Shorts

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ಯಾವಾಗ ಜೈಲಿನಿಂದ ಬಿಡುಗಡೆಯಾಗುತ್ತಾರೆಂಬ ಕಾಯುವಿಕೆಯಲ್ಲಿ ಅಭಿಮಾನಿಗಳಿದ್ದಾರೆ. ಈ ನಡುವೆ ಕನ್ನಡ ಸಿನಿಮಾ ರಂಗದ ಹಿರಿಯ ನಟ ರವಿಚಂದ್ರನ್ ಅವರು ದರ್ಶನ್ ಬಿಡುಗಡೆ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಫೆ.16ರಂದು 49ನೇ ಹುಟ್ಟುಹಬ್ಬವನ್ನು ದರ್ಶನ್ ಜೈಲಿನಲ್ಲೇ ಆಚರಿಸಿಕೊಂಡರು. ಅದೇ ದಿನ ರವಿಚಂದ್ರನ್ ಅವರು ವೇದಿಕೆಯಲ್ಲಿ ಕಾನಿಸಿಕೊಂಡರು. ಈ ವೇಳೆ ದರ್ಶನ್ ಅಭಿಮಾನಿಗಳು ಡಿಬಾಸ್ ಡಿಬಾಸ್ ಎಂದು ಕೂಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರವಿಚಂದ್ರನ್ ನೋಡ್ತಿರಿ ದರ್ಶನ್ ಇನ್ನೆರಡು ತಿಂಗಳಲ್ಲಿ ಆಚೆ ಬರ್ತಾರೆ. ನನ್ನ ನಾಲಿಗೆಯಿಂದ ಹೇಳಿದೆ ಅಂದ್ಮೇಲೆ ಆಚೆ ಬಂದೇ ಬರುತ್ತಾರೆ. ನಿಮಗೆಲ್ಲ ಅವನು ಡಿ ಬಾಸ್, ನನಗೆ ಮಗ, ನೆನಪಿಟ್ಟುಕೊಳ್ಳಿ. ಇದೆಲ್ಲ ಕೆಟ್ಟ ಘಳಿಗೆ ಅಷ್ಟೇ. ಕೆಟ್ಟ

ಬೆಂಗಳೂರು: ಕಾಂಗ್ರೆಸ್ ಸರಕಾರವು ಬಡವರಿಗೆ ಮನೆ ಕೊಡಬೇಕು; ಭೂರಹಿತರಿಗೆ ಭೂಮಿ ಕೊಡಬೇಕಿತ್ತು. ಆದರೆ, ಈ ಕೆಲಸವನ್ನು ಮಾಡುತ್ತಿಲ್ಲ. ತಾನೇ ಭೂಮಿ ಕಬಳಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಭೂಕಬಳಿಕೆಯಲ್ಲಿ ಸರಕಾರವೇ ನಿರತವಾಗಿದೆ. ಸರಕಾರವು ತಾಲ್ಲೂಕು, ಜಿಲ್ಲೆ, ಮಂಡಲ, ಪಂಚಾಯಿತಿ- ಹೀಗೆ ಎಲ್ಲ ಕಡೆ ನಿವೇಶನ ಪಡೆಯಲು ಅದಕ್ಕೆ ಅಧಿಕಾರ ಇಲ್ಲ. ಕಾನೂನು ಉಲ್ಲಂಘಿಸಿ ಅದು ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ ಲೀಸ್‍ಗೆ ಮುಧೋಳದಲ್ಲಿ ನಿವೇಶನ ಪಡೆಯಲು ಮುಂದಾಗಿತ್ತು. ಆದರೆ, ಇಲಾಖೆಯು ಅದನ್ನು ತಿರಸ್ಕರಿಸಿತ್ತು ಎಂದು ಗಮನ ಸೆಳೆದರು.

ಬೆಂಗಳೂರು: ಆಡಳಿತದಲ್ಲಿ ಸ್ವಚ್ಛತೆ ಮತ್ತು ಪಾರದರ್ಶಕತೆ ತರುವ ಉದ್ದೇಶದಿಂದ 2005 ರಲ್ಲಿ ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ) ನ್ನು ಜಾರಿಗೆ ತರಲಾಯಿತು. ಇದರಡಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರ ಇಲ್ಲಿದೆ ನೋಡಿ. ಮಾಹಿತಿ ಹಕ್ಕು ಕಾಯಿದೆಯ ಅನ್ವಯ ಯಾವ ನಾಗರಿಕರೂ ಸಾರ್ವಜನಿಕ ಪ್ರಾಧಿಕಾರದಿಂದ ಬೇಕಾದ ಮಾಹಿತಿಯನ್ನು ಕೋರಬಹುದು. ಕೇಳಿದ ಮಾಹಿತಿಗೆ ಆಯಾ ಪ್ರಾಧಿಕಾರವು ತ್ವರಿತವಾಗಿ ಉತ್ತರ ನೀಡಬೇಕು. ಮೂವತ್ತು ದಿನಗಳೊಳಗಾಗಿ ಉತ್ತರ ನೀಡುವುದು ಕಡ್ಡಾಯವಾಗಿರುತ್ತದೆ. ಆದರೆ ಕೆಲವೊಂದು ದೇಶದ ಭದ್ರತೆ ಮತ್ತು ರಕ್ಷಣಾ ವಿಭಾಗಕ್ಕೆ ಸಂಬಂಧಿಸಿದ ಕೆಲವೊಂದು ಗೌಪ್ಯ ಮಾಹಿತಿಯನ್ನು ಹೊರತುಪಡಿಸಿ ಉಳಿದೆಲ್ಲಾ ಇಲಾಖೆಗಳ ಮಾಹಿತಿಯನ್ನು ನಾಗಕರಿಕರು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು 49ನೇ ಹುಟ್ಟುಹಬ್ಬವನ್ನು ಜೈಲಿನಲ್ಲೇ ಆಚರಿಸುವಂತಾಗಿದೆ. ಇನ್ನೂ ಪತಿಯ ಬರ್ತಡೇ ಹಿನ್ನೆಲೆ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಮಗ ವಿನೀಶ್‌ ಹಾಗೂ ನಟ ಧನ್ವೀರ್ ಜತೆ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದಾರೆ. ಇನ್ನೂ ಪ್ರತಿ ಭಾರೀ ದರ್ಶನ್‌ ಅಭಿಮಾನಿಗಳ ಜತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವಾಗ ಮಗ ವಿನೀಶ್‌ ಅಲ್ಲಿಗೆ ಬಂದು ಅಪ್ಪನಿಗೆ ಸಾಥ್ ನೀಡುತ್ತಲೇ ಇರುತ್ತಾನೆ. ಇದೀಗ ಅಪ್ಪ ಜೈಲಲ್ಲಿ ಇದ್ರೂ ವಿನೀಶ್‌ ಅಪ್ಪನನ್ನು ನೋಡಲು ಮಿಸ್ ಮಾಡಲಿಲ್ಲ. ತಾಯಿ ಹಾಗೂ ಧನ್ವೀರ್ ಜತೆ ವಿನೀಶ್‌ ಅಪ್ಪನನ್ನು ಭೇಟಿಯಾಗಿದ್ದೇನೆ. ದರ್ಶನ್‌ಗೆ ಶುಭಕೋರಲು ಪತ್ನಿ ವಿಜಯಲಕ್ಷ್ಮಿ ಅವರು ಮಗನೊಂದಿಗೆ ದರ್ಶನ್ ಅವರ ಅಪರೂಪದ ವಿಡಿಯೋವನ್ನು

ದುಬೈ: ಭಾರತ-ಪಾಕಿಸ್ತಾನ ಘರ್ಷಣೆಯಲ್ಲಿ ಈ ಎರಡು ದೇಶಗಳ ನಡುವಿನ ಪಂದ್ಯಾಟ ವೇಳೆ ಹ್ಯಾಂಡ್‌ಶೇಕ್‌ ಆಗಾಗ ಭುಗಿಲೆತ್ತಲೇ ಇರುತ್ತದೆ. ನಿನ್ನೆ ಟಿ20 ವಿಶ್ವಕಪ್‌ ಪಂದ್ಯಾಟದ ವೇಳೆಯೂ ಭಾರತ ಪಾಕ್‌ ಹ್ಯಾಂಡ್‌ಶೇಕ್ ಮಾಡಲಿಲ್ಲ. ಈ ನಡುವೆ ಇದೀಘ ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಶರ್ಮಾ ಹಾಗೂ ಪಾಕ್‌ ಆಟಗಾರ ವಾಸಿಂ ಅಕ್ರಮ್ ಜತೆಗಿನ ವಿಡಿಯೋವೊಂದು ವೈರಲ್ ಆಗುತ್ತಿದೆ. ಭಾರತವು ಪಾಕಿಸ್ತಾನವನ್ನು 61 ರನ್‌ಗಳಿಂದ ಸೋಲಿಸಿತು, ಆದರೆ ಸಾಂಪ್ರದಾಯಿಕ ನಾಯಕರ ಹಸ್ತಲಾಘವವಿಲ್ಲದೆ ಪಂದ್ಯವು ಮತ್ತೊಮ್ಮೆ ಪ್ರಾರಂಭವಾಯಿತು. ಕಳೆದ ವರ್ಷ ದುಬೈನಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಈ ಅಭ್ಯಾಸವನ್ನು ಕೈಬಿಡಲಾಯಿತು.ಕೊಲಂಬೊದಲ್ಲಿ ಆಟದ ನಂತರ, ರೋಹಿತ್ ಟ್ರೋಫಿ ಪ್ರಸ್ತುತಿಗಾಗಿ ಅಕ್ರಮ್ ಜೊತೆಗೆ ಮೈದಾನಕ್ಕೆ ನಡೆದರು. ಇಬ್ಬರು