Select Your Language

Notifications

webdunia
webdunia
webdunia
webdunia

ನೂರಕ್ಕೆ ನೂರರಷ್ಟು ಬಹುಮತವನ್ನು ಸಾಬೀತು ಪಡಿಸುತ್ತೇವೆ

ನೂರಕ್ಕೆ ನೂರರಷ್ಟು ಬಹುಮತವನ್ನು ಸಾಬೀತು ಪಡಿಸುತ್ತೇವೆ
ಬೆಂಗಳೂರು , ಶನಿವಾರ, 27 ಜುಲೈ 2019 (10:46 IST)
ಬೆಂಗಳೂರು : ಸೋಮವಾರ ನೂರಕ್ಕೆ ನೂರರಷ್ಟು ಬಹುಮತವನ್ನು ಸಾಬೀತು ಪಡಿಸುತ್ತೇವೆ  ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.




ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು,  ನೂರಕ್ಕೆ ನೂರರಷ್ಟು ಬಹುಮತವನ್ನು ಸಾಬೀತು ಪಡಿಸುತ್ತೇವೆ. ಸಿಎಂ ಬಿಎಸ್ ಯಡಿಯೂರಪ್ಪ ಒಬ್ಬ ಹೋರಾಟಗಾರ. ಸ್ವಪ್ರಯತ್ನದಿಂದ ರೈತನಾಯಕನಾಗಿ ಹೊರಹೊಮ್ಮಿದವರು. ಬಂದ ತಕ್ಷಣ ರೈತರ ಪರವಾದ ನಿರ್ಣಯ ಕೈಗೊಂಡಿದ್ದಾರೆ. ಬಡವರು, ಕೂಲಿ ಕಾರ್ಮಿಕರು, ನೇಕಾರರಿಗೆ ಆದ್ಯತೆ ನೀಡ್ತಾರೆ ಎಂದು ಅವರು ತಿಳಿಸಿದ್ದಾರೆ.


ಹಾಗೇ ಈ ಬಗ್ಗೆ ಮಾತನಾಡಿದ  ಸಂಸದೆ ಶೋಭಾ ಕರಂದ್ಲಾಜೆ ಅವರು, ಬಿಜೆಪಿ ಪಕ್ಷ ಸೋಮವಾರ ಸುಲಭವಾಗಿ ಬಹುಮತ ಸಾಬೀತುಪಡಿಸಲಿದೆ, ಸ್ವತಂತ್ರ್ಯ ಸರ್ಕಾರ ಬಿಜೆಪಿಯ ಆದ್ಯತೆ ಹೀಗಾಗಿ 'ನಮಗೆ ಜೆಡಿಎಸ್ ಬಾಹ್ಯ ಬೆಂಬಲ ಬೇಕಿಲ್ಲ, ಅದರ ಅವಶ್ಯಕತೆಯೂ ನಮಗಿಲ್ಲ' ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನೂತನ ಸಿಎಂ ಯಡಿಯೂರಪ್ಪಗೆ ಶುಭ ಕೋರಿದ ಉಪೇಂದ್ರ, ಅಚ್ಚರಿಯ ಸಂದೇಶ ನೀಡಿದ ದೇವೇಗೌಡರು