Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿ ಪತ್ನಿಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ: ಮಗುವಿಗಾದ್ರೂ ಒಳ್ಳೆ ಬುದ್ಧಿ ಕೊಡ್ಲಿ ಎಂದ ನೆಟ್ಟಿಗರು

Renukaswamy

Krishnaveni K

ಚಿತ್ರದುರ್ಗ , ಬುಧವಾರ, 16 ಅಕ್ಟೋಬರ್ 2024 (14:14 IST)
ಚಿತ್ರದುರ್ಗ: ದರ್ಶನ್ ಆಂಡ್ ಗ್ಯಾಂಗ್ ನಿಂದ ಹಲ್ಲೆಗೊಳಗಾದ ಪರಿಣಾಮ ಹತ್ಯೆಗೀಡಾದರು ಎನ್ನಲಾದ ರೇಣುಕಾಸ್ವಾಮಿ ಪತ್ನಿ ಸಹನಾಗೆ ಇಂದು ಬೆಳಿಗ್ಗೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ರೇಣುಕಾಸ್ವಾಮಿ ಪತ್ನಿಗೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆ ಉಚಿತವಾಗಿ ಡೆಲಿವರಿ ವ್ಯವಸ್ಥೆ ಮಾಡಿತ್ತು. ರೇಣುಕಾ ಕುಟುಂಬಕ್ಕೆ ಆಧಾರವಾಗಿದ್ದ. ಇದೀಗ ಆತನ ಸಾವಿನ ನಂತರ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಈ ಕಾರಣಕ್ಕೆ ಖಾಸಗಿ ಆಸ್ಪತ್ರೆಯೊಂದು ಉಚಿತವಾಗಿ ಹೆರಿಗೆ ಮಾಡಿಸಲು ಮುಂದಾಯಿತು.

ಮೊಮ್ಮಗುವಿನ ಆಗಮನದ ನಂತರ ಮಾಧ್ಯಮಗಳ ಮುಂದೆ ಮಾತನಾಡಿದ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ, ಮಗನನ್ನೇ ನೋಡಿದಷ್ಟು ಸಂತೋಷವಾಯಿತು ಎಂದಿದ್ದಾರೆ. ಇನ್ನೊಂದೆಡೆ ಉಚಿತವಾಗಿ ಹೆರಿಗೆ ಮಾಡಿಸಿಕೊಟ್ಟ ಆಸ್ಪತ್ರೆಗೂ ಧನ್ಯವಾದ ಸಲ್ಲಿಸಿದ್ದಾರೆ.

ಆದರೆ ರೇಣುಕಾಗೆ ಮಗುವಾಗಿರುವ ಸುದ್ದಿ ತಿಳಿಯುತ್ತಿದ್ದಂತೇ ನೆಟ್ಟಿಗರು ಕೆಲವರು ಅವರ ಕುಟುಂಬಸ್ಥರಿಗೆ ಈ ಮಗುವಾದರೂ ಕೆಟ್ಟ ದಾರಿ ಹಿಡಿಯದಂತೆ ನೋಡಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ. ಮಗುವಿಗೆ ಒಳ್ಳೆಯ ಬುದ್ಧಿ ಕಲಿಸಿಕೊಡಿ, ಆದರ್ಶವಾಗಿ ಹೇಗಿರಬೇಕೆಂದು ಹೇಳಿಕೊಡಿ ಎಂದು ಸಲಹೆಯಿತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈಲಿನಿಂದ ಬಿದ್ದ ಬಾಲಕಿ: ನಡುರಾತ್ರಿಯಲ್ಲಿ 16 ಕಿ.ಮೀ ನಡೆದು ರಕ್ಷಿಸಿದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ