Select Your Language

Notifications

webdunia
webdunia
webdunia
webdunia

ಬೈ ಎಲೆಕ್ಷನ್ ಮುನ್ನ ಇಬ್ಬರ ಸಾವು : ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮಾಡಿದ್ದೇನು?

ಬೈ ಎಲೆಕ್ಷನ್ ಮುನ್ನ ಇಬ್ಬರ ಸಾವು : ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮಾಡಿದ್ದೇನು?
ಮಂಡ್ಯ , ಮಂಗಳವಾರ, 19 ನವೆಂಬರ್ 2019 (18:50 IST)
ರಾಜ್ಯದ ಉಪ ಚುನಾವಣೆಗೂ ಮುನ್ನವೇ ಆ ಕ್ಷೇತ್ರದಲ್ಲಿ ಇಬ್ಬರು ಪ್ರತ್ಯೇಕ ಘಟನೆಗಳಲ್ಲಿ ಸಾವನ್ನಪ್ಪಿದ್ದು, ಬಿಜೆಪಿ ಅಭ್ಯರ್ಥಿಯು ಮೃತರ ಕುಟುಂಬಗಳಿಗೆ ಭೇಟಿ ನೀಡಿದ್ದಾರೆ.

ಹಾವು ಕಡಿದು ಇಬ್ಬರು ಪ್ರಗತಿಪರ ರೈತರು ಸಾವನ್ನಪ್ಪಿದ್ದಾರೆ. ಮಂಡ್ಯದ ಯಲಾದಹಳ್ಳಿಯ ಮಂಜುನಾಥ್ ಮತ್ತು ಚೌಡಸಮುದ್ರದ ಮಹದೇವಪ್ಪ ಮೃತ ದುರ್ದೈವಿಗಳಾಗಿದ್ದಾರೆ. 

ಚೌಡಸಮುದ್ರ ಗ್ರಾಮದಲ್ಲಿ ಹುಲ್ಲು ಕೊಯ್ಯಲು ಜಮೀನಿಗೆ ಹೋಗಿದ್ದ ಮಹದೇವಪ್ಪ(45)ಅವರಿಗೆ ಹಾವು ಕಡಿದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸಾಸಲು ಪಕ್ಕದ ಯಲಾದಹಳ್ಳಿ ಗ್ರಾಮದ ಮಂಜುನಾಥ್ (40) ಅವರು ತಮ್ಮ ಜಮೀನಿನ ಬಳಿ ಹೋಗಿದ್ದಾಗ ಹಾವು ಕಡಿದು ಚನ್ನರಾಯಪಟ್ಟಣದ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಬಿಜೆಪಿ ಅಭ್ಯರ್ಥಿ ನಾರಾಯಣಗೌಡರಿಂದ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತಹಸೀಲ್ದಾರ್, ಪಿಎಸ್ ಐ ಸೇರಿ ಮಾಡಿದ್ರು ಅಂಥ ಕೆಲಸ