Select Your Language

Notifications

webdunia
webdunia
webdunia
webdunia

ಸುಮಲತಾ ಬಗ್ಗೆ ನಿಖಿಲ್ ಹೇಳಿದ್ದೇನು?

ಸುಮಲತಾ ಬಗ್ಗೆ ನಿಖಿಲ್ ಹೇಳಿದ್ದೇನು?
ಚಿಕ್ಕಮಗಳೂರು , ಮಂಗಳವಾರ, 19 ಮಾರ್ಚ್ 2019 (11:55 IST)
ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಎಲ್ಲಾ ನಮ್ಮ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಶಾರದಾಂಬೆಗೆ ಪೂಜೆ ಸಲ್ಲಿಸಿದ್ದೇವೆ. ನಮ್ಮ ರಾಷ್ಟ್ರಾಧ್ಯಕ್ಷರು ಎಲ್ಲರಿಗೂ ಬಿ ಫಾರಂ ನೀಡಿದ್ದಾರೆ. ಎಲ್ಲಾ ಅಭ್ಯರ್ಥಿಗಳಿಗೂ ಒಳ್ಳೇಯದಾಗಲಿ ಅಂತಾ ಶಾರದಾಂಬೆಯ ಬಳಿ ಕೇಳಿಕೊಂಡಿದ್ದೇವೆ. ಹೀಗಂಗ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ನಾಮಪತ್ರವನ್ನು ಶಾರದಾಂಬೆಯ ಸನ್ನಿಧಿಯಲ್ಲಿಟ್ಟು ಪೂಜೆ ಮಾಡಲಾಗಿದೆ ಎಂದರು. ಇನ್ನು ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ನಿಖಿಲ್, ಅವರಿಗೆ ಒಳ್ಳೇದಾಗಲಿ ಎಂದರು. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ನಿಖಿಲ್ ಈ ಹೇಳಿಕೆ ನೀಡಿದ್ರು. ಮಂಡ್ಯ ಜನತೆಗೆ ಕುಮಾರಣ್ಣಾ ಎನು ಎಂಬುದು ಗೊತ್ತಿದೆ.

ಮಂಡ್ಯ ಜನತೆಯ ಜೊತೆಗಿನ ನಮ್ಮ ತಂದೆಯ ಬಾಂಧವ್ಯ ಜನತೆಗೆ ಗೊತ್ತಿದೆ. ಮಂಡ್ಯ ಜನರ ಪ್ರೀತಿ ಉಳಿಸಿಕೊಳ್ಳಲು ನಾನು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ ಅಂತ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಹೇಳಿದ್ರು.


Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷಾಂತರ ಮೌಲ್ಯದ ಗಾಂಜಾ ಎಲ್ಲಿ ಸಿಕ್ತು?