Select Your Language

Notifications

webdunia
webdunia
webdunia
webdunia

ಖರ್ಗೆ ಅವರೇ ಸಿಎಂ ಆಗಬೇಕಿತ್ತು ಎಂಬ ಸಿಎಂ ಹೇಳಿಕೆಯಲ್ಲಿ ಕುತಂತ್ರವಿದೆ ಎಂದ ಬಿಜೆಪಿ ಶಾಸಕ

ಖರ್ಗೆ ಅವರೇ ಸಿಎಂ ಆಗಬೇಕಿತ್ತು ಎಂಬ ಸಿಎಂ ಹೇಳಿಕೆಯಲ್ಲಿ ಕುತಂತ್ರವಿದೆ ಎಂದ ಬಿಜೆಪಿ ಶಾಸಕ
ಕಲಬುರಗಿ , ಬುಧವಾರ, 15 ಮೇ 2019 (10:58 IST)
ಕಲಬುರಗಿ : ಮೈತ್ರಿ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ ಆಗಬೇಕಿತ್ತು ಎಂದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಯಲ್ಲಿ ಕುತಂತ್ರವಿದೆ ಎಂದು  ಶಾಸಕ ಬಸವನಗೌಡ ಯತ್ನಾಳ್ ಹೇಳಿದ್ದಾರೆ.




ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಗೆಯವರನ್ನ ಸಿಎಂ ಮಾಡಲು ಕಾಂಗ್ರೆಸ್ ನಲ್ಲೇ ಒಲವಿಲ್ಲ. ಕಾಂಗ್ರೆಸ್, ಖರ್ಗೆ ಅವರ ಅನುಭವದ ಪ್ರಯೋಜನ ಪಡೀತಿಲ್ಲ. ಅಂತಹದರಲ್ಲಿ ಖರ್ಗೆ ಬಗ್ಗೆ ಕುಮಾರಸ್ವಾಮಿ ಈ ಹೇಳಿಕೆ ನಾಟಕೀಯವಾದದ್ದು ಎಂದು ಹೇಳಿದ್ದಾರೆ. 


ಈ ರೀತಿ ಹೇಳಿಕೆ ನೀಡಿ ಸಿದ್ದರಾಮಯ್ಯ ಮತ್ತು ಖರ್ಗೆ ಮಧ್ಯೆ ಜಗಳ ಹಚ್ಚುವ ಕೆಲಸ ಸಿಎಂ ಕುಮಾರಸ್ವಾಮಿ ಮಾಡಿದ್ದಾರೆ. ಈ ಮೂಲಕ ತಾವು ಅಧಿಕಾರ ನಡೆಸಬೇಕು ಅನ್ನೋದು ಹೆಚ್.ಡಿ.ಕೆ. ಹುನ್ನಾರ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ ಆಗಬೇಕಿತ್ತು ಎಂದ ಸಿಎಂಗೆ ಬಿಎಸ್ ವೈ ಟಾಂಗ್