Publish Date: Fri, 06 May 2022 (11:08 IST)
Updated Date: Fri, 06 May 2022 (15:01 IST)
ಕಾರವಾರ : ಮೊಬೈಲ್ ನೋಡದಂತೆ ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಬ್ಬುವಾಡದಲ್ಲಿ ನಡೆದಿದೆ.
ಮೇಘ (20) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಈಕೆ ಮೂಲತಃ ಸಿದ್ದಾಪುರದವಳು. ಪ್ಯಾರಾಮೇಡಿಕಲ್ ಕೋರ್ಸ್ ಮುಗಿಸಿಕೊಂಡಿದ್ದ ಯುವತಿ ಮೊಬೈಲ್ ಗೀಳು ಹಚ್ಚಿಕೊಂಡಿದ್ದಳು. ಇದಲ್ಲದೇ ಸ್ನೇಹಿತರೊಂದಿಗೆ ಮೊಬೈಲ್ ನಲ್ಲಿ ಹರಟುತ್ತಿದ್ದರಿಂದ ಪೋಷಕರು ತಿಳಿಹೇಳಿದ್ದಾರೆ.
ಹೆತ್ತವರ ಮಾತಿನಿಂದ ಕೋಪಗೊಂಡಿದ್ದ ಈಕೆ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.