Publish Date: Sun, 12 Feb 2023 (19:25 IST)
Updated Date: Sun, 12 Feb 2023 (20:27 IST)
ಕಾಂಗ್ರೆಸ್ ಟಿಕೇಟ್ ಹಂಚಿಕೆಗೆ ಭಾರೀ ಕಸರತ್ತು ನಡಸಿದೆ.ಇಂದು ಕೆಪಿಸಿಸಿ ಕಚೇರಿಯಲ್ಲಿ ಮೋಹನ್ ಪ್ರಕಾಶ್ ನೇತೃತ್ವದ ಸ್ಕ್ರೀನಿಂಗ್ ಕಮಿಟಿ ಒನ್ ಟು ಒನ್ ಅಭಿಪ್ರಾಯ ಸಂಗ್ರಹಿಸಿದೆ.ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರ ಜೊತೆ ಮೀಟಿಂಗ್ ಇತ್ತು. ಪ್ರತಿಭಾರಿ ದೆಹಲಿಯಲ್ಲಿ ಸಭೆ ನಡೀತಾ ಇತ್ತು.ಈ ಬಾರಿ ಬೆಂಗಳೂರಿಗೆ ಬಂದಿದ್ದಾರೆ. ಒಬ್ಬಬ್ಬರನ್ನು ಕರೆದು ಅಭಿಪ್ರಾಯ ಸಂಗ್ರಹ ಮಾಡ್ತಾ ಇದ್ದಾರೆ. ನನ್ನ ವಲಯದ ಮಾಹಿತಿ ಸಂಗ್ರಹ ಮಾಡಿದ್ದಾರೆ. ಗೆಲ್ಲುವ ಕಡೆ ಒಂದೆ ಅಭ್ಯರ್ಥಿ ಬೇರೆ ಕಡೆ ಎರಡು ಅಭ್ಯರ್ಥಿಗಳ ಬಗ್ಗೆ ಹೇಳಿದ್ದೇನೆ ಎಂದು ಹೇಳಿದರು.ಇನ್ನೂ ಸಲೀಂ ಅಹಮ್ಮದ್,ಈಶ್ವರ ಖಂಡ್ರೆ ಮಾತನಾಡಿ ನಾವು ನಮ್ಮ ಅಭಿಪ್ರಾಯ ಹೇಳಿದ್ದೀವಿ ಎಂದು ಹೇಳಿದರು.