿರುವುದನ್ನು ಹಿಂದಿನಲ್ಲಿದ್ದ ಸವಾರರು ವಿಡಿಯೋ ಮಾಡಿದ್ದಾರೆ. ವೈರಲ್ ವಿಡಿಯೋವನ್ನು ಗಮನಿಸಿದ ಪೊಲೀಸರು, ಬೇಜವಾಬ್ದಾರಿ ಚಾಲನೆ ಮತ್ತು ಸಂಚಾರ ನಿಯಮಗಳ ಉಲ್ಲಂಘನೆ ಎಂದು ಆರೋಪಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, ಮೋದಿ ಅವರು ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆ ಇಬ್ಬರೂ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಹಾರ್ಮುಜ್ ಜಲಸಂಧಿಯು ಮುಕ್ತ, ಸುರಕ್ಷಿತ ಮತ್ತು ಪ್ರವೇಶಸಾಧ್ಯವಾಗಿದ್ದು, ಇಡೀ ಜಗತ್ತಿಗೆ ಅತ್ಯವಶ್ಯಕವಾಗಿದೆ ಎಂದು
ಬೆಂಗಳೂರು: ದೈವಗಳಿಗೆ ಅವಮಾನ ಮಾಡಿದ ಆರೋಪ ಸಂಬಂಧ ನಟ ರಣವೀರ್ ಸಿಂಗ್ ಅವರು ಇದೀಗ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕ್ಷಮೆಯಾಚನೆ ನೀಡಲು ಒಪ್ಪಿಕೊಂಡಿದ್ದಾರೆ. ನಟ ರಿಷಬ್ ಶೆಟ್ಟಿ ನಿರ್ದೇಶಿಸಿರುವ ‘ಕಾಂತಾರ: ಅಧ್ಯಾಯ 1’ ಸಿನಿಮಾವನ್ನು ಹೊಗಳುವ ಸಂದರ್ಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ದೈವವನ್ನು ದೆವ್ವ ಎಂದು ಹೇಳಿ ಅನುಕರಣೆ ಮಾಡಿದ್ದರು. ಘಟನೆಯ ನಂತರ, 'ಧುರಂಧರ' ನಟನ ವಿರುದ್ಧ ಪ್ರಶಾಂತ್ ಮೆಥಾಲ್ ಎಂಬ ವ್ಯಕ್ತಿಯಿಂದ ದೂರು ದಾಖಲಾಗಿದ್ದು, ಎಫ್ಐಆರ್
ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬರುವ ಐಪಿಎಲ್ ಕ್ರಿಕೆಟ್ ಪಂದ್ಯಗಳಿಗೆ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.ವಿಶ್ವದ ಅತಿ ದೊಡ್ಡ T20 ಲೀಗ್ನ 19 ನೇ ಆವೃತ್ತಿಯು ಮಾರ್ಚ್ 28 ರಂದು ಪ್ರಾರಂಭವಾಗುತ್ತದೆ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಳಾಪಟ್ಟಿಯ ಪ್ರಕಾರ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ M ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ಅನ್ನು ಎದುರಿಸಲಿದೆ.
ನವದೆಹಲಿ: ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದು ಈಚೆಗೆ ದಯಾಮರಣ ಪಡೆದಿದ್ದ ಹರೀಶ್ ರಾಣಾ ಇಂದು ಏಮ್ಸ್ನಲ್ಲಿ ಕೊನೆಯುಸಿರೆಳೆದಿದ್ದಾರೆ. ಆಗಸ್ಟ್ 2013ರಂದು ಚಂಡೀಗಢದ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು, 13ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣ ನೀಡುವಂತೆ ಪೋಷಕರು ಕೋರ್ಟ್ ಮೆಟ್ಟಿಲೇರಿದ್ದರು. ಮಾರ್ಚ್ 11 ರಂದು ಸುಪ್ರೀಂ ಕೋರ್ಟ್ ರಾಣಾ ಪ್ರಕರಣದಲ್ಲಿ ದಯಾಮರಣಕ್ಕೆ ಅನುಮತಿ ನೀಡಿ ಮಹತ್ವದ ಆದೇಶವನ್ನು ಹೊರಡಿಸಿತು.
ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಣ್ಣ ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯು ಕರ್ನಾಟಕದ ಹಲವು ಜಿಲ್ಲೆಗಳಿಗೆ ಎಚ್ಚರಿಕೆಯನ್ನು ನೀಡಿದೆ, ಬದಲಾಗುತ್ತಿರುವ ಹವಾಮಾನದ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದೆ.ಬೆಂಗಳೂರು ಮಳೆ ಎಚ್ಚರಿಕೆ ನಗರ ಮತ್ತು ಕರ್ನಾಟಕದ ಇತರ 7 ಜಿಲ್ಲೆಗಳಲ್ಲಿ ಮಳೆಯ amp amp ಗುಡುಗು ಸಹಿತ ಮಳೆಯಾಗಲಿದೆಮುನ್ಸೂಚನೆಯ ಪ್ರಕಾರ, ನಗರವು ಹೆಚ್ಚಾಗಿ ಮೋಡ ಕವಿದ ವಾತಾವರಣವನ್ನು ಹೊಂದಿದೆ. ಇನ್ನೂ ರಾಜ್ಯದ ಹಲವೆಡೆ ಅಲ್ಲಲ್ಲಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಉತ್ತಮ ಮಳೆಯಾಗಿದೆ.
ತಿರುವನಂತಪುರ: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ನೇಮದಿಂದ ಎನ್ಡಿಎ ಅಭ್ಯರ್ಥಿಯಾಗಿರುವ ರಾಜೀವ್ ಚಂದ್ರಶೇಖರ್ ಅವರ ಚುನಾವಣಾ ಅಫಿಡವಿಟ್ನಲ್ಲಿ ಆಸ್ತಿ ಮರೆಮಾಚಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಬೆಂಗಳೂರಿನ ಕೋರಮಂಗಲದಲ್ಲಿರುವ 49,000 ಚದರ ಅಡಿ ವಿಸ್ತೀರ್ಣದ ಭವನದ ವಿವರಗಳನ್ನು ಬಹಿರಂಗಪಡಿಸಲು ಚಂದ್ರಶೇಖರ್ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.ದೇಶದ ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿ ಹರಡಿರುವ ಆಸ್ತಿಯು, ಪ್ರತಿ ಚದರ ಅಡಿಗೆ ₹35,000
ಧಾರವಾಡ: ರಾಮಾಪುರ ಗ್ರಾಮದ ರೈಲ್ವೆ ಯಳಿಯ ಬಳಿ ಪತ್ತೆಯಾದ ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಇದು ನಿನ್ನೆಯಿಂದ ನಾಪತ್ತೆಯಾಗಿರುವ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿದ್ದು ಎಂದು ಶಂಕೆ ವ್ಯಕ್ತವಾಗಿದೆ. ಇಲ್ಲಿನ ರಾಮಾಪುರ ಗ್ರಾಮದ ರೈಲ್ವೆ ಹಳಿಯ ಬಳಿ ಪತ್ತೆಯಾದ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ.ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ ಅವರನ್ನ ಕೊಲೆ ಮಾಡಿ ಮೃತದೇಹ ಸಟ್ಟುಹಾಕಿರುವ ಶಂಕೆ ವ್ಯಕ್ತವಾಗಿದೆ.
ಟೀಂ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ನಡವಳಿಕೆ ಕೆಲವೊಂದು ಭಾರೀ ಸುದ್ದಿಯಾಗುವುದುಂಟು. ದೇವರ ಮೇಲೆ ವಿಶೇಷವಾದ ಭಕ್ತಿಯಿರುವ ಪಾಂಡ್ಯ, ಕಾರಿನಲ್ಲಿ ಪ್ರಯಾಣಿಸುವಾಗ ಹನುಮಾನ್ ಚಾಲೀಸಾವನ್ನು ಕೇಳುತ್ತಾರಂತೆ. ಇದು ಅವರಿಗೆ ತುಂಬಾನೇ ಧನಾತ್ಮಕ ಪ್ರಭಾವವನ್ನು ಬೀರುತ್ತದೆ ಎಂದು ಹೇಳಿದ್ದಾರೆ.ವೈರಲ್ ವೀಡಿಯೊವೊಂದರಲ್ಲಿ, ಮುಂಬೈ ಇಂಡಿಯನ್ಸ್ ನಾಯಕ ಪಾಂಡ್ಯ, ಬ್ಯಾಟಿಂಗ್ ಕೋಚ್ ಕೀರಾನ್ ಪೊಲಾರ್ಡ್ ಅವರೊಂದಿಗೆ ಕೆಲವು ಕಾರ್ಯಕ್ರಮಗಳಲ್ಲಿ ಕುಳಿತಿರುವುದನ್ನು ಕಾಣಬಹುದು, ಅಲ್ಲಿ ಭಾರತೀಯ ಆಲ್ರೌಂಡರ್ ರೀತಿಯ
ಗಾಯಕ-ರಾಪರ್ ಬಾದ್ಶಾ ಅವರು ಪಂಜಾಬಿ ನಟಿ, ಮಾಡೆಲ್ ಇಶಾ ರಿಖಿಯನ್ನು ಖಾಸಗಿ ಸಮಾರಂಭದಲ್ಲಿ ವಿವಾಹವಾದರು ಎಂದು ವರದಿಯಾಗಿದೆ. ಇಶಾ ಅವರ ತಾಯಿ ಪೂನಂ ರಿಖಿ ಅವರು Instagram ನಲ್ಲಿ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದ ನಂತರ ಅವರ ಮದುವೆಯ ಸುದ್ದಿ ಬೆಳಕಿಗೆ ಬಂದಿದೆ."ದೇವರು ನಿಮ್ಮನ್ನು ಆಶೀರ್ವದಿಸಲಿ" ಎಂದು ಪೂನಂ ರಿಖಿ ಇನ್ಸ್ಟಾಗ್ರಾಮ್ನಲ್ಲಿ ಸಮಾರಂಭದ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುವಾಗ ಬರೆದಿದ್ದಾರೆ.
ದೆಹಲಿ ವಿಧಾನಸಭೆ ಕಟ್ಟಡ ಮತ್ತು ದೆಹಲಿ ಮೆಟ್ರೋದ ವಿಧಾನ ಸಭಾ ನಿಲ್ದಾಣವನ್ನು ಸ್ಫೋಟಿಸಲಾಗುವುದು ಎಂದು ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ. ಸ್ಪೀಕರ್ ಕಚೇರಿಯ ಪ್ರಕಾರ, ಲೆಫ್ಟಿನೆಂಟ್ ಗವರ್ನರ್ ತರಂಜಿತ್ ಸಿಂಗ್ ಸಂಧು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್. ಜೈಶಂಕರ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಸೇರಿದಂತೆ ಹಲವಾರು ಹಿರಿಯ ನಾಯಕರಿಗೆ ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಅಧಿಕಾರಿಗಳು ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಭದ್ರತಾ ಏಜೆನ್ಸಿಗಳು ವಿಧಾನಸಭೆ ಆವರಣ ಮತ್ತು ಮೆಟ್ರೋ
ನಾಯಿ, ಬೆಕ್ಕುಗಳನ್ನು ಪ್ರೀತಿ ಮಾಡುವಂತೆ ಈ ತಾತನಿಗೆ ಇಲಿಗಳನ್ನು ಕಂಡರೆ ಎಂಥಾ ಅಕ್ಕರೆ ಗೊತ್ತಾ? ಇಲಿಗಳ ಜೊತೆ ತಾತನ ಒಡನಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಮನುಷ್ಯರು ನಾಯಿ, ಬೆಕ್ಕು, ಗೋವುಗಳನ್ನು ಮನೆಯಲ್ಲಿ ಸಾಕುತ್ತಾರೆ. ಮತ್ತೆ ಕೆಲವರು ಪಕ್ಷಿಗಳನ್ನು ಸಾಕಬಹುದು. ಇನ್ನು ಕೆಲವರು ಬೀದಿಯಲ್ಲಿರುವ ನಾಯಿಗಳ ಬಗ್ಗೆ ಕರುಣೆಯಿಂದ ಆಹಾರ ಹಾಕಿ ತಮ್ಮ ಪ್ರೀತಿ ತೋರಿಸಬಹುದು. ಆದರೆ ಈ ತಾತ ಅವರೆಲ್ಲಗಿಂತ ಡಿಫರೆಂಟ್. ನಾವೆಲ್ಲರೂ ಇಲಿ ಎಂದರೆ ಅಸಹ್ಯ ಪ್ರಾಣಿ ಎಂಬಂತೆ ನೋಡುತ್ತೇವೆ. ಕಂಡಲ್ಲಿ ಅದನ್ನು ಕೊಂದು ಹಾಕಿಬಿಡುತ್ತೇವೆ.
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿಯಲ್ಲಿ 2024ರಲ್ಲಿ ಸಂಭವಿಸಿದ ಭೂಕುಸಿತದ ಕುಟುಂಬಕ್ಕೆ ಕರ್ನಾಟಕ ರಾಜ್ಯ ಸರ್ಕಾರ ₹10ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಸರ್ಕಾರದ ಈ ಕ್ರಮಕ್ಕೆ ಬಿಜೆಪಿ ಹಾಗೂ ಜೆಡಿಎಸ್ನಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಆರ್ಥಿಕ ವರ್ಷದಲ್ಲಿ ಇದು ಎರಡನೇ ಬಾರಿಗೆ ಕಾಂಗ್ರೆಸ್ ಸರ್ಕಾರ ನೆರೆಯ ರಾಜ್ಯಕ್ಕೆ ಪುನರ್ವಸತಿ ಹಣವನ್ನು ನೀಡುತ್ತಿದೆ. ಆಗಸ್ಟ್ 2025 ರಲ್ಲಿ ಮಂಡಿಸಲಾದ 2025-26 ರ ಪೂರಕ ಅಂದಾಜಿನ ಮೊದಲ ಕಂತಿನಲ್ಲಿ, "ವಯನಾಡು ಜಿಲ್ಲೆಯ ಮೆಪ್ಪಾಡಿಯಲ್ಲಿ ಭೂಕುಸಿತದಿಂದ ಹಾನಿಗೊಳಗಾದ 100 ಕುಟುಂಬಗಳ ಪುನರ್ವಸತಿಗಾಗಿ" ಸರ್ಕಾರವು 10 ಕೋಟಿ ಬಿಡುಗಡೆ ಮಾಡಿದೆ.
ಬೀದರ್: ಆನ್ಲೈನ್ ಗೇಮ್ ಚಟದಿಂದ ಹಣ ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ ಸಾವಿಗೆ ಶರಣಾದ ಘಟನೆ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೊಠಡಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಬಾಲತ್ಯಾ ತಾಂಡ ನಿವಾಸಿ ಅನಿಷ್ಕಾರ್ ಚವಾಣ್ (21)ಎಂದು ಗುರುತಿಸಲಾಗಿದೆ. ಸೋಮವಾರ ತಡರಾತ್ರಿ ಹಾಸ್ಟೆಲ್ ಕೊಠಡಿಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು: ಐಪಿಎಲ್ 2026 ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿಯಿದ್ದು, ಈ ಸ್ಟಾರ್ ವೇಗಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೈ ಬಿಟ್ಟಿದೆ. ಸ್ಟಾರ್ ವೇಗಿ ಯಶ್ ದಯಾಳ್ ರನ್ನು ಆರ್ ಸಿಬಿ ತಂಡದಿಂದ ಕೈ ಬಿಟ್ಟಿದೆ. ಯಶ್ ದಯಾಳ್ ಆರ್ ಸಿಬಿಯ ಪ್ರಮುಖ ಬೌಲರ್ ಆಗಿದ್ದರು. ಆದರೆ ಈ ಸೀಸನ್ ನಲ್ಲಿ ತಂಡದ ಸಿದ್ಧತಾ ಶಿಬಿರದಲ್ಲಿ ಇದುವರೆಗೆ ಯಶ್ ದಯಾಳ್ ಕಾಣಿಸಿರಲಿಲ್ಲ. ಅದಕ್ಕೀಗ ಸ್ಪಷ್ಟನೆ ಸಿಕ್ಕಿದೆ. ಯಶ್ ದಯಾಳ್ ರನ್ನು ತಂಡದಿಂದ ಕೊಕ್ ನೀಡಲಾಗಿದೆ. ಯಶ್ ದಯಾಳ್ ವಿರುದ್ಧ 2023 ರಲ್ಲಿ ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರವೆಸಗಿದ ಆರೋಪ ಬಂದಿತ್ತು.
ಬೊಗೋಟಾ: 125 ಯೋಧರನ್ನು ಕೊಂಡೊಯ್ಯುತ್ತಿದ್ದ ಕೊಲಂಬಿಯಾ ಸೇನಾ ವಿಮಾನ ಟೇಕಾಫ್ ಆಗುತ್ತಿದ್ದಂತೆಯೇ ಪತನಗೊಂಡು, ಕನಿಷ್ಠ 66 ಮಂದಿ ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ.ಲಾಕ್ಹೀಡ್ ಮಾರ್ಟಿನ್ ನಿರ್ಮಿತ ಹರ್ಕ್ಯುಲಸ್ ಸಿ-130 ವಿಮಾನ ಪೆರುವಿನ ಗಡಿಯಲ್ಲಿರುವ ಪೋರ್ಟೊ ಲೆಗುಯಿಜಾಮೊದಿಂದ ಹಾರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಕೊಲಂಬಿಯಾದ ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ತಿಳಿಸಿದ್ದಾರೆ.ನಗರ ಕೇಂದ್ರದಿಂದ ಕೇವಲ 3 ಕಿ.ಮೀ ದೂರದಲ್ಲಿ ಅಪಘಾತ ಸಂಭವಿಸಿದೆ. ದುರಂತದಲ್ಲಿ 48 ಜನರು ಗಾಯಗೊಂಡಿದ್ದಾರೆ ಮತ್ತು ಅವರನ್ನು ಸ್ಥಳಾಂತರಿಸಲು ಪ್ರಯತ್ನಗಳು ನಡೆಯುತ್ತಿವೆ. ಅಧಿಕಾರಿಗಳು ಅಪಘಾತದ ಕಾರಣವನ್ನು ತನಿಖೆ ಮಾಡುತ್ತಿದ್ದಾರೆ.
ಅಮ್ಮ ಜಿಂಕೆ ತನ್ನ ಮರಿಗೆ ಹಾಲುಣಿಸುತ್ತಿದ್ದ ಕಾರಣಕ್ಕೆ ಇಡೀ ಟ್ರಾಫಿಕ್ ಸ್ತಬ್ಧವಾದ ಹೃದಯಸ್ಪರ್ಶೀ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ನಡೆದಿರುವುದು ಐಐಟಿ ಮದ್ರಾಸ್ ಕ್ಯಾಂಪಸ್ ಬಳಿ. ಕಾಡು ಪ್ರದೇಶಗಳಿರುವ ಕಡೆ ವಾಹನ ಸಂಚಾರ ಮಾಡುವಾಗ ವನ್ಯ ಜೀವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಇಲ್ಲಿ ಜನರು ಅದನ್ನೇ ಪಾಲಿಸಿದ್ದಾರೆ. ಐಐಟಿ ಮದ್ರಾಸ್ ಬಳಿ ಜಿಂಕೆಯೊಂದು ನಡು ರಸ್ತೆಯಲ್ಲಿ ತನ್ನ ಮರಿಗೆ ಹಾಲುಣಿಸುತ್ತಿತ್ತು. ಪ್ರಾಣಿಗಳಿಗೆ ಮನುಷ್ಯರ ಗಡಿಬಿಡಿಯ ಅರಿವು ಇರಲ್ಲ ತಾನೆ? ಹೀಗಾಗಿ ಅದಕ್ಕೆ ತನ್ನ ಕಂದಮ್ಮನಿಗೆ ಹಾಲುಣಿಸುವುದಷ್ಟೇ ಮುಖ್ಯವಾಗಿತ್ತು.
ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಸಂಭವಿಸಿರುವ ಘರ್ಷಣೆ ಶಮನವಾಗುವ ಲಕ್ಷಣಗಳು ನಡೆದಿವೆ. ಅಮೆರಿಕದ ಜೊತೆ ಮಾತುಕತೆ ನಡೆಸಲು ಇರಾನಿನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಗ್ರೀನ್ಸಿಗ್ನಲ್ ನೀಡಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿಟ್ಟಿದ್ದ ಶಾಂತಿ ಮಾತುಕತೆಗೆ ಮೊಜ್ತಬಾ ಖಮೇನಿ ಒಪ್ಪಿಕೊಂಡಿದ್ದಾರೆ ಎಂದು ಸೌದಿ ಸರ್ಕಾರದ ಅಲ್ ಅರೇಬಿಯಾ ಮಾಧ್ಯಮ ವರದಿ ಮಾಡಿದೆ. ಆದರೆ, ಈ ವರದಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಇರಾನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಟ್ರಂಪ್ ಸೋಮವಾರ ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ಇರಾನ್ ದೇಶದ ಜೊತೆ ಕಳೆದ ಎರಡು ದಿನಗಳಲ್ಲಿ ಉತ್ತಮ ಮಾತುಕತೆ ನಡೆದಿದೆ. ಫಲಪ್ರದವಾದ ಮಾತುಕತೆ ನಡೆದ ಹಿನ್ನೆಲೆಯಲ್ಲಿ ಇರಾನಿನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ಎಲ್ಲಾ ಮಿಲಿಟರಿ ದಾಳಿಗಳನ್ನು ಐದು ದಿನಗಳ ಅವಧಿಗೆ ಮುಂದೂಡಲು ಸೂಚನೆ ನೀಡಿದ್ದೇನೆ ಎಂದು ಪೋಸ್ಟ್ ಮಾಡಿದ್ದರು.
ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಬಳಿಕ ಕಳೆದ ವರ್ಷ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸ್ಮರಣಾರ್ಥ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದೆ. ಚಿನ್ನಸ್ವಾಮಿ ಮೈದಾನದ ಬಳಿ ಕಳೆದ ವರ್ಷ ಆರ್ ಸಿಬಿ ವಿಜಯೋತ್ಸವ ಪೆರೇಡ್ ಗೆ ಕೆಲವೇ ಕ್ಷಣಗಳ ಮೊದಲು ಕಾಲ್ತುಳಿತ ಸಂಭವಿಸಿ 11 ಮಂದಿ ಸಾವಿಗೀಡಾಗಿದ್ದರು. ಈ ದುರಂತ ಆರ್ ಸಿಬಿ ಮೊದಲ ಬಾರಿ ಟ್ರೋಫಿ ಗೆದ್ದ ಸಂಭ್ರಮವನ್ನೇ ನುಂಗಿ ಹಾಕಿತ್ತು. ಈ ದುರಂತದ ಬಳಿಕ ಚಿನ್ನಸ್ವಾಮಿಯಲ್ಲಿ ಯಾವುದೇ ಪಂದ್ಯಗಳೂ ನಡೆದಿರಲಿಲ್ಲ.ಇದೀಗ ಐಪಿಎಲ್ 2026 ಉದ್ಘಾಟನಾ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಸಿದ್ಧವಗಿದೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಇಳಿಕೆಯಾಗಿತ್ತು. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಇದು ಬೆಳೆಗಾರರಿಗೆ ಸಮಾಧಾನ ತಂದಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಸತತವಾಗಿ ಬೆಲೆ ಇಳಿಕೆ ಕಂಡುಬರುತ್ತಿದೆ. ಕೆಲವು ವರ್ಗದ ಅಡಿಕೆ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡುಬರುತ್ತಿದೆ. ಇಂದು ಹೊಸ ಅಡಿಕೆ ಬೆಲೆ 460 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದು 530 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿಯಲ್ಲಿದ್ದು 530 ರೂ.ಗಳಷ್ಟಾಗಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಭಾರೀ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ಇಂದು ಪರಿಶುದ್ಧ ಚಿನ್ನದ ದರದಲ್ಲಿ ಭಾರೀ ಇಳಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,52,285.00 ರೂ.ಗಳಿತ್ತು. ಆದರೆ ಇಂದು ಇಳಿಕೆಯಾಗಿದ್ದು 1,46,060.00 ರೂ.ಗಳಷ್ಟಿದೆ.
ಬೆಂಗಳೂರು: ಅನಿಲ್ ಕುಂಬ್ಳೆ ರಸ್ತೆಯಲ್ಲಿ ಮೊನ್ನೆ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಸ್ಟಂಟ್ ಮಾಡಿದ ಪ್ರಕರಣದಲ್ಲಿ ಆರೋಪಿ ಪರ ವಾದ ಮಂಡಿಸುತ್ತಿರುವ ವಕೀಲ ನಾರಾಯಣಸ್ವಾಮಿ ನೀಡಿರುವ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ. ಮಾಜಿ ಭೂಗತ ದೊರೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಅವರ ಒಡೆತನದ ಲ್ಯಾಂಬೋರ್ಗಿನಿ ಕಾರಿನ ಸ್ಟಂಟ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅನಿಲ್ ಕುಂಬ್ಳೆ ಸರ್ಕಲ್ ಬಳಿ ಮೊನ್ನೆ ಮಧ್ಯರಾತ್ರಿ ಕಾರನ್ನು ಅತೀ ವೇಗವಾಗಿ ಚಲಾಯಿಸಿ ಸರ್ಕಲ್ ಹೊಡೆದು ಸ್ಟಂಟ್ ಮಾಡಿದ ವಿಡಿಯೋ ವೈರಲ್ ಆಗಿತ್ತು.
ಜ್ಯೋತಿಷ್ಯದ ಪ್ರಕಾರ ಆಯಾ ಗ್ರಹಗಳಿಗೆ ಅನುಗುಣವಾಗಿ ಆಹಾರ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ತುಲಾ ರಾಶಿಯವರು ಜ್ಯೋತಿಷ್ಯದ ಪ್ರಕಾರ ಯಾವ ಆಹಾರ ಸೇವಿಸಿದರೆ ಉತ್ತಮ ಇಲ್ಲಿದೆ ವಿವರ. ತುಲಾ ರಾಶಿಯನ್ನು ಅಳುವ ಗ್ರಹ ಶುಕ್ರ. ಈ ರಾಶಿಯವರಿಗೆ ಕಿಡ್ನಿ, ಸೊಂಟದ ಭಾಗಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಉಂಟಾದೀತು. ಹೀಗಾಗಿ ಈ ಭಾಗಗಳ ಆರೋಗ್ಯ ವೃದ್ಧಿಯಾಗುವಂತಹ ಆಹಾರ ಸೇವನೆ ಮಾಡಬೇಕು. ಆಹಾರದಲ್ಲಿ ಮಿನರಲ್ಸ್ ಹೆಚ್ಚು ಇರುವ ಆಹಾರ ಸೇವನೆ ಮಾಡಬೇಕು. ಉಳಿದಂತೆ ಯಾವ ತರಕಾರಿ, ಹಣ್ಣು, ಧಾನ್ಯ ಸೂಕ್ತ ತಿಳಿದುಕೊಳ್ಳಿ.
ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮತ್ತೆ ಕೇರಳ ಮೇಲಿನ ಪ್ರೀತಿ, ಅಭಿಮಾನ ವ್ಯಕ್ತಪಡಿಸಿದೆ. ಪ್ರಿಯಾಂಕ ಗಾಂಧಿ ಪ್ರತಿನಿಧಿಸುವ ವಯನಾಡಿಗೆ ಮತ್ತೆ 10 ಕೋಟಿ ರೂ. ನೆರವು ನೀಡಿದ್ದು ಇದಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯ ಮಾಡಿದ್ದಾರೆ. ವಯನಾಡಿನಲ್ಲಿ ಈ ಹಿಂದೆ ಪ್ರವಾಹದಿಂದ ಜನರು ಸಂತ್ರಸ್ತರಾದಾಗ 100 ಮನೆ ಕಟ್ಟಿಕೊಡುವ ನಿರ್ಧಾರ ಮಾಡಿದ್ದ ಕರ್ನಾಟಕ ಸರ್ಕಾರ ಇದು ಮಾನವೀಯತೆಯ ದೃಷ್ಟಿಯಿಂದ ಎಂದು ಸಮಜಾಯಿಷಿ ನೀಡಿತ್ತು. ಇದಕ್ಕೆ ಮೊದಲು ಕೇರಳದಲ್ಲಿ ಆನೆ ತುಳಿತದಿಂದ ಸಾವನ್ನಪ್ಪಿದ ಕುಟುಂಬಕ್ಕೆ ಕರ್ನಾಟಕ ಸರ್ಕಾರ ಪರಿಹಾರ ನೀಡಿ ಔದಾರ್ಯ ಮೆರೆದಿತ್ತು.
ಇಸ್ಲಾಮಾಬಾದ್: ಧುರಂಧರ್ ಸಿನಿಮಾದ ಪರಿಣಾಮ ಬೀದಿ ಬೀದಿಯಲ್ಲಿರುವ ಭಿಕ್ಷುಕರನ್ನೆಲ್ಲಾ ಹುಡುಕಾಡುತ್ತಿರುವ ಪಾಕಿಸ್ತಾನ ಈಗ ಭಾರೀ ಮಂಡೆ ಬಿಸಿ ಮಾಡಿಕೊಂಡು ಕೂತಿದೆ. ರಣವೀರ್ ಸಿಂಗ್ ನಾಯಕರಾಗಿರುವ ಧುರಂಧರ್ ಸಿನಿಮಾ ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತದ ಗುಪ್ತಚರ ಅಧಿಕಾರಿಗಳು ಪಾಕಿಸ್ತಾನದಲ್ಲಿ ಭಿಕ್ಷುಕರಂತೆ ವೇಷಮರೆಸಿಕೊಂಡು ನಮ್ಮ ದೇಶದ ಶತ್ರುಗಳನ್ನು ಹೊಡೆದುರುಳಿಸಿದ ಕತೆ ಇದರಲ್ಲಿದೆ. ಇದು ನಿಜ ಜೀವನದಲ್ಲೂ ನಡೆದ ಘಟನೆಯಾಗಿದೆ. ಈಗಿನ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಇದೇ ರೀತಿ ಪಾಕಿಸ್ತಾನದಲ್ಲಿ ಭಿಕ್ಷುಕನಂತೆ ವೇಷಮರೆಸಿಕೊಂಡು ಹಲವು ಸಮಯವಿದ್ದು ಶತ್ರುದೇಶದ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು. ಧುರಂಧರ್ ಸಿನಿಮಾದಲ್ಲಿ ಅಜಿತ್ ದೋವಲ್ ನಿಜ ಜೀವನದ ಕತೆಯನ್ನೇ ಹೇಳಲಾಗಿದೆ.
ಬೆಂಗಳೂರು: ಈ ಬಾರಿ ಐಪಿಎಲ್ 2026 ಉದ್ಘಾಟನಾ ಪಂದ್ಯ ನಡೆಯಲಿರುವ ಚಿನ್ನಸ್ವಾಮಿ ಮೈದಾನದ ಟಿಕೆಟ್ ದರ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಿ. ಇದು ಜನ ಸಾಮಾನ್ಯರಿಗಲ್ಲ ಎನಿಸಬಹುದು. ಐಪಿಎಲ್ ಟಿಕೆಟ್ ದರ ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಮೈದಾನದಲ್ಲಿ ಹೆಚ್ಚು ಬೆಲೆಯಿರುತ್ತದೆ. ಇದುವರೆಗೂ ಇದೇ ರೀತಿ ನಡೆದುಕೊಂಡು ಬಂದಿದೆ. ಈ ಬಾರಿ ಅಂತೂ ಟಿಕೆಟ್ ದರ ಒಂದೂವರೆ ಪಟ್ಟು ಹೆಚ್ಚಳವಾಗಲಿದೆ ಎಂದು ಸುದ್ದಿಯಾಗಿದೆ. ಕನಿಷ್ಠ ದರವೇ ಈ ಬಾರಿ 3750 ರೂ. ಇರುವ ಸಾಧ್ಯತೆಯಿದೆ. ಇನ್ನು ಪ್ರೀಮಿಯಂ ಟಿಕೆಟ್ ದರ 65800 ರೂ.ಗೆ ಏರಿಕೆಯಾಗಲಿದೆ. ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಬಂದಿಲ್ಲ.
ಬೀಜಿಂಗ್: ಕಳ್ಳತನವಾಗಿದ್ದ ನಾಯಿಗಳು ದಾರಿ ಮಧ್ಯೆ ತಪ್ಪಿಸಿಕೊಂಡು 17 ಕಿ.ಮೀ. ಸಂಚರಿಸಿ ಮತ್ತೆ ತಮ್ಮ ಮಾಲಿಕರ ಮನೆಯನ್ನು ತಲುಪಿವೆ. ಈ ಅಚ್ಚರಿಯ ಘಟನೆಯ ವೈರಲ್ ವಿಡಿಯೋ ಇಲ್ಲಿದೆ ನೋಡಿ. ಇದು ಅಚ್ಚರಿಯಾದರೂ ನಿಜ ಘಟನೆಯಾಗಿದೆ. ಈ ಘಟನೆ ನಡೆದಿರುವುದು ಚೀನಾ ದೇಶದಲ್ಲಿ. ಇತ್ತೀಚೆಗಿನ ದಿನಗಳಲ್ಲಿ ದನಗಳ್ಳರಂತೆ ಉತ್ತಮ ತಳಿಯ ನಾಯಿ ಕಳ್ಳತನ ಮಾಡುವವರಿಗೂ ಏನೂ ಕಡಿಮೆಯಿಲ್ಲ. ಯಾಕೆಂದರೆ ನಾಯಿಗಳೂ ಅಷ್ಟು ಬೆಲೆ ಬಾಳುತ್ತವೆ. ಅದೇ ರೀತಿ ಚೀನಾದಲ್ಲಿ ಬೇರೆ ಬೇರೆ ಮಾಲಿಕರ ಉತ್ತಮ ತಳಿಯ ಸಾಕು ನಾಯಿಗಳನ್ನು ಖದೀಮರು ಕಳ್ಳತನ ಮಾಡಿ ಅಕ್ರಮವಾಗಿ ವಾಹನವೊಂದರಲ್ಲಿ ದೂರದ ಊರಿಗೆ ಸಾಗಣೆ ಮಾಡುತ್ತಿದ್ದರು.
ತನ್ನ ದ್ವಿಚಕ್ರ ವಾಹನದಲ್ಲಿ ಹಕ್ಕಿಯೊಂದು ಮರಿ ಹಾಕಿತೆಂದು ಈ ವ್ಯಕ್ತಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿ ಮಾಡಿದ್ದೇನು ಇಲ್ಲಿದೆ ವಿಡಿಯೋ. ತಿಪಟೂರಿನಲ್ಲಿ ನಡೆದ ಘಟನೆಯಿದು. ಹಕ್ಕಿಗಳು ಸಾಮಾನ್ಯವಾಗಿ ಮರ-ಗಿಡಗಳಲ್ಲಿ ಅಥವಾ ಎತ್ತರದ ಕಟ್ಟಡದ ಮೂಲೆಗಳಲ್ಲಿ ಗೂಡು ಕಟ್ಟಿಕೊಳ್ಳುತ್ತವೆ. ಒಟ್ಟಿನಲ್ಲಿ ಅವುಗಳಿಗೆ ತನ್ನ ಮರಿಗಳು ಸುರಕ್ಷಿತ ಎನಿಸಬೇಕು. ಅಂತಹ ಜಾಗದಲ್ಲೇ ಗೂಡು ಕಟ್ಟಿಕೊಳ್ಳುತ್ತವೆ. ಆದರೆ ಇಲ್ಲಿ ಹಕ್ಕಿಯೊಂದು ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಬಾಕ್ಸ್ ನಲ್ಲಿ ಮರಿ ಹಾಕಿತ್ತು.
ನ್ಯೂಯಾರ್ಕ್: ಐದು ದಿನ ಯುದ್ಧ ಮಾಡಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್ ಸೋಲಿನ ಭಯ ಎಂದು ವ್ಯಂಗ್ಯ ಮಾಡಿದೆ. ಈ ಹಿಂದೆ ಭಾರತ-ಪಾಕಿಸ್ತಾನ ಕದನ ವಿಚಾರದಲ್ಲೂ ಟ್ರಂಪ್ ತಮ್ಮದೇ ಎಲ್ಲಾ ನಿರ್ಧಾರ ಎನ್ನುವಂತೆ ಹೇಳಿಕೆ ನೀಡುತ್ತಿದ್ದರು. ಇದೀಗ ಇರಾನ್-ಇಸ್ರೇಲ್ ಯುದ್ಧದ ವಿಚಾರದಲ್ಲಿಯೂ ಇರಾನ್ ಕದನ ವಿರಾಮಕ್ಕೆ ಮುಂದೆ ಬಂದಿದೆ ಎನ್ನುತ್ತಿದ್ದಾರೆ. ಆದರೆ ಅತ್ತ ಇರಾನ್ ನಾವು ಅಮೆರಿಕಾ ಜೊತೆ ಶಾಂತಿ ಮಾತುಕತೆ ನಡೆಸಿಯೇ ಇಲ್ಲ ಎನ್ನುತ್ತಿದೆ.
ಆಡುತ್ತಾ ರಸ್ತೆಗೇ ಬಂದ ಮಗುವನ್ನು ಸಾಕು ನಾಯಿ ಹೀರೋನಂತೆ ಛಂಗನೆ ಹಾರಿ ವಾಹನದ ಅಡಿಗೆ ಸಿಲುಕುವುದರಿಂದ ರಕ್ಷಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಯತ್ತಿಗೆ ಇನ್ನೊಂದು ಹೆಸರೇ ನಾಯಿಗಳು. ತಮಗೆ ಅನ್ನ ಹಾಕುವ ಮಾಲಿಕರ ಮನೆಯವರಿಗೆ ಅಷ್ಟೇ ನಿಷ್ಟರಾಗಿರುತ್ತವೆ. ತನ್ನ ಪ್ರಾಣ ಕೊಟ್ಟಾದರೂ ತನ್ನ ಮನೆಯನ್ನು ರಕ್ಷಿಸಿಕೊಳ್ಳಲು ಹಿಂದೆ ಮುಂದೆ ನೋಡಲ್ಲ. ಈ ನಾಯಿಯೂ ಇಂತಹದ್ದೇ ನಿಷ್ಠೆ ತೋರಿದೆ. ಹೆದ್ದಾರಿಯ ಪಕ್ಕದಲ್ಲೇ ರಸ್ತೆ ಬದಿಯಲ್ಲಿ ಮಗುವೊಂದು ಬಾಲ್ ಹಿಡಿದುಕೊಂಡು ಆಟವಡುತ್ತಿತ್ತು. ಇನ್ನೂ ಐದು ವರ್ಷದೊಳಗಿನ ಮಗು, ರಸ್ತೆಗೆ ಹೋದರೆ ಏನಾಗುತ್ತದೆ ಎಂಬ ಅರಿವೂ ಅದಕ್ಕಿಲ್ಲ. ಆಟವಾಡುತ್ತಾ ಇರುವಾಗ ಬಾಲ್ ನ್ನು ಎತ್ತಿ ರಸ್ತೆ ಕಡೆಗೆ ಮಗು ಎಸೆಯುತ್ತಾನೆ.
ಬೆಂಗಳೂರು: ರಾಜ್ಯದಲ್ಲಿ ಇಷ್ಟು ದಿನ ಬೇಸಿಗೆಯ ಮಳೆಯ ಅಬ್ಬರವಾಗಿತ್ತು. ಆದರೆ ಈ ವಾರದಿಂದ ಮತ್ತೆ ಹವಾಮಾನದಲ್ಲಿ ಬದಲಾವಣೆಯಾಗಲಿದ್ದು ಇಂದಿನ ಹವಾಮಾನ ಎಚ್ಚರಿಕೆಯನ್ನು ತಪ್ಪದೇ ಗಮನಿಸಿ. ಕಳೆದ ವಾರವೇನೋ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಿದ್ದರಿಂದ ಕೊಂಚ ಮಟ್ಟಿಗೆ ವಾತಾವರಣ ತಂಪಾಗಿತ್ತು. ಕಳೆದ ವಾರ ಸರಾಸರಿ ಗರಿಷ್ಠ ತಾಪಮಾನ 32 ಡಿಗ್ರಿಯಷ್ಟು ಇತ್ತಷ್ಟೇ. ಆದರೆ ಈ ವಾರದಿಂದ ತಾಪಮಾನದಲ್ಲಿ ಏರಿಕೆಯಾಗಲಿದೆ. ಇಂದು ಕೆಲವು ಜಿಲ್ಲೆಗಳಿಗೆ ಮಾತ್ರ ಸಣ್ಣ ಮಳೆಯ ಸೂಚನೆಯಿದೆ. ಆದರೂ ಇಂದು ತಾಪಮಾನದಲ್ಲಿ ಏರಿಕೆ ಕಂಡುಬರಲಿದೆ. ಇಂದು ರಾಜ್ಯದ ಗರಿಷ್ಠ ತಾಪಮಾನ 33 ಡಿಗ್ರಿಯಷ್ಟು ಕಂಡುಬರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿಯಷ್ಟಾಗಲಿದೆ.
ಇಂದು ಮಂಗಳವಾರವಾಗಿದ್ದು ದುರ್ಗಾದೇವಿಯ ಆರಾಧನೆಗೆ ಸೂಕ್ತವಾದ ದಿನವಾಗಿದೆ. ಶತ್ರುಭಯ, ಮನಸ್ಸಿನ ಭಯವಿದ್ದರೆ ದುರ್ಗಾದೇವಿಯನ್ನು ಕುರಿತ ದುರ್ಗಾ ಕವಚ ಸ್ತೋತ್ರವನ್ನು ತಪ್ಪದೇ ಓದಿ.ನಾರಾಯಣ ಉವಾಚ ।ಓಂ ದುರ್ಗೇತಿ ಚತುರ್ಥ್ಯಂತಃ ಸ್ವಾಹಾಂತೋ ಮೇ ಶಿರೋಽವತು ।ಮಂತ್ರಃ ಷಡಕ್ಷರೋಽಯಂ ಚ ಭಕ್ತಾನಾಂ ಕಲ್ಪಪಾದಪಃ ॥ 1 ॥ ವಿಚಾರೋ ನಾಸ್ತಿ ವೇದೇಷು ಗ್ರಹಣೇಽಸ್ಯ ಮನೋರ್ಮುನೇ ।ಮಂತ್ರಗ್ರಹಣಮಾತ್ರೇಣ ವಿಷ್ಣುತುಲ್ಯೋ ಭವೇನ್ನರಃ ॥ 2 ॥ ಮಮ ವಕ್ತ್ರಂ ಸದಾ ಪಾತು ಓಂ ದುರ್ಗಾಯೈ ನಮೋಽಂತತಃ ।ಓಂ ದುರ್ಗೇ ರಕ್ಷಯತಿ ಚ ಕಂಠಂ ಪಾತು ಸದಾ ಮಮ ॥ 3 ॥
ನವದೆಹಲಿ: ನಡೆಯುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಭಾರತದ ಇಂಧನ ಭದ್ರತೆಯ ಹಲವು ಅಂಶಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಹೇಳಿಕೆ ನೀಡುವ ಸಾಧ್ಯತೆಯಿದೆ. ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಸೋಮವಾರ ಲೋಕಸಭೆಯಲ್ಲಿ ಹೇಳಿಕೆ ನೀಡಿದ ಪ್ರಧಾನಿ ಮೋದಿ, ಈ ಪ್ರದೇಶದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ."ಜಾಗತಿಕ ಬಿಕ್ಕಟ್ಟುಗಳ ಹೊರೆ ರೈತರ ಮೇಲೆ ಬೀಳಲು ಎಂದಿಗೂ ಅವಕಾಶ ನೀಡಲಿಲ್ಲ. 76 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ
ನವದೆಹಲಿ: ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಹಗೆತನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಸ್ಥಿತಿಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸೋಮವಾರ ನಿರ್ಣಾಯಕ ಅಪ್ಡೇಟ್ ಅನ್ನು ನೀಡಿದೆ. ಗಾಯಗೊಂಡಿರುವ ವ್ಯಕ್ತಿ ಸೇರಿದಂತೆ ಎಲ್ಲಾ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ."ಇಸ್ರೇಲ್ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ಸುರಕ್ಷಿತವಾಗಿದ್ದಾರೆ. ಭಾರತೀಯ ಪ್ರಜೆಯೊಬ್ಬರು ಗಾಯಗೊಂಡಿರುವ ವರದಿಗಳಿವೆ. ನಮ್ಮ ರಾಯಭಾರ ಕಚೇರಿಯು ಈ ವಿಷಯವನ್ನು ಮೇಲ್ವಿಚಾರಣೆ ಮಾಡುತ್ತಿದೆ. ವ್ಯಕ್ತಿ ಸುರಕ್ಷಿತವಾಗಿದ್ದಾರೆ ಎಂದರು.
ನವದೆಹಲಿ: ಪ್ರಯಾಗ್ರಾಜ್ನ ಫಾಫಮೌ ಪ್ರದೇಶದಲ್ಲಿನ ಕೋಲ್ಡ್ ಸ್ಟೋರೇಜ್ನ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಘೋಷಣೆ ಮಾಡಿದ್ದಾರೆ. ಈ ಸಂಬಂಧ ಅವರು ಸಾಮಾಜಿಕ ಜಾಲತಾನ ಎಕ್ಸ್ನಲ್ಲಿ ಬರೆದುಕೊಂಡು, ಘಟನೆ ಮತ್ತು ಗಾಯಾಳುಗಳ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸಿದರು.ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಕಟ್ಟಡದ ಕುಸಿತದಿಂದಾಗಿ ಸಂಭವಿಸಿದ ದುರ್ಘಟನೆಯಿಂದ ತೀವ್ರ ದುಃಖವಾಗಿದೆ.
ಬೆಂಗಳೂರು: ನಮ್ಮ ಮೆಟ್ರೋದ ಪಿಂಕ್ ಲೈನ್ ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟಿದೆ. ಆರ್ಡಿಎಸ್ಒ ಪ್ರಯೋಗಗಳು ತಿಂಗಳ ಅಂತ್ಯದ ಮೊದಲು ಪ್ರಾರಂಭವಾಗಬಹುದು. ಇನ್ನೂ ಕೆಲವು ಔಪಚಾರಿಕತೆಗಳು ಉಳಿದಿವೆ. ತಪಾಸಣೆ ಪೂರ್ಣಗೊಳ್ಳಲು ಕನಿಷ್ಠ ಎರಡು ವಾರಗಳು ತೆಗೆದುಕೊಳ್ಳಬಹುದು ಎಂದು ಬಿಎಂಆರ್ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಹೇಳಿದರು.ಪಿಂಕ್ ಮೆಟ್ರೋ ವಾಣಿಜ್ಯ ಸಂಚಾರಕ್ಕೆ ಬಿಎಂಆರ್ಸಿಎಲ್ ತಯಾರಿ ಆರಂಭಿಸಿದೆ. ಏಪ್ರಿಲ್ ಮೊದಲ ವಾರದಲ್ಲಿ ಆರ್ಡಿಎಸ್ಓ
ರಾಯಚೂರು: ರಾಜ್ಯದಲ್ಲಿ ನಡೆಯಲಿರುವ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲವು ಖಚಿತ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ರಾಯಚೂರಿನ ಮಸ್ಕಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಯೊಂದಕ್ಕೂ ಹೈಕಮಾಂಡ್ ಅಂತಾರೆ. ಕಾಂಗ್ರೆಸ್ ಪಕ್ಷದಲ್ಲಿನ ಆಡಳಿತ ವ್ಯವಸ್ಥೆ ಸರಿಯಿಲ್ಲ ಅನ್ನೋದನ್ನ ಇದು ತೋರಿಸುತ್ತೆ . ಇನ್ನೂ ರಾಜ್ಯದ ಜನತೆ ರಾಜ್ಯ ಸರ್ಕಾರದ ದುರ್ಬಲ ಆಡಳಿತಕ್ಕೆ ಬೇಸತ್ತು ಹೋಗಿದ್ದಾರೆ. ಜನಸಾಮಾನ್ಯರ ಮೇಲೆ ತೆರಿಗೆ ಭಾರ
ಮಂಗಳೂರು: ದಕ್ಷಿಣ ಕನ್ನಡ (ದ.ಕ.) ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನ ಏರಿಕೆಯಾಗುತ್ತಿದ್ದು, ಇತ್ತೀಚೆಗೆ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಬಿಸಿಗಾಳಿಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಸೇರಿದಂತೆ ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ವಿಶೇಷ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಐದು ಹಾಸಿಗೆಗಳ ವಿಶೇಷ ವಾರ್ಡ್ ಸಿದ್ಧಗೊಂಡಿದೆ. ಬೆಳ್ತಂಗಡಿ, ಸುಳ್ಯ, ಪುತ್ತೂರು ಮತ್ತು ಬಂಟ್ವಾಳ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಎರಡು ಹಾಸಿಗೆಗಳ ಪ್ರತ್ಯೇಕ ಚಿಕಿತ್ಸಾ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಈ ಕೊಠಡಿಗಳಲ್ಲಿ ಅಗತ್ಯ ಔಷಧಗಳು, ಹವಾನಿಯಂತ್ರಣ ಮತ್ತು ಇತರ ತುರ್ತು ಸೌಲಭ್ಯಗಳನ್ನು ಅಳವಡಿಸಲಾಗಿದೆ.
ನವದೆಹಲಿ: ಕನ್ನಡ ನಟಿ ರನ್ಯಾ ರಾವ್ ಅವರ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ವಂಚನೆಯಲ್ಲಿ ಉಗಾಂಡಾಕ್ಕೆ ಅಂತರಾಷ್ಟ್ರೀಯ ಸಂಪರ್ಕವನ್ನು ಬಹಿರಂಗಪಡಿಸಿದ್ದಾರೆ ಮತ್ತು ವಂಚನೆಯಲ್ಲಿ ಅಂತ್ಯಗೊಂಡ 50 ಕೆಜಿ ಚಿನ್ನದ ಸಾಗಣೆ ವಿಫಲವಾಗಿರುವ ಬಗ್ಗೆ ಮಾಹಿತವಿಫಲವಾಗಿದೆ.ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಸುಮಾರು 102.55 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಅಕ್ರಮ ಆಮದು ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ವಿವರವಾದ ಆರೋಪಪಟ್ಟಿ ಸಲ್ಲಿಸಿದೆ.
ಚೆನ್ನೈ: ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಎಂಟು ಟೋಲ್ ಪ್ಲಾಜಾಗಳಲ್ಲಿ ವಾಹನ ಬಳಕೆದಾರರ ಶುಲ್ಕವನ್ನು ಏಪ್ರಿಲ್ 1 ರಿಂದ 3% ರಿಂದ 5% ರಷ್ಟು ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿನ 60 ಟೋಲ್ ಪ್ಲಾಜಾಗಳು ಚೆನ್ನೈ-ಕನ್ನಿಯಾಕುಮಾರಿ, ತಿರುಚ್ಚಿ-ಸೇಲಂ ಮತ್ತು ಸೇಲಂ-ಕೊಯಂಬತ್ತೂರು ಸೇರಿದಂತೆ ಪ್ರಮುಖ ವಿಸ್ತರಣೆಗಳಲ್ಲಿವೆ. ರಾಜ್ಯ ಹೆದ್ದಾರಿಗಳಲ್ಲಿ, ಎಂಟು ಪ್ಲಾಜಾಗಳು 60-ಕಿಮೀ ವಂಡಲೂರ್-ಮಿಂಜೂರ್ ಹೊರ ವರ್ತುಲ ರಸ್ತೆಯಲ್ಲಿ ನಾಲ್ಕು, ಮಧುರೈ ರಿಂಗ್ ರಸ್ತೆಯಲ್ಲಿ ಎರಡು, ಮತ್ತು ಪೂರ್ವ ಕರಾವಳಿ ರಸ್ತೆಯ ಅಕ್ಕರೈ ಮತ್ತು ಹಳೆಯ ಮಹಾಬಲಿಪುರಂ ರಸ್ತೆಯ ನವಲೂರಿನಲ್ಲಿ ತಲಾ ಒಂದನ್ನು ಒಳಗೊಂಡಿದೆ.
ಉಡುಪಿ: ಇರಾನ್, ಅಮೇರಿಕಾ ಮತ್ತು ಇಸ್ರೇಲ್ ಒಳಗೊಂಡ ನಡೆಯುತ್ತಿರುವ ಸಂಘರ್ಷವು ಕರ್ನಾಟಕದ ಕರಾವಳಿಯ ಕರಾವಳಿ ಮೀನುಗಾರರ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತಿದೆ. ಮೀನನ ಬೆಲೆಯಲ್ಲಿ ಕುಸಿತಕಂಡಿದ್ದು, ನಷ್ಟವನ್ನು ಉಂಟು ಮಾಡಿದೆ.ಏಷ್ಯಾದ ಅತಿದೊಡ್ಡ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಮಲ್ಪೆಯಲ್ಲಿ ಮೀನುಗಾರಿಕೆ ಉದ್ಯಮವು ತೀವ್ರ ಸಂಕಷ್ಟ ಎದುರಿಸುತ್ತಿದೆ. ಹೋಟೆಲ್ಗಳ ಮುಚ್ಚುವಿಕೆ ಮತ್ತು ಯುದ್ಧ ಮತ್ತು ವಾಣಿಜ್ಯ ಎಲ್ಪಿಜಿ ಕೊರತೆಯಿಂದಾಗಿ ಮೀನು ರಫ್ತು ಸ್ಥಗಿತಗೊಂಡಿರುವುದು ಮೀನಿನ ಬೆಲೆ ಕುಸಿಯಲು ಕಾರಣವಾಗಿದೆ. ಮೀನಿನ ಪ್ರಕಾರಕ್ಕೆ ಅನುಗುಣವಾಗಿ ಪ್ರತಿ ಕಿಲೋಗ್ರಾಂಗೆ ₹50 ರಿಂದ ₹200ವರೆಗೆ ಬೆಲೆ ಕುಸಿದಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರ ಗೆಲ್ಲುವ ಮಾನದಂಡ ಆಧಾರದ ಮೇಲೆ ಸಮರ್ಥ ಶಾಮನೂರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದರು. ಈ ಸಂಬಂಧ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, ಮುಸ್ಲಿಂ ಸಮುದಾಯದ ಮುಖಂಡರಿಗೆ ವಿಧಾನಪರಿಷತ್ ಹಾಗೂ ನಿಗಮ, ಮಂಡಳಿ ನೇಮಕಾತಿಯಲ್ಲಿ ಒತ್ತು ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಇನ್ನೂ ಸಮರ್ಥ ಶಾಮನೂರು ಪರವಾದ ಒಲವು ವ್ಯಕ್ತವಾದ ಹಿನ್ನೆಲೆ ಒಲವು ವ್ಯಕ್ತವಾಗಿದೆ.
ಬೆಂಗಳೂರು: ಈಚೆಗೆ ಸಂಚಲನ ಮೂಡಿಸಿದ ಮೂಡುಬಿದಿರೆ ಇನ್ಸ್ಪೆಕ್ಟರ್ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಇದೀಗ ಗೃಹ ಸಚಿವ ಪರಮೇಶ್ವರ್ ಅವರು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಸರ್ಕಾರಕ್ಕೆ ಆದೇಶಿಸ ನೀಡಿದ್ದೇನೆ ಎಂದು ಪರಮೇಶ್ವರ್ ಹೇಳಿದರು. ಸದಾಶಿವನಗರ ಸರ್ಕಾರಿ ನಿವಾಸದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಜೊತೆ ನಾಲ್ವರು ಸಂತ್ರಸ್ತೆಯರು ಪರಮೇಶ್ವರ್ ಭೇಟಿಯಾಗಿ ಮಾತುಕತೆ ನಡೆಸಿದರು. ಆ ಬಳಿಕ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ಸಂತ್ರಸ್ತೆಯರು ಭೇಟಿ ವೇಳೆ ಹಲವು ಮಾಹಿತಿ ನೀಡಿದ್ದಾರೆ. ಇನ್ನೂ ಇನ್ಸ್ಪೆಕ್ಟರ್
ಬೆಳ್ತಂಗಡಿ: ತಾಲ್ಲೂಕಿನ ಅಳದಂಗಡಿಯಲ್ಲಿ ತೋಟವೊಂದರಲ್ಲಿ ಕಾಣಿಸಿಕೊಂಡ ಬೃಹತ್ ಕಾಳಿಂಗ ಸರ್ಪವೊಂದು ಪತ್ತೆಯಾಗಿದೆ. ಇನ್ನೂ ಅದನ್ನು ಸೆರೆಹಿಡಿಯುವ ವೇಳೆ ಅದು ಉರಗತಜ್ಞನ ಮೇಲೆ ಆಕ್ರಮಣಕಾರಿಯಾಗಿ ದಾಳಿ ನಡೆಸಲು ಯತ್ನಿಸಿದೆ. ಆದರೆ ಉರಗ ತಜ್ಞ ಚಾಣಕ್ಷತನದಿಂದ ಬೃಹತ್ ಕಾಳಿಂಗವನ್ನು ಸೆರೆಹಿಡಿಯುವಲ್ಲಿ ಸಕ್ಸಸ್ ಆಗಿದ್ದಾನೆ. ಹಾವು ಸೆರೆ ಹಿಡಿಯುವ ವಿಡಿಯೋವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ವೀರೇಂದ್ರ ಜೈನ್ ಎಂಬವರ ತೋಟದಲ್ಲಿ ಸುಮಾರು 13ಅಡಿ ಉದ್ದದ ಬೃಹತ್ ಗಾತ್ರದ
ಬೆಂಗಳೂರು: ಆದಿತ್ಯ ಧರ್ ನಿರ್ದೇಶನದಲ್ಲಿ ಮೂಡಿಬಂದ ನಟ ರಣವೀರ್ ಸಿಂಗ್ ಅಭಿನಯದ ಧುರಂದರ್ 2ಸಿನಿಮಾ ಮೊದಲ ವಾರದಲ್ಲಿಯೇ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಆರನೇ ದಿನಕ್ಕೆ ₹545ಕೋಟಿ ಬಾಚಿಕೊಂಡು ದೇಶದ ಎಲ್ಲ ಚಿತ್ರಮಂದಿರಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಲ್ಲ ಕಡೆಯಿಂದಲೂ ಸ್ಪೈ-ಆಕ್ಷನ್ ಥ್ರಿಲ್ಲರ್ ಆಗಿರುವ ಧುರಂದರ್ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಇದೀಗ ಸಿನಿಮಾಗೆ
ಶೇಕ್ ಹ್ಯಾಂಡ್ ಮಾಡಲು ಕೈ ಚಾಚಿದ ಮದುಮಗನಿಗೆ ಮದಮಗಳು ಥುಪಕ್ ಎಂದು ಉಗುಳಿದ್ದಾಳೆ. ಇದೀಗ ಮದುವೆಯೇ ಕ್ಯಾನ್ಸಲ್ ಆಗಿದೆ. ಇಂತಹದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರು ಯಾರದ್ದೋ ಬಲವಂತಕ್ಕೆ ಮದುವೆಯಾಗಲು ಒಪ್ಪಿಕೊಳ್ಳುತ್ತಾರೆ. ಈ ಪೈಕಿ ಕೆಲವರು ತಮ್ಮ ಹೆತ್ತವರ ಮುಖ ನೋಡಿಕೊಂಡು ಹೊಂದಾಣಿಕೆ ಮಾಡಿಕೊಂಡು ಜೀವನ ಮಾಡುತ್ತಾರೆ. ಮತ್ತೆ ಕೆಲವು ಮದುವೆಗಳು ಮಂಟಪದವರೆಗೆ ಬಂದು ರದ್ದಾಗುತ್ತವೆ. ಅಂತಹದ್ದೇ ಘಟನೆಯಿದು. ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ಏರ್ಪಡಿಸಲಾಗಿರುತ್ತದೆ. ವಧು ಮತ್ತು ವರ ಇಬ್ಬರೂ ಮದುವೆ ಡ್ರೆಸ್ ನಲ್ಲಿದ್ದು ಫೋಟೋಗ್ರಾಫರ್ ಗಳು ಬೇರೆ ಬೇರೆ ಆಂಗಲ್ ನಿಂದ ಫೋಟೋ ತೆಗೆಯುತ್ತಿರುತ್ತಾರೆ.
ಬೆಂಗಳೂರು: 49ವರ್ಷವಾದ್ರೂ ಈಗಲೂ ಬಳುಕುವ ಬಳ್ಳಿಯಂತಿರುವ ಕನ್ನಡದ ಖ್ಯಾತ ನಟಿ ಪ್ರೇಮ ಅವರು ತಮ್ಮ ಫಿಟ್ನೆಸ್ ರಹಸ್ಯವನ್ನು ಹೇಳಿಕೊಂಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಪ್ರೇಮಾ ಬಳಿ ತಮ್ಮ ಫಿಟ್ನೆಸ್ ರಹಸ್ಯವನ್ನು ಕೇಳುತ್ತಾರೆ. ನೀವು ಜಿಮ್ ಮಾಡುತ್ತೀರಾ ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ನಗುತ್ತಲೇ ಉತ್ತರಿಸಿದ ಪ್ರೇಮಾ ನೋ ಜಿಮ್, ಓನ್ಲಿ ಯೋಗಾ ಎಂದಿದ್ದಾರೆ. ನಾನು ಜಿಮ್ ಮಾಡುತ್ತಿಲ್ಲ, ಆದರೆ ಯೋಗವನ್ನು ದಿನನಿತ್ಯ ಮಾಡುತ್ತೇನೆ ಎಂದು ನಗುತ್ತಲೇ ಪ್ರತಿಕ್ರಿಯಿಸಿದ್ದಾರೆ.
ಲಕ್ನೋ: ತನ್ನ ಅಕ್ರಮ ಸಂಬಂಧಕ್ಕೆ ಅತ್ತೆ ಅಡ್ಡಿಯಾಗುತ್ತಿದ್ದಳೆಂದು ಪ್ರೇಮಿಯ ಜತೆ ಸೇರಿಕೊಂಡು ಅತ್ತೆಯನ್ನೇ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ತನ್ನ ಪ್ರೀತಿಗೆ ಅಡ್ಡಿಯಾಗಿದ್ದಳೆಂದು ಅತ್ತೆಯನ್ನು ಕೊಲ್ಲಲು ಆರೋಪಿ ರಂಜನಾ ವರ್ಮಾ, ಪ್ರಿಯಕರ ರಾಜನ್ ಶರ್ಮಾನ ಸಹಾಯವನ್ನು ಕೋರಿದ್ದಾಳೆ. ಸಿಸಿಟಿವಿ ದೃಶ್ಯಾವಳಿಗಳಿಂದ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. 36 ವರ್ಷದ ರಂಜನ ವರ್ಮಾ, 21ವರ್ಷದ ರಾಜನ್ ಶರ್ಮಾ ಜತೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಈ ವಿಚಾರ ಅತ್ತೆಗೆ
ಬೆಂಗಳೂರು: ಬಾಲಿವುಡ್ ಅಂಕಣದಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್-2 ಸಿನಿಮಾ ಇಂದಿನಿಂದ ಕನ್ನಡದಲ್ಲಿ ದರ್ಶನ ನೀಡುತ್ತಿದೆ. ಹಿಂದಿಯಲ್ಲಿ ಬಿಡುಗಡೆಯಾದ ಈ ಸಿನಿಮಾ ಕಳೆದ ನಾಲ್ಕು ದಿನಗಳಿಂದ ಬಾಕ್ಸ್ ಆಫೀಸ್ನಲ್ಲಿ ಭಾರೀ ಸದ್ದು ಮಾಡಿದೆ. ಈ ಮೊದಲು ಚಿತ್ರವನ್ನ ನೋಡಿದ ಕನ್ನಡಿಗರು ಈ ಚಿತ್ರವನ್ನ ಹಿಂದಿಯಲ್ಲಿಯೇ ನೋಡಿದ್ದಾರೆ. ಆದರೆ, ರಿಲೀಸ್ ಆದ ಐದನೇ ದಿನಕ್ಕೆ ಧುರಂಧರ್-2 ಕನ್ನಡ ವರ್ಶನ್ ಲಭ್ಯವಾಗುತ್ತಿದೆ. ಈ ಕುರಿತು ಚಿತ್ರ ವಿತರಣಾ ಸಂಸ್ಥೆ ಜಿಯೋ ಸ್ಟುಡಿಯೊ ಮಾಹಿತಿ ಹಂಚಿಕೊಂಡಿಕೊಂಡಿದೆ. ಆದಿತ್ಯಧರ್ ನಿರ್ದೇಶನದ ‘ಧುರಂಧರ್2’ ಚಿತ್ರವನ್ನು ಕರ್ನಾಟಕವು ಸೇರಿ ವಿದೇಶಗಳಲ್ಲೂ ಮಾರ್ಚ್19ರಂದು ಬಿಡುಗಡೆ ಮಾಡಲಾಗಿತ್ತು. ಇನ್ನೂ, ಈ ಚಿತ್ರ ಇಲ್ಲಿಯವರೆಗೂ ₹500 ಕೋಟಿಗೂ ಅಧಿಕ ಗಳಿಕೆ ಕಂಡಿದೆ.