Select Your Language

Notifications

webdunia
webdunia
webdunia
webdunia

ಜಮೀರ್ ಒಬ್ಬ ಕಳ್ಳ, ಆತ ವಾಚ್ ಮ್ಯಾನ್ ಕೆಲಸಕ್ಕೆ ನಾಲಾಯಕ್ ಎಂದ ಈಶ್ವರಪ್ಪ

ಜಮೀರ್ ಒಬ್ಬ ಕಳ್ಳ, ಆತ ವಾಚ್ ಮ್ಯಾನ್ ಕೆಲಸಕ್ಕೆ ನಾಲಾಯಕ್ ಎಂದ ಈಶ್ವರಪ್ಪ
ಹುಬ್ಬಳ್ಳಿ , ಬುಧವಾರ, 15 ಮೇ 2019 (14:04 IST)
ಹುಬ್ಬಳ್ಳಿ : ಆಗಾಗ ಮೈತ್ರಿ ಪಕ್ಷದ ನಾಯಕರ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿರುವ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಇದೀಗ ಮತ್ತೆ ಕಾಂಗ್ರೆಸ್ ನಾಯಕರ ವಿರುದ್ಧ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.




ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗ್ತಾರೆ ಅಂತಾ ಸೋಬಾನ ಹಾಡ್ತಿದ್ದಾರೆ. ಅವರ ಕೆಲವು ಚೇಲಾಗಳು ಸೋ ಎಂದು ಸೋಬಾನ ಹಾಡುತ್ತಿದ್ದಾರೆ. ಹೀಗಿದ್ರೂ ಮಲ್ಲಿಕಾರ್ಜುನ ಖರ್ಗೆ ಬಾಯಿ ಮುಚ್ಕೊಂಡಿದ್ದಾರೆ. ಸ್ವಾಭಿಮಾನ ಇರುವ ಖರ್ಗೆ ಯಾಕೆ ಸುಮ್ಮನಿದ್ದಾರೆಗೊತ್ತಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಅಲ್ಲದೇ ಬಿಜೆಪಿ ಅಧಿಕಾರಕ್ಕೆ ಬಂದ್ರೆ ವಾಚ್ ಮ್ಯಾನ್ ಆಗ್ತೀನಿ ಅಂದ ಸಚಿವ ಜಮೀರ್ ಅಹ್ಮದ್ ವಿರುದ್ಧ ಕಿಡಿಕಾರಿದ ಅವರು, ಜಮೀರ್ ಒಬ್ಬ ಕಳ್ಳ, ಆತನನ್ನು  ವಾಚ್ ಮ್ಯಾನ್ ಕೆಲಸಕ್ಕೆ ಇಟ್ಕೊಳ್ಳಬಾರದು. ನಾನು ಯಡಿಯೂರಪ್ಪನವ್ರಿಗೆ ಹೇಳ್ತೀನಿ, ಜಮೀರ್ ಒಬ್ಬ ಕಳ್ಳ, ಕಳ್ಳನನ್ನು ವಾಚ್ ಮ್ಯಾನ್, ಮನೆ ಕ್ಲೀನಿಂಗ್ ‍ ಕೆಲಸಕ್ಕೆ ಇಟ್ಕೊಳ್ಳಬಾರದು. ಚಮಚಾಗಿರಿಗೆ ಇನ್ನೊಂದು ಹೆಸರೇ ಜಮೀರ್ ಅಹ್ಮದ್ ಖಾನ್ ಎಂದು ಗುಡುಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಜೀವ ಜಲಕ್ಕಾಗಿ ಜೀವ ಒತ್ತೆ ಇಡುತ್ತಿರೋ ಜನರು!