Publish Date: Sun, 09 Jul 2023 (18:45 IST)
Updated Date: Sun, 09 Jul 2023 (16:50 IST)
ರಾಜ್ಯದಲ್ಲಿ ಚಿಕ್ಕೋಡಿ ಜಿಲ್ಲೆಯ ಹಿರೇಕೋಡಿ ಗ್ರಾಮದಲ್ಲಿ ಜೈನ ಮುನಿ ಹತ್ಯೆ ಆಗಿದೆ.ಜೈನ ಮುನಿಗಳ ಹತ್ಯೆ ಇಡೀ ನಾಡಿನ ಸಾದು ಸಂತರ ರಕ್ಷಣೆ ಪ್ರಶ್ನೆ ಮಾಡುವಂತಿದೆ.ಸರ್ಕಾರ ಇದರ ಕುರಿತು ಉನ್ನತ ತನಿಖೆ ಮಾಡಿಸಬೇಕು ಎಂದು ಬಿಜೆಪಿ ಒತ್ತಾಯ ಮಾಡಿದೆ.ಹತ್ತಾರು ಪೀಸ್ ಅನ್ನು ಮಾಡಿ ನಾನ್ ವೆಜ್ ತರ ಕತ್ತರಿಸಿ ಕತ್ತರಿಸಿ ಹತ್ಯೆ ಮಾಡಿದ್ದಾರೆ.ಪೊಲೀಸರು ಇಬ್ಬರನ್ನು ಬಂಧಿಸಿದಾರೆ.
ನನ್ನ ಪ್ರಕಾರ ಇದರಲ್ಲಿ ಇಬ್ಬರೇ ಅಲ್ಲ ಇನ್ನೂ ಅನೇಕರು ಇದ್ದಾರೆ.ಇದರ ಬಗ್ಗೆ ಸರ್ಕಾರ ನಿಷ್ಪಕ್ಷಾಪತವಾಗಿ ತನಿಖೆ ಮಾಡಬೇಕು.ಸಮಾಜದಲ್ಲಿ ಹತ್ಯೆ ಸುಲಿಗೆ ನಡೀಬಾರದು ಅಂತಾ ಜೈನ ಮುನಿಗಳು ಕೆಲಸ ಮಾಡ್ತಾರೆ.ಅಂತಹ ಸ್ವಾಮೀಜಿ ಹತ್ಯೆ ಇಡೀ ನಾಡಿನ ಎಲ್ಲಾ ಸ್ವಾಮೀಜಿ ಖಂಡಿಸುತ್ತಾರೆ.ಇವರಿಗೆ ಉಗ್ರ ಶಿಕ್ಷೆ ಆಗಬೇಕು ಎನ್ನುವುದು ಬಿಜೆಪಿಯ ಅಗ್ರಹ.ಸಾಧು ಸಂತರ ರಕ್ಷಣೆಗೆ ಸರ್ಕಾರ ಧವಿಸಬೇಕು.ಹತ್ಯೆ ಆಗಿ 3 ದಿನ ಆಯ್ತು ಗೃಹ ಸಚಿವರು ಹೋಗಿಲ್ಲ.ನಾಳೆ ಈ ಬಗ್ಗೆ ವಿಧಾನ ಮಂಡಳ ದಲ್ಲಿ ಈ ವಿಷ್ಯ ಚರ್ಚೆ ಮಾಡ್ತೀವಿ.ಅಭಯ್ ಪಾಟೀಲ್. ಶಶಿಕಲಾ ಜೊಲ್ಲೆ ಸಿದ್ದು ಸವದಿ, ಎಲ್ಲಾ ಹೋಗಿದ್ದಾರೆ.ಅಭಯ್ ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡ್ತೀವಿ.ನಾಳೆ ಅವರು ಹತ್ಯೆಗೆ ವರದಿ ತೆಗೆದುಕೊಂಡು ಬರ್ತಾರೆ.ಇದರ ಆಳ - ಅಗಲ ಸರ್ಕಾರ ತನಿಖೆ ಮಾಡಬೇಕು ಎಂದು ಎಂ ಎಲ್ ಸಿ ರವಿಕುಮಾರ್ ಒತ್ತಾಯ ಮಾಡಿದ್ದಾರೆ.