Select Your Language

Notifications

webdunia
webdunia
webdunia
webdunia

ಬೆನ್ನು ನೋವು ತಡೆಯಲಾಗದೇ ಈ ಕೆಲಸ ಮಾಡಲೂ ರೆಡಿಯಾದ ದರ್ಶನ್

Darshan
ಬಳ್ಳಾರಿ: ಬೆನ್ನು ನೋವಿನಿಂದ ಬಳಲುತ್ತಿರುವ ರೇಣುಕಾಸ್ವಾಮಿ ಮರ್ಡರ್ ಹತ್ಯೆ ಆರೋಪಿ ನಟ ದರ್ಶನ್ ಈಗ ಕೊನೆಗೂ ನೋವು ತಡೆಯಲಾಗದೇ ಈ ಕೆಲಸ ಮಾಡಲು ರೆಡಿಯಾಗಿದ್ದಾರೆ.

ನಟ ದರ್ಶನ್ ರನ್ನು ಬಳ್ಳಾರಿ ಜೈಲಿನಲ್ಲಿರಿಸಲಾಗಿದೆ. ಕಳೆದ ವಾರ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಇದಕ್ಕೆ ಮೊದಲು ಅವರನ್ನು ಪರೀಕ್ಷಿಸಿದ್ದ ವಿಮ್ಸ್ ವೈದ್ಯರು ಸ್ಕ್ಯಾನಿಂಗ್ ನಡೆಸಲು ಸಲಹೆ ನೀಡಿದ್ದರು. ಆದರೆ ಏನೇ ಆದ್ರೂ ಸರಿ ನಾನು ಇಲ್ಲಿ ಚಿಕಿತ್ಸೆ ಪಡೆದುಕೊಳ್ಳಲ್ಲ, ಬೆಂಗಳೂರಿಗೆ ಹೋಗಿಯೇ ಚಿಕಿತ್ಸೆ ಪಡೆಯುತ್ತೇನೆ ಎಂದು ದರ್ಶನ್ ಹಠ ಹಿಡಿದು ಕುಳಿತಿದ್ದರು.

ಬಹುಶಃ ಇದೇ ಕಾರಣಕ್ಕೆ ಜಾಮೀನು ಪಡೆಯುವುದು ಅಥವಾ ಬೆಂಗಳೂರಿನ ಜೈಲಿಗೆ ಶಿಫ್ಟ್ ಮಾಡಿಸಿಕೊಳ್ಳಬಹದು ಎಂಬ ಲೆಕ್ಕಾಚಾರ ಅವರಲ್ಲಿದ್ದಿರಬಹುದು. ಆದರೆ ಇದು ಯಾವುದಕ್ಕೂ ಕೋರ್ಟ್ ಜಗ್ಗಲಿಲ್ಲ. ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತವಾಗಿದೆ.

ಆದರೆ ಅವರನ್ನು ಕಾಡುತ್ತಿರುವ ಬೆನ್ನು ನೋವು ಮಾತ್ರ ತೀವ್ರವಾಗಿದೆ. ಕೂರಲೂ ಆಗದೇ ನಿಲ್ಲಲೂ ಆಗದ ಸ್ಥಿತಿಯಲ್ಲಿದ್ದಾರೆ. ಪತ್ನಿ ತಂದುಕೊಟ್ಟ ಬ್ಯಾಗ್ ನ್ನೂ ಎತ್ತಿಕೊಳ್ಳಲು ಕಷ್ಟಪಡುವ ಪರಿಸ್ಥಿತಿಯಾಗಿದೆ. ಹೀಗಾಗಿ ದರ್ಶನ್ ಈಗ ಕೊನೆಗೂ ವೈದ್ಯರು ಹೇಳಿದ್ದನ್ನು ಒಪ್ಪುವ ಸ್ಥಿತಿಗೆ ಬಂದಿದ್ದಾರೆ. ವಿಮ್ಸ್ ವೈದ್ಯರು ಅವರಿಗೆ ಎಂಆರ್ ಐ ಸ್ಕ್ಯಾನಿಂಗ್ ಮಾಡಲು ಸೂಚಿಸಿದ್ದರು. ಅದರಂತೆ ಈಗ ದರ್ಶನ್ ಸ್ಕ್ಯಾನಿಂಗ್ ಮಾಡಿಸಲು ಒಪ್ಪಿಗೆ ನೀಡಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

BBK11: ಈ ವಾರ ಕಿಚ್ಚ ಸುದೀಪ್ ಎಂಥಾ ಮನಸ್ಥಿಯಲ್ಲಿ ಶೂಟಿಂಗ್ ಮಾಡಿದ್ದರು ಗೊತ್ತಾ