ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತ ದುರಂತ ಜನರ ಮನಸ್ಸಿನಿಂದ ಮಾಸಿಲ್ಲ. ಇಂತಹ ದುರ್ಘಟನೆಗಳಾಗದಂತೆ ನಮ್ಮನ್ನು ರಕ್ಷಿಸಿಕೊಳ್ಳಬೇಕು ಎಂದರೆ ಈ ವೈರಲ್ ವಿಡಿಯೋ ನೋಡಿ.
ಸೂಜಿ ಕೂಡಾ ಬೀಳದಷ್ಟು ವಿಪರೀತ ಜನಸಂದಣಿಯಾದಾಗ ಜನರು ಮಾಡುವ ಒಂದೇ ಒಂದು ತಪ್ಪು ಕೂಡಾ ದುರಂತಕ್ಕೆ ಕಾರಣವಾಗುತ್ತದೆ. ಒಬ್ಬ ಮುಗ್ಗರಿಸಿ ಬಿದ್ದರೂ ಸಾಕಷ್ಟು ಜನ ಅವರ ಮೇಲೆ ಬಿದ್ದು ಅಪಾಯವಾಗಿಬಿಡುತ್ತದೆ.
ಚಿನ್ನಸ್ವಾಮಿ ಮೈದಾನದಲ್ಲೂ ಇದೇ ಆಗಿದ್ದು. ಗೇಟ್ ಒಳಗೆ ನುಗ್ಗುವ ಭರದಲ್ಲಿ ಒಬ್ಬರು ತಳ್ಳಾಟ ನಡೆಸಿದಾಗ ಇಡೀ ಸಮೂಹವೇ ತೊಂದರೆಗೆ ಸಿಲುಕಿತ್ತು. ಹೀಗೆ ಆಗದಂತೆ ನಾವು ಕೆಲವು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕಾಗುತ್ತದೆ.
ಕೆಳಕ್ಕೆ ಬಿದ್ದಾಗ ಅಂಗಾತ ಮಲಗಿದ ಸ್ಥಿತಿಯಲ್ಲಿರುವ ಬದಲು ಒಂದು ಬದಿಗೆ ಹೊರಳಿ ನಿಮ್ಮ ಎದೆಭಾಗಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬಹುದು. ಕಾಲುಗಳನ್ನು ಒಂದರ ಹಿಂದೆ ಒಂದರಂತೆ ಇಟ್ಟುಕೊಂಡು ಬ್ಯಾಲೆನ್ಸ್ ಮಾಡಿಕೊಂಡು ನಿಲ್ಲಬೇಕು. ಈ ರೀತಿ ಇಲ್ಲಿ ನಿಡಲಾಗಿರುವ ವಿಡಿಯೋದಲ್ಲಿ ಕಾಲ್ತುಳಿತವಾದಾಗ ನಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ವಿವರವಾಗಿ ತಿಳಿಸಲಾಗಿದೆ.