Shorts

ಐಷಾರಾಮಿ ಕಾರಿನಲ್ಲಿ ಸಂಚರಿಸುತ್ತಿದ್ದ ಚಾಲಕ ನೀರಿನ ಬಾಟಲಿಯನ್ನು ರಸ್ತೆಯಲ್ಲೇ ಎಸೆಯುತ್ತಾನೆ. ಇದನ್ನು ನೋಡಿದ ಪೊಲೀಸ್ ಅಧಿಕಾರಿಯೊಬ್ಬರು ಮಾಡಿದ ಕೆಲಸಕ್ಕೆ ನೀವು ಶಹಬ್ಬಾಶ್ ಎನ್ನಲೇಬೇಕು. ಸೋಷಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ವಿಡಿಯೋ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಭಾರತದಲ್ಲಿ ಇಂತಹ ಅನೇಕ ಘಟನೆಗಳು ನಡೆಯುತ್ತವೆ. ನಮಗೆ ರಸ್ತೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಬಾಟಲಿ, ಕಸ ಎಸೆಯಬಾರದು ಎಂದು ಎಷ್ಟೇ ಬುದ್ಧಿ ಹೇಳಿದರೂ ಕಲಿಯಲ್ಲ. ಇದೇ ರೀತಿ ಐಷಾರಾಮಿ ಕಾರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬ ಖಾಲಿಯಾದ ನೀರಿನ ಬಾಟಲಿಯನ್ನು ಹೆದ್ದಾರಿಯಲ್ಲೇ ಬಿಸಾಕುತ್ತಾನೆ. ಹಿಂದೆಯೇ ಬೈಕ್ ನಲ್ಲಿ ಬರುತ್ತಿದ್ದ ಪೊಲೀಸ್ ಅಧಿಕಾರಿ ಇದನ್ನು ಗಮನಿಸಿ ಬೈಕ್ ನಿಲ್ಲಿಸಿ ಬಾಟಲಿ ಎತ್ತಿಕೊಳ್ಳುತ್ತಾರೆ.

ಬೆಂಗಳೂರು: ಸ್ವತಃ ಕರ್ನಾಟಕ ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರು ಈ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನಕ್ಕೆ ಬೇಸತ್ತು ಸದನದಿಂದ ಹೊರನಡೆದಿರುವುದು ವಿಧಾನಸಭೆ ಇತಿಹಾಸದಲ್ಲೇ ಕರಾಳ ಅಧ್ಯಾಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರು ಈ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನಕ್ಕೆ ಬೇಸತ್ತು ಸದನದಿಂದ ಹೊರನಡೆದಿರುವುದು ರಾಜ್ಯದಲ್ಲಿ ಆಡಳಿತ ಯಂತ್ರ ಎಷ್ಟು ನಿಷ್ಕ್ರಿಯಗೊಂಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಾಗದಷ್ಟು ಅಸಮರ್ಥವಾಗಿರುವ ಕಾಂಗ್ರೆಸ್ ಪಕ್ಷದ ಕರ್ನಾಟಕ ಸರಕಾರವು ಶಾಸನಸಭೆಗೆ ಕನಿಷ್ಠ ಗೌರವವನ್ನೂ ನೀಡದೆ ತನ್ನದೇ ರಾಜಕೀಯದಲ್ಲಿ ಮುಳುಗಿದೆ ಎಂದು ಆಕ್ಷೇಪಿಸಿದ್ದಾರೆ.

ಬೆಂಗಳೂರು: ನಡೆಯುತ್ತಿರುವ ಮಧ್ಯಪ್ರಾಚ್ಯ ಸಂಘರ್ಷವು ಮತ್ತೊಂದು ನಿರ್ಣಾಯಕ ಹಂತಕ್ಕೆ ಪ್ರವೇಶಿಸುತ್ತಿದ್ದಂತೆ ಮೊಜ್ತಾಬಾ ಖಮೇನಿ ಅವರ ಆರೋಗ್ಯ ಮತ್ತು ಸ್ಥಳದ ಬಗ್ಗೆ ಊಹಾಪೋಹಗಳು ತೀವ್ರಗೊಂಡಿವೆ. ತನ್ನ ತಂದೆ ಅಲಿ ಖಮೇನಿ ಅವರ ಮರಣದ ನಂತರ ನಾಯಕತ್ವವನ್ನು ವಹಿಸಿಕೊಂಡ 56 ವರ್ಷ ವಯಸ್ಸಿನ ಒಜ್ತಬಾ ಯುದ್ಧ ಪ್ರಾರಂಭವಾದಾಗಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.ಸಂಘರ್ಷದ ಆರಂಭಿಕ ಮುಷ್ಕರಗಳಲ್ಲಿ ಗಾಯಗೊಂಡ ನಂತರ ಮೊಜ್ತಾಬಾ ಖಮೇನಿ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ರಹಸ್ಯವಾಗಿ ರಷ್ಯಾಕ್ಕೆ ಸಾಗಿಸಲಾಗಿದೆ ಎಂದು ಹಲವಾರು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವ್ಲಾಡಿಮಿರ್ ಪುಟಿನ್ ಅವರ ನಿವಾಸಗಳಲ್ಲಿ ಒಂದಕ್ಕೆ ಸಂಪರ್ಕ ಹೊಂದಿದ ಖಾಸಗಿ ವೈದ್ಯಕೀಯ ಸೌಲಭ್ಯದಲ್ಲಿ ಅವರು ಆರೋಗ್ಯವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ವಿರುದ್ಧ ಜೈಪುರದಲ್ಲಿ ಎಫ್‌ಐಆರ್ ದಾಖಲಾಗಿದೆ.ಅಯ್ಯರ್ ಮಾರ್ಚ್ 14 ರಂದು ಜೈಪುರಕ್ಕೆ ಭೇಟಿ ನೀಡಿದ್ದರು "ಭಾರತದ ಭವಿಷ್ಯ: ಹುಸಿ-ಹಿಂದೂಯಿಸಂ ಅಥವಾ ಸೆಕ್ಯುಲರ್ ಭಾರತ?" ಎಂಬ ಶೀರ್ಷಿಕೆಯ ಸಾರ್ವಜನಿಕ ಉಪನ್ಯಾಸವನ್ನು ನೀಡಲು. ಸ್ಥಳೀಯ ಕಾಲೇಜಿನಲ್ಲಿ. ಕಾರ್ಯಕ್ರಮದ ಸಂದರ್ಭದಲ್ಲಿ, ಅವರು 2017 ರಲ್ಲಿ ಪ್ರಧಾನಿಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದರು. ಅಯ್ಯರ್ ಅವರು ತಮ್ಮ ಹೇಳಿಕೆಗಳು ಮೋದಿಯವರ ಪಾತ್ರವನ್ನು ಗುರಿಯಾಗಿರಿಸಿಕೊಂಡಿವೆಯೇ ಹೊರತು ಅವರ ಜಾತಿಯನ್ನು ಅಲ್ಲ, ಹೇಳಿಕೆಯನ್ನು ನಂತರ ತಿರುಚಲಾಗಿದೆ ಎಂದು ಹೇಳಿದ್ದಾರೆ.

ಮದುವೆ ಸಮಸ್ಯೆ ಬಗೆಹರಿಸಲು, ಕಂಕಣ ಭಾಗ್ಯ ಕೂಡಿಬರಲು ಪಾರ್ವತಿ ಸಹಿತ ಶಿವನ ಪೂಜೆ ಮಾಡಬೇಕು. ಇದಕ್ಕಾಗಿ ಸೋಮವಾರ ಶಿವನ ದಿನ ಉಮಾ ಮಹೇಶ್ವರ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.ನಮಃ ಶಿವಾಭ್ಯಾಂ ನವಯೌವನಾಭ್ಯಾಂಪರಸ್ಪರಾಶ್ಲಿಷ್ಟವಪುರ್ಧರಾಭ್ಯಾಮ್ ।ನಗೇಂದ್ರಕನ್ಯಾವೃಷಕೇತನಾಭ್ಯಾಂನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 1 ॥ ನಮಃ ಶಿವಾಭ್ಯಾಂ ಸರಸೋತ್ಸವಾಭ್ಯಾಂನಮಸ್ಕೃತಾಭೀಷ್ಟವರಪ್ರದಾಭ್ಯಾಮ್ ।ನಾರಾಯಣೇನಾರ್ಚಿತಪಾದುಕಾಭ್ಯಾಂನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 2 ॥ ನಮಃ ಶಿವಾಭ್ಯಾಂ ವೃಷವಾಹನಾಭ್ಯಾಂವಿರಿಂಚಿವಿಷ್ಣ್ವಿಂದ್ರಸುಪೂಜಿತಾಭ್ಯಾಮ್ ।ವಿಭೂತಿಪಾಟೀರವಿಲೇಪನಾಭ್ಯಾಂನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 3 ॥ ನಮಃ ಶಿವಾಭ್ಯಾಂ ಜಗದೀಶ್ವರಾಭ್ಯಾಂಜಗತ್ಪತಿಭ್ಯಾಂ ಜಯವಿಗ್ರಹಾಭ್ಯಾಮ್ ।ಜಂಭಾರಿಮುಖ್ಯೈರಭಿವಂದಿತಾಭ್ಯಾಂನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 4 ॥