Select Your Language

Notifications

webdunia
webdunia
webdunia
webdunia

ಮತ್ತೆ ಹುಟ್ಟಿಬಂದ ರೇಣುಕಾಸ್ವಾಮಿ: ಪತ್ನಿ ಸಹನಾಗೆ ಡೆಲಿವರಿ

Renukaswamy

Krishnaveni K

ಚಿತ್ರದುರ್ಗ , ಬುಧವಾರ, 16 ಅಕ್ಟೋಬರ್ 2024 (09:17 IST)
Photo Credit: X
ಚಿತ್ರದುರ್ಗ: ದರ್ಶನ್ ಆಂಡ್ ಗ್ಯಾಂಗ್  ನಡೆಸಿದ ಹಲ್ಲೆಗೊಳಗಾಗಿ ಹತ್ಯೆಯಾಗಿದ್ದಾರೆ ಎಂದು ಹೇಳಲಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಮತ್ತೆ ಹುಟ್ಟಿಬಂದಿದ್ದಾನೆ. ಮಗುವಿನ ರೂಪದಲ್ಲಿ.

ರೇಣುಕಾಸ್ವಾಮಿ ಪತ್ನಿ ಸಹನಾಗೆ ಡೆಲಿವರಿಯಾಗಿದೆ. ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ರೇಣುಕಾ ಪತ್ನಿ ಸಹನಾಗೆ ಹೆರಿಗೆಯಾಗಿದೆ. ಪಟ್ಟಣಗೆರೆ  ಶೆಡ್ ನಲ್ಲಿ ರೇಣುಕಾಸ್ವಾಮಿ ಹತ್ಯೆಯಾದಾಗ ಸಹನಾ ಐದು ತಿಂಗಳ ಗರ್ಭಿಣಿಯಾಗಿದ್ದಳು. ತನ್ನ ಮೇಲೆ ದರ್ಶನ್ ಆಂಡ್ ಗ್ಯಾಂಗ್ ಹಲ್ಲೆ ನಡೆಸುವಾಗಲೂ ರೇಣುಕಾ ತನ್ನ ಪತ್ನಿ ಗರ್ಭಿಣಿ ಎಂದು ಬೇಡಿಕೊಂಡಿದ್ದ ಎನ್ನಲಾಗಿತ್ತು.

ಪತಿಯ ಸಾವಿನ ಬಳಿಕ ಸಹನಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ  ಹೋಗಿದ್ದಳು. ಕೆಲವು ದಿನಗಳ ಹಿಂದೆ ಆಕೆ ವೀಕ್ ಆಗಿದ್ದರಿಂದ ಆಸ್ಪತ್ರೆಗೂ ದಾಖಲಾಗಿದ್ದಳು. ಇದೀಗ ಸಹನಾಗೆ ಡೆಲಿವರಿಯಾಗಿದೆ. ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ಸುದ್ದಿ ತಿಳಿದುಬಂದಿದೆ.

ರೇಣುಕಾಸ್ವಾಮಿ ಹತ್ಯೆಯ ಬಳಿಕ ದುಃಖದ ಮಡುವಿನಲ್ಲಿದ್ದ ಕುಟುಂಬಕ್ಕೆ ಈಗ ಮಗುವಿನ ಜನನದ ಸುದ್ದಿ ಸಮಾಧಾನ ತಂದಿದೆ. ಇನ್ನೊಂದೆಡೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 6 ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತವಾಗಿದ್ದು, ಇದೀಗ ದರ್ಶನ್ ಹೈಕೋರ್ಟ್ ಮೊರೆ ಹೋಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲು ಗೃಹಲಕ್ಷ್ಮಿ ಹಣ ಹಾಕಿ ಆಮೇಲೆ ಮಾತನಾಡಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಜನರಿಂದ ಕ್ಲಾಸ್