Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಅಭ್ಯರ್ಥಿ ತೋರಿಸಿದ ಬಲಕ್ಕೆ ಬೆಚ್ಚಿಬಿದ್ದ ಬಿಜೆಪಿ, ಜೆಡಿಎಸ್

ಕಾಂಗ್ರೆಸ್ ಅಭ್ಯರ್ಥಿ ತೋರಿಸಿದ ಬಲಕ್ಕೆ ಬೆಚ್ಚಿಬಿದ್ದ ಬಿಜೆಪಿ, ಜೆಡಿಎಸ್
ಮಂಡ್ಯ , ಮಂಗಳವಾರ, 19 ನವೆಂಬರ್ 2019 (18:31 IST)
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಬಲ ನೋಡಿರೋ ಬಿಜೆಪಿ, ಜೆಡಿಎಸ್ ಫಲಿತಾಂಶಕ್ಕೂ ಮೊದಲೇ ಬೆಚ್ಚಿಬಿದ್ದಿವೆ.

ಮಂಡ್ಯದ ಕೃಷ್ಣರಾಜಪೇಟೆ ಕ್ಷೇತ್ರದ ಉಪಸಮರದಲ್ಲಿ ಇತಿಹಾಸ ಸೃಷ್ಠಿಸಿದ್ದಾರೆ  ಕಾಂಗ್ರೆಸ್ ಅಭ್ಯರ್ಥಿ ಕೆ ಬಿ ಸಿ.

ಕಾರ್ಯಕರ್ತರು ಹಾಗೂ ಬೆಂಬಲಿಗರ ಪ್ರದರ್ಶನದಲ್ಲಿ ಪಾಸಾಗಿದೆ ಕಾಂಗ್ರೆಸ್ ಪಕ್ಷ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ.ಬಿ. ಚಂದ್ರಶೇಖರ್ ಅವರು 40 ಸಾವಿರ ಜನಸ್ತೋಮದ ಸಮ್ಮುಖದಲ್ಲಿ ಜಯಭೇರಿ
ಘೋಷಣೆ ಮುಖಾಂತರ ಹೊಸಹೊಳಲು ರಸ್ತೆಯ ಮಾರ್ಗವಾಗಿ ತಾಲೂಕು ಮಿನಿವಿಧಾನಸೌಧ ವರೆಗೆ ಕಾರ್ಯಕರ್ತರ ಪ್ರದರ್ಶನ ನಡೆಸಿದ್ರು.

ಕಾಂಗ್ರೆಸ್ ಕಾರ್ಯಕರ್ತರನ್ನು ನೋಡಿ  ಬಿ.ಜೆ.ಪಿ. ಮತ್ತು ಜೆ ಡಿ ಎಸ್ ಅಭ್ಯರ್ಥಿಗಳು ಬೆಚ್ಚಿಬೀಳೋದೊಂದೇ ಬಾಕಿ.
ಕಾಂಗ್ರೆಸ್ ಪಕ್ಷದ ನಾಯಕರಾದ  ಚಲುರಾಯಸ್ವಾಮಿ, ರಮೇಶ್ ಬಂಡಿ ಸಿದ್ದೇಗೌಡ,  ಗಂಗಾಧರ್, ಕಿಕ್ಕೇರಿ ಸುರೇಶ್, ರವೀಂದ್ರಬಾಬು ಪ್ರಕಾಶ್, ರವೀಂದ್ರ, ಕೆ ಎಲ್ ದೇವರಾಜು ಹಲವಾರು ಗಣ್ಯರು ಸಾಥ್ ನೀಡಿದ್ರು.




Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಅಭ್ಯರ್ಥಿ ಮೇಲೆ ಚಪ್ಪಲಿ ತೂರಿದ ಜೆಡಿಎಸ್ ಕಾರ್ಯಕರ್ತರು