ಬೆಂಗಳೂರು: ಐಪಿಎಲ್ 2025 ಫೈನಲ್ ಗೆದ್ದು ಬೆಂಗಳೂರಿಗೆ ಬಂದ ಆರ್ ಸಿಬಿ ಆಟಗಾರರಿಗೆ ಸನ್ಮಾನಕ್ಕಿಂತ ಸಚಿವರು, ಅಧಿಕಾರಿಗಳ ಮಕ್ಕಳು, ಮೊಮ್ಮಕ್ಕಳಿಗೆ ಫೋಟೋ, ಆಟೋಗ್ರಾಫ್ ಪಡೆಯುವುದೇ ಮುಖ್ಯವಾದಂತಿತ್ತು. ಆಟಗಾರರನ್ನು ವೇದಿಕೆ ಮೇಲೆ ಕರೆತಂದಾಗ ಅಲ್ಲಿ ಸಾಕಷ್ಟು ಜನ ಸೇರಿದ್ದರು. ಹಲವರು ಅನಗತ್ಯವಾಗಿ ವೇದಿಕೆಯಲ್ಲಿದ್ದರು. ಆಟಗಾರರು ವೇದಿಕೆಯಲ್ಲಿ ಕೂತಾಗ ಯಾರೆಲ್ಲವೂ ವೇದಿಕೆಗೆ ಬಂದು ಆಟಗಾರರನ್ನು ಮುತ್ತಿಕೊಳ್ಳುತ್ತಿದ್ದರು. ವಿಶೇಷವಾಗಿ ಆರ್ ಸಿಬಿ ಜೆರ್ಸಿ ಹಾಕಿಕೊಂಡು ಪ್ರಭಾವಿಗಳ ಮೊಮ್ಮಕ್ಕಳು ವಿರಾಟ್ ಕೊಹ್ಲಿ ಬಳಿ ಸೆಲ್ಫೀ, ಆಟೋಗ್ರಾಫ್ ಗಾಗಿ ಮುತ್ತಿಗೆ ಹಾಕಿದ್ದರು. ಇನ್ನು ಕೆಲವರು ವೇದಿಕೆ ಮೇಲಿಟ್ಟಿದ್ದ ಟ್ರೋಫಿ ಬಳಿ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದರು.
ಬೆಂಗಳೂರು: ಆರ್ ಸಿಬಿ ಆಟಗಾರರನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿ ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಆರ್ ಸಿಬಿ ಕಿಂಗ್ ವಿರಾಟ್ ಕೊಹ್ಲಿ ಏನೂ ಹೇಳಿಲ್ವಾ? ಇಲ್ಲಿದೆ ಅಪ್ ಡೇಟ್. ಘಟನೆ ನಡೆದ ಬಳಿಕವೂ ಅರ್ಧಗಂಟೆ ಚಿನ್ನಸ್ವಾಮಿ ಮೈದಾನದಲ್ಲಿ ಚುಟುಕಾಗಿ ಸಂಭ್ರಮಾಚರಣೆ ಮಾಡಲಾಯಿತು. ಇದಾದ ಬಳಿಕ ಆರ್ ಸಿಬಿ ಫ್ರಾಂಚೈಸಿ ಸೋಷಿಯಲ್ ಮೀಡಿಯಾ ಮೂಲಕ ಘಟನೆ ಬಗ್ಗೆ ವಿಷಾಧ ವ್ಯಕ್ತಪಡಿಸಿ ಸಂದೇಶ ಬರೆದುಕೊಂಡಿದೆ. ಇದೀಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇದೇ ಸಂದೇಶವನ್ನು ಶೇರ್ ಮಾಡಿಕೊಂಡಿದ್ದಾರೆ.
ಬೆಂಗಳೂರು: ಚಿನ್ನಸ್ವಾಮಿಯಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸುವಾಗ ಕುಂಬಮೇಳದಲ್ಲೂ ಆಗಿರ್ಲಿಲ್ವಾಅ ಎಂದಿದ್ದರು. ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಆಗ ನೀವೂ ಟೀಕಿಸಿರಲಿಲ್ವಾ ಎಂದಿದ್ದಾರೆ. ನಿನ್ನೆ ಚಿನ್ನಸ್ವಾಮಿಯಲ್ಲಿ ಸಂಭ್ರಮಾಚರಣೆ ವೇಳೆ ಅವ್ಯವಸ್ಥೆಯಿಂದಾಗಿ ಕಾಲ್ತುಳಿತವಾಗಿ 11 ಮಂದಿ ಸಾವನ್ನಪ್ಪಿದ್ದರು. ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮಗೋಷ್ಠಿ ನಡೆಸಿದ್ದರು. ಈ ವೇಳೆ ಕಾಲ್ತುಳಿತ ದುರಂತದ ಬಗ್ಗೆ ಕಾರಣ ವಿವರಿಸಿದ್ದಾರೆ. ಈ ವೇಳೆ ಇತ್ತೀಚೆಗೆ ಕುಂಬಮೇಳದಲ್ಲಿ ದುರಂತವಾಗಿಲ್ವಾ? ಕಾಲ್ತುಳಿತದಲ್ಲಿ ಜನ ಸಾವನ್ನಪ್ಪಿಲ್ವಾ? ಇದನ್ನು ನಾವು ಅಥವಾ ನಮ್ಮ ಪಕ್ಷದವರು ಏನಾದರೂ ಟೀಕೆ ಮಾಡಿದ್ವಾ ಎಂದು ಸಿದ್ದರಾಮಯ್ಯ ಪತ್ರಕರ್ತರಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಕಾಲ್ತುಳಿತದ ನೋವಿನಲ್ಲೂ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳುವವರಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ನಮ್ಮಲ್ಲಿ ಹೀಗಾಗಿರಲಿಲ್ಲ ಎಂದು ಮುಂಬೈ ಫ್ಯಾನ್ಸ್ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರಿಗೆ ತಿವಿದಿದ್ದಾರೆ. ಈ ಮೊದಲು ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾ ಆಟಗಾರರು ಮುಂಬೈನಲ್ಲಿ ತೆರೆದ ಬಸ್ ನಲ್ಲಿ ಮೆರವಣಿಗೆ ಮಾಡಿದ್ದರು. ಈ ವೇಳೆ ಲಕ್ಷಾಂತರ ಜನ ರಸ್ತೆಯಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಸೇರಿದ್ದರು.
ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದು, 33 ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ಕಾರಣ ಪೊಲೀಸರಲ್ಲ, ಈ ಎರಡು ವಿಚಾರಗಳು ಎಂಬುದು ಈಗ ಬಯಲಾಗುತ್ತಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಆಟಗಾರರನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಜನ ಸೇರಿದ್ದರು. ಒಮ್ಮಲೇ ಗೇಟ್ ತೆರೆದಾಗ ಏಕಾಏಕಿ ಜನ ನುಗ್ಗಲು ಹೊರಟಾಗ ದುರಂತ ಸಂಭವಿಸಿದೆ. ಈ ದುರಂತಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಅದೇನೆಂದು ನೋಡೋಣ. ಉಚಿತ ಪ್ರವೇಶಸಾಮಾನ್ಯವಾಗಿ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳನ್ನು ನೋಡಲು ಹೋಗಬೇಕೆಂದರೆ ಟಿಕೆಟ್ ದರ ದುಬಾರಿಯಿರುತ್ತದೆ.
ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯ ಹಿಂದಿನ ಕಾರಣಗಳು ಈಗ ಒಂದೊಂದೇ ಬಯಲಾಗುತ್ತಿದೆ. ಪೊಲೀಸರು ಸೆಲೆಬ್ರೇಷನ್ ಬೇಡ ಎಂದಿದ್ದರೂ ಈ ವ್ಯಕ್ತಿಗಳೇ ಹಠ ಹಿಡಿದು ನಿನ್ನೆಯೇ ಸೆಲೆಬ್ರೇಷನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೊನ್ನೆಯಷ್ಟೇ ಆರ್ ಸಿಬಿ ಕಪ್ ಗೆದ್ದಿದೆ. ನಿನ್ನೆಯೇ ಸೆಲೆಬ್ರೇಷನ್ ಮಾಡುವ ಧಾವಂತವೇನಿತ್ತು ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಪೊಲೀಸರೂ ನಿನ್ನೆಯೇ ಸೆಲೆಬ್ರೇಷನ್ ಬೇಡ ಎಂದು ನಿರಾಕರಿಸಿದ್ದರು. ಏಕಾಏಕಿ ಮೆರವಣಿಗೆ, ಸೆಲೆಬ್ರೇಷನ್ ಎಂದರೆ ಸಾಕಷ್ಟು ಜನ ಸೇರುತ್ತಾರೆ ಎಂಬ ಅಂದಾಜು ಪೊಲೀಸರಿಗಿತ್ತು.
ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತ ಘಟನೆ ಈ ಹಿಂದೆ ಅಣ್ಣಾವ್ರು ತೀರಿಕೊಂಡಾಗಲೂ ನಡೆದಿತ್ತು. ಆಗಲೂ ಅಭಿಮಾನಿಗಳು ಸಾಗರದಂತೆ ನುಗ್ಗಿದಾಗ ಪೊಲೀಸರು ಅಸಹಾಯಕರಾದರು. ಐಪಿಎಲ್ ಗೆದ್ದು ಆರ್ ಸಿಬಿ ತವರಿಗೆ ಬರುತ್ತದೆ ಎಂದಾಗ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಸಾವಿರ ಸಂಖ್ಯೆಯಲ್ಲಿ ಬರಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಅಭಿಮಾನಿಗಳ ಸಂಖ್ಯೆ ಲಕ್ಷ ದಾಟಿತ್ತು. ಅದೂ ಮೈದಾನಕ್ಕೆ ಉಚಿತ ಪಾಸ್ ಗಳನ್ನು ವಿತರಿಸಲಾಗುತ್ತದೆ ಎಂದು ತಿಳಿದಾಗ ಅಭಿಮಾನಿಗಳು ಹುಚ್ಚೆದ್ದು ನುಗ್ಗಿದರು.
ಬೆಂಗಳೂರು: ಕಳೆದ ಎರಡು ವಾರಗಳಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಸತತ ಮಳೆಯಿಂದ ಸಾಕು ಸಾಕಾಗಿ ಹೋಯ್ತು ಎಂದಿದ್ದರೆ ಇಲ್ಲಿದೆ ಅಪ್ ಡೇಟ್. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ವಾರಗಳಿಂದ ನಿರಂತರ ಮಳೆಯಾಗುತ್ತಿತ್ತು. ಆದರೆ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಆಗಾಗ ಮಳೆಯಾಗುತ್ತಲೇ ಇತ್ತು. ಆದರೆ ಇಂದು ಕರಾವಳಿ ಜಿಲ್ಲೆಗೆ ವರುಣ ಕೊಂಚ ಬ್ರೇಕ್ ಬಿದ್ದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಇಂದು ಮೋಡ ಕವಿದ ವಾತಾವರಣವಿರಲಿದೆ.
ಗುರುವಾರ ಮಹಾವಿಷ್ಣುವಿನ ದಿನವಾಗಿದೆ. ಈ ದಿನ ಪಾಪ ಕರ್ಮಗಳ ಪರಿಹಾರಕ್ಕಾಗಿ, ಅಷ್ಟೈಶ್ವರ್ಯ ಸಿದ್ಧಿಗಾಗಿ ನಾರಾಯಣ ಹೃದಯ ಸ್ತೋತ್ರವನ್ನು ತಪ್ಪದೇ ಓದಿ.ಅಸ್ಯ ಶ್ರೀನಾರಾಯಣಹೃದಯಸ್ತೋತ್ರಮಂತ್ರಸ್ಯ ಭಾರ್ಗವ ಋಷಿಃ, ಅನುಷ್ಟುಪ್ಛಂದಃ, ಶ್ರೀಲಕ್ಷ್ಮೀನಾರಾಯಣೋ ದೇವತಾ, ಓಂ ಬೀಜಂ, ನಮಶ್ಶಕ್ತಿಃ, ನಾರಾಯಣಾಯೇತಿ ಕೀಲಕಂ, ಶ್ರೀಲಕ್ಷ್ಮೀನಾರಾಯಣ ಪ್ರೀತ್ಯರ್ಥೇ ಜಪೇ ವಿನಿಯೋಗಃ |ಕರನ್ಯಾಸಃ |ಓಂ ನಾರಾಯಣಃ ಪರಂ ಜ್ಯೋತಿರಿತಿ ಅಂಗುಷ್ಠಾಭ್ಯಾಂ ನಮಃ |ನಾರಾಯಣಃ ಪರಂ ಬ್ರಹ್ಮೇತಿ ತರ್ಜನೀಭ್ಯಾಂ ನಮಃ |ನಾರಾಯಣಃ ಪರೋ ದೇವ ಇತಿ ಮಧ್ಯಮಾಭ್ಯಾಂ ನಮಃ |ನಾರಾಯಣಃ ಪರಂ ಧಾಮೇತಿ ಅನಾಮಿಕಾಭ್ಯಾಂ ನಮಃ |ನಾರಾಯಣಃ ಪರೋ ಧರ್ಮ ಇತಿ ಕನಿಷ್ಠಿಕಾಭ್ಯಾಂ ನಮಃ |ವಿಶ್ವಂ ನಾರಾಯಣ ಇತಿ ಕರತಲಕರಪೃಷ್ಠಾಭ್ಯಾಂ ನಮಃ |
ಬೆಂಗಳೂರು: ಐಪಿಎಲ್ ಗೆದ್ದು ಬಂದ ಆರ್ ಸಿಬಿಗೆ ಬೆಂಗಳೂರಿನಲ್ಲಿ ಓಪನ್ ಬಸ್ ನಲ್ಲಿ ಮೆರವಣಿಗೆ ಮಾಡಬೇಕೆಂದಿತ್ತು. ಆದರೆ ಅದಕ್ಕೆ ಸರ್ಕಾರ ಒಪ್ಪಿಗೆ ನೀಡಲಿಲ್ಲ. ಒಂದು ವೇಳೆ ಅದೇನಾದಾರೂ ಇದ್ದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಊಹಿಸಲೂ ಸಾಧ್ಯವಿಲ್ಲ ಹೋಟೆಲ್ ನಿಂದ ಆರ್ ಸಿಬಿ ತಂಡ ವಿಧಾನಸೌಧಕ್ಕೆ ಬರುತ್ತಿದ್ದಂತೇ ಸಾಕಷ್ಟು ಜನ ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಹರ್ಷೋದ್ಘಾರ ಮಾಡುತ್ತಿದ್ದರು. ಒಂದು ವೇಳೆ ಓಪನ್ ಬಸ್ ಮೆರವಣಿಗೆ ಇದ್ದಿದ್ದರೆ ಜನರನ್ನು ನಿಯಂತ್ರಿಸಲೂ ಸಾಧ್ಯವಿರುತ್ತಿರಲಿಲ್ಲ. ಆರ್ ಸಿಬಿ ಕನಿಷ್ಠ ವಿಧಾನಸೌಧದಿಂದ ಚಿನ್ನಸ್ವಾಮಿಯವರೆಗಾದರೂ ಮೆರವಣಿಗೆಗೆ ಅವಕಾಶ ಕೇಳಿತ್ತು
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಭವಿಸಿದ ಭೀಕರ ಕಾಲ್ತುಳಿತ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.ಆರ್ಸಿಬಿ ತಂಡದ ವಿಜಯೋತ್ಸವದ ವೇಳೆ ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿರೆ, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಪ್ರಧಾನಿ ಕಾರ್ಯಾಲಯ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಈ ದುರಂತದ ಸಮಯದಲ್ಲಿ, ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳ ದುಃಖದಲ್ಲಿ ಭಾಗಿಯಾಗುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತಕ್ಕೆ ಬಲಿಯಾದವರ ಸಂಖ್ಯೆ ಮತ್ತು ಗಾಯಾಳುಗಳ ಸಂಖ್ಯೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅಧಿಕೃತ ಮಾಹಿತಿ ನೀಡಿದ್ದಾರೆ. ಆರ್ ಸಿಬಿ ಟೀಂ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಅಭಿಮಾನಿಗಳು ಕಾಲ್ತುಳಿತಕ್ಕೊಳಗಾಗಿದ್ದಾರೆ. ಈ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. 33 ಮಂದಿಗೆ ಗಾಯಗಳಾಗಿವೆ ಎಂದು ಸಿಎಂ ಖಚಿತಪಡಿಸಿದ್ದಾರೆ. ಮೊದಲು ವಿಧಾನಸೌಧದ ಮುಂದೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿಯಾವುದೇ ದುರಂತ ಸಂಭವಿಸಿರಲಿಲ್ಲ. ಆದರೆ ಚಿನ್ನಸ್ವಾಮಿ ಮೈದಾನದ ಮುಂದೆ ದುರಂತ ಸಂಭವಿಸಿದೆ.
ಬೆಂಗಳೂರು: ಐಪಿಎಲ್ ಗೆದ್ದು ಬಂದ ಆರ್ ಸಿಬಿಗೆ ಸಂಭ್ರಮದ ಸ್ವಾಗತ ಮಾಡಿಕೊಳ್ಳಬೇಕಾದ ಹೊಸ್ತಿಲಲ್ಲಿ ಚಿನ್ನಸ್ವಾಮಿ ಕಾಲ್ತುಳಿತದಿಂದ ದುರಂತವೇ ನಡೆದು ಹೋಗಿದೆ. ಈ ವೇಳೆ ನಿಜಕ್ಕೂ ನಡೆದಿದ್ದೇನು ಇಲ್ಲಿದೆ ವಿವರ. ಚಿನ್ನಸ್ವಾಮಿ ಮೈದಾನಕ್ಕೆ ಆಟಗಾರರು ಬರುತ್ತಾರೆ ಎಂದು ತಿಳಿದು ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು, ಮಹಿಳೆಯರು, ಯುವಕರು ಬಂದು ಸೇರಿದ್ದರು. ಗೇಟ್ ಬಳಿ ಒಮ್ಮೆಲೆ ಜನ ನುಗ್ಗಲಾಗಿತ್ತು. ಗೇಟ್ ಒಳಗೆ ಹೋಗುವ ಪ್ರಯತ್ನದಲ್ಲಿ ಸಿಮೆಂಟ್ ಸ್ಲ್ಯಾಬ್ ಮೇಲೆ ಏಕಾಏಕಿ ಜನ ನಿಂತಿದ್ದಾಗ ಅದು ಕುಸಿದು ಬಿತ್ತು.
ಬರ್ವಾನಿ (ಮಧ್ಯಪ್ರದೇಶ): ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಹಳ್ಳಿಯೊಂದರ ನಿವಾಸಿಗಳ ಮೇಲೆ ಮೇ 5 ರಂದು ನಿಗೂಢ ಪ್ರಾಣಿಯೊಂದು ದಾಳಿ ಮಾಡಿದ್ದು, 17 ಜನರು ಗಾಯಗೊಂಡಿದ್ದಾರೆ ಮತ್ತು ಇತ್ತೀಚಿನ ಎರಡು ಸಾವು ಸೇರಿದಂತೆ ಘಟನೆಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಳಿದ 11 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಇಲಾಖೆಯಿಂದ ಕಟ್ಟುನಿಟ್ಟಾಗಿ ನಿಗಾ ಇರಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಅರಣ್ಯ ಇಲಾಖೆಯು ಪ್ರಾಣಿಗಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಿದೆ ಆದರೆ ಇನ್ನೂ ಪತ್ತೆಯಾಗಿಲ್ಲ. ಬರ್ವಾನಿ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್ಒ) ಅನಿತಾ ಸಿಂಗಾರೆ ಎಎನ್ಐಗೆ ತಿಳಿಸಿದರು, “ಜಿಲ್ಲೆಯ
ಕರಾಚಿ [ಪಾಕಿಸ್ತಾನ]: ಪಾಕಿಸ್ತಾನದ ಕರಾಚಿಯಲ್ಲಿರುವ ಮಲಿರ್ ಜೈಲಿನಿಂದ ಬುಧವಾರ 200 ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ. ಅಧಿಕಾರಿಗಳು ಇನ್ನೂ 27 ಪರಾರಿಯಾದವರನ್ನು ಬಂಧಿಸಿದ್ದಾರೆ, ಒಟ್ಟು 105 ಕೈದಿಗಳನ್ನು ಮರಳಿ ಸೆರೆಹಿಡಿಯಲಾಗಿದೆ, ಕೆಲವರು ಸ್ವಯಂಪ್ರೇರಣೆಯಿಂದ ಹಿಂದಿರುಗಿದ್ದಾರೆ ಎಂದು ARY ನ್ಯೂಸ್ ವರದಿ ಮಾಡಿದೆ. ಪರಾರಿಯಾಗಿರುವವರ ಮನೆಗಳ ಮೇಲೆ ಪೊಲೀಸ್ ದಾಳಿ ಸೇರಿದಂತೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಸ್ವಯಂಪ್ರೇರಣೆಯಿಂದ ಹಿಂದಿರುಗುವ ಕೈದಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ವ್ಯವಹರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಾರಿಯಾದ ಕೈದಿಗಳನ್ನು ಬಂಧಿಸಲು ಪೊಲೀಸ್ ಇಲಾಖೆ ಪ್ರತ್ಯೇಕ ತಂಡಗಳನ್ನು ರಚಿಸಿದೆ. ಆದಾಗ್ಯೂ, ಕೈದಿಗಳು
ಬೆಂಗಳೂರು: ಐಪಿಎಲ್ 2025 ರಲ್ಲಿ ಚಾಂಪಿಯನ್ ಆಗಿ ತವರಿಗೆ ಬಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ 11 ಮಂದಿ ಸಾವನ್ನಪ್ಪಿದ್ದು 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜನರನ್ನು ನಿಯಂತ್ರಿಸಲಾಗದೇ ಚಿನ್ನಸ್ವಾಮಿ ಕಡೆಗೆ ತೆರಳುವ ಮೆಟ್ರೋ ಸ್ಥಗಿತಗೊಳಿಸಲಾಗಿದೆ. ಐಪಿಎಲ್ ಗೆದ್ದ ಆರ್ ಸಿಬಿ ತಂಡ ಮೊದಲು ವಿಧಾನಸೌಧಕ್ಕೆ ಬಂದು ನಂತರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದೆ. ಈ ವೇಳೆ ಎರಡೂ ಕಡೆ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ. ಈ ವೇಳೆ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಜನರು ನೂಕು ನುಗ್ಗಲು ನಡೆಸಿದ್ದಾರೆ.
ಬೆಂಗಳೂರು: ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ ಮೂವರು ಅಭಿಮಾನಿಗಳು ಸಾವನ್ನಪ್ಪಿ ಕನಿಷ್ಠ 10 ಮಂದಿ ಗಾಯಗೊಂಡಿರುವ ದುರ್ಘಟನೆ ಇಂದು ಸಂಜೆ ನಡೆದಿದೆ. ಐಪಿಎಲ್ 2025 ಚಾಂಪಿಯನ್ಶಿಪ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯೋತ್ಸವಕ್ಕೆ ಸಾವಿರಾರು ಅಭಿಮಾನಿಗಳು ಬಂದಿದ್ದರುಗಾಯಾಳುಗಳನ್ನು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಬಹು
ಬೆಂಗಳೂರು: ತಮಿಳು ಸೂಪರ್ಸ್ಟಾರ್ ಕಮಲ್ ಹಾಸನ್ ಅವರು ನಡೆಯುತ್ತಿರುವ ಕನ್ನಡ ವಿವಾದದ ಸಮಯದಲ್ಲಿ ಅಚಲ ಬೆಂಬಲಕ್ಕಾಗಿ ತಮಿಳುನಾಡು ಜನತೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.ಜೂನ್ 5 ರಂದು ತಮ್ಮ ಚಿತ್ರ 'ಥಗ್ ಲೈಫ್' ಬಿಡುಗಡೆಯಾಗುವ ಕೆಲವೇ ಗಂಟೆಗಳ ಮೊದಲು ಚೆನ್ನೈನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಲ್ ಹಾಸನ್ ಅವರು ಮೇ 24 ರಂದು ಚೆನ್ನೈನಲ್ಲಿ ಚಿತ್ರದ ಆಡಿಯೋ ಬಿಡುಗಡೆಯ ಸಂದರ್ಭದಲ್ಲಿ ಮಾಡಿದ "ಕನ್ನಡವು ತಮಿಳಿನಿಂದಲೇ ಹುಟ್ಟಿದೆ" ಎಂಬ ಅವರ ಕಾಮೆಂಟ್ನಿಂದ ಉಂಟಾದ ಹಿನ್ನಡೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಅಭಿಮಾನಿಗಳು, ಕಾಯುವಿಕೆ ಕೊನೆಗೂ ಕೊನೆಗೊಂಡಿದೆ! ಬಹುನಿರೀಕ್ಷಿತ RCB ವಿಕ್ಟರಿ ಪರೇಡ್ ಇಂದು, ಜೂನ್ 4, 2025 ರಂದು 5 PM IST ಕ್ಕೆ ಪ್ರಾರಂಭವಾಗಿದೆ. ಬೆಂಗಳೂರಿನ M. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ದೂರಿ ಆಚರಣೆ ನಡೆಯಲಿದೆ.ಜನಸಂದಣಿ ನಿರ್ವಹಣೆ ಮತ್ತು ಸಾರ್ವಜನಿಕ ಸುರಕ್ಷತೆಯ ಕಾರಣದಿಂದ ಬೆಂಗಳೂರು ಪೊಲೀಸರು ಪರೇಡ್ಗೆ ಅನುಮತಿ ನಿರಾಕರಿಸಿದ್ದರು ಎಂದು ಈ ಹಿಂದೆ ವರದಿಯಾಗಿತ್ತು.
ನವದೆಹಲಿ: ಅಮರನಾಥ ಯಾತ್ರೆಗೆ ಮುನ್ನ ಭಯೋತ್ಪಾದಕ ಬೆದರಿಕೆಗಳ ಹಿನ್ನೆಲೆ ಇದೀಗ ಭಾರತೀಯ ಭದ್ರತಾ ಪಡೆಗಳು ಆಪರೇಷನ್ ಶಿವ ಅನ್ನು ಪ್ರಾರಂಭಿಸಿದೆ. ಭಾರೀ ಭದ್ರತೆ ನೀಡುವ ಹಿನ್ನೆಲೆ 38 ದಿನಗಳ ಅಮರನಾಥ ಯಾತ್ರೆಗೆ ಭದ್ರತೆ ಕಲ್ಪಿಸಿಕೊಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭೀಕರ ಭಯೋತ್ಪಾದನಾ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ಒಂದು ತಿಂಗಳ ನಂತರ, ಅಮರನಾಥ ಯಾತ್ರೆಗೆ ಮುಂಚಿತವಾಗಿ ಭಯೋತ್ಪಾದಕ ಬೆದರಿಕೆ ಹೊರಹೊಮ್ಮಿದೆ. 38 ದಿನಗಳ ಯಾತ್ರೆಯನ್ನು ಸುಗಮವಾಗಿ ನಡೆಸಲು ಭಾರತೀಯ ಭದ್ರತಾ ಪಡೆಗಳು "ಆಪರೇಷನ್ ಶಿವ" ಅನ್ನು ಪ್ರಾರಂಭಿಸಿವೆ.
ನವದೆಹಲಿ: ಮಂಗಳವಾರ ರಾತ್ರಿ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್ಗಳಿಂದ ಸೋಲಿಸಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನಂತರ ಕರ್ನಾಟಕದಾದ್ಯಂತ ಸಂಭ್ರಮದ ಅಲೆ ಎದ್ದಿದೆ.ಐಪಿಎಲ್ ಗೆಲುವಿನ ನಂತರ ಆರ್ಸಿಬಿಗೆ ಶುಭಾಶಯ ಕೋರಿದ ಡಿಕೆ ಶಿವಕುಮಾರ್ಬಹುನಿರೀಕ್ಷಿತ ವಿಜಯವು ರಾಜ್ಯಾದ್ಯಂತ ಭಾರಿ ಸಂಭ್ರಮಾಚರಣೆಯನ್ನು ಹುಟ್ಟುಹಾಕಿದೆ, ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಚಾಂಪಿಯನ್ಗಳಿಗೆ ವಿಸ್ತಾರವಾದ ಸ್ವಾಗತವನ್ನು ಸಿದ್ಧಪಡಿಸುತ್ತಿದೆ.
ಬೆಂಗಳೂರು: ಐಪಿಎಲ್ ಗೆದ್ದು ತವರಿಗೆ ಬಂದಿಳಿದಿರುವ ಆರ್ ಸಿಬಿ ಆಟಗಾರರಿಗೆ ಬೆಂಗಳೂರು ಎಚ್ಎಎಲ್ ಏರ್ ಪೋರ್ಟ್ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭವ್ಯ ಸ್ವಾಗತ ಕೋರಿದ್ದಾರೆ. ಈ ವೇಳೆ ಕೊಹ್ಲಿ ಕೈಗೆ ಕನ್ನಡ ಬಾವುಟ ನೀಡಿದ್ದು ಇದನ್ನು ನೋಡುವುದೇ ಚಂದ ಎನ್ನುತ್ತಿದ್ದಾರೆ ಫ್ಯಾನ್ಸ್. ಐಪಿಎಲ್ 2025 ರ ಫೈನಲ್ ಗೆದ್ದು ತವರಿಗೆ ಬಂದಿಳಿದಿರುವ ಕ್ರಿಕೆಟಿಗರಿಗೆ ಇಂದು ವಿಧಾನಸೌಧದ ಮುಂಭಾಗ ಸನ್ಮಾನ ಕಾರ್ಯಕ್ರಮ ಮತ್ತು ಬಳಿಕ ಚಿನ್ನಸ್ವಾಮಿಯಲ್ಲಿ ಅಭಿನಂದನಾ ಕಾರ್ಯಕ್ರಮವಿದೆ. ಇದಕ್ಕಾಗಿ ಕ್ರಿಕೆಟಿಗರು, ಸಹಾಯಕ ಸಿಬ್ಬಂದಿಯಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಬಲ್ಲಿಯಾ: ಡ್ಯಾನ್ಸರ್ವೊಬ್ಬಳ ಜತೆ 70 ವರ್ಷದ ಬಿಜೆಪಿ ನಾಯಕ ಬಬ್ಬನ್ ಸಿಂಗ್ ರಘುವಂಶಿ ಅವರು ಅಶ್ಲೀಲವಾಗಿ ನಡೆದುಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ಈ ವಿಡಿಯೋ ಹರಿದಾಡಿತ್ತು, ವಿಡಿಯೋ ನಕಲಿ ಎಂದು ಬಿಜೆಪಿ ಮುಖಂಡ ಆರೋಪಿಸಿದ್ದಾರೆ. ಈ ವಿಡಿಯೋ ಮದುವೆ ಕಾರ್ಯಕ್ರಮದಲ್ಲಿ ನರ್ತಕಿ ಬಿಜೆಪಿ ನಾಯಕನ ಮಡಿಲಲ್ಲಿ ಕುಳಿತಿರುವುದು ಕಂಡು ಬರುತ್ತದೆ. ಈ ವೇಲೆ ಅವಳನ್ನು ಅನುಚಿತವಾಗಿ ಸ್ಪರ್ಶಿಸಿ, ಚುಂಬಿಸುತ್ತಿರುವುದನ್ನು ಕಾಣಬಹುದು. ರಾಸ್ರಾದ ಕಿಸಾನ್ ಕೋಆಪರೇಟಿವ್ ಮಿಲ್ನ ಉಪಾಧ್ಯಕ್ಷ ರಘುವಂಶಿ ಅವರು ವೀಡಿಯೊವನ್ನು ನಕಲಿ ಎಂದು ತಳ್ಳಿಹಾಕಿದ್ದಾರೆ
ಮುಂಬೈ ಇಂಡಿಯನ್ಸ್ನ ಡೈನಾಮಿಕ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಋತುವಿನ ಅತ್ಯಂತ ಮೌಲ್ಯಯುತ ಆಟಗಾರನಾಗಿ ಕಿರೀಟವನ್ನು ಪಡೆದರು. ಆದರೆ ಗುಜರಾತ್ ಟೈಟಾನ್ಸ್ನ (ಜಿಟಿ) ಸ್ಥಿರ ಅಗ್ರ ಕ್ರಮಾಂಕದ ಆಟಗಾರ ಸಾಯಿ ಸುದರ್ಶನ್ ಅವರು ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 18 ನೇ ಆವೃತ್ತಿಯ ಮುಕ್ತಾಯದ ನಂತರ ಸೀಸನ್ನ ಉದಯೋನ್ಮುಖ ಆಟಗಾರ ಎಂದು ಪ್ರಶಸ್ತಿ ಪಡೆದರು.ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ 18 ವರ್ಷಗಳ ಸುದೀರ್ಘ ಜರ್ನಿಯಲ್ಲಿ ಈ ಬಾರಿ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಬೆಂಗಳೂರು: ಐಪಿಎಲ್ ನಲ್ಲಿ ಮೊದಲ ಕಪ್ ಗೆದ್ದು ಇದೀಗ ಆರ್ ಸಿಬಿ ಆಟಗಾರರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೇ ಅಭಿಮಾನಿಗಳ ಸ್ವಾಗತ ನೋಡಿ ಸ್ವತಃ ಕೊಹ್ಲಿ ಶಾಕ್ ಆಗಿದ್ದಾರೆ. ಇಂದು ವಿಶೇಷ ವಿಮಾನದಲ್ಲಿ ಆರ್ ಸಿಬಿ ಆಟಗಾರರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೇ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಹೂಗುಚ್ಛ ನೀಡಿ ಆಟಗಾರರನ್ನು ಸ್ವಾಗತಿಸಿದ್ದಾರೆ. ಕೊಹ್ಲಿಗೆ ಆರ್ ಸಿಬಿ ಮತ್ತು ಕರ್ನಾಟಕ ಬಾವುಟ ನೀಡಿ ಸ್ವಾಗತಿಸಿದರು. ಇನ್ನು ಬಸ್ ಮೂಲಕ ಆಟಗಾರರನ್ನು ಕರೆತರಲಾಗುತ್ತಿದೆ.
ಬೆಂಗಳೂರು: ಮೊದಲ ಬಾರಿಗೆ ಐಪಿಎಲ್ ಗೆದ್ದು ಬೀಗಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಹಮ್ಮದಾಬಾದ್ ನಿಂದ ತೆರಳಿದ್ದು ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ಬಂದಿಳಿಯಲಿದೆ. ಇಂದು ಇಡೀ ಆರ್ ಸಿಬಿ ತಂಡ ಅಹಮ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಮೆಂಟರ್ ದಿನೇಶ್ ಕಾರ್ತಿಕ್ ಬೆಂಗಳೂರು ರೆಡಿಯಾಗಿ ಎಂದಿದ್ದಾರೆ. ಇಡೀ ಬೆಂಗಳೂರೇ ಈಗ ಆರ್ ಸಿಬಿಯನ್ನು ಸ್ವಾಗತಿಸಲು ಕಾಯುತ್ತಿದೆ. ವಿಮಾನ ನಿಲ್ದಾಣದ ಸುತ್ತ ಮುತ್ತ ಬಿಗಿ ಭದ್ರತೆ ಒದಗಿಸಲಾಗಿದೆ. ಆಟಗಾರರು ನೇರವಾಗಿ ವಿಧಾನಸೌಧಕ್ಕೆ ತೆರಳಲಿದ್ದಾರೆ.
ಹೈದರಾಬಾದ್: ಐಪಿಎಲ್ 2025ರ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಬಹುನಿರೀಕ್ಷಿತ ವಿಜಯವನ್ನು ರಾಷ್ಟ್ರವು ಸಂಭ್ರಮಿಸಿದೆ. ಇದು ಕರ್ನಾಟಕ ಮಾತ್ರವಲ್ಲದೆ, ಭಾರತದಾದ್ಯಂತದ ಅಭಿಮಾನಿಗಳಿಗೆ ಹಬ್ಬದ ಸಂಭ್ರಮವನ್ನು ತಂದುಕೊಟ್ಟಿದೆ. RCB 18 ವರ್ಷಗಳಲ್ಲಿ ಮೊದಲ ಬಾರಿಗೆ ಟ್ರೋಫಿ ಎತ್ತಿದ ನಂತರ ಅಲ್ಲು ಅರ್ಜುನ್ ಅವರ ಮಗ ಅಲ್ಲು ಅಯಾನ್ ಅವರ ಭಾವನಾತ್ಮಕ ಪ್ರತಿಕ್ರಿಯೆಯು ಆನ್ಲೈನ್ನಲ್ಲಿ ನಿಜವಾಗಿಯೂ ಹೃದಯ ಮುಟ್ಟುವಂತಿದೆ. ನಿಷ್ಠಾವಂತ ಆರ್ಸಿಬಿ ಮತ್ತು ವಿರಾಟ್ ಕೊಹ್ಲಿ ಅಭಿಮಾನಿ ಅಯಾನ್ಗೆ ತನ್ನ ಭಾವನೆಗಳನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ.
ಬೆಂಗಳೂರು: ಐಪಿಎಲ್ ಕಪ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜ್ಯಕ್ಕೆ ಬಂದಿಳಿದಿದೆ. ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ತಂಡವನ್ನು ಅದ್ದೂರಿಯಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬರಮಾಡಿಕೊಂಡರು.ಇದಕ್ಕೂ ಮುನ್ನ ಮಾತನಾಡಿದ್ದ ಡಿಕೆಶಿ, ಆರ್ಸಿಬಿ ಹುಡುಗರು ನಮ್ಮ ಕರ್ನಾಟಕಕ್ಕೆ ಗೌರವ ಹಾಗೂ ಹೆಮ್ಮೆ ತಂದಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ ಎಂದು ಶುಭಾಶಯ ಕೋರಿದ್ದಾರೆ.ಅಹಮದಾಬಾದ್ನಲ್ಲಿ ಮಂಗಳವಾರ ನಡೆದ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿ ಆರ್ಸಿಬಿ ಮೊದಲ ಬಾರಿ ಕಪ್ ಗೆದ್ದಿತ್ತು. 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಬೆಂಗಳೂರು ತಂಡದ ಮೊದಲ ಬಾರಿ ಕಪ್ ಗೆದ್ದಿದೆ.
ಬೆಂಗಳೂರು: 18 ವರ್ಷಗಳ ಕಾಯುವಿಕೆಯ ಬಳಿಕ ಐಪಿಎಲ್ ಟ್ರೋಫಿಯನ್ನು ಆರ್ಸಿಬಿ ತಂಡವನ್ನು ಗೆದ್ದಿದೆ. ಅಭಿಮಾನಿಗಳ ಸಂಭ್ರಮ ಮೇರೆಮೀರಿದೆ. ಈ ಮಧ್ಯೆ ತಂಡದ ಮಾಜಿ ಮಾಲೀಕ, ಉದ್ಯಮಿ ವಿಜಯ್ ಮಲ್ಯ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್ನಲ್ಲಿ ಪಂಜಾಬ್ ವಿರುದ್ಧ 6 ರನ್ಗಳ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗಿದೆ. ನಾನು ಆರ್ಸಿಬಿಯನ್ನು ಸ್ಥಾಪಿಸಿದಾಗ ಬೆಂಗಳೂರಿಗೆ ಐಪಿಎಲ್ ಟ್ರೋಫಿ ಬರಬೇಕು ಎಂಬುದು ನನ್ನ ಕನಸಾಗಿತ್ತು. ಯುವಕನಾಗಿದ್ದ ಕಿಂಗ್ ಕೊಹ್ಲಿಯನ್ನು ಆಯ್ಕೆ ಮಾಡಿದ್ದೆ, ಅವರು 18 ವರ್ಷಗಳ ಕಾಲ ಆರ್ಸಿಬಿಯೊಂದಿಗೆ ಇದ್ದು ಚಾಂಪಿಯನ್ ಆಗಿದ್ದಾರೆ ಎಂದು ಆರ್ಸಿಬಿ ಗೆಲುವನ್ನು ಸಂಭ್ರಮಿಸಿರುವ ವಿಜಯ್ ಮಲ್ಯ ಬರೆದುಕೊಂಡಿದ್ದಾರೆ.
ಬೆಂಗಳೂರು: ಮುಂಜಾಗೃತ ಹಿನ್ನೆಲೆ ತೆರೆದ ಬಸ್ನಲ್ಲಿ ಆರ್ಸಿಬಿ ವಿಜಯೋತ್ಸವ ಇಲ್ಲ. ಆರ್ಸಿಬಿ ಆಟಗಾರರು ಬಸ್ಸಿನಲ್ಲಿ ಬಂದು ಬಸ್ಸಿನಲ್ಲಿ ಹೋಗುತ್ತಾರೆ ಎಂದು ಗೃಹಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಕೊಹ್ಲಿ ಹಾಗೂ ಆರ್ಸಿಬಿ ಆಟಗಾರರನ್ನು ಹತ್ತಿರದಿಂದ ನೋಡಬೇಕೆಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ವಿಧಾನಸೌಧದಲ್ಲಿ ಸಂಜೆ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆ ಗ್ರ್ಯಾಂಡ್ ಸ್ಟೆಪ್ ಬಳಿ ಸಿದ್ಧತೆ ವೀಕ್ಷಣೆ ಮಾಡಿದ ಬಳಿಕ ಪರಮೇಶ್ವರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಗೃಹ ಇಲಾಖೆ ಒಪ್ಪದ ಕಾರಣ ಪರೇಡ್ಗೆ ಬ್ರೇಕ್ ಹಾಕಲಾಗಿದೆ. ಪೊಲೀಸ್ ಕಮೀಷನರ್ ಪರೇಡ್ಗೆ ಒಪ್ಪಿಲ್ಲ. ವಿಧಾನಸೌಧ ಹಾಗೂ ಹೈಕೋರ್ಟ್ ಭದ್ರತೆ ದೃಷ್ಟಿಯಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮೂಡಲಗಿ: ಐಪಿಎಲ್ 2025ರ ಟ್ರೋಪಿಯನ್ನು ಆರ್ಸಿಬಿ ಗೆಲ್ಲುತ್ತಿದ್ದ ಹಾಗೆಯೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಆರ್ಸಿಬಿ ಅಭಿಮಾನಿ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಆರ್ಸಿಬಿ ಕಟ್ಟಾ ಅಭಿಮಾನಿಯಾಗಿದ್ದ ಮಂಜುನಾಥ ಈರಪ್ಪ ಕಂಬಾರ (28) ಸಾವಿಗೀಡಾದವರು. ಅವರಾದಿ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಕುಣಿಯುತ್ತಲೇ ಅವರು ಕುಸಿದು ಬಿದ್ದಿದ್ದಾನೆ. ಕೂಡಲೇ ಆತನ ಗೆಳೆಯರು ಹತ್ತಿರದ ಮಹಾಲಿಂಗಪೂರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಆತನನ್ನು ಉಳಿಸಿಕೊಳ್ಳಲು
ಬೆಂಗಳೂರು: ಐಪಿಎಲ್ ಚಾಂಪಿಯನ್ ಆಗಿರುವ ಆರ್ ಸಿಬಿ ತಂಡ ಇಂದು ಸಂಜೆ ವಿಧಾನಸೌಧದಿಂದ ಚಿನ್ನಸ್ವಾಮಿ ಮೈದಾನದವರೆಗೆ ಮೆರವಣಿಗೆಯಿರುತ್ತದೆ ಎಂದು ಅಭಿಮಾನಿಗಳು ಕಾದು ನಿಂತಿದ್ದಾರೆ. ಆದರೆ ಗೃಹಸಚಿವ ಪರಮೇಶ್ವರ್ ಅವರಿಗೆ ಶಾಕ್ ನೀಡಿದ್ದಾರೆ. ಐಪಿಎಲ್ ನಲ್ಲಿ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಇದೇ ಮೊದಲ ಬಾರಿಗೆ ಆರ್ ಸಿಬಿ ಕಪ್ ಗೆದ್ದಿದೆ. ಸಹಜವಾಗಿಯೇ ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಎದಿರುಗೊಳ್ಳಲು ಕಾದು ನಿಂತಿದ್ದಾರೆ. ಈಗಾಗಲೇ ಆರ್ ಸಿಬಿ ಇಂದು ಓಪನ್ ಮೆರವಣಿಗೆ ಇರುತ್ತದೆ ಎಂದು ಪ್ರಕಟಿಸಿತ್ತು.
ಮೈಸೂರು: ಜನ ಬೆಂಬಲವಿರುವ ಸಿಎಂ ಸಿದ್ದರಾಮಯ್ಯ ಅವರು ಇನ್ನೂ ಅಧಿಕಾರದಲ್ಲಿ 5 ವರ್ಷವೂ ಇರಬಹುದು, 10 ವರ್ಷಗಳೂ ಇರಬಹುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.ಸಿಎಂ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆ ಬಗ್ಗೆ ಮಾತನಾಡಿದ ಅವರು, . ಹೈಕಮಾಂಡ್ ಹಾಗೂ ಶಾಸಕರ ಬೆಂಬಲ ಸಿದ್ದರಾಮಯ್ಯ ಹಾಗೂ ನಮ್ಮ ಸರ್ಕಾರದ ಮೇಲಿದೆ. ಯಾವ ವಿಚಾರ ಯಾವಾಗ ನಿರ್ಧರಿಸಬೇಕು ಎಂಬುದು ಹೈಕಮಾಂಡ್ಗೆ ತಿಳಿದಿದೆ ಎಂದರು. ಇನ್ನೂ ಕಾಂಗ್ರೆಸ್ ಸರ್ಕಾರ 5 ವರ್ಷವೂ ಇರಬಹುದು. ಈ ಸಂಬಂಧ ನನ್ನನ್ನು ಹೆಚ್ಚು ಪ್ರಶ್ನೆ ಕೇಳಿ ಸಿಲುಕಿಸಲು ಯತ್ನಿಸಬೇಡಿ.
ಬೆಂಗಳೂರು: ಕನ್ನಡದ ಬಗ್ಗೆ ವಿವಾದಿತ ಹೇಳಿಕೆ ನೀಡಿದ ಕಮಲ್ ಹಾಸನ್ ಗೆ ಕನ್ನಡ ಪುಸ್ತಕ ಕೊಟ್ಟಿದ್ದು ಯಾಕೆ ಎಂಬ ಬಗ್ಗೆ ನಟಿ ರಂಜನಿ ರಾಘವನ್ ಸ್ಪಷ್ಟನೆ ನೀಡಿದ್ದಾರೆ. ಕಮಲ್ ಹಾಸನ್ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂಬುದು ವಿವಾದಕ್ಕೆ ಕಾರಣವಾಗಿದೆ. ಇದೀಗ ಕರ್ನಾಟಕದಲ್ಲಿ ಅವರ ಸಿನಿಮಾ ಥಗ್ ಲೈಫ್ ಗೆ ನಿಷೇಧದ ಭೀತಿಯೂ ಇದೆ. ಹೀಗಿರುವಾಗ ಕನ್ನಡಿಗರ ಕ್ಷಮೆಯನ್ನೂ ಕೇಳಲು ಅವರು ಸಿದ್ಧರಿಲ್ಲ. ಈ ವಿವಾದದ ನಡುವೆಯೇ ರಂಜನಿ ರಾಘವನ್ ತಾವು ಬರೆದ ಕತೆ ಡಬ್ಬಿ ಪುಸ್ತಕದ ಪ್ರತಿಯೊಂದನ್ನು ಕಮಲ್ ಹಾಸನ್ ಗೆ ನೀಡಿರುವ ಫೋಟೋ ಹಾಕಿ ಕಮಲ್ ಸರ್ ಗೆ ಕನ್ನಡ ಪುಸ್ತಕ ಎಂದು ಬರೆದುಕೊಂಡಿದ್ದರು.
ಬೆಂಗಳೂರು: ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿ ಆರ್ ಸಿಬಿ ಕಪ್ ಗೆಲ್ಲುತ್ತಿದ್ದಂತೇ ವಿಶ್ವಾದ್ಯಂತ ಈ ಒಂದು ಕನ್ನಡ ಸಾಲು ಈಗ ಮನೆ ಮಾತಾಗಿದೆ. ಅದುವೇ ಈ ಸಲ ಕಪ್ ನಮ್ದು. ಇಷ್ಟು ದಿನವೂ ಆರ್ ಸಿಬಿ ಫ್ಯಾನ್ಸ್ ಎಲ್ಲೇ ಹೋಗಲಿ ಈ ಸಲ ಕಪ್ ನಮ್ದೇ ಎಂಬ ಸ್ಲೋಗನ್ ಹೇಳುತ್ತಿದ್ದರು. ಆದರೆ ಈಗ ಕನ್ನಡ ಇದುವರೆಗೆ ಒಂದು ಅಕ್ಷರ ನುಡಿಯದವರ ಬಾಯಲ್ಲೂ ಇದೇ ಮಾತು ಕೇಳಿಬರುತ್ತಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ರಕ್ಷಿತಾ ಪ್ರೇಮ್ ಕೂಡಾ ಎಲ್ಲರ ಬಾಯಲ್ಲೂ ಕನ್ನಡದಲ್ಲಿ ಈ ಸಲ ಕಪ್ ನಮ್ದೇ ಎಂದು ಕೇಳಲು ಏನೋ ಒಂಥರಾ ಹೆಮ್ಮೆ ಎಂದಿದ್ದಾರೆ.
ಬೆಂಗಳೂರು: ಚಿನ್ನದ ದರ ಖರೀದಿದಾರರಿಗೆ ಇಂದೂ ಶಾಕಿಂಗ್ ಸುದ್ದಿ. ಇಂದು ಮತ್ತೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಚಿನ್ನದ ದರ ಸದ್ಯಕ್ಕತೆ ಇಳಿಕೆಯಾಗುವ ಲಕ್ಷಣವಿಲ್ಲ ಎಂದು ಈಗಿನ ಟ್ರೆಂಡ್ ಗಮನಿಸಿದರೆ ಪಕ್ಕಾ ಆಗುತ್ತದೆ. ಕಳೆದ ಎರಡು ದಿನಗಳಿಂದ ಚಿನ್ನದ ದರ ಕೊಂಚ ಮಟ್ಟಿಗೆ ಏರಿಕೆಯಾಗುತ್ತಲೇ ಇದೆ. ಇಂದೂ ಚಿನ್ನದ ದರ ಭಾರೀ ಏರಿಕೆಯಾಗಿದ್ದು ಲಕ್ಷದ ಗಡಿ ತಲುಪಿದೆ. ನಿನ್ನೆ ಪರಿಶುದ್ಧ ಚಿನ್ನದ ದರ 99 ಸಾವಿರ ಗಡಿಗೆ ಬಂದಿತ್ತು. ಇಂದು 99, 845 ರೂ.ಗೆ ಬಂದು ನಿಂತಿದೆ.
ಬೆಂಗಳೂರು: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಹಣ ಮೂರು ತಿಂಗಳಿನಿಂದ ಬಂದಿಲ್ಲ ಎಂದು ಜನ ಆಕ್ರೋಶಗೊಂಡಿದ್ದಾರೆ. ಈ ನಡುವೆ ಸ್ವತಃ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಪ್ ಡೇಟ್ ನೀಡಿದ್ದಾರೆ. ಫೆಬ್ರವರಿ ತಿಂಗಳಿನಿಂದ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಬಹುತೇಕ ಸಚಿವರು ಕಾರಣ ಕೇಳಿದರೆ ಒಂದೊಂದು ಸಬೂಬು ಹೇಳುತ್ತಲೇ ಇದ್ದಾರೆ. ಆದರೆ ಹಣ ಮಾತ್ರ ಇನ್ನೂ ಬಂದಿಲ್ಲ ಎಂದು ಮಹಿಳೆಯರು ಹಿಡಿ ಶಾಪ ಹಾಕುತ್ತದ್ದಾರೆ.
ಬೆಂಗಳೂರು: ಐಪಿಎಲ್ ನಲ್ಲಿ ಅಭಿಮಾನಿಗಳಿಗೆ ಆರ್ ಸಿಬಿ ಕ್ರೇಜ್ ಎಷ್ಟೆಂದರೆ ನಿನ್ನೆ ನಟಿ ವೈಷ್ಣವಿ ಗೌಡ ತಮ್ಮ ಮದುವೆ ಸಂಗೀತ್ ಕಾರ್ಯಕ್ರಮದ ನಡುವೆಯೂ ಆರ್ ಸಿಬಿ ಮ್ಯಾಚ್ ನೋಡಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋವನ್ನು ಅವರೇ ಹಂಚಿಕೊಂಡಿದ್ದಾರೆ. ವೈಷ್ಣವಿ ಗೌಡ ಮೊದಲಿನಿಂದಲೂ ಕ್ರಿಕೆಟ್ ಪ್ರೇಮಿ. ಅದರಲ್ಲೂ ಆರ್ ಸಿಬಿ ಅಪ್ಪಟ ಅಭಿಮಾನಿ. ಈಗ ಅವರು ಮದುವೆ ಸಂಭ್ರಮದಲ್ಲಿದ್ದಾರೆ. ನಿನ್ನೆ ಅವರ ಮದುವೆ ಸಂಗೀತ್ ಕಾರ್ಯಕ್ರಮವಿತ್ತು. ಈ ವೇಳೆ ದೊಡ್ಡ ಪರದೆ ಮೇಲೆ ಆರ್ ಸಿಬಿ ಮ್ಯಾಚ್ ಪ್ರದರ್ಶನವೂ ಇತ್ತು.
ಬೆಂಗಳೂರು: ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದ ಆರ್ ಸಿಬಿ ಚಾಂಪಿಯನ್ ಆದ ಬಳಿಕ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಭಾಷಣ ಮಾಡಿದ್ದಾರೆ. ಈ ವೇಳೆ ಬೆಂಗಳೂರಿನಲ್ಲಿ ಹೇಗಿರುತ್ತೋ ನೋಡಕ್ಕೆ ಕಾಯ್ತಿದ್ದೀನಿ ಎಂದು ಹೇಳಿಕೊಂಡಿದ್ದಾರೆ. ಆರ್ ಸಿಬಿ ಕಪ್ ಗೆದ್ದು ಮೈದಾನದಲ್ಲಿ ಸೆಲೆಬ್ರೇಷನ್ ನಡೆದ ಬಳಿಕ ಎಬಿಡಿ ವಿಲಿಯರ್ಸ್ ಜೊತೆ ಕೊಹ್ಲಿ ಡ್ರೆಸ್ಸಿಂಗ್ ರೂಂಗೆ ಬಂದರು. ಬಂದವರೇ ಆಟಗಾರರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ರಜತ್ ಪಾಟೀದಾರ್ ಕ್ಯಾಪ್ಟನ್ಸಿ ಬಗ್ಗೆ ಹೊಗಳಿದರು.
ನವದೆಹಲಿ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 20 ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗಲಿದೆ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿವರ್ಷ ರೈತರಿಗೆ ಮೂರು ಕಂತುಗಳಲ್ಲಾಗಿ 6,000 ರೂ. ಆರ್ಥಿಕ ಸಹಾಯ ನೀಡುತ್ತದೆ. ಇದು ನೇರವಾಗಿ ಫಲಾನುಭವಿ ರೈತರ ಖಾತೆಗೆ ಬಂದು ಸೇರುತ್ತದೆ. ಈಗಾಗಲೇ 19 ಕಂತುಗಳ ಹಣ ರೈತರ ಖಾತೆಗೆ ಜಮೆ ಆಗಿದೆ. ಇದೀಗ 20 ನೇ ಕಂತಿನ ಹಣಕ್ಕಾಗಿ ಫಲಾನುಭವಿಗಳು ಎದಿರು ನೋಡುತ್ತಿದ್ದಾರೆ.
ಬೆಂಗಳೂರು: ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ಸೋಲಿಸಿ ಚಾಂಪಿಯನ್ ಆಗಿರುವ ಆರ್ ಸಿಬಿ ಆಟಗಾರರು ಕಪ್ ಸಮೇತ ಇಂದು ಬೆಂಗಳೂರಿನಲ್ಲಿ ಮೆರವಣಿಗೆ ಮಾಡಿ ಅಭಿಮಾನಿಗಳ ಜೊತೆಗೆ ಸೆಲೆಬ್ರೇಷನ್ ಮಾಡಲಿದ್ದಾರೆ. ಎಲ್ಲೆಲ್ಲಿ ಮೆರವಣಿಗೆಯಾಗುತ್ತದೆ ಇಲ್ಲಿದೆ ವಿವರ. ನಿನ್ನೆ ಆರ್ ಸಿಬಿ ಗೆಲ್ಲುತ್ತಿದ್ದಂತೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅಭಿಮಾನಿಗಳು ಮಧ್ಯರಾತ್ರಿ ರಸ್ತೆಗಿಳಿದು ಸಂಭ್ರಮಿಸಿದ್ದರು. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಇರುತ್ತಿದ್ದ ಸಂಭ್ರಮ ನಿನ್ನೆ ಇತ್ತು. ಆಟಗಾರರು ಮಾತ್ರವಲ್ಲ, ಅಭಿಮಾನಿಗಳು ಕಳೆದ 17 ವರ್ಷಗಳಿಂದ ಈ ಕಪ್ ಗಾಗಿ ಕಾದಿದ್ದರು. ಅದೀಗ ನೆರವೇರಿದೆ.
ಬೆಂಗಳೂರು: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಕಪ್ ಗೆಲ್ಲುತ್ತಿದ್ದಂತೇ ಆರ್ ಸಿಬಿ ಫ್ಯಾನ್ಸ್ ಈಗ ಅಣ್ಣ ಎಲ್ಲವ್ನೋ ಎಂದು ಅಂಬಟಿ ರಾಯುಡುಗಾಗಿ ಹುಡುಕಾಡುತ್ತಿದ್ದಾರೆ. ಸದಾ ಆರ್ ಸಿಬಿಯನ್ನು ಟೀಕಿಸುತ್ತಾ ಬಂದಿದ್ದ ಸಿಎಸ್ ಕೆ ಮಾಜಿ ಆಟಗಾರ, ಕಾಮೆಂಟೇಟರ್ ಅಂಬಟಿ ರಾಯುಡು ಈ ಸೀಸನ್ ನ ಆರಂಭಕ್ಕೂ ಮುನ್ನವೂ ಕುಹುಕವಾಡಿದ್ದರು. ಆರ್ ಸಿಬಿಯಂತಹ ತಂಡ ಟೂರ್ನಿಯಲ್ಲಿ ಮನರಂಜನೆಗಾಗಿ ಇರಬೇಕು. ಆದ್ರೆ ಕಪ್ ಯಾವತ್ತೂ ಗೆಲ್ಲಕ್ಕಾಗಲ್ಲ ಎಂದು ವ್ಯಂಗ್ಯ ಮಾಡಿದ್ದರು.
ಅಹಮ್ಮದಾಬಾದ್: ಆರ್ ಸಿಬಿ ಮೊದಲ ಬಾರಿಗೆ ಐಪಿಎಲ್ ಕಪ್ ಗೆಲ್ಲುತ್ತಿದ್ದಂತೇ ಎಲ್ಲರಿಗಿಂತ ಹೆಚ್ಚು ಭಾವುಕರಾದವರು, ಸಂಭ್ರಮಪಟ್ಟವರು ವಿರಾಟ್ ಕೊಹ್ಲಿ. ಅವರು ಎರಡು ಮಕ್ಕಳ ತಂದೆ ಎಂದರೆ ಯಾರಾದರೂ ನಂಬಬಹುದೇ ಎಂಬಂತಿತ್ತು ಅವರ ವರ್ತನೆ. ಫನ್ನಿ ವಿಡಿಯೋ ಇಲ್ಲಿದೆ ನೋಡಿ. ಐಪಿಎಲ್ ಗೆಲ್ಲುತ್ತಿದ್ದಂತೇ ಕೊಹ್ಲಿ ಭಾವುಕರಾಗಿ ಮೈದಾನದಲ್ಲೇ ಕಣ್ಣೀರು ಹಾಕಿದ್ದರು. ಬಳಿಕ ತಮ್ಮ ಸಹ ಆಟಗಾರರನ್ನು, ಗೆಳೆಯ ಎಬಿಡಿ ವಿಲಿಯರ್ಸ್ ನನ್ನು ತಬ್ಬಿ ಸಂಭ್ರಮಿಸಿದ್ದರು. ಪತ್ನಿ ಅನುಷ್ಕಾರನ್ನು ಓಡೋಡಿ ಹೋಗಿ ತಬ್ಬಿಕೊಂಡರು. ಆದರೆ ರವಿಶಾಸ್ತ್ರಿ ಅವರನ್ನು ತಬ್ಬಿಕೊಳ್ಳಲು ಓಡಿದ ರೀತಿ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದೆ.
ಅಹಮ್ಮದಾಬಾದ್: ಐಪಿಎಲ್ 2025 ರ ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ ಆರ್ ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇಷ್ಟು ವರ್ಷಗಳಿಂದಲೂ ಇದೇ ತಂಡಕ್ಕೆ ನಿಷ್ಠರಾಗಿರುವುದಕ್ಕೆ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯವನ್ನು 6 ರನ್ ಗಳಿಂದ ಗೆದ್ದ ಆರ್ ಸಿಬಿ ಮೊದಲ ಬಾರಿಗೆ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿತು. 2008 ರಿಂದ ಇಲ್ಲಿಯವರೆಗೂ ಕೊಹ್ಲಿ ಆರ್ ಸಿಬಿ ತಂಡದ ಪರವಾಗಿಯೇ ಆಡಿದ್ದಾರೆ. ಅವರು ಇದುವರೆಗೆ ಬೇರೆ ತಂಡದ ಪರ ಐಪಿಎಲ್ ಆಡಿದ್ದಿಲ್ಲ. ಅವರ ನಿಷ್ಠೆಗಾದರೂ ಈ ಸಲ ಕಪ್ ನಮ್ದಾಗಬೇಕು ಎಂದು ಆಟಗಾರರು ಫ್ಯಾನ್ಸ್, ಬಯಸಿದ್ದರು.
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ವಾರ ಮಳೆಯ ಅಬ್ಬರವಿತ್ತು. ಆದರೆ ಈ ವಾರ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಇಂದು ಈ ಒಂದು ಜಿಲ್ಲೆಯಲ್ಲಿ ಮಾತ್ರ ಮಳೆಯಿರಲಿದೆ, ಉಳಿದೆಡೆ ಹವಾಮಾನ ಹೇಗಿರಲಿದೆ ಇಲ್ಲಿದೆ ವಿವರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಾರ ಪ್ರವಾಹ ಸ್ಥಿತಿಯಿತ್ತು. ಈ ವಾರ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಹಾಗಂತ ಮಳೆ ಮುಂದುವರಿದೇ ಇದೆ. ನಿನ್ನೆಯೂ ಹಲವೆಡೆ ಮಳೆಯಾಗಿತ್ತು. ಇಂದೂ ಮಳೆ ಮುಂದುವರಿಯಲಿದೆ. ಇಂದೂ ಈ ಜಿಲ್ಲೆಗೆ ಮಾತ್ರ ಭಾರೀ ಮಳೆಯಾಗುವ ಸೂಚನೆಯಿದೆ. ಮುಂಗಾರು ಮಳೆ ಈ ಬಾರಿ ಬೇಗನೇ ಆರಂಭವಾಗಿತ್ತು. ಜೊತೆಗೆ ವಾಯುಭಾರ ಕುಸಿತವೂ ಇದ್ದಿದ್ದರಿಂದ ಭಾರೀ ಮಳೆಯಾಗಿತ್ತು.
ಜಿವನದಲ್ಲಿ ಸಾಕಷ್ಟು ಸಂಕಷ್ಟಗಳು ಎದುರಾಗುವುದು ಸಹಜ. ಅದೆಲ್ಲವನ್ನೂ ನಿವಾರಣೆ ಮಾಡಲು ಗಣೇಶನ ಪೂಜೆ, ಪ್ರಾರ್ಥನೆ ಮಾಡಬೇಕು. ಸಂಕಷ್ಟ ನಾಶನ ಗಣೇಶ ಸ್ತೋತ್ರ ಇಲ್ಲಿದೆ ನೋಡಿ.ನಾರದ ಉವಾಚ |ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್ |ಭಕ್ತಾವಾಸಂ ಸ್ಮರೇನ್ನಿತ್ಯಂ ಆಯುಷ್ಕಾಮಾರ್ಥಸಿದ್ಧಯೇ || 1 ||ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್ |ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್ || 2 ||ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ |ಸಪ್ತಮಂ ವಿಘ್ನರಾಜಂ ಚ ಧೂಮ್ರವರ್ಣಂ ತಥಾಷ್ಟಕಮ್ || 3 ||ನವಮಂ ಬಾಲಚಂದ್ರಂ ಚ ದಶಮಂ ತು ವಿನಾಯಕಮ್ |ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್ || 4 ||
ಅಹಮದಾಬಾದ್: ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಕನಸು ಕೊನೆಗೂ ನನಸಾಗಿದೆ. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ವಿರಾಟ್ಗೆ ಈತನಕ ಐಪಿಎಲ್ ಕಪ್ ಒಲಿದಿರಲಿಲ್ಲ. ಆದರೆ, ಈ ಬಾರಿ ಫೈನಲ್ನಲ್ಲಿ ಜಯಿಸುತ್ತಿದ್ದಂತೆ ವಿರಾಟ್ ಅವರು ಮೈದಾನದಲ್ಲೇ ಆನಂದಬಾಷ್ಪ ಸುರಿಸಿದರು. ಪಂದ್ಯ ಮುಗಿಯುವವರೆಗೆ ಭಾವನೆಗಳನ್ನು ಹಿಡಿದಿಟ್ಟುಕೊಂಡಿದ್ದ ವಿರಾಟ್ ಕೊಹ್ಲಿ ಅವರು ಗೆಲುವು ಸಾಧಿಸುತ್ತಿದ್ದಂತೆ ಮೈದಾನದಲ್ಲೇ ಕುಳಿತು ಕಣ್ಣೀರು ಹಾಕಿದರು. ಉಳಿದ ಆಟಗಾರರು ಅವರು ಅಭಿನಂದಿಸಿದರು. ಪತ್ನಿ ಅನುಷ್ಕಾ ಕೂಡಾ ವಿರಾಟ್ ಅವರನ್ನು ಅಭಿನಂದಿಸಿದರು. 18 ವರ್ಷಗಳಿಂದ ಆರ್ಸಿಬಿ ತಂಡಕ್ಕೆ ಆಡುತ್ತಿರುವ ವಿರಾಟ್ ಕೊನೆಗೂ ಐಪಿಎಲ್ ಕಪ್ ಅನ್ನು ಹಿಡಿದು ಸಂಭ್ರಮಿಸಿದರು.
ಅಹಮ್ಮದಾಬಾದ್: ಆರ್ ಸಿಬಿ ಕಪ್ ಗೆಲ್ಲಲು ಲಾಯಕ್ಕಲ್ಲ ಎಂದವರಿಗೆ, ವಿಶ್ವದ ಯಾವುದೇ ಮೂಲೆಗೆ ಹೋದರೂ ಈ ಸಲ ಕಪ್ ನಮ್ದೇ ಎಂದು ಪ್ರೋತ್ಸಾಹಿಸುತ್ತಿದ್ದ ಅಭಿಮಾನಿಗಳಿಗೆ, ನಾನಿದ್ದಾಗ ಒಮ್ಮೆಯಾದರೂ ಕಪ್ ಗೆಲ್ಲಬೇಕು ಎಂದು ಹಂಬಲಿಸುತ್ತಿದ್ದ ವಿರಾಟ್ ಕೊಹ್ಲಿಗೆ ಈ ಕಪ್ ಅರ್ಪಣೆ. ಹೌದು.. ಈ ಸಲ ಕಪ್ ನಮ್ದೇ.. ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರನ್ ಗಳಿಂದ ಸೋಲಿಸಿದ ಆರ್ ಸಿಬಿ ಈ ಬಾರಿ ಕಪ್ ನಮ್ದೇ ಎಂದು ಗೆದ್ದು ಬೀಗಿದೆ. ಇದರೊಂದಿಗೆ 18 ವರ್ಷಗಳ ಕನಸು ನನಸಾಗಿದೆ.
ಅಹಮಾದಾಬಾದ್: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 7ವಿಕೆಟ್ ಕಳೆದುಕೊಂಡು 190ರನ್ ಗಳಿಸಿ, ಪಂಜಾಬ್ಗೆ 191 ರನ್ಗಳ ಬಿಗ್ ಟಾರ್ಗೆಟ್ ನೀಡಿದೆ. ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ಮೆಚ್ಚುಗೆ ಗಳಿಸಿತು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಆಯ್ದು, ಆರ್ಸಿಬಿಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಸಾಲ್ಟ್ ಬೇಗನೇ ಪೆವೆಲಿಯನ್ ಕಡೆ ಮರಳಿದ್ದರಿಂದ ಆರ್ಸಿಬಿಗೆ ಆರಂಭಿಕ ಆಘಾತ
ಅಹಮ್ಮದಾಬಾದ್: ಐಪಿಎಲ್ 2025 ರ ಫೈನಲ್ ಪಂದ್ಯದಲ್ಲಿ ಇಂದು ಟಾಸ್ ಸೋತು ಪಂಬಾಜ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಆರ್ ಸಿಬಿ ಬ್ಯಾಟಿಂಗ್ ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ವಿರಾಟ್ ಕೊಹ್ಲಿಯ ನಿಧಾನಗತಿ ಇನಿಂಗ್ಸ್ ವಿರುದ್ಧ ಅಭಿಮಾನಿಗಳು ಸಿಡಿದೆದ್ದಿದ್ದಾರೆ. ಅಹಮ್ಮದಾಬಾದ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವ ತಂಡಕ್ಕೆ ಅವಕಾಶ ಹೆಚ್ಚಿದೆ. ಆದರೆ ಆರ್ ಸಿಬಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಬೇಕಾಗಿ ಬಂದಿರುವುದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದರು.