Select Your Language

Notifications

webdunia
webdunia
webdunia
Saturday, 12 April 2025
webdunia

ದೇಗುಲದ ಹುಂಡಿಯನ್ನೇ ಹೊತ್ತೊಯ್ದ ಖದೀಮರು!

ದೇವಸ್ಥಾನ
ಚಿತ್ರದುರ್ಗ , ಭಾನುವಾರ, 17 ಫೆಬ್ರವರಿ 2019 (11:28 IST)
ಖತರ್ನಾಕ್ ಕಳ್ಳರು ದೇಗುಲಕ್ಕೆ ಕನ್ನ ಹಾಕಿದ್ದಾರೆ.

ದೇಗುಲಕ್ಕೆ ಕನ್ನ ಹಾಕಿರುವ ಖದೀಮರು ದೇವಸ್ಥಾನದ ಹುಂಡಿಯನ್ನೇ ಹೊತ್ತೊಯ್ದಿದ್ದಾರೆ. ಗ್ರಾಮದೇವತೆ ಮಾರಮ್ಮ ದೇವಸ್ಥಾನದ ಹುಂಡಿ ಕಳ್ಳತನವಾಗಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಹುಂಡಿಯ ಚೈನ್ ಕತ್ತರಿಸಿ ಹುಂಡಿಯನ್ನು ಹೊತ್ತಯ್ದ ಕಳ್ಳರು ಪರಾರಿಯಾಗಿದ್ದಾರೆ. ತಡರಾತ್ರಿ ನಡೆದಿರುವ ಘಟನೆ ಇದಾಗಿದೆ. ಕಳ್ಳರ ಕೃತ್ಯಕ್ಕೆ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ. ಚಳ್ಳಕೆರೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಪ್ರಸಿದ್ಧ ಕುಂಭಮೇಳಕ್ಕೆ ಕ್ಷಣಗಣನೆ