Select Your Language

Notifications

webdunia
webdunia
webdunia
webdunia

ದೀಡ್ ನಮಸ್ಕಾರ ಹಾಕಿದ ಬಿಜೆಪಿ ಕಾರ್ಯಕರ್ತರು

ದೀಡ್ ನಮಸ್ಕಾರ
ಗದಗ , ಶುಕ್ರವಾರ, 4 ಮೇ 2018 (17:06 IST)
ರಾಜ್ಯ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇನ್ನು ತಮ್ಮ ನೆಚ್ಚಿನ ನಾಯಕನ ಗೆಲುವಿಗೆ ಅಭಿಮಾನಿಗಳು ವಿನೂತನ ರೀತಿಯಲ್ಲಿ ದೇವರ ಮೊರೆ ಹೋಗುತ್ತಿದ್ದಾರೆ. 
ಅದೇ ರೀತಿ ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಗೆಲುವಿಗಾಗಿ ಬಿಜೆಪಿ ಪಕ್ಷದ ನಗರಸಭೆ ಸದಸ್ಯ ಸೇರಿದಂತೆ ಅಭಿಮಾನಿಗಳು ಸುಮಾರು ಒಂದು ಕಿಲೋ ಮೀಟರ್ ವರೆಗೆ ದೀಡ್ ನಮಸ್ಕಾರ ಹಾಕುವ ಮೂಲಕ ದೇವರ ಮೊರೆಗೆ ಹೋಗಿದ್ದಾರೆ. 
 
ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಗೆಲುವಿಗಾಗಿ ಐದು ಜನ ಕಾರ್ಯಕರ್ತರು ದೀಡ್ ನಮಸ್ಕಾರ ಹಾಕಿದ್ರು. ಗದಗ ನಗರದ ಏಳು ಮಕ್ಕಳ ತಾಯಿ ದೇವಸ್ಥಾನದಿಂದ ಪ್ರಾರಂಭವಾದ ದೀಡ್ ನಮಸ್ಕಾರವು ರಾಚೊಟೆಶ್ವರ ದೇವಸ್ಥಾನದ ವರೆಗೆ ಸುಮಾರು 1 ಕಿಲೋಮೀಟರ್ ದೀಡ್ ನಮಸ್ಕಾರ ಹಾಕಿದ್ರು.
 
 22 ನೇ ವಾರ್ಡ್ ಸದಸ್ಯ ಸಂತೋಷ ನೇತೃತ್ವದಲ್ಲಿ ಐದು ಜನ  ಕಾರ್ಯಕರ್ತರು ದೀಡ್ ನಮಸ್ಕಾರ ಹಾಕಿದ್ರು. ಈ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಆರತಿ ಬೆಳಗಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವೆ ಗೀತಾ ಪ್ರಸಾದ್‌ಗೆ ಗ್ರಾಮಸ್ಥರಿಂದ ತರಾಟೆ