Publish Date: Tue, 10 Oct 2023 (19:39 IST)
Updated Date: Tue, 10 Oct 2023 (19:17 IST)
ಮುನಿರತ್ನ ನಾಯ್ಡು ಅವರ ಕ್ಷೇತ್ರಕ್ಕೆ ಮಂಜೂರಾಗಿದ್ದ ಹಣ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ವರ್ಗಾವಣೆ ಆಗಿದೆ ಎಂದು ಎನ್ ರವಿ ಕುಮಾರ್ ಆರೋಪ ಮಾಡಿದ್ದಾರೆ.
ಟೆಂಡರ್ ಆಗಿರೋದನ್ನ ವಾಪಸ್ ಪಡೆದಿರೋದು ಖಂಡನೀಯ.ಈ ಸರ್ಕಾರ ತಮ್ಮ ಮನೆಯಿಂದ ಹಣ ಕೊಡ್ತಿದಾರಾ?ಕೋಟ್ಯಾಂತರ ಜನ ಕಟ್ಟುವ ಟ್ಯಾಕ್ಸ್ ನಿಂದ ಕೊಡ್ತಿರೋದು.ಮುನಿರತ್ನ ಅವರಿಗೆ ಮಾಡ್ತಿರುವ ಅನ್ಯಾಯ ಎಲ್ಲಾ ಬಿಜೆಪಿ ಶಾಸಕರಿಗೆ ಮಾಡ್ತಿರುವುದು ಅನ್ಯಾಯ.ನಾಳೆಯ ಮುನಿರತ್ನ ಅವರ ಪ್ರತಿಭಟನೆಗೆ ಬೆಂಬಲ ಇದೆ.ಅಶ್ವಥ್ ನಾರಾಯಣ, ಸೇರಿದಂತೆ ಇನ್ನೂಅನೇಕ ನಾಯಕರು ಬೆಂಬಲ ಕೊಡ್ತಾರೆ.ನಾನು ಕೂಡ ವಿನಂತಿ ಮಾಡ್ತೇನೆ.. ಪಕ್ಷದ ಮುಖಂಡರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗ್ತೇವೆ ಎಂದು ಎಂಎಲ್ ಸಿ ರವಿಕುಮಾರ್ ಹೇಳಿದ್ದಾರೆ.