Select Your Language

Notifications

webdunia
webdunia
webdunia
webdunia

ಪ್ರಪಾತಕ್ಕೆ ಉರುಳಿದ ಕಾರು

accident

geetha

ಉತ್ತರಪ್ರದೇಶ , ಸೋಮವಾರ, 5 ಫೆಬ್ರವರಿ 2024 (17:00 IST)
ಉತ್ತರಪ್ರದೇಶ : ಕಾರ್‌ ಒಂದು ಕಂದಕಕ್ಕೆ ಉರುಳಿದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವ ಘಟನೆ ಕಾನ್‌ಪುರ ಜಿಲ್ಲೆಯ ಸೆಕುಂದರಾ -ಸಂದಲ್‌ ಪುರ್‌ ರಸ್ತೆಯಲ್ಲಿ ಸೋಮವಾರ ನಡೆದಿದೆ. ಇಬ್ಬರು ಮಕ್ಕಳನ್ನು ಸ್ಥಳೀಯರ ಸಹಾಯದಿಂದ ರಕ್ಷಿಸಿರುವ ಪೊಲೀಸರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮದುವೆಯೊಂದರಲ್ಲಿ ಭಾಗವಹಿಸಲು ಎಂಟು ಜನರ ಈ ಗುಂಪು ಸೆಟ್ವಾಗೆ ತೆರಳುತ್ತಿತ್ತು. ಕಾರ್‌ ಬಹಳ ವೇಗದಲ್ಲಿ ಚಲಿಸುತ್ತಿದ್ದು, ಈ ವೇಳೆ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಕಣಿವೆಗೆ ಬಿದ್ದಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಜಾರಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೂರ್ತಿ ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಫೋಟೋ ಎಂದು ಹೇಳಿ ಬೆದರಿಕೆ