ಬೆಂಗಳೂರು: ಮಹಿಳಾ ಮೀಸಲಾತಿ ಜಾರಿ ಸಂಬಂಧ ಸಂಸತ್ ಅಧಿವೇಶನ ನಡೆಯಲಿದೆ. ನಾರಿ ಶಕ್ತಿ ವಂದನ್ ಮಸೂದೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ತಮ್ಮ ಹಕ್ಕಿನ ಬಗ್ಗೆ ಮುಂದಿನ 10 ದಿನಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ.ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆಯನ್ನು ಸ್ವೀಕಾರ ಮಾಡಿ ಎಂದು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು. ಮುಂದೆ ವಿವಿಧ ಕ್ಷೇತ್ರಗಳ ತಜ್ಞರನ್ನು ಗುರುತಿಸಿ ಅವರಿಗೆ ಟಿಕೆಟ್ ಕೊಡುವಂತಾಗಲಿದೆ ಎಂದು ಆಶಿಸಿದರು. ಮಹಿಳಾ ಮೀಸಲಾತಿ ಜಾರಿಗಾಗಿ ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಮರ್ಪಿಸಿದರು.
ಯುವಕನೊಬ್ಬ ಬೃಹತ್ ಗಾತ್ರದ ಹಾವಿಗೆ ಕಿಸ್ ಮಾಡಲು ಹೋಗಿದ್ದು ಮುಂದೆ ಆಗಿದ್ದು ಮಾತ್ರ ಭಯಾನಕ. ಇಂತಹದ್ದೊಂದು ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗಿನ ದಿನಗಳಲ್ಲಿ ಜನ ರೀಲ್ಸ್ ವಿಡಿಯೋ ಮಾಡಲು ಏನೇನೋ ಹುಚ್ಚು ಸಾಹಸ ಮಾಡುತ್ತಾರೆ. ಅದರಲ್ಲೂ ಹಾವು ಹಿಡಿಯುವುದನ್ನು ಲೈವ್ ಆಗಿ ತೋರಿಸಲು ಹೋಗುತ್ತಾರೆ. ಆದರೆ ಕೆಲವೊಮ್ಮೆ ಇದರಿಂದ ಅನಾಹುತಗಳಾಗುವುದೂ ಇದೆ. ಇದೇ ರೀತಿ ಯುವಕನೊಬ್ಬ ಬೃಹತ್ ಗಾತ್ರದ ಹಾವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಹಾವಿನ ಬಾಯಿಯ ಭಾಗವನ್ನು ಮುಖದ ಹತ್ತಿರ ತಂದು ಆತ ಕಿಸ್ ಮಾಡಲು ಹೋಗುತ್ತಾನೆ. ಇದನ್ನು ಇನ್ನೊಬ್ಬಾತ ವಿಡಿಯೋ ಮಾಡುತ್ತಿರುತ್ತಾನೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ವಾರಂತ್ಯಕ್ಕೆ ಪರಿಶುದ್ಧ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿತ್ತು. ಪರಿಶುದ್ಧ ಚಿನ್ನದ ದರ ವಾರಂತ್ಯಕ್ಕೆ 1,54,755.00 ರೂ.ಗಳಿತ್ತು. ಆದರೆ ಇಂದು ಏರಿಕೆಯಾಗಿದ್ದು 1,55,440.00 ರೂ.ಗಳಷ್ಟಿದೆ.
ನವದೆಹಲಿ: ರಾಜಕೀಯವಾಗಿ ಸದಾ ಒಬ್ಬರ ಮೇಲೊಬ್ಬರು ಟೀಕೆ ಮಾಡುತ್ತಲೇ ಇರುವ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಇಂದು ಪಾರ್ಲಿಮೆಂಟ್ ಆವರಣದಲ್ಲಿ ಖಾಸ್ ಬಾತ್ ಗಳನ್ನಾಡಿದ್ದು ಇಬ್ಬರ ಅಪರೂಪದ ವಿಡಿಯೋ ವೈರಲ್ ಆಗಿದೆ. ರಾಜಕೀಯವಾಗಿ ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ ಪರಸ್ಪರ ಟೀಕೆ ಮಾಡುತ್ತಲೇ ಇರುತ್ತಾರೆ. ಆದರೆ ಇಂದು ಇಬ್ಬರೂ ನಾಯಕರು ಪರಸ್ಪರ ಉಭಯಕುಶಲೋಪರಿ ನಡೆಸಿದ್ದು ಗಮನಾರ್ಹವಾಗಿತ್ತು. ಇಬ್ಬರ ಅಪರೂಪದ ಕ್ಷಣಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಧುರಾ: ರಾಧೆ ರಾಧೆ ಎಂದು ಭಜನೆ ಮಾಡುತ್ತಾ ಸಂತೋಷದಿಂದ ಸಾಗುತ್ತಿರುವಾಗಲೇ ಬೋಟ್ ಮುಳುಗಿದ್ದು 10 ಮಂದಿ ಜಲ ಸಮಾಧಿಯಾಗಿದ್ದಾರೆ. ಕೊನೆಯ ಕ್ಷಣದ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮಧುರಾದಲ್ಲಿ ನಡೆದಿದೆ. ಕೃಷ್ಣ ಜನ್ಮಭೂಮಿಗೆ ಪ್ರವಾಸಕ್ಕೆ ಬಂದಿದ್ದ ಭಕ್ತರು ಯಮುನಾ ನದಿಯಲ್ಲಿ ಬೋಟಿಂಗ್ ಮಾಡುತ್ತಿದ್ದರು. ಈ ವೇಳೆ ಎಲ್ಲರೂ ರಾಧೆ ರಾಧೆ ಎಂದು ಭಜನೆ ಮಾಡುತ್ತಾ ಸಂತೋಷದಿಂದ ಸಾಗುತ್ತಿದ್ದರು. ಆದರೆ ಬೋಟ್ ಇದ್ದಕ್ಕಿದ್ದಂತೆ ಮುಳುಗಡೆಯಾಗಿದ್ದು ಹಲವರು ನದಿಯ ಆಳಕ್ಕೆ ಬಿದ್ದಿದ್ದಾರೆ. ಇದರಿಂದ ಸುಮಾರು 10 ಮಂದಿ ಪ್ರಾಣ ಕಳೆದುಕೊಂಡಿದ್ದು 22 ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.
ಶನಿ ದೋಷ ಎಂದರೆ ಸಾಕು, ಕಷ್ಟಗಳ ಸರಮಾಲೆ ಕಟ್ಟಿಟ್ಟ ಬುತ್ತಿ ಎಂದುಕೊಳ್ಳುತ್ತೇವೆ. ಶನಿ ದೋಷ ಯಾಕೆ ಬರುತ್ತದೆ ಗೊತ್ತಾ? ಇಲ್ಲಿದೆ ನೋಡಿ ವಿವರ. ಶನಿ ದೋಷವೆಂದರೆ ಯಾವಾಗಲೂ ಕೆಟ್ಟದ್ದೇ ಆಗಬೇಕೆಂದಿಲ್ಲ. ಶನಿಯೂ ಲಾಭಕಾರಕನೂ ಆಗಿರುತ್ತಾನೆ. ಆದರೆ ಶನಿ ಪ್ರಭಾವದಿಂದ ಆರ್ಥಿಕ ನಷ್ಟ, ಸಂಬಂಧಗಳಲ್ಲಿ ತೊಂದರೆ, ಆರೋಗ್ಯ ಸಮಸ್ಯೆ ಬರುವುದೇ ಹೆಚ್ಚು. ಶನಿ ಕರ್ಮ ಫಲಕಾರಕಹಿಂದೆ ನಾವು ಮಾಡಿದ ಕರ್ಮಗಳಿಗೆ ಅನುಸಾರವಾಗಿ ಶನಿ ನಮ್ಮ ಹೆಗಲೇರುತ್ತಾನೆ. ಶನಿ ಒಂದು ರೀತಿಯಲ್ಲಿ ಜೀವನದಲ್ಲಿ ಶಿಸ್ತಿನ ಶಿಕ್ಷಕನಂತೆ. ಅಪ್ರಮಾಣಿಕರಾಗಿದ್ದರೆ, ಇನ್ನೊಬ್ಬರ ಕಣ್ಣಲ್ಲಿ ನೀರು ತರಿಸುವ ಕೆಲಸ ಮಾಡಿದರೆ, ಮೋಸ, ವಂಚನೆ ಮಾಡಿದರೆ ಶನಿಯ ಪ್ರಭಾವ ಕಂಡುಬರಬಹುದು.
ಬೆಂಗಳೂರು: ಆರ್ ಸಿಬಿ ಅಭಿಮಾನಿಗಳು ಬಡ ಶಾಲಾ ಮಕ್ಕಳಿಗೆ ಉಪಯುಕ್ತ ಉಡುಗೊರೆಯೊಂದನ್ನು ನೀಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಅಭಿಮಾನ ಎಂದರೆ ಹೀಗಿರಬೇಕು ಎನ್ನುತ್ತಿದ್ದಾರೆ. ಆರ್ ಸಿಬಿ ಅಭಿಮಾನಿಗಳು ಎಂದರೆ ತಮ್ಮ ತಂಡವನ್ನು ಸೋಲಲಿ, ಗೆಲ್ಲಲಿ ಯಾವತ್ತೂ ಬಿಟ್ಟುಕೊಡಲ್ಲ. ಐಪಿಎಲ್ ನ ಎಲ್ಲಾ ಫ್ರಾಂಚೈಸಿಗಳ ಪೈಕಿ ಅಪ್ಪಟ, ವಿಧೇಯ ಅಭಿಮಾನಿಗಳು ಎಂದು ಯಾರಾದರೂ ಇದ್ದರೆ ಅದು ಆರ್ ಸಿಬಿ ಅಭಿಮಾನಿಗಳು. ಆದರೆ ಈ ಅಭಿಮಾನ ಕೇವಲ ಆಟಕ್ಕೆ ಸೀಮಿತವಾಗಿಲ್ಲ. ರಾಯಚೂರು ಜಿಲ್ಲೆಯ ಗಾಂಧಿನಗರ ಸರ್ಕಾರಿ ಪ್ರೌಢಶಾಲೆಗೆ ಆರ್ ಸಿಬಿ ಅಭಿಮಾನಿಗಳು ಬಡ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ಯಾಡ್ ನೀಡಿದ್ದಾರೆ.
ನವದೆಹಲಿ: ಇರಾನ್ ಮತ್ತು ಅಮೆರಿಕಾ ನಡುವೆ ಮಧ್ಯಸ್ಥಿಕೆ ವಹಿಸಿದ್ದೇವೆಂದು ಬೀಗುತ್ತಿರುವ ಪಾಕಿಸ್ತಾನ ಪದೇ ಪದೇ ಇಸ್ರೇಲ್ ಕೆಣಕಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತಾ? ಇರಾನ್ ಮತ್ತು ಅಮೆರಿಕಾ ನಡುವೆ ಶಾಂತಿ ಸಂಧಾನ ಮಾತುಕತೆ ನಡೆಸಲು ತನ್ನ ದೇಶವನ್ನು ಪಾಕಿಸ್ತಾನ ವೇದಿಕೆ ಮಾಡಿಕೊಂಡಿದೆ. ಆದರೆ ಇಷ್ಟಕ್ಕೇ ಇಡೀ ವಿಶ್ವದಲ್ಲೇ ತಾವು ಬಲಾಢ್ಯರು ಎಂಬಂತೆ ದಿಡೀರ್ ಆಗಿ ವರ್ತಿಸಲು ಪ್ರಾರಂಭಿಸಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯನ್ನು ಇಸ್ರೇಲ್ ವಿರೋಧಿಸಿತ್ತು. ಇದರ ಬೆನ್ನಲ್ಲೇ ಎರಡೂ ದೇಶಗಳ ನಡುವೆ ಮಾತಿನ ಚಕಮಕಿ ತಾರಕಕ್ಕೇರಿದೆ.
ಗುವಾಹಟಿ: ರಾಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಸೋಲಿನ ಬಳಿಕ ಅಭಿಮಾನಿಗಳ ಸಿಟ್ಟು ಬೌಲರ್ ಅಭಿನಂದನ್ ಸಿಂಗ್ ಮೇಲೆ ಬಂದಿದೆ. ಎಲ್ಲಿದ್ದೇ ಇಲ್ಲಿ ತನಕ ಎಂದು ಟ್ರೋಲ್ ಮಾಡಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಆರ್ ಸಿಬಿ ಕಷ್ಟಪಟ್ಟು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ವೆಂಕಟೇಶ್ ಅಯ್ಯರ್ 15 ಎಸೆತಗಳಿಂದ 29 ರನ್ ಸಿಡಿಸದೇ ಇದ್ದಿದ್ದರೆ ಆರ್ ಸಿಬಿ ಮೊತ್ತ 200 ರ ಗಡಿ ದಾಟುತ್ತಿರಲಿಲ್ಲ.
ಇಸ್ಲಾಮಾಬಾದ್: ಇರಾನ್ ಮತ್ತು ಅಮೆರಿಕಾ ನಡುವೆ ಇಂದು ಇಸ್ಲಾಮಾಬಾದ್ ನಲ್ಲಿ ಶಾಂತಿ ಮಾತುಕತೆ ನಡೆಸಲಿದ್ದು, ಪಾಕಿಸ್ತಾನದ ಭದ್ರತೆ ಹೇಗಿದೆ ಗೊತ್ತಾ? ಇರಾನ್ ಮತ್ತು ಅಮೆರಿಕಾ ನಡುವೆ 15 ದಿನಗಳ ಕದನ ವಿರಾಮ ಘೋಷಣೆಯಾದ ಬಳಿಕ ಈಗ ಎರಡೂ ದೇಶಗಳ ಪ್ರತಿನಿಧಿಗಳು ಅಧಿಕೃತವಾಗಿ ಮುಖಾಮುಖಿಯಾಗಿ ಮಾತುಕತೆ ನಡೆಸಲಿದ್ದಾರೆ. ಇದಕ್ಕೆ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ವೇದಿಕೆ ಸಿದ್ಧವಾಗಿದೆ. ತನ್ನ ದೇಶದಲ್ಲಿ ನಡೆಯಲಿರುವ ಶಾಂತಿ ಮಾತುಕತೆಗಾಗಿ ಪಾಕಿಸ್ತಾನ ಬಿಗಿ ಭದ್ರತೆಯನ್ನೇ ಏರ್ಪಡಿಸಿದೆ. ಎರಡು ದಿನಗಳ ಕಾಲ ಇಸ್ಲಾಮಾಬಾದ್ ನಲ್ಲಿ ಲಾಕ್ ಡೌನ್ ಘೋಷಿಸಿದೆ.
ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ಇಂದು ವಾರಂತ್ಯಕ್ಕೆ ರಾಜ್ಯದ ಹವಾಮಾನ ಹೇಗಿರಲಿದೆ ಇಲ್ಲಿದೆ ವರದಿ. ನಿನ್ನೆ ರಾಜ್ಯದಲ್ಲಿ ಇತ್ತೀಚೆಗಿನ ದಿನಗಳಲ್ಲೇ ಅತ್ಯಧಿಕ ತಾಪಮಾನ ದಾಖಲಾಗಿತ್ತು. ಆದರೆ ನಿನ್ನೆಗೆ ಹೋಲಿಸಿದರೆ ಇಂದು ತಾಪಮಾನ ಕೊಂಚ ಇಳಿಕೆಯಾಗಲಿದೆ. ಆದರೆ ಇಂದು ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಅಥವಾ ಮೋಡ ಕವಿದ ವಾತಾವರಣ ನಿರೀಕ್ಷಿಸಬಹುದಾಗಿದೆ. ವಿಶೇಷವಾಗಿ ಇಂದು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ ಇಂದು ಸಣ್ಣ ಮಳೆ ಅಥವಾ ಮೋಡ ಕವಿದ ವಾತಾವರಣ ನಿರೀಕ್ಷಿಸಬಹುದಾಗಿದೆ.
ಮನೆಯಲ್ಲಿ ಐಶ್ವರ್ಯಾಭಿವೃದ್ಧಿಗಾಗಿ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ತುಳಸಿ ಅಷ್ಟೋತ್ತರ ಶತನಾಮಾವಳಿ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.ಓಂ ತುಲಸ್ಯೈ ನಮಃ ।ಓಂ ಪಾವನ್ಯೈ ನಮಃ ।ಓಂ ಪೂಜ್ಯಾಯೈ ನಮಃ ।ಓಂ ಬೃಂದಾವನನಿವಾಸಿನ್ಯೈ ನಮಃ ।ಓಂ ಜ್ಞಾನದಾತ್ರ್ಯೈ ನಮಃ ।ಓಂ ಜ್ಞಾನಮಯ್ಯೈ ನಮಃ ।ಓಂ ನಿರ್ಮಲಾಯೈ ನಮಃ ।ಓಂ ಸರ್ವಪೂಜಿತಾಯೈ ನಮಃ ।ಓಂ ಸತ್ಯೈ ನಮಃ ।ಓಂ ಪತಿವ್ರತಾಯೈ ನಮಃ । 10 । ಓಂ ಬೃಂದಾಯೈ ನಮಃ ।ಓಂ ಕ್ಷೀರಾಬ್ಧಿಮಥನೋದ್ಭವಾಯೈ ನಮಃ ।ಓಂ ಕೃಷ್ಣವರ್ಣಾಯೈ ನಮಃ ।ಓಂ ರೋಗಹಂತ್ರ್ಯೈ ನಮಃ ।ಓಂ ತ್ರಿವರ್ಣಾಯೈ ನಮಃ ।ಓಂ ಸರ್ವಕಾಮದಾಯೈ ನಮಃ ।ಓಂ ಲಕ್ಷ್ಮೀಸಖ್ಯೈ ನಮಃ ।ಓಂ ನಿತ್ಯಶುದ್ಧಾಯೈ ನಮಃ ।
ಭೋಪಾಲ್ : ಎರಡೂವರೆ ವರ್ಷದ ಪುಟ್ಟ ಬಾಲಕನೊಬ್ಬ ತೆರೆದ ಬೋರ್ವೆಲ್ಗೆ ಬಿದ್ದಿದ್ದು, ಸುಮಾರು 70 ಅಡಿ ಆಳದಲ್ಲಿ ಸಿಲುಕಿಕೊಂಡ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ನಡೆದಿದೆ.ಗುರುವಾರ ಸಂಜೆ ಬಾಲಕ ಕೊಳವೆಬಾವಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಭಾರಿ ಪ್ರಮಾಣದ ಕಾರ್ಯಾಚರಣೆ ನಡೆಯುತ್ತಿದೆ. ಮಗುವಿನ ಚಲನವಲನಗಳನ್ನು ಗಮನಿಸಲು ಬೋರ್ವೆಲ್ನೊಳಗೆ ಕ್ಯಾಮೆರಾದಿಂದ ನೋಡಲಾಗುತ್ತಿದೆ.ಉಜ್ಜಯಿನಿ ಜಿಲ್ಲೆಯ ಬಡನಗರ ತಹಸಿಲ್ ವ್ಯಾಪ್ತಿಯ ಝಲಾರಿಯಾ ಗ್ರಾಮದಲ್ಲಿ ಏಪ್ರಿಲ್ 9 ರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬಾಲಕನನ್ನು ರಾಜಸ್ಥಾನದ ಪಾಲಿ ಜಿಲ್ಲೆಯ ಭಗೀರಥ್ ಎಂದು ಗುರುತಿಸಲಾಗಿದೆ.
ಬೆಂಗಳೂರು: ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಬಹುಭಾಷಾ ನಟಿ ನಭಾ ನಟೇಶ್ ಅವರು ಭೇಟಿ ನೀಡಿ ದೇಗುಲದ ವಾಸ್ತುಶಿಲ್ಪ ಕುರಿತು ಬಣ್ಣಿಸಿದ್ದಾರೆ.ನನ್ನ ಜನ್ಮಸ್ಥಳವಾದ ಶೃಂಗೇರಿಯು ಕೇವಲ ಒಂದು ಊರಲ್ಲ, ಅದು ಒಂದು ಭಾವನೆ. ತುಂಗಾ ನದಿಯ ತಟದಲ್ಲಿ ಹುಟ್ಟಿ ಬೆಳೆದವರಿಗೆ ಪ್ರಕೃತಿ ಮತ್ತು ಅಧ್ಯಾತ್ಮದ ನಡುವಿನ ಅವಿನಾಭಾವ ಸಂಬಂಧ ಬಾಲ್ಯದಲ್ಲೇ ಒಲಿದಿರುತ್ತದೆ. ವಿದ್ಯಾಶಂಕರ ದೇವಾಲಯದ ಪ್ರತಿಯೊಂದು ಕಲ್ಲು ಕೂಡ ಇತಿಹಾಸ ಮತ್ತು ವಿಜ್ಞಾನದ ಕಥೆಯನ್ನು ಹೇಳುತ್ತದೆ. ಒಬ್ಬ ಕಲಾವಿದನಿಗೆ ಅಥವಾ ಚಿಂತಕನಿಗೆ ಇಲ್ಲಿ ಸಿಗುವ ಪ್ರೇರಣೆ ಅಪಾರ ಎಂದು ಪೋಸ್ಟ್ ಹಂಚಿಕೊಂಡ ವಜ್ರಕಾಯ ನಟಿ ಗುಣಗಾನ ಮಾಡಿದ್ದಾರೆ.
ಬೆಳ್ಳುಳ್ಳಿ ಸೇವನೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದು ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅದ್ಭುತವದ ಔಷಧೀಯ ಗುಣಗಳನ್ನು ಹೊಂದಿದೆ. ಆಯುರ್ವೇದ ಮತ್ತು ಆಧುನಿಕ ವಿಜ್ಞಾನ ಎರಡರಲ್ಲೂ ಬೆಳ್ಳುಳ್ಳಿಯ ಮಹತ್ವವನ್ನು ಗುರುತಿಸಲಾಗಿದೆ.ಬೆಳ್ಳುಳ್ಳಿಯ ಪ್ರಮುಖ ಆರೋಗ್ಯ ಪ್ರಯೋಜನಗಳು ಇಲ್ಲಿವೆ:ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿ: ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ಸಂಯುಕ್ತವು ರೋಗನಿರೋಧಕ ಶಕ್ತಿಯನ್ನು
ಬೆಂಗಳೂರು: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿನ ಮಾಣಿಕ್ಯಧಾರಾ ಜಲಪಾತದ ಬಳಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳದ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ. ಆಕೆಯ ಸಾವಿನ ಸುತ್ತ ಹಲವು ಅನುಮಾನಗಳು ಎದ್ದಿವೆ.ಮಾಣಿಕ್ಯಧಾರಾ ಜಲಪಾತದ ಸಮೀಪದ ಪ್ರಪಾತದಲ್ಲಿ ಬಾಲಕಿ ಶ್ರೀನಂದಾ ದೇಹ ಇರುವುದು ಮೊದಲು ಡ್ರೋಣ್ ಕ್ಯಾಮರಾದಲ್ಲಿ ಪತ್ತೆಯಾಯಿತು. ಬಳಿಕ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅದೇ ಬಾಲಕಿಯ ಮೃತದೇಹ ಎಂಬುದನ್ನು ಖಚಿತಪಡಿಸಿದರು.ಕಾಲು ಜಾರಿ ಪ್ರಪಾತಕ್ಕೆ ಬಿದ್ದಿರಬಹುದು ಅಥವಾ ಆಕೆಯೇ ಜಿಗಿದಿರಬಹುದು ಎಂದು ಶಂಕಿಸಲಾಗಿದೆ. ಬೇರೆ ಕಾರಣಗಳಿದ್ದರೆ ಮರಣೋತ್ತರ ಪರೀಕ್ಷೆ ನಂತರ ಗೊತ್ತಾಗಲಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ನವದೆಹಲಿ: ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಮನಸೆಳೆದ ಮಾಲೆ ಮಾರಾಟಗಾರ್ತಿ ಮೊನಾಲಿಸಾ ಪತಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ (ಎನ್ಸಿಎಸ್ಟಿ) ವಿಚಾರಣೆಯ ನಂತರ ಆಘಾತಕಾರಿ ಸಂಗತಿಯು ಬಹಿರಂಗವಾಯಿತು, ಇದು ಮೊನಾಲಿಸಾ ಮದುವೆಯ ಸಮಯದಲ್ಲಿ ಆಕೆ ಇನ್ನು ಅಪ್ರಾಪ್ತ ವಯಸ್ಸಿನವಳಾಗಿದ್ದಳು ಎಂದು ಹೇಳಲಾಗಿದೆ.
ಬೆಂಗಳೂರು: ಶಿವಮೊಗ್ಗದ ಹುಲಿಕಲ್ ಘಾಟ್ ನಲ್ಲಿ ಸಂಭವಿಸಿದ ಮಣ್ಣು ಕುಸಿತದಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಕಾರ್ಮಿಕರ ಕುಟುಂಬಕ್ಕೆ ಸಿಎಂ ಪರಿಹಾರ ಘೋಷಿಸಿದ್ದಾರೆ. ಎಸ್ ಡಿಆರ್ ಎಫ್, ಅಗ್ನಿಶಾಮಕ ದಳ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಕಾರ್ಮಿಕರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ‘ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹುಲಿಕಲ್ ಘಾಟಿ ತಿರುವಿನಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿಯ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟ ಸುದ್ದಿ ಕೇಳಿ ದುಃಖವಾಯಿತು.
ಮೈಸೂರು: ಹಣ ವಸೂಲಿ ಮಾಡಲು ಸಿದ್ದರಾಮಯ್ಯನವರು ತಮ್ಮ ಮಗನನ್ನೇ ನೇಮಕ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. ಇಂದು ಕುಮಾರಸ್ವಾಮಿ ಅವರು ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಮಗನ ವಸೂಲಿ ಹೇಗಿದೆ ಎಂಬುದು ಎಲ್ಲಾ ಅಧಿಕಾರಿಗಳಿಗೆ ಗೊತ್ತಿದೆ. ಇನ್ನೂ ಸಿದ್ದರಾಮಯ್ಯನವರಿಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯಿಲ್ಲ. ಇನ್ನೂ ಜನ ಆಪೇಕ್ಷಿಸಿದಂತೆ ನಿಖಿಲ್ ರಾಜಕೀಯಕ್ಕೆ ಬಂದಿದ್ದಾರೆಂದು ಎಂದು ಕೌಂಟರ್ ನೀಡಿದರು.
ಚೆನ್ನೈ (ತಮಿಳುನಾಡು): ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಶುಕ್ರವಾರ ತಮಿಳುನಾಡು ತಲೆಬಾಗುವುದಿಲ್ಲ ಎಂದು ಹೇಳಿದರು. ತಮ್ಮ ಸರ್ಕಾರವು ಘನತೆ ಮತ್ತು ಸ್ವಾಭಿಮಾನಕ್ಕಾಗಿ ನಿಂತಿದೆ ಮತ್ತು ಯಾವುದೇ ರೀತಿಯ ಹೇರುವಿಕೆಗೆ ವಿರುದ್ಧವಾಗಿದೆ, ಆದರೆ ಜನರ ಮೊದಲ, ಕಲ್ಯಾಣ-ಚಾಲಿತ ಮತ್ತು ಎಲ್ಲರನ್ನೂ ಒಳಗೊಳ್ಳುವ ಆಡಳಿತದೊಂದಿಗೆ ಬೆಳವಣಿಗೆಗೆ ಬದ್ಧವಾಗಿದೆ ಎಂದು ಅವರು ಹೇಳಿದರು.
ಆಂಧ್ರಪ್ರದೇಶ: ಗುರುವಾರ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಜಲಪಾತದಲ್ಲಿ ಮೂವರು ಹದಿಹರೆಯದ ಹುಡುಗಿಯರು ಫೋಟೋ ತೆಗೆಯಲು ಹೋಗಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಹುಕುಂಪೇಟೆ ಮಂಡಲದ ಬುರ್ಜ ಪಂಚಾಯಿತಿ ಬಳಿಯ ಮುಳ್ಳುಂಗುಮ್ಮಿ ಜಲಪಾತದಲ್ಲಿ ಈ ಘಟನೆ ನಡೆದಿದೆ. ಜಾಂಬವಲಸ ಗ್ರಾಮದ ಐವರು ಬಾಲಕಿಯರು ಹಬ್ಬದ ರಜೆಯಲ್ಲಿ ಜಲಪಾತಕ್ಕೆ ತೆರಳಿದ್ದರು.ಜಲಪಾತದ ಬಳಿ ಹುಡುಗಿಯರು ಫೋಟೋಗಳು ಮತ್ತು ಸೆಲ್ಫಿ ವೀಡಿಯೊಗಳನ್ನು ತೆಗೆದುಕೊಳ್ಳುತ್ತಿದ್ದರು, ಅವರಲ್ಲಿ ಮೂವರು
ನವದೆಹಲಿ: ಬಿಹಾರದ ಬಹುಕಾಲದ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ರಾಜ್ಯದಲ್ಲಿ ದೊಡ್ಡ ನಾಯಕತ್ವ ಬದಲಾವಣೆಗೆ ನಾಂದಿ ಹಾಡಿದ್ದಾರೆ. ರಾಜ್ಯಸಭಾ ಅಧ್ಯಕ್ಷ ಸಿಪಿ ರಾಧಾಕೃಷ್ಣನ್ ಅವರ ಸಭಾಂಗಣದಲ್ಲಿ ಅವರು ಮೇಲ್ಮನೆ ಸದಸ್ಯರಾಗಿ ಪ್ರಮಾಣ ವಚನ ಬೋಧಿಸಿದರು.ನಿತೀಶ್ ಕುಮಾರ್ ಅವರು ರಾಜ್ಯಸಭೆಯಲ್ಲಿ ತಮ್ಮ ಪಾತ್ರವನ್ನು ವಹಿಸಿಕೊಳ್ಳುವುದರೊಂದಿಗೆ, ಬಿಹಾರದಲ್ಲಿ ಅವರ ಸುದೀರ್ಘ ಅಧಿಕಾರಾವಧಿಯು ಕೊನೆಗೊಂಡಿತು.
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಐಪಿಎಲ್ 2026 ಪಂದ್ಯದ ನಂತರ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಮಾಲೀಕ ಸಂಜೀವ್ ಗೋಯೆಂಕಾ ಅವರು ತಂಡದ ಉದಯೋನ್ಮುಖ ಬ್ಯಾಟಿಂಗ್ ಸ್ಟಾರ್ ಮುಕುಲ್ ಚೌಧರಿ ಅವರೊಂದಿಗೆ ವಿಶೇಷ ಕ್ಷಣವನ್ನು ಹಂಚಿಕೊಂಡಿದ್ದಾರೆ. ಈಡನ್ ಗಾರ್ಡನ್ಸ್ನಲ್ಲಿ LSG ರೋಮಾಂಚಕ ಗೆಲುವು ಸಾಧಿಸಿದ ನಂತರ ಖುಷಿಯ ಕ್ಷಣ ಸೆರೆಯಾಯಿತು. ಚೌಧರಿ ಅವರು 27 ಎಸೆತಗಳಲ್ಲಿ ಅಜೇಯ 54 ರನ್ ಗಳಿಸುವ ಮೂಲಕ ಲಕ್ನೋ ಗೆಲುವಿಗೆ ಕಾರಣರಾದರು. KKR ನ 181 ರನ್ಗಳ ಗುರಿಯನ್ನು ಬೆನ್ನಟ್ಟಿದ ಲಕ್ನೋಗೆ ಆರಂಭಿಕ ಆಘಾತ ಎದುರಾಯಿತು. ಆದರೆ ಹೆಚ್ಚಿನ ಒತ್ತಡದ ಸಮಯದಲ್ಲಿ ಮಯುಕುಲ್
ಮಾರ್ಟ್ವೊಂದರಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ವೇಳೆ ತುಂಬಿಸಿಟ್ಟ ಚೀಲದ ಗೋಣಿಗಳು ಮಹಿಳೆಯ ಮೇಲೆ ಬಿದ್ದಿರುವ ಘಟನೆ ನಡೆದಿದೆ. ಇದು ಮುಂಬೈನಲ್ಲಿ ವರದಿಯಾಗಿದೆ. ಈ ವಿಡಿಯೋ ನೋಡುವಾಗ ಮಹಿಳೆ ಗಂಭೀರವಾಗಿ ಗಾಯಗೊಂಡಿರಬಹುದು ಎಂದು ಕಾಣಬಹುದು. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಿಳೆ ಮೇಲೆ ಗೋಣಿ ಚೀಲದ ಮೂಟೆಗಳು ಬೀಳುತ್ತಿದ್ದ ಹಾಗೇ ಅಲ್ಲೇ ಇದ್ದ ಕೆಲಸಗಾರರು ಮಹಿಳೆಯ ಮೇಲೆ ಬಿದ್ದಿದ್ದ ಚೀಲವನ್ನು ತೆಗೆದಿದ್ದಾರೆ.
ವಿಜಯ್ ಅವರ ಅಂತಿಮ ಚಿತ್ರ ಜನ ನಾಯಕನ ಕ್ಲಿಪ್ ಸೋರಿಕೆಯಾಗಿದೆ. ಇನ್ನೂ ಸೋರಿಕೆಯ ಮೂಲ ಇನ್ನೂ ಪತ್ತೆಯಾಗಿಲ್ಲ. ಈ ಬೆಳವಣಿಗೆ ವಿಜಯ್ ಅಭಿಮಾನಿಗಳಲ್ಲಿ ಕೆರಳಿಸಿದೆ. ಚಿತ್ರದ ನಿರ್ಮಾಪಕ, ವೆಂಕಟ್ ಕೆ ನಾರಾಯಣ ಅವರ ಕೆವಿಎನ್ ಪ್ರೊಡಕ್ಷನ್ಸ್, ವಿಷಯವನ್ನು ಸೋರಿಕೆ ಮತ್ತು ಹಂಚಿಕೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸುತ್ತಿದ್ದಾರೆ. ಚಿತ್ರದ ಸೋರಿಕೆಯಾದ ಪ್ರಿಂಟ್ ಅನ್ನು ಫಾರ್ವರ್ಡ್ ಮಾಡುವವರ ವಿರುದ್ಧವು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಉದಯೋನ್ಮುಖ ತಾರೆ ಮುಕುಲ್ ಚೌಧರಿ ಬ್ಯಾಟಿಂಗ್ ಪ್ರದರ್ಶ ಕೋಲ್ಕತ್ತಾ ವಿರುದ್ಧ ಅಮೋಘ ಗೆಲುವು ತಂದುಕೊಟ್ಟಿತು. ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಕುಲ್ ಅವರು ಈ ಹಿಂದೆ ಪಂದ್ಯಗಳನ್ನು ಮುಗಿಸಲು ಹೇಗೆ ಹೊರದಬ್ಬುತ್ತಿದ್ದರು ಆದರೆ ಈಗ ಪಂದ್ಯಗಳ ಅಂತಿಮ ಹಂತಗಳಲ್ಲಿ ಶಾಂತ ಆಟಗಾರರಾಗಿದ್ದಾರೆ. LSG ನಾಯಕ ರಿಷಬ್ ಪಂತ್ ಅವರ ಸಲಹೆಗೆ ಧನ್ಯವಾದಗಳು.
ಚಿಕ್ಕಮಗಳೂರು: ಕಾಫಿನಾಡ ದತ್ತಪೀಠದ ಮಾಣಿಕ್ಯಾಧಾರ ಬಳಿ ಬಾಲಕಿ ನಾಪತ್ತೆ ಪ್ರಕರಣ ಸಂಬಂಧ ಬಾಲಕಿ ತಾಯಿ ರೋಹಿಣಿ ಈ ಬಗ್ಗೆ ತಾಯಿ ನೀಡಿರುವ ಹೇಳಿಕೆ ಭಾರೀ ಕುತೂಹಲವನ್ನು ಮೂಡಿಸಿದೆ. ಪೊಲೀಸರ ಜೊತೆ ರೋಹಿಣಿ ಅವರು ಚರ್ಚಿಸಿದ್ದು, ಮಗಳು ಆಕಸ್ಮಿಕವಾಗಿ ಬಿದ್ದಿರಲು ಸಾಧ್ಯವಿಲ್ಲ. ಯಾರೋ ಮಾದಕ ದ್ರವ್ಯ ಕೊಟ್ಟು ಅಪಹರಿಸಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.ನಾಪತ್ತೆಯಾದ ಬಾಲಕಿಯ ಹುಡುಕಾಟಕ್ಕಾಗಿ ನೂರಾರು ಪೊಲೀಸ್, ಅಗ್ನಿಶಾಮಕ ಹಾಗೂ ಅರಣ್ಯ ಸಿಬ್ಬಂದಿಗಳು ಸೊಂಟಕ್ಕೆ ಹಗ್ಗ
ಉದ್ಯಮಿ ಅನಂತ್ ಅಂಬಾನಿ ಅವರು ಇಂದು 31ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇನ್ನೂ ತನ್ನ ಹುಟ್ಟುಹಬ್ಬವನ್ನುಅನಂತ್ ಅವರು ವಿಶೇಷವಾಗಿ ಆಚರಿಸಿಕೊಳ್ಳುವ ಮೂಲಕ ಇದೀಗ ಸುದ್ದಿಯಾಗಿದ್ದಾರೆ. ಜೈಪುರದ ಹೆಸರಾಂತ ಎಲಿಫೆಂಟ್ ವಿಲೇಜ್ನಲ್ಲಿ ವಿಶಿಷ್ಟ ಮತ್ತು ಹೃದಯಸ್ಪರ್ಶಿ ರೀತಿಯಲ್ಲಿ ಆಚರಿಸಿದರು. ಅಲ್ಲಿ ಅವರು 2.5-ಅಡಿ ಎತ್ತರದ ಕೇಕ್ ಅನ್ನು, ಸುಮಾರು 3000 ಕಿಲೋಗ್ರಾಂಗಳಷ್ಟು ಹಣ್ಣುಗಳ ಬಡಿಸುವ ಮೂಲಕ ಪ್ರಾಣಿಗಳಿಗೆ ವಿಶೇಷ ಔತಣವನ್ನು ನೀಡಿದ್ದಾರೆ.
ಬೆಂಗಳೂರು: ಐಟಿ ದಾಳಿ ನಡೆಯುತ್ತಿರುವ ವೇಳೆಯೇ ಆತ್ಮಹತ್ಯೆಗೆ ಶರಣಾಗಿ, ಭಾರೀ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣಗೊಂಡಿದೆ. ಇದೀಗ ಎಸ್ಐಟಿ ತನಿಖೆಯಲ್ಲಿ ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೇ ಕಾರಣ ಎಂದು ಹೇಳಲಾಗಿದೆ. ಇನ್ನೂ ಐಟಿ ದಾಳಿ ವೇಳೆ ರಾಯ್ ಆತ್ಮಹತ್ಯೆಗೆ ಶರಣಾಗಿದ್ದಕ್ಕೆ ತೆರಿಗೆ ಅಧಿಕಾರಿಗಳ ಒತ್ತಡ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಸರ್ಕಾರ ಈ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಿತ್ತು.
ಇಸ್ಲಾಮಾಬಾದ್: ಒಂದೆಡೆ ತನ್ನ ಮಧ್ಯಸ್ಥಿಕೆಯಲ್ಲಿ ಇರಾನ್, ಅಮೆರಿಕಾ ನಡುವೆ ಮಾತುಕತೆ ನಡೆಸಲು ವೇದಿಕೆ ಸಿದ್ಧ ಮಾಡುತ್ತಿದ್ದರೆ ಇತ್ತ ಪಾಕಿಸ್ತಾನ ಸಚಿವ ಆಸಿಫ್ ಖ್ವಾಜಾ ಇಸ್ರೇಲ್ ಗೆ ಶಾಪ ಹಾಕಿದ್ದಾರೆ. ಮಾತುಕತೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಇಸ್ರೇಲ್ ಮತ್ತು ಪಾಕಿಸ್ತಾನ ನಡುವೆ ವಾಗ್ವಾದ ತಾರಕಕ್ಕೇರಿದೆ. ಅಮೆರಿಕಾ ಮತ್ತು ಇರಾನ್ ನಡುವೆ ಸಂಧಾನ ನಡೆಸಿ ರಾಜಿ ಮಾಡಿಸಿದ್ದು ತಾನೇ ಎಂದು ಬೀಗುತ್ತಿರುವ ಪಾಕಿಸ್ತಾನಕ್ಕೆ ಇಸ್ರೇಲ್ ಮಗ್ಗುಲ ಮುಳ್ಳಾಗಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯನ್ನು ಇಸ್ರೇಲ್ ತಳ್ಳಿ ಹಾಕಿದೆ. ಇದರ ನಡುವೆಯೇ ಪಾಕಿಸ್ತಾನದ ಸಚಿವ ಆಸಿಫ್ ಖ್ವಾಜಾ ಯುರೋಪಿನ ಯಹೂದಿಗಳಿಂದ ಮುಕ್ತಿ ಪಡೆಯಲು ಪ್ಯಾಲೆಸ್ತೀನ್ ಭೂಮಿಯಲ್ಲಿ ಈ ಕ್ಯಾನ್ಸರ್ ಕಾರಕ ದೇಶವನ್ನು ಸೃಷ್ಟಿಸಿದವರು
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಏರಿಕೆಯಾಗಿದೆ ಮತ್ತುಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ವಾರಂತ್ಯಕ್ಕೆ ಪರಿಶುದ್ಧ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿತ್ತು. ಪರಿಶುದ್ಧ ಚಿನ್ನದ ದರ ವಾರಂತ್ಯಕ್ಕೆ 1,56,135.00 ರೂ.ಗಳಿತ್ತು. ಆದರೆ ಇಂದು ಇಳಿಕೆಯಾಗಿದ್ದು 1,54,755.00 ರೂ.ಗಳಷ್ಟಿದೆ.
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ತಾಪಮಾನದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಇಂದು ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗಲಿದ್ದು ಇಂದಿನ ಹವಾಮಾನ ವರದಿ ಇಲ್ಲಿದೆ. ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ತಾಪಮಾನದಲ್ಲಿ ಗಣನೀಯ ಏರಿಕೆಯಾಗಿದೆ. ಹಗಲಿಡೀ ಹೊರಗೆ ಕಾಲಿಡಲಾಗದಷ್ಟು ಬಿಸಿಲು ಕಂಡುಬರುತ್ತಿದೆ. ಇಂದಂತೂ ನಿನ್ನೆಗಿಂತಲೂ ಹೆಚ್ಚು ಬಿಸಿಲು, ತಾಪಮಾನ ಕಂಡುಬರಲಿದೆ ಎಂದು ಹವಾಮಾನ ಮುನ್ಸೂಚನೆಗಳು ಹೇಳುತ್ತಿವೆ. ನಿನ್ನೆಗೆ ಹೋಲಿಸಿದರೆ ಇಂದು 2 ಡಿಗ್ರಿಯಷ್ಟು ತಾಪಮಾನದಲ್ಲಿ ಏರಿಕೆ ಕಂಡುಬರಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಇಂದು ಗರಿಷ್ಠ ತಾಪಮಾನ 35 ಡಿಗ್ರಿ ತಲುಪಲಿದೆ.
ಬೆಂಗಳೂರು: ಈ ಬಾರಿಯ ಪಿಯು ಪರೀಕ್ಷೆಯಲ್ಲಿ 5,46,698 ವಿದ್ಯಾರ್ಥಿಗಳು ಪಾಸ್ ಆಗಿದ್ದು, ಕರ್ನಾಟಕಕ್ಕೆ ಮೊದಲ ಬಾರಿ ಶೇ.86.48 ಫಲಿತಾಂಶ ಬಂದಿದ್ದು, ಇದು ಐತಿಹಾಸಿಕ ದಿನ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಖುಷಿ ವ್ಯಕ್ತಪಡಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 6,32,200 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5,46,698 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಪೈಕಿ 2,32,928 ( 83.65%) ಬಾಲಕರು, 3,13,770 (88.70%) ಬಾಲಕಿಯರು ಉತ್ತೀರ್ಣರಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದರು.ಕಲಾ ವಿಭಾಗದಲ್ಲಿ 98,310 (72.86%) ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 1,82,317(88.04%) ವಿದ್ಯಾರ್ಥಿಗಳು
ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲಿನ ಶಿಕ್ಷಾ ಬಂಧಿಯೊಬ್ಬ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ನಲ್ಲಿ ತೇರ್ಗಡಿಯಾಗಿದ್ದಾನೆ. ಅಶೋಕ್ ಕುಮಾರ್ ಎಂಬ ಶಿಕ್ಷಾಬಂಧಿ 600ಕ್ಕೆ 481 ಅಂಕಗಳನ್ನು ಪಡೆದು ಸಾಧನೆಯನ್ನು ಮಾಡಿದ್ದಾರೆ.ಕನ್ನಡದಲ್ಲಿ 82, ಇಂಗ್ಲಿಷ್ 69, ಇತಿಹಾಸ 94, ಅರ್ತಶಾಸ್ತ್ರ 84, ಸಮಾಜಶಾಸ್ತ್ರ 77, ರಾಜ್ಯಶಾಸ್ತ್ರ75 ಅಂಕ ಗಳಿಸಿದ್ದಾನೆ. ಇನ್ನು ಅಶೋಕ್ ಕುಮಾರ್ಗೆ ಪ್ರತ್ಯೇಕ ಸೆಲ್ನಲ್ಲಿ ಅಭ್ಯಾಸವನ್ನು ಮಾಡುತ್ತಿದ್ದ.
ಬೆಂಗಳೂರು: ಹವಾಮಾನ ಇಲಾಖೆಯು ಬೆಂಗಳೂರಿನ ವಾರಾಂತ್ಯದಲ್ಲಿ ತಾಪಮಾನವು ತೀವ್ರವಾಗಿ ಏರುತ್ತದೆ ಎಂದು ಮುನ್ಸೂಚನೆಯನ್ನು ನೀಡಿದೆ. ಭಾನುವಾರದ ಆಸುಪಾಸಿನಲ್ಲಿ ಗರಿಷ್ಠ ಮಟ್ಟವನ್ನು ಸೂಚಿಸುತ್ತವೆ ಮತ್ತು ವಾರದ ಮಧ್ಯದವರೆಗೆ ಶಾಖವನ್ನು ಮುಂದುವರಿಸುತ್ತವೆ. ನಗರವು ಪೂರ್ವ-ಮಾನ್ಸೂನ್ ಬಿಸಿಲ ಝಳಕ್ಕೆ ಆರೋಗ್ಯದಲ್ಲಿ ಏರುಪೇರುಗಳನ್ನು ಅನುಭವಿಸುವ ಸಾಧ್ಯತೆಯಿದೆ. ಏಪ್ರಿಲ್ 10 ಮತ್ತು ಏಪ್ರಿಲ್ 15 ರ ನಡುವಿನಲ್ಲಿ ತಾಪಮಾನದಲ್ಲಿ ಭಾರೀ ಏರಿಕೆಯನ್ನು ಅನುಭವಿಸುವ ಸಾಧ್ಯತೆಯಿದೆ.
ಬೀದರ್: ಸಿಎಂ ಸಿದ್ದರಾಮಯ್ಯ ಅವರು ಇದೇ 11ರಂದು ಬೀದರ್ ಹಾಗೂ ಕಲಬುರಗಿ ಜಿಲ್ಲಾ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.ಏ.11ರಂದು ಬೀದರ್ನಲ್ಲಿ ನಡೆಯಲಿರುವ 40ನೇ ಪತ್ರಕರ್ತರ ಸಮ್ಮೇಳನದಲ್ಲಿ ಭಾಗಿಯಾಗಿ ಉದ್ಘಾಟನೆ ಮಾಡಲಿದ್ದಾರೆ. ನಂತರ ಬೀದರ್ನಿಂದ ಕಲಬುರಗಿಗೆ ತಮ್ಮ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.ಈ ವೇಳೆ ಕಲಬುರಗಿಯ ಚಿತ್ತಾಪುರದಲ್ಲಿ ನೂತನವಾಗಿ ನಿರ್ಮಿಸಿರುವ ಭೋಜಲಿಂಗೇಶ್ವರರ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಮಂಗಳೂರು: ರಾಜ್ಯದ ವಿವಿಧ ಬಂಕ್ಗಳಲ್ಲಿ ಗ್ಯಾಸ್ ಸ್ಟಾಕ್ ಕೊರತೆ ಇದೆ ಎಂಬ ಸುಳ್ಳು ಮಾಹಿತಿಯನ್ನಾಧರಿಸಿ ಕಳೆದ ಕೆಲವು ದಿನಗಳಿಂದ ಆಟೊ ಗ್ಯಾಸ್ ಬಂಕ್ಗಳ ಮುಂದೆ ಆಟೊ ಮಾಲೀಕರು ಹಾಗೂ ಚಾಲಕರು ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ, ಇಂತಹ ವದಂತಿಗಳಿಗೆ ಗಮನ ಕೊಡಬೇಡಿ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಕೆಲವು ಖಾಸಗಿ ಆಟೋ ಗ್ಯಾಸ್ ಸರಬರಾಜು ಏಜೆನ್ಸಿಗಳಲ್ಲಿ ಮಾತ್ರ ಸಣ್ಣ ಕೊರತೆ ಕಂಡುಬಂದಿದೆ ಮತ್ತು ಇದನ್ನು ಪರಿಹರಿಸಲು
ಬೆಂಗಳೂರು: ತಾನು ಪ್ರೀತಿ ಮಾಡಿದ ಹುಡುಗಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ಈಚೆಗಷ್ಟೇ ಖಾಸಗಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮುಗಿಸಿದ್ದ. ಸದ್ಯ ಘಟನಾ ಸ್ಥಳಕ್ಕೆ ಯಲಹಂಕ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಚೆನ್ನೈ: ಏಪ್ರಿಲ್ 23 ರಂದು ತಮಿಳುನಾಡು ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗುರುವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, “ತಮಿಳುನಾಡನ್ನು ಪರಿವರ್ತಿಸುವ” ಗುರಿಯನ್ನು ಹೊಂದಿದೆ. ಉದ್ಯೋಗ, ಸಾರ್ವಜನಿಕ ಸುರಕ್ಷತೆ, ಆರೋಗ್ಯ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಚುನಾವಣಾ ದಾಖಲೆಯ ಮುಖ್ಯಾಂಶಗಳಲ್ಲಿ ಒಂದು ಸಾರ್ವತ್ರಿಕ ಮೂಲ ಆದಾಯದ ಭರವಸೆಯಾಗಿದೆ.
ಮುಂಬೈ: ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವಿನಿಂದ ತೆರವಾದ ಬಾರಾಮತಿ ವಿಧಾನಸಭಾ ಉಪಚುನಾವಣೆಯಿಂದ ಕಾಂಗ್ರೆಸ್ ಹಿಂದೆ ಸರಿದಿದೆ. ಇದರಿಂದಾಗಿ ಸುನೇತ್ರಾ ಪವಾರ್ ಅವರ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ.ಎನ್ಸಿಪಿ ನಾಯಕ ಅಜಿತ್ ಪವಾರ್ ಅಕಾಲಿಕ ನಿಧನದ ಬಳಿಕ ತೆರವಾದ ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣದಿಂದ ಕೊನೆಗೂ ಕಾಂಗ್ರೆಸ್ ಹಿಂದೆ ಸರಿದಿದೆ. ಹೀಗಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಕಾಂಗ್ರೆಸ್, ಬಾರಾಮತಿ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದು, ಈ ಮೂಲಕ ಸುನೇತ್ರಾ ಪವಾರ್ ಅವರ ಅವಿರೋಧ ಆಯ್ಕೆಗೆ ದಾರಿ ಮಾಡಿಕೊಟ್ಟಿದೆ.
ಬೆಂಗಳೂರು: ಆಘಾತಕಾರಿ ಹಗಲು ದರೋಡೆ: ಇಬ್ಬರು ಕಳ್ಳರು, ಒಂದು ಕ್ರೂರ ಟ್ರಿಕ್ಇಬ್ಬರು ಹೃದಯಹೀನ ಕಳ್ಳರು ಅಸಹಾಯಕ ವಯಸ್ಸಾದ ಮಹಿಳೆಯೊಂದಿಗೆ ಸಿಹಿ ಸಂಭಾಷಣೆಯಲ್ಲಿ ತೊಡಗಿ, ಹಗಲು ಹೊತ್ತಿನಲ್ಲೇ ಆಕೆಯ ಚಿನ್ನದ ಸರವನ್ನು ಗಾಳಿಯಲ್ಲಿ ಮಾಯವಾಗುವಂತೆ ಮಾಡಿದ ಎರಗಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಆಘಾತಕಾರಿ ಸಿಸಿಟಿವಿ ದೃಶ್ಯಾವಳಿಗಳು ಇಡೀ ಘಟನೆಯನ್ನು ಛತ್ತರ್ಪುರದ ಕೊತ್ವಾಲಿ ಪೊಲೀಸ್ ಠಾಣೆಯ ಪಕ್ಕದಲ್ಲಿಯೇ ವರದಿಯಾಗಿದೆ.
ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಪಂದ್ಯದ ನಂ. 14 ರ ಸಮಯದಲ್ಲಿ ಅವರ ತಂಡವು ನಿಧಾನವಾದ ಓವರ್ ರೇಟ್ ಅನ್ನು ಕಾಪಾಡಿದ ಕಾರಣ ಗುಜರಾತ್ ಟೈಟಾನ್ಸ್ (ಜಿಟಿ) ನಾಯಕ ಶುಭಮನ್ ಗಿಲ್ ಅವರಿಗೆ ₹12 ಲಕ್ಷ ದಂಡ ವಿಧಿಸಲಾಗಿದೆ. ಆಟದ ವೇಗ, ಕನಿಷ್ಠ ಓವರ್-ರೇಟ್ ನಿಯಮಗಳ ಯಾವುದೇ ಉಲ್ಲಂಘನೆಗಾಗಿ ಪೆನಾಲ್ಟಿಗಳನ್ನು ಅನ್ವಯಿಸಲಾಗುತ್ತದೆ. TATA ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರ ಪಂದ್ಯದ ನಂ. 14ರ ಸಮಯದಲ್ಲಿ ಅವರ ತಂಡವು ನಿಧಾನವಾದ ಓವರ್-ರೇಟ್ ಅನ್ನು ನಿರ್ವಹಿಸಿದ ನಂತರ ಗುಜರಾತ್ ಟೈಟಾನ್ಸ್ (ಜಿಟಿ) ನಾಯಕ ಶುಬ್ಮನ್ ಗಿಲ್ ಅವರಿಗೆ ದಂಡ ವಿಧಿಸಲಾಗಿದೆ.
ಇಸ್ಲಾಮಾಬಾದ್: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಪಾಕಿಸ್ತಾನ ಕ್ರಿಕೆಟಿಗ ಬಾಬರ್ ಅಜಮ್ ಪತ್ರಿಕಾಗೋಷ್ಠಿಯಲ್ಲೇ ಸಿಟ್ಟಿಗೆದ್ದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ. ಪಿಎಸ್ಎಲ್ ಕ್ರಿಕೆಟ್ ಪಂದ್ಯಾವಳಿ ನಡುವೆ ಪತ್ರಿಕಾಗೋಷ್ಠಿಯೊಂದರಲ್ಲಿ ಬಾಬರ್ ಅಜಮ್ ಭಾಗಿಯಾಗಿದ್ದರು. ಈ ವೇಳೆ ಪತ್ರಕರ್ತರೊಬ್ಬರು ‘ವಿರಾಟ್ ಕೊಹ್ಲಿ ಕೂಡಾ ನಿಮ್ಮ ಹಾಗೇ ಶಾಟ್ ಗಳನ್ನು ಹೊಡೆಯುತ್ತಾರೆ. ಆದರೆ ಅವರು ಪಂದ್ಯಗಳನ್ನು ಮುಗಿಸುತ್ತಾರೆ, ಆದರೆ ನಿಮಗೆ ಅದು ಸಾಧ್ಯವಾಗುತ್ತಿಲ್ಲ. ಜನ ನಿಮ್ಮನ್ನು ಅವರಿಗೆ ಹೋಲಿಸುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಕೇಳುತ್ತಾರೆ.
ಬೆಂಗಳೂರು: ಕಾದು ಕುಳಿತಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು, ರಾಜ್ಯಕ್ಕೆ ಯಾವ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ ಎಂದು ಕುತೂಹಲ ಮೂಡಿಸಿದೆ. ಇನ್ನೂ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕವನ್ನು ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ದಿಶಾ ಪಡೆದು, ರಾಜ್ಯಕ್ಕೆ ಟಾಪರ್ ಆಗಿದ್ದಾರೆ.ಮಲ್ಲೇಶ್ವರಂನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ ಇಂದು ಸಂಜೆ 6:15ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ.
ರಕ್ತ ಪರೀಕ್ಷೆ ಮಾಡಿದಾಗ ಇಎಸ್ ಆರ್ ಕೌಂಟ್ ಹೆಚ್ಚಾಗಿದೆ ಎಂದರೆ ಏನು ಸಮಸ್ಯೆ ಎದುರಿಸಬೇಕಾಗುತ್ತದೆ ಮತ್ತು ಇದಕ್ಕೆ ಪರಿಹಾರವೇನು ಇಲ್ಲಿದೆ ನೋಡಿ ವಿವರ. ಇಎಸ್ಆರ್ ಎಂದರೇನು?ರಕ್ತ ಪರೀಕ್ಷೆಯಲ್ಲಿ ಇಎಸ್ಆರ್ ಎಂದರೆ ಕೆಂಪು ರಕ್ತಕಣಗಳು ಒಂದು ನಿರ್ದಿಷ್ಟ ಸಮಯದಲ್ಲಿ ಎಷ್ಟು ವೇಗವಾಗಿ ಕೆಳಕ್ಕೆ ಬಿದ್ದು ಸ್ಥಿರವಾಗುತ್ತದೆ ಎಂಬುದನ್ನು ಅಳೆಯವುದಾಗಿದೆ. ರಕ್ತದ ಮಾದರಿಯನ್ನು ಒಂದು ತಂತಿಯಂತಹ ಸಾಧನದಲ್ಲಿ ಇಟ್ಟು ಪರೀಕ್ಷಿಸಿದಾಗ ಅದು ಎಷ್ಟು ಎಂಎಂ ಎತ್ತರಕ್ಕೆ ಬಿದ್ದಿದೆ ಎಂಬುದನ್ನು ನೋಡಲಾಗುತ್ತದೆ. ಈ ಮೌಲ್ಯ ಹೆಚ್ಚಾದರೆ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಪ.ಬಂಗಾಳ: ಹಲ್ದಿಯಾದಲ್ಲಿ ಪ್ರಧಾನಿ ಮೋದಿ ಅವರು ಟಿಎಂಸಿಯನ್ನು ಹೊರಹಾಕಲು ಮತದಾರರಲ್ಲಿ ಮನವಿ ಮಾಡಿದರು. ಮಮತಾ ಬ್ಯಾನರ್ಜಿ ಸರ್ಕಾರವನ್ನು ಕ್ರೂರ ಸರ್ಕಾರ ಎಂದು ಕರೆದ ಅವರು ಭಯವನ್ನು ಕೊನೆಗೊಳಿಸುವುದು, ಭ್ರಷ್ಟಾಚಾರವನ್ನು ನಿಭಾಯಿಸುವುದು, 7 ನೇ ವೇತನ ಆಯೋಗ ಮತ್ತು ಮೀನುಗಾರಿಕೆಯನ್ನು ಉತ್ತೇಜಿಸುವುದು ಸೇರಿದಂತೆ ಆರು ಭರವಸೆಗಳನ್ನು ಘೋಷಿಸಿದರು. ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಮುಂದಿನ ಸರ್ಕಾರವನ್ನು ರಚಿಸಿದರೆ, ಆಡಳಿತಾರೂಢ ಅಖಿಲ
ಬೈರುತ್ನಲ್ಲಿ ರಾತ್ರಿಯಲ್ಲಿ ಇಸ್ರೇಲ್ ವೈಮಾನಿಕ ದಾಳಿಗೆ ಹಿಜ್ಬುಲ್ಲಾ ನಾಯಕ ನಯಿಮ್ ಕಾಸ್ಸೆಮ್ ಅವರ ನಿಕಟ ಸಹಾಯಕ ಮತ್ತು ವೈಯಕ್ತಿಕ ಸಲಹೆಗಾರ ಅಲಿ ಯೂಸುಫ್ ಹರ್ಷಿಯನ್ನು ಕೊಂದು ಹಾಕಲಾಗಿದೆ ಎಂದು ಇಸ್ರೇಲ್ ಗುರುವಾರ ಹೇಳಿದೆ.ಇಸ್ರೇಲ್ ರಕ್ಷಣಾ ಪಡೆಗಳು ಹಿಜ್ಬುಲ್ಲಾ ನಾಯಕ ನಯಿಮ್ ಕಾಸ್ಸೆಮ್ ಅವರ ವೈಯಕ್ತಿಕ ಕಾರ್ಯದರ್ಶಿಯನ್ನು ಕೊಲ್ಲಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಗುರುವಾರ ತಿಳಿಸಿದೆ.IDF ಪ್ರಕಾರ, ಅಲಿ ಯೂಸುಫ್ ಹರ್ಷಿ ಅವರು "ಖಾಸ್ಸೆಮ್ನ ಕಚೇರಿಯನ್ನು ನಿರ್ವಹಿಸುವಲ್ಲಿ ಮತ್ತು ಭದ್ರಪಡಿಸುವಲ್ಲಿ ಪ್ರಮುಖ
ರಾಜ್ಯದಲ್ಲಿ ದಿನ ಹೋದ ಹಾಗೇ ಬಿಸಿಲ ತಾಪ ಮಾತ್ರ ಏರುತ್ತಲೇ ಇದೆ. ಇನ್ನೂ ಈ ಬಿಸಿಲ ಧಗೆ ಆರೋಗ್ಯದ ಮೇಲೆ ಭಾರೀ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ ಚರ್ಮದ ಆರೈಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇನ್ನೂ ಸೂರ್ಯನ ನೇರ ಕಿರಣಗಳು ಚರ್ಮದ ಮೇಲೆ ಸುಟ್ಟ ಗಾಯ, ಬೇಗ ವಯಸ್ಸಾದ ಹಾಗೇ ಹಾಗೂ ಕಪ್ಪಾಗುವಿಕೆಗೆ ಕಾರಣವಾಗುತ್ತದೆ. ಇನ್ನೂ ಬೇಸಿಗೆಯಲ್ಲಿ ಚರ್ಮದ ಆರೈಕೆ ಬಗ್ಗೆ ಇಲ್ಲಿದೆ ಕೆಲ ಟಿಪ್ಸ್
ಬೆಂಗಳೂರು: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 21 ಆರೋಪಿಗಳಾಗಿರುವ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಏಪ್ರಿಲ್ 15ಕ್ಕೆ ನ್ಯಾಯಾಲಯ ಮುಂದೂಡಿದೆ. ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶ ಪ್ರಕಟಿಸುವುದಾಗಿ ಹೇಳಿತ್ತು. ಇನ್ನೂ ಈ ಪ್ರಕರಣ ಸಂಬಂಧ ಮಹತ್ವದ ಆದೇಶ ಹೊರಬೀಳುವ ಹಿನ್ನೆಲೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ 21 ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು.