Select Your Language

Notifications

webdunia
webdunia
webdunia
webdunia

ನಿಮ್ಮ ಮಗ ಮಾಡಿದ್ದು ಸರೀನಾ: ದರ್ಶನ್ ಗೆ ಶಾಪ ಹಾಕಿದ ರೇಣುಸ್ವಾಮಿ ತಾಯಿಗೆ ಫ್ಯಾನ್ಸ್ ಪ್ರಶ್ನೆ

Renukaswamy

Krishnaveni K

ಬೆಂಗಳೂರು , ಬುಧವಾರ, 12 ಜೂನ್ 2024 (15:05 IST)
ಬೆಂಗಳೂರು: ತಮ್ಮ ಮಗನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ರೇಣುಸ್ವಾಮಿ ತಾಯಿ ಹಿಡಿಶಾಪ ಹಾಕಿದ್ದಾರೆ. ಆದರೆ ಇದಕ್ಕೆ ಫ್ಯಾನ್ಸ್ ನಿಮ್ಮ ಮಗ ಮಾಡಿದ್ದು ಸರೀನಾ ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಹಾಕಿದ್ದ ಎಂಬ ಕಾರಣಕ್ಕೆ ದರ್ಶನ್ ತಮ್ಮ ಸಂಗಡಿಗರ ಸಹಾಯದಿಂದ ಚಿತ್ರದುರ್ಗದಿಂದ ರೇಣುಸ್ವಾಮಿಯನ್ನು ಕರೆಸಿಕೊಂಡು ಬೆಂಗಳೂರಿನ ತಮ್ಮ ನಿವಾಸದ ಬಳಿ ಶೆಡ್ ಒಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ ಪರಿಣಾ ಆತ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ. ರೇಣುಸ್ವಾಮಿ ಕೂಡಾ ದರ್ಶನ್ ಅಭಿಮಾನಿಯಾಗಿದ್ದ. ದರ್ಶನ್ ಮತ್ತು ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಪವಿತ್ರಾ ಗೌಡ ಬಂದಿದ್ದಕ್ಕೆ ಈತ ಅಶ್ಲೀಲ ಮೆಸೇಜ್ ಹಾಕಿ ದೂರ ಹೋಗುವಂತೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾಗೆ ತನ್ನ ಗುಪ್ತಾಂಗದ ಫೋಟೋ ಕಳುಹಿಸಿ ನಾನೇನು ಕಡಿಮೆ ಬಾ ಎಂದು ಮೆಸೇಜ್ ಹಾಕಿದ್ದ ಎಂದು ಆರೋಪಿಸಲಾಗಿದೆ. ಇದಕ್ಕೇ ದರ್ಶನ್ ರೊಚ್ಚಿಗೆದ್ದು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ಇದೀಗ ರೇಣುಸ್ವಾಮಿ ತಾಯಿ ತನ್ನ ಮಗನನ್ನು ಕಳೆದುಕೊಂಡ ದುಃಖದಲ್ಲಿ ದರ್ಶನ್ ಗೆ ಹಿಡಿಶಾಪ ಹಾಕಿದ್ದಾರೆ. 15 ದಿನದೊಳಗೆ ದರ್ಶನ್ ನನ್ನ ಮಗನ ರೀತಿಯೇ ನರಳಿ ಸಾಯಲಿ. ಸರ್ವನಾಶ ಆಗ್ತಾರೆ, ಯಾವ ಜನ್ಮದಲ್ಲೂ ಕರ್ಮ ಬಿಡಲ್ಲ ಎಂದು ಹಿಡಿಶಾಪ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಮಾಣ ವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು: ಎನ್ ಡಿಎ ಮಿತ್ರನ ತಬ್ಬಿ ಅಭಿನಂದಿಸಿದ ಪ್ರಧಾನಿ ಮೋದಿ