ಮೈಸೂರು : ಶನಿವಾರ ರಾತ್ರಿ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದ ಬಹುಭಾಷಾ ಗಾಯಕಿ ಗಾನಕೋಗಿಲೆ ಎಸ್ ಜಾನಕಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಮೈಸೂರು ನೆಲದಲ್ಲಿಯೇ ತಾನೂ ಮಣ್ಣಗಾಬೇಕೆಂಬ ಎಸ್ ಜಾನಕಿ ಆಸೆಯಂತೆಯೇ ಎಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿ ಫಾರಂ ಹೌಸ್ನಲ್ಲಿ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲಾಯಿತು.ಮೊಮ್ಮಗಳು ಅಪ್ಸರಾ ಅಜ್ಜಿಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಶ್ರೀರಂಗಪಟ್ಟಣದ ರಮೇಶ್ ಶರ್ಮಾ ಹಾಗೂ ಶಾಶ್ವತಿ ಕ್ರಿಯಾ
ಲಾಡ್ಸ್ನಲ್ಲಿ ನಡೆಯುತ್ತಿರುವ ಕ್ರಿಕೆಟ್ ಟೆಸ್ಟ್ನ ಎರಡನೇ ಇನ್ನಿಂಗ್ಸ್ಬಲ್ಲಿ ಯಸ್ತಿಕಾ ಭಾಟಿಯಾ 151 ಎಸೆತದಲ್ಲಿ 110 ರನ್ ದಾಖಲಿಸಿದ, ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಇಂಗ್ಲೆಂಡ್ ಮತ್ತು ಭಾರತ ನಡುವಿನ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಮೂರನೇ ದಿನದಂದು ಯಸ್ತಿಕಾ ಭಾಟಿಯಾ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.ಯಸ್ತಿಕಾ 12 ಬೌಂಡರಿಗಳನ್ನು ಒಳಗೊಂಡ ಇನ್ನಿಂಗ್ಸ್ನಲ್ಲಿ 145 ಎಸೆತಗಳಲ್ಲಿ ಮೂರು ಅಂಕಿಗಳನ್ನು ತಲುಪಿದರು. ಇದು ಅವರ ಅತ್ಯಧಿಕ ಟೆಸ್ಟ್ ಸ್ಕೋರ್ ಮತ್ತು ದೀರ್ಘ ಸ್ವರೂಪದಲ್ಲಿ ಮೊದಲ ಶತಕ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ ಮಂದಿರ ದೇಣಿಗೆ ವಿವಾದಲ್ಲಿ ಭಾಗಿಯಾಗಿದ್ದವರಿಗೆ ರಕ್ಷಣೆ ನೀಡಿದ್ದಾರೆಂದು ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಜನರು ಕಠಿಣ ಕ್ರಮವನ್ನು ನಿರೀಕ್ಷಿಸಿದ್ದರು ಆದರೆ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಗಳನ್ನು ಮಾಡಿದ್ದಾರೆ ಎಂದರು. ರೋಹಿಣಿಯ ಜಪಾನೀಸ್ ಪಾರ್ಕ್ನಲ್ಲಿ ಎಎಪಿಯ ರಾಷ್ಟ್ರವ್ಯಾಪಿ ಸಹಿ ಅಭಿಯಾನದ ಉದ್ಘಾಟನೆಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಮೋದಿ ಅವರು ರಾಮಮಂದಿರದ ದೇಣಿಗೆ ಕಳ್ಳತನದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ
ಮಂಗಳೂರು: ಉಳ್ಳಾಲ ಸಮೀಪದ ಮಾಡೂರು ಶಾಲೆಯಲ್ಲಿ ಭಾನುವಾರ 'ವಿಶೇಷ ತೀವ್ರ ಪರಿಷ್ಕರಣೆ' (SIR) ಸಮೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಹುಡುಕುತ್ತಿದ್ದಾಗ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಮೃತರನ್ನು ಕೋಲ್ಯ ನಿವಾಸಿ ಹರೀಶ್ ಗಟ್ಟಿ ಎಂದು ಗುರುತಿಸಲಾಗಿದೆ.ವರದಿಗಳ ಪ್ರಕಾರ, ಎಸ್ಐಆರ್ (SIR) ಸಮೀಕ್ಷೆಗೆ ಅಗತ್ಯವಿರುವ ದಾಖಲೆಗಳನ್ನು ಪರಿಶೀಲಿಸಲು ಮತ್ತು ಪತ್ತೆಹಚ್ಚಲು ಗಟ್ಟಿ ಅವರು ಮಾಡೂರು ಶಾಲೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಅಲ್ಲಿ ಉಪಸ್ಥಿತರಿದ್ದವರು ತಕ್ಷಣವೇ ಅವರ ನೆರವಿಗೆ ಧಾವಿಸಿ ಸಹಾಯ ಮಾಡಲು ಪ್ರಯತ್ನಿಸಿದರಾದರೂ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಬೆಳ್ತಂಗಡಿ: 2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದೆ. ಸುಮಾರು ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ವ್ಯಕ್ತಿಗಳನ್ನು ಸಂಸ್ಥೆಯು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದೆ.ಬಂಧಿತ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪಯ್ಯಗುಡ್ಡೆ ನಿವಾಸಿ ನೌಶಾದ್ (32) ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆ ನಿವಾಸಿ ಅಬ್ದುಲ್ ನಾಸಿರ್ (41) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಕೇರಳ ಮತ್ತು ತಮಿಳುನಾಡಿನಲ್ಲಿ ಎನ್ಐಎ ಅಧಿಕಾರಿಗಳು ಇವರನ್ನು ಬಂಧಿಸಿದ್ದು, ನಂತರ ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆತರಲಾಗಿದೆ.
ಭಾರತದ ಮೊದಲ ಬುಲೆಟ್ ರೈಲು ಸೇವೆಯು ಆಗಸ್ಟ್ 15, 2027 ರಿಂದ ಹಂತ ಹಂತವಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಸೂರತ್-ಬಿಲಿಮೋರಾ ಮಾರ್ಗವು ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್ನ ಮೊದಲ ಕಾರ್ಯಾಚರಣಾ ವಿಭಾಗವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದರು.ಹಂತ ಹಂತದ ಕಾರ್ಯಾಚರಣಾ ಯೋಜನೆಯು 508-ಕಿಮೀ ಹೈ-ಸ್ಪೀಡ್ ರೈಲು ಕಾರಿಡಾರ್ನ ಪೂರ್ಣಗೊಂಡ ವಿಭಾಗಗಳನ್ನು ಸಂಪೂರ್ಣ ಮುಂಬೈ-ಅಹಮದಾಬಾದ್ ಮಾರ್ಗವು ಪೂರ್ಣಗೊಳ್ಳುವವರೆಗೆ ಕಾಯುವ ಬದಲು ಕ್ರಮೇಣವಾಗಿ ಪ್ರಯಾಣಿಕರಿಗೆ ತೆರೆಯಲು ಅನುವು ಮಾಡಿಕೊಡುತ್ತದೆ. ಉಳಿದ ವಿಭಾಗಗಳಲ್ಲಿ ನಿರ್ಮಾಣ ಕಾರ್ಯ ಮುಂದುವರೆದಾಗ ಹೈ-ಸ್ಪೀಡ್ ರೈಲಿನ ಪ್ರಯೋಜನಗಳನ್ನು ಪ್ರಯಾಣಿಕರಿಗೆ ಬೇಗನೆ ತರುವ ಗುರಿಯನ್ನು ಈ ವಿಧಾನವು ಹೊಂದಿದೆ.
ಬೆಂಗಳೂರು: ರಾಜ್ಯದಲ್ಲಿ 2026ರ ಮುಂಗಾರು ವೈಪರೀತ್ಯದಿಂದಾಗಿ ಒಂದೆಡೆ ಭಾರೀ ಪ್ರವಾಹವಾಗಿ ಹಾನಿಯಾಗಿದ್ದರೆ, ಮತ್ತೊಂದು ಕಡೆ ಶೇ.40ರಿಂದ 43ರಷ್ಟು ಮಳೆ ಕೊರತೆಯಿಂದ ಬರಗಾಲ ಉಂಟಾಗಿದೆ. ಈ ಹಿನ್ನೆಲೆ ನಾಳೆಯಿಂದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ಸಂಬಂದ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ನೆಲವನ್ನೇ ನಂಬಿರುವ ಅನ್ನದಾತ ಕಣ್ಣೀರು ಸುರಿಸುತ್ತಿರುವುದು ನಮ್ಮ ಹೃದಯವನ್ನು ಕಲಕಿದೆ. ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಜನತಾದಳ (ಜಾತ್ಯತೀತ) ಪಕ್ಷದಿಂದ ವಿಶೇಷ ಅಧ್ಯಯನ ತಂಡಗಳನ್ನು ರಚಿಸಲಾಗಿದೆ ಎಂದಿದ್ದಾರೆ.
ಬೆಂಗಳೂರು: ಬಸ್ನಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬನಿಗೆ ಬಸ್ ನಲ್ಲೇ ಧರ್ಮದೇಟು ನೀಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.ಬೆಂಗಳೂರಿನ ಹೊರವಲಯದಲ್ಲಿ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಯುವತಿಗೆ ಸಹ ಪ್ರಯಾಣಿಕನೊಬ್ಬ ಲೈಂಗಿಕ ಕಿರುಕುಳ ನೀಡಿ ಸಿಕ್ಕಿಬಿದ್ದಿದ್ದಾನೆ. ನೆಲಮಂಗಲ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ನಲ್ಲಿ ಈ ಘಟನೆ ನಡೆದಿದೆ.ಇನ್ನೂ ಈ ಘಟನೆಯನ್ನು ಕಣ್ಣಾರೆ ಕಂಡಿದ್ದೇನೆ ಎಂದು ಹೇಳಘಟನೆಯನ್ನು ಕಣ್ಣಾರೆ ಕಂಡಿದ್ದೇನೆ ಎಂದು ಹೇಳಿಕೊಂಡಿರುವ
ಮೈಸೂರು: ಸೂರ್ಯ, ಚಂದ್ರ ಇರೋವರೆಗೂ ಜಾನಕಿ ಅಮ್ಮ ಶಾಶ್ವತ. ಅವರು ಹಾಡುಗಳ ಮೂಲಕ ಎಲ್ಲರಿಗೂ ಪ್ರೀತಿ ಕೊಟ್ಟಿದ್ದಾರೆ ಎಂದು ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಹೇಳಿ ಭಾವುಕರಾದರು. ವಿಜಯಪ್ರಕಾಶ್ ಅವರು ಸ್ವರ ಸಾಮ್ರಾಜ್ಞೆ ಎಸ್. ಜಾನಕಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಮೈಸೂರು ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಿದ ಅವರು ಅಂತಿಮ ನಮನ ಸಲ್ಲಿಸಿದರು.ಜಾನಕಿ ಅಮ್ಮನವರು ಹೊಸಬರಿಗೆ ಮಾರ್ಗದರ್ಶನ ಕೊಡೋಕೆ ಅವರು ಯಾವಾಗಲೂ ಸಿದ್ಧವಾಗಿದ್ರು. ನಾನು ಒಬ್ಬ ಗಾಯಕನಾಗಿ ಹೇಳ್ತಿದ್ದೀನಿ ಇದು ಎಲ್ಲರಿಗೂ ತುಂಬಲಾರದ ನಷ್ಟ. ಭಗವಂತ ಅವರ ಕುಟುಂಬಕ್ಕೆ ನೋವನ್ನ ಭರಿಸುವ ಶಕ್ತಿ ಕೊಡಲಿ ಎಂದರು.
ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಶನಿವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಮೈಸೂರಿನ ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿರುವ ಅವರ ಪೂರ್ವಜರ ತೋಟದ ಮನೆಯಲ್ಲಿ ನಡೆಯಲಿದೆ.ಎಸ್ ಜಾನಕಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಎಸ್. ಜಾನಕಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂತಾಪ
ಭಾರತೀಯ ವಿವಾಹ, ಅದರಲ್ಲೂ ಕೇರಳದ ವಧು ತನ್ನ ಉಡುಗೆ ಹಾಗೂ ಬೆರಗುಗೊಳಿಸುವ ಚಿನ್ನದ ಆಭರಣಗಳಿಂದನೇ ಕೇಂದ್ರಿಕೃತವಾಗಿರುತ್ತಾಳೆ. ಆದರೆ ಇಲ್ಲೊಬ್ಬಳು ವಧು ಚಿನ್ನ, ಬೆಳ್ಳಿ ಅಥವಾ ವಜ್ರದ ಆಭರಣಗಳನ್ನು ಧರಿಸದೆ ಸಹಜ ಸೌಂದರ್ಯದಿಂದ ತಮ್ಮ ದೀರ್ಘಕಾಲದ ಪದ್ಧತಿಯನ್ನು ಸವಾಲು ಮಾಡಲು ಆಯ್ಕೆ ಮಾಡಿಕೊಂಡರು. ಕೇರಳ ಮೂಲದ ಹರ್ಷ ಪಾತು ಅವರು ನಜೀಮ್ ಮೊಹಮ್ಮದ್ ಅವರನ್ನು ಮದುವೆಯಾದರು. ಇವರ ಮದುವೆ ಲುಕ್ ಇದೀಗ ದೇಶವನ್ನೇ ಮೆಚ್ಚಿಸಿದೆ. ನಜೀಮ್ ಅವರು ಯಾವುದೇ ಚಿನ್ನಾಭರಣವಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಫೋಟೋ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದು ಊಹಾಪೋಹಾಕ್ಕೆ ಕಾರಣವಾಗಿದೆ. ಚಿತ್ರದಲ್ಲಿ ಭಾರತದ ಮಾಜಿ ಟಿ-20 ನಾಯಕ "ಕ್ಯಾಪ್ಟನ್" ಮತ್ತು "ಲೀಡರ್" ಎಂಬ ಪದಗಳನ್ನು ಹೊಂದಿರುವ ಕಪ್ಪು ಟಿ-ಶರ್ಟ್ ಧರಿಸಿ ತಮ್ಮ ಮಗುವನ್ನು ಹಿಡಿದಿರುವುದು ಕಂಡುಬಂದಿದೆ. ಆದಾಗ್ಯೂ, ಎದ್ದು ಕಾಣುವ ವಿಷಯವೆಂದರೆ, "ಕ್ಯಾಪ್ಟನ್" ಎಂಬ ಪದವು ಸ್ಟ್ರೈಕ್ಥ್ರೂನೊಂದಿಗೆ ಕಾಣಿಸಿಕೊಂಡಿದ್ದು, "ಲೀಡರ್" ಪ್ರಮುಖ ಸಂದೇಶವಾಗಿದೆ. ಸೂಕ್ಷ್ಮ ವಿವರವು ಅಭಿಮಾನಿಗಳಲ್ಲಿ ಶೀಘ್ರವಾಗಿ ಚರ್ಚೆಯ ವಿಷಯವಾಯಿತು, ಇದು ಭಾರತೀಯ
ಕಾನ್ಸಾಸ್ ಸಿಟಿ: ಲಯೊನೆಲ್ ಮೆಸ್ಸಿ ನಾಯಕತ್ವದ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವತ್ತ ದಾಪುಗಾಲಿಟ್ಟಿದೆ.ಇಲ್ಲಿ ಇಂದು ಬೆಳಿಗ್ಗೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು ಹೆಚ್ಚುವರಿ ಸಮಯದಲ್ಲಿ ಸ್ವಿಟ್ಜರ್ಲೆಂಡ್ ತಂಡವನ್ನು 3-1 ಗೋಲುಗಳಿಂದ ಮಣಿಸಿ ವಿಶ್ವಕಪ್ ಸೆಮಿಫೈನಲ್ ತಲುಪಿದೆ. ಗೆಲುವಿನ ಬೆನ್ನಲ್ಲೇ ಅರ್ಜೆಂಟೀನಾ ತಂಡದ ಆಟಗಾರರು ಕುಣಿದು ಕುಪ್ಪಳಿಸಿದ್ದಾರೆ.ಪಂದ್ಯದ 10ನೇ ನಿಮಿಷದಲ್ಲಿ ಅರ್ಜೆಂಟೀನಾ ಪರ ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ ಅವರು ಗೋಲು ಗಳಿಸುವ ಆರಂಭಿಕ ಮುನ್ನಡೆ ಒದಗಿಸಿದರು. ಪಂದ್ಯದ 67ನೇ ನಿಮಿಷದಲ್ಲಿ ಸ್ವಿಟ್ಜರ್ಲೆಂಡ್ ತಂಡದ ಡ್ಯಾನ್ ಎನ್ಡೋಯ್ ಗೋಲು ದಾಖಲಿಸಿ, ಸಮಬಲ ಸಾಧಿಸಲು ನೆರವಾದರು.
ಮುಂಬೈ: ಇಂಗ್ಲೆಂಡ್ ವಿರುದ್ಧವೂ ಒಂದೇ ಪಂದ್ಯ ಗೆಲ್ಲದೇ ಟಿ20 ಸರಣಿ ಸೋತ ಬಳಿಕ ಟೀಂ ಇಂಡಿಯಾ ಕೋಚ್ ಗೌತಮ್ ಗಂಭಿರ್ ವಿರುದ್ಧ ಫ್ಯಾನ್ಸ್ ಸ್ವಲ್ಪನಾದ್ರೂ ನಾಚಿಕೆ ಇದ್ರೆ ಎಂಬ ಅವರ ಹಳೆಯ ಹೇಳಿಕೆಯನ್ನೇ ತಿರುಗಿಸಿ ಟಾಂಗ್ ಕೊಟ್ಟಿದ್ದಾರೆ. ಈ ಹಿಂದೆ ರವಿಶಾಸ್ತ್ರಿ ಕೋಚ್ ಆಗಿದ್ದಾಗ ಸಂದರ್ಶನವೊಂದರಲ್ಲಿ ಗೌತಮ್ ಗಂಬೀರ್ ಅವರನ್ನು ಟೀಕಿಸಿದ್ದರು. ಸ್ವಲ್ಪನಾದ್ರೂ ನಾಚಿಕೆ ಇದ್ರೆ ರವಿಶಾಸ್ತ್ರಿ ಇಂತಹ ಹೇಳಿಕೆಗಳನ್ನು ನೀಡಬಾರದು. ಅವರ ಕಾಲದಲ್ಲಿ ಏನೂ ಸಾಧನೆ ಮಾಡಿಲ್ಲ. ಹೀಗಾಗಿಯೇ ಈಗ ಕೋಚ್ ಆಗಿ ಟೀಂ ಇಂಡಿಯಾದಲ್ಲಿ ಸ್ವಲ್ಪ ಸಾಧನೆ ಮಾಡಿದ್ದಕ್ಕೇ ಅವರಿಗೆ ಅದೇ ದೊಡ್ಡದು ಎನಿಸುತ್ತದೆ ಎಂದಿದ್ದರು.
ಮೈಸೂರು: ಗಾನಕೋಗಿಲೆ ಎಸ್ ಜಾನಕಿಯವರು ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಖಾಯಿಲೆ ಎಂದಾದರೂ ಅವರು ಇತ್ತೀಚೆಗೆ ಕುಗ್ಗಿ ಹೋಗಲು ಇದೇ ಕಾರಣವಾಯ್ತಾ ಎನ್ನಲಾಗುತ್ತಿದೆ. ಎಸ್ ಜಾನಕಿಯವರು ಕೇವಲ ತಮ್ಮ ಕುಟುಂಬದವರಿಗೆ ಮಾತ್ರವಲ್ಲ, ಅವರನ್ನು ಯಾರೇ ಮಾತನಾಡಿಸಿದರೂ ಅವರಲ್ಲೊಬ್ಬ ಅಮ್ಮನನ್ನು ಕಾಣಬಹುದಾಗಿತ್ತು. ಅಂಥಾ ಮಾತೃಹೃದಯಿ ಆಕೆ. ವೈಯಕ್ತಿಕ ಜೀವನದಲ್ಲೂ ಪತಿ ಜೊತೆಗೆ ಸುಂದರ ಜೀವನ ನಡೆಸಿದವರು. ಅವರ ಒಬ್ಬನೇ ಒಬ್ಬ ಮಗ ಮುರಳಿ ಕೃಷ್ಣ. ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದವರು. ಮಗನ ಮೇಲೆ ಅವರಿಗೆ ಅಪಾರ ಪ್ರೀತಿಯಿತ್ತು. ಆದರೆ ಅನಾರೋಗ್ಯದಿಂದಾಗಿ ಅವರು ಇತ್ತೀಚೆಗೆ ನಿಧನರಾಗಿದ್ದರು.
ಶನಿವಾರ ರಾತ್ರಿ ಕರ್ನಾಟಕದ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಮುಖಕ್ಕೆ ಮಾಸ್ಕ್ ಧರಿಸಿ, ತಮ್ಮ ಗುರುತು ಸಿಗದಂತೆ ಸಾಮಾನ್ಯ ಪ್ರಯಾಣಿಕರಂತೆ ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಗೆ ಬಿಎಂಟಿಸಿ ಬಸ್ ಹತ್ತಿ ರಹಸ್ಯ ಪರಿಶೀಲನೆ ನಡೆಸುತ್ತಿದ್ದರು.ಸಚಿವರು ಕೇವಲ ಅಧಿಕಾರಿಗಳ ವರದಿಗಳನ್ನು ನೆಚ್ಚಿಕೊಳ್ಳದೆ, ರಸ್ತೆಯ ವಾಸ್ತವ ಸ್ಥಿತಿಯನ್ನು ಅರಿಯಲು ಹೀಗೆ ಮಾಸ್ಕ್ ಧರಿಸಿ ಬಸ್ ಹಾಗೂ ಆಟೋಗಳಲ್ಲಿ ಪ್ರಯಾಣಿಸಿದ್ದು ಶ್ಲಾಘನೀಯ. ಸಚಿವರು ಎರಡು ಟಿಕೆಟ್ಗಳನ್ನು ಕೇಳಿ 100 ರೂಪಾಯಿಯ ನೋಟು ನೀಡಿದ್ದಾರೆ. ಚಿಲ್ಲರೆ ನೀಡಲು ಸಾಧ್ಯವಾಗದ ನಿರ್ವಾಹಕ, "ನನ್ನ ಬಳಿಯೂ ಚಿಲ್ಲರೆ ಇಲ್ಲ, ನಿನ್ನ ಬಳಿಯೂ ಸರಿ ಹೊಂದುವ ಚಿಲ್ಲರೆ ಇಲ್ಲದಿದ್ದರೆ ಬಸ್ನಿಂದ ಕೆಳಗಿಳಿ" ಎಂದು ಸಚಿವರಿಗೇ ಹೇಳಿದ್ದಾರೆ.
ಬೆಂಗಳೂರಿನ ಮಹಿಳೆಯೊಬ್ಬರ ಫ್ಲಾಟ್ಗೆ ಫ್ಲಿಪ್ಕಾರ್ಟ್ ವಿತರಣಾ ಏಜೆಂಟ್ ಒಬ್ಬ ಬಲವಂತವಾಗಿ ನುಗ್ಗಿ, ತಾನು ಶೌಚಾಲಯ ಬಳಸಿಕೊಂಡು ನಂತರ ತನ್ನ ಖಾಸಗಿ ಭಾಗವನ್ನು ಆಕೆ ಮುಂದೆ ಪ್ರದರ್ಶಿಸಿ ಅನುಚಿತವಾಗಿ ವರ್ತಿಸಿದ ಘಟನೆ ವರದಿಯಾಗಿದೆ.ಶೌಚಾಲಯವನ್ನು ಬಳಸಲು ಮಹಿಳೆ ನಿರಾಕರಿಸಿದರೂ ಆತ ಬಲವಂತವಾಗಿ ನುಗ್ಗಿದ್ದಾನೆ. ನಿಲೋಫರ್ ಫಾತಿಮಾ ಎಂದು ಗುರುತಿಸಲಾದ ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದ ಪ್ರಕಾರ, ವಿತರಣಾ ಏಜೆಂಟ್ ಪಾರ್ಸೆಲ್ ತಲುಪಿಸಲು ಅವರ ಮನೆಗೆ ಬಂದರು, ಮತ್ತು ನಂತರ ಅವರು ತಮ್ಮ ಶೌಚಾಲಯ
ಬೆಂಗಳೂರು: ಕರ್ನಾಟಕದಲ್ಲಿ ಇಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ರಾಜ್ಯದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೂ ಕಳೆದ ಕೆಲ ದಿನಗಳಿಂದ ರಾಜ್ಯದ ಕರಾವಳಿ ಭಾಗವಾದ ಉಡುಪಿ, ದಕ್ಷಿಣ ಕನ್ನಡದಲ್ಲಿ ನಿರಂತರ ಮಳೆಯಾಗಿತ್ತು. ಈ ಹಿನ್ನೆಲೆ ಅಲ್ಲಿನ ಶಾಲಾ ಮಕ್ಕಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು. ಇದೀಗ ಇಂದಿನ ಹವಾಮಾನ ಮುನ್ಸೂಚನೆ ಪ್ರಕಾರ, ಬೆಂಗಳೂರು ಸೇರಿದಂತೆ ಹಲವೆಡೆ ಗರಿಷ್ಠ ತಾಪಮಾನವು ಸುಮಾರು 30°
ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ವಿ ಡಿ ಸತೀಶನ್ ಶನಿವಾರ ಹಿರಿಯ ಹಿನ್ನೆಲೆ ಗಾಯಕಿ ಎಸ್ ಜಾನಕಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ದಕ್ಷಿಣ ಭಾರತದ ಚಲನಚಿತ್ರ ಸಂಗೀತದ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು ಎಂದು ಬಣ್ಣಿಸಿದ್ದಾರೆ, ಅವರ ಕಾಲಾತೀತ ಹಾಡುಗಳು ತಲೆಮಾರುಗಳಾದ್ಯಂತ ಪ್ರತಿಧ್ವನಿಸುತ್ತಲೇ ಇರುತ್ತವೆ.ಸಂತಾಪ ಸಂದೇಶದಲ್ಲಿ, ಜಾನಕಿಯವರ ಧ್ವನಿಯು ಪ್ರತಿಯೊಂದು ಮಾನವ ಭಾವನೆಗಳನ್ನು - ಭಕ್ತಿ, ಪ್ರೀತಿ, ಸಂತೋಷ ಮತ್ತು ದುಃಖವನ್ನು - ಸಾಟಿಯಿಲ್ಲದ ಆಳ ಮತ್ತು ಅನುಗ್ರಹದಿಂದ ವ್ಯಕ್ತಪಡಿಸುವ ಅಪರೂಪದ ಸಾಮರ್ಥ್ಯವನ್ನು ಹೊಂದಿದೆ ಎಂದು ಬಣ್ಣಿಸಿದರು.
ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ಗೆ ಹೊಸ ಸಂಕಷ್ಟ ಶುರುವಾಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಲೋಕಾಯುಕ್ತ ಕ್ರಮಕ್ಕೆ ಮುಂದಾಗಿದೆ. ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸುವ ಸಂಬಂಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಲೋಕಾಯುಕ್ತ ಪೊಲೀಸರು ಮನವಿ ಮಾಡಿದ್ದಾರೆ.ಈ ಸಂಬಂಧ ಲೋಕಭವನಕ್ಕೆ ಸಾವಿರಾರು ಪುಟಗಳ ದಾಖಲೆ ಸಹಿತ ಲೋಕಾಯುಕ್ತ ಪೊಲೀಸರು ಕೋರಿಕೆ ಸಲ್ಲಿಸಿದ್ದಾರೆ. ಇನ್ನೂ
ಬೆಂಗಳೂರು: ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆಸ್ವರ ಸಾಮ್ರಾಜ್ಞಿ ಎಸ್ ಜಾನಕಿಯವರ ಅಂತ್ಯಕ್ರಿಯೆಯನ್ನು ನಡೆಸಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇನ್ನೂ ಎಸ್ ಜಾನಕಿ ನಿಧನದ ಬಳಿಕ ಅವರ ಕುಟುಂಬದವರನ್ನು ಸಂಪರ್ಕಿಸಿ ಸಾಂತ್ವನವನ್ನು ಹೇಳಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಫೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಸರ್ಕಾರಿ ಗೌರವಗಳೊಂದಿಗೆ 'ಗಾನ ಕೋಗಿಲೆ' ಅಂತ್ಯಸಂಸ್ಕಾರ
ಟೆಹ್ರಾನ್: ಈ ವರ್ಷದ ಆರಂಭದಲ್ಲಿ ಅಮೆರಿಕ-ಇಸ್ರೇಲಿ ದಾಳಿಯಲ್ಲಿ ಹತ್ಯೆಗೀಡಾದ ತಮ್ಮ ತಂದೆ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ಶನಿವಾರ ಪ್ರತಿಜ್ಞೆ ಮಾಡಿದ್ದಾರೆ. ಇದು ರಾಷ್ಟ್ರದ ಜವಾಬ್ದಾರಿ ಎಂದು ಬಣ್ಣಿಸಿದ್ದಾರೆ. ದಿವಂಗತ ನಾಯಕನ ಅಂತ್ಯಕ್ರಿಯೆಯಲ್ಲಿ ಭಾರಿ ಜನಸ್ತೋಮ "ಐತಿಹಾಸಿಕ" ಮತ್ತು "ಶತ್ರು ವಿನಾಶ" ಎಂದು ಅವರು ಶ್ಲಾಘಿಸಿದರು. ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಮತ್ತು ಸಮಾಧಿ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಸಂದೇಶದಲ್ಲಿ, ಮೊಜ್ತಬಾ
ಲಂಡನ್: ಕ್ರಾಂತಿ ಗೌಡ್ ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ಭಾರತ ತಂಡವು ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪ್ರಾಬಲ್ಯ ಸಾಧಿಸಿದೆ.ಮೊದಲು ಬ್ಯಾಟಿಂಗ್ ಮಾಡುದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 285 ರನ್ ಗಳಿಸಿದರೆ, ಇಂಗ್ಲೆಂಡ್ ಕೇವಲ 170 ರನ್ಗಳಿಗೆ ಆಲೌಟ್ ಆಯಿತು. ಕ್ರಾಂತಿ ಗೌಡ್ ಅವರ 5 ವಿಕೆಟ್ಗಳ ಅದ್ಭುತ ಪ್ರದರ್ಶನದಿಂದ ಭಾರತ 115 ರನ್ಗಳ ಬೃಹತ್ ಮುನ್ನಡೆ ಗಳಿಸಿದೆ. ಭಾರತ ಹಾಗೂ ಇಂಗ್ಲೆಂಡ್ ವನಿತಾ ತಂಡಗಳ ನಡುವೆ ಮೊಟ್ಟ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು
ಮೈಸೂರು: ಬಹುಭಾಷಾ ಗಾಯಕಿ ಎಸ್ ಜಾನಕಿ ನಮ್ಮನ್ನಗಲಿದ್ದಾರೆ. ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಕನ್ನಡದ ಮಣ್ಣಿನಲ್ಲೇ ಆಗಬೇಕು ಎಂಬ ಉದ್ದೇಶಕ್ಕೆ ಶಾಸಕ ಸಾ ರಾ ಮಹೇಶ್ ಮಹತ್ವದ ಘೋಷಣೆ ಮಾಡಿದ್ದಾರೆ. ಎಸ್ ಜಾನಕಿ ಅಮ್ಮ ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲಿಯೇ ಕಳೆದಿದ್ದಾರೆ. ಕನ್ನಡ ನಾಡಿನ ಮೇಲೆ ಅವರಿಗೆ ವಿಶೇಷವಾದ ಪ್ರೀತಿಯಿತ್ತು. ಅತೀ ಹೆಚ್ಚು ಹಾಡಿದ್ದೂ ಕನ್ನಡ ಭಾಷೆಗಾಗಿಯೇ. ಇದೀಗ ಇದೇ ಕನ್ನಡ ನಾಡಿನಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಮೂಲತಃ ಅವರು ಆಂಧ್ರಪ್ರದೇಶದವರು. ಆದರೆ ಅವರು ಕನ್ನಡ ನಾಡಿನಲ್ಲೇ ಮಣ್ಣಾಗಲಿ ಎಂಬುದು ಕನ್ನಡಿಗರ ಬಯಕೆಯೂ ಹೌದು.
ಮೈಸೂರು: ಖ್ಯಾತ ಗಾಯಕಿ, ಗಾನಕೋಗಿಲೆ ಎಸ್ ಜಾನಕಿ ಅಮ್ಮ ಇಂದು ದೈವಧೀನರಾಗಿದ್ದಾರೆ. ಎಸ್ ಜಾನಕಿಯವರ ಪತಿ ಯಾರು, ಅವರ ವಿವಾಹವಾಗಿದ್ದು ಹೇಗೆ ಇಲ್ಲಿದೆ ವಿವರ. 88 ವರ್ಷ ವಯಸ್ಸಿನ ಗಾಯಕಿ ಎಸ್ ಜಾನಕಿ ಇಂದು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 48 ಕ್ಕೂ ಹೆಚ್ಚು ಸಾವಿರ ಹಾಡುಗಳನ್ನು ಹಾಡಿದ ಖ್ಯಾತಿಯ ಜಾನಕಿ ಅಮ್ಮ ತಮ್ಮ ಕೊನೆಯ ದಿನಗಳನ್ನು ಕನ್ನಡ ನಾಡಿನಲ್ಲೇ ಕಳೆದಿದ್ದಾರೆ. ಪ್ರೇಮ ಜೀವನ ಮತ್ತು ವಿವಾಹಆರಂಭಿಕ ಪರಿಚಯ ಹಾಗೂ ಮದುವೆ: ಜಾನಕಿಯಮ್ಮನವರು ಚಿತ್ರರಂಗದಲ್ಲಿ ಗಾಯಕಿಯಾಗಿ ಬೆಳೆಯುತ್ತಿದ್ದ ಆರಂಭಿಕ ದಿನಗಳಲ್ಲೇ ವಿ. ರಾಮಪ್ರಸಾದ್ ಅವರ ಪರಿಚಯವಾಯಿತು. ಪರಸ್ಪರ ಇಷ್ಟಪಟ್ಟ ಈ ಜೋಡಿ 1959 ರಲ್ಲಿ ವಿವಾಹವಾದರು.
ಮೈಸೂರು: ಖ್ಯಾತ ಗಾಯಕಿ ಎಸ್ ಜಾನಕಿ ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಬಹುಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಜನರ ಮನಸ್ಸು ಗೆದ್ದಿದ್ದ ಪ್ರಬುದ್ಧ ಗಾಯಕಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಲು ಮುಂದಾದಾಗ ಅವರು ತಿರಸ್ಕರಿಸಿದ್ದರು. ಯಾಕೆ ಗೊತ್ತೇ? ದಕ್ಷಿಣ ಭಾರತದ ಎಲ್ಲಾ ಭಾಷೆ ಸೇರಿದಂತೆ 20 ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡು ಹಾಡಿದ ಗಾನ ಕೋಗಿಲೆ ಜಾನಕಿ ಅಮ್ಮ. ತಲೆಮಾರುಗಳವರೆಗೆ ಅವರ ಹಾಡುಗಳು ನೆನಪಿನಲ್ಲಿಳಿಯುವಂತದ್ದು. ಅವರ ವ್ಯಕ್ತಿತ್ವವೂ ಹಾಡಿನಷ್ಟೇ ಮೃದು. ಯುವ ತಲೆಮಾರಿನ ಹಾಡುಗಾರರು ಅವರಲ್ಲಿ ಅಮ್ಮನನ್ನು ಕಾಣುತ್ತಿದ್ದರು.
ಬೆಂಗಳೂರು: ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ದಶಕಗಳ ಕಾಲ ಹಾಡಿ ರಂಜಿಸಿ ಗಾನಕೋಗಿಲೆ ಎಸ್ ಜಾನಕಿ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಎಸ್ ಜಾನಕಿ ಇಂದು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ತೀರಾ ಅನಾರೋಗ್ಯಕ್ಕೀಡಾಗಿದ್ದರು ಎನ್ನಲಾಗಿದೆ. ಸುಮಾರು 20 ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ ಖ್ಯಾತಿ ಅವರದ್ದು. ಕೆಲವೇ ತಿಂಗಳುಗಳ ಹಿಂದೆ ಅವರ ಪುತ್ರ ಮುರಳಿ ಕೃಷ್ಣ ನಿಧನರಾಗಿದ್ದರು.
ಸೌತಾಂಪ್ಟನ್ನ ದಿ ರೋಸ್ ಬೌಲ್ನಲ್ಲಿ ಶನಿವಾರ ನಡೆದ ಐದನೇ ಮತ್ತು ಅಂತಿಮ ಟಿ20ಐ ಪಂದ್ಯದಲ್ಲಿ ಹ್ಯಾರಿ ಬ್ರೂಕ್ ನಾಯಕತ್ವದ ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡರು.5ನೇ ಭಾರತ vs ಇಂಗ್ಲೆಂಡ್ T20I ಪಂದ್ಯದ ಟಾಸ್ ಸಂಜೆ 6:30 ಕ್ಕೆ ನಡೆಯಬೇಕಿತ್ತು. ಆದಾಗ್ಯೂ, ಇಂಗ್ಲಿಷ್ ನಗರದಲ್ಲಿ ಪ್ರಕಾಶಮಾನವಾದ ಮತ್ತು ಬಿಸಿಲಿನ ದಿನವಿದ್ದರೂ, ವಿಚಿತ್ರ ಕಾರಣದಿಂದ ಟಾಸ್ ವಿಳಂಬವಾಯಿತು. ಇಂಗ್ಲೆಂಡ್ ತಂಡವು ಸಮಯಕ್ಕೆ ಸರಿಯಾಗಿ ಮೈದಾನಕ್ಕೆ ಆಗಮಿಸಿದಾಗ, ಭಾರತೀಯ ತಂಡವು ಸಂಚಾರದಲ್ಲಿ
ಫು ಕ್ವಾಕ್: ವಿಯೆಟ್ನಾಂನ ಫು ಕ್ವಾಕ್ ದ್ವೀಪದ ಬಳಿ ಶನಿವಾರ 36 ಜನರನ್ನು ಹೊತ್ತೊಯ್ಯುತ್ತಿದ್ದ ಸ್ಪೀಡ್ಬೋಟ್ ಮಗುಚಿಬಿದ್ದ ಪರಿಣಾಮ ಭಾರತೀಯ ಪ್ರವಾಸಿಗರು ಸೇರಿದಂತೆ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಎಂದು ವಿಯೆಟ್ನಾಂ ಪತ್ರಿಕೆ VN ಎಕ್ಸ್ಪ್ರೆಸ್ ವರದಿ ಮಾಡಿದೆ. ಫು ಕ್ವಾಕ್ ವಿಶೇಷ ಆರ್ಥಿಕ ವಲಯದ ಅಧಿಕಾರಿಗಳನ್ನು ಉಲ್ಲೇಖಿಸಿ VN ಎಕ್ಸ್ಪ್ರೆಸ್ ಪ್ರಕಾರ, ಓಷನ್ ಪಿಯರ್ ಐಲ್ಯಾಂಡ್ ಕಂಪನಿಯಿಂದ ನಿರ್ವಹಿಸಲ್ಪಡುವ ಸ್ಪೀಡ್ಬೋಟ್, ಹಾನ್ ಮೇ ರುಟ್ ಐಲೆಟ್ನಿಂದ ಫು ಕ್ವಾಕ್ ವಿಮಾನ ನಿಲ್ದಾಣದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಆನ್ ಥೋಯ್ ಬಂದರಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿತ್ತು, ಮಧ್ಯಾಹ್ನ (ಸ್ಥಳೀಯ ಸಮಯ) ಅದು ಉರುಳಿದಾಗ, ಹಡಗಿನಲ್ಲಿದ್ದ ಎಲ್ಲರನ್ನೂ ಸಮುದ್ರಕ್ಕೆ ಎಸೆದಿದೆ.
ಬೆಂಗಳೂರು: ಚುನಾವಣಾ ಆಯೋಗದವರು ಎಸ್ಐಆರ್ ಪ್ರಕ್ರಿಯೆಯಲ್ಲಿ 1ದಾಖಲೆಗಳನ್ನು ಕೇಳಲಾಗುತ್ತದೆ. ಅದರಲ್ಲಿ ʼನೀವು ಸ್ವಂತ ಮನೆಯಲ್ಲಿ ಇದ್ದೀರಾ?ʼ ಪ್ರಶ್ನೆಯೂ ಇದೆ. ಆದ್ದರಿಂದ ನಾವು ಖಾಯಂ ನಿವಾಸ ಪ್ರಮಾಣಪತ್ರವನ್ನು ನೀಡಲು ಕ್ರಮ ವಹಿಸುವುದಾಗಿ ಡಿಸಿಎಂ ಡಾ. ಜಿ.ಪರಮೇಶ್ವರ್ ಮಾಹಿತಿ ಹಂಚಿಕೊಂಡರು. ಇಂದು ಸದಾಶಿವನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಇದುವರೆಗೆ ಜಾತಿ ಪ್ರಮಾಣಪತ್ರವನ್ನು ಕೂಡ ರಾಜ್ಯ ಸರ್ಕಾರವೇ ನೀಡಿದೆ. ನಾವು ಆಧಾರ್ ಕಾರ್ಡ್ ಮತ್ತು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಖಾಯಂ ನಿವಾಸ ಪ್ರಮಾಣಪತ್ರ ನೀಡುತ್ತೇವೆ. ಅದರಲ್ಲಿ ತಪ್ಪೇನಿದೆ? ಎಲ್ಲದರಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಅಸಮಾಧಾನ ಹೊರಹಾಕಿದರು.
ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಮುಂಬೈನ ಬಾಂದ್ರಾ ವೆಸ್ಟ್ನಲ್ಲಿರುವ ತಮ್ಮ ವಸತಿ ಆಸ್ತಿಯನ್ನು ₹3.50 ಕೋಟಿ ಗೆ ಮಾರಾಟ ಮಾಡಿದ್ದಾರೆ. CRE ಮ್ಯಾಟ್ರಿಕ್ಸ್ ಪ್ರವೇಶಿಸಿದ ಆಸ್ತಿ ನೋಂದಣಿ ದಾಖಲೆಗಳು ಜುಲೈ 9, 2026 ರಂದು ಒಪ್ಪಂದವನ್ನು ಅಧಿಕೃತವಾಗಿ ನೋಂದಾಯಿಸಲಾಗಿದೆ ಎಂದು ದೃಢಪಡಿಸಿದ ನಂತರ ಇತ್ತೀಚಿನ ರಿಯಲ್ ಎಸ್ಟೇಟ್ ವಹಿವಾಟು ಗಮನ ಸೆಳೆದಿದೆ. ಈ ಅಪಾರ್ಟ್ಮೆಂಟ್ ಬಾಂದ್ರಾ ವೆಸ್ಟ್ನಲ್ಲಿರುವ ವಸತಿ ಕಟ್ಟಡವಾದ ಶಿವ-ಆಸ್ಥಾನ್ ಹೈಟ್ಸ್ನಲ್ಲಿದೆ. ಸಲ್ಮಾನ್ 2015 ರಲ್ಲಿ ₹2.88 ಕೋಟಿ ಆಸ್ತಿಯನ್ನು ಖರೀದಿ ಮಾಡಿದ್ದಾರೆ. ಇತ್ತೀಚಿನ ವಹಿವಾಟು ಅದರ ಮೂಲ ಸ್ವಾಧೀನ ಬೆಲೆಗಿಂತ ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ.
ಫಿರೋಜಾಬಾದ್ ಜಿಲ್ಲಾ ನ್ಯಾಯಾಲಯವು ಈ ಭೀಕರ ಅಪರಾಧಕ್ಕೆ ಕೇವಲ 41 ದಿನಗಳಲ್ಲಿ ಮರಣದಂಡನೆ (ಗಲ್ಲಿಗೇರಿಸುವ) ಶಿಕ್ಷೆ ವಿಧಿಸಿರುವುದು ಶೀಘ್ರ ನ್ಯಾಯದಾನಕ್ಕೆ ಸೂಕ್ತ ನಿದರ್ಶನವಾಗಿದೆ. ಅಮಾಯಕ ಮಗುವಿನ ಮೇಲಿನ ಈ ಕ್ರೂರ ಕೃತ್ಯಕ್ಕೆ ಹಾಗೂ ಸಂತ್ರಸ್ತೆ ತಾಯಿಯ ಮೇಲಿನ ದೌರ್ಜನ್ಯಕ್ಕೆ ನ್ಯಾಯಾಲಯವು ಕಾನೂನಿನ ಅಡಿಯಲ್ಲಿ ನೀಡಬಹುದಾದ ಗರಿಷ್ಠ ಮತ್ತು ಕಠಿಣ ಶಿಕ್ಷೆಯನ್ನೇ ವಿಧಿಸಿದೆ. ದಂಡಸಂಹಿತೆ ಮತ್ತು ಸಮಾಜದ ಭದ್ರತೆಯ ಹಿತದೃಷ್ಟಿಯಿಂದ ಇಂತಹ ಅಪರಾಧಿಗಳಿಗೆ ವಿಳಂಬವಿಲ್ಲದೆ ತೀವ್ರ ಶಿಕ್ಷೆಯಾಗುವುದು ಸಮಾಜದಲ್ಲಿ ಅಪರಾಧಗಳನ್ನು ತಡೆಯಲು ಹಾಗೂ ಸಾರ್ವಜನಿಕರಿಗೆ ಕಾನೂನಿನ ಮೇಲೆ ನಂಬಿಕೆ ಹೆಚ್ಚಿಸಲು ಅತ್ಯಗತ್ಯ.
ಆರು ತಲೆಮಾರುಗಳು, 83 ಸದಸ್ಯರು: ಆಂಧ್ರಪ್ರದೇಶದ ನಾಗಪ್ಪ ಕುಟುಂಬವು ಅವಿಭಕ್ತ ಕುಟುಂಬದ ಪರಂಪರೆಯನ್ನು ಜೀವಂತವಾಗಿರಿಸಿದೆ. ತಲೆಮಾರುಗಳಿಂದ ಅವಿಭಕ್ತ ಕುಟುಂಬವಾಗಿ ಇವರು ಒಟ್ಟಿಗೆ ವಾಸಿಸುತ್ತಿದ್ದಾರೆ. ನಾಲ್ಕು ಪಕ್ಕದ ಮನೆಗಳಲ್ಲಿ ಹರಡಿಕೊಂಡಿದ್ದರೂ, ಕುಟುಂಬವು ಒಂದೇ ಮನೆಯಾಗಿ ಕಾರ್ಯನಿರ್ವಹಿಸುತ್ತದೆ - ಊಟ, ಆದಾಯ ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತ ಕೂಡು ಕುಟುಂಬಗಳಿಂದ ಬಾಳುತ್ತಿದ್ದಾರೆ. ಆದರೆ ಸಂಖ್ಯೆಗಳೊಂದಿಗೆ ಸವಾಲುಗಳು ಬರುತ್ತವೆ - ವಿಭಿನ್ನ ಅಭಿಪ್ರಾಯಗಳು, ತಲೆಮಾರುಗಳು ಮತ್ತು ದೃಷ್ಟಿಕೋನಗಳು.
ಮೈಸೂರು: ಮೈಸೂರು ದಸರಾದಲ್ಲಿ ಕಂಬಳ ನಡೆಸುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರು ದಸರಾದ ಪಾವಿತ್ರ್ಯತೆ, ವೈಶಿಷ್ಟ್ಯವನ್ನು ಉಳಿಸಿಕೊಂಡು ಹೋಗಬೇಕು. ದಸರಾ ವೈಭವದ ಪಾವಿತ್ರ್ಯತೆ ಹಾಳು ಮಾಡದಿರಿ ಎಂದು ಮನವಿ ಮಾಡಿದರು. ಮೈಸೂರಿನ ದಸರಾ ಅದರದೇ ಆದ ವೈಶಿಷ್ಟ್ಯತೆ ಮತ್ತು ಪರಂಪರೆಯನ್ನು ಹೊಂದಿದೆ. ಯಾವುದೇ ಸರಕಾರ ಬಂದರೂ ಆ ಪರಂಪರೆ ಮತ್ತು ವೈಶಿಷ್ಟ್ಯವನ್ನು ಉಳಿಸಿಕೊಂಡು ಹೋಗಬೇಕಾಗುತ್ತದೆ ಎಂದು ನುಡಿದರು. ಈಗಾಗಲೇ ಸಂಸದರಾದ ಯದುವೀರ ಒಡೆಯರ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು: ವ್ಯಕ್ತಿಯೊಬ್ಬ ತಾಯಿ ಅಜ್ಜಿ, ಮಾವವನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಪಾಳ್ಯದಲ್ಲಿ ಶನಿವಾರ ಬೆಳಿಗ್ಗೆ ವರದಿಯಾಗಿದೆ. ತಾಯಿ ಮಂಗಳಮ್ಮ, ಅಜ್ಜಿ ನಂಜಮ್ಮ ಮತ್ತು ಮಾವ ಸತೀಶ ಅವರನ್ನು ಪ್ರಶಾಂತ್ ಎಂಬಾತ ಕೊಲೆ ಮಾಡಿದ್ದಾನೆ. ಇನ್ನೂ ಅವರನ್ನು ಕೊಂದ ಬಳಿಕ ಆತನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಮಂಗಳಮ್ಮ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ನಂಜಮ್ಮ ಪೌರಕಾರ್ಮಿಕರಾಗಿದ್ದರು. ಸತೀಶ್ ಪ್ಲಂಬರ್ ಕೆಲಸ
ಆಂಧ್ರಪ್ರದೇಶ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಮಧ್ಯೆ ಭಾರತದ ಕಡಲ ಪಡೆಗಳ ಕಾರ್ಯತಂತ್ರದ ವಿಕಸನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಎತ್ತಿ ತೋರಿಸಿದರು ಮತ್ತು ಭಾರತೀಯ ನೌಕಾಪಡೆಯು ದೇಶದ ಆರ್ಥಿಕ ಸ್ಥಿರತೆಯ ದೃಢವಾದ ರಕ್ಷಕನಾಗಿ ಯಶಸ್ವಿಯಾಗಿ ಹೊರಹೊಮ್ಮಿದೆ, "ಆಪರೇಷನ್ ಉರ್ಜಾ ಸುರಕ್ಷಾ" ಮೂಲಕ ₹ 9,000 ಕೋಟಿಗೂ ಹೆಚ್ಚು ಮೌಲ್ಯದ ಅಗತ್ಯ ಸರಕುಗಳನ್ನು ಸುರಕ್ಷಿತವಾಗಿ ರಕ್ಷಿಸುತ್ತಿದೆ ಎಂದು ಹೇಳಿದ್ದಾರೆ.ವಿಶಾಖಪಟ್ಟಣಂನ ನೌಕಾ ಡಾಕ್ಯಾರ್ಡ್ನಲ್ಲಿ ಸ್ಟೆಲ್ತ್ ಫ್ರಿಗೇಟ್ ಐಎನ್ಎಸ್ ಮಹೇಂದ್ರಗಿರಿಯ ಅಧಿಕೃತ ಕಾರ್ಯಾರಂಭ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಮೈಸೂರು: ಡಿ.ಕೆ.ಶಿವಕುಮಾರ್ ಅವರು ಮುಖವಾಡದ ಸಿಎಂ ಆಗಿದ್ದಾರೆ. ಊರಿಗೆಲ್ಲ, ರಾಜ್ಯಕ್ಕೆಲ್ಲ ನಾಮ ಹಾಕುತ್ತಾರೆ. ಅವರಿಗೆ ಬಾಂಗ್ಲಾದೇಶವರು ಓಟ್ ಬ್ಯಾಂಕ್ ಆಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವ್ಯಂಗ್ಯವಾಡಿದರು.ಮೈಸೂರಿನ ಜಿ.ಕೆ.ಗ್ರೌಂಡ್ಸ್ ನಲ್ಲಿ ಮೈಸೂರಿನ ಕಾಯಕ ಸಮುದಾಯಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ನ ನೂತನ ಸದಸ್ಯ ರಘು ಆರ್ ಕೌಟಲ್ಯ ಅವರ ಅಭಿನಂದನೆ ಹಾಗೂ ಭಾರತೀಯ ಜನತಾ ಪಾರ್ಟಿಗೆ ಕೃತಜ್ಞತಾ ಸಮಾವೇಶದಲ್ಲಿ ಅವರು ಮಾತನಾಡಿದರು. ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಮತ್ತು ಪಕ್ಷದ ಪ್ರಮುಖರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ಮಳೆಯಾಗುತ್ತಿದ್ದ ಹಾಗೇ ಮೆಟ್ರೋ ಸ್ಟೇಶನ್ಗೆ 50ಕೊಡೆಗಳನ್ನು ಹಿಡಿದುಕೊಂಡು ಬರುವ ವ್ಯಕ್ತಿಯೊಬ್ಬ ದಿನಕ್ಕೆ ಇಂಜಿನಿಯರ್ಗಳಿಗಿಂತಲೂ ಹೆಚ್ಚು ದುಡ್ಡು ಗಳಿಸುತ್ತಾನೆ. ವ್ಯಾಪಾರಿಯೊಬ್ಬ ತನ್ನ ಚಾಣಕ್ಷ್ಯತನದಿಂದ 50 ಕೊಡೆಗನ್ನು ₹100ರಂತೆ ಖರೀದಿ ಮಾಡುತ್ತಾನೆ. ಮಳೆ ಬರುವ ಮುನ್ಸೂಚನೆಯಿದ್ದರೆ ಮೆಟ್ರೋ ನಿಲ್ದಾಣಕ್ಕೆ ಕೊಡೆ ಸಮೇತ ಬರುವ ಈ ವ್ಯಾಪಾರಿ, ಒಂದು ಕೊಡೆಯನ್ನು ₹200ರಂತೆ ಮಾರಾಟ ಮಾಡುತ್ತಾನೆ. ಈ ಮೂಲಕ ದಿನಕ್ಕೆ ₹5000ಸಾವಿರ ಲಾಭ ಪಡೆಯುತ್ತಾನೆ. ಅವರು ಪ್ರತಿ ಕೊಡೆಯನ್ನು ₹200 ಕ್ಕೆ ಮಾರಾಟ ಮಾಡಿದನು ಮತ್ತು ಕೇವಲ ಒಂದು ಗಂಟೆಯ ಅವಧಿಯಲ್ಲಿ ಎಲ್ಲಾ 50
ಕೇರಳ: ಆಟವಾಡುತ್ತಿದ್ದಾಗ ಬಿದ್ದು ಆದ ತುಟಿಯ ಗಾಯಕ್ಕೆ ಹೊಲಿಗೆ ಹಾಕಲು ಅರಿವಳಿಗೆ ನೀಡಿದ ಬೆನ್ನಲ್ಲೇ 18ತಿಂಗಳ ಮಗು ಸಾವನ್ನಪ್ಪಿದ ಧಾರುಣ ಘಟನೆ ವರದಿಯಾಗಿದೆ. ಈ ಘಟನೆ ಕೇರಳವನ್ನೇ ಬೆಚ್ಚಿಬೀಳಿಸಿದೆ. ಕಣ್ಣೂರಿನ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ನಿಧನರಾದ ದೇವಾಂಶ್ ಶೌರಿಯಾ, ಎರಾಮಮ್-ಕುತ್ತೂರು ಗ್ರಾಮ ಪಂಚಾಯತ್ನ ಮಠಮಂಗಲಂನ ಟಿ ಸೂರಜ್ ಮತ್ತು ವಿಜಿಷಾ ದಂಪತಿಯ ಏಕೈಕ ಮಗು. ಅವರ ವಿವಾಹದವಾದ 8ತಿಂಗಳ ಬಳಿಕ ದೇವಾಂಶ್ ಶೌರಿಯಾ ಜನಿಸಿದ್ದ. ಜುಲೈ 5 ರಂದು ಅವರ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಬಿದ್ದ ನಂತರ ದೇವಾಂಶ್ ಅವರ ತುಟಿಗೆ ಗಾಯವಾಯಿತು.
ಬಾಲೇಶ್ವರ್ (ಒಡಿಶಾ):ಬಾಲಿವುಡ್ ಅಥವಾ ಹಾಲಿವುಡ್ ಆಕ್ಷನ್ ಸಿನಿಮಾಗಳಲ್ಲಿ ಕಾಣ ಸಿಗುವಂತಹ ಭೀಕರ ದರೋಡೆಯೊಂದು ಒಡಿಶಾದ ಬಾಲೇಶ್ವರ್ ಜಿಲ್ಲೆಯ ತುಡಿಗಾಡಿಯಾ ಬಜಾರ್ ಪ್ರದೇಶದಲ್ಲಿ ನಡೆದಿದೆ. ರಾತ್ರೋರಾತ್ರಿ ಕಪ್ಪು ಬಣ್ಣದ ಮಹೀಂದ್ರಾ ಥಾರ್ ವಾಹನದಲ್ಲಿ ಬಂದ ದರೋಡೆಕೋರರ ಗುಂಪೊಂದು, ಇಡೀ ಎಟಿಎಂ ಯಂತ್ರಕ್ಕೆ ಹಗ್ಗ ಕಟ್ಟಿ, ವಾಹನದ ಮೂಲಕ ಎಳೆದು ಉರುಳಿಸಿ, ರಸ್ತೆಯಲ್ಲೇ ಎಳೆದೊಯ್ದು ನಗದು ದೋಚಿರುವ ಆಘಾತಕಾರಿ ಘಟನೆ ನಡೆದಿದೆ. ಈ ಇಡೀ ಸಿನೆಮಾ ಮಾದರಿಯ ಮೆಗಾ-ಹೈಸ್ಟ್ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರು: ಸಂಜೆ ವೇಳೆ ಸ್ಕೂಲ್ ಬಸ್ನಿಂದ ಇಳಿದು ರಸ್ತೆ ದಾಟುತ್ತಿದ್ದ ಬಾಲಕಿಗೆ ಸ್ಕೂಟರ್ ಡಿಕ್ಕಿ ಹೊಡೆದು ಗಂಭೀರ ಗಾಯವಾಗಿರುವ ಘಟನೆ ವರದಿಯಾಗಿದೆ. ಇನ್ನೂ ಇದರ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಆಂಧ್ರಪ್ರದೇಶದಲ್ಲಿ ವರದಿಯಾಗಿದೆ ಎಂದು ತಿಳಿದುಬಂದಿದೆ. ಸ್ಕೂಲ್ ಮುಗಿಸಿಕೊಂಡು ಶಾಲಾ ಬಸ್ನಿಂದ ಇಳಿದ ಬಾಲಕಿ ರೋಡ್ ಕ್ರಾಸ್ ಮಾಡಿ ತನ್ನ ಮನೆಗೆ ಹೋಗುತ್ತಿರುತ್ತಾಳೆ. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಸ್ಕೂಟರ್ ಬಾಲಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕಿ ನೆಲಕ್ಕೆ ಹಾರಿ ಕುಸಿದುಬಿದ್ದಿದ್ದಾಳೆ.
ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರಿಗೆ ತನ್ನ ಗುಪ್ತಾಂಗ ತೋರಿಸಿ, ವಿಕೃತಿ ಮೆರೆದ ಬಸ್ ಕಂಡಕ್ಟರ್ನನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾಮುಕ ಕಂಡಕ್ಟರ್ ಇರ್ಫಾನ್ (32) ಎಂದು ಗುರುತಿಸಲಾಗಿದೆ. ಈತ ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯ ಕಲ್ಲೇರಿ ನಿವಾಸಿಯಾಗಿದ್ದು, ಪ್ರಸ್ತುತ ಉಪ್ಪಿನಂಗಡಿಯ ಕರ್ವೇಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾನೆ. ಈತ ಮಂಗಳೂರು ಮತ್ತು ವಿಟ್ಲ ನಡುವೆ ಸಂಚರಿಸುವ ಖಾಸಗಿ ಬಸ್ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ.
ತಿರುಪತಿ (ಆಂಧ್ರಪ್ರದೇಶ): ವಿಶ್ವಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳುವ ಅಲಿಪಿರಿ ಕಾಲ್ನಡಿಗೆ ಮಾರ್ಗದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಮೆಟ್ಟಿಲು ಹತ್ತಿ ಸಾಗುತ್ತಿದ್ದ ಸಾವಿರಾರು ಭಕ್ತರಲ್ಲಿ ತೀವ್ರ ಆತಂಕ ಮತ್ತು ಭೀತಿಯ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರದಂದು ನಡೆದಿರುವ ಈ ಘಟನೆಯಿಂದಾಗಿ ಕಾಲ್ನಡಿಗೆಯ ಮೂಲಕ ಬೆಟ್ಟ ಹತ್ತುವ ಯಾತ್ರಿಕರ ಸುರಕ್ಷತೆಯ ಕುರಿತು ಮತ್ತೆ ಆತಂಕ ವ್ಯಕ್ತವಾಗಿದೆ. ಘಟನೆಯ ವಿವರ:ವರದಿಗಳ ಪ್ರಕಾರ, ಅಲಿಪಿರಿ ಮಾರ್ಗದ ಪ್ರಮುಖ ಕೇಂದ್ರವಾದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ಸಮೀಪ ಚಿರತೆ ಕಾಣಿಸಿಕೊಂಡಿದೆ.
ನವದೆಹಲಿ: ದೇಶದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರವು ಭಾರಿ ಸಿಹಿ ಸುದ್ದಿ ನೀಡಿದೆ. ಸಾರ್ವಜನಿಕರ ಆರೋಗ್ಯ ವೆಚ್ಚದ ಹೊೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ರಕ್ತದೊತ್ತಡ , ಹೃದಯಸಂಬಂಧಿ ತೊಂದರೆಗಳು , ಸಕ್ಕರೆ ಕಾಯಿಲೆ ಮತ್ತು ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೆ ಬಳಸುವ ಒಟ್ಟು 39 ಪ್ರಮುಖ ಅತ್ಯಗತ್ಯ ಔಷಧಿಗಳ ಗರಿಷ್ಠ ಮಾರಾಟ ಬೆಲೆಯನ್ನು ಕೇಂದ್ರ ಸರ್ಕಾರವು ಗಮನಾರ್ಹವಾಗಿ ಇಳಿಕೆ ಮಾಡಿದೆ.ರಾಷ್ಟ್ರೀಯ ಗಿಡಮೂಲಿಕೆ ಮತ್ತು ಔಷಧೀಯ ದರ ನಿಯಂತ್ರಣ ಪ್ರಾಧಿಕಾರ (NPPA) ಈ ಕುರಿತು ಅಧಿಕೃತ ಸೂಚನೆ ಹೊರಡಿಸಿದ್ದು, ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ಕೆಲವು ದಿನಗಳಿಂದ ಚಿನ್ನದ ದರ ಇಳಿಕೆಯಾಗುತ್ತಲೇ ಇತ್ತು. ಆದರೆ ಇಂದು ಮತ್ತೆ ಚಿನ್ನದ ದರದಲ್ಲಿ ವ್ಯತ್ಯಾಸ ಕಂಡುಬಂದಿದೆ. ಪರಿಶುದ್ಧ ಚಿನ್ನದ ದರಲ್ಲಿ ನಿನ್ನೆ ಕೊಂಚ ಏರಿಕೆಯಾಗಿತ್ತು. ಇಂದು ಚಿನ್ನದ ದರ ಮತ್ತೆ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಭಾರತದಲ್ಲೂ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ. ಇಂದು ಪರಿಶುದ್ಧ ಚಿನ್ನದ ದರ ಇಳಿಕೆಯಾಗಿದ್ದು 1,47,875 ರೂ.ಗಳಾಗಿವೆ.
ಬೆಳಗಾವಿ: ಆರ್ ಎಸ್ಎಸ್ ವಿರುದ್ಧ ಗೃಹಸಚಿವ ಪ್ರಿಯಾಂಕ್ ಖರ್ಗೆ ಸದಾ ಕೆಂಡ ಕಾರುತ್ತಿರುತ್ತಾರೆ. ಆದರೆ ಇತ್ತ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ ಸಭೆಗೆ ನಮ್ಮ ವಿರೋಧವಿಲ್ಲ ಎಂದಿದ್ದಾರೆ. ಪ್ರತಿನಿತ್ಯ ಆರ್ ಎಸ್ಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ಬಾಣಗಳನ್ನು ಬಿಡುತ್ತಿರುತ್ತಾರೆ. ನಾವು ಇರೋವರೆಗೂ ಆರ್ ಎಸ್ಎಸ್ ಪಥಸಂಚಲನ ಮಾಡಬೇಕಾದರೆ ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಈಗಾಗಲೇ ಖಡಕ್ ಸಂದೇಶ ನೀಡಿದ್ದಾರೆ. ಇದರ ನಡುವೆಯೇ ಬೆಳಗಾವಿಯಲ್ಲಿ ಆರ್ ಎಸ್ಎಸ್ ರಾಷ್ಟ್ರೀಯ ಪ್ರಾಂತ ಪ್ರಚಾರಕರ ಸಭೆ ನಡೆಸಲು ತೀರ್ಮಾನಿಸಿದೆ. ಮೂರು ದಿನಗಳ ಕಾಲ ಸಮಾವೇಶ ನಡೆಯಲಿದೆ.
ಮೈಸೂರು: ಈ ಬಾರಿ ದಸರಾದಲ್ಲಿ ಕಂಬಳ ಆಯೋಜಿಸುವ ಬಗ್ಗೆ ಸರ್ಕಾರ ತೀರ್ಮಾನ ಮಾಡಿರುವುದಕ್ಕೆ ರಾಜವಂಶಸ್ಥ, ಮೈಸೂರು ಸಂಸದ ಯದುವೀರ್ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ. ಮೈಸೂರು ದಸರಾದಲ್ಲಿ ಈ ಬಾರಿ ವಿಶೇಷ ಆಕರ್ಷಣೆಯಾಗಿ ಕರಾವಳಿ ಭಾಗದ ಗ್ರಾಮೀಣ ಕ್ರೀಡೆ ಕಂಬಳ ಆಯೋಜಿಸುವುದಕ್ಕೆ ಸಿಎಂ ಡಿಕೆ ಶಿವಕುಮಾರ್ ಅನುಮತಿ ನೀಡಿದ್ದರು. ಇದಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಗೆ ಜವಾಬ್ಧಾರಿ ವಹಿಸಿದ್ದರು. ಆದರೆ ಕರಾವಳಿ ಭಾಗದ ಕ್ರೀಡೆಯನ್ನು ಮೈಸೂರು ದಸರಾದಲ್ಲಿ ಅಳವಡಿಸುತ್ತಿರುವುದಕ್ಕೆ ಯದುವೀರ್ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ. ಮೈಸೂರು ದಸರಾ ಸಂದರ್ಭದಲ್ಲಿಯೇ ಕಂಬಳ ಯಾಕೆ?
ಮುಂಬೈ: ಮುಂಬೈನ ಉಪನಗರ ಸಾಲಿನಲ್ಲಿರುವ ನಾಲಸೋಪಾರ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಸಾರ್ವಜನಿಕರ ಆರೋಗ್ಯದ ಜೊತೆ ಚಲ್ಲಾಟವಾಡುವಂತಹ ತೀವ್ರ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ರಸ್ತೆಬದಿಯ ಚಹಾ ವ್ಯಾಪಾರಿಯೊಬ್ಬ ಮಳೆಯಿಂದಾಗಿ ರಸ್ತೆಯಲ್ಲಿ ತುಂಬಿಕೊಂಡಿದ್ದ ಕೊಳಚೆ ಹಾಗೂ ಚರಂಡಿ ನೀರಿನ ಗುಂಡಿಯಲ್ಲೇ ತನ್ನ ಚಹಾದ ಪಾತ್ರೆಗಳನ್ನು ತೊಳೆಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಸಂಚರಿಸುವ ರೈಲ್ವೆ ನಿಲ್ದಾಣದ ಬಳಿಯೇ ಇಂತಹ ಅಸಹ್ಯಕರ ಮತ್ತು ಅಶುಚಿತ್ವದ ಕೃತ್ಯ ನಡೆದಿದ್ದು, ಸಾರ್ವಜನಿಕರ ಆರೋಗ್ಯ ಭದ್ರತೆಯ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ.
ಲಕ್ನೋ: ಅಜ್ಜನ ಪ್ರೀತಿಗೆ ಯಾವುದೇ ಮಿತಿಗಳಿಲ್ಲ ಎಂಬ ಮಾತನ್ನು ನಿಜವಾಗಿಸುತ್ತಾ, ವಿದ್ಯುತ್ ಆಘಾತಕ್ಕೆ ಸಿಲುಕಿದ್ದ ತನ್ನ ಹೆತ್ತ ಮೊಮ್ಮಗನನ್ನು ರಕ್ಷಿಸಲು ಹೋಗಿ ಅಜ್ಜನೊಬ್ಬ ತನ್ನ ಪ್ರಾಣವನ್ನೇ ತ್ಯಾಗ ಮಾಡಿರುವ ಕರುಳು ಹಿಂಡುವ ಜಾಗತಿಕ ದುರಂತವೊಂದು ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ತನ್ನ ಜೀವದ ಹಂಗು ತೊರೆದು ಮೊಮ್ಮಗನ ಜೀವ ಉಳಿಸಿದ ಅಜ್ಜನ ಈ ಕೊನೆಯ ಪ್ರೀತಿಯ ಕಥೆ ಇಡೀ ಭಾಗದ ಜನರನ್ನು ಕಣ್ಣೀರಲ್ಲಿ ಮುಳುಗಿಸಿದೆ. ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಈ ದುರದೃಷ್ಟಕರ ಘಟನೆ ನಡೆದಿದೆ. ವರದಿಗಳ ಪ್ರಕಾರ, ಮನೆಯ ಆವರಣದಲ್ಲಿ ಆಟವಾಡುತ್ತಿದ್ದ ಪುಟ್ಟ ಮೊಮ್ಮಗನು ಅಕಸ್ಮಾತ್ ಆಗಿ ತೆರೆದಿದ್ದ ಅಥವಾ ಶಾರ್ಟ್ ಸರ್ಕ್ಯೂಟ್ ಆಗಿದ್ದ ಸಜೀವ ವಿದ್ಯುತ್ ತಂತಿಯನ್ನು ಮುಟ್ಟಿದ್ದಾನೆ.