Select Your Language

Notifications

webdunia
webdunia
webdunia
webdunia

ಕೈ ಪಡೆಗೆ ಟಾಂಗ್ ನೀಡಲು ಬಿಜೆಪಿ ಭರ್ಜರಿ ಪ್ರಚಾರ

ಕೈ ಪಡೆಗೆ ಟಾಂಗ್ ನೀಡಲು ಬಿಜೆಪಿ ಭರ್ಜರಿ ಪ್ರಚಾರ
ಚಿಕ್ಕೋಡಿ , ಶನಿವಾರ, 20 ಏಪ್ರಿಲ್ 2019 (14:30 IST)
ಕಳೆದ ಚುನಾವಣೆಯಲ್ಲಿ ಕೈ ವಶವಾಗಿದ್ದ ಕ್ಷೇತ್ರವನ್ನು ಪಡೆದುಕೊಳ್ಳಲು ಬಿಜೆಪಿ ಹವಣಿಸುತ್ತಿದ್ದು, ಭರ್ಜರಿ ಪ್ರಚಾರ ನಡೆಸಿತು.

ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ್ ಜೊಲ್ಲೆ ಅಬ್ಬರದ ಪ್ರಚಾರಕ್ಕೆ ಇಳಿದಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೈ ವಶವಾದ ಬೆಳಗಾವಿ ಜಿಲ್ಲೆಯ ಅಥಣಿ ಮತಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ಬಹಿರಂಗ ಪ್ರಚಾರಕ್ಕೆ ನಾಳೆ ತೆರೆಬೀಳಲಿದ್ದು, ಮಾಜಿ ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಬಿಜೆಪಿಯ ಬೆಂಬಲಿಗರು ಮತ್ತು ಪುರಸಭೆ ಸದಸ್ಯರೊಂದಿಗೆ ತೆರೆದ ವಾಹನದಲ್ಲಿ ಕಾರ್ಯಕರ್ತರ ಜೊತೆ ತೆರಳಿದ ಅಣ್ಣಾಸಾಬ್ ಜೊಲ್ಲೆ ಬಿಜೆಪಿ ಪಕ್ಷದ ಕಮಲದ ಗುರುತಿಗೆ ಮತ ನೀಡಿ ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡುವ ಮೂಲಕ ಮತಬೇಟೆ ನಡೆಸಿದರು.

ಪಟ್ಟಣದ ಪ್ರಮುಖ ನಗರಗಳಲ್ಲಿ ಸಂಚರಿಸಿದ ಬಿಜೆಪಿ ಪಕ್ಷದ ಅಭ್ಯರ್ಥಿ ಅಣ್ಣಾಸಾಬ ಜೋಲ್ಲೆಗೆ ಲಕ್ಷ್ಮಣ ಸವದಿ ಮತ್ತು ಕಾರ್ಯಕರ್ತರು ಸಾಥ್ ನೀಡಿ ಮತ ಯಾಚಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಶಿವಮೊಗ್ಗಕ್ಕೆ ಹೆಚ್.ಡಿ.ಡಿ.ತೆರಳಿದ್ಯಾಕೆ?