Shorts

ಇಂದು ಸೋಮವಾರವಾಗಿದ್ದು ಶಿವನಿಗೆ ವಿಶೇಷವಾದ ದಿನವಾಗಿದೆ. ಅದರಲ್ಲೂ ಶಿವರಾತ್ರಿಯ ಸಂದರ್ಭ. ಈ ದಿನ ಶಿವನನ್ನು ಪೂಜೆ ಮಾಡುವಾಗ ರುದ್ರಾಷ್ಟಕಂ ಮಂತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.ನಮಾಮೀಶಮೀಶಾನ ನಿರ್ವಾಣರೂಪಂವಿಭುಂ ವ್ಯಾಪಕಂ ಬ್ರಹ್ಮವೇದ-ಸ್ವರೂಪಮ್ ।ನಿಜಂ ನಿರ್ಗುಣಂ ನಿರ್ವಿಕಲ್ಪಂ ನಿರೀಹಂಚಿದಾಕಾಶ-ಮಾಕಾಶವಾಸಂ ಭಜೇಽಹಮ್ ॥ 1 ॥ ನಿರಾಕಾರಮೋಂಕಾರಮೂಲಂ ತುರೀಯಂಗಿರಾಜ್ಞಾನಗೋತೀತಮೀಶಂ ಗಿರೀಶಮ್ ।ಕರಾಲಂ ಮಹಾಕಾಲಕಾಲಂ ಕೃಪಾಲುಂಗುಣಾಗಾರ-ಸಂಸಾರಪಾರಂ ನತೋಽಹಮ್ ॥ 2 ॥ತುಷಾರಾದ್ರಿ-ಸಂಕಾಶಗೌರಂ ಗಭೀರಂಮನೋಭೂತಕೋಟಿ-ಪ್ರಭಾಸೀ ಶರೀರಮ್ ।ಸ್ಫುರನ್ಮೌಲಿಕಲ್ಲೋಲಿನೀ ಚಾರುಗಂಗಾಲಸದ್ಭಾಲ-ಬಾಲೇಂದು ಕಂಠೇ ಭುಜಂಗಮ್ ॥ 3 ॥ಚಲತ್ಕುಂಡಲಂ ಶುಭ್ರನೇತ್ರಂ ವಿಶಾಲಂ [ಭೄಸುನೇತ್ರಂ ವಿಶಾಲಂ]ಪ್ರಸನ್ನಾನನಂ ನೀಲಕಂಠಂ ದಯಾಲುಮ್ ।ಮೃಗಾಧೀಶ-ಚರ್ಮಾಂಬರಂ ಮುಂಡಮಾಲಂಪ್ರಿಯಂ ಶಂಕರಂ ಸರ್ವನಾಥಂ ಭಜಾಮಿ ॥ 4 ॥

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ‌ಮೇಲಿನ ಚರ್ಚೆ ಮತ್ತು ಮತದಾನವನ್ನು ಮಾರ್ಚ್ 9 ರಂದು ನಡೆಸಲು ವೇದಿಕೆ ಸಜ್ಜಾಗಿದೆ. ಮಾರ್ಚ್ 9 ರಿಂದ ಏಪ್ರಿಲ್ 2 ರವರೆಗೆ ನಡೆಯಲಿರುವ ಬಜೆಟ್ ಅಧಿವೇಶನದ ಎರಡನೇ ಹಂತವು ಅತ್ಯಂತ ಕುತೂಹಲಕಾರಿ ಆಗಿರಲಿದೆ. ಏಕೆಂದರೆ ಹಲವಾರು ಪ್ರಮುಖ ಕಾನೂನುಗಳು ಮತ್ತು ನಿರ್ಣಾಯಕ ಮಸೂದೆಗಳನ್ನು ಚರ್ಚೆ ಮತ್ತು ಅಂಗೀಕಾರಕ್ಕಾಗಿ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾನುವಾರ ತಿಳಿಸಿದ್ದಾರೆ.ವಿರೋಧ ಪಕ್ಷಗಳು ಅಧಿವೇಶನದ ಮೊದಲ ಹಂತದಲ್ಲಿ ಮಾಡಿದಂತೆ ಪ್ರತಿಭಟನೆಯನ್ನು ಮುಂದುವರಿಸಿದರೆ, ಅದು ಅಂತಿಮವಾಗಿ ಅವರಿಗೆ ನಷ್ಟ ಎಂದು ಕಿರಣ್ ರಿಜಿಜು ಎಚ್ಚರಿಸಿದ್ದಾರೆ.

ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಅಶ್ಲೀಲ ಹೇಳಿಕೆ ನೀಡಿದ್ದ ಡಿಎಂಕೆ ಪಕ್ಷದ ಅಮಾನತುಗೊಂಡ ನಾಯಕ ಶಿವಾಜಿ ಕೃಷ್ಣಮೂರ್ತಿಗೆ ಸಂಕಷ್ಟ ಎದುರಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಶಿವಾಜಿ ಕೃಷ್ಣಮೂರ್ತಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಶಿವಾಜಿ ಕೃಷ್ಣಮೂರ್ತಿ ಅವರು ರಾಜ್ಯಪಾಲ ಆರ್‌.ಎನ್‌. ರವಿ, ಬಿಜೆಪಿ ನಾಯಕಿ ಖುಷ್ಬು ಸುಂದರ್‌, ಅಣ್ಣಾಮಲೈ ಹಾಗೂ ಎಐಎಡಿಎಂಕೆ ಮುಖಂಡ ಪಳನಿಸ್ವಾಮಿ ವಿರುದ್ಧಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಸಂಬಂಧ ರಾಜ್ಯಪಾಲರು, ಬಿಜೆಪಿ ನಾಯಕರು ಸೇರಿ ಮೂರು ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು.ಎಗ್ಮೋರ್ ನ್ಯಾಯಾಲಯ ಮೂರು ಪ್ರಕರಣಗಳಲ್ಲಿ ಶಿವಾಜಿ ಕೃಷ್ಣಮೂರ್ತಿಗೆ ₹20,000 ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈಗಾಗಲೇ ಅನುಭವಿಸಿರುವ ನ್ಯಾಯಾಂಗ ಬಂಧನಾವಧಿಯನ್ನು ಶಿಕ್ಷೆಯಲ್ಲಿ ಕಡಿತಗೊಳಿಸಲಾಗುತ್ತದೆ.

ಮಂಡ್ಯ: ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಬ್ಯಾಸ್‌ ಬೀಸುತ್ತಿರುವ ಮಂಡ್ಯ ಕಾಂಗ್ರೆಸ್‌ ಶಾಸಕ ಗಣಿಗ ರವಿಕುಮಾರ್ ಅವರು, ನಮ್ಮದು ಐರ್ಲೆಂಡ್ ಟೀಂ ಅಲ್ಲ, ಬಲಿಷ್ಠ ಭಾರತ ಟೀಂ ಎಂದು ರಾಜ್ಯ ರಾಜಕಾರಣವನ್ನು ಭಾರತದ ಕ್ರಿಕೆಟ್ ಟೀಂಗೆ ಹೋಲಿಸಿದರು. ಡಿಕೆಶಿ ರಾಜಕಾರಣವನ್ನು ಅರೆದು ಕುಡಿದಿದ್ದಾರೆ. ಯಾವಾಗ, ಯಾವ ಪಾನ್ ಮೂ ಮಾಡಿದ್ರೆ ಗೇಮ್ ಗೆಲ್ಲಬಹುದು ಅಂತ ಗೊತ್ತಿದೆ. ರಾಜಕೀಯ ತಂತ್ರಗಾರಿಕೆ, ಚಾಣಾಕ್ಷತನ ಅವರಿಗಿದೆ ಎಂದು ಹೇಳಿದರು.ಗೆಲ್ಲುವ ಬುದ್ಧಿವಂತಿಕೆ ಇರೋದಕ್ಕೆ ಸೈಲೆಂಟಾಗಿ ಕಾಯಿನ್ ಮೂ ಮಾಡುತ್ತಿದ್ದಾರೆ. ರಾಜಕಾರಣ ಅಂದಮೇಲೆ ಆಟ ಇರಲೇಬೇಕು. ಆಟವನ್ನು ಬಿಟ್ಟು ಬಿಡಲು ಆಗಲ್ಲ. ನಮ್ಮದು ಐರ್ಲೆಂಡ್ ಟೀಂ ಅಲ್ಲ, ಬಲಿಷ್ಠ ಭಾರತ ಟೀಂ ಎಂದು ಡಿಕೆಶಿ ಟೀಂ ಅನ್ನು ಭಾರತದ ಕ್ರಿಕೆಟ್ ಟೀಂಗೆ ಹೋಲಿಸಿದರು.

ನವದೆಹಲಿ: ಅಮೆರಿಕದಲ್ಲಿ ಭಾರತೀಯ ಮೂಲದವರ ಸಾವಿನ ಸರಣಿ ಮುಂದುವರೆದಿದೆ. ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕ ಮೂಲದ ಸಾಕೇತ್‌ ಶ್ರೀನಿವಾಸಯ್ಯ ನಿಗೂಢವಾಗಿ ಸಾವನ್ನಪ್ಪಿದ್ದಾರೆ.ಕಳೆದ ಆರು ದಿನಗಳಿಂದ 22 ವರ್ಷದ ಸಾಕೇತ್‌ ಶ್ರೀನಿವಾಸಯ್ಯ ನಾಪತ್ತೆಯಾಗಿದ್ದರು. ಅವರು ಕಳೆದ ಸೋಮವಾರರಂದು ಬರ್ಕ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಿಂದ ಒಂದು ಕಿ.ಮೀ. ದೂರದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಆರು ದಿನಗಳ ಬಳಿಕ, 22 ವರ್ಷದ ಕರ್ನಾಟಕ ಮೂಲದ ಭಾರತೀಯ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಕರ್ನಾಟಕದ ಸಾಕೇತ್ ಶ್ರೀನಿವಾಸಯ್ಯ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಬರ್ಕ್ಲಿಯಲ್ಲಿ ರಾಸಾಯನಿಕ ಮತ್ತು ಬಯೋಮಾಲಿಕ್ಯುಲರ್ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದರು. ಅವರು ಫೆಬ್ರವರಿ 9 ರಂದು ಕಾಣೆಯಾಗಿದ್ದರು.

ಢಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಳಿಕ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಮುಖಂಡ ತಾರಿಕ್ ರಹ್ಮಾನ್ ಪ್ರಧಾನಿಯಾಗುವುದು ಖಚಿತವಾಗಿದೆ. ಅವರು ಫೆ.17ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಪ್ರಾದೇಶಿಕ ಮುಖಂಡರನ್ನು ಆಹ್ವಾನಿಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ನೂತನ ಸರ್ಕಾರದ ಉದ್ಘಾಟನೆಗೆ ನೆರೆಯ ರಾಷ್ಟ್ರದ ನಾಯಕರನ್ನು ಆಹ್ವಾನಿಸಲಾಗುತ್ತಿದೆ ಎಂದು ತಾರಿಕ್ ಹೇಳಿಕೆ ನೀಡಿದ ಬೆನ್ನಲ್ಲೇ, ಶನಿವಾರ ತಡರಾತ್ರಿ ಭಾರತಕ್ಕೆ ಈ ಆಮಂತ್ರಣವನ್ನು ನೀಡಲಾಗಿದೆ.ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವುದನ್ನು ಸರಿಪಡಿಸಲು ಭಾರತ ಆದ್ಯತೆ ನೀಡಲಿದ್ದರೂ, ಬಾಂಗ್ಲಾದೇಶ ವಿಚಾರದಲ್ಲಿ ಧಾವಂತದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಬೆಳವಣಿಗೆಯ ಮಾಹಿತಿ ಇರುವ ಉನ್ನತ ಅಧಿಕಾರಿಗಳು ವಿವರಿಸಿದ್ದಾರೆ.

ಕೊಲಂಬೊ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಇಂದು ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ‘ಎ’ ಗುಂಪಿನ ಪಂದ್ಯಕ್ಕೆ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ರವಿವಾರ ನಡೆಯಲಿದೆ. ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ–20 ವಿಶ್ವಕಪ್ ಪಂದ್ಯಕ್ಕೆ ಗುಡುಗು ಸಹಿತ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಭಾನುವಾರ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಗಳು ಲಭಿಸಿವೆ. ಮಧ್ಯಾಹ್ನ ಹಾಗೂ ಸಂಜೆ ಮಳೆಯಾಗುವ ಸಾಧ್ಯತೆಯು ಸುಮಾರು 55ರಿಂದ 60 ಪ್ರತಿಶತದಷ್ಟು ಇದೆ.ಹಲವು ಪ್ರಹಸನಗಳ ಬಳಿಕ ಭಾರತ–ಪಾಕ್‌ ಪಂದ್ಯ ನಡೆಯುತ್ತಿದೆ. ಬಾಂಗ್ಲಾದೇಶ ತಂಡವನ್ನು ಟೂರ್ನಿಯಿಂದ ಹೊರಹಾಕಿದ್ದನ್ನು ವಿರೋಧಿಸಿ ಪಾಕ್‌ ತಂಡವು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿತ್ತು.

ಮುಂಬೈ: ಮಹಾರಾಷ್ಟ್ರದ ಮುಲುಂಡ್‌ನ ಎಲ್‌ಬಿಎಸ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮುಂಬೈ ಮೆಟ್ರೋ ಪಿಲ್ಲರ್‌ನ ಒಂದು ಭಾಗವು ಶನಿವಾರ ಕುಸಿದು ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಮೃತರು ಮತ್ತು ಗಾಯಾಳುಗಳು ಜಾನ್ಸನ್ ಮತ್ತು ಜಾನ್ಸನ್ ಕಂಪನಿ ಬಳಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಪಿಲ್ಲರ್‌ನ ಭಾಗವು ಅವರ ಮೇಲೆ ಕುಸಿದಿದೆ.ಮುಂಬೈ ಪೊಲೀಸರು, ಮೆಟ್ರೋ ಸಿಬ್ಬಂದಿ, ಎಂಎಫ್‌ಬಿ, ವಾರ್ಡ್ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್ ಸೇವೆಗಳು ಸೇರಿದಂತೆ ತುರ್ತು ಪ್ರತಿಕ್ರಿಯೆ ತಂಡಗಳು ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಅವಶೇಷಗಳನ್ನು ತೆರವುಗೊಳಿಸಲು ಸ್ಥಳಕ್ಕೆ ಧಾವಿಸಿದವು.ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮೃತರನ್ನು ರಾಮಧನ್ ಯಾದವ್ ಎಂದು ಗುರುತಿಸಿದ್ದು, ಮೂವರು

ಬೆಂಗಳೂರು: ಭಾನುವಾರ ನಾಡಿನಾದ್ಯಂತ ಮಹಾಶಿವರಾತ್ರಿಯ ಆಚರಣೆಯನ್ನು ಸಂಭ್ರಮದೊಂದಿಗೆ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ‌ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಭಾನುವಾರದಂದು ಸಂಪೂರ್ಣವಾಗಿ ಮಾಂಸ ಮಾರಾಟವನ್ನು ನಿಷೇಧ ಮಾಡಲಾಗಿದೆ.ಈ ಕುರಿತು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪಶುಪಾಲನೆ ವಿಭಾಗದ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಆದೇಶದ ಪ್ರತಿಯನ್ನು ಹಂಚಿಕೊಳ್ಳಲಾಗಿದೆ. ಮಹಾ ಶಿವರಾತ್ರಿ ಆಚರಿಸಲ್ಪಡುವುದರಿಂದ ಆ ದಿನವಿಡಿ ಜಿಬಿಎ ವ್ಯಾಪ್ತಿಯ ಎಲ್ಲಿಯೂ ಪ್ರಾಣಿ ವಧೆ, ಮಾಂಸ ಮಾರಾಟ ಮಾಡಲು ಯಾವುದೇ ಅವಕಾಶ ಇರುವುದಿಲ್ಲ. ಅಲ್ಲದೇ ಸೂಪರ್‌ ಮಾರ್ಕೆಟ್, ಇನ್ನಿತರ ಮಳಿಗೆಗಳಲ್ಲಿಯೂ ಮಾಂಸ ಮಾರಾಟಕ್ಕೆ ಅವಕಾಶ ಇಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.