Publish Date: Mon, 19 Aug 2019 (21:15 IST)
Updated Date: Mon, 19 Aug 2019 (21:17 IST)
ನಾನೂ ಸಾವಿರಾರು ಟ್ವೀಟ್ ಮಾಡಬಲ್ಲೆ. ಆದರೆ ಅದು ಮುಖ್ಯವಲ್ಲ. ನಿಮ್ಮ ಮಕ್ಕಳನ್ನು ಕಂಟ್ರೋಲ್ ನಲ್ಲಿಡಿ. ಹೀಗಂತ ಹಾಲಿ ಸಿಎಂಗೆ ಮಾಜಿ ಸಿಎಂ ಸಲಹೆ ನೀಡಿದ್ದಾರೆ.
ವರ್ಗಾವಣೆ ಬಗ್ಗೆ ಹಿಂದಿನ ಸರಕಾರ ಹಾಗೂ ಮಾಜಿ ಸಿಎಂರನ್ನು ಸಿಎಂ ಬಿ.ಎಸ್.ಯಡಿಯೂರಪ್ಪರ ಪುತ್ರ ವಿಜಯೇಂದ್ರ ಟೀಕೆ ಮಾಡಿದ್ದರು. ಇದಕ್ಕೆ ಗರಂ ಹೆಚ್.ಡಿ.ಕೆ. ಗರಂ ಆಗಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರೇ ನಿಮ್ಮ ಮಕ್ಕಳನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಿ ಎಂದಿದ್ದಾರೆ. ನಿಮ್ಮ ಮಕ್ಕಳು ವ್ಯಾಪಾರ ಮಾಡಲು ಮುಂದಾದ್ರೆ ಈ ಹಿಂದೆ ನೀವು ಜೈಲಿಗೆ ಹೋದಂತೆ ಮುಂದೆಯೂ ಹೋಗಬಹುದು ಅಂತ ಎಚ್ಚರಿಕೆ ನೀಡಿದ್ದಾರೆ.
ಟ್ವೀಟ್ ಮಾಡೋದನ್ನು ಮೊದಲು ಬಿಡಿ. ಸ್ವಲ್ಪನಾದ್ರೂ ಮರ್ಯಾದೆಯಿಂದ ಬದುಕಿರಿ ಅಂತೆಲ್ಲ ಹರಿಹಾಯ್ದಿದ್ದಾರೆ.