Select Your Language

Notifications

webdunia
webdunia
webdunia
webdunia

ಜೆಡಿಎಸ್ ಅಭ್ಯರ್ಥಿಗೆ ಫೋನ್ ಮೂಲಕ ಬೆದರಿಕೆ ಕರೆ

ಜೆಡಿಎಸ್ ಅಭ್ಯರ್ಥಿಗೆ ಫೋನ್ ಮೂಲಕ ಬೆದರಿಕೆ ಕರೆ
ಉಡುಪಿ , ಶುಕ್ರವಾರ, 4 ಮೇ 2018 (17:09 IST)
ಜಿಲ್ಲೆಯ ಬೈಂದೂರು ವಿಧಾ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಫೋನ್ ಮೂಲಕ ಬೆದರಿಕೆ ಕರೆ ಬಂದಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ
ಜೆಡಿಎಸ್ ಅಭ್ಯರ್ಥಿ ರವಿ ಶೆಟ್ಟಿ ಈ ಬಗ್ಗೆ ಮಾದ್ಯಮದ ಮುಂದೆ ಬಹಿರಂಗ ಪಡಿಸಿದ್ದಾರೆ. ವಿದೇಶದಿಂದ ಬೆದರಿಕೆ ಕರೆ ಬಂದಿದ್ದು, ಸ್ಪರ್ಧೆ ಯಿಂದ ಹಿಂದೆ ಸರಿಯುವಂತೆ ವ್ಯಕ್ತಿಯೋರ್ವ ಫೊನ್ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾರೆ.
 
 ಬೆದರಿಕೆ ಕರೆ ಬಂದಿರುವ ಹಿನ್ನಲೆಯಲ್ಲಿ ರವಿ ಶೆಟ್ಟಿ ಇಗಾಗಲೇ ಕೊಲ್ಲೂರು ಠಾಣೆಯಲ್ಲಿ ದೂರನ್ನ ದಾಖಲಿಸಿದ್ದಾರೆ.
 
ಈ ಹಿಂದೆಯೂ ಅನಾಮಿಕ ವ್ಯಕ್ತಿಯೋರ್ವ ಕರೆ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಹಣ ನೀಡಲು ಸಾದ್ಯ ಇಲ್ಲದಿದ್ದಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲಿಸು,ಇಲ್ಲವಾದಲ್ಲಿ ಸೈಲೆಂಟಾಗಿರಬೇಕೆಂದು ಕೂಡ ಕರೆ ಮಾಡಿದ ಅನಾಮದೇಯ ತಾಕೀತು ಮಾಡಿದ್ದ ಎಂದು ರವಿ ಶೆಟ್ಟಿ ಆರೋಪಿಸಿದ್ದಾರೆ.
 
ಬೈಂದೂರಲ್ಲಿ ಜೆಡಿಎಸ್ ಬೆಳವಣಿಗೆಯನ್ನ ಸಹಿಸದ ಪ್ರತಿಪಕ್ಷಗಳು ಈ ರೀತಿ ಕೀಳು ಕೃತ್ಯಕ್ಕೆ ಇಳಿದಿವೆ .ಕೆಲವು ದಿನಗಳ ಹಿಂದೆ ಮನೆ ಮುಂದೆ ವಾಮಾಚಾರದಂತಹ ಕೃತ್ಯಗಳನ್ನು ಮಾಡಿದ್ದರು.
 
ತನ್ನ‌ ಕುಟುಂಬ ಭಯದ ವಾತವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತನಗೆ ರಕ್ಷಣೆ ಬೇಕೆಂದು‌ ಪೊಲೀಸರಿಗೆ ದೂರನ್ನ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೀಡ್ ನಮಸ್ಕಾರ ಹಾಕಿದ ಬಿಜೆಪಿ ಕಾರ್ಯಕರ್ತರು