Select Your Language

Notifications

webdunia
webdunia
webdunia
webdunia

ಈಶ್ವರಪ್ಪಗೆ ಗಂಡಸ್ತನದ ಬಗ್ಗೆ ಗೊತ್ತಿಲ್ಲ ಎಂದ ಸಂಸದ

ಈಶ್ವರಪ್ಪಗೆ ಗಂಡಸ್ತನದ ಬಗ್ಗೆ ಗೊತ್ತಿಲ್ಲ ಎಂದ ಸಂಸದ
ಹುಬ್ಬಳ್ಳಿ , ಬುಧವಾರ, 15 ಮೇ 2019 (14:48 IST)
ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪಗೆ ಕೈ ಪಡೆಯ ಸಂಸದ ಖಡಕ್ ಟಾಂಗ್ ನೀಡಿದ್ದಾರೆ.

ನರ ಎಂದರೆ ಯಾವುದು? ಗಂಡಸ್ತನ ಎಂದರೆ ಏನು ಎನ್ನುವುದರ ಕುರಿತು ಅರಿವೇ ಕೆ.ಎಸ್.ಈಶ್ವರಪ್ಪಗೆ ಇಲ್ಲ. ಹೀಗಂತ ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ದಾರೆ.

webdunia
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ನವರು ನರಸತ್ತವರು ಎಂದು ಈಶ್ವರಪ್ಪ ಹೇಳಿದ್ದಾರೆ. ಆದರೆ ಈಶ್ವರಪ್ಪಗೆ ನರ, ಗಂಡಸ್ತನದ ಬಗ್ಗೆ ಈವರೆಗೂ ತಿಳಿದಿಲ್ಲ. ಅವರು ಯಾವತ್ತೂ ಒಳ್ಳೆಯದನ್ನು ಮಾಡಿಲ್ಲ. ಮಾತನಾಡಿಲ್ಲ ಎಂದು ಛೇಡಿಸಿದ್ರು.

ಈಶ್ವರಪ್ಪರನ್ನು ಮಾಜಿ ಸಿಎಂ ಹೇಳಿದಂತೆ ಆಸ್ಪತ್ರೆಗೆ ದಾಖಲು ಮಾಡಬೇಕು. ಅವರ ಮೆದುಳನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದರು.

ಕುಂದಗೋಳದಲ್ಲಿ ಗೆಲುವುದು ಕೈ ವಶವಾಗಲಿದೆ ಎಂದ ಅವರು, ಬಿಜೆಪಿಯವರಿಗೆ ಮುಖದ ಮೇಲೆ ಹೊಡೆಯುವಂತೆ ಕೆಲಸ ಮಾಡಿ ತೋರಿಸಬೇಕೆಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ರಾಜೀನಾಮೆ ನೀಡಲಿ; ಖರ್ಗೆ ಸಿಎಂ ಆಗಲಿ ಎಂದ ಯಡಿಯೂರಪ್ಪ