Select Your Language

Notifications

webdunia
webdunia
webdunia
Friday, 11 April 2025
webdunia

ಒಂದು ಪೈಸೆ ಹಣ ಪಡೆದಿಲ್ಲ – ದೇವ್ರಾಣೆ ಎಂದ ಬಿಜೆಪಿ ಅಭ್ಯರ್ಥಿ

ಶ್ರೀಮಂತ ಪಾಟೀಲ
ಅಥಣಿ , ಶುಕ್ರವಾರ, 22 ನವೆಂಬರ್ 2019 (19:22 IST)
ಹಣ ಪಡೆದಿರುವದನ್ನು ಸಾಬೀತು ಪಡಿಸಿದರೆ ರಾಜಕೀಯ ಬಿಟ್ಟು ಮನೆಯಲ್ಲಿ ಕೂಡುತ್ತೇನೆ. ಹೀಗಂತ ಮಾಜಿ ಶಾಸಕ, ಅನರ್ಹ ಶಾಸಕರೊಬ್ಬರು ಹೇಳಿದ್ದಾರೆ.

ಅಥಣಿಯಲ್ಲಿ ಅನರ್ಹ ಶಾಸಕ, ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಸ್ಪಷ್ಟನೆ ನೀಡಿದ್ದು, ಬಿಸಿನೆಸ್ ಆಗಲಿ, ರಾಜಕೀಯವಾಗಲಿ ನಾವು ರೈತರು, ಜನರಿಗಾಗಿಯೇ ಮಾಡೋದು. ಹೀಗಂತ ಹೇಳೋ ಮೂಲಕ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು‌ ಕಾಗೆಗೆ ಶ್ರೀಮಂತ ಪಾಟೀಲ ಟಾಂಗ್ ನೀಡಿದ್ರು.

ರೈತರ ಸೇವೆಗಾಗಿ ಸಕ್ಕರೆ ಕಾರ್ಖಾನೆ ತೆರೆದಿದ್ದೇವೆ. ಜನರ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇವೆ. ಡಿಸಿಎಂ‌ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಅಂತ ಅಥಣಿಯಲ್ಲಿ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಹೇಳಿಕೆ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಜನರ ನಾಡಿಮಿಡಿತ ಗೊತ್ತೇ ಇಲ್ಲ ಎಂದ ಡಿಸಿಎಂ – ಬಿಜೆಪಿ ಅಭ್ಯರ್ಥಿಗೆ ಬಿಗ್ ಶಾಕ್