Publish Date: Tue, 13 Oct 2020 (17:49 IST)
Updated Date: Tue, 13 Oct 2020 (17:51 IST)
ಪ್ರೀತ್ಸೆ ಅಂತ ಬೆನ್ನು ಬಿದ್ದ ಪಾಗಲ್ ಪ್ರೇಮಿಯೊಬ್ಬ ಯುವತಿಯೊಬ್ಬಳ ಜೀವ ಬಲಿಪಡೆದಿದ್ದಾನೆ.
ನನ್ನೇ ಪ್ರೀತ್ಸೆ ಎಂದು ನರ್ಸ್ ಆಗಿದ್ದ ಯುವತಿಗೆ ಬೆನ್ನು ಬಿದ್ದ ಯುವಕನ ಪ್ರೀತಿಗೆ ಯುವತಿ ನೋ ಎಂದಿದ್ದಾಳೆ.
ಯಾವಾಗ ಯುವತಿ ಲವ್ ಮಾಡೋದಕ್ಕೆ ನೋ ಎಂದಳೋ ಆಗ ಸಿಟ್ಟಿಗೆದ್ದ ಯುವಕ ಆಕೆಯ ಮೇಲೆ ದ್ವೇಷ ಸಾಧಿಸೋಕೆ ಮುಂದಾಗಿದ್ದಾನೆ.
ನರ್ಸ್ ಆಗಿರುವ ಯುವತಿ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಇಟ್ಟು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.