Select Your Language

Notifications

webdunia
webdunia
webdunia
webdunia

ಶಾಶ್ವತವಾಗಿ ಈಶ್ವರಪ್ಪನನ್ನ ಲಾಕ್ ಮಾಡಬೇಕೆಂದ ಕೆಪಿಸಿಸಿ ಅಧ್ಯಕ್ಷ

ಶಾಶ್ವತವಾಗಿ ಈಶ್ವರಪ್ಪನನ್ನ ಲಾಕ್ ಮಾಡಬೇಕೆಂದ ಕೆಪಿಸಿಸಿ ಅಧ್ಯಕ್ಷ
ಬೆಂಗಳೂರು , ಸೋಮವಾರ, 6 ಮೇ 2019 (18:28 IST)
ಬಿಜೆಪಿಯ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಗರಂ ಆಗಿರುವ ಕಾಂಗ್ರೆಸ್ ಮುಖಂಡರು, ಬಿಜೆಪಿ ಮುಖಂಡನ ವಿರುದ್ಧ ಹರಿಹಾಯ್ದಿದ್ದಾರೆ.

ಈಶ್ವರಪ್ಪರ ನಡೆಯನ್ನು ಟೀಕಿಸಿದ್ದಾರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್. ಈಶ್ವರಪ್ಪ ತಮ್ಮ ಅಮಾನವೀಯ ಮುಖವನ್ನು ಹೊರಹಾಕಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿ ಮಾತ್ರ ಶಾಲೆಗೆ ಹೋಗುವ ಬಾಲಕಿಯೊಬ್ಬಳ ಬಗ್ಗೆ ಇಂಥ ಹೇಳಿಕೆ‌ ಕೊಡಲು ಸಾಧ್ಯ ಎಂದರು.

ಶಾಶ್ವತವಾಗಿ ಈಶ್ವರಪ್ಪನನ್ನು ಲಾಕ್ ಮಾಡಬೇಕು. ಟ್ವಿಟರ್ ನಲ್ಲಿ ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದಾರೆ ದಿನೇಶ್ ಗುಂಡೂರಾವ್.
ನಿನ್ನೆ ಸಿದ್ದರಾಮಯ್ಯ ವಿರುದ್ಧ ಹೇಳಿಕೆ‌ಕೊಟ್ಟಿದ್ದರು ಈಶ್ವರಪ್ಪ. ಕುಂದಗೋಳದ ಬಿಜೆಪಿ ಸಮಾವೇಶದಲ್ಲಿ ನಾಲಿಗೆ ಹರಿಬಿಟ್ಟಿದ್ದರು ಕೆ.ಎಸ್. ಈಶ್ವರಪ್ಪ.

webdunia
ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವಾದಾಗ ಸಿದ್ದರಾಮಯ್ಯಗೆ ಕ್ರಮ ಕೈಗೊಳ್ಳುವಂತೆ ಪ್ರಶ್ನೆ ಮಾಡಿದ್ದೆ.

ಏನ್ಮಾಡ್ಬೇಕು ಇವಾಗಾ ಅಂದಿದ್ದಾ. ನಿನ್ನ ಮೊಮ್ಮಗಳ ಮೇಲೆ ಅತ್ಯಾಚಾರ ಆದ್ರೆ ಏನ್ಮಾಡ್ತೀಯಾ? ಅಂತಾ ಹೇಳಯ್ಯ  ಅಂದಿದ್ದರು ಈಶ್ವರಪ್ಪ. ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು ಈಶ್ವರಪ್ಪ‌.



Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಚಾಲಕ ಮಾಡಿದ್ದೇನು?