Select Your Language

Notifications

webdunia
webdunia
webdunia
webdunia

ನಿಗೂಢ ಸ್ಫೋಟದಿಂದ ಸಾವು: ವ್ಯಕ್ತಿ ದೇಹ ಛಿದ್ರ ಛಿದ್ರ

ನಿಗೂಢ ಸ್ಫೋಟದಿಂದ ಸಾವು: ವ್ಯಕ್ತಿ ದೇಹ ಛಿದ್ರ ಛಿದ್ರ
ಕಲಬುರ್ಗಿ , ಸೋಮವಾರ, 30 ಅಕ್ಟೋಬರ್ 2017 (16:04 IST)
ಕಲಬುರ್ಗಿ: ಏಕಾಏಕಿ ಸಂಭವಿಸಿದ ವಿಚಿತ್ರ ಸ್ಫೋಟದಿಂದ ವ್ಯಕ್ತಿ ದೇಹ ಛಿದ್ರವಾಗಿ ಮೃತಪಟ್ಟಿರುವ ಘಟನೆ ಕಪನೂರ ಕೈಗಾರಿಕಾ ಪ್ರದೇಶದಲ್ಲಿರುವ ಕೊರವಿ ಅರ್ಥ್ ಮೂವರ್ಸ್ ಸವಳು ಮಣ್ಣಿನ ಕಾರ್ಖಾನೆಯಲ್ಲಿ ನಡೆದಿದೆ.

ಮೇಳಕುಂದಾ ಬಿ. ಗ್ರಾಮದ ನಿವಾಸಿ ಶಿವಯೋಗಪ್ಪ ಗಾವನಳ್ಳಿ(45) ಮೃತ ವ್ಯಕ್ತಿ. ಕಾರ್ಖಾನೆಯಲ್ಲಿ ಟ್ರ್ಯಾಕ್ಟರ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಯೋಗಪ್ಪ ತನ್ನ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಏಕಾಏಕಿ ಸ್ಫೋಟವಾಗಿದ್ದು, ಶಿವಯೋಗಪ್ಪ ದೇಹ ಛಿದ್ರವಾಗಿದೆ.
webdunia

ಮೇಲ್ನೋಟಕ್ಕೆ ಇದು ಕಂಪನಿಯಲ್ಲಿರುವ ಬಾಯ್ಲರ್ ಸಿಡಿದು ಘಟನೆ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಆದರೆ ಕಂಪನಿಯಲ್ಲಿರುವ ಯಾವುದೇ ಮಷಿನ್ ಸಹ ಹಾನಿಯಾಗಿಲ್ಲ.

ಸದ್ಯ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಟಿಎಂಗೆ ಹಣ ತುಂಬಿಸುತ್ತಿದ್ದಾಗ ದರೋಡೆ: 18.5ಲಕ್ಷ ಹಣ ದೋಚಿದ ಕಳ್ಳರು