Shorts

ಬೆಂಗಳೂರು: ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಕೆ.ಆರ್‌. ನಗರ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ ಶಾಕ್‌ ನೀಡಿದೆ. ಪ್ರಕರಣ ರದ್ದು ಕೋರಿದ್ದ ಎಚ್.ಡಿ.ರೇವಣ್ಣ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸುನಿಲ್‌ ದತ್‌ ಯಾದವ್‌ ಅವರಿದ್ದ ಹೈಕೋರ್ಟ್‌ ಪೀಠ, ಎಚ್.ಡಿ.ರೇವಣ್ಣ ವಿರುದ್ಧ ದೋಷಾರೋಪ ಹೊರಿಸದಂತೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವು ಮಾಡಿದೆ.ರೇವಣ್ಣ ಪರ ವಕೀಲರು ವಾದಮಂಡನೆಗೆ ಕಾಲಾವಕಾಶ ಕೋರಿದ್ದರು. ಹಿರಿಯ ವಕೀಲರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿದ್ದಾರೆಂಬ ಕಾರಣ ನೀಡಿ ಮನವಿ ಮಾಡಿದ್ದರು. ಎಚ್.ಡಿ.ರೇವಣ್ಣ ಪರ ವಕೀಲರ‌ ಮನವಿಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ದೋಷಾರೋಪ ಹೊರಿಸದಂತೆ ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವು ಮಾಡಿದೆ.

ಮುಂಬೈ: ಲಿಫ್ಟ್ ನಲ್ಲಿ ಹೈಡ್ರೋಜನ್ ಬಲೂನ್ ಗೊಂಚಲು ಹಿಡಿದುಕೊಂಡು ವ್ಯಕ್ತಿಯೊಬ್ಬ ಬಂದಿದ್ದು ಇದ್ದಕ್ಕಿದ್ದಂತೆ ಅದು ಸಿಡಿದ ಭೀಕರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮುಂಬೈನ ಜನವಸತಿ ಸಮುಚ್ಚಯವೊಂದರ ಲಿಫ್ಟ್ ನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಹೈಡ್ರೋಜನ್ ಬಲೂನ್ ವ್ಯಾಪಾರಿಯೊಬ್ಬ ದೊಡ್ಡ ಗೊಂಚಲು ಬಲೂನ್ ಹಿಡಿದುಕೊಂಡು ಲಿಫ್ಟ್ ನೊಳಗೆ ಬರುತ್ತಾನೆ. ಈ ವೇಳೆ ಲಿಫ್ಟ್ ನಲ್ಲಿ ಓರ್ವ ಯುವತಿ ಸೇರಿದಂತೆ ಬೇರೆ ಇಬ್ಬರೂ ಇರುತ್ತಾರೆ. ಬಲೂನ್ ಹಿಡಿದುಕೊಂಡು ಲಿಫ್ಟ್ ನೊಳಗೆ ವ್ಯಾಪಾರಿ ಬಂದ ಸೆಕೆಂಡುಗಳಲ್ಲೇ ಅದು ಇದ್ದಕ್ಕಿದ್ದಂತೆ ಸ್ಪೋಟವಾಗಿ ಬೆಂಕಿ ಕಾಣಿಸಿಕೊಳ್ಳುತ್ತದೆ. ತಕ್ಷಣವೇ ಬಲೂನ್ ವ್ಯಾಪಾರಿ, ಯುವತಿ ಸೇರಿದಂತೆ ಲಿಫ್ಟ್ ನಲ್ಲಿದ್ದವರೆಲ್ಲರೂ ಪ್ರಾಣ ಭಯದಿಂದ ಓಡುತ್ತಾರೆ.

ಬೆಂಗಳೂರು: ನಿನ್ನೆ ಸದನದಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇ ಗೌಡ ಅಸಂಸದೀಯ ಪದ ಬಳಸಿ ಬಿಜೆಪಿ ಶಾಸಕರಿಗೆ ಬೈತಿದ್ದರೆ ಇತ್ತ ಸ್ಪೀಕರ್ ಯುಟಿ ಖಾದರ್ ತಮ್ಮ ಸ್ಥಾನದಲ್ಲಿ ಕೂತು ತಮಾಷೆ ಕೇಳಿದವರಂತೆ ನಗುತ್ತಿದ್ದರು. ಇದಕ್ಕೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಸ್ಪೀಕರ್ ಆದವರು ಸದನವನ್ನು ಮುನ್ನಡೆಸುವ ನಾಯಕ. ಅವರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಶಾಸಕರು ಪರಸ್ಪರ ಗಲಾಟೆ ಮಾಡುತ್ತಿದ್ದಾರೆ ಎಂದರೆ ಅವರು ಸದನವನ್ನು ನಿಯಂತ್ರಿಸಬೇಕಾಗುತ್ತದೆ. ಆದರೆ ನಿನ್ನೆ ಬಿಜೆಪಿ ಶಾಸಕರು ಕೊಬ್ಬರಿ ಕಳ್ಳ ಎಂದಿದ್ದಕ್ಕೆ ಸಿಟ್ಟಿಗೆದ್ದ ಶಿವಲಿಂಗೇಗೌಡರು ‘ಥೂ ನಿಮ್ಮ ಜನ್ಮಕ್ಕೆ ಬೆಂಕಿ ಹಾಕ...’ ಎಂದಿದ್ದಲ್ಲದೆ ಬಿಜೆಪಿ ಶಾಸಕರೊಬ್ಬರ ಪತ್ನಿಯ ವಿಚಾರವನ್ನೂ ಎಳೆದು ತಂದು ಬಾಯಿಗೆ ಬಂದಂತೆ ಬೈದಿದ್ದಾರೆ.

ಭಯ, ಶತ್ರುಗಳಿಂದ ತೊಂದರೆ, ಮಾನಸಿಕವಾಗಿ ಸಮಸ್ಯೆಗಳು, ಕೆಲಸದಲ್ಲಿ ಅಡೆತಡೆಗಳಾಗುತ್ತಿದ್ದರೆ ನರಸಿಂಹ ಕವಚ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.ನೃಸಿಂಹಕವಚಂ ವಕ್ಷ್ಯೇ ಪ್ರಹ್ಲಾದೇನೋದಿತಂ ಪುರಾ ।ಸರ್ವರಕ್ಷಾಕರಂ ಪುಣ್ಯಂ ಸರ್ವೋಪದ್ರವನಾಶನಮ್ ॥ 1 ॥ ಸರ್ವಸಂಪತ್ಕರಂ ಚೈವ ಸ್ವರ್ಗಮೋಕ್ಷಪ್ರದಾಯಕಮ್ ।ಧ್ಯಾತ್ವಾ ನೃಸಿಂಹಂ ದೇವೇಶಂ ಹೇಮಸಿಂಹಾಸನಸ್ಥಿತಮ್ ॥ 2 ॥ ವಿವೃತಾಸ್ಯಂ ತ್ರಿನಯನಂ ಶರದಿಂದುಸಮಪ್ರಭಮ್ ।ಲಕ್ಷ್ಮ್ಯಾಲಿಂಗಿತವಾಮಾಂಗಂ ವಿಭೂತಿಭಿರುಪಾಶ್ರಿತಮ್ ॥ 3 ॥ ಚತುರ್ಭುಜಂ ಕೋಮಲಾಂಗಂ ಸ್ವರ್ಣಕುಂಡಲಶೋಭಿತಮ್ ।ಸರೋಜಶೋಭಿತೋರಸ್ಕಂ ರತ್ನಕೇಯೂರಮುದ್ರಿತಮ್ ॥ 4 ॥ [ರತ್ನಕೇಯೂರಶೋಭಿತಂ] ತಪ್ತಕಾಂಚನಸಂಕಾಶಂ ಪೀತನಿರ್ಮಲವಾಸನಮ್ ।ಇಂದ್ರಾದಿಸುರಮೌಳಿಸ್ಥಸ್ಫುರನ್ಮಾಣಿಕ್ಯದೀಪ್ತಿಭಿಃ ॥ 5 ॥

ಪಾಕ್‌ನಲ್ಲಿ ಪ್ರದರ್ಶನಗೊಳ್ಳದ ನಟ ರಣವೀರ್ ಸಿಂಗ್ ಅಭಿನಯದ ಸೂಪರ್ ಹಿಟ್ ಸಿನಿಮಾ ಧುರಂದರ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.ರಣವೀರ್ ಸಿಂಗ್, ಅಕ್ಷಯ್‌ ಖನ್ನಾ, ಸಂಜಯ್ ದತ್‌, ಸಾರಾ ಅರ್ಜುನ್‌ ನಟನೆಯ ಈ ಸಿನಿಮಾ 2025ರ ಡಿಸೆಂಬರ್ 25ರಂದು ಭಾರತ ಸೇರಿ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಆದರೆ ಈ ಸಿನಿಮಾಗೆ ಪಾಕಿಸ್ತಾನ ಸೇರಿದಂತೆ ಗಲ್ಫ್‌ ರಾಷ್ಟ್ರಗಳಲ್ಲಿ ಬಿಡುಗಡೆಗೊಂಡಿರಲಿಲ್ಲ. ಇದೀಗ ಒಟಿಟಿಗೆ ಬಿಡುಗಡೆಯಾದ ಸಿನಿಮಾಗೆ ಭಾರೀ ವೀಕ್ಷಣೆ ಕಂಡಿದೆ. ಜನವರಿ 30ರಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡ ಧುರಂಧರ್‌ ನೋಡಿ ಪಾಕ್‌ ಸಿನಿ ಪ್ರಿಯರು ಮೆಚ್ಚಿಕೊಂಡಿದ್ದಾರೆ.ಈ ಚಿತ್ರವನ್ನು ವೀಕ್ಷಿಸಿದ ಪಾಕ್‌ ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರೆಡ್ಡಿಟ್

ಬೆಂಗಳೂರು: ಸಿದ್ಧಾಪುರದಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಬಂಧಿಯಾಗಿರುವ ಜ್ಯೋತಿಷಿ ಕಮಲಾಕರ್ ಭಟ್‌ನನ್ನು ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಪ್ರೋತ್ಸಾಹಿಸಿ ಬೆಳೆಸಿದ್ದು, ಇದರಲ್ಲಿ ಅವರ ಪಾತ್ರವು ಮುಖ್ಯವಾಗುತ್ತದೆಂಬ ಕೈ ನಾಯಕ ಬಿಕೆ ಹರಿಪ್ರಸಾದ್ ಆರೋಪಕ್ಕೆ ಬಿಜೆಪಿ ಮುಖಂಡ ಎಸ್. ಸುರೇಶ್ ಕುಮಾರ್ ಅವರು, ಫೇಸ್ಬುಕ್ ಪೋಸ್ಟ್ ಮೂಲಕ ತೀಕ್ಷ್ಣ ಪ್ರತಿಕ್ರಿಯಿಸಿದ್ದಾರೆ. ಬಿ.ಕೆ. ಹರಿಪ್ರಸಾದ್ ಅವರೇ, ನಿಮ್ಮ ಫೇಸ್ಬುಕ್ ಬರಹವನ್ನು ಗಮನಿಸಿದೆ. ಕಾರವಾರದ ಸಿದ್ದಾಪುರದಲ್ಲಿ ನಡೆದ ಹೇಯ ಕೃತ್ಯವೊಂದನ್ನು ಮುಂದಿಟ್ಟುಕೊಂಡು, ಅದಕ್ಕೆ ರಾಜಕೀಯ ಬಣ್ಣ ಬಳಿದು, ನನ್ನ ಹೆಸರನ್ನು ತಳುಕು ಹಾಕಲು ನೀವು ನಡೆಸಿರುವ ಪ್ರಯತ್ನ ನಿಮ್ಮ "ಬೌದ್ಧಿಕ ದಿವಾಳಿತನ"ವನ್ನು ಎತ್ತಿ ತೋರಿಸುವಂತಿದೆ ಎಂದು ಕಿಡಿಕಾರಿದ್ದಾರೆ.

ಬಹುತೇಕ ಹೆಚ್ಚಿನ ರೋಗಗಳನ್ನು ವೈದ್ಯರು ಮೂತ್ರ ಪರೀಕ್ಷೆ ಮೂಲಕ ತಿಳಿದುಕೊಳ್ಳುತ್ತಾರೆ. ನಿಮ್ಮ ಮೂತ್ರದ ಬಣ್ಣದಿಂದಲೂ ನಿಮ್ಮ ಆರೋಗ್ಯ ಹೇಗಿದೆ ಎಂದು ತಿಳಿದುಕೊಳ್ಳಬಹುದು ಗೊತ್ತಾ? ಮೂತ್ರದ ಬಣ್ಣದಲ್ಲಿ ಆಗುವ ಬದಲಾವಣೆಗಳು ನಿಮ್ಮ ಆರೋಗ್ಯ ಸರಿಯಾಗಿದೆಯಾ, ಏನಾದರೂ ಸಮಸ್ಯೆಯಾಗಿದೆಯಾ ಎಂದು ಸೂಚಿಸುತ್ತದೆ. ಯಾವ ಬಣ್ಣದಲ್ಲಿ ಮೂತ್ರವಿದ್ದರೆ ಏನು ಅರ್ಥ ಇಲ್ಲಿದೆ ನೋಡಿ ವಿವರ. ಬಣ್ಣದಲ್ಲಿ ವ್ಯತ್ಯಾಸ, ಉರಿ ಇನ್ನಿತರ ಲಕ್ಷಣ ಕಂಡುಬಂದರೆ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ತೆಳು ಹಳದಿ ಬಣ್ಣ: ನಿಮ್ಮ ದೇಹದಲ್ಲಿ ಸಾಕಷ್ಟು ನೀರಿನಂಶವಿದ್ದು ಆರೋಗ್ಯವಾಗಿದ್ದೀರಿ ಎಂದರ್ಥ.ತೆಳು ಕಿತ್ತಳೆ ಬಣ್ಣ: ನಿಮ್ಮ ದೇಹ ಸ್ವಲ್ಪ ಮಟ್ಟಿಗೆ ನಿರ್ಜಲೀಕರಣಕ್ಕೊಳಗಾಗಿದೆ, ಮತ್ತಷ್ಟು ನೀರು ಕುಡಿಯಬೇಕು ಎಂದರ್ಥ.

ಬೆಂಗಳೂರು: ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳು ಅಬಕಾರಿ ವಿಚಾರದಲ್ಲಿ ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂಬುದು ಬಿಜೆಪಿ ಮತ್ತು ಜೆಡಿಎಸ್ ನಿಲುವು. ಅಬಕಾರಿ ಸಚಿವರ ರಾಜೀನಾಮೆ ಪಡೆದು ಆಮೇಲೆ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ.ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರವು ಇವತ್ತು ಅಬಕಾರಿ ಇಲಾಖೆಗೂ ಬಂದು ತಲುಪಿದೆ. ರಾಜ್ಯ ಸರಕಾರವು ಒಂದು ಕಡೆ ತನ್ನ ಗ್ಯಾರಂಟಿಗಳಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ ಅಬಕಾರಿ ಇಲಾಖೆಯಲ್ಲಿ ಟಾರ್ಗೆಟ್ ಹೆಚ್ಚಿಸಿ ಕರ್ನಾಟಕವನ್ನು ಕುಡುಕರ ರಾಜ್ಯವಾಗಿ ಮಾಡುತ್ತಿದೆ. ಮನಸೋಇಚ್ಛೆ ಲಿಕ್ಕರ್ ಲೈಸನ್ಸ್‍ಗಳನ್ನು ನೀಡಲಾಗುತ್ತಿದೆ ಎಂದು ಆಕ್ಷೇಪಿಸಿದರು.