Select Your Language

Notifications

webdunia
webdunia
webdunia
webdunia

ಯಡಿಯೂರಪ್ಪಗೆ ಸಿಎಂ ಆದ ಬೆನ್ನಲ್ಲೇ ಶುರುವಾಯ್ತು ಸಂಕಟ

ಯಡಿಯೂರಪ್ಪಗೆ ಸಿಎಂ ಆದ ಬೆನ್ನಲ್ಲೇ ಶುರುವಾಯ್ತು ಸಂಕಟ
ಹಾವೇರಿ , ಶುಕ್ರವಾರ, 26 ಜುಲೈ 2019 (19:13 IST)
ಬಿ.ಎಸ್.ಯಡಿಯೂರಪ್ಪ ಏಕಾಂಗಿಯಾಗಿ ಸಿಎಂಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ಹೊಸ ಸಂಕಷ್ಟಗಳು ಶುರುವಾಗಿವೆ.

ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ನನಗೂ ಸಚಿವ ಸ್ಥಾನ ಬೇಕು ಅಂತ ಶಾಸಕರು ಬಹಿರಂಗವಾಗಿ ಒತ್ತಾಯ ಮಾಡಲು ಶುರುಮಾಡಿದ್ದಾರೆ. ಇದು ಬಿಜೆಪಿ ನಾಯಕರ ತಲೆನೋವಿಗೆ ಕಾರಣವಾಗುತ್ತಿದೆ.

ಈ ಹಿಂದಿನ ಬಿಜೆಪಿ ಆಡಳಿತ ಅವಧಿಯಲ್ಲಿ ಸಚಿವ ಸ್ಥಾನವನ್ನು ಕೊಟ್ಟಿದ್ದಿಲ್ಲ. ಹೀಗಾಗಿ ಈ ಸಲ ನನ್ನನ್ನು ಸಚಿವನನ್ನಾಗಿ ಪಕ್ಷದ ವರಿಷ್ಠರು ಮಾಡುತ್ತಾರೆ. ಹೀಗಂತ ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಹಾಗೂ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದು ಸಂತಸ ತಂದಿದೆ ಅಂದಿರೊ ಅವರು, ಸಚಿವ ಸಂಪುಟದಲ್ಲಿ ಈ ಬಾರಿ ತಮಗೆ ಅವಕಾಶ ಸಿಗಲಿದೆ ಎಂದು ಹೇಳಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಎದೆತೋರಿಸಿ ಅವಳು ಅರ್ಚಕನಿಗೆ ಮಾಡಿದ್ದೇನು?