Publish Date: Fri, 04 May 2018 (09:27 IST)
Updated Date: Fri, 04 May 2018 (09:30 IST)
ಬೆಂಗಳೂರು: ಮೊನ್ನೆಯಷ್ಟೇ ಉಡುಪಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರನ್ನು ಹೊಗಳಿದ್ದ ಪ್ರಧಾನಿ ಮೋದಿ ಮೈತ್ರಿ ಬಗ್ಗೆ ಪುಕಾರು ಹಬ್ಬಿಸಿದ್ದರು. ಆದರೆ ನಿನ್ನೆ ನಡೆದ ಸಮಾವೇಶದಲ್ಲಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಬೇರೆ ರಾಜ್ಯದ ಪಕ್ಷದ ಸಹಾಯ ಪಡೆಯುತ್ತಿದೆ ಎಂದು ಎಐಎಂಎಂ ಜತೆಗಿನ ಮೈತ್ರಿಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ. ಸಾಂಪ್ರದಾಯಿಕ ಪಕ್ಷವೊಂದರ ಜತೆಗೆ ಜೆಡಿಎಸ್ ಕೈ ಜೋಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಮೂಲಕ ಮೊನ್ನೆಯಷ್ಟೇ ದೇವೇಗೌಡರನ್ನು ಹೊಗಳಿ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂಬ ವದಂತಿ ಹಬ್ಬಲು ಕಾರಣರಾಗಿದ್ದರು. ಅದನ್ನು ನಿನ್ನೆ ಬೆಂಗಳೂರಿನ ಸಮಾವೇಶದಲ್ಲಿ ತಿಳಿಗೊಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.