Select Your Language

Notifications

webdunia
webdunia
webdunia
webdunia

ಮೇಯರ್ ಆದ ಬೆನ್ನಲ್ಲೇ ಗೌತಮ್ ಕುಮಾರ್ ಗೆ ಪ್ರತಿಭಟನೆಯ ಬಿಸಿ

ವಾಟಾಳ್ ನಾಗರಾಜ್
ಬೆಂಗಳೂರು , ಮಂಗಳವಾರ, 1 ಅಕ್ಟೋಬರ್ 2019 (13:14 IST)
ಬೆಂಗಳೂರು: ನೂತನ ಮೇಯರ್ ಆಗಿ ಆಯ್ಕೆಯಾಗುತ್ತಿದ್ದ ಬೆನ್ನಲ್ಲೇ ಗೌತಮ್ ಕುಮಾರ್ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.


ಗೌತಮ್ ಕುಮಾರ್ ಮೇಯರ್ ಆಗಿ ಆಯ್ಕೆಯಾಗುತ್ತಿದ್ದಂತೇ ಪ್ರತಿಭಟನೆ ಮಾಡಿರುವ ವಾಟಾಳ್ ನಾಗರಾಜ್ ಬೆಂಗಳೂರನ್ನು ಮಾರ್ವಾಡಿಗಳ ಕೈಗಿಡಲಾಗಿದೆ. ಬೆಂಗಳೂರಿನಲ್ಲಿ ಕನ್ನಡಿಗರದ್ದೇ ಅಧಿಕಾರವಿರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೌತಮ್ ಕುಮಾರ್ ಮಾರ್ವಾಡಿ ಹಿನ್ನಲೆಯವರು ಎಂದಿರುವ ವಾಟಾಳ್ ಕರ್ನಾಟಕ ರಾಜಧಾನಿಯಲ್ಲಿ ಮಲಯಾಳಿಗಳು, ತಮಿಳರು, ಮಾರ್ವಾಡಿಗಳು ಇವರದ್ದೇ ಆಧಿಪತ್ಯವಾಗುತ್ತಿದೆ. ಇಲ್ಲಿ ಕನ್ನಡಿಗರಿಗೇ ಆದ್ಯತೆಯಿರಬೇಕು ಎಂದು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಚುನಾವಣೆ: ಬಿಜೆಪಿ ಅಭ್ಯರ್ಥಿ ಗೌತಮ್ ಕುಮಾರ್ ನೂತನ ಮೇಯರ್