Select Your Language

Notifications

webdunia
webdunia
webdunia
Tuesday, 8 April 2025
webdunia

ತನ್ನದೇ ರಿಸರ್ವ್ ಬ್ಯಾಂಕ್, ಕರೆನ್ಸಿ ಬಿಡುಗಡೆ ಮಾಡಲು ಹೊರಟ ನಿತ್ಯಾನಂದ ಸ್ವಾಮಿ

ನಿತ್ಯಾನಂದ ಸ್ವಾಮಿ
ನವದೆಹಲಿ , ಮಂಗಳವಾರ, 18 ಆಗಸ್ಟ್ 2020 (11:07 IST)
ನವದೆಹಲಿ: ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ತನ್ನ ಈಕ್ವೆಡಾರ್ ದ್ವೀಪದಲ್ಲಿ ತನ್ನದೇ ದೇಶ ನಿರ್ಮಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿರುತ್ತದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ನಿತ್ಯಾನಂದ ತನ್ನದೇ ಕರೆನ್ಸಿ, ರಿಸರ್ವ್ ಬ್ಯಾಂಕ್ ಸ್ಥಾಪಿಸಲು ಹೊರಟಿದ್ದಾನೆ.


ಇದೇ ಬರುವ ಗಣೇಶೋತ್ಸವದಂದು ನಿತ್ಯಾನಂದ ತನ್ನದೇ ಮುಖ ಚಿತ್ರವಿರುವ ಹೊಸ ಕರೆನ್ಸಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾನೆ. ಇಲ್ಲಿ ಎಲ್ಲಾ ಹಣಕಾಸಿನ ವ್ಯವಹಾರವೂ ಪಾರದರ್ಶಕವಾಗಿ ನಡೆಯಲಿದೆ ಎಂದಿದ್ದಾನೆ.

ತಾನು ಬಿಡುಗಡೆ ಮಾಡಲಿರುವ ನೋಟುಗಳು ಕಾನೂನುಬದ್ಧವಾಗಿದ್ದು, ಅದನ್ನು ಇತರ ದೇಶಗಳ ಜತೆ ವಿನಿಮಯಗೊಳಿಸಲು ಸಾಧ್ಯವಾಗುವಂತೆ ಮಾಡುವುದಾಗಿ ಹೇಳಿಕೊಂಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೀಮೆಎಣ್ಣೆ ಸುರಿದು ಗಂಡನಿಗೆ ಬೆಂಕಿ ಹಚ್ಚಿದ 2ನೇ ಪತ್ನಿ