ಬೆಂಗಳೂರು: ಕರ್ನಾಟಕದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬೇಸಿಗೆ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಇಂದು ಮಳೆಯ ಸಾಧ್ಯತೆಯಿರುತ್ತಾ? ಇಲ್ಲಿದೆ ಲೇಟೆಸ್ಟ್ ಹವಾಮಾನ ವರದಿ. ಈ ವಾರ ಕಳೆದ ವಾರಕ್ಕೆ ಹೋಲಿಸಿದರೆ ಅಷ್ಟೊಂದು ಮಳೆಯಾಗಿಲ್ಲ. ಕೆಲವು ಕಡೆ ಮಾತ್ರ ಸಣ್ಣ ಮಟ್ಟಿಗೆ ಮಳೆಯಾಗಿದ್ದು ಬಿಟ್ಟರೆ ಬಹುತೇಕ ಬಿಸಿಲಿನ ವಾತಾವರಣವಿತ್ತು. ಹಾಗಿದ್ದರೂ ಕಳೆದ ಎರಡು ವಾರಗಳಲ್ಲಿ ವಾರಂತ್ಯಗಳಲ್ಲಿ ಮಳೆಯಿತ್ತು. ಆದರೆ ಇಂದು ರಾಜ್ಯದ ಒಟ್ಟಾರೆ ಹವಾಮಾನ ನೋಡುವುದಾದರೆ ಮಳೆಯಿಲ್ಲ. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಉಡುಪಿ, ಹಾಸನ, ಮೈಸೂರು, ಬೆಂಗಳೂರು, ಮಂಡ್ಯ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಇಂದು ಬಿಸಿಲು ಮತ್ತು ಮೋಡ ಕವಿದ ವಾತಾವರಣವಿರಲಿದೆ.

ಶುಕ್ರವಾರ ಲಕ್ಷ್ಮೀ ದೇವಿಯ ದಿನವಾಗಿದ್ದು, ಹಣಕಾಸಿನ ಸಮಸ್ಯೆ, ದಾರಿದ್ರ್ಯ ನಿವಾರಣೆಗಾಗಿ ಲಕ್ಷ್ಮೀ ಕವಚ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ.ಶುಕಂ ಪ್ರತಿ ಬ್ರಹ್ಮೋವಾಚಮಹಾಲಕ್ಷ್ಮ್ಯಾಃ ಪ್ರವಕ್ಷ್ಯಾಮಿ ಕವಚಂ ಸರ್ವಕಾಮದಮ್ |ಸರ್ವಪಾಪಪ್ರಶಮನಂ ದುಷ್ಟವ್ಯಾಧಿವಿನಾಶನಮ್ || ೧ ||ಗ್ರಹಪೀಡಾಪ್ರಶಮನಂ ಗ್ರಹಾರಿಷ್ಟಪ್ರಭಞ್ಜನಮ್ |ದುಷ್ಟಮೃತ್ಯುಪ್ರಶಮನಂ ದುಷ್ಟದಾರಿದ್ರ್ಯನಾಶನಮ್ || ೨ ||ಪುತ್ರಪೌತ್ರಪ್ರಜನನಂ ವಿವಾಹಪ್ರದಮಿಷ್ಟದಮ್ |ಚೋರಾರಿಹಾರಿ ಜಪತಾಮಖಿಲೇಪ್ಸಿತದಾಯಕಮ್ || ೩ ||ಸಾವಧಾನಮನಾ ಭೂತ್ವಾ ಶೃಣು ತ್ವಂ ಶುಕ ಸತ್ತಮ |ಅನೇಕಜನ್ಮಸಂಸಿದ್ಧಿಲಭ್ಯಂ ಮುಕ್ತಿಫಲಪ್ರದಮ್ || ೪ ||ಧನಧಾನ್ಯಮಹಾರಾಜ್ಯ-ಸರ್ವಸೌಭಾಗ್ಯಕಲ್ಪಕಮ್ |ಸಕೃತ್ಸ್ಮರಣಮಾತ್ರೇಣ ಮಹಾಲಕ್ಷ್ಮೀಃ ಪ್ರಸೀದತಿ || ೫ ||ಕ್ಷೀರಾಬ್ಧಿಮಧ್ಯೇ ಪದ್ಮಾನಾಂ ಕಾನನೇ ಮಣಿಮಣ್ಟಪೇ |ತನ್ಮಧ್ಯೇ ಸುಸ್ಥಿತಾಂ ದೇವೀಂ ಮನೀಷಿಜನಸೇವಿತಾಮ್ || ೬ ||ಸುಸ್ನಾತಾಂ ಪುಷ್ಪಸುರಭಿಕುಟಿಲಾಲಕಬನ್ಧನಾಮ್ |ಪೂರ್ಣೇನ್ದುಬಿಮ್ಬವದನಾ-ಮರ್ಧಚನ್ದ್ರಲಲಾಟಿಕಾಮ್ || ೭ ||

ಧರ್ಮಶಾಲಾ: ಪಾಕಿಸ್ತಾನ ಜಮ್ಮು ಕಾಶ್ಮೀರ ಸೇರಿದಂತೆ ಮೂರು ರಾಜ್ಯಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲು ಯತ್ನಿಸಿದ ಬೆನ್ನಲ್ಲೇ ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯವನ್ನು ಅರ್ಧಕ್ಕೇ ಸ್ಥಗಿತಗೊಳಿಸಿ ಮನೆಗೆ ಹೋಗಿ ಎಂದು ಪ್ರೇಕ್ಷಕರಿಗೆ ಸೂಚಿಸಲಾಯಿತು. ಜಮ್ಮು ಕಾಶ್ಮೀರವನ್ನು ಟಾರ್ಗೆಟ್ ಮಾಡಿ ಪಾಕಿಸ್ತಾನ ವಿಮಾನ ದಾಳಿ ನಡೆಸಲು ಯತ್ನಿಸುತ್ತಿದ್ದಂತೇ ಇತ್ತ ಧರ್ಮಶಾಲಾದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯವನ್ನು ಅರ್ಧದಲ್ಲಿಯೇ ನಿಲ್ಲಿಸಲಾಯಿತು. ಬಳಿಕ ಮೈದಾನದ ಸಿಬ್ಬಂದಿಗಳು, ಆಯೋಜಕರು ಘೋಷಣೆ ಮಾಡಿ ಪ್ರೇಕ್ಷಕರನ್ನು ಮನೆಗೆ ತೆರಳುವಂತೆ ಸೂಚನೆ ನೀಡಿದೆ. ಆಟಗಾರರು, ಸಿಬ್ಬಂದಿಗಳನ್ನು ತಕ್ಷಣವೇ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಸುರಕ್ಷತಾ ದೃಷ್ಟಿಯಿಂದ ಪಂದ್ಯ ಸ್ಥಗಿತಗೊಳಿಸಲಾಗಿದೆ.

ಪಂಜಾಬ್‌: ಆಪರೇಷನ್‌ ಸಿಂಧೂರ್‌ ಬಳಿಕ ಭಾರತ-ಪಾಕ್‌ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಪಂಜಾಬ್‌ನ ಆರು ಗಡಿ ಜಿಲ್ಲೆಗಳ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಪಾಕಿಸ್ತಾನವು ಭಾರತದ ಮೇಲೆ ಪ್ರತಿಕಾರದ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಅಮೃತಸರ, ಫಿರೋಜ್‌ಪುರ, ಪಠಾಣ್‌ಕೋಟ್, ಫಜಿಲ್ಕಾ, ಗುರುದಾಸಪುರ ಮತ್ತು ತರಣ್ ತರಣ್ ಜಿಲ್ಲೆಗಳಲ್ಲಿ ಶಾಲೆಗಳಿಗೆ ಮೇ 11ರವರೆಗೆ ರಜೆ ಘೋಷಣೆ ಮಾಡಲಾಗಿದೆ.ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ (ಪಿಒಕೆ) ಉಗ್ರರ ನೆಲೆಗಳ ಗುರಿಯಾಗಿಸಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿದೆ. ಇದರಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ನವದೆಹಲಿ: ಪಹಲ್ಗಾಮ್‌ ನರಹತ್ಯೆಗೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ 100 ಉಗ್ರರ ಹತ್ಯೆಯಾಗಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಕ್ಷಗಳಿಗೆ ಮಾಹಿತಿ ನೀಡಿದೆ.ಸಂಸತ್‌ ಭವನದಲ್ಲಿ ಇಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಈ ಮಾಹಿತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅನುಪಸ್ಥಿತಿಯಲ್ಲಿ ರಾಜನಾಥ್‌ ಸಿಂಗ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಸೇರಿದಂತೆ ಬಹುತೇಕ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.ಭಾರತೀಯ ಸೇನಾ ಕಾರ್ಯಾಚರಣೆಯಲ್ಲಿ ಎಷ್ಟು ಮಂದಿ ಉಗ್ರರು ಹತರಾಗಿದ್ದಾರೆ ಎಂದು ನಿಖರವಾಗಿ ಹೇಳುವುದು ಅಸಾಧ್ಯ. ಆದರೆ, ವಾಯುದಾಳಿಯಲ್ಲಿ ಪಾಕ್‌ ಪೋಷಿತ ಕನಿಷ್ಠ 100 ಉಗ್ರರ ಹತ್ಯೆಯಾಗಿದೆ.