Publish Date: Sun, 07 Oct 2018 (17:51 IST)
Updated Date: Sun, 07 Oct 2018 (17:53 IST)
ದ್ವಿಚಕ್ರ ವಾಹನ ಕಳ್ಳರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಸಾರ್ವಜನಿಕ ಸ್ಥಳದಲ್ಲಿಯೇ ಬೈಕ್ ಕದ್ದ ಚಾಲಾಕಿಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ.
ನಾಲ್ಕು ಜನರ ಕಳ್ಳರ ತಂಡದಿಂದ ಬೈಕ್ ಎಸ್ಕೇಪ್ ಮಾಡಲಾಗುತ್ತಿದೆ. ನೂರಾರು ದ್ವಿಚಕ್ರ ವಾಹನಗಳನ್ನು ಕದ್ದಿರುವ ಶಂಕೆ ವ್ಯಕ್ತವಾಗಿದೆ.
ಚಿಂತಾಮಣಿ ನಗರದ ವೆಂಕಟಗಿರಿಕೋಟೆ ನಿವಾಸಿ ವೆಂಕಟರವಣಪ್ಪನಿಗೆ ಸೇರಿದ ಬೈಕ್ ಕಳ್ಳತನವಾಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಬೆಂಗಳೂರು ರಸ್ತೆಯ ಪರ್ನಿಚರ್ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೆಲಸದ ನಿಮಿತ್ತ ಸ್ನೇಹಿತನನ್ನು ಭೇಟಿ ಮಾಡಲು ಬೈಕ್ ನಲ್ಲಿ ಬಂದಿದ್ದ ವೆಂಕಟರವಣಪ್ಪನ ಬೈಕ್ ಕಳ್ಳತನವಾಗಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.