Select Your Language

Notifications

webdunia
webdunia
webdunia
webdunia

ನೂತನ ಸಿಎಂ ಯಡಿಯೂರಪ್ಪಗೆ ಶುಭ ಕೋರಿದ ಉಪೇಂದ್ರ, ಅಚ್ಚರಿಯ ಸಂದೇಶ ನೀಡಿದ ದೇವೇಗೌಡರು

ನೂತನ ಸಿಎಂ ಯಡಿಯೂರಪ್ಪಗೆ ಶುಭ ಕೋರಿದ ಉಪೇಂದ್ರ, ಅಚ್ಚರಿಯ ಸಂದೇಶ ನೀಡಿದ ದೇವೇಗೌಡರು
ಬೆಂಗಳೂರು , ಶನಿವಾರ, 27 ಜುಲೈ 2019 (09:21 IST)
ಬೆಂಗಳೂರು: ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಿಎಸ್ ಯಡಿಯೂರಪ್ಪಗೆ ರಿಯಲ್ ಸ್ಟಾರ್ ಉಪೇಂದ್ರ ಶುಭ ಕೋರಿದ್ದಾರೆ.


ಟ್ವಿಟರ್ ನಲ್ಲಿ ಶುಭ ಕೋರಿರುವ ಉಪೇಂದ್ರ ‘ಕರ್ನಾಟಕದ ನೂತನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಶುಭಾಷಯಗಳು’ ಎಂದು ಬರೆದುಕೊಂಡಿದ್ದಾರೆ. ಪ್ರಜಾಕೀಯ ಪಕ್ಷದ ಸಂಸ್ಥಾಪಕರೂ ಆಗಿರುವ ಉಪೇಂದ್ರ ಸದ್ಯಕ್ಕೆ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

ಅಷ್ಟೇ ಅಲ್ಲ, ಬಿಎಸ್ ಯಡಿಯೂರಪ್ಪನವರಿಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರಿಂದಲೂ ಶುಭಾಷಯ ಬಂದಿದೆ. ರಾಜಕೀಯವಾಗಿ ಎಷ್ಟೇ ವೈರುಧ್ಯವಿದ್ದರೂ ದೇವೇಗೌಡರು ನೂತನ ಸಿಎಂಗೆ ಶುಭ ಕೋರಿ ಅಚ್ಚರಿ ಮೂಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆತುರಪಟ್ಟು ಅಧಿಕಾರಕ್ಕೇರಿದರೇ ಬಿಎಸ್ ಯಡಿಯೂರಪ್ಪ?