Select Your Language

Notifications

webdunia
webdunia
webdunia
webdunia

ಪವಿತ್ರಾ ಗೌಡಗಾಗಿ ಜೈಲು ಸೇರಿದ ದರ್ಶನ್, ಪತಿ ಮೇಲೆ ಬೇಸರದಿಂದ ಪತ್ನಿ ವಿಜಯಲಕ್ಷ್ಮಿ ಕಠಿಣ ನಿರ್ಧಾರ

Darshan family

Krishnaveni K

ಬೆಂಗಳೂರು , ಬುಧವಾರ, 12 ಜೂನ್ 2024 (09:09 IST)
ಬೆಂಗಳೂರು: ಒಂದೆಡೆ ಪ್ರೇಯಸಿ ಪವಿತ್ರಾ ಗೌಡಗಾಗಿ ಓರ್ವನನ್ನು ಹತ್ಯೆ ಮಾಡಿದ ಆರೋಪದಲ್ಲಿ ದರ್ಶನ್ ಜೈಲು ಸೇರಿದ್ದರೆ ಇತ್ತ ಅವರ ಮೇಲೆ ಬೇಸರಗೊಂಡ ಪತ್ನಿ ವಿಜಯಲಕ್ಷ್ಮಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.

ಪವಿತ್ರಾ ಜೊತೆ ಗಂಡನ ಸಂಬಂಧದ ಬಗ್ಗೆ ವಿಜಯಲಕ್ಷ್ಮಿಗೆ ಮೊದಲಿನಿಂದಲೂ ಅಸಮಾಧಾನವಿತ್ತು. ಹಾಗಿದ್ದರೂ ಇತ್ತೀಚೆಗಿನದ ದಿನಗಳಲ್ಲಿ ದರ್ಶನ್ ಜೊತೆ ವಿಜಯಲಕ್ಷ್ಮಿ ಚೆನ್ನಾಗಿಯೇ ಇದ್ದರು. ಇತ್ತೀಚೆಗಷ್ಟೇ ದಂಪತಿ ದುಬೈಗೆ ತೆರಳಿ ಅದ್ಧೂರಿಯಾಗಿ ವಿವಾಹ ವಾರ್ಷಿಕೋತ್ಸವವನ್ನೂ ಆಚರಿಸಿಕೊಂಡಿದ್ದರು.

ಆದರೆ ಕೆಲವು ದಿನಗಳ ಮೊದಲು ಪವಿತ್ರಾ ನಮ್ಮಿಬ್ಬರ ಸಂಬಂಧಕ್ಕೆ 10 ವರ್ಷ ಎಂದು ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದು ವಿಜಯಲಕ್ಷ್ಮಿಯವರನ್ನು ಕೆರಳಿಸಿತ್ತು. ಇಬ್ಬರ ನಡುವೆ ಸೋಷಿಯಲ್ ಮೀಡಿಯಾ ವಾರ್ ಕೂಡಾ ನಡೆದಿತ್ತು. ಆದರೂ ವಿಜಯಲಕ್ಷ್ಮಿ ಗಂಡನ ಜೊತೆ ಚೆನ್ನಾಗಿಯೇ ಇದ್ದರು.

ಆದರೆ ಈಗ ಪವಿತ್ರಾಗಾಗಿ ದರ್ಶನ್ ಹತ್ಯೆ ಮಾಡಿಸಿದ್ದಾರೆ ಎಂಬ ಸುದ್ದಿ ವಿಜಯಲಕ್ಷ್ಮಿ ಬೇಸರಕ್ಕೆ ಕಾರಣವಾಗಿದೆ. ಇಷ್ಟು ದಿನ ಇನ್ ಸ್ಟಾಗ್ರಾಂನಲ್ಲಿ ದರ್ಶನ್ ಖಾತೆಯನ್ನು ಫಾಲೋ ಮಾಡುತ್ತಿದ್ದ ವಿಜಯಲಕ್ಷ್ಮಿ ಈಗ ಏಕಾಏಕಿ ಪ್ರೊಫೈಲ್ ಫೋಟೋ ಡಿಲೀಟ್ ಮಾಡಿ ದರ್ಶನ್ ರನ್ನೂ ಅನ್ ಫಾಲೋ ಮಾಡಿ ಮೌನಕ್ಕೆ ಶರಣಾಗಿದ್ದಾರೆ. ಗಂಡನ ಬಗ್ಗೆ ಕೇಳಿಬಂದಿರುವ ಆರೋಪಗಳ ಅವರನ್ನು ತೀರಾ ಕುಗ್ಗಿಹೋಗುವಂತೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಲೆ ಪ್ರಕರಣ: ನಟ ದರ್ಶನ್‌ ಸೇರಿದಂತೆ 13 ಆರೋಪಿಗಳು ಪೊಲೀಸ್‌ ಕಸ್ಟಡಿಗೆ