ನವದೆಹಲಿ: ಹೆಚ್ಚುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ, ಫೆಬ್ರವರಿ 28 ರಿಂದ ಸುಮಾರು 2.44 ಲಕ್ಷ ಜನರು ತಮ್ಮ ತಾಯ್ನಾಡು ಭಾರತಕ್ಕೆ ವಾಪಾಸ್ ಆಗಿದ್ದಾರೆ. ಯುನೈಟೆಡ್ ಸ್ಟೇಟ್ಸ್-ಇಸ್ರೇಲ್ ಒಗ್ಗೂಡಿ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ ಅದೇ ದಿನ ಸಂಘರ್ಷ ಪ್ರಾರಂಭವಾಯಿತು. ಪ್ರತಿಕ್ರಿಯೆಯಾಗಿ, ಇರಾನ್ ಅಮೆರಿಕದ ಸೇನಾ ನೆಲೆಗಳನ್ನು ಹೊಂದಿರುವ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡಿತು ಮತ್ತು ಯುಎಸ್ ಮತ್ತು ಇಸ್ರೇಲ್ ಮೇಲೆ ಒತ್ತಡ ಹೇರಲು ಆಯಕಟ್ಟಿನ ನಿರ್ಣಾಯಕವಾದ ಹಾರ್ಮುಜ್ ಜಲಸಂಧಿಯನ್ನು ಉಸಿರುಗಟ್ಟಿಸಲು ಪ್ರಯತ್ನಿಸಿತು.
ಬೆಂಗಳೂರು: ಬುಧವಾರ ರಾತ್ರಿ 8ಗಂಟೆ ವೇಳೆಗೆ ಬೆಂಗಳೂರಿನ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಇದರ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮಂಗಳವಾರ ಸಿಲಿಕಾನ್ ಸಿಟಿಯ ಹಲವೆಡೆ ಭಾರೀ ಮಳೆಯಾಗಿದೆ. ಇನ್ನೂ ವರ್ಷದ ಮೊದಲ ಮಳೆಯೊಂದಿಗೆ ಆಲಿಕಲ್ಲು ಆಗಿರುವುದರಿಂದ ಜನರು ಫುಲ್ ಎಂಜಾಯ್ ಮಾಡಿದ್ದಾರೆ.
ಹಾಸನ: ಮಂಗಳವಾರದಂದು ಹಾಸನದಲ್ಲಿ ಭಾರೀ ಆಲಿಕಲ್ಲು ಮಳೆಯಾಗಿತ್ತು. ಇದರಿಂದ ವರ್ಷದ ಮೊದಲ ಮಳೆಯೇ ಹಾಸನ ಜನತೆಗೆ ಕೂಲ್ ಮಾಡಿತ್ತು. ಸಾಮಾಜಿಕ ಜಾಲತಾನದಲ್ಲಿ ಆಲಿಕಲ್ಲು ಮಳೆಯನ್ನು ಎಂಜಾಯ್ ಮಾಡಿ ಹಲವರು ಪೋಸ್ಟ್ ಮಾಡಿದ್ದರು. ಆದರೆ ಮಳೆ ಬಳಿಕದ ಪರಿಣಾಮವನ್ನು ಮಾತ್ರ ರೈತರು ಅನುಭವಿಸುತ್ತಿದ್ದಾರೆ. ಸುರಿದ ಭಾರೀ ಆಲಿಕಲ್ಲು ಮಳೆಗೆ ಇದೀಗ ರೈತನೊಬ್ಬ ಕಷ್ಟ ಪಟ್ಟು ದುಡಿದ ಕಲ್ಲಂಗಡಿ ಕೃಷಿ ನೀರು ಪಾಲಾಗಿದೆ. ಇನ್ನೇನು ಬೆಳೆ ತೆಗೆದು ಮಾರಾಟ ಮಾಡುವ ಹಂತಕ್ಕೆ ಬಂದಿದ್ದ ಕಲ್ಲಂಗಡಿ ಕಾಯಿ ಹಾಳಾಗಿದೆ. ಆಲಿಕಲ್ಲು ಮಳೆಯಿಂದಾಗಿ ಗಿಡ
ನವದೆಹಲಿ: ಮೋದಿಜೀ ಖಮೇನಿಗೆ ದ್ರೋಹ ಮಾಡಿದ್ರು ಹೀಗಾಗಿ ಭಾರತಕ್ಕೆ ಇರಾನ್ ಹನಿ ನೀರೂ ಕೂಡಾ ಕೊಡಬಾರದು ಎಂದು ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದ ಮಹಿಳೆ ಹೇಳಿರುವ ವಿಡಿಯೋ ವೈರಲ್ ಆಗಿದೆ. ಇಸ್ರೇಲ್, ಅಮೆರಿಕಾ ನಡೆಸಿದ ದಾಳಿಯಲ್ಲಿ ಇರಾನ್ ಪರಮೋಚ್ಛ ನಾಯಕ ಖಮೇನಿ ಹತ್ಯೆ ಮಾಡಲಾಗಿತ್ತು. ಇದನ್ನು ಖಂಡಿಸಿ ಭಾರತದಲ್ಲಿ ಕೆಲವರು ಬೀದಿಗಳಿದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಹಿಳೆಯೊಬ್ಬಳು ಮಾತನಾಡಿದ ವಿಡಿಯೋ ವೈರಲ್ ಆಗಿದೆ. ‘ಇರಾನ್ ನವರು ಭಾರತಕ್ಕೆ ಹನಿ ನೀರೂ ಕೊಡಬಾರದು. ಖಮೇನಿ ಹತ್ಯೆಗೆ ಭಾರತ, ಮೋದಿಜೀ ಕೂಡಾ ಕಾರಣ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಹುದ್ದೆಗಾಗಿ ತೀವ್ರ ಪೈಪೋಟಿ ಹಾಗೂ ಸಚಿವ ಸ್ಥಾನಕ್ಕೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿರುವ ನಡುವೆ ಬೆಂಗಳೂರಿನಲ್ಲಿ ಕಾಂಗ್ರೆಸ್ನ ಕೆಲ ಶಾಸಕರಿಂದ ಡಿನ್ನರ್ ಮೀಟಿಂಗ್ ನಡೆದಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ. ಇದರಲ್ಲಿ ಮೊದಲ ಹಾಗೂ ಎರಡನೇ ಬಾರಿ ಆಯ್ಕೆಯಾದ ಶಾಸಕರಿಂದ ಡಿನ್ನರ್ ಮೀಟಿಂಗ್ ನಡೆದಿರುವುದು ರಾಜಕೀಯದಲ್ಲಿ ಕೂತುಹಲದ ಬೆಳವಣಿಗೆಯಾಗಿದೆ. ಶಾಂಗ್ರಿಲಾ ಹೊಟೇಲ್ನಲ್ಲಿ ಈ ಡಿನ್ನರ್ ಮೀಟಿಂಗ್ ನಡೆದಿದೆ. ಇದರಲ್ಲಿ ಸಚಿವ ಸ್ಥಾನವನ್ನು ನೀಡುವಂತೆ, ನಾಯಕತ್ವ ಬದಲಾವಣೆ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಹುದ್ದೆಗಾಗಿ ತೀವ್ರ ಪೈಪೋಟಿ ಹಾಗೂ ಸಚಿವ ಸ್ಥಾನಕ್ಕೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿರುವ ನಡುವೆ ಬೆಂಗಳೂರಿನಲ್ಲಿ ಕಾಂಗ್ರೆಸ್ನ ಕೆಲ ಶಾಸಕರಿಂದ ಡಿನ್ನರ್ ಮೀಟಿಂಗ್ ನಡೆದಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ. ಇದರಲ್ಲಿ ಮೊದಲ ಹಾಗೂ ಎರಡನೇ ಬಾರಿ ಆಯ್ಕೆಯಾದ ಶಾಸಕರಿಂದ ಡಿನ್ನರ್ ಮೀಟಿಂಗ್ ನಡೆದಿರುವುದು ರಾಜಕೀಯದಲ್ಲಿ ಕೂತುಹಲದ ಬೆಳವಣಿಗೆಯಾಗಿದೆ.
ಇರಾನ್: ಇಲ್ಲಿನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ಸಂಬಂಧ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರತಿಕ್ರಿಯಿಸಿದ್ದು, ಇದನ್ನು "ರಾಷ್ಟ್ರೀಯ ಜಾಗೃತಿಯ ಮೂಲ" ಎಂದು ಕರೆದರು. ಈ ಸಂಬಂಧ ವರದಿಯಾಗಿದೆ. ವ್ಯಕ್ತಿ, ಚಿಂತಕ [ಮತ್ತು] ಕ್ರಾಂತಿಕಾರಿ ರಾಜಕಾರಣಿ, ಇತರ ಹುತಾತ್ಮರಂತೆ ಈ ಮಹಾನ್ ಹುತಾತ್ಮರ ಶುದ್ಧ ರಕ್ತವು ಗೌರವ, ಶಕ್ತಿ ಮತ್ತು ರಾಷ್ಟ್ರೀಯ ಜಾಗೃತಿಯ ಮೂಲವಾಗಿದೆ ಎಂದು ಇರಾನ್ ಹೇಳಿದೆ. ಈ ಮಹಾನ್ ಹುತಾತ್ಮ ಮತ್ತು ಇತರ ಹುತಾತ್ಮರ ಬಲಿದಾನವನ್ನು ಐಆರ್ಜಿಸಿ ಖಂಡಿತವಾಗಿಯೂ ಮರೆಯುವುದಿಲ್ಲ ಈ ಮಧ್ಯೆ,
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇಂದು ಯಾವ ಜಿಲ್ಲೆಗಳಿಗೆ ಮಳೆಯ ಸೂಚನೆಯಿದೆ ಇಲ್ಲಿದೆ ಇಂದಿನ ಹವಾಮಾನ ವರದಿ. ಬೇಸಿಗೆಯ ಬೇಗೆಯ ನಡುವೆ ದಿಡೀರ್ ಮಳೆಯಾಗುತ್ತಿರುವುದು ವಾತಾವರಣವನ್ನು ಕೊಂಚ ತಂಪು ಮಾಡಿದೆ. ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಗುಡುಗು ಸಹಿತ ಮಳೆಯಾಗುತ್ತಿದೆ. ಕೆಲವೆಡೆ ಆಲಿಕಲ್ಲು ಮಳೆಯಾಗಿರುವ ವರದಿಯೂ ಆಗಿದೆ. ಇಂದು ಕೂಡಾ ಕೆಲವೇ ಜಿಲ್ಲೆಗಳಿಗೆ ಮಳೆಯ ಸೂಚನೆಯಿದೆ. ದಕ್ಷಿಣ ಕನ್ನಡದ ಕೆಲವು ಭಾಗಗಳು, ಚಿಕ್ಕಮಗಳೂರು, ಮಂಡ್ಯ, ಬೆಂಗಳೂರು, ರಾಮನಗರ, ಕೋಲಾರ, ತುಮಕೂರು, ಚಿತ್ರದುರ್ಗ, ಹಾವೇರಿ, ಬೀದರ್, ರಾಯಚೂರು, ಬೆಳಗಾವಿ, ಯಾದಗಿರಿ, ಹುಬ್ಬಳ್ಳಿ, ಬಳ್ಳಾರಿ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ.
ಬುಧವಾರ ವಿಘ್ನ ವಿನಾಶಕ ಗಣೇಶನಿಗೆ ವಿಶೇಷವಾದ ದಿನವಾಗಿದೆ. ಇಂದು ಸಂತಾನಾಪೇಕ್ಷಿತ ದಂಪತಿಗಳು, ಮಕ್ಕಳಿದ್ದರೂ ಸಮಸ್ಯೆ ಎದುರಿಸುತ್ತಿದ್ದರೆ ಗಣೇಶನ ಕುರಿತಾದ ಸಂತಾನ ಗಣಪತಿ ಸ್ತೋತ್ರವನ್ನು ಓದಿ.ನಮೋಽಸ್ತು ಗಣನಾಥಾಯ ಸಿದ್ಧಿಬುದ್ಧಿಯುತಾಯ ಚ ।ಸರ್ವಪ್ರದಾಯ ದೇವಾಯ ಪುತ್ರವೃದ್ಧಿಪ್ರದಾಯ ಚ ॥ 1 ॥ ಗುರೂದರಾಯ ಗುರವೇ ಗೋಪ್ತ್ರೇ ಗುಹ್ಯಾಸಿತಾಯ ತೇ ।ಗೋಪ್ಯಾಯ ಗೋಪಿತಾಶೇಷಭುವನಾಯ ಚಿದಾತ್ಮನೇ ॥ 2 ॥ ವಿಶ್ವಮೂಲಾಯ ಭವ್ಯಾಯ ವಿಶ್ವಸೃಷ್ಟಿಕರಾಯ ತೇ ।ನಮೋ ನಮಸ್ತೇ ಸತ್ಯಾಯ ಸತ್ಯಪೂರ್ಣಾಯ ಶುಂಡಿನೇ ॥ 3 ॥ ಏಕದಂತಾಯ ಶುದ್ಧಾಯ ಸುಮುಖಾಯ ನಮೋ ನಮಃ ।ಪ್ರಪನ್ನಜನಪಾಲಾಯ ಪ್ರಣತಾರ್ತಿವಿನಾಶಿನೇ ॥ 4 ॥
ಟೆಲ್ ಅವಿವ್: ಇರಾನ್ ದಾಳಿಯಿಂದಾಗಿ ಮಧ್ಯ ಇಸ್ರೇಲ್ನಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮ್ಯಾಗೆನ್ ಡೇವಿಡ್ ಅಡೋಮ್ (ಎಂಡಿಎ) ರ ವೈದ್ಯಕೀಯ ಸಿಬ್ಬಂದಿ ರಾಮತ್ ಗನ್ ನಗರದಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿ ಪುರುಷ ಮತ್ತು ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಘೋಷಿಸಿದರು. ಇನ್ನೂ ಇಸ್ರೇಲ್ನ ಹೋಮ್ ಫ್ರಂಟ್ ಕಮಾಂಡ್ ಅವರು ಈ ಸಂಬಂಧ ಪ್ರತಿಕ್ರಿಯಿಸಿ, ಜನತೆಗೆ ಎಲ್ಲಾ ಎಚ್ಚರಿಕೆಗಳು ಮತ್ತು
ಬುಧವಾರವು ಸೌಮ್ಯ ಸ್ವಭಾವದ ಬುಧ ಗ್ರಹಕ್ಕೆ ಸಮರ್ಪಿತವಾಗಿದೆ ಎನ್ನಲಾಗಿದೆ. ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಬುಧವಾರ ಜ್ಞಾನ, ಬುದ್ಧಿವಂತಿಕೆ ಮತ್ತು ಸಂವಹನದ ದಿನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ವಿಶೇಷ ದಿನದಂದು ಗಣಪತಿ ಆರಾಧನೆ, ಬುಧಗ್ರಹದ ಆರಾಧನೆ ಮಾಡಿದ್ರೆ ತುಂಬಾನೆ ಒಳ್ಳೆಯದು. ಇನ್ನೂ ಈ ದಿನದಂದು ನಾವು ಕೆಲ ಕೆಲಸಗಳನ್ನು ಮಾಡಿದ್ರೆ ಅದು ತುಂಬಾನೇ ಒಳ್ಳೆಯದು ಎಂದು ಹೇಳುತ್ತಾರೆ. ಅದು ಯಾವುದೆಂದರೆ: 1. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳು
ಬೆಂಗಳೂರು: ನೋರಾ ಫತೇಹಿ ಅವರು ಹೆಜ್ಜೆ ಹಾಕಿರುವ ಸರ್ಸೆ ನಿನ್ನ ಸೆರಗ ಸರ್ಸೆ ಹಾಡಿಗೆ ಟೀಕೆಗಳು ವ್ಯಕ್ತವಾಗುತ್ತಿದ್ದ ಹಾಗೇ ಪತಿ ಪ್ರೇಮ್ ಪರ ನಟಿ ರಕ್ಷಿತಾ ಪ್ರೇಮ್ ನಿಂತಿದ್ದಾರೆ. ಹಿಂದಿಯಲ್ಲಿ ಈ ಹಾಡಿಗೆ ‘ಚುನರ್ʼ ಎನ್ನುವ ಟೈಟಲ್ ಇಡಲಾಗಿದೆ. ಹಿಂದಿಯಲ್ಲಿ ಈ ಹಾಡಿನ ಸಾಹಿತ್ಯ ತುಂಬಾನೇ ಕೆಟ್ಟದಾಗಿದೆ. ಈ ಸಂಬಂಧ ದೆಹಲಿಯಲ್ಲಿ ವಕೀಲರೊಬ್ಬರು ದೂರು ಕೂಡ ದಾಖಲಿಸಿದ್ದಾರೆ.ಈ ನಡುವೆ ಯಾರು ಏನೇ ಅಂದ್ರೂ ಪ್ರೇಮ್ ಪತ್ನಿ, ನಟಿ ರಕ್ಷಿತಾ ಪ್ರೇಮ್ ಅವರು ಪತಿಯ ಪರವಾಗಿ ನಿಂತಿದ್ದು, ಇದಕ್ಕಿಂತ
ಟೆಹರಾನ್: ಇಸ್ರೇಲ್, ಯುಎಸ್ ದಾಳಿ ನಡುವೆ ಯುದ್ಧವಿರಾಮದ ಪ್ರಸ್ತಾವನ್ನು ಇರಾನ್ನ ನೂತನ ಪರಮೋಚ್ಛ ನಾಯಕ ಮೊಜ್ತಬಾ ಖಮೇನಿ ತಿರಸ್ಕಾರ ಮಾಡಿದ್ದಾರೆ. ಎರಡು ಮಧ್ಯವರ್ತಿ ದೇಶಗಳ ಮೂಲಕ ಅಮೆರಿಕವು ಇರಾನ್ಗೆ ಸಂದೇಶ ಕಳುಹಿಸಿತ್ತು. ಆದರೆ, ಖಮೇನಿ ಅದನ್ನು ತಿರಸ್ಕರಿಸಿದ್ದಾರೆ ಎಂದು ಇರಾನ್ನ ಇಬ್ಬರು ಅಧಿಕಾರಿಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳುವ ಕುರಿತಂತೆ ಖಮೇನಿ ಬದ್ಧರಾಗಿದ್ದು, ಈ ವಿಚಾರವಾಗಿ ತನ್ನ ನಿಲುವು ಕಠಿಣ ಹಾಗೂ ಗಂಭೀರವಾಗಿದೆ ಎಂದರು.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಆಲಿಕಲ್ಲಿ ಸಹಿತ ಭಾರೀ ಮಳೆಯಾಗಿದೆ. ನಗರದ ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.ಯಲಹಂಕ ಸುತ್ತಮುತ್ತ ಸಂಜೆ ಸುಮಾರು ಒಂದು ಗಂಟೆಯಿಂದ ನಿರಂತರವಾಗಿ ಮಳೆಯಾಗಿದೆ. ಇನ್ನೂ ಆರ್ಟಿ ನಗರದಲ್ಲಿ ಆಳಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಯಲಹಂಕ ಮೊದಲ ಹಾಗೂ ಎರಡನೇ ಹಂತ, ಯಲಹಂಕ ನ್ಯೂ ಟೌನ್, ಅಟ್ಟೂರು ಭಾಗದಲ್ಲಿ ಆಲಿಕಲ್ಲು ಮಳೆಯಾಗಿದೆ.
ಬೆಂಗಳೂರು: ಪುನೀತ್ ಬದುಕಿನ ಹಾದಿ ಚಿಕ್ಕದು, ಆದರೆ ಅಲ್ಪಾಯುಷ್ಯದಲ್ಲಿಯೇ ತನ್ನ ನಡೆ-ನುಡಿಯ ಮೂಲಕ ಆತ ನೀಡಿರುವ ಜೀವನದ ಸಂದೇಶ ಸದಾ ಸ್ಮರಣೀಯ ಮತ್ತು ಸ್ಪೂರ್ತಿದಾಯಕ ಎಂದು ದಿವಂಗತ ಪುನೀತ್ ರಾಜ್ಕುಮಾರ್ ಜನ್ಮದಿನದಂದು ಸಿಎಂ ಸಿದ್ದರಾಮಯ್ಯ ಅವರು ಸ್ಮರಿಸಿಕೊಂಡರು. ಈ ಸಂಬಂಧ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.ಕಲಾ ಪ್ರತಿಭೆಯ ಜೊತೆಯಲ್ಲಿ ಸರಳತೆ, ಸಜ್ಜನಿಕೆ ಮತ್ತು ಸಮಾಜಮುಖಿ ಚಿಂತನೆಗಳಿಂದಾಗಿ ಎಳೆಯ ವಯಸ್ಸಿನಲ್ಲಿಯೇ ಎತ್ತರಕ್ಕೆ ಬೆಳೆದು ನಮ್ಮೆಲ್ಲರಲ್ಲಿ ಅಭಿಮಾನ ಮೂಡಿಸಿದ ಹುಡುಗ ಪುನೀತ್ ರಾಜ್ಕುಮಾರ್.
ಕೋಲ್ಕತ್ತಾ (ಪಶ್ಚಿಮ ಬಂಗಾಳ): ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಮಂಗಳವಾರ ಪಶ್ಚಿಮ ಬಂಗಾಳ ವಿಧಾನಸಭಾ ಸ್ಥಾನಗಳಿಗೆ 291 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.ಇದು ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಮತ ಎಣಿಕೆ ಮೇ 4 ರಂದು ನಡೆಯಲಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಂಗಳವಾರ ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಪಕ್ಷದ ವರಿಷ್ಠೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ 294 ಸ್ಥಾನಗಳಲ್ಲಿ 291 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಮಹಾಕುಂಭದ ವೇಳೆ ವೈರಲ್ ಆಗಿ ಕುಂಭಮೇಳದ ಹುಡುಗಿ ಎಂದೇ ಖ್ಯಾತಿ ಪಡೆದಿದ್ದ ಮೊನಾಲಿಸಾ ಭೋಂಸ್ಲೆ ತನ್ನ ಮುಸ್ಲಿಂ ಗೆಳೆಯ ಫರ್ಮಾನ್ ಖಾನ್ ಅವರನ್ನು ಮಾರ್ಚ್ 11 ರಂದು ಕೇರಳದ ಅರುಮನೂರಿನ ನಾಯನಾರ್ ದೇವಸ್ಥಾನದಲ್ಲಿ ವಿವಾಹವಾದರು. ತನ್ನ ಕುಟುಂಬದ ವಿರೋಧದ ನಡುವೆಯೂ ಮೊನಲಿಸಾ ಅವರು ಫರ್ಮಾನ್ ಖಾನ್ ಅವರನ್ನು ಮದುವೆಯಾದರು. ಇನ್ನೂ ಮೊನಲಿಸಾ ಮದುವೆಯಾಗಿರುವ ಫರ್ಮಾನ್ ಖಾನೆ ಬಗ್ಗೆ ಹುಡುಕಾಟ ನಡೆದಿದೆ. ಫರ್ಮಾನ್ ಖಾನ್ ಯಾರು?
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಭಾರೀ ಛೀಮಾರಿ ವ್ಯಕ್ತವಾದ ಬೆನ್ನಲ್ಲೇ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಕನ್ನಡದ ಪ್ಯಾನ್ ಇಂಡಿಯಾ ಕೆಡಿ: ದಿ ಡೆವಿಲ್ ಚಿತ್ರದ ಹಾಡನ್ನು ಇದೀಗ ಯೂಟ್ಯೂಬ್ನಿಂದ ಡಿಲೀಟ್ ಮಾಡಲಾಗಿದೆ. ನೋರಾ ಫತೇಹಿ ಹಾಗೂ ಸಂಜಯ್ ದತ್ ಅಭಿನಯದಲ್ಲಿ ಮೂಡಿಬಂದ ಈ ಐಟಂ ಸಾಂಗ್ ಸಾಹಿತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಾಡಿನ ಸಾಹಿತ್ಯ ಹಾಗೂ ನೃತ್ಯವೂ ತೀರ ಅಸಭ್ಯವಾಗಿದೆ ಎಂಬ ನೆಟ್ಟಿಗರ ಖಂಡನೆ ಬೆನ್ನಲ್ಲೇ ಇದೀಗ ಚಿತ್ರತಂಡ ಹಿಂದಿ ವರ್ಶನ್
ಇರಾನ್ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಕೊಲ್ಲಲ್ಪಟ್ಟರು ಎಂದು ಇಸ್ರೇಲ್ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಮಂಗಳವಾರ ಹೇಳಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಆದಾಗ್ಯೂ, ಟೆಹ್ರಾನ್ನಿಂದ ಇನ್ನೂ ಯಾವುದೇ ದೃಢೀಕರಣವಿಲ್ಲ.ಹಿಂದಿನ ದಿನದಲ್ಲಿ, ಇಸ್ರೇಲಿ ಮಾಧ್ಯಮದಿಂದ ಲಾರಿಜಾನಿಯ ಸಾವಿನ ವರದಿಗಳು ಹೊರಬಂದವು.ಆದರೆ ಈ ಲಾರಿಜಾನಿ ಹತ್ಯೆ ಬಗ್ಗೆ ಇರಾನ್ ನಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಮುಂಬೈ: ಅದ್ಧೂರಿಯಾಗಿ ಬಿಡುಗಡೆಯಾದ ನೋರಾ ಫತೇಹಿ ಮತ್ತು ಸಂಜಯ್ ದತ್ ಒಳಗೊಂಡ ಸರ್ಕೆ ಚುನರ್ ತೇರಿ ಸರ್ಕೆ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಅಸಮಾಧಾನ ವ್ಯಕ್ತವಾಗುತ್ತಿರುವ ಬೆನ್ನಲ್ಲೆ ನ ನಟಿ ಕಂಗನಾ ರನೌತ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.ಈ ಹಾಡು ಸಾಕಷ್ಟು ಗಮನ ಸೆಳೆಯುತ್ತಿದೆ, ಆದರೆ ಆನ್ಲೈನ್ನಲ್ಲಿ ಜನರಿಂದ ಟೀಕೆ ಕೂಡ ವ್ಯಕ್ತವಾಗಿದೆ.ಈ ವಿಚಾರವಾಗಿ ಕಂಗನಾ ರಣಾವತ್ ಮುಕ್ತವಾಗಿ ಮಾತನಾಡಿದ್ದಾರೆ. ಹಾಡಿನ ವಿಚಾರವಾಗಿ ಬಾಲಿವುಡ್ 'ಎಲ್ಲಾ ಮಿತಿಗಳನ್ನು ದಾಟಿದೆ' ಎಂದು ಅವರು ಹೇಳಿದರು.
ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಅವರು ಮಂಗಳವಾರ ತಮ್ಮ ರಾಜಕೀಯ ಪ್ರವೇಶದ ಯತ್ನದ ಸಂದರ್ಭದಲ್ಲಿ ಆಡಳಿತಾರೂಢ ಡಿಎಂಕೆಯಿಂದ ಬೆದರಿಕೆ ಹಾಕಲಾಗಿದೆ ಎಂಬ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕರ ಆರೋಪಗಳನ್ನು ದೃಢವಾಗಿ ತಳ್ಳಿಹಾಕಿದರು. ವಿಜಯ್ ಪಕ್ಷದ ನಾಯಕ ಆಧವ್ ಅರ್ಜುನಗೆ ಪ್ರತಿಕ್ರಿಯಿಸಿದ ರಜನಿಕಾಂತ್ ಸಂಕ್ಷಿಪ್ತ ಹೇಳಿಕೆಯಲ್ಲಿ, "ಸಮಯ ಮಾತನಾಡುವುದಿಲ್ಲ, ಆದರೆ ಉತ್ತರವನ್ನು ನೀಡಲು ತಾಳ್ಮೆಯಿಂದ ಕಾಯುತ್ತಿದೆ" ಎಂದು ಹೇಳಿದರು.ಮಾನಹಾನಿಕರ ಹೇಳಿಕೆಗಳನ್ನು ಖಂಡಿಸಿ ತಮಗೆ ಬೆಂಬಲ ವ್ಯಕ್ತಪಡಿಸಿದವರಿಗೆ ಧನ್ಯವಾದ ಅರ್ಪಿಸಿದರು.
ಮಂಗಳೂರು: ಮೂಡಬಿದ್ರಿ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಕಾಮಕಾಂಡಗಳು ಒಂದೊಂದಾಗಿ ಬಯಲಾಗುತ್ತಿದೆ. ಮಹಿಳೆಯೊಬ್ಬಳ ಜೊತೆ ಅನುಚಿತವಾಗಿ ವರ್ತಿಸಿದ ಸಂದೇಶ್ ವಿಡಿಯೋಗಳು ಈಗ ವೈರಲ್ ಆಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿಯ ಸಂದೇಶ್ ಪಿಜಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಮಹಿಳೆಯೊಬ್ಬರ ಪತಿಯನ್ನು ಸುಳ್ಳು ಕೇಸ್ ನಲ್ಲಿ ಸಿಲುಕಿಸಿದ್ದ ಸಂದೇಶ್ ಬಳಿಕ ಆಕೆಗೆ ಗಂಡನನ್ನು ಬಿಡಿಸಲು ಒಂದೋ ನನ್ನ ಜೊತೆ ಮಲಗಬೇಕು ಇಲ್ಲವೇ 25 ಲಕ್ಷ ರೂ. ಹಣ ಕೊಡಬೇಕು ಎಂದು ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ: ಮಹಾರಾಷ್ಟ್ರ ವಿಧಾನಸಭೆಯು ಸೋಮವಾರ ರಾತ್ರಿ ಧಾರ್ಮಿಕ ಸ್ವಾತಂತ್ರ್ಯ ಮಸೂದೆ 2026 ಅನ್ನು ಧ್ವನಿ ಮತದ ಮೂಲಕ ಅಂಗೀಕರಿಸಿತು. ದಬ್ಬಾಳಿಕೆ, ವಂಚನೆ, ಪ್ರಚೋದನೆ ಅಥವಾ ಮದುವೆಯ ಮೂಲಕ ನಡೆಸಲಾಗುವ ಧಾರ್ಮಿಕ ಮತಾಂತರಗಳನ್ನು ತಡೆಯಲು ಕಠಿಣ ಕ್ರಮಗಳನ್ನು ಪರಿಚಯಿಸಿತು.ಮಸೂದೆಯ ನಿಬಂಧನೆಗಳ ಅಡಿಯಲ್ಲಿ, ಮದುವೆಯ ನೆಪದಲ್ಲಿ ಕಾನೂನುಬಾಹಿರ ಮತಾಂತರದಲ್ಲಿ ತೊಡಗಿರುವ ವ್ಯಕ್ತಿಗಳು ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡವನ್ನು ಎದುರಿಸಬೇಕಾಗುತ್ತದೆ.ಅಪ್ರಾಪ್ತ ವಯಸ್ಕ, ಅಸ್ವಸ್ಥ ಮನಸ್ಸಿನ ವ್ಯಕ್ತಿ, ಮಹಿಳೆ ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು
ನವದೆಹಲಿ: ಮುಸ್ಲಿಂ ಪುರುಷರ ಗುಂಪೊಂದು ಗಂಗಾ ನದಿಯಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿ, ದೋಣಿಯಲ್ಲಿ ಸಾಗುತ್ತಾ ಪವಿತ್ರ ನದಿಗೆ ಮಾಂಸಹಾರವನ್ನು ಎಸೆದಿರುವ ಆಘಾತಕಾರಿ ಘಟನೆ ನಡೆದಿದೆ. ವಾರಣಾಸಿಯ ಗಂಗಾ ನದಿಯ ಮಧ್ಯದಲ್ಲಿ ದೋಣಿಯಲ್ಲಿ ಜನರ ಗುಂಪೊಂದು ಇಫ್ತಾರ್ ಕೂಟವನ್ನು ನಡೆಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ದೂರನ್ನು ದಾಖಲಿಸಿ, 14 ವ್ಯಕ್ತಿಗಳನ್ನು ಬಂಧಿಸಲಾಗಿದೆ.ವೀಡಿಯೊದಲ್ಲಿನ ಆರೋಪಗಳಲ್ಲಿ ನದಿಯಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸುವುದು ಮತ್ತು ಉಳಿದ ವಸ್ತುಗಳನ್ನು ಪವಿತ್ರ
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಗಳು ತೀವ್ರ ಇಂಧನ ಬಿಕ್ಕಟ್ಟನ್ನು ಬೆದರಿಸುವ ಕಾರಣ ಇಂಧನವನ್ನು ಸಂರಕ್ಷಿಸಲು ಸರ್ಕಾರಿ ಸಂಸ್ಥೆಗಳು, ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ಬುಧವಾರದಂದು ರಜೆ ಘೋಷಿಸುವ ಮೂಲಕ ಶ್ರೀಲಂಕಾದಲ್ಲಿ ವಾರದಲ್ಲಿ ನಾಲ್ಕು ದಿನಗಳ ಕೆಲಸ ಇರಲಿದೆ. ಕೊಲಂಬೊದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಸೆನ್ಷಿಯಲ್ ಸರ್ವೀಸಸ್ ಕಮಿಷನರ್ ಜನರಲ್ ಅವರು ದ್ವೀಪ ರಾಷ್ಟ್ರವಾಗಿ, ಸಂಭಾವ್ಯ ಇಂಧನ ಕೊರತೆಯನ್ನು ತಡೆಗಟ್ಟುವ ಆಯ್ಕೆಯನ್ನು ಪರಿಗಣಿಸಲು ಖಾಸಗಿ ವಲಯವನ್ನು ಪ್ರೋತ್ಸಾಹಿಸಿದರು.
ಮುಂಬೈ: ತಮ್ಮ ನಂತರ ಟೀಂ ಇಂಡಿಯಾಗೆ ಯಾರು ಕೋಚ್ ಆಗಬೇಕು ಎಂದು ಕೋಚ್ ಗೌತಮ್ ಗಂಭೀರ್ ಹೆಸರಿಸಿದ್ದಾರೆ. ಗಂಭೀರ್ ಈ ಹೆಸರು ಹೇಳಿದ್ದಾರಾ ಎಂದು ನಿಮಗೇ ಅಚ್ಚರಿಯಾಗಬಹುದು. ಇತ್ತೀಚೆಗೆ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಸಂದರ್ಶನವೊಂದರಲ್ಲಿ ತಮ್ಮ ನಂತರ ಟೀಂ ಇಂಡಿಯಾ ಕೋಚ್ ಆಗಿ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ನೋಡಲು ಬಯಸುವುದಾಗಿ ಹೇಳಿಕೊಂಡಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಧೋನಿ ವಿರುದ್ಧ ಸಾಕಷ್ಟು ಬಾರಿ ಗಂಭೀರ್ ಪರೋಕ್ಷವಾಗಿ ಕಿಡಿ ಕಾರಿದ್ದು ಇದೆ. ಧೋನಿ ಒಬ್ಬರಿಂದಲೇ 2011 ರ ವಿಶ್ವಕಪ್ ಗೆಲುವು ಸಿಕ್ಕಿರಲಿಲ್ಲ ಎಂದಿದ್ದು ಇದೆ.
ನಟ ಪ್ರೇಮ್ ನಿರ್ದೇಶನದ ಪ್ಯಾನ್-ಇಂಡಿಯಾ ಚಲನಚಿತ್ರ ಕೆಡಿ: ದಿ ಡೆವಿಲ್ ಸಿನಿಮಾದ ನೋರಾ ಫತೇಹಿ ಮತ್ತು ಸಂಜಯ್ ದತ್ ಅಭಿನಯದ ಸರ್ಕೆ ಚುನರ್ ತೇರಿ ಸರ್ಕೆ ಹಾಡು ಭಾರೀ ಚರ್ಚೆಯ ನಡುವೆ ಕಾನೂನು ಸಂಕಷ್ಟ ಎದುರಾಗಿದೆ.ಅದ್ದೂರಿಯಾಗಿ ಸಾಂಗ್ ರಿಲೀಸ್ ಆದ ಬೆನ್ನಲ್ಲೇ ಹಾಡಿನ ಸಾಹಿತ್ಯದ ಬಗ್ಗೆ ಭಾರೀ ವಿವಾದ ಹಾಗೂ ಟೀಕೆಗಳು ಶುರುವಾಗಿ ಇದೀಗ ಕಾನೂನು ಕ್ರಮದ ಮಟ್ಟಿಗೆ ತಲುಪಿದೆ. ಸಂಜಯ್ ದತ್ ಒಳಗೊಂಡಿರುವ KD ಚಲನಚಿತ್ರದ ಸರಕೆ ಚುನರ್ ತೇರಿ ಸಾರ್ಕೆ ಟ್ರ್ಯಾಕ್: ದಿ ಡೆವಿಲ್, X ನಲ್ಲಿ ಕ್ಲಿಪ್ಗಳು
ನವದೆಹಲಿ: ಗನ್ ಹಿಡಿದುಕೊಂಡು ಎದೆಗೆ ಗುರಿಯಿಟ್ಟುಕೊಂಡು ರೀಲ್ಸ್ ಮಾಡಲು ಹೊರಟಿದ್ದ ಪವನ್ ಕುಮಾರ್ ಎಂಬ ವ್ಯಕ್ತಿಗೆ ಲೈವ್ ನಲ್ಲೇ ಮಿಸ್ ಫೈರ್ ಆಗಿ ಸಾವನ್ನಪ್ಪಿದ್ದ ಭಯಾನಕ ವಿಡಿಯೋ ಇಲ್ಲಿದೆ ನೋಡಿ. ಇತ್ತೀಚೆಗೆ ಯುವ ಜನಾಂಗ ರೀಲ್ಸ್ ಹುಚ್ಚಿಗೆ ಏನೇನೋ ಸಾಹಸ ಮಾಡಲು ಹೋಗುತ್ತಾರೆ. ಇದರಿಂದ ಅನೇಕ ಬಾರಿ ತಮ್ಮ ಪ್ರಾಣಕ್ಕೇ ಕುತ್ತು ತರುತ್ತಾರೆ. ಇದೇ ರೀತಿ ಪವನ್ ಕುಮಾರ್ ಕೂಡಾ ರಿವಾಲ್ವರ್ ಬಳಸಿ ರೀಲ್ಸ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ಪಾಕಿಸ್ತಾನ ಸೇನೆ ನಡೆಸಿರುವ ದಾಳಿಯನ್ನು ಅಫ್ಗನ್ ಕ್ರಿಕೆಟಿಗರು ಒಕ್ಕೊರಲಿನಿಂದ ಖಂಡಿಸಿದ್ದಾರೆ. ಮಂಗಳವಾರ ಮುಂಜಾನೆ ಕಾಬೂಲ್ ಮೇಲೆ ಪಾಕ್ ನಡೆಸಿದ ಅತ್ಯಂತ ಭೀಕರ ವೈಮಾನಿಕ ದಾಳಿಯಲ್ಲಿ 400 ಜನರು ಸಾವನ್ನಪ್ಪಿದ್ದಾರೆ ಮತ್ತು 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಮಾದಕವಸ್ತು ಪುನರ್ವಸತಿ ಆಸ್ಪತ್ರೆಯ ಮೇಲೆ ವಾಯುದಾಳಿ ನಡೆಸಲಾಗಿದ್ದು, 2,000 ಹಾಸಿಗೆಗಳ ಸೌಲಭ್ಯದ ಬೃಹತ್ ಆಸ್ಪತ್ರೆ ನಾಶವಾಗಿದೆ ಎಂದು ಅಫ್ಘಾನಿಸ್ತಾನದ ಉಪ ಸರ್ಕಾರದ ವಕ್ತಾರ ಹಮ್ದುಲ್ಲಾ ಫಿಟ್ರತ್ ಹೇಳಿದ್ದಾರೆ. ಆದರೆ, ಈ ಆರೋಪಗಳನ್ನು ಪಾಕಿಸ್ತಾನ ನಿರಾಕರಿಸಿದೆ. ಕಾಬೂಲ್ನಲ್ಲಿ ಯಾವುದೇ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಸಮಜಾಯಿಷಿ ನೀಡಿದೆ.
ನ್ಯೂಯಾರ್ಕ್: ಇರಾನ್ ವಿರುದ್ಧದ ಯುದ್ಧದಲ್ಲಿ ಎಲ್ಲಾ ಮಿತ್ರರಾಷ್ಟ್ರಗಳು ಕೈ ಕೊಟ್ಟ ಬಳಿಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಾಂಗಿಯಾಗಿದ್ದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಹೊರ್ಮುಜ್ ಜಲಸಂಧು ತೆರವಿಗೆ ಫ್ರಾನ್ಸ್, ಚೀನಾ, ಜಪಾನ್, ಆಸ್ಟ್ರೇಲಿಯಾ, ಜರ್ಮನಿ, ಇಂಗ್ಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ಯುದ್ಧ ನೌಕೆಗಳನ್ನು ಕಳುಹಿಸಲು ಟ್ರಂಪ್ ಮನವಿ ಮಾಡಿದ್ದರು. ಆದರೆ ಈ ಎಲ್ಲಾ ರಾಷ್ಟ್ರಗಳೂ ಅಮೆರಿಕಾದ ಮನವಿಯನ್ನು ತಿರಸ್ಕರಿಸಿವೆ. ನಿಮ್ಮ ಹುಚ್ಚಾಟಗಳಿಗೆ ನಾವು ಬರಲ್ಲ ಎಂದು ಫ್ರಾನ್ಸ್, ಜರ್ಮನಿ, ಜಪಾನ್, ಇಂಗ್ಲೆಂಡ್ ಸೇರಿ ಪ್ರಮುಖ ದೇಶಗಳೇ ಖಡಕ್ ಸಂದೇಶ ರವಾನಿಸಿದೆ. ಇದರಿಂದ ಡೊನಾಲ್ಡ್ ಟ್ರಂಪ್ ಈಗ ಏಕಾಂಗಿಯಾಗಿದ್ದಾರೆ.
ನವದೆಹಲಿ: ಅಮೆರಿಕಾ ಮತ್ತು ಇಸ್ರೇಲ್ ಜೊತೆ ಯುದ್ಧದ ವಾತಾವರಣದ ನಡುವೆಯೂ ಭಾರತಕ್ಕೆ ಇರಾನ್ ಗುಡ್ ನ್ಯೂಸ್ ಕೊಟ್ಟಿದೆ. ಇಸ್ರೇಲ್ ಮತ್ತು ಅಮೆರಿಕಾಗೆ ಸಹಾಯ ಮಾಡುತ್ತಿರುವ ರಾಷ್ಟ್ರಗಳ ಮೇಲೂ ಇರಾನ್ ದಾಳಿ ನಡೆಸುತ್ತಿದೆ. ಪರಿಣಾಮ ಗಲ್ಫ್ ರಾಷ್ಟ್ರಗಳು ಹೆಚ್ಚು ಸಂಕಷ್ಟಕ್ಕೀಡಾಗಿವೆ. ಇದರ ನಡುವೆ ಜಾಗತಿಕ ವ್ಯಾಪಾರ, ವ್ಯವಹಾರಗಳಿಗೆ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ ಬಂದ್ ಮಾಡಿ ಅಮೆರಿಕಾಗೆ ಸೆಡ್ಡು ಹೊಡೆದಿದೆ. ಆದರೆ ಇದರ ನಡುವೆಯೂ ಭಾರತ ಸೇರಿದಂತೆ ಅಮೆರಿಕಾ, ಇಸ್ರೇಲ್ ಗೆ ಸಹಾಯ ಮಾಡದ ರಾಷ್ಟ್ರಗಳಿಗೆ ಇರಾನ್ ಗುಡ್ ನ್ಯೂಸ್ ನೀಡಿದೆ.
ಬೆಂಗಳೂರು: ಡ್ರೈವರಣ್ಣಾ ಸ್ವಲ್ಪ ತಡ ಆದ್ರೂ ಪರವಾಗಿಲ್ಲ. ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳನ್ನು ಕಂಡರೆ ತಕ್ಷಣವೇ ಬಸ್ ನಿಲ್ಲಿಸಿ ಹತ್ತಿಸಿಕೊಳ್ಳಿ ಎಂದು ಕೆಎಸ್ ಆರ್ ಟಿಸಿ ಬಸ್ ನಿರ್ವಾಹಕ ತನ್ನ ಚಾಲಕನಿಗೆ ಮನವಿ ಮಾಡಿರುವ ಈ ದೃಶ್ಯ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ ಇದೀಗ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗುತ್ತಿದೆ. ಸಾಕಷ್ಟು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಾರ್ವಜನಿಕ ಸಾರಿಗೆಗಳನ್ನೇ ಅವಲಂಬಿಸುತ್ತಾರೆ. ಇಂತಹವರಿಗೆ ತೊಂದರೆಯಾಗಬಾರದು ಎಂದು ಈ ನಿರ್ವಾಹಕ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಇಳಿಕೆಯಾಗಿತ್ತು. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಇದು ಬೆಳೆಗಾರರಿಗೆ ಸಮಾಧಾನ ತಂದಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಸತತವಾಗಿ ಬೆಲೆ ಇಳಿಕೆ ಕಂಡುಬರುತ್ತಿದೆ. ಕೆಲವು ವರ್ಗದ ಅಡಿಕೆ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡುಬರುತ್ತಿದೆ. ಇಂದು ಹೊಸ ಅಡಿಕೆ ಬೆಲೆ 460 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದು 530 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿಯಲ್ಲಿದ್ದು 530 ರೂ.ಗಳಷ್ಟಾಗಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಇಳಿಕೆಯಾಗಿದ್ದರೆ ಮತ್ತುಇತರೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ಈ ವಾರದ ಆರಂಭದಲ್ಲೇ ಪರಿಶುದ್ಧ ಚಿನ್ನದ ದರ ಸತತವಾಗಿ ಇಳಿಕೆಯಾಗುತ್ತಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,65,875.00 ರೂ.ಗಳಿತ್ತು. ಆದರೆ ಇಂದು ಇಳಿಕೆಯಾಗಿದ್ದು 1,60,990.00 ರೂ.ಗಳಷ್ಟಿದೆ.
ಅಂಕಲ್ ನನಗೆ ಆರ್ ಸಿಬಿ ವಾಲಿ ವಿರಾಟ್ ಕೊಹ್ಲಿ ಟಿ ಶರ್ಟ್ ಕೊಡಿ ಎಂದು ಪುಟಾಣಿಯೊಬ್ಬಳು ಹಠ ಹಿಡಿಯುತ್ತಿರುವ ಕ್ಯೂಟ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿರಾಟ್ ಕೊಹ್ಲಿ ಎಂದರೆ ಜೀವ ಎನ್ನುವ ಅನೇಕ ಅಭಿಮಾನಿಗಳಿದ್ದಾರೆ. ವಿಶೇಷವೆಂದರೆ ಪುಟಾಣಿಗಳು ಮತ್ತು ಯುವ ಜನಾಂಗದವರೇ ಕೊಹ್ಲಿಯನ್ನು ಹೆಚ್ಚು ಇಷ್ಟಪಡುತ್ತಾರೆ. ಈ ಬಾಲಕಿಯೂ ಅಷ್ಟೇ ಕೊಹ್ಲಿಯೆಂದರೆ ಆಕೆಗೆ ಜೀವ. ಸುಮಾರು 5 ವರ್ಷ ವಯಸ್ಸು ಇರಬಹುದು ಈಕೆಗೆ. ಆದರೆ ಕೊಹ್ಲಿ ಎಂದರೆ ಎಷ್ಟು ಇಷ್ಟ ಎಂದು ಈ ವಿಡಿಯೋ ನೋಡಿದರೇ ಗೊತ್ತಾಗುತ್ತದೆ. ತಂದೆಯೊಂದಿಗೆ ಬಟ್ಟೆ ಅಂಗಡಿಗೆ ಹೋಗುವ ಆಕೆಗೆ ಮೊದಲು ಕೊಹ್ಲಿ ಹೆಸರಿರುವ ಟೀಂ ಇಂಡಿಯಾ ಜೆರ್ಸಿ ತೋರಿಸುತ್ತಾರೆ.
ಜ್ಯೋತಿಷ್ಯ ಪ್ರಕಾರ ಮೇಷ ರಾಶಿಯವರು ತಮ್ಮ ರಾಶಿಗೆ ಅನುಗುಣವಾಗಿ ಯಾವ ಆಹಾರ ಸೇವಿಸಿದರೆ ಆರೋಗ್ಯವಾಗಿರುತ್ತಾರೆ ಎಂಬುದರ ವಿವರ ಇಲ್ಲಿದೆ ನೋಡಿ. ಉತ್ತಮ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುವುದು. ಎಲ್ಲಾ ರಾಶಿಗೂ ಅದರದ್ದೇ ಆದ ದೇಹ ಪ್ರಕೃತಿಯಿರುತ್ತದೆ. ಅದೇ ರೀತಿ ಮೇಷ ರಾಶಿಯವರು ಉಷ್ಣ ಪ್ರಕೃತಿ ದೇಹ ಹೊಂದಿರುತ್ತಾರೆ. ಮೇಷ ರಾಶಿಯವರು ಸೇವಿಸಬೇಕಾದ ತರಕಾರಿ, ಹಣ್ಣು, ಧಾನ್ಯ, ಮಸಾಲೆ ಪದಾರ್ಥಗಳು ಯಾವುವು ಇಲ್ಲಿದೆ ನೋಡಿ ವಿವರ. ಇದರ ಹೊರತಾಗಿ ಬೇರೆ ತರಕಾರಿ, ಧಾನ್ಯಗಳನ್ನು ಸೇವಿಸಬಾರದು ಎಂದಲ್ಲ.
ಐಷಾರಾಮಿ ಕಾರಿನಲ್ಲಿ ಸಂಚರಿಸುತ್ತಿದ್ದ ಚಾಲಕ ನೀರಿನ ಬಾಟಲಿಯನ್ನು ರಸ್ತೆಯಲ್ಲೇ ಎಸೆಯುತ್ತಾನೆ. ಇದನ್ನು ನೋಡಿದ ಪೊಲೀಸ್ ಅಧಿಕಾರಿಯೊಬ್ಬರು ಮಾಡಿದ ಕೆಲಸಕ್ಕೆ ನೀವು ಶಹಬ್ಬಾಶ್ ಎನ್ನಲೇಬೇಕು. ಸೋಷಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ವಿಡಿಯೋ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಭಾರತದಲ್ಲಿ ಇಂತಹ ಅನೇಕ ಘಟನೆಗಳು ನಡೆಯುತ್ತವೆ. ನಮಗೆ ರಸ್ತೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಬಾಟಲಿ, ಕಸ ಎಸೆಯಬಾರದು ಎಂದು ಎಷ್ಟೇ ಬುದ್ಧಿ ಹೇಳಿದರೂ ಕಲಿಯಲ್ಲ. ಇದೇ ರೀತಿ ಐಷಾರಾಮಿ ಕಾರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬ ಖಾಲಿಯಾದ ನೀರಿನ ಬಾಟಲಿಯನ್ನು ಹೆದ್ದಾರಿಯಲ್ಲೇ ಬಿಸಾಕುತ್ತಾನೆ. ಹಿಂದೆಯೇ ಬೈಕ್ ನಲ್ಲಿ ಬರುತ್ತಿದ್ದ ಪೊಲೀಸ್ ಅಧಿಕಾರಿ ಇದನ್ನು ಗಮನಿಸಿ ಬೈಕ್ ನಿಲ್ಲಿಸಿ ಬಾಟಲಿ ಎತ್ತಿಕೊಳ್ಳುತ್ತಾರೆ.
ಇಂಧೋರ್: ಟ್ರಾಫಿಕ್ ಪೊಲೀಸರನ್ನು ನೋಡಿ ಆನ್ ಲೈನ್ ನಲ್ಲಿ ಕ್ಷಣದಲ್ಲೇ ಹೆಲ್ಮೆಟ್ ತರಿಸಿಕೊಂಡು ಬೈಕ್ ಸವಾರನೊಬ್ಬ ದಂಡದಿಂದ ಬಚಾವ್ ಆದ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಇಂಧೋರ್ ನಲ್ಲಿ. ಸಾಮಾನ್ಯವಾಗಿ ಹೆಲ್ಮೆಟ್ ಹಾಕದೇ ಬಂದು ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡರೆ ದಂಡ ಕಟ್ಟುವುದು ಅನಿವಾರ್ಯ. ಜೊತೆಗೆ ಕೆಲವೊಮ್ಮೆ ಪೊಲೀಸರ ಬೈಗುಳವನ್ನೂ ಕೇಳಬೇಕು. ಇದರಿಂದ ತಪ್ಪಿಸಿಕೊಳ್ಳಲು ಈ ಬೈಕ್ ಸವಾರ ಉಪಾಯ ಮಾಡಿದ್ದಾನೆ. ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಈತನಿಗೆ ದೂರದಲ್ಲೇ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಹಾಕದೇ ಸಂಚರಿಸುವವರನ್ನು ಹಿಡಿದು ದಂಡ ಹಾಕುವುದು ಕಂಡುಬಂದಿದೆ.
ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಐಪಿಎಲ್ 2026 ಆರಂಭಕ್ಕೂ ಮುನ್ನವೇ ಸ್ಟಾರ್ ಆಟಗಾರರು ಕೈಕೊಟ್ಟಿದ್ದಾರೆ. ಮಾರ್ಚ್ 28 ರಿಂದ ಐಪಿಎಲ್ 2026 ಆರಂಭವಾಗಲಿದೆ.ಮೊದಲ ಪಂದ್ಯ ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಮತ್ತು ಹೈದರಾಬಾದ್ ನಡುವೆ ನಡೆಯಲಿದೆ. ಈಗಾಗಲೇ ಐಪಿಎಲ್ ಉದ್ಘಾಟನಾ ಪಂದ್ಯವನ್ನು ಚಿನ್ನಸ್ವಾಮಿ ಮೈದಾನದಲ್ಲಿ ಆಯೋಜಿಸಲು ಕರ್ನಾಟಕ ಸರ್ಕಾರವೂ ಗ್ರೀನ್ ಸಿಗ್ನಲ್ ನೀಡಿದೆ. ಇದರ ನಡುವೆ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ನಾಯಕ ಪ್ಯಾಟ್ ಕುಮಿನ್ಸ್ ಅಲಭ್ಯರಾಗಲಿದ್ದಾರೆ ಎಂಬ ಸುದ್ದಿ ಬಂದಿದೆ.
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸಂಪುಟ ಪುನರಾರಚನೆ, ನಾಯಕತ್ವ ಬದಲಾವಣೆ ವಿಚಾರ ಸದ್ದು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ನಿನ್ನೆ ರಾತ್ರಿ ಕೇವಲ 14 ಸಚಿವರಿಗೆ ಡಿನ್ನರ್ ಮೀಟಿಂಗ್ ಗೆ ಆಹ್ವಾನ ನೀಡಲಾಗಿತ್ತು. ಕೆಲವು ದಿನಗಳ ಹಿಂದೆ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಎಲ್ಲಾ ಶಾಸಕರು, ಸಚಿವರಿಗೆ ಔತಣ ಕೂಟ ಏರ್ಪಡಿಸಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ಬಳಗದವರಿಗೆ ಡಿನ್ನರ್ ಕೂಟ ಆಯೋಜಿಸಿದ್ದಾರೆ.
ಕಾಬೂಲ್: ಅಫ್ಘಾನಿಸ್ತಾನದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಭೀಕರ ದಾಳಿ ನಡೆಸಿರುವ ಪಾಕಿಸ್ತಾನ 400 ಜನರ ಸಾವಿಗೆ ಕಾರಣವಾಗಿದೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಭೀಕರ ದಾಳಿ ನಡೆದಿದೆ. 2,000 ಹಾಸಿಗೆ ಸೌಲಭ್ಯವಿರುವ ಆಸ್ಪತ್ರೆಯ ಮೇಲೆ ಭೀಕರ ಬಾಂಬ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ 400 ಮಂದಿ ಸಾವನ್ನಪ್ಪಿದ್ದು 250 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಈ ಬಗ್ಗೆ ಅಫ್ಘಾನಿಸ್ತಾನ ಉಪ ಸರ್ಕಾರೀ ವಕ್ತಾರ ಹಮ್ದುಲ್ಲಾ ಫಿತ್ರಾತ್ ಅಧಿಕೃತ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮ ಜಯಂತಿ. ಅಪ್ಪು ತಮ್ಮ ಪತ್ನಿಗೆ ಕೋಪ ಬಂದಾಗಲೆಲ್ಲಾ ಇದೇ ಹಾಡು ಹೇಳಿ ರಮಿಸುತ್ತಿದ್ದರಂತೆ. ಪುನೀತ್ ನಮ್ಮನ್ನಗಲಿ 5 ವರ್ಷವಾದರೂ ಅವರ ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ಅವರ ನೆನಪಿನಲ್ಲಿ ಅಭಿಮಾನಿಗಳು ಅದ್ಧೂರಿಯಾಗಿಯೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಇಂದು ಪುನೀತ್ ಅವರ 51 ನೇ ಜನ್ಮದಿನವಾಗಿದೆ. ಪುನೀತ್ ಬಗ್ಗೆ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅಪ್ಪು ಫ್ಯಾನ್ ಡಮ್ ಆಪ್ ನಲ್ಲಿ ಅನುಶ್ರೀಗೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು.
ಬೆಂಗಳೂರು: ಬಿರು ಬೇಸಿಗೆಯ ನಡುವೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ರಾಯನ ಆಗಮನವಾಗಿದೆ. ಇಂದೂ ಈ ಕೆಲವು ಜಿಲ್ಲೆಗಳಿಗೆ ಮಳೆಯ ಸೂಚನೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಾರಂತ್ಯಕ್ಕೆ ಗುಡುಗು ಸಹಿತ ಭರ್ಜರಿ ಮಳೆಯಾಗಿತ್ತು. ಈ ವಾರದ ಮಧ್ಯ ಭಾಗದವರೆಗೂ ರಾಜ್ಯದ ಕೆಲವು ಜಿಲ್ಲೆಗಳಿಗೆ ಮಳೆಯಾಗುವ ಸೂಚನೆಯಿದೆ ಎಂದು ಹವಾಮಾನ ವರದಿಗಳು ಹೇಳಿವೆ. ಅದರಂತೆ ಇಂದು ಕೊಡಗು, ಹಾಸನ, ಮಂಡ್ಯ, ರಾಮನಗರ, ಚಿತ್ರದುರ್ಗ, ಕಲಬುರಗಿ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಸಣ್ಣ ಮಟ್ಟಿಗೆ ಮಳೆಯಾಗುವ ಸೂಚನೆಯಿದೆ.
ಇಂದು ಮಂಗಳವಾರವಾಗಿದ್ದು ಕುಜ ಗ್ರಹ ಪೂಜೆಗೆ ಸೂಕ್ತ ದಿನವಾಗಿದೆ. ಜಾತಕದಲ್ಲಿ ಕುಜದೋಷವಿದ್ದರೆ ಇಂದು ತಪ್ಪದೇ ಅಂಗಾರಕ ಕವಚ ಸ್ತೋತ್ರವನ್ನು ಓದಿ.ಅಸ್ಯ ಶ್ರೀ ಅಂಗಾರಕ ಕವಚಸ್ಯ, ಕಶ್ಯಪ ಋಷೀಃ, ಅನುಷ್ಟುಪ್ ಚಂದಃ, ಅಂಗಾರಕೋ ದೇವತಾ, ಭೌಮ ಪ್ರೀತ್ಯರ್ಥೇ ಜಪೇ ವಿನಿಯೋಗಃ ॥ ಧ್ಯಾನಂರಕ್ತಾಂಬರೋ ರಕ್ತವಪುಃ ಕಿರೀಟೀ ಚತುರ್ಭುಜೋ ಮೇಷಗಮೋ ಗದಾಭೃತ್ ।ಧರಾಸುತಃ ಶಕ್ತಿಧರಶ್ಚ ಶೂಲೀ ಸದಾ ಮಮ ಸ್ಯಾದ್ವರದಃ ಪ್ರಶಾಂತಃ ॥ ಅಥ ಅಂಗಾರಕ ಕವಚಂಅಂಗಾರಕಃ ಶಿರೋ ರಕ್ಷೇತ್ ಮುಖಂ ವೈ ಧರಣೀಸುತಃ ।ಶ್ರವೌ ರಕ್ತಂಬರಃ ಪಾತು ನೇತ್ರೇ ಮೇ ರಕ್ತಲೋಚನಃ ॥ 1 ॥
ಶಿರಸಿ: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ 2ವರ್ಷದ ಬಾಲಕಿಯನ್ನು ವ್ಯಕ್ತಿಯೊಬ್ಬರು ಧಾವಿಸಿ ರಕ್ಷಿಸಿದ ಘಟನೆ ನಗರದ ಕಸ್ತೂರಬಾ ಘಟನೆಯಲ್ಲಿ ನಡೆದಿದೆ. ಬಾವಿಗೆ ಬಿದ್ದ ಅದೃಷ್ಟವಶಾತ್ ಬದುಕುಳಿದ ಬಾಲಕಿಯನ್ನು ಭುವಿ(2) ಎಂದು ಗುರುತಿಸಲಾಗಿದೆ. ಆಟವಾಡುತ್ತಿದ್ದ ಮಗು ಕಾಣದಿದ್ದಾಗ ಆತಂಕಗೊಂಡ ಅಜ್ಜಿ ಸುತ್ತಮುತ್ತ ಹುಡುಕಾಡಿದ್ದಾರೆ. ಬಾವಿನ ಬಳಿ ಹೋದಾಗ ಮಗು ಅಳುವಿನ ಶಬ್ದ ಕೇಳಿಬಂದಿದೆ. ಆತಂಕದೊಂದಿಗೆ ಬಾವಿಯೊಳಗೆ ಇಣುಕಿ ನೋಡಿದಾಗ, ಮಗು
ಬೆಂಗಳೂರು: ಸ್ವತಃ ಕರ್ನಾಟಕ ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರು ಈ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನಕ್ಕೆ ಬೇಸತ್ತು ಸದನದಿಂದ ಹೊರನಡೆದಿರುವುದು ವಿಧಾನಸಭೆ ಇತಿಹಾಸದಲ್ಲೇ ಕರಾಳ ಅಧ್ಯಾಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರು ಈ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನಕ್ಕೆ ಬೇಸತ್ತು ಸದನದಿಂದ ಹೊರನಡೆದಿರುವುದು ರಾಜ್ಯದಲ್ಲಿ ಆಡಳಿತ ಯಂತ್ರ ಎಷ್ಟು ನಿಷ್ಕ್ರಿಯಗೊಂಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಾಗದಷ್ಟು ಅಸಮರ್ಥವಾಗಿರುವ ಕಾಂಗ್ರೆಸ್ ಪಕ್ಷದ ಕರ್ನಾಟಕ ಸರಕಾರವು ಶಾಸನಸಭೆಗೆ ಕನಿಷ್ಠ ಗೌರವವನ್ನೂ ನೀಡದೆ ತನ್ನದೇ ರಾಜಕೀಯದಲ್ಲಿ ಮುಳುಗಿದೆ ಎಂದು ಆಕ್ಷೇಪಿಸಿದ್ದಾರೆ.
ಬೆಂಗಳೂರು: ಯುಗಾದಿ ಮತ್ತು ರಂಜಾನ್ ಸಮಯದಲ್ಲಿ ಪ್ರಯಾಣಿಕರ ಸಂಚಾರ ಹೆಚ್ಚಾಗುವ ನಿರೀಕ್ಷೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) 2,000 ವಿಶೇಷ ಬಸ್ಗಳ ಕಾರ್ಯಾಚರಣೆಯನ್ನು ಘೋಷಿಸಿದೆ.ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಹಬ್ಬದ ಪ್ರಯಾಣದ ಉಲ್ಬಣವನ್ನು ನಿರ್ವಹಿಸಲು ವಿಶೇಷ ಸೇವೆಗಳನ್ನು ಪ್ರಾರಂಭಿಸಲಾಗಿದೆ, ಪ್ರಯಾಣಿಕರು ಮತ್ತು ಯಾತ್ರಾರ್ಥಿಗಳಿಗೆ ಸುಗಮ ಪ್ರಯಾಣವನ್ನು ಖಚಿತಪಡಿಸುತ್ತದೆ.ಮಾರ್ಚ್ 18 ರಿಂದ 20 ರವರೆಗೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಸೇವೆಗಳು ನಡೆಯಲಿದ್ದು, ಮಾರ್ಚ್ 22 ರಂದು ನಗರಕ್ಕೆ ಹಿಂದಿರುಗುವ ಪ್ರಯಾಣವನ್ನು ನಿಗದಿಪಡಿಸಲಾಗಿದೆ.
ದುಬೈ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪುದಾರಿಗೆಳೆಯುವ ಮತ್ತು ಕಪೋಲಕಲ್ಪಿತ ವಿಷಯವನ್ನು ಹರಡಿದ ಆರೋಪದ ಮೇಲೆ ಯುನೈಟೆಡ್ ಅರಬ್ ಎಮಿರೇಟ್ಸ್ನ ಅಧಿಕಾರಿಗಳು 17 ಭಾರತೀಯರು ಸೇರಿದಂತೆ ಹಲವು ವ್ಯಕ್ತಿಗಳನ್ನು ಬಂಧಿಸಿದ್ದಾರೆ.ಯುಎಇ ಅಧಿಕಾರಿಗಳ ಪ್ರಕಾರ, ಇರಾನ್ ಮೇಲೆ ಇತ್ತೀಚಿನ ಯುಎಸ್-ಇಸ್ರೇಲಿ ವೈಮಾನಿಕ ದಾಳಿಯ ನಂತರ ಉಲ್ಬಣಗೊಂಡ ಪ್ರಾದೇಶಿಕ ಉದ್ವಿಗ್ನತೆಗೆ ಸಂಬಂಧಿಸಿದ ತಪ್ಪು ಮಾಹಿತಿ ಮತ್ತು ಕಟ್ಟುಕಥೆಗಳನ್ನು ನಿಗ್ರಹಿಸಲು ಡಿಜಿಟಲ್ ಪ್ಲಾಟ್ಫಾರ್ಮ್ಗಳ ತೀವ್ರ ಮೇಲ್ವಿಚಾರಣೆಯ ನಂತರ ಈ ಬಂಧನಗಳನ್ನು ಮಾಡಲಾಗಿದೆ.
ರಾಯಚೂರು: ಕಳೆದ ಕೆಲ ದಿನಗಳಿಂದ ಬಿಸಿಲ ಬೇಗೆಗೆ ಸುಸ್ತಾಗಿದ್ದ ಜನತೆಗೆ ಜಿಲ್ಲೆಯ ಹಲವೆಡೆ ಇಂದು ಆಲಿಕಲ್ಲು ಮಳೆಯಾಗಿದೆ. ಸುರಿದ ಭಾರೀ ಮಳೆ ಬಿಸಿಲಿನಿಂದ ತತ್ತರಿಸಿದ್ದ ಬಿಸಿಲನಾಡಿನ ಜನರಿತೆಗೆ ಸ್ವಲ್ಪ ತಂಪಾಗಿದೆ.ಜಿಲ್ಲೆಯ ಕವಿತಾಳ, ಪಾಮನಕಲ್ಲೂರು, ವಟಗಲ್, ಅಮಿನಗಡ ಗ್ರಾಮಗಳಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಗುಡುಗು, ಮಿಂಚು ಸಹಿತ ಜೋರಾಗಿ ಮಳೆ ಸುರಿದಿದ್ದು, ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ತಂಪು ನೀಡಿದೆ. ಆಲಿಕಲ್ಲು ಮಳೆಯಾಗಿದ್ದರಿಂದ ಗ್ರಾಮೀಣ ಭಾಗದಲ್ಲಿ ಅಚ್ಚರಿ ಮೂಡಿಸಿದೆ.
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2026 ಕ್ಕೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ 144 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದು ರಾಜ್ಯದಲ್ಲಿ ನಿರ್ಣಾಯಕ ರಾಜಕೀಯ ಯುದ್ಧಕ್ಕೆ ಪಕ್ಷದ ಆರಂಭಿಕ ಸಿದ್ಧತೆಗಳನ್ನು ಸೂಚಿಸುತ್ತದೆ. ಭಾರತದ ಚುನಾವಣಾ ಆಯೋಗವು ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ.ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ನಡೆಯಲಿದೆ, ಇದು