Select Your Language

Notifications

webdunia
webdunia
webdunia
webdunia

ಜನರ ನಾಡಿಮಿಡಿತ ಗೊತ್ತೇ ಇಲ್ಲ ಎಂದ ಡಿಸಿಎಂ – ಬಿಜೆಪಿ ಅಭ್ಯರ್ಥಿಗೆ ಬಿಗ್ ಶಾಕ್

ಜನರ ನಾಡಿಮಿಡಿತ ಗೊತ್ತೇ ಇಲ್ಲ ಎಂದ ಡಿಸಿಎಂ – ಬಿಜೆಪಿ ಅಭ್ಯರ್ಥಿಗೆ ಬಿಗ್ ಶಾಕ್
ಅಥಣಿ , ಶುಕ್ರವಾರ, 22 ನವೆಂಬರ್ 2019 (19:15 IST)
ಅನರ್ಹ ಶಾಸಕ ಮಹೇಶ್ ಕುಮಠಳ್ಳಿಗೆ ಡಿಸಿಎಂ ಸಖತ್ ಶಾಕ್ ನೀಡಿದ್ದಾರೆ.
 

ಅಥಣಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದು, ಕಾಗವಾಡದಲ್ಲಿ ಡಿಸಿಎಂ ಸವದಿ ಗೆಳೆಯ ರಾಜು ಕಾಗೆ ಸ್ಪರ್ಧೆ ವಿಚಾರವಾಗಿ ಮಾತನಾಡಿದ್ದಾರೆ.

ಗೆಳೆಯ ಕಾಗೆ ಸೋಲಿಸಲು ಸಂಬಂಧಗಳ ಅಡ್ಡಿ ಇಲ್ಲ. ರಾಜಕಾರಣದಲ್ಲಿ ಸಂಬಂಧಿಕರು, ಸ್ನೇಹಿತರು ಇಲ್ಲ.
ಗೆರೆ ಎಳೆದು ರಾಜಕಾರಣ ಮಾಡ್ತೀನಿ ಎಂದ್ರು.

ಕಾಗವಾಡದಲ್ಲಿ ಶ್ರೀಮಂತ ಪಾಟೀಲರನ್ನ ಗೆಲ್ಲಿಸೋದೆ ನನ್ನ ಗುರಿ ಎಂದ ಸವದಿ, ಗೆಲವಿನ ಅಂತರ ಹೇಳಲು ಹಿಂದೇಟು ಹಾಕಿದ್ರು.
ಅಥಣಿಯಲ್ಲಿ ಕುಮಟಳ್ಳಿ ಗೆಲುವಿನ ಅಂತರ ಈಗಲೇ ಹೇಳಲು ಸಾಧ್ಯವಿಲ್ಲ ಅಂತಿರೋ ಸವದಿ, ಇನ್ನೂ ಅಥಣಿ ಜನರ ನಾಡಿ ಮಿಡಿತ ಅರ್ಥವಾಗಿಲ್ಲ. ಅಂತರ ಹೇಳಲು ಇನ್ನು ನಾಲ್ಕು ದಿನ ಬೇಕು.

ಮತದಾರರ ಬಳಿ ಹೋದಾಗ ಅವರ ಭಾವನೆಗಳು ಅರ್ಥವಾಗುತ್ತೆ ಎಂದಿದ್ದಾರೆ. ಆ ಮೂಲಕ ಅನುಮಾನಗಳಿಗೆ ಕಾರಣವಾಗಿದೆ ಸವದಿ ಹೇಳಿಕೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೈ ಎಲೆಕ್ಷನ್ - ನಾರಾಯಣಗೌಡ ಪರ ಡಿಸಿಎಂ ನಾರಾಯಣ ಬ್ಯಾಟಿಂಗ್