Select Your Language

Notifications

webdunia
webdunia
webdunia
webdunia

‘ಶ್ರೀಶೈಲ ಸ್ವಾಮೀಜಿಗೆ ತಾಕತ್ ಇದ್ದರೆ ರಾಜ್ಯ ಸರಕಾರ ಬೀಳಿಸಲಿ’

‘ಶ್ರೀಶೈಲ ಸ್ವಾಮೀಜಿಗೆ ತಾಕತ್ ಇದ್ದರೆ ರಾಜ್ಯ ಸರಕಾರ ಬೀಳಿಸಲಿ’
ಕಲಬುರಗಿ , ಬುಧವಾರ, 4 ಮಾರ್ಚ್ 2020 (11:40 IST)

ಶ್ರೀಶೈಲ ಸ್ವಾಮೀಜಿ ವಿರುದ್ಧ ಮಾಜಿ ಸಚಿವರೊಬ್ಬರು ತೊಡೆತಟ್ಟಿದ್ದು, ಸ್ವಾಮೀಜಿಗೆ ತಾಕತ್ ತೋರಿಸಲಿ ಎಂದು ಸವಾಲ್ ಎಸೆದಿದ್ದಾರೆ.
 

ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಜನ್ಮದಿನದಂದು ನಡೆದ ಸಮಾರಂಭದಲ್ಲಿ ಶ್ರೀಶೈಲ ಸಾರಂಗಮಠದ ಸಾರಂಗಧರ ದೇಶೀಕೇಂದ್ರ ಸ್ವಾಮೀಜಿ 10 ಬಿಜೆಪಿ ಶಾಸಕರ ರಾಜೀನಾಮೆ ಕೊಡಿಸೋದಾಗಿ ಸಿಎಂಗೆ ಎಚ್ಚರಿಕೆ ನೀಡಿದ್ದರು.

ದತ್ತಾತ್ರೇಯ ಪಾಟೀಲ್ ರೇವೂರ್ ಗೆ ಸಚಿವ ಸ್ಥಾನ ಕೊಡದಿದ್ದರೆ ಬಿಜೆಪಿ ಶಾಸಕರಿಂದ ರಾಜೀನಾಮೆ ಕೊಡಿಸುವೆ ಅಂತ ಶ್ರೀಶೈಲ ಸ್ವಾಮೀಜಿ ಹೇಳಿದ್ದರು.

 

webdunia

ಇದನ್ನು ಖಂಡಿಸಿರೋ ಮಾಜಿ ಸಚಿವ, ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ್ ಸ್ವಾಮೀಜಿಗೆ ಸವಾಲ್ ಹಾಕಿದ್ದಾರೆ. ಸ್ವಾಮೀಜಿ ಕಾವಿ ಕಳಚಿಟ್ಟು ಖಾದಿ ತೊಟ್ಟು ರಾಜಕೀಯ ಮಾಡಲಿ. ಆಗ ಇಂತಹ ಮಾತುಗಳನ್ನು ಹೇಳಲಿ. ಸರಕಾರ ಬೀಳಿಸೋ ಮಾತನ್ನು ಸ್ವಾಮೀಜಿ ಆಡಿರೋದು ಸರಿಯಲ್ಲ ಅಂತ ಗುತ್ತೇದಾರ್ ಖಂಡಿಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಎಫೆಕ್ಟ್; ಕೊಬ್ಬರಿ ರಪ್ತಿನಲ್ಲಿ ಇಳಿಕೆ