Select Your Language

Notifications

webdunia
webdunia
webdunia
webdunia

ಪುಟ್ಟರಾಜು, ಸುರೇಶ್ ಗೌಡಗೆ ಟಾಂಗ್ ನೀಡಿದ ಚೆಲುವರಾಯಸ್ವಾಮಿ

ಪುಟ್ಟರಾಜು, ಸುರೇಶ್ ಗೌಡಗೆ ಟಾಂಗ್ ನೀಡಿದ ಚೆಲುವರಾಯಸ್ವಾಮಿ
ಮಂಡ್ಯ , ಶುಕ್ರವಾರ, 10 ಮೇ 2019 (18:01 IST)
ಸಿದ್ದರಾಮಯ್ಯ ರಾಷ್ಟ್ರ ಮಟ್ಟದ ನಾಯಕರು. ಅವರು ರಾಜ್ಯಮಟ್ಟದ ನಾಯಕರಲ್ಲ. ರಾಜ್ಯದ ಬೆರಳೆಣಿಕೆ ನಾಯಕರಲ್ಲಿ ಸಿದ್ದರಾಮಯ್ಯ ಒಬ್ಬರು. ನನ್ನ ಮೂಲಕ ಅವರಿಗೆ ರಾಜಕಾರಣ ಮಾಡೋ ಅವಶ್ಯಕತೆ ಇಲ್ಲ ಅಂತ ಚೆಲುವರಾಯಸ್ವಾಮಿ ಹೇಳಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ನಾಯಕನಾಗೋ ಗುಣ ಸಿದ್ದರಾಮಯ್ಯ ಅವರಿಗಿದೆ ಅಂತ ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ. ಪುಟ್ಟರಾಜು ವ್ಯಂಗ್ಯದ ಬಗ್ಗೆ ಚೆಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ನಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂತ ನಾನು ಹೇಳಿಲ್ಲ. ಅದರ ಅವಶ್ಯಕತೆಯೂ ಇಲ್ಲ. ನಾನೇನು ಶಾಸಕನೇ? ವಿಶ್ವಾಸಕ್ಕೆ ತೆಗೆದುಕೊಳ್ಳೋಕೆ? ಈಗ 120 ರಿಂದ 117 ಸೀಟಿಗೆ ಇಳಿದಿದೆ. ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದಿದ್ದೆ ಎಂದು ಸಚಿವ ಪುಟ್ಟರಾಜುಗೆ ಟಾಂಗ್ ನೀಡಿದ್ರು.

ಇನ್ನು ಸುರೇಶ್ ಗೌಡ ಹೇಳಿಕೆಗೆ ಚೆಲುವರಾಯಸ್ವಾಮಿ ಟಾಂಗ್ ನೀಡಿದ್ದು, ಸುರೇಶ್ ಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ನಾನು ಎಂದೂ ಅವರ ಬಗ್ಗೆ ಮಾತನಾಡಿಲ್ಲ. ಅವರ ಹೇಳಿಕೆಗಳಿಂದ ನನಗೇನು ಮುಜುಗರವೂ ಇಲ್ಲ. 25 ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ. ವ್ಯಭಿಚಾರ ಪದ ಬಳಕೆಯಿಂದ ಆಶ್ಚರ್ಯವಾಗಲಿ ಇಲ್ಲ. ಏನೂ ವಿಶೇಷವೂ ಕಂಡು ಬಂದಿಲ್ಲ.

1984 ರಿಂದಲೂ ನಾನು ಟೆಂಪ್ಟ್ ಆದವನಲ್ಲ. ಸುರೇಶ್ ಗೌಡರಿಗೆ ಒಳ್ಳೆಯದಾಗಲಿ. ಸುರೇಶ್ ಗೌಡ ಯಾವ ನಾಯಕ ಎಂದು ಪರೋಕ್ಷ ವಾಗ್ದಾಳಿ ನಡೆಸಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಸಿಎಂ ಆಗೋಕೆ ಸಾಧ್ಯ ಇಲ್ಲಾ!