Publish Date: Sat, 27 Jul 2019 (06:36 IST)
Updated Date: Sat, 27 Jul 2019 (06:39 IST)
ಬೆಂಗಳೂರು : ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಆದರೆ ಪದೇ ಪದೇ ಸಮಸ್ಯೆಗಳು ಒದಗಿ ಬರುತ್ತಿದ್ದರೆ ಅಂತಹ ಮನುಷ್ಯ ಜೀವನದಲ್ಲಿ ಮೇಲೆಳಲು ಕಷ್ಟವಾಗುತ್ತದೆ. ಅಂತವರು ಈ ಪರಿಹಾರವನ್ನು ಮಾಡಿದರೆ ಈ ಸಮಸ್ಯೆಗಳ ಕಾಟದಿಂದ ಮುಕ್ತಿ ಹೊಂದಬಹುದು.
ಒಂದು ಬಿಳಿ ಬಟ್ಟೆಯ ತುಂಡನ್ನು ತೆಗೆದು ಕೊಂಡು ಚೆನ್ನಾಗಿ ತೊಳೆದು ,ಅದನ್ನು ಅರಶಿಣದಲ್ಲಿ ಅದ್ದಿ ದೇವರ ಮುಂದೆ ಇರಿಸಿ ದೇವರ ಪೂಜೆ ಮಾಡಿ ನಂತರ ಒಂದೆರಡು ನಾಣ್ಯಗಳನ್ನು ಅದರಲ್ಲಿ ಹಾಕಿ ,ನಿಮ್ಮ ಕಷ್ಟಗಳು ಪರಿಹಾರವಾಗಬೇಕೆಂದು ಬೇಡಿಕೊಳ್ಳಬೇಕು. ನಾಲ್ಕು ವಾರಗಳ ನಂತರ ಅದನ್ನು ಹರಿಯುವ ನೀರಿಗೆ ಹಾಕಬೇಕು ಅಥವಾ ಎಕ್ಕದ ಗಿಡಕ್ಕೆ ಕಟ್ಟಬೇಕು. ಇದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.
ಹಾಗೇ ಒಂದು ಸಣ್ಣ ರಾಗಿ ಪಾತ್ರೆ ತುಂಬ ನೀರನ್ನು ತುಂಬಿಸಿ , ಸ್ವಲ್ಪ ಚಂದನವನ್ನು ಅದರಲ್ಲಿ ಬೆರೆಸಿ ,ತೊಂದರೆ ಯಾರಿಗೆ ಇರುತ್ತದೆಯೋ ಆ ವ್ಯಕ್ತಿಯ ಮಂಚದ ಕೆಳಗೆ ಇರಿಸಿ ಮತ್ತು ಬೆಳಗ್ಗೆ ಎದ್ದ ಮೇಲೆ ಸ್ನಾನ ಮಾಡಿ ಆ ನೀರನ್ನು ತುಳಸಿ ಗಿಡಕ್ಕೋ ಅಥವಾ ಯಾವುದಾದರೂ ಹೂವಿನ ಗಿಡಕ್ಕೆ ಸುರಿಯಿರಬೇಕು. ಹೀಗೆ ಮಾಡಿದರೂ ಕೂಡ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ.