Select Your Language

Notifications

webdunia
webdunia
webdunia
webdunia

ಅಮ್ಮನ ಕತ್ತು ಸೀಳಿ ಕೊಂದು ಶವದ ಮುಂದೆ ಕೂತಿದ್ದ ಪುತ್ರ ಮಹಾಶಯ!

ಅಮ್ಮನ ಕತ್ತು ಸೀಳಿ ಕೊಂದು ಶವದ ಮುಂದೆ ಕೂತಿದ್ದ ಪುತ್ರ ಮಹಾಶಯ!
ಮುಂಬೈ , ಶನಿವಾರ, 1 ಡಿಸೆಂಬರ್ 2018 (10:03 IST)
ಮುಂಬೈ: ಹೆತ್ತ ತಾಯಿಯನ್ನೇ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಲ್ಲದೆ, ಶವದ ಮುಂದೆ ಏಳು ಗಂಟೆ ಕಾಲ ಕಾವಲು ಕೂತ ಪುತ್ರ ಕೊನೆಗೆ ಪೊಲೀಸರಿಗೆ ಶರಣಾದ ಘಟನೆ ಮುಂಬೈಯಲ್ಲಿ ನಡೆದಿದೆ.


ಆರೋಪಿಯನ್ನು ಯೋಗೇಶ್ ಶೆಣೈ ಎಂದು ಗುರುತಿಸಲಾಗಿದೆ. ಈತನಿಗೆ ತಾಯಿಯ ಚಿಕಿತ್ಸೆ ವೆಚ್ಚ ಮತ್ತು ಇತರ ಮನೆ ಖರ್ಚುಗಳನ್ನು ನಿಭಾಯಿಸಲು ಕಷ್ಟವಾಗುತ್ತಿತ್ತು. ಇದೇ ಕಾರಣಕ್ಕೆ ಆಗಾಗ ತಾಯಿ-ಮಗನ ಮಧ್ಯೆ ಜಗಳವಾಗುತ್ತಿತ್ತು ಎನ್ನಲಾಗಿದೆ.

ಮನಸ್ತಾಪ ತಾರಕಕ್ಕೇರಿ ಪುತ್ರ ಯೋಗೇಶ್ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಮೊದಲು ತಾಯಿಗೆ ನಿದ್ರೆ ಮಾತ್ರೆ ನೀಡಿದ್ದ ನಂತರ ತಲೆದಿಂಬಿನಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದ. ಎರಡೂ ಬಾರಿಯೂ ತಾಯಿ ಬದುಕಿದಾಗ ಕೊನೆಗೆ ಪೇಪರ್ ಕಟ್ ಮಾಡುವ ಚಾಕುವಿನಿಂದ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಂದ್ರಬಾಬು ನಾಯ್ಡು ವಿರುದ್ಧ ಪವನ್ ಕಲ್ಯಾಣ್ ವಾಗ್ದಾಳಿ: ನಾನೇ ನಿರ್ಣಾಯಕ ಎಂದ ನಾಯಕ