Publish Date: Mon, 19 Aug 2019 (20:42 IST)
Updated Date: Mon, 19 Aug 2019 (20:45 IST)
ಅಕ್ರಮ ಹಾಗೂ ಸಮಾಜಘಾತುಕ ಕೆಲಸ ಮಾಡೋರ ಮೇಲೆ ಮುಲಾಜಿಲ್ಲದೇ ಕಠಿಣ ಕ್ರಮ ಗ್ಯಾರಂಟಿ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಸಮಾಜಸ್ನೇಹಿ ಪೊಲೀಸ್ ವ್ಯವಸ್ಥೆಗೆ ನಿರ್ಮಾಣವಾಗಬೇಕೆಂದರೆ ಅದಕ್ಕೆ ಜನರೂ ಸಾಥ್ ನೀಡಬೇಕು. ಹೀಗಂತ ನೆಲಮಂಗದಲ್ಲಿ ಹಮ್ಮಿಕೊಂಡಿದ್ದ ಸಮಾರಂಭವೊಂದರಲ್ಲಿ ಹೇಳಿದ್ರು.
ಬೆಂಗಳೂರು ಗ್ರಾಮಾಂತರದ ನೂತನ ಎಸ್.ಪಿ ಆಗಿರೋ ರವಿ.ಡಿ.ಚನ್ನಣ್ಣನವರ್, ಗಾಂಜಾ, ಅಕ್ರಮ ಮದ್ಯ, ಟ್ರಾಫಿಕ್, ರೌಡಿಸಂ ಮಾಡೋರಿಗೆ ಕಾನೂನು ಸರಿಯಾದ ಪಾಠ ಕಲಿಸುತ್ತೆ ಅಂದಿದ್ದಾರೆ.
ನಿಯಮ ಮೀರೋ ವಾಹನಗಳ ಸವಾರರಿಗೆ, ಚಾಲಕರಿಗೂ ಖಡಕ್ ಬಿಸಿ ಮುಟ್ಟಿಸೋದಾಗಿ ಹೇಳಿದ್ರು.