Select Your Language

Notifications

webdunia
webdunia
webdunia
webdunia

ಮೋದಿ ಬರುತ್ತಿದ್ದಾರೆಂದು ಜಗ್ಗೇಶ್ ಭಾವುಕರಾಗಿದ್ದು ಯಾಕೆ?!

ಮೋದಿ ಬರುತ್ತಿದ್ದಾರೆಂದು ಜಗ್ಗೇಶ್ ಭಾವುಕರಾಗಿದ್ದು ಯಾಕೆ?!
ಬೆಂಗಳೂರು , ಶುಕ್ರವಾರ, 4 ಮೇ 2018 (09:18 IST)
ಬೆಂಗಳೂರು: ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಳ್ಳಲು ತಮ್ಮದೇ ಕ್ಷೇತ್ರಕ್ಕೆ ಬರುತ್ತಿದ್ದಾರೆಂದು ನವರಸನಾಯಕ, ಬಿಜೆಪಿ ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಜಗ್ಗೇಶ್ ಭಾವುಕರಾಗಿದ್ದರು.

ಮೋದಿ ಆಗಮನಕ್ಕೂ ಮೊದಲೇ ಟ್ವಿಟರ್ ನಲ್ಲಿ ಕ್ಷಣ ಕ್ಷಣಕ್ಕೂ ಟ್ವೀಟ್ ಮಾಡುತ್ತಿದ್ದ ಜಗ್ಗೇಶ್, ನನ್ನ ಕ್ಷೇತ್ರಕ್ಕೆ ಅವರು ಬರುವುದನ್ನು ಕಾಯುತ್ತಿದ್ದೇನೆ ಎಂದಿದ್ದರು.

‘ಇಂದು ನನ್ನ ಬದುಕಿನಲ್ಲಿ ನೆನಪಿಡುವ ದಿನ. ವಿಶ್ವ, ರಾಷ್ಟ್ರ ಮೆಚ್ಚಿದ ನಾಯಕ ನರೇಂದ್ರ ಮೋದಿ ಭಾರತಾಂಬೆಯ ಹೆಮ್ಮೆಯ ಪುತ್ರನ ಆಶೀರ್ವಾದವನ್ನು ನೇರವಾಗಿ ಪಡೆಯುವ ಸುದಿನ. ಅಪ್ಪ –ಅಮ್ಮ ಇದ್ದಿದ್ದರೆ ಸಾರ್ಥಕವಾಯಿತು ಮಗನೇ ಎಂದು ಹರಸುತ್ತಿದ್ದರೇನೋ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲ, ಸಮಾವೇಶಕ್ಕೆ ಬರಲು ದಾರಿಯನ್ನೂ ಟ್ವಿಟರ್ ಮೂಲಕ ಹಾಕಿದ್ದರು.

ಬಳಿಕ ಸಮಾವೇಶದಲ್ಲಿ ಜಗ್ಗೇಶ್ ಸೀದಾ ಪ್ರಧಾನಿ ಮೋದಿ ಕಾಲಿಗೆರಗಿದರು. ಆ ಸಂದರ್ಭದಲ್ಲಿ ತಮ್ಮ ಭುಜ ತಟ್ಟಿ ಹಾರೈಸಿದ ಕ್ಷಣವನ್ನು ಟ್ವಿಟರ್ ನಲ್ಲಿ ಹಾಕಿಕೊಂಡು ಖುಷಿಪಟ್ಟರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಯಸ್ಕರ ಚಲನಚಿತ್ರ ನಟಿ ಸ್ಟಾರ್ಮಿ ಡೇನಿಯಲ್‌ ಅವರಿಗೆ ಹಣ ನೀಡಲಾಗಿತ್ತು ಎಂದು ಕೊನೆಗೂ ಒಪ್ಪಿಕೊಂಡ ಟ್ರಂಪ್!