Select Your Language

Notifications

webdunia
webdunia
webdunia
webdunia

ನವಜೋತ್ ಸಿಂಗ್ ಸಿಧುಗೆ ಖಡಕ್ ನೋಟಿಸ್

ನವಜೋತ್ ಸಿಂಗ್ ಸಿಧುಗೆ ಖಡಕ್ ನೋಟಿಸ್
ನವದೆಹಲಿ , ಭಾನುವಾರ, 21 ಏಪ್ರಿಲ್ 2019 (12:38 IST)
ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಸಮುದಾಯ ಆಧಾರಿತವಾಗಿ ಮಾತನಾಡಿರುವ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧುಗೆ ಚುನಾವಣೆ ಆಯೋಗ ನೋಟಿಸ್ ಜಾರಿಮಾಡಿದೆ.

ಬಿಹಾರದಲ್ಲಿ ಚುನಾವಣೆ ಪ್ರಚಾರ ವೇಳೆಯಲ್ಲಿ ಮಾತನಾಡಿದ್ದ ಸಿಧು, ಮುಸ್ಲಿಂ ಬಾಂಧವರು ಒಗ್ಗಟ್ಟಾಗಿರಬೇಕು. ಯಾವುದೇ ಕಾರಣಕ್ಕೂ ಮುಸ್ಲಿಂ ಮತ ವಿಭಜನೆ ಆಗಬಾರದು. ಎಲ್ಲ ಮುಸ್ಲಿಂರು ಕಾಂಗ್ರೆಸ್ ಗೆ ವೋಟ್ ಮಾಡುವಂತೆ ಭಾಷಣ ಮಾಡಿದ್ರು.

ವಿವಾದಿತ ಹೇಳಿಕೆಗೆ ನೋಟಿಸ್ ನೀಡಿರುವ ಆಯೋಗ 24 ಗಂಟೆಗಳಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದೆ. ಸಿಧು ವಿರುದ್ಧ ಬಿಜೆಪಿ ಚುನಾವಣೆ ಆಯೋಗಕ್ಕೆ ದೂರು ನೀಡಿತ್ತು.



Share this Story:

Follow Webdunia kannada

ಮುಂದಿನ ಸುದ್ದಿ

15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ