Shorts

ಬೆಂಗಳೂರು: ಐಪಿಎಲ್ 2026 ಕ್ಕೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಚಾಲನೆ ಸಿಕ್ಕಿದೆ. ಪಂದ್ಯದ ಅರಂಭಕ್ಕೆ ಮುನ್ನ ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ಅಪರೂಪದ ಸಂಗಮಕ್ಕೆ ಚಿನ್ನಸ್ವಾಮಿ ಮೈದಾನ ಸಾಕ್ಷಿಯಾಯಿತು. ಟೀಂ ಇಂಡಿಯಾ ಮುಖ್ಯ ಕೋಚ್ ಆಗಿದ್ದಾಗ ಅನಿಲ್ ಕುಂಬ್ಳೆ ಮತ್ತು ಅಂದು ನಾಯಕರಾಗಿದ್ದ ವಿರಾಟ್ ಕೊಹ್ಲಿ ನಡುವೆ ಭಿನ್ನಾಭಿಪ್ರಾಯಗಳು ಬಂದಿತ್ತು. ಕೊನೆಗೆ ಅನಿಲ್ ಕುಂಬ್ಳೆ ನಮ್ಮಿಬ್ಬರ ನಡುವೆ ಹೊಂದಾಣಿಕೆ ಸರಿ ಬರುತ್ತಿಲ್ಲ ಎಂದು ಹೇಳಿಕೆ ನೀಡಿ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಇಂದು ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯದ ಆರಂಭಕ್ಕೆ ಮುನ್ನ ವಿರಾಟ್ ಕೊಹ್ಲಿ ತಯಾರಾಗುತ್ತಿದ್ದರೆ ಅನಿಲ್ ಕುಂಬ್ಳೆಯನ್ನು ನೋಡಿ ತಾವಾಗಿಯೇ ಹೋಗಿ ಆಲಂಗಿಸಿಕೊಂಡು ಮಾತನಾಡಿಸಿದ್ದಾರೆ.

ಶನಿವಾರ ಶನಿದೇವನಿಗೆ ವಿಶೇಷವಾದ ದಿನವಾಗಿದ್ದು ಇಂದು ಶನಿ ದೋಷವಿರುವವರು ಎಳ್ಳೆಣ್ಣೆ ಸಮರ್ಪಣೆ ಮಾಡುತ್ತಾರೆ. ಸಾಮಾನ್ಯವಾಗಿ ಶನಿ ದೇವನಿಗೆ ಎಳ್ಳೆಣ್ಣೆ ಸಮರ್ಪಣೆ ಮಾಡುವುದು ಪದ್ಧತಿ. ಆದರೆ ಎಳ್ಳೆಣ್ಣೆ ಯಾಕೆ ಕೊಡುತ್ತಾರೆ ಎಂಬುದರ ಪೌರಾಣಿಕ ಹಿನ್ನಲೆಯನ್ನು ತಿಳಿದುಕೊಳ್ಳಿ. ಶನಿ ದೋಷವಿರುವವರು ಶನಿ ದೇವನಿಗೆ ಎಳ್ಳೆಯನ್ನು ಸಮರ್ಪಿಸುವುದರಿಂದ ದೋಷದ ಪ್ರಭಾವ ತಕ್ಕ ಮಟ್ಟಿಗೆ ತಗ್ಗುವುದು ಎಂಬ ನಂಬಿಕೆಯಿದೆ. ಇದಕ್ಕಾಗಿ ಇಂದು ಶನಿ ದೇವಾಲಯಕ್ಕೆ ತೆರಳಿ ಎಳ್ಳೆಣ್ಣೆ ಸಮರ್ಪಿಸುವುದು ಅಥವಾ ಎಳ್ಳೆಣ್ಣೆ ದೀಪ ಹಚ್ಚುತ್ತಾರೆ. ಆದರೆ ಇದಕ್ಕೆ ಕಾರಣವೂ ಇದೆ. ಈ ಹಿಂದೆ ತ್ರೇತಾಯುಗದಲ್ಲಿ ರಾಮಸೇತು ನಿರ್ಮಾಣ ಮಾಡುವಾಗ ಆಂಜನೇಯ ಸ್ವಾಮಿಯ ಶಕ್ತಿ ಪರೀಕ್ಷೆ ಮಾಡಲು ಶನಿ ದೇವ ಯುದ್ಧ ಮಾಡಿದ್ದನಂತೆ.

ಮಳೆಯಲ್ಲಿ ನೆನೆದು ಒದ್ದೆಯಾಗಲಿದ್ದ ಬೆಕ್ಕಿನ ಮರಿಯಂತೆ ನಾಯಿಯೊಂದು ತಂದೆಯಂತೆ ರಕ್ಷಣೆ ನೀಡಿ ಕಾಪಾಡಿದ ಕ್ಯೂಟ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಬೆಕ್ಕು ಮತ್ತು ನಾಯಿ ಪರಸ್ಪರ ಶತ್ರುಗಳಂತೆ ಆಡುತ್ತಾರೆ. ಬೆಕ್ಕುಗಳು ಓಡಾಡುವುದನ್ನು ಕಂಡರೆ ನಾಯಿಗಳು ಅಟ್ಟಾಡಿಸಿಕೊಂಡು ಹೋಗುತ್ತವೆ. ಅಪರೂಪಕ್ಕೆ ಕೆಲವು ಸಾಕು ನಾಯಿಗಳು ಮಾತ್ರ ಅದೇ ಮನೆಯ ಬೆಕ್ಕುಗಳ ಜೊತೆ ಫ್ರೆಂಡ್ ಶಿಪ್ ಮಾಡುವುದು ಇದೆ. ಇಲ್ಲಿಯೂ ಅದೇ ರೀತಿ ಆಗಿದೆ. ಜೋರಾಗಿ ಮಳೆ ಸುರಿಯುತ್ತಿರುವಾಗ ಬೆಕ್ಕಿನ ಮರಿಯೊಂದು ನೆನೆಯುತ್ತಿತ್ತು. ಆ ಬೆಕ್ಕಿಗೆ ಮಳೆ ನೀರು ಬೀಳದಂತೆ ನಾಯಿಯೊಂದು ಅದನ್ನು ತನ್ನ ದೇಹದೊಳಗೆ ಬೆಚ್ಚಗೆ ಇರಿಸಿತ್ತು. ವಿಶೇಷವೆಂದರೆ ನಾಯಿ ಮಳೆಗೆ ಸಂಪೂರ್ಣ ಒದ್ದೆಯಾಗಿತ್ತು.