ಮುಂಬೈ: ಖ್ಯಾತ ಗಾಯಕಿ ಆಶಾ ಭೋಸ್ಲೆ ಇಂದು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಆಶಾ ಭೋಸ್ಲೆ, ಖ್ಯಾತ ಹಿನ್ನಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರಿಯೂ ಹೌದು. ನಿನ್ನೆಯಷ್ಟೇ ಹೃದಯಾಘಾತಕ್ಕೀಡಾಗಿದ್ದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರ ಜೊತೆಗೆ ಉಸಿರಾಟದ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ. ನಿನ್ನೆಯಿಂದ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇಸ್ಲಾಮಾಬಾದ್: ಕದನ ವಿರಾಮದ ಬಳಿಕ ಪಾಕಿಸ್ತಾನದಲ್ಲಿ ಇರಾನ್ ಮತ್ತು ಅಮೆರಿಕಾ ಪ್ರತಿನಿಧಿಗಳು ನಡೆಸಿದ ಶಾಂತಿ ಮಾತುಕತೆ ವಿಫಲವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇರಾನ್, ಅಸಮಂಜಸ ಬೇಡಿಕೆ ಮುಂದಿಟ್ಟಿದ್ದರು, ಮಾತುಕತೆ ವಿಫಲಕ್ಕೆ ಅಮೆರಿಕಾವೇ ಕಾರಣ ಎಂದಿದೆ. ಇದಕ್ಕೆ ಮೊದಲು ಪತ್ರಿಕಾಗೋಷ್ಠಿ ನಡೆಸಿದ್ದ ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ನಾವು ಒಮ್ಮತದ ಒಪ್ಪಂದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದೆವು. ಆದರೆ ನಮ್ಮ ಷರತ್ತುಗಳನ್ನು ಇರಾನ್ ಒಪ್ಪಿಲ್ಲ. ಹೀಗಾಗಿ ಮಾತುಕತೆ ವಿಫಲವಾಗಿದೆ ಎಂದಿದ್ದರು. ಇದಕ್ಕೀಗ ಇರಾನ್ ಪ್ರತಿಕ್ರಿಯೆ ನೀಡಿದೆ. ಮಾತುಕತೆ ವಿಫಲವಾಗಲು ಅಮೆರಿಕಾವೇ ಕಾರಣ ಎಂದಿದೆ.
ಮಂಗಳೂರು: ಉಡುಪಿ ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಪತ್ನಿ ಸೌಮ್ಯ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 17 ರಂದು ಸೌಮ್ಯ ಶೆಟ್ಟಿಯನ್ನು ಪ್ರೀತಿಸಿ ಮದುವೆಯಾಗಿದ್ದ ಸುದೀಪ್ ರೈ ಮದುವೆಯಾದ ಒಂದೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದು ಭಾರೀ ಅನುಮಾನಕ್ಕೆ ಕಾರಣವಾಗಿತ್ತು. ಮಗನ ಸಾವಿಗೆ ಸೊಸೆಯ ಕಿರುಕುಳವೇ ಕಾರಣ ಎಂದು ಸುದೀಪ್ ರೈ ಪೋಷಕರು ಆರೋಪಿಸಿದ್ದರು. ಇತ್ತ ಸೌಮ್ಯ ಶೆಟ್ಟಿ ಕೂಡಾ ಪತ್ರಿಕಾಗೋಷ್ಠಿಯಲ್ಲಿ ತನ್ನ ಅತ್ತೆ-ಮಾವನ ವಿರುದ್ಧ ಪ್ರತ್ಯಾರೋಪ ನಡೆಸಿ ಕಣ್ಣೀರು ಹಾಕಿದ್ದರು.
ಲಕ್ನೋ: ಕಳ್ಳತನ ಮಾಡಲು ವ್ಯಕ್ತಿಯೊಬ್ಬ ಕಿರು ಸಂಧಿಯಲ್ಲಿ ತಲೆ ತೂರಿಸಿಕೊಂಡಿದ್ದ. ಆದರೆ ಆತನ ತಲೆ ಸಿಕ್ಕಿ ಹಾಕಿಕೊಂಡಿತ್ತು. ಮುಂದೇನಾಯ್ತು ಎಂದು ತಿಳಿಯಲು ಇಲ್ಲಿರುವ ವಿಡಿಯೋ ನೋಡಿ. ಇತ್ತೀಚೆಗೆ ಮನೆಯೊಂದರ ಎಕ್ಸಾಸ್ಟರ್ ಮೂಲಕ ತಲೆ ತೂರಿಸಿ ಕಳ್ಳತನ ಮಾಡಲು ಯತ್ನಿಸಿದ ಖದೀಮ ಕೊನೆಗೆ ಹೊರಗೂ ಹೋಗಲಾಗದೇ ಒಳಗೂ ಹೋಗಲಾಗದೇ ಸಿಕ್ಕಿಬಿದ್ದಿದ್ದ ಘಟನೆ ಓದಿರುತ್ತೀರಿ. ಅಂತಹದ್ದೇ ಒಂದು ಘಟನೆ ಇಲ್ಲಿ ನಡೆದಿದೆ. ಇದು ನಡೆದಿರುವುದು ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ. ಕಳ್ಳನೊಬ್ಬ ಕ್ಲಿನಿಕ್ ಒಂದರಲ್ಲಿ ಕಳ್ಳತನ ಮಾಡಲು ಬರುತ್ತಾನೆ. ಶಟರ್ ಡೋರ್ ನ ಸಂಧಿಯಲ್ಲಿ ತಲೆ ತೂರಿಸಿದ್ದ ಆತನ ತಲೆ ಅಲ್ಲೇ ಲಾಕ್ ಆಗುತ್ತದೆ. ರಾತ್ರಿಯಿಡೀ ಇದೇ ಅವಸ್ಥೆಯಲ್ಲಿ ಆತ ಕಾಲಕಳೆಯುತ್ತಾನೆ.
ಚೆನ್ನೈ: ಐಪಿಎಲ್ 2026 ರಲ್ಲಿ ಮೊದಲ ಶತಕ ಗಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಸಂಜು ಸ್ಯಾಮ್ಸನ್ ತಮ್ಮ ಲಕ್ಕಿ ಚಾರ್ಮ್ ಯಾರು ಎಂದು ಹೇಳಿದ್ದಾರೆ. ಕಳೆದ ಮೂರು ಪಂದ್ಯಗಳಿಂದ ಕಳೆಗುಂದಿದ್ದ ಸಂಜು ಸ್ಯಾಮ್ಸನ್ ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 56 ಎಸೆತಗಳಿಂದ 115 ರನ್ ಸಿಡಿಸಿ ಈ ಕೂಟದ ಮೊದಲ ಶತಕ ದಾಖಲಿಸಿದರು. ಈ ಪಂದ್ಯವನ್ನು ಚೆನ್ನೈ 23 ರನ್ ಗಳಿಂದ ಗೆದ್ದುಕೊಂಡಿತು. ಭರ್ಜರಿ ಶತಕ ಸಿಡಿಸಿದ್ದಕ್ಕಾಗಿ ಸಂಜು ಸ್ಯಾಮ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಇಸ್ಲಾಮಾಬಾದ್: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದಿದ್ದ ಇರಾನ್ ಮತ್ತು ಅಮೆರಿಕಾ ನಡುವಿನ ಶಾಂತಿ ಮಾತುಕತೆ ವಿಫಲವಾಗಿದೆ. ಈ ಬಗ್ಗೆ ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಸುಮಾರು 21 ಗಂಟೆಗಳ ಕಾಲ ಇರಾನ್ ಮತ್ತು ಅಮೆರಿಕಾ ಪ್ರತಿನಿಧಿಗಳ ನಡುವೆ ಮಾತುಕತೆ ನಡೆದಿದೆ. ಇಂದು ಮೂರು ಸುತ್ತಿನ ಮಾತುಕತೆ ಮುಗಿದ ಬಳಿಕ ಜೆಡಿ ವ್ಯಾನ್ಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು ಕಹಿ ಸುದ್ದಿ ಎಂದಿದ್ದಾರೆ. ‘ಅವರು ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳುತ್ತಿಲ್ಲ. ನಾವು ಕೊಂಚ ಹೊಂದಿಕೊಳ್ಳಲು ರೆಡಿ ಇದ್ದೆವು. ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದರು, ನೀವು ಒಂದು ನಂಬಿಕೆಯೊಂದಿಗೆ ಇಲ್ಲಿಗೆ ಬರಬೇಕು.
ವಿಮಾನದಲ್ಲಿ ಮಹಿಳೆ ಎದೆ ಹಾಲುಣಿಸುತ್ತಿದ್ದಳು. ಆದರೆ ಆಕೆ ಎದೆ ಹಾಲುಣಿಸುತ್ತಿದ್ದಿದ್ದು ಯಾರಿಗೆ ಎಂದು ತಿಳಿದ ಬಳಿಕ ಸಹ ಪ್ರಯಾಣಿಕನಿಗೆ ಶಾಕ್ ಆಗಿದ್ದಲ್ಲದೆ ರಂಪಾಟ ಮಾಡಿದ್ದಾನೆ. ಇಂತಹದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ವಿದೇಶದ ವಿಮಾನ ಯಾನವೊಂದರಲ್ಲಿ ಇಬ್ಬರು ವಿದೇಶೀ ಪ್ರಯಾಣಿಕರ ನಡುವೆ. ಈ ವಿಡಿಯೋ ನೋಡಿದ ಮೇಲೆ ಪ್ರಪಂಚದಲ್ಲಿ ಎಂಥಾ ಜನರೆಲ್ಲಾ ಇರುತ್ತಾರೆ ಎಂದು ನಿಮಗೂ ಶಾಕ್ ಆಗಬಹುದು. ವಿಮಾನ ಪ್ರಯಾಣ ವೇಳೆ ಮಹಿಳೆಯೊಬ್ಬಳು ನೀಟ್ ಆಗಿ ಬಟ್ಟೆಯಲ್ಲಿ ಸುತ್ತಿಕೊಂಡು ಬೆಕ್ಕಿಗೆ ಎದೆ ಹಾಲುಣಿಸುತ್ತಿದ್ದಳು.
ಮುಂಬೈ: ಐಪಿಎಲ್ 2026 ರಲ್ಲಿ ಇಂದು ಬಹುನಿರೀಕ್ಷಿತ ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿಬಿ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಆರ್ ಸಿಬಿಯಲ್ಲಿ ಈ ಆಟಗಾರನಿಗೆ ಕೊಕ್ ಕೊಡುವುದು ಖಚಿತವಾಗಿದೆ. ಕಳೆದ ಮೂರು ಪಂದ್ಯಗಳಿಂದ ಆರ್ ಸಿಬಿ ಎರಡು ತವರಿನ ಪಂದ್ಯಗಳನ್ನು ಗೆದ್ದುಕೊಂಡಿದ್ದರೆ ನಂತರ ಗುವಾಹಟಿಯಲ್ಲಿ ನಡೆದ ಪಂದ್ಯವನ್ನು ಸೋತಿತ್ತು. ಕಳೆದ ಪಂದ್ಯದಲ್ಲಿ ಆರ್ ಸಿಬಿ ಬೌಲಿಂಗ್ ಹುಳುಕುಗಳು ಬಯಲಿಗೆ ಬಂದಿತ್ತು. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಒಂದು ಬದಲಾವಣೆಯಾಗುವುದು ಖಚಿತವಾಗಿದೆ. ಇದುವರೆಗೆ ಮೂರು ಪಂದ್ಯಗಳನ್ನು ಆಡಿರುವ ಅಭಿನಂದನ್ ಸಿಂಗ್ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಕಳೆದ ಪಂದ್ಯದಲ್ಲಂತೂ 3 ಓವರ್ ಗಳಲ್ಲಿ 50 ಪ್ಲಸ್ ರನ್ .
ಬೆಂಗಳೂರು: ಬಿರು ಬೇಸಿಗೆಯ ನಡುವೆಯೂ ಕೆಲವು ಜಿಲ್ಲೆಗಳಲ್ಲಿ ಆಗಾಗ ಮಳೆಯಾಗುತ್ತಿದೆ. ಇಂದು ಭಾನುವಾರ ಈ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಮೊನ್ನೆ ಬೆಂಗಳೂರಿನಲ್ಲಿ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಣ್ಣ ಮಳೆಯಾಗಿತ್ತು. ಒಂದೆಡೆ ವಿಪರೀತ ಬಿಸಿಲು, ಸೆಖೆಯಿದ್ದರೆ ಮತ್ತೊಂದೆಡೆ ಸಣ್ಣ ಮಳೆಯಾಗುತ್ತಿದೆ. ಇಂದೂ ಕೆಲವು ಜಿಲ್ಲೆಗಳಿಗೆ ಮಳೆಯ ಸೂಚನೆಯಿದೆ. ಇಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಮಳೆಯಾಗುವ ಸೂಚನೆಯಿದೆ.
ಇಂದು ಭಾನುವಾರವಾಗಿದ್ದು ಸೂರ್ಯ ದೇವನಿಗೆ ವಿಶೇಷವಾದ ದಿನವಾಗಿದೆ. ಆರೋಗ್ಯ, ಆಯಸ್ಸು ವೃದ್ಧಿ ಜೊತೆಗೆ ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಸೂರ್ಯ ದೇವನ ಕುರಿತ ಸೂರ್ಯಾಷ್ಟಕಂ ಸ್ತೋತ್ರವನ್ನು ಇಂದು ತಪ್ಪದೇ ಓದಿ.ಶಾಂಬ ಉವಾಚಆದಿದೇವ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ ।ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಽಸ್ತುತೇ ॥ 1 ॥ ಸಪ್ತಾಶ್ವ ರಥ ಮಾರೂಢಂ ಪ್ರಚಂಡಂ ಕಶ್ಯಪಾತ್ಮಜಮ್ ।ಶ್ವೇತ ಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ॥ 2॥ ಲೋಹಿತಂ ರಥಮಾರೂಢಂ ಸರ್ವ ಲೋಕ ಪಿತಾಮಹಮ್ ।ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ॥ 3॥
ಗಂಟಲು ನೋವು ಸಾಮಾನ್ಯವಾಗಿ ನಮ್ಮ ಆಹಾರ ಕ್ರಮದಲ್ಲಿ ಬದಲಾವಣೆಯಾದಾಗ ಕಾಣಿಸುವ ಆರೋಗ್ಯ ಸಮಸ್ಯೆಯಾಗಿದೆ. ಆದರೆ ಈ ಸಮಸ್ಯೆಗೆ ಮನೆಮದ್ದುಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ನೋಯುತ್ತಿರುವ ಗಂಟಲನ್ನು ನೈಸರ್ಗಿಕವಾಗಿ ಶಮನಗೊಳಿಸಲು ಐದು ಸುಲಭ ಮತ್ತು ಪರಿಣಾಮಕಾರಿ ಪರಿಹಾರಗಳು ಇಲ್ಲಿವೆ.ಬೆಚ್ಚಗಿನ ಉಪ್ಪು ನೀರು ಗರ್ಗ್ಲ್ಬೆಳಗ್ಗೆ ಎದ್ದ ತಕ್ಷಣ ಹಾಗೂ ಮಲಗುವ ಮುನ್ನಾ ಬೆಚ್ಚಗಿನ ಉಪ್ಪುನೀರಿನೊಂದಿಗೆ ಗಾರ್ಗ್ಲಿಂಗ್ ಮಾಡಿದ್ದಲ್ಲಿ ಗಂಟಲಿನ ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ, ಇದು ನೋವಿನಿಂದ ತ್ವರಿತ ಪರಿಹಾರವನ್ನು
ರುಲಿಯಾ (ಪಶ್ಚಿಮ ಬಂಗಾಳ): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಯಾವುದೇ ಭ್ರಷ್ಟರನ್ನು ಉಳಿಸುವುದಿಲ್ಲ ಎಂದು ಹೇಳಿದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಿದೆ ಎಂದು ಹೇಳಿದರು. ಮಮತಾ ಬ್ಯಾನರ್ಜಿ ಅವರು ಇಡೀ ಬಂಗಾಳವನ್ನು ಭ್ರಷ್ಟಾಚಾರದ ಬೆಂಕಿಯಲ್ಲಿ ಹಾಕಿದ್ದಾರೆ.
ಬೆಂಗಳೂರು: ಲಂಬೋರ್ಗಿನಿಯಲ್ಲಿ ಅಜಾಗರೂಕತೆಯಿಂದ ಚಾಲನೆ ಮಾಡಿದ ಆರೋಪದ ಮೇಲೆ ಕರ್ನಾಟಕ ಹೈಕೋರ್ಟ್ ಕಾರು ಚಾಲಕನಿಗೆ ರಸ್ತೆಯನ್ನು ಗುಡಿಸಿ, ಹಿಂತಿರುಗುವಂತೆ ಸೂಚಿಸಿದೆ. ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಮೈಸೂರು ರಸ್ತೆಯಲ್ಲಿ ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆ ಆರೋಪದ ಪ್ರಕರಣವನ್ನು ಆಲಿಸಿದ ಹೈಕೋರ್ಟ್, ಸಮಾಜ ಸೇವೆ ಮಾಡುವ ಇಚ್ಛೆಯನ್ನು ಗಮನಿಸಿ ಅವರಿಗೆ ಮೌಖಿಕವಾಗಿ ಸೂಚಿಸಿತು. "ನಿಮ್ಮ ಹಸಿರು ಲಂಬೋರ್ಗಿನಿಯಲ್ಲಿ ಹೋಗಿ, ರಸ್ತೆಗಳನ್ನು ಗುಡಿಸಿ, ಅದೇ ಕಾರಿನಲ್ಲಿ ಹಿಂತಿರುಗಿ."ಕೆಲವು ವ್ಯಕ್ತಿಗಳಲ್ಲಿ ಅತಿ ವೇಗದ ವಾಹನಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಮತ್ತು ಸಂಚಾರ
ರೈಲ್ವೆ ನಿಲ್ದಾಣದಲ್ಲಿ ಕೆಲವೊಮ್ಮೆ ಮಾಡುವ ಸಣ್ಣ ತಪ್ಪಿನಿಂದ ಪ್ರಾಣ ಕಳೆದುಕೊಳ್ಳುವ ಅನೇಕ ಘಟನೆಗಳು ಈಗಾಗಲೇ ವರದಿಯಾಗಿದೆ. ಅಂತಹದ್ದೇ ಘಟನೆಯೊಂದು ಪ್ರಯಾಗ್ರಾಜ್ನ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಆದರೆ ಆರ್ಪಿಎಫ್ನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರೊಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಆಘಾತಕಾರಿ ವಿಡಿಯೋದಲ್ಲಿ ಪ್ರಯಾಣಿಕರೊಬ್ಬರು ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿದ್ದಾರೆ. ಈ ವೇಳೆ ರೈಲ್ವೆ ಬಾಗಿಲಿನ
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ 2026 ಪಂದ್ಯಕ್ಕಾಗಿ ಸಾರಾ ತೆಂಡೂಲ್ಕರ್ ಲಕ್ನೋಗೆ ಆಗಮಿಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಸಾರಾ ನಾಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಆಕೆಯ ಸಹೋದರ ಅರ್ಜುನ್ ಎಲ್ಎಸ್ಜಿಗಾಗಿ ಆಡುತ್ತಿರುವ ಕಾರಣ ಮತ್ತು ಜಿಟಿ ನಾಯಕ ಶುಭಮನ್ ಗಿಲ್ ಅವರೊಂದಿಗೆ ಡೇಟಿಂಗ್ ವದಂತಿಗಳ ಕಾರಣ ಆನ್ಲೈನ್ ಚರ್ಚೆಯನ್ನು ಉತ್ತೇಜಿಸಿತು.ಇನ್ನೂ ವಿಮಾನ ನಿಲ್ದಾಣದಲ್ಲಿ ಸಾರಾಳನ್ನು ಅಭಿಮಾನಿಯೊಬ್ಬರು ನೀವು ಯಾರನ್ನೂ ಬೆಂಬಲಿಸುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಬ್ಲಸ್
ಬೆಂಗಳೂರು: ಝಾಂಬಿ ಡ್ರಗ್ಸ್ ಕುರಿತು ಯುವಕನೊಬ್ಬ ಶೇರ್ ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ನಟ ದುನಿಯಾಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಅಪಯಕಾರಿ ಝಾಂಬಿ ಡ್ರಗ್ಸ್ ಬೆಂಗಳೂರಿಗೆ ಲಗ್ಗೆ ಇಟ್ಟಿದೆ ಎನ್ನುವ ವಿಡಿಯೋವನ್ನು ಹೇಮಂತ್ ಎಂಬ ಯುವಕ ತನ್ನ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದ. ಇನ್ನೂ ಈ ವಿಡಿಯೋ ಬಗ್ಗೆ ಪರಿಶೀಲಿಸದೆ ಸಾಮಾಜಿಕ ಜಾಲತಾಣದಲ್ಲಿ ದುನಿಯಾ ವಿಜಯ್ ಅವರು ಶೇರ್ ಮಾಡಿಕೊಂಡಿದ್ದರು. ನಾನು ಸಿನಿಮಾ ಮಾಡಿ ಡ್ರಗ್ಸ್ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಿದ್ದೆ. ಪೊಲೀಸರು ಸರಿಯಾದ ಕ್ರಮ ಕೈಗೊಳ್ಳಲಿಲ್ಲ ಎಂದು
ಧುರಂಧರ್ 2ಸಿನಿಮಾ ಬ್ಲಾಕ್ಬಾಸ್ಟರ್ ಆದ ಬೆನ್ನಲ್ಳೇ ನಟ ರಣವೀರ್ ಸಿಂಗ್ ಅವರು ಆರ್ಎಸ್ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ. ಶುಕ್ರವಾರ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಕೇಂದ್ರ ಕಚೇರಿಗೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.ಇತ್ತೀಚೆಗೆ ಜಾಮ್ನಗರದಲ್ಲಿ ಅನಂತ್ ಅಂಬಾನಿ ಅವರ ಜನ್ಮದಿನ ಆಚರಣೆ ಬಳಿಕ ನಟ ಗೌಪ್ಯತೆಯಲ್ಲಿ ನಾಗಪುರದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಕಳೆದರು.
ಉತ್ತರ ಪ್ರದೇಶ: ಹಾವು ಕಚ್ಚಿದೆಯೆಂದು ಆಸ್ಪತ್ರೆಗೆ ದಾಖಲಿಸುವ ಬದಲು ಬಾಲಕನನ್ನು ತಂತಿಯಲ್ಲಿ ಕಟ್ಟಿ ಗಂಗಾ ನದಿಯಲ್ಲಿ ನೀರಿನಲ್ಲಿ ಮುಳುಗಿಸಿಟ್ಟ ಅಚ್ಚರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಮ್ರೋಹಾದಲ್ಲಿ 14 ವರ್ಷದ ಬಾಲಕನಿಗೆ ಹಾವು ಕಚ್ಚಿದೆ. ಅವರನ್ನು ಆಸ್ಪತ್ರೆಗೆ ಸೇರಿಸುವ ಬದಲು ತಂತಿಗಳ ಬಳಿಗೆ ಕರೆದೊಯ್ದರು. ಅವರು ಹುಡುಗನನ್ನು 12 ಗಂಟೆಗಳ ಕಾಲ ಗಂಗಾ ನದಿಯಲ್ಲಿ ಮುಳುಗಿದ್ದರಿಂದ ಯುವಕನನ್ನು ಸೂಚಿಸಿದ್ದಾರೆ.
ಹೈದರಾಬಾದ್: ಮೈಕ್ರೋ ಫೈನಾನ್ಸ್ ಸ್ಕೀಮ್ ವ್ಯವಹಾರದಲ್ಲಿ ವಕೀಲರಿಗೆ 10 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಗಾಯಕ ಮಂಗ್ಲಿ ವಿರುದ್ಧ ಪಂಜಾಗುಟ್ಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಮೈಕ್ರೋಫೈನಾನ್ಸ್ ಯೋಜನೆಗೆ ಸಂಬಂಧಿಸಿದ ವಂಚನೆಯಲ್ಲಿ ಮಂಗ್ಲಿ ತನಗೆ ರೂ.10 ಕೋಟಿ ವಂಚಿಸಿದ್ದಾರೆ ಎಂದು ವಕೀಲ ಸುಬ್ಬಾ ರಾವ್ ಆರೋಪಿಸಿದರು.ವಕೀಲರು ಮಂಗ್ಲಿ ಮತ್ತು ಇತರ ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡಿದರು. ಅವರಿಂದಲೂ ಜೀವ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದಾರೆ.
ದಾವಣಗೆರೆ: ಇಲ್ಲಿನ ದಕ್ಷಿಣ ಉಪಚಚುನಾವಣೆ ಮುಗಿಯುತ್ತಿದ್ದ ಹಾಗೇ ಕಾಂಗ್ರೆಸ್ನನೊಳಗಿನ ಬಂಡಾಯದ ವಿಚಾರ ಮತ್ತೇ ಭುಗಿಲೆದ್ದಿದೆ. ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡದ ಹಿನ್ನೆಲೆಯಲ್ಲಿ ಆರಂಭವಾಗಿದ್ದ ಮುನಿಸು ಇದೀಗ ಅಲ್ಪಸಂಖ್ಯಾರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಂಎಲ್ಸಿಯೂ ಆಗಿರುವ ಅಬ್ದುಲ್ ಜಬ್ಬಾರ್ ರಾಜೀನಾಮೆ ಸಲ್ಲಿಸಿದ್ದಾರೆ.ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡದ ಸಚಿವ ಜಮೀರ್ ಅಹ್ಮದ್ ವಿರುದ್ಧ ಮತ್ತೊಂದು ಮುಸ್ಲಿಂ ಬಣ ತಿರುಗಿ ಬಿದ್ದಿತ್ತು. ಜಮೀರ್ ಅಹ್ಮದ್ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿಲ್ಲ, ಪ್ರಚಾರಕ್ಕೆ ಅಂತ ಬಂದಿದ್ರೂ ಅವರ ನಡೆ ಯಾರಿಗೂ ಸಮಾಧಾನ ತಂದಿಲ್ಲ. ಇನ್ನೂ ಮುಸ್ಲಿಂ ನಾಯಕರನ್ನು ಮನವೊಲಿಕೆ ಮಾಡದೇ ಜಮೀರ್ ನಿರ್ಲಕ್ಷ್ಯ ವಹಿಸಿದ್ದರು ಎಂದು ಗಂಭೀರ ಆರೋಪ
ನಟಿ ದೀಪಿಕಾ ಪಡುಕೋಣೆ ಅವರ ಮುಂಬರುವ ಚಿತ್ರ ರಾಕಾಗೆ ಅವರ ಸಹನಟ ಅಲ್ಲು ಅರ್ಜುನ್ಗಿಂತ ಮೂರು ಪಟ್ಟು ಕಡಿಮೆ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಅರ್ಜುನ್ ಸುಮಾರು ₹175 ಕೋಟಿ ಗಳಿಸುತ್ತಿದ್ದಾರೆ ಎಂದು ಹೇಳಲಾಗಿದ್ದು, ದೀಪಿಕಾ ಅವರ ಶುಲ್ಕ ₹ 25 ಕೋಟಿ ಎಂದು ಅಂದಾಜಿಸಲಾಗಿದೆ.ಅದೇ ವರದಿಯ ಪ್ರಕಾರ ರಶ್ಮಿಕಾ ಮಂದಣ್ಣ ತಮ್ಮ ಪಾತ್ರಕ್ಕಾಗಿ ಸುಮಾರು ₹ 5–7 ಕೋಟಿ ಪಡೆಯುತ್ತಾರೆ. ಆದಾಗ್ಯೂ, ಈ ಅಂಕಿಅಂಶಗಳು ಅಧಿಕೃತವಾಗಿ ದೃಢೀಕರಿಸಲ್ಪಟ್ಟಿಲ್ಲ. ಶಾರುಖ್ ಖಾನ್ ಅಭಿನಯದ ಬ್ಲಾಕ್ಬಾಸ್ಟರ್ ಜವಾನ್ ನಂತರ ನಿರ್ದೇಶಕ
ಚಿಕ್ಕಮಗಳೂರು: ಕೇರಳದಿಂದ ಕುಟುಂಬದ ಜೊತೆ ಪ್ರವಾಸಕ್ಕೆಂದು ಬಂದು ಮಾಣಿಕ್ಯಧಾರಾ ಬಳಿಕ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದ ಶ್ರೀನಂದಾ ಶವಪರೀಕ್ಷೆಯಲ್ಲಿ ಶಾಕಿಂಗ್ ಅಂಶಗಳು ರಿವೀಲ್ ಆಗಿವೆ. ಚಿಕ್ಕಮಗಳೂರಿನ ಮಾಣಿಕ್ಯಧಾರಾ ಫಾಲ್ಸ್ ಬಳಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದ ಕೇರಳದ ಶ್ರೀನಂದಾ ಪ್ರಕರಣ ಈಗ ಭಾರೀ ಚರ್ಚೆಯಾಗುತ್ತಿದೆ. ಬಾಲಕಿ ತಾನಾಗಿಯೇ ಪ್ರಪಾತಕ್ಕೆ ಬಿದ್ದಳೇ? ಅಥವಾ ಆಕೆಯನ್ನು ಯಾರಾದರೂ ಕಿಡ್ನ್ಯಾಪ್ ಮಾಡಿ ಇಲ್ಲಿ ಪ್ರಪಾತಕ್ಕೆ ತಳ್ಳಿದರೆ ಎಂಬ ಅನುಮಾನಗಳಿವೆ. ಈ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಚಿಕ್ಕಮಗಳೂರು ಪೊಲೀಸರು ಈಗ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಬಂದರೆ, ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮಾತ್ರವಲ್ಲ ‘ಸಬ್ ಕಾ ಹಿಸಾಬ್’ ಮಂತ್ರವನ್ನು ಪಾಲಿಸುತ್ತದೆ. ಅದಲ್ಲದೆ ಭಾರತಕ್ಕೆ ಒಳನುಸುಳಿದವರನ್ನು ಹೊರದಬ್ಬಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪೂರ್ವ ವರ್ಧಮಾನ್ ಜಿಲ್ಲೆಯ ಕಟ್ವಾದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿ ಎಚ್ಚರಿಕೆ ನೀಡಿದರು. ಬಂಗಾಳದಲ್ಲಿರುವ ಮತುವಾ, ನಮಸುದ್ರ ಹಾಗೂ ಎಲ್ಲಾ ನಿರಾಶ್ರಿತ ಸಮುದಾಯಗಳಿಗೆ ಗ್ಯಾರಂಟಿ ನೀಡಲು ನಾನು ಇಲ್ಲಿಗೆ
ಕೆಲವೊಮ್ಮೆ ಮೈದಾನದಲ್ಲಿ ಎದುರಾಳಿ ಕ್ರಿಕೆಟಿಗರ ಜತೆ ನಡೆಯುವ ಕ್ಷಣಗಳು ಎಲ್ಲರ ಹೃದಯವನ್ನು ಗೆಲ್ಲುತ್ತದೆ. ಆರ್ಆರ್ ಹಾಗೂ ಆರ್ಸಿಬಿ ವಿರುದ್ಧ ನಡೆದ ಪಂದ್ಯಾಟದ ವೇಳೆ ಆರ್ಆರ್ ಆಟಗಾರ ವೈಭವ್ ಸೂರ್ಯವಂಶಿ ಅವರ ಶೂ ಲೇಸ್ ಬಿಚ್ಚುತ್ತದೆ. ಅದನ್ನು ಕಟ್ಟಕ್ಕೆ ಆಗದೆ ಆಟಗಾರ ಇರುವುದನ್ನು ನೋಡಿ ಆರ್ಸಿಬಿ ಆಟಗಾರ ವೆಂಕಟೇಶ್ ಅಯ್ಯರ್ ಗಮನಿಸಿ, ಯುವ ಆಟಗಾರ ಶೂಲೇಸ್ ಅನ್ನು ಕಟ್ಟುತ್ತಾರೆ.ಈ ಹೃದಯ ಸ್ಪರ್ಶಿ ಕ್ಷಣ ಇಂಟರ್ನೆಟ್ನಲ್ಲಿಎಲ್ಲರ ಮನ ಗೆದ್ದಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ 2 ನೇ ಇನ್ನಿಂಗ್ಸ್ನಲ್ಲಿ ವೈಭವ್
ಈಚೆಗೆ ತಮ್ಮ ವೈಯಕ್ತಿಕ ಬದುಕಿನ ಸಂಬಂಧ ಸುದ್ದಿಯಾಗಿದ್ದ ಭಾರತದ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರು ಇದೀಗ ಮತ್ತೇ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಕಾರು ಚಲಾಯಿಸುತ್ತಿರುವಾಗ ಸಿಗರೇಟ್ ಸೇದುತ್ತಾ ಅದನ್ನು ರಸ್ತೆಗೆ ಎಸೆದು ಕಾರು ಓಡಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಯುಜ್ವೇಂದ್ರ ಚಾಹಲ್ ವಿವಾದಗಳಿಗೆ ಹೊಸದಲ್ಲ ಮತ್ತು ಲೆಗ್ ಸ್ಪಿನ್ನರ್ ಹೊಸದರಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಸಾಮಾಜಿಕ
ಬೆಂಗಳೂರು: 15 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ನ ಘಟಾನುಘಟಿ ತಂಡಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾನೆ. ವಿಶ್ವದ ಶ್ರೇಷ್ಠ ಬೌಲರ್ನಾದ ಬೂಮ್ರಾನಿಂದ ಹಿಡಿದು ಎಲ್ಲ ಬೌಲರ್ಗಳಿಗೂ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ವೈಖರಿ ದೊಡ್ಡ ಚಾಲೆಂಜ್ ಆಗಿದೆ. ಈ ಆವೃತ್ತಿಯಲ್ಲಿ ಎರಡೂ ಪಂದ್ಯಗಳಲ್ಲೂ ಜಯಶಾಲಿಯಾಗಿದ್ದ ಆರ್ಸಿಬಿ, ಶುಕ್ರವಾರ ರಾಜಸ್ಥಾನ ವಿರುದ್ಧವು ಅದೇ ಗೆಲುವಿನ ಓಟವನ್ನು ನಿರೀಕ್ಷಿಸಿತ್ತು. ಆದರೆ ಸೂರ್ಯವಂಶಿಯ ಬ್ಯಾಟಿಂಗ್ ಪ್ರದರ್ಶನ ಆರ್ಸಿಬಿಗೆ ಮೊದಲ ಸೋಲಿನ ಕಹಿ ಉಂಡಿಸಿತು.
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ಕಳೆದ ವಾರದಂತೆ ಈ ವಾರವೂ ಅದೇ ಟ್ರೆಂಡ್ ಮುಂದುವರಿದಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಳಿಕೆಯಾಗುತ್ತಲೇ ಇತ್ತು. ಕಳೆದ ವಾರ ಎರಡು ದಿನ ಸತತವಾಗಿ ಬೆಲೆ ಏರಿಕೆ ಕಂಡುಬರುತ್ತಿತ್ತು. ಅಡಿಕೆ ಬೆಲೆಯಲ್ಲಿ ಮೊನ್ನೆ ಕೊಂಚ ಏರಿಕೆಯಾಗಿತ್ತು. ಆದರೆ ಇಂದು ಮತ್ತೆ ಇಳಿಕೆಯಾಗಿದೆ. ಹೊಸ ಅಡಿಕೆ ಬೆಲೆ 490 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 555 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ 555 ರೂ.ಗಳಷ್ಟಾಗಿದೆ.
ಅಯ್ಯೋ... ಯಾರೋ ನಮ್ಮ ಮನೆಗೆ ದರೋಡೆ ಮಾಡಲು ಬಂದು ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಕ್ಯಾಮರಾ ಮುಂದೆ ಆಸ್ಕರ್ ಪ್ರಶಸ್ತಿ ಸಿಗುವ ರೇಂಜ್ ಗೆ ನಾಟಕವಾಡಿದ್ದ ಪತ್ನಿ ಪ್ರಿಯಾಂಕ ಪುರೋಹಿತ್ ನಿಜ ರೂಪ ತಿಳಿದು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಮಧ್ಯಪ್ರದೇಶದ ಧಾರಾ ಜಿಲ್ಲೆಯಲ್ಲಿ ನಡೆದ ಕೊಲೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ನೀನು ಕರಿಯ ನನಗೆ ಬೆಳ್ಳಗಿನ ಗಂಡ ಬೇಕಿತ್ತು ಎಂದು ಜಗಳವಾಡುತ್ತಿದ್ದ ಹೆಂಡತಿ ಕೊನೆಗೆ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಆತನನ್ನು ಕೊಲೆ ಮಾಡಿಸಿದ್ದಾಳೆ.
ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ರೈಲ್ವೆ ಇಲಾಖೆ ಗುಡ್ನ್ಯೂಸ್ ನೀಡಿದೆ. ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಭಾರತೀಯ ರೈಲ್ವೆ ಕೆಎಸ್ಆರ್ ಬೆಂಗಳೂರು ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮುಂಬೈ ನಡುವೆ ಸಂಪರ್ಕ ಕಲ್ಪಿಸುವ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಇದಾಗಿದ್ದು, ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ ಪ್ರಯಾಣ ಸಮಯವನ್ನು ಸುಮಾರು 13ರಿಂದ 18 ಗಂಟೆಗಳವರೆಗೆ ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಇದಕ್ಕೆ ಜೊತೆಗೆ, ದೆಹಲಿ ಸೂರತ್ ಸೇರಿದಂತೆ ಇತರ ವಂದೇ ಭಾರತ್ ಸ್ಲೀಪರ್ ಮಾರ್ಗಗಳನ್ನೂ ಪರಿಗಣಿಸಲಾಗುತ್ತಿದೆ.ಮುಂಬೈಗೆ ವಂದೇ ಭಾರತ್ ಸ್ಲೀಪರ್ ರೈಲಿಗೆ ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಬೇಡಿಕೆ ಇಟ್ಟಿದ್ದರು.
ಬೆಂಗಳೂರು: ಮಹಿಳಾ ಮೀಸಲಾತಿ ಜಾರಿ ಸಂಬಂಧ ಸಂಸತ್ ಅಧಿವೇಶನ ನಡೆಯಲಿದೆ. ನಾರಿ ಶಕ್ತಿ ವಂದನ್ ಮಸೂದೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ತಮ್ಮ ಹಕ್ಕಿನ ಬಗ್ಗೆ ಮುಂದಿನ 10 ದಿನಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ.ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆಯನ್ನು ಸ್ವೀಕಾರ ಮಾಡಿ ಎಂದು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು. ಮುಂದೆ ವಿವಿಧ ಕ್ಷೇತ್ರಗಳ ತಜ್ಞರನ್ನು ಗುರುತಿಸಿ ಅವರಿಗೆ ಟಿಕೆಟ್ ಕೊಡುವಂತಾಗಲಿದೆ ಎಂದು ಆಶಿಸಿದರು. ಮಹಿಳಾ ಮೀಸಲಾತಿ ಜಾರಿಗಾಗಿ ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಮರ್ಪಿಸಿದರು.
ಯುವಕನೊಬ್ಬ ಬೃಹತ್ ಗಾತ್ರದ ಹಾವಿಗೆ ಕಿಸ್ ಮಾಡಲು ಹೋಗಿದ್ದು ಮುಂದೆ ಆಗಿದ್ದು ಮಾತ್ರ ಭಯಾನಕ. ಇಂತಹದ್ದೊಂದು ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗಿನ ದಿನಗಳಲ್ಲಿ ಜನ ರೀಲ್ಸ್ ವಿಡಿಯೋ ಮಾಡಲು ಏನೇನೋ ಹುಚ್ಚು ಸಾಹಸ ಮಾಡುತ್ತಾರೆ. ಅದರಲ್ಲೂ ಹಾವು ಹಿಡಿಯುವುದನ್ನು ಲೈವ್ ಆಗಿ ತೋರಿಸಲು ಹೋಗುತ್ತಾರೆ. ಆದರೆ ಕೆಲವೊಮ್ಮೆ ಇದರಿಂದ ಅನಾಹುತಗಳಾಗುವುದೂ ಇದೆ. ಇದೇ ರೀತಿ ಯುವಕನೊಬ್ಬ ಬೃಹತ್ ಗಾತ್ರದ ಹಾವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಹಾವಿನ ಬಾಯಿಯ ಭಾಗವನ್ನು ಮುಖದ ಹತ್ತಿರ ತಂದು ಆತ ಕಿಸ್ ಮಾಡಲು ಹೋಗುತ್ತಾನೆ. ಇದನ್ನು ಇನ್ನೊಬ್ಬಾತ ವಿಡಿಯೋ ಮಾಡುತ್ತಿರುತ್ತಾನೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ವಾರಂತ್ಯಕ್ಕೆ ಪರಿಶುದ್ಧ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿತ್ತು. ಪರಿಶುದ್ಧ ಚಿನ್ನದ ದರ ವಾರಂತ್ಯಕ್ಕೆ 1,54,755.00 ರೂ.ಗಳಿತ್ತು. ಆದರೆ ಇಂದು ಏರಿಕೆಯಾಗಿದ್ದು 1,55,440.00 ರೂ.ಗಳಷ್ಟಿದೆ.
ನವದೆಹಲಿ: ರಾಜಕೀಯವಾಗಿ ಸದಾ ಒಬ್ಬರ ಮೇಲೊಬ್ಬರು ಟೀಕೆ ಮಾಡುತ್ತಲೇ ಇರುವ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಇಂದು ಪಾರ್ಲಿಮೆಂಟ್ ಆವರಣದಲ್ಲಿ ಖಾಸ್ ಬಾತ್ ಗಳನ್ನಾಡಿದ್ದು ಇಬ್ಬರ ಅಪರೂಪದ ವಿಡಿಯೋ ವೈರಲ್ ಆಗಿದೆ. ರಾಜಕೀಯವಾಗಿ ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ ಪರಸ್ಪರ ಟೀಕೆ ಮಾಡುತ್ತಲೇ ಇರುತ್ತಾರೆ. ಆದರೆ ಇಂದು ಇಬ್ಬರೂ ನಾಯಕರು ಪರಸ್ಪರ ಉಭಯಕುಶಲೋಪರಿ ನಡೆಸಿದ್ದು ಗಮನಾರ್ಹವಾಗಿತ್ತು. ಇಬ್ಬರ ಅಪರೂಪದ ಕ್ಷಣಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಧುರಾ: ರಾಧೆ ರಾಧೆ ಎಂದು ಭಜನೆ ಮಾಡುತ್ತಾ ಸಂತೋಷದಿಂದ ಸಾಗುತ್ತಿರುವಾಗಲೇ ಬೋಟ್ ಮುಳುಗಿದ್ದು 10 ಮಂದಿ ಜಲ ಸಮಾಧಿಯಾಗಿದ್ದಾರೆ. ಕೊನೆಯ ಕ್ಷಣದ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮಧುರಾದಲ್ಲಿ ನಡೆದಿದೆ. ಕೃಷ್ಣ ಜನ್ಮಭೂಮಿಗೆ ಪ್ರವಾಸಕ್ಕೆ ಬಂದಿದ್ದ ಭಕ್ತರು ಯಮುನಾ ನದಿಯಲ್ಲಿ ಬೋಟಿಂಗ್ ಮಾಡುತ್ತಿದ್ದರು. ಈ ವೇಳೆ ಎಲ್ಲರೂ ರಾಧೆ ರಾಧೆ ಎಂದು ಭಜನೆ ಮಾಡುತ್ತಾ ಸಂತೋಷದಿಂದ ಸಾಗುತ್ತಿದ್ದರು. ಆದರೆ ಬೋಟ್ ಇದ್ದಕ್ಕಿದ್ದಂತೆ ಮುಳುಗಡೆಯಾಗಿದ್ದು ಹಲವರು ನದಿಯ ಆಳಕ್ಕೆ ಬಿದ್ದಿದ್ದಾರೆ. ಇದರಿಂದ ಸುಮಾರು 10 ಮಂದಿ ಪ್ರಾಣ ಕಳೆದುಕೊಂಡಿದ್ದು 22 ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.
ಶನಿ ದೋಷ ಎಂದರೆ ಸಾಕು, ಕಷ್ಟಗಳ ಸರಮಾಲೆ ಕಟ್ಟಿಟ್ಟ ಬುತ್ತಿ ಎಂದುಕೊಳ್ಳುತ್ತೇವೆ. ಶನಿ ದೋಷ ಯಾಕೆ ಬರುತ್ತದೆ ಗೊತ್ತಾ? ಇಲ್ಲಿದೆ ನೋಡಿ ವಿವರ. ಶನಿ ದೋಷವೆಂದರೆ ಯಾವಾಗಲೂ ಕೆಟ್ಟದ್ದೇ ಆಗಬೇಕೆಂದಿಲ್ಲ. ಶನಿಯೂ ಲಾಭಕಾರಕನೂ ಆಗಿರುತ್ತಾನೆ. ಆದರೆ ಶನಿ ಪ್ರಭಾವದಿಂದ ಆರ್ಥಿಕ ನಷ್ಟ, ಸಂಬಂಧಗಳಲ್ಲಿ ತೊಂದರೆ, ಆರೋಗ್ಯ ಸಮಸ್ಯೆ ಬರುವುದೇ ಹೆಚ್ಚು. ಶನಿ ಕರ್ಮ ಫಲಕಾರಕಹಿಂದೆ ನಾವು ಮಾಡಿದ ಕರ್ಮಗಳಿಗೆ ಅನುಸಾರವಾಗಿ ಶನಿ ನಮ್ಮ ಹೆಗಲೇರುತ್ತಾನೆ. ಶನಿ ಒಂದು ರೀತಿಯಲ್ಲಿ ಜೀವನದಲ್ಲಿ ಶಿಸ್ತಿನ ಶಿಕ್ಷಕನಂತೆ. ಅಪ್ರಮಾಣಿಕರಾಗಿದ್ದರೆ, ಇನ್ನೊಬ್ಬರ ಕಣ್ಣಲ್ಲಿ ನೀರು ತರಿಸುವ ಕೆಲಸ ಮಾಡಿದರೆ, ಮೋಸ, ವಂಚನೆ ಮಾಡಿದರೆ ಶನಿಯ ಪ್ರಭಾವ ಕಂಡುಬರಬಹುದು.
ಬೆಂಗಳೂರು: ಆರ್ ಸಿಬಿ ಅಭಿಮಾನಿಗಳು ಬಡ ಶಾಲಾ ಮಕ್ಕಳಿಗೆ ಉಪಯುಕ್ತ ಉಡುಗೊರೆಯೊಂದನ್ನು ನೀಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಅಭಿಮಾನ ಎಂದರೆ ಹೀಗಿರಬೇಕು ಎನ್ನುತ್ತಿದ್ದಾರೆ. ಆರ್ ಸಿಬಿ ಅಭಿಮಾನಿಗಳು ಎಂದರೆ ತಮ್ಮ ತಂಡವನ್ನು ಸೋಲಲಿ, ಗೆಲ್ಲಲಿ ಯಾವತ್ತೂ ಬಿಟ್ಟುಕೊಡಲ್ಲ. ಐಪಿಎಲ್ ನ ಎಲ್ಲಾ ಫ್ರಾಂಚೈಸಿಗಳ ಪೈಕಿ ಅಪ್ಪಟ, ವಿಧೇಯ ಅಭಿಮಾನಿಗಳು ಎಂದು ಯಾರಾದರೂ ಇದ್ದರೆ ಅದು ಆರ್ ಸಿಬಿ ಅಭಿಮಾನಿಗಳು. ಆದರೆ ಈ ಅಭಿಮಾನ ಕೇವಲ ಆಟಕ್ಕೆ ಸೀಮಿತವಾಗಿಲ್ಲ. ರಾಯಚೂರು ಜಿಲ್ಲೆಯ ಗಾಂಧಿನಗರ ಸರ್ಕಾರಿ ಪ್ರೌಢಶಾಲೆಗೆ ಆರ್ ಸಿಬಿ ಅಭಿಮಾನಿಗಳು ಬಡ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ಯಾಡ್ ನೀಡಿದ್ದಾರೆ.
ನವದೆಹಲಿ: ಇರಾನ್ ಮತ್ತು ಅಮೆರಿಕಾ ನಡುವೆ ಮಧ್ಯಸ್ಥಿಕೆ ವಹಿಸಿದ್ದೇವೆಂದು ಬೀಗುತ್ತಿರುವ ಪಾಕಿಸ್ತಾನ ಪದೇ ಪದೇ ಇಸ್ರೇಲ್ ಕೆಣಕಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತಾ? ಇರಾನ್ ಮತ್ತು ಅಮೆರಿಕಾ ನಡುವೆ ಶಾಂತಿ ಸಂಧಾನ ಮಾತುಕತೆ ನಡೆಸಲು ತನ್ನ ದೇಶವನ್ನು ಪಾಕಿಸ್ತಾನ ವೇದಿಕೆ ಮಾಡಿಕೊಂಡಿದೆ. ಆದರೆ ಇಷ್ಟಕ್ಕೇ ಇಡೀ ವಿಶ್ವದಲ್ಲೇ ತಾವು ಬಲಾಢ್ಯರು ಎಂಬಂತೆ ದಿಡೀರ್ ಆಗಿ ವರ್ತಿಸಲು ಪ್ರಾರಂಭಿಸಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯನ್ನು ಇಸ್ರೇಲ್ ವಿರೋಧಿಸಿತ್ತು. ಇದರ ಬೆನ್ನಲ್ಲೇ ಎರಡೂ ದೇಶಗಳ ನಡುವೆ ಮಾತಿನ ಚಕಮಕಿ ತಾರಕಕ್ಕೇರಿದೆ.
ಗುವಾಹಟಿ: ರಾಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಸೋಲಿನ ಬಳಿಕ ಅಭಿಮಾನಿಗಳ ಸಿಟ್ಟು ಬೌಲರ್ ಅಭಿನಂದನ್ ಸಿಂಗ್ ಮೇಲೆ ಬಂದಿದೆ. ಎಲ್ಲಿದ್ದೇ ಇಲ್ಲಿ ತನಕ ಎಂದು ಟ್ರೋಲ್ ಮಾಡಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಆರ್ ಸಿಬಿ ಕಷ್ಟಪಟ್ಟು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ವೆಂಕಟೇಶ್ ಅಯ್ಯರ್ 15 ಎಸೆತಗಳಿಂದ 29 ರನ್ ಸಿಡಿಸದೇ ಇದ್ದಿದ್ದರೆ ಆರ್ ಸಿಬಿ ಮೊತ್ತ 200 ರ ಗಡಿ ದಾಟುತ್ತಿರಲಿಲ್ಲ.
ಇಸ್ಲಾಮಾಬಾದ್: ಇರಾನ್ ಮತ್ತು ಅಮೆರಿಕಾ ನಡುವೆ ಇಂದು ಇಸ್ಲಾಮಾಬಾದ್ ನಲ್ಲಿ ಶಾಂತಿ ಮಾತುಕತೆ ನಡೆಸಲಿದ್ದು, ಪಾಕಿಸ್ತಾನದ ಭದ್ರತೆ ಹೇಗಿದೆ ಗೊತ್ತಾ? ಇರಾನ್ ಮತ್ತು ಅಮೆರಿಕಾ ನಡುವೆ 15 ದಿನಗಳ ಕದನ ವಿರಾಮ ಘೋಷಣೆಯಾದ ಬಳಿಕ ಈಗ ಎರಡೂ ದೇಶಗಳ ಪ್ರತಿನಿಧಿಗಳು ಅಧಿಕೃತವಾಗಿ ಮುಖಾಮುಖಿಯಾಗಿ ಮಾತುಕತೆ ನಡೆಸಲಿದ್ದಾರೆ. ಇದಕ್ಕೆ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ವೇದಿಕೆ ಸಿದ್ಧವಾಗಿದೆ. ತನ್ನ ದೇಶದಲ್ಲಿ ನಡೆಯಲಿರುವ ಶಾಂತಿ ಮಾತುಕತೆಗಾಗಿ ಪಾಕಿಸ್ತಾನ ಬಿಗಿ ಭದ್ರತೆಯನ್ನೇ ಏರ್ಪಡಿಸಿದೆ. ಎರಡು ದಿನಗಳ ಕಾಲ ಇಸ್ಲಾಮಾಬಾದ್ ನಲ್ಲಿ ಲಾಕ್ ಡೌನ್ ಘೋಷಿಸಿದೆ.
ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ಇಂದು ವಾರಂತ್ಯಕ್ಕೆ ರಾಜ್ಯದ ಹವಾಮಾನ ಹೇಗಿರಲಿದೆ ಇಲ್ಲಿದೆ ವರದಿ. ನಿನ್ನೆ ರಾಜ್ಯದಲ್ಲಿ ಇತ್ತೀಚೆಗಿನ ದಿನಗಳಲ್ಲೇ ಅತ್ಯಧಿಕ ತಾಪಮಾನ ದಾಖಲಾಗಿತ್ತು. ಆದರೆ ನಿನ್ನೆಗೆ ಹೋಲಿಸಿದರೆ ಇಂದು ತಾಪಮಾನ ಕೊಂಚ ಇಳಿಕೆಯಾಗಲಿದೆ. ಆದರೆ ಇಂದು ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಅಥವಾ ಮೋಡ ಕವಿದ ವಾತಾವರಣ ನಿರೀಕ್ಷಿಸಬಹುದಾಗಿದೆ. ವಿಶೇಷವಾಗಿ ಇಂದು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ ಇಂದು ಸಣ್ಣ ಮಳೆ ಅಥವಾ ಮೋಡ ಕವಿದ ವಾತಾವರಣ ನಿರೀಕ್ಷಿಸಬಹುದಾಗಿದೆ.
ಮನೆಯಲ್ಲಿ ಐಶ್ವರ್ಯಾಭಿವೃದ್ಧಿಗಾಗಿ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ತುಳಸಿ ಅಷ್ಟೋತ್ತರ ಶತನಾಮಾವಳಿ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.ಓಂ ತುಲಸ್ಯೈ ನಮಃ ।ಓಂ ಪಾವನ್ಯೈ ನಮಃ ।ಓಂ ಪೂಜ್ಯಾಯೈ ನಮಃ ।ಓಂ ಬೃಂದಾವನನಿವಾಸಿನ್ಯೈ ನಮಃ ।ಓಂ ಜ್ಞಾನದಾತ್ರ್ಯೈ ನಮಃ ।ಓಂ ಜ್ಞಾನಮಯ್ಯೈ ನಮಃ ।ಓಂ ನಿರ್ಮಲಾಯೈ ನಮಃ ।ಓಂ ಸರ್ವಪೂಜಿತಾಯೈ ನಮಃ ।ಓಂ ಸತ್ಯೈ ನಮಃ ।ಓಂ ಪತಿವ್ರತಾಯೈ ನಮಃ । 10 । ಓಂ ಬೃಂದಾಯೈ ನಮಃ ।ಓಂ ಕ್ಷೀರಾಬ್ಧಿಮಥನೋದ್ಭವಾಯೈ ನಮಃ ।ಓಂ ಕೃಷ್ಣವರ್ಣಾಯೈ ನಮಃ ।ಓಂ ರೋಗಹಂತ್ರ್ಯೈ ನಮಃ ।ಓಂ ತ್ರಿವರ್ಣಾಯೈ ನಮಃ ।ಓಂ ಸರ್ವಕಾಮದಾಯೈ ನಮಃ ।ಓಂ ಲಕ್ಷ್ಮೀಸಖ್ಯೈ ನಮಃ ।ಓಂ ನಿತ್ಯಶುದ್ಧಾಯೈ ನಮಃ ।
ಭೋಪಾಲ್ : ಎರಡೂವರೆ ವರ್ಷದ ಪುಟ್ಟ ಬಾಲಕನೊಬ್ಬ ತೆರೆದ ಬೋರ್ವೆಲ್ಗೆ ಬಿದ್ದಿದ್ದು, ಸುಮಾರು 70 ಅಡಿ ಆಳದಲ್ಲಿ ಸಿಲುಕಿಕೊಂಡ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ನಡೆದಿದೆ.ಗುರುವಾರ ಸಂಜೆ ಬಾಲಕ ಕೊಳವೆಬಾವಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಭಾರಿ ಪ್ರಮಾಣದ ಕಾರ್ಯಾಚರಣೆ ನಡೆಯುತ್ತಿದೆ. ಮಗುವಿನ ಚಲನವಲನಗಳನ್ನು ಗಮನಿಸಲು ಬೋರ್ವೆಲ್ನೊಳಗೆ ಕ್ಯಾಮೆರಾದಿಂದ ನೋಡಲಾಗುತ್ತಿದೆ.ಉಜ್ಜಯಿನಿ ಜಿಲ್ಲೆಯ ಬಡನಗರ ತಹಸಿಲ್ ವ್ಯಾಪ್ತಿಯ ಝಲಾರಿಯಾ ಗ್ರಾಮದಲ್ಲಿ ಏಪ್ರಿಲ್ 9 ರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬಾಲಕನನ್ನು ರಾಜಸ್ಥಾನದ ಪಾಲಿ ಜಿಲ್ಲೆಯ ಭಗೀರಥ್ ಎಂದು ಗುರುತಿಸಲಾಗಿದೆ.
ಬೆಂಗಳೂರು: ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಬಹುಭಾಷಾ ನಟಿ ನಭಾ ನಟೇಶ್ ಅವರು ಭೇಟಿ ನೀಡಿ ದೇಗುಲದ ವಾಸ್ತುಶಿಲ್ಪ ಕುರಿತು ಬಣ್ಣಿಸಿದ್ದಾರೆ.ನನ್ನ ಜನ್ಮಸ್ಥಳವಾದ ಶೃಂಗೇರಿಯು ಕೇವಲ ಒಂದು ಊರಲ್ಲ, ಅದು ಒಂದು ಭಾವನೆ. ತುಂಗಾ ನದಿಯ ತಟದಲ್ಲಿ ಹುಟ್ಟಿ ಬೆಳೆದವರಿಗೆ ಪ್ರಕೃತಿ ಮತ್ತು ಅಧ್ಯಾತ್ಮದ ನಡುವಿನ ಅವಿನಾಭಾವ ಸಂಬಂಧ ಬಾಲ್ಯದಲ್ಲೇ ಒಲಿದಿರುತ್ತದೆ. ವಿದ್ಯಾಶಂಕರ ದೇವಾಲಯದ ಪ್ರತಿಯೊಂದು ಕಲ್ಲು ಕೂಡ ಇತಿಹಾಸ ಮತ್ತು ವಿಜ್ಞಾನದ ಕಥೆಯನ್ನು ಹೇಳುತ್ತದೆ. ಒಬ್ಬ ಕಲಾವಿದನಿಗೆ ಅಥವಾ ಚಿಂತಕನಿಗೆ ಇಲ್ಲಿ ಸಿಗುವ ಪ್ರೇರಣೆ ಅಪಾರ ಎಂದು ಪೋಸ್ಟ್ ಹಂಚಿಕೊಂಡ ವಜ್ರಕಾಯ ನಟಿ ಗುಣಗಾನ ಮಾಡಿದ್ದಾರೆ.
ಬೆಳ್ಳುಳ್ಳಿ ಸೇವನೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದು ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅದ್ಭುತವದ ಔಷಧೀಯ ಗುಣಗಳನ್ನು ಹೊಂದಿದೆ. ಆಯುರ್ವೇದ ಮತ್ತು ಆಧುನಿಕ ವಿಜ್ಞಾನ ಎರಡರಲ್ಲೂ ಬೆಳ್ಳುಳ್ಳಿಯ ಮಹತ್ವವನ್ನು ಗುರುತಿಸಲಾಗಿದೆ.ಬೆಳ್ಳುಳ್ಳಿಯ ಪ್ರಮುಖ ಆರೋಗ್ಯ ಪ್ರಯೋಜನಗಳು ಇಲ್ಲಿವೆ:ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿ: ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ಸಂಯುಕ್ತವು ರೋಗನಿರೋಧಕ ಶಕ್ತಿಯನ್ನು
ಬೆಂಗಳೂರು: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿನ ಮಾಣಿಕ್ಯಧಾರಾ ಜಲಪಾತದ ಬಳಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳದ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ. ಆಕೆಯ ಸಾವಿನ ಸುತ್ತ ಹಲವು ಅನುಮಾನಗಳು ಎದ್ದಿವೆ.ಮಾಣಿಕ್ಯಧಾರಾ ಜಲಪಾತದ ಸಮೀಪದ ಪ್ರಪಾತದಲ್ಲಿ ಬಾಲಕಿ ಶ್ರೀನಂದಾ ದೇಹ ಇರುವುದು ಮೊದಲು ಡ್ರೋಣ್ ಕ್ಯಾಮರಾದಲ್ಲಿ ಪತ್ತೆಯಾಯಿತು. ಬಳಿಕ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅದೇ ಬಾಲಕಿಯ ಮೃತದೇಹ ಎಂಬುದನ್ನು ಖಚಿತಪಡಿಸಿದರು.ಕಾಲು ಜಾರಿ ಪ್ರಪಾತಕ್ಕೆ ಬಿದ್ದಿರಬಹುದು ಅಥವಾ ಆಕೆಯೇ ಜಿಗಿದಿರಬಹುದು ಎಂದು ಶಂಕಿಸಲಾಗಿದೆ. ಬೇರೆ ಕಾರಣಗಳಿದ್ದರೆ ಮರಣೋತ್ತರ ಪರೀಕ್ಷೆ ನಂತರ ಗೊತ್ತಾಗಲಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ನವದೆಹಲಿ: ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಮನಸೆಳೆದ ಮಾಲೆ ಮಾರಾಟಗಾರ್ತಿ ಮೊನಾಲಿಸಾ ಪತಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ (ಎನ್ಸಿಎಸ್ಟಿ) ವಿಚಾರಣೆಯ ನಂತರ ಆಘಾತಕಾರಿ ಸಂಗತಿಯು ಬಹಿರಂಗವಾಯಿತು, ಇದು ಮೊನಾಲಿಸಾ ಮದುವೆಯ ಸಮಯದಲ್ಲಿ ಆಕೆ ಇನ್ನು ಅಪ್ರಾಪ್ತ ವಯಸ್ಸಿನವಳಾಗಿದ್ದಳು ಎಂದು ಹೇಳಲಾಗಿದೆ.
ಬೆಂಗಳೂರು: ಶಿವಮೊಗ್ಗದ ಹುಲಿಕಲ್ ಘಾಟ್ ನಲ್ಲಿ ಸಂಭವಿಸಿದ ಮಣ್ಣು ಕುಸಿತದಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಕಾರ್ಮಿಕರ ಕುಟುಂಬಕ್ಕೆ ಸಿಎಂ ಪರಿಹಾರ ಘೋಷಿಸಿದ್ದಾರೆ. ಎಸ್ ಡಿಆರ್ ಎಫ್, ಅಗ್ನಿಶಾಮಕ ದಳ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಕಾರ್ಮಿಕರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ‘ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹುಲಿಕಲ್ ಘಾಟಿ ತಿರುವಿನಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿಯ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟ ಸುದ್ದಿ ಕೇಳಿ ದುಃಖವಾಯಿತು.
ಮೈಸೂರು: ಹಣ ವಸೂಲಿ ಮಾಡಲು ಸಿದ್ದರಾಮಯ್ಯನವರು ತಮ್ಮ ಮಗನನ್ನೇ ನೇಮಕ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. ಇಂದು ಕುಮಾರಸ್ವಾಮಿ ಅವರು ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಮಗನ ವಸೂಲಿ ಹೇಗಿದೆ ಎಂಬುದು ಎಲ್ಲಾ ಅಧಿಕಾರಿಗಳಿಗೆ ಗೊತ್ತಿದೆ. ಇನ್ನೂ ಸಿದ್ದರಾಮಯ್ಯನವರಿಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯಿಲ್ಲ. ಇನ್ನೂ ಜನ ಆಪೇಕ್ಷಿಸಿದಂತೆ ನಿಖಿಲ್ ರಾಜಕೀಯಕ್ಕೆ ಬಂದಿದ್ದಾರೆಂದು ಎಂದು ಕೌಂಟರ್ ನೀಡಿದರು.
ಚೆನ್ನೈ (ತಮಿಳುನಾಡು): ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಶುಕ್ರವಾರ ತಮಿಳುನಾಡು ತಲೆಬಾಗುವುದಿಲ್ಲ ಎಂದು ಹೇಳಿದರು. ತಮ್ಮ ಸರ್ಕಾರವು ಘನತೆ ಮತ್ತು ಸ್ವಾಭಿಮಾನಕ್ಕಾಗಿ ನಿಂತಿದೆ ಮತ್ತು ಯಾವುದೇ ರೀತಿಯ ಹೇರುವಿಕೆಗೆ ವಿರುದ್ಧವಾಗಿದೆ, ಆದರೆ ಜನರ ಮೊದಲ, ಕಲ್ಯಾಣ-ಚಾಲಿತ ಮತ್ತು ಎಲ್ಲರನ್ನೂ ಒಳಗೊಳ್ಳುವ ಆಡಳಿತದೊಂದಿಗೆ ಬೆಳವಣಿಗೆಗೆ ಬದ್ಧವಾಗಿದೆ ಎಂದು ಅವರು ಹೇಳಿದರು.
ಆಂಧ್ರಪ್ರದೇಶ: ಗುರುವಾರ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಜಲಪಾತದಲ್ಲಿ ಮೂವರು ಹದಿಹರೆಯದ ಹುಡುಗಿಯರು ಫೋಟೋ ತೆಗೆಯಲು ಹೋಗಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಹುಕುಂಪೇಟೆ ಮಂಡಲದ ಬುರ್ಜ ಪಂಚಾಯಿತಿ ಬಳಿಯ ಮುಳ್ಳುಂಗುಮ್ಮಿ ಜಲಪಾತದಲ್ಲಿ ಈ ಘಟನೆ ನಡೆದಿದೆ. ಜಾಂಬವಲಸ ಗ್ರಾಮದ ಐವರು ಬಾಲಕಿಯರು ಹಬ್ಬದ ರಜೆಯಲ್ಲಿ ಜಲಪಾತಕ್ಕೆ ತೆರಳಿದ್ದರು.ಜಲಪಾತದ ಬಳಿ ಹುಡುಗಿಯರು ಫೋಟೋಗಳು ಮತ್ತು ಸೆಲ್ಫಿ ವೀಡಿಯೊಗಳನ್ನು ತೆಗೆದುಕೊಳ್ಳುತ್ತಿದ್ದರು, ಅವರಲ್ಲಿ ಮೂವರು