Select Your Language

Notifications

webdunia
webdunia
webdunia
webdunia

ಅಂಗಡಿಗೆ ಹೋದ ಅಪ್ರಾಪ್ತ ಬಾಲಕಿಗೆ ಬಂತು ಮೈತುಂಬ ರಕ್ತ

ಅಂಗಡಿಗೆ ಹೋದ ಅಪ್ರಾಪ್ತ ಬಾಲಕಿಗೆ ಬಂತು ಮೈತುಂಬ ರಕ್ತ
ದಾವಣಗೆರೆ , ಸೋಮವಾರ, 19 ಆಗಸ್ಟ್ 2019 (20:11 IST)
ಅಂಗಡಿಗೆ ವಸ್ತುಗಳನ್ನು ತರಲು ಹೋಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಗಂಭೀರ ಗಾಯಗೊಂಡಿದ್ದಾಳೆ.

ಬಾಲಕಿ ಮೇಲೆ ಬೀದಿ‌ನಾಯಿಗಳು ದಾಳಿ ನಡೆಸಿದ್ದು, ದಾಳಿಯಲ್ಲಿ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ದಾವಣಗೆರೆ ನಗರದ ದೇವರಾಜ್ ಅರಸ್ ಬಡಾವಣೆ ಎ ಬ್ಲಾಕ್ 8ನೇ ಕ್ರಾಸ್ ನಲ್ಲಿ‌ ನಡೆದಿದೆ.

ಕಿರಣ್ ಅವರ ಪುತ್ರಿ ಖುಷಿ (8) ಗಾಯಗೊಂಡಿರುವ ಬಾಲಕಿಯಾಗಿದ್ದಾಳೆ. ಬೆಳಿಗ್ಗೆ ಅಂಗಡಿಗೆ ವಸ್ತುಗಳನ್ನು ತರಲು ಹೋದ ಸಂದರ್ಭದಲ್ಲಿ ಐದಾರು ಬೀದಿ ನಾಯಿಗಳು ಬಾಲಕಿ ಮೇಲೆ ಎರಗಿ ಕಚ್ಚಿ ಗಾಯಗೊಳಿಸಿವೆ, ಭುಜ, ಕೈ ಸೇರಿದಂತೆ ಎರಡ್ಮೂರು ಕಡೆ ಕಚ್ಚಿದ್ದು, ಸ್ಥಳೀಯರು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಬಾಲಕಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ‌.

ದೇವರಾಜ್ ಅರಸ್ ಬಡಾವಣೆಯಲ್ಲಿ ಬೀದಿನಾಯಿಗಳು, ಹಂದಿಗಳ ಉಪಟಳ ಹೆಚ್ಚಿದೆ.  ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಲವಾರು ಸಲ ದೂರು ನೀಡಲಾಗಿದೆ. ಆದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಈ ಕೂಡಲೇ ಬೀದಿ‌ನಾಯಿಗಳು, ಹಂದಿಗಳನ್ನು ಹಿಡಿದು ಸ್ಥಳಾಂತರಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಫೋನ್ ಟ್ಯಾಪಿಂಗ್: ಹೆಚ್.ಡಿ.ದೇವೇಗೌಡ್ರು ಸಿಡಿಸಿದ್ರು ಹೊಸ ಬಾಂಬ್