Shorts

ಬೆಂಗಳೂರು: ಕರ್ನಾಟಕ ಪ್ರದೇಶ ಯುತ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ದುರುದ್ದೇಶದಿಂದ ಮಾನ್ಯ ಪ್ರಧಾನಮಂತ್ರಿಗಳ ಭಾವಚಿತ್ರವನ್ನು ಬಳಸಿಕೊಂಡು ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಒಳಸಂಚು ರೂಪಿಸಿ ಸುಳ್ಳು, ಸುದ್ದಿಯ ಪೋಸ್ಟರ್ ಹಾಕಿ ರಾಜಕೀಯ ದಂಗೆಗೆ ಪ್ರಚೋದಿಸುತ್ತಿದ್ದಾರೆಂದು ಬಿಜೆಪಿ ಆಕ್ಷೇಪಿಸಿದೆ. ಈ ಕುರಿತು ಇಂದು ಪೊಲೀಸರಿಗೆ ದೂರು ಕೊಡಲಾಯಿತು. ಇದೇ 8ರಂದು ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀಯವರ ಭಾವಚಿತ್ರವನ್ನು ಬಳಸಿ, ದೇಶದ ಸಂಸತ್ತಿಗೆ ಬರಲು ಧೈರ್ಯವಿಲ್ಲದೆ ಪುಕ್ಕಲ ಪ್ರಧಾನ ದೇಶವನ್ನು ಹೇಗೆ ರಕ್ಷಿಸುತ್ತಾರೆ? ಎಂಬ ಸುಳ್ಳು ಸುದ್ದಿ ಬರಹದ ಬ್ಯಾನರ್ ಅನ್ನು ಕಾನೂನುಬಾಹಿರವಾಗಿ ವಿಧಾನಸೌದದ ಮುಂದೆ ಹಾಕಿದ್ದಾರೆ.

ಸೋಮವಾರ ಶಿವನಿಗೆ ವಿಶೇಷವಾದ ದಿನವಾಗಿದ್ದು, ಶಿವನ ಪೂಜೆ ಮಾಡುವಾಗ ಇಂದು ತಪ್ಪದೇ ಶಿವ ಆರತಿ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.ಸರ್ವೇಶಂ ಪರಮೇಶಂ ಶ್ರೀಪಾರ್ವತೀಶಂ ವಂದೇಽಹಂ ವಿಶ್ವೇಶಂ ಶ್ರೀಪನ್ನಗೇಶಮ್ ।ಶ್ರೀಸಾಂಬಂ ಶಂಭುಂ ಶಿವಂ ತ್ರೈಲೋಕ್ಯಪೂಜ್ಯಂ ವಂದೇಽಹಂ ತ್ರೈನೇತ್ರಂ ಶ್ರೀಕಂಠಮೀಶಮ್ ॥ 1॥ ಭಸ್ಮಾಂಬರಧರಮೀಶಂ ಸುರಪಾರಿಜಾತಂ ಬಿಲ್ವಾರ್ಚಿತಪದಯುಗಲಂ ಸೋಮಂ ಸೋಮೇಶಮ್ ।ಜಗದಾಲಯಪರಿಶೋಭಿತದೇವಂ ಪರಮಾತ್ಮಂ ವಂದೇಽಹಂ ಶಿವಶಂಕರಮೀಶಂ ದೇವೇಶಮ್ ॥ 2॥ ಕೈಲಾಸಪ್ರಿಯವಾಸಂ ಕರುಣಾಕರಮೀಶಂ ಕಾತ್ಯಾಯನೀವಿಲಸಿತಪ್ರಿಯವಾಮಭಾಗಮ್ ।ಪ್ರಣವಾರ್ಚಿತಮಾತ್ಮಾರ್ಚಿತಂ ಸಂಸೇವಿತರೂಪಂ ವಂದೇಽಹಂ ಶಿವಶಂಕರಮೀಶಂ ದೇವೇಶಮ್ ॥ 3॥ ಮನ್ಮಥನಿಜಮದದಹನಂ ದಾಕ್ಷಾಯನೀಶಂ ನಿರ್ಗುಣಗುಣಸಂಭರಿತಂ ಕೈವಲ್ಯಪುರುಷಮ್ ।ಭಕ್ತಾನುಗ್ರಹವಿಗ್ರಹಮಾನಂದಜೈಕಂ ವಂದೇಽಹಂ ಶಿವಶಂಕರಮೀಶಂ ದೇವೇಶಮ್ ॥ 4॥

ಇಂದು ಭಾನುವಾರವಾಗಿದ್ದು ಸೂರ್ಯ ದೇವನನ್ನು ಪ್ರಾರ್ಥಿಸುವುದರಿಂದ ಒಳಿತಾಗಲಿದೆ. ಸೂರ್ಯ ದೇವನ ಅನುಗ್ರಹಕ್ಕಾಗಿ ಇಂದು ಸೂರ್ಯ ಮಂಡಲ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.ನಮೋಽಸ್ತು ಸೂರ್ಯಾಯ ಸಹಸ್ರರಶ್ಮಯೇಸಹಸ್ರಶಾಖಾನ್ವಿತ ಸಂಭವಾತ್ಮನೇ ।ಸಹಸ್ರಯೋಗೋದ್ಭವ ಭಾವಭಾಗಿನೇಸಹಸ್ರಸಂಖ್ಯಾಯುಧಧಾರಿಣೇ ನಮಃ ॥ 1 ॥ ಯನ್ಮಂಡಲಂ ದೀಪ್ತಿಕರಂ ವಿಶಾಲಂರತ್ನಪ್ರಭಂ ತೀವ್ರಮನಾದಿರೂಪಮ್ ।ದಾರಿದ್ರ್ಯದುಃಖಕ್ಷಯಕಾರಣಂ ಚಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 2 ॥ ಯನ್ಮಂಡಲಂ ದೇವಗಣೈಃ ಸುಪೂಜಿತಂವಿಪ್ರೈಃ ಸ್ತುತಂ ಭಾವನಮುಕ್ತಿಕೋವಿದಮ್ ।ತಂ ದೇವದೇವಂ ಪ್ರಣಮಾಮಿ ಸೂರ್ಯಂಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 3 ॥ ಯನ್ಮಂಡಲಂ ಜ್ಞಾನಘನಂತ್ವಗಮ್ಯಂತ್ರೈಲೋಕ್ಯಪೂಜ್ಯಂ ತ್ರಿಗುಣಾತ್ಮರೂಪಮ್ ।ಸಮಸ್ತತೇಜೋಮಯದಿವ್ಯರೂಪಂಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 4 ॥

ವಾಂಖೆಡೆ: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಶುಭಾರಂಭ ಮಾಡಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು 29 ರನ್‌ಗಳಿಂದ ಅಮೆರಿಕಾ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.ಟಾಸ್ ಗೆದ್ದ ಅಮೆರಿಕಾ ತಂಡವು ಫೀಲ್ಡಿಂಗ್‌ ಆಯ್ದಕೊಂಡಿತು. ನಾಯಕ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್‌ ದಾಳಿ ಸಂಘಟಿಸಿದ ಅಮೆರಿಕಾ ಬೌಲರ್‌ಗಳು ಆರಂಭದಲ್ಲೇ ಮೇಲುಗೈ ಸಾಧಿಸಿದರು. 77 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ನಾಯಕ ಸೂರ್ಯಕುಮಾರ್ ಆಸರೆಯಾದರು. ಅವರ ಆಟದ ನೆರವಿನಿಂದ ಭಾರತ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 161 ರನ್‌ ಗಳಿಸಿತು.ಅಭಿಷೇಕ್‌ ಶರ್ಮಾ, ಶಿವಂ ದುಬೆ ಸೊನ್ನೆ ಸುತ್ತಿದರು. ರಿಂಕು ಸಿಂಗ್‌, ಹಾರ್ದಿಕ್‌ ಪಾಂಡ್ಯ ಕೂಡಾ ನಿರಾಸೆ ಮೂಡಿಸಿದರು.

ಬೆಂಗಳೂರು: ಇಂದು ಬೆಳಿಗ್ಗೆಯಿಂದ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆಯ ಹಿನ್ನೆಲೆಯಲ್ಲಿ ಮಹತ್ವದ ಸಭೆ ಆಯೋಜಿಸಲಾಗಿತ್ತು ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವತ್ತೇ ಜಿಬಿಎ ಚುನಾವಣೆ ನಡೆದರೂ ನಾವು ಗೆದ್ದೇ ಗೆಲ್ಲುತ್ತೇವೆ. ಕಾಂಗ್ರೆಸ್ ಪಕ್ಷದ ತಂತ್ರ- ಕುತಂತ್ರದ ನಡುವೆಯೂ 5 ಜಿಬಿಎಯಲ್ಲೂ ಬಿಜೆಪಿ ಜಯಭೇರಿ ಬಾರಿಸಲು ಒಳ್ಳೆಯ ಅವಕಾಶವಿದೆ. ಹಾಗಾಗಿ ಅತಿ ಶೀಘ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನೂ ಆರಂಭಿಸಬೇಕು. ಜೆಡಿಎಸ್ ಜೊತೆ ಚರ್ಚಿಸಿ ಅವರ ಅಭಿಪ್ರಾಯ ಪಡೆದುಕೊಂಡು ಚುನಾವಣೆಗೆ ಸಜ್ಜಾಗಲು ನಿರ್ಧರಿಸಿದ್ದಾಗಿ ವಿವರಿಸಿದರು.

ನವದೆಹಲಿ: ಅಮೆರಿಕ ಜೊತೆ ಉತ್ತಮ ಬಾಂಧವ್ಯ ಹೊಂದಿ ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿದ್ದ ಪಾಕ್‌ಗೆ ಬಿಗ್‌ಶಾಕ್‌ ಎದುರಾಗಿದೆ. ಅಮೆರಿಕಾ ಬಿಡುಗಡೆ ಮಾಡಿದ ನಕ್ಷೆಯನ್ನು ಕಂಡು ಪಾಕಿಸ್ತಾನ ಕಂಗಾಲಾಗಿದೆ.ಭಾರತ-ಅಮೆರಿಕ ನಡುವಣ ದ್ವಿಪಕ್ಷೀಯ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಅಮೆರಿಕಾ ಬಿಡುಗಡೆ ಮಾಡಿರುವ ನಕ್ಷೆ ಪಾಕಿಸ್ತಾನದ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ವಿಶೇಷವಾಗಿಯೂ ಪಾಕ್ ಮೇಲೆ ಭಾರತದ ಆಪರೇಷನ್ ಸಿಂಧೂರ ಮಿಲಿಟರಿ ಕಾರ್ಯಾಚರಣೆಯ ಬಳಿಕ ಅಮೆರಿಕದೊಂದಿಗೆ ಪಾಕಿಸ್ತಾನ ಉತ್ತಮ ಬಾಂಧವ್ಯ ಕಾಪಾಡಿಕೊಂಡಿತ್ತು. ವ್ಯಾಪಾರ ಒಪ್ಪಂದ ಸಂಬಂಧ ಯುನೈಟೆಡ್ ಸ್ಟೇಟ್ಸ್ ಆಫ್ ಟ್ರೇಡ್ ರೆಪ್ರೆಸೆಂಟೇಟಿವ್ ಬಿಡುಗಡೆ ಮಾಡಿರುವ ಭಾರತದ ಭೂಪಟದಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಬಿಂಬಿಸಿದೆ.