Publish Date: Wed, 18 Mar 2026 (09:49 IST)
Updated Date: Wed, 18 Mar 2026 (09:52 IST)
ಹಾಸನ: ಮಂಗಳವಾರದಂದು ಹಾಸನದಲ್ಲಿ ಭಾರೀ ಆಲಿಕಲ್ಲು ಮಳೆಯಾಗಿತ್ತು. ಇದರಿಂದ ವರ್ಷದ ಮೊದಲ ಮಳೆಯೇ ಹಾಸನ ಜನತೆಗೆ ಕೂಲ್ ಮಾಡಿತ್ತು. ಸಾಮಾಜಿಕ ಜಾಲತಾನದಲ್ಲಿ ಆಲಿಕಲ್ಲು ಮಳೆಯನ್ನು ಎಂಜಾಯ್ ಮಾಡಿ ಹಲವರು ಪೋಸ್ಟ್ ಮಾಡಿದ್ದರು.
ಆದರೆ ಮಳೆ ಬಳಿಕದ ಪರಿಣಾಮವನ್ನು ಮಾತ್ರ ರೈತರು ಅನುಭವಿಸುತ್ತಿದ್ದಾರೆ. ಸುರಿದ ಭಾರೀ ಆಲಿಕಲ್ಲು ಮಳೆಗೆ ಇದೀಗ ರೈತನೊಬ್ಬ ಕಷ್ಟ ಪಟ್ಟು ದುಡಿದ ಕಲ್ಲಂಗಡಿ ಕೃಷಿ ನೀರು ಪಾಲಾಗಿದೆ.
ಇನ್ನೇನು ಬೆಳೆ ತೆಗೆದು ಮಾರಾಟ ಮಾಡುವ ಹಂತಕ್ಕೆ ಬಂದಿದ್ದ ಕಲ್ಲಂಗಡಿ ಕಾಯಿ ಹಾಳಾಗಿದೆ. ಆಲಿಕಲ್ಲು ಮಳೆಯಿಂದಾಗಿ ಗಿಡ ಹಾಗೂ ಹಣ್ಣುಗಳು ಕೊಳೆತು ಹೋಗಿದೆ. ಇದರಿಂದ ವರ್ಷಪೂರ್ತಿ ರೈತನೊಬ್ಬ ಕಾದು ಕುಳಿತಿದ್ದ ಕ್ಷಣ ನೋವಿನಲ್ಲೇ ಕಳೆಯುವಂತೆ ಮಾಡಿದೆ. ಆರ್ಥಿಕವಾಗಿ ಇದು ಭಾರೀ ನಷ್ಟವನ್ನು ನೀಡಿದೆ.
ಯಾರೆಲ್ಲ ಆಲಿಕಲ್ಲು ಮಳೆ ನೋಡಿ ಖುಷಿಯಾಗಿದ್ರೋ ಗೊತ್ತಿಲ್ಲ, ಆದರೆ ರೈತರು ಮಾತ್ರ ಮೊದಲ ವರ್ಷಧರೆಯಿಂದ ಸಂಕಷ್ಟಕ್ಕಿಡಾಗಿದ್ದಾರೆ.