Publish Date: Tue, 19 Mar 2019 (10:43 IST)
Updated Date: Tue, 19 Mar 2019 (10:45 IST)
ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ನಡೆಸುತ್ತಿರುವ ಚಿತ್ರ ನಟ ಈವರೆಗೆ ಎಷ್ಟು ಚುನಾವಣೆಗಳಲ್ಲಿ ಪ್ರಚಾರ ನಡೆಸಿದ್ದಾರೆ ಅಂತ ಅವರೇ ಹೇಳಿಕೊಂಡಿದ್ದಾರೆ.
ಅಂಬರೀಶ್ ಕೊಟ್ಟಿರುವ ಕೊಡುಗೆಗಳನ್ನು ಮುಂದಿಟ್ಟುಕೊಂಡು ಸ್ಪರ್ಧೆ ಮಾಡ್ತಿದ್ದಾರೆ ಸುಮಲತಾ. ಇದನ್ನೇ ಮುಂದಿಟ್ಟುಕೊಂಡು ಅಮ್ಮ ಸ್ಪರ್ಧಿಸುತ್ತಿದ್ದಾರೆ ಅಂತ ನಟ ದರ್ಶನ್ ಹೇಳಿಕೆ ನೀಡಿದ್ದಾರೆ.
ನಾವು ಒಳ್ಳೆಯ ದೃಷ್ಟಿ ಇಟ್ಟುಕೊಂಡು ಅವರ ಜೊತೆ ಹೋಗ್ತೇವೆ. ಬೇರೆಯವರನ್ನ ಬೊಟ್ಟುಮಾಡಿ ನಾವು ಹೋಗಲ್ಲ.
ಮನೆಯ ಮಕ್ಕಳಾಗಿ ನಾವು ಅವರನ್ನ ಬೆಂಬಲಿಸುತ್ತಿದ್ದೇವೆ ಎಂದಿದ್ದಾರೆ.
ಇನ್ನು ನಾನು ಈಗಾಗಲೇ ನಾಲ್ಕು ಎಲೆಕ್ಷನ್ ಗಳನ್ನು ಮಾಡಿದ್ದೇನೆ. ಒಂದು ಎಂಪಿ, ಮೂರು ಎಂಎಲ್ ಎ ಎಲೆಕ್ಷನ್ ಪ್ರಚಾರ ಮಾಡಿದ್ದೇನೆ. ಬೇರೆಯವರ ಬಗ್ಗೆ ಹೋಗಿ ಪ್ರಚಾರ ಮಾಡಿ ಅಂದ್ರು ಹೋಗಿದ್ದೆ. ಅಪ್ಪಾಜಿನೇ ಹೇಳಿದ್ರು ನಾನು ಹೋಗಿದ್ದೆ ಅಂತ ನಟ ದರ್ಶನ್ ಹೇಳಿದ್ದಾರೆ.