Publish Date: Tue, 07 May 2019 (19:43 IST)
Updated Date: Tue, 07 May 2019 (19:45 IST)
ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಜೆಡಿಎಸ್ ಮುಖಂಡ ಕಿಡಿಕಾರಿದ್ದಾರೆ.
ಬಸನಗೌಡ ಪಾಟೀಲ್ ಸುಳ್ಳು ಭವಿಷ್ಯ ಹೇಳುವುದನ್ನು ಮೊದಲು ಬಿಡಬೇಕು ಅಂತ ಮೇಲ್ಮನೆ ಜೆಡಿಎಸ್ ಸದಸ್ಯ ಟಿ.ಎ.ಶರವಣ ಕಿಡಿಕಾರಿದ್ದಾರೆ. ಪಾಟೀಲ್ ರಾಜಕೀಯ ಮಾಡುವುದನ್ನು ಬಿಟ್ಟು ಜ್ಯೋತಿಷ್ಯವನ್ನು ಎಂದಿನಿಂದ ಹೇಳುವುದನ್ನು ಶುರುಮಾಡಿದ್ದಾರೆ? ಬಸನಗೌಡ ಅವರಿಗೆ ತಮಾಷೆ ಮಾಡುವ ಅಭ್ಯಾಸವಿದೆ.
ಅದನ್ನು ಅವರು ಆಗಾಗ ರಾಜಕೀಯದಲ್ಲಿಯೂ ಬಳಸುತ್ತಿರುತ್ತಾರೆ ಎಂದು ಟೀಕೆ ಮಾಡಿದ್ರು. ಮೈತ್ರಿ ಸರ್ಕಾರ ಪತನಗೊಳ್ಳುತ್ತದೆ ಎಂದು ಸುಳ್ಳು ಭವಿಷ್ಯ, ಜ್ಯೋತಿಷ್ಯ ಹೇಳಿದ ಬಿಜೆಪಿ ನಾಯಕರ ಹೇಳಿಕೆ ಠುಸ್ ಆಗಿದೆ. ಅದೇ ರೀತಿ ಬಸನಗೌಡ ಪಾಟೀಲರ ಭವಿಷ್ಯವೂ ಸುಳ್ಳಾಗಲಿದೆ.
ನಮ್ಮ ನಾಯಕರಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವುದು ಖಚಿತ ಎಂದರು.
ವಿಜಯಪುರದಲ್ಲಿ ಬಸನಗೌಡ ಪಾಟೀಲ್, ಸಿದ್ದರಾಮಯ್ಯ ಅವರು ಮೇ 23 ರ ಬಳಿಕ ಮೈತ್ರಿ ಸರ್ಕಾರವನ್ನು ಪತನಗೊಳಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.