Select Your Language

Notifications

webdunia
webdunia
webdunia
webdunia

ಪ್ರಚಾರಕ್ಕೆ ಹೋದ ಬಿಜೆಪಿ ಅಭ್ಯರ್ಥಿಗೆ ಮಂಗಳಾರತಿ ಮಾಡಿದ ಮಹಿಳೆಯರು

ಪ್ರಚಾರಕ್ಕೆ ಹೋದ ಬಿಜೆಪಿ ಅಭ್ಯರ್ಥಿಗೆ ಮಂಗಳಾರತಿ ಮಾಡಿದ ಮಹಿಳೆಯರು
ಮಂಡ್ಯ , ಶುಕ್ರವಾರ, 22 ನವೆಂಬರ್ 2019 (19:27 IST)
ಉಪಚುನಾವಣೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ಬಿಜೆಪಿ ಅಭ್ಯರ್ಥಿಗೆ ಮಹಿಳೆಯರು ಮಂಗಳಾರತಿ ಮಾಡಿರೋ ಘಟನೆ ನಡೆದಿದೆ.

ಮಂಡ್ಯದ ಸಿಂದಘಟ್ಟ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಬಿರುಸಿನ ಮತ ಪ್ರಚಾರ ನಡೆಸಿದರು.

ಹರಳಹಳ್ಳಿ ಕೆರೆಯಿಂದ ಶೀಳನೆರೆ ಹೋಬಳಿಯ ಕೆರೆ ಕಟ್ಟೆಗಳನ್ನು ತುಂಬಿಸಲು ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದೇನೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ  ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮಂಡ್ಯಕೆ.ಆರ್.ಪೇಟೆಯನ್ನು ಜಿಲ್ಲೆಯಲ್ಲಿಯೇ ಮಾದರಿಯಾಗಿ ಅಭಿವೃದ್ಧಿಪಡಿಸಲು 
ನನ್ನನ್ನು ಹರಸಿ ಆಶೀರ್ವದಿಸಿ ಎಂದ್ರು.

ತಾಲ್ಲೂಕಿನಲ್ಲಿ ಕಮಲಕ್ಕೆ ಮತ ನೀಡಿ ಗೆಲ್ಲಿಸಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈಬಲಪಡಿಸಿ ಎಂದು ನಾರಾಯಣಗೌಡ ಮನವಿ ಮಾಡಿದರು.

ಮತಯಾಚನೆಗಾಗಿ ಮನೆ ಬಾಗಿಲಿಗೆ ಬಂದ ಬಿಜೆಪಿ ಅಭ್ಯರ್ಥಿಯನ್ನು ಮುತ್ತೈದೆಯರು ಆರತಿ ಎತ್ತಿ ಸ್ವಾಗತಿಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಒಂದು ಪೈಸೆ ಹಣ ಪಡೆದಿಲ್ಲ – ದೇವ್ರಾಣೆ ಎಂದ ಬಿಜೆಪಿ ಅಭ್ಯರ್ಥಿ