ಬೆಂಗಳೂರು: ಈ ದೇಶದ ಬಹುಸಂಖ್ಯಾತರು ಆರ್ಎಸ್ಎಸ್ ಅನ್ನು ಅಪ್ಪಿಕೊಂಡು ಇಲ್ಲ, ಒಪ್ಪಿಕೊಂಡು ಇಲ್ಲ. ಇವರು ಈ ದೇಶಕ್ಕಿಂತ, ಸಂವಿಧಾನಕ್ಕಿಂತ, ಕಾನೂನಿಗಿಂತ ದೊಡ್ಡವರೂ ಅಲ್ಲ, ಅತೀತರೂ ಅಲ್ಲ ಎನ್ನುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಮತ್ತೇ ಕಿಡಿಕಾರಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅವರು ಬರೆದುಕೊಂಡಿದ್ದಾರೆ. 'ಒಂದು ಎನ್ಜಿಒ ಮುಖ್ಯಸ್ಥರಿಗೆ ಅತಿ ಭದ್ರತೆಯ ಪ್ರೊಟೊಕಾಲ್ ಸೆಕ್ಯೂರಿಟಿ ನೀಡಿರುವುದೇಕೆ? ಒಂದೇ ಒಂದು ರೂಪಾಯಿ ತೆರಿಗೆ ನೀಡದ ಯಕಶ್ಚಿತ್ ಎನ್ಜಿಒ ಮುಖ್ಯಸ್ಥನಿಗೆ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವಂತಹ ಅನಿವಾರ್ಯ ಏನಿದೆ? ಇವರ ಕೈಯ್ಯಲ್ಲೇ ದೊಣ್ಣೆ, ಬಡಿಗೆಗಳು ಇರುವಾಗ ಹೆಚ್ಚಿನ ಭದ್ರತೆ ಯಾವ ಕಾರಣಕ್ಕೆ?' ಎಂದು ಕೇಳಿದ್ದಾರೆ.
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮಹಾಘಟಬಂಧನ ಮೈತ್ರಿಯನ್ನು ಗೆಲ್ಲಿಸುವಂತೆ ಮತದಾರರಿಗೆ ಮನವಿಯನ್ನು ಮಾಡಿದ್ದಾರೆ. ಈ ಸಂಬಂಧ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. 'ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಬಿಹಾರದ ಮುಂದಿನ ಮುಖ್ಯಮಂತ್ರಿ ಮತ್ತು ರಾಹುಲ್ ಗಾಂಧಿ ಅವರನ್ನು ದೇಶದ ಮುಂದಿನ ಪ್ರಧಾನಿಯನ್ನಾಗಿ ಮಾಡಲು ಮಹಾಘಟಬಂಧನ ಮೈತ್ರಿಯನ್ನು ಬೆಂಬಲಿಸುವಂತೆ ಬಿಹಾರದ ಎಲ್ಲ ಸಹೋದರ ಸದೋದರಿಯರಲ್ಲಿ ವಿನಂತಿ ಮಾಡುತ್ತೇನೆ' ಎಂದಿದ್ದಾರೆ.
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಚಿಕನ್ ಫ್ರೈಗಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ 15ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಚಿಕನ್ ಫ್ರೈ ಕೊಡುವ ವಿಚಾರದಲ್ಲಿ ವಧು-ವರರ ಕಡೆಯವರ ನಡುವೆ ಮಾರಾಮಾರಿ ನಡೆದಿದೆ. ವಧುವಿನ ಕುಟುಂಬದ ಕೆಲವು ಸದಸ್ಯರು ಸ್ವಲ್ಪವಾಗಿ ಚಿಕನ್ ಫ್ರೈ ಅನ್ನು ಬಡಿಸಿದ್ದಾರೆಂದು ವರನ ಕಡೆಯವರು ದೂರಿದ್ದಾರೆ. ಇದು ಸಮಾರಂಭದಲ್ಲಿ ಗೊಂದಲವನ್ನು ಸೃಷ್ಟಿಸಿದೆ. ಅವರನ್ನು ಶಾಂತಗೊಳಿಸಲು, ವಧುವಿನ ಕುಟುಂಬವು ಹೆಚ್ಚಿನ ಚಿಕನ್
ಭಾನುವಾರ ನಡೆದ ODI ವಿಶ್ವಕಪ್ 2025 ರ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಹೊಸ ಇತಿಹಾಸವನ್ನು ಬರೆಯಿತು. ಸತತ ಮೂರು ಸೋಲಿನ ಬಳಿಕ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ನಾಯಕತ್ವದಲ್ಲಿ ಇದೀಗ ಚಾಂಪಿಯನ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಐಸಿಸಿ ಅಧ್ಯಕ್ಷ ಜಯ್ ಶಾ ಅವರಿಂದ ODI ವಿಶ್ವಕಪ್ ಟ್ರೋಫಿಯನ್ನು ಪಡೆಯುವಾಗ ಹರ್ಮನ್ ಪ್ರೀತ್ ನಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಟ್ರೋಫಿಯನ್ನು ಸ್ವೀಕರಿಸಲು ಹೋಗುವಾಗ ಜಯ್ ಶಾ ಅವರ ಪಾದಗಳನ್ನು ಸ್ಪರ್ಶಿಸಲು ಮುಂದಾಗುತ್ತಾರೆ.ಆದರೆ ಶಾ ಅವರು ಅದನ್ನು ಗೌರವದಿಂದಲೇ ನಿರಾಕರಿಸುತ್ತಾರೆ.
ಬಿಹಾರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ, ಅವರ ಪಾಲುದಾರಿಕೆಯು ಬಿಹಾರವನ್ನು "ಜಂಗಲ್ ರಾಜ್" ನಿಂದ ಮುಕ್ತಗೊಳಿಸಿದೆ ಮತ್ತು ರಾಜವಂಶದ ಆಡಳಿತವನ್ನು ಕೊನೆಗೊಳಿಸಿದೆ ಎಂದು ಹೇಳಿದರು. ಆರ್ಜೆಡಿಯ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬ ಮತ್ತು ಕಾಂಗ್ರೆಸ್ ನಾಯಕತ್ವವು ತಮ್ಮ ಸಂತತಿಯನ್ನು ಅಧಿಕಾರದಲ್ಲಿ ಸ್ಥಾಪಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಸಿತಾಮರ್ಹಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ನಿತೀಶ್ ಕುಮಾರ್ ಮತ್ತು ನರೇಂದ್ರ ಮೋದಿ
ಜೈಪುರ: ಸೋಮವಾರ ಮಧ್ಯಾಹ್ನ ಜೈಪುರದ ಹರ್ಮಾಡಾ ಪ್ರದೇಶದಲ್ಲಿ ವೇಗವಾಗಿ ಬಂದ ಡಂಪರ್ ಟ್ರಕ್ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಲೋಹಾ ಮಂಡಿ ಬಳಿ ಸರಣಿ ಡಿಕ್ಕಿಯಲ್ಲಿ ಡಂಪರ್ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಜೈಪುರ ಜಿಲ್ಲಾಧಿಕಾರಿ ಜಿತೇಂದ್ರ ಸೋನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ದೇವಾಲಯದ ಮೂಲ ಶಿಬಿರವಾದ ನಿಲಕ್ಕಲ್ನಲ್ಲಿ ಯಾತ್ರಾರ್ಥಿಗಳು ಮತ್ತು ನಿವಾಸಿಗಳಿಗೆ ಅನುಕೂಲವಾಗುವಂತೆ ಸುಧಾರಿತ ವಿಶೇಷ ಆಸ್ಪತ್ರೆಯನ್ನು ನಿರ್ಮಿಸುವುದಾಗಿ ಕೇರಳ ಆರೋಗ್ಯ ಇಲಾಖೆ ಸೋಮವಾರ ಪ್ರಕಟಿಸಿದೆ.ಆಸ್ಪತ್ರೆ ನಿರ್ಮಾಣಕ್ಕೆ ಮಂಗಳವಾರ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.ಅತ್ಯಾಧುನಿಕ ಸೌಲಭ್ಯವನ್ನು ನಿವಾಸಿಗಳು ಮತ್ತು ಶಬರಿಮಲೆ ಯಾತ್ರಿಕರಿಗೆ ಸೇವೆ ಸಲ್ಲಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ನಿಲಕ್ಕಲ್ನಲ್ಲಿ ಮಂಜೂರು ಮಾಡಿದ ಜಾಗ
ಹೈದರಾಬಾದ್: ಟಿಜಿಎಸ್ಆರ್ಟಿಸಿ ಬಸ್ ಮತ್ತು ಜಲ್ಲಿಕಲ್ಲು ತುಂಬಿದ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ ಭೀಕರ ಅಪಘಾತದಲ್ಲಿ 20 ಜನರು ಸಾವನ್ನಪ್ಪಿ, ಹಲವು ಮಂದಿ ಗಂಭೀರ ಗಾಯಗೊಂಡ ಹೃದಯ ವಿದ್ರಾಹಕ ಘಟನೆ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಖಾನಾಪುರ ಗೇಟ್ ಬಳಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದ್ದು, ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದವರ ಸಂಕಷ್ಟ ಕರುಳು ಹಿಂಡುವಂತಿದೆ. ಸೈಟ್ನ ವೀಡಿಯೊವು ರಸ್ತೆಗೆ ಅಡ್ಡಲಾಗಿ ಉರುಳಿದ ಬಸ್ ಅನ್ನು ತೋರಿಸುತ್ತದೆ, ಗಾಯಗೊಂಡ ಪ್ರಯಾಣಿಕರು ಸಹಾಯಕ್ಕಾಗಿ
ಮೈಸೂರು: ರಾಜ್ಯ ರಾಜಕಾರಣ ಬೆಳವಣಿಗೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡದೇ ಬೇರೆ ಯಾರೇ ಏನೇ ಮಾತನಾಡಿದರೂ ಅದಕ್ಕೆ ಕಿಮ್ಮತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಇಲ್ಲಿ ಸೋಮವಾರ ಹೇಳಿದರು.ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಬಿಹಾರ ಮೂಲದ ಮುಖಂಡರು ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ ಗರಂ ಆದ ಸಿದ್ದು, ಮಾಧ್ಯಮದವರಿಗೆ ಇದು ಬಿಟ್ಟು ಬೇರೆ ವಿಷಯವಿಲ್ಲವೇ ಎಂದು ಮರು ಪ್ರಶ್ನೆ ಮಾಡಿದರು.ಜನ ಏನ್ ಬೇಕಾದ್ರೂ ಮಾತನಾಡುತ್ತಾರೆ. ಹೈಕಮಾಂಡ್ ಹೇಳಬೇಕಲ್ಲವೇ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನಮ್ಮ ಹೈಕಮಾಂಡ್. ಅವರೇನಾದರೂ ಹೇಳಿದ್ದಾರೆಯೇ? ಜನರು ಮಾತನಾಡುವುದಕ್ಕಿಂತ
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಭಾರೀ ಜೈಲು ಸೇರಿರುವ ನಟ ದರ್ಶನ್ ಅವರು ಇದೀಗ ತಿಂಗಳ ಬಳಿಕ ಕಾಣಿಸಿಕೊಂಡಿದ್ದಾರೆ. ಇಂದು ಕೋರ್ಟ್ ವಿಚಾರಣೆಯಿದ್ದ ಕಾರಣ ಪ್ರಕರಣದ ಎಲ್ಲ ಆರೋಪಿಗಳನ್ನು ಹಾಜರುಪಡಿಸಲಾಯಿತು. ಎರಡನೇ ಭಾರೀ ಜೈಲು ಸೇರಿರುವ ದರ್ಶನ್, ಅಲ್ಲಿನ ಸಂಕಷ್ಟವನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲನ್ನು ವಕೀಲರ ಮುಂದೆ ತೋಡಿಕೊಂಡಿದ್ದರು. ಆರೋಗ್ಯಕ್ಕೂ ಪರಿಣಾಮ ಬೀರುತ್ತಿದೆ ಎಂದಿದ್ದರು. ಇನ್ನೂ ತಿಂಗಳ ಬಳಿಕ ದರ್ಶನ್ ಕಾಣಿಸಿಕೊಂಡಿದ್ದಾರೆ.
ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳ ದೋಷಾರೋಪ ಮುಕ್ತಾಯವಾಗಿದೆ. ಎಲ್ಲ ಆರೋಪಿಗಳ ಸಹಿಯನ್ನು ಪಡೆದ ಕೋರ್ಟ್ ವಿಚಾರಣೆಯನ್ನು ನವೆಂಬರ್ 10ಕ್ಕೆ ವಿಚಾರಣೆಯನ್ನು ಮುಂದುವರೆಸಿದೆ. ಬೆಂಗಳೂರಿನ 64ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರಾದ ಆರೋಪಿಗಳು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ ಹಿನ್ನೆಲೆ ಮುಂದಿನ ಹಂತದಲ್ಲಿ ಸಾಕ್ಷ್ಯಗಳ ವಿಚಾರಣೆಯನ್ನು ನವೆಂಬರ್ 10 ಕ್ಕೆ ನಿಗದಿ ಮಾಡಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಭಾರೀ ಜೈಲು ಸೇರಿರುವ ನಟ ದರ್ಶನ್ ಹಾಗೂ ಗ್ಯಾಂಗ್ಗೆ ಇಂದು ಮಹತ್ವದ
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಎರಡನೇ ಬಾರಿ ಬಂಧನವಾದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಮುಖಾಮುಖಿಯಾಗಿದ್ದಾರೆ. ಈ ವೇಳೆ ದರ್ಶನ್ ನೋಡಿ ಪವಿತ್ರಾ ಮಾಡಿದ್ದೇನು? ಇಂದು ದೋಷಾರೋಪ ನಿಗದಿ ಮಾಡುವ ನಿಮಿತ್ತ ಎಲ್ಲಾ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಹಾಗೂ ಪವಿತ್ರಾ ಗೌಡರನ್ನೂ ಪ್ರತ್ಯೇಕ ವಾಹನದಲ್ಲಿ ಕೋರ್ಟ್ ಗೆ ಕರೆತರಲಾಗಿದೆ. ಈ ವೇಳೆ ಕೋರ್ಟ್ ಆವರಣದಲ್ಲಿ ದರ್ಶನ್ ನೋಡಿ ಪವಿತ್ರಾ ಗೌಡ ಹತ್ತಿರ ಬರುವಂತೆ ಕರೆದಿದ್ದಾರೆ.
ಗುಜರಾತ್ನ ಅಹಮದಾಬಾದ್ನ ಬಳಿ ಜೂನ್ 12ರಂದು ಅಪಘಾತಕ್ಕೀಡಾದ ಏರ್ಇಂಡಿಯಾ ವಿಮಾನ ದುರಂತದಲ್ಲಿ 260ಜನ ಸಾವನ್ನಪ್ಪಿದವರಲ್ಲಿ ಬದುಕುಳಿದ ಒಬ್ಬ ಪ್ರಯಾಣಿಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಏರ್ ಇಂಡಿಯಾ ಫ್ಲೈಟ್ AI 171 ರ ಅಪಘಾತದಲ್ಲಿ ಬದುಕುಳಿದ ಏಕೈಕ ವಿಶ್ವಶ್ ಕುಮಾರ್ ರಮೇಶ್ ಅವರು ಅದೇ ದುರ್ಘಟನೆಯಲ್ಲಿ ತಮ್ಮ ಸಹೋದರನನ್ನು ಕಳೆದುಕೊಂಡು ಕುಗ್ಗಿ ಹೋಗಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ. ಅಜಯ್ ಕುಮಾರ್ ರಮೇಶ್ ಬದುಕುಳಿಯಲಿಲ್ಲ. ನನ್ನ ಸಹೋದರನ ಸಾವು ನನ್ನ ಸಂತೋಷವನ್ನೆ ತೆಗೆದುಕೊಂಡಿದೆ.
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನ್ಯಾಯಾಲಯಕ್ಕೆ ಇಂದು ನಟ ದರ್ಶನ್ ರನ್ನು ಹಾಜರುಪಡಿಸುವ ವೇಳೆಗೆ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳನ್ನು ಕಂಡು ನ್ಯಾಯಾಧೀಶರೇ ಗರಂ ಆದ ಘಟನೆ ನಡೆದಿದೆ. ಇಂದು ರೇಣುಕಾಸ್ವಾಮಿ ಮರ್ಡರ್ ಕೇಸ್ ನ ಎಲ್ಲಾ ಆರೋಪಿಗಳ ದೋಷಾರೋಪ ನಿಗದಿಯಾಗಲಿದೆ. ಇದಕ್ಕಾಗಿ ಖುದ್ದಾಗಿ ಎಲ್ಲಾ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಇದಕ್ಕಾಗಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಕರೆತರಲಾಯಿತು. ಆದರೆ ನ್ಯಾಯಾಲಯಕ್ಕೆ ದರ್ಶನ್ ಬರುತ್ತಾರೆಂದು ತಿಳಿದು ಅವರನ್ನು ನೋಡಲು ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಉಡುಪಿ: ಟೀಂ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿಗಳು ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ವ್ಯವಸ್ಥಾಪನಾ ಸಮಿತಿ ಮತ್ತುಅಭಿವೃದ್ಧಿ ಸಮಿತಿ ವತಿಯಿಂದ ಈ ಸಂದರ್ಭದಲ್ಲಿ ಗೌರವಿಸಲಾಯಿತು.ಇನ್ನೂ ದೇವಸ್ಥಾನಕ್ಕೆ ಪ್ರಾಂಗಣದ ಮುಂದಿರುವ ಬೃಹತ್ ಕಲ್ಲಿನ ಕಂಬವನ್ನು ಸೇವೆ ರೂಪದಲ್ಲಿ ಸೂರ್ಯಕುಮಾರ್ ದಂಪತಿ
ಬೆಂಗಳೂರಿನ ಬಾಗಲೂರಿನ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ನಾಯಿ ಮೇಲೆ ಮನೆಕೆಲಸದಾಕೆಯೊಬ್ಬಳು ನೆಲಕ್ಕೆ ಬಡಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.ಸಿಸಿಟಿವಿಯಲ್ಲಿ ಸೆರೆಯಾಗಿರುವ ಕ್ರೂರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮನೆಗೆಲಸದ ಮಹಿಳೆಯೊಬ್ಬರು ಲಿಫ್ಟ್ನಲ್ಲಿ ಕ್ಲೋಸ್ಡ್ ಸರ್ಕ್ಯೂಟ್ ಟೆಲಿವಿಷನ್ (ಸಿಸಿಟಿವಿ) ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ತನ್ನ ಮಾಲೀಕರ ಸಾಕು ನಾಯಿಯನ್ನು ಕೊಂದಿದ್ದಾರೆ.
ಬೆಳಗಾವಿ: ಇಲ್ಲಿನ ಖಾನಾಪುರ ಬಳಿ ಸುಳೇಗಾಳಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಎರಡು ಆನೆಗಳು ಸಾವಿಗೀಡಾಗಿರುವ ಬಗ್ಗೆ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಅವರು ನೋವು ವ್ಯಕ್ತಪಡಿಸಿ, ತನಿಖೆಗೆ ಆದೇಶ ನೀಡಿದ್ದಾರೆ.ಕಳೆದ ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಆನೆಗಳು ಓಡಾಟ ನಡೆಸುತ್ತಿದ್ದರು, ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳದೇ ಕರ್ತವ್ಯ ಲೋಪ ಮಾಡಿರುವುದೇ ಆನೆಗಳ ಸಾವಿಗೆ ಕಾರಣ ಎಂಬ ಆರೋಪವಿದೆ.
ಹಿಟ್ ಸಿನಿಮಾಗಳಲ್ಲಿ ಒಂದಾಗಿರುವ ಕಾಂಚನಾ ನಾಲ್ಕರ ಭಾಗಕ್ಕೆ ಇದೀಗ ವರ್ಗದ ಬಗ್ಗೆ ಭಾರೀ ಕುತೂಹಲವನ್ನು ಮೂಡಿಸಿದೆ. ಈ ಮಧ್ಯೆ ಇದೀಗ ಈ ಚಿತ್ರ ತಂಡದ ಜತೆ ನಟಿ ಪೂಜಾ ಹೆಗ್ಡೆ ಮತ್ತು ನೋರಾ ಫತೇಹಿ ಸೇರಿಕೊಂಡಿದ್ದಾರೆ. ಈ ಮೂಲಕ ನೋರಾ ಫತೇಹಿ ಅವರು ಅವರು ತಮಿಳು ಚಿತ್ರರಂಗಕ್ಕೆ ಪ್ರವೇಶವನ್ನು ಮಾಡುತ್ತಿದ್ದಾರೆ. ಇತರ ಪಾತ್ರವರ್ಗದ ಸದಸ್ಯರನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಹಾರರ್, ಕಾಮಿಡಿ, ಥ್ರಿಲ್ಲರ್ ಸಿನಿಮಾ ಒಂದಕ್ಕಿಂತ ಒಂದು ಹಿಟ್ ಪ್ರದರ್ಶನವಾಯಿತು. ಇದೀಗ ನಾಲ್ಕನೇ ಭಾಗಕ್ಕೆ ಪಾತ್ರ ವರ್ಗ ಸಿದ್ಧವಾಗಿದೆ.
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಕೋರ್ಟ್ ಚಿಂತೆಯಾದರೆ ಅವರ ಅಭಿಮಾನಿಗಳಿಗೆ ನಮ್ ಬಾಸ್ ನ ನೋಡಬಹುದು ಎಂಬ ಖುಷಿ. ದರ್ಶನ್ ಮತ್ತು ಪ್ರಮುಖ 7 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಂದು ಎಲ್ಲಾ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲಾಗುತ್ತಿದೆ. ಕೋರ್ಟ್ ನಲ್ಲಿ ಇಂದು ದೋಷಾರೋಪ ಪಟ್ಟಿ ನಿಗದಿಯಾಗಲಿದ್ದು ಎಲ್ಲಾ ಆರೋಪಿಗಳೂ ಹಾಜರಿರಬೇಕಾಗುತ್ತದೆ. ಪ್ರತಿಯೊಬ್ಬ ಆರೋಪಿಯನ್ನೂ ಕೋರ್ಟ್ ಕಟಕಟೆಗೆ ಕರೆಸಿ ನ್ಯಾಯಾಧೀಶರು ಅವರ ಮೇಲಿರುವ ಆರೋಪಗಳನ್ನು ಓದಿ ಹೇಳಲಿದ್ದಾರೆ.
ಮುಂಬೈ: ಮೊದಲ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಬಳಿಕ ಭಾರತೀಯ ಮಹಿಳಾ ಕ್ರಿಕೆಟ್ ತಾರೆಯರ ಸೆಲೆಬ್ರೇಷನ್ ಮುಗಿಲುಮುಟ್ಟಿದೆ. ಇಂದು ಬೆಳ್ಳಂಬೆಳಿಗ್ಗೆಯೇ ಒಂದೇ ಬೆಡ್ ನಲ್ಲಿ ನಾಲ್ವರು ಸ್ನೇಹಿತರು ವಿಶ್ವಕಪ್ ಜೊತೆಗೆ ಪೋಸ್ ಕೊಟ್ಟಿರುವ ಫೋಟೋವೊಂದನ್ನು ಸ್ಮೃತಿ ಮಂಧಾನ ಮತ್ತು ಜೆಮಿಮಾ ರೊಡ್ರಿಗಸ್ ಪ್ರಕಟಿಸಿದ್ದಾರೆ. ವಿಶ್ವಕಪ್ ಗೆದ್ದ ಬಳಿಕ ಹುಡುಗಿಯರ ಸೆಲೆಬ್ರೇಷನ್ ಹುಡುಗರನ್ನೂ ಮೀರಿಸುವಂತಿತ್ತು. ವಿಶ್ವಕಪ್ ಟ್ರೋಫಿ ಸ್ವೀಕರಿಸಲು ಬರುವಾಗಲೇ ನಾಯಕಿ ಹರ್ಮನ್ ಪ್ರೀತ್ ಕೌರ್ ಡ್ಯಾನ್ಸ್ ಮಾಡಿಕೊಂಡೇ ಬಂದಿದ್ದರು. ಟ್ರೋಫಿ ಜೊತೆಗೂ ಭಾರತೀಯ ಕ್ರಿಕೆಟಿಗರು ಮೈದಾನಕ್ಕೆ ಸುತ್ತು ಹೊಡೆದು ಸಂಭ್ರಮಿಸಿದ್ದರು.
ಬೆಂಗಳೂರು: ವಾರದ ಆರಂಭದಲ್ಲೇ ಚಿನ್ನದ ದರ ಏರಿಕೆ ಸೂಚಿಸುತ್ತಿದೆ. ಪರಿಶುದ್ಧ ಚಿನ್ನದ ದರ ಮತ್ತು 18,22, 24 ಕ್ಯಾರೆಟ್ ಚಿನ್ನದ ದರ ಇಂದು ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತ ಇಳಿಕೆ ಕಂಡಿತ್ತು. ಹಬ್ಬ ಮುಗಿದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿತ್ತು. ಆದರೆ ಇಂದು ಪರಿಶುದ್ಧ ಚಿನ್ನದ ದರ ಕೊಂಚ ಏರಿಕೆಯಾಗಿದೆ. ಮೊನ್ನೆ ಪರಿಶುದ್ಧ ಚಿನ್ನದ ದರ 1,23,660.00 ರೂ.ಗಳಿತ್ತು. ಇಂದು ಮತ್ತೆ ಏರಿಕೆಯಾಗಿದ್ದು 1,24,525.00 ರೂ.ಗಳಷ್ಟಾಗಿದೆ.
ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ಮಹಿಳೆಯರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಜೆಮಿಮಾ ರೊಡ್ರಿಗಸ್ ಬ್ಯಾಟಿಂಗ್ ಪ್ರದರ್ಶನ ನೋಡಿ ಕೆಲವರು ಆಕೆಯನ್ನು ತೀರಾ ಕೆಳಮಟ್ಟಕ್ಕಿಳಿದು ಟ್ರೋಲ್ ಮಾಡುತ್ತಿದ್ದಾರೆ. ಸೆಮಿಫೈನಲ್ ನಲ್ಲಿ ಶತಕ ಸಿಡಿಸಿ ಆಸ್ಟ್ರೇಲಿಯಾದಂತಹ ದೈತ್ಯ ತಂಡವನ್ನು ಸೋಲಿಸಲು ಕಾರಣವಾಗಿದ್ದೇ ಜೆಮಿಮಾ. ಆಕೆಯ ಅಂತಹ ಒಂದು ಇನಿಂಗ್ಸ್ ಪುರುಷ ಕ್ರಿಕೆಟ್ ನಲ್ಲೂ ಕಾಣಲು ಅಪರೂಪ. ಕ್ರಿಕೆಟ್ ಇತಿಹಾಸ ಎಂದೆಂದೂ ನೆನಪಿನಲ್ಲುಳಿಯುವಂತಹ ಪ್ರದರ್ಶನ ನೀಡಿದ್ದರು. ಈ ಪಂದ್ಯದ ಬಳಿಕ ಜೆಮಿಮಾ ಬೈಬಲ್ ನಲ್ಲಿ ನೀವು ಅಚಲವಾಗಿ ನಿಂತರೆ ದೇವರು ನಿಮಗಾಗಿ ಹೋರಾಡುತ್ತಾನೆ ಎಂಬ ಮಾತಿದೆ ಎಂದು ತಮ್ಮ ಧರ್ಮಗ್ರಂಥದ ಉಲ್ಲೇಖ ಮಾಡಿದ್ದರು. ಅಲ್ಲದೆ ಜೀಸಸ್ ಗೆ ಧನ್ಯವಾದ ಸಲ್ಲಿಸಿದ್ದರು.
ಬೆಂಗಳೂರು: ಸೂಪರ್ ಹಿಟ್ ಕಾಂತಾರ ಚಾಪ್ಟರ್ 1 ಸಿನಿಮಾ ಈಗ ಅಮೆಝೋನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ. ಆದರೆ ಸಿನಿಮಾದ ಸಬ್ ಟೈಟಲ್ ಅವಾಂತರಗಳು ಈಗ ನೆಟ್ಟಿಗರಿಂದ ಭಾರೀ ಟೀಕೆಗೊಳಗಾಗಿದೆ. ಕಾಂತಾರ ಚಾಪ್ಟರ್ 1 ಸಿನಿಮಾ ಪ್ರೇಕ್ಷಕರಿಗೆ ಅರ್ಥವಾಗಲಿ ಎಂಬ ಉದ್ದೇಶಕ್ಕೆ ಸಬ್ ಟೈಟಲ್ ಕೂಡಾ ಹಾಕಲಾಗುತ್ತಿದೆ. ಆದರೆ ಇಂಗ್ಲಿಷ್ ನಿಂದ ಕನ್ನಡಕ್ಕೆ ಬರುವಾಗ ಸಬ್ ಟೈಟಲ್ ಅರ್ಥ ಹೋಗಿ ಅನರ್ಥವಾಗುತ್ತಿದೆ. ಇದು ವೀಕ್ಷಕರ ಟೀಕೆಗೆ ಗುರಿಯಾಗಿದೆ. ಉದಾಹರಣೆಗೆ ಬೆರ್ಮೆಯನ್ನು ಕಟ್ಟಿ ಹಾಕಿ ರಾಜ ಕುಲಶೇಖರ ಪ್ರಶ್ನೆ ಮಾಡುತ್ತಿರುವ ಸನ್ನಿವೇಶದಲ್ಲಿ ಸಬ್ ಟೈಟಲ್ ಸಂತಾನೋತ್ಪತ್ತಿ ಸಂಗೀತ ಎಂದು ಬರುತ್ತಿದೆ.
ಅರ್ಷ್ ದೀಪ್ ಸಿಂಗ್ ರನ್ನು ಕಡೆಗಣಿಸಿ ಹರ್ಷಿತ್ ರಾಣಾಗೆ ಪದೇ ಪದೇ ಅವಕಾಶ ನೀಡುತ್ತಿದ್ದ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ರನ್ನು ಈಗ ನೆಟ್ಟಿಗರು ಇನ್ನಿಲ್ಲದಂತೆ ರೋಸ್ಟ್ ಮಾಡುತ್ತಿದ್ದಾರೆ.ಆಸ್ಟ್ರೇಲಿಯಾ ವಿರುದ್ಧ ಮೊದಲ ಎರಡು ಟಿ20 ಪಂದ್ಯಗಳಿಗೆ ಈ ಮಾದರಿಯ ಸ್ಪೆಷಲಿಸ್ಟ್ ಬೌಲರ್ ಅರ್ಷ್ ದೀಪ್ ಸಿಂಗ್ ರನ್ನು ಕಡೆಗಣಿಸಿ ತಮ್ಮ ಮೆಚ್ಚಿನ ಹರ್ಷಿತ್ ರಾಣಾಗೆ ಗೌತಮ್ ಗಂಭೀರ್ ಅವಕಾಶ ಕೊಟ್ಟಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.ಕೊನೆಗೆ ಈಗ ಮೂರನೇ ಪಂದ್ಯದಲ್ಲಿ ಭಾರತ ಗೆಲ್ಲುವ ಒತ್ತಡದಲ್ಲಿದ್ದಾಗ ಗಂಭಿರ್ ಅನಿವಾರ್ಯವಾಗಿ ಹರ್ಷಿತ್ ರನ್ನು ಪಕ್ಕಕ್ಕಿಟ್ಟು ಅರ್ಷ್ ದೀಪ್ ಸಿಂಗ್ ರನ್ನು ಆಡಿಸಿದ್ದಾರೆ.
ಬೆಂಗಳೂರು: ಕಾಡುಗಳ್ಳ ವೀರಪ್ಪನ್ ಇದ್ದಾಗ ಅರಣ್ಯ ಸೇಫ್ ಆಗಿತ್ತು. ಆದರೆ ಈಗ ಅಕ್ರಮ ಚಟುವಟಿಕೆಗಳೇ ಹೆಚ್ಚಾಗಿದೆ ಎಂದು ಅರಣ್ಯ ಸಚಿವರ ಮುಂದೆ ರೈತರು ಆಕ್ರೋಶ ಹೊರಹಾಕಿದ್ದಾರೆ. ಚಾಮರಾಜನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ರೈತರು ಪಾಲ್ಗೊಂಡಿದ್ದಾರೆ. ಈ ವೇಳೆ ರೈತ ಮುಖಂಡರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ರೈತ ಮುಖಂಡ ಎಚ್ ಸಿ ಮಹೇಶ್ ಕುಮಾರ್, ಕಾಡುಗಳ್ಳ ವೀರಪ್ಪನ್ ಇರುವಾಗಲೇ ಕಾಡು ಚೆನ್ನಾಗಿತ್ತು. ಆದರೆ ಈಗ ಅಕ್ರಮಗಳು ಹೆಚ್ಚಾಗಿವೆ. ಇದನ್ನು ನೋಡುತ್ತಿದ್ದರೆ ಆತ ಇದ್ದಿದ್ದರೆ ಚೆನ್ನಾಗಿತ್ತು ಎನಿಸುತ್ತಿದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ವಿಜೇತರಾದ ಬಳಿಕ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ ಹಿರಿಯ ತಾರೆ ಜೂಲಾನ್ ಗೋಸ್ವಾಮಿ ಬಳಿ ಕ್ಷಮೆ ಕೇಳಿದ್ದಾರೆ. ಇದಕ್ಕೆ ಒಂದು ಕಾರಣವೂ ಇದೆ. ಭಾರತ ಮಹಿಳಾ ಕ್ರಿಕೆಟ್ ನಲ್ಲಿ ಮಿಂಚಿ ಈಗ ನಿವೃತ್ತಿಯಾದ ತಾರೆಯರ ಪೈಕಿ ಜೂಲಾನ್ ಗೋಸ್ವಾಮಿ ಕೂಡಾ ಪ್ರಮುಖರು. ವೇಗದ ಬೌಲರ್ ಭಾರತದ ಪರ ವಿಶ್ವಕಪ್ ಗಳಲ್ಲಿ ಆಡಿದ್ದರು. ಈ ಹಿಂದೆ ಭಾರತ ತಂಡ ಫೈನಲ್ ಗೆ ತಲುಪಿದ್ದಾಗ ಜೂಲಾನ್ ತಂಡದಲ್ಲಿದ್ದರು. ಆದರೆ ಆಗ ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ.
ಮುಂಬೈ: ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಖುಷಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಾರೆಯರು ಪ್ರೇಕ್ಷಕರೆಲ್ಲರೂ ಮೈದಾನದಿಂದ ತೆರಳಿದ ಬಳಿಕ ವಿಶಿಷ್ಟ ಹಾಡಿನ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ. ಆಫ್ರಿಕಾವನ್ನು ಸೋಲಿಸಿ ಮೊದಲ ಬಾರಿಗೆ ಮಹಿಳೆಯರು ವಿಶ್ವಕಪ್ ಗೆದ್ದ ಬಳಿಕ ಭರ್ಜರಿ ಸಂಭ್ರಮಾಚರಣೆ ಮಾಡಿದ್ದಾರೆ. ಪರಸ್ಪರ ಕಣ್ಣೀರು ಹಾಕಿ, ತಬ್ಬಿ, ಮುದ್ದಾಡಿ ಸಂಭ್ರಮಾಚರಣೆ ನಡೆದಿತ್ತು. ಮೈದಾನಕ್ಕೆ ಒಂದು ಸುತ್ತು ಹಾಕಿ ಪ್ರೇಕ್ಷಕರಿಗೂ ಧನ್ಯವಾದ ಸಲ್ಲಿಸಿದ್ದಾರೆ.ಪ್ರೇಕ್ಷಕರೆಲ್ಲರೂ ತೆರಳಿದ ಬಳಿಕವೂ ಆಟಗಾರರ ಸೆಲೆಬ್ರೇಷನ್ ಮುಗಿದಿರಲಿಲ್ಲ.
ಮುಂಬೈ: ವೈಯಕ್ತಿಕವಾಗಿ ವೈಮನಸ್ಯಗಳೇನೇ ಇರಲಿ, ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ನಿನ್ನೆ ಏಕದಿನ ವಿಶ್ವಕಪ್ ಗೆಲ್ಲುತ್ತಿದ್ದಂತೇ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಜೊತೆಗೆ ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಹಿಳಾ ಕ್ರಿಕೆಟ್ ನ್ನು ಹಲವು ವರ್ಷಗಳಿಂದ ಫಾಲೋ ಮಾಡುತ್ತಿದ್ದರೆ ಹರ್ಮನ್ ಮತ್ತು ಮಿಥಾಲಿ ರಾಜ್ ನಡುವಿನ ಸಂಘರ್ಷ ಗೊತ್ತಿರುತ್ತದೆ. ಈ ಹಿಂದೆ ಇಬ್ಬರ ನಡುವೆ ನಡೆದ ಜಗಳ ಮಹಿಳಾ ಕ್ರಿಕೆಟ್ ನಲ್ಲಿ ವಿವಾದವೆಬ್ಬಿಸಿತ್ತು. ಹರ್ಮನ್ ನಾಯಕಿಯಾದ ಬಳಿಕ ಮಿಥಾಲಿ ರಾಜ್ ರನ್ನು ಏಕಾ ಏಕಿ ಆಡುವ ಬಳಗದಿಂದ ಕೈ ಬಿಡಲಾಗಿತ್ತು. ಇದರ ವಿರುದ್ಧ ಮಿಥಾಲಿ ಬಹಿರಂಗವಾಗಿ ಸಿಡಿದೆದ್ದಿದ್ದರು.
ಹೈದರಾಬಾದ್: ಕರ್ನೂಲ್ ಬಸ್ ದುರಂತದ ಶಾಕ್ ಮಾಸುವ ಮುನ್ನವೇ ತೆಲಂಗಾಣದಲ್ಲಿ ಮತ್ತೊಂದು ಭೀಕರ ಬಸ್ ದುರಂತ ಸಂಭವಿಸಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವಲ್ಲಾ ಬಳಿಯ ಮಿರ್ಜಗುಡ್ಡದಲ್ಲಿ ಹೈದರಾಬಾದ್- ಬಿಜಾಪುರ ಹೆದ್ದಾರಿಯಲ್ಲಿ ಇಂದು ಬಸ್ ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ 16 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಜಲ್ಲಿ ತುಂಬಿದ್ದಟ್ರಕ್ ಅತೀ ವೇಗದಲ್ಲಿ ಬಂದು ವಿರುದ್ಧ ದಿಕ್ಕಿನಿಂದ ಢಿಕ್ಕಿ ಹೊಡೆದಿದೆ. ಟ್ರಕ್ ಚಾಲಕನ ಅತಿಯಾದ ವೇಗದ ಚಾಲನೆಯೇ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಬೆಂಗಳೂರು: ಆರ್ ಎಸ್ಎಸ್ ನೋಂದಣಿ ಮಾಡಿಕೊಂಡಿಲ್ಲ, ಅದಕ್ಕೆ ಡೊನೇಷನ್ ಯಾರು ಕೊಡ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆಗೆ ನೆಟ್ಟಿಗರು ಹಾಗಿದ್ದರೆ ರಾಜಕೀಯ ಪಕ್ಷಗಳಿಗೆ ಯಾರೆಲ್ಲಾ ಡೊನೇಷನ್ ಕೊಡ್ತಿದ್ದಾರೆ ಹೇಳಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಆರ್ ಎಸ್ಎಸ್ ವಿರುದ್ಧ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿರುವ ಪ್ರಿಯಾಂಕ್ ಖರ್ಗೆ, ಒಂದು ವೇಳೆ ಸಂಘ ನ್ಯಾಯಯುತವಾಗಿದ್ದರೆ ನೋಂದಣಿ ಮಾಡಿಸಿಕೊಳ್ಳಲಿ. ಇತರೆ ಎನ್ ಜಿಒಗಳಂತೆ ನೋಂದಣಿ ಮಾಡಿಕೊಂಡು ಕಾನೂನು ರೀತ್ಯಾ ಮಾಡಲಿ. ಅಷ್ಟಕ್ಕೂ ಇದಕ್ಕೆ ಅಷ್ಟೊಂದು ಡೊನೇಷನ್ ಕೊಡ್ತಿರೋರು ಯಾರು ಎಂದು ಬಹಿರಂಗಪಡಿಸಲಿ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದರು.
ಮುಂಬೈ: ದಕ್ಷಿಣ ಆಫ್ರಿಕಾವನ್ನು 52 ರನ್ ಗಳಿಂದ ಸೋಲಿಸಿ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿರುವ ಭಾರತ ಮಹಿಳಾ ಕ್ರಿಕೆಟಿಗರು ಇತಿಹಾಸ ಬರೆದಿದ್ದಾರೆ. ಇನ್ನು, ಟ್ರೋಫಿ ಸ್ವೀಕರಿಸಲು ಹರ್ಮನ್ ಪ್ರೀತ್ ಕೌರ್ ಹೊಸ ಸ್ಟೈಲ್ ತೋರಿಸಿಕೊಟ್ಟಿದ್ದು ಇದು ಪುರುಷ ಕ್ರಿಕೆಟಿಗರಿಗೂ ಟ್ರೆಂಡ್ ಆಗಲಿದೆ. ಭಾರತ ಪಂದ್ಯ ಗೆಲ್ಲುತ್ತಿದ್ದಂತೇ ಆಟಗಾರರ ಸಂಭ್ರಮ ಮೇರೆ ಮೀರಿತ್ತು. ಪರಸ್ಪರ ತಬ್ಬಿಕೊಂಡು ಖುಷಿಯಿಂದ ಕಣ್ಣೀರು ಹಾಕುತ್ತಾ ಗೆಲುವಿನ ಕೇಕೆ ಹಾಕಿದರು. ಮೈದಾನದಲ್ಲಿ ಆಟಗಾರರ ಸಂಭ್ರಮ ಮೇರೆ ಮೀರಿತ್ತು.
ಮುಂಬೈ: ಮಹಿಳಾ ಏಕದಿನ ವಿಶ್ವಕಪ್ ಚಾಂಪಿಯನ್ ಆದ ಖುಷಿಯಲ್ಲಿ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಕಾಲಿಗೆ ಬಿದ್ದಾಗ ಜಯ್ ಶಾ ಏನು ಮಾಡಿದ್ರು ಈ ವಿಡಿಯೋ ನೋಡಿ. ದಕ್ಷಿಣ ಆಫ್ರಿಕಾವನ್ನು 52 ರನ್ ಗಳಿಂದ ಸೋಲಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಚಾಂಪಿಯನ್ ಆದ ಖುಷಿಯಲ್ಲಿ ಸಂಭ್ರಮಿಸಿತು. ಈ ಗೆಲುವನ್ನು ಪ್ರತಿಯೊಬ್ಬ ಭಾರತೀಯರೂ ಸಂಭ್ರಮಿಸಿದರು. ಇನ್ನು, ಪ್ರಶಸ್ತಿ ವಿತರಣೆ ಸಮಾರಂಭದ ವೇಳೆ ನಾಯಕಿ ಹರ್ಮನ್ ಪ್ರೀತ್ ಕೌರ್ ಮುಖದಲ್ಲಿ ಖುಷಿ ಎದ್ದು ಕಾಣುತ್ತಿತ್ತು.
ಬೆಂಗಳೂರು: ಈ ವರ್ಷ ಮಳೆಗಾಲ ಮುಗಿಯಿತು ಇನ್ನು ಮಳೆಯ ಸಾಧ್ಯತೆಯಿಲ್ಲ ಎಂದು ನೀವಂದುಕೊಂಡಿದ್ದರೆ ಸುಳ್ಳು. ಈ ವಾರದ ಹವಾಮಾನ ವರದಿ ಏನು ಹೇಳುತ್ತಿದೆ ತಪ್ಪದೇ ಗಮನಿಸಿ.ಉತ್ತರ ಕನ್ನಡ, ಉಡುಪಿ, ಕೊಡಗು, ಮಂಡ್ಯ, ಬೆಂಗಳೂರು, ಚಾಮರಾಜನಗರ, ರಾಮನಗರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಹಾವೇರಿ, ರಾಯಚೂರು, ಕೊಪ್ಪಳ, ಬೀದರ್, ಬೆಳಗಾವಿ, ಯಾದಗಿರಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಬುಧವಾರದಿಂದ ಅಥವಾ ಇನ್ನು ಕೆಲವೆಡೆ ವಾರಂತ್ಯಕ್ಕೆ ಮಳೆಯ ಸೂಚನೆಯಿದೆ.ಕಳೆದ ವಾರ ಸೈಕ್ಲೋನ್ ಪರಿಣಾಮದಿಂದ ರಾಜ್ಯದ ಬಹುತೇಕ ಕಡೆ ಮಳೆಯಾಗಿತ್ತು.
ಇಂದು ಸೋಮವಾರವಾಗಿದ್ದು ಶಿವನಿಗೆ ವಿಶೇಷವಾದ ದಿನವಾಗಿದೆ. ಇಂದು ಶಿವ ಹೃದಯಂ ಸ್ತೋತ್ರವನ್ನು ತಪ್ಪದೇ ಪಾರಾಯಣ ಮಾಡಿ. ಇದರಿಂದ ಶಿವನ ಅನುಗ್ರಹಕ್ಕೆ ಪಾತ್ರರಾಗುತ್ತೀರಿ.ಅಸ್ಯ ಶ್ರೀ ಶಿವಹೃದಯಸ್ತೋತ್ರ ಮಹಾಮಂತ್ರಸ್ಯ ವಾಮದೇವ ಋಷಿಃ ಪಂಕ್ತ್ಯೈಶ್ಛಂಧಃ ಶ್ರೀಸಾಂಬಸದಾಶಿವ ದೇವತಾಃ ಓಂ ಬೀಜಂ ನಮಃ ಶಕ್ತಿಃ ಶಿವಾಯೇತಿ ಕೀಲಕಂ ಮಮ ಚತುರ್ವರ್ಗ ಫಲಾಪ್ತಯೇ ಶ್ರೀಸಾಂಬಸದಾಶಿವ ಹೃದಯ ಮಂತ್ರ ಜಪೇ ವಿನಿಯೋಗಃ |ಋಷ್ಯಾದಿನ್ಯಾಸಃ |ವಾಮದೇವ ಋಷಿಭ್ಯೋ ನಮಃ ಶಿರಸಿ | ಪಂಕ್ತ್ಯೈಶ್ಛಂದಸೇ ನಮಃ ಮುಖೇ | ಶ್ರೀಸಾಂಬಸದಾಶಿವಾಯ ದೇವತಾಯೈ ನಮಃ ಹೃದಿ | ಓಂ ಬೀಜಾಯ ನಮಃ ಗುಹ್ಯೇ | ನಮಃ ಶಕ್ತಯೇ ನಮಃ ಪಾದಯೋಃ
ಮುಂಬೈ: ಭಾರತ ಮಹಿಳೆಯರು ಮೊದಲ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲುತ್ತಿದ್ದಂತೇ ಮೈದಾನದಲ್ಲಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಕಣ್ಣೀರು ಹಾಕಿದರು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮಹಿಳೆಯರ ಏಕದಿನ ವಿಶ್ವಕಪ್ ಪಂದ್ಯ ವೀಕ್ಷಿಸಲು ಇಂದು ಮೈದಾನಕ್ಕೆ ಕ್ರಿಕೆಟ್ ಜಗತ್ತಿನ ದಿಗ್ಗಜರೇ ಆಗಮಿಸಿದ್ದರು. ಸಚಿನ್ ತೆಂಡುಲ್ಕರ್, ರೋಹಿತ್ ಶರ್ಮಾ ದಂಪತಿ, ವಿವಿಎಸ್ ಲಕ್ಷ್ಮಣ್, ಸುನಿಲ್ ಗವಾಸ್ಕರ್ ಸೇರಿದಂತೆ ದಿಗ್ಗಜರು ಪಂದ್ಯ ವೀಕ್ಷಿಸಿದ್ದಾರೆ. ಅದರಲ್ಲೂ ರೋಹಿತ್ ಶರ್ಮಾ ಶುರುವಿನಿಂದ ಕೊನೆಯವರೆಗೂ ಮೈದಾನದಲ್ಲಿದ್ದು ಪಂದ್ಯ ವೀಕ್ಷಿಸಿದ್ದಾರೆ. ಭಾರತೀಯ ಮಹಿಳೆಯರು ವಿಕೆಟ್ ಪಡೆದಾಗಲೆಲ್ಲಾ ಗ್ಯಾಲರಿಯಲ್ಲಿ ಕೂತು ಖುಷಿಪಟ್ಟಿದ್ದಾರೆ.
ಮುಂಬೈ: ವರ್ಮ, ಶರ್ಮ ಕಮಾಲ್.. ಭಾರತ ಮಹಿಳೆಯರು ಇಷ್ಟು ವರ್ಷಗಳಿಂದ ಕಾದಿದ್ದ ವಿಶ್ವಕಪ್ ಕೊನೆಗೂ ಒಲಿದು ಬಂದಿದೆ. ದಕ್ಷಿಣ ಆಫ್ರಿಕಾವನ್ನು 52 ರನ್ ಗಳಿಂದ ಸೋಲಿಸಿದ ಭಾರತೀಯ ವನಿತೆಯರು ವಿಶ್ವಕಪ್ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ7 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 45.3 ಓವರ್ ಗಳಲ್ಲಿ 246 ರನ್ ಗಳಿಸಲಷ್ಟೇ ಶಕ್ತವಾಯಿತು. ಆಫ್ರಿಕಾ ಪರ ನಾಯಕಿ ವಾಲ್ವಾರ್ಡ್ ಶತಕ ಸಿಡಿಸಿ ಭಾರತಕ್ಕೆ ಆತಂಕ ತಂದಿಟ್ಟರು. ಆದರೆ ಕೊನೆಗೂ 101 ರನ್ ಸಿಡಿಸಿದ್ದ ಅವರ ವಿಕೆಟ್ ದೀಪ್ತಿ ಶರ್ಮಾ ಪಡೆದಾಗ ಭಾರತ ಗೆಲುವಿಗೆ ಸನಿಹವಾಯಿತು.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿ ಬಗ್ಗೆ ಭಾರೀ ಸದ್ದು ಆಗುತ್ತಿರುವ ಬೆನ್ನಲ್ಲೇ ಹೇಳಿಕೆ ಕೊಡುತ್ತಿರುವ ನಾಯಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ವಿಚಾರವಾಗಿ ಯಾರು ದಣಿವಾಗೋದು ಬೇಡ. ಿನ್ನೂ ನವೆಂಬರ್ ಕ್ರಾಂತಿ ವಿಚಾರವಾಗಿ ತಾವು ಹಾಗೂ ಸಿದ್ದರಾಮಯ್ಯ ಅವರು ಮಾತಾಡಿದರಷ್ಟೇ ಅಧಿಕೃತ. ಅದಕ್ಕಷ್ಟೇ ಬೆಲೆ. ನಾವಿಬ್ರು ಏನು ಮಾತಾಡಿಕೊಂಡಿದ್ದೇವೆಯೋ ಅದರಂತೆ ನಡೆದುಕೊಳ್ತೇವೆ ಅಂತ ಹೇಳಿದರು.
ಹೋಬಾರ್ಟ್: ಆಸ್ಟ್ರೇಲಿಯಾದ ಹೋಬಾರ್ಟ್ ನ ಬೆಲ್ಲೆರಿವ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗಳ ಅಮೋಘ ಜಯ ಗಳಿಸಿತು. .ಮೊದಲು ಬೌಲಿಂಗ್ ಮಾಡಿ, ಆಸ್ಟ್ರೇಲಿಯವನ್ನು 187 ರನ್ಗೆ ಕಟ್ಟಿ ಹಾಕಿದ ಭಾರತ ತಂಡ 5 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಗುರಿ ಮುಟ್ಟಿದೆ.ಭಾರತದ ಪರ ಅಭಿಷೇಕ್ ಶರ್ಮಾ 16 ಎಸೆತಕ್ಕೆ 25ರನ್, ಶುಭ್ಮನ್ ಗಿಲ್ 12 ಎಸೆತಕ್ಕೆ 15 ರನ್, ಸೂರ್ಯ ಕುಮಾರ್ ಯಾದವ್ 11 ಎಸೆತಕ್ಕೆ 24, ತಿಲಕ್ ವರ್ಮಾ 26ಎಸೆತಕ್ಕೆ 29ರನ್, ಅಕ್ಸರ್ ಪಟೇಲ್ 12 ಎಸೆತಕ್ಕೆ 17 ರನ್ ಗಳಿಸಿದರು.
ಬಿಹಾರ: ವಿಧಾನಭಾ ಚುನಾವಣೆ ಪ್ರಚಾರದ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಡೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಾರಿ ವೇಳೆ ಕೊಳದಲ್ಲಿ ಮೀನು ಹಿಡಿಯುತ್ತಿದ್ದ ಗುಂಪನ್ನು ನೋಡಿ, ಸ್ವತಃ ರಾಹುಲ್ ಗಾಂಧಿ ಅವರೇ ಸಾಂಪ್ರದಾಯಿಕ ಮೀನು ಹಿಡಿಯುವ ಚಟುವಟಿಕೆಯಲ್ಲಿ ಭಾಗಿಯಾದರು.ವಿಐಪಿ ಮುಖ್ಯಸ್ಥ ಮತ್ತು ಮಹಾಘಟಬಂಧನ್ನ ಉಪಮುಖ್ಯಮಂತ್ರಿ ಮುಖೇಶ್ ಸಹಾನಿ, ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಹಿಂದಿನ ಹಲವು ಚುನಾವಣಾ ಪ್ರಚಾರದ ವೇಳೆ
ಬೆಂಗಳೂರು: ಬಿಜೆಪಿಯವರು ಆರ್ಎಸ್ಎಸ್ನ ಗುಲಾಮವರು ಎನ್ನುವ ಮೂಲಕ ಮತ್ತೇ ಪ್ರಿಯಾಂಕ್ ಖರ್ಗೆ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ಪಥಸಂಚಲನ ವಿಚಾರವಾಗಿ ಜಟಾಪಟಿಗಳು ನಡೆಯುತ್ತಿದೆ. ನಿನ್ನೆ ಅದರ ಮುಖ್ಯಸ್ಥರು ಮಾತನಾಡಿದ್ದಾರೆ. ಬಿಜೆಪಿಯವರಿಗೆ ಆರ್ಎಸ್ಎಸ್ನ ಬಗ್ಗೆ ಮಾತನಾಡದಿದ್ದರೆ ಟಿಕೆಟ್ ಸಿಗಲ್ಲ ಎಂದರು. ಆರ್ಎಸ್ಎಸ್ ಅನುಮತಿ ಸಿಗದ ಕಾರಣ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕ ಇನ್ನೂ ಆಗಿಲ್ಲ ಎಂದು ಲೇವಡಿ ಮಾಡಿದರು.
ಆಂಧ್ರಪ್ರದೇಶ: ಶನಿವಾರದಂದು ಏಕಾದಶಿ ದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಎಂಟು ಮಹಿಳೆಯರು ಮತ್ತು ಓರ್ವ ಬಾಲಕ ಸೇರಿದಂತೆ 9 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಪೊಲೀಸರು ಶ್ರೀಕಾಕುಳಂ ಜಿಲ್ಲೆಯ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಿದ್ದಾರೆ.ಪ್ರವೇಶ ದ್ವಾರಗಳಲ್ಲಿ ಒಂದನ್ನು ಮುಚ್ಚಿದಾಗ ಮತ್ತು ಮೊದಲು ಅನುಮತಿಸಿದ ಭಕ್ತರ ಗುಂಪು ಗ್ರಿಲ್ ದಾರಿ ಮಾಡಿಕೊಟ್ಟ ನಂತರ ಮೆಟ್ಟಿಲುಗಳಿಂದ ಬಿದ್ದಾಗ ದುರಂತ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.ದುರಂತದ ಹಿನ್ನೆಲೆಯಲ್ಲಿ ನಾವು ಭಕ್ತರು ದೇವಸ್ಥಾನಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದೇವೆ ಎಂದು ಶ್ರೀಕಾಕುಳಂ ಪೊಲೀಸ್
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ 60 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಹಾಸ್ಯದ ಪೋಸ್ಟ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ಗಮನ ಸೆಳೆದರು. ತಮ್ಮ ಸಂದೇಶದಲ್ಲಿ, ತರೂರ್ ಅವರು ನಟನಿಗೆ ನಿಜವಾಗಿಯೂ 60 ವರ್ಷ ವಯಸ್ಸಾಗಿದೆಯೇ ಎಂದು ತಮಾಷೆಯಾಗಿ ಪ್ರಶ್ನಿಸಿದರು, ಸಮರ್ಥನೆಯನ್ನು ಬೆಂಬಲಿಸಲು "ಯಾವುದೇ ದೃಶ್ಯ ಸಾಕ್ಷ್ಯವಿಲ್ಲ" ಎಂದು ಹೇಳಿದರು ಮತ್ತು SRK ಹಿಮ್ಮುಖವಾಗಿ ವಯಸ್ಸಾಗಿರಬಹುದು ಎಂದು ಹೇಳಬಹುದು ಎಂದಿದ್ದಾರೆ.ಶಾರುಕ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ 60 ತುಂಬಿದೆ ಎಂಬುವುದರ ಬಗ್ಗೆ ನನಗೆ ಅನುಮಾನಗಳಿಗೆ. ನಾನಷ್ಟೆ ಅಲ್ಲ ಸತ್ಯಶೋಧಕರು, ವಿಧಿವಿಜ್ಞಾನ ತಜ್ಞರು ಕೂಡ ಈ ಕುರಿತು ತನಿಖೆ ನಡೆಸಿದ್ದು, ನಿಮಗೆ 60 ವರ್ಷ ತುಂಬಿದೆ ಎಂಬುವುದನ್ನು
ನವಿ ಮುಂಬೈ: ಇಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ 2025ರ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಪಂದ್ಯಾಟಕ್ಕೆ ಮಳೆಯಿಂದ ಅಡಚಣೆಯಾಗಿದೆ. ನವಿ ಮುಂಬೈಯ ಡಿ.ವೈ.ಪಾಟೀಲ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯವು ನಡೆಯುತ್ತಿದ್ದು, ಮಳೆಯಿಂದಾಗಿ ಇದೀಗ ಟಾಸ್ ನಡೆದಿಲ್ಲ. ಎರಡು ತಂಡಗಳು ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಹರ್ಮನ್ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ
ಹೋಬರ್ಟ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಹೋಬರ್ಟ್ನ ಬೆಲ್ಲೆರಿವ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ.ಮೊದಲ ಪಂದ್ಯ ಮಳೆಗೆ ಆಹುತಿಯಾಗಿದೆ. ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ ತಂಡ ನಾಲ್ಕು ವಿಕೆಟ್ಗಳಿಂದ ಗೆದ್ದಿದೆ. ಸರಣಿಯನ್ನು ಗೆಲ್ಲಬೇಕಾದರೆ ಭಾರತ ತಂಡಕ್ಕೆ ಇಂದಿನ ಪಂದ್ಯ ನಿರ್ಣಾಯಕವಾಗಿದೆ. ಮೂರನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ತಂಡವು ಸರಣಿಯಲ್ಲಿ ಸಮಬಲ ಸಾಧಿಸಬಹುದು. ಅಲ್ಲದೆ 4ನೇ ಮತ್ತು 5ನೇ ಪಂದ್ಯಗಳಲ್ಲಿ ಗೆದ್ದು ಸರಣಿ ಜಯಿಸುವ ಅವಕಾಶವನ್ನು ಹೊಂದಿದೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯನ್ನು ವಾಯುಮಾಲಿನ್ಯ ವಿಪರೀತ ಮಟ್ಟಕ್ಕೆ ತಲುಪಿರುವ ಬೆನ್ನಲ್ಲೇ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.ದೆಹಲಿಯಲ್ಲಿ ದಟ್ಟವಾಗಿ ಆವರಿಸುವ ಕೆಟ್ಟ ಹೊಗೆಯನ್ನು ಸ್ವಚ್ಛಗೊಳಿಸಿ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಅವರು ಪ್ರಧಾನಿ ನರೇಂದ್ರ ಮೋದಿ, ಪರಿಸರ ಸಚಿವ ಭೂಪೇಂದರ್ ಯಾದವ್ ಮತ್ತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಆಗ್ರಹಿಸಿದ್ದಾರೆ.ನಮ್ಮ ರಾಜಕೀಯ ಮನಸ್ಥಿತಿಯನ್ನು ಬಿಟ್ಟು ನಾವೆಲ್ಲರೂ ಒಗ್ಗೂಡಿ ವಾಯುಮಾಲಿನ್ಯದ ಸಮಸ್ಯೆಯನ್ನು ಪರಿಹರಿಸುವ ಸಮಯ ಇದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಕಾರ್ಯನಿರ್ವಹಿಸಬೇಕಾಗಿದೆ, ಈ ಭೀಕರ ಪರಿಸ್ಥಿತಿಯನ್ನು ತಗ್ಗಿಸಲು ಸರ್ಕಾರಗಳು ತೆಗೆದುಕೊಳ್ಳುವ ಯಾವುದೇ ಕ್ರಮಗಳನ್ನು ನಾವೆಲ್ಲರೂ ಬೆಂಬಲಿಸುತ್ತೇವೆ ಮತ್ತು ಸಹಕರಿಸುತ್ತೇವೆ ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಟನಲ್ ಯೋಜನೆ ವಿರುದ್ಧ ಬಿಜೆಪಿ ತಿರುಗಿಬಿದ್ದಿದೆ. ಈ ಸಂಬಂಧ ಬಿಜೆಪಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ.ವಿಪಕ್ಷ ನಾಯಕ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬೆಂಗಳೂರು ರಕ್ಷಿಸಿ, ಟನಲ್ ರೋಡ್ ನಿಲ್ಲಿಸಿ ಘೋಷಣೆ ಅಡಿಯಲ್ಲಿ ಸಹಿ ಸಂಗ್ರಹ ಅಭಿಯಾನ ಶುರುವಾಗಿದೆ.ಲಾಲ್ಬಾಗ್ ಗುಡ್ಡದ ಮೇಲೆ ಜನರ ಜೊತೆ ಬಿಜೆಪಿ ನಾಯಕರು ಕುಳಿತ ಅಭಿಯಾನ ನಡೆಸುತ್ತಿದ್ದಾರೆ. ವಿಪಕ್ಷ ನಾಯಕ ಅಶೋಕ್ ಟನಲ್ ರೋಡ್ ಮಾರ್ಗದ ಬಗ್ಗೆ ಜಂಟಿ ನಿರ್ದೇಶಕ ಜಗದೀಶ್ ಬಳಿ ಮಾಹಿತಿ ಕೇಳಿ ಪಡೆದಿದ್ದಾರೆ. ಅಲ್ಲದೇ ಜಿಬಿಎಯ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಜೊತೆ ಚರ್ಚೆ ನಡೆಸಿದರು.
ಮುಂಬೈ: ಮಹಿಳಾ ಏಕದಿನ ವಿಶ್ವಕಪ್ ಫೈನಲ್ಗೆ ಇದೇ ದೇಶವೇ ಕಾತರದಿಂದ ಕಾಯುತ್ತಿದೆ. ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಕ್ಕೆ ಪ್ರಶಸ್ತಿಗಾಗಿ ಸೆಣಸಾಟ ನಡೆಸುತ್ತಿವೆ. ಒಂದು ವೇಳೆ ಇಂದು ತವರಿನಲ್ಲಿ ಭಾರತದ ವನಿತೆಯರು ಚಾರಿತ್ರಿಕ ಸಾಧನೆ ಮಾಡಿದಲ್ಲಿ ಊಹೆಗೂ ನಿಲುಕದಷ್ಟು ಬಹುಮಾನ ಜೇಬಿಗಿಳಿಸಲಿದ್ದಾರೆ.ಭಾರತ ತಂಡವು ಸೆಮಿಫೈನಲ್ನಲ್ಲಿ ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನ ಮಣಿಸಿ ಭಾರತ ಮಹಿಳಾ ಕ್ರಿಕೆಟ್ ತಂಡ 2025ನೇ ಸಾಲಿನ ವಿಶ್ವಕಪ್ ಫೈನಲ್ ತಲುಪಿದೆ. ದಕ್ಷಿಣ ಆಫ್ರಿಕಾ ತಂಡವು ಮಾಜಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ಐಸಿಸಿಯಿಂದ ಚಾಂಪಿಯನ್ ತಂಡಕ್ಕೆ ₹ 37.3 ಕೋಟಿ ಹಾಗೂ ರನ್ನರ್ ಅಪ್ ತಂಡಕ್ಕೆ 20 ಕೋಟಿ ಬಹುಮಾನ ಸಿಗಲಿದೆ.
ನ್ಯೂಜಿಲೆಂಡ್: ಹೊಡಿಬಡಿ ಖ್ಯಾತಿಯ ಟಿ20 ಕ್ರಿಕೆಟ್ಗೆ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಭಾನುವಾರ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಸರಣಿ ಪ್ರಾರಂಭವಾಗುವ ಕೆಲವು ದಿನಗಳ ಮೊದಲೇ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ಗೆ 35 ವರ್ಷದ ಕೇನ್ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಅವರು ಆಟಲಿದ್ದಾರೆ.ನ್ಯೂಜಿಲೆಂಡ್ ಪರ 93 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ವಿಲಿಯಮ್ಸನ್ ಅವರನ್ನು ಇತ್ತೀಚೆಗೆ 2026ರ ಋತುವಿಗಾಗಿ ಐಪಿಎಲ್ ಫ್ರಾಂಚೈಸಿ ಲಖನೌ ಸೂಪರ್ ಜೈಂಟ್ಸ್ನ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು.
ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ಜೆಡಿಯು ಮುಖ್ಯಸ್ಥ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಿಗ್ ಶಾಕ್ ಎದುರಾಗಿದೆ. ಜೆಡಿಯು ಪಕ್ಷದಿಂದ ಕಣಕ್ಕಿಳಿದಿರುವ ಮಾಜಿ ಶಾಸಕ ಅನಂತ್ ಸಿಂಗ್ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದಾರೆ.ಜನ ಸುರಾಜ್ ಬೆಂಬಲಿಗ ದುಲಾರ್ ಚಂದ್ ಯಾದವ್ ಕೊಲೆ ಪ್ರಕರಣದಲ್ಲಿ ಜೆಡಿಯುನಿಂದ ಸ್ಪರ್ಧಿಸಿರುವ ಮಾಜಿ ಶಾಸಕನನ್ನು ಇಂದು ಮುಂಜಾನೆ ಪೊಲೀಸರು ಬಂಧಿಸಿದ್ದಾರೆ.ರಾಷ್ಟ್ರೀಯ ಜನತಾ ದಳ ಜೊತೆ ಸಂಬಂಧ ಹೊಂದಿದ್ದ ಗ್ಯಾಂಗ್ಸ್ಟರ್ ಯಾದವ್, ಗುರುವಾರ ಮೊಕಾಮಾದಲ್ಲಿ ತಮ್ಮ ಸೋದರಳಿಯ ಪ್ರಿಯದರ್ಶಿ ಪಿಯೂಷ್ ಪರ ಪ್ರಚಾರ ನಡೆಸುತ್ತಿದ್ದಾಗ ಹತ್ಯೆಗೀಡಾಗಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷದಿಂದ ಪಿಯೂಷ್ ಸ್ಪರ್ಧಿಸುತ್ತಿದ್ದಾರೆ.
ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇಂದು ಒಣ ಹವೆ ಮುಂದುವರಿಯಲಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಇದೇ ರೀತಿಯ ವಾತಾವರಣ ಇರಲಿದೆ.ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಉಂಟಾಗಿದ್ದ ಸೈಕ್ಲೋನ್, ವಾಯುಭಾರ ಕುಸಿತದ ಪ್ರಭಾವ ಕಡಿಮೆಯಾಗಿದೆ. ಹೀಗಾಗಿ ರಾಜ್ಯದಲ್ಲೂ ಹಿಂಗಾರಿನ ಬಿರುಸು ಇಳಿಕೆಯಾಗಿದೆ. ತಾಪಮಾನ ಪ್ರಮಾಣ ಏರಿಕೆ ಆಗುತ್ತಿದೆ. ನವೆಂಬರ್ 5ರಿಂದ ಮತ್ತೆ ಮಳೆ ಬರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಕೆಲವು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿದ್ದ ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸೈಕ್ಲೋನ್ ಮೋಂತಾ ಅಬ್ಬರ ಕಡಿಮೆಯಾಗಿರುವ ಕಾರಣ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮರೆಯಾಗಿದ್ದು ಒಣಹವೆ ಕಂಡುಬರುತ್ತಿದೆ.