Select Your Language

Notifications

webdunia
webdunia
webdunia
webdunia

ಎನ್ ಟಿಪಿಸಿ ಪ್ಲಾಂಟ್ ನಲ್ಲಿ ಬಾಯ್ಲರ್ ಸ್ಫೋಟ: 12 ಮಂದಿ ಸಾವು

ಎನ್ ಟಿಪಿಸಿ ಪ್ಲಾಂಟ್ ನಲ್ಲಿ ಬಾಯ್ಲರ್ ಸ್ಫೋಟ: 12 ಮಂದಿ ಸಾವು
ಉತ್ತರ ಪ್ರದೇಶ , ಬುಧವಾರ, 1 ನವೆಂಬರ್ 2017 (19:04 IST)
ಉತ್ತರ ಪ್ರದೇಶ: ರಾಯ್ ಬರೇಲಿಯಲ್ಲಿರುವ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ ಪ್ಲಾಂಟ್ ನಲ್ಲಿ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟಗೊಂಡ ಪರಿಣಾಮ 12 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.

ಬಾಯ್ಲರ್ ಸ್ಫೋಟದಿಂದಾಗಿ ಎನ್ ಟಿಪಿಸಿಗೆ ಸೇರಿದ ಕಲ್ಲಿದಲು ಗಣಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಕಾರ್ಮಿಕರೆಲ್ಲರೂ ಅಲ್ಲಿಯೇ ಕೆಲಸದಲ್ಲಿ ನಿರತರಾಗಿದ್ದರಿಂದ 12 ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ.

ಪ್ಲಾಂಟ್ 30 ವರ್ಷಕ್ಕೂ ಹಳೆಯದಾಗಿದ್ದು, ಹೀಗಾಗಿ ಘಟನೆ ಸಂಭವಿಸಿರಬಹುದು ಎನ್ನಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಘಟನೆಯಲ್ಲಿ ಕೆವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳಿಯ ಆಸ್ಪತ್ರೆಗಳಿಗೆ ಗಾಯಳುಗಳನ್ನು ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಗಾದ ಅಗೌರವದ ವಿರುದ್ದ ನನ್ನ ಕಾನೂನು ಹೋರಾಟ: ಅನುಪಮಾ ಶೆಣೈ