Select Your Language

Notifications

webdunia
webdunia
webdunia
webdunia

ಅಡಿಕೆ ಕಳ್ಳರಿಗೆ ಬಿತ್ತು ಧರ್ಮದೇಟು

ಅಡಿಕೆ ಕಳ್ಳರಿಗೆ ಬಿತ್ತು ಧರ್ಮದೇಟು
ತುಮಕೂರು , ಸೋಮವಾರ, 15 ಅಕ್ಟೋಬರ್ 2018 (12:36 IST)
ಅಡಿಕೆ ಕದಿಯಲು ಬಂದವರನ್ನು ಹಿಡಿದ ಸಾರ್ವಜನಿಕರು ಕಂಬಕ್ಕೆ ಕಟ್ಟಿ  ಹೊಡೆದಿರುವ ಘಟನೆ ನಡೆದಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ  ಈ ಘಟನೆ ನಡೆದಿದೆ. ಮೂವರು ಯುವಕರನ್ನು ಅಡಿಕೆ ಕಳ್ಳತನ ಮಾಡುತ್ತಿದ್ದರೆಂಬ ಆರೋಪದ ಮೇಲೆ ಸಾರ್ವಜನಿಕರೇ ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಚಿಕ್ಕನಾಯಕನಹಳ್ಳಿಯ ಕುಮಾರ್ ಎಂಬುವವರ ಮನೆಯಲ್ಲಿ ಅಡಿಕೆ ಕದಿಯಲು  ಮೂವರು ಯುವಕರು ಬಂದಿದ್ದರು.

ಈ ಮೂವರ ಪೈಕಿ ಓಬ್ಬನನ್ನು ಸಾರ್ವಜನಿಕರು ಹಿಡಿದರು. ಪರಾರಿಯಾಗಿದ್ದ ಇನ್ನಿಬ್ಬರನ್ನು ಸಿಕ್ಕಿಬಿದ್ದಿದ್ದ ಕಳ್ಳನ ಮೂಲಕ ಮಾಹಿತಿ ಪಡೆದು ಸೆರೆಹಿಡಿದರು. ಅವರನ್ನೂ ಹಿಡಿದು ತಂದು ಕಂಬಕ್ಕೆ ಕಟ್ಟಿಹಾಕಿ ಥಳಿಸಿದರು. ಚಿಕ್ಕನಾಯಕನಹಳ್ಳಿಯಲ್ಲಿ ಗುಜರಿ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು, ಅನೇಕ ದಿನಗಳಿಂದ ಚಿಕ್ಕನಾಯಕನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಕಳವು ಮಾಡುತ್ತಿದ್ದರು.

ರಾತ್ರಿ ಕಳ್ಳತನ ಮಾಡಲು ಬಂದಿದ್ದ ವೇಳೆ ಸಾರ್ವಜನಿಕರು ಸೆರೆಹಿಡಿಯಲು ಹೋದಾಗ ಚಾಕು ತೋರಿಸಿ ಬೆದರಿಸಿ ಪರಾರಿಯಾಗಿದ್ದರು. ಕಳೆದೆರಡು 2 ತಿಂಗಳಿನಿಂದ ಅಡಿಕೆ ಮತ್ತು ದ್ವಿಚಕ್ರವಾಹನಗಳನ್ನು ಕಳವು ಮಾಡುವ ಪ್ರಕರಣಗಳು ನಡೆದಿತ್ತು. ಯುವಕರರು ಈ ರೀತಿ ಚಾಕು ಚೂರಿ ತೋರಿಸಿ ಕಳ್ಳತನ ಮಾಡುತ್ತಿದ್ದುದು ಜನರಲ್ಲಿ ಭೀತಿ ಮೂಡಿಸಿತ್ತು.



Share this Story:

Follow Webdunia kannada

ಮುಂದಿನ ಸುದ್ದಿ

ಮಠಾಧೀಶರ ಕುರಿತು ಸಾಹಿತಿ ಬಿ.ಎಲ್.ವೇಣು ವ್ಯಂಗ್ಯವಾಡಿದ್ದು ಹೇಗೆ ಗೊತ್ತಾ?