Publish Date: Tue, 18 Aug 2020 (18:03 IST)
Updated Date: Tue, 18 Aug 2020 (18:06 IST)
ರಾಜ್ಯದ ಸಚಿವ ಸಂಪುಟ ವಿಸ್ತರಣೆ ಮತ್ತೆ ಬಿಸಿ ಬಿಸಿ ಚರ್ಚೆಗೆ ಕಾರಣವಾಗುತ್ತಿದೆ.
ಈ ನಡುವೆ ಸಚಿವ ಸ್ಥಾನದ ಆಕಾಂಕ್ಷಿಗಳು ತಮ್ಮದೇ ದಾರಿಯಲ್ಲಿ ಯತ್ನ ಮುಂದುವರಿಸಿದ್ದು, ದೆಹಲಿ ಕದ ತಟ್ಟುತ್ತಿದ್ದಾರೆ.
ಕೊರೊನಾ ವೈರಸ್ ನಿಂದ ಸಿಎಂ ಬಿ.ಎಸ್.ಯಡಿಯೂರಪ್ಪನವರು ಗುಣಮುಖರಾಗಿದ್ದರಿಂದಾಗಿ ರಾಜಕೀಯ ಚಟುವಟಿಕೆಗಳು ಬಿಜೆಪಿಯಲ್ಲಿ ಬಿರುಸುಗೊಂಡಿವೆ.
ಮೈತ್ರಿ ಸರಕಾರ ಪತನಕ್ಕೆ ಕಾರಣರಾದವರಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಎಂಟಿಬಿ ನಾಗರಾಜು, ಆರ್. ಶಂಕರ್, ವಿಶ್ವನಾಥ್ ಹೆಸರು ಪ್ರಬಲವಾಗಿಕೇಳಿಬರುತ್ತಿದೆ.
ಇನ್ನು ಆಯಕಟ್ಟಿನ ಹುದ್ದೆಗೆ ಸಿ.ಪಿ. ಯೋಗೀಶ್ವರ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಯತ್ನ ಮುಂದುವರಿಸಿದ್ದಾರೆ ಎನ್ನಲಾಗಿದೆ.